ಒಟ್ಟು 28 ಕಡೆಗಳಲ್ಲಿ , 13 ದಾಸರು , 24 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮನಸಿನ ಮಾಯವೆ ಗೂಢದೋರದು ನಿಜ ಗೂಢ ಧ್ರುವ ಮರವಿನೊಳಾಡಲು ಆಯಿತು ಮನವು ಅರಿವಿನೊಳಾಡಲು ತೋರಿತುನ್ಮನವು ಅರಹು ಮರುಹ ಎರಡನೆ ಮೀರಿದರೆ ಆಯಿತು ತನ್ನೊಳು ತಾನೆ ಚಿದ್ಘನವು 1 ಅರುಹಿತು ಸ್ಥೂಲಕೆ ಜಾಗ್ರತಿಯಾಗಿ ಬ್ಯಾರೆದೋರಿತು ಸ್ವಪ್ನ ಸೂಕ್ಷ್ಮಕೆ ಹೋಗಿ ಕಾರಣದಲಿ ಸಷುಪ್ತಿಯು ಆಗಿ ತೋರಿತು ತಾನೆ ಮೂರು ಪರಿಯಾಗಿ 2 ದೊರಕುದು ಬ್ರಹ್ಮಾಧಿಕರಿಗೆ ಖೂನ ಮರುಳ ಮಾಡ್ಹೆಚ್ಚಿತು ವಿಷಯದ ಧ್ಯಾನ ತರಳ ಮಹಿಪತಿಗಾಯಿತುನ್ಮನ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮುಟ್ಟಲು ಮಾಯೆ ಹೋಯಿತು, ಗುರುರಾಯ ಪ ಜ್ಞಾನದ ಪ್ರಭೆಯು ತೋರಿತು ಅ-ಜ್ಞಾನ ನನ್ನದು ಹಾರಿತು 1 ಹರುಷಕೆ ಹರುಷವಾಯ್ತುನಿರಾಶೆಯು ಕಡೆಗಾಯಿತು 2 ಜ್ಞಾನಬೋಧನ ಪ್ರಭು ಯೋಗಿತಾನು ತಾನೆ ದಯವಾಗಿ3
--------------
ಜ್ಞಾನಬೋದಕರು
ವಾಸುದೇವ ನಿನ್ನ ದಾಸನಾಗಲು ಬಲು ಆಸೆಯ ಪೊಂದಿ ಸಂತೋಷದಲಿರುವೆನೊ ಪ ಈ ಸಂಸಾರದ ಮೋಸಕೆ ಸಿಲುಕೆ ನಾ ಶ್ರೀಶನ ಚರಣವ ಲೇಶ ಭಜಿಸಲಿಲ್ಲ ಪಾಶಕೆ ಸಿಲುಕದ ಸುಜನರುಗಳ ಸಹ ವಾಸವಿತ್ತು ಅವಕಾಶವ ನೀಡೊ ಅ.ಪ ಸಾರುತಲಿರುವ ಸಮೀರ ಸಮಯಗಳ ಸಾರವನರಿಯದೆ ದೂರಿದೆ ನಿನ್ನನು ಯಾರ ಕರುಣವೊ ತೋರಿತು ಮನದಲಿ ಘೋರತರದ ಅಪರಾಧಗಳೆಲ್ಲವು ಭೂರಿ ದಯದಿ ನಿನ್ನ ಚಾರು ಚರಣದಲಿ ಸೇರಿಸೊ ಮನವ 1 ಪರಿಪರಿ ವಿಧದ ಕುಶಾಸ್ತ್ರಗಳೋದಲು ಬರಿಗಾಳಿಯ ಗುದ್ದಿ ಮುರಿದವು ಕರಗಳು ಸಿರಿರಮಣನೆ ನಿನ್ನ ಪರಿಚಾರಕನೆಂಬೊ ಅರಿವಿನಿಂದಲೆ ಪರತರ ಸುಖವೆಂದು ಪರಿಪರಿಯರುಹುವ ಗುರು ಮಧ್ವರಾಯರ ವರಶಾಸ್ತ್ರಗಳಿಗೆ ಸರಿಯುಂಟೆ ಜಗದೆ 2 ಅನ್ಯಸೇವೆಗಳಲ್ಲಿ ಅನ್ಯಾಯದಿ ಕಾಲ ಮುನ್ನ ಕಳೆದುದನು ಮನ್ನಿಸೆಲೋ ಹರಿ ನಿನ್ನ ಸೇವೆಯ ಸುಖವನ್ನು ಅರಿತೆನೊ ಎನ್ನ ಮನಕೆ ಬಲವನ್ನು ಕರುಣಿಸುತ ಇನ್ನಾದರು ಚ್ಯುತಿಯನ್ನು ಪೊಂದಿಸದೆ ನಿನ್ನ ದಾಸನಲಿ ಪ್ರಸನ್ನನಾಗೆಲೊ 3
--------------
ವಿದ್ಯಾಪ್ರಸನ್ನತೀರ್ಥರು
ಸಂಚಿತ ಪ್ರಾರಬ್ಧ ಕ್ರಿಯಮಾಣಾ | ಪ್ರಪಂಚದಿ ಈಡ್ಯಾಡೋ ಪ ಸ್ಥೂಲಕೆ ಭೋಗಕೆ ಸಾಕ್ಷಿಯು ಸೂಕ್ಷ್ಮವು | ಕಾರಣದಲಿ ಸಾಕ್ಷೀ || ಭೋಗಾಪೇಕ್ಷೆಯು ಸೂಕ್ಷ್ಮವು ನೀನಿತುದುಹ ಕಾರಣ ಲಕ್ಷೀ 1 ಸ್ಪರ್ಶದಿ ಶಬ್ದವು ಶಬ್ದಾಸ್ಪರ್ಶವಿದು | ರೂಪವು ತೋರಿತು ರೂಪವು ರಸದಲಿ || ಗಂಧದಿ ಕಾಣಿಸಿತೊ 2 ಕರ್ಮದಿ ರೂಪವು ರೂಪದಿ ಕರ್ಮವು | ಕರ್ಮರೂಪಕ್ಕೇ ||ವ್ಯಾಪಕ ಭವತಾರಕನೆಂದರಿಯದೆ ಕಲಾಪವ್ಯಾಕೀ ಮನಕೆ 3
--------------
ಭಾವತರಕರು
ಸದ್ಗುರುವಿನ ಕೈಯ ಸದ್ಗೈಸಿಕೊಂಡವಗೆ ಜಯ ಧ್ರುವ ಭಾವ ಬಲಿದು ಶುದ್ಧ ಪವಿತ್ರವಾದ ಪ್ರಬುದ್ಧ ಅವ ನೋಡಿ ತಾ ಸ್ವತ:ಸಿದ್ಧ ಭವದಾಟಿದ್ದ 1 ಸದ್ಗುರು ಸುದಯದೀಕ್ಷ ಸಾಧಿಸಿತವಗೆ ಲಕ್ಷ ಮೇದಿನಿಯೋಳಗೆ ಸುಭಿಕ್ಷ ಬೋಧಕ ಸುಪಕ್ಷ 2 ಸದ್ಗತಿ ಸುಖಸ್ವಾದ ಸಾಧಿಸಿ ಮಹಿಪತಿ ಬೋಧ ಹೊಂದಿ ತೋರಿತು ಸೌಖ್ಯದ ಸದ್ಗುರು ಪ್ರಸಾದ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸೋಜಿಗವಾಯಿತು ಸದ್ಗುರುವಿನ ಕೃಪೆ ಹೇಳಲೇನು ನಿಜಗುಹ್ಯದ ಮಾತು ಗುರುತವಾಗಿ ಹ್ಯ ಸಾಧು ಬಲ್ಲ ಖೂನ ಧ್ರುವ ನೀಗದ ನೀಗಿತು ಹೋಗದ ಹೋಯಿತು ತ್ಯಾಗಲ್ಯೊಂದು ಬಾಗದ ಬಾಗಿತು ಸಾಗದ ಸಾಗಿತು ಯೋಗಲ್ಯೊಂದು ಆಗದ ಆಯಿತು ಕೂಗದ ಕೂಗಿತು ಈಗಲ್ಯೊಂದು ತೂಗದ ತೂಗಿತು ಸುಗಮ ತಾ ತೋರಿತು ಜಗದೊಳೊಂದು 1 ಹುರಿಯಲೊಂದು ಅರಿಯಿತು ಅರಿವಿಲೊಂದು ಸುರಿಯದ ಸುರಿಯಿತು ಗರೆಯದ ಗರಿಯಿತು ತ್ಯರಿಯಲೊಂದು ಜರಿಯದ ಜರಿಯಿತು ಬೆರಿಯದೆ ಬೆರಿಯಿತು ಕುರಿವಿಲೊಂದು 2 ಜಾರದ ಜಾರಿತು ಮೀರದ ಮೀರಿತು ಹಾರಲೊಂದು ತೋರದ ತೋರಿತು ಸೇರದ ಸೇರಿತು ಸಾರಲೊಂದು ಬೀರದ ಬೀರಿತು ಸಾರಸದೋರಿತು ಕರದಲೊಂದು ತರಳ ಮಹಿಪತಿಗ್ಹರುಷವಾಯಿತು ಗುರುಕರುಣಲಿಂದು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸ್ವಯಂ ಭಾನು ಉದಯವಾದ ನೋಡಿ ದಯಕರುಣಾನಂದದ ಕೃಪೆಮಾಡಿ ಧ್ರುವ ರವಿಕೋಟಿತೇಜನೆ ಬಂದ ಮೂಡಿ ಭವಭ್ರಮದ ಕತ್ತಲ್ಹೋಯಿತೋಡಿ ದೇವದೇವೋತ್ತಮನ ಪ್ರಭೆ ಕೂಡಿ ದಿವಾರಾತ್ರಿಲ್ಲದಾಯಿತು ನೋಡಿ 1 ಜ್ಞಾನ ಗಮ್ಯವಾಗಿದ್ದ ಸುವಸ್ತ ಕಾಣಬಾವ್ಹಾಯಿತು ಮನಸ್ವಸ್ತ ಮನದಿಂದೆವೆ ಆಯಿತು ಮನಸ್ವಸ್ತ ಘನಮಯವೆ ತೋರಿತು ಸಮಸ್ತ 2 ತಾನೆ ತನ್ನಿಂದುದಯವಾದ ಪೂರ್ಣ ನಾನಾವೆಂಬುದ್ಹೋಯಿತನುಮಾನ ಆನೇಕಲಿದೋರಿತು ಇದೆ ಖೂನ ದೀನ ಮಹಿಪತಿ ಸ್ವಹಿತ ಸುಧನ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹರಿರೇವ ಪರೋ ಹರಿದೇವ ಗುರೋ ಹರಿಯೇ ಗುರುವೆಂದರವ್ಹಿರೋ ಧ್ರುವ ಗುರುಮಧ್ವಪರ್ಹೇಳಿದ ನಿಜಕೀಲು ಅರಿತುಕೊಂಬುವಾದಿದೆವೆ ಮೇಲು ಪರಮ ಭಗತರನುಭವದ ಬಾಗಿಲು ಪರಗತಿ ಸಾಧನಕಿದೆ ಮಿಗಿಲು 1 ಹರಿಗುರುವೆರಡಾಗಿ ತೋರಿತು ನಾಮವು ಅರಿಯಲರಿಯದವಾಗಿದೆ ಭ್ರಮವು ತೋರುವದೊಂದೇ ಸಜ್ಜನರಿಗಿದೇ ನೇಮವು ಅರಿಕ್ಯುಳ್ಳವರಿಗಿದೇ ಕ್ರಮವು 2 ಹರಿಗುರು ಒಂದಾಗಿ ತೋರಿತು ನಿಜಘನ ತರಳ ಮಹಿಪತಿಸ್ವಾಮಿಯ ಕರುಣ ಗುರುಭಾನುಕೋಟಿತೇಜನೆ ಪರಿಪೂರ್ಣ ತೋರುವದೊಂದಾಗಿದೆ ನಿಜಖೂನ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಶಿವ ಸತ್ತ ಎಂಥ ಆಶ್ಚರ್ಯವು ಇದು ನೋಡಿ |ಕವಿಗಳು ಮನಕ ತಂದು ||ಭುವನತ್ರಯಗಳಲ್ಲಿ ಪ್ರಖ್ಯಾತವಾಗಿದೆ |ಅವಿವೇಕಿಗಳ ಮಾತಲ್ಲಾ ಪಅಧಮರು ಬಹು ಬಗೆಯಿಂದಲ್ಲಿ ಘಳಿಸೀದಾ |ಬದುಕು ವ್ಯರ್ಥವಾಹದು ||ಬುಧರ ಪದಾರ್ಥವು ಸಾರ್ಥಕವಾಹದೆಂಬು |ದಿದೆ ಸಾಕ್ಷಿ ಎನಬಹುದೂ 1ಭೂಭುಜರಿಗೆ ಭೂಷಣಾದವು ಆಯುಧ |ಈ ಭೂಮಿ ಪೊತ್ತ ವ್ಯಾಳಾ ||ಆ ಭಿಕ್ಷುಕನ ಕುಟುಂಬವ ರಕ್ಷಿಸುತಿಹ್ಯದು |ಶೋಭಿಸುತಿಹ್ಯ ಕಪಾಲಾ 2ಮಂದೀಯ ನಂಜಿಸುತಿಪ್ಪದು | ಆತನಹಿಂದೆ ಮುಂದಿರುವ ಗಣಾ ||ನಂದೀ ಪಿತೃಗಳಿಗೆ ಕೈವಲ್ಲ್ಯಾ ತೋರಿತು |ಸಂದೇಹವಿನಿತಿಲ್ಲವೂ 3ಸೋಮಕಂಣಾದ ಜಗತ್ತೆಕ್ಕ ದಿಕ್ಕಿಗೆ |ಸ್ವಾಮಿ ಎನಿಸಿದ ವನ್ಹೀ ||ಧೀಮಂತರಾತನ ಮಡದೀಯ ಪೂಜಿಸಿ |ಶ್ರೀಮಂತರಾಗೂವರೂ 4ಮೌನಿಗಳಿಗೆ ಚರ್ಮ ವೈಷ್ಣವರಿಗೆ ಭಸ್ಮ |ತಾನು ಪ್ರೀಯಕರಾದೀತು ||ಪ್ರಾಣೇಶ ವಿಠಲಾನೊಳರ್ಧಾಂಗ ವಾಗಭಿ |ಮಾನಿಯೊಳರ್ಧವಿಟ್ಟಾ 5
--------------
ಪ್ರಾಣೇಶದಾಸರು