ಒಟ್ಟು 29 ಕಡೆಗಳಲ್ಲಿ , 17 ದಾಸರು , 28 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಕ್ಷಿಸು ಕಮಲಾಕ್ಷ ಶ್ರೀ ವಕ್ಷ ಪ ರಕ್ಷಾ ಶಿಕ್ಷಾಶ್ರಿತಜನ ಸಂರಕ್ಷ ಅಕ್ಷಯ ಸುರಪಕ್ಷ ಅಧ್ಯಕ್ಷ ಅ.ಪ. ಪ್ರಾಚೀನ ಕರ್ಮಾಬ್ಧಿ ವೀಚಿಯೊಳಗೆ ಸಿಕ್ಕಿ ಪೇಚಾಡುತಲಿರೆ ತೋರದು ಯೋಚನೆ ಶ್ರೀ ಚರಣಕೆ ಶಿರಬಾಗುವೆ ಶ್ರೀಕರ ಸೂಚಿಸಿ ಘನ ಭಕ್ತಿ ವಿರಕ್ತಿ 1 ಆರ್ತ ಬಾಂಧವನೆಂದು ಕೀರ್ತಿ ಪೊತ್ತವನೆಂದು ಅರ್ತಿಯಿಂದಲಿ ಬಂದೆ ಸುತ್ತುತೆ ತಂದೆ ಕೀರ್ತಿಯ ಉಳುಹಿಕೊ ಕೀರ್ತಿಯ ತಂದುಕೊ ಭಕ್ತವತ್ಸಲ ಸ್ವಾಮಿ ಸುಪ್ರೇಮಿ 2 ಜನನಿ ಜನಕರು ಅನುಜಾ ತನುಜರು ಅನುವಾಗಿದ್ದರೆ ಎಲ್ಲ ನಮ್ಮವರೆ ಅನುವು ತಪ್ಪಿದರಾರು ಕಣ್ಣಲಿ ನೋಡರು ಅನಿಮಿತ್ತ ದಯವಂತ ಶ್ರೀಕಾಂತ 3
--------------
ಲಕ್ಷ್ಮೀನಾರಯಣರಾಯರು
ಶ್ರೀ ರಾಘವೇಂದ್ರರು ಎಂಥಾ ದಯವಂತರು ರಾಘವೇಂದ್ರರಿನ್ನೆಂಥ ಮಹಿಮ ಪೂರ್ಣರುಚಿಂತಿತ ಫಲರೆಂದೆನಿಸಿ ವೃಂದಾವನದಂತರ್ಗತ ಪೊಳೆವರು ಪ ಪೃಥುವೀಧರನ ದಂತೋದ್ಭವೆಯಾದಆ ತುಂಗಾತಟ ಕೃತ ಮಂದಿರರುಧೃತರಾಷ್ಟ್ರನೃಪರ ಮಕ್ಕಳ ಕೊಂದವನ ಸ ನ್ಮತಾಂಬುಧಿ ಚಂದ್ರಮರು ಪ್ರತಿಯಿಲ್ಲ ಇದರ ಸರಿಯ ಮಹಾತ್ಮೆಯು ಯಾವಯತಿಯೊಳಗೆ ಕಾಣರು ಸತತಾದಿತೇಯ ಸ್ವಭಾವಪೂರ್ಣರಾಗಿ ಇಷ್ಟಾರ್ಥ ಕೊಡುತಿಹರು 1 ಶ್ರಾವಣ ಬಹುಳತೃತೀಯ ರಥ ಸಂತೆ ನೆರೆದಂತೆಳೆವರು 2 ಕರುಣಾರ್ಣವ ಎಂಬ ಗುಣ ನಿಮ್ಮಲ್ಲಿದ್ದಕಾರಣದಿ ಪ್ರಾರ್ಥಿಸುತಿಹರುಧೊರೆ ನೀವು ಸಲಹಬೇಕಲ್ಲವೆ ಮರೆತರೆ ಇನ್ನಾರುಪೊರೆಯುವರು ಕರಿರಾಜವರದ ಐಹೊಳೆಯ ವೆಂಕಟಗೆಪ್ರೀತಿ ಪಾತ್ರರು ಗುರು ಸಾರ್ವಭೌಮ ನಿಮ್ಮಂಘ್ರಿಯುಗಳಲ್ಲಿ ಭಕ್ತಿಯಲಿ ಉದ್ಧರಿಸುವರು 3
--------------
ಐಹೊಳೆ ವೆಂಕಟೇಶ
ಶ್ರೀ ವಾದಿರಾಜರು ಕರುಣದಿ ನೋಡೋ ಮದ್ಗುರುವರ ವಾದಿರಾಜನಂಬಿದ ಭಕ್ತರ ಸುರತರುವೇ ಪ ಪರಿಪರಿ ಭವಸಾಗರದಲಿ ಮುಳುಗುವತರಳನ ಮರೆವುದು ಥರವೇ ಅ.ಪ. ನಿಗಮ ವಿನುತ ಹಯವದನನಬೇಗ ಒಲಿಸಿದೆ ನೀ ಮುದದಿಯೋಗ ಜಿತಾಸನನಾಗಿರುವನೆ ತಲೆಬಾಗುವೆ ಭಯವಳಿ ತ್ವರಿತ 1 ವಾದದೊಳ್ ವಾದಿಗಳನೆ ಗೆದ್ದು ಗುರುಮತಸಾಧಿಸಿದೆಯೊ ಬಲವಂತಸಾಧು ಸೇವಿತ ನಿನ್ನ ಪಾದವ ನಂಬಿದೆ ಭವಬಾಧೆ ಕಳೆಯೋ ಮಹಂತಕ್ರೋಧ ರಹಿತ ಪಂಚಭೇಧ ಸುಜ್ಞಾನವಬೋಧಿಸುವ ದಯವಂತ 2 ಅತಿ ವಿಮಲನೆ ನಿನ್ನ ಸ್ತುತಿಸಲರಿಯೆ ನಾನುಮತಿವಂತನೆ ಮಹಾದಾತಾಸತತ ಬೇಡುವೆನು ಶ್ರೀಪತಿ ಭಜನೆಗೆ ಮನಜಿತವಾಗಿ ಇರಲಯ್ಯ ತಾತಕ್ಷಿತಿಯೊಳು ಕಂಡ ದುರ್ಮತಿಗಳ ಬಿಡಿಸೋದತಿ ಅಧಿಕವೇನೋ ಅನಾಥನಾಥಪತಿತ ಪಾವನ ರಮಾಪತಿ ವಿಠಲನ ನಿರುತ ನೋಳ್ಪ ಲಾತವ್ಯಬ್ಯಾತ 3
--------------
ರಮಾಪತಿವಿಠಲರು
ಶ್ರೀಮಹಾಲಕ್ಷಮಿತಾಯೇ | ಶ್ರೀ ಮಹಾಮಾಯೆ | ಹೇಮಾಯಾ ಕರುಣಾಬ್ದಿಯೇ | ಕಾಮಿತ ಫಲನೀಯೇ | ಸಾಮಜಗಮನಿಯೇ | ಹೇಮಾಯಾ ಕೋಟಿ ಸಮಕಾಯೇ | ಶುಭಚರಿಯ | ಬಹುಪರಿಯೇ | ಹರಿಪ್ರೀಯೇ | ಅರಿಯೇ ಪ ಶರಧಿಸುತವನೇ | ಸರಸಿಜಸದನೆ | ಸುರಚಿರದವರಾನೆ | ಕರಿಸರ್ಪವೇಣೆ | ದುರಿತಾದೌಘಪಹರಣೆ | ಕರುಣದಾಗಾರೆ ಶರಣೆ | ನೆರೆನಿನ್ನನಂಬಿದೆನೆ ಮಾತೆ | ಅದ್ಭುತೆ | ರವಿನಮಿತೆ | ಪ್ರಖ್ಯಾತೆ | ದಾತೆ 1 ಹೊಳೆವ ಸೌಂದರ್ಯ ಸಲಹೆ | ಸಲೆಕುಲದೈವೆ | ಸುಜನ ಸೇವೆ | ಮಲಿನರ ಭಾವೆ | ಹಲವು ಮಾತೇನು ಫಲವೇ | ಬಲುನಾಹಂಬಲಿಸುವೆ | ಒಲಿದು ಕರುಣಿಸು ಭಾಗ್ಯವಂತೆ | ಗುಣವಂತೆ | ಬಹುಶಾಂತೆ | ದಯವಂತೆ ಕಾಂತೆ 2 ಕರವೀರ ಪುರಧೀಶೆ | ಶರಣರುಲ್ಹಾಸೆ | ಸುರಮುನಿಜನತೋಷೆ | ಶಿರಸ್ವಪ್ರಕಾಶೆ | ಪರತರ ಸುವಿಲಾಸೆ | ಗುರುಕೃಷ್ಣಸುತನೀಶೆ | ವರಕೊಲ್ಹಾಸುರನ ವಿನಾಸ | ಜಗದೀಶೆ | ಮೃದುಭಾಷೆ | ಅವಿನಾಶೆ | ಈಶೆ 3 ಅಂಕಿತ-ಗುರುಕೃಷ್ಣಸುತ
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶ್ರೀರಾಮ ಎನ್ನಿರೊ ಶ್ರೀರಾಮ ಎನ್ನಿರೊ ಪ ದುರಿತ ಪರ್ವತಕೆ ವರವಜ್ರವೆನಿಪುದು ಜಗವರಿಯೆ ಅ.ಪ. ನಿತ್ಯ ಪೊರೆಯುವ ಸತ್ಯ ತಾರಕ ನಾಮಕೆ ಮತ್ತೊಂದು ಸಾರ ಸಹಸ್ರನಾಮಕೆ ಶ್ರೀರಘುನಾಥನ ನಾಮವೆಂತೆಂದು ಸಾರಿ ಮಹೇಶನು ಸುರನರ ವಂದ್ಯನು ಗಿರಿಜೆಗೆ ಪ್ರೇಮದಿ ಪೇಳಿದನು ಮರುತಾತ್ಮಜನು ನಿರುತದಿ ಭಜಿಪನು ಪರಿಪರಿ ಪಾಡಿ ಸುಖಗೂಡಿ 1 ಪತಿತ ಪಾವನ್ನ ಸತತ ಈ ನಾಮ ಗತಿಯಿಲ್ಲದವರಿಗೆ ಗತಿ ಈವ ನಾಮ ಹತವೆ ಮಾಡುತಲಿದ್ದ ಕಿತವನಿಗೊಲಿದು ಕ್ಷಿತಿಯೊಳು ಮುನಿಪತಿ ಎನ್ನಿಸಿತು ಪಥದಿ ಪಾಷಾಣವ ಪೆಣ್ಣನು ಮಾಡಿದ ಅತುಳ ಮಹಿಮನ ಹಿತನಾಮ 2 ಕುಲ ಶೀಲಗಳನ್ನು ಎಂದೂ ಎಣಿಸನೊ ಸುಲಭರೊಳಗೆ ಬಲು ಸುಲಭನು ಇವನು ಕಲುಷದಿ ದೂರನು ಶಬರಿಯ ಫಲವನು ಮೆಲ್ಲುತೆ ಮುಕ್ತಿಯನಿತ್ತಿಹನು ಲಲನೆಯ ಕದ್ದೊಯ್ದ ಖಳನ ತಮ್ಮನಿಗೆ ನೆಲವಿತ್ತ ದಯವಂತ ಶ್ರೀಕಾಂತ 3
--------------
ಲಕ್ಷ್ಮೀನಾರಯಣರಾಯರು
ಸಾರಿದ ಭಕ್ತಸಂಸಾರಿ ಮಾಲಿಂಗ ಕ್ಷೀರ ಗ್ರಾಮದಿ ನಿಂತ ಧೀರ ಮಾಲಿಂಗ ಪ ಹರ ಹರ ಮಹಾದೇವ ಶಿವಮಾಲಿಂಗ ವರ ಶಂಭೊ ಗಿರಿವಾಸ ಶಂಕರ ಮಾಲಿಂಗ ಉರಗ ಭೂಷಣ ಗಂಗಾಧರನೆ ಮಾಲಿಂಗ ಪರದೈವ ಶಶಿಮೌಳಿ ಗರುವ ಮಾಲಿಂಗ 1 ಖಂಡಲಪತಿಯೆ ದೋರ್ದಂಡ ಮಾಲಿಂಗ ತಂಡದ ಸುರರೊಳ್ ನಂಜುಂಡ ಮಾಲಿಂಗ ರುಂಡಮಾಲೆಯ ಧರಿಸಿಕೊಂಡ ಮಾಲಿಂಗ ಕೆಂಡಾಕ್ಷತೇಜ ಮಾರ್ತಾಂಡ ಮಾಲಿಂಗ 2 ಮಾರಹರನೆ ಶ್ರುತಿಸಾರ ಮಾಲಿಂಗ ಧೀರ ಬಾಣನ ದ್ವಾರ ಸಾರಿ ಮಾಲಿಂಗ ಮೂರುಪುರ ವೀರ ಸಂಹಾರಿ ಮಾಲಿಂಗ ಘೋರ ಸಂಸಾರ ಭವದೂರ ಮಾಲಿಂಗ 3 ಬ್ರಹ್ಮಾದಿ ಸುರವಂದ್ಯ ಹರ್ಮಿ ಮಾಲಿಂಗ ನಿರ್ಮಲ ರೂಪಕ ಧರ್ಮಿ ಮಾಲಿಂಗ ಕರ್ಮಬಂಧದ ನರವರ್ಮಿ ಮಾಲಿಂಗ ಉರ್ವಿಯೊಳು ನೀ ಬಹಳ ಪೆರ್ಮಿ ಮಾಲಿಂಗ 4 ನೀಲಕಂಠನೆ ನಿಗಮಶೀಲ ಮಾಲಿಂಗ ಪಾಲ ಕರಶೂಲ ಕಪಾಲಿ ಮಾಲಿಂಗ ಕಾಲ ಕಲ್ಪಾಂತಕ ಜಾಲ ಮಾಲಿಂಗ ಲೋಲಾಸ್ಥಿಮಾಲ ಸುರಮೂಲ ಮಾಲಿಂಗ 5 ಪ್ರಣವ ರೂಪಕ ಪಾರ್ವತಿ ಮಾಲಿಂಗ ತ್ರಿಣಯ ಗಣಸೇವಪರ ಧಣುರೆ ಮಾಲಿಂಗ ಮಣಿ ಕರ್ಣಾಭರಣ ಮಾಲಿಂಗ ಅಣುಮಹಾರೂಪ ಗುಣನಿಧಿಯೆ ಮಾಲಿಂಗ 6 ಪಂಥ ಬೇಡೆನ್ನೊಳು ನಿಶ್ಚಿಂತ ಮಾಲಿಂಗ ಸಂತತ ಸಲಹೆನ್ನ ಕಾಂತ ಮಾಲಿಂಗ ಅಂತರಾತ್ಮಕನಾದ ಶಾಂತ ಮಾಲಿಂಗ ಚಿಂತಿತಾರ್ಥವ ತೋರುವಂಥ ಮಾಲಿಂಗ 7 ಬೇಡಿದ ವರಗಳ ನೀಡೊ ಮಾಲಿಂಗ ಮಾಡಿದ ಸೇವೆಯ ನೋಡೊ ಮಾಲಿಂಗ ಜೋಡಾಗಿ ನಿನ್ನೊಳು ಕೂಡೊ ಮಾಲಿಂಗ 8 ಭೂಮಿಗೆ ವರಾಹತಿಮ್ಮಪ್ಪನಂತೆ ಗ್ರಾಮ ಮಂದಿರದೊಳು ನೆಲಸಿಹನಂತೆ ಪ್ರೇಮದಿ ಅದನೆಲ್ಲ ಕಡಿದುಕೊಡುವಂತೆ ಈ ಮಹಾ ಮಾಲಿಂಗ ಸ್ವಾಮಿ ದಯವಂತೆ 9
--------------
ವರಹತಿಮ್ಮಪ್ಪ
ಸ್ಮರಿಸುವೆನು ಸದ್ಭಕ್ತಿಯಲಿ ಶ್ರೀರಾಮನ ಗುಣಧಾಮನ ಸಿರಿವಿರಿಂಚಾದ್ಯಮರಗಣ ಸಂಸ್ತುತ್ಯನ ಸಂತೃಪ್ತನಾ ಪ ಆದಿಯಲಿ ಝಷನಾಗಿ ನಿಗಮವ ತಂದನ ಮುನಿವಂದ್ಯನ ಭೂಧರಾಧರ ದಿವಿಜರಿಗೆ ಸುಧೆಗರೆದನ ಸುರವರದನ ಕಾದು ಕಿಟರೂಪದಲಿ ಭೂಮಿಯ ತಂದನ ಗುಣವೃಂದನ ಬಾಧಿಸಿದ ರಕ್ಕಸನ ತರಿದು ಪ್ರಲ್ಹಾದನ ತಾ ಪೊರೆದನ 1 ತುಳಿದನ ಅವಗೊಲಿದನ ಕೊಡಲಿ ಪಿಡಿದಾ ಕ್ಷತ್ರಿಕುಲ ವಿರಾಮನ ಭೃಗು ರಾಮನ ಮೃಡನೊರದಿ ಯುನ್ಮತ್ತ ದೈತ್ಯರು ಬಾಧಿಸೆ ಧರಿ ಪ್ರಾರ್ಥಿಸೆ ಜಡಜ ಪೀಠಾದ್ಯಮರರಾ ಮೊರೆ ಕೇಳ್ದನ ಧರೆಗಿಳಿದನ 2 ದಶರಥನ ಸತಿಯುದರದಲಿಯವತರಿಸಿದ ಮುದಗರಿಸಿದ ಬಿಸರುಹಾಪ್ತನ ವಂಶವನು ಉದ್ಧರಿಸಿದ ಮೈಮರಸಿದ ದಶದಿಶೆದಿ ಸುರರೆಲ್ಲ ಪೂಮಳೆಗರೆದರು ಸುಖಸುರಿದರು ಅಸಮಲೀಲೆಯ ತೋರ್ದರಘುಕಲಚಂದ್ರನ ಸುಖಸಾಂದ್ರನ 3 ಗಾಧಿಸುತನಧ್ವರವ ಕಾಯ್ದ ಸಮರ್ಥನ ಜಗಕರ್ತನ ವೇದಧನು ಮೊದಲಾದ ಕಲೆಗಳ ತಿಳಿದನ ಮುನಿಗೊಲಿದನ ಹಾದಿಯಲಿ ಶಿಲೆಯಾದ ಅಹಲ್ಯಳ ಪೊರೆದನ ಸಿರಿವರದನ ಮೋದದಲಿ ಹರಧನು ಮುರಿದ ಗಂಭೀರನ ಬಹುಶೂರನ 4 ಜನಕಭೂಪತಿ ತನುಜಳೆನಿಸಿದಸೀತೆಯ ಭೂಜಾತೆಯಾ ಘನಹರುಷದಲಿ ವಲಿಸಿಕರವನು ಪಿಡಿದನ ಯಶಪಡೆದನ ದನುಜರುಪಟಳತೋರಲಾಕ್ಷಣ ಸೀಳ್ಪನ ಸುರರಾಳ್ದನ ತನಗೆ ತಾನೇ ಸೋಲಿಸಿದ ಜನಮೋಹನ ಖಗವಾಹನ 5 ಜನಕನಾಜ್ಞವ ಪಾಲಿಸಿದ ದಯವಂತನ ಅಘಶಾಂತನ ಅನುಜಸತಿಸಹ ಪುರದಿ ತಾಪೊರಮಟ್ಟನ ಅತಿಧಿಟ್ಟನ ವನದಿ ಬಹು ಮುನಿಗಳ ಕಾರಾರ್ಚಿತನಾದನ ಸುಪ್ರಸಾದನ ಅನುಜ ಭರತಗೆ ದಯದಿ ಪಾದುಕೆ ಕೊಟ್ಟನ ಸಂತುಷ್ಟನ 6 ಮನುಜರಂದದಿ ಸತಿವಿಯೋಗವತೋರ್ದನ ಕುಜನಾರ್ದನ ವನಿತೆಯಂಜಲ ಫಲಗಳನು ತಾಮೆದ್ದನ ಶ್ರುತಿಸಿದ್ಧನ ದನುಜರಿಪು ಹನುಮಂತನನು ಸಾರೆ ಗರೆದನ ಕರುಣಿಸಿದನ ವನಜ ಸಖಸುತನೊಡನೆ ಸಖ್ಯವ ಮಾಡ್ಡನ ವರನೀಡ್ಡನ 7 ಲೀಲೆಯಿಂದಲಿ ತಾಳ ಮರಗಳ ಸೀಳ್ದನ ನೆರೆಬಾಳ್ದನ ವಾಲಿಯನು ಸಂಹರಿಸಿದತಿಬಲವಂತನ ಶ್ರೀಕಾಂತನ ಮೇಲೆನಿಪ ರಕ್ಕಸರನೆಲ್ಲರ ತುಳಿದನ ಅಸುಸೆಳೆದನ ಶ್ರೀಲತಾಂಗಿಯ ಕ್ಷೇಮವಾರ್ತೆಯ ಕೇಳ್ದನ ಮುದತಾಳ್ದನ 8 ಗಿರಿಗಳಿಂದಲಿ ಶರಧಿಯನು ಬಂಧಿಸಿದನ ಸಂಧಿಸಿದನ ಹರಿಗಳೆಲ್ಲರ ಕೂಡಿಲಂಕೆಯ ಸಾರ್ಧನ ರಣದಿರ್ದನ ಉರುಪರಾಕ್ರಮಿ ರಾವಣನ ಶಿರಕಡಿದನ ಹುಡಿಗೆಡೆದನ ವರವಿಭೀಷಣ ಭಕ್ತಗಭಿಷೇಚಿಸಿದನ ಪೋಷಿಸಿದನ 9 ಸಿರಿಸಹಿತ ಪುಷ್ಪಕವನೇರಿದ ಚಲುವನ ಅತಿ ಪೊಳೆವನ ತ್ವರದಿಶೃಂಗರಿಸಿದ ಅಯೋಧ್ಯಕೆ ಬಂದನ ಅಲ್ಲಿ ನಿಂದನ ಭರತ ಪ್ರಾರ್ಥಿಸಲಾಕ್ಷಣದಿ ಮೊರೆ ಕೇಳ್ದನ ಧರಿಯಾಳ್ದನ ಸರಸಿಜಾಸನ ಪ್ರಮುಖರಾರ್ಚನೆ ಕೊಂಡನ ಕೋದಂಡನ 10 ಮರುತಸುತನಿಗೆ ಅಜನ ಪದವಿಯನಿತ್ತನ ಬಹುಶಕ್ತನ ಚರಣಸೇವಕ ಜನಕಭೀಷ್ಟದಾತನ ವಿಖ್ಯಾತನ ನಿರುತ ಸನ್ಮುನಿಹೃದಯ ಮಂದಿರ ವಾಸನ ಜಗದೀಶನ ಸ್ಮರಣೆ ಮಾತ್ರದಿ ದುರಿತರಾಶಿಯ ತರಿದನ ಸುಖಗರೆವನ 11 ದೇವಕೀ ವಸುದೇವ ಸುತನೆಂದೆನಿಪನ ಜಗಕಧಿಪನ ಮಾವನನು ಸಂಹರಿಸಿ ಶಕಟನ ಕೊಂದನ ಆನಂದನ ಗೋವು ಕಾಯುತ ಗಿರಿಯ ಬೆರಳಲಿ ಆಂತನ ಬಹುಶಾಂತನ ಗೋವ್ರಜದಿ ಗೋಪಿಯರ ವಸನವ ಕಳೆದನ ಅಹಿತುಳಿದನ 12 ಲೋಕನಾಥನು ಪಾರ್ಥಸಾರಥಿಯಾದನ ಸುಪ್ರಮೋದನ ನೇಕ ಪರಿಭಗವತ್ಸುಗೀತೆಯ ಪೇಳ್ದನ ತಮಸೀಳ್ದನ ಆ ಕುರು ಕುಲವ ತರಿದ ಪಾಂಡವ ಪ್ರಾಣನ ಸುಪ್ರವೀಣನ ಆಕುರುಪ ಭೀಷ್ಮನಿಗೆ ಮುಕ್ತಿಯ ಕೊಟ್ಟನ ಅತಿಶ್ರೇಷ್ಟನ 13 ಕಪಟನಾಟಕ ನಗ್ನರೂಪದಿ ನಿಂತನ ನಿಶ್ಚಿಂತನ ತ್ರಿಪುರದಲಿ ಜಲಜಾಕ್ಷಿಯರ ವ್ರತ ಭÀಂಗನ ನಿಸ್ಸಂಗನ ಕೃಪಣವತ್ಸಲ ತುರಗವೇರಿ ತಾನಡೆದನ ಅಸಿಪಿಡಿದನ ಅಪರಿಮಿತ ಬಹುಕ್ರೂರ ಯವನ ವಿಘಾತನ ಪ್ರಖ್ಯಾತನ 14 ಈ ವಿಧದಿ ಬಹುಲೀಲೆ ಗೈವ ಸುಚರಿತನ ಜಗಭರಿತನ ಭಾವಶುದ್ಧಿಲಿ ಭಜಿಸುವವರಘಕಡಿವನ ಗತಿಕೊಡುವನ ಪಾವಮಾನಿ ಮತಾನುಗರ ಕರಪಿಡಿವನ ಭವತಡೆವನ ದೇವತತಿ ಸದ್ವಿನುತ ವರದೇಶ ವಿಠಲನ ನಿಷ್ಕುಟಿಲನ 15
--------------
ವರದೇಶವಿಠಲ
ಹಟವ ಮಾಡದಿರು ಕೇಳೆಲೊ ಮೂಢ ಪ ಕುಟಿಲವ ಬಿಡು ನೀ ಗಾಢ ಅ.ಪ. ಹರಿ ಸರ್ವೋತ್ತಮ ವಾಯು ಜೀವೋತ್ತಮ ಹರ ವೈಷ್ಣವೋತ್ತಮನೆನ್ನೊ 1 ಮಧ್ವ ಸಿದ್ಧಾಂತದ ಪದ್ಧತಿ ಬಿಡದಲೆ ಶುದ್ಧ ವೈಷ್ಣವರೊಳಾಡೊ 2 ಹರಿ ಶರಣರ ಚರಣ ಕಮಲಂಗಳಿಗೆ ಗರುವಪಡದೆ ನೀ ಬೀಳೊ 3 ಸಂತತದಲಿ ಶ್ರೀಕಾಂತನ ಗುಣಗಳ ಚಿಂತನೆ ಮಾಡುತ ಬಾಳೊ 4 ಮಂಗಳಾಂಗ ತ್ರಿಜಗಂಗಳ ಪೊರೆವವ ರಂಗೇಶವಿಠಲನೆನ್ನೊ 5 ನೆಲವಿತ್ತ ದಯವಂತ ಶ್ರೀಕಾಂತ 3
--------------
ರಂಗೇಶವಿಠಲದಾಸರು
ಹನುಮಂತ ಬಲವಂತ ಅತಿ ದಯವಂತಾ | ಘನವಂತ ಕೀರ್ತಿವಂತ ಅತಿ ಜಯವಂತಾ || ಅನುದಿನದಲಿ ನಿನ್ನ ನೆನೆಸುವೆ ಎನ್ನ ಮನದಾಸೆ | ಯ ನೀಯೋ ದನುಜ ಕೃತಾಂತಾ ಪ ಪಾವಮಾನಿ ಸತತ ಪಾವನ್ನ ಚರಿತಾ | ಪಾವಕಾಂಬಕನುತಾ ಪ್ಲವಂಗನಾಥಾ || ದೇವ ಕರುಣಪಾಂಗಾ ಭಾವುಕತುಂಗಾ | ಗ್ರೀವಾ ಶತಶೃಂಗ ಗ್ರಾವವೆ ಭಂಗಾ || ಕಾವಾ ವರವೀವಾ ಭೋದೇವ ಸಂಭವಾ | ಸು | ಗ್ರೀವ ಸಹಾಯ ಸರ್ವ ದೇವನರಸಿ ಯತಿವರ ಹಾರಿದಾ | ಕೋವಿದಾ ಕಪಿವರ ದೇವಕಿ ತನುಜನಾ || ಮಾವನ ಮಾವನಾ | ಜೀವಕೆ ಮುನಿದನೆ | ಜೀವೇಶ ಮತವನ ಪಾವಕಾ ಜಯ ಜಯ 1 ಧರಣಿಜಾತಿಗೆ ಭದ್ರಕರವಾದ ಮುದ್ರಾದರದಿಂದ ಇತ್ತ ನಿದ್ರಾ | ಗರಳ ದುರುಳರ ವರವದ್ದಾ | ನೆರದಲ್ಲಿ ಶಲ್ಯ ಎದುರ ಬರಲಾಗಿ ಗೆದ್ದಾ | ಮರುತಾ ಸುಖ ಗುರುವೆ ಸುರತರುವೆ | ಫಲ | ನಿರ್ಜರ ಗಣದಲ್ಲಿ ಇಹ | ಪರದಲಿ ದೇವ | ಶರಧೀ ಬಾಗಿದ ಧೀರಾ | ಸೂನು ಆವಾಸ ಯೋಗಕೆ ಸಂ | ಸುರನದಿ ದಾಟಿದಾ ಪರಮಹಂಸ 2 ಕರಡಿ ವಾನರಬಲಾ ನೆರಹಿ ಮಹಾ ಪ್ರಬಲ | ಶಿರ ಹತ್ತುವುಳ್ಳವನ ಕುಲ ವರಿಸಿದಾ ಸುಬಲಾ | ಕುರುಪತಿ ನಿಜ ತಮ್ಮ ಬರಲವನ ಹಮ್ಮು | ಬೊಮ್ಮ ಪೊರೆವನೆ ನಮ್ಮ | ಮರುತಾ ಸುಖ ಭರಿತಾ ಸಂಹರಗೈಸುವ | ಸಂ | ಕರ ಗರ್ವಹರ ಸರಯು ತೀರದಲ್ಲಿದ್ದಾ | ಪುರದಲ್ಲಿ ಮೆರದನೆ | ಕರ ಕಮಲೋದ್ಭವ | ವರ ವೃಕೋದರನೆ ವಿಜಯವಿಠ್ಠಲನ |ಶರಣರ ಪಾಲಾ ಬದರಿವಾಸಾ ಯಂತ್ರೇಶಾ 3
--------------
ವಿಜಯದಾಸ
ಘಾತಕರಿನ್ನೇಕೆ ಪರಮಾರ್ಥ ಶ್ರವಣನೀತಿವಂತರೆ ನಿಮಗೆ ಪರನಿಂದೆ ಏಕೆ ? ಪ.ಕೋತಿಗಂದಣವೇಕನಾಥನಿಗೆ ಮುನಿಸೇಕೆ ?ಹೋತು ಕಾಳಗವಾಡೆ ಖ್ಯಾತಿಯೇಕೆ ?ಸೋತ ಮನುಜಗೆ ಮುನ್ನ ಸೊಗಸು ವೆಗ್ಗಳವೇಕೆ ?ಪ್ರೀತಿಯಿಲ್ಲದ ಮನೆಯೊಳಿರುವುದೇಕೆ ? 1ದಯವಂತನಲ್ಲದಾ ದೊರೆಯ ಸೇವೆಯು ಏಕೆ ?ಭಯವು ಉಳ್ಳವಗೆ ರಣರಂಗವೇಕೆ ?ನಯವಾಕ್ಯವಿಲ್ಲದ - ಪುರುಷ ನಾರಿಯರೇಕೆವ್ಯಯವಾದ ಧನಕಿನ್ನು ಚಿಂತೆಯೇಕೆ ? 2ಬಲ್ಲಿದನ ಹಗೆಗೊಂಡು ತಲ್ಲಣಿಸುತಿರಲೇಕೆಬಲ್ಲಧಿಕ ಜ್ಞಾನಿಗೆ ದ್ವೇಷವೇಕೆ ?ಚೆಲ್ವ ಶ್ರೀಪುರಂದರ ವಿಠಲನ ದಯವಿರಲುಕ್ಷಲ್ಲಿಸುವ ಯಮಗಿನ್ನು ಅಂಜಬೇಕೆ ? 3
--------------
ಪುರಂದರದಾಸರು
ನಾ ಮುಂದೆ ಕೃಷ್ಣ ನೀ ಎನ್ನ ಹಿಂದೆ-ನಿನ್ನ-|ನಾಮವೆ ಕಾಯಿತು ನಾನೇನೆಂದೆ ಪಸುರತರುನೀನು ಫಲ ಬಯಸುವೆ ನಾನು |ಸುರಧೇನುನೀನು ಕರೆದುಂಬೆ ನಾನು ||ವರಚಿಂತಾಮಣಿ ನೀನು ಪರಿಚಿಂತಿಸುವೆ ನಾನು |ಶರಧಿಕ್ಷೀರನು ನೀನು ತರಳನೈ ನಾನು 1ಅನಾಥನೈ ನಾನು ಎನಗೆ ಬಂಧುವು ನೀನು |ದೀನಮಾನವನಾನು ದಯವಂತ ನೀನು ||ದಾನವಂತಕ ನೀನು ಧೇನಿಸುವೆನು ನಾನು |ಜ್ಞಾನಗಂಭೀರ ನೀನು ಅಙ್ಞÕನಿ ನಾನು 2ಒಂದರೊಳೊಂದೊಂದು ನಿನಗೆ ನಾ ಸಲಿಸುವೆ |ಚೆಂದವಾಯಿತು ನಿನ್ನ ಸ್ತುತಿಯಿಂದಲಿ ||ತಂದೆ ಪುರಂದರವಿಠಲರಾಯ ನೀ |ಬಂದೆನ್ನ ಮನದಲ್ಲಿ ನಲಿನಲಿದಾಡೊ 3
--------------
ಪುರಂದರದಾಸರು
ಭಾಳಭಾಳಬಿಂಕರುಕ್ಮಿಣಿನಿನ್ನಕೇಳಿಬಲ್ಲೆನೆ ಸತ್ಯಭಾಮಿನಿಪ.ದೊರೆಯರ ಮಗಳೆಂದು ಗರವಿಲೆÉ ರುಕ್ಮಿಣಿಬರಲಿಲ್ಲ ನಮ್ಮ ಕರೆಯಲುಬರಲಿಲ್ಲ ನಮ್ಮ ಕರೆಯಲು ರುಕ್ಮಿಣಿಸರಿಯವರುನೋಡಿ ನಗತಾರ1ಕೆಂಚಿನಿಮ್ಮಣ್ಣನ ಪಂಚೆಚೂಡನ ಮಾಡಿಕಂಚಿಯ ವರದ ಕಳುಹಿಲ್ಲಕಂಚಿಯ ವರದ ಕಳುಹಿಲ್ಲ ರುಕ್ಮಿಣಿಪಾಂಚಾಲಿಗೆ ನೀನು ಸರಿಯೇನ 2ನಾರಿ ನಿಮ್ಮಣ್ಣನ ಮಾರಿಯ ಬಾಡಿಸಿತೇರಿಗೆಕಟ್ಟಿಮೆರೆಸಿಲ್ಲತೇರಿಗೆ Pಟ್ಟಿ ಮೆರೆಸಿಲ್ಲ ರುಕ್ಮಿಣಿಯಾರ ಮುಂದಿಷ್ಟು ಬಡಿವಾರ 3ಹರದಿನಮ್ಮಣ್ಣಗೆ ¨ರೆದ ಓಲೆಯನೋಡಹಿರಿಯರಿಲ್ಲೇನ ಮನೆಯಾಗಹಿರಿಯರಿಲ್ಲೇನ ಮನೆಯಾಗಅತ್ತಿಗೆಸರಿಯವರುನೋಡಿ ನಗತಾರ4ಹತ್ತು ಮಾರಿಯವನ ಬೆನ್ನತ್ತಿ ಹೋದವಳೆಂದುಕೀರ್ತಿಯ ಪಡೆದೆಯೆಲೆಭಾವೆಕೀರ್ತಿಯ ಪಡೆದೆಯೆಲೆ ಭಾವೆನೀಮಹಾಮೂರ್ತಿಎಂಬೋದು ಹರಿಬಲ್ಲ5ಪಟ್ಟದರಸಿ ಎಂದು ದೃಷ್ಟಿ ತಿರುಗ್ಯಾವ ನಿನ್ನಎಷ್ಟುಬಡಿವಾರಎಲೆಭಾವೆಎಷ್ಟುಬಡಿವಾರಎಲೆಭಾವೆನೀ ನಮ್ಮಪುಟ್ಟ ಸುಭದ್ರೆಯ ಸರಿಯೇನ 6ಪತಿವ್ರತೆ ಅಂದರೆ ಅತಿ ಅತಿ ಗರುವ್ಯಾಕಪತಿಎಲ್ಲ ಬಲ್ಲ ನಿನ್ನಗುಣಪತಿಎಲ್ಲ ಬಲ್ಲ ನಿನ್ನಗುಣವನದೊಳುಸತಿಅಲ್ಲವೆಂದು ಬಿಡಲಿಲ್ಲ7ಗಂಡನಿನ್ನಯಗುಣಕಂಡನೆ ವನದೊಳುಕೆಂಡವು ಎಂದು ಹೊಗಸಿಲ್ಲಕೆಂಡವು ಎಂದು ಹೊಗಸಿಲ್ಲ ಈ ಮಾತುಪಂಡಿತರುಕೇಳಿಹುಸಿಯಲ್ಲ8ಮಂದಗಮನೆ ನಿನ್ನ ತಂದೆ ಹ್ಯಾಂಗೆ ಅಂದ್ಹಾಂಗೆಇಂದಿರಾಪತಿಯೆಗತಿಕೊಟ್ಟಇಂದಿರಾಪತಿಯೆಗತಿಕೊಟ್ಟ ಅದರಿಂದಬಂದಿತ್ಯಾಕಿಷ್ಟುಬಡಿವಾರ9ನಾರಿ ಹಿಂದಕ್ಕೆ ಒಂದು ಪಾರಿಜಾತಕ್ಕಾಗಿನೀರಜನಯ್ಯನ ದಣಿಸಿದೆಯಲ್ಲನೀರಜನಯ್ಯನ ದಣಿಸಿದೆಯಲ್ಲಅತ್ತಿಗೆಯಾರ ಮುಂದಿಷ್ಟೆಬಡಿವಾರ10ನಾರಿ ಹಿಂದಕೆ ಒಂದು ನಾರು ವಸ್ತ್ರವಕಾಣಿಊರು ಇಲ್ಲದಲೆ ವನವನಊರು ಇಲ್ಲದಲೆ ವನವನ ತಿರುಗಿದಿಯಾರ ಮುಂದಿಷ್ಟುಬಡಿವಾರ11ಧಿಟ್ಟೆ ಹಿಂದಕ್ಕೆ ಒಂದು ಉಟ್ಟೆನೆಂದರೆ ಇಲ್ಲಹೊಟ್ಟೆಗಿಲ್ಲದಲೆ ಮುನಿಪನಹೊಟ್ಟೆಗಿಲ್ಲದಲೆ ಮುನಿಪನ ಕುಟೀರದಿಎಷ್ಟು ದಿನಕಾಲಕಳೆದೆಯಲ್ಲ12ಸ್ವಾಮಿ ಶ್ರೀಕೃಷ್ಣರಾಯ ರಾಮನಂಥವನಲ್ಲಭೂಮಿ ಮ್ಯಾಲಿಂಥ ದೊರೆಯಿಲ್ಲಭೂಮಿ ಮ್ಯಾಲಿಂಥ ದೊರೆಯಿಲ್ಲ ಅದರಿಂದಭಾಮೆ ನೀ ಕಂಡೆಒಗೆತನ13ಪಟ್ಟಾಭಿರಾಮನಂತೆ ಸಿಟ್ಟು ಕೃಷ್ಣಯ್ಯಗಿಲ್ಲಎಷ್ಟು ದಯವಂತ ಯದುಪತಿಎಷ್ಟು ದಯವಂತ ಯದುಪತಿ ಅದರಿಂದಶ್ರೇಷ್ಠಳೆ ಕಂಡೆಒಗೆತನ14ಇಷ್ಟು ಜನರೊಳು ಅಷ್ಟೂಗುಣಗಳ ಸ್ಪಷ್ಟ ಮಾಡಿ ಹೊಗಳಲಿಸ್ಪಷ್ಟ ಮಾಡಿ ಹೊಗಳಲಿ ರಮಿ ಅರಸುಬಿಟ್ಟರೆÉ ನಿನ್ನ ತೆgನೆÉೀನಭಾಳಭಾಳಬಿಂಕರುಕ್ಮಿಣಿ15
--------------
ಗಲಗಲಿಅವ್ವನವರು
ಶ್ರೀಗುರು ಎಂಥಾ ದಯವಂತನಿಹ ನೋಡೆಈಗ ಋಣವ ಕಳೆದೆನೆನಲು ಆನಂದವಹುದು ನೋಡೆಪಕರೆಯುತ ಸನಿಹಕೆ ಚರಣವ ಶಿರದಲಿಟ್ಟನು ನೋಡೆಹರುಷ ಉಕ್ಕುತ ಎನ್ನ ಮುಖವ ನೋಡಿದ ನೋಡೆಪರಮಾತ್ಮನು ನೀತಿ ಎಂದುಪರಿಪರಿ ಹೇಳಿದ ನೋಡೆಅರೆಮರೆಯೆಲ್ಲವು ನೀ ಬ್ರಹ್ಮನೆಂದು ಆಡಿದ ಕರ್ಣದಿ ನೋಡೆ1ತೋರುವುದೆಲ್ಲವು ನೀನೆ ಎಂದು ತಿಳುಹಿದ ಎನ್ನನು ನೋಡೆದಾರಾಸುತ ಸಹೋದರರೆಂಬರ ದಾರಿಯ ಬಿಡಿಸಿದ ನೋಡೆಮೂರು ಗುಣಗಳ ಮಂದಮತಿಗಳ ಮುಂದುಗೆಡೆಸಿದ ನೋಡೆಕಾರಣಕಾರ್ಯವ ಕಳೆದ ಅವಿದ್ಯದ ಕಷ್ಟವ ಕಳೆದ ನೋಡೆ2ಷಟ್ಚಕ್ರಂಗಳ ದಾಟಿಸಿ ಎನ್ನುನು ಶ್ರೇಷ್ಠನ ಮಾಡಿದ ನೋಡೆಅಡರಿಸಿ ಮೇಲಕೆ ಸಹಸ್ರಾರದಿ ಆನಂದಿಸಿದನು ನೋಡೆಕಿಡಿಯುಗುಳುವ ಕೋಟ್ಯಾದಿತ್ಯರ ಬೆಳಕನು ತೋರಿದ ನೋಡೆಮೃಡಚಿದಾನಂದ ಸದ್ಗುರು ಬ್ರಹ್ಮದಿ ಮುಕ್ತನು ಮಾಡಿದ ನೋಡೆ3
--------------
ಚಿದಾನಂದ ಅವಧೂತರು