ಒಟ್ಟು 64 ಕಡೆಗಳಲ್ಲಿ , 35 ದಾಸರು , 61 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೌಸಲ್ಯಾಗರ್ಭಾಬ್ಧಿಸೋಮಾ ಸ್ವಾ'ು ಕೌಶಿಕ ಮಖಪಾಲ ರಾಮ ಪಆಶಯೇಶಯ ಜನಕ ಪಾಪ'ನಾಶ ತಾಪಸಹೃದಯ ಕಮಲಾವಾಸ ಭದ್ರ ಗರೀಶ ರಘುಕುಲಭೂಷ ದಶ'ಧ ವೇಷಧಾರಿ 1ತೃತಿಯರಾಮಕೋಟಿ ಕೂಡು ಭಕ್ತತತಿಗೆ ಲಭಿಸುವಂತೆಮಾಡುಪತಿತಪಾವನ ಪದ್ಮನಯನ ಶತಧೃತಿ ಶಿವಸೇವ್ಯಚರಣಾಸತತವೂ ತವಸೇವೆಗೆ ಮನ 'ತವತೋರಿಸಿ ಸಲಹೋ ಶೌರಿ 2ಭರತಪೂರ್ವಜ ದೀನಪ್ರೇಮಾ ದನುಜಹರಣಧುರೀಣ ನಿಸ್ಸೀಮಕರಿಧ್ರುವ ಪ್ರಹ್ಲಾದ ಶಬರೀ ನರಸತಿಪರಮಾರ್ಥದಾಯಕನಿರುಪಮಾನದ ರಾಮಕೋಟಿಯಾಚರಣ ಕೀರ್ತಿಯ ನಿಲಿಸು ಧೊರೆಯೆ 3ಧಾರುಣೀ ಚನ್ನಪಟ್ಣೇಶಾ ಲಕ್ಷ್ಮೀನಾರಾಯಣ ಕಾಯೊ ಶ್ರೀಶಾಮಾರಸುಂದರ ರಾಮನಾಮವ ಹಾರವಾಯಾಗಿ ಸಮರ್ಪಿಸಿದೆವುಕೋರಿಕೆ ಸಪ್ತೋತ್ಸವಂಗಳು ಪೂರ್ತಿಮಾಡುವರೆಂದು ನಂಬಿದೆ 4ಗುರುತುಲಸೀರಾಮಸ್ವರೂಪ ನಿಮ್ಮಕರುಣದಿಂದಲಿಸಾರಿಭೂಪಾಜರುಗಿಸಿದಿರೀ ಜಪಾಧ್ವರವನು ಮುರಹರೀಮದ್ದುರಿತ ಹರಣನೆನಿರತಭಕ್ತಿಯ ಕೊಟ್ಟು ಪ್ರಜಗಳುನುದ್ಧರಿಸುವ ಕರ್ತವ್ಯ ನಿನದೇ 5ಭೂ'ುಜನರ ಗರುಡುತುರಗಾ ರಂಗಸ್ವಾ'ುದಾಸೊಲ್ಲಾಸಾ ಈಗಪ್ರೇಮ ತೋರಿಸಬೇಕು ಬೇಡುವೆ ಕಾ'ುತಾರ್ಥದ ಕಲ್ಪಭೂಜಸೋಮಜಿತಮುಖ ಸಕಲ ಸುಗುಣಸ್ತೋಮ ತುಲಸೀದಾಮ ಧರಣಾ * 6* 20-8-1933 ಎಂದು ದಿನಾಂಕ ಇದೆ.(ಈ) ರಂಗಸ್ವಾ'ುದಾಸರನ್ನು ಕುರಿತ ಕೆಲವು ಕೃತಿಗಳು
--------------
ಮಳಿಗೆ ರಂಗಸ್ವಾಮಿದಾಸರು
ಗುರುವೆ ಪೂಜಿಪೆ ನಿಮ್ಮಯ ಚರಣಗಳನ್ನು ಗುರುವೆ ಭಜಿಪೆ ತಮ್ಮಯ ಚರಣಗಳನ್ನೂ ಪಪರಮತತ್ವದೊಳಿರುವ ನಿಜಗುರು ತುಲಸಿರಾಮರತೆರದಿ ನಮ್ಮಯದುರಿತಗಳ ಪರಿಹರಿಸಲೀತೆರ ರಂಗಸ್ವಾ'ುಗಳಾಗಿ ಬಂದಿರಿ 1ಪರಿಪರಿಯ ಇಚ್ಛೆಗಳೊಳಿರ್ದಸರಳಜೀವನಪಿಡಿದು ತಮ್ಮಯಚರಣಗಳ ಭಜಿಪುದಕೆ ಪರಮಾನಂದವ[ನರು'] ತೋರಿದಿರಿ ನಿಜಗುರು 2ಸರ್ವಜನರನು ಏಕಭಾವದಿಸ್ಮರಣೆಮಾಡುªತೆÉರದಿ ುೀಮ'ಪರಮಪುರುಷನ ದಿವ್ಯಮ'ಮೆಯಅರು'ದಿರಿ ತವಕರುಣದಿಂದಲಿ 3ರಾಮಕೋಟಿಯ ಸೇವೆಯನು [ನಮ್ಮ] ಚನ್ನಪಟ್ಣದ ಭಕ್ತರೆಲ್ಲರುಪ್ರೇಮದಿಂದಲಿ ಭಜನೆಮಾಡಿಕಾಮಜನಕನ ಕರುಣಪಡೆದರು 4ಪಾಮರನು ನಾನಾಗಿ ಈ ಮ'[ಯೊಳು]ಪ್ರೇಮದಿಂ ಗುರು ನಿಮ್ಮ ಕರುಣದಿರಾಮಕೃಷ್ಣದಾಸ [ನೆನಿಸಿ] ನುಡಿದೆನುನೇಮದಿಂ ಕೀರ್ತನೆಯ ರೂಪದಿ 5
--------------
ಮಳಿಗೆ ರಂಗಸ್ವಾಮಿದಾಸರು
ಚರಣಾರಾಧಿಸೋ ಚಾರುತರ ಭೂ ವರಹ ವೇಂಕಟೇಶನಾ ಉರಗಾದ್ರಿವಾಸನಾ ವರ ಶ್ರೀನಿವಾಸನಾ ಪ ದುರಿತಕೋಟಿಯ ಹರಿವ ಸ್ವಾಮಿ ಪು ಷ್ಕರಿಣಿ ತೀರ ವಿಹಾರನಾ ಸಿರಿಮನೋಹರನಾ ಪರಮ ಉದಾರನಾ 1 ವಾಹನೋತ್ಸವದಲ್ಲಿ ಪರಿಪರಿ ಮಹಿಮೆ ಜನರಿಗೆ ದೋರ್ವನಾ ಸಹಜದಿ ಮೆರೆವನಾ ಬಹಳ ಪೂರ್ವನಾ 2 ನಡೆದು ಯಾತ್ರೆಗೆ ಬರಲು ಹಯಮೇಧ ಅಡಿಅಡಿಗೆ ಫಲ ನೀವನಾ ಬಿಡದೆವಾ ಕಾವನಾ ಮೃಡಜರ ದೇವನಾ3 ಸಕಲರಿಗೆ ನೈವೇದ್ಯನುಣಿಸುವಿ ಅಖಿಳ ಸಂಶಯ ಹಾರಸೀ ವೈಕುಂಠ ಸೇರಿಸೀ ಸ್ವಕರದಿ ತೋರಿಸೀ 4 ಇಂದು ನಮ್ಮನಿ ದೈವವಾಗಿಹ ತಂದೆ ಮಹಿಪತಿ ಪ್ರೀಯನಾ ಸುಂದರ ಕಾಯನಾ ವೃಂದಸುರ ಧ್ಯೇಯಾನಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಜಯ ಜಯ ಮಂಗಳಜಯ ಮಂಗಳ ಶುದ್ಧಾದೈತನಿಗೆ ಪ ಅಗಣಿತ ಮಹಿಮಗೆ ಅಕ್ಷಯರೂಪಗೆಅಖಂಡ ಸಹಜಾನಂದನಿಗೆಝಗಿ ಝಗಿತಾತ್ಮಗೆ ಝಳುಕಿಸಿ ಕರ್ಣದಿಝಣನಾದವ ಕೇಳ್ವನಿಗೆಸೊಗಯಿಸಿ ಚಂದ್ರನ ಶತಕೋಟಿಯಪ್ರಭೆ ಸಾರವ ಸವಿಸವಿದುಣ್ಣುವಗೆಬಗೆ ಆನಂದದಿ ಸುಖಿಸುವ ದೇವಗೆಭಾಸ್ಕರ ತೇಜಃಪುಂಜನಿಗೆ1 ನಿತ್ಯಾನಂದಗೆ ನಿರ್ಮಲರೂಪಗೆನಿಶ್ಚಲ ಪರಬ್ರಹ್ಮಾತ್ಮನಿಗೆನಿತ್ಯಶುದ್ಧಗೆ ನಿಜನಿರ್ಮಾಯಗೆನಿಜಬೋಧ ಜ್ಞಾನೈಕ್ಯನಿಗೆಪ್ರತ್ಯಗಾತ್ಮಗೆ ಪೂರ್ಣಬ್ರಹ್ಮನಿಗೆಪರಮ ಪರತರ ಪಂಡಿತಗೆನಿತ್ಯತೃಪ್ತಗೆ ನಿಗಮಾಗಮನಿಗೆನಿಶ್ಚಿಂತಾತ್ಮ ನಿಸ್ಪøಹಗೆ 2 ಕೈಯಲಿ ಪಿಡಿದಿಹ ಜಪಮಾಲೆಯಸರ ಕರ್ಣಕುಂಡಲವಿಟ್ಟಿಹಗೆಮೈಯೊಳು ಪೊದ್ಹಿಹ ಕಾಷಾಯಂಬರಮಿರುಪಿನ ಕೌಪೀನವುಟ್ಟಿಹಗೆಮೈಯೊಲೆದಾಡುವ ಸ್ವಾತ್ಮಾನಂದದಿನಲಿವ ಸದ್ಗುಣ ಶಾಂತನಿಗೆಮೈಯನೆ ಸದ್ಗತಿ ಭಕ್ತರಿಗೀಯುವವ್ಯಾಪಿತ ಜೀವನ್ಮುಕ್ತನಿಗೆ3 ಆರವಸ್ಥೆಯ ಧರಿಸಿಯೆ ಜಗದಲಿಅನಂತರೂಪ ತಾನಾಗಿಹಗೆಮೀರಿಯೆ ಸದ್ಗುಣ ನಿರ್ಗುಣ ರೂಪವಮೆರೆದಿಹ ಮುಮುಕ್ಷಾಂಗನಿಗೆತೋರುವ ತ್ವಂಪದ ತತ್ತ್ವಮಸಿಪದತೋರಿ ವಿರಾಜಿಪ ತುಷ್ಟನಿಗೆಧೀರೋದ್ಧಾರಗೆ ದೀನರನಾಥಗೆದೃಶ್ಯಾದೃಶ್ಯ ವಿದೂರನಿಗೆ 4 ನಿರುಪಮ ನಿರಮಯ ನಿಜ ನಿರ್ಲಿಪ್ತಗೆನಿರ್ಭಯ ನಿರ್ವಿಕಲ್ಪನಿಗೆಪರಮಪುರುಷಗೆ ನಿಗಮೋದರನಿಗೆಪರಮಾರೂಢಾ ಮಾರ್ಗನಿಗೆಗುರುಚಿದಾನಂದ ಅವಧೂತಾತ್ಮಗೆಗುಣನಿಧಿ ತುರಿಯಾತೀತನಿಗೆಸ್ಥಿರಸಿದ್ಧ ಪರ್ವತದಾಸ ಶ್ರೀಪುರುಷಗೆಬಗಳಾ ಶ್ರೀಗುರು ರೂಪನಿಗೆ 5
--------------
ಚಿದಾನಂದ ಅವಧೂತರು
ತಪ್ಪು ತಪ್ಪು ತಪ್ಪು ತಪ್ಪಪರಾಧ ಕೋಟಿಯಸರ್ವಂ ತಪ್ಪನ್ನೆಲ್ಲಾ ಕ್ಷ'ುಸಿ ಒಪ್ಪಿಕೊಳ್ಳಯ್ಯ ಗುರುವೆ ಪದೇಹ ತನ್ನದೆಂಬ ಅಹಂಕಾರದ ತಪ್ಪು ತನ್ನಗೇಹ ಸತಿಸುತರ ಮಮತೆ ಪಾಶದ ತಪ್ಪುಮೋಹ ಮದ ಮಾತ್ಸರ್ಯವ ಭ್ರಮೆಗೊಂಬೊ ತಪ್ಪುಓಹೋ! ವ್ಯರ್ಥಕಾಲವ ಕಳೆದೆನಹುದಯ್ಯ 1ಬಕವೃತ್ತಿಯ ಸೇಮೆಂದ ಮುಕುತನೆಂಬೆನೋ ಹರಿ'ಕಳಮತಿಗಳ ಕೂಡಿ ಯೋಗ್ಯನೆಂಬೆನೋಸಕಲ 'ಷಯಸುಖವನುಂಡು ವೈರಾಗಿಯೆಂಬೆನೋ ಹರಿಭಕ್ತರ ಸಂಗವ ಬಿಟ್ಟು ಜ್ಞಾನಿಯೆಂಬೆನೋ 2ಬರಿಯ ಬ್ರಹ್ಮಜ್ಞಾನದಿಂದ ಮರುಳು ಮಾಡಿದೆಪರಿಪರಿಯ ಭಾವಭೇದಗಳನು ತೋರಿದೆಅರಿಯದ್ಹೋದೆನಯ್ಯ ಶ್ರೀಮದ್ಗುರುವೆ ವಾಸುದೇವಾರ್ಯ ನರಸಾರ್ಯ ಅಮರಗಿರಿನಿಲಯ ಸಕಲ ತಪ್ಪು ಮರೆಯಯ್ಯಾ * 3
--------------
ವೆಂಕಟದಾಸರು
ದಯಾಬ್ದಿ ಸಿರಿಧರಣಾ ಪಾ'ಮಾಂಭಯಕೃದ್ಭಯನಾಶನ ಹಯವದನಾ ಪಜಯಪ್ರದ ಮುರಹರ ಜಾನಕೀಶ ಅಘಕ್ಷಯ ಖಗವಾಹನ ಸಾರಸೇಕ್ಷಣ 1ಚಾತುರ್ಥದ ರಾಮಕೋಟಿಯ ಜರುಗಿಸಿಕೌತೂಹಲ ಪ್ರಜತತಿಗೆ ಲಭಿಸಿದೆ 2ಆಪದೊದ್ಧಾರಣ ಆರ್ತಶರಣ್ಯಾಭೊಪಸುಜನಗಣ ತಾಪನಿವಾರಣ 3ಪ್ಲೇಗಿನವಾಂತರ ಪರಿಹರಿಸಿಪುರಭೋಗಿಶಯನ ಪರಪಾಲಿಸು ಬೇಡುವೆ 4ಚನ್ನಪಟ್ಣಾಧೀಶ ಸ್ತೌತ್ಯವುಮೇಶಎನ್ನಪರಾಧಗಳ ಮನ್ನಿಸು ಶ್ರೀಶ 5ಯುವತೀಮಣಿಯರೆಲ್ಲ ಶಿವಕರಭಕ್ತಿುದಿಂತವನಾಮಾಮೃತ ಸ'ಗೊಲಿದರು ರಕ್ತಿ 6ಪ್ರೇಮ ತುಲಸಿಗುರುಸ್ವಾ'ು ಸೇವಕ ರಂಗಸ್ವಾ'ುದಾಸ ಹೃದಿಧಾಮ ಶ್ಯಾಮಾಂಗ 7
--------------
ಮಳಿಗೆ ರಂಗಸ್ವಾಮಿದಾಸರು
ದಾಸನಾಗಬೇಕು ರಂಗಸ್ವಾ'ುೀಗುರು ನಿಮ್ಮ ದಾಸನಾಗಬೇಕು ಪದಾಸನಾಗಬೇಕು ಕ್ಲೇಶಪಂಚಕವಳಿದು ಆಸೆಯಲ್ಲಿ ಮನಸೂಸದೆ ಸರ್ವದಾ ಅ.ಪಮನದ ಕಲ್ಮಷ ಕಳೆದು ಮಹಾ ರಾಮಕೋಟಿಗಳ ಮ'ಮೆಗಳನು ತಿಳಿದು ಇನಿತು ಈ ಜಗವೆಲ್ಲ ಶ್ರೀರಾಮಮಯವೆಂದು ಘನವಾದ ಮೋಹದಾ ಗಡಿಯನು ದಾಂಟುತ್ತಾ 1ತನುವು ಅಸ್ಥಿರವೆನ್ನುತಾ ತಿಳಿದು ಈ ದುವ್ರ್ಯಾಧಿಪ್ಲೇಗು ಭಯವಬಿಡುತಾ ಘನವಾದ ರಾಮಕೋಟಿಯಲಿ ನೆಲೆಸುತಾಬಿನಗು ಸಂಸಾರದ ಮಮತೆಯ ಬಿಡುತಾ 2ಆರುಚಕ್ರದಿಮೆರೆವ ಅಖಂಡನಾ ಮೂರುಗುಣವತಿಳಿಪ ಆರುಮೂರದಿನಾರು ತತ್ವಾತೀತನಿಜತೋರಿ ರಾಮಕೃಷ್ಣಾದಾಸನುದ್ಧರಿಸಿದರು 3
--------------
ಮಳಿಗೆ ರಂಗಸ್ವಾಮಿದಾಸರು
ನರಕಾಂತಕ ವರದೇವನೆ ಕರುಣಾಕರ ಗೋವಿಂದಾ ಪ ಮರೆವೆಯೇತಕೋ ಲೋಲ ಬಾರೋ ಬಾರೋ ಗಾನಲೋಲ ಅ.ಪ ಪರಿಪರಿಯಾ ಜನುಮಾಂತರ ಸರಣಿಯೊಳಾನು ಜನಿಸಿ ಸೊರಗಿ ಸೊರಗಿ ಮರುಗಿ ತಿರುಗಿದೆ 1 ನೆಲೆಸಲಿಕೆ ಸ್ಥಳವು ಇಲ್ಲವೋ [ಕಲಿ]ಕಾಲಪಾಶ ಬದ್ಧನಾದೆನೊ 2 ಜನುಮಕೋಟಿಯೊಳಾದು ಪೋಪುದು ನಾಮ ಸ್ಮರಣೆಯೊಂದಿರಲೋ 3 ರಾಮದಾಸವಿನುತ ಕೇಶವಾ [ಉದ್ಧರಿಸೋ] ಆವ ಸುಖವು ಬೇಡವೆನಗೆ ಜೀವ ಪೋಗುವಂದು ನಿನ್ನ ಸೇವೆಗೈವ ವರವು ಸಾಕೆಲೈ ಮಾವಿನಕೆರೆಯರಸ 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನರನೆನಬಹುದೆ ಸದ್ಗುರು ವರನಾತರುವೆನಬಹುದೆ ಸುರತರುವನ್ನ ಪ ಆಸನವನೆಹಾಕಿ ಕುಳ್ಳಿರಿಸಿದವನನಾಸಿಕ ಕೊನೆದೃಷ್ಟಿ ಇರಿಸಿದವನಬೀಸುವ ವಾಯುವ ಕುಂಭೀಸೀದವನಸೂಸುವ ಮುತ್ತಿನ ಮಳೆ ಸುರಿಸಿದವನ 1 ಆರು ಮಂಟಪ ನೆಲೆ ಅಡರಿಸಿದವನಭೇರಿ ಘಂಟವು ಶಂಖವು ಭೋರಿಡಿಸಿದವನಬೀರುವ ದ್ವಿದಳ ಸದರಕಾಶಿಸಿದವನನೂರು ಕೋಟಿಯ ರವಿ ಬೆಳಕ ಚೆಲ್ಲಿದವನ 2 ಸಾವಿರ ದಳದ ಮನೆಯ ಜೈಸಿದವನಈವ ಬ್ರಹ್ಮರಂದ್ರ ಸುಖವುಣಿಸಿದವನಕೇವಲ ಶಿಂಶುಮಾರಕೆ ಸೇರಿದವನದೇವ ಚಿದಾನಂದನ ಮಾಡಿದವನ 3
--------------
ಚಿದಾನಂದ ಅವಧೂತರು
ನೆಚ್ಚದಿರು ಸಂಸಾರ ಕಡೆಗೆ ಹಾಕುವುದಲ್ಲ ಮಚ್ಚುಗೊಳಿಸುವುದು ವಿಷಯದಲಿ ಎಚ್ಚತ್ತು ಪ್ರವರ್ತಿಸು ಇನ್ನಾದರೂ ಸಿರಿ- ಅಚ್ಯುತನ ಪಾದವನು ನಂಬೊ ಪ್ರಾಣಿ ಪ ಪುಂಪೆಣ್ಗಳಿಂದ ಪುಟ್ಟಿದ ದೇಹವನು ತಿಳಿ ಕೆಂಪು ಬಿಳಿದಿನ ವರ್ಣ ಮಿಳಿತ ಇಂಪಾಗಿದೆಯೆಂದು ಹಿಗ್ಗದಿರೆಲವೊ ಹೊಲೆ- ಗಂಪು ನಾರುವುದು ಅದ ತೊಳೆಯದೆ ಇರಲು 1 ಜನಿಸಿದಾಕ್ಷಣ ಕಾಯು ಕಡಮೆಂದು ತಿಳಿಯದಲೆ ಜನನಿ ಜನಕರು ಸುಖಿಸುತಿಹರು ತನುಭ್ರಮಣವಲ್ಲದೆ ಚಿದ್ರೂಪ ಬಲ್ಲರೆ ಕೊನೆಗೆ ಏನಾಗುವುದೊ ಪ್ರಾಣಿ 2 ಗಳಿಸಿ ಧನ ತರುವಾಗ ಸುತ್ತ ನೆರೆದಿಹರೆಲ್ಲ ಭಳಿರೆ ಇವ ಮಹಾತ್ಮನೆಂದು ಘಳಿಗೆ ತೊಲಗಲು ಧನವು ಕರಗಿ ತಿಂದು ಪೋಗಿ ಹಳಿದು ಹಲ್ತೆರೆದು ಅಣಕಿಪರೋ-ಪ್ರಾಣಿ 3 ಹುಬ್ಬಿನಿಂದಲೆ ಹೊಡೆದು ಹೃದಯದ ಕಗ್ಗಂಟು ಕಬ್ಬು ಕಾರ್ಮುಕನಿಂದ ಬಿಡಿಸಿ ಉಬ್ಬಿಸ್ಯುಕ್ಕಿನ ತಂತಿಯಂತೆ ಮಾತುಗಳಾಡಿ ಉಬ್ಬಸವ ಬಡಿಸುವಳೊ ನಾರಿ ಪ್ರಾಣಿ 4 ಯೌವನವೊದಗಿದಾಗ ಏನೆಂದರೂ ಅಪ್ಪ ಅವ್ವಣ್ಣನೆಂದು ನಸುನಗುತ ಗವ್ವಳಿಕೆ ವೃದ್ಧಾಪ್ಯ ಬಂದೊದಗಲು ಇವನ ಬವ್ವನ ತೆರೆದಲಾಡಿಪರೋ-ಪ್ರಾಣಿ 5 ನಿಷ್ಠಕ್ಕೆ ದೇಹವನು ಮಾಡಿಕೊಂಡಂತೆ ನೀ ದುಷ್ಕರ್ಮಕೊಳಗಾಗದಿರೆಲೋ ನಿಷ್ಕಂಟಕವಾದ ಮಾರ್ಗದಲಿ ನರಹರಿಯ ನಿಷ್ಕಾಮದಲಿ ಭಜಿಸೊ ಮನವೆ ಪ್ರಾಣಿ 6 ಅಂ¨ಲಿಗೆ ಗೃಹಪಾಲ ಮನೆ ಮುಂದೆ ಹಗಲಿರುಳು ಹಂಬಲಿಸಿ ಬಿದ್ದಂತೆ ನೀನು ಕವಿ ಜೋತು ಬಿದ್ದು ಈ ಡಿಂಬವನು ಪೋಷಿಸದಿರೆಲವೊ-ಪ್ರಾಣಿ 7 ದೇಹಕ್ಕೆ ಬಲವಾಗಬೇಕೆಂದು ಎಲ್ಲರೊಳು ಕಂಡಲ್ಲಿ ಸ್ನೇಹಭಾವವನ್ನು ಬಯಸಿ ಕಾಯ ಪುಷ್ಟಿಯಿಂದ ಮೋಹಕ್ಕೆ ಒಳಗಾದೆಯಲ್ಲೋ-ಪ್ರಾಣಿ8 ಸ್ವಲ್ಪ ದಿನವುಳಿಯಿತು ಒಂದು ಸಾಧನ ಕಾಣೆ ಕಲ್ಪಾಯು ನಿನಗಿಲ್ಲವಲ್ಲೊ ಬಲ್ಪಂಥಗಳ ಮಾಡಿ ಭೋಗಪಡದಿರು ನಾಗ- ತಲ್ಪನ್ನ ಮೊರೆಹೋಗಲೋ-ಪ್ರಾಣಿ9 ದೇಶ ದೇಶವ ತಿರುಗಿ ಬಳಲಿ ಬಾಯಾರಿ ನೀ ಕ್ಲೇಶಕೊಳಗಾಗಿ ಹೊನ್ನುಗಳ ಏಸೇಸು ತಂದದ್ದು ಏನಾಯಿತೋ ಒಂದು- ಕಾಸು ನಾಳೆಗೆ ಕಾಣೆಯೋ-ಪ್ರಾಣಿ10 ಎಂದಿಗಾದರೋ ಇದೇ ಸಂಸಾರ ವಿಸ್ತಾರ ಒಂದಕ್ಕೆ ಒಂದೊಂದು ಅಧಿಕ ಬಂಧನವಲ್ಲದಲೆ ಲೇಶ ನಿರ್ಮಲ ಕಾಣೆ ಪೊಂದು ಸಜ್ಜನರಲ್ಲಿ ಮಂದ-ಪ್ರಾಣಿ11 ನಿತ್ಯ ಗಂಡಾಂತರದಿ ಬಿದ್ದು ಸಕಲಕ್ಕೆ ಕರ್ತೃ ನಾನೆಂದು ಕೂಗುವಿಯಲೊ ಮೃತ್ಯು ನಗುವುದು ನಿನ್ನ ಹೆಡತಲೆಯಲಿ ನಿಂದು ಚಿತ್ತದಲ್ಲಿ ತಿಳಿದು ತಲೆ ಬಾಗೊ-ಪ್ರಾಣಿ 12 ದೊಡ್ಡವನು ನಾನು ಎನಗೆಲ್ಲ ಜನರು ಬಂದು ಅಡ್ಡಬೀಳುವರೆಂಬ ಮಾತು ಹೆಡ್ಡತನ ತಾಳದಿರು ಕೊನೆಗೆ ಅನುಭವಕ್ಕು ಕಡ್ಡಿಯಂದದಿ ಮಾಳ್ಪರೋ-ಪ್ರಾಣಿ 13 ಕೋಟಿಯಾದರು ಕೇಳು ಅವರೋಕ್ಷಿಗಾದರೂ ಕೋಟಲೆಯೊಳಿರದೆ ಗತಿಯಿಲ್ಲ ತಾಟತೂಟಕ ಮಾಡಿ ಅವರಂತೆ ನುಡಿದು ಭವ ದಾಟಬೇಕೋ ಬೇಗ ಜಾಣ-ಪ್ರಾಣಿ14 ಆದರಿಸಿ ಸತಿಸುತರು ಬಂಧು ಬಳಗಕ್ಕೆ ಸಂ ಪಾದಿಸಿ ಧನ ಧಾನ್ಯ ತಂದು ಮೋದಪಡಿಸುವೆನೆಂದು ವಾದಿಸುವ ಮನುಜನ್ನ ಪಾದಕ್ಕೆ ಶರಣು ಸಾರೆಲವೋ-ಪ್ರಾಣಿ 15 ವನಧಿಯೊಳು ಸಪ್ತದ್ವೀಪದ ಮೃತ್ತಿಕೆ ಹಾಕೆ ದಣುವಿಕ್ಯಲ್ಲದೆ ಪೂರ್ಣವಹುದೆ ಇನಿತು ತಿಳಿಯೆಲ್ಲೆಲ್ಲಿ ತಂದ ಧನದಿಂದ ಭವ- ವನಧಿ ತುಂಬದು ಕಾಣೊ ಮರುಳೆ-ಪ್ರಾಣಿ 16 ನಿತ್ಯ ಬರೆದ ಲೆಖ್ಖವು ದಿವಾ ರಾತ್ರಿ ನೋಡುತಲಿದ್ದು ನಿನ್ನ ಪತ್ರ ಕರದಲಿ ಪಿಡಿದು ಈ ಮೂರ್ಖ ನರಮಹಿಷ- ಪುತ್ರನೆಂದು ನಸುನಗುವರಲ್ಲೋ-ಪ್ರಾಣಿ 17 ಎನಗೆ ತನಗೆಂದು ಯಮಭಟರು ಕರಗಳ ಹೊಯಿದು ಕಣಿದು ಭುಜ ಚಪ್ಪರುಸುತಿಹರೊ ಅನಿತರೊಳಗೆಚ್ಚರಿಕೆ ಎಚ್ಚತ್ತು ಹರಿಚರಣ ವನಜ ಧಾನ್ಯವ ಒಲವು ಮಾಡೊ-ಪ್ರಾಣಿ 18 ಶ್ರುತಿಗೆ ಅಪ್ರಾಮಾಣ್ಯ ಬಾರದಂತೆ ಮಧ್ವ ಮತಕೆ ವಿರೋಧವಾಗದಂತೆ ಕ್ಷಿತಿಯೊಳಗೆ ಸುಜನರಿಗೆ ಹಿತವಾಗುವಂತೆ ಶ್ರೀ- ಪತಿಯ ಸೇವಿಸಿ ಸುಗತಿ ಪಡೆಯೋ-ಪ್ರಾಣಿ 19 ಅರ್ಥಬಾರದು ನಿನ್ನ ಸಂಗಾತ ಕೇಳ್ ಕೊನೆಗೆ ವ್ಯರ್ಥಧಾವತಿ ಪ್ರಾಪ್ತಕರ್ಮ ತೀರ್ಥಯಾತ್ರೆಯ ಮಾಡಿ ನಿಸ್ಸಂಗನಾಗು ಯ_ ಥಾರ್ಥಾ ಜ್ಞಾನದಿಂದ ಬಾಳೊ ಪ್ರಾಣಿ20 ಶಿಥಿಲವಾಗಿ ಪೋಪ ದೇಹಕೆ ಮಮತಿಂದ ಮಿಥುನ ಭಾವಗಳನ್ನೆ ಬಯಸಿ ವ್ಯಥೆಪಟ್ಟು ಪಥತಪ್ಪಿ ನಡೆದು ನರಹರಿ ಸುಗಣ ಕಥೆಗೆ ವಿಮುಖನಾಗದಿರೆಲೊ-ಪ್ರಾಣಿ 21 ವನಗಿರೀ ನದಿ ಮೆದೆ ಹೊದರು ಗಹ್ವರ ಹುತ್ತ ವನರಾಶಿ ದ್ವೀಪ ಪಾತಾಳ ತನು ಮತ್ರ್ಯ ಸುರಲೋಕ ಜನನಿ ಜಠರದೊಳಿರಲು ಅಣು ಮಾತ್ರ ತಪ್ಪುವುದೆ ಬರಹ ಪ್ರಾಣಿ 22 ಹಲವು ಹಂಬಲ ಸಲ್ಲ ಆದ್ಯಂತಕಾಲದಲಿ ಗಳಿಸಿಕೋ ಪೂರ್ಣಾಯು ವಾಯು ಒಲಿಯದಲೆ ನಿನ್ನೊಳಗೆ ವಿಜಯವಿಠ್ಠಲರೇಯ ಸುಳಿಯ ಜಾಗ್ರತನಾ ಗೆಲೋ ಪ್ರಾಣಿ 23
--------------
ವಿಜಯದಾಸ
ಪಾವನೀ ಆವಹಿ ಮಾಂ ಪ ಪಾವನಿ ಪಾತಕಾರಣ್ಯ ಮಹಾ ಪಾವಕÀ ನೀನಾದ್ಯೊ ಘನ್ನ ಆಹಾ ಆವಕಾಲದಲ್ಲಿ ಭಾವಜಜನಕನ ಸೇವೆಯೊಳಿರುವಂಥ ಭಾವ ಪಾಲಿಸೊ ದೇವ ಅ.ಪ ಪ್ರಾಣಾದಿ ಪಂಚರೂಪಕನೆ ಸುರ ಗಣ ಕರಾರ್ಚಿತ ಪಾದಯುಗನೆ ಗುಣ ಗಣನಿಧಿ ಬಾರತೀಧವನೇ ಜಗ ತ್ರಾಣ ಕಾರಣನೆ ಮಾರುತನೇ ಆಹಾ ಚಾರು ಚ ರಣ ವಂದಿಪೆ ಜಗತ್ಕಾರಣಕರ್ತನೇ 1 ಖದ್ಯೋತ ಶತ ನಿಭ ಚರಣಾ ಅನಾದ್ಯ ಹರಣ ಸದ್ಯ ವಿದ್ಯೋತ ವೇದಾಂತಾಭರಣಾ ಅನ ವಧ್ಯ ಸ್ವಭಕ್ತಾಂತಃ ಕರಣಾ ಆಹಾ ವಿದ್ಯಾರಮಣ ನೀನೆ ಸದ್ಯೋಜಾತಗೆ ಸು ವಿದ್ಯಾ ಪೇಳಿದ್ಯೋ ಪ್ರದ್ಯುಮ್ನನ ತೋರಿಸೋ 2 ಶ್ರೀನಾಥನಿಗೆ ಪ್ರತೀಕಾ ಬಾಲ ಭಾನುಕೋಟಿ ಪ್ರಕಾಶಾ ಏನು ಕರುಣಾಳೊ ಭಕ್ತಾಭಿsಲಾಷಾ ಅನು ಸಾರದಿ ಪೂರ್ತಿಪ ಈಶಾ ಆಹಾ ಹನುಮದಾದಿರೂಪ ಘನವಾಗಿ ಧರಿಸಿ ನೀ ವನಧಿ ಲಂಘಿಸಿ ಹರಿ ವನಿತೆಯ ತಂದಿತೆÀ್ತ 3 ಸೂತ್ರನಾಮಕ ಶುಭಗಾತ್ರಾ ಚಿತ್ರ ಚಂiÀರ್i ಪಿತಾಮಹಪುತ್ರಾ ಗೋತ್ರ ಧರಮುಖ ದ್ಯು ಸ್ವಕÀಲತ್ರಾ ಮಿತ್ರ ತಾಡನ ಹರ್ತ ಅರ್ಥಗಾತ್ರಾ ಆಹಾ ಸುತ್ರಾಮ ಮುಖ ತ್ರಿನೇತ್ರಾಂತ ಸುರಕೃತ ಸ್ತೋತ್ರ ಪದಾಂಬುಜ ಮದಂತ್ರದಿ ನಿಲಿಸಯ್ಯಾ 4 ಘೋಟ ಖೇಟ ಕಂಠೀರವ ವದನಾ ಭವ ಕಾಟ ತಪ್ಪಿಸಿ ಪೊರಿ ಎನ್ನಾ ಕಿಟ ಮ ರ್ಕಟ ರೂಪನೆ ನಿನ್ನಾ ಭಕ್ತ ಕೋಟಿಯೊಳಗೆ ಸೇರಿಸೆನ್ನಾ ಆಹಾ ದಿಟ್ಟ ಮಹಿಮ ಗುರು ಜಗನ್ನಾಥ ವಿಠಲನ್ನ ಮುಟ್ಟ ಭಜಿಪ ದಿವ್ಯ ದÀೃಷ್ಟಿಯ ಪಾಲಿಸೋ 5
--------------
ಗುರುಜಗನ್ನಾಥದಾಸರು
ಪುರಂದರ ದಾಸರಾಯಾ | ನಮಿಸೆ ನಿಮ್ಮಚರಣ ಸರಸೀರುಹವಾ ಪ ಮೊರೆಹೊಕ್ಕ ಜನರ ನೀ | ಪೊರೆಯದೆ ಬಿಡುವರೆವರಪ್ರಹ್ಲಾದ್ ಗರುಹಿದಂ | ತರುಹು ಮಂತ್ರಾರ್ಥಿವ ಅ.ಪ. ದ್ವಾರಕ ಪುರದೊಳಗೆ | ನರ್ತನ ಗೈಯ್ಯೆವಾರ ಕಾಂತೆಯರೆಲ್ಲರೂ |ಭೋರಿಟ್ಟು ಮೊರೆಯುವ | ಸ್ವರಕೇಳಿ ಸುರರೆಲ್ಲಹರಿಯ ಓಲಗವಾರು | ಹೊಗುವರು ಎಂದರು1 ಓಲಗ ಸೇರ್ದ 2 ಷೋಡಶದ್ವಯ ಸ್ವರದಿ | ಮೈ ಮರೆಯುತ್ತಪಾಡಿ ಪೊಗಳಿ ಮುದದೀ |ಮೃಡವಂದ್ಯ ಹರಿಯವನ | ಕಡುಭಕುತಿಗೆ ಮೆಚ್ಚಿನೀಡುವೆ ವರವ ನೀ | ಬೇಡು ಬೇಡನೆ ಪೇಳ್ದ3 ಎಚ್ಚತ್ತು ಮುನಿ ನೋಡಿದ | ನಗುತಿರ್ಪಅಚ್ಚ್ಯುತನ್ನಾ ಬೇಡಿದ |ಸಚ್ಛಾರಿತ್ರನೆ ಕೇಳು | ನಿಚ್ಚಾಟೆನ್ನಯ ಕೂಡೆಪೆಚ್ಚ ಪೇರ್ಮಲಿ ಆಡು | ಲಕ್ಷಣಾಗ್ರಜನೇ 4 ಪುರಂದರ | ಗಡದಲ್ಲುದೀಸಿದ 5 ಚಿನಿವಾರ ವರದನಲ್ಲೀ | ಜನಿಸುತ್ತಧನ ನವಕೋಟಿಯ ಗಳಿಸೀ |ಘನ ಲೋಭಿ ದ್ವಿಜನ | ಜ್ಞಾನೋದಯ ಮಾಡುತಘನಗುಣ ಸಿರಿಪತಿ | ಅಣುಗನ್ನ ಪೊರೆದ 6 ಪುರಂದರ ದಾಸರ 7 ಹಿರಿಯ ವೈರಾಗ್ಯ ಪೊಂದಿ | ಸಕಲವನ್ನುಸಿರಿಕೃಷ್ಣಗರ್ಪಣೆಂದೀ |ಗುರು ವ್ಯಾಸರಲಿ ಪುರಂ | ದರನೆಂಬಂಕಿತ ಪೊಂದಿಪರಿಸರ ಮತ ಸರ್ವೋತ್ತಮವೆಂದು ಬರೆದಂಥ8 ಸಾರ ವಿಸ್ತಾರದಿವೇದ ಗಮ್ಯಾನಂದ | ಮಯನ ಬೋಧಿಸಿದ 9ನಾಲ್ಕಾರು ಜನ ಶಿಷ್ಯರ | ಜ್ಞಾನೀಗಳ ಲೋಕೋದ್ದಾರಕೆ ಈಯುತೆ ಕಾಕು ಮಾಯ್ಮತಗಳ | ಸಾಕಷ್ಟು ಖಂಡಿಸಿಮಾಕಳತ್ರನ ಮಹಿಮೆ | ಮನೆಮನೆ ಬೀರಿದ 10 ಮಾಸ ಪುಷ್ಯವದ್ಯದೀ | ಪರಮೋತ್ತಮಶಶಿ ರವಿಗಳ ಮೇಳದೀ |ರಸೆಯ ತ್ಯಜಿಸಿ ಗುರು ಗೋವಿಂದ ವಿಠಲನಎಸೆವ ಪಾದಗಳ್ಬಿಸಜ | ಸೇರುತ ಮೆರೆದಾ 11
--------------
ಗುರುಗೋವಿಂದವಿಠಲರು
ಬಿಸಜ ಕಾನಮಿಪೇ ಪ ವಾತಸುತನೆನ್ನಿಸುತ | ಸೀತೆ ರಮಣನ ಕಂಡುಸೀತೆ ವಾರ್ತೆಯ ನರುಹಿ | ಖ್ಯಾತ ನೀನಾದೇ |ಮಾತರಿಶ್ವನೆ ಹರಿಯ | ಪ್ರೀತಿ ನಿನ್ನೊಳಗೆಂತೋಪೋತ ಭಾವ ದೊಳಾಂತೆ | ಪ್ರೀತಿ ಅಪ್ಪಿಗೆಯಾ 1 ಉರ ರಕ್ತವನು | ಕುಡಿದಂತೆ ತೋರಿ ಜಗನಡುಗುವಂತೆಸಗಿವೆಯೊ | ಕಡುಗಲಿಯ ಭೀಮಾ 2 ಸನ್ಯಾಸದಾಶ್ರಮವ ಅ | ನ್ಯಾಯದಲಿ ಗೊಂಡುಶೂನ್ಯ ಮತ ತತ್ವ ಪ್ರ | ಚ್ಛನ್ನದಲಿ ಪೇಳ್ದಾಅನ್ಯಾಯ ಕಳೆವುದಕೆ | ಜನ್ಯನಾಗುತ ಮಧ್ವಚೆನ್ನ ಪೆಸರಲಿ ಪೇಳ್ದ | ಘನ್ನ ತತ್ವಗಳಾ 3 ಆರು ಕೋಣ್ಯು ಪರಿಯಾ | ಕಾರದಲಿ ವಲಯಾಮೂರು ಕೋಟಿಯ ಸಂಖ್ಯೆ | ವಾನರಾಕೃತಿ ಬದ್ಧವೂ |ಚಾರು ಯಂತ್ರದಿ ಸೌಮ್ಯ | ದಾಕಾರದಲಿ ಜಪದಹಾರ ಪಿಡಿಯುತ ವ್ಯಾಸ | ತೀರಥಿರಿಗ್ವೊಲವೇ 4 ವಕ್ರ ಮನವನು ತ್ಯಜಿಸಿ | ಚಕ್ರತೀರ್ಥದಿ ಮಿಂದುವಕ್ರ ಬಕರಿಪು ನಿನ್ನ | ಚೊಕ್ಕ ರೂಪವ ಸೇವಿಸೀಅಕ್ರೂರ ವರದ ಗುರು | ಗೋವಿಂದ ವಿಠ್ಠಲನಅಕ್ಕರದಿ ಭಜಿಸುವಗೆ | ಚಕ್ರಿಪುರ ವೀವೇ5
--------------
ಗುರುಗೋವಿಂದವಿಠಲರು
ಬೆಳಗಾಯಿತು ಕೇಳಿ ಭ್ರೂಮಧ್ಯ ಮಂಟಪದೊಳಗೆಬೆಳಕು ಪಸರಿಸುತಿದೆಕೊ ಎತ್ತಿತ್ತ ನೋಡೆಮುಂಬೆಳಕು ಕಾಣಿಸುತ್ತ ರವಿಕೋಟಿಯಂ ಪಳಿಯುತಿದೆನಿರ್ಮಳ ನೋಡಲುಪ್ಪವಡಿಸ ಯತಿರಾಜ ಪ ಷೋಡಶಾಕಾರವಹ ಸೋಮ ಕಳೆಗುಂದಿಹುದುಖೋಡಿ ಜನನ ಮರಣ ಚಕ್ರ ತಾ ಕೊರಗಿದುದುಪಾಡಳಿದು ಜೀವಶಿವ ಶೈತ್ಯ ಬಿಟ್ಟಾಡಿದುದುಆರೂಢನೊಲಿದುಪ್ಪವಡಿಸ ಯತಿರಾಜ1 ತಾಪತ್ರಯಗಳೆಂಬ ರಾತ್ರಿ ತಾ ಜಗುಳಿದುದುಪಾಪಿ ಇಹಪರವೆಂಬ ಸುಳಿಗಾಳಿ ಜಾರಿದುದುಕೋಪಿ ಸಪ್ತವ್ಯಸನ ಗೂಗೆ ಕಣ್ಣುಡುಗಿದುದುನಿರ್ಲೇಪನುಪ್ಪವಡಿಸ ಯತಿರಾಜ2 ಅಷ್ಟ ಪ್ರಕೃತಿಗಳೆಂಬ ನಕ್ಷತ್ರವಡಗಿದವುದುಷ್ಟ ಪಂಚೇಂದ್ರಿಯದ ಕುಮುದಗಳು ಬಾಡಿದವುನಷ್ಟರಾರುವರೆಂಬ ಶಿವನಿಕರ ವೋಡಿದವುಶಿಷ್ಟ ನೀನೊಲಿದುಪ್ಪವಡಿಸ ಯತಿರಾಜ3 ಭ್ರಮರ ಕಮಲ ತಾನಿಲ್ಲಿ ಬಿರಿಯುತಿದೆನಿಶ್ಚಿಂತನೊಲಿದುಪ್ಪವಡಿಸ ಯತಿರಾಜ 4 ಮೂರ್ತಿ ಚಿದಾನಂದಗುರುನಾಥನುಪ್ಪವಡಿಸ ಯತಿರಾಜ 5
--------------
ಚಿದಾನಂದ ಅವಧೂತರು
ಭಾರತೀಪತಿ ಮೂರುತಿ ಮಾರುತಿ ಕಾಯೊ ಪ ಘೋರದುರಿತೌಘ ಪರಿಹಾರ ಸುಸಮೀರ ಧೀರಾ ಅ.ಪ ಸತ್ತ್ವ್ವ ಸತ್ತ್ವಾತ್ಮಕ ತತ್ತ್ವದೇವತೆಗಳ ನಿತ್ಯ ನಿಯಾಮಕ ಗುರು 1 ಪಟುತರಾಂಗನೆ ಧೂರ್ಜಟಿಯ ಸೇವೆಗೆ ಮಚ್ಚಿ ಪರಮೇಷ್ಠಿ ಪದ 2 ನಂಜಯನಾಗ್ರಜನೆ ಮೂರ್ಜಗ ಗುರು 3 ಶ್ರೇಷ್ಠಮೂರುತಿ ಜಗಚ್ಚೇಷ್ಟಾಪ್ರದಾಯಕ ಪ್ರವಿಷ್ಠ ಸರ್ವಸೃಷ್ಟಿಕಾರ್ಯ ತೊಟ್ಟಿರುವೆ4 ಮುಖ್ಯವಾಚ್ಯನು ದೇವ ಅಮುಖ್ಯವಾಚ್ಯನು ನೀನು ಮುಖ್ಯ ಜೀವಕೋಟಿಯೊಳು ಪ್ರಮುಖನಯ್ಯ ಮುಖ್ಯಪ್ರಾಣ5 ಶ್ವಾಸನಿಯಾಮಕ ನಿಶೆಯೊಳು ನಿದ್ರೆಯೊಳು ಅಸುರಾದಿ ಜೀವರೊಳು ಶ್ವಾಸಭೂರ್ಭುವನೆನಿಸುವೆ 6 ಸರ್ವನಿಯಾಮಕ ಶರ್ವರೊಂದಿತಪಾದ ಸರ್ವೋತ್ತಮ ಶ್ರೀ ವೇಂಕಟೇಶನೋರ್ವನೆ ಮುಖ್ಯನೆಂದೆ7
--------------
ಉರಗಾದ್ರಿವಾಸವಿಠಲದಾಸರು