ಒಟ್ಟು 19 ಕಡೆಗಳಲ್ಲಿ , 15 ದಾಸರು , 19 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸುಜನ ಪ್ರೇಮ ಸದ್ಗುರುರಾಯ ಪ ಕಾಮಿತದಾಯಕ ಕಡುಗಲಿ ಭೀಮ ಅ.ಪ ಆಶಾಶರಧಿಯನು ದಾಟಿದ ಮ ಹಾಶೂರನು ನೀನು ಮೋಸಗಾರರಿಗೆ ಮೃತ್ಯುದೇವತೆಯೆ ದಾಶರಥಿಯ ಕಾರ್ಯ ಧುರಂಧರನೆ 1 ಮರ್ಮವರಿತು ವುಳುಹಿ ಧರ್ಮೇತರ ನಿಲಯಗಳ ದಹಿಸಿದೈ 2 ಸುರ ಕಪಿ ಚಕ್ರವರ್ತಿ ಗುರುರಾಮ ವಿಠಲನ ದಾಸೋತ್ತಮ ಮ- ಧ್ವರಾಜ ನಿಜ ಶರಣರ ಕಲ್ಪತರುವೇ 3
--------------
ಗುರುರಾಮವಿಠಲ
ಹನುಮಂತ ಬಲವಂತ ಅತಿ ಗುಣವಂತಾ | ಇನ ಶಶಿ ಶಿಖಿನೇತ್ರ ರೂಪ ಚರಿತ್ರ | ವನಚರ ಪುಂಗವ ಸನಕ ಸನಂದನ | ವಿನುತ ಹರಿಚರಣನನುದಿನ ಜಪಿತಾ ಪ ಗಜ ಕಂಠೀರಾ | ರಾಯ ಕಪಿಗೆ ಹರಿಯಾ | ತೋರಿದ ಸಿರಿಯಾ | ಶ್ರೀಯರಸನ ನಾಮ ಸವಿದ ನಿಸ್ಸೀಮ | ಪ್ರಿಯ್ಯಾದಿಕೊಂಡು ಗುರುತು ಸಾಗರನರಿತು | ಮಾಯಾಛಾಯಾ ಗ್ರೀಯಾ ನೋಯ | ಸಾಯಬಡದ ಸೀತೆಯ ಮುಂದೆ ನಿಂದು | ಕೊಂಡ ಸ | ಮಾಯದ ಲಂಕಿಯ ನ್ಯಾಯವುರಹಿದ ಧೇಯಾಂಜನೇಯಾ 1 ವರ ಕುಂತಿನಂದನಾ ಕಲಿಯ ಭಂಜನಾ | ಉರಗ ಭಂಜನಾ | ಉರಿತಾಪ ಪರಿಹಾರ | ಕರುಣ ಸಾಗರಾ | ದುರುಳ ಕೀಚಕರ ಹಿಡಂಬಕಾಂತಕ | ಕೌರವಾ ಪಾರಾವಾರಾ ಉರಹಿದ ಬಲುಧೀರ ಶರ ಗದಾಧಾರಾ | ಗುರುವರ ಸುತದಿನ | ಕರಜನುವರದೊಳು | ಪರಿ ಪರಿಹರಿಸಿದೆ ಸಮರಾ 2 ಆನಂದತೀರ್ಥನಾಗಿ ಅತಿ ಹರುಷಯೋಗಿ ಕಾನನ ಪರಮತಾ ದಹಿಸಿದ ಖ್ಯಾತಾ | ಭಾನುಕುಲ ಸಾಂದ್ರಾ ಎನಿಸುವ ಚಂದ್ರಾ | ಧ್ಯಾನಾಮೃತ ಪಾನಾ | ಮುಕ್ತಿ ಸೋಪಾನಾ | ಜ್ಞಾನಾಹೀನಾ ದೀನಾ ಜನಾ | ಮಾನಿಸಫಲದಾನಾ ನಿರತ ನಿಧಾನಾ | ಶ್ರೀನಿಧಿ ವಿಜಯವಿಠ್ಠಲ | ಶ್ರೀನಿವಾಸನ ಮಾನಸ ಪೂಜಿಪೆ ಗಾನನ ಮುನಿಗಳ ಆನನಮಣಿ ಪವಮಾನಸೂನು 3
--------------
ವಿಜಯದಾಸ
ನುಹುಡಿಯ ಹೊರಳ್ಯೇನು ಬಡಕೊಂಡರೇಕಡಲಶಯನನೊಳು ದೃಢ ಭಕ್ತಿ ಇರದೆ ಪ.ಐದು ಪಾವಕನೊಳು ಮೈ ದಹಿಸಿದರೇನುಒಯ್ದು ಶ್ವಾಸವ ನೆತ್ತಿಲಿಟ್ಟರೇನುತೊಯ್ದುಟ್ಟರಿವೆ ತುದಿಗಾಲಲಿ ನಿಂತೇನುಮೈದುನಸಖನಂಘ್ರಿ ಪೂಜಿಸದನಕ 1ತೊಪ್ಪಲ ಮೆದ್ದಗ ತಪ್ಪಲ ಸೇರೇನುಉಪ್ಪವಾಸನಿಲವ ನುಂಗಲೇಸುಒಪ್ಪುವ ಇಳೆಯ ಸುತ್ತಾಡಿ ದಣಿದರೇನುದರ್ಪಕನಯ್ಯನ ಒಲುಮಿಲ್ಲದನಕ 2ಮಧ್ವಸರೋವರ ಮೀಯದ ಜನುಮೇನುಮುದ್ದುಕೃಷ್ಣನ ನೋಡದಕ್ಷಿಯೇನುಮಧ್ವೇಶ ಪ್ರಸನ್ವೆಂಕಟೇಶನೊಪ್ಪಿರದವನಿದ್ದೇನು ಇಲ್ಲದೇನೀಧರೆಗೆ 3
--------------
ಪ್ರಸನ್ನವೆಂಕಟದಾಸರು
ಪಾಲಿಸು ಲೋಕನಾಯಕನೆಗುಣಶೀಲ ಶಂಕರ ಗಂಗಾಧರನೆಫಾಲಲೋಚನಘೋರಕಾಲಭಯ ವಿದೂರನೀಲಕಂಠೇಶ್ವರನೇ ಭಕ್ತರಕಾವಬಾಲ ಚಂದಿರಧರನೇ ಪನಂಬಿದ ಮುನಿಬಾಲನ ಪೊರೆಯುವನೆ ನರರರುಂಡಮಾಲೆಯ ಧರಿಸಿದ ಶೂಲಪಾಣಿಯೆನಿನ್ನ ಮಹಿಮೆಯ ಪೇಳುವರೆ ಪಾತಾಳಲೋಕದಸೀಳು ನಾಲಗೆಯುಳ್ಳ ಸಹಸ್ರಕಪಾಲಶೇಷಗೆಗಿಂತು ಸಾಧ್ಯವೇ 1ಉರಗಕುಂಡಲಧರ ರಜತಾದ್ರಿ ಗಿರಿವರಕರಿಚರ್ಮಾಂಬರಧರನೇ ಮುಕ್ತಿಯನೀವಪರಮೇಶ ಗುಣಕರನೇ ರಾಮನ ರಾಣಿ-ಗಿರವ ತೋರಿಸಿದವನೇಕಾಮನ ಕಣ್ಣ ಉರಿಯೊಳು ದಹಿಸಿದಕರುಣನಿಧಿ ಕೈಲಾಸದಲೀ ಸ್ಥಿರದಿ ನೆಲಸಿದನಿನ್ನ ಚರಣವಸುರರುನರದಾನವರು ಭಜಿಸಲುವರವನಿತಾ ತೆರದೊಳೆನ್ನನು 2ಒಂದಿನ ಸುಖವಿಲ್ಲ ಬಂಧು ಬಾಂಧವರಿಲ್ಲನಂದಿವಾಹನ ದೇವನೆನಿನ್ನಯ ಪಾದಕೊಂದಿಸುವೆನು ಶಿವನೆಎನ್ನೊಳು ಬಂದು ಪಾಲಿಸು ಪರಮೇಶನೆಭೀಮನಿಗಂದು ವರವಿತ್ತು ಮೆರೆಸಿದೆಇಂದ್ರಸುತನಿಗೆ ವನದಿ ನೀನತಿಚಂದದಲಿ ಶರ ಒಂದ ಪಾಲಿಸಿದಂದು ಕುರುಕುಲ ವೃಂದವನು ಗೋವಿಂದಸಾರಥಿಯಾಗಿ ಕೊಂದನು ಚಂದ್ರಧರನೇ 3
--------------
ಗೋವಿಂದದಾಸ