ಒಟ್ಟು 37 ಕಡೆಗಳಲ್ಲಿ , 21 ದಾಸರು , 34 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪ್ರಾಣಸನ್ನುತ ವಿಠಲ | ನೀನೆ ಪೊರೆ ಇವನಾ ಪ ಮೌನಿಕುಲ ಸನ್ಮಾನ್ಯ | ದೀನ ಮಂದಾರಾ ಅ.ಪ. ಯೋನಿ ಅನೇಕ ದೊಳು | ಜ್ಞಾನರಹಿತನಾಗಿಮಾನುಷತ್ವದಿ ಬಂದು | ಜ್ಞಾನ ಬಯಸೀಗಾನ ಲೋಲನ ದಾಸ್ಯ | ಕಾಂಕ್ಷಿಸುತ್ತಿರುವನಿಗೆಶ್ರೀನಿವಾಸನೆ ನಿನ್ನ | ದಾಸ್ಯ ವಿತ್ತಿಹೆನೋ 1 ಪಂಕೇರುಹಜನು ವಿiÁ | ನಾಂಕಷಿತನು ಸರ್ವಸಂಖ್ಯೆರಹಿತಾ ದೇವಾ | ಸಂಕುಲಗಳೆಲ್ಲಾಪಂಕಜಾಕ್ಷನು ಹರಿಸಿ | ಕಿಂಕರರು ತಾವಾಗಿಅಂಕೆಯಲ್ಲಿಹರೆಂಬ | ತರತಮನ ತಿಳಿಸೋ 2 ಸತ್ಯ ಜಗತೀನೊಳಗೆ | ನಿತ್ಯಹರಿ ಸುವ್ಯಾಪ್ತಕರ್ತೃ ಕರ್ಮವು ಕರಣ | ತಾ ಸೇವೇ ಆಗೀನಿತ್ಯರಿಗೆ ಕರ್ಮಗಳ | ತುತ್ತು ಮಾಡ್ಯಣಿಸುತ್ತಾಭತೃವೆಂದೆನಿಸಿಹನೆ | ಉತ್ತಮೋತ್ತಮನೆ 3 ಸಾಧನಸುಜೀವಿ ಇವೆ | ಬಾಧೆಗೊಳಗಾಗಿಹನುಮೋದತೀರ್ಥರಮತದಿ | ಸಾಧನೇಯ ಗೈಸೀಮೋದಪ್ರದನೆಂದೆನಿಸೊ | ಸಾಮವಂದಿತ ಹರಿಯೆಹೇದಯಾ ಪರಿಪೂರ್ಣ | ಆದಿ ಜಗಕರ್ತಾ 4 ಲೌಕೀಕ ಸುಖದಲ್ಲಿ | ಕಾಕುಮತಿಯನು ಕೊಟ್ಟಾಬೇಕಾದ ವೈರಾಗ್ಯ | ಭಾಗ್ಯ ಪ್ರದನಾಗೋನಾಕನದಿ ವಂದ್ಯ ಗುರು | ಗೋವಿಂದ ವಿಠಲನೆನೂಕಿಸಂತಾಪಗಳ | ಮೋಕ್ಷಪ್ರದನಾಗೋ 5
--------------
ಗುರುಗೋವಿಂದವಿಠಲರು
ಬಡವರೆಲ್ಲ ಬದುಕಿ ಸುಖದಲಿ ಬಹುಕಾಲ ಪ ಬಡವರೆಲ್ಲ ಸುಖದಲಿ ಜಗ ಕಡುಕರುಣಕೆ ಪಾತ್ರರಾಗಿ ದೃಢದಿ ಬಾಳಿ ಸಡಗರದಲಿ ಅ.ಪ ಕುಕ್ಷಿಗಾಗಿ ಗೈದು ಬಂದುದು ಲಕ್ಷವೆಂದು ತಿಳಿದು ನಮ್ಮ ಲಕ್ಷ್ಮಣಾಗ್ರಜನಾಜ್ಞೆಯೆಂದು 1 ಮಾನರಕ್ಷಣೆಗೆ ವಸ್ತ್ರವುಟ್ಟು ನಾನು ಎಂಬ ಮಮತೆ ಬಿಟ್ಟು ಜ್ಞಾನರತ್ನವ ಸಂಗ್ರಹಿಸುತ 2 ಜಗದ ಜನಗಳಂತೆ ನಡೆಯದೆ 3 ಯೋಗಿಗಳನು ನೋಡಿ ಹಿಗ್ಗಿ ಭೋಗಿಗಳನು ನೋಡಿ ತಗ್ಗಿ ತ್ಯಾಗ ಬುದ್ಧಿಯುಳ್ಳವರಾಗಿ ಭಾಗವತರಾಚರಣ ಪಿಡಿದು 4 ಪರರ ಸ್ವತ್ತಿಗಾಸೆಪಡದೆ ಎರೆಡು ಸುಖವು ಕರಗತವೈ 5
--------------
ಗುರುರಾಮವಿಠಲ
ಭಕುತರ ಸಂರಕ್ಷಣಾ ನಾರಾಯಣ ಪ ಖಗಪನ ಸ್ಕಂದರೋಹ ಅಘದೂರ ಅಭಯಹಸ್ತ ಸ್ವಗತಭೇದಶೂನ್ಯ ಸರ್ವಾವಸ್ಥೆಯೊಳೆನ್ನ ವಿಗತಕ್ಲೇಶನ ಮಾಡಿ ಸತತಕಾಪಾಡಲಿ ನಿಗಮವಿನುತ ಜಗದಾದಿ ವಂದ್ಯನೆ ದೇವಾ 1 ವರುಣಪಾಶಗಳಿಂ ಜಲಚರಜಂತುಗಳಿಂ ಮತ್ಸ್ಯ ಮೂರುತಿ ತಾ ರಕ್ಷಕನಾಗಿರಲಿ ಧಾರುಣಿ ನೆಲದೊಳು ಶ್ರೀ ವಾಮನ ಕಾಯಲಿ ಸರ್ವಾಕಾಶದೊಳು ತ್ರಿವಿಕ್ರಮ ಕಾಯಲಿ2 ದುರ್ಗರಣಾಗ್ರವನ ಅರಿವರ್ಗಗಳಲಿ ನರಹರಿದೇವ ಸಂರಕ್ಷಕನಾಗಿರಲಿ ಮಾರ್ಗಗಳಲ್ಲಿ ಹಿರಣ್ಯಾಕ್ಷ ವೈರಿಯು ಕಾಯಲಿ ದುರ್ಗಮಶೈಲದೊಳು ಶ್ರೀ ಭಾರ್ಗವ ರಕ್ಷಿಸಲಿ 3 ದಾಶರಥಿ ಪ್ರವಾಸದಲಿ ನಿತ್ಯ ದೇಶಾಂತರಗಳಲ್ಲಿದ್ದರು ಕಾಯಲಿ ಈಶ ಶ್ರೀಮನ್ನಾರಾಯಣ ಎನ್ನ ಕ್ರೂರ ಕರ್ಮಗಳಿಂದ ರಕ್ಷಿಸಲನುದಿನ ನರಾವತಾರ ಎನ್ನ ಗರುವಿನಿಂ ರಕ್ಷಿಸಲಿ 4 ವಿರೋಧಿವರ್ಗದಿ ದತ್ತಾತ್ರೇಯ ಕಾಯಲಿ ಸರ್ವಕರ್ಮಬಂಧಜ್ಞಾನದಿಂದ ಕಪಿಲಾ ಮೂರುತಿ ರಕ್ಷಿಸಲಿ ಅನುದಿನದಲಿ ಎನ್ನ ಸನತ್ಕೂ- ಮಾರನು ಎನ್ನ ಕಾಯಲಿ ಕಾಮದಲ್ಲಿ 5 ದಾನವ ಮಧುಕೈಟಭ ಹರೆ ಹಯವದನ ಘನ್ನಪರಾಧದಿ ರಕ್ಷಕನಾಗಿರಲಿ ಮನ್ನಿಸಿ ದೇವತೆಗಳು ಸಾಧನವೀಯಲಿ ಸನ್ನುತಾಂಗ ಧನ್ವಂತ್ರಿಮೂರುತಿ ಹರಿ ಎನ್ನ ರಕ್ಷಕನಾಗಿರಲಿ ರುಜೆಯೊಳು6 ಜ್ಞಾನರೂಪಿ ವೃಷಭ ಸೀತಾತಪದಿಂದ ಎ- ನ್ನನುದಿನ ಈ ದ್ವಂದ್ವÀದಿ ಕಾಯಲಿ ಯಜ್ಞಮೂರುತಿ ಲೋಕಾಪವಾದದಿ ಕಾಯಲಿ ಸುಜ್ಞಬಲರಾಮನು ದುರ್ಜನರ ಭಯದಿಂ ಅನುದಿನ ರಕ್ಷಿಸಲಿ 7 ಘನ್ನಮಹಿಮ ಶೇಷ ಸರ್ಪಬಾಧೆಗಳಿಂದ ಜ್ಞಾನದಾತೃ ಹರಿಸೇವೆಗೆ ಬರುತಿಹ ನಾನಾ ವಿಘ್ನಗಳಿಂದ ರಕ್ಷಿಸುತಿರಲಿ ಘನ್ನ ಮ- ಹಾ ನರಕ ಬಾಧೆಯಿಂ ತಪ್ಪಿಸಲಿ ಕೂರ್ಮಮೂರುತಿ ಕಾಪಾಡಲಿ ನಿತ್ಯದಿ 8 ವೇದವ್ಯಾಸನು ಶುಧ್ಧಜ್ಞಾನವನೀಯಲಿ ಬುದ್ಧಿಮೋಹದಿಂದ ಬುದ್ಧನುದ್ಧÀ್ದರಿಸಲಿ ಹೃದಯದ ಕಲಿಭಾಧೆ ಕಲ್ಕಿ ತಾ ಹರಿಸಲಿ 9 ಉದಯಕಾಲದಿ ಶ್ರೀ ಕೇಶವ ರಕ್ಷಿಸಲಿ ವೇಣು ಹಸ್ತ ಗೋವಿಂದ ಸಂಗಮದಲ್ಲಿ ಪೂರ್ಣಕರುಣೆ ಯಿಂದ ಎನ್ನ ಕಾಪಾಡಲಿ ಪೂರ್ವಾಹ್ನದಲಿ ನಾರಾಯಣ ರಕ್ಷಿಸಲಿ10 ಮಾಧವ ಅಪ ರಾಹ್ನದಲೆನ್ನ ರಕ್ಷಿಸಲಿ ಬಾಧೆಯಿಂ ಸಾಯಂಕಾಲದಿ ರಕ್ಷಿಸಲಿ 11 ಪ್ರದೋಷದಲಿ ಹೃಷೀಕೇಶ ರಕ್ಷಿಸಲೆನ್ನ ಪದುಮನಾಭ ಅರ್ಧರಾತ್ರಿಯಲಿ ಸಲಹಲಿ ಶ್ರೀಧರನೆನ್ನಪರಾತ್ರಿಯಲಿ ಸಲಹಲಿ12 ಜನಾದರ್Àನನು ಎನ್ನನು ಉಷಃಕಾಲದಲಿ ಸಂಧ್ಯಾಕಾಲದಿ ದಾಮೋದರ ರಕ್ಷಿಸಲಿ ಕಾಲನಾಮಕ ಬೆಳಗಿನಝಾವದಿ ಕಾಯಲಿ 13 ನಕ್ರನ ಹರಿಸಿದ ಚಕ್ರಾಯುಧವು ಎನ್ನ ಶತ್ರುಬಾಧೆಗಳಿಂದ ರಕ್ಷಿಸುತಿರಲಿ ವಿಕ್ರಮಗದೆಯು ಆಶ್ರಿತರುಪದ್ರದು- ಅನುದಿನ 14 ಪ್ರಮಥ ಭೂತ ಪಿಶಾಚ ಪ್ರೇತ ಭಯದಿ ಪಾಂಚಜನ್ಯ ಶಂಖರಾಜ ರಕ್ಷಿಸಲಿ ದುಮ್ಮನ ಶತ್ರು ಬಾಧೆಗಳಿಂದ ಖಡ್ಗವು ಖೇಟವು ಸರ್ವ ಅನಿಷ್ಟದಿಂ ರಕ್ಷಿಸಲಿ 15 ಅವನ ನಾಮರೂಪ ದಿವ್ಯಾಯುಧದ ಸ್ಮರಣೆ ಸರ್ವ ಬಂಧಗಳೆಲ್ಲ ತಕ್ಷಣದಲ್ಲಿ ನಿವಾರಣೆಯಾಗಿ ನಿವೃತ್ತಿಮಾರ್ಗಕ್ಕೆ ಶುಧ್ಧಭಾವ ಭಕುತಿಗೆ ಕಾರಣವು ಸತ್ಯ ಗರುಡ ವಿಷ್ಟಕ್ಸೇನ ಕಷ್ಟದಿಂದ ರಕ್ಷಿಸಲಿ 16 ಹರಿಯ ವಾಹನಾದಿಗಳು ವಿಪತ್ತುಗಳ ಹರಿಸಲಿ ಸರ್ವರಂತರ್ಯಾಮಿ ನಿನ್ನ ನಂಬಿರಲು ಸರ್ವಭಾಧೆಗಳಲ್ಲ ಪರಿಹಾರವಾಗಲಿ 17 ಕಾಲ ಸರ್ವಾವಸ್ಥೆಯೊಳೆನ್ನ ಸರ್ವೋತ್ತಮ ದೇವ ಸರ್ವದಾ ರಕ್ಷಿಸಲಿ ಸರ್ವರೊಡೆಯ ಶ್ರೀಮನ್ನಾರಾಯಣ ನಿನ್ನ ಕರುಣ ಕವಚವು ಎನಗಿರಲನುದಿನ 18 ಬಹಿರಾಂತರದಿ ಮೇಲ್ ಕೆಳಗು ಮಧ್ಯದಲ್ಲಿ ದಿಕ್ಕುವಿದಿಕ್ಕಿನೊಳು ಉರಗಾದ್ರಿವಾಸವಿಠಲ ಸ್ವಾಮಿ 19
--------------
ಉರಗಾದ್ರಿವಾಸವಿಠಲದಾಸರು
ಭಾವದ ಬಯಲಾಟ ಭಾವಿಕ ಬಲ್ಲನಿದರ ನೋಟ ಧ್ರುವ ತೋರಿ ಕೊಡುವುದಲ್ಲ ತೋರಿಸಿ ತಾ ಕೊಂಬುವದಲ್ಲ ತೋರಿಕೆಗೆರಡಿಲ್ಲ ತೋರಿ ತೋರದದರೊಳಾಡುವದೆಲ್ಲ 1 ಬಯಲಿಗೆ ನಿರ್ಬೈಲು ಬಯಲಿಲಿದ್ದವ ಬಲ್ಲಿದರ್ಹೋಯಿಲು ಶ್ರೇಯ ಸುಖದ ಕೀಲು ಜೈಸಿಹ ಮನದವಗಿದು ಮೇಲು 2 ಜ್ಞಾನರಹಿತ ಕೂಟ ಮನೋನ್ಮಕಾಗಿಹ್ಯ ಮುಗುಟ ಅನುದಿನ ಮಹಿಪತಿ ಸುಖದೂಟ3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮಂಗಲಂ ಗುರುರಾಜಗೆ ಮಂಗಲ ಪರಮಾನಂದಸ್ವರೂಪಗೆ ಪ ಜೀವÀಪರಮರೈಕ್ಯವ ತಿಳುಹಿಸುವಾ ದೇವನೆ ನೀನೆನ್ನುತ ಬೋಧಿಸುವಾ ಸಾವು ಸಂಕಟಗಳ ಮೂಲವ ಕಡಿಯುವಾ ಪಾವನಾತ್ಮ ಘನಜ್ಞಾನರೂಪಗೆ 1 ಶೋಧಿಸಿ ದೇಹತ್ರಯಗಳ ಕಳಹಿ ಬಾಧರಹಿತ ಪರಮಾತ್ಮನ ಅರಿವನು ಬೋಧಿಸಿ ಅನುಭವದಲಿ ನೆಲೆಸಿದಗೆ 2 ತೋರಿಕೆ ಅನಿಸಿಕೆ ಎನಿಸುವ ದ್ವೈತವ ಧೀರತನದಿ ಸುಳ್ಳೆಂದು ತಿಳಿಸುವಾ ನಾರಾಯಣಗುರುವರನ ಕೃಪಾಪ್ರಿಯ ಪೂರಣಬ್ರಹ್ಮಸ್ವರೂಪ ಶಂಕರಗೆ 3
--------------
ಶಂಕರಭಟ್ಟ ಅಗ್ನಿಹೋತ್ರಿ
ಮೊರೆಯ ಲಾಲಿಸಬೇಕು ಮರುಗಿ ದಮ್ಮಯ್ಯಾವರದ ಸದ್ಗುರುರಾಯ ವಾಸುದೇವಾರ್ಯ ಪ *ಜನನೀಯ ಜಠರಾದಿ ಜಪಿಸಿದ ಸ್ಥಿತಿಯಾನೆನೆಯಾದೆ ಮರೆತಂಥ ನೀಚಾ ನಾನಯ್ಯಾಸನಿಹವನ ಸೇರಾದೆ ಸುಜ್ಞಾನರಡಿಯಾಕಣುಗೆಟ್ಟು ದಾರಿಯಕಾಣೆ ಗುರುರಾಯಾ 1ಕಾಮಾದಿ ರಿಪುಗಾಳ ಕೂಟದಿ ನಿಂದುಪ್ರೇಮಪಾಶದ ಕಟ್ಟು ಬಿಗಿಯಾಗಿ ಬಂದುಭೀಮಸಂಸಾರದಿ ಬಿದ್ದನಿವನೆಂದುನೀ ಮನಕೆಚ್ಚರ'ತ್ತು ಸೆಳಕೊಂಡು 2ಕೊಳಚೆಯೊಳಿಪ್ಪಾ ಸೂಕರ ವಾಸನೆಯುತೊಲಗಿ ಪೋಗಲಿಯೆಂದು ತೋರ್ಪುದೆ ಮತಿಯುಹೊಲೆದೇಹ ನಾನೆಂಬ ಹಳೆಯ ಸಂಗತಿಯುಬಲಿತಿದೆ ನೀನಿದ ಬಿಡಿಸಿ ಸನ್ಮತಿಯ 3ಸಾಲವ ತಂದು ಸ' ಸ'ಯಾಗಿ ತಿಂದೂಬಾಳುತಿರೇ ಕೊಟ್ಟವ ಬಡ್ಡಿ ಬೇಕೆಂದುಕೇಳಿ ಬಾಧಿಸಲೇತಕೆ ಕಡಗೈದೆನೆಂದುಆಲೋಚಿಪಂತೆಚ್ಚರಾುತೆನಗಿಂದು 4ಬರುವುದು ಸುಖವೆಂದು ಬಲುಯತ್ನಗೈದುಸೊರಗಿದೆನಲ್ಲದೆ ಸುಖಗಾಣೆ ನೊಂದುಕರಣಕೆಚ್ಚರವೊ ಕರುಣಿಸಲ್ಪ'ದುಕರಪಿಡಿದುಳುಹೆಂದು ಕೂಗಿದೆನಿಂದು 5ುೀ ದಯಾರಸಕೆ ನಾನೀವೆನೇನುವನುಪಾದಪದ್ಮವ ನಂಬಿ ಪಾಲಿಸೆಂಬುವನುಆದರಿಸುತ ಭಕ್ತಿಯಾನಂದವನ್ನುವೇದವೇದ್ಯನೆ ಕೊಟ್ಟು ಸಲಹು ನೀನಿನ್ನು 6ಪುಟ್ಟಿದಂದಿನಿಂದಾ ಮಡಿ ಮಡಿಯಾಗಿ ದುಡಿದುಘಟ್ಟಿಗತನವನು ಗಳಿಸಬೇಕೆಂದುಹೊಟ್ಟೆ ಹೊರಕರೊಳಾಡಿ ಹುಸಿಯನೆ ನುಡಿದುಕೆಟ್ಟು ಸುಖಗಾಣದೆ ಕೂಗಿದೆನಿಂದು 7ಸಾಕಾುತಯ್ಯಾ ಸಂಸಾರ ಕೋಟಲೆಯುನಾ ಕಾಣೆ ಸುಖವನು ನಿ'ುಷವಾದರೆಯುನೀಕರಿಸುವರಿಂದ ನಿರ್ವೇದ ಗತಿಯುಸೋಕಲು ನಿನ್ನೊಳು ಸಿಕ್ಕಿತು ಮತಿಯು 8ಧರೆಯೊಳಜ್ಞರ ನೋಡಿ ದಯದಿಂದ ಮುದದಿನರದೇಹದಾಳಿ ಚಿಕನಾಗಪುರವರದಿಒರೆದು ವೇದಾಂತರ್ಥವನು 'ಸ್ತರದಿ 1ಉದ್ಧರಿಸಿದೆ1 ವಾಸುದೇವಾರ್ಯ ಸುಖ ಪಥದಿ 9(ಈ) ಸಾಮಾಜಿಕ ಕೃತಿಗಳು
--------------
ವೆಂಕಟದಾಸರು
ವಾಣಿ ಮಂಗಳಂ ದೇವಿ ಪ ಗೀರ್ವಾಣಿ ಕಮಲಪಾಣಿ ಭ್ರಮರವೇಣಿ ಕೀರವಾಣಿ ಅ.ಪ. ಇಂದುವದನೆ ದೇವಿ ಚಂದ್ರಧವಳ ಸುಂದರಾಂಗಿ ಕುಂದರದನೆ ಮಂದಗಮನೆ 1 ವೀಣಾ ಪಾಣಿ ದೇವಿ ಶೋಣ ಬಿಂದು ದಶನ ವಸನೆ ಏಣನಯನೆ ಧವಳ ವಸನೆ 2 ಅಂಬುಜಾಕ್ಷಿ ದೇವಿ ಕುಂಭ ಸಂಭವಾದಿ ವಿನುತೆ ಕಂಬುಕಂಠಿ ಶಂಭು ಸೋದರಿ 3 ಶಾರದಾಂಬೆ ದೇವಿ ಅಂಬರೋಪಮಾನ ಮಧ್ಯೆ ಜಂಭವೈರಿ ಗೀಯಮಾನೆ 4 ಜ್ಞಾನರೂಪೆ ದೇವಿ ಮೌನಿ ಹೃದಯ ಕಮಲಹಂಸೆ ಧೇನುನಗರ ಸನ್ನಿವಾಸೆ 5
--------------
ಬೇಟೆರಾಯ ದೀಕ್ಷಿತರು
ವಿಶ್ವ ಜ್ಞಾನರೂಪವಿಶ್ವದೊಳ ಹೊರಗು ನೀನಲ್ಲದೆ ಬೇರೆವಿಶ್ವನಾಟಕ ಸೂತ್ರಧಾರರುಂಟೆ ಹರಿಯೆ ಪ ಮುಕುಟ ಮಂಡೆಯಲಿ ಧ್ರುವಲೋಕ ಭುವನಾವಳಿಯುನಿಖಿಲ ಶ್ರುತಿ ನವರತುನ ನಿಟಿಲದಲ್ಲಿಮುಖದಲಿಂದ್ರರು ಅಗ್ನಿ ಸಪ್ತ ಋಷಿಗಳು ದ್ವಿಜರುಮುಖದ್ವಾರದುಸುರಿನಲಿ ಶ್ರುತಿ ಮರುತರುದೃಕುಯುಗದಿ ರವಿ ಶಶಿಯು ಎವೆಯಲ್ಲಿ ನಕ್ಷತ್ರಪ್ರಕಟ ಜಿಹ್ವೆಯ ವಾಣಿ ಕರ್ಣದ್ವಯದಿವಿಕಟ ಕಿವಿಯಲಿ ಅಶ್ವಿನಿದೇವತೆಗಳೆಲ್ಲಸಕಲ ಧರ್ಮವ ಪಡೆದೆಯೆಲೊ ಹರಿಯೆ 1 ಸ್ಕಂಧದಲಿ ಅತಿಥಿಗಳು ವಿದ್ಯಾತತಿಗಳು ಮಹಾಚಂದದರಸುಗಳು ಭುಜ ತೋಳಿನಲ್ಲಿಮುಂದುರದಿ ವಿಷ್ಣು ಹರ ಬ್ರಹ್ಮ ಸಹಿತುದರದಲಿಹಿಂದಿನ ಮಗ್ಗುಲಲಿ ಮನುಮುನಿಗಳುಮುಂದಿನ ಮಗ್ಗುಲಲಿ ಗಿರಿನಿಚಯಂಗಳುಸಂಧಿಯಲಿ ಮಕರಂದ ದೇವತೆಗಳುಮುಂದೊರೆದಿಹ ರೋಮಕೂಪದಗ್ರದಳತೆಯುವೃಂದಗಳ ಶೋಭಿಪ ರೀತಿಯ ಪಡೆದೆಯೆಲೊ ಹರಿಯೆ2 ಬೆನ್ನಿನಲಿ ವಸುನಿಕರ ಸ್ಮರನು ಲಿಂಗದಲಿ ಈ ಭು-ವನವೆಲ್ಲವು ಚೆಲುವ ನಾಭಿಯಲ್ಲಿಮುನ್ನ ಕೈಯಲಿ ವಿಶ್ವದೇವತೆಗಳು ವೈಶ್ಯಉನ್ನತ ಜಾನುವಿನ ಸಕ್ತಿಯಲಿಭಿನ್ನ ನದಿಗಳು ಸನ್ಮೋಹನ ಶಕ್ತಿ ಪ್ರ-ಸನ್ನ ಪಾದಾಬ್ಜದಿಂ ಶೂದ್ರರುನಿನ್ನ ಅವಯವದಲ್ಲಿ ಸಕಲವಂ ಪಡೆದ ಪ್ರ-ಸನ್ನ ಕಾಗಿನೆಲೆಯಾದಿಕೇಶವರಾಯ 3
--------------
ಕನಕದಾಸ
ಶ್ರೀ ಸತ್ಯಜ್ಞಾನರು ಪಾದ ಕಂತುಪಿತನ ದಿವ್ಯಪಾದಾ ಪಾದ ಕೊಡುವಂಥ ಪಾದಾ ಪ ಪಾದ ಬಿಡಿಸುವ ಪಾದಾ ಪಾವನ ಮಾಡ್ವ ಪಾದಾ 1 ಬಿಡಿಸುವ ಪಾದಾ ಭಕ್ತ ಜನರಿಗೆ ಭಾಗ್ಯದ ಪಾದಾ ಸತ್ಯಜ್ಞಾನಾನಂದರ ದಿವ್ಯ ಪಾದಾ 2 ತುಳಸಿಯ ತಂದ ಪಾದಾ ಜರಿದು ಷಡ್ವೈರಿಗಳ ಗೆದ್ದ ಪಾದಾ ಪರಮ ಮಂಗಳಕರವಾದ ಪಾದಾ 3
--------------
ಹನುಮೇಶವಿಠಲ
ಶ್ರೀನಿವಾಸನೆ ನಿನ್ನ ಮಹಿಮೆಯ ಏನ ಪೇಳ್ಪೆನಾ ಜ್ಞಾನರಹಿತಳು ಗಾನಲೋಲನೆ 1 ಮಂಕುಮಾನವರಿಂದ ಸಾಧ್ಯವೆ ಶಂಕರಾದಿ ವಂದಿತನ ಸ್ತುತಿಸಲು ಪಾದ ಪಂಕಜ ಧ್ಯಾನಿಸೆ ನಿನ್ನ ಕೃಪೆಯನಾತಂಕವಿಲ್ಲದೆ2 ನಿನ್ನ ಭಕ್ತರಾ ಕಾಯ್ವೆಯೆಂಬುವುದನ್ನು ಅರಿತೆಹೆ ಪನ್ನಗಾಚಲ ಚಿನ್ನಭೊಮ್ಮನಿಂದಳವೆ ದೇವನೆ 3 ಕಿರೀಟಶೋಭನÀ ವರ್ಣಿಪೆ ಕರ್ಣಕುಂಡಲ 4 ಪದ್ಮನಾಭಗೆ ಪದ್ಮದಕ್ಷಿಯ ತಿದ್ದಿದ ಚಂಪಕದ ನಾಸಿಕ ಮುದ್ದುದಂತ ಪಂಕ್ತಿಗಳ ಕಂಡೆನೊ ಪೂತನಿಯ ಅಸುಹೀರಿದ ಆ ಭುಜಕೀರ್ತಿಗಳ ಕಂಡೆನು ಭಕ್ತಪಾಶ ನಿನ್ನ ಹಸ್ತ ಕಂಕಣವಾ ಕಂಡೆನು 5 ಬೆರಳ ಮುದ್ರಿಕೆ ಕೊರಳೊಳ ಸಾಲಿಗ್ರಾಮದ ಸರ ವೈಜಯಂತಿ ಮಾಲೆಗಳ ಕಂಡೆನು 6 ವÀರ ಶ್ರೀ ತುಳಸಿಯ ಹಾರಗಳ ಮಧ್ಯದಿ ಮೆರೆವ ರಮಾದೇವಿಯಳ ಕಂಡೆನು ಜಾನು ಜಂಘೆಯೊಳ ಮೆರೆವ ಪೀತಾಂಬರ ಕಂಡೆನು 7 ಆಜಾನುಬಾಹು ನೀನ್ಹೊದ್ದವಲ್ಲಿ ವಜ್ರದ್ಪಡ್ಯಾಣಕಂಡೆನು ಸಾನುರಾಗದಿ ಸ್ತುತಿಸಿ ಹಿಗ್ಗುತ ನಾನುಸ್ತುತಿಪ ನಿನ್ನಂಘ್ರಿ ಕಮಲವ 8 ಚರಣಕೊಪ್ಪುವೊ ಗಗ್ಗರಿಪಾಡಗ ವರಗೆಜ್ಜೆ ಪೈಜಣಿ ಕಂಡೆ ದೇವನೆ ಶ್ರೀವೆಂಕಟೇಶನೆ 9 ಕಾಯ ಬೇಕೆÉಲೊ ಕ್ಷಮಿಸೊ ದೇವನೆ 10
--------------
ಸರಸ್ವತಿ ಬಾಯಿ
ಸಿಂಧು ಶೋಷಿಪೇಕ್ಷಣ ಕಲ್ಯಾಣಗಾತ್ರ ಪ ಪವಮಾನ ಪ್ರಿಯ ಪುತ್ರ ಕಾರುಣ್ಯನೇತ್ರ ಅ.ಪ. ನಿರವದ್ಯ ಭೂದೇವ ನಿರುತ ಸುಖಭರಿತ ಭಾವ ಶರಣ ಜನರನು ಕಾವ ಶಪಥ ಭಾವ ಪರ ಸೇವಾ ನಿರುತ ಮಂಗಳ ಭಾವ ಸಂಜೀವ 1 ತನುಮನವ ಹರಿಗಿತ್ತ ಗುಣನಿಧಿ ಮಹಗುಪ್ತ ಅಣುಘನದಿ ಹರಿದೀಪ್ತ ತನುನೋಳ್ಪ ಶಕ್ತ ಘನ ಕೃಷ್ಣವರ್ಯಾಪ್ತ ಮನೋವಾಕ್ಕಾಯಸ್ತ ಗುಣಾಪೂರ್ಣಾ ಹರಿಕೃತ್ಯವನು ಎಣಿಪ ತೃಪ್ತ 2 ಬಲುಭಕ್ತಿ ಭಾರನತ ಬಲಿತ ವಿಜ್ಞಾನರತ ಲಲಿತ ಮಂಗಳಚರಿತ ನಲಿವನು ಪ್ರೀತ ಕ- ಮಲಾ ಅಪಹರ್ತ ಕಲ್ಯಾಣ ಸಂಭರಿತ ಪುಲ್ಲಾಕ್ಷ ಮಮನಾಥ ಕೃಷ್ಣಾಂಘ್ರಿದೂತ 3 ಪರಮ ಸೌಭಗ ಪೂಜ ಪರಭಕ್ತಿ ನಿವ್ರ್ಯಾಜ ಚರಿಸಿ ಶ್ರೀ ಗುರುರಾಜ ವರಕಲ್ಪಭೂಜ ಸರುವ ತತ್ವಗಳೋಜ ವಶಗೊಂಡ ಮಹರಾಜ ಸರುವ ಸಿದ್ಧಿಗೆ ದೊರಿ ಎನಿಪ ವಿರಜ 4 ಸಂತಾಪಹರ ಶಾಂತ ಸೌಭಾಗ್ಯಕರವಂತ ಸ್ವಾಂತದಲಿ ನಿಶ್ಚಿಂತ ಸರಸಿ ಶ್ರೀಮಂತ ಧ್ವಾಂತ ಹರ ಶ್ರೀ ಜಯೇಶವಿಠಲನ ಏಕಾಂತ ಪಂಥ ಬಿಡದಿರುವಂಥ ಪೂರ್ಣ ಜಯವಂತ 5
--------------
ಜಯೇಶವಿಠಲ
ಹೇಳುವೆನು ಕೇಳಿ ಕರ್ಣಾಮೃತವ ಆಲೋಚನೆ ಸಲ್ಲ ತಿಳಿದ ಜ್ಞಾನರಿಗೆ ಪ ಲಕ್ಷಣ ಛಂದಸ್ಸು ಅಡಿಪ್ರಾಸ ಆದಿ ಅಂತಿ ಲಕ್ಷಕ್ಕೊಂದಾದರು ಮೊದಲೇ ಇಲ್ಲಾ ಅಕ್ಷಿ ಇಲ್ಲದವನು ಕೋಲು ಸಂಪಾದಿಸುವ ಅಕ್ಷಿ ಉಂಟಾದವಗೆ ಅದರಿಂದ ಫಲವೇನು 1 ಜ್ಞಾನ ಕರ್ಮರ ಲಂಬನ ಮಾಡಿ ತಿಳಿದಂಥ ಮಾನವನು ನಾನಲ್ಲ ಎಂದೆಂದಿಗೂ ಜ್ಞಾನಿಗಳ ಮನೆಯ ತೊಂಡರ ಪಾದರಕ್ಷೆಯಾ ಪಾಣಿಯಲ್ಲಿ ಪಿಡಿದವನ ನಖಧೂಳಿ ದಯದಿಂದ 2 ರಾಗತಾಳ ಭೇದ ಜತೆ ಜಾಣತನದಿಂದ ವಾಗರ ನಿಮಿತ್ಯ ಪೇಳಲಿಲ್ಲಾ ಹ್ಯಾಗಾದರೇನು ನಾರಾಯಣಚ್ಯುತನೆಂದು ಕೂಗಿ ಕಾಲವ ಕಳದೆ ಜನುಮ ಸಾಧನಕೆ 3 ಬೆಲ್ಲ ಕರದಲಿ ಪಿಡಿದು ಆವನಾದರೇನು ಎಲ್ಲಿ ತಂದರೆ ಅದು ಸೀ ಎಲ್ಲವೇ ಬಲ್ಲನವ ನರಿಯನಿವನೆಂದು ಆಡದಿರಿ ಪುಲ್ಲನಾಭನ ಸ್ಮರಣೆ ಒಂದು ಮುಕ್ತಾರ್ಥ 4 ಹರಿದೈವವೆಂದು ತಾ ಉತ್ತರೋತ್ತರ ತಿಳಿದು ಗುರುಮಧ್ವಮತದಲ್ಲಿ ಲೋಲಾಡಲು ಸಿರಿಯ ಅರಸ ವಿಜಯವಿಠ್ಠಲ ಬಂದು ವೊಲಿವನು ಗುರು ಪುರಂದರನ ದಯೆ ಎನ್ನ ಮೇಲಿರಲಾಗಿ5
--------------
ವಿಜಯದಾಸ
ಹೊನ್ನು ಹೆಣ್ಣು ಮಣ್ಣು ಮಾಯೆಯದು ಮೂರು ರೂಪಗಳ ನಾನು ಪೇಳುವೆನು ಹೊನ್ನು ಹೆಣ್ಣು ಮಣ್ಣು ಎಂಬ ಮೂರವುಗಳ್ ಅವುಗಳನು ಹಂಬಲಿಸಿ ಕೆಡಬೇಡ ಮರುಳೆ ನೀನ್ ಅವುಗಳೇ ಮೃತ್ಯುವಿನ ಕಡೆಗೊಯ್ಯುವವುಗಳ್ 52 ಕಷ್ಟದಿಂ ಸೃಷ್ಟಿಯಲಿ ನಗ್ನತೆಯೆ ಸುಂದರವು ಕಷ್ಟದಿಂ ಮರಣದಲಿ ನಗ್ನತೆಯ ದೇಹ ಕಷ್ಟವಿಕ್ಕ್ಕೆಡೆಗಳಲಿ ನಾಸ್ತಿಸುಖ ಮಧ್ಯದಲಿ ಕನಕ ಕನಕವದೆಂದು ಹೊನ್ನ ಪೇಳುವರು53 ಮೋಹಿನಿಯು ತಾನಾಗಿ ದ್ಯೆತ್ಯರನು ವಂಚಿಸಿದ ಮೋಹಿನಿಯು ತಾನಾಗಿ ರುದ್ರ ವಂಚಿತನು ಮೋಹಿನಿಯು ತಾನಾಗಿ ಸುಂದೋಪಸುಂದ ವಧೆ ಮೋಹಿನಿಯು ಪೆಣ್ಣು ಮೋಸವದಲ್ತೆ ಮನುಜ? 54 ಮಣ್ಣಿನಿಂದಲೆ ಹರಿಯು ದೇಹವನು ಸೃಷ್ಟಿಸುವ ಮಣ್ಣೆ ಅನ್ನವದಾಗೆ ಪಾಲಿಸುವ ನಮ್ಮ ಮರಣಕಾಲದಲದುವೆ ಮಣ್ಣನಪ್ಪುವದು ತಿಳಿ ಮಣ್ಣಿಗಾಗಿಯೇ ನೀನು ಹಂಬಲಿಪೆಯೇಕೆ 55 ಪ್ರಾಣದೇವರೆ ನಿನ್ನ ಉಸಿರಾಟ ಕಾರಣರು ಪ್ರಾಣನುಸಿರಾಟವದು ಯಾರಿಂದಲಹದು? ಅವನೆ ಪರಮಾತ್ಮ ತಿಳಿ ದೇವಾಧಿದೇವನವ ನಿನ್ನ ಬಾಳಿಗೆ ಕಾರಣರು ಇಬ್ಬರಹರು56 ಸೂರ್ಯದೇವನು ನೇತ್ರತತ್ವಕ್ಕೆ ಒಡೆಯನವ ಸೂರ್ಯನದು ಕಣ್ಣು ಯಾರಿಂದ ತೋರುವುದು? ಅವನೆ ಪುರುಷೋತ್ತಮನು ಪರಮಾತ್ಮ ಹರಿಯವನು ಆ ವಿಶ್ವರೂಪಿಯೇ ವಿಶ್ವಧಾರಕನು57 ವಾಸದಿಂ ಬೆಳಗಿಸುವ ಕಾರಣದಿ ಭಗವಂತ ವಾಸುದೇವಾತ್ಮಕನು ಸೃಷ್ಟಿಮೂಲನವ ವಸುದೇವಪುತ್ರನಾಗವತರಿಸಿ ಸಿರಿವರನು ಉಡುಪಿಯಲಿ ಪೂಜೆಗೊಂಬನು ನಿಜವ ಪೇಳ್ವೆ 58 ಕೃತಯುಗದ ಭಾರ್ಗವನು ತ್ರೇತೆಯಲಿ ದಾಶರಥಿ ದ್ವಾರಪದ ಕೃಷ್ಣ ನೀನೇಯಿರುವೆ ದೇವಾ ಮಧ್ವವರದನು ನೀನು ಭಾರ್ಗವನ ನೋಡಲ್ಕೆ ಉಡುಪಿಗೇ ಬಂದಿರುವೆ ಪರಮಾತ್ಮ ನೀನು 59 ಪರಶುರಾಮ ಕ್ಷೇತ್ರ ಶ್ರೀಕೃಷ್ಣನ ಕ್ಷೇತ್ರ ಪದ್ಮನಾಭಕ್ಷೇತ್ರ ಶಂಕರಕ್ಷೇತ್ರ ಹಲವಾರು ದೇವತೆಗಳಿಲ್ಲಿ ನೆಲೆಗೊಳ್ಳುತ್ತ ಪಾವನವ ಗೈಯುವರು ಭೂಮಿಯನ್ನಿದನು 60 ತುಲೆಯಲ್ಲಿ ತೂಗಿದಾಗುತ್ತಮವದದರಿಂದ ತುಲು ದೇಶವಿದು ಜಗದಿ ವಿಖ್ಯಾತವಹುದು ತುಲು ಲಿಪಿಯೆ ಸರ್ವಮೂಲ ಗ್ರಂಥ ಲೇಖನಕೆ ವೇದಾದ್ರಿಯಾಯಿತಿದು ವೇದಾಂತಭೂಮಿ 61 ಮಧ್ಯಗೇಹದ ಭಟ್ಟರಿಂ ಸೇವೆಯ ಪಡೆದು ವಾಯುದೇವೋತ್ತಮನ ಮಗನಾಗಿ ಕೊಡಿಸಿ ಸಜ್ಜನರ ಹೃದಯದಲಿ ಮುಖ್ಯ ತತ್ವವ ತಿಳಿಸೆ ಸರ್ವಜ್ಞ ಮೂರ್ತಿಯನು ತಂದಿರುವೆ ದೇವಾ62 ಪರಶುರಾಮನ ರೂಪದಿಂ ನೀಂ ತಪಗೈದ ಪಾಜಕ ಕ್ಷೇತ್ರದಲಿ ಭಕುತನವತರಿಸೆ ಜ್ಞಾನರೂಪದ ನೀನು ಅವನ ಹೃದಯವ ಪೊಕ್ಕು ಮಧ್ವಮತವನು ನೀನು ಪಸರಿಸಿದೆ ಹರಿಯೆ 63
--------------
ನಿಡಂಬೂರು ರಾಮದಾಸ
ಕಾಯೋ ಶ್ರೀ ನಾರಸಿಂಹ ಕಾಯೋಕಾಯೋ ಶ್ರೀನಾರಸಿಂಹ ತ್ರಿಯಂಬಕಾದ್ಯಮರೇಶಘೋರಅಕಾಲಮೃತ್ಯು ಮೀರಿಬರಲು ಕಂಡುಭೀಷಣನೆ ಸುಭದ್ರ ದೋಷ ಮೃತ್ಯುಗೆ ಮೃತ್ಯುಜ್ಞಾನರಹಿತನಾಗಿ ನಾ ನಿನ್ನ ಮರೆತರೆಪ್ರಬಲೋತ್ತಮನೆನಿಸಿ ಅಬಲರ ಕಾಯದಿರೆಪಾಲಮುನ್ನೀರಾಗರ ಪದುಮೆ ಮನೋಹರ ಗೋ-
--------------
ಗೋಪಾಲದಾಸರು
ಜಯನಾರಸಿಂಹ ಕಾಯೊಘೋರಅಕಾಲ ಮೃತ್ಯು ಮೀರಿ ಬರುವುದು ಕಂಡುಭೀಷಣನೆ ಸುಭದ್ರ ದೋಷ ಮೃತ್ಯುವಿಗೆಜ್ಞಾನರಹಿತನಾಗಿ ನಾ ನಿನ್ನ ಮರೆತರೆಪ್ರಬಲತಮನೆನಿಸಿ ಅಬಲರು ಕಾಡಿದರೆಪಾಲ ಮುನ್ನಿಗನಾದ ಪದುಮ ಮನೋಹರ ಗೋ-
--------------
ಗೋಪಾಲದಾಸರು