ಒಟ್ಟು 30 ಕಡೆಗಳಲ್ಲಿ , 14 ದಾಸರು , 28 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಾಲವ ಕೊಡದಿದ್ದರೆ ನಿನಗೆ | ನಾಲಿಗೆಂಬೊದು ಇಲ್ಲೊ ಉತ್ತರಾಡುವುದಕ್ಕೆ ಪ ಏಸು ದಿವಸದಿಂದ ಎಲ್ಲರ ಸೇವಿಸಿ | ಕಾಸು ಕಾಸಿಗೆ ನಾನು ಕೂಡಹಾಕಿ | ಲೇಸು ಉಳ್ಳವನೆಂದು ಕೊಟ್ಟರೆ ನೀ ನಿಂತು | ಮೋಸಗೊಳಿಸುವರೆ ಕಾಣಿಸಿಕೊಳ್ಳಿದಲೆ 1 ಬಡ್ಡಿ ಏನಾಯಿತೊ ಕೊಟ್ಟ ಗಂಟಿಗೆ ನಿನ | ಗಡ್ಡ ಬೀಳುವೆನೊ ಸಾಲವ ತೀರಿಸೊ | ಖಡ್ಡಿ ಮಾನವನೆಂದು ನೋಡ ಸಲ್ಲಾ ಎನ್ನ | ದೊಡ್ಡವರು ಕಂಡರೆ ಅಡ್ಡಗೈಸದೆ ಬಿಡರು 2 ಗುಣಿಸಿ ನೋಡಿದರೆ ಏನಯ್ಯಾ ಮುತ್ತಯ್ಯಾ ಯಾ ಕೆ ನಿಲ್ಲದೆ ನಿನಗೆ ಸಾಲವಿತ್ತೆ | ಧನವ ಎಣಿಸಲಾಗಿ ನೆಲೆಗಾಣೆಯಿನ್ನು ಸು | ಮ್ಮನೆ ಕೂಗದೆ ನಿಂದು ಋಣವ ತಿದ್ದು ಚಲುವಾ3 ಸಾಲಾ ಬಂದರೆ ಒಳಿತೆ ಇಲ್ಲದಿದ್ದರೆ ಕೇಳು | ಮೇಲೆ ಮೇಲೆ ಬಿದ್ದು ನಿನ್ನ | ಕೀಲಿಸಿ ಬಿಡದಲೆ ತೊಲಗ ಬಿಡೆ ದೇವಾ 4 ಬತ್ತಲಿದ್ದವರಿಗೆ ಭಯವಿಲ್ಲವೆಂಬೊ ಗಾದಿಗೆ | ನೆತ್ತಿಯೆತ್ತಿ ಮೋರೆ ತೋರ ಬೇಕೊ | ಹತ್ತರ ಇದ್ದು ತೀರಿಸಬೇಕೊ ಸರ್ವೇಶಾ | ಸುತ್ತಿ ಭಳಿರೆ ಸಂದೇಹ ಬೇಡ ನೀ ಬರೆದ ಬರಹ ನೋಡು 5 ಬಡತನ ಬಂದರಾಗ ನಾ ನಿನಗೆ ಬಾಯಿ | ಬಿಡುವೆನೆ ದೈನ್ಯದಲಿ ಭಾಗ್ಯವಂತಾ | ತಡ ಮಾಡಲಾಗದು ಕೊಡು ಎನ್ನ ಒಡಿವೆ | ಪೊಡವಿಲಿ ಪರರಿಗೆ ಸಲ್ಲದೊ ಸರ್ವೇಶಾ 6 ಗತಿಯಿಲ್ಲ ನಾನಪ್ರಮಾಣಿಕ ನಾನಹುದೆಂದು | ಸಂತತ ಸಂತರ ಮುಂದೆ ನುಡಿದು ಬಿಡುವೆ | ಪತಿತ ಪಾವನ ನಮ್ಮ ವಿಜಯವಿಠ್ಠಲ ನಿನ್ನ | ನುತಿಸಿಕೊಳ್ಳುತ್ತ ಕಾಲಕ್ರಮಣ ಮಾಡುವೆ 7
--------------
ವಿಜಯದಾಸ
ಹನುಮ-ಭೀಮ-ಮಧ್ವರು ಅಸುರರನು ಅಳಿಯ ಬಂದೆನು ನಾನು ನಿನ್ನ ವೈರಿದಶರಥರಾಮನಾಳೆಂದ ಪ. ಹೊಸಕಪಿಯೆ ನೀನು ಬಂದುದೇನುಕಾರಣವೆನಲುದಿ[ಶೆÀ]ಗೆ ಬಲ್ಲಿದ ಹನುಮ ನಾ ಕೇಳೊ ನಿ-ನ್ನಸುರ ಪಡೆಯ ಮಡುಹಬಂದೆ ನಿನ್ನಎಸೆವ ಪಾದದಲೊದೆಯ ಬಂದೆ ವನದಸಸಿಯ ಕಿತ್ತೀಡ್ಯಾಡಿ ನಿಂದೆ ನಿನ್ನದಶಶಿರವ ಕತ್ತರಿಸಿ ಎಸೆವ ರಾಮರ ಮಡದಿಹಸುಳೆ ಸೀತೆಯ ಅರಸಲು ಬಂದೆ 1 ಎನ್ನ ವೈರಿಗಳು ಇನ್ಯಾರೆಂದು ರಾವಣನುಹೊನ್ನಕುಂಡಲದ ಹನುಮನೆ ಕೇಳೊಮುನ್ನವರ ಸಾಹಸವಯೇನೆಂಬೆ ಅವರಪರ್ಣಶಾಲೆಯ ಹೊಕ್ಕು ಬಂದೆ ರಾಮ-ಕನ್ಯೆ ಸೀತಾಂಗನೆಯ ತಂದೆತನ್ನ ಬಿಲ್ಲ ತಾ ಹೊತ್ತು ತಿರುಗುವುದ ಕಂಡೆ 2 ಇನ್ನು ಹೆಮ್ಮೆಮಾತ್ಯಾತಕೊ ಕಪಿಯೆಕಚ್ಚಿ ಕೀಳಲೋ ಕಣ್ಣು ಹತ್ತುತಲೆಯನೆ ಹಿಡಿದುನುಚ್ಚುನುರಿ ಮಾಡಿ ಕೊ[ಲ್ಲಲೊ]ನಿನ್ನ ಇಷ್ಟುಹೆಚ್ಚಿನ ಮಾತ್ಯಾಕೊ ನಿನಗೆ ಬಹಳಕಿಚ್ಚು ತುಂಬಿತು ಕೇಳೋ ಎನಗೆ ಒಂದುಮೆಚ್ಚು ಹೇಳುವೆನೊ ರಾಮರಿಗೆಅಚ್ಚುತನ ಬಣಕೆ ಮೀಸಲಾಗಿರು ನೀನು 3 ವಿಧಿ ಕಾಲಮ[ಣೆ]ಯಾಗಿಬೆನ್ನಬಿಡದಿಹ ಪರಿಯ ನೋಡೊ 4 ಎನ್ನ ಸೋದರಮಾವ ವಾಲಿಯನು ಕೊಂದೀಗತಮ್ಮ ಸುಗ್ರೀವಗೊಲಿದು ವರವಿತ್ತುನಿನ್ನ ಕೊಂಡೊ[ಯ್ದ]ನೆಂಬುವರೊ ನಿನ್ನಚಿನ್ನನ ತೊಟ್ಟಿಲಿಗೆ ಕಟ್ಟುವರೊ ನಿನ್ನಹೊನ್ನತುಂಬೆಂದು ಆಡ್ಸುವರೊನಿನ್ನ ಶಿರವರಿದು ವಿಭೀಷಣಗೆÀ ಪುರವ ಕೊಡಬೇಕೆನುತಎನ್ನೊಡೆಯ ಬರುತಾನೆ ತಾಳೊ ಎಂದ 5 ಎತ್ತಿಹಿಡಿವ ಕೈಪಂಜು ಲೆಕ್ಕವಿಲ್ಲ ನಾ ಹಿಡಿದವಕತ್ತಿ ಇಪ್ಪÀತ್ತು ಕಾಣೋ ಕಪಿಯೆಎತ್ತಿ ಕಡಿವೆನು ಬಾಹುದಂಡ ಬೆ-ನ್ನ್ಹ್ಹತ್ತಿ ಬಡಿಯದೆ ಬಿಡೆನು ಕಂಡ್ಯಾ ನಿನ್ನಚಿತ್ತದಲಿ ತಿಳಿದುಕೊಳ್ಳೆಂದಮತ್ತೆ ನಾ ತಾಳಿ ಕೈಗಾಯಿದೆನಲ್ಲದೆ ಬಾಯಬತ್ತಿಸದೆ ಬಿಡುವೆನೇನೋ ಕಪಿಯೆ 6 ಮತ್ತ ರಾವಣ ನೀನು ಹೊತ್ತಿದ ಭೂಮಿ ಹಣತಿಸುತ್ತಣ ಸಮುದ್ರವೆ ತೈಲಎತ್ತಿ ಹಿಡಿವಳು ಸೀತೆ ದೀಪ ನಮ್ಮಚಿತ್ತದೊಲ್ಲಭನ ಪ್ರತಾಪ ನಿನ್ನಲಂಕಪಟ್ಟಣವು ಸುಡುವಂತೆ ಶಾಪಹತ್ತು ತಲೆ ಹುಳ ಹಾರಿಬಂದು ಬ್ಯಾಗಸುತ್ತಿ ಬೀಳುವುದು ದೀಪದೊಳಗೆ7 ಹೆಚ್ಚಿನ ಮಾತಿಷ್ಟು ಇವಗ್ಯಾಕೆ ಹಿಡಿತಂದುಕಿಚ್ಚು ಹಚ್ಚಿರೊ ಬಾಲಕೆ ಎಂದ ಆಗಪೊಚ್ಚಸೀರೆಗಳ ಸುತ್ತಿದರು ತ್ವರಿತಅಚ್ಚ ಎಣ್ಣೆಯಲಿ ತೋಯಿಸಿದರು ಬಾಲಹೆಚ್ಚಿಸಲು ಕಂಡು ಬೆದರಿದರುಕಿಚ್ಚು ಹಚ್ಚಲು ರಕ್ಕಸರ ಗಡ್ಡಮೀಸೆ ಸಹಎಚ್ಚರಿಸಿ ಸುಟ್ಟ ಲಂಕಾಪುರವ8 ಮುಖ್ಯಪ್ರಾಣ ವರದ ಮೆರದ 9
--------------
ವಾದಿರಾಜ
ಹಾರುವರಿಗೆ ಭೂಮಿಯಾ ನೀಡಿದೆನೆಂದು | ನೀರೋಳುಮನೆಯ ಮಾಡಿ ಕೊಂಡೆಯಾರಂಗಾ ಪ ಇಂದ್ರಾದಿಗಳು ಕ್ಷಣಕೊಮ್ಮೆ ಮೊರೆಯಿಡಲಾಗಿ ನಿದ್ರೆ ಕಾಣೆನೆಂದು ಸೇರಿದೆ ಗಡ್ಡೆಯಾರಂಗಾ 1 ವಿಷನುಂಡುದಾವಾಗ್ನಿ ನುಂಗಿ ತನು ಶೆಖೆದೋರೇ ಶೇಷನಂಗದ ಮೇಲೆ ಪವಡಿಸಿದೆಯಾ ರಂಗಾ 2 ಶರಣ ವಸರಕ ಎಡತಾಕಲಾರೆನೆಂದು ಗುರುಮಸಿಪತಿ ಸ್ವಾಮಿ ನಾಮ ವಿಟ್ಟೆಯಾ ರಂಗಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
(ಗ್ರಾಮ ಭಾಷೆಯಲ್ಲಿ)ದಂಗೈನಿ ಗೋಪಮ್ಮ ನಿಮ್ಮ ಮಗನೊಂಚುಮನಿಗೆ |ಹಂಗರೀಸು ಬುದ್ಧಿ ಹೇಳುಗಾಗ್ದ ಕೃಷ್ಣೈಯ್ಯಂಗೆ ||ವಂಗಲ್ಸೀ | ಕೇಣ್ಗತಾಯೆ | ಹೇಳ್ಕುತೀನಿಂಪಾದ್ದಂಗೆಂ |ರಂಗಯ್ಯಾನ ಲೂಟಿ ತಡ್ಕಂಬುಕಾತ್ತಿಲ್ಯೇ ನಮ್ ಕೈಯ್ಯಂಗೇ ಪಮೋಳ್ ಬೆಕ್ಕಿನಾಂಗ ಬಂದು ನಮ್ಮ ನೆಂಗಿದ್ದೆಲ್ಲಾ |ಹಾಲ್ ಮೊಸರ್ ಕುಡ್ಕ ಹ್ವಾರ್ | ಕೊರ್ಲಾಣಿ ಸುಳ್ಳಲ್ಲಾ ||ಮಾಳ್ಗಿಲದ್ ತುಪ್ಪ ನೊಂದ್ ಚಿಪ್ಪಾರ್ ಬೆಚ್ಲಿಲ್ಲೇ |ಅಳ್ಗಿಲಿದ್ ಬೆಣ್ಣೆ ಬರ್ಚಿ | ಬಾಯ್ಮೇಲ್ ಹ್ಯಾಕ ಹೋರಲೆ 1ಗೊಲ್ಲರೆಣ್ಗಳ್ ಮನಿಯಂಗಿ ವೃದ್ | ಗುಲ್ಲೆ ಗುಲ್ಲ್ ತಾಯಿ |ಎಲ್ ಗಂಟಿಂ ಕೇಂಡ್ರು ಬರು ಹೈಲೇ ಹೈಲ್ |ಮುಲ್ಲಿಂದ್ ಮುಲ್ಲಿ | ಗ್ ವಾಂಜಿಲಾಡುದೆಂತ್ ಚಲ್ಲೇಚಲ್ಲ್ ||ಮೆಲ್ಲಂಕ್ಯಾಂಡ್ರ ಹೇಳುದ್ ಪೂರ ಸುಳ್ಳೇ ಸುಳ್ಳ್ 2ಶಣ್ಣರಂತ್ರಿ ನಿಮ್ ಮಗ ಪೂತನೀನ್ ಹ್ಯಾಂಕೊಂದ್ರು ||ಶಂಣ್ ಕಾಲಂಗೆ ತೊಳ್ದಿ | ಕಿದಡ್ ಗಾಡಿನ್ಯಾಂಗೆ ಮುರದ್ರ್ |ಮಣ್ ತಿಂದ್ ಬಾಯಾಂಗೆಲ್ಲ | ಲೋಕನ್ಯಾಂಗೆ ತೋರ್ಸ್ರ್|ಕಣ್ ಮಾಯಾಕ ಮಾಡಿ | ಹಾರ್ಸರೆ ತಿರ್ಣವರ್ತನ ತೀರ್ಸರ್ 3ಜಿಡ್ಡಿ ಒರ್ಲಿಗ ಕಟ್ರಕಾಣಿ | ಅಡ್ದೆ ಹ್ಯಾಕ ಎಳ್ದ್ರ್ |ದಡ್ ದಡ್ ಮತ್ತಿಮರು | ಎಯ್ಡ್ ಮುರ್ದುಕೆಡ್ದ್ರು |ಕಡ್ಡಿದೊಣ್ಣೆ ಹಿಡ್ಕ ಆಡೋ ಮಕ್ಕಳಂತ್ರಿ ಕಾಂತ್ |ಗಡ್ಡ ಹಣ್ಣಾದ್ಯತಿಗಳ್‍ವ್ರಿಗಡ್ಡ ಬದ್ದಿಕಿ ಹೋತ್‍ರಿ 4ಸಿಟ್ ಗಂಡಳ್‍ಂದ್ ನನ್ನ ತೊಟ್‍ಕಾ ಮುತ್ ಕೊಟ್ರು |ಹೊಟ್ಟೆ ಮೇಲ್ ಹೊಟ್ಟೆ ಬೆಚ್ಚಿ | ಲೊಟ್ಟಿಂಗ್ ಪಟ್ಟಂಗ್ ಕುಟ್ರು |ಕೆಟ್ಟಾರ್ ಬೈದನನಗಂಡ| ಕೇಂಡ್ರೆ ವಿರಾಣ ಬೆಚ್ಚ್ರೆ |ಸಿಸ್ಟಿಪತಿ ಗೋವಿಂದ್ಮೂರ್ತಿದಾಸರ್‍ಗೆಲ್ಲಾ ಶ್ರೇಷ್ಟ್ರ್5
--------------
ಗೋವಿಂದದಾಸ
ಆ ರಣಾಗ್ರದಿ ಭೀಮಗಡ್ಡಯಿಪರಾರು? |ವಾರಿಧಿಮೇರೆದಪ್ಪಲು ನಿಲ್ಲಿಸುವವರಾರು?ಪನಾನಾ ದೇಶದ ಭೂನಾಯಕರಿದ್ದರಲ್ಲವೆತಾನು ದುಶ್ಯಾಸನನ ತತ್ತರಿವಾಗ ||ಮೌನಗೊಂಡರಲ್ಲದೆ ಮುಂಕೊಂಡು ಬಿಡಿಸಿದರೆಆನೆಯ ಕೈಯ ಕಬ್ಬಿಗೆ ಅಂಗಯಿಸುವರಾರು? 1ಘುಡುಘುಡಿಸುತ ರಾಯ ಕುರುಪತಿಯನು ಕೆಡಹಿತೊಡೆಗಳನು ಗದೆಯಿಂದ ತುಂಡಿಸುವಾಗ ||ಕಡುಕೋಪದವ ಹಲಧರನೇನ ಮಾಡಿದ?ಬಡವನ ಕೋಪ ದವಡೆಗೆ ಮೃತ್ಯುವಲ್ಲವೆ? 2ಸಂದಿಗೆ ಸಾವಿರ ಸಿಂಹಸತ್ತ್ವದ ಕೀಚಕನಕೊಂದು ಬಿಸುಡುವಾಗ ಮುಂಕೊಂಡರುಂಟೆ? ||ಚೆಂದದಿಪುರಂದರವಿಠಲದಾಸರು ಮನದಂದಕೆ ಬಂದಂತೆ ನಡೆದುದೆಮಾರ್ಗ3
--------------
ಪುರಂದರದಾಸರು
ಇಂತುಶ್ರುತಿ -ಸ್ಮøತಿ ಸಾರುತಿದೆ ಕೋ |<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಕಂತುಪಿನ ಗುಣಗಳ ತಿಳಿಯಬೇಕೆಂದು ಪ.ಮನವ ಶ್ರೀಹರಿಯ ಚರಣಕೆ ಸಮರ್ಪಿಸಬೇಕು |ತನುವ ತೊಂಡರಿಗಡ್ಡ ಕೆಡವಬೇಕು ||ವನಿತೆಯರ ಚೆಲುವಿಕೆಗೆ ಮರುಳಾಗದಿರಬೇಕು |ಘನತೆಯಲಿಹರಿಚರಣಸ್ಮರಿಸುತಿರಬೇಕು1ಕಂದರ್ಪನಟ್ಟುಳಿಗೆ ಕಳವಳಿಸದಿರಬೇಕು |ಇಂದ್ರಿಯಂಗಳನು ನಿಗ್ರಹಿಸಬೇಕು |ಚಂದಲೀಲೆಗಳಿಂಗೆ ಮನವೆಳಿಸದಿರಬೇಕು |ಇಂದಿರೇಶನ ಪದದ ಪಥವರಿಯಬೇಕು 2ಒಂಟಿಯಲಿ ಮುನಿಗಳಾಶ್ರಮದಿ ನೆಲೆಸಲುಬೇಕು |ಹೆಂಟೆ ಬಂಗಾರ ಸಮ ತಿಳಿಯಬೇಕು ||ಕಂಟಕದ ಭಯಗಳನು ನೀಗುತಿರಬೇಕು ವೈ - |ಕುಂಠ ಪುರಂದರವಿಠಲನೊಲಿಸಬೇಕು 3
--------------
ಪುರಂದರದಾಸರು
ಇರಬೇಕು - ಹರಿದಾಸರ ಸಂಗವರಜ್ಞಾನಿಗಳ ದಯ ಸಂಪಾದಿಸಬೇಕು ಪ.ಅತಿಜ್ಞಾನಿಯಾಗಿ ಹರಿಕಥೆಯ ಕೇಳಬೇಕುಯತಿಗಳ ಪಾದಕ್ಕೆ ಎರಗಬೇಕುಸತಿ ಸುತರಿದ್ದು ಮಮತೆಯನು ಬಿಡಬೇಕುಗತಿಯೆಂದು ಬಿಡದೆ ಹರಿಯ ಪೋಪರಸಂಗ 1ನಡೆ ಯಾತ್ರಿಯನಬೇಕು ನುಡಿ ನೇಮವಿರಬೇಕುಬಿಡದೆ ಹರಿಯ ಪೂಜೆಯ ಮಾಡಬೇಕುಅಡಿಗಡಿಗೆ ಬಂದು ಹರಿಗಡ್ಡ ಬೀಳಬೇಕುಬಿಡದೆ ಹರಿಭಜನೆಯ ಮಾಡುವರ ಸಂಗ 2ಹರಿ - ಹರ -ವಿರಂಚಿಯರ ಪರಿಯ ತಿಳಿಯಬೇಕುತರತಮದಿ ರುದ್ರ - ಇಂದ್ರಾದಿಗಳಅರಿಯದಿದ್ದರೆ ಗುರುಹಿರಿಯರ ಕೇಳಬೇಕುಪರಮಾನಂದದಲಿ ಓಲಾಡುವರ ಸಂಗ 3ಷಟ್ಕರ್ಮ ಮಾಡಬೇಕು ವೈಷ್ಣವನೊಲಿಸಬೇಕು ಉ -ತ್ಕಷ್ಟ ವೈರಾಗ್ಯಬೇಕು ದುಷ್ಟಸಂಗ ಬಿಡಬೇಕುವಿಷ್ಣುವಿನ ದಾಸರ ದಾಸನಾಗಲುಬೇಕುಎಷ್ಟು ಕಷ್ಟಬಂದರೂ ಹರಿಯ ಭಜಿಪರ ಸಂಗ 4ಏಕಾಂತ ಕುಳ್ಳಿರಬೇಕು ಲೋಕವಾರ್ತೆ ಬಿಡಬೇಕುಲೋಕೈಕನಾಥನ ಭಜಿಸಬೇಕುಸಾಕು ಸಂಸಾರವೆಂದುಕಕ್ಕುಲತೆ ಬೀಡಬೇಕುಶ್ರೀಕಾಂತಪುರಂದರವಿಠಲರಾಯನ ಸಂಗ5
--------------
ಪುರಂದರದಾಸರು
ಕಾಗೆ ಕಾಕಾ ಎನಲು ಹಕ್ಕಿ ಚಿಲಿಪಿಲಿ ಎನಲು |ಕೋಗಿಲೆಯು ಸ್ವರಗೈಯ್ಯಲು-ಕೃಷ್ಣ-|ನಾಗಸಂಪಿಗೆ ಅರಳಲು ಪಎದ್ದು ಮುಖ ತೊಳೆಯೇಳು ತಿದ್ದು ಕಸ್ತುರಿ ತಿಲಕ |ಮುದ್ದೆಬೆಣ್ಣೆಯ ನಿನಗೆ ನಾನು ಕೊಡುವೆ ||ಹೊದ್ದಿರುವ ಕತ್ತಲದು ಹರಿದು ಬೆಳಗಾಯಿತೊ |ನಿದ್ದೆ ತಿಳಿದೇಳಯ್ಯ ಕೃಷ್ಣ 1ಬಿಸಿಯ ದೋಸೆಯ ಹೊಯ್ದು ಮೊಸರುಗಡ್ಡೆಯ ತೆಗೆದು |ಹೊಸದಾದ ಹಸುವಿನೀ ತುಪ್ಪವನ್ನು ||ಹಸನಾದ ಕಲಸನ್ನ ಹೆಸರು ಬೇಳೆಯ ಹುಗ್ಗಿ |ಹಸುಳೆ ನಿನಗಾರೋಗಣೆಗೆ ಮಾಡುವೆ 2ಎಂದಿಲ್ಲದಾ ಹಟವನಿಂದೇಕೆ ಮಾಡುತಿಹೆ |ಕಂದರೊಳಗತಿ ನೀನು ಹಟಿಯಾದೆಯ ||ಇಂದುನೀನತ್ತರೇ ಎತ್ತಿಕೊಳ್ಳುವರಿಲ್ಲ |ಕಂದ ಅಳಬೇಡವೊ ಪುರಂದರವಿಠಲ 3
--------------
ಪುರಂದರದಾಸರು
ದಾಟು ಭವಾಟವಿಯನ್ನು ಮನುಜ ನೀದಾಟು ಭವಾಟವಿಯನ್ನುಕೈಟಭಾಂತಕನಾಮಪಾತಕರೊಡಗೂಡಿನೀಟಾಗದಂದದ ಪಾಟಿಯ ಕೇಳಿನ್ನು ಪ.ಹೆಣ್ಣೆಂಬ ಹೆದ್ದೋಳ ತಿರುಗುತಿವೆ ಬಲುಪುಣ್ಯಮಾರ್ಗವ ನಡಿಗುಡವುಬಣ್ಣ ಬಣ್ಣದ ಮೃತ್ಯುಗಳೆಂಬ ಹೆಬ್ಬುಲಿಕಣ್ಣಲಿ ಕಂಡರೆ ಬಿಡವುಸಣ್ಣಮಕ್ಕಳು ನೆಂಟರಿಷ್ಟ ನರಿಗಳರ್ಥಪೆಣ್ಣಿನ ನಾತಕೆ ಓಡ್ಯಾಡುವುವುಹಣ್ಣುಕಾಯಿಗಳೆಲ್ಲ ವಿಷಮಯವಾಗಿಹ ಅರಣ್ಯದ ಖಳರೆಂಬ ಗಿಡವು 1ಆರಿಂದ್ರಿಯ ಕಳ್ಳರೆಂಬ ಕಾಮವೆಂಬಚೋರನಾಯಕನುಪಟಳವುಭೂರಿಕಾಲದ ಧರ್ಮವೆಂಬ ದ್ರವ್ಯವೆಲ್ಲಸೂರ್ಯಾಡಿಸುಲಕೊಂಬ ಹಯವುಮೂರು ಬಗೆಯಿಂದ ಸುಡುತ ಕಂಗೆಡಿಸುವದಾರುಣತರ ದಾವಾನಳವುಚೀರುವ ನಿಂದಕ ಝಲ್ಲಿಕದುಶಾಸ್ತ್ರ ನಿಸ್ಸಾರ ಘೂಕಗಳ ರವವು 2ಅಡ್ಡಡ್ಡ ಬಂದು ಅಜ್ಞಾನ ಕಾಳೋರಗವೆಡ್ಡುಗೊಳಿಸಿ ಕಚ್ಚುತಿವೆದೊಡ್ಡೆಂಟು ಮದವೆಂಬೊ ಮದ್ದಾನೆ ಎದೆಯೆಂಬಗುಡ್ಡದೊಳಗೆ ಸುತ್ತುತಿವೆಹೆಡ್ಡನೆಂದು ಚುನ್ನವಾಡಿ ಮನೋಬುದ್ಧಿಗಡ್ಡದ ಕಪಿ ಕಾಡುತಿವೆ 3ಜನ್ಮಮರಣ ಹಸುತೃಷೆಜರಾವ್ಯಾಧಿಯೆಂಬುಮ್ಮಳಿಕೆಯ ಪೊರೆಯುಂಟುಹಮ್ಮುಮಮತೆ ಎಂಬ ತಲೆಹೊರೆ ಭಾರಾಗಿಒಮ್ಮೆಗಿಳಿಯಲಿಲ್ಲ ಗಂಟುಸ್ವರ್ಮಂದಿರವೆ ಹೆಬ್ಬೆಟ್ಟನಾಯಕನರ್ಕಕಮ್ಮರಿಗಳು ಇಪ್ಪತ್ತೆಂಟುಸನ್ಮಾನ ರಾಗಭೋಗಗಳೆಂಬ ಬಯಲಾಸೆಯ ಮೃಗತೃಷ್ಣೆಯ ನಂಟು 4ಅಲ್ಲಿಗಲ್ಲಿಗೆ ಸುಖದು:ಖನೆಳಲುಬಿಸಲಲ್ಲಿಗಲ್ಲಿಗೆ ಪ್ರಿಯತರುವುಬಲ್ಲಿದರಿಂದಾಹ ಭಯದಂತೆ ಸೂಚಿಪಕಲ್ಲುಕೊಳ್ಳಗಳ ನಿರ್ಝರವುಕೊಲ್ವಾರಿನೃಪದೂತರೆಂಬ ಸೂಕರಮೋಹÀಹಲ್ಲೊಳಗಘಕೂಪದಿರವುಕ್ಷುಲ್ಲಕ ಪಿಸುಣರೆಂಬುವ ಋಕ್ಷಬಿಡಾಲಹೊಲ್ಲನಖಿಗಳ ಸಂಚರವು 5ಈಷಣತ್ರಯಯಂತ್ರ ಏಳು ಪ್ರಾಕಾರದಿದ್ವೇಷಿಗಳಿದ್ದ ದುರ್ಗಗಳುದೂಷಣ ಸ್ತುತಿ ಎಂಬ ಕಾಕಪಿಕೋಕ್ತಿ ಪ್ರದೋಷದ ಮಳೆ ಮಂಜುಗಳುನೈಷಧನುಂಡು ಕೊಬ್ಬಿದ ಇಂದ್ರಿಯಗೋಳಕಮೂಷಕಗಳಿಹ ಬಿಲಗಳುದೋಷ ದುರ್ವಾರ್ತೆ ದುರಿತವೆಂಬ ಕ್ರವ್ಯಾದಘೋಷಣ ಭಯಂಕರಗಳು 6ಈ ರೀತಿಕಾಂತಾರದಾಟುವ ಧೀರಗೆಮಾರುತಿ ಮತ ಪಕ್ಷ ಬೇಕುನಾರಾಯಣನೆ ಸರ್ವೋತ್ತಮನೆಂದೆಂಬತೋರ ಗಧಾಯುಧ ಬೇಕುಘೋರಾದ್ವೈತ ಕಕ್ಷವ ಛೇದಿಸುವ ಸುಕುಠಾರ ತತ್ವಗಳಿರಬೇಕುಸಾರಜÕಜನಪ್ರಭು ಪ್ರಸನ್ವೆಂಕಟಕೃಷ್ಣನಾರಸಿಂಹನಸ್ಮøತಿಬೇಕು7
--------------
ಪ್ರಸನ್ನವೆಂಕಟದಾಸರು
ದಾಟುವೆನೆಂದರೆ ದಾಟು ಹೊಳೆಯುಕೈಟಭಾಂತಕ ಭಟರಿಗೆ ಭವಜಲವು ಪ.ಪೂರ್ವಯಾಮದಿ ಹರಿಗುಣಕರ್ಮನಾಮನಿರ್ವಚನದಿ ಕೀರ್ತನೆ ಮಾಡುವ ಮಹಿಮಉರ್ವಿಯ ಮೇಲಿದ್ದು ಒಲಿಸಿಕೊಂಡನು ಸುರಸಾರ್ವಭೌಮನ ಸೀತಾರಾಮನ 1ಜಲದಲಿ ಮಿಂದೂಧ್ರ್ವ ತಿಲಕಿಟ್ಟು ನಲಿದುತುಲಸಿಕುಸುಮಗಂಧ ಅಗ್ರದ ಜಲದಿನಳಿನೇಶನಂಘ್ರಿಗರ್ಪಿಸಿ ಸಹಸ್ರನಾಮಾವಳಿಯಿಂದ ಧೂಪದೀಪಾರತಿ ಬೆಳಗಿ 2ಪರಮಾನು ಯೋಗಾವಾಹನೆ ವಿಸರ್ಜನೆಯುಸ್ಮರಣೆ ವಂದನೆ ಪ್ರದಕ್ಷಿಣೆ ನರ್ತನವುವರಗೀತಪಠಣೆ ಭಾಗವತಾ ಶ್ರವಣವುತ್ವರಿಯದಿ ಭೂತಕೃಪೆಯಲ್ಲಿ ಮನವು 3ಗುರುಪಾದಪದ್ಮದಿ ಬಲಿದು ವಿಶ್ವಾಸಗುರುಕೃಪೆಯಿಲ್ಲದ ಪುಣ್ಯ ನಿಶ್ಯೇಷಗುರುಬೆನ್ನಟ್ಟಿದ ಕರಿಗಡ್ಡಹಾಸ ಹಾಸಗುರುಗಳ ಮರೆದು ಕಳೆಯನೊಂದುಶ್ವಾಸ4ಈಪರಿಹರಿಪುರ ದಾರಿಯ ತೊಲಗಿಕಾಪುರುಷರುಭವಮಡುವಲಿ ಮುಳುಗಿಆಪತ್ತು ಪಡುವರ ನೋಡಿ ಬೆರಗಾಗಿಶ್ರೀ ಪ್ರಸನ್ವೆಂಕಟಪತಿ ನಕ್ಕನಾಗಿ 5
--------------
ಪ್ರಸನ್ನವೆಂಕಟದಾಸರು
ನೀಚ ಮಾನವರಿಗೆಸಿರಿ ಬಂದರೇನು<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಈಚಲ ಮರ ದಟ್ಟ ನೆರಳಾದರೇನು ಪ.ನಾಚಿಕಿಲ್ಲದ ನರರು ಬಾಗಿದರೇನುಹೀಚಿನೊಳಿಹ ಫಲ ಹಣ್ಣಾದರೇನು ಅಪಹೊಲೆಯರೊಳು ಪದುಮಿನಿ ಹೆಣ್ಣು ಹುಟ್ಟಿದÀರೇನುಮೊಲೆಯ ತೊರೆಯದ ನಾಯಿ ಈದರೇನುಕಳಹೀನ ಕಾಮಿನಿಗೆ ಕಾಂತಿ ಹೆಚ್ಚಿದರೇನುಬಿಲದೊಳಗೆ ಸರ್ಪ ಹೆಡೆಯೆತ್ತಿದರೇನು ? 1ಕೋತಿಯ ಮೈಯೊಳುಭಾಂಡ ತುಳಕಲೇನುಹೋತಿನ ಗಡ್ಡವು ಹಿರಿದಾದರೇನುಯಾತಕೂ ಬಾರದ ಬದುಕು ಬಾಳಿದ್ದರೇನುರೀತಿಯಿಲ್ಲದ ನೆರೆಯ ಸ್ನೇಹವಿನ್ನೇನು 2ರಕ್ಷಣೆಯಿಲ್ಲದ ರಾಜ ರಾಜಿಸಲೇನುಭಿಕ್ಷೆ ಹುಟ್ಟದ ಊರು ತುಂಬಿದ್ದರೇನುಲಕ್ಷ್ಯವಿಲ್ಲದವಗೆ ಲಕ್ಷ್ಯ ಬಂದರೇನುಪಕ್ಷಪಾತವಿಲ್ಲದವನ ಅಶ್ರಯವಿನ್ನೇನು 3ಫಣಿಯ ಮಸ್ತಕದ ಮೇಲೆ ಮಣಿಯ ಮಿಂತಲೇನುಉಣಿಸಿ ದಣಿಸದ ಧನಿಯಿದ್ದರೇನುಋಣಗೇಡಿ ಮಕ್ಕಳ ರಟ್ಟೆ ಬಲಿತರೇನುಕ್ಷಣಚಿತ್ತವಿಲ್ಲದವನ ಸ್ಮರಣೆಯು ಇನ್ನೇನು 4ಸಾಕಲಾರದಾತನ ಸತಿಯ ಮೋಹವೇನುಜೊತೆ ಮಾಡದಾ ಹಣ ಗಳಿಸದರೇನುಕಾಕುಮಾನವರ ಸೇವೆ ಮಾಡಿದರೇನುಬೇಕೆಂದು ಭಜಿಸಿರೋ ಪುರಂದರವಿಠಲನ 5
--------------
ಪುರಂದರದಾಸರು
ವಂದಿಸಿದವರೆ ಧನ್ಯರು - ನಮ್ಮ - |ಇಂದಿರಾಪತಿಗಡ್ಡ ಬೀಳುತಲೊಮ್ಮೆ ಪ.ಒಂದೊಂದು ಸ್ತೋತ್ರದಿ ಒಂದೊಂದು ಮಂತ್ರದಿ |ಒಂದೊಂದು ನಾಮವ ನೆನೆಯುತಲಿ ||ಮಂದರೋದ್ಧರನನು ಕುಂದದೆ ಪೂಜಿಸಿ |ವಂದಿಸುವಾನಂದದಿಂದ 1ಬಿಟ್ಟು ಲಜ್ಜೆಯನು ದೃಷ್ಟಿಸಿ ನೋಡುತ |ವಿಟ್ಠಲ ವಿಟ್ಠಲ ಎನುತ ಮನ - ||ಮುಟ್ಟಿ ಮಾಡುವ ಭಕ್ತಿ - ಸ್ತೋತ್ರ - ಸ್ತುತಿಗಳಿಂದ |ಅಷ್ಟಾಂಗದಲಿ ವಂದನೆಯ ಮಾಡುತಲಿ 2ಸಿರಿಲಕ್ಷ್ಮೀಪತಿ ಶರಣಾಗತರನು |ಕರುಣಿಸೆಂದೆನುತಕರವ ಮುಗಿದು ||ಹರುಷ ಪುಳಕದಿಂದ ಹೊರತ ದೇಹವನು ಶ್ರೀ - |ಪುರಂದರವಿಠಲರಾಯನ ಚರಣಕೆ 3
--------------
ಪುರಂದರದಾಸರು
ಹರಿಯೆನ್ನಬಾರದೆಜಿಹ್ವೆವಾರಂವಾರಪ.ಪರಗತಿ ಮಾರ್ಗವು ದುರಿತವನಾಗ್ನಿಯುಪರಿಪರಿಭವರೋಗಕೌಷಧಅ.ಪ.ಉರಿವ ಕಾಳಕೂಟ ಕಂಠದಿ ದಹಿಸಲುಹರಿನಾಮ ಹರನ ಕಾಯ್ತುಕರಿಉರಗವಿಷಾಗ್ನಿ ಶಸ್ತ್ರ ಭಯದಲಿಹರಿನಾಮ ಶಿಶುವ ಕಾಯ್ತುಶರಧಿಲಿ ನಕ್ಕರ ಚರಣವ ಕಚ್ಚಿ ಬರೆಹರಿನಾಮ ಕರಿಯ ಕಾಯ್ತುನಿರಯನಿವಾಸರಸುರಋಷಿಮುಖದಿಂದಹರಿನಾಮ ಎಲ್ಲರ ಕಾಯ್ತು 1ಹಿರಿಯರ ನಿಕ್ಕರ ನುಡಿಯಿಂದಡವಿಲಿರೆಹರಿನಾಮ ಧ್ರುವನ ಕಾಯ್ತುಕುರುಕಂಟಕರುÀ ಅಭಿಮಾನವ ಕೊಳುತಿರೆಹರಿನಾಮ ಸತಿಯ ಕಾಯ್ತುಮರಳೊಮ್ಮೆ ದುರ್ವಾಸ ದ್ರೌಪದಿಗುಣಬೇಡೆಹರಿನಾಮ ಇರುಳೆ ಕಾಯ್ತುಗುರುಪುತ್ರನುರಿಬಾಣದುರವಣೆಗಡ್ಡಾಂತುಹರಿನಾಮ ಭ್ರೂಣವ ಕಾಯ್ತು 2ವರಬಲದಿಂದಲ್ಲಿ ಅಸುರರು ನೋಯಿಸಲುಹರಿನಾಮ ಸುರರ ಕಾಯ್ತುಚಿರಪಾಪ ಭವಯಾತ್ರೆ ಘಟಿಸಲು ತುದಿಯಲಿಹರಿನಾಮ ಭಟರ ಕಾಯ್ತುಶರಣರ ಮಹಿಮೆಯಂತಿರಲಿ ಅಪಮರಣದಿಹರಿನಾಮ ನನ್ನ ಕಾಯ್ತುಗುರುಮಧ್ವವರದ ಪ್ರಸನ್ವೆಂಕಟೇಶ ಶ್ರೀಹರಿನಾಮಗತಿಎನ್ನೆ ಕಾಯ್ತು3
--------------
ಪ್ರಸನ್ನವೆಂಕಟದಾಸರು