ಒಟ್ಟು 28 ಕಡೆಗಳಲ್ಲಿ , 11 ದಾಸರು , 25 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

139-7ಶ್ರೀ ರಮಣಿ ಕರಕಮಲ ಪೂಜಿತ ಪದಾಂಬೋಜಸರಸಿಜಾಸನ ಶಿವಾದ್ಯಮರ ಜನವಿನುತಉರುಗುಣಾರ್ಣವ ಜಗಜ್ಜನ್ಮಾದಿಕರ್ತ ನರ-ಹರಿಗೆ ಪ್ರಿಯ ಜಗನ್ನಾಥದಾಸಾರ್ಯ ಶರಣು ಪ.ಹಂಸನಾಮಕ ಪರಂಬ್ರಹ್ಮ ವಿಧಿಸನಕಾದಿವಂಶಜ ಗುರುಗಳಲಿ ಜಗದೇಕ ಗುರುವುದಶಪ್ರಮತಿ ಈ ಮಧ್ವ ಮುನಿಯ ಪೀಳಿಗೆ ಜಾತವ್ಯಾಸಮುನಿ ಯೋಗಿವರ್ಯರಿಗೆ ಆ ನಮಿಪೆ 1ವ್ಯಾಸರಾಯರ ಮುಖ ಕಮಲದಿಂದುಪದೇಶದಾಸತ್ವ ಹೊಂದಿದರು ಪುರಂದರದಾಸಾರ್ಯದಾಸಶ್ರೇಷ್ಠರು ದಯಾನಿಧಿಯು ಈಪುರಂದರದಾಸಾರ್ಯರೇ ನಾರದರ ಅವತಾರ 2ಪುರಂದರಾರ್ಯರಹಸ್ತಕಂಜಸಂಜಾತರುಧೀರ ಭೃಗು ಅವತಾರ ವಿಜಯದಾಸಾರ್ಯಹರಿದಾಸವರ ವಿಜಯದಾಸರ ಶಿಷ್ಯರುಸೂರಿಸುರವರ್ಯ ಗೋಪಾಲ ದಾಸಾರ್ಯ 3ವಿಶ್ವೋಪಾಸಕರು ವರಗಣೇಶಾಂಶರುಈಶಾನುಗ್ರಹಿ ಗೋಪಾಲ ದಾಸಾರ್ಯಬೇಸರವಿಲ್ಲದೆ ಸ್ಮರಿಪ ಸಜ್ಜನರ ಪಾಲಿಪರುದಾಸತ್ವ ಜಗನ್ನಾಥದಾಸರಿಗಿತ್ತವರು 4ಸೂರಿಕುಲತಿಲಕನು ಜಗನ್ನಾಥ ದಾಸಾರ್ಯಈರೆರಡು ಮುಖ್ಯ ಜನ್ಮವಕೊಂಡಹಿಂದೆಗುರುಯುಕ್ ಪುರಂದರಾರ್ಯರವತ್ಸಗುರುರಾಯ ಸೇವಾರತಮದ್ರದೇಶಾಧಿಪ ಈ ರೀತಿ ಮೂರು 5ಮಾರೀಚ ದಿತಿ ಪೌತ್ರ ಮೊದಲನೆಯದಲ್ಲಿಧೀರ ಪ್ರಹ್ಲಾದನಿಗೆ ಭ್ರಾತ ಸಂಹ್ಲಾದಹರಿಅಧೋಕ್ಷಜನ್ನೊಲಿಸಿ ಕೊಂಬ ಮಾರ್ಗವ ಅರಿತನಾರದಾನುಗ್ರಹಿಯು ಉಪದೇಶಕೇಳಿ6ಹರಿಯ ಸೇವಿಸುವುದಕೆ ಶಿಷ್ಯರುದ್ಧಾರಕ್ಕೆಪ್ರಾರಬ್ಧ ಕರ್ಮವು ತೇದು ಹೋಗಲಿಕೆಧರೆಯಲ್ಲಿ ಪುನರ್ಜನ್ಮ ಕೊಂಡನು ಬ್ಯಾಗವಟ್ಟನರಸಿಂಹ ದಾಸರ ಮಗನೆನಿಸಿಕೊಂಡು 7ಸೂರಿಕುಲ ಶಿರೋಮಣಿ ವರದೇಂದ್ರ ಯತಿವರರುಶ್ರೀರಾಘವೇಂದ್ರರ ಸ್ಮರಿಪುದಿವರಲ್ಲಿಭಾರಿಪಂಡಿತ ಶ್ರೀನಿವಾಸ ಇವರಲ್ಲೋದಿಪೌರ ವಿದ್ಯಾರ್ಥಿಗಳಿಗೆ ಪಾಠ ಪೇಳ್ದ 9ಗರುವಕೊಳಗಾಗಿ ಈ ಶ್ರೀನಿವಾಸಾಚಾರ್ಯಕರುಣಾಶಾಲಿಗಳು ವಿಜಯದಾಸರನ್ನಕ್ಷುದ್ರ ಮಾತುಗಳಾಡಿ ಸ್ವೋತ್ತಮಾಪರಾಧದಿಂಘೋರವ್ಯಾಧಿ ಕೊಂಡು ಕುಗ್ಗಿದನು ತೀವ್ರ 10ಪರಿಪರಿ ಔಷಧೋಪಚಾರಗಳು ಸೋತುಹರಿಗುರು ಕ್ಷೇತ್ರಾಟನ ಸೇವಾದಿಗಳುಹರಿವಾಯುಸ್ತುತಿಕ್ಷೀರಅಭಿಷೇಕಫಲದಿಂಅರಿತನು ಅಪರಾಧಕ್ಷಮೆಬೇಡೆ ಹೊರಟ11ತ್ವರಿತದಲಿ ವಿಜಯಾರ್ಯರಲ್ಲಿ ಶರಣಾಗಿಕರುಣದಿ ಕ್ಷಮಿಸಿ ಉದ್ಧರಿಸಬೇಕೆಂದಕರುಣಿಸಮ ಚಿತ್ತರು ಶರಣನಿಗೆ ಹೇಳಿದರುಗುರುಗಳು ಗೋಪಾಲದಾಸರ ಕಾಣೆಂದು 12ತನ್ನಲ್ಲಿ ಗುರುಗಳು ಕಳುಹಿಸಿ ಬಂದಿಹನುದೀನನು ನಿಜ ಶರಣಾಗಿಹನು ಎಂದುಘನಮೂಮಂತ್ರ ಸಹ ಧನ್ವಂತರಿ ಜಪಿಸಿಧನ್ವಂತರಿಗೆ ಬಿನ್ನೈಸಿದರು ದಾಸರು 13ವಿಜಯಗೋಪಾಲ ವೆಂಕಟ ಜಗನ್ನಾಥನ್ನಪೂಜಿಸಿ ನೈವೇದ್ಯಾನ್ನ ಜೋಳದರೊಟ್ಟಿಭುಜಿಪುದಕೆ ಕೊಡುತ ಹರಿಗುರುಗಳ ಸ್ಮರಿಸುನಿಜ ಭಕ್ತಾಯುಷ್ಪ್ರದ ಸತ್ಪತಿ ಎಂದು 14ದ್ರವ ಮಾತ್ರ ಕೊಂಬ ಆ ರೋಗಿ ತಿಂದನು ರೊಟ್ಟಿದ್ರಾವಿಕ ಆಯಿತು ರೋಗ ದಿನ ದಿನದಿದೈವಾನುಗ್ರಹವಾಯ್ತುಗುರುಅನುಗ್ರಹದಿಂದಶ್ರೀ ವೆಂಕಟ ಶೈಲಾಧಿಪನು ಒಲಿದ 15ರೋಗ ನಿವೃತ್ತ ಆಚಾರ್ಯ ದಾಸರ ಸಹಪೋಗಿ ವೆಂಕಟಗಿರಿಯಲ್ಲಿ ಶ್ರೀನಿಧಿಗೆಭಕುತಿಯಿಂ ಸನ್ನಮಿಸಿ ಮಲಗೆ ನಿತ್ರಾಣದಲಿಬೇಗ ಗಜವರದಹರಿಬಂದು ತಾ ಪೊರೆದ16ಶ್ರೀನಿಧಿಃ ಸರ್ವ ಭೂತಾನಾಂ ಭಯಕೃದ್ಭಯನಾಶನನು ವಿಜಯಾರ್ಯರ ರೂಪದಲಿ ಪೇಳೆದಾನ ಎರೆದರು ಗೋಪಾಲ ದಾಸಾರ್ಯರುತನ್ನ ಆಯುಷ್ಯದಲಿ ನಲವತ್ತು ವರ್ಷ 17ರೊಟ್ಟಿ ಕೊಟ್ಟಾಗಲೇಗುರುಪ್ರೇರಣೆಯಂತೆಕೊಟ್ಟಿದ್ದರು ಆಯುಷ್ಯ ಆಚಾರ್ಯಗೆದಿಟವಾಗಿ ಜಗಕೆ ತಿಳಿಸೆ ವೆಂಕಟ ಈಗಕೊಡಿಸಿದನು ಆಯುರ್ದಾನದ ಧಾರೆ 18ಘನ್ನ ಹರಿಗುರು ಭಕ್ತಿ ಶಿಷ್ಯ ವಾತ್ಸಲ್ಯವಏನೆಂಬೆ ನಮ್ಮಗುರುಗೋಪಾಲ ದಾಸರದಾನಕ್ಕೆ ಎಣೆಯುಂಟೆ ಎಲ್ಲಾದರೂ ಯಾರೂತನ್ನ ಆಯುಷ್ಯವ ಕೊಡುವರೆ ಅನ್ಯರಿಗೆ 19ಏನೆಂಬೆಅನಿಮಿತ್ತ ಬಂಧುವೆಂಕಟಪತಿಯದೀನ ದಯಾಳತ್ವ ಆಚಾರ್ಯನಿಗೆತಾನೇವೆ ಗೋಪಾಲದಾಸರ ರೂಪದಿತಂದುಅನ್ನ ಕೊಟ್ಟ ಆಯುಷ್ಯವ ಕೊಡಿಸಿದವ 20ಶ್ರೀನಿವಾಸಾಚಾರ್ಯ ಹರಿತನ್ನ ದಾಸರಿಗೆತಾನೆ ಬಂದೊಲಿವುದು ನೇರಲ್ಲಿ ಕಂಡುತನ್ನನ್ನು ಹರಿದಾಸರಲಿ ಓರ್ವ ಮಾಡೆಂದುವಿನಯದಿಂ ಗೋಪಾಲದಾಸರ ಬೇಡಿದನು 21ವಿಜಯಗೋಪಾಲನ್ನವಿಜಯದಾಸರ ಸ್ಮರಿಸಿನಿಜ ಶಿಷ್ಯಾಚಾರ್ಯನಿಗೆ ಉಪದೇಶಿಸಿದರುಅಜಪದಾರ್ಹನು ಮಧ್ವನಲ್ಲಿ ಜ್ವಲಿಸುವಶ್ರೀತಶ್ರೀ ಜಗನ್ನಾಥ ಎಂದು ಧ್ಯಾನಿಸು ಎಂದು 22ಪೋಗಿ ಪಂಢÀರಪುರ ಭೀಮರತಿಯಲ್ಲಿಸ್ವಗುರು ಆದಿ ಹನ್ನೆರಡು ಸ್ಮರಿಸುಬಾಗು ಮಧ್ವಾಂತಸ್ಥ ಹರಿಗೆಮಜ್ಜನಮಾಡುಜಗನ್ನಾಥ ಹರಿತೋರ್ವ ಪೊಳೆವ ಹರಿನಾಮ 23ಝಗಿ ಝಗಿಪ ತೇಜಸ್ಸು ಶಿರೋಪರಿ ಕಂಡನುಮೂಗಿನೊಂದೊಂದಡಿ ಶಿರದ ಮೇಲೆ&ಟಜquo;ಜಗನ್ನಾಥ ವಿಠಲ&ಡಿಜquo; ನಾಮ ಪ್ರಜ್ವಲಿಸಿತುಜಗನ್ನಾಥ ತನ್ನಿಚ್ಛೆಯಿಂದಲೇ ತೋರ್ದ 25ಜಡಜ ಭವಪಿತ ಡರಕ ಜಗನ್ನಾಥ ವಿಠಲನನೋಡಿದರು ಜಗನ್ನಾಥದಾಸ ಆಚಾರ್ಯಪೊಡವಿಗೊಡೆಯನುವಿಜಯಗೋಪಾಲ ಜಗನ್ನಾಥವಿಠ್ಠಲ ಪ್ರಸನ್ನನಾದನು ಶ್ರೀನಿವಾಸ 26ವೆಂಕಟಗಿರಿನಾಥ ಪಂಢರಿ ಜಗನ್ನಾಥಅಕಳಂಕ ಗುಣನಿಧಿ ವಿಠಲಪ್ರಸನ್ನನಾಗಿದಾಸರು ಮೂಲ ಮಂತ್ರಾದಿಗಳಿಂದಏಕಾಗ್ರ ಚಿತ್ತದಲಿ ಭಜಿಸಿ ಸ್ತುತಿಸಿದರು 27ಪುರಂದರದಾಸಾರ್ಯರ ವಂದಿಸಿ ಅವರಿಂದವಿರಚಿತ ಶ್ರೀಮಧ್ವ ರಮಣ ನಿನ್ನಭಾರಿತತ್ವವಕೊಂಡಕೀರ್ತನೆ ಹಾಡುತ್ತಶ್ರೀಕರ ವಿಠಲನ ಮಂದಿರದೊಳು ಪೊಕ್ಕರು 28ವಿಶ್ವವಿಷ್ಣು ವಷಟ್ಕಾರಾದಿ ನಾಮನುದಾಸಪ್ರಿಯಜನ ವಿಠ್ಠಲ ರುಕ್ಮಿಣಿಯಕೇಶವಾದಿಪಾದಾಂತ ಸಂಸ್ತುತಿಸಿ ನಮಿಸಿದರುದಾಸರು ಶರಣು ತಾನೆನ್ನುತ ಮುದದಿ 29ಏನೆಂಬೆ ವಿಠ್ಠಲನ ರುಕ್ಮಿಣಿಯ ವಾತ್ಸಲ್ಯಅನುಪಮ ಔತಣ ದಾಸರಿಗೆ ಮಾಡಿಅನುತ್ತಮ ಪ್ರಸಾದ ಮಾಲಾದಿಗಳ ಕೊಟ್ಟುಅನುಗ್ರಹಿಸಿ ಕಳಿಸಿದರು ದಾಸರ ಸ್ವಪುರಕೆ 30ಮಳಖೇಡ ಕೃಷ್ಣ ಮಂತ್ರಾಲಯಕೆ ಪೋಗಿಅಲ್ಲಿರುವಗುರುದೇವತಾ ನಮನ ಮಾಡಿಗೋಪಾಲದಾಸ ಉದ್ಧಾರಕರ ಬಳಿಬಂದುಕಾಲಿಗೆರಗಿದರು ಕೃತಕೃತ್ಯ ಭಾವದಲಿ 31ವಾಸುದೇವಗೆ ಪ್ರಿಯ ಐಜಿ ಮಹಾತ್ಮರುವ್ಯಾಸತತ್ವಜÕ ಹರಿದಾಸ ಯತಿವರರುಸಸೋದರ ಪರಿವಾರ ಗೋಪಾಲದಾಸಾರ್ಯರಬಿಸಜಾಂಘ್ರಿ ಸನ್ನಮಸಿ ಹೊರಟರಲ್ಲಿಂದ 32ಚೀಕಲ ಪರಿವಿಯಲಿ ಏಕಾತ್ಮ ನರಹರಿಯಅಕಳಂಕ ದೃಢಭಕ್ತಿಯಿಂದ ಪೂಜಿಸುವಆ ಕರುಣಿ ವಿಜಯದಾಸರ ಕಂಡು ನಮಿಸಿಚಿಕ್ಕಂದಿ ಸ್ವಪುರ ಮಾನವಿಯಯೈದಿದರು 33ಮನುತೀರ್ಥ ತಟದಲ್ಲಿ ಮೀಸಲಾಗಿವರಿಗೆಅನ್ಯರಾಕ್ರಮಿಸದೇ ರಕ್ಷಿಸಲ್ಪಟ್ಟಮನೆಯಲ್ಲಿ ನರಹರಿಯ ಹನುಮನ್ನ ಪೂಜಿಸುತದಿನದಿನದಿ ಪ್ರವಚನ ಭಜನೆ ಮಾಡಿದರ 34ವಾರಿಜಾಸನ ಪಿತನು ಪೂರ್ಣಪ್ರಜÕರ ಹೃತ್‍ಸ್ಥಶಿರಿಪ್ರಸನ್ನ ಶ್ರೀನಿವಾಸನಿಗೆ ಪ್ರಿಯತರರುಪುರಂದರವಿಜಯಗೋಪಾಲದಾಸಾರ್ಯರಚರಣರತ ಜಗನ್ನಾಥದಾಸಾರ್ಯ ಶರಣು 35- ಅಷ್ಟಮ ಕೀರ್ತನೆ ಸಂಪೂರ್ಣಂ -
--------------
ಪ್ರಸನ್ನ ಶ್ರೀನಿವಾಸದಾಸರು
435(ಅ)ನಮೋ ಯತಿಕುಲಶಿಖಾಮಣಿಯೆ ಸುಗುಣನಿಧಿಯೆಮತಿಮತಾಂವರ ಮಾನಿನೇ ಪ.ಭುವನೇಂದ್ರತೀರ್ಥ ಯತಿಪ್ರವರಕರಸಂಜಾತಸುವಿವೇಕಿ ವರದೇಂದ್ರಕರಸಂಭವಾಯಅವಿಕಳಾನಂದ ವೈಷ್ಣವನಿವಹಗೀರ್ವಾಣತ-ರವ ಸುಕೃತೇಂದ್ರ ಸದ್ಗುರುವೆ ನಮೋಸ್ತುತೇ 1ಕಾಶೀಮಠಾದಿಪತಿಯೇ ಸುಸನ್ಯಾಸಿಯೇ ಸ(ತ್ತ್ವ) ಗುಣಭೂಷಾಯ ತೇವ್ಯಾಸ ರಘುಪತಿಚರಣದಾಸವತ್ಪೂಜಕ ವಿ-ಶೇಷಭಕ್ತಿಜ್ಞಾನಶಾಲಿನೇ ತುಭ್ಯಂ2ಆಜಾನುಬಾಹುವೇ ಗೌಡಸಾರಸ್ವತ ಮ-ಹಾಜನಸಮಾಜಮಂಡಲವಾಸಿನೇರಾಜೀವನಯನಾಯ ನಮಿತಜನನಿಕರ ಸುರಭೂಜಾಯಭೂರಿರವಿತೇಜಸ್ವಿನೇ3ತುಷ್ಟಾಯ ಭಾಗವತನಿಷ್ಟಾಯ ದ್ವಿಜಕುಲವರಿಷ್ಠಾಯ ಷಡ್ವರ್ಗಜಿಷ್ಣವೇ ತುಭ್ಯಂದುಷ್ಟ ಜನ ದೂರಾಯ ಧೀರಾಯ ಭಕ್ತದ-ತ್ತೇಷ್ಟಾಯ ಮಹತೇ ಸಹಿಷ್ಣವೇ ಮಹತೇ 4ಬ್ರಹ್ಮಚರ್ಯಾದಿ ವ್ರತಧರ್ಮಾತ್ಮನೇ ವಿಹಿತಕರ್ಮಣೇ ಸುಕೃತೇಂದ್ರ ಶರ್ಮಣೇ ತುಭ್ಯಂಬ್ರಹ್ಮಪಿತ ಲಕ್ಷ್ಮೀನಾರಾಯಣಾಂಘ್ರಿಧೃತಿ ಸು-ನಿರ್ಮಲಾಂತಃಕರಣ ಕರುಣನೀರಧಯೇ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಪ್ರಸನ್ನ ಶ್ರೀ ರುಕ್ಮಿಣೀಶ ಕಲ್ಯಾಣ24ಪ್ರಥಮ ಅಧ್ಯಾಯಪ್ರಾದುರ್ಭಾವಸಾರಪೂರ್ಣ ಸುಗುಣಾರ್ಣವನೇಅನಘಮಾಯಾರಮಣಆ ನಮಿಪೆ ಶ್ರೀ ಕೃಷ್ಣ ರುಕ್ಮಿಣೀನಾಥಜ್ಞಾನ ಸುಖಬಲ ಚೇಷ್ಟಾರೂಪ ದೇವಕೀತನಯಸೌಂದರ್ಯಸಾರ ಜಗತ್ ಜನ್ಮಾದಿಕರ್ತ ಪಆಲದೆಲೆ ಮೇಲ್ ಮಲಗಿ ಅದ್ವಿತೀಯನೇ ನೀನುಲೀಲೆಯಿಂ ನಿನ್ನೋಳ್ ನಿನ್‍ಅನಂತ ರೂಪಗಳನಿಲ್ಲಿರಿಸಿ ಉದರದೊಳ್ ಜಗವನ್ನೆಲ್ಲವ ಧರಿಸಿನೀ ಲಯಾಬ್ಧಿ ಸುಖವ ರಮೆಗಿತ್ತಿಸ್ವರತ1ಗುಣಕಾಲ ದೇಶ ಅಪರಿಚ್ಛಿನ್ನ ನಿನ್ನನ್ನುಗುಣತ್ರಯಮಾನಿಮಾಅನಘಸಂಸ್ತುತಿಸಿಆನಂದಮಯನೀನು ಆನಂದ ಲೀಲೆಯಿಂಸ್ವರ್ಣಾಂಡ ಪಡೆದು ಅದರೊಳ್ ಪೊಕ್ಕಿ 2ಪದುಮನಾಭನೇ ನಿನ್ನ ನಾಭಿ ಕಮಲೋದ್ಭೂತವಿಧಿಯಪ್ರತಿದಿನದಲ್ಲಿ ಅವತಾರ ಮಾಡಿಸಾಧು ಸಾತ್ವಿಕರಿಗೆಅಭಯಸದ್ಗತಿ ಇತ್ತುಅಧಮ ಅಸುರರ ಸದೆದು ಭೂಭಾರ ಕಳೆದಿ 3ಮೂಲಾವತಾರಂತರ್ಯಾಮಿ ವ್ಯಾಪ್ತಾಂಗಗಳುಎಲ್ಲವೂ ಪೂರ್ಣವು ನಿತ್ಯವು ಅಭಿನ್ನಳಾಳುಕನೇ ನಿನ್ನಮಲ ರೂಪವಿಶೇಷವಲೀಲೆಯಿಂದಲಿ ಪ್ರಕಟಮಾಡುವಿ ಆಗಾಗ 4ವೇದ ಉದ್ಧಾರನೇ ಮತ್ಸ್ಯರೂಪನೇ ನಮೋಮಧುಕೈಟಭಹಾರಿ ಹಯಗ್ರೀವ ಶರಣುಮಂಡಲಾದ್ರಿಯ ಪೊತ್ತಕೂರ್ಮಧನ್ವಂತರಿಸುಧೆಸುರರಿಗುಣಸಿದ ಸ್ತ್ರೀರೂಪಪಾಹಿ5ಸುರಪಕ್ಷಅಜಅಜಿತ ಸಿಂಧುಜಾಪತಿ ಧರೋ-ದ್ಧಾರವರಾಹನಮೋ ಪುರುಟಾಕ್ಷಹಾರಿಶರಣು ತ್ರಯತ್ರಿಂಶದಕ್ಷರ ಮನುಗ ಶ್ರೀದವರಚಕ್ರಧರಾಅಭಯಭೂಧರಶಾಮ6ಪ್ರೋದ್ಯಾರ್ಕ ನಿಭ ವರ್ತುಲ ನೇತ್ರತ್ರಯವುಹಸ್ತದ್ವಯ ಅಜಾನುದರಾರಿಧರ ಕೋಟಿಆದಿತ್ಯಾಮಿತತೇಜಮಾಲಕ್ಷ್ಮೀಯುತ ವೀರಉತ್ಕøಷ್ಟಬಲ ವಿಷ್ಣೋ ನರಸಿಂಹ ಶರಣು 7ದ್ವಾತ್ರಿಂಶದಕ್ಷರ ಸುಮಂತ್ರ ಪ್ರತಿಪಾದ್ಯನೇಹಿರಣ್ಯಕಶಿಪುವ ಸೀಳ್ದಿ ಪ್ರಹ್ಲಾದಪಾಲಮೂರಡಿಯ ಕೇಳ್ದ ವಾಮನಬಲಿಬಂಧಕಶರಣು ಶ್ರೀತ್ರಿವಿಕ್ರಮನೇ ಧೂರ್ಜನಕಪಾಹಿ8ದುಷ್ಟ ನೃಪರನ್ನಳಿದು ಭೂಭಾರ ಇಳಿಸಿದಿಕೋಟಿ ಸೂರ್ಯಮಿತೋಜ್ವಲ ಪರಶುರಾಮಸಾಟಿ ಇಲ್ಲದ ಹನುಮತ್ಸೇವ್ಯಸೀತಾರಮಣಪಟ್ಟಾಭಿರಾಮನಮೋ ರಾವಣ ಧ್ವಂಸೀ 9ಭಜಿಸುವೆ ನರಸೇವ್ಯ ನಾರಾಯಣ ವ್ಯಾಸಸ್ವಜನತೇಷ್ಟಪ್ರದನೇ ಪಾಹಿಮಾಂ ಶ್ರೀಶಕುಜನಮೋಹಕ ನಮೋ ಸುರ ಸುಬೋಧಕಬುದ್ಧದುರ್ಜನ ಸಂಹಾರಿ ನಮೋ ಶಿಷ್ಟೇಷ್ಟ ಕಲ್ಕಿ 10ಕ್ರೂರ ದೈತ್ಯರ ಭಾರಿಭಾರಧರಿಯಿಂದಿಳಿಸಿದೆವಾರಿಜಾಸನ ಶಿವಾದ್ಯಮರರ ಮೊರೆಕೇಳಿಕ್ಷೀರಸಾಗರಶಯ್ಯ ಪುರುಷಸೂಕ್ತದಿ ಸ್ತುತ್ಯಪರಮಪೂರುಷ ಶ್ರೀಶ ಪ್ರಾದುರ್ಭವಿಸಿದೆಯೋ11ವಸುದೇವ ದೇವಕೀಸುತನೆಂದು ತೋರಿದವಾಸುದೇವನೇ ನಿನ್ನ ಸುಚರಿತ್ರೆ ಕೇಳೆಶ್ರೀಶ ನಿನ್ನಯ ದಯದಿಕಲುಷಪರಿಹಾರವುಸುಶುಭ ಪಾವನಕರವು ಸರ್ವಭಕ್ತರಿಗೂ 12ಕಲಿಕಲಿಪರಿವಾರ ದೈತ್ಯ ದುರ್ಜನರುಖಳರು ಇಳೆಯಲ್ಲಿ ನಾನಾ ರೂಪದಲಿ ಜನಿಸಿಶೀಲ ಹರಿಭಕ್ತರ ಕಂಡು ಸಹಿಸದೇ ಬಹುಬಲಕಾರ್ಯ ವಂಚನೆಯಿಂದ ಪೀಡಿಸಿದರು 13ಎಂಟನೇ ಮಗು ತನ್ನ ಮೃತ್ಯುವಾಗುವುದೆಂದುದುಷ್ಟ ಕಂಸನು ತಂಗಿ ಸಪತಿ ದೇವಕಿಯಇಟ್ಟ ಸೆರೆಮನೆಯಲ್ಲಿ ಆರು ಮಕ್ಕಳ ಕೊಂದಎಂಟ ನಿರೀಕ್ಷಿಸಿದ ಭಯ ದ್ವೇಷದಿಂದ 14ಏಳನೇ ಗರ್ಭವು ವ್ಯಾಳದೇವನ ಅಂಶಸ್ವಲ್ಪ ಕಾಲದಲೇ ಆ ಕ್ಷೇತ್ರದಿಂ ಹೊರಟುಚೆಲ್ವ ಗೋಕುಲದಲ್ಲಿ ರೋಹಿಣಿ ಉದರದಿಂ-ದಲ್ಲಿ ಪುಟ್ಟಿದನು ನಿನ್ನ ನಿಯಮನದಿಂದ 15ಸಾರಾತ್ಮಾ ನಿನ್ನಲ್ಲಿ ಪ್ರೇಮಾತಿಶಯದಿಂದಸುರರುಸೇವಿಸುವುದಕೆ ನಿನ್ನಿಚ್ಛೆ ದಯದಿಧರೆಯಲ್ಲಿ ನೃಪಮುನಿಗೋಪ ಗೋಪಿಯರಾಗಿಪರಿಪರಿವಿಧದಲ್ಲಿ ಕೃತ ಕೃತ್ಯರಾದರು16ದೇವಿ ಮಾಯಾದುರ್ಗೆ ನಿನ್ನಯ ಪ್ರಶಾಸನದಿಅವತಾರಕ್ಕನುಸರಿಸಿ ಬಂದು ತೆರಳಿದಳುದೇವ ನಿನ್ನ ಕಲಾ ಸಂಯುಕ್ತ ಶೇಷನುಭವಿಸಿದನು ನಿನ್ನಣ್ಣ ಬಲರಾಮನೆಂದು 17ನಿರ್ದೋಷನೀ ಸರ್ವ ಜಗನ್ನಿವಾಸನು ದೇವ-ಕೀ ದೇವಿಯೋಳ್ ನಿವಸಿಸಿ ಪೊಳೆಯುವಾಗವಿಧಿಭವಾದಿಗಳೆಲ್ಲ ಬಂದು ಸಂಸ್ತುತಿಸಿದರುಸತ್ಯಜ್ಞÕನಾನಂತಗುಣಪೂರ್ಣನಿನ್ನ18ಯಾವನು ಸರ್ವದಾ ಸರ್ವ ಬಹಿರಂತಸ್ಥಯಾವನು ಸರ್ವ ಹೃತ್ ಯೋಮದೊಳು ಇರುವಯಾವನಲ್ಲಿ ಸರ್ವವೂ ಸಮಾಹಿತವೋಅವನೇವೇ ನೀಹರಿವಿಷ್ಣು ಕೃಷ್ಣ ಅವತಾರ19ಪ್ರಾಕೃತಶರೀರ ವಿಕಾರಗಳು ನಿನಗಿಲ್ಲಪ್ರಾಕೃತಕಲಾವಿಲ್ಲ ಭಿನ್ನಾಂಶನಲ್ಲಏಕಪ್ರಕಾರಅಕ್ಷರಪೂರ್ಣಅಜನಿನ್ನಅಜ್ಞಾನದಲಿ ನರರು ಜನಿಸಿದಿ ಎಂಬುವರು 20ಅನುಪಮಾದ್ಭುತ ಬಾಲಕನು ಅಂಬುಜೇಕ್ಷಣರತ್ನಕಿರೀಟಕುಂಡಲಪೊಳೆವಕೌಸ್ತುಭಮಣಿಉರದಿ ಶ್ರೀವತ್ಸ ಚತುರ್ಭುಜವು ಪಾಂಚಜನ್ಯಕೌಮೋದಕೀ ಸುದರ್ಶನ ಸರೋಜ 21ಉದ್ದಾಮ ಕಾಂಚಂಗದ ಕಂಕಣಾದಿಗಳಪೀತಾಂಬರ ಪಾದನೂಪುರ ಪೂರ್ಣೇಂದುಮುದ್ದು ಮುಖ ಮುಗುಳುನಗೆ ಸುಳಿಗೊರಳು ಶುಭನೋಟಮೋದಚಿನ್ಮಯ ಹೀಗೆ ಪ್ರಾದುರ್ಭವಿಸಿದಿಯೋ22ಈರೂಪವಾಸುದೇವನೋಡಿ ಸ್ತುತಿಸಿದನು ನಿನ್ನಅರಿಯೇ ನಾ ವರ್ಣಿಸಲು ನಿನ್ನ ಗುಣರೂಪಶರಣು ಆತ್ಮನೇ ಪರನೇ ಉದ್ದಾಮ ಹರಿಕೃಷ್ಣಶರಣು ಸರ್ವಾಶ್ರಯನೇ ಶ್ರೀಶ ಮಾಂಪಾಹಿ 23ನಿನ್ನ ಮಹಾ ಪುರುಷ ಲಕ್ಷಣವ ದೇವಕಿಯುಕಾಣುತ್ತಾ ನರಲೋಕ ವಿಡಂಬನಕ್ಕಾಗಿತನ್ನ ಗರ್ಭಗನಾದಿ ಎಂದರಿತು ಭಕ್ತಿಯಿಂಸನ್ನತಿಯ ಮಾಡಿದಳು ಆ ಪೂರ್ವಪೃಷ್ಣಿ 24ದೇವಕಿಯ ಸ್ತುತಿಕೇಳಿಯುಕ್ತ ಮಾತುಗಳಾಡಿದೇವ ನಿನ್ನೀಚ್ಛಾ ಶಕ್ತಿಯಿಂದಲೇವೇಪವಡಿಸೆ ನರಶಿಶುಪೋಲ್ ಪಿತ ನಿನ್ನ ಎತ್ತಿಕೊಂಡುತೀವ್ರ ಹೊರಟನು ವೈಜಕೆ ನೀ ಪೇಳಿದಂತೆ 25ಶೇಷದೇವನು ಹೆಡೆಯ ಕೊಡೆಯಂತೆ ಪಿಡಿಯಲುಆಶ್ಚರ್ಯವಲ್ಲ ನದಿಮಾರ್ಗಬಿಟ್ಟಿದ್ದುಯಶೋದೆ ಸುಪ್ತಿಯಲಿರೆ ಮಗ್ಗುಲಲಿ ಮಲಗಿಸಿವಸುದೇವ ಎತ್ತಿಪೋದನು ಅವಳ ಮಗಳ 26ಯಶೋದೆಯ ಹೆಣ್ಣುಮಗು ಶಿಶುರೂಪ ದುರ್ಗೆಯವಸುದೇವ ತಂದು ದೇವಕಿ ಬದಿ ಇಡಲುಪ್ರಸವ ಸುದ್ದಿಯಕೇಳಿಕಂಸ ಆರ್ಭಟದಿಂದಶಿಶುವು ಹೆಣ್ಣಾದರೂ ಎತ್ತಿ ಶಿಲೆಯ ಹೊಡೆದ 27ಅಂಬರದಿ ದಿವ್ಯ ರತ್ನಾಭರಣ ಭೂಷಿತೆಕಂಬುಚಕ್ರಾದಿಧರೆ ಅಷ್ಟ ಮಹಾಭುಜೆಯುಅಂಬಾ ಮಹಾದುರ್ಗಾ ಭಗವತೀ ಮಯಾದೇವಿಅಂಭ್ರಣೀ ನಿಂತಳು ದೇವಗಾಯಕರು ಸುತ್ತಿಸೇ 28ಕಂಸನ್ನ ಎಚ್ಚರಿಸಿ ಭಗವತಿ ತೆರಳಲುಕಂಸನುಪರಮವಿಸ್ಮಿತನಾಗಿ ಬೇಗವಸುದೇವ ದೇವಕಿಯ ನಿಗೂಢ ಬಂಧನ ಬಿಡಿಸಿಅಸುರ ಮಂತ್ರಿಗಳೊಡೆ ಆಲೋಚಿಸಿದನು 29ನಂದ ಯಶೋದೆಯು ತಮ್ಮ ಶಿಶು ನೀನೆಂದುನಂದ ಆನಂದದಿವಿಪ್ರವೈದಿಕರ ಕರೆದುಅಂದದಿ ಪಿತೃ ದೇವತಾರ್ಚನೆಗಳ ಮಾಡಿಸಿಚೆಂದದಿ ಅಲಂಕೃತ ಧೇನುಗಳ ಕೊಟ್ಟ 30ಜಯತು ಜಯತು ದೇವಕೀತನಯ ಸತ್ಯಾ ರುಕ್ಮಿಣೀಕಾಂತಜಯತುಪೂರ್ಣಪ್ರಜÕಹೃತ್ ಪದ್ಮ ಸಂಸ್ಥಜಯತು ಜಗಜ್ಜನ್ಮಾದಿಕರ್ತ ಜಗನ್ನಾಥಜಯತು ವಿಧಿತಾತ ಪ್ರಸನ್ನ ಶ್ರೀನಿವಾಸ 31-ಇತಿ ಪ್ರಥಮಾಧ್ಯಾಯ ಸಂಪೂರ್ಣಂ -ದ್ವಿತೀಯ ಅಧ್ಯಾಯಬಾಲಲೀಲಾಸಾರಪೂರ್ಣ ಸುಗುಣಾರ್ಣವನೇಅನಘಮಾಯಾರಮಣಆನಮಿಪೆ ಶ್ರೀ ಕೃಷ್ಣ ರುಕ್ಮಿಣೀನಾಥಜ್ಞಾನ ಸುಖಬಲ ಚೇಷ್ಟಾರೂಪ ದೇವಕೀತನಯಸೌಂದರ್ಯಸಾರ ಜಗತ್ ಜನ್ಮಾದಿಕರ್ತ ಪಸಣ್ಣ ಶಿಶುರೂಪ ನೀ ಪೂತನೀ ಶಕಟತೃಣಾವರ್ತರ ಕೊಂದಿ ನಮೋ ಅಮಿತಶೌರಿನಿನ್ನ ಸುಂದರ ಮುಖದಿ ಪ್ರಪಂಚ ಗಗನಾದಿಗಳಕಾಣಿಸಿದಿ ಮಾತೆಗೆ ನಮೋವಿಶ್ವವಿಷ್ಣೋ1ಗರ್ಗಾದಿ ವಿಬುಧರು ಯೋಗ್ಯ ಸಜ್ಜನರೆಲ್ಲಅಗಣಿತಮಹಿಮ ಶ್ರೀ ವಿಷ್ಣು ನೀ ಎಂದುಭಕುತಿಯಿಂದಲಿ ನಿನ್ನ ಬಾಲಲೀಲೆ ನೋಡೆಕಾಕುದುರ್ಮತಿಗಳು ದ್ವೇಷ ಬೆಳೆಸಿದರು2ಕಂಸ ಜರಾಸಂಧ ಕಾಲಯವನ ಕಲಿಯಅಸುರ ಭೃತ್ಯರು ಬಂದು ನಿನ್ನ ನಿನ್ನವರನ್ನಹಿಂಸಿಸಬೇಕೆಂದು ಆಗಾಗ ಯತ್ನಿಸಲುದ್ವಂಸ ಮಾಡಿದಿ ಅವರನ್ನ ಸಜ್ಜನ ಪೊರೆದಿ 3ವತ್ಸಬಕಅಘಧೇನುಕ ಪ್ರಲಂಬಾರಿಷ್ಟಕೇಶಿ ಕಮಲಯ ಪೀಡಾ ಮುಷ್ಟಿಕ ಚಾಣೂರಕಂಸಾದಿ ಅಸುರರ ಸದೆದು ಮುದ್ದೆಯ ಮಾಡಿವಸುಮತಿಯ ಸಾಧುಗಳ ಭಯ ನಿವಾರಿಸಿದಿ 4ಬಲವಂತ ರಾಮ ಸಹ ಅಮಿತ ಪೌರುಷ ನೀನುಬಲಿಷ್ಠ ಅಸುರರ ಅಳಿದು ಭೂಭಾರ ಇಳಿಸಿಶೀಲ ಭಕ್ತರಿಹಪರಸುಖ ಒದಗಿಸಿದಿಬಲರಾಮ ಕೃಷ್ಣ ನಮೋ ಫಣಿಪ ವಿಷ್ಣೋ 5ಯಮಳಾರ್ಜುನೋದ್ಧಾರ ದಾವಾಗ್ನಿಯಿಂದ ನೀಸಂರಕ್ಷಿಸಿದಿ ವೃಜಗೋಪ ಜನರನಿನ್ನ ಮಹಿಮೆ ಏನೆಂಬೆ ವರುಣನಾಲಯದಿಂದಸಮ್ಮುದದಿ ನಂದನ್ನ ಕರತಂದಿ ಅಜಿತ 6ನಾಗಪತ್ನೀಯರು ಬಂದು ನಮಸ್ತುಭ್ಯಂಭಗವತೇ ಪೂರುಷಾಯ ಮಹಾತ್ಮನೇ ಎಂದುಅಗುಣ ಅವಿಕಾರ ನಿನ್ನನ್ನು ಭಕ್ತಿಯಿಂ ಸ್ತುತಿಸೆನಾಗನೂ ಸಹ ಸ್ತುತಿಸೆ ಅನುಗ್ರಹ ಮಾಡಿದಿಯೋ 7ಶ್ರೀಧರನೇ ನಿನ್ನಯ ವೇಣುನಾದದ ಸುಧೆಯಮಾಧುರ್ಯ ರಸವನ್ನು ವರ್ಣಿಸಲಶಕ್ಯಶ್ರೀದೇವಿ ಕೊಳಲÉೂಳು ಪ್ರವೇಶಿಸಿ ನಿನ್ನ ಅರ-ವಿಂದ ಮುಖದ ಆನಂದ ಸವಿದು ಸುಖಿಸುವಳು 8ಪಾಲು ಬೆಣ್ಣೆ ಪ್ರಿಯ ಕಳ್ಳ ಮುದ್ದು ಕೃಷ್ಣಗೊಲ್ಲತಿಯರ ಸಹ ಸಲ್ಲಾಪಿಸುವ ಎಂಬಸೊಲ್ಲಿನ ತತ್ವವ ಬಲ್ಲವರೇ ಬಲ್ಲರುಫಲಿ ನಮೋ ಪಾಲ್ಬೆಣ್ಣೆ ಗೋಪಿಜನ ಪ್ರಿಯ 9ಅತ್ಯಲ್ಪ ಅಸುರ ಆವೇಶ ಸುರರಿಗೆ ಎಂದುಮುಖ್ಯ ವಾಯು ಅಖನರ್ಮ ಸಮಗಿಲ್ಲಹೊಯ್ಯಿಸೆ ಮಳೆಶಕ್ರನೀ ಲೀಲೆಯಂ ಗೌರಿ ಎತ್ತಿಕಾಯ್ದಿ ಗೋಜನಗಳ ಅನ್ನದ ಅನ್ನಾದ 10ಭಕ್ತಿ ಉಕ್ಕಿ ನಿನ್ನಲ್ಲಿ ಕೂಡಿ ಕ್ರೀಡಿಸುವಸದ್ಧರ್ಮವರ್ತಿಗಳ ಸ್ವಸ್ವಯೋಗ್ಯತೆಯಿಂರಾಧಾದಿ ಗೋಪಿಗಳ ಅನಂದ ಉಕ್ಕಿಸಿಸ್ವರತಇಂದಿರಾಪತಿ ಗೋವಿಂದ ಗೋ ಕಾಯ್ದ 11ಅಧಿಕಾರಿ ತ್ರಿವಿಧರಲಿ ತಾರತಮ್ಯ ಉಂಟುಅದರಂತೆ ಭಕ್ತಿಯಲಿ ಅವರೋಚ್ಯ ಉಂಟುಭಕ್ತಿ ಸಾಧನದಂತೆ ಯೋಗ್ಯ ಸುಖ ಓದಗಿಸಿದಿಮಂದಗಮನೆಯರಿಗೆ ರಾಸಕ್ರೀಡೆಯಲಿ 12ನಂದವ್ರಜಗೋಕುಲ ಮಥುರೆ ಬೃಂದಾವನಚಂದ್ರ ಯಮುನೆವನಲತೆ ಪುಷ್ಪ ವೃಕ್ಷಸಿಂಧುದ್ವಾರಕೆ ವಂಶಯಷ್ಠಿ ಗೋ ಸರ್ವರಿಗೂವಂದಿಸುವೆ ಕೃಷ್ಣ ಸಂಬಂಧಿಗಳು ಎಂದು 13ವಿದ್ಯಾಧರ ಸುದರ್ಶನನು ಶಾಪದಿ ಅಹಿಯುನಂದನ್ನ ಕಾಯ್ದಿ ಆ ಅಹಿಯ ಬಾಯಿಂದಪಾದಸ್ಪರ್ಶವ ಕೊಟ್ಟು ಶಾಪ ವಿಮೋಚನೆ ಮಾಡಿಸ್ತುತಿಸಿ ಕೊಂಡಿಯೋ ಮಹಾಪೂರುಷ ಸತ್ಪತಿಯೇ 14ಅಕ್ರೂರ ಕುಬ್ಜ ಉದ್ಧವಗೆ ಅನುಗ್ರಹಿಸಿದುರುಳವ್ರಜನ ಶಿರವ ಕತ್ತರಿಸಿ ಬಿಸುಟುವಿಪ್ರನಾರಿಯರ ಅನ್ನ ಉಂಡು ಒಲಿದಂತೆಕ್ಷಿಪ್ರವಾಯಕ ಗೊಲಿದಿ ಮಾಲಾಕಾರನಿಗೂ15ಬಲಿಷ್ಠ ಮಲ್ಲಾದಿಗಳ ಕುಟ್ಟಿ ಹೊಡೆದು ಕೊಂದುಖಳದುಷ್ಟ ಕಂಸನ್ನ ದ್ವಂಸ ಮಾಡಿದಿಯೋಒಳ್ಳೇ ಮಾತಿಂದ ಮಾತಾಪಿತರ ಆಶ್ವಾಸಿದಿಬಲರಾಮ ಕೃಷ್ಣ ನಮೋಪಾಹಿಸಜ್ಜನರ16ಉಗ್ರಸೇನಗೆ ರಾಜ್ಯವನು ಒಪ್ಪಿಸಿ ನೀನುಗುರುವಿನ ಮೃತ ಪುತ್ರನ್ನ ಕರೆತಂದಿಜರಾಸುತನ ಸಹ ಯುದ್ಧ ಮಾಡಿ ಬೇಗನೇ ನೀನುನಿರ್ಮಾಣಿಸಿದಿ ದ್ವಾರಕೆಯ ಕಡಲ ಮಧ್ಯ 17ಈರಾರುಯೋಜನವು ದ್ವಾರಕಾ ದುರ್ಗವುಸ್ಫುರಧೃಮ ಲತೋದ್ಯಾನ ವಿಚಿತ್ರೋಪ ವನಗಳ್ಪುರಟ ಶೃಂಗೋನ್ನತ ಸ್ಫಟಿಕಾ ಅಟ್ಟಾಳಗಳ್ ಗೋ -ಪುರಗಳು ನವರತ್ನ ಸ್ವರ್ಣಮಯ ಗೃಹಗಳು 18ಮುಚುಕುಂದ ಶಯನಿಸಿದ ಗುಹೆಯೋಳ್ ನೀ ಪೋಗೆನೀಚ ದುರ್ಮತಿ ಕಾಲಯವನ ಹಿಂಬಾಲಿಸಿಮುಚುಕುಂದನ್ನ ನೋಡಿ ನೀನೇವೇ ಎಂದು ಹೊಡಿಯೇಭಸ್ಮವಾದನು ಅಲ್ಲೇ ರಾಜ ಕಣ್ತೆರೆದು 19ನೃಪನು ನಿನ್ನ ಸ್ತುತಿಸಿ ಅನುಗ್ರಹ ಪಡೆದುಸುಪವಿತ್ರ ನರನಾರಾಯಣ ಕ್ಷೇತ್ರಯೈದೇಉಪಾಯದಿಂದಲಿ ಮಾಗಧನ ಸಮ್ಮೋಹಿಸಿನೀ ಬಲರಾಮ ಸಹ ಸ್ವಪುರ ಸೇರಿದಿಯೋ 20ವನಜಸಂಭವಪ್ರೇರಿಸಲು ರೇವತರಾಜಅನರ್ತ ದೇಶಾಧಿಪತಿಯು ಶ್ರೀಮಂತತನ್ನ ಸುತೆ ರೇವತಿಯು ನಮ್ಮ ಬಲರಾಮನಿಗೆಧನ್ಯ ಮನದಲಿ ಕೊಟ್ಟು ಮದುವೆ ಮಾಡಿದನು 21ಸುಧಾ ಕಲಶವ ಗರುಡ ಕಿತ್ತಿ ತಂದಂತೆಚೈದ್ಯಮಾಗಧಶಾಲ್ವಾದಿ ಕಡೆಯಿಂದಎತ್ತಿ ತಂದಿ ಸ್ವಯಂವರದಿಂ ಭೈಷ್ಮಿಯವಂದಿಸಿ ಶರಣಾದೆ ಕೃಷ್ಣ ರುಕ್ಮಿಣಿಗೆ 22ಜಯತು ಜಯತು ದೇವಕೀತನಯ ಸತ್ಯಾ ರುಕ್ಮಿಣೀಕಾಂತಜಯತುಪೂರ್ಣಪ್ರಜÕಹೃತ್ ಪದ್ಮ ಸಂಸ್ಥಜಯತು ಜಗಜ್ಜನ್ಮಾದಿಕರ್ತ ಜಗನ್ನಾಥಜಯತು ವಿಧಿತಾತ ಪ್ರಸನ್ನ ಶ್ರೀನಿವಾಸ 23-ಇತಿದ್ವಿತೀಯಅಧ್ಯಾಯ ಸಂಪೂರ್ಣಂ-ತೃತೀಯ ಅಧ್ಯಾಯಕಲ್ಯಾಣ ಸುಧಾಸಾರಪೂರ್ಣ ಸುಗುಣಾರ್ಣವನೇಅನಘಮಾಯಾರಮಣಆ ನಮಿಪೆ ಶ್ರೀ ಕೃಷ್ಣ ರುಕ್ಮಿಣೀನಾಥಜ್ಞಾನ ಸುಖಬಲ ಚೇಷ್ಟಾರೂಪ ದೇವಕೀತನಯಸೌಂದರ್ಯಸಾರ ಜಗತ್ ಜನ್ಮಾದಿಕರ್ತ ಪವಿಧರ್ಭ ದೇಶಾಧಿಪತಿ ಭೀಷ್ಮಕರಾಜನುಸದ್ಧರ್ಮನಿಷ್ಟ ಕುಂಡಿನಿಪುರವಾಸಿಐದು ಮಂದಿ ಗಂಡು ಮಕ್ಕಳು ಅವನಿಗೆಮೊದಲನೆಯವನಿಗೆ ರುಗ್ಮಿ ಎಂದು ಹೆಸರು 1ರುಗ್ನಿ ಬಹು ದುಷ್ಟನು ಕೃಷ್ಣ ದ್ವೇಷಿ ಖಳರುಮಾಗಧಾದಿಗಳಲ್ಲಿ ಬಹು ಸ್ನೇಹರುಗ್ಮಿಗೆ ರುಕ್ಮರಥ, ರುಕ್ಮಬಾಹು ಮತ್ತುರುಕ್ಮಕೇಶಿ, ರುಕ್ಮಮಾಲಿ ಅನುಜರು2ಈ ಪುಣ್ಯವಂತ ರಾಜನಿಗೊಂದು ಮಗಳುಂಟುಈ ಪುತ್ರಿ ರುಕ್ಮಿಣಿ ಸ್ಫುರದ್ವಾರಾನನೆಯುಹೇ ಪುರುಷೋತ್ತಮನೇ ನಿನ್ನ ನಿಜಸತಿ ಲಕ್ಷ್ಮೀಅಪ್ರಮೇಯನೇ ನಿನ್ನ ಬಿಟ್ಟಗಲದವಳು 3ಉರುಗುಣಾರ್ಣವ ನಿನ್ನ ಅವತಾರಕನುಸರಿಸಿಶ್ರೀ ರಮಾದೇವಿಯೇ ಪ್ರಾದುರ್ಭವಿಸಿದಳುನರರ ನೋಟಕೆ ರಾಜಪುತ್ರಿಯಂತೆ ಇಹಳುಪುರಟಗರ್ಭನ ತಾಯಿ ಸರ್ವಜಗನ್ಮಾತೆ 4ಈ ಷÉೂೀಡಶ ಕಲಾಯುಕ್ ನಮ್ಮ ತನುವೋಲ್ ಅಲ್ಲಕ್ಲೇಶಸಂತಾಪಾದಿ ವಿಕಾರಗಳು ಇಲ್ಲದೋಷ ದೊರೆ ದುಃಖ ಅಸ್ಪøಷ್ಟೆ ಎಂದೆಂದೂಕೃಷ್ಣ ವಿಷ್ಣೋ ನಿನ್ನಾಧೀನೆ ಎಂದೆಂದೂ 5ಉತ್ತಮ ಮಹಾಪೂರುಷ ಶ್ರೀಕರನೇ ನಿನ್ನಉತ್ತಮ ಕ್ರಿಯಾರೂಪ ಗುಣವಿಶೇಷಗಳನ್ನಸಂತತ ಅಲೋಚಿಸಿ, ಹೊಸ ಹೊಸ ಅತಿಶಯವಸತತ ಕಾಣುತ ತಾ ಸನ್ನುತಿಸಿ ಸುಖಿಸುವಳು 6ವಿಮಲಆನಂದಮಯನಿನ್ನ ಸಹಲಕ್ಷ್ಮೀಬ್ರಹ್ಮರುದ್ರಾದಿ ಸುರರಿಂದ ಸನ್ನುತಳುಅಮಿತೋಚ್ಛ ಭಕ್ತಿಯಿಂ ಸದಾ ನಿನ್ನಸೇವಿಪಳುರಮಾ ಸಿಂಧುಜಾ ಜಾನಕೀಯೇವೇ ಭೈಷ್ಮಿ 7ಸಿರಿದೇವಿ ತಿಳಿದಷ್ಟುಹರಿನಿನ್ನ ತಿಳಿದವರುನರರಲ್ಲಿ ಸುರರಲ್ಲಿ ಯಾರೂನೂ ಇಲ್ಲನರಲೋಕದಲ್ಲಿ ನರರಂತೆ ನಟಿಸುವ ಸಿರಿಯುಅರಿಯಬೇಕೇ ಇತರರಿಂದ ಹೊಸದಾಗಿ 8ಅರಮನೆಗೆ ಬರುವವರು ನಾರದಾದಿಗಳಿಂದಹರಿಮುಕುಂದನೆ ನಿನ್ನರೂಪಗುಣಮಹಿಮೆಹರುಷದಿಂದಲಿ ಚೆನ್ನಾಗಿಕೇಳಿಮನದಲ್ಲಿವರಿಸಿದಳು ಸದಾ ನಿನ್ನ ಪ್ರೇಮದಿ ಭೈಷ್ಮಿ 9ಕೃಷ್ಣನಿಗೆಸಮ ಸದೃಶ ಪುರುಷ ಯಾರೂ ಇಲ್ಲರುಕ್ಮಿಣಿಗೆ ಸಮ ಸದೃಶ ಸ್ತ್ರೀ ಯಾರೂ ಇಲ್ಲಗುರುರೂಪ ಔದಾರ್ಯ ಬುದ್ದಿ ಲಕ್ಷಣಾಶ್ರಯಳುನಿನ್ನ ನಿಜಪತ್ನಿ ರುಕ್ಮಿಣಿ ಎಂದು ನೀ ಅರಿವಿ 10ಮದುವೆ ಮಾಡಲು ರುಕ್ಮಿಣಿಗೆ ಯೋಚಿಸಿನೃಪಬಂಧುಗಳು ಕೃಷ್ಣಗೆ ಕೊಡಲು ಇಚ್ಛೈಸೆಧೂರ್ತರುಗ್ಮಿ ಕೃಷ್ಣ ದ್ವೇಷಿ ತಡೆ ಮಾಡಿದನುಚೈದ್ಯ ಶಿಶುಪಾಲನಿಗೆ ಕೊಡಲು ನೆನೆದು 11ಸುತಗೆ ಕೃಷ್ಣನು ಮಾತ್ರ ವರನೆಂದು ತಿಳಿದರೂಪುತ್ರ ಸ್ನೇಹದಿ ರುಕ್ಮಿಗೆ ಒಡಂಬಟ್ಟ ರಾಜಚೈದ್ಯನಿಗೆ ಕೊಡಲು ಏರ್ಪಾಡು ಮಾಡಲುಆಪ್ತ ದ್ವಿಜವರ್ಯನ ಕರೆದಳು ಭೈಷ್ಮೀ 12ವಿಪ್ರನ ದ್ವಾರ ಸಂದೇಶ ಕಳುಹಿಸಿದಳುಪತ್ರ ಬರೆದಳು ನಿನಗೆ ಸತ್ತತ್ವ ನಿಮಿಡಆ ಬ್ರಾಹ್ಮಣ ಶ್ರೇಷ್ಟ ದ್ವಾರಕಾ ಪುರಿಯೈದುಪರಮಪೂರುಷ ನಿನ್ನ ನೋಡಿದನÀು ಮುದದಿ13ಕಾಂಚನಾಸನದಲ್ಲಿ ಕುಳಿತಿದ್ದ ನೀನುದ್ವಿಜವರ ಶ್ರೇಷ್ಠ ಬರುವುದು ಕಂಡಾಕ್ಷಣದಿತ್ಯಜಿಸಿಆಸನಪೋಗಿ ಎದುರ್ಗೊಂಡು ಕರೆತಂದುಪೂಜಿಸಿದೆಯೋ ಸ್ವಾಮಿ ಬ್ರಹ್ಮಾಂಡದೊಡೆಯ 14ಅಖಂಡೈಕ ಸಾರಾತ್ಮಾ ಸರ್ವರೂಪಾಟಿಭಿನ್ನಅಕಳಂಕ ಉರು ಸರ್ವ ಸಚ್ಛÀಕ್ತಿಪೂರ್ಣಏಕಾತ್ಮ ನೀ ಪೂಜ್ಯ ಪೂಜಕ ನೀಚೋಚ್ಛಗಳಕಾಕುಜನಮೋಹಕ್ಕೆ ಅಲ್ಲಲ್ಲಿ ತೋರ್ವಿ15ಸಜ್ಜನರ ಗತಿಪ್ರದನು ಅವ್ಯಯನು ನೀನುಭೋಜನಾದಿ ಬಹು ಉಪಚಾರ ಮಾಡಿದ್ವಿಜವರ್ಯನ ಹೊಗಳಿ ಸಾಧುಸನ್ಮತಿನೀತಿನಿಜ ಸುಖಪ್ರದಮಾರ್ಗಬೋಧಕ ಮಾತಾಡಿದಿ16ಭೂತ ಸಹೃತ್ತಮ ಸದಾ ಸಂತುಷ್ಟ ಮನಸ್ಸುಳ್ಳಸಾಧು ಆ ಬ್ರಾಹ್ಮಣನು ನಿನಗೆ ಸನ್ನಮಿಸಿಬಂದ ವಿಷಯವ ಪೇಳಿ ಪತ್ರವ ಸಮರ್ಪಿಸಿದವಂದೇ ಆ ಅಕುಟಿಲಗೆ ಭೈಷ್ಮೀ ಕೃಷ್ಣರಿಗೆ 17ಪತ್ರಸಾರಭುವನಸುಂದರ ನಿನ್ನ ಕಲ್ಯಾಣ ಗುಣಗಳಶ್ರವಣ ಮನನವಪರಮಆದರದಿ ಮಾಳ್ಪಜೀವರುಗಳ ಕಾಯಜಾದಿ ತಾಪಂಗಳುದ್ರಾವಿತವು ಆಗುವೆವು ಎಂದು ಕೇಳಿಹೆನು 18ಗುಣಕ್ರಿಯಾರೂಪಸುಶ್ರವಣ ಮನನವ ಮಾಡಿಧ್ಯಾನಿಪರಿಗೆ ನಿನ್ನರೂಪದರ್ಶನವುನಿನ್ನ ಅರಿತ ಭಕ್ತರಿಗೆ ಅವತಾರಾದಿ ದರ್ಶನವುಕಾಣುವವರಿಗೆ ಅಖಿಲಾರ್ಥ ಲಭಿಸುವವು 19ಇವು ಇಂತಹ ನಿನ್ನ ಉನ್ನತ ಮಹಿಮೆಗಳಶ್ರವಣ ಮಾಡಿ ಅಂತರಂಗದಿ ತನ್ನ ಮನಸ್ಧಾವಿಸುತ್ತೇ ನಿನ್ನಲ್ಲೇಅಚ್ಯುತಮುಕುಂದದೇವಿ ರುಕ್ಮಿಣಿ ಹೀಗೆ ಬರೆದಿಹಳು ವಿಭುವೇ 20ಸುಖರೂಪ ಲಕ್ಷ್ಮೀಶವಿಧಿಪಿತಜಗಜನ್ಮಾದಿಕರ್ತಶುಕ್ರ ನಿಷ್ಕಲಅಪ್ರಾಕೃತಅವ್ಯಕ್ತಅಖಂಡೈಕ ಸಾರಾತ್ಮ ಅನಂತೋರು ಸೌಂದರ್ಯನಿಗಮಗ್ಯ ಗಾಯತ್ರಿ ಅಮಾತ್ರ ತ್ರಿಮಾತ್ರ 21ಬೃಹತೀಸಹಸ್ರ ಸ್ವರವ್ಯಂಜನಾಕ್ಷರ ವಾಚ್ಯಅಹರ್ನೇತ್ರು ಭೂಮನ್ನಿತ್ಯನೀ ಸ್ವತಂತ್ರಮಹೈಶ್ವರ್ಯ ಪೂರ್ಣೇಂದ್ರ ಅಶೇಷ ಗುಣಾಧಾರಮಹಾಶಕ್ತಿ ದಿವಃಪರ ಪರಮೇಶ್ವರ - ಸ್ವ 22ನಿನ್ನ ಈ ಕುಲಶೀಲ ವಿದ್ಯಾದಿ ಗುಣರೂಪಅನುಪಮೈಶ್ವರ್ಯದಿ ನಿನಗೆ ನೀನೇತುಲ್ಯನಿನ್ನ ಗುಣಗಳು ಸರ್ವಾಕರ್ಷಕವಾಗಿರುವವುತನ್ನಾತ್ಮ ನಿವೇದನ ಮಾಡಿಯೇ ಎಂದಳು 23ಉನ್ನಾಮ ಉದ್ಧಾಮ ಅಚ್ಯುತನು ನೀನಿತ್ಯಆನಂದಚಿತ್ ತನು ಯದುಪತೇ ಕೃಷ್ಣನೀನೇವೇ ತನ್ನಪತಿಸಿರಿತಾನು ಎಂದುಅನಘಲಕ್ಷ್ಮೀ ಭೈಷ್ಮಿ ಸೂಚಿಸಿಹಳು24ರಾಜಪುತ್ರ ಎಂಬ ವಿಡಂಬನಾ ರೀತಿಯಲಿದುರ್ಜನರ ಭಯ ತನಗೆ ಇರುವಂತೆ ಬರೆದುಸೂಚಿಸಿದಳು ತನ್ನ ಅಂಬಿಕಾ ಗುಡಿಯಿಂದಅಚ್ಯುತನೇ ನೀ ಕರಕೊಂಡು ಹೋಗೆಂದು 25ರುಕ್ಮಿಣಿಯಲಿ ನಿನ್ನ ಪ್ರೇಮ ಪ್ರಕಟಿಸುತಬೇಗಸಾರಥಿದಾರುಕನ್ನ ನೀ ಕರೆದುಮೇಘಪುಷ್ಪ, ಶೈಭ್ಯ, ಬಲಾಹಕ ಸುಗ್ರೀವನಾಲ್ಕಶ್ವ ರಥದಲ್ಲಿ ದ್ವಿಜವರ ಸಹ ಕುಳಿತಿ 26ಖಗವೇಗದಿ ರಥದಿ ಏಕ ರಾತ್ರಿಯಲ್ಲೇಪೋಗಿ ಸೇರಿದಿ ಆ ಕುಂಡಿನಾಪುರವಸೊಗಸಾದ ಅಲಂಕಾರ ಪಚ್ಚೆ ತೋರಣಗಳುಪೂಗಿ ಮಾವು ಮೊದಲಾದ ಗೊಂಚಲುಗಳು 27ಎಲ್ಲಿ ನೋಡಿದರಲ್ಲಿ ಕಾಂಚನಾಭರಣದಿಪೊಳೆವ ಪೀತಾಂಬರ ಪಟ್ಟೆ ಉಟ್ಟಿದ್ದಲೋಲಾಯಿತಾಕ್ಷಿಯರು ವಿಪ್ರಜನ ಗುಂಪುಕೋಲಾಹಲವಾಗಿ ಕಂಡಿ ಕುಂಡಿನವ 28ಕಾರಣವು ತಿಳಿದಿದ್ದೆ ಭೀಷ್ಮಕರಾಜನುಪುತ್ರಸ್ನೇಹದಿ ಚೈದ್ಯಶಿಶುಪಾಲನಿಗೆಪುತ್ರಿಯ ಕೊಡಲಿಕ್ಕೆ ಕಾರ್ಯೋನ್ಮುಖನಾಗಿಪಿತೃ ದೇವಾರ್ಚನೆ ವಿಪ್ರಪೂಜೆಯಗೈದ 29ಚೇದಿಪತಿ ದಮಘೋಷ ಪುತ್ರ ಶಿಶುಪಾಲಗೆಮದುವೆಪೂರ್ವದ ಕಾರ್ಯ ತಾನೂ ಮಾಡಿಸಿದಮದುವೆ ಸಂಭ್ರಮಕ್ಕಾಗಿ ಸೈನ್ಯ ಸಹ ಬಂದರುವೈದರ್ಭ ಪೂಜಿಸಿದ ಉಪಚಾರದಿಂದ 30ಮಾಧವನೇ ನಿನ್ನಲ್ಲಿ ಭಯ ದ್ವೇಷ ಕಾರಣದಿಚೈದ್ಯ ಪಕ್ಷೀಯರು ಜರಾಸಂಧ ಸಾಲ್ವದಂತ ವಕ್ರಾದಿಗಳು ಸಹಸ್ರಾರು ಮಂದೀರುಬಂದುತುಂಬಿಎಚ್ಚರಿಕೆಯಲಿ ಇದ್ದರು31ಆ ಪರಿಸ್ಥಿತಿಯಲ್ಲಿ ಕುಂಡಿನಾಪುರಕೆ ನೀಒಬ್ಬನೇ ಪೋದದ್ದುಕೇಳಿಬಲರಾಮಕ್ಷಿಪ್ರದಿ ರಥಾದಿ ಯಾದವಸೈನ್ಯ ಸಹಿತತಾ ಬಂದ ಅಚ್ಯುತನೇ ನಿನ್ನ ಬದಿಗೆ 32ಸರೋರುಹಾಸನನಿಗೂ ಕೋಟಿಗುಣ ಉತ್ತಮಳುಸಿರಿದೇವಿ ರುಕ್ಮಿಣಿ ಭೀಷ್ಮ ಕನ್ಯಾಹರಿಯೇ ನಿನ್ನಾಗಮನ ಆಕಾಂಕ್ಷಿಯಾಗಿ ತಾನಿರೀಕ್ಷಿಸಿದಳು ನಿನ್ನ ಹಾಗೂ ಆ ದ್ವಿಜವರನ್ನ 33ಮೇದಿನಿಸ್ತ್ರೀಯರಿಗೆ ಎಡಗಣ್ಣು ತೊಡೆ ಭುಜಅದುರುವುದುಶುಭಸೂಚಕವೆಂದು ಪೇಳುವರುಸದಾನಿತ್ಯಸುಶುಭ ಮಂಗಳರೂಪಿ ದೇವಿಗೆಅದರಿದವು ಎಂಬುವುದು ಲೌಕಿಕ ದೃಷ್ಟಿ 34ಮುಖದಲ್ಲಿ ಸಂತೋಷ ಪ್ರಕಟಿಸುತ ವಿಪ್ರನುರುಕ್ಮಿಣಿ ಬಳಿ ಬಂದು ಸಮಸ್ತವೂ ಪೇಳೆಶ್ರೀ ಕೃಷ್ಣ ನಿನ್ನನ್ನು ಸಂಸ್ಮರಿಸುತ ಭೈಷ್ಮಿಲೋಕ ರೀತಿಯಲಿ ಆದ್ವಿಜಶ್ರೇಷ್ಠನ್ನ ಪೂಜಿಸಿದಳು35ಕೃಷ್ಣ ಬಲರಾಮರಿಗೆ ಬಿಡಾರವ ಕೊಟ್ಟುಭೀಷ್ಮಕನು ಪೂಜಿಸಿದ ಪುರದ ಸಜ್ಜನರುಕೃಷ್ಣನಿಗೆ ರುಕ್ಮಿಣಿಯೇ ರುಕ್ಮಿಣಿಗೆ ಕೃಷ್ಣನೇಘೋಷಿಸಿದ ರೀತಿ ಸಂತೋಷದಿಂದ 36ಸಂಪ್ರದಾಯವನುಸರಿಸಿ ಭೀಷ್ಮಕನುತನ್ನ ಪುತ್ರಿಯ ಕಾಲುನಡೆಯಲ್ಲಿ ಕರೆಕೊಂಡುಅಂಬಿಕಾಪೂಜೆಯ ಮಾಡಲು ಪೋಗಲುಸಂಭ್ರಮವ ಬಂದಿದ್ದ ರಾಜರು ನೋಡಿದರು 37ಮುಕುಂದ ನಿನ್ನಯ ಪಾದಪಂಕಜವ ಧ್ಯಾನಿಸುತರುಕ್ಮಿಣಿ ಅಂಬಿಕಾಆಲಯವ ಸೇರಿಬಾಗಿನಾದಿಗಳ ಕೊಟ್ಟು ನಿನ್ನ ಸಂಸ್ಮರಿಸುತ್ತರಾಕೇಂದುಮುಖಿ ನಿನ್ನಾಕಾಂಕ್ಷೆಯಿಂ ತಿರುಗಿದಳು38ರಥಗಜತುರಗಪದಾದಿಸೈನ್ಯಗಳುಪ್ರತಿರಹಿತರು ತಾವೆಂಬ ಡಾಂಭಿಕರಾಜರುಅತಿಗೂಢಚಾರ ರಾಜಭೃತ್ಯರು ಅಲ್ಲಲ್ಲಿಇತ್ತ ಅತ್ತ ಎಲ್ಲೂ ಪುರಜನ ಗುಂಪು 39ಮಂದಗಜಗಮನೆಯು ಸ್ವಚ್ಛ ಹಂಸದವೋಲುಚಂದಪಾದವ ಮೆಲ್ಲ ಮೆಲ್ಲನೆ ಇಡುತಸ್ವಯಂವರದಿ ಸಯಂದನದಿ ನೀ ಇರೆ ವಾರೆನೋಟ ನೋಡಿಬಂದಳು ಉದಯಾರ್ಕ ಪದುಮಮುಖ ಮುದದಿ 40ಮಂದಜಭವಾಂಡದಲ್ಲಿ ಎಲ್ಲೆಲ್ಲೂ ಇಲ್ಲದರೂಪಸೌಂದರ್ಯವತಿಯ ಮೋಹದಲ್ಲಿ ನೋಡಿಮಂಧಧೀ ರಾಜರು ಕಾಯದಿ ಮೈಮರೆಯೇಮಂದಜಕರದಿಂದ ನೀ ಎತ್ತಿಕೊಂಡಿ ಭೈಷ್ಮಿಯ41ಗರುಡಧ್ವಜದಿಂದ ಶೋಭಿಸುವ ರಥದಲ್ಲಿಸಿರಿರುಕ್ಮಿಣಿ ಸಹ ಕುಳಿತು ನೀನುಹೊರಟಿ ಸಸೈನ್ಯ ಬಲರಾಮ ಸಹ ಅದುರುಳರ ಕಣ್ಣು ಮುಂದೆಯೇ ಶ್ರೀಧರಾಚ್ಯುತನೇ 42ಹಾಹಾಕಾರದಲಿ ಕೂಗಿ ಆರ್ಭಟಮಾಡಿಮಹಾಸೈನ್ಯ ಸಹ ಜರಾಸಂಧಾದಿ ರಾಜರುಬಹುವಿಧ ಧನುರ್‍ಸ್ತ್ರಯುತ ಹಿಂಬಾಲಿಸಿಕುಹಕರು ಅತಿಘೋರ ಯುದ್ದ ಮಾಡಿದರು 43ಲೀಲೆಯಿಂದಲಿ ನೀನು ಬಲರಾಮ ಯಾದವರುಖಳಜರಾಸಂಧಾದಿಗಳ ಸೈನ್ಯದವರತಲೆ ಕಾಲು ಕತ್ತರಿಸಿ ಛಿನ್ನ ಭಿನ್ನ ಮಾಡೇಪೇಳದೆ ಓಡಿದನು ಜರಾಸುತನು ಸೋತ 44ಧಾಮಘೋಷನಲಿ ಪೋಗಿ ಅವನ್ನ ಆಶ್ವಾಸಿಸಿತಾಮರಳಿ ಪೋದನು ತನ್ನ ಪಟ್ಟಣಕ್ಕೆತಮ್ಮ ತಮ್ಮ ಪುರಿಗಳಿಗೆ ಇತರ ರಾಜರೂ ಪೋಗೇವರ್ಮದಿ ಯುದ್ಧವ ಮುಂದುವರೆಸಿದ ರುಗ್ಮಿ 45ಶಪಥ ಮಾತುಗಳಾಡಿ ಯುದ್ಧ ಮಾಡಿದ ರುಗ್ಮಿಚಾಪಶರಸಾರಥಿಅಶ್ವಗಳ ಕಳಕೊಂಡುಕೋಪೋಚ್ಛದಿ ಖಡ್ಗದಿ ಎತ್ತಿಕೊಂಡು ಬರಲುಶ್ರೀಪ ನೀ ಆ ಖಳನ್ನ ಕಟ್ಟಿಹಾಕಿದೆಯೋ 46ಜಲಜಾಕ್ಷಿ ಭೈಷ್ಮೀ ಪ್ರಾರ್ಥಿಸಲು ನೀ ರುಗ್ಮಿಯಕೊಲ್ಲದೇ ವಿರೂಪ ಮಾತ್ರವ ಮಾಡೇ ಆಗಬಲರಾಮ ವಾದಿಸಿ ಬಿಡುಗಡೆ ಆಗಿ ಆಖಳಓಡಿ ಪೋದನು ಭೋಜಘಟಕ್ಕೆ47ಜಯ ಕೃಷ್ಣ ಶ್ರೀರುಕ್ಮಿಣಿ ಸಮೇತದಿ ಬಾರೆಜಯಭೇರಿ ತಾಡಿಸಿ ದ್ವಾರಕಾವಾಸಿಗಳುಗಾಯಕರು ನರ್ತಕರುವಿಪ್ರಮುತ್ತೈದೆಯರುಜಯ ಜಯ ಎನ್ನುತ್ತ ಆನಂದದಿ ಮುಳುಗಿದರು 48ಯದುಪುರಿಯಲ್ಲಿ ಮನೆಮನೆಯಲ್ಲಿ ಮಹೋತ್ಸವವುಮುದದಿ ಅಲಂಕೃತರಾಗಿ ಸ್ತ್ರೀ ಪುರುಷರುಜ್ಯೋತಿ ಉಜ್ಜಲ ದೀಪಾವಳಿ ಪೂರ್ಣ ಕುಂಭಗಳುಚೆಂದ ಗೊಂಚಲು ಪುಷ್ಪ ರತ್ನ ತೋರಣಗಳು 49ಸಂಜಯ ಕುರುಕೇಕಯಾದಿ ರಾಜರುಗಳುರಾಜಕನ್ಯೇಯರ ಗಜಗಳ ಒಡ್ಯಾಟಮೂರ್ಜಗದೊಡೆಯ ನೀ ರುಕ್ಮಿಣಿಯ ಕರೆತಂದಸುಚರಿತ್ರೆಯ ಪೊಗಳಿದರು ನರನಾರಿಯರೆಲ್ಲಾ 50ಚತುರ್ಮುಖ ಸುವೀರೆ ವೈನತೇಯನುಶೇಷಶತಮುಖಸ್ಮರಅಹಂಕಾರಿಕ ಪ್ರಾಣಮೊದಲಾದ ಸುರರ ಮುನೀಂದ್ರರ ವೇದಮಂತ್ರಗಳಮದುವೆ ಮಹೋತ್ಸವದ ವೈಭವಏನೆಂಬೆ ಜಯ ಜಯ ಜಯತು 51ಪೂರ್ಣ ಜ್ಞÕನಾತ್ಮನೇ ಪೂರ್ಣ ಐಶ್ವರ್ಯಾತ್ಮಪೂರ್ಣ ಪ್ರಭಾನಂದ ತೇಜಸ್ ಶಕ್ತ್ಯಾತ್ಮಆ ನಮಿಪೆ ಅಚ್ಯುತಾನಂದ ಗೋವಿಂದ ವಿಭೋಕೃಷ್ಣ ರುಕ್ಮಿಣೀನಾಥ ಜಗದೇಕವಂದ್ಯ 52ಆದರದಿ ಸುರವೃಂದ ರಾಜರೂ ವಿಪ್ರರೂಯಾದವರುಗಳು ಶ್ರೀ ಕೃಷ್ಣ ರುಕ್ಮಿಣೀನಿತ್ಯಸತಿಪತಿ ಮದುವೆ ನೋಡಿ ಮಹಾನಂದಹೊಂದಿದರು ಸೌಭಾಗ್ಯಪ್ರದ ಇದು ಪಠಿಸೆ 53ಯೋಗೇಶ್ವರ ದೇವ ದೇವ ಶ್ರೀಯಃಪತಿಅನಘಅಗಣಿತಗುಣಪೂರ್ಣಅಪ್ರಮೇಯಾತ್ಮನ್ಶ್ರೀಕೃಷ್ಣ ವಿಷ್ಣೋ ಶ್ರೀ ರಮಾರುಕ್ಮಿಣೀಬಾಗಿ ಶರಣಾದೆ ನಿಮ್ಮಲ್ಲಿ ಮಾಂಪಾಹಿ 54ಜಯತು ಜಯತು ದೇವಕೀತನಯ ಸತ್ಯಾ ರುಕ್ಮಿಣೀಕಾಂತಜಯತುಪೂರ್ಣಪ್ರಜÕಹೃತ್ ಪದ್ಮ ಸಂಸ್ಥಜಯತು ಜಗಜ್ಜನ್ಮಾದಿಕರ್ತ ಜಗನ್ನಾಥಜಯತು ವಿಧಿತಾತ ಪ್ರಸನ್ನ ಶ್ರೀನಿವಾಸ 55-ಇತಿ ಶ್ರೀ ರುಕ್ಮಿಣೀಶ ಕಲ್ಯಾಣ ಸಂಪೂರ್ಣಂ -
--------------
ಪ್ರಸನ್ನ ಶ್ರೀನಿವಾಸದಾಸರು
ಪ್ರಸನ್ನ ಶ್ರೀ ವಾಮನಪ್ರಥಮ ಅಧ್ಯಾಯಶ್ರೀ ವಾಮನಪ್ರಾದುರ್ಭಾವಸಾರಭೂಮಾದಿ ಗುಣನಿಧಿಯೇಅನಘಮಂಗಳರೂಪವಾಮನ ಸುಸೌಂದರ್ಯಸಾರ ಲಕ್ಷ್ಮೀಶಬ್ರಹ್ಮೇಶ ಮುಖವಂದ್ಯ ಶರಣು ಸೌಭಾಗ್ಯದನೆಬ್ರಹ್ಮಾಂಡ ಬಹಿರಂತವ್ರ್ಯಾಪ್ತ ಸರ್ವೇಶ ಪಉದಿತಭಾಸ್ಕರ ನಿಭ ಸ್ವಕಾಂತಿಯಲಿ ಜ್ವಲಿಸುತಿಸುದರ್ಶನ ಗದಾ ಜ್ಞಾನಪ್ರದ ದರಾಹಸ್ತಪದುಮೆ ಸಹ ಅಜುವಿಷ್ಣು ಮಂತವ್ಯ ಸರ್ವಸ್ಥಶೃತಿವೇದ್ಯ ಅಜಸೇವ್ಯಪ್ರಣವಪ್ರತಿಪಾದ್ಯ1ಸರ್ವ ಸೃಷ್ಟಿ ಸ್ಥಿತಿ ಲಯ ನಿಯಮನ ಜ್ಞಾನಆವೃತಿ ಬಂಧ ಮೋಕ್ಷಕೆ ಮುಖ್ಯಕರ್ತಸುವರ್ಣಾಂಡವ ಪಡೆದು ವ್ಯಾಪಿಸಿ ಅದರೊಳುಅವತಾರಗಳ ಮಾಡಿ ಸಜ್ಜನರ ಕಾಯುವಿ 2ವೇದೋದ್ಧರಮತ್ಸ್ಯಸತ್ಯವ್ರತನಿಗೆ ಒಲಿದಿಮಂದರವ ಪಾಲ್ಗಡಲಲಿ ಪೊತ್ತಕೂರ್ಮಇಂದಿರಾಪತಿ ಅಜಿತ ಮೋಹಿನಿ ಧನ್ವಂತರಿದೈತ್ಯಹರ ಭೂಮಿ ಉದ್ಧರ ಭೂವರಾಹ 3ಪಾಪಘ್ನ ಪ್ರಹ್ಲಾದ ರಕ್ಷಕ ನೃಸಿಂಹನೇವಿಷ್ಟ ವಾಮನ ತ್ರಿವೃತ್ ಗೋಪಬಾಲಸುಪವಿತ್ರ ಜಮದಗ್ನಿಸುತ ಪರುಶುರಾಮಪ್ರಭಂಜನಸೇವ್ಯಶ್ರೀರಾಮಚಂದ್ರ4ಅಜ್ಞಾನ ಹೃತ್ತಿಮಿರಸೂರ್ಯವೇದವ್ಯಾಸನಿಜಭಕ್ತಜನ ಪಾಂಡವಪ್ರಿಯ ಕೃಷ್ಣದುರ್ಜನ ವಿಮೋಹಕ ಸುರಸುಬೋಧಕ ಬುಧ್ಧಸುಜನವಂದ್ಯನೆ ಧರ್ಮಸ್ಥಾಪಕನೆÀ ಕಲ್ಕಿ 5ಷಡ್ರೂಪ ಹಯವದನ ಮಹಿದಾಸ ತಾಪಸಕ್ಷಿಪ್ರವಸುಪ್ರದ ಶ್ರೀಕರ ಯಜÕ್ಯ ಕಪಿಲಅತ್ರಿಸುತ ವೃಷಭಾದಿ ಅನಂತಸುಖ ಚಿದ್ರೂಪಅಪ್ರತಿ ಮಹೈಶ್ವರ್ಯ ಪೂರ್ಣ ಏಕಾತ್ಮ 6ನಿವ್ರ್ಯಾಜ ಭಕ್ತಾಗ್ರಣಿಯು ಪ್ರಹ್ಲಾದನುಆ ಆರ್ಯನ ಸುತ ವಿರೋಚನನೆಂಬುವನುಆ ದೈತ್ಯನ ಪುತ್ರ ಬಲಿಮಹಾರಾಜನುಆಧಿಕ್ಯ ಹೊಂದಿದನು ಬಲಪೌರುಷದಲಿ 7ದೈತ್ಯೇಯ ಬಲಿರಾಜ ಬಲಉನ್ನಾಹದಿಂಜಗತ್ರಯವ ತನ್ನ ವಶ ಮಾಡಿಕೊಂಡಇಂದ್ರಾದಿಗಳು ಐಶ್ವರ್ಯ ಶ್ರೀಯಶಸ್ಥಾನವಿದುರರಾಗಲು ದೇವಮಾತೆ ಯೋಚಿಸಿದಳು 8ಸರ್ವಭೂತ ಗುಹಾವಾಸವಾಸುದೇವಜಗದ್ಗುರುಸರ್ವ ಜಗತ್ಪತಿ ಕೇಶವನಿಗೆ ಪ್ರಿಯವಾದಪಯೋವ್ರತವ ಭಕ್ತಿಯಿಂದಲಿ ಮಾಡುವುದೆಂದುದೇವಮಾತೆಗೆಪತಿಕಶ್ಯಪ ಪೇಳಿದನು9ಆದಿವರಾಹನೇ ಮಹಾಪುರುಷ ಸರ್ವ -ಭೂತ ನಿವಾಸನೇವಾಸುದೇವಸದಾ ಸರ್ವ ಸಚ್ಛಕ್ತಿ ಪರಿಪೂರ್ಣ ಸರ್ವವಿದ್ಯಾಧಿಪತಿ ಶುಭಮಂಗಳ ಸ್ವರೂಪ 10ಸರ್ವ ಜಗಜ್ಜ£್ಮ್ಞದಿಕರ್ತನೇ ಜಗದೀಶಸರ್ವ ಜಗತ್ರಾಣ ಚೇಷ್ಟಕ ನಿಯಾಮಕನೇವಿಶ್ವತೋ ಮುಖ ಆದಿದೇವ ನಿನಗೆ ನಮೋಶ್ರೀವರ ನಾರಾಯಣ ನರಹರೇ ಸ್ವಾಮಿ 11ಮರಗದ ಶ್ಯಾಮ ಅನಿರುದ್ಧ ಪ್ರದ್ಯುಮ್ನಸಿರಿಕಾಂತ ಸರ್ವೇಶ ಕೇಶವ ನಮಸ್ತೆಪುರುಟಾಂಬರಧಾರಿ ಸುರವರೇಣ್ಯನೇ ನಮೋಸರ್ವ ವರದನೇ ಶ್ರೀದ ಕರುಣಾಂಬುನಿಧಿಯೇ 12ಅದಿತಿ ದೇವಿಯು ಪಯೋವ್ರತವ ಮಾಡಿದಳುವಿಧಿಪೂರ್ವಕ ಭಕ್ತಿ ಶ್ರಧ್ಧೆಯಿಂದಆದಿ ಪೂರುಷ ಭಗವಂತ ಶಂಖ ಚಕ್ರಗದಾಧರನೇ ಅದಿತಿಗೆ ಪ್ರತ್ಯಕ್ಷನಾದಿ 13ಕಣ್ಣೆದುರಿಗೆ ನಿಂತ ನಿನ್ನ ನೋಡಿ ಅದಿತಿಆನಂದ ಬಾಷ್ಪವ ಸುರಿಸುತ್ತ ದೀರ್ಘಪ್ರಣಾಮವ ಮಾಡಿದಳು ಗದ್ಗದ ಕಂಠದಿಂನಿನ್ನ ಸ್ತುತಿಸಿದಳು ಆ ದೇವಮಾತೆ 14ತೀರ್ಥಪಾದನೇ ತೀರ್ಥಶ್ರವ ಶ್ರವಣ ಮಂಗಳನಾಮಧೇಯನೇ ಯಜÉÕೀಶ ಯಜÕಪುರುಷಅಚ್ಯುತನೇ ರಕ್ಷಿಸುವಿ ಪ್ರಪನ್ನಪಾಲಕ ನಮೋಶ್ರೀದ ಶ್ರೀಪತೇ ವಿಷ್ಣೋ ಧೀನನಾಥ 15ಅಖಂಡೈಕ ಸಾರಾತ್ಮ ವಿಶ್ವವ್ಯಾಪಕವಿಶ್ವಅಕಳಂಕ ಸರ್ವೋರು ಸಚ್ಚಕ್ತಿಪೂರ್ಣಏಕಾತ್ಮ ಸರ್ವಜÕ ಸುಖಜ್ಞಾನಪ್ರದ ಭೂಮನ್ನಿಖಿಳಗುಣ ಐಶ್ವರ್ಯಪೂರ್ಣ ಹರೇ ಶ್ರೀಶ 16ಅದಿತಿಯ ವ್ರತಾಚರಣೆ ಮೆಚ್ಚಿ ಕಮಲಾಕ್ಷ ನೀಅದಿತಿಯ ಸುತನೆನಿಸಿ ಭವಿಸುವಿ ಎಂದಿಮುದದಿ ಈ ರಹಸ್ಯವ ಪತಿಗೆ ಪೇಳ್ದಳು ಅದಿತಿಆ ದಂಪತಿ ಕೂಡಿ ನಿರೀಕ್ಷಿಸಿದರು ನಿನ್ನ 17ಜಗನ್ನಿವಾಸನೆ ನೀನು ದೇವಮಾತೆಯೊಳುಝಗಝಗಿಸಿಪೊಳೆದಿಯೋ ಉರು ಮಹಾತೇಜಪೊಗಳಲಳವೇ ನಿನ್ನ ಲೀಲಾವತಾರಗಳಅಗಣಿತಮಹಿಮೆಗಳ ದೇವ ದೇವೇಶ18ಸನಾತನನೇ ಅನಘನೇ ಅಜನೇ ಭಗವಂತನೇನೀನು ಅದಿತಿಯಲಿ ಅವತರಿಪುದರಿತುವನರುಹಾಸನ ಹಿರಣ್ಯಗರ್ಭನು ಬಂದುಶ್ರೀನಿಧಿಯೇ ಶ್ರೀಶ ನಿನ್ನನ್ನು ಸ್ತುತಿಸಿದನು 19ಜಯೋರುಗಾಯ ಭಗವನ್ ಉರುಕ್ರಮ ನಮೋಸ್ತುತೇತೋಯಜಾಸನ ಹೀಗೆ ಇನ್ನೂ ಬಹುವಿಧದಿ ಸ್ತುತಿಸಿದತೋಯಜಾಕ್ಷಶಿಪಿವಿಷ್ಟ ವಿಷ್ಣು ಸರ್ವೋತ್ತಮಅಚ್ಯುತಾನಂತೋರು ಶಕ್ತಿಮಯ ನಿನ್ನ 20ಪದುಮಭವ ಸನ್ನುತನೇಆನಂದಮಯನೀನುಪ್ರಾದುರ್ಭವಿಸಿದಿ ಅದಿತಿ ದೇವಮಾತೆಯಲಿಚತುರ್ಭುಜವು ಶಂಖಗದಾಅಬ್ಜಚಕ್ರಪೀತ ಕೆಂಪು ವಸನವನ್ನ ಧರಿಸಿದ್ದಿ 21ಅನುಪಮ ಸುಸೌಂದರ್ಯ ಚಾರ್ವಾಂಗ ಕಾಂತಿಯುನಳಿನಾಯತೇಕ್ಷಣ ಮಕರಕುಂಡಲವುಆನಂದ ಸುಪ್ರಚುರ ವದನಾರವಿಂದವುಏನೆಂಬೆ ಗಂಭೀರವಕ್ಷ ಶ್ರೀವಕ್ಷ 22ವನಮಾಲೆ ಸುಸ್ಫುರತ್ ಕಿರೀಟಾಂಗದಾದಿಗಳುವನಜಾಸನಾಶ್ರಿತ ಕೌಸ್ತುಭಮಣಿಯುಸುನೂಪುರ ತೊಟ್ಟ ಶುಭಮಂಗಳಪಾದನಿನ್ನ ಪ್ರಾದುರ್ಭಾವ ವರ್ಣಿಸಲು ಅರಿಯೆ 23ಸೌರಶ್ರಾವಣಸಿಂಹ ಚಾಂದ್ರ ಭಾದ್ರಪದನೀ ಪ್ರಾದುರ್ಭವಿಸಿದ್ದು ಸಿತಶ್ರಾವಣದ್ವಾದಶಿಚಿತ್ರ ವಾದ್ಯಗಳ ಘೋಷ ಸಿದ್ಧಿ ವಿದ್ಯಾಧರರುಸುರಗಾಯಕರುಗಳ ಗಾಯನ ನೃತ್ಯ 24ಜಯ ಜಯತು ಜಯ ಜಯ ವಾಮನ ವಟುರೂಪಜಯ ಜಯತು ಶಾಶ್ವತ ಸರ್ವಸ್ಥ ವಿಷ್ಣೋಜಯ ಜಯತು ಸರ್ವ ಜಗಜ್ಜನ್ಮಾದಿಕರ್ತಜಯ ಜಯಪರಮಪೂರ್ಣೈಶ್ವರ್ಯ ಜಯತು25ಸುಂದರವಟುವಾಮನ ನಿನ್ನ ನೋಡಿಮಂದಜಾಸನಮಹಾ ಋಷಿವರ್ಯರು ಬಹುಆನಂದಭರಿತರು ಆಗಿ ಸಂಸ್ಕಾರಅಂದದಿ ಚರಿಸಿದರು ವೈದೀಕ ರೀತಿಯಲಿ 26ಬ್ರಹ್ಮಾದಿದೇವರು ಮಹಾಋಷಿಗಳುಪರ-ಬ್ರಹ್ಮ ವಾಮನ ನಿನಗೆ ಉಪನಯನರೂಪಮಹಾಪೂಜೆ ಚರಿಸಿದರು ಮುದಭಕ್ತಿಯಿಂದಲಿಮಹಾರ್ಹನೇ ನಿನಗಿದು ಅವತಾರ ಲೀಲ 27ದೇವವರೇಣ್ಯ ಬ್ರಹ್ಮಣ್ಯದೇವನೇ ನಿನಗೆದೇವತಾವೃಂದವು ನೆರದಿದ್ದ ಮುನಿಗಳುಸಾವಿತ್ರೀಂ ಸವಿತಾ ಭ್ರವೀತ್ ಬೃಹಸ್ಪತಿ ಬ್ರಹ್ಮಸೂತ್ರಂಈ ವಿಧದಿ ಮುದಮನದಿ ಅರ್ಪಿಸಿದರು 28ಕಮಂಡಲ ವೇದಗರ್ಭನು, ಕೃಷ್ಣಾಜಿನಭೂಮಿ, ದಂಡ, ಸೋಮ,ಕುಶಸಪ್ತ ಋಷಿಗಳುಸುಮೇಖಳ ಕಶ್ಯಪ,ಕೌಪೀನಅದಿತಿಯುಉಮಾ ಭಗವತಿಬಿಕ್ಷಾಪಾತ್ರೆ ವಿತ್ತಪನು 29ಈ ರೀತಿ ಮೇಖಳಸೂತ್ರಆಚ್ಛಾದನಛತ್ರ ಕೃಷ್ಣಾಜಿನ ಕಮಂಡಲು ದಂಡಪಾತ್ರೆ ಅಕ್ಷಮಾಲಾದಿ ವಸ್ತುಗಳು ದರ್ಭೆಪರಿಪರಿ ದೇವತೆಗಳು ಅರ್ಪಿಸಿದರು 30ಮಹಾಪೂರುಷ ಶಿಪಿವಿಷ್ಟ ವಾಮನ ವಿಷ್ಣೋಮಹಾದುರ್ಗ ಭೂ ಶ್ರೀಶ ನಿನ್ನ ಉಪನಯನಮಹೋತ್ಸವದ ವೈಭವವು ಹೋಮ ಪೂಜಾದಿಗಳುಮಹಿಯಲ್ಲಿ ಅಸದೃಶವು ಸರ್ವಕಾಲದಲು 31ಸೂತ್ರಮೇಖಳಕೌಪೀನಆಚ್ಛಾದನಛತ್ರಮಾಲಾ ಕಮಂಡಲು ದಂಡಹಸ್ತಚಂದ್ರಾರ್ಕ ಕೋಟ್ಯಮಿತ ಜ್ಯೋತಿರ್ಮಯ ವಟುರೂಪಶ್ರೀರಮಣಪದ್ಮಭವರುದ್ರಾದಿವಂದ್ಯ32ಮಧ್ವಸ್ಥ ಪರ್ವಸ್ಥ ಮತ್‍ಸ್ಥ ವಿಧಿತಾತಜ್ಯೋತಿರ್ಮಯ ತ್ರಿವೃನ್ನಾಮ ವಾಮನ ಮಂತವ್ಯಮೋದಮಯ ಶ್ರೀಯುಕ್ ಪ್ರಸನ್ನ ಶ್ರೀನಿವಾಸಮುದಜ್ಞಾನಧನ ಆಯುರ್ಭಾಗ್ಯದನೇ ಶರಣು 33-ಇತಿ ಪ್ರಥಮಾಧ್ಯಾಯ ಸಂಪೂರ್ಣಂ -ದ್ವಿತೀಯ ಅಧ್ಯಾಯದಾನಪ್ರಕರಣಸಾರಭೂಮಾದಿ ಗುಣನಿಧಿಯೇಅನಘಮಂಗಳರೂಪವಾಮನ ಸುಸೌಂದರ್ಯಸಾರ ಲಕ್ಷ್ಮೀಶಬ್ರಹ್ಮೇಶ ಮುಖವಂದ್ಯ ಶರಣು ಸೌಭಾಗ್ಯದನೆಬ್ರಹ್ಮಾಂಡ ಬಹಿರಂತವ್ರ್ಯಾಪ್ತ ಸರ್ವೇಶ ಪಸರಸಿಜೋದ್ಭವ ಸುರವೃಂದ ಮಹಾಋಷಿಗಳುಮರೀಚಿಸುತ ಮೊದಲಾದ ಸುಧೀಗಳು ನಿನಗೆಚರಿಸಿದ ಉಪನಯನ ರೂಪಮಹೋತ್ಸವವಸ್ವೀಕರಿಸಿ ಜ್ವಲಿಸಿದಿ ಬ್ರಹ್ಮಣ್ಯದೇವ 1ನೋಡಿದ ಮಾತ್ರದಲೆಸುಜನವಿಶ್ವಾಸಿಗಳುಮಾಡಿದ ಪಾಪ ಪರಿಹರಿಪ ನರ್ಮದೆಯದಡ ಉತ್ತರದಲಿ ಯಜÕ ಶಾಲೆಕಟ್ಟಿದೊಡ್ಡಕ್ರತುಮಾಡುತ್ತಿದ್ದನು ಬಲಿರಾಜ2ಮೌಂಜಿಮೇಖಳ ಸೂತ್ರದಿಂದ ಬೆಳಗುತ್ತಸಜಲ ಕಮಂಡಲು ಸುದಂಡ ಛತ್ರಪ್ರಜ್ವಲಿಪ ಚಿನ್ಮಯ ಜಟಿಲ ವಾಮನವಿಪ್ರಯಜÕ ಶಾಲೆಯೊಳು ಪ್ರವೇಶ ಮಾಡಿದಿಯೋ 3ಜ್ವಲಿಸುವ ಸ್ವಕಾಂತಿಯುಕ್ಮಾಯಾಮಾಣವಕಬಾಲ ಸುಂದರ ಬ್ರಹ್ಮಚಾರಿಹರಿನಿನ್ನಬಲಿರಾಜ ಆಚಾರ್ಯ ಶುಕ್ರಾದಿಗಳು ನೋಡಿಬಲುಹರುಷದಲಿ ಎದ್ದು ಸ್ವಾಗತಮಾಡಿದರು 4ಭಗವಂತ ವಾಮನ ನಿನ್ನ ಪಾದದಿಬಲಿಬಾಗಿ ನಮಿಸಿ ಸ್ವಾಗತಂ ತೇ ನಮಸ್ತುಭ್ಯಂಹೀಗೆಂದು ತನ್ನ ಪಿತೃಗಳು ತೃಪ್ತರಾದರುತನ್ನ ಕುಲ ಪಾವಿತವಾಯ್ತೆಂದು ಪೇಳ್ದ 5ವನಜಜಾಂಡದ ಒಡೆಯ ರಾಜರಾಜೇಶ್ವರನೇನಿನ್ನ ಮುಂದೆಕರಮುಗಿದು ಬಲಿರಾಜಧೇನುಕಾಂಚನ ಗ್ರಾಮವಿಪ್ರಕನ್ಯಾದಿಗಳುಏನು ನೀ ವಾಂಛಿಸಿದರೂ ಕೊಳ್ಳಬಹುದೆಂದ 6ಸುಗಮಸುಹೃತ್ ಧರ್ಮಯುಕ್ ಈ ಮಾತಲ್ಲಿಭಗವಂತ ನೀ ಪ್ರೀತನಾದದ್ದು ಪ್ರಕಟಿಸಿಲೋಕದಲಿ ಪ್ರಖ್ಯಾತ ಬಲಿಯ ಕುಲಕೀರ್ತಿಯಪೊಗಳಿದಿಯೋ ಬ್ರಾಹ್ಮಣ ಮಹೇಜ್ಯ ಪರಮೇಶ 7ಆಕಾಶದಲಿ ಆಹ್ಲಾದಕರ ಉಡುಪನುಪ್ರಕಾಶಿಸುವಂತೆ ಪ್ರಹ್ಲಾದನ ಯಶಸ್ಸುಉತ್ಕøಷ್ಟವಾದದ್ದು ವ್ಯಾಪಿಸಿ ಜಗತ್ತಲ್ಲಿಪ್ರಕಾಶಿಸುತೆ ಆ ಕುಲೋತ್ಪನ್ನನು ಬಲಿಯು 8ಮಹಾ ಗದಾಯುಧದಾರಿ ದಿಗ್ವಿಜಯ ಶೂರನುಆ ಹಿರಣ್ಯಾಕ್ಷನ ಅಣ್ಣನು ಆದಪ್ರಹ್ಲಾದಪಿತ ಹಿರಣ್ಯಕಶಿಪು ವೀರನುಮಹೀಯಲ್ಲಿ ಖ್ಯಾತವು ಈ ದೈತ್ಯ ಕುಲವು 9ಆ ಜಗತ್ ಪ್ರಖ್ಯಾತ ಪ್ರದ್ಲಾದನಸುತದ್ವಿಜವತ್ಸಲ ತನ್ನ ಆಯುಷ್ಯವದ್ವಿಜವೇಷದಿ ಬಂದ ಸುರರಿಗೆ ಕೊಟ್ಟಿದ್ದುಮೂರ್ಜಗ ಅರಿವುದುಬಲಿಆ ಕುಲೀನ10ಇಂಥ ಕುಲದಲಿ ಬಂದ ಪ್ರಹ್ಲಾದ ಪೌತ್ರಈ ಧರ್ಮವಂತಬಲಿಎಂದು ನೀ ಪೇಳಿಪದಾನಿ ತ್ರೀಣಿ ದೈತ್ಯೇಂದ್ರ ಸಂಹಿತಾನಿಪದಾಮಮ ಎಂದು ಭೂಮಿ ಯಾಚಿಸಿದಿ 11ನಳಿನಜಾಂಡದ ದೊರೆಹರಿನಿನ್ನ ಮಾಯೆಯಿಂಬಾಲಿಶಮತಿಯೇ ಮೂರಡಿ ಯಾಕೆ ಕೇಳುತಿ ಎಂದಬಲಿಯು ತನ್ನಲಿ ಕೊಂಡವ ಪೂರ್ಣನಾಗುವಮತ್ತೆಲ್ಲೂ ಪುನರ್ಯಾಚಿಸನು ಎಂದು ಪೇಳಿದನು 12ಕರ್ಮಜ ದೇವತಾ ಕಕ್ಷದವ ಬಲಿರಾಜಕರ್ಮನಿಮಿತ್ತದಿ ಸಂಸಾರ ಸುಳಿಯಊರ್ಮಿಗಳಿಗೊಳಗಾದ ಭಕ್ತನಲಿ ಕರುಣಿಸಿದಿಧರ್ಮನೀತಿ ಪೇಳಿದಿ ಶ್ರೀಶ ಮುಕುಂದ 13ಇಂದ್ರಿಯ ಅಭಿಲಾಷೆ ಜಯಿಸದವನ ಆಶೆಗೆಮಿತಿಯಿಲ್ಲ ಬೆಳೆಯುವುದು ಮೇಲು ಮೇಲುಯದೃಚ್ಛಾಲಾಭ ಸಂತುಷ್ಟ ವಿಪ್ರನತೇಜಸ್ಸುವರ್ಧಿಸುವುದು ಮತ್ತು ಸುಖವೀವುದೆಂದಿ 14ಈ ರೀತಿ ಬಲಿರಾಜನಿಗೆ ಇನ್ನೂ ಪೇಳಿಮೂರಡಿ ಮಾತ್ರವೇ ಕೊಳ್ಳುವಿ ಎನಲುಧಾರೆ ಎರೆದು ಕೊಡಲು ಬಲಿಯು ನಿಶ್ಚೈಸಲುಅರಿತು ಶಿಷ್ಯನ ಎಚ್ಚರಿಸಿದ ಶುಕ್ರ 15ವೇದ ವೇದಾಂತಕೋವಿದಶುಕ್ರಾಚಾರ್ಯರುಬುದ್ಧಿ ವಿದ್ಯಾ ನಿಪುಣರು ಕುಶಲ ಕವಿವರರುದೈತ್ಯರಿಗೆ ಕುಲಗುರು ಶ್ರೀದ ಶ್ರೀಹರಿ ನಿನ್ನಭಕ್ತವರ್ಯರು ಎಂದು ನಮಿಪೆ ಸಂತೈಸು 16ಶಿಷ್ಯ ವೈರೋಚನನಿಗೆ ಪೇಳಿದನು ಶುಕ್ರಶ್ರೀಶ ಭಗವಂತನು ವಿಷ್ಣು ಅವ್ಯಯನೆಕಶ್ಯಪ ಅದಿತಿಯಲಿ ಭವಿಸಿ ದೇವತೆಗಳಕಾರ್ಯಸಾಧನಕಾಗಿ ಬಂದಿರುವ ಎಂದ 17ಮತ್ತು ಪೇಳಿದ ಈ ದಾನ ಕೊಡುವುದರಿಂದದೈತ್ಯರಿಗೆ ಅಕ್ಷೇಮ ಬಲಿಯ ಶ್ರೀ ಸ್ಥಾನ ಯಶಸ್ಸುಮೊದಲಾದ ಸರ್ವವೂ ಪೋಗುವವು ಸ್ವರ್ಗ ಸಂ -ಪತ್ತು ಅಧಿಪತ್ಯವ ಶಕ್ರನಿಗೆ ಕೊಡುವ 18ಇಂಥಾಮಾಯಾಮಾಣವಕಹರಿವಾಮನನುಪಾದಎರಡಲಿಧರೆದಿವಿ ಅಳೆದು ಮೂರ-ನೇದನುಬಲಿಕೊಡಲು ಆಗದೆ ನರಕ ಪೋಗು-ವದು ತಪ್ಪಿಸೆ ದಾನ ಕೊಡಬೇಡ ಎಂದ 19ಇನ್ನೂ ಬಹು ವಿಧದಲಿ ದಾನ ಬಗೆ ಶುಕ್ರತನ್ನ ಶಿಷ್ಯನಿಗೆ ಬೋಧಿಸಿದರೂ ಸಹಮನ ಸೋಲದೆ ಬಲಿರಾಜ ಧಾರೆ ಎರೆದುದಾನವ ಕೊಡುವೆನು ಎಂದ ವಿನಯದಲಿ 20ಗುರುಗಳ ಮಾತಲ್ಲಿ ಅನಾದರವ ತೋರಿಸಿದಆ ರಾಜನಿಗೆ ಶಾಪ ಇತ್ತರು ಶುಕ್ರರುಸಿರಿಸ್ಥಾನಾದಿಗಳು ನÀಷ್ಟವಾಗುವದೆಂದುಗುರು ಶಪಿಸಿದರೂ ಬಲಿಯ ಮನ ಚಲಿಸಲಿಲ್ಲ 21ಪ್ರತ್ಯಗಾತ್ಮನೇ ಈಶ ಸರ್ವಪ್ರೇರಕ ಸ್ವಾಮಿಭೃತ್ಯವತ್ಸಲ ನೀನು ಬಲಿಯ ಉತ್ಕಷ್ಟಭಕ್ತಿ ಶ್ರದ್ಧೆ ಸತ್ಯ ಧರ್ಮ ತೋರ್ಪಡಿಸಿದಿಅಂತಃ ಪ್ರೇರಕನಾಗಿಬಲಿಶುಕ್ರರಲ್ಲಿ22ಒಳ್ಳೇ ಮೌಕ್ತಿಕ ಆಭರಣ ಮಾಲಾಧರಳುಶೀಲೆ ಪತ್ನಿ ವಿದ್ಯಾವಳಿ ದೇವಿ ಸಹಿತಬಲಿಸ್ವರ್ಣ ಕಲಶ ಜಲದಿಂದ ನಿನ್ನನಳಿನಪದಯುಗವ ಅವನಿಜಿಸಿದ ಮುದದಿ23ಅಚಲಿತ ಭಕ್ತಿಮಾನ್ ಈ ಮಹಾನ್ ಬಲಿರಾಜಅರ್ಚಿಸಿ ಉದಕದಿಂದಲಿ ಧಾರೆ ಎರೆದುಅಚ್ಯುತನೇ ಶ್ರೀಯಃಪತೇ ವಾಮನ ನಿನಗೆ ನೀಇಚ್ಚೈಸಿದ ದಾನ ಹರುಷದಿ ಕೊಟ್ಟ 24ಮುದಾನ್ವಿತರಾದ ದೇವಗಣ ಗಂಧರ್ವವಿದ್ಯಾದರ ಸಿದ್ಧ ಚಾರಣ ಕಿನ್ನರಾದಿಗಳುದೈತ್ಯೇಂದ್ರಬಲಿಕರ್ತೃಕದಾನ ಆರ್ಜವವಉದ್ಗಾಯನ ಮಾಡಿ ಪುಷ್ಪಮಳೆ ಕರೆದರು 25ಬಲಿನಿನ್ನ ಜಗತ್ಪಾವನ ಪಾದೋದಕವತಲೆಯಲಿ ತಾ ಧರಿಸಿ ಕೊಟ್ಟ ಮೂರಡಿದಾನಮಾಲೋಲ ಸರ್ವೇಶ ವಿಶ್ವರೂಪನೇ ವಿಷ್ಣುಲೀಲೆಯಿಂದಲಿ ಕೈ ನೀಡಿ ವಾಮನ ಸ್ವೀಕರಿಸಿದಿ 26ಮಧ್ವಸ್ಥ ಸರ್ವಸ್ಥ ಮತ್‍ಸ್ಥ ವಿಧಿತಾತಜ್ಯೋತಿರ್ಮಯ ತ್ರಿವೃನ್ನಾಮ ವಾಮನ ಮಂತವ್ಯಮೋದಮಯ ಶ್ರೀಯುಕ್ ಪ್ರಸನ್ನ ಶ್ರೀನಿವಾಸಮುದಜ್ಞಾನಧನ ಆಯುರ್ಭಾಗ್ಯದನೇ ಶರಣು 27-ಇತಿದ್ವಿತೀಯಅಧ್ಯಾಯ ಸಂಪೂರ್ಣಂ-ತೃತೀಯ ಆಧ್ಯಾಯಶ್ರೀ ತ್ರಿವಿಕ್ರಮವಿಜಯಸಾರಭೂಮಾದಿ ಗುಣನಿಧಿಯೇಅನಘಮಂಗಳರೂಪವಾಮನ ಸುಸೌಂದರ್ಯಸಾರ ಲಕ್ಷ್ಮೀಶಬ್ರಹ್ಮೇಶ ಮುಖವಂದ್ಯ ಶರಣು ಸೌಭಾಗ್ಯದನೆಬ್ರಹ್ಮಾಂಡ ಬಹಿರಂತವ್ರ್ಯಾಪ್ತ ಸರ್ವೇಶ ಪಕಿಂಪುರುಷಕಿನ್ನರಚಾರಣ ಗಂಧರ್ವಾದಿಸುಪರ್ವಾಣ ಗಾಯಕರ ಗೀತೆ ವಾದ್ಯಗಳುಶುಭಘೋಷ ಮಾಡುತಿರೆ ಬಲಿರಾಯ ದಾನವಅರ್ಪಿಸಿ ಕೃತಕೃತ್ಯದಿ ನೋಡಿದ ನಿನ್ನ 1ಉರು ಗುಣಾರ್ಣವ ಮಹೈಶ್ವರ್ಯ ನಿಜಸಚ್ಛಕ್ತಿಹರಿವಾಮನ ನೀನು ವರ್ಧಿಸಿ ಅದ್ಭುತದಿಸುಬೃಹತ್ ವಿಶ್ವರೂಪವ ಕಾಣಿಸಿ ನಿಂತಿನೀರುರುಹ ಜಾಂಡಾಂತರ್ ಬಹಿವ್ರ್ಯಾಪ್ತ ವಿಷ್ಣೋ 2ದೋಷದೂರ ನಿನ್ನ ಒಂದು ರೂಪದಿ ಉಂಟುದೋಷವಿಲ್ಲದ ಪೂರ್ಣ ಅಭಿನ್ನ ಅನಂತನಿನ್ನೀಶಶಕ್ತಿಯಿಂ ಎಲ್ಲವ ಅಡಗಿಸಿಅಕ್ಷೋಭ್ಯ ನೀ ಪ್ರಕಟ ಮಾಡುವಿ ಆಗಾಗ 3ಉತ್ತಮ ಮಹಾಮಹಿಮ ನಿನ್ನ ಈ ರೂಪದಿಭೂ ದಿವಿ ದಿಕ್ ಸರ್ವ ಅಧೋಧ್ರ್ವ ಲೋಕಸುತಪಸ್ವಿ ಮುನಿಗಳು ದೇವನರತ್ರಿರ್ಯಗ್ ಸರ್ವಪ್ರತಿಷ್ಠತವಾಗಿರುವುದು ಕಂಡನು ಬಲಿಯು 4ಈ ಮಹಾವಿಭೂತಿ ರೂಪದಿ ಕಂಡ ತನ್ನಆ ಮಹಾಕ್ರತು ಋತ್ವಿಕ್ಕುಗಳಾಚಾರ್ಯಆ ಮುಖದಿ ನೆರೆದಿದ್ದ ಸದಸ್ಯರನ್ನು ಕಂಡತನ್ಮಾತ್ರ ಭೂತೇಂದ್ರಿಯ ಜೀವಯುಕ್ತ 5ಅನಘಾಂಘ್ರಿ ಪದಯುಗದಿ ಜಲಮೇಘ ಅಧಸ್ ಭೂಮಿಕಣುಕಾಲು ಜಾನೂಲಿ ಮಹಾದ್ರಿ ಪಕ್ಷಿಗಳುಘನಉರುದ್ವಯದಿ ಮಾರುತಅಂಬುಕಣಗಳುವರ್ಣಜಾಲ ಮಿಂಚು ಗುಹ್ಯದಲಿ ಸಂಧ್ಯಾ 6ಜಘನದಲಿ ದೈತ್ಯರ ಗುಂಪುಗಳುಹೊಕ್ಕುಳಲಿನಭಕುಕ್ಷಿಯಲಿ ಸಪ್ತಸಿಂಧುನಕ್ಷತ್ರ ಜ್ಯೋತಿರ್ಮಯಮಾಲಾ ಉರದಲಿಅಕಳಂಕ ಹೃದಯದಲಿ ಧರ್ಮ 7ಸ್ತನದಲಿ ಸತ್ಯವು ಮನಸ್ಸಲಿ ಚಂದ್ರನುಅನುಪಮ ವಕ್ಷದಲಿ ಶ್ರೀ ಪದ್ಮಹಸ್ತಕಂಠದಲಿ ಸುಸ್ವರ ಶಬ್ದ ಸಾಮಾದಿಗಳುಕರ್ಣದಲಿ ದಿಕ್‍ಭುಜದಿ ಇಂದ್ರಾದಿಸುರರು 8ನಾಸಿಕ್ಕದಲಿ ಶ್ವಾಸವಾಯು ಕಣ್ಣಲಿಸೂರ್ಯಶಿರಸ್ಸಲಿ ಮೇಘವು ವದನದಲಿ ªಹ್ನಿರಸನದಿ ಜಲೇಶನು ವಾಣಿಯಲಿ ವೇದಗಳುನಿಷೇಧವಿಧಿಶಾಸನ ಹುಬ್ಬು ಎರಡಲ್ಲೂ9ರೆಪ್ಪೆಯಲಿ ಅಹೋರಾತ್ರಿ ಕ್ರಮಣದಲಿ ಯಜÕವುಸುಪುಷ್ಟದಿ ಅಧರ್ಮ ಸ್ಪರ್ಶದಿ ಕಾಮಲೋಭವು ಅದsÀರದಿ ಮಾಯೆಯು ಹಾಸದಲಿಕೋಪ ಲಲಾಟದಲಿಅಂಬುರೇತಸಲಿ10ಮೃತ್ಯು ಛಾಯೆಯಲ್ಲಿ ಓಷಧಿ ರೋಮದಲಿನದಿಗಳು ನಾಡಿಯಲಿ ಕಲ್ಲು ನಖದಲಿಇಂದ್ರಿಯಗಳಲ್ಲಿ ದೇವಗಣ ಋಷಿ ಸಮೂಹವುಬುದ್ಧಿಯಲ್ಲಿಅಜಗಾತ್ರದಲಿ ಚರಾಚರವು11ಉರುಕ್ರಮ ವಿಶ್ವಮೂರ್ತಿ ವಾಮನ ವಿಭೋಪರಮಪೂರುಷ ನೀನೀರೂಪತೋರಿಸಲುನೆರೆದಿದ್ದ ಅಸುರರು ವಿಸ್ಮಯದಿ ನೋಡುತ್ತಬೆರಗಾಗಿ ನಿಂತರು ಏನೂ ತೋರದಲೆ 12ಸುದರ್ಶನ ಚಕ್ರ ಪಾಂಚಜನ್ಯವು ಶಂಖಕೌಮೋದಕೀ ಗದಾಶಾಙ್ರ್ಗ ಮಹಾಧನುಸ್ಸುಬತ್ತಳಿಕೆಗಳುಅಕ್ಷಯಸಾಯಕವುಕತ್ತಿಖೇಟಕಮುಖ್ಯ ವಿಷ್ಣು ಆಯುಧಗಳು13ಅಸಹ್ಯ ತೇಜೋಯುತ ಚಕ್ರ ಮೊದಲಾದಈಶ ನಿನ್ನಯ ಆಯುಧಗಳು ಇರಲುಪಾಶ್ರ್ವದಿ ನಿಂತಿದ್ದರು ಆನಂದಾದಿಪಾರ್ಷದರು ಸಹ ಲೋಕಪಾಲಕರು ಎಲ್ಲಾ 14ಸ್ಫುರದ್ ಕಿರೀಟಾಂಗದ ಮೀನ ಕುಂಡಲವುಉರದಿ ಶ್ರೀವತ್ಸ ರತ್ನೋಜ್ವಲ ಮೇಖಳಾದಿಗಳುಪೀತಾಂಬರ ಮಾಲೆ ಧರಿಸಿ ಪ್ರಜ್ವಲಿಸಿದಿಉರುಕ್ರಮ ಹರೇ ಶ್ರೀಶ ಭಗವಂತ ವಿಷ್ಣೋ 15ರಾಜರಾಜೇಶ್ವರ ತ್ರಿವಿಕ್ರಮ ನಿನ್ನೊಂದುರಾಜೀವಪಾದದಿಂದಕ್ಷಿತಿಸರ್ವ ಅಳೆದಿಭುಜ ಶರೀರದಿ ಆಕ್ರಮಿಸಿದಿನಭದಿಕ್ಕುಹೇ ಜಗದೀಶನೇ ನಮೋ ನಮೋ ಶರಣು 16ದ್ವಿತೀಯಪಾದದಿ ನೀನು ದ್ಯುಲೋಕ ಸ್ವರ್ಗಾದಿಸತ್ಯ ಲೋಕೋ¥ರಿ ವ್ಯಾಪಿಸಿ ನಿಲ್ಲಲುತೃತೀಯ ಪಾದಕೆ ಸ್ಥಳ ಅಣ್ವತಿ ಇಲ್ಲವುಎಂದರಿತ ಆ ಮಹಾಬಲಿ ದಾನಶೂರ 17ತ್ರಿವಿಷ್ಟಪ ಮಹರ್ಜನೋ ತಪ ಸತ್ಯಲೋಕಗಳತ್ರಿವಿಕ್ರಮ ನಿನ್ನಯ ಪಾದವು ವ್ಯಾಪಿಸಿತೀವ್ರ ಸರಸಿಜಜಾಂಡಕಟಾಹಭೇದಿಸೆ ಬ್ರಹ್ಮಅವನಿಜಸಲಾ ಪಾದದಿಂ ಗಂಗೆ ಪಡೆದಿ 18ಸತ್ಯಲೋಕವು ನಿನ್ನನಖಕಾಂತಿಯಿಂದಜ್ಯೋತಿಯಲಿ ಮುಳುಗಲು ಬ್ರಹ್ಮದೇವಎದ್ದು ಬಂದು ಪಿತ ನಿನ್ನ ಪಾದವ ಕಂಡುಅತಿ ಮುದದಿ ಪೂಜಿಸಿದ ಪರಿವಾರ ಸಹಿತ 19ಬ್ರಹ್ಮಸಹ ವಂದಿಸಿದರು ನಿನ್ನ ಮರೀಜಾದಿಮಹಂತರು ಸನಕಾದಿಯೋಗಿಗಳು ಸರ್ವಮಹಾಪುರಾಣ ಸಂಹಿತ ವೇದ ವೇದಾಂಗದಿಮಹಾಸದಾಗಮ ದೇವತಾ ಸಮೂಹ 20ಕಮಂಡಲದಿ ಜಲ ಪೂರೈಸಿಹರಿನಿನ್ನಕಮಲಪಾದಕೆ ಆಘ್ರ್ಯಪಾದ್ಯಾದಿ ಪೂಜೆನೇಮದಿ ಅತಿಮುದ ಭಕ್ತಿಯಿಂದಲಿ ಜೀವೋ -ತ್ತಮ ಬ್ರಹ್ಮ ಮಾಡಿದನು ನಿಜ ಪುಣ್ಯಶ್ಲೋಕ 21ತ್ರಿವಿಕ್ರಮನೇ ನಿನ್ನಯ ಪಾದತೀರ್ಥವೇ ಗಂಗಾಪವಿತ್ರತಮವೆಂದು ತ್ರಿಲೋಕದಲಿ ಪ್ರಸಿದ್ಧದೇವ ದೇವೋತ್ತಮನೇ ಅದ್ಭುತ ಮಹಾಮಹಿಮಪೂರ್ವವೋಲ್ ನಿಂತಿ ವಾಮನ ರೂಪದಲಿ 22ಕಮಲಾಸನಾದಿಗಳು ಲೋಕಪಾಲಕರೆಲ್ಲತಮ್ಮ ತಮ್ಮ ಅನುಚರ ಸುರರ ಸಮೇತನರ್ಮದಾ ತೀರಸ್ಥ ಬಲಿಯಕ್ರತುಶಾಲೆಯಲಿವಾಮನನೆ ನಿನ್ನ ಬಳಿ ಬಂದು ತುಂಬಿದರು 23ಜಯ ಜಯ ಜಯತು ಅನಂತ ಮಹಿಮನೆ ನಿನ್ನತೋಯಜೋದ್ಭವ ಮೊದಲಾಗಿ ಸುರವರರುಅಘ್ರ್ಯಪಾದ್ಯ ಗಂಧ ಧೂಪ ದೀಪಮಾಲಾನೃತ್ಯಗಾಯನದಿ ಪೂಜಿಸಿದರು ಮುದದಿ 24ಆನಂದ ಉಕ್ಕುವ ಭಕ್ತಿಯಿಂದಲಿ ನಿನ್ನಅನಂತ ಮಹಾತ್ಮ್ಯ ಕೊಂಡಾಡಿ ಸುತ್ತಿಸಿಸುಧ್ವನಿಯಲಿ ಜಯಘೋಷ ಮಾಡಿದರುದುಂದುಭಿಭೇರಿಶಂಖಗಳ ಬಾರಿಸುತ25ಬ್ರಹ್ಮದೇವನ ಸುತ ಜಾಂಬವಂತನು ಆಗಮಹಾಭೇರಿ ಶಬ್ದಿಸಿ ದಿಕ್ಕು ವಿದಿಕ್ಕುಮಹಾರ್ಹ ವಾಮನ ನಿನ್ನ ವೈಭವ ಕೊಂಡಾಡಿದ್ದುಮಹೋತ್ಸವ ಎಂದರು ಮುದದಿ ಸಜ್ಜನರು 26ಸಜ್ಜನರು ಸುರರೆಲ್ಲಾನಂದ ಭರಿತರು ಆಗೆದುರ್ಜನ ದೈತ್ಯರು ನಿಂದಿಸಿ ವಾಮನನುದ್ವಿಜರೂಪಿ ಮಾಯಾವಿ ವಿಷ್ಣು ಸುರಕ್ಷಪಕ್ಷನುವಂಚಕನು ಎನ್ನುತ್ತ ಅರ್ಭಟಮಾಡಿದರು 27ಸತ್ಯಧರ್ಮನುಬಲಿತಡೆದರೂ ಮೀರಿದೈತ್ಯರು ಅಚ್ಯುತನ ಕೊಲ್ಲಲು ಬಾರೆಜಯವಿಜಯವಿಷಕ್ಸೇನಾದಿಸುರರುದೈತ್ಯರಲಿ ಬಹು ಜನರ ಕೊಂದುಹಾಕಿದರು 28ನಂದ ಸುನಂದಜಯವಿಜಯಬಲಪ್ರಬಲಪತತ್ರಿಪಕುಮುದಕುಮುದಾಕ್ಷ ಜಯಂತಶೃತದೇವ ಪುಷ್ಪದಂತ ವಿಷಕ್ಸೇನಸಾತ್ವತಾದಿ ಸರ್ವರ ಶೌರ್ಯ ಏನೆಂಬೆ 29ವಿಪ್ರಚಿತ್‍ಯಾದಿ ದೈತ್ಯರಿಗೆ ಪೇಳಿದಬಲಿಪ್ರಭು ಭಗವಂತನ ಇಚ್ಛಾನುಸಾರವೇಲಭಿಸುವುದು ಸರ್ವವು ಜಯವು ಅಪಜಯವುಲಭಿಸಲು ಜಯ ಈಗಕಾಲಅಲ್ಲವೆಂದು30ಸಾತ್ವಿಕ ಧರ್ಮವಾನ್ಬಲಿಇನ್ನೂ ಬೋಧಿಸಲುಯುದ್ಧದಲಿ ತಾಡಿತ ದೈತ್ಯರು ಪಾತಾಳಯೈದಿದರು ಬೇಗನೆ ಏನೆಂದು ವರ್ಣಿಸುವೆಸದ್ಧರ್ಮ ಸುಜ್ಞÕನಿ ಭಕ್ತಬಲಿಗುಣವ31ಪದುಮಜಾಂಡದ ಪ್ರಭುವೇ ನಿನ್ನಾಜÉÕಯಿಂ ಗರುಡಬಂಧಿಸಿದ ವರುಣ ಪಾಶದಲಿ ಬಲಿಯಬಂಧಿಸಲು ಮಹಾಧ್ವನಿ ಹಾಹಾಕಾರವುಎದ್ದಿತು ದಿಕ್ಕು ವಿದಿಕ್ಕು ಸರ್ವತ್ರ 32ಬ್ರಷ್ಟ ಶ್ರೀ ಸ್ಥಿರಪ್ರಜÕ ಮಹಾಯಶಸ್ವಿ ಬಲಿಯವಿಷ್ಣು ಪ್ರಭವಿಷ್ಣು ವಾಮನ ನೀ ಕೇಳ್ದಿಅಷ್ಟು ಸ್ಥಳಗಳು ಎರಡು ಪಾದದಲಿ ಅಡಗಿದವುಕೊಟ್ಟು ಪೂರೈಸು ಮೂರನೇಪಾದಎಂದು33ಹೇಳಿದಂತೆ ಕೊಡದಿದ್ದರೆ ನಿರಯದಲಿಬೀಳ ಬೇಕೆಂಬುವುದು ಗುರುಗಳೊಪ್ಪುವರುಹೇಳಿದಂತೆ ಕೊಡು ಮೂರನೇಪಾದಸ್ಥಳಇಲ್ಲದಿದ್ದರೆ ನರಕ ಹೋಗು ಎಂದಿ ಬಲಿಗೆ 34ಪದಂ ತೃತೀಯಂ ಕುರು ಸೀಷ್ರ್ಣ ಮೇ ನಿಜಂಎಂದು ಪೇಳುತಬಲಿವರುಣಪಾಶಬಂಧಕೂ ನಿರಯಕೂ ಶೋಕದಿ ಅಂಜುವನಲ್ಲಸಾಧುಸತ್ಯದ ಕೊರತೆಗೇವೆ ಅಂಜುವೆನೆಂದ 35ನೈವಾರ್ಥ ಕೃಛ್‍ರಾಧ್ ಭವತೋ ವಿನಿಗ್ರಹಾದ ಸಾಧು ವಾದಾದ್ ಭೃಷ ಮೃದ್ವಿಜೇಯಥಾಎನ್ನುತಬಲಿಮತ್ತು ತನ್ನ ಕುಲಹಿರಿಯರುನಿನ್ನೊಲಿಸಿಕೊಂಡ ವಿಧ ಸ್ಮರಿಸಿ ಪೇಳಿದನು 36ಉತ್ತಮ ಶ್ಲೋಕ ಹರೇ ಪರಮಗುರು ನಿನ್ನಭಕ್ತವರ್ಯನು ಸಾಧು ಪ್ರಿಯ ಸತ್ಯಧರ್ಮಪ್ರಹ್ಲಾದ ಸರ್ವ ಐಹಿಕ ವಸ್ತು ಸಂಸೃತಿಹೇತುಎಂದು ನಿನ್ನ ಪದ್ಮಾಂಘ್ರಿಯಲ್ಲೇ ರತನಾದ37ಇನ್ನೂ ಬಹುವಾಗಿಬಲಿಭಕ್ತಿಯಿಂ ಮಾತಾಡೆಶ್ರೀನಿಧಿ ನಿನ್ನ ಪ್ರಿಯ ಪ್ರೇಮಿ ಪ್ರಹ್ಲಾದಪೂರ್ಣೇಂದು ಉದಿಸಿದಂದದಿ ಬಂದು ನಿಂತನುಹೊನ್ನು ವಸನಾಬ್ಜಾಕ್ಷ ಸುಂದರ ವಿಗ್ರಹನು 38ಬಂಧಿತಬಲಿಪಿತಾಮಹ ಪ್ರಹ್ಲಾದನಿಗೆಮೂಧ್ರ್ನಾ ನಮಿಸಿದನು ನೇತ್ರಾಂಬು ತುಳಕೆಪದ್ಮಜ ಸುನಂದೇಶನಂದಾದ್ಯುಪಾಸಿತಇಂದಿರೇಶನೆ ನಿನಗೆ ನಮಿಸಿದ ಪ್ರಹ್ಲಾದ 39ಮೋದಬಾಷ್ಪದಿ ನಮಿಸಿ ಪೇಳಿದನು ನೀಬಲಿಗೆಇಂದ್ರಪದ ಕೊಟ್ಟಿದ್ದಿ ಕೊಂಡೀಗ ಅದನ್ನೇಘಾತಕ ಮೋಹಕ ಶ್ರೀ ಕಳೆದು ಅನುಗ್ರಹ ಮಾಡಿದಿಎಂದು ನಮಿಸಿದ ಜಗದೀಶ್ವರನೇ ನಿನಗೆ 40ನಾರಾಯಣಅಖಿಳಲೋಕ ಸಾಕ್ಷಿಯೇ ನಿನಗೆಈ ರೀತಿ ಪ್ರಹ್ಲಾದ ಪೇಳಿದ ತರುವಾಯವಾರುಣದಿ ತನ್ನಪತಿಕಟ್ಟಿಲ್ಪಟ್ಟಿದ್ದು ಕಂಡುಕರಮುಗಿದು ನಮಿಸಿದಳು ನಿನಗೆಬಲಿಜಾಯಾ41ಇಂದ್ರಸೇನ ಎಂಬ ಮತ್ತೊಂದು ಹೆಸರುಂಟುಬಂಧಿತ ಬಲಿರಾಜನಿಗೆ ತತ್ಪತ್ನಿವಿಂದ್ಯಾವಳಿ ದೇವಿ ಭಯ ಭಕ್ತಿಯಿಂದಉಪೇಂದ್ರ ನಿನಗೆ ಬಿನ್ನೈಸಿದಳು ನಮಿಸಿ 42ಆನಂದಮಯಪೂರ್ಣಕಾಮ ಪ್ರಭು ನೀನುವನರುಹಭವಾಂಡವ ಕ್ರೀಡಾರ್ಥ ಪಡೆದಿಅನನ್ಯಾಧೀನ ಸ್ವತಂತ್ರ ಸರ್ವೇಶನುನೀನೇವೆ ಸರ್ವಕರ್ತನು ಅನ್ಯರಲ್ಲ 43ನೀನೇವೇ ಬ್ರಹ್ಮಾಂಡ ದೊರೆಕರ್ತಆಗಿರಲುಅನ್ಯರಿಗೆ ಕರ್ತೃತ್ವ ಸ್ವಾಮಿತ್ವವಿಲ್ಲತಾನು ದೊರೆ ಕೊಂಡಿಹೆ ಕೊಟ್ಟಿಹೆ ಬಿಟ್ಟಿಹೆ ಎಂಬಹೀನ ಅಹಂಕಾರ ಮಾತು ಅಸಂಗತವು 44ದೇವ ದೇವನೇ ನಿನ್ನ ನಾಭಿಜ ಬಿನ್ನೈಸಿದಅವಿಕ್ಲವ ಮನದಿಂದ ಸರ್ವಸ್ಥ ನಿನಗೆನಿವೇದಿಸಿದಬಲಿರಕ್ಷಣಾರ್ಹನಾಗಿಹನುಸರ್ವಸ್ವಾಮಿಯೇ ಭೂತಭಾವನಭೂತೇಶ45ಮಂದನಾದರು ಅರ್ಪಿಸೆ ನಿನ್ನ ಪದಯುಗದಿಭಕ್ತಿಯಿಂ ದೂರ್ವಾಂಕುರ ಸಲೀಲವಾದರೂಉತ್ತಮ ಸೌಭಾಗ್ಯಗತಿ ಈವಿ ಅಂಥವಗೆಂದುಖ್ಯಾತ ಮೂರ್ಜಗದಿ ಕೊಂಡಾಡುತಿಹರೆಂದು 46ಪದ್ಮಜಗೆ ನೀ ಪೇಳ್ದಿ ಈಬಲಿಮಹಾರಾಜಅತಿ ಕಷ್ಟಕೊಳಗಾದ ಶತ್ರು ಪೀಡಿತನುಶಪ್ತನಾಗಿ ಸ್ಥಾನ ಕಳಕೊಂಡರೂ ಸಹಸತ್ಯವಾಕ್ ತ್ಯಜಿಸದ ಸದ್ಧರ್ಮವಂತ 47ಸುವ್ರತ ಈ ಬಲಿಗೆ ಅಮರರಿಗೂ ದುಷ್ಪ್ಮಾಪ್ಯಸಾವರ್ಣಿ ಮನು ಕಲ್ಪದಿ ಇಂದ್ರ ಪದವಈವಿ ನೀ ಎಂದು ಅವ ಆ ಕಾಲದವರೆಗಿರಲಿವಿಶ್ವಕರ್ಮ ನಿರ್ಮಿತ ಸುತಲಿದಿ ಎಂದಿ 48ಆಧಿ ವ್ಯಾಧಿ ಶ್ರಮ ಉಪದ್ರವಗಳಿಲ್ಲ -ದಂಥ ಸುತಲದಲಿ ಸುಖದಿಂದಿರಲಿಎಂದು ನೀ ಬ್ರಹ್ಮನಿಗೆ ಪೇಳಿ ಬಲಿಯನು ನೋಡಿಇಂದ್ರಸೇನ ಮಹಾರಾಜ ಭದ್ರಮಸ್ತುತೆ ಎಂದಿ 49ಸುತಲದಲಿ ಪರಿವಾರ ಸ್ವಜನರಿಂದೊಡಗೂಡಿಭದ್ರದಿ ಸೌಭಾಗ್ಯದಿ ವಾಸಮಾಡುದೈತ್ಯಶತ್ರುಗಳು ಕಾಟಕೊಟ್ಟರೆಅವರಕತ್ತರಿಸುವುದು ಸುದರ್ಶನವು ಎಂದಿ 50ಸದಾ ಸನ್ನಿಹಿತನಾಗಿದ್ದು ರಕ್ಷಿಸುವಿಸದಾ ನಿನ್ನ ದರ್ಶನ ಮಾಡಬಹುದುದೈತ್ಯರ ಸಂಗದಿಂ ಅಸುರಭಾವ ಬಂದರೆ ನಿನ್ನಸುದರ್ಶನದಿ ಅದು ಪೋಪುದು ಎಂದಿ 51ಮಹೈಶ್ವರ್ಯಪೂರ್ಣಹರಿನಿನ್ನ ಮಾತುಕೇಳಿಮಹಾನುಭಾವನು ಸಾಧುಪ್ರಿಯ ಬಲಿರಾಯಮಹಾನಂದ ಬಾಷ್ಪವ ಸುರಿಸುತ್ತ ಸ್ತುತಿಸಿದಮಹಾಕೃಪಾಂಬುಧೇ ಭಕ್ತವತ್ಸಲ ನಿನ್ನ 52ಅನತೇಷ್ಟಪ್ರದ ಪ್ರಪನ್ನಪಾಲಕ ವಿಭೋತನಗೆ ಪೂರ್ವದಿ ಲೋಕಪಾಲಕರ್ಗೆ ಸಿಕ್ಕದಅನುಗ್ರಹ ಮಾಡಿರುವಿ ಅಸುರನು ತಾನುಎನ್ನುವದು ಎಣಿಸದೆÀ ಕೃಪೆ ಮಾಡಿದಿ ಎಂದ 53ಕೃತಜÕ ಭಕ್ತನುಬಲಿಹರಿನಿನಗೆ ನಮಿಸಿದನುಪದುಮಭವಗೂ ಸದಾಶಿವಗೂ ನಮಿಸಿದನುಬಂಧಿಸಿದ ವರುಣಪಾಶವು ಬಿಟ್ಟು ಹೋಯಿತುಹೇ ದಯಾನಿಧೇ ನಿನ್ನ ಕರುಣದಿಂದಲ್ಲೆ 54ಈ ರೀತಿ ಹರಿವಾಮನ ನೀನು ಕ್ರೀಡಿಸಿದಿಶಕ್ತನಿಗೆ ಸ್ವರ್ಗಾಧಿಪತ್ಯ ಪುನರಿತ್ತಿಸುರಮಾತೆ ಅದಿತಿಗೆ ಪಯೋವ್ರತ ಫಲವಿತ್ತಿಸರ್ವಜಗತ್ತಿಗೆ ಸುಕ್ಷೇಮಒದಗಿಸಿದಿ 55ಸಿರಿಧರಾಪತಿ ವಿಷ್ಣು ಶಿಪಿವಿಷ್ಣು ವಾಮನಹರಿನಿನಗೆ ಮೂರಡಿ ಸ್ಥಳ ದಾನ ಕೊಟ್ಟುಮೂರನೇಪಾದತನ್ನ ಶಿರ ಮೇಲೆ ಇಡು ಎಂದಧೀರ ಬಲಿಗೆ ಭಾವಿ ಇಂದ್ರಪದವಿತ್ತಿ 56ಇನ್ನಾರಿಗೂ ಈ ಸಮಯದಿ ಸಿಕ್ಕದನಿನ್ನಯ ಮಹವಿಶೇಷ ಪ್ರಸಾದ ಕೊಟ್ಟಿರುವಿವನಜಭವ ಶಿವ ವಂದ್ಯಹರಿನೀನು ರಕ್ಷಕನುನೀನೆಲ್ಲಿ ನಾವು ಅಸುರರು ಎಲ್ಲಿ ಸ್ವಾಮಿ 57ಜಗತ್ ಸೃಷ್ಟ್ಯಾದಿಗಳ ಲೀಲೇಯಿಂದಲಿ ಮಾಳ್ಪಿಸರ್ವಗ ಸಮ ಅವಿಕ್ರಯ ವಿವಿಧಫಲದಹೀಗೆ ಇನ್ನೂ ಬಹು ತತ್ವನಿಬಿಡ ಸ್ತೋತ್ರಉಕ್ಕುವ ಭಕ್ತಿಯಲಿ ಮಾಡಿದ ಪ್ರಹ್ಲಾದ 58ವತ್ಸಪ್ರಹ್ಲಾದ ಭದ್ರಂತೇ ಎನ್ನುತಸುತಲಕೆಬಲಿಸಹ ಪೋಗಿ ಸುಖಿಸುವುದುಗದಾಪಾಣಿ ನಿನ್ನನ್ನುನಿತ್ಯನೋಡಿ ಮಹಾ-ನಂದ ಹೊಂದಿಕರ್ಮಕಳೆಎಂದು ಪೇಳ್ದಿ59ಸಾಧುಪ್ರಿಯ ಪ್ರಖ್ಯಾತ ಪ್ರಹ್ಲಾದ ಬಲಿರಾಜಪ್ರದಕ್ಷಿಣಿ ನಮಸ್ಕಾರ ಭಕ್ತಿಯಿಂ ಮಾಡಿಆದಿ ಪೂರಷ ನಿನ್ನ ಅನುಜÉÕೀಯ ಕೊಂಡುಪೋದರು ಸುತಲಕ್ಕೆ ಮಹಾಬಿಲ ದ್ವಾರ 60ಮಧ್ಯದಲೆ ತಡೆಯಾದ ಬಲಿಯಜÕ ಪೂರೈಸೆಯಜÉÕೀಶ ಯಜÕ ಪೂರುಷ ಭೂಮ ನೀನುಆಜÉÕ ಮಾಡಲು ಶುಕ್ರಾಚಾರ್ಯ ಬ್ರಾಹ್ಮಣರೊಡೆಯಜÕ ಕರ್ಮವ ಸಾಂಗ ಪೂರ್ಣ ಮಾಡಿದರು 60ಬ್ರಹ್ಮ ಶಿವ ದಕ್ಷ ಮನು ಬೃಗ್ ವಾಂಗೀರಾದಿಗಳುಕುಮಾರ ದೇವರ್ಷಿಗಳು ಪಿತೃ ಭೂಮಿಪ ಸರ್ವರುವಾಮನನೇ ಲೋಕೈಕಪತಿಪಾಲಕನೆನುತ ನಿನಗೆನಮಿಸಿ ತೋಷಿಸಿದನು ಅದಿತಿ ಕಶ್ಯಪರು 62ಸರ್ವಲೋಕಂಗಳಿಗೂ ಸರ್ವವೇದಂಗಳಿಗೂಸರ್ವದೇವತೆಗಳಿಗೂ ಧರ್ಮ ಯಶಸ್‍ಸಿರಿಗೂಸರ್ವಸುವ್ರತಗಳಿಗೂ ಸ್ವರ್ಗಾಪವರ್ಗಕ್ಕೂಸರ್ವವಿಭೂತಿಪತಿಮಂಗಳ ಉಪೇಂದ್ರ63ಪದುಮಜನು ಅನುಮೋದಿಸಿ ಇಂದ್ರ ಬೇಡಲುನೀ ದೇವಯಾನದಿ ಇಂದ್ರ ಸಹ ಕುಳಿತುತ್ರಿದಿವ ಸೇರಿದಿ ಇಂದ್ರೇಂದ್ರ ಉಪೇಂದ್ರ ಆ -ನಂದಮಯ ಜಗದೀಶ ಶ್ರೀಪತೇ ಭೂಮನ್ 64ಅದಿತಿ ದೇವಿಯ ಹೊಗಳಿ ವಿಷ್ಣು ವಾಮನ ನಿನ್ನಅದ್ಭುತ ಮಹಿಮೆ ಕೊಂಡಾಡಿ ಕೀರ್ತಿಸುತಪದುಮಭವ ಶಂಕರ ಭೃಗ್‍ವಾದಿಮುನಿಪಿತೃ ಸಿದ್ಧರು ಸ್ವಸ್ವಸ್ಥಾನಯೈದಿದರು 65ವಾಮನನು ವಿಶ್ವರೂಪ ಪ್ರಕಟಿಸಿ ದಾನವಸ್ತುಭೂಮಿ ದಿವಿಯ ಈರಡಿಗಳ ವ್ಯಾಪಿಸಿದ್ದುನೇಮಿ ವಿಪ್ರಚಿತ್ತಿ ಪೇಳಿದ ಮಾಯಾಜಾಲವು ಅಲ್ಲವಿಷಮ ವಸ್ತುವ ದೋಷ ಕಿಂಚಿತ್ತೂ ಅಲ್ಲ 66ಪ್ರಾಥಮಿಕವಾಗಿ ಶ್ರೀ ವಿಷ್ಣುರೂಪಒಂದೊಂದಲೂಅನಂತರೂಪಗಳು ಸುಖಜ್ಞಾನಾದಿ ಪೂರ್ಣವಾಗಿಶಶ್ವದೇಕ ಪ್ರಕಾರವಾಗಿ ಇಹುದೆಂದು ಶಾಸ್ತ್ರ ಸಾರುತಿವÉಸ್ವತಃ ಅವ್ಯಕ್ತಹರಿಪ್ರಕಟಿಸುವ ಸ್ವೇಚ್ಛೆಯಿಂ ಆಗಾಗ67ಅಣೋರಣಿಯಾನ್ ಮಹತೋ ಮಹೀಯಾನ್ತನ್ನ ವಾಮನ ರೂಪದಲ್ಲೇ ತನ್ನ ವಿಶ್ವರೂಪತಾನೇ ವ್ಯಕ್ತ ಮಾಡಿದನು ವಿಷ್ಣು ವ್ಯಾಪನಶೀಲಗುಣರೂಪ ಅಭಿನ್ನ ಅವ್ಯಯನು 68ಮತ್ತೂ ಬಲಿರಾಜನಿಗೆ ಶ್ರುಕ್ರಾಚಾರ್ಯರುಮೊದಲೇವೇ ಹೇಳಿದರು ವಾಮನನು ವಿಷ್ಣು ಅವ್ಯಯನುಇಂದ್ರನಿಗೆ ಪುನಃ ರಾಜ್ಯ ಕೊಡಲಿಕ್ಕೆ ದಾನಕೇಳಿಕ್ಷಿತಿದಿವಿ ಸರ್ವವ ಎರಡು ಪಾದದಿಂ ಅಳೆವನೆಂದು69ಈ ರೀತಿ ಬಲಿರಾಜ ದಾನಕೊಡುವ ಪೂರ್ವದಲೆಹರಿವ್ಯಾಪನಶೀಲ ವಿಷ್ಣುವೇವೇ ವಾಮನನೆಂದುಅರಿತೇವೇಶಕ್ರಸಾಧಕ ದಾನ ಕೊಟ್ಟಿಹನುಮುಚ್ಚುಮರೆ ವಿಷಯ ವಂಚನೆಗೆ ಸಿಲುಕಲಿಲ್ಲ 70ಮೋಸಕ್ಕೆ ಒಳಗಾಗಿ ಅಲ್ಲ ಮನಸಾ ತಿಳಿದೇಅಸುರರಿಪು ವಿಷ್ಣುಗೆ ಬಲಿರಾಜ ತಾನೇಈಶಾರ್ಪಣಜಗತ್ರಯದಾನ ಕೊಟ್ಟಿಹನುಎಂದು ಹೇಳಿ ಕೀರ್ತಿಸಿದರು ದೇವಗಾಯಕರು 71ಕಿನ್ನರಕಿಂಪುರುಷಗಂಧರ್ವರು ಕೊಂಡಾಡಿದರುಮನಸ್ವಿನಾನೇನ ಕೃತಂ ಸುದುಷ್ಕರಂವಿದ್ವಾನ್ ಅದಾದ್ ಯದ್ರಿಪವೇ ಜಗತ್ರಯಂಏಕೋನ ವಿಂಶತ್ ಅಧ್ಯಾಯ ಶ್ಲೋಕ ಇಪ್ಪತ್ತು 72ಬಲಿರಾಜನು ರಾಣಿ ವಿಂದ್ಯಾವಳಿಯುಅಲ್ಲಿ ಬಂದ ಪ್ರಹ್ಲಾದ ಮಹಾರಾಜನುಪ್ರಲಂಭನ ವೈಷಮ್ಯ ವಾಮನ ಮಾಡಲಿಲ್ಲಬಲಿಗೆ ಮಹಾ ಅನುಗ್ರಹ ಮಾಡಿದಿ ಎಂದು ತಿಳಿದಿಹರು 73ಶಿಪಿವಿಷ್ಟ ವಾಮನ ತ್ರಿವಿಕ್ರಮನೆ ನಿನ್ನಸುಪವಿತ್ರ ಚರಿತೆ ಇದುಕೇಳಿಪಠಿಸುವರ್ಗೆಪಾಪ ಪರಿಹಾರವುಶುಭಮಂಗಳವಿತ್ತುಸೌಭಾಗ್ಯಪ್ರದ ಶ್ರೀಶ ಸದ್ಗತಿ ಈವಿ 74ಮಧ್ವಸ್ಥ ಸರ್ವಸ್ಥ ಮತ್‍ಸ್ಥವಿಧಿತಾತಜ್ಯೋತಿರ್ಮಯ ತ್ರಿವೃನ್ನಾಮ ವಾಮನ ಮಂತವ್ಯಮೋದಮಯ ಶ್ರೀಯುಕ್ ಪ್ರಸನ್ನ ಶ್ರೀನಿವಾಸಮುದಜ್ಞಾನಧನ ಆಯುರ್ಭಾಗ್ಯದನೇ ಶರಣು 75- ಇತಿ ತೃತೀಯ ಅಧ್ಯಾಯ ಸಂಪೂರ್ಣಂ -
--------------
ಪ್ರಸನ್ನ ಶ್ರೀನಿವಾಸದಾಸರು
ಪ್ರಸನ್ನ ಶ್ರೀಪಾದರಾಜರ ಅಣು ಚರಿತೆ103ಪ್ರಥಮ ಕೀರ್ತನೆಶ್ರೀ ಪಾದರಾಜಗುರು ಸಾರ್ವಭೌಮರಪಾದನಾಪೊಂದಿ ಶರಣಾದೆ ಎಮ್ಮ ಪಾಲಿಪರುಶ್ರೀಪ ನರಹರಿಶಿಂಶುಮಾರಹಯಮುಖರಾಮಗೋಪಿವಲ್ಲಭ ರಂಗ ಒಲಿದಿಹಮಹಂತಪಶ್ರೀ ಹಂಸ ಲಕ್ಷ್ಮೀಶನಾಭಿಭವಸನಕಾದಿಮಹಂತದೂರ್ವಾಸಾದಿಗಳಗುರುಪರಂಪರೆಯಮಹಾಪುರುಷೋತ್ತಮ ದಾಸ ಶ್ರೀ ಮಧ್ವವನ -ರುಹಪಾದಗಳಲಿನಾ ಶರಣು ಶರಣಾದೆ1ಕಲಿಯುಗದಿ ಸಜ್ಜನರು ದುರ್ಜನರ ದುಸ್ತರ್ಕಕಲುಷವಾದಗಳಲ್ಲಿ ಮನಸೋತು ಪೋಗೆಳಾಳುಕನ ಪರಮಪ್ರಸಾದ ಹೊಂದುವ ಜ್ಞಾನಇಳೆಯಲಿ ಮಧ್ವ ಬೋಧಿಸಿದ ಅವತರಿಸಿ 2ಭಾರತೀಪತಿ ವಾಯು ಭಾವಿ ಬ್ರಹ್ಮನೇ ಮಧ್ವಹರಿಆಜÉÕಯಲಿ ಸುಜನರನುದ್ದರಿಸೆ ಜನಿಸಿಪರಮಸತ್ತತ್ವವಾದ ಅರುಪಿ ಬದರಿಗೆತೆರಳಿದನು ತತ್‍ಪೂರ್ವ ಶಿಷ್ಯರ ನೇಮಿಸಿದ್ದ 3ವೈದಿಕ ಸದಾಗಮದಿ ಬೋಧಿತ ತಾತ್ವಿಕದ್ವೈತ ಸಿದ್ಧಾಂತದ ಆದಿಗುರು ಮಧ್ವಬದರಿಗೆ ತೆರಳಲು ಶ್ರೀಪದ್ಮನಾಭ-ತೀರ್ಥರಾರೋಹಿಸಿದರು ಮಧ್ವಮಠ ಪೀಠ 4ಈ ಆದಿಮಠಗುರುಪರಂಪರೆಯು ನರಹರಿತೀರ್ಥ ಮಾಧವತೀರ್ಥ ಅಕ್ಷೋಭ್ಯ ತೀರ್ಥಮಾಧ್ವಗ್ರಂಥಗಳಿಗೆ ಟೀಕೆಯ ಬರೆದಿರುವಜಗತ್‍ಪ್ರಖ್ಯಾತ ಜಯತೀರ್ಥ ಸಾಧು ಮುನಿವರ್ಯ 5ವಿದ್ಯಾಧಿರಾಜರು ಜಯತೀರ್ಥಜಾತರುವರ್ಧಿಸಿದರು ಈ ಆದಿ ಮಠವನ್ನಆದಿಮಠ ಭಿನ್ನಾಂಶ ಮಠಗಳುಪಂಕಜನಾಭಮಾಧವಾಕ್ಷೋಭ್ಯರಿಂ ಪುಟ್ಟಿ ಇಹುದು 6ಪದುಮನಾಭಾದಿ ಈ ಸರ್ವ ಗುರುಗಳಿಗೆ ನಾಆದರದಿ ಶರಣಾದೆ ಸಂತೈಪರೆಮ್ಮಪದುಮನಾಭರು ತಾವೇ ಸ್ಥಾಪಿಸಿದ ಮಠದಲ್ಲಿಮೊದಲನೇಯವರು ಶ್ರೀ ಲಕ್ಷ್ಮೀಧರರು 7ಶ್ರೀ ಲಕ್ಷ್ಮೀಧರ ತೀರ್ಥ ಸೂರಿಗಳ ವಂಶಜರುಮಾಲೋಲ ಶ್ರೀರಂಗನಾಥನ ಪ್ರಿಯಶೀಲ ಯತಿವರ ಸ್ವರ್ಣವರ್ಣತೀರ್ಥರುಅವರಜಲಜಕರಜಾತ ಶ್ರೀಪಾದರಾಜಾರ್ಯ 8ಶ್ರೀಲಕ್ಷ್ಮೀಧರ ತೀರ್ಥ ಮೊದಲಾದ ಸರ್ವರಕಾಲಿಗೆ ಎರಗುವೆ ಕರುಣಾಶಾಲಿಗಳುಶ್ರೀ ಲಕ್ಷ್ಮೀನಾರಾಯಣಾರ್ಯರ ಪ್ರಭಾವವುಬಲ್ಲನೆ ನಾನು ವರ್ಣಿಸಲು ಘನತರವು 9ಯತಿರಾಜರಿವರ ಮಹಿಮೆ ಬಹು ಬಹು ಬಹಳವೇದ್ಯ ಎನಗೆ ಅತಿ ಸ್ವಲ್ಪವೇವೇಅದರಲ್ಲೂ ಬಿಟ್ಟಿದ್ದು ಇಲ್ಲಿ ಪೇಳಿಹುದುಅತಿಕಿಂಚಿತ್ ಅಣುಮಾತ್ರ ಸುಜನರು ಆಲಿಪುದು 10ಕನ್ನಡ ಪ್ರದೇಶದಲಿ ಮಹಿಸೂರು ರಾಜ್ಯದಲಿಚೆನ್ನಪಟ್ಟಣಕೆರಡು ಕ್ರೋಶದೊಳಗೇವೇಸಣ್ಣ ಗ್ರಾಮವು ಅಬ್ಬೂರು ಎಂಬುದುಂಟುಕಣ್ವತೀರ್ಥಾಭಿಧ ಪುಣ್ಯನದೀತೀರ 11ವಿದ್ಯಾಧಿರಾಜರ ಕರಕಮಲೋತ್ಪನ್ನರುವೇದ ವೇದಾಂತ ಕೋವಿದರುಗಳು ಈರ್ವರುವಿದ್ಯಾಧಿರಾಜ ಈರ್ವರಲಿ ಪೂರ್ವಜರುವಾದಿಗಜ ಸಿಂಹ ರಾಜೇಂದ್ರ ಯತಿವರರು 12ರಾಜೇಂದ್ರ ತೀರ್ಥಜ ಜಯಧ್ವಜರಹಸ್ತಕಂಜಸಂಜಾತ ಪುರುಷೋತ್ತಮ ತೀರ್ಥರುರಾಜರಾಜೇಶ್ವರ ಪಟ್ಟಾಭಿರಾಮನ್ನಪೂಜಿಸುತ ಇದ್ದರು ಅಬ್ಬೂರಿನಲ್ಲಿ 13ಪುರುಷೋತ್ತಮಾರ್ಯರ ಮಹಿಮೆ ನರರಿಂದಅರಿವುದಕೆಸಾಕಲ್ಯಶಕ್ಯವು ಅಲ್ಲಶಿರಿವರನ ಪೂರ್ಣಾನುಗ್ರಹಕೆ ಪೂರ್ಣಪಾತ್ರರಾಗಿಹ ಈ ಕರುಣಿಗೆ ಶರಣು 14ಘೃಣಿಸೂರ್ಯಆದಿತ್ಯ ತೇಜಸ್ಸಲಿ ಬೆಳಗುವವಿನಯ ಸಂಪನ್ನ ಸುಬುದ್ಧಿಮಾನ್ ಬಾಲನ್ನತನ್ನ ಬಳಿ ಕರೆತರಿಸಿ ಬ್ರಹ್ಮಣ್ಯ ತೀರ್ಥಾಖ್ಯಅನಘನಾಮವನಿತ್ತುಪ್ರಣವಉಪದೇಶಿಸಿದರು15ವಾಜಿವಕ್ತ್ರನು ನರಸಿಂಹ ವಿಠಲನುಯಜÕವರಾಹಶ್ರೀರಾಮ ಯದುಪತಿಯಪೂಜಿಸುವ ಬಗ್ಗೆ ಮತ್ತೂಬ್ರಹ್ಮ ವಿದ್ಯಾ ಮಧ್ವಸಚ್ಛಾಸ್ತ್ರ ಬೋಧಿಸುತ್ತಿಹರು ಬ್ರಹ್ಮಣ್ಯರ್ಗೆ 16ಪುರುಷೋತ್ತಮರನ್ನ ಕಾಣಲು ಅಬ್ಬೂರನ್ನಕುರಿತು ಬರುತಿಹರು ಸ್ವರ್ಣವರ್ಣತೀರ್ಥರು ಆಗ ಸಾಯಂಕಾಲ ಇನ್ನೆಷ್ಟುದೂರವೋ ಎಂದು ಶಂಕಿಸಿದರು ಮನದಿ 17ಮಾರ್ಗದಲಿ ದನಗಳ ಮೇಸುವ ಬಾಲಕರೊಳುಅಕಳಂಕ ವರ್ಚಸ್ವಿ ಹುಡುಗ ಓರ್ವನ್ನತಾ ಕಂಡು ಪಲ್ಲಕ್ಕಿ ನಿಲ್ಲಿಸಿ ಕೇಳಿದರುಶ್ರೀಗಳು ಗ್ರಾಮಕ್ಕೆ ದೂರ ಎಷ್ಟೆಂದು 18ಅಹಸ್ಪ್ರಾಂತ ಗಗನಸ್ಥಸೂರ್ಯನ್ನ ನೋಡಿಬಹು ಸಣ್ಣ ವಯಸ್ಸಿನ ಎನ್ನನ್ನು ನೋಡಿಅಹಂಮಾಎಂದು ಕೂಗೋ ಧೇನುಗಳ ನೋಡಿಬಹು ಸಮೀಪವು ಗ್ರಾಮ ಎಂದು ಸೂಚಿಸಿದ 19ಕುಶಾಗ್ರ ಬುದ್ಧಿಯ ಸೂಕ್ಷ್ಮತ್ವವ ನೋಡಿಆ ಸ್ವಾಮಿಗಳಿಗೇ ಈ ಹುಡುಗ ಯಾರೆಂದುಭಾಸವಾಗಿ ಲೋಕರೀತಿಯಲಿ ಕೇಳಿದರುಹೆಸರು ಏನು ಯಾರ ಮಗ ಮನೆ ಎಲ್ಲಿ 20ನಮಿಸಿ ಸ್ವಾಮಿಗಳಿಗೆ ಕರಮುಗಿದು ಪೇಳಿದಅಮ್ಮಗಿರಿಯಮ್ಮನು ತಂದೆಯು ಶೇಷಗಿರಿಲಕ್ಷ್ಮೀನಾರಾಯಣಾಭಿದನು ತಾನೆಂದುಸಮೀಪಸ್ಥ ಹೊಲದಲ್ಲಿ ಮನೆಯ ತೋರಿಸಿದ 21ಕ್ರಮದಿ ಬರೆ ಓದುವಿದ್ಯೆಕಲಿಯದಿದ್ದರೂಸೂಕ್ಮ ಬುದ್ಧಿ ದೇಹಕಾಂತಿ ಮುಖ ವರ್ಚಸ್ಸಸುಮಹಾ ಪೂರ್ವಸಾಧನದಿ ಎಂದರಿತರುಈ ಮಹಾ ಸೂರಿವರ್ಯರು ಶ್ರೀಸ್ವಾಮಿಗಳು 22ಅಬ್ಬೂರು ಸೇರಿ ಪುರುಷೋತ್ತಮರ ಕೈಯಿಂದಉಪಚಾರಗಳನ್ನು ಕೊಂಡು ಬಾಲತಪೋನಿಧಿ ಬ್ರಹ್ಮಣ್ಯರ ಕಂಡು ಅವರಂತೆಒಬ್ಬ ಬಾಲನು ತಮಗೂ ಬೇಕೆಂದರು 23ತಥಾಸ್ತು ಎನ್ನುತಲಿ ಪುರುಷೋತ್ತಮರತಂದೆ ತಾಯಿಗಳನ್ನು ಕರೆತರಿಸಿ ಬೇಗಮುದದಿ ಮಾಡಿದರು ಲಕ್ಷ್ಮೀನಾರಾಯಣಗೆವೇದಾಧಿಕಾರ ಬರುವಂಥ ಉಪನಯನ 24ಬಹ್ಮೋಪದೇಶಾದಿ ಮಂತ್ರೋಪದೇಶಗಳುವಿಹಿತ ರೀತಿಯಲ್ಲಿ ಆದ ತರುವಾಯಬ್ರಹ್ಮಚಾರಿ ಆ ಬಾಲಕನಿಗೆ ಸಂನ್ಯಾಸಮಹಾಪ್ರಣವಉಪದೇಶ ಕೊಟ್ಟರು ಗುರುವು25ಗುರುಸ್ವರ್ಣವರ್ಣ ತೀರ್ಥರು ವಾತ್ಸಲ್ಯವಎರೆಯುತ್ತ ಲಕ್ಷ್ಮೀನಾರಾಯಣ ತೀರ್ಥಆಶ್ರಮೋಚಿತ ನಾಮ ಕೊಟ್ಟು ಬಾಲನ್ನಸೇರಿಸಿಕೊಂಡರು ತಮ್ಮ ಪರಂಪರೇಲಿ 26ಹಿಂದೆ ಶೇಷಗಿರಿಯಪ್ಪ ಗಿರಿಯಮ್ಮ ದಂಪತಿಯಕಂದನು ದನ ಮೇಸೋ ಲಕ್ಷ್ಮೀನಾರಾಯಣಇಂದುಲಕ್ಷ್ಮೀನಾರಾಯಣ ತೀರ್ಥರಾಗಿವೇದಾಂತ ಸಾಮ್ರ್ರಾಜ್ಯ ಯುವರಾಜನಾದ 27ವಿದ್ಯಾಧಿ ರಾಜ ರಾಜೇಂದ್ರ ಜಯಧ್ವಜ ಪುರು -ಷೋತ್ತಮ ಬ್ರಹ್ಮಣ್ಯರಿಗೆ ನಮೋ ಲಕ್ಷ್ಮೀಧರಾದಿ ಗುರುಗಳಿಗೂ ಸುವರ್ಣವರ್ಣರಿಗೂಸದಾ ನಮೋ ಲಕ್ಷ್ಮಿನಾರಾಯಣ ತೀರ್ಥರಿಗೂ 28ರಾಜೀವಭವಪಿತ ರಾಜರಾಜೇಶ್ವರನುರಾಜೀವಾಲಯ ಪತಿಯ ಪ್ರಸನ್ನ ಶ್ರೀನಿವಾಸಪ್ರಜ್ವಲಿಸುತಿಹ ಮಧ್ವರಾಜ ಸಹ ಶ್ರೀಪಾದರಾಜರೊಳು ಇವರಲ್ಲಿ ಶರಣು ಶರನಾದೆ 29 ಪ-ಪ್ರಥಮ ಕೀರ್ತನೆ ಸಂಪೂರ್ಣಂ-ದ್ವಿತೀಯಕೀರ್ತನೆಶ್ರೀ ಪಾದರಾಜಗುರು ಸಾರ್ವಭೌಮರಪಾದನಾಪÉÇಂದಿ ಶರಣಾದೆ ಎಮ್ಮ ಪಾಲಿಪರುಶ್ರೀಪ ನರಹರಿಶಿಂಶುಮಾರಹಯಮುಖರಾಮಗೋಪೀವಲ್ಲಭ ರಂಗ ಒಲಿದಿಹಮಹಂತಪಸ್ವರ್ಣವರ್ಣರೂ ಲಕ್ಷ್ಮೀನಾರಾಯಣರಿಗೆಆಮ್ನಾಯನಿಗಮಾಂತ ವಿದ್ಯೆಗಳ ಕಲಿಸೆಘನಮಹಾಪಾಂಡಿತ್ಯ ಪ್ರೌಢಿಮೆಯನು ಹೊಂದಿಸಣ್ಣ ಯತಿ ಪ್ರಖ್ಯಾತರಾದರು ಜಗದಿ 1ವಿಭುದೇಂದ್ರ ರಘುನಾಥ ಮೊದಲಾದ ಯತಿವರರುಈ ಬಾಲಯತಿಯ ಪಾಂಡಿತ್ಯ ಪ್ರಭಾವವಬಹು ಬಹು ಶ್ಲಾಘಿಸಿ ರಘುನಾಥರಿವರಿನ್ನ'ಶ್ರೀಪಾದ ರಾಜರು&ಡಿsquo; ಎಂದು ವರ್ಣಿಸಿದರು 2ಅಂದಿನಾರಭ್ಯ ಈ ಲಕ್ಷ್ಮೀ ನಾರಾಯಣರಮಂದಿಗಳು ವಿದ್ವಜ್ಜನರು ಸಜ್ಜನರು'ಆನಂದ ಉತ್ಸಾಹದಿ ಶ್ರೀಪಾದರಾಜ&ಡಿsquo;ರೆಂದು ಕರೆಯುವುದು ಅದ್ಯಾಪಿ ಕಾಣುತಿದೆ 3ರಂಗಕ್ಷೇತ್ರಕೆ ಬಂದು ಶ್ರೀ ಪಾದರಾಜ ಸಹರಂಗನಾಥನ್ನ ಕಂಡು ಸ್ಥಾಪಿಸಿ ಮಠವಭಂಗವಿಲ್ಲದೇ ಪೂಜಾ ಪ್ರವಚನವ ಗೈಯುತ್ತತುಂಗಯತಿ ಸ್ವರ್ಣವರ್ಣರು ಕುಳಿತರಲ್ಲೇ 4ವರುಷಗಳು ಜರಗಿತು ಶ್ರೀಪಾದರಾಜರುಊರು ಊರಿಗೆ ದಿಗ್ವಿಜಯವ ಮಾಡುತ್ತಪರಪಕ್ಷ ಕುಮತಗಳ ಛೇದಿಸಿ ಸತ್ತತ್ವಆರುಪಿದರು ಯೋಗ್ಯಾಧಿಕಾರಿಗಳಿಗೆ 5ಮುಳಬಾಗಿಲು ಎಂದು ಆಧುನಿಕರು ಕರೆವಂಥಒಳ್ಳೇ ಕ್ಷೇತ್ರಕ್ಕೆ ಬಂದು ಮಠದಲ್ಲಿ ಇರುತ್ತಬಾಲಕರು ವೃದ್ಧರು ಯತಿಗಳಿಗೂ ಸದ್ವಿದ್ಯಾಕಲಿಸುತ್ತಿದ್ದರು ತಾವೇ ಪಾಠ ಹೇಳುತ್ತಾ 6ಮುಳಬಾಗಿಲು ಕ್ಷೇತ್ರದಲ್ಲಿ ಹನುಮಂತಶ್ರೀ ಲಕ್ಷ್ಮೀಪತಿಯನ್ನು ಸೇವಿಸುತ ಇಹನುಬಾಲೇಂದು ಶೇಖರನು ಗಿರಿಜಾ ಸಮೇತಶೈಲ ತೋಟಗದ್ದೆ ಅಟವಿಗಳು ಇಹವು 7ಊರಿಗೆ ಕ್ರೋಶ ಮಾತ್ರದಿ ಇರುವ ಸ್ಥಳದಲಿವರಮಧ್ವಸಿದ್ಧಾಂತ ಜಯ ಶಿಲಾ ಲಿಖಿತಇರುವುದು ಅದ್ಯಾಪಿ ಕಾಣ ಬಹುದು ಅಲ್ಲೇಭಾರಿತರ ವಾದವು ನಡೆಯಿತು ಹಿಂದೆ 8ಶ್ವೇತಕೇತು ಉದ್ದಾಲಕರ ಸಂವಾದತತ್ವಮಸಿ ವಾಕ್ಯವೇ ವಾದ ವಿಷಯವಾದಿಸಿದರು ವಿದ್ಯಾರಣ್ಯ ಅಕ್ಷೋಭ್ಯರುವೇದಾಂತ ದೇಶಿಕರ ಮಧ್ಯಸ್ಥ ತೀರ್ಮಾನ 9ಛಾಂದೋಗ್ಯ ಉಪನಿಷತ್ತಲಿರುವ ವಾಕ್ಯಸ ಆತ್ಮಾ ತತ್ವಮಸಿ ಎಂಬುವಂಥಾದ್ದುಭೇದ ಬೋಧಕವೋ ಅಭೇದ ಬೋಧಕವೋಎಂದು ವಾದವು ಆ ಈರ್ವರಲ್ಲಿ 10ಆತ್ಮ ಶಬ್ದಿತ ನಿಯಾಮಕಗೂ ನಿಯಮ್ಯ ಜೀವನಿಗೂಭೇದವೇ ಬೋಧಿಸುವುದು ಆ ವಾಕ್ಯವೆಂದುಸಿದ್ಧಾಂತ ಅಕ್ಷೋಭ್ಯರು ಸ್ಥಾಪಿಸಿದರುಸೋತಿತು ವಿದ್ಯಾರಣ್ಯರ ಐಕ್ಯವಾದ 11ಮಧ್ಯಸ್ಥರಾಗಿದ್ದ ವೇದಾಂತ ದೇಶಿಕರುವಿದ್ಯಾರಣ್ಯ ಎಂಬುವ ಮಹಾರಣ್ಯವತತ್ವಮಸಿ ಅಸಿಯಿಂದ ಅಕ್ಷೋಭ್ಯರುಛೇದಿಸಿದರೆಂದು ಬರೆದಿಹರು ತಮ್ಮ ಗ್ರಂಥದಲಿ 12ಶ್ರೀಪಾದರಾಜರ ಮಠವು ಆ ಸ್ಥಳಕೆಸಮೀಪವೇ ಅಲ್ಲುಂಟು ನರಸಿಂಹ ತೀರ್ಥಸುಪವಿತ್ರತ್ರ್ಯೆ ಲೋಕ್ಯಪಾವನೆಗಂಗಾಸುಪ್ರಸನ್ನಳು ಇಲ್ಲಿ ತೋರಿಹಳು ಸ್ಮರಿಸೇ 13ದಿಗ್ವಿಜಯ ಕ್ರಮದಲ್ಲಿ ಕಾಶೀ ಪಂಢರೀಪುರಮುಖ್ಯ ಕ್ಷೇತ್ರಗಳಿಗೆ ಪೋಗಿ ಅಲ್ಲಲ್ಲಿಭಗವಂತ ಶ್ರೀಪತಿಯ ಒಲಿಸಿಕೊಳ್ಳುವಮಾರ್ಗಭಾಗವತಧರ್ಮ ಸಚ್ಛಾಸ್ತ್ರ ಬೋಧಿಸಿದರು14ಅಲ್ಲಲ್ಲಿ ವಾದಿಸಿದುರ್ವಾದಿಕುಮತಿಗಳಸುಳ್ಳು ಸೊಲ್ಲುಗಳನ್ನು ಬಳ್ಳಿಗಳ ತೆರದಿಸೀಳಿ ಛೇದಿಸಿ ಸ್ಥಾಪಿಸಿದರು ಮಧ್ವಮತಶೀಲತ್ವ ಔನ್ನತ್ಯ ವೇದ ಸನ್ನತಿಯ 15ಅಬ್ಬೂರಲ್ಲಿ ಶ್ರೀ ಸ್ವರ್ಣವರ್ಣ ತೀರ್ಥರುಶ್ರೀ ಪುರುಷೋತ್ತಮ ತೀರ್ಥರ ಕೈಯಿಂದಸುಪ್ರೌಢ ಪಾಂಡಿತ್ಯ ಹೊಂದಿ ಪೀಠವ ಏರಿಪರಿಪಾಲಿಸುತ್ತಿದ್ದರು ಯತಿ ಧರ್ಮ 16ಮಹಾಮಹಿಮ ಶ್ರೀ ಪರುಷೋತ್ತಮರು ತಮ್ಮಯಗುಹೆಯೊಳು ಕುಳಿತರು ಏಕಾಗ್ರ ಚಿತ್ತದಲಿಮಹಾರ್ಹ ಕೇಶವನ ಆರಾಧಿಸುತಿಹರುಬಾಹ್ಯ ಜನರ ಸಂಪರ್ಕವಿಲ್ಲದಲೇ 17ಬ್ರಹ್ಮಣ್ಯ ತೀರ್ಥರು ಉದಾರ ಕರುಣಿಗಳುಬ್ರಾಹ್ಮಣ ಶ್ರೇಷ್ಠನ್ನ ಬದುಕಿಸಿ ಅವನಗೃಹಿಣಿಗೆ ಮಾಂಗಲ್ಯ ಭಾಗ್ಯ ವರ್ಧಿಸಿಮಹಾತ್ಮ ಪುತ್ರನ ಹಡೆಯೆವರನೀಡಿದರು18ತಮಗೆ ಆ ಮಗುವನ್ನು ಕೊಡಬೇಕು ಎಂದುಬ್ರಹ್ಮಣ್ಯರು ಪೇಳಿದ್ದ ಅನುಸರಿಸಿಆ ಮಗುವ ದಂಪತಿಗಳ್ ನೀಡೆ ಶಿಶುವುಶ್ರೀ ಮಠದಿ ಬೆಳೆಯಿತು ಗುರುಗಳ ಪಾಲನದಿ 19ಶ್ರೀ ಹರಿಗೆ ಅಭಿಷೀಕ್ತ ಹಾಲುಂಡು ಶಿಶು ಬೆಳೆದುಶ್ರೀಹರಿನೈವೇದ್ಯದಿಂ ವರ್ಧಿಸಿ ಬಾಲವಿಹಿತ ವಯಸ್ಸಲ್ಲೇವೇ ಉಪನಯನವು ಆಗಿಬ್ರಹ್ಮಣ್ಯರ ಕರದಿ ಲಭಿಸಿತು ಸಂನ್ಯಾಸ 20ಸರ್ವೋತ್ತಮ ಇಜ್ಯಪೂಜ್ಯ ಹರಿಸಾರಾತ್ಮಸರ್ವೇಶ ಶ್ರೀವ್ಯಾಸ ಶ್ರೀಶನ ನಾಮವ್ಯಾಸತೀರ್ಥರು ಎಂದು ಈ ಬಾಲಯತಿವರಗೆಆಶ್ರಮ ನಾಮವಿತ್ತರು ಬ್ರಹ್ಮಣ್ಯರು 21ಪ್ರಣವಾದಿ ಮಂತ್ರಗಳ ತಾವೇವೇ ಬೋಧಿಸಿಘನಬ್ರಹ್ಮ ವಿದ್ಯಾದಿ ಸಚ್ಛಾಸ್ತ್ರ ಕಲಿಯೆಸಣ್ಣ ಯತಿವರ ಶ್ರೀ ಪಾದರಾಜರಲಿಬ್ರಹ್ಮಣ್ಯತೀರ್ಥರು ಕಳುಹಿಸಿದರು 22ಶ್ರೀ ಪಾದರಾಜರು ವ್ಯಾಸರಾಯರಿಗೆಸುಪ್ರೀತಿಯಲಿ ಸರ್ವ ವಿದ್ಯೆಗಳ ಕಲಿಸಿತಾಪೋದಕಡೆ ದಿಗ್ವಿಜಯದಿ ಕರದ್ಹೋಗಿಈ ಬಾಲ ಯತಿಗಳ ಪ್ರಭಾವ ಹರಡಿದರು 23ಶ್ರೀಪಾದರಾಜರು ಸ್ವಭಾವದಿ ಕೃಪಾಳುಗಳುಈ ಪುಣ್ಯ ಶ್ಲೋಕ ಶ್ರೀಗಳ ಮಹಿಮೆ ಏನೆಂಬೆಸರ್ಪಬಾಧೆಯು ವ್ಯಾಸರಾಜರಿಗೆ ಸೋಕದೆಕಾಪಾಡಿಹರು ಆ ಆಹಿಯ ಹೋಗೆಂದು 24ಶಂಖತೀರ್ಥದ ಮಹಿಮೆ ಶ್ರೀಪಾದರಾಜರುಶಂಕೆಇಲ್ಲದೇ ತೋರ್ಪಡಿಸಿಹರು ಜಗಕೆಮಂಕುತನದಲಿ ಬ್ರಹ್ಮಹತ್ಯೆ ಮಾಡಿದವನಕಳಂಕ ಕಳೆದರು ಶಂಖತೀರ್ಥ ಪ್ರೋಕ್ಷಣದಿ 25ಸಂದೇಹಪರಿಹರಿಸೆ ಮಠದಿ ಜನತಿಳಿವುದಕೆತಂದಿಟ್ಟ ಕಪ್ಪುವಸ್ತ್ರದ ಮೇಲೆ ಶಂಖತೀರ್ಥ ಪ್ರೋಕ್ಷಿಸಿ ಶುಭ್ರ ಬಿಳಿಯಾಗಿ ಮಾಡಿದರುಸದಾ ಶರಣು ಇವರಿಗೂ ಶಂಖತೀರ್ಥಕ್ಕೂ 26ಕಂಜಭವಪಿತ ಪಾಂಡುರÀಂಗನು ಶ್ರೀಪಾದರಾಜರಿಗೆ ತಾನೇ ಒಲಿದದ್ದೇ ಕ್ಷೇತ್ರದಮಂಜೂಷದಲಿ ಭಾಮಾ ರುಕ್ಮಿಣೀ ಸಮೇತರಾಜೀವೇಕ್ಷಣ ರಂಗವಿಠಲನು ಒಲಿದಿಹನು 27ಸಾಳುವ ನರಸಿಂಹಾದಿ ರಾಜರು ಪ್ರಮುಖರುಪಾಳೆಯಗಾರರು ಮಂಡಲೇಶ್ವರರುಕೇಳಿಈ ಗುರುಗಳ ಪ್ರಭಾವ ನೋಡಿಕಾಲಿಗೆ ಎರಗಿಹರು ಬಹುಭಕ್ತಿಯಿಂದ 28ಮುಳಬಾಗಿಲು ಮಠಕೆ ಐವತ್ತು ಕ್ರೋಶದೊಳುಸಾಳುವ ನರಸಿಂಹ ರಾಜನ ಅರಮನೆಯುಎಲ್ಲ ಕಾರ್ಯಗಳನ್ನು ಶ್ರೀಪಾದರಾಜರಲಿತಿಳಕೊಂಡುಅವರಆಜÉÕಯಿಂದ ಆಳಿದನು29ಚಂದ್ರಗಿರಿ ಎಂಬುವ ಪಟ್ಟಣದಿ ಆ ರಾಜಮಂದಿರವು ವೇಂಕಟಾಚಲಕೆ ಸಮೀಪಚಂದ್ರಸೋದರಿ ರಮಣ ವೇಂಕಟೇಶನ ಪೂಜೆನಿಂತು ಹೋಗದೆ ಏರ್ಪಾಡು ಮಾಡೆಂದ 30ಗುರುಸಾರ್ವಭೌಮರು ಶ್ರೀಪಾದರಾಜರುಆ ರಾಜನ ಬಿನ್ನಹವನ್ನು ಲಾಲಿಸಿತ್ವರಿತದಿ ಶ್ರೀ ವ್ಯಾಸರಾಜರ ಕಳುಹಿಸಿತಿರುಪತಿ ವೇಂಕಟನ ಪೂಜೆಗೈಸಿದರು 31ರಾಜನ ಪ್ರಾರ್ಥನೆಗೆ ಒಪ್ಪಿ ಶ್ರೀಪಾದರಾಜರು ಅರಮನೆಗೆ ಪೋಗಲು ಅಲ್ಲಿಗಜತುರಗವಿಪ್ರಜನ ಪೂರ್ಣಕುಂಭಾದಿ ಸಹರಾಜನು ಸ್ವಾಗತವ ನೀಡಿದನು ಮುದದಿ 32ವೇದ ಘೋಷಗಳೇನು ಮಂಗಳದ್ವನಿ ಏನುವಾದ್ಯಮೇಳಗಳ ಸುಸ್ವರವು ಏನುಬೀದಿಯಲಿ ತೋರಣ ಪುಷ್ಪ ಮಂಟಪವೇನುಆದರದಿ ಸ್ವಾಗತದ ವೈಭವ ಏನೆಂಬೆ 33ಸಾಳುವ ನರಸಿಂಹನು ತನ್ನ ಸಿಂಹಾಸನದಲ್ಲಿ ಶ್ರೀ ಶ್ರೀ ಪಾದರಾಜರನ್ನಕುಳ್ಳಿರಿಸಿ ಕನಕಾಭೀಷೇಕವ ಮಾಡಿದ್ದನ್ನಅಳವೇ ವರ್ಣಿಸಲಿಕ್ಕೆ ನೋಡಲಾನಂದ 34ಶಿರಿ ರಮಣ ಶಿಂಶುಮಾರನ ಪಾದದಲಿ ಸ್ಥಿರಆಶ್ರಿತರು ಆದುದರಿಂದ ಧರೆಯಲ್ಲಿಹರಿಸಮರ್ಪಿತ ಸರ್ವ ಭೋಗ್ಯಭಾಗ್ಯಂಗಳುಅರಣ್ಯದಲ್ಲಿದ್ದರೂ ಜನರಿಗೆ ದೊರೆಯುವವು 35ರಾಜೀವಭವಪಿತ ರಾಜರಾಜೇಶ್ವರನುರಾಜೀವಾಲಯ ಪತಿಯ ಪ್ರಸನ್ನ ಶ್ರೀನಿವಾಸಪ್ರಜ್ವಲಿಸುತಿಹ ಮಧ್ವರಾಜ ಸಹ ಶ್ರೀಪಾದರಾಜರೊಳು ಇವರಲ್ಲಿ ಶರಣು ಶರನಾದೆ 36ತೃತೀಯ ಕೀರ್ತನೆಶ್ರೀ ಪಾದರಾಜಗುರು ಸಾರ್ವಭೌಮರಪಾದನಾಪÉÇಂದಿ ಶರಣಾದೆ ಎಮ್ಮ ಪಾಲಿಪರುಶ್ರೀಪ ನರಹರಿಶಿಂಶುಮಾರಹಯಮುಖರಾಮಗೋಪಿವಲ್ಲಭ ರಂಗ ಒಲಿದಿಹಮಹಂತಪದೀನ ದಯಾಳು ಶ್ರೀ ಪಾದರಾಜರುಜನರು ಭಾಗೀರಥೀಯಾತ್ರೆ ಮಾಡಲಿಕೆಹಣವು ತ್ರಾಣವು ಸಾಲದು ಎಂದು ಅರಿತುಜಾಹ್ನವಿಯ ತರಿಸಿದರು ನೃಸಿಂಹ ತೀರ್ಥದಲಿ 1ಶ್ರೀಮಧ್ವಿಷ್ಣಂಘ್ರಿನಿಷ್ಠಾಃ ಅತಿ ಗುಣಗುರುತಮಶ್ರೀಮದಾನಂದ ತೀರ್ಥಃ ಎಂದು ಸಂಸ್ತುತ್ಯಶ್ರೀಮಧ್ವಾಚಾರ್ಯರ ಪ್ರಿಯತಮರು ಕರೆದಲ್ಲಿಅಮರ ತಟಿನೀ ಬಂದದ್ದೇನು ಆಶ್ವರ್ಯ 2ಶ್ರೀ ಮಧ್ವಿಷ್ಣಂಘ್ರಿ ಸಂಭೂತೆಯು ತನ್ನಯವಿಮಲ ತೀರ್ಥವ ನರಸಿಂಹ ತೀರ್ಥದಲಿಧಿಮು ಧಿಮು ಎಂದು ಪ್ರವಹಿಸಲು ಜನಸರ್ವರೂಸಮ್ಮುದದಿ ಪೂಜಿಸಿದರು ವಿಹಿತ ರೀತಿಯಲಿ 3ಹಿಂದೆ ಇಂದ್ರನು ತನ್ನಯ ವಜ್ರದಿಂದಅದ್ರಿಗಳ ಪಕ್ಷಿಗಳ ಕಡೆದ ತೆರದಿಇಂದುಶ್ರೀಪಾದರಾಜರು ಕುಮತ ಹೀರಿ ಪಕ್ಷಗಳಛೇದಿಸಿದರು ತಮ್ಮ ವಾಗ್ವಜ್ರದಿಂದ 4ಆನಂದ ತೀರ್ಥರ ನಿಜಾನಂದಪ್ರದ ಶಾಸ್ತ್ರಬಂದು ಬೇಡಿದ ಭಾಗ್ಯ ಅಧಿಕಾರಿಗಳಿಗೆಕುಂದುಕೊರತೆ ಏನೂ ಇಲ್ಲದೆ ಬೋಧಿಸಿಇಂದಿರೇಶನ ಪ್ರಸಾದವ ಒದಗಿಸಿಹರು 5ಚಂದ್ರಿಕಾ ನ್ಯಾಯಾಮೃತ ತರ್ಕತಾಂಡವಮೊದಲಾದ ಗ್ರಂಥಗಳ ರಚಿಸಿದ ಪ್ರಖ್ಯಾತವಾದಿಗಳಕೇಸರಿವ್ಯಾಸಮುನಿ ಮುಖ್ಯಮೇದಿನಿಸುರರಿಗೆ ವಿದ್ಯಾ ಕಲಿಸಿಹರು6ಶ್ರೀರಂಗ ವಿಠಲ ರುಕ್ಮಿಣೀ ಸತ್ಯಭಾಮಾತೋರಿ ತಾವೇ ತಮ್ಮ ಪ್ರತೀಕಗಳೊಳಗೆ ನಿಂತುಸೂರಿವರ ಶ್ರೀಪಾದರಾಜರ ಕೈಯಿಂದಭರದಿ ಪೂಜಾ ಸ್ತೋತ್ರ ಕೀರ್ತನೆ ಕೊಂಡಿಹರು 7ಅನುಪಮ ಅನುತ್ತಮ ಗುಣಗಣಾರ್ಣವ ರಮಾ -ನಾಥನು ಜಗಜ್ಜನ್ಮಾದ್ಯಖಿಲೈಕ ಕರ್ತಾವಿಷ್ಣು ಸರ್ವೇಶ್ವರ ಸ್ವತಂತ್ರಅನಘಮಹಿಮಾಕನ್ನಡ ನುಡಿಯಲಿ ಸಹಸ್ರಾರು ಹಾಡಿಹರು 8ಪ್ರತಿಒಂದು ಪದ ವಾಕ್ಯ ನುಡಿ ಪದ್ಯ ಕೀರ್ತನೆಯುಇಂದಿರಾಪತಿಯಲ್ಲಿ ನಿಶ್ಚಲ ಭಕ್ತಿಬಂಧಮೋಚಕ ಜ್ಞಾನ ಸಾಧನವಾಗಿರುವವುಆದರದಿ ಪಠಿಸೆ ಇಹಪರ ಸುಖಪ್ರದವು 9'ಸ್ಮರಿಸಿದವರನುಕಾವನಮ್ಮ ಸೂರ್ಯಾನೇಕ ಪ್ರಭಾವಸುರಮುನಿಗಳ ಸಂಜೀವ ಶ್ರೀ ವೆಂಕಟೇಶ ನಮ್ಮಪೊರೆವ&ಡಿsquo; ಎಂದಾರಂಭಿಸುವ ಕೀರ್ತನೆ ಪಠಿಸೆಸುಶ್ರವಣವು ಮಾಳ್ಪರ ಭಾಗ್ಯವೇ ಭಾಗ್ಯ 10ಶ್ರೀಪಾದರಾಜರು ಶಿರಿ ವೇಂಕಟೇಶನತಾಪೋಗಿ ಕಂಡು ಧ್ಯಾನದಿ ಸದಾ ನೋಡಿಸೌಭಾಗ್ಯ ಪ್ರದ ಈ ಕೀರ್ತನೆ ಹಾಡಿಹರುಸುಪುಣ್ಯ ಭಾಗಿಗಳೇ ಪಠಿಸಿ ಕೇಳುವರು 11ಭಕ್ತಿಯಿಂದ ಪಠಿಸುವ ಕೇಳುವ ಸಜ್ಜನರುಓದಿ ಕೇಳಿದ್ದು ಕೃಷ್ಣಗರ್ಪಿಸಲುಬದಿಯಲ್ಲೇ ತಾನಿದ್ದು ಯೋಗಕ್ಷೇಮವ ವಹಿಪಶ್ರೀದ ವೇಂಕಟ ಜನಾರ್ದನ ಕೃಷ್ಣ ಶ್ರೀಶ 12ಧನ ಧಾನ್ಯ ಆರೋಗ್ಯ ಆಯುಷ್ಯ ಕೀರ್ತಿಯಘನವಿಘ್ನಕಷ್ಟ ಪರಿಹಾರ ಜಯ ಎಲ್ಲೂಜ್ಞಾನ ಉದ್ಭಕ್ತಿ ಸಂತೋಷಹರಿಅಪರೋಕ್ಷಸಾಧನವು ಇವರ ಈ ಕೀರ್ತನೆ ಪಠನ 13ಜಯ ಜಯ ಜಗತ್ರಾಣ ಜಗದೊಳಗೆಸುತ್ರಾಣಅಖಿಲಗುಣಸದ್ದಾಮ ಶ್ರೀ ಮಧ್ವನಾಮಾಜಯಾಸಂಕರುಷಣ ಸಂಭೂತ ಮುಖ್ಯ-ವಾಯು ಹನುಮ ಭೀಮ ಮಧ್ವನ ಸ್ತೋತ್ರ 14ಈ ಮಧ್ವನಾಮಾಖ್ಯ ಸ್ತವರಾಜವನ್ನುನಮ್ಮ ಶ್ರೀಪಾದ ರಾಜಾರ್ಯ ರಚಿಸಿನಮಗೆಲ್ಲರಿಗಿತ್ತು ನಮಗೆ ಸೌಭಾಗ್ಯವಪ್ರೇಮದಿಂದಲಿ ಒದಗಿಸಿಹರು ಕರುಣಾಬ್ಧಿ 15ಸ್ಮರಿಸಲಾಕ್ಷಣ ಕಾಯ್ವಪುರಂದರದಾಸಾರ್ಯರಪರಂಪರೆ ವಿಜಯಾರ್ಯ ಗೋಪಾಲದಾಸಾರ್ಯಸೂರಿಗೋಪಾಲಾರ್ಯ ಶಿಷ್ಯರು ಜಗನ್ನಾಥದಾಸರಾಯರು ಫಲಶ್ರುತಿ ಬರೆದಿಹರು 16ವರಮಧ್ವ ನಾಮಕ್ಕೆ ಬರೆದಿರುವ ಫಲಶ್ರುತಿಯಭರದಿ ಪಠಿಸುವವರು ಶ್ರೀ ಮಧ್ವನಾಮಉತ್ಕøಷ್ಟ ಮಹಾತ್ಮ್ಯ ಉಳ್ಳದ್ದೆಂದರಿವರುಬರುವುದು ಅನುಭವಕೆ ಮಧ್ವನಾಮ ಓದಿ 17ಶ್ರೀ ಲಕ್ಷ್ಮೀನಾರಾಯಣ ರಾಮ ಹಯಶೀರ್ಷಭೈಷ್ಮೀ ಸತ್ಯಾಯುತ ರಂಗ ವಿಠಲಶ್ರೀ ಮದಾಚಾರ್ಯ ಪೂಜಿತ ಗೋಪೀನಾಥನ್ನಸಮ್ಮುದದಿ ಪೂಜಿಸುವ ಯೋಗಿವರ ಆರ್ಯ 18ಗಂಗೆ ಪ್ರತಕ್ಷ ತೋರಲು ಬಾಗಿನ ಕೊಟ್ಟುಜಗ ಜನ್ಮದ್ಯಖಿಳ ಕರ್ತನ್ನ ಪೂಜಿಸುತ್ತಜಗದೇಕ ಗುರುಮಧ್ವ ಸಚ್ಚಾಸ್ತ್ರ ಭೋದಿಸಿಝಗಿ ಝಗಿಪ ತೇಜಸ್ಸಲಿ ಹೊಂದಿದರುಸಮಾಧಿ19ಶಾಲಿಶಕ ಹದಿನಾಲ್ಕುನೂರೆಂಟನೆ ವರುಷಶುಕ್ಲ ಚತುರ್ದಶಿ ಜೇಷ್ಠ ಮಾಸದಲ್ಲಿಶೀಲತಮ ಭಾವದಲಿ ಳಾಳುಕನ ಧ್ಯಾನಿಸುತಕುಳಿತರು ಸಮಾಧಿಯಲಿ ಹರಿಪುರಯೈದಿದರು 20ಶಿಂಶುಮಾರಪುರವನ್ನಯೈದಿತಾ ಮತ್ತೊಂದುಅಂಶದಲಿ ಸುಪವಿತ್ರ ವೃಂದಾವನದಿ ಭಾಸಿಸುತ ಇರುತಿಹರುಬ್ರಹ್ಮ ವಿದ್ಯಾಲಯ - ಶ್ರೀಶಪ್ರಿಯನರಸಿಂಹ ತೀರ್ಥ ಮಂದಿರದಿ 21ದರ್ಶನವು ಪಾಪಹರ ಪ್ರದಕ್ಷಿಣೆ ಹರಿಯಾತ್ರೆವಿಶ್ವಾಸದಿಂದ ನಮಸ್ಕಾರ ಸರ್ವೇಷ್ಟಐಶ್ವರ್ಯ ಜ್ಞಾನಾದಿ ಫಲಪ್ರದವು ಯೋಗ್ಯರಿಗೆಸಂಸ್ಮರಿಸಲು ಸರ್ವ ಸಿದ್ಧಿದಾಯಕವು 22ಸಿಂಧೂರಅಜಮಿಳ ಸುಧಾಮ ಪ್ರಹ್ಲಾದಾದಿಭಕ್ತರ ಪರಿಪಾಲಕರನು ಶ್ರೀರಮಾಪತಿಯಸದಾ ಒಲಿಸಿಕೊಂಡಿಹಮಹಂತಗುರುವರಶ್ರೀಪಾದರಾಜರೇ ನಮೋ ನಮೋಪಾಹಿ23ರಾಜೀವಭವಪಿತ ರಾಜರಾಜೇಶ್ವರನುರಾಜೀವಾಲಯ ಪತಿಯು ಪ್ರಸನ್ನ ಶ್ರೀನಿವಾಸಪ್ರಜ್ವಲಿಸುತಿಹ ಮಧ್ವರಾಜ ಸಹ ಶ್ರೀಪಾದರಾಜರೊಳು ಇವರಲ್ಲಿ ಶರಣು ಶರನಾದೆ 24|| ಇತಿ ಶ್ರೀ ಪಾದರಾಜರ ಅಣು ಚರಿತೆ ಸಂಪೂರ್ಣಂ||
--------------
ಪ್ರಸನ್ನ ಶ್ರೀನಿವಾಸದಾಸರು
ರೂಪತೋರೆನಗೆ ಗುರುವೆರೂಪತೋರೆನಗೆರೂಪನಾಮಕೆ ವಿರಹಿತನಾದ ದೇವನೆರೂಪತೋರೆನಗೆಪಬ್ರಹ್ಮಾಂಡ ತಂಡಗಳೊಳು ಹೊರಗಾವರಸಿಕೊಂಡುಬ್ರಹ್ಮಾಂಡ ಖಂಡಗಳ ಬೆಳಗುವೆ ವಿರೂಪವೆಡೆಗೊಂಡು1ನಿನ್ನ ತೇಜಸ್ಸಿನಿಂದ ತೋರ್ಪುದು ತೋರ್ಪ ಜಗವೆಲ್ಲನಿನ್ನನುಳಿದೇ ಬೇರೆ ತೋರೆನಲವಕಾಶವ ಇಲ್ಲ2ನಾದ ಬಿಂದುಕಳೆ ನೀನೆಂಬೆನೆ ದೃಶ್ಯವು ಇವು ಎಲ್ಲನಾದ ಬಿಂದುಕಳೆ ಸಾಧಕಗಳು ವಸ್ತು ನಿಜವಲ್ಲ3ಬೋಧಾನಂದ ತುರೀಯಗಳೆಂಬೆನೆ ಆ ಅವಸ್ಥೆಗಳೆಲ್ಲಬೋಧಾನಂದ ತುರೀಯದಿ ನೋಡಲು ಎದುರಿದ್ದವು ಎಲ್ಲ4ನಿರ್ವಿಕಾರ ನಿರ್ಗುಣ ನಿರವಯನಿರಂಜನಸ್ಪೂರ್ತಿ ಪರಮಗುರು ಪರಬ್ರಹ್ಮ ಚಿದಾನಂದಮೂರ್ತಿ5
--------------
ಚಿದಾನಂದ ಅವಧೂತರು
ಶ್ರೀ ಅಚ್ಯುತಾನಂತ ಗೋವಿಂದ ಸ್ತೋತ್ರ42ಪ್ರೋಚ್ಯಸುಗುಣಾರ್ಣವ ಶ್ರೀಶನಿರ್ದೋಷಅಚ್ಯುತಾನಂತ ಗೋವಿಂದಾಯ ನಮಃ || ಪಪ್ರಾತರುದಿತಾರ್ಕ ನಿಭ ತೇಜಸ್ವಕಾಂತಿಮಾನ್ರತ್ನ ಛವಿ ಜ್ವಲಿಸುವ ಕಿರೀಟಿಯೆ ಶರಣುಪ್ರತತ ಪ್ರಜ್ವಲ ಮಂಡಲೋಪಮ ಕುಂಡಲಗಳುವಿತತ ಮಹಿಮನೆ ನಿನ್ನ ಕಿವಿಯಲಿ ಪೊಳೆಯುತೆ 1ರಾಜರಾಜೇಶ್ವರನೆ ಸರ್ವಾಯುಧೋಪೇತನಿಜಬಲಾಮಿತ ಶಕ್ತ ಚತುರ್ಬಾಹು ಶರಣುಭಜಕರಕ್ಷಕ ಶಂಖಚಕ್ರಧರದೇವನೆತ್ರಿಜಗದೀಶನೆ ವಿಪೋಪರಿಸಂಸ್ಥಸ್ವಾಮಿ2ಅನಂತ ನಿತ್ಯನೆ ನಿನ್ನನ್ನ ಸರ್ವದೇವತೆಗಳುಸನಕಾದಿ ಮುನಿವರರು ಉಪಾಸಿಪರು ಶರಣುಘನವರದ ಅಭಯದನೇ ಸರ್ವ ಲೋಕವಕಾಯ್ವವನಜಭವಪಿತ ನಮೋ ಪ್ರಸನ್ನ ಶ್ರೀನಿವಾಸ 3
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ಪ್ರಮಾದೀ ಸಂವತ್ಸರ ಹರಿಸ್ತೋತ್ರ153ಪೂರ್ಣ ಗುಣನಿಧಿಅನಘಸರ್ವೋತ್ತಮ ಜ್ಞÕನ-ಆನಂದ ಮಯ ಕೃಷ್ಣ ವಾಮನ ಸರ್ವೇಶಜನುಮಾದಿ ಕರ್ತಾ ಪ್ರಮಾದೀ ಸಂವತ್ಸರಸುನಾಮನೇ ಅನಿಷ್ಟಹರ ಇಷ್ಟಪ್ರದ ಶರಣು ಪತೇಜಸ್ಸಲಿಲ ಪೃಥಿವಿ ಶ್ರೀವಾಯುರುದ್ರರೊಳುರಾಜರಾಜೇಶ್ವರ ತ್ರಿವೃತ್ ಪ್ರಮಾದೀರಾಜೀವಜಾಂಡ ಕಾರಣ ದೊರೆಯೆ ನೀನಿಂತುಪ್ರಜೆಗಳ ರಕ್ಷಿಸುವಿ ನೀ ಪೂರ್ಣಕಾಮ 1ರಾಜರು ರಾಜ್ಯಾಧಿಕಾರಿಗಳು ಈ ವರುಷರಜಸ್ತಮೋನ್ನಾಹದಿ ಕ್ರೋಧ ಮತ್ಸರದಿಂರಾಜ್ಯ ಜನರ ಪೀಡಿಸದಂತೆ ನೀಮಾಡೋರಾಜೀವೇಷಣವೃಷ್ಟಿಸಸ್ಯವರ್ಧಿಸುವಿ2ಉತ್ತಿಷ್ಠ ಶ್ರೀಕರ ಶ್ರೀಯಃ ಪತೆ ಜಗನ್ನಾಥಪದ್ಮಭವಪಿತ ಶ್ರೀ ಪ್ರಸನ್ನ ಶ್ರೀನಿವಾಸಸದಾನಮೋ ಸುಹೃತ್ ತ್ರಿವೃತ್ ಪ್ರಮಾದೀವಾಮನಕೃಷ್ಣಹೇ ಧಯಾನಿಧೇ ಶರಣುಅನಿಮಿತ್ತ ಬಂಧು3
--------------
ಪ್ರಸನ್ನ ಶ್ರೀನಿವಾಸದಾಸರು
ಸತ್ಯಪ್ರಜÕರಾಯರಂಘ್ರಿಗಳ ಸಂತತಹೃತ್ಪದ್ಮದಲಿ ನೆನೆಯಿರಯ್ಯ ಪುನರಪಿಭವ.....ತ್ವತಿಯಂ ತೋರಿ ಸಾಪ್ರಾಯ ಪದ್ಧತಿಯ ವಿಪ್ರತಿಯಂ ತೋರುವಹೊರೆವಪ.ಸೂತ್ರಾರ್ಥಸ್ತೇಯ ದಾನವರಿಳೆಗೆ ಭಾರಾಗಿವೇತ್ತøಜನಗಳ ಮತಿಗೆಡಿಸಿ ಬಾಧಿಸುತಿರಲುಗೋತ್ರಧರನಾಜÕದಿಂ ಶ್ರೀ ಮಾರುತನು ತನ್ನಯ ತೃತೀಯಾವತಾರದಿಂದ್ವಾತ್ರಿಂಶತ್ ಲಕ್ಷಣಾನ್ವಿತನಾಗಿ ಋಜುಗಣದಗೋತ್ರದಲ್ಲೆಸೆದು ನಿಜಜನನಿಗ್ಹರುಷವನಿತ್ತುಧಾತ್ರಿಗೆ ಭೂಷಣದ ಮಣಿಯಂತೆ ಹೊಳೆ ಹೊಳೆವಸುತ್ರಾಮಾಶೇಷವರದ ಅಭಯದ 1ವಿಶ್ವವೆಲ್ಲ ಮಿಥ್ಯಪ್ರತಿಷ್ಠಿತವು ಅಲ್ಲವು ನಿರೀಶ್ವರ ಭುವನವೆಂಬ ಕುಮತಿಘಟಿಗಳ ಮಾತರಿಶ್ವಕಂಠೀರವನೀ ಯತಿ ರೂಪದಲಿ ಸದೆದುಸುಸ್ವಭಾವದಲ್ಲಿ ಒಪ್ಪುತ ಸುಶಶ್ವದೇಕ ಶ್ರೀ ಹರಿಯು ಜೀವ ಜಗದೊಡೆಯನಶ್ವರಾನಶ್ವರಾರ್ಥೇತರ ಮುಕುಂದೆನ್ನುತತಾ ಸ್ವಕೀಯರಿಗೆಲ್ಲಶ್ರುತಿಸ್ಮøತಿಸುವಾಕ್ಯದಿಂವಿಶ್ವಾಸವಂ ಬಲಿಸಿದ ಸುಬೋಧ 2ಮತ್ರ್ಯದ ಬುಧರು ಬುದ್ಧಿಭ್ರಂಶದಲಿ ಮಾಯಿಮತಗರ್ತದಲಿ ಬಿದ್ದಿರಲು ಕಂಡು ಕರುಣದಲಿ ಸುಖತೀರ್ಥ ಮಧ್ವಾನಂದ ದಶಪ್ರಮತಿಯೆಂಬ ವೇದಾರ್ಥ ನಾಮದಲಿ ಮೆರೆದುಧೂರ್ತದುರ್ಭಾಷ್ಯಾಂಧಕಾರವಂ ಬಿಡಿಸಿ ವಿದ್ಯಾರ್ಥಿಗಳಿಗೊಲಿದು ಸದ್ಭಾಷ್ಯಗಳ ರಚಿಸಿಪರಮಾರ್ಥ ವ್ಯಾಖ್ಯಾನಗಳ ಪೇಳಿ ಉದ್ಧರಿಸಿದ ಸಮರ್ಥ ಮಾರ್ತಾಂಡನಾದ ಸುಖದ 3ಮಬ್ಬು ಮುಸುಕಿದ ಪರೆಯ ತೆರೆದ ಸುಜನರ ಹೊರೆದಕೊಬ್ಬಿದ ಕುತರ್ಕಿಗಳ ತರಿದ ಇಂದುವ ಜರಿದÀಸಭ್ಯರಿಗೆ ತತ್ವಸುಧೆಯೆರೆದ ಮಂತ್ರವನೊರೆದನಬ್ಬಗುರುಪೂರ್ಣಬೋಧದುಬ್ಬಿ ತಮಸಿನೊಳು ಮಿಥ್ಯಾತ್ಮಕ ದುರಾತ್ಮರಿಳೆಗುಬ್ಬಸದ ದರ್ಶನಗಳೊರೆಸಿ ಸತ್ಯವ ಮೆರೆಸಿಅಬ್ಬರದ ತಪ್ತ ಮುದ್ರೆಯನಿತ್ತಘವ ಕಿತ್ತುನಿರ್ಭಯವ ಪದವನೀವಕಾವ4ಇಂಥ ಸಂಕರ್ಷಣನ ಪ್ರೀತಿಯ ಕುವರ ಅಮಲವಾತನಿಖಿಳಪ್ರಾಣನಾಥ ರಘುಪತಿಯಸೇವ್ಯತ್ರೇತೆಯಲಿ ಮೂಡಿ ಪ್ರಖ್ಯಾತಾಕ್ಷಯ ಪ್ರಮುಖಭೂತಳದ ಭಾರರೊದೆದಪೂತನಾರಿಯ ಪಕ್ಷಪಾತದಿಂ ಬಕ ಜರಾಜಾತ ಗಾಂಧಾರ್ಯರಂ ಘಾತಿಸಿದ ಶ್ರೀಸವಿತನಯನಾಜÕದಲಿ ಪಾತಕಿಗಳೊರಸಿದಾದ್ವೈತ ಮತ ಕಾಲನೆನಿಪ್ಪ 5ಹತ್ತುಪನಿಷದ್ಭಾಷ್ಯಸೂತ್ರಗೀತಾಭಾಷ್ಯಮತ್ತೆ ಅಣುಭಾಷ್ಯ ಋಗ್ಭಾಷ್ಯಭಾಗವತತಾತ್ಪರ್ಯ ವಿಷ್ಣುಸ್ತೋತ್ರದ್ವಯಂ ಕಲ್ಪದ್ವಯಂಹತ್ತು ಪ್ರಕರಣವು ಕೃತಿಯುತಂತ್ರಸಾರಕೃಷ್ಣಾಮೃತಾಬ್ಧಿಯ ಮಹಾಭಾರತಾನ್ವಯ ವಿವರ್ಣನವೆಂಬ ಸದ್ಗ್ರಂಥ ಮೂವತ್ತೇಳು ರಚಿಸಿ ಮೋಕ್ಷೋಪಾಯವರುಹಿದ ವಿಧಾತ್ರ ಪದಕರ್ತನೀತತಾತ6ಭಾಟ್ಟ ಪ್ರಭಾತ ಛೆರಾನಾಯತ ? ಪ್ರತ್ಯಕ್ಷ ಮತಿ............... ಚಾರ್ವಾಕ....................ಚೌದ್ಧನೆ............ಶಂಕರನೆ ಕಡೆಯಾಗಿಪ್ಪತ್ತೊಂದುನಷ್ಟ ಭಾಷ್ಯವನಂಘ್ರಿಯಲಿಮೆಟ್ಟಿ ಸದ್ಗುಣಶರಧಿಹರಿಯು ಭುವನಂಗಳನುಹುಟ್ಟಿಸೆತ್ತಿಳಿದಾಡಿ ಮುಕುತಿಯ ನಿಜರ್ಗಿತ್ತುಕಷ್ಟವ ಖಳರ್ಗೀವನೆಂದು ಡಂಗುರಿದದಿಟ್ಟಾಲವಬೋಧ ರಾಜತೇಜ 7ಶ್ರುತಿವೇದನಿಕರ ಚಕ್ರವ ಪಿಡಿದು ಬ್ರಹ್ಮತರ್ಕಾವಳಿಯ ಶಂಖದ ಭೀಕರ ಘೋಷದಿಂದ ಜಗತ್ಪ್ಪಾವನನ ಪುರಾಣಗದೆ ಇತಿಹಾಸ ಪಂಚರಾತ್ರಭಾವಶಾಙ್ರ್ಗವಿಡಿದುಜೀವೇಶ ಭೇದಶರಪಂಚಕದಿ ಬ್ರಹ್ಮಸೂತ್ರಾವಳಿಯಿಂಬಿನ ನಂದಕವ ಧರಿಸಿ ಬೆಂಬತ್ತಿದೇವರಿಪುದುರ್ಮತವ ಓಡಿಸಿದಮಧ್ವನಾರಾಯಣ ಪಾರಾಯಣ ಯತಿ ಸುಮತಿ 8ತರುಣರವಿತೇಜಸುಸ್ಮಿತ ಸುಂದರ ನಾನಾ ಸುವರ್ಣಕಾಪಿನ ಭ್ರಾತ ಪ್ರಬೋಧ ಮುದ್ರಾಭಯಕರಸರೋರುಹದಿಂದ ಮೆರೆವ ವಿಧಿಪನಶರಣಜನ ಮಂದಾರನಪರಮನವರತ್ನದ ಪದ್ಮದ ಮಾಲೆಯಿದು ಪುಣ್ಯಕರವು ವೈಷ್ಣವರ್ಗೆ ಅಘದೋಟ ಮುಕ್ತಿಯ ಕೂಟಗುರುಮೂರ್ತಿಯ ಕೀರ್ತಿ ಪ್ರಸನ್ನವೆಂಕಟಪತಿಯವರಪ್ರಧಾನಾಂಗ ಮೂರ್ತಿಯ ವಾರ್ತಿ9
--------------
ಪ್ರಸನ್ನವೆಂಕಟದಾಸರು
ಸಮಸ್ತ ನಾಮಮಣಿಗಣ ಷಟ್ಚರಣ ಪದ್ಯಮಾಲಾಶ್ರೀ ರಮಾವರ ಶ್ರುತಿವಿನುತ ಸುಖಸಾರಗೃಹಕೆ ಸರ್ವೇಶ ಸುರದ್ರುಮವಾರಿಜಾಕ್ಷ ಮುಕುಂದಮುರಹರನಾರಸಿಂಹ ನಮೋಪ.ಗರುಡಗಮನ ಗುಡಾಳಕಾಖಿಳಶರಣಜನಸುರಧೇನುಸುರಮಣಿಕರುಣಸಾಗರ ಕಾಮಿತಾರ್ಥದದುರಿತಗಜಸಿಂಹಾಸರಸಿಜಾಸನಸೇವ್ಯಮುಕ್ತಾಭರಣನಮಿತ ಸುರೇಶ ನಿಶಾಚರಹರಣಶೀಲ ಸದಾಗಮ ಜೆÕೀಯಾದಿ ಪುರುಷ ನಮೋ 1ವಿಶ್ವಗರ್ಭ ವಿಚಿತ್ರಚರಿತ ಶುಭಾಶ್ವವದನ ವಿಶಾಲವಿಕ್ರಮಶಶ್ವದೇಕ ಸುವ್ಯಾಪ್ತ ಜ್ಞಾನಾನಂದ ಬಲಪೂರ್ಣನಶ್ವರೇಶ್ವರ ಸವಿತರೇಶ್ವರಈಶ್ವರೇಶ್ವರವೇದಗೋಚರಸುಸ್ವಭಾವ ನವಾಂಬುದಾಂಗ ಕೃಪಾಳು ಕೃಷ್ಣ ನಮೋ 2ಜನಪಮುನಿನುತ ತಾಟಕಾಂತಕಜನಕಜಾವರ ಲಕ್ಷ್ಮಣಾಗ್ರಜಜನಕ ವಾಗ್ವರ ಇಂದ್ರಪೂಜಿತ ಸೂರ್ಯಸುತಪಾಲದಿನಪ ಕುಲಪತಿ ದೀನವತ್ಸಲವನಧಿಬಂಧ ವಿಹಾರದಶಶಿರಹನನಕಾರಣ ಭರತಪಾಲಕ ರಾಮರಾಜ ನಮೋ3ಪೂತನಾಂತಕ ಶಕಟಮಾರಕವಾತಚಕ್ರಾನಿಷ್ಟಹರ ನವನೀತ ಪ್ರಿಯ ದಧಿಸಾರ ಭೋಜಕ ಗೋಪವಧುಲೋಲಶೀತಕರ ಕುಲತಿಲಕ ಶ್ರುತಿವಿಖ್ಯಾತಕರಿಚಾಣೂರ ಬಕಹರ&ಟsquo;ಮಾತುಳಾಂತಕ ಪಾರ್ಥಸ್ಥಾಪಕ ಕೌರವಾಂತ ನಮೋ 4ಚಕ್ರ ಶಂಖ ಗದಾಬ್ಜಧರ ತ್ರಿವಿಕ್ರಮಾಚ್ಯುತ ವರಹ ವಾಮನನಕ್ರಶಿಕ್ಷಕ ನಾಗರಕ್ಷಕ ನಿತ್ಯತೃಪ್ತ ಹರೇಶಕ್ರಗಿರಿಶಾರ್ಚಿತ ಪದಾಬ್ಜ ತ್ರಿವಕ್ರವಧು ಸೌಂದರ್ಯದಾಯಕಅಕ್ರುರಾಭೀಷ್ಟದ ವಿದುರ ಉದ್ಧವವರೇಣ್ಯ ನಮೋಮ 5ಮಧುಮಥನ ಕೈಟಭವಿದಾರಣಕುಧರವರ ಆನಂತವರ್ಣಾಭಿಧ ಜನಾರ್ದನ ಸಾಮಗಾಯನ ವೇದ್ಯಅನವದ್ಯವಿಧಿನಿಷೇಧಾಲಿಪ್ತ ಸತತ ವಿಬುಧನಿಯಾಮಕ ನಿರ್ಭಯಾತ್ಮ ತ್ರಿವಿಧ ಜನಾಶ್ರಯ ಕುಶಶಯನ ಶಾರಙ್ಗಪಾಣಿ ನಮೋ 6ವಾಸುದೇವಕುಭಾರವಾಹಕವಾಸವೇಯ ಕಪಿಲ ಋಷಭಮಹಿದಾಸ ಯಜ್ಞಾದತ್ತ ನಾರಾಯಣ ನಿರಾಮಯ ಭೋಶ್ರೀಸನಾತನ ಸಕಲಭುವನ ನಿವಾಸ ಸಂಕರುಷಣ ಸದಾಸ್ಮಿತಹಾಸ ದಿವಾಕರೇಕ್ಷಣಸ್ವಪ್ರಕಾಶನಮೋ7ಶೇಷಶಯನ ಜಗಚ್ಚರಾಚರಪೋಷಕಾಧಾರಕ ಸ್ವಜನ ಹೃದ್ಭೂಷಣಾಪರಿಚ್ಛಿನ್ನ ಅಪ್ರಮೇಯಾದಿ ಶ್ರುತಿವಕ್ತಘೋಷ ವರ್ಣ ಸುಪೂರ್ಣ ವಾಚ್ಯಾಶೇಷದೋಷವಿದೂರ ಖಳಜನಭೀಷಣಾಪ್ರಾಕೃತ ಅನುಪಮ ಪರಮಪುರುಷ ನಮೋ 8ಇಹದ್ಭಯ ಕ್ಷಯಕರ ಗುಣತ್ರಯರಹಿತ ವೃದ್ಧಿ ಹ್ರಾಸವರ್ಜಿತವಿಹಗತೈಜಸಪ್ರಾಜÕವಿಶ್ವಾವಸ್ಥತ್ರಯದಾತಾಅಹಿತನಾಶ ಪರೇಶ ಗಹನಾತ್ಗಹನಅವ್ಯಯಅತಿಶಯಾದ್ಭುತಬಹುಳ ಜೀವಾಂತರಿಯ ಅಂತರ್ಬಹಿಃಸ್ವತಂತ್ರ ನಮೋ 9ಪೂರ್ಣ ಕಾಮಾಂಬೋಧಿ ಶ್ರೀವಟಪರ್ಣತಲ್ಪ ಪರಾತ್ಪರಾಪ್ರತಿವರ್ಣ ನಿಗಮಾಗಮ ಅತಕ್ರ್ಯಾನಂತ ಸದ್ಗುಣ ಧೇನಿರ್ಣಯಾತೀತಾನಿರುದ್ದ ಸುಖಾರ್ಣವಾಚ್ಯುತ ಸೌಖ್ಯಕರ ನವಕೀರ್ಣ ವಿಗ್ರಹಪದ್ಮನಾಭಉದಾರಲೀಲ ನಮೋ10ಮೋಕ್ಷವಲ್ಲಭ ಭವಮಲಘ್ನ ಮುಮುಕ್ಷುವರದ ಮುನೀಂದ್ರ ಸುಮನೋಧ್ಯಕ್ಷ ದಾಮೋದರ ದಯಾಪರ ಜಿತದಿತಿಜ ಸಮರಭಿಕ್ಷುಕಾನ್ವಯಪ್ರಿಯ ಸಮಾಧಿಕಪಕ್ಷ ಸೃಷ್ಟ್ಯಾದ್ಯಷ್ಟ ಕಾರಣದಕ್ಷಾಧ್ವರಹರ ಬ್ರಹ್ಮ ನಿವಹಾದ್ಭಿನ್ನರೂಪ ನಮೋ 11ಕಂಠಕೌಸ್ತುಭಭೂಷಣಾಂಶಾಕುಂಠಿತಾತ್ಮೈಶ್ವರ್ಯ ಅಶುಭವಿಲುಂಠಕಾಧೋಕ್ಷಜ ಉಪೇಂದ್ರನೆ ಶ್ರೀಶ ಅನಿರುದ್ಧಕುಂಠಿತ ಜನನ ಮರಣ ಶಿರಿ ವೈಕುಂಠಪಾಬ್ಜಾಮ್ಲಾನ ತುಲಸೀಕಂಠಮಾಲಾನ್ವಿತ ಸುಗಂಧ ಜ್ಞಾನಕೋಶ ನಮೋ 12ನಿರ್ಜರೇಷ್ಟದ ನೀತಫಲದನೆದುರ್ಜನಾರ್ದಕ ದೂಷಣಾಂತಕನಿರ್ಜಿತಾಖಿಳ ಸುಜನಪಾಲಕ ನಿಶಾಚರೌಘಹರವರ್ಜಿತಕಲುಷನಿತ್ಯವಿಬುಧರಊರ್ಜಿತರ ಚಾರಿತ್ರವಿಮಲ ಗುಣಾರ್ಜಿತೋದಧಿ ವಿಪದಧ್ವಜ ವೈರಾಗ್ಯ ಪುರುಷ ನಮೋ 13ಅಪುಶಯನ ಆದ್ಯಾಪ್ತ ಇಷ್ಟಜನ ಪರಗತಿಪ್ರದ ಈಶ ವರನುತಉಪಮವಿರಹಿತ ಊಧ್ರ್ವಗಪ್ರಿಯ ಋಜು ಭೃನ್ರೂಪಧರಲುಪತ ದುಷ್ಕøತ ಲೋಕ ಮೋದಕಚಪಲ ಏಕಾನೇಕ ವಿಗ್ರಹಸ್ವಪರ ಐಶ್ವರ್ಯೋಜ ಔದಾರ್ಯ ಸಹಸ್ರ ನಮೋ 14ಕರುಣನಿಧಿ ಖಳಹರ ಗರಾದಪಘರಘರಧಿ ಸಮ್ಯಙ್ಞ್ನಮಕ ಸುಚರಿತಪ್ರಾಕೃತಛವಿರಹಿತ ಜನಪಾಲಝಷಋಷಭಾಞುರು ಜಗತ್ಪರ್ಯಟನಕಮಠಡಮರ ಧರೇಢ್ಯನೆ ಗೂಢ ಗುಣಚಿತ್ಪರಕುಧರಧಿಕೋಚ್ಚರ ಜಾರಗ ಧನುಹನ್ಧನದನಮೋ15ನರಸಖಾಮಿತಪಶುಪಫಣಿಮದಹರ ಬಲಾನುಜಭರಿತವಿಕ್ರಮಮರುತ ಕಾಂಗಯರುಘ್ನ ನೆರಲೇಶ್ವಶುರ ಲಕ್ಷ್ಮೀಶಾವರದರಾಟ್ ಶಶಿವದನ ಷಕೃಸನಿರುತ ಸರ್ವಭುಕ್ ಯಜÕ ಹವ್ಯೇಶ್ವರ ಸ್ವತೃಪ್ತ ಸ್ವಪೂರ್ಣಲಕ್ಷ್ಮೀಧರ ಯಜ್ಞಾಂಗ ನಮೋ 16ಕಪಟನಾಟಕಕಾಲಕಿತವಭಯಪರಿಹರ ಕೀಚಕರಿಪುಪ್ರಿಯಕುಪುರುಷಾಂತಕ ಕೂಬಕೇಶನೆ ಕೈವಲ್ಯಕೀಶವಿಪುಲಕೋಶನೆ ಕೌಶಿಕಮುನಿ ಮಖ ಪರಿಪೋಷಕಕಂಬುಕಂಧರತÀಪನ ಕೋಟಿಪ್ರಕಾಶ ಕಶ್ಯಪಸುತ ಸುರೇಂದ್ರ ನಮೋ 17ಖರವಿದಾರಕ ಖಾದಿ ಪಂಚಕಭರಿತನಖಿಳ ವ್ರಜಸಖೀಮನೋಹರ ಸುಖುರಪುಟ ಶೋಭಿತ ಖಡ್ಗ ಖೂಚ್ರ್ಛ ಇಷುಪಾಣಿಸುರಸಖೇಳನ ಪರಸುಖೈಕ ಶರಿರ ವಿಶಿಷ್ಟ ಸುಖೋದಯಾಂಕುರವರಸುಖೌಘಾಖಂಡಪರಶೋ ದುಃಖಹರಣ ನಮೋ18ಗಗನನಾಭಾಗಾಧ ಚರಿತ ಗಿರಿಗಣಸೇವ್ಯ ಸುಗೀತಪ್ರಿಯ ಗುಪ್ತಗುಣ ಗೂಢಧಿ ಗೇಹ್ಯತ್ರಯಯುತ ಗೈದಿಹನೆ ಗೋಪ್ತಾಸ್ವಗತ ಗೌರವ ಗಂವ್ಹರಾಂಕಿತಸುಗಃನೋತ್ತರ ಶುಭಸುಖಾಕರಸುಗಮಸೂಕ್ಷ್ಮ್ಮ ಸುದುರ್ಗಮಾಲಯ ವಿಜಿತರೋಷ ನಮೋ19ಘಟಶ್ರವಣ ಘಾತಕ ಲಘಿಮಯುಕ್ಚಟುಲಗಾತ್ರಾ ಘೀಜನಹರಣಪಟು ರಘುದ್ವಹ ಪಿಶಿತಭೋಜಕ ಘೂಕಖದ್ಯೋತಕಠಿಣ ಘೇರಟಮಾನಖಳಸಂಕಟ ನಿವಾರಕಘೋರಯೋಧಕನಟಕಾಘೌಘ ವಿದಾರ ಘಂಟಾಚಾಪ ದೀರ್ಘ ನಮೋ 20ಚಕ್ಷುಷಾಲಯ ಚಾರುಗುಣಚಿತ್ಕುಕ್ಷ್ಷೆ ಚೀರದ್ವಯ ಚುತೇತರರಕ್ಷ ಚೂಡಾಚೇಷ್ಟ ಚೈದ್ಯಹರಾದ್ಯ ಚೋರಾರೇರಿಕ್ಷಜಾತಾವರ ಚೌರಾಶಿತಿಲಕ್ಷ ಪ್ರತಿಮಾದ್ಯಕ್ಷಚಂದನವಕ್ಷ ವನಸ್ರಗ್ಧರ ಋಚಃಸ್ವನ ಪ್ರೀಯಪುರುಷ ನಮೋ 21ಛತ್ರಯುಕ್ ಛಾಯಘ್ನ ಛಿಧ್ವರಕ್ಷುತೃಷಾರ್ದಕ ಛೇದವರ್ಜಿತ* * * ಸ್ವೇಚ್ಚೈಕಚರ ಇಚ್ಛೋದ್ರೇಕ ಮಾಂದ್ಯಹರಶತ್ರುಭಿತ್ಸಚ್ಛೌರ್ಯ ಭೂಷಿತಸತ್ರಭುಕ ಛಂದೋಮಯಾತ್ಮಕಪುತ್ರ ಪೌತ್ರ ಪ್ರಪೌತ್ರ ಶೋಭಿತ ಸ್ವಚ್ಛಃ ವರ್ಣ ನಮೋ 22ಜಯತರಾನನ ಜಾಡ್ಯಹರಜಿತಭಯನಿಚಯ ಜೀವೌಘರಕ್ಷಯಜುರ್ಯಜಾಸುರ ಜೂಕನುತ ಸುರಜೇಷ್ಠ ಜೈನಧಿಹನ್ಲಯ ಜಲಾಶ್ರಯ ಜೋತಿರ್ಮಯ ತನುವ್ಯಯ ವ್ರಜೌಕಸ ವಂದ್ಯ ಜಂಬುನಿಲಯ ಕುವಲಯನಯನ ಅಜಸ್ರಾನಂದ ಬಲಗ ನಮೋ 23ಝಡಿತಿಚರ ಝಂಝಾಮರುಚ್ಚರಝಡುಪಚರ ಝಿಲ್ಲಿಕ ವನೇಚರಜಡಧಿಚರ ಝೀರಿತ ಸುರ ಝುಂಟಾವಲಯ ಝೂಣಿಚರ ?ಒಡನೆ ಝೇಂಕರಿಸುತಲಿ ಝೈಡಿಯುದೃಢದಿ ಝೋಂಡಿಯೋಳ್ಚ್ಚರಿಸಿ ಝೌಂಕರಿಸ್ಯೊಡಲಿನೊಳು ಝಂಕಾರಪೂರ್ಣನೆ ಝಷಪತಿಯೆ ನಮೋ 24ಪಟಲಹೈಮಕಟಾಹಭಂಜಕನಿಟಿಲದೃಕ್ ಟೀಕಾರ್ಥಸುಪ್ರಿಯಕಟುಮತಿಘ್ನ ಭವೇಡ್ಯಾ ಟಂಕಾನ್ವಿತ ಕರಾಬ್ಜೇಕಾಜಠರಜಡಹ ಕುಠಾರಧರಸತ್ಕಠಿಣಕರ ಸುಕಠೋರ ಯೋಧ ಕಮಠವಿಕಾರ ಶಠೌಘಸಂಹರ ನೃಹರೆ ಭೃಗುಜ ನಮೋ 25ಕುಂಡಲೀಶ ಷಡಾಸ್ಯಸನ್ನುತಪಂಡಿತಾರ್ಚಿತ ಪಾಂಡುರಾಂಬರಮಂಡಲೇಶ ಬಿಡೌಜನುತ ನೃವಿಡಂಬನ ಚರಿತ್ರಪಂಢರಾಪುರ ರಾಜವಿಠಲಾಖಂಡಮತಿ ಪಾಖಂಡ ದೂಷಕಖಂಡಮರಕ ಪ್ರಭುಘ್ನಮುನಿ ಪುಂಡರೀಕವರದ ನಮೋ 26ಪ್ರಣತಪ್ರಿಯ ಪ್ರಣಾಯ್ಯಪ್ರಿಯ ವಿಪಫಣಿಪಪ್ರಿಯ ವಾಣೀಧವಪ್ರಿಯಅಣುಮಹದ್ರೇಣೂಸ್ಥಪ್ರಿಯ ಸುಗಣೇಶ ಪ್ರಿಯಕರನೇಕ್ಷಣ ಕ್ಷಣೈಕ್ಯ ಸುವ್ಯಕ್ತಧಾರಣಗುಣಗಣೋತ್ಪಾಟಣ ರಣೌಘಾಂಗಣ ಭಯೋಚ್ಚಾಟಣ ಗುಣಾಂಕ ಶರಣ್ಯಸುಖದ ನಮೋ 27ತÀಥ್ಯವ್ರತ ಸತ್ತಾತ್ವಿಕಾಗಮಕಥ್ಯ ತಿಲಮಾತ್ರಾರ್ಪಕೇಷ್ಟದಮಿಥ್ಯದೂಷಕ ತೀರ್ಥಶ್ರವ ತುರ್ಯಾತ್ಮಾತೂರ್ಣಪ್ರಿಯನಿತ್ಯತೇಜಸ ತೈತ್ತಿರಿಯಶ್ರುತಿಸ್ತುತ್ಯ ತೋಯಾಯನ ಧೃತೌಷಧಪಥ್ಯ ತಾಂತ್ರಿಕಪರಮಚೇತಃಪರಮಕಾಲ ನಮೋ28ಪ್ರಥಮಪುರುಷ ಪೃಥಾತ್ಮಜಾನ್ವಗಮಥಿತವೀರ್ಯ ರಥೀಂದ್ರ ಪರಿಚರಪೃಥಿವಿ ಪೂಜಿತ ಸ್ಥೂಲಕೃತ್ಯಥೇಚ್ಛ ಸ್ಥೈರ್ಯಮತೇಪಥಿಕಸದನ ಯಥೋಕ್ತ ಫಲದ ವಿಪಥರಥೌಘಪ ಸುರಥಚರಣ ಕುಪಥಗÀ ದೂರಕ ಬ್ರಹ್ಮಸ್ತಂಭಾಂತಸ್ಥ ಸ್ವಸ್ಥಃ ನಮೋ 29ದಹರ ವ್ಯೋಮಗ ದಾತೃ ದಾಂತ ಹೃದ್ಗುಹಸದನ ಕರ್ತ ತುಹಿನಬಿಂಬಗಅಹಿಪದೀಪ್ತ ಮಯೂಖ ದುರ್ಗಾವ್ಯಾಕೃತಾಂಬರಗಾಅಹಿತದೂಷಕ ದೇವ ದೈತ್ಯರದೋಹನ ಕಾರ್ಯಗ ದೌತ್ಯಕರ್ಮಗದ್ರುಹಿಣದೇಹ್ಯಗ ದಂಡಕಾರಕ ದರ್ಪಕಸಹ ನಮೋ 30ಧÀರ್ಮನಿಚಯಪ ಧಾತು ಸಮುಹಪಕರ್ಮಧಿಷÀಣಪ ಧೀರಪ್ರಜÕಪನರ್ಮವಾಗ್ಮಿಪ ಧುನಿಕದಂಬಪ ಧೂರ್ಜಟಾಂಕಿತಪಚÀರ್ಮಖಡ್ಗಪಧೇನುವಿಪ್ರಪಮರ್ಮ ಧೈರ್ಯಾಂಕಿತನಧೋಕ್ಷಜನಿರ್ಮಲಾತ್ಮಕ ಧೌಮ್ಯಗರ್ಗಪ ಧನ್ಯಧನಪ ನಮೋ 31ನಗವಿಧೃತಕರ ನಾಗಗರ್ವಹನ್ನಿಗಮರಿಪುನಾಶಕ ನೀತಪ್ರಭುಸುಗುಣಸೇವ್ಯ ನುತಜನಮಂದಾರ ನೂತನಾಬ್ಜಾಂಘ್ರೀಯುಗ ಯುಗಾಂತಕ ನೇಮನೈಷ್ಟಿಕಸುಗುಣನೋದಧಿ ನೌಗ ನಂದಕವಿಗತ ಸ್ನೇಹವಿನಷ್ಟ ಜಗದೋದ್ಧರಣಶೀಲ ನಮೋ 32ಪವನ ಮತಿ ಪರಿಪಾಕ ಬಿಂಬಸ್ತವನನಿರತ ಪಿನಾಕಿಮೋಹನಸುವಧು ಪೀಯೂಷಧರ ಪುಷ್ಪವಿಹಾಸ ಪೂರ್ಣಪ್ರಭಾಕವಿವರದ ಪೇಶಲ ಜಟಿಲ ಪೈಲವಿನುತ ಶುಕವಿಪೋಷ ಪೌರಾಣವಿರಚಕ ಪಂಚನಿಶಿ ಭಾರತ ಸೂತ್ರಕರ್ತ ನಮೋ 33ಫಲಿತ ಸದ್ರಸ ಫಾಲಲೇಖಕಲಲಿತ ಸ್ಫೀತಾತ್ಮಕ ಸ್ಫುಟಥಭೃಜ್ವಲ ಮರುತ ಪಯಫೇನ ಭುಕ್ಷತ ಸ್ಫೋಟಾತಂಕಹಾಬಲಬಲದ ಬಾಣಘ್ನ ಬಿಲಗಿರಿನಿಲಯಮುನಿ ಹೃನ್ನಿಲಯಬುಧಮಂಡಲ ವಿರಾಜಿತ ಬೋಧಯುತಕರ ಬಂಧಮೋಕ್ಷ ನಮೋ 34ಭದ್ರಪದ ಭಾವಕ ಭಿಷಗ್ವರರುದ್ರಭೀಕರ ಭುಕ್ತಿದಾ ದಾರಿದ್ರ್ಯದೂರಕ ಭೂರಿಭೂತಿದ ಭೇದವಾದೀಶಾಹೃದ್ರುಜಹನ್ ಭೈಷ್ಮೀಶ ಭೋಜೇಶಾದ್ರಿಕುಲಿಶಕುಶಸ್ಥಳೋಕ ಸುಪದ್ರವಾರ್ದಕ ಭೌಮವರಪ್ರದ ಭಂಗರಹಿತ ನಮೋ 35ಮಕರಧ್ವಜಜಿತ ಮಾಸಖಾಮಿತಭುಕುಲಜೀವನ ಮೀನ ಮುರಲಿಧರಕರ ಮೂಲಕವೀಂದ್ರ ಮೇಧ್ಯಚರಿತ್ರ ಮೈಥುಳಪಾಸುಕರಮೋಹಕ ಮೌನಿಪೂಜಕಚಕಿತಕರ ದನುಜೇಂದ್ರ ಕಷಣಾಂಬಕ ಬಕಾಂತಕ ಮಂಜುಹಾಸ ಮಹಾಧಿರಾಜ ನಮೋ 36ಯಜÕ ಭಿಕ್ಷುಕ ಯಾಜÕರತ ಯಿಂದ್ರಾಜÕ ದೂಷಕ ಯೀಷಣಾರ್ದಕಸುಜÕರಾಡ್ಯುಗ ಯೂಗಸಂಭವ ಯೂಥಪೋತ್ತಂಸಅಜÕಭಿದ್ಯೇಕೇಶ ಮೌನಿಗಣಜÕ ಯೌವನ ಪುಂಸಯಂತ್ರಾರ್ಥಜÕ ಪೋಷಕ ಕಿಂಕರೋಧೃತ ಕಾಮುಕಾಷ್ಟ ನಮೋ 37ರಸಿಕರಾಜಪ ರಾಜ್ಯಚಕ್ರಪವಸುಪ ವೃಕ್ಷಪ ಕುಲಪರೀಕ್ಷಿಪಪ್ರಸರಪಾಂಥಪ ರುಚಿಗುಣೌಘಪರೂಪಬಹುರೂಪಾಅಸುಪ ರೇತೋದ್ಭವಪ ರೈಗಪರಸಪ ರೋಷಪ ರೌಪ್ಯನಗಪಪಕುಸುಮಬಾಣಪ ರಂಗಕ್ಷೇತ್ರಪ ರಹಸ್ಯಪಾಲ ನಮೋ 38ಲವಜನಕ ಲಾಘವ ಕರಾಬ್ಜ ಲಿಪ್ತವಿಮಲ ಶ್ರೀ ಚಂದನಾಂಗ ಸುಕವಿನಚರಲುಬ್ಧ ವಧು ಪೂಜ್ಯನುಲೂಖ ಲೋಧಕನೇಭವಜಪಾಕ್ಷರ ಲೇಶ ಮೋಹ ಮದವಿರಹಿತ ಲೋಭಘ್ನ ಲೌಕಿಕಪ್ರವಹೇತರ ಲಂಕೌಕಸಾರ್ದಕ ಲಬ್ಧತುಷ್ಟನಮೋ39ವಕ್ತøವರ ವಾಲ್ಮೀಕಿ ಕೃತೀಶ ವಿವಿಕ್ತಮತಿ ಪದವೀಶಗತಿದನೆವುಕ್ತ ಸುಚರಿತ ಊಧ್ರ್ವಪಟ ಪ್ರಸ್ಥಾಪ ವೇದ್ಯ ನಮೋರಿಕ್ತಭಯ ವೈದೇಹಿ ಮನೋಹರತ್ಯಕ್ತಪ್ರಾಕೃತವೋಂ ವೌಷಡಾದ್ಯುಕ್ತಿವಾಚಕ ವಂದ್ಯವಂದಿತ ವಹಕ ವಾಹಕ ನಮೋ 40ಶಮಯುತಾಗ್ರಣಿ ಶಾಮಶಿವಕರಗಮನಶೀಘ್ರಗ ಶುದ್ಧ ವಿದ್ಯೋದ್ಯಮ ಶುಚಿವ್ರತ ಶೂರ್ಪನಖಿ ಮದಹರ್ತ ಶೇಷಸಹಯಮ ದಯಾಂಬುಧೆ ಶೈಲಗ್ರಹ ಸಂಯಮಿ ಗಣಾರ್ಥಿತ ಶೋಕತಾಪ ಪ್ರಶಮನ ಶೌಚಾಚಾರಯುತ ಪ್ರಭೊ ಶಾಂತ ಶಸ್ತ ನಮೋ 41ಷಡ್ವಿಭೂತೆ ನಿಷಾದ ಭಯಹರಷಡ್ವಧೂಧವ ಋಷಿವಧೂಸಖಶಾಡ್ವಲಚರ ಇಷೀಕ ಇಷುಧರ ಕಾಂಡ ಸುವಿಹಾರಾಷಡ್ವಿಕಾರಾತೀತ ವಿಜಿತಾನಡ್ವಷೇಚಿತ ಸೌರಭೇಯ ಭೂವಿಡ್ವರಘ್ನ ವೃಕ್ಷೌಘಘ್ನ ಸ್ವರ್ಣ ನಿಷಂಗಚಾಪನಮೋ42ಸರಸಿಜಾನನ ಸಾಧ್ಯ ಸಿದ್ಧನಿಕರಕರಾರ್ಚಕ ಸೀಕ್ಷರಕ್ಷಕಸುರಹೃನ್ಮಂದಿರಸೂರಿಹೃದ್ಗುಹಸೇವ್ಯ ಸುರಮೌಳಿನಿರುಜ ಸೈಂಧವಕಾಸ್ತø ಸೋಮಾಭರಣತೋಷಕ ಸೌಮ್ಯ ರತ್ನಾಕರನಿರಂಜನಸಂಜಯೋತ್ಸವ ಸಹಜಶೂರ ನಮೋ43ಹಲಿ ಸಹಗ ಹಾರ್ದಿಕ ಮನೋಗತಫಲ ಹಿರಣ್ಮಯವಸನ ಹೀರಾವಲಯ ಹುತ ಭುಗ್ಬಲದ ಹೂಣಪವಿತ್ರ ಹೇತ್ವರ್ಥಜಲಧಿಪುರಪತೆ ಹೈಮರಾಶಿದಬಲಿದ ಹೋಮದ ಹೋತ್ರಭಾಗದಸುಲಲಿತೋದನ ಪರಮಹಂಸ ಸತ್ಕುಲ ಹರುಷ ನಮೋ 44ಪಳಲವಾಂತ ಕಳಾಢ್ಯ ಯಜ್ಞಾವಳಿ ಕೃತಾದರ ನಿವ್ರ್ಯಳೀಕ ನಿಖಿಳ ಕೃಪಾಳುವರೇಣ್ಯಜೀವ ಜಿಳೂಕ( ಜಾಳಕ?) ತೃಪ್ತಿಕರಸ್ಥಳಕಳೇವರಭರಿತ ಬ್ರಹ್ಮ ವಿಪುಳ ಕಳೈಕ್ಯ ತಳೋಧ್ರ್ವಮದ ವಿಹ್ವಳ ಬಳೌಘನೆ ನಿಷ್ಕಳಂಕ ಕಳಾಪ್ರವೀಣ ನಮೋ 45ಕ್ಷತರಹಿತ ಕ್ಷಾರಾಬ್ಧಿ ಬಂಧಕಕ್ಷಿತಿಭರಹರ ಕ್ಷೀರನಿಧಿಗ್ರಹಅತುಳಗ್ರಹ ಕ್ಷುದ್ರಾರೆ ಕ್ಷೂರಾಯುಧನೆ ಕ್ಷೇಮೇಶಗತಿಗತೇ ದೀಕ್ಷೈಕ್ಯಕ್ಷೋಣಿಪತಿಪತೇ ಕ್ಷೌಮರಥ ಕ್ಷಾಂತಿಭರಿತ ನೃಗೋದ್ಧರ ಕ್ಷತ್ರವಲ್ಲಭ ಕ್ಷತ್ರವೇಷ ನಮೋ 46ಏಕರಾಡ್ ವಿಶ್ವೇಕಕಾರಕಏಕವ್ಯಾಪಕ ಏಕಸ್ಥಾಪಕಏಕಭೋಜಕ ಏಕಯಾಜಕ ಏಕತೋಕಾತ್ಮಏಕಸೃಜ ಭುವನೈಕವರ್ಧಕಏಕಮಾರಕ ಏಕತಾರಕಏಕಯಾಚಕ ಏಕಸೂಚಕ ಏಕಪತ್ರನಮೋ 47ದ್ವಯಕ್ರಿಯೇಶ್ವರ ದ್ವಯಪಥೇಶ್ವರದ್ವಯಸುವಿಸ್ತರ ದ್ವಯವಿಗೋಚರದ್ವಯನಿವಾರಕ ದ್ವಯಪ್ರದಾಯಕ ದ್ವಯಸಮಯಪೂರ್ಣದ್ವಯ ಪ್ರವಾಹಕ ದ್ವಯನಿಯಾಮಕದ್ವ್ವಯನಿರಂತರ ದ್ವಯದ್ವಯೇತರದ್ವಯಸುಬೋಧಕ ದ್ವಯಪ್ರಸ್ಥಾಪಕ ದ್ವಯಭಯಘ್ನ ನಮೋ48ತ್ರಯ ಸುವಿಗ್ರಹ ತ್ರಿಪದಕಾಲತ್ರಯಗ ತ್ರಿದಿವಪ ತ್ರಿಪಥಗಪಿತ ತ್ರಿನಯನಾರಿಹನ್ ತ್ರಿಪುರಮೋಹಕ ತ್ರಯ ಸ್ತ್ರಿಂಶತ್ ಸುರಪತ್ರಿಯುಗುದಿತ ತ್ರಿಗುಣೇಶ ಸಾಗರತ್ರಯಪ ಪಂಚಕತ್ರಿವಿಧಭಾಷ್ಯನಿಚಯಕಚಕ ತ್ರಿದಶಾರ್ಚ ತ್ರಿಜಗದ್ಧರಣಮಾರ್ಗನಮೋ49ಚತುರ್ವಿಧಾತ್ಮಾ ಚತುರ್ಭುಜಾಂಚಿತಚತುರ್ಮುಖಾಧಿಪ ಚತುರ್ವಿಧಾರ್ಥದಚತುರ್ವರ್ಣಾಶ್ರಯ ಚತುರ್ಮುಕ್ತಿ ಚತುಷ್ಟಯೇಶ್ವರ ತೇಚತುಃಸಮುದ್ರಗ ಚತುರತರಮತಿಚತುರ್ವಿಧಾಯಥ ಚತುರ್ಬಲಾಂಬುಧಿಚತುರವೇದಾರ್ಥಿತಚರಣ ಚತುಶ್ಯಾಸ್ತ್ತ್ರಪೂಜ್ಯನಮೋ 50ಪಂಚಮುಖಮುಖ ಪಂಚಮುಖನುತಪಂಚಜನರಿಪು ಪಂಚಮೋಕ್ಷದಪಂಚಪಾಂಡವಪ್ರಾಣ ವರಪಂಚಾಕೃತಾವ್ರಾತಪಂಚಶರಪಿತ ಪಂಚವ್ಯೂಹ ಸುಪಂಚಭಿದಮತ ಪಂಚಪರ್ವಹಪಂಚಕಾಲಜÕ್ಯಜÕ ಸಂಭೃತಪಂಚಬಾಣನಮೋ51ಷಟ್ಸಹೋದರ ಷಟ್ಚರಣಚರಷಟ್ಸಪತ್ನಹನ್ ಷಡೂರ್ಮಿಹರಷಟ್‍ಶಕ್ತ್ಯಾತ್ಮಕ ಷಡ್ಗುಣೋತ್ತರ ಷಡೃತುಪ್ರವಹಷಟ್ಕರಾಭಿದ ಷಟ್ಪರೋಕ್ಷದಷಟ್ಕ್ಕ್ರಯುಗ ಷಟ್ಶಾಸ್ತ್ರಪ್ರಿಯತಮ ಷಟ್ಕಸಹಗÀ ನಮೋ 52------------------------- 53ಅಷ್ಟಕಾರಣ ಶ್ಲಿಷ್ಟ ಮಹಿಷಿಯರಷ್ಟಕಾಶ್ರಯ ಅಷ್ಟಮದಹರಅಷ್ಟಕಾಷ್ಟಿಗ ಅಷ್ಟಭೂತಿದ ವ್ಯಷ್ಟಸೃತ್ಯಹಅಷ್ಟದಂಶಕ್ಷೋಣಿಪ್ರಜಹರಅಷ್ಟನಾಗಪ ಅಷ್ಟಭುಜಧರಅಷ್ಟ ಆಯುಧ ಸಂಭೃತಾಷ್ಟೌಷಧ ತ್ರಿಭಂಗ ನಮೋ 54ನವಸುರತ್ನಾಭರಣಯುಕ್ ತ್ರಿರ್ನವಕಪ್ರಿಯ ನವದ್ವಾರಪುರ ಪ್ರಭೊನವಶಯುಕ್ತ್ಯಾತ್ಮಕ ನವಗ್ರಹ ನವದೃಯಾಗದ್ರುಣನವರಸೇಶ್ವರ ನವಪ್ರಜೇಶಪನವನಿಧೀಶ ನವಾರ್ಥದೆ ದಾನವರಿಪುವೆ ನವಕೋಟ್ಯಮರರಿಂ ನಮಿತಚರಣ ನಮೋ 55ದಶಶತಾನನ ದಶಶತಾಂಬಕದಶಶತ ಸುತೋರ್ದಂಡ ದರಕಳದಶದಶಾಭಿದ ದಶಶತಾಭಿದ ದಶಖಗಾಮರಪದಶವರೂಥಜ ದಶಮುಖಘ್ನ ತ್ರಿದಶ ಭಯಾಂತಕ ದಶಕಕುಭ ಹಸತ್ದಶನ ದಶಮತಿಭಾಷ್ಯ ಋತದಶನೀಶದ್ರಕ್ಷ ನಮೋ 56ಶತಸುಖಾರ್ಥಿ ಶತಾಬ್ದಶಯನ ಸುಶತಮಖಾರ್ಚಿತ ಶತಗೋಪಿಪತೆಶತಸೋಮನೃಪಶತಕ ಸ್ಥಾಪಕ ಶತಶತಾಂಶುಧರಾಶತಕುರುಜಹನ್ ಶತಕುಲೋದ್ಧರಶತಾಯುಃಪ್ರದ ಶತಾಪರಾಧಿಪಶತಸಹಸ್ರಾರ್ಕಭ ಶತಪತ್ರಾಕ್ಷ ಸುಖದ ನಮೋ 57ಕ್ಷಿತಿಪ್ಲವೋದ್ಧರಕ್ಷಿತಿಭೃತೋದ್ಧರಕ್ಷಿತಿತಳೋದ್ಧರಕ್ಷಿತಿಚಲನಕರಕ್ಷಿತಿತ್ರಿಪದಧರ ಕ್ಷಿತಿಪಕ್ಷಯಕರ ಕ್ಷಿತಿಕನ್ಯಾಸುವರಕ್ಷಿತಿಜನಾಶಕ್ಷಿತಿಖಳಮೋಹಕಕ್ಷಿತಿಭರಾರ್ದಕ ಕ್ಷಿತಿಪಾಲನಪರಕ್ಷಿತಿವಲಯಚರ ಕ್ಷಿತಿಜನೇತರ ಕ್ಷಿತಿಸುರೇಶ ನಮೋ 58ಅಂಬುಗಮನ ಪಯೋಂಬುಮಥನ ಲಯಾಂಬು ತಳಗಾರುಣಾಂಬು ಸಟ ಬಾಹ್ಯಾಂಬುವಾಹಕ ಅಂಬುಶೋಷಕ ಅಂಬುಧಿಮದಘ್ನಅಂಬುಗೃಹ ಮೋಹಾಂಬುಧೆ ಧರ್ಮಾಂಬು ಶ್ರೀಮತ ಅಂಬುಜೇಶ ಸುಧಾಂಬುಧಿ ಸಮಾನೋದರಾಂಬುದಗಾತ್ರ ಕಪಿತ ನಮೋ 59ಅಗ್ನಿನಿಭ ಅಬ್ಧ್ಯಾಗ್ನಿ ಸಹಚರಅಗ್ನಿಮಯ ಪ್ರಳಯಾಗ್ನಿಲೋಚನಅಗ್ನಿಕಾರ್ಯಜ್ಞಾಗ್ನಿ ಪೂಜಿತ ಅಗ್ನಿ ಹೋತ್ರಯುತಾಅಗ್ನಿ ರುಧನ್ನಾಗ್ನಿಕೋಪನಅಗ್ನಿಸ್ಥಾಪಕ ಅಗ್ನಿವ್ಯಾಪಕಅಗ್ನಿವರ್ಧಕ ಅಗ್ನಿದೀಪಕ ಅಗ್ನಿವರ್ಣ ನಮೋ 60ವಾತಜನಕನೆ ವಾತಸಮಭ್ರಮವಾತಪಾಗ್ರಜ ನಾಸಿಕಜಲಯವಾತಸಮ ಕ್ವಾಶಾಂಕ ವಾತಭ್ರಾತೃ ಹಿತಕರಣಾವಾತಸಖಗತ ವಾತಭವನುತವಾತಸುತನುತ ವಾತರಶನ ಸುವಾತಸಮ ಹರಿಗಮನಸೂತ್ರಸುವಾತಜನಕ ನಮೋ61ಅಂಬರ್ವಾನರಜಾರ್ಚಿತ ನಗಾಂಬರಾಂಬರ ಕ್ರೀಡಾಂಬರಾಳಕಸಂಭಜಿತ ಸ್ವಾಂಬರಭರಿತಪದ ಅಂಬರೇಣುಕಹನ್ಅಂಬರಗ ವಂಶೇಂದ್ರ ಗೋವಧ್ವಾಂಬರಾಪಹರಾಂಬರಾಂಬರಅಂಬರಗ ಹಯಗಾಂಬರಪ ಪಾಂಬರ ಸುನಾಭಿ ನಮೋ 62ಶಬ್ದಬೋಧಕ ಶಬ್ದಕಾರಕಶಬ್ದಘರ್ಘರ ಶಬ್ದಹುಂಕರಶಬ್ದಪಾರಗ ಶಬ್ದ ವೀರಗಭೀರ ಶಬ್ದಾಂಕಾಶಬ್ದಶೋಧಕ ಶಬ್ದದೂಷಕಶಬ್ದಸ್ಥಾಪಕ ಶಬ್ದವಿಸ್ತøತಶಬ್ದ ಬ್ರಹ್ಮಜೆÕೀಶ ಶಬ್ದಾತೀತ ಶಬ್ದ ನಮೋ 63ವೃಷಭಗೇಷ್ಟ ಮಿಥುನ ಕುಜಾರ್ದಕವಿಷಮಕರ್ಕಶಮೃತ್ಯು ಕರಿಹರಿವಿಷರದನ ಕನ್ಯಾಪತಿಸಖ ವೃಶ್ಚಿಕಾಭಾಂಗಾವಿಷಪಧನುಹರಮಕರಕುಂಡಲವಿಷಕುಂಭ ಸ್ತನಪಾನ ತತ್ಪರವಿಷಯಸುಖಮಾಯ ಮೀನ ಮೇಷಾರೂಢಸೇವ್ಯನಮೋ64ಅಶ್ವರೂಪ ಮಹಾಭರಣಿಸಖವಿಶ್ವಕೃತ್ತಿಕಾಯಂಗಿ ವರರೋಹಿಣೇಶ್ವರೋದ್ಭವ ಮೃಗಮದಾಂಕಾರಿದ್ರವಿಣ ಹರಣಾನಿಸ್ವಜನ ಪುನರ್ವಸುದ ಗುರುಗಣಹೀಶ್ವರಾಸನ ಪಿತೃಚಯಾರ್ಚಿತಸ್ವ ಸ್ವಭಾಗ್ಯ ಸುಪೂರ್ಣ ಅಮೃತೋತ್ತರ ಸುಹಸ್ತ ನಮೋ 65ಚಿತ್ರರಥ ಸ್ವಾತಿಶಯದೂರ ಮರುತ್ತವೇಶಾನುರಾಧಕೋದ್ಧರಗೋತ್ರಿ ಸುಖಕರ ಮೂಲರಾಕ್ಷಸವಂದ್ಯ ಜಲರೂಪಶತ್ರು ಶ್ರವಣರಹಿತ ಧನಿಷ್ಠ ನಕ್ಷತ್ರ ಶತಪತಿ ಕುಲಜ ಮಧ್ಯ ಪೂರ್ವೊತ್ರ ಭದ್ರಪದೇಶ ರೇವತಿ ರಮಣಾವರಜ ನಮೋ 66ಕತರಕರ್ಚಿತ ಕಿತವಹರ ಸತ್ಯವ್ರತಪ ಕ್ರೀಡಾಪರಕುಧರಕೂಜಿತನಿಗಮಕೇಡ್ಯ ಕೋಟರಮುಖ ಕೌಶಲ ಜವಗಮಾಶ್ರುತಿಹರಹರ ಕಂಠರೇಖಾಂಕಿತ ಕಶ್ಯಪಸುತ ಕರುಣಭಾಷಕಶತಸುಖೋದ್ಧರ ಸಿತತರೋದರ ಶಫರಿರೂಪ ನಮೋ 67ಕಮಠಕಾಲಯ ಕಿಲ್ಬಿಷೋದರವಿಮಲ ಕೀಲಾಲೇಷ್ಟ ಕುಲಗಿರಿಭ್ರಮಣಕರ ಕುಪರ ಕರ್ಮೇತರ ಕೇಶ್ವರೇಷ್ಟಕರಅಮಿತ ಕೈತವಾನಿಷ್ಟ ಕೋಮಲವಿಮಲಜಠರಕಠಿಣವಪುಃ ಕೌರ್ಮ ಮಹತ್ಸ್ಮøತಿಪ್ರಿಯ ಕಂಠಲಂಬ ಕಚ್ಛಪಾತ್ಮ ನಮೋ 68ಕನಸಭವ ಕಾಪುರುಷಮಥನಕಿಟಿನಟ ಕೀರ್ತಿತಯಜÕ ಕುಶಮಯತನೋ ಶ್ರೀ ಕುಧವ ಕೆಗಕ್ರೋಡ ಕೈಶೋರ ಕುಜವರದಘನಸಮಸ್ವನಕೋಲಘರ್ಘರಮನುಸನಕನುತ ಕೌತುಕಾಟಣಕನಕಗಿರಿಚರ ಕಂಜಭವನುತ ಕಷ್ಟಹರಣ ನಮೋ 69ಮಧ್ವವಲ್ಲಭ ಮಧ್ವತೀರ್ಥಗಮಧ್ವಮತಪರ ಮಧ್ವಪತೆ ಮುನಿಮಧ್ವರಮಣ ಶ್ರೀಮಧ್ವಯತಿನುತ ಮಧ್ವಪುಷ್ಕರಪಾಮಧ್ವಪೋಷಕ ಮಧ್ವಭಾಷಕಮಧ್ವತೋಷಕ ಮಧ್ವರಿಪುಹರಮಧ್ವಕಾಮದ ಮಧ್ವಹೃದ್ಗುಹ ಮಧ್ವವಿಭವ ನಮೋ 70ಪ್ರಸನ್ನವದನ ಪ್ರಸನ್ನಲೋಚನಪ್ರಸನ್ನಭವನ ಪ್ರಸನ್ನಭಾಷಣಪ್ರಸನ್ನಕಾರ್ಯ ಪ್ರಸನ್ನಗುಣನಿಧೆ ಪ್ರಸನ್ನತರ ಮೂರ್ತೆಪ್ರಸನ್ನಪುರುಷ ಪ್ರಸನ್ನ ಸೋಂಕಿತಪ್ರಸನ್ನಕಥನ ಪ್ರಸನ್ನಭೂಷಣಪ್ರಸನ್ನಚರಿತ ಪ್ರಸನ್ನವೆಂಕಟ ಪ್ರಸನ್ನಕೃಷ್ಣ ನಮೋ 71
--------------
ಪ್ರಸನ್ನವೆಂಕಟದಾಸರು