ಒಟ್ಟು 72 ಕಡೆಗಳಲ್ಲಿ , 40 ದಾಸರು , 70 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಘನತಾಪ ಘನತಾಪ ಘನತಾಪ ಸಂಸಾರ ನೆನೆಸಲಳವಲ್ಲದನು ಕನಸಿನೋಳಭವ ಪ ಕ್ಷಣಹೊತ್ತು ಮನಸನ್ನು ಸನುಮತಯಿರಗೊಡದು ಗಣನೆಯಿಲ್ಲದ ತಾಪವನೆ ಒದಗಿಪುದಭವ ಅ.ಪ ವನಿತೆಯರ ತಿನಿಸು ತನುಜ ಅನುಜರ ಮುನಿಸು ಜನರನೊಲಿಸುವುದಿನಿಸು ಘನತಾಪ ಅಭವ ತನುರೋಗ ಮನರೋಗ ಧನದ ವಿಯೋಗ ಇನಿತೆಲ್ಲವೊಂದಾಗಿ ಘನಬಾಧಿಸುವುವಭವ 1 ಕೊಟ್ಟ ಒಡೆಯರು ಬಂದು ನಿಷ್ಠೂರಾಡುತ ಬಲು ಕಟ್ಟಿಕಾದುವ ಮಹಕೆಟ್ಟತಾಪಭವ ತಾಪ ಕೊಟ್ಟವರ್ಹಂಗಿನ ತಾಪ ಹುಟ್ಟುಸಾವಿನ ಅತಿ ಕಷ್ಟತಾಪಭವ 2 ಮನುಜರೂಪದ ಮಹ ಘನತೆಯನು ಕೆಡಿಸಿ ಕ್ಷಣದಿ ತೋರೆರಗುವ ಕನಿಕಷ್ಟ ಅಭವ ಇನಿತೀ ಸಂಸಾರತಾಪ ಕನಿಕರದಿಂ ಕಡೆಹಾಯ್ಸಿ ಮನಕೆ ಜಯನೀಡಿ ಕಾಯೋ ಎನ್ನಯ್ಯ ಶ್ರೀರಾಮ 3
--------------
ರಾಮದಾಸರು
ಚಿಂತಿಪೆನೊಂದೊಂದು ನಾನಿಂತು ಬೇಡುವೆನು ಪ ನರಜನ್ಮಕೆ ಬರುವುದು ತಾ ದುರ್ಲಭವು ವರಕುಲ ದುರ್ಮಿಳವು ದೊರೆವುದೆ ಭಾಗ್ಯವು ಧರೆಯೊಳು ಬಂದೀ ಗುರುಕುಲದೊಳು ಪುಟ್ಟಿ ಗುರುವರಪೂಜ್ಯ ಪರಾತ್ಮನ ಪೂಜಿಪೆ 1 ನಿಜರೂಪ ತೋರಿದಿ ಪ್ರಲ್ಹಾದನಿಗೆ ಗಜವರನೆನಹೀಗೆ ವಿಜಯನ ರಾಣಿಗೆ ದ್ರುಪದಾತ್ಮಜೆಗೆ ಭಜಕರ ನಿಚಯಕ್ಕೆ ಕುಜಪ್ರದ ಮೂರ್ತಿಗೆ ಅಜರಾಮರಿಗೆ ನಿಜಪದ ತೋರೆಂದು ಭಜಿಸಿ ಬೇಡುವೆನು 2 ಗಂಗೋದಕದೊಳು ಮೀಯಲು ಪಾವನವು ಮಂಗಲ ತುಲನೇಯು ಸಿಂಗಾರದೊಳಧಿಕಾಚ್ಯುತ ಭೂಷಣೆಯು ನಿನ್ನಾದೇ ವರವು ಬಂಧುರದೇಹವ ತಾಳಿದೆನಗೆ ನೀ ಸಂಗಸುಖವನೀಯೋ ನರಸಿಂಹವಿಠಲ3
--------------
ನರಸಿಂಹವಿಠಲರು
ಜಯ ಜಯ ಶ್ರೀಹರಿಪ್ರಿಯೆ ಜಯಕ್ಷೀರಾಂಬುಧಿತನಯೇ ಜಯ ಜಯ ಕೋಮಲಕಾಯೆ ಬಿಡದೆನ್ನನು ಕಾಯೆ ಪ ಜಯ ರತ್ನಾಕರ ತನಯೆ ಕುರುಕರುಣಾಮಯಿ ಸದಯೆ ಹರಿ ವಕ್ಷ ಸ್ಥಳ ನಿಲಯೆ ಸುರಮುಖಗೇಯೆ 1 ಜಯ ಜಯ ಪಾವನ ಚರಿತೆ ಜಯಚತುರಾನನ ಮಾತೆ ಜಯ ಭಕುತಾಭಯ ದಾತೆ ನಮಿಸುವೆ ಭೂಜಾತೆ 2 ಜಯ ಜಯ ಕಾರ್ಪರ ಸದನೆ ಜಯನರಸಿಂಹನ ರಾಣಿ ಸುರಸಂಶೇವಿತಚರಣೆ ಪಾಹಿಜಗಜ್ಜನನಿ 3
--------------
ಕಾರ್ಪರ ನರಹರಿದಾಸರು
ಜಯ ರುಕ್ಮಿಣೀ ಕಾಂತ ಜಯ ಪಯೋನಿಧಿ ಶಾಂತ ಪ ಜಯತು ಜಯ ಭಗವಂತ ಜಯತು ಧೀಮಂತ ಅ.ಪ ಜಯ ಭಕ್ತಮಂದಾರ ಜಯ ಮೌನಿಪರಿವಾರ ಜಯತು ಜಯ ಧುರಧೀರ ಜಯತು ಸಾಕಾರಾ 1 ವಿಜಯ ಮೌಕ್ತಿಕಾಭರಣ ಜಯತು ವಿಧಿನುತಚರಣ ಜಯತು ಜಯ ಭವತರಣ ಜಯ ಶರಣಕರುಣಾ 2 ಜಯನಾದ ಸುವಿಲಾಸ ಜಯತು ಭಾಸ್ಕರ ಭಾಸ ಜಯ ಮಾಂಗಿರೀವಾಸ ಜಯ ಶ್ರೀನಿವಾಸ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಜಯವ ಪಾಲಿಸಿ ಸಲಹೆ ಜನನಿ ಜಯಲಕ್ಷ್ಮಿ ಜಯಂಕರಿ ಪ ಭಯವಿಮೋಚನೆ ಭಜಿಪೆ ನಿನ್ನ ಜಯವ ವೊಂದಿಸಿ ಭವದಿ ಎನ್ನ ದಯದಿ ಬೆಂಬಲಿರ್ದು ಬಿಡದೆ ಕೈಯ ಪಿಡಿದು ಕಾಯೌ ಸುದಯೆ 1 ಜ್ಞಾನಜ್ಯೋತಿ ಸುಪ್ರಕಾಶ ಮಾಣದಿತ್ತು ಮಮತೆಯಿಂದ ಹಾನಿತಾರದೆ ಪೊರೆಯೆ ಸತತ 2 ಕಾಮಿತಾರ್ಥ ಪೂರ್ಣೆ ಸುತಗೆ ಭೂಮಿಯಾತ್ರೆ ವಿಜಯನೀಡು ಶಾಮಸುಂದರ ಸ್ವಾಮಿ ಶ್ರೀ ರಾಮನ ಪಟ್ಟದರಾಣಿ ಕರುಣಿ 3
--------------
ರಾಮದಾಸರು
ಧರೆಯೊಳಗೆ ವ್ಯಾಸಮುನಿವರನ ಸಂಸ್ಥಾನಕಿ ನ್ನೆರಡನೆಯದಾವುದುಂಟು ಪ. ಪರಿಪರಿಯಲಿ ನೋಡೆ ಪರಮ ವೈಭವದಿಂದ ಧರಣಿಯೊಳು ಮೆರೆಯುತಿಹುದು ಇಹುದುಅ.ಪ. ಹಂಸನಾಮಕನಿಂದ ಹರಿದು ಬಂದಂಥ ಯತಿ ಸಂಸ್ಥಾನ ಸುರನದಿಯೊ ಕಂಸಾರಿಪ್ರಿಯ ಶ್ರೀ ಮಧ್ವಮುನಿ ಮತ ಸಾರ ಹಂಸಗಳು ಸುರಿಯುತಿರಲು ಸಂಶಯವ ಪರಿಹರಿಸಿ ಸದ್ಗ್ರಂಥಗಳ ಸ- ದ್ವಂಶರಿಗೆ ಸಾರುತಿರಲು ಅಂಶ ಹರಿಪರ್ಯಂಕ ಸಹಿತ ಬಾಹ್ಲೀಕ ಯತಿ ವಂಶದಲಿ ಉದಿಸಿ ಬರಲು ಬರಲು 1 ಬನ್ನೂರು ಸ್ಥಳದಲ್ಲಿ ಜನ್ಮವೆತ್ತುತಲಿ ಬ್ರ ಹ್ಮಣ್ಯರಾ ಕರದಿ ಬೆಳೆದು ಚಿಣ್ಣತನದಲಿ ಮೌಂಜಿಧರಿಸಿ ಕಿತ್ತೊಗೆಯುತಲಿ ಧನ್ಯಯತಿಯಾಗಿ ಮೆರೆದು ಘನ್ನ ಶ್ರೀಪಾದರಾಯರಲಿ ಸದ್ಗ್ರಂಥಗಳ ಚನ್ನಾಗಿ ಮನನಗೈದು ಸಣ್ಣ ಪೆಟ್ಟಿಗೆಯೊಳಡಗಿದ್ದ ಶ್ರೀ ಕೃಷ್ಣನ ತನ್ನ ಭಕ್ತಿಯೊಳ್ ಕುಣಿಸಿ ನಲಿದು 2 ಪಡೆದು ಪರಿಪರಿಯ ಮಹಿಮೆಗಳ ತೋರುತಲಿ ದುರ್ವಾದಿ ದುರುಳ ಮತಗಳನೆ ಮುರಿದು ಮರುತ ಮತ ಶೀತಾಂಶುಕಿರಣ ಚಂದ್ರಿಕೆಯನ್ನು ಹರಹಿ ಪ್ರಕಾಶಗೈದು ಸರ್ವ ಸಜ್ಜನರ ಮನದಂದಕಾರವ ಕಳೆದು ಸಿರಿವರನ ಪ್ರೀತಿ ಪಡೆದು ತಿರುವೆಂಗಳೇಶನ ಪರಮ ಮಂಗಳ ಪೂಜೆ ವರುಷ ದ್ವಾದಶವಗೈದು ಮೆರೆದು 3 ಆರಸನಿಗೆ ಬಂದಂಥ ಆಪತ್ಕುಯೋಗ ಪರಿ ಹರಿಸಿ ಸಂಸ್ಥಾನ ಪಡೆದು ಪರಮ ಸಾಮ್ರಾಜ್ಯ ಪಟ್ಟಾಭಿಷೇಕವ ತಳೆದು ಪರಮ ವೈಭವದಿ ಮೆರೆದು ಚಿರಕಾಲ ವಿಜಯನಗರವು ಮೆರೆಯಲೆಂದ್ಹರಸಿ ಅರಸನಿಗೆ ರಾಜ್ಯವೆರೆದು ಕರುಣಾಳುವೆನಿಸಿ ವೈರಾಗ್ಯ ಶಿಖರದಿ ಮೆರೆದು ಮೊರೆಪೊಂದಿದವರ ಪೊರೆದು ಬಿರುದು 4 ಎಲ್ಲೆಲ್ಲಿ ನೋಡಲಲ್ಲಲ್ಲಿ ಶ್ರೀ ಮರುತನ್ನ ನಿಲ್ಲಿಸುತ ಪೂಜೆಗೈದು ನಿಲ್ಲದಿರೆ ಹಂಪೆಯಲಿ ಪ್ರಾಣಾರಾಯನು ಯಂತ್ರ ದಲ್ಲಿ ಬಂಧನವಗೈದು ಚಲ್ಲಾಡಿ ಸುವರ್ಣವೃಷ್ಟಿಯಿಂ ದುರ್ಭಿಕ್ಷ ನಿಲ್ಲಿಸದೆ ದೂರಗೈದು ಎಲ್ಲ ಕ್ಷೇತ್ರಗಳ ಸಂಚರಿಸಿ ಬಹುದಿನ ಹಂಪೆ ಯಲ್ಲಿ ಶಿಷ್ಯರನು ಪಡೆದು ನಿಂದು 5 ನವಕೋಟಿ ಧನಿಕ ವೈರಾಗ್ಯ ಧರಿಸುತ ಭವದ ಬವಣೆಯಲಿ ನೊಂದು ಬಂದು ನವ ಜನ್ಮಕೊಟ್ಟು ಉದ್ಧರಿಸಬೇಕೆಂದೆರಗೆ ಅವನಂತರಂಗವರಿದು ಪವಮಾನ ಮತವರುಹಿ ತಪ್ತ ಮುದ್ರಾಂಕಿತದಿ ನವ ಜನ್ಮವಿತ್ತು ಪೊರೆದು ಪವನ ಗ್ರಂಥಾಂಬುಧಿಯೊಳಡಗಿದ್ದ ದಾಸ್ಯ ರ ತ್ನವ ಪೂರ್ವಗುರುವಿಗೊರೆದು ಸುರಿದು 6 ಪುರಂದರ ಕನಕರೆಂ ಬತುಲ ಶಿಷ್ಯರ ಕೂಡುತಾ ಸತತ ಹರಿ ಚರ್ಯ ಮಹಿಮಾದಿಗಳ ಸ್ಮರಿಸುತ್ತ ಸ್ಮøತಿ ಮರೆದು ಕುಣಿದಾಡುತಾ ರತಿಪಿತನ ಗಾನ ಭಕ್ತಿಯಲಿ ಕನ್ನಡ ಕವನ ಮತಿಯೊಳ್ ನಾಲ್ವರುಗೈಯುತಾ ಕ್ಷಿತಿಯಲ್ಲಿ ದಾಸಪದ್ಧತಿ ಬಾಳಲೆಂದೆನುತ ಯತಿವರರ ಸೃಷ್ಟಿಸುತ್ತಾ | ಸತತ 7 ಅಂದು ವಿಜಯೀಂದ್ರರನು ಯತಿವರರು ಬೇಡÉ ಆನಂದದಲಿ ಭಿಕ್ಷವಿತ್ತ ಬಂದು ಕೈ ಸೇರಿದಾ ರಾಜ್ಯವನು ಕ್ಷಿತಿಪನಿಗೆ ಮುಂದಾಳಲೆನುತಲಿತ್ತ ಪತಿ ವೆಂಕಟೇಶನ್ನ ಪೂಜೆ ವರ ಕಂದನಿಗೆ ಒಲಿದು ಇತ್ತ ಒಂದೊಂದು ವೈಭವವು ಕೈ ಸೇರೆ ವೈರಾಗ್ಯ ತಂದು ಅಭಿರೂಪ ಬಿಡುತಾ | ಕೊಡುತ 8 ನವವಿಧದÀ ಭಕ್ತಿಯಲಿ ಜ್ಞಾನ ವೈರಾಗ್ಯದಲಿ ಕವನದಲಿ ಶಾಂತತೆಯಲಿ ನವಗ್ರಂಥ ನಿರ್ಮಾಣ ಪವನ ಗ್ರಂಥೋದ್ಧಾರ ಸವಿನಯವು ಸದ್ಗುಣದಲೀ ಸುವಿವೇಕ ಸತ್ಕರ್ಮ ಅಂತರ್ಮುಖ ಧ್ಯಾನ ಅವನಿ ಸಂಚಾರದಲ್ಲಿ ಇವರ ಸರಿಯಿಲ್ಲ ದಾಸ ವ್ಯಾಸ ಕೂಟದಲಿ ಭುವನದಲಿ ಮೆರೆದ ಧನ್ಯಾ | ಮಾನ್ಯ 9 ಪಾಪಿಗಳ ಸಲಹಿ ಪಾವನ್ನಗೈಯುತ ಭವದ ಕೂಪದಿಂದುದ್ಧರಿಸಿದಾ ಆಪಾರ ಮಹಿಮೆ ಆದ್ಯಂತ ವರ್ಣಿಸಲಳವೆ ಶ್ರೀಪಾದ ಪದುಮ ರಜದಾ ವ್ಯಾಪಾರವೆನ್ನ ಗುರು ದಯದಿ ಎನ್ನೊಳು ನಿಂದು ತಾ ಪಾಲಿಸುತ ನುಡಿಸಿದ ಗೋಪಾಲಕೃಷ್ಣವಿಠಲ ಧ್ಯಾನದಲಿ ಹಂಪೆ ಗೋಪ್ಯಸ್ಥಳದಲಡಗಿದಾ 10
--------------
ಅಂಬಾಬಾಯಿ
ನಾರಾಯಣ ನಾರಾಯಣನಾರಾಯಣ ನಳಿನೋದರ ಪ ನಾರದಪ್ರಿಯನಾಮ ಜಯನಾರಾಯಣ ನರಕಾಂತಕಅ.ಪ. ಸುರಸಂಚಯ ಸುಖಕಾರಣ ದಿತಿಜಾಂತಕ ದೀನ ಶರಣಪರಾತ್ಪರ ಪಾಂಡವಪ್ರಿಯ ಪರಿಪೂರ್ಣ ಪರಮ ಜಯ1 ಅಘಕುಲವನದಾವಾನಲ ಅಗಣಿತಗುಣಗಣನಿರ್ಮಲತ್ರಿಗುಣಾತೀತ ತ್ರಿಭುವನ ತ್ರಿದಶೇಶ್ವರವಂದ್ಯ ಜಯ2 ಅತಿಮೋಹನಚರಿತ ನಮೋ ಅತಿ ಸದ್ಗುಣಭರಿತ ನಮೋಹತ ಕಲ್ಮಶ ಹಯವದನ ಹರಿ ಹಯರಿಪುಹರಣ ಜಯ 3
--------------
ವಾದಿರಾಜ
ನಿಜ ಭಕ್ತಿ ತೋರಿದನು ಜಗಕೆ ಕೃಷ್ಣ್ಣಾ ವಿಜಯನಾ ಸತಿಯರಿಬ್ಬರ ನೆವದಿ ಮುದದೀ ಪ. ಹಸ್ತಿವರದನು ತಂಗಿಯರ ನೋಡಬೇಕೆಂದು ಹಸ್ತಿನಾಪುರಕೆ ಬಂದ್ಹರುಷದಿಂದ ಚಿತ್ತ ನಿರ್ಮಲದಿ ಪಾಂಡವರು ಪೂಜೆಸೆ ನಲಿದು ಭಕ್ತಿ ಭಾವಕೆ ಮೆಚ್ಚಿ ದ್ರೌಪತಿಗೆ ವಲಿದೂ 1 ಅಣ್ಣನೆಂಬುವ ಭಾವದಲಿ ಸುಭದ್ರೆಯು ಇರಲು ಘನ್ನ ಮಹಿಮನು ಎಂದು ದ್ರೌಪತಿಯು ತಿಳಿದೂ ಸ್ವರ್ಣಗರ್ಭನ ಪಿತನು ಈರೇಳು ಜಗದೊಡೆಯ ಎನ್ನ ಭಾಗದ ದೈವ ಸಲಹೆಂದು ನುತಿಸೇ 2 ಅಂತರಂಗದ ಭಕ್ತಿ ಆನಂದಮಯ ತಿಳಿದು ಕಂತುಪಿತ ಕರಗಿದಾ ಮಮತೆ ಪ್ರೇಮದಲಿ ಶಾಂತಚಿತ್ತಳೆ ತಂಗಿ ದ್ರೌಪತಿಯೆ ಬಾರೆನುತ ಇಂತು ನುಡಿನುಡಿಗೆ ಆಡಲು ಕರುಣೆಯಿಂದ 3 ಕೇಳಿ ಇದನು ಸುಭದ್ರೆ ತಾಳಲಾರದೆ ಅಜ್ಞ ಬಾಲೆ ನಿಜ ತಂಗಿ ನಾನಿರಲು ಐವರಿಗೆ ಲೋಲೆಯಾದವಳೆ ಬಲು ಮೇಲಾದವಳೆ ಎಂದು ಬಾಲಚಂದ್ರನ ಪೋಲ್ವ ಮುಖ ಬಾಡಿಸಿರಿಲೂ 4 ಕಂಡು ಕಮಲಾಕಾಂತ ವಡಹುಟ್ಟಿದಳ ಬೆಂಡಾದ ತೆರವ ಪೇಳೆನಲು ಖತಿಯಿಂದಾ ಪುಂಡರೀಕಾಕ್ಷ ಎನ್ನುಳಿದು ನಿಜ ಭಾವದಲಿ ಕಂಡವರ ಸುತೆ ನಿನಗೆ ಮಿಗಿಲಾದಳೆನಲೂ 5 ಸಚ್ಚಿದಾನಂದ ವಿಗ್ರಹ ನಗುತ ನೆನೆದನೊಂ ದಚ್ಚರಿಯ ಕೌತುಕವ ತೋರ್ವೆನೆಂದೂ ಅಚ್ಛಿದ್ರ ಅಕ್ಲೇಶ ಆನಂದಮಯ ತಾನು ಕ್ಲೇಶ ಪಡುತ ವರಲಿದನೂ 6 ಬಾರಮ್ಮಾ ತಂಗಿ ಸುಭದ್ರೆ ಬೆರಳಲಿ ರಕ್ತ ಸೋರುತಿದೆ ಬೇಗೊಂದು ಚಿಂದಿ ತಾರೆ ತಾರೆನಲು ಗಡಬಡಿಸಿ ಮನೆಯಲ್ಲ ಹುಡುಕತಲಿ ಬಟ್ಟೆ ಕಂಗೆಡುತಾ 7 ಎತ್ತ ನೋಡಿದರತ್ತ ಪಟ್ಟೆ ಪೀತಾಂಬರವು ಕಂಚುಕ ಮಕುಟ ಮೆರೆಯೇ ಚಿತ್ರದಾ ವಸನ ಅರಮನೆಯಲ್ಲಿ ತುಂಬಿರಲು ಮತ್ತದರ ಮಮತೆ ಅಣ್ಣನಿಗೆ ಅಧಿಕವಾಗೆ 8 ಬರಲಿಲ್ಲ ಸುಭದ್ರೆ ಬಾರಮ್ಮ ದೌಪದಿಯೆ ವರ ತಂಗಿ ಬೇಗ ಕೊಡೆ ಹರಕು ಬಟ್ಟೆ ಸುರಿಯುತಿದೆ ರಕ್ತ ಬೆರಳಿಂದ ನೋಡೆಂದನಲು ಕಿರುನಗೆಯ ನಗುತ ಶರಗ್ಹರಿದು ಕಟ್ಟಿದಳೂ 9 ಬಂದಳಾ ವೇಳೆಯಲಿ ಸುಂದರಾಂಗಿ ಸುಭದ್ರೆ ನಿಂದು ನೋಡಿದಳೂ ದ್ರೌಪತಿಯ ಕೃತಿಯಾ ಮಂದಗಮನೆಯು ನಾಚಿ ಮೊಗವ ತಗ್ಗಿಸಿ ನಿಲಲು ಇಂದಿರೇಶನು ಇದರ ವಿವರ ತೋರಿದನು 10 ಬೆರಗಾದ ಪರಿತೋರಿ ಸಿರಿಕೃಷ್ಣ ಕೇಳಿದನು ಜರತಾರಿ ಸೆರಗ್ಹರಿದು ಕಿರುನಗೆಯ ನಕ್ಕಾ ಪರಿ ಏನೆ ಎಲೆ ತಂಗಿ ನರಳುವೋ ಎನ ನೋಡಿ ಪರಿಹಾಸ್ಯವಾಯಿತೆ ನಿನಗೆ ಎಂತೆಂದಾ 11 ಅಣ್ಣಯ್ಯ ನಿನಗೆ ಮಿಗಿಲಾಯಿತೇ ಈ ಶೆರಗು ಎನ್ನ ಅಭಿಮಾನ ಕಾಯುವ ದೈವ ನೀನೂ ಘನ್ನ ಮಹಿಮಾಂಗ ನಿನಗಿನ್ನು ಕ್ಲೇಶಗಳುಂಟೆ ನಿನ್ನ ಲೀಲೆಗೆ ಹರುಷ ಉಕ್ಕಿತೆಂದನಲೂ 12 ಹೇ ನಾರಿ ನಾನನಾಥರಿಗೆ ನಾಥನು ಮುಂದೆ ನೀನಿತ್ತ ವಸನ ಅಕ್ಷಯವಾಗಲೆಂದು ಶ್ರೀನಾಥ ದ್ರೌಪದಿ ಸುಭದ್ರೆಯ ಮನ್ನಿಸಿ ಮೆರೆದಜ್ಞಾನಿ ಜನಪ್ರಿಯನು ಗೋಪಾಲಕೃಷ್ಣವಿಠಲಾ13
--------------
ಅಂಬಾಬಾಯಿ
ನೀನೇ ಶ್ರಾದ್ಧದನ್ನವನುಂಡವಾ ನಾನರಿಯದಂತೆ ಯೆನ್ನ ಗೃಹದೊಳು ಶ್ರೀವೈಷ್ಣವನಾಗಿ ಪ ಬಾಣಸಿಗಾದವರು ನೀನೋ ನಾರಾಯಣಿಯೋ ಕ್ಷೋಣಿಯೊ ರವಿಯೋ ಜಾಹ್ನವಿಯೊ ರತಿಯೋ ವಾಣಿಯೋ ಸುರಧೇನುವೋ ಬಂದಾತಧನಂಜಯನೂ ತಾನೆ ಎನ್ನ ಆದ್ದಾಗಾಯ ತೆಲೆದೇವಾ1 ತಿಳಿದೆ ನಾನೀಗ ನಿನ್ನನು ಕೂಡೆ ಬಂದಿದ್ರ್ದ ಬಿಳಿಯ ಚುಟ್ಟಿನ ಯೆಣ್ಣೆಗೆಂಪಿನವನೂ ಕುಳಿತವನು ಕೈಯಪುಸ್ತುಕದವನು ಕಂಕುಳೊಳ ಗಿಳಿದ ಮಡಿಗಡೆಯವರಾರು ಪೇಳೆಲೆ ದೇವಾ 2 ಆವಾವ ಸ್ಥಾನಕಾರಾರ ನೇಮಿಸಿದೆ ನೀ ದೇವಾ ಉಪಾಧ್ಯರಾರಭಿಶ್ರವಣವನು ಪೇಳ್ದ ಕೋವಿದರಾರು ಶ್ರೀವೈಷ್ಣವರಾರೆಲೆದೇವ 3 ಜನನ ಸ್ಥಿತಿಲಯಕೆ ಕಾರಣಭೂತನೋರ್ವ ನೀ ನೆನುತ ವೇದಾಂತಗಳು ಪೊಗಳುತಿರಲೂ ಇನಿತಕ್ಕೆ ಯೆಂದನ್ನದಗಳು ಕುಡಿತೇಪಾಲ್ಗೇ ಮನವ ಸೋತುದ ಬಿಡುವೆಯಾ ನಿತ್ಯತೃಪ್ತಾ 4 ಗುರುಗಳಂದದಲಿ ಶ್ರೀವೈಷ್ಣವ ನೀನಾಗಿ ಶರಣನಾ ಪಿತೃಗಳಿಗೇ ಶ್ರಾಧ್ಧವನುಂಡುದದೂ ಪಿರಿಯದಾಯ್ತು ಎನ್ನ ನೂರೂಂದು ಕುಲಕೆಲ್ಲಾ ಪರಮಪದವಾಯ್ತು ವೈಕುಂಠಚೆನ್ನಿಗರಾಯಾ 5
--------------
ಬೇಲೂರು ವೈಕುಂಠದಾಸರು
ಪದ್ಮಾಲಯೆ ಪೊರೆಯೆ ಸದಯೆ ಪ. ಪದ್ಮಸಂಭವೆ ಬೇಡುವೆ ಕೊಂಡಾಡುವೆ ನಿನ್ನ ಪಾಡುವೆ ಅ.ಪ. ಮನಸಿಜನಯ್ಯನ ಮೋಹದ ರಾಣಿಯೆ ಮುನಿಸಿಂತೇತಕೆ ಭೂಸುತೆ ಮುನಿಸನ್ನುತೆ ಕರುಣಾನ್ವಿತೆ 1 ಜೋಡಿಸಿ ಕರಮಂ ಪಾಡುತ ನಿನ್ನಂ ಬೇಡುವ ಕಂದನ ಪಾಲಿಸೆ ಮೊರೆಲಾಲಿಸೆ ದಯೆತೋರಿಸೆ 2 ಸುರನರವಂದಿತ ಚರಣಸರೋಜದಿ ಶರಣೆನ್ನುವ ಕಂದನಂ ವರಿಸೀ ದಿನದಿನಮೆಂದೆನು 3 ಮಾತೆಯೆ ಮುಳಿದೊಡೆ ಪೋತನ ಪೊರೆವಾ ದಾತರುಮಿರ್ಪರೆ ನೀನುಡಿ ಗತಿ ನಿನ್ನಡಿ ಅಣುಗರ ಕೈಪಿಡಿ4 ಪರಮಪಾವನ ಶೇಷಗಿರೀಶನ ಕರುಣಾರೂಪಿಣಿ ಭಾಮಿನೀ ಶುಭದಾಯಿನೀ ಜಯನಂದಿನೀ5
--------------
ನಂಜನಗೂಡು ತಿರುಮಲಾಂಬಾ
ಪರಿಣಯ ಮಹೋತ್ಸವವು ಪ ಮಂಗಳ ಮಂಟಪವು ಚಪ್ಪರದಲ್ಲಿ .ಶೃಂಗಾರ ವರ ಪೀಠವು ಕಂಗೊಳಿಪ ರುಚಿರಾಂಬರಾಳಿಯು ಮಂಗಳ ಸುವಾದ್ಯಂಗಳಿಂದಲಿ 1 ಸುತ್ತ ದೀಪಾವಳಿಯು ಸುವರ್ಣದ ಮುತ್ತಿನ ತೋರಣವು ವಜ್ರ ಪದ್ಮವು ಸುತ್ತು ವೀಳೆಯ ಪುಷ್ಪ ನಿಚಯವು ಸುತ್ತೆ ಜವ್ವಾಜಿಗಳ ಪರಿಮಳ ಸುತ್ತಿ ಸುಳಿವ ಸುಗಂಧ ಲಹರಿಯು 2 ಬೀಗರು ಹಸೆಯೊಳಿರೆ ಆ ಮಧ್ಯದಿ ಬೀಗಿತ್ತಿಯರು ಕುಳ್ಳಿರೆ ಆಗ ನಿಶ್ಚಿತ ಲಗ್ನದಲ್ಲಿ ವಧೂವರರ ಪೂಜಿಯನು ಗೈಯಲು ತುಂಬಿರಲು ಸಭೆಯೊಳು 3 ದಾರಾ ಮಹೊತ್ಸವವು ಅಕ್ಷತೆಗಳ ಸೇರೆಯೊಳೆರೆಯುವುದು ನಾರಿಯರ ವರದೇವತಾಸ್ತುತಿ ಸಾರೆ ಭೂಸುರರಾಶಿಷಂಗಳು ಸೇರೆ ಸಂಗೀತಗಳ ವೈಖರಿ ಸಾರಿ ಸುರಗಣ ಜಯಜಯನ್ನಲು 4 ಮಾಡೆ ದಾನದಕ್ಷಿಣೆಯಾಗಲು ಬಾನುರಾಗದೆ ಸರ್ವರನ್ನು ವಿನೋದದಿಂದುಪಚರಿಸುತಿರಲು ಹರಸೆ ಸಂತೋಷದಿ 5
--------------
ಬೇಟೆರಾಯ ದೀಕ್ಷಿತರು
ಪವಮಾನ ಪಾಲಿಸೆನ್ನ ಸದ್ಗುಣಘನ್ನ ಪ ಪವಮಾನ ಪೊರಿಯೆನ್ನ ಕವಿಭಿರೀಡಿತ ನಿನ್ನ ಸ್ತವನಗೈಯುವ ಮಾನವರೊಳಧಮ ನಾನು ಪವಮಾನ ಪಾಲಿಸೆನ್ನ ಅ.ಪ ಪತಿ ಶಿವ ಮುಖ ದಿತಿಜಾರಿತತಿನುತ ಶ್ರುತಿ ಪ್ರತಿಪಾದ್ಯ ಆ ನತ ಬಂಧು ತತ್ವಾಧಿ ಪತಿಗಳೊಳುತ್ತಮ ಪ್ರಥಮಾಂಗ ಹರಿ ಪ್ರೀಯ ದ್ವಿತಿಯುಗದಲಿ ಕಪಿ - ನೀರಜ ಪತಿಯಪಾದದ್ವಯ ಅತಿಹಿತದಲಿ ಸೇವಿಸಿ ಲವಣಾರ್ಣವ ಶತಯೋಜನವ ಲಂಘಿಸಿ ರಾಕ್ಷಸಕುಲ ಹತಗೈಸಿ ಪುರದಹಿಸಿ ದೇವಿಯ ಸುವಾರುತಿಯ ತಿಳಿಸಿ ಭಾವಿದ್ರುಹಿಣನೆಂದೆನಿಸಿ 1 ಕುರುಕುಲದಲಿ ಕುಂತಿ ತರುಳನೆನಿಸೆ ಯುಧಿ ಷ್ಟರನನುಜ ವೃಕೋದರ ನಾಮದಲಿಯವ ತರಿಸಿ ಬಕಾದಿ ದುಷ್ಟರ ಶಿಕ್ಷೆಯನು ಗೈಸಿ ಹರಿಇಚ್ಛೆಯಲಿ ವನಚರಿಸಿ ಕೀಚಕನ ಸಂ ಹರಿಸಿ ದುಶ್ಯಾಸÀನಾದ್ಯರನೆಲ್ಲರಣದೊಳು ದುರುಳದುರ್ಯೋಧನನಸಾನುಜಗಣ ತ್ವರಿತಗೈಸಿ ಹನನ ವಿಜಯನಾಗಿ ಪೊರೆದೆ ಧರ್ಮಾರ್ಜುನನ ತ್ರಿಭುವನದಿ ಸರಿಗಾಣೆ ದ್ವಿಜರಿಪು ಪದುಪಂಚಾನನ 2 ಮಣಿಮಂತ ಮೊದಲಾದದನುಜರು ಹರಿದ್ವೇಷ - ವನು ಮಾಡಲೋಸುಗವನಿಯೊಳುದ್ಭವಿಸಿ ನಿ - ರ್ಗುಣರೂಪ ಕ್ರೀಯ ಬ್ರಹ್ಮನೆನುತ ಹರಿಯತಾ ನೆನಿಪ ದುರ್ಮತವನ್ನು ಘನವಾಗಿ ಪ್ರಬಲಿಸಿ ದನುಜಾರಿಯಾಙÁ್ಞದಿ ಮುನಿಮಧ್ಯ ಸತಿಯಲ್ಲಿ ಮುನಿಮಧ್ವನೆಂದೆನಿಸಿ ಜನಿಸಿ ಕುಮತವನು ಶಾಸ್ತ್ರದಿ ಖಂಡಿಸಿ ಹರಿಯೆ ಪರನೆನಿಪ ಮತವಸ್ಥಾಪಿಸಿ ಮೆರೆದೆ ಈ ಧಾರುಣಿಯೊಳು ವರದೇಶ ವಿಠಲನ ವಲಿಸೆ 3
--------------
ವರದೇಶವಿಠಲ
ಪಾರಾಯಣ ಮಾಡಿರೋ ಭವ ಪಾರಾವಾರದೊಳುತ್ತಾರಕವಿದು ನೋಡಿರೋಪ ಶರೀರನೆಚ್ಚಿರಬೇಡಿರೋ ಸಾರುವ ಮೃತ್ಯುವ ದಾರಿಗೆ ಗೋಚರ ಧಾರಿಣಿಯಲಿ ಪೇಳಿರೋ1 ಸಾಹಸ ಪಡಬೆಡಿರೋ ದೇಹಗೇಹಂಗಳನೂಹಿಸಿ ಸಂಗಡ ಬಾಹವೆಂದಿರ ಬೇಡಿರೊ2 ದೇಹರಕ್ಷಣೆಗೆಂದು ಗೇಹವನಿರ್ಮಿಸಿ ನೇಹದಿ ನಾರಿಯೊಳು ಗೇಹಿನಿಯೆಂದತಿ ಮೋಹದಿ ಕೆಡುವನು ದೇಹಿಸಂಸಾರದೊಳು3 ಮಾರಿಯಲ್ಲವೆ ಕೇಳಿರೋ ನಾರಿಯಾರಿಗೆ ಮಕ್ಕಳಾರಿಗೆ ಜೀವಿತದಾರಿಯೆಲ್ಲಿಗೆ ಪೇಳಿರೋ4 ಬಾರಳು ಕಂಚುಕನ್ನಡಿಬಾರದೀ ಸಂಚಿತ ದ್ರವ್ಯದಿ ಕೊಂಚವು ಬಾರದು ವಿಸಂಚಿಗೆ ದೇಹವಿದು5 ಹಲವು ಸಾಹಸದಿಂದ ಘಳಿಸಿದರ್ಥಗಳೆಲ್ಲ ಬಳಸಿನ ಬಾಂಧವರು ಒಲಿದುಕೊಂಡಾಡುವರು6 ಅರ್ಥವಿದ್ದವನ ಸಮರ್ಥನೀತನ ಜನ್ಮಸಾರ್ಥಕವೆಂಬುವರು ಜನ್ಮವ್ಯರ್ಥವೆಂದುಸುರುವರು 7 ರೊಕ್ಕವಿದ್ದರೆ ಕೈಲಿ ಸಕ್ಕರೆ ಮಾತಿನೊಳಕ್ಕರೆ ಪಡಿಸುವರು ರೊಕ್ಕವಿಲ್ಲದವನ ಮಕ್ಕಳು ಮಡದಿಯರು ಲೆಕ್ಕಿಸದಿರುತಿಹರು 8 ಮರಣವ ಪೊಂದುವರು ಮರಳು ಜಗಳಕೆ ತರಳರು ಚಾಚುತೆ ಕೊರಳನು ಕೊಯ್ಯುವರೋ 9 ಬಂಧುಗಳನ್ನು ಕೊಲ್ವರು ಒಂದಿಗೆ ಜನಿಸಿದರೆಂದು ನೋಡರುನಿಜ ದಂದುಗಕ್ಕೊಳಗಹರು10 ನಂಟರು ನಮಗಿವರುಂಟೆಂದು ಮೋಹದ ಗಂಟುಕಟ್ಟಿರೆ ಮನದಿ ಕಂಟಕ ಯಮಬಂದು ಗಂಟಲಬಿಗಿವಾಗ ನಂಟರಿಲ್ಲವು ಜಗದಿ11 ಅಪತ್ತುಬಂದಾಗ ಪಾಪಿಯು ಮನದನು ತಾಪದಿ ನೆನೆಯುತಿರೆ ಕಾಪಾಡುವನಾಗ ಶ್ರೀಪತಿ ಪುಲಿಗಿರಿ ಭೂಪನು ನಮ್ಮದೊರೆ12 ನೊಂದ ಗಜೇಂದ್ರನ ಕಂದ ಪ್ರಹ್ಲಾದನ ಬಂದವಿಭೀಷಣನ ಚಂದಿರಮುಖಿ ನೃಪನಂದನ ಧ್ರುವರನು ಚಂದದಿ ಸಲಹಿದನ 13 ಅಜಮಿಳಗೊಲಿದನ ಕುಜನರ ತರಿದನ ಸುಜನರನಾಳಿದನ ಭಜಕರದಾತನ ತ್ರಿಜಗಕ್ಕೆ ನಾಥನ ವಿಜಯನ ರಥಸೂತನ14 ಅಂಗಜಜನಕನ ಮಂಗಳ ಮಹಿಮನ ಗಂಗೆಯ ಪಡೆದವನ ರಂಗನ ಸುಗುಣ ತರಂಗನ ಶಂಖರಥಾಂಗವ ಪಿಡಿದಿಹಿನ15 ಖ್ಯಾತ ಪಾದಾಂಬುಜನ ವಾತನ ಮಗನೊಳು ಪ್ರೀತಿಯ ಬೆಳಸಿದ ಸೇತು ವಿಧಾತನ16 ರಾಮನ ಜಗದಭಿ ರಾಮನ ದೈತ್ಯವಿರಾಮನ ಭಜಕಜನಾ ರಾಮನ ದಶರಥರಾಮನ ಸೀತಾರಾಮನ ಗುಣಧಾಮನ17 ಪಂಕಜನೇತ್ರನ ಪರಮ ಪವಿತ್ರನ ಶಂಕರನುತಿಪಾತ್ರನ ವೆಂಕಟರಮಣನ ಕಿಂಕರ ಶರಣನ ಸಂಕಟ ಹರನಾಮನ18 ವರದ ವಿಠಲ ದೇವನ ಪೊರೆಯುವದಾನರನ 19
--------------
ಸರಗೂರು ವೆಂಕಟವರದಾರ್ಯರು
ಪಾಲಿಸೆನ್ನ ಪಾಲನಶೀಲೆ ಪಾಲಿತ ಸುರನರಜಾಲ ಸುಶೀಲೆ ಪ ಕ್ಷೀರಶರಧಿ ಸುಕುಮಾರಿಣಿ ಲಕ್ಷ್ಮೀ ವಾರಿಜಮುಖಿ ಸಿತವಾರಿರುಹಾಕ್ಷಿ 1 ಅಂಬೆ ಭುವನಕುಟುಂಬೆ ರಮಾಂಬೆ ನಂಬಿ ಭಜಿಸುವದು ಡಾಂಬಿಕಮೆಂಬೆ 2 ಯುಕ್ತಿಯು ಶಕ್ತಿ ವಿರಕ್ತಿಗಳಿಲ್ಲ ಉಕ್ತಿ ಮಾತ್ರದಿಂದ ಭಕ್ತಿಕೊಡೆಲ್ಲ 3 ಜಯಕರುಣಾಲಯೆ ಜಯಮಣಿವಲಯೆ ಜಯನಿಸ್ತುಲಯೆ ಜಡಮತಿಗೊಲಿಯೆ 4 ಧರೆಯೊಳುತ್ತಮ ಪುಲಿಗಿರಿಯೊಳಿರುವನೆ ಶರಣರ ಪೊರೆಯುವ ವರದವಿಠಲನ [ರಾಣಿಯೆ] 5
--------------
ವೆಂಕಟವರದಾರ್ಯರು
ಪಾಲಿಸೆನ್ನನು ಶ್ರೀ ಲೋಲ ಸದ್ಗುಣ ವಿಶಾಲ ನೀಲ ಪ. ಶ್ರೀರಮಣನೆ ನಿನ್ನ ಚರಣ ಸದ್ಗುಣಗಣ ವಾರಿಧಿಗಣನೆ ನೀನೆಂದು ಸಿರಿದೇವಿಯಂದು ಪಾರವಿಲ್ಲದ ತವ ಚರಿತ್ರೆಯ ಸಾರಗಳನೀಕ್ಷಿಸಲು ನಯನಾಂ- ಪಾದ ಹತಮಾಂಸಾರಕೇಶವ 1 ಶ್ರುತಿ ತತಿಗಳನೈದಸುರನ ಕೊಂದ ದಿತಿಜಗೋಸುಗ ನಗಧರನ ಕೃಪಹಾರ ಹಣನ ದಿತಿಜಹರ ಸುರತತಿಗೆ ರಾಜ್ಯವನತಿ ವಿಲಾಸದೊಳಿತ್ತ ಭಾರ್ಗವ ಬಾಧ್ಯನೆ ಅತುಳಹಯನೆ 2 ಸುರರು ನಿನ್ನಯ ಪಾದ ನಿರ್ಮಲ ರಜೋದ್ಧಾರಕರ ಬಿನ್ನಪವ ಕೇಳ್ ಗಜ ಚರ್ಮ ವಸ್ತ್ರ ಸಮಧ್ವಜಾಸನ ನಿನ್ನ ದಾಸರ ದಾಸರೊ- ಷಣ್ಮುಖಾತ್ಮಜ ಜಯನ ಗಿರಿಗನೆ 3
--------------
ತುಪಾಕಿ ವೆಂಕಟರಮಣಾಚಾರ್ಯ