ಒಟ್ಟು 161 ಕಡೆಗಳಲ್ಲಿ , 52 ದಾಸರು , 134 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂಥ ಕೌತುಕವೆ ನಿಮ್ಮಿಬ್ಬರದೆಂಥ ಕೌತುಕವೆಎಂಥ ಕೌತುಕ ಚಿಂತಾಮಣಿಯ ನೋಡಿಸಂತೋಷ ವಾಗದೆ ಕಾಂತೆಯರುಕಾದುವ ಎಂಥ ಕೌತುಕವೆ ಪ. ನಾರಿಯರಿಬ್ಬರ ಬಿಟ್ಟು ನೀರೊಳಡಗಿದಮಾರಿ ತೋರದಲೆ ನೆಲವನೆ ಮಾರಿ ತೋರದಲೆ ನೆಲವನೆ ಬಗಿದುಅತಿ ಕ್ರೂರನಾದರೂ ಬಿಡರೆಲೆ ಸಖಿಯೆ1 ತಿರಕ ತಾಯಿಯಸುದ್ದಿ ಅರಿತವನಲ್ಲದೆದೊರೆತನ ಬಿಟ್ಟು ದನವನೆ ಕಾಯ್ದುದೊರೆತನ ಬಿಟ್ಟು ದನವ ಕಾಯ್ದರುನಿಮ್ಮ ಕರಕರೆ ಒಂದು ಬಿಡರೆಲೆ ಸಖಿಯೆ2 ಬತ್ತಲಾಗಿ ಎನ್ನ ಹತ್ತಿಲೆ ನಿಲ್ಲೆಂದುಎತ್ತ ಓಡಲೆನುತÀ ಕುದುರೆಯಎತ್ತ ಓಡಲೆನುತ ಕುದುರೆ ಜಳಕಿಸಿಬೆನ್ಹತ್ತಿ ಕೊಂಡವನ ಬಿಡರೆಲೆ ಸಖಿಯೆ3 ಕಾಲ ನಳಿನಾಕ್ಷಿ ಆಗ ನೆರವಾದಿನಳಿನಾಕ್ಷಿ ಆಗ ನೆರವಾದಿ ಉಪಕಾರ ಒಲಿದುಶ್ರೀಕೃಷ್ಣ ಮದುವ್ಯಾದ ಸಖಿಯೆ 4 ಕುಂದುಗುಣಗಳೆಲ್ಲ ಮುಂದಕ್ಕೆ ತಾರದೆ ಹಿಂದಿನ ಉಪಕಾರ ಸ್ಮರಿಸುತ ಹಿಂದಿನ ಉಪಕಾರ ಸ್ಮರಿಸುತ ಅವಳು ಮುಂದೆ ಬೇಕೆಂದು ಮನಸೋತ ಸಖಿಯೆ5 ಭಾವೆ ರುಕ್ಮಿಣಿ ನಿಮ್ಮ ಹೀನಗುಣನೋಡದೆಕಾಮನ ಪಿತನು ಕೈ ಹಿಡಿದ ಕಾಮನ ಪಿತನು ಕೈ ಹಿಡಿದ ಕಾರಣಭೂಮಂಡಲವೆಲ್ಲ ನಮಿಸಿತು ಸಖಿಯೆ 6 ಅಷ್ಟು ಜನರೊಳು ಧಿಟ್ಟತನವ ಮಾಡಿಗಟ್ಯಾಗಿ ನೀನು ರಥವೇರಿಗಟ್ಯಾಗಿ ನೀನು ರಥವೇರಿ ಧೈರ್ಯದಿಕೃಷ್ಣನ ಬೆರೆದು ತೆರಳಿದಿ ಸಖಿಯೆ 7 ಮುದ್ದು ರಾಮೇಶಗೆÀ ಕದ್ದು ಓಲೆಯ ಬರಿಯೆಹದ್ದು ವಾಹನನು ಎರಗಿದಹದ್ದು ವಾಹನನು ಎರಗಿದ ಕಾರಣವಿದ್ವಜ್ಜನರೆಲ್ಲ ನಮಿಸಿತು ಸಖಿಯೆ8
--------------
ಗಲಗಲಿಅವ್ವನವರು
ಎಂದು ಕಾಂಬೆನು ಪಾಂಡುರಂಗ ಮೂರುತಿಯಾ ಇಂದು ಭಾಗನಿವಾಸ ನರನ ಸಾರಥಿಯ ಪ ಚಾರು ಚರಣಾಂಗುಲಿ ನಖರ ತರುಣೀಂದುಚ್ಛವಿ ತಿರಸ್ಕರಿಸುವ ಪ್ರಖರ ಕಿರುಗೆಜ್ಜೆ ಕಡಗ ನೂಪುರ ಪೆಂಡೆ ಶಫರ ತೆರಜಾನು ಜಂಘೆ ಭಾಸ್ಕರ ರತ್ನ ಮುಕುರ1 ರಂಭಾ ಪೋಲುವ ಊರು ಪೊಂಬಣ್ಣಾಂಬರವ ಕುಂಭೀ ಮಸ್ತಕದೊಲ್ ನಿತಂಬದಿ ಪೊಳೆವ ಕಂಬು ಮೇಖಳಕಂಜ ಗಂಭೀರ ನಾಭೀ ವಿಧಿ ಶಂಭು ಪೂಜಿತನ 2 ಲವಕುಕ್ಷಿತ್ರವಳಿ ಬಾರ್ಗವಿ ವಕ್ಷ ಉರವು ಕೌಸ್ತುಭ ವೈಜಯಂತಿಯ ಸುವಿಶಾಲ ವಕ್ಷದೊಳ್ ವಿವಿಧ ಹಾರಗಳು ನವನೀತ ಚೋರ ಶ್ರೀ ಪವಮಾನಾರ್ಚಿತನ 3 ಪದಕ ಸರಿಗೆಯ ಜಾಂಬೂನದ ಕಂಬುಕಂಠ ರದನೀಕರ ಬಾಹು ಚದುರ ಭುಜಕೀರ್ತಿ ಬದರ ಸಂಕಾಶಾ ಅಂಗದ ರತ್ನ ಕಟಕಾ ಪದಮಾರುಣ ಕರಯುಗ್ಮ ಕಟಿಯಲ್ಲಿಟ್ಟವನಾ4 ವಿಧುಬಿಂಬೋಪಮ ಚಲ್ವವದನ ಕೆಂದುಟಿಯಾ ಬಿದುರಾಭಾದಶನಾಲಿಂಗದನೊಳ್ ಕಿರುನಗೆಯಾ ಕದಪು ಕನ್ನಡಿ ನಾಸಾ ತುದಿ ಚಂಪಕ ತೆನೆಯಾ ಉದಕೇಜಾಯತ ನೇತ್ರಯದುವಂಶೋದ್ಭವನಾ 5 ಕುಂಡಲ ಕರ್ಣ ಸುಲಲಿತ ಭ್ರೂಯುಗಳ ಪೊಳೆವ ಬಾಲ ಶಶಾಂಕ ತಿಲಕಾಂಕಿತ ಫಾಲ ಅಳಿಬಾಲವೆನಿಪ ಕುಂತಳ ರತ್ನ ಚಕಿತ ಕಲಧೌತ ಮಕುಟ ದಿಗ್ವಲಯ ಬೆಳಗುವನ 6 ಮಾನವ ಹರಿಯಾ ವಟುಭಾರ್ಗವ ಕಾಕುಸ್ಥ ಶಠ ಕಂಸದ್ವಿಷನ ನಿಟೆಲಾಂಬಕ ಸಹಾಯ ಖಳಕಟಕಾರಿ ಭೀಮಾ ತಟವಾಸ ಜಗನ್ನಾಥವಿಠಲ ಮೂರುತಿಯ 7
--------------
ಜಗನ್ನಾಥದಾಸರು
ಎಲೆ ಸಖಿಯೆ ಪೋಗು ವಿಠಲನ ಬಳಿಗೆಬೇಗವನ ತಾರೆ ಎನ್ನ ಮನೆಗೆಪ. ಚಂದ್ರ ಉದಿಸುತಲಿ ಬಂದ ರಂಜಿಸುತರ-ವಿಂದಬಾಣ ನಡೆತಂದಮಂದಮಾರುತ ಮುಂದೆ ನಿಂದ ಅವ ಕುಸುಮ-ಗಂಧದಿಂದಲೆನ್ನ ಕೊಂದ1 ಕೀರ ನುಡಿಯುತಿದೆ ಧೀರ ಕೋಕಿಲಿಯಸ್ವರ ಕರ್ಣಕಠೋರಮಾರ ಬೇಗ ಹರಿಬಾರದಿರೆ ಕೆಳದಿಕ್ರೂರ ಎನ್ನ ಕೊಲ್ಲದಿರ 2 ಜೀಯ ಸುಜನರ ಸಹಾಯ ನಿಗಮಕುಲಗೇಯ ನಿರ್ಧೂತ ಹೇಯಪ್ರಿಯ ಹಯವದನರಾಯ ಸಖಿ ಎನ್ನಕಾಯಲಿನ್ನೇನು ಉಪಾಯ 3
--------------
ವಾದಿರಾಜ
ಎಷ್ಟು ದಿನದ ಪೂಜೆ ಹಿಡಿದೆಣ್ಣಾ ಸತಿಯೆಂಬ ಮಾರಿದಿ- ನ್ನೆಷ್ಟು ದಿನ ಪೂಜೆ ಮಾಡಬೇಕಣ್ಣಾ ಪ ಎಷ್ಟು ದಿನದ ಪೂಜೆ ಹಿಡಿದಿ ನ್ನೆಷ್ಟುದಿನ ಮುಂದೆ ಬಾಕಿ ಉಳಿದಿದೆ ಕಷ್ಟಕಂಜದೆ ಬಿಡದೆ ಅನುದಿನ ನಿಷ್ಠೆಯಿಂದ ಪೂಜೆ ಮಾಡುವಿ ಅ.ಪ ಒಬ್ಬರ ಮನೆ ಮುರಿದು ತರುವಿ ಅವಳಿಗೇನೆ ಹಬ್ಬಮಾಡಿ ಉಣಿಸುತಿರುವಿ ಮತ್ತು ಇನ್ನು ಒಬ್ಬರೈತರ ಬೊಬ್ಬೆ ಹೊಡೆಯುವಿ ದಬ್ಬಿ ಓಡಿಸುವಿ ಹಬ್ಬ ಹುಣ್ಣಿಮೆ ಬರಲು ವೈಭವದುಬ್ಬಿಉಬ್ಬಿವಸ್ತ್ರ ಒಡವೆ ಅಬ್ಬರದಿಂದುಡಿಸಿ ತೊಡಿಸಿ ಮಬ್ಬಿನಿಂದ ಹಿಗ್ಗುತಿರುವಿ 1 ಧನವ ತಂದು ಅವಳಿಗರ್ಪಿಸಿ ಮತ್ತು ನಿನ್ನಯ ಮನವ ಅವಳ ವಶಕೆ ಸಲ್ಲಿಸಿ ಎಂಟುಗೇಣಿನ ತನುವು ಅವಳಾಧೀನದಲ್ಲಿರಿಸಿ ಕುಣಿವಿ ಪಶುವೆನಿಸಿ ಪಾಲಿಸಿ ದಿನಗಳೆಯುವಿ ನೋಡಿಕೊಳ್ಳದೆ 2 ಬಂದಕಾರ್ಯ ಮರೆದುಬಿಟ್ಟ್ಯಲ್ಲ ಹೆಡತಲೆಮೃತ್ಯು ಹಿಂದೆ ನಿಂತು ನಲಿಯುತಾಳಲ್ಲ ಹೇ ಪಾಪಿ ನೀನು ಒಂದೂ ವಿಚಾರ ಮಾಡಿ ಅರೀಲಿಲ್ಲ ಮಂದನಾದೆಲ್ಲ ತಂದೆ ಶ್ರೀರಾಮನ್ನಂತಂಘ್ರಿಗೊಂದಿ ಭಜಿಸಿ ದಾಸನಾಗಿ ಅಂದಮಾದ ನಿತ್ಯಮುಕ್ತಿ ಪಡೆವ ಸುಸಂಧಿ ನಡುವೆ ಹೋಗುತಾದರ್ಲ3
--------------
ರಾಮದಾಸರು
ಏಕೆ ಮರೆದಿದ್ದೆನಯ್ಯಾ ಎನ್ನೊಳು ನಾ ಗೋಪಾಲಶ್ರೀಕಾಂತ ನಿನ್ನ ಪಾದದ ಚಿಂತೆಯ ಬಿಟ್ಟಜ್ಞನಾಗಿ ಪಕಾಯವೆ ಸತ್ಯವಿದೆಂದು ಕಾಣದೆ ನಾನಿಲ್ಲಿ ಬಂದುಮಾಯೆಗೊಳಗಾಗಿ ನಿಂದು ಮತ್ತರ ಸಂಗದಿನೊಂದುಜಾಯೆ ಸುತರ್ಗತಿಯೆಂದು ಧ್ಯಾನಿಸಿ ದುಃಖದಿನೊಂದುಬಾಯ ಬಡುಕರೊಳ್ನಿಂದು ಬನ್ನಬಟ್ಟುಳಿಸೆಂದು 1ಆಶೆಗಳಿಗೊಳಗಾಗಿ ಆನಂದಮಾರ್ಗವ ನೀಗಿವಾಸನೆಗಳಿಂದ ಪೋಗಿ ವಾದಿಸುತಲಿ ಚೆನ್ನಾಗಿಮೋಸಹೋಗಿ ಮುಖಬಾಗಿ ಘಾಸಿಯಾಗಿ ಗುಣಪೋಗಿಕಾಸು ವೀಸಾ ಧಾನ್ಯಕಾಗಿ ದಾಸನಾಗಿ ಪರರಿಗೆ 2ಎಲ್ಲರೊಳುವಾದಗಳವಾಡಿ ಬಲ್ಲವನಂದದಿ ಕಾಡಿಖುಲ್ಲರಾ ಮಾರ್ಗವ ಕೂಡಿ ಕೂಳಿಲ್ಲದಿಲ್ಲಿಗೆ ಬಾಡಿತಲ್ಲಣದೊಳಗೋಲಾಡಿ ತಬ್ಬಿಬ್ಬೊ ಕರ್ಮವ ಮಾಡಿಕಲ್ಲೆದೆಯನನೆನ್ನನು ಕಾಯಬೇಕು ಗೋಪಾಲಾರ್ಯ 3
--------------
ಗೋಪಾಲಾರ್ಯರು
ಏನ ಹೇಳಲಿ ನರಹರಿ ನಿನ್ನ ಮಹಿಮೆಯ ಪ. ನಿನ್ನ ಧ್ಯಾನ ಮಾಡೇನೆಂದರೆ ನಿಲ್ಲಗೊಡದು ಮನ ಅ.ಪ. ಸಚ್ಚಿದಾನಂದನ ಪಾದಾರವಿಂದವಮೆಚ್ಚಿ ಹಸನಾಗಿ ಇರು ಎಂದೆಡೆಹುಚ್ಚೆದ್ದ ಕಪಿಯಂತೆ ವಿಷಯವೆಂಬಡವಿಲಿಕಿಚ್ಚುಕಂಗೊಂಡು ಎನ್ನ ಕಾಡುತಿದೆ ರಂಗ 1 ವಾಸುದೇವನ ಗುಣಗಳ ಸ್ತುತಿಸದೆ ದು-ರಾಸೆಯೊಳು ಬಿದ್ದು ಕಾಡುತಿದೆಲೇಸಾಗಿ ನಾಯಿಬಾಲಕೆ ನಾರಾಯಣ ತೈಲಏಸುಬಾರಿ ತೀಡಿದರೆ ನೀಟಾಗುವುದೊ2 ಸಾಧು ಸಜ್ಜನರ ಸಂಗವ ಮಾಡಲೊಲ್ಲದೆಬಾಧಿಸುತಿದೆ ದುಷ್ಟಸಂಗದಿಂದಮಾಧವ ಭಕ್ತವತ್ಸಲ ಹಯವದನನೆನೀ ದಯಮಾಡಿ ನಿನ್ನಂತೆಮಾಡೆನ್ನ ಮನ 3
--------------
ವಾದಿರಾಜ
ಏನೆಂದ್ಹೇಳಲಿ ಸ್ವಾನಂದ ಮಹಿಮೆಯು ಏನೆಂದ್ಹೇಳಲಿ ಮಾ ಧ್ರುವ ವೇದಲ್ಲ ವಾದಲ್ಲ ಭೇದಮಾಡುವದಲ್ಲ ಸಾಧಕರಿಗೆ ತಾ ಸಿಲುಕುದುಮಾ ಓದಲ್ಲ ಶೋಧಲ್ಲ ಗಾದಿಯ ಮಾತಲ್ಲ ಭೇದಿಸಿದರೆ ತಾನು ತಿಳಿವದು ಮಾ 1 ಧ್ಯಾನಲ್ಲ ಮೋನಲ್ಲ ಸ್ನಾನ ಸಂಧ್ಯಾನಲ್ಲ ಙÁ್ಞನಹೀನರಿಗಿದು ತಿಳಿಯದು ಮಾ ನಾನಲ್ಲ ನೀನಲ್ಲ ನಾನುಡಿದ ಮಾತಲ್ಲ ಅನುಭವ ಸಿದ್ಧನು ಬಲ್ಲನು ಮಾ 2 ಸೇವಲ್ಲ ಸೂತ್ರಲ್ಲ ಬಾಹ್ಯನೋಟಿಕೆ ಅಲ್ಲ ಮಹಿಪತಿ ನಿನ್ನೊಳು ತಿಳಿವದು ಮಾ ಕೌತುಕವನು ಕಂಡು ಮಹಾ ಗುರುಕೃಪೆಯಿಂದ ಸಾಯೋಜ್ಯ ಸದ್ಗತಿ ಪಡೆವದು ಮಾ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಒಂಬತ್ತು ಹೂವಿಗೆ ಒಂದೇ ನಾಳವು ಚಂದಮಾಮ ಪ ತುಂಬಿ ಭಾನು ಪ್ರಭೆ ಚಂದಮಾಮಅ ಗಾತ್ರ ಕಂಬ ತೆಕ್ಕೆಗಾತರ ಹೂವು ಚಂದಮಾಮಆನೆಗಾತರ ಕಾಯಿ ಒಂಟೆಗಾತರ ಹಣ್ಣು ಚಂದಮಾಮ 1 ಕಾಲಿಲ್ಲದಾತನು ಹತ್ತಿದನು ಮರವನು ಚಂದಮಾಮಕೈಯಿಲ್ಲದಾತನು ಕೊಯ್ದನಾ ಹಣ್ಣನು ಚಂದಮಾಮ 2 ನೆತ್ತಿಲ್ಲದಾತನು ಹೊತ್ತನು ಹಣ್ಣ ಚಂದಮಾಮತಳವಿಲ್ಲದಾ ಗೂಡೆಯಲಿಳಿಸಿದನಾ ಹಣ್ಣ ಚಂದಮಾಮ 3 ಮಾರ್ಗ ತಪ್ಪಿ ಮಾರ್ಗ ಹಿಡಿದು ನಡೆದರು ಚಂದಮಾಮಸದ್ದಿಲ್ಲದಾ ಸಂತೇಲಿಳಿಸಿದರಾ ಹಣ್ಣ ಚಂದಮಾಮ 4 ರೊಕ್ಕವಿಲ್ಲದಾತ ಕೊಂಡನಾ ಹಣ್ಣ ಚಂದಮಾಮಮೂಗಿಲ್ಲದಾತ ಮೂಸಿದನಾ ಹಣ್ಣ ಚಂದಮಾಮ 5 ಕಣ್ಣಿಲ್ಲದಾತನು ಕೆಂಪಾನೆ ಹಣ್ಣೆಂದ ಚಂದಮಾಮ ಅಂಗುಳಿಲ್ಲದಾತ ನುಂಗಿದನಾ ಹಣ್ಣ ಚಂದಮಾಮ 6 ಬಾಯಿಲ್ಲದಾತ ತಿಂದು ಬಸಿರಲಿಂಬಿಟ್ಟ ಚಂದಮಾಮಸುಲಭ ಪದವಿದು ನಳಿನಜಾಂಡದೊಳು ಚಂದಮಾಮ 7 ಗುರುವಿನ ಮಹಿಮೆ ಗುರುವೆ ತಾ ಬಲ್ಲನು ಚಂದಮಾಮಮೂಢನಾದವನೇನು ಬಲ್ಲನು ಈ ಮಾತು ಚಂದಮಾಮ 8 ಕನಕನಾಡಿದ ಗುಟ್ಟು ಆದಿಕೇಶವ ಬಲ್ಲ ಚಂದಮಾಮತಿಳಿದವರು ಪೇಳಿರೀ ಹಳೆಗನ್ನಡವ ಚಂದಮಾಮ 9
--------------
ಕನಕದಾಸ
ಒಲಿಸಿದ್ಹ್ಯಾಗೆ ಪೇಳೆ ಜನನಿ ತುಲಸಿ ಹರಿಯ ಮೋಹಮಾನಿನಿ ಪ ಮೊಲ್ಲೆ ಮಲ್ಲಿಗೆ ಜಾಜಿ ಸಂಪಿಗೆ ಒಲ್ಲ ಸೇವಂತಿಗಿರವಂತಿಗೆ ಎಲ್ಲ ಕುಸುಮಗಳನು ನೀ ನಿಲ್ಲದೆ ತನಗೆ ಸಲ್ಲದೆನುವ 1 ಗಂಧ ಕಸ್ತೂರಿ ಪುನುಗು ಕೇಸರಿ ಅಂದಮಾದ ಸುಗಂಧ ಭಾರಿ ಚಂದದಿ ಪೂಸಲಿದರೊಳ್ನೀ ನೊಂದಿಲ್ಲದಿನಿತು ಧಿಕ್ಕಾರೆನುವ 2 ಮಿಗಿಲಾದ ಮಣಿಮಾಲೆಯ ಬಗೆಯದಿದನು ನಿನ್ನ ಬೇಡುವ ನಿಗಮಾತೀತ ಶ್ರೀರಾಮ ನಿ ನ್ನಗಲದಿರೆನೆಂಬ ಸಂತತ 3
--------------
ರಾಮದಾಸರು
ಕರವ ಕರವ ಮುಗಿದು ಹೇಳಿದೆ ಹರಿಯ ಭಕ್ತರ ಸಿರಿಯ ದ್ವಾರಕೆ ದೊರೆಗೆ ಎರಗುವೆನೆಂದಳು ಶ್ರೀ ಹರಿಗೆ ಎರಗುವೆನೆಂದಳು ಪ. ಇಂದು ಸುಕೃತ ಬಹಳ ಬಂದುಒದಗಿತೆಂದನು ರಾಯ ಬಂದು ಒದಗಿತೆಂದನು 1 ಅಂದಮಾತು ಕೇಳಿ ಆನಂದ ಪೂರ್ಣನಾದನು ರಾಯಬಂದ ಜನರು ವೃಂದಾರಕರೆಂದು ಬಂದ ಕೃಷ್ಣ ಎಂದನು ಈಗ ಬಂದ ಸ್ವಾಮಿ ಎಂದನು 2 ಎಷ್ಟು ಯಜ್ಞವು ಎಷ್ಟು ದಾನವು ಎಷ್ಟು ಜಪ ತಪ ಹೋಮವುಮತ್ತೆ ಎಷ್ಟು ತೀರ್ಥಯಾತ್ರೆ ಫಲಿಸಿತು ಕೃಷ್ಣ ಬಂದನೆಂದು ಈಗ ಕೃಷ್ಣ ಮನೆಗೆ ಬಂದನು 3 ಧಿಟ್ಟೆರೈವರು ಕೃಷ್ಣನಂಘ್ರಿಯ ಮುಟ್ಟಿ ಮನದಲ್ಲಿಟ್ಟರುಕೃಷ್ಣ ಮನೆಗೆ ಬಂದನೆಂದುಎಷ್ಟು ಹರುಷ ಬಟ್ಟರು ಅವರು 4 ಏಳು ಜನ್ಮದ ಸುಕೃತದಿಂದ ಈ ವೇಳೆ ಒದಗಿತೆಂದನು ರಾಯ ಕೇಳ ರುಕ್ಮಿಣಿ ಭಾವೆ ಬಂದದ್ದು ಹೇಳಲ್ವಶವೆಎಂದನುರಾಯ ಹೇಳಲ್ವಶವೆ ಎಂದನು 5 ಪಾದ ಕಾಣದೆ ನಿಲ್ಲಲಾರೆವೆಂದರುಕ್ಷಣ ನಿಲ್ಲಲಾರೆವೆಂದರು ಚಲ್ವ ರಂಗನ ಬದಿಲೆ ಬಂದು ನಿಲ್ವೆವೀಗ ಎಂದನು ರಾಯ 6 ಏಸು ಜನ್ಮದ ಸುಕೃತದಿಂದ ರಾಮೇಶಬಂದನೆಂದನು ಸರ್ವೇಶ ಬಂದನೆಂದನು ವಾಸುದೇವರ ಪಾದಕಾಂಬುವೆ ಈ ಸಮಯದೊಳು ಎಂದನುರಾಯ 7
--------------
ಗಲಗಲಿಅವ್ವನವರು
ಕಲಯೇಹಂ ಶ್ರೀ ಕನಕಾದ್ರೀಶಂ ಜಲದೋಪಮ ಭಾಸಂ ಪ ಸುಲಲಿತ ಕರಧೃತ ಧರರಥಚರಣಂ ಕಲಿಕಲಹಾಪಹ ಕಮನೀಯ ಚರಣಂ ಅ.ಪ ಮಸ್ತಕ ನಿಹಿತ ಮಹಾರ್ಹ ಕಿರೀಟಂ ಕಸ್ತೂರೀ ತಿಲಕಿತ ದಿವ್ಯಲಲಾಟಂ ನಿಸ್ತುಲ ಮದಮಾಂಚಿತ ಜೂಟಂ ಕೌಸ್ತುಭ ಶೋಭಿತ ಮಣಿಸರ ಕೂಟಂ 1 ಸುಮಶರಕೋಟಿ ಮನೋಹರ ವೇಷಂ ಕಮಲಾಸಖ ಭಾ ಭರಣ ವಿಭೂಷಂ ಸುಮಹಿತಭಣಿತ ಸದೃಶ ಮಂಜುಭಾಷಂ ವಿಮಲಹೃದಯ ಸೇವಕ ಪೋಷಂ 2 ಶ್ರೀರಮಣೀಪರಿಶೋಭಿತಗಾತ್ರಂ ವಾರಿಜಭವಕೃತ ವಿವಿಧ ಸ್ತೋತ್ರಂ ಸಾರಸದಳ ವಿಸ್ತಾರ ಸುನೇತ್ರಂ ನಾರದಮುನಿಕೃತ ಪೂಜಾಪಾತ್ರಂ 3 ಶರದಿಂದುಮಂಡಲ ಸುಂದರವದನಂ ವರಕುಂದಕುಟ್ಮಲ ಸನ್ನಿಭ ರದನಂ ಕರಸಂದರ್ಶಿತ ವೈಕುಂಠಸದನಂ ತರಣಿ ಘೃಣಿ ರುಚಿದಂತ ಹಸನಂ 4 ತುರುಣ ಶ್ರೀತುಳಸೀ ಶೋಭಿತಮಾಲಂ ಸರಸಿಜಗರ್ಭರುಚಿರ ದಿವ್ಯಚೇಲಂ ವರವ್ಯಾಘ್ರಭೂಧರ ವಿಹರಣಶೀಲಂ ವರವಿಠಲಮಖಿಲಾಗಮ ಪಾಲಂ 5
--------------
ವೆಂಕಟವರದಾರ್ಯರು
ಕಾಣದೆ ನಿಲ್ಲಲಾರೆ, ಕಮನೀಯ ಮೂರುತಿಯಪ್ರಾಣೇಶನ ತೋರೆ ಗಿಣಿಯೆ ಪ ಮಾಣಿಕ್ಯ ಪದಕವ ಮನ್ನಿಸಿ ನಿನಗೀವೆಜಾಣೆ ಕೃಷ್ಣನ ತೋರೆ ಗಿಣಿಯೆ ಅ.ಪ. ಮಕರಕುಂಡಲಧರನ ಮಕರಧ್ವಜನ ಪಿತನಮಕುಟ ಭೂಷಣನ ತೋರೆ ಗಿಣಿಯೆಮಕರಾಕ್ಷ ಸಂಹರನ ಮಕರಾರಿ ರಕ್ಷಕನಮಕರ ಶಿಕ್ಷಕನ ತೋರೆ ಗಿಣಿಯೆ 1 ಇಂದು ರವಿಲೋಚನನಇಂದು ನೀ ಕರೆತಾರೆ ಗಿಣಿಯೆಇಂದುಶೇಖರನುತನ ಇಂದಿರೆಯರಸನತಂದು ತೋರೆ ಮುದ್ದುಗಿಣಿಯೆ2 ಒಂದು ನಿಮಿಷವೊಂದು ಯುಗವಾಗಿ ತೋರಿತೆಸೌಂದರ್ಯನ ತೋರೆ ಗಿಣಿಯೆಮಂದಮಾರುತ ಸೋಕೆ ಮರುಳುಗೊಂಡೆನೆ ಎನ್ನಮಂದಿರಕೆ ಕರೆತಾರೆ ಗಿಣಿಯೆ 3 ಕಾಯಜನ ಬಾಣದಲಿ ಕಾಯವೆಲ್ಲವು ಬಹಳಘಾಯವಾಯಿತು ನೋಡೆ ಗಿಣಿಯೆಮಾಯೆಗಳ ಮಾಡದೆ ಮಮತೆಯಿಂದಲಿ ಎನ್ನನಾಯಕನ ಕರೆತಾರೆ ಗಿಣಿಯೆ 4 ಪಂಕಜೋದ್ಭವ ಪಿತನ ಪಂಕಜನಯನನಪಂಕಜನಾಭನ ತೋರೆ ಗಿಣಿಯೆಪಂಕಜಾಕ್ಷ ಸಿರಿಕೃಷ್ಣನ ಪದಪದ್ಮಶಂಕೆಯಿಲ್ಲದೆ ತೋರೆ ಗಿಣಿಯೆ 5
--------------
ವ್ಯಾಸರಾಯರು
ಕ್ಷಿತಿಭಾರ ಹರಣನೇ ಶ್ರೀಜಾನಕೀ ಪತಿಯೇ |ಶಿತಿಕಂಠ ಸಖ ಹರಿಯೇ ಪ ಅತಿ ವಿಮಲನಂತಾರ್ಕ ನಿಭ ಪದಾಗತಿ ವಹನೆ ಪೊರೆ ಶ್ರೀರಾಮಚಂದ್ರಾನೇ ಅ.ಪ. ಪರಮ ಮಂಗಳ ನಾಮ | ಪರಿಹರಿಸಿ ಸಂಸೃತಿಯನಿರುತ ಮಹದಾನಂದ | ಪ್ರದವೆನಿಪುದೋ ||ಮರುತಾಂತರಾತ್ಮ ತವ | ನಾಮ ಸುಧೆ ಸುಖ ಸವಿದುಇರುವಂತೆ ಮಾಡಯ್ಯ | ಕರುಣ ನಿಧಿಯೇ 1 ಕಮಲ ಸಂಭವನಯ್ಯ | ಸುಮನಸರಿಗತಿ ಪ್ರೀಯಕಮಲದಳ ನೇತ್ರನೇ | ಕಾಮಿತ ಪ್ರದನೇ ||ಭ್ರಮ ಮೂರ ಪರಿಹರಿಸೊ | ಕಮಲಾಪ್ತ ಕುಲಜನೇಶಮದಮಾನ್ವಿತನೆನಿಸಿ | ವಿಮಲ ಮತಿ ಈಯೋ 2 ದಶಕಂಠ ಹರ ನಿನ್ನ | ಯಶವನ್ನೆ ಪೊಗಳಲುಶೇಷ ವಿಪ ರುದ್ರಾದಿ | ಗಸದಳವು ಇಹುದೂ |ಕಸರು ಕರ್ಮಾದಿಗಳ | ಕೆಸರು ಕಳೆ ಪ್ರಾರ್ಥಿಸುವೆಅಸಮ ಮಹಿಮನೆ ಗುರು | ಗೋವಿಂದ ವಿಠಲಾ 3
--------------
ಗುರುಗೋವಿಂದವಿಠಲರು
ಗುರು ನಿಮ್ಮ ದಯವೆನಗಾನಂದೋದಯ ಸರಿಸೌಖ್ಯಕರನೀವÀ ಮಹದಾಶ್ರಯ ಧ್ರುವ ಗುರುನಿಮ್ಮ ಕೃಪೆನೋಟ ಎನಗನುಭವದೂಟ ಸುರಸಯೋಗದ ಆಟ ಪರಮನೀಟ ಗುರು ಸುಬೋಧದ ಕೂಡಿ ಎನಗೆ ನಿಜ ಘನ ಪ್ರಗಟ ಕರಕಮಲ ಭಯದಮಾಟ ವರಮುಗುಟ 1 ಗುರುನಿಮ್ಮ ದಯಕರುಣ ಎನಗೆ ಸಕಲಾಭರಣ ವರ ಪ್ರತಾಪದೆ ವಿಜಯಾನಂದಘನ ಗುರು ನಿಮ್ಮ ಶ್ರೀ ಚರಣ ಎನಗೆ ಬಳಗವು ಪೂರ್ಣ ಹರುಷಗತಿ ಸಾಧನ ಪರಮಘನ 2 ಗುರು ನಿಮ್ಮ ಬಲವೆ ಬಲ ಎನಗನುದಿನ ದೆಲ್ಯಚಲ ಹೊರುಹುತಿಹ ನಾಮನಿಜ ಸರ್ವಕಾಲ ತರಳ ಮಹಿಪತಿಗೆ ನೀಮಾಡುತಿಹ್ಯ ಪ್ರತಿಪಾಲ ಗುರು ಭಾನುಕೋಟಿತೇಜನೆ ಕೃಪಾಲ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಗುರುವೆ ಪರಬ್ರಹ್ಮ ವಾಸುದೇವಾರ್ಯಗುರುವೆ ಪರಬ್ರಹ್ಮ ಪಅರಿವು ಮರವೆಗಳ ಪರಿಯ ನಿರೂಪಿಸಿಅರಿ'ನ ಘನವಾಹ ತೆರಗೈದು ಪಾಲಿಪ ಅ.ಪಸುಖಬುದ್ಧಿುಂಪಾಪಾಸಕ್ತ ಮಾನಸರನುಯುಕುತಿುಂದಲಿ ಹರಿಭಕುತಿಗಳವಡಿಪ 1ಭಾಗವತಾರ್ಥದಿ ರಾಗವ ಪುಟ್ಟಿಸಿಹಾಗೆ ಗೀತಾಮೃತ ಸಾಗರದೆಡೆಗೊಯ್ವ 2ನಾನಾಮತಗಳೊಳು ಮಾನಿಸಹೊಗದಂತೆಶ್ರೀನಿವಾಸನ ಪಾದಧ್ಯಾನವ ಬಲಿಸುವ 3ಕಾಮಾದಿ ಕಲುತ ತಾಮಸ ಜನರನುಪ್ರೇಮದಿಂದಲಿ ಸಪ್ತ ಭೂ'ುಕೆಗೇರಿಪ 4ಒಂದೊಂದರೊಳು ಮತಿನಿಂದು ತಿಳಿದೊಳಿಸೆಂದು ನಡೆದೂ ಪೂರ್ಣಾನಂದರಹುದಮಾಳ್ಪ 5ಹೊರಗೊಳಗುಗಾಣದೆ ಬರಿಯರಿವಳಮಲಪರಮನೆ ನಾನೆಂಬ ಪರಿಗೈದು ಪೊರೆವ 6ಕರುಣದಿಂ ಚಿಕನಾಗಪುರದಿ ಭಜಕರಿಗೆಕರದು ಜ್ಞಾನಾಮೃತವೆರೆವ ವಾಸುದೇವಾರ್ಯ 7
--------------
ವೆಂಕಟದಾಸರು