ಒಟ್ಟು 50 ಕಡೆಗಳಲ್ಲಿ , 30 ದಾಸರು , 48 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುರಾಯನಾ ಮನಿಯಾ ನಾಯಿ ನಾನು ಪ ಗುರು ಗುರು ಎನುತಲಿ ಇರುವೆ ಬಾಗಿಲದೊಳು | ಗುರುವಿನೆಂಜಲ ನುಂಡು ಸುಖಿಸುವೆ ನಮ್ಮಯ್ಯನಾ 1 ಹರಿ ಶರಣರ ಕಂಡು ಗರುವಿಸಿ ಕೆಲಿಯೆನು | ದುರುಳರ ಬೆನ್ನಟ್ಟಿ ಹೋಗೆನಾ ನಮ್ಮಯ್ಯನಾ 2 ಒಡೆಯನ ಮುಂದೆ ಯನ್ನಾ ಒಡಲವ ತೋರುವೆ | ಬಿಡದೆ ಅಂಗಣದೊಳು ಹೊರಳುವೆ ನಮ್ಮಯ್ಯ ನಾ3 ಹರಿನಾಮದಿಂದ ಭೋಂಕರಿಸಿ ವದರುವೆ | ಬರಗುಡೆ ಹಮ್ಮ ಸ್ವಜಾತಿಯ ನಮ್ಮಯ್ಯ ನಾ 4 ತಂದೆ ಮಹಿಪತಿ ಸ್ವಾಮಿ ಬಂದು ಮೈಯ್ಯಾದಡವಿ | ನಿಂದು ತನ್ನ ಬಿರುದಕ ಹಾಕಿದ ನಮ್ಮಯ್ಯನ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಚಿಂತೆಯ ಮಾಡದಿರು ಚದುರೆ ನಿನಗೆ ನಾನು ಕಂತುಪಿತನನು ತೋರುವೆ ಪ ಸಂತೋಷದಿಂದ ಸರ್ವಾಭರಣವಿಟ್ಟುಕೊಂಡು ನಿಂತು ಬಾಗಿಲೊಳು ನೋಡೆ ಪಾಡೆ.ಅ.ಪ ಕುಸುಮ ಹಾರವನು ಸುಖನಿಧಿಗೆಕಂದರದಿ ನೀಡಿ ನೋಡೆಸಂದೇಹ ಬಿಟ್ಟು ಬಿಗಿದಪ್ಪಿ ಮನವೊಂದಾಗಿಎಂದೆಂದಿಗಗಲದಿರೆನ್ನ ರನ್ನ 1 ಆಸನವ ಕೊಟ್ಟು ಕಮಲಾಸನನ ಪಿತಗೆ ಸವಿ-ಯೂಟಗಳನುಣ್ಣಿಸಿಲೇಸಾಗಿ ತಾಂಬೂಲ ತವಕದಲಿ ತಂದಿಟ್ಟುವಾಸನೆಗಳನೆ ತೊಟ್ಟು ಸೂಸುವ ಸುಳಿಗುರುಳುಗಳ ತಿದ್ದುತಲಿ ನಕ್ಕುಶ್ರೀಶನ್ನ ಮರೆಯ ಹೊಕ್ಕುಆ ಸಮಯದಲಿ ನಿನಗೆ ದಾಸಿ ಎನ್ನಯ ಮನದಿವಾಸವಾಗು ಬಿಡದೆ ಎನ್ನ ರನ್ನ 2 ಇಂತು ಈ ಪರಿಯಲ್ಲಿ ಶ್ರೀಕಾಂತನನು ಕೂಡಿ ಏ-ಕಾಂತದಲಿ ರತಿಯ ಮಾಡಿಸಂತೋಷವನು ಪಡಿಸಿ ಸಕಲ ಭೋಗವ ತಿಳಿಸಿಸಂತತ ಸ್ನೇಹ ಬೆಳೆಸಿಅಂತರಂಗಕ್ಕೆ ಹಚ್ಚಿ ಅವನಾಗಿ ತಾ ಮೆಚ್ಚಿಪ್ರೀತಿಯಿಂದಧರ ಕಚ್ಚಿಕಂತು ಕೇಳಿಯೊಳು ಕಡುಚೆಲ್ವ ರಂಗವಿಠಲಇಂತು ನಿನ್ನಗಲ ಕಾಣೆ-ಜಾಣೆ.3
--------------
ಶ್ರೀಪಾದರಾಜರು
ತಿಳಿಯದೊ ನಿನ್ನಾಟ ತಿರುಪತಿಯ ವೆಂಕಟ ಪ. ನೀರೊಳು ಯಳವ ಮೋರೆಯ ನೆಳಲ ನೋಡುವಿ ಸುಳಿವರಂಬುಧಿ ಇಳೆಯನಾಳುವ ಭಳಿರೆ ಭಾರ್ಗವ ಖಳನ ಛೇದಿಸಿ ಕೊಳಲ ದನಿಯನು ನಳಿನಮುಖಿಯರಿಗೆ ನಾಚಿಸುವದಿದೊಳಿತೆಯೇಳು ಹವಣಗಾರನೆ 1 ಆರುಬಲ್ಲರು ನಿನ್ನ ಶ್ರೀ ಲಕ್ಷ್ಮಿಯ ಮನಸಿಗೆ ತೋರದಿಹ ಪರಬ್ರಹ್ಮ ಉಳಿದವರು ಬಲ್ಲರೆ ನೀರಜಾಸನ ಬೊಮ್ಮಾ ಇದು ನಿಮ್ಮ ವರ್ತಿ ಭಾರ ಬೆನ್ನಲಿ 2 ಭೂರಿ ಮಾರ ಜನಕನೆ ಮೆರಿವೆ ಕೋಮಲಾಂಗನೆ 3 ಸಕಲ ಮಾಯವಿದೇನೊ ತ್ರಿವಿಕ್ರಮನ ಪಾಲಿಸಿ ಸಕಲನುಳಿಹಿದೆ ನೀನು ಭಕುತಿಯಿಂದಲಿ ಸ್ತುತಿಪರಿಗೆ ಸುರಧೇನು ಸುಮನಸರ ಭಾನೂ ಅಖಿಳವೇದೋದ್ಧಾರ ಗಿರಿಧರ 4 ನಿಖಿಳ ಭೂಮಿಯ ತಂದ ನರಹರಿ ಯುಕುತಿಯಲಿ ಆಳಿದೆ ಭಕ್ತವೃಂದಕೆ ಸುಖವ ತೋರುವ ವೇಣು ಗೋಪಾಲನೆ ರುಕುಮನನುಜೆಯ ರಮಣ ಬೌದ್ಧನೆ ಲಕ್ಷುಮಿಯರಸನೆ ಕಲ್ಕಿ ರೂಪನೆ 5 ನಿನ್ನ ರೂಪವಿದೆಲ್ಲಾ ನೋಡುವರಿಗೆ ಕಣ್ಣು ಸಾಸಿರವಿಲ್ಲಾ ಪಾಡಿ ಪೊಗಳಲು ರಂನ್ನಘಾತಿದೆನಲ್ಲಾ ಕಂಣಮುಚ್ಚದೆ ಬೆಂನ್ನ ತೋರುವೆ ಮಂಣ ಕೆÉದಿರದಿ 6 ಚಿಂಣಗೊಲಿದನೆ ಸಂಣವಾಮನ ಪುಣ್ಯಪುತ್ರನೆ ಹಂಣುಸವಿದನೆ ಬೆಂಣೆಗಳ್ಳನೆ ಹೆಂಣುಗಳ ವ್ರತಗಳೆವ ಹೆಳವನಂದು ಗೆಲಿಸಿದ ರಂಗ ದೇವೋತ್ತುಂಗನೆ 7
--------------
ಹೆಳವನಕಟ್ಟೆ ಗಿರಿಯಮ್ಮ
ನಂದ ಕುಮಾರ ಆನಂದ ಬಾ ಬಾ ಪ. ಚಂದಿರ ಸದೃಶ ನಂದನೆ ಬಾ ಬಾ ಎನ್ನಾನಂದ ಬಾ ಬಾ ಅ.ಪ. ನಿನ್ನ ಕಾಣದೆ ನಾ ನಿಲ್ಲಲಾರೆ ಕೃಷ್ಣಾ ನಿನ್ನ ಮುಖಬಿಂಬ ನೋಡಲೆಂತಾನಂದವೊ ನಿನ್ನ ಸುಳಿಪಲ್ಲಿನ ನಗೆ ಬೀರೋ ಕೃಷ್ಣಾ ನಿನ್ನ ನೋಡುವೆ ಪಾಡುವೆ ಆನಂದ ಬಾ ಬಾ 1 ಕರುಣಾಕರ ನೋಟವ ಬೀರೋ ಕೃಷ್ಣಾ ವೈಜಯಂತಿ ಮಾಲಾ ಶೋಭಾ ಕೃಷ್ಣಾ ಚರಣದಂದಿಗೆಯ ಗೆಜ್ಜೆ ನಾಟ್ಯದೊಳು ನಲಿದಾಡೊ ಕೃಷ್ಣಾ ಕುಣಿದಾಡೊ ಕೃಷ್ಣಾ 2 ಚೆಂದ ಮಾಮನ ನೀ ಕೇಳೆ ತೋರುವೆನು ಅಂದ ಕನ್ನಡಿಯೊಳ ರೂಪ ನೋಡುವೆನು ಸುಂದರಾಂಗ ಮುತ್ತನಿಟ್ಟು ನಲಿಯುವೆನು ಚಂದ್ರಬಿಂಬಧರಾ ಶ್ರೀ ಶ್ರೀನಿವಾಸ 3
--------------
ಸರಸ್ವತಿ ಬಾಯಿ
ನಂದ ಯಶೋದೆಯರಲ್ಲಿ ಬಂದು ಅವತರಿಸಿದ ಇಂದಿರಾಪತಿಯ ಮಹಿಮೆಯನಲುವಿನಿಂದ ಚಂದವನೆಲ್ಲ ರಚಿಸಿದ ಪ. ದೇವನಾರಾಯಣ ಭೂದೇವಿ ಮೊರೆ ಕೇಳಿ ದೇವಕಿಯಲ್ಲಿ ಅವತರಿಸಿದ ದೇವಕಿದೇವಿಯಲ್ಲಿ ಅವತರಿಸಿದ ಧರಾದೇವಿ ಭಾರವನೆಲ್ಲ ಇಳಿಸಿದ1 ದುಷ್ಟ ದೈತ್ಯರನಟ್ಟಿ ಆಪನೊಳು ಮನೆಕಟ್ಟಿಪಟ್ಟದ ರಾಣಿಯರ ಒಯ್ದಿಟ್ಟಪಟ್ಟದ ರಾಣಿಯರ ಒಯ್ದಿಟ್ಟ ಶೌರ್ಯವ ಎಷ್ಟು ವರ್ಣಿಸಲ್ಪಶವಲ್ಲ 2 ಹರಿಯು ವೈಕುಂಠದ ಪರಿಯ ತೋರುವೆನೆಂದುಧರೆ ಮೇಲಾಗ ಜನಿಸಿದ ಧರೆ ಮೇಲಾಗ ಜನಿಸಿದ ದ್ವಾರಕಾಪುರನಿರ್ಮಿಸೆಂದು ಜಲದೊಳು 3 ದೊರೆ ಕೃಷ್ಣಯ್ಯನ ಹಿರಿ ಮಡದಿಮನೆಪರಿಯ ವರ್ಣಿಸಲು ವಶವÀಲ್ಲಪರಿಯ ವರ್ಣಿಸಲು ವಶವಲ್ಲ ದ್ವಾರಕಾಸಿರಿಕೇಳಿ ಬ್ರಹ್ಮ ಬೆರಗಾದ4 ಅಪ್ಪ ರಾಮೇಶನು ಇಪ್ಪಂಥ ಅರಮನೆಯುಅಪ್ರಾಕೃತ ವೈಕುಂಠಅಪ್ರಾಕೃತ ವೈಕುಂಠ ವೆಂಬೋದುಸುಪ್ರಕಾಶವಾಗಿ ಹೊಳೆದೀತು5
--------------
ಗಲಗಲಿಅವ್ವನವರು
ನಾಟ್ಯವಾಡಿದನು ರಂಗ ಮಂಗಳಾಂಗ ಪ. ನಾಟ್ಯವಾಡಿ ಶಕಟಾಂತಕ ಕೃಷ್ಣ ನೋಟಕರಿಗೆ ತನ್ನಾಟ ತೋರಿ ಭಂಗ ಜಗದಂಗ ಧಿಕಿಟದಿಂ ತದಾಗಿಣ ತೋಂ ತರನಾನಂದದಿ ಸುಂದರನಾಟ್ಯ ಅ.ಪ. ಅಪ್ರಮೇಯ ಹರಿ ತನುಭವ ಬಲರಾಮರ ಜತೆ ಸೇರಿ ಅನುನಯದಲಿ ಗೋವನು ಕಾಯುತಲಿರೆ ಪೀತಾಂಬರಧರನಾಟವ ನೋಡುವೆನೆಂದು ಸಾಟಿಯಿಲ್ಲದ ವಿಷಮಡುವಿಲಿ ಕಾಳಿಂಗ ನೀಟಿಲಿ ಕುಳ್ಳಿರೆ ಓಟದಿ ಪಶುಗಳು ನೀರಾಟದಿ ಕುಡಿಯಲು ನಾಟಿ ಗಾರಾದ ನೆಲಕುರುಳಲು ರಂಗ ಕೋಟಿಪ್ರಕಾಶ ಕಾಳಿಂಗನಾಟ ತೋರುವೆನೆಂದೂ ಧಿಕಿಟ1 ದುಷ್ಟನ ವಿಷಮಯ ನೀರನು ಕುಡಿದು ಉತ್ಕøಷ್ಟ ಗೋವು ಮೂರ್ಛೆಯ ಪೊಂದೆ ಪುಟ್ಟ ಬಾಲಕರು ಕೃಷ್ಣಗೆ ಪೇಳಲಾ ತಟ್ಟನೆ ಕಡಹದ ಮರವೇರುತ ಧುಮುಕೆ ಪುಟ್ಟ ರಂಗನೆಂದು ಬಿಟ್ಟನೆ ದುಷ್ಟನು ಸುತ್ತಿ ಬಾಲ ಕುಟ್ಟುಪ್ಪಳಿಶಿದನು ಕಷ್ಟವೆ ರಂಗಗೆ ನಿಷ್ಟುರ ಭಕ್ತರು ಶಿಷ್ಟಾಚಾರದಿ ಮೆಟ್ಟಿ ಬಾಲ ಕೈಗಿಟ್ಟು ತವಕದಿ ದಿಟ್ಟ ಶ್ರೀ ಕೃಷ್ಣ ಥಕಥೈ ತದಿಗಿಣಝಂ ಆನಂದ ನಾಟ್ಯ 2 ಅಂಬುಜೋದ್ಭವನ ನಾಟ್ಯವ ನೋಡೆ ಕುಂಭಿಣಿ ತಳದಾಕಾಶದಿ ಸುರರು ತುಂಬುರು ನಾರದ ಸಂಭ್ರಮಗಾನ ರಂಭಾದ್ಯಪ್ಸರ ಸ್ತ್ರೀರಂಭರ ನಾಟ್ಯ ಅಂಬರದಿಂ ಪೂಮಳೆ ರಂಗಗೆರೆಯೆ ಜಗಂಗಳು ನೋಡೆ ಶ್ರಿಂಗರ ಶ್ರೀ ಶ್ರೀನಿವಾಸಗೆ ಗೋಪಿ ರಂಗ ಬಾರೆನುತಲೆ ಮಂಗಳಾರುತಿ ಮೂರ್ತಿ ಕಾಳಿಂಗಭಂಗ ನಾಟ್ಯ 3
--------------
ಸರಸ್ವತಿ ಬಾಯಿ
ನಿಗಮ ಗೋಚರಾನಂತ ಮಹಿಮ ಶ್ರೀದೇವ ಸಗುಣ ನಿರ್ಗುಣನಾಗಿ ತೋರುವ ಸುಗಮಲಿಹ್ಯ ಸುಖದಾಯಕ ಧ್ರುವ ಅಗಣಿತ ಗುಣಗಮ್ಯನುಪಮ ಶ್ರೀನಾಥ ನಿಗಮ ತಂದು ನೀ ಪ್ರಕಟದೋರಿದೆ ನಗವು ಬೆನ್ನಿಲಿ ತಾಳಿದೆ ಮಣಿ ಮಾಧವ ಶ್ರೀ ಕಾಂತ ಜಗವನುಳಹಿದೆ ನೆಗಹಿದಾಡಿಲೆ ಭಗತಗೊಲಿದು ನೀ ಕಾಯಿದೆ 1 ಹರಿ ಸರ್ವೋತ್ತಮ ಪರಮಪುರಷ ಶ್ರೀ ವೇಷ ಧರಿ ಮೂರಡಿ ಮಾಡಿದೆ ನೀ ಪರಶುಧರನಾಗ್ಯಾಡಿದೆ ಪರಿಪರ್ಯಾಡುವಾ ನಂದಸ್ವರೂಪ ಶ್ರೀಧರ ಶರಣ ರಕ್ಷಕನಾಗಿ ನೇಮದಿ ತುರುಗಳನ ನೀ ಕಾಯಿದೆ 2 ಸಾಮಜ ಪ್ರಿಯ ಶ್ರೀನಿಧೆ ಹಯವನು ತೋರುವೆ ಸರಸಿಜೋಧ್ಬವನುತ ಸಿರಿಲೋಲ ಎನ್ನಯ ಅನುದಿನ ಸೂರ್ಯಕೋಟಿ ಪ್ರಕಾಶನೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನಿಂದಿಸಿದ್ದು ಕುಂದಾದದ್ದೇನೊ ಮಂದಮತಿಗಳು ನಿಂದು ಸುಜನರಿಗೆಲ್ಲ ಪ. ಅಂದನುವಾಗಿಲ್ಲೆ ಇಂದಿರೇಶನು ಮಂದಗಮನೆ ದ್ರೌಪದಿಗೆ ಅ.ಪ. ಕಂದನೆಂದು ಕೌರವನ ಸೇವೆಗೆ ಆ ನಂದದಿಂದ್ಯವರ ಬೇಡೆಂದ ಮುನಿ ಬಂದರತ್ನವ ಬಿಟ್ಟನ್ನವ ಬೇಡಿಬಾರೆನೆ ಇಂದು ಮುಖಿ ಕೈಯಿಂದಿಡಿಸಿದ ಕೃಷ್ಣ 1 ಖಡ್ಗ ತೋರಿ ಬಳ ಪ್ರಹ್ಲಾದನಂಜಿಸೆ ಗುಡ್ಡ ಪೊತ್ತ ನರಹರಿಯಾಗ ಹೆಡ್ಡನೆ ತೋರುವೆನೆಂದು ಕಂಬದಿ ದೊಡ್ಡ ಮೃಗರೂಪದಲಂಜಿಸಿದ 2 ತೊಡೆಯನು ಬಿಡು ಎನುತೊಡನೆ ನೂಕಲು ಪೊಡವಿಯಲ್ಲಿಹುದು ನಡೆ ಬಾಲಕನೆನೆ ಕಡುಭಯದಲಿ ಧೃವ ಒಡನೆ ಹರಿಯ ಪಾದ ಬಿಡದೆ ಧ್ಯಾನಿಸೆ ದೃಢವರವಿತ್ತ ಹರಿ (ಕಡೆ ಹಾಯಿಸಲು) 3 ಕರಿಯ ಕಂಬದ ತೆರದಿ ನಿಲಿಸೆ ನಕ್ರ ಪೊರೆದವನಾರೋ ಹರಿಯಲ್ಲದೆ ಶರಣಾಗತ ಚಿಂತಾಮಣಿ ಎನೆ ಕರಿ ಪರಿದು ಚಕ್ರನಿ ನಕ್ರನ ಬೇಗ 4 ಏಕಾದಶಿವ್ರತ ಏಕಭುಕ್ತನ ನೀರೆಡಿಸೆ ಮಾನುನಿ ಬರಲು ಹರಿತಾ ಕರುಣಿಪನೆಂದು ತರಳನ ಶಿರಕೆ ಕೈಹಾಕೆ ಶ್ರೀ ಶ್ರೀನಿವಾಸನ ಸುತತಾ ಕರುಣಿಸಿದ 5
--------------
ಸರಸ್ವತಿ ಬಾಯಿ
ನಿನ್ನ ನಂಬಿದವರಿಗೆ ಇನ್ನು ಕೊರತೆಗಳುಂಟೆ ಪನ್ನಗಾದ್ರಿನಿವಾಸ ಶ್ರೀ ವೆಂಕಟೇಶ ಪ. ಬನ್ನ ಬಡಿಸದೆ ಎನ್ನ ಧ್ಯಾನವನ್ನು ಮರೆವರು ಭಕ್ತರಂದು ಬನ್ನ ಬಿಡಿಸಿ ಪೊರೆವೆ ಕರುಣದಿ ಅ.ಪ. ಅಧಿಕ ಸಂಸಾರದಿ ಪದೆಪದೆಗೆ ತೊಡರುಗಳ ಬದಿಗನಾಗಿದ್ದವರಿಗೆ ಕೊಟ್ಟು ಸದಮಲಾನಂದ ಪರೀಕ್ಷಿಸುವೆ ತವಕದಿ ಚದುರಿಸುತ ಮನವನ್ನು ಅದುಭುತನೆ ನಸುನಗುತ ನೀನೋಡುತ್ತ ಹೆದರಿ ಬೆದರಿ ನಿನ್ನ ಧ್ಯಾನಕ್ಕೊದಗಲಿ ಮನವೆಂಬೆಯಲ್ಲದೆ ಮಧುರವಾಣಿಯ ತೋರಿ ಸಲಹಲು ವದಗಿ ಕಾಯುವೆ ಭಕ್ತರನ್ನು (ಚದುರ ನಿನಗೆಣೆಗಾಣೆ ಜಗದೊಳು) 1 ಜಾಣರೊಳತಿ ಜಾಣತನ ತೋರುತ್ತ ಕಾಣಿಸಿ ಕಾಣದಂತಿರುತ ಭಕ್ತರೊಳು ಗಾಣಕೆ ಸಿಲ್ಕಿದ ಎಳ್ಳು ಸಚ್ಛದೆಣ್ಣೆ ಮಾಣದೆ ಬರುವ ತೆರ ತೋರುವೆ ಜನಕೆ ಕಾಣದಿಹ ಕಾಮಕ್ರೋಧದ್ಹಿಂಡಿಯ ಮಾಣದೆ ಬೇರ್ಪಡಿಪೆಯಲ್ಲದೆ ಇದು ಕಾಣ್ವರು ನಿನ್ನ ಚರಣದಂಘ್ರಿಯ ಕಾಣುತಲೆ ಸ್ತುತಿಮಾಡಿ ಹಿಗ್ಗುತಲಿಹರು 2 ದಿಟ್ಟಮೂರುತಿ ಕೇಳೊ ಕೊಟ್ಟರೊಳ್ಳಿತು ಕಷ್ಟ ಉತ್ಕøಷ್ಟವಾಗಲಿ ಹರಿಯೆ ಎನ್ನ ದೊರೆಯೆ ಕಟ್ಟಕಡೆ ನಿನ ಧ್ಯಾನ ಕೊಟ್ಟು ಕಾಯುವ ಭಾರ ಘಟ್ಟಿ ಕಂಕಣ ಕಟ್ಟಿ ನಿಂತಿಹೆ ಶ್ರೀ ಶ್ರೀನಿವಾಸ ಎನ್ನ ದುಷ್ಟತನವೆಲ್ಲ ಕುಟ್ಟಿ ಕೆಡಹುವೆ ಕಟ್ಟಕಡೆಗೆ ನಿನ್ನ ಪಾದಾಂಗುಷ್ಠ ಸೇರಲಿಯೆಂದಾ ಭಕ್ತರ ಬೆಟ್ಟದೊಡೆಯನೆ ಸಲಹುತಿರುವೆ ಉತ್ಕøಷ್ಟ ಮೂರುತಿ ಭಕ್ತರಿಷ್ಟದಾಯಕ 3
--------------
ಸರಸ್ವತಿ ಬಾಯಿ
ನಿಲ್ಲು ನಿಲ್ಲೆಲೋ ನಿನ್ನ ಚಲ್ವಮೋರೆಯ ನೋಡಿ ಕಳ್ಳ ನಿನ್ನಯ ಬಿಡೆನೋ ಶ್ರೀ ಕೃಷ್ಣ ಪ ಬೆಣ್ಣೆ ಪಾತ್ರೆಯೊಳೇಕೆ ನಿನ್ನ ಕರವನಿಟ್ಟೆ ಸಣ್ಣತನವಿದಲ್ಲವೇ ನಂದಕುಮಾರ ಅ.ಪ ಕೋಮಲಾಂಗಿಯೇ ಇಂಥ ಸಾಮಾನ್ಯ ವಿಷಯದ ನೀ ಮರೆತುದು ತರವೇ ಯೋಚಿಸಿ ನೋಡು ಈ ಮೃದುವಸ್ತುವು ಕಲ್ಲು ಎದೆಯ ನಿನ್ನ ಧಾಮದಲ್ಲಿರಬಹುದೇ ಯೋಚಿಸಿ ನೋಡು 1 ನಾ ಕರುಣಾಮಯ ಲೋಕ ಸುಂದರನೆಂದು ಏಕೆ ಹೆಮ್ಮೆಯ ತೋರುವೆ ಗೋಕುಲನಾಥ ಆ ಶಕಟನ ಪುಡಿ ಮಾಡಿ ಪಾದಗಳಿಂದ ನೀ ಕೋಮಲನೆಂಬುದ ನಾ ಕಾಣೆನೇ 2 ಕೇಳಿ ಕೋಪಿಸಬೇಡ ಬಾಲನೆನ್ನನು ಎತ್ತಿ ಲಾಲನೆಯನು ಮಾಡಿದಿ ಪ್ರಸನ್ನಳು ಬಾಲೆ ನಿನ್ನಯ ಇಷ್ಟು ಸ್ಥೂಲ ಕುಚವು ತಗಲಿ ಕಾಲು ಕಠಿಣವಾಯಿತೇ ಪೇಳುವೆ ನಿಜ 3
--------------
ವಿದ್ಯಾಪ್ರಸನ್ನತೀರ್ಥರು
ಪಕ್ಷಿ ಬಂದಿದೆ ಗಂಡಭೇರುಂಡ - ತನ್ನಕುಕ್ಷಿಯೊಳು ಈರೇಳು ಜಗವನಿಂಬಿಟ್ಟಂಥ ಪ ಜಾತಿ ಸೂತಕವೆಂಬ ತ್ರಿಮಲಕ್ಕೆ ಶೂಲದಂತಿಹ ಪರವಸ್ತು ಅ ತಿರುಮಂತ್ರೋದಯವೆಂಬಾಸನವನೆ ಪೊತ್ತು ತಾಹರುಷದಿಂದ ವೈಷ್ಣವರೆಡೆಯ ಪಾಡಿಪರವ ತೋರುವೆನೆಂದು ಪಾಕವನೆತ್ತುತಾಹರಿಹರ ಬ್ರಹ್ಮಾದಿಗಳ ಪುಟ್ಟಿಸಿದಂಥ1 ಅಕಾರ ಉಕಾರ ಮಕಾರ ಸಾಕಾರದಿಂದಪರಮ ರೂಪವ ತಾಳಿಆಕಾರ ಕ್ರಿಯಾ ನಾಮ ಮಕಾರವನುಓಂಕಾರದಿಂದ ಪುಟ್ಟಿಸಿದಂಥ ಪರವಸ್ತು 2 ಪತಿ ತಿರುವಕೋವಲೂರಿನೊಳಿರುವಂಥಾದಿಕೇಶವರಾಯ ತಾನಾದ ಪರವಸ್ತು 3
--------------
ಕನಕದಾಸ
ಪಾವನ್ನೆ ಪಾವನ್ನೆ ಪ ನಗ | ಗೋವರ್ಧನಧರಶ್ರೀ ವರನಿಗೆ ಪ್ರಿಯೆ | ಪಾವನೆ ತುಳಸೀ ಅ.ಪ. ದಳ ದಳ ರೂಪಂ | ಗಳ ಬಹು ಧರಿಸುತನೆಲಿಸಿಹ ನಿನ್ನಲಿ | ಆಲವ ಪೂರ್ಣ ಹರಿ 1 ತೀರ್ಥಮಾನಿ ಸುರ | ಜಾತರೆಲ್ಲ ಸಂ-ಪ್ರೀತಿಯಿಂದ ಇಹ | ರಾತು ಮೂಲದಲಿ 2 ಕಂಡವರಘಗಗಳ | ಖಂಡಿಸಿ ಬಹು ತನುದಿಂಡುಗೆಡೆಹೆ ಹರಿ | ತೊಂಡರ ಗೈಯ್ಯುವ 3 ನೀರನೆರೆಯೆ ತರು | ಬೇರಿಗೆ ಸಂಸ್ಕøತಿಪಾರು ಮಾಳ್ಪ ಹೆ | ದ್ದಾರಿಯ ತೋರುವೆ 4 ಭಾವಜ ಪಿತ ಗುರು | ಗೋವಿಂದ ವಿಠಲನಭಾವದಿ ವಲಿಸಿಹೆ | ದೇವಿ ಜಾಂಬುವತಿ 5
--------------
ಗುರುಗೋವಿಂದವಿಠಲರು
ಬಂದ ಶಿರಿ ರಾಘವೇಂದ್ರಮೂರುತಿ ಮನ ಮಂದಿರದೊಳಗೆ ಸರಸದಿ ಪ ಬಂದನು ಭಕುತನ ಬಂಧನ ಬಿಡಿಸ್ಯಾ - ನಂದನೀಡುತ ಮುದದಿಂದಲಿ ಭರದಿಂದಅ.ಪ ಮುದದಲಿ ಶೋಭಿಪ ವದÀನದೊಳೊಪ್ಪುವ ರದನದಿ ಶೋಭಿತನು ಉದಿಸಿದ ಎನ್ನಯ ಹೃದಯಾಂಬರದೊಳು ಸದಯ ಮೂರುತಿ ಧರನು ಆಗಾಡಿದ ಮೃದು ನುಡಿಯಾ ಅತಿ ಭಿಡಿಯಾ ಪದಸಕಿತ - ಸುಖನೀಡುತ ಇದು ಮೊದಲಾ ಗಿಹ - ಅದ್ಭುತ ಮಹಿಮೆಯ ಪದÀದಲಿ ತೋರುತ ಸದಮಲ ಮನದೊಳು 1 ಕುಣಿದಾಡುತ ಗುಣಗಳ ಗಣಿಸುವ ಭಕ್ತರ ದಣಿಸೆನೊ ಭವದೊಳಗೆ ಗಣಿಸುವೆ ದಾಸರ ಗಣದೊಳಗವನಿಗೆ ಉಣಿಸುವೆ ಪರಸುಖ ಕೊನಿಗೆ ಬೇಡಿದ ಇಷ್ಟವ ಕೊಡುವೆ ದುರಿತವ ತಡಿವೆ ಪೊರೆಯುತಾ ಬೆರೆಯುತಾ ಮಣಿಸುತಾ ತಿಳಿಸುತಾ ಕ್ಷಣ ಕ್ಷಣದಲಿ ವೀಕ್ಷಣದಿಂದಲಿ ಶÀ್ರಮ ತೃಣ ಸಮವೋ ಧಣಿ ನಾ ನಿನಗೆಂದು 2 ಧಿಟಜ್ಞಾನ - ಭಕುತಿಯ ಥಟನೆ ಕೊಡುವೊ ಉತ್ಕಟ ಮಹಿಮನೋ ನಾನು ಪಟುತರ ಎನಪದ ಚಟುಲ ನಳಿನಯುಗ ಷಟ್ಪದ ಸಮ ನೀನೋ ನಾನಾಡಿದ ನುಡಿ ಖರೆಯಾ - ಮರೆಯಾ ಕೊಂಡಾಡೆಲೋ ನೀಡೆಲೋ ಘಟಿಸುವೆ ಸಮಯಕೆ - ಧಿಟ ಗುರುಜಗನ್ನಾಥ ವಿಠಲನ ಹೃತ್ಯಂ - ಪುಟದಿ ತೋರುವೆನೆಂದು 3
--------------
ಗುರುಜಗನ್ನಾಥದಾಸರು
ಬ್ರಹ್ಮದೇವರ ಸ್ತೋತ್ರ* ಮಟ್ಟತಾಳ ಕಂಬು ವಿಹಂಗ ಗಮನ ವಿಭುವೆನಂಬಿದವರ ಪೊರೆವ ವ್ಯಾಸವಿಠಲ ನೀ-ನೆಂಬುವರನ ನಂಬಿದ ನೀಚನ ಮರಿಯಾದಿರು 2 ತ್ರಿವಿಡಿತಾಳ ಜಿಹ್ವೆ ನುಡಿಯದುಸವಿಯದ ನಾನಾ ರಸವನುಂಡು ಬಹುಕಾಲಸವೆದು ಪೋದವು ನಟ್ಟ ಮನವು ಇನ್ನು ತಿರಗದುತವ ವಿಸ್ಮøತಿಯಲಿಂದ ಭೂ ವನದೊಳಿದ್ದ ಮಾ-ನವರ ಚರಿಯದಲಿ ಕೋಪವೆ ತಗ್ಗದುಎವೆ ಇಡುವಿನಿತು ಕಾಲವಾದರು ಪೂಜಾವಿವರದಲ್ಲಿಗೆ ಚಿತ್ತವು ನಿಲ್ಲದು ಭವವಿದೂರನೆ ಕೇಳುಕವಲ ಬುದ್ಧಿಯಲಿಂದ ನವನವ ರೂಪದ ಯುವತಿಯರನಿವಹದ ಅನುಭವ ದ್ವಿವಿಧವಿಂದಿಗೇ ಕಾ-ಯವ ನೋಡಲಿದ್ದಂತೆ ಇಲ್ಲದಂತೆಧ್ರುವದಲಿ ನುಡಿವೆ ಎನ್ನವಗುಣವಿನ್ನೊಂದುಭವಸಾಗರವ ದಾಟಿಸುವ ಜ್ಞಾನಿಗಳ ಪ್ರೀತಿಯನೆ ತ-ಗ್ಗುವಂತೆ ಚತುರ ತೋರುವೆಇವುಗಳಿಂದಾಗುವ ಜನನ ಬಾಧಿಯ ಬಲ್ಲೆಜೀವರಲ್ಲಿ ಹೀನ ಜನ್ಮವ ಬರುವದು ಬಲ್ಲೆಸ್ಥಾವಿರಾಯ ವ್ಯಾನಾದಿ ನೆಗುವವು ಪುಣ್ಯಾಖ್ಯಗಿರಿಗೆಪವಿಯಂಬದನುಗಾಲ ಪಠಿಸಬಲ್ಲೆಪವನನಂತರ್ಯಾಮಿ ಶ್ರೀವ್ಯಾಸವಿಠಲ ಇಂಥಅವಿವೇಕ ಮನುಜಂಗೆ ಆವಗತಿಯಾಗುವದೊ 3 ಅಟ್ಟತಾಳ ಅನ್ಯಾಯ ನಡತಿಗಳ ಚರಿಸುತಲಿಪ್ಪಮನುಜಾಧಮನಿಗೆ ಮಹಿಯೊಳಗೆ ವಿಪ್ರಜನ್ಮವ ನೀನಿತ್ತದಾವ ಬಗೆಯ ಕಾಣೆಇನ್ನೀಗ ಮಾಡುವ ಅನ್ಯಾಯ ನಡತಿಯುತಣ್ಣನ ಕಿಡಿಯಂತೆ ತತ್ಕಾಲಕಿಪ್ಪದುಘನ್ನ ಬವಣೆ ಮುಂದೆ ಅನುಭವವೇ ನಿಜಪನ್ನಗ ಶಯನ ಶ್ರೀ ವ್ಯಾಸವಿಠ್ಠಲ ಸುಪ್ರಸನ್ನ ವದನ ದೇವ ನಿನ್ನ ಪಾದವೆ ಗತಿ 4 ಆದಿತಾಳ ಪಾದ ಚೆನ್ನಾಗಿ ಪೊಂದಿಸಿನಿನ್ನವನಿವನೆಂದು ಮನುಜರಿಂದ ನುಡಿಸಿನಿನ್ನ ಕೀರ್ತನೆಯ ವದನದಿಂದ ಪೇಳಿಸಿಇನ್ನು ಈ ಬಗೆ ಮಾಳ್ಪರೆ ಘನ್ನದಯಾಂಬುಧೇಮನ್ನ ವಾಚ ಕಾಯದಿ ಅನ್ಯಾಯ ಪೆಚ್ಚಿಸದೆಎನ್ನ ಬೆಳವಿಗೆಯಂತೆ ಬೆಳಸದಂತೆ ಮಾಡಿದೆಮನ್ನಣಿಸುವ ಜನರಿಂದ ಮಾಂದ್ಯವ ಮಾಡಿಸಿದೆಸನ್ಯಾಯವಲ್ಲ ಧೊರಿಯೆ ನಿನ್ನ ಚಿತ್ತವೊ ಸ್ವಾಮಿಸನ್ಮುನಿಗಣ ಪ್ರೀಯ ವ್ಯಾಸವಿಠ್ಠಲರೇಯಾನಿನ್ನವರವನೊ ನಿನ್ನ ಸರಿ ಬಂದ ಬಗೆ ಮಾಡೊ 5 ಜತೆ ವೇಣುಗೋಪಾಲ ದಾಸರ ಮನ ಮಂದಿರಾ |ಪ್ರಾಣ ನಿನ್ನದೊ ವ್ಯಾಸವಿಠ್ಠಲ ಗೋಪಾಲಕೃಷ್ಣ ||
--------------
ವ್ಯಾಸವಿಠ್ಠಲರು
ಭಕ್ತರುದ್ಧಾರಕ ದಾಸರಾಯರಿವರ್ಯಾರೇ ಪೇಳಕ್ಕ ಪ. ಮುಕ್ತಿಗೊಡೆಯನ ಮಾರ್ಗತೋರಿ ಭವ ಮುಕ್ತಿಗೊಳಿಪ ಶ್ರೀ ಗುರುವೆಲೆ ತಂಗಿ ಅ.ಪ. ಕಂದರಂದದಿ ಪೊಂದಿದವರ ಪೊರೆಯುವರ್ಯಾರೇ ಪೇಳಕ್ಕಯ್ಯ ನಂದಕಂದನ ಅಂಕಿತ ಕೊಡುವವರ್ಯಾರೇ ಪೇಳಕ್ಕಯ್ಯ ಸಿಂಧುಶಯನನ ತೋರುವೆನೆಂಬುವರ್ಯಾರೇ ಪೇಳಕ್ಕಯ್ಯ ಬಿಡಿಸುವ ದಾಸೋತ್ತಮರೆಲೆ ತಂಗಿ 1 ಭಾವಜನಯ್ಯನ ಭಾವಿಸಿ ಭಜಿಸುವರ್ಯಾರೇ ಪೇಳಕ್ಕಯ್ಯ ಸಾವಕಾಶವಿಲ್ಲದೆ ತತ್ವವನೊರೆಯುವರ್ಯಾರೇ ಪೇಳಕ್ಕಯ್ಯ ಪಾವನಮಾನಿಗತಿ ಪ್ರಿಯರೆಂದೆನಿಸುವರ್ಯಾರೇ ಪೇಳಕ್ಕಯ್ಯ ನಾಮಾತ್ಮಕರಲೆ ತಂಗಿ 2 ಮಂದಮತಿಗಳ ಬಂದು ಕಾಯ್ವರಿವರ್ಯಾರೇ ಪೇಳಕ್ಕಯ್ಯ ಗಂಧಾಕ್ಷತೆ ಪದ್ಮಾಕ್ಷಿಯ ಧರಿಸಿಹರ್ಯಾರೇ ಪೇಳಕ್ಕಯ್ಯ ಬಂದು ಸ್ವಪ್ನದಿ ಅಭಯ ಕೊಡುವರಿವರ್ಯಾರೇ ಪೇಳಕ್ಕಯ್ಯ ಪೊಂದಿ ಭಜಿಸಿದ ಮಹಿಮರೆ ತಂಗಿ 3 ಕಷ್ಟವ ಬಿಡಿಸಿ ಉತ್ಕøಷ್ಟವ ತೋರಿದರ್ಯಾರೇ ಪೇಳಕ್ಕಯ್ಯ ಸೃಷ್ಟೀಶ ನಿತ್ಯಾನಂದನ ತೋರಿದರ್ಯಾರೇ ಪೇಳಕ್ಕಯ್ಯ ತುಷ್ಟಿಬಡಿಸಿ ವಚನಾಮೃತ ಕರೆಯುವರ್ಯಾರೇ ಪೇಳಕ್ಕಯ್ಯ ಶ್ರೇಷ್ಠ ದಾಸರೆಂದೆನಿಸಿ ಗೋಪಾಲಕೃಷ್ಣವಿಠಲಗತಿ ಪ್ರ್ರಿಯರೆ ತಂಗಿ4
--------------
ಅಂಬಾಬಾಯಿ