ಒಟ್ಟು 37 ಕಡೆಗಳಲ್ಲಿ , 24 ದಾಸರು , 36 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದುಮು ದುಮು ಬಸವಂತನ ಹಬ್ಬಾ ಪ ರಾಮಕೃಷ್ಣ ಗೋವಿಂದ ಮುರಾರಿ | ಶಾಮ ಸುಂದರ ಸುರಜ ಸಹಕಾರಿ | ಕಾಮಿತ ಫಲಗಳ ನೀವ ಉದಾರಿ | ಶ್ರೀ ಮಾಧವನೇ ಕಾಯೋ ಚರಣವ ದೋರಿ 1 ಬನ್ನ ಬಡುತಲಿ ಬಲು ಭವದಲಿ ಬಂದೆ | ಮುನ್ನಿನ ತಪ್ಪವನೆಣಿಸದೆ ತಂದೆ | ಚೆನ್ನಾಗಿ ರಕ್ಷಿಸು ನಮೋ ನಮೋ ಎಂದೆ 2 ಈ ರೀತಿಯಿಂದಲಿ ಹರಿಯ ಕೊಂಡಾಡಿ | ಆ ರಾಧಿಪ ನವವಿಧದಲ್ಲಿ ಕೂಡಿ | ನಾರಕ ಭಯಗಳುವನು ಮೂಲದೀಡ್ಯಾಡೀ | ಸೂರ್ಯಾಡು ಸ್ವ ಸುಖ ಎಲೊ ಹುಚ್ಚು ಖೋಡಿ 3 ಮುನ್ನಿನ ಪುಣ್ಯದಿ ನರದೇಹ ತಾಳಿ | ಮಾನವನಾಗಿ ಹರಿಕಥೆ ಕೇಳಿ | ಚೆನ್ನಾಗಿ ವಿಷಯದಲನುದಿನ ಬಾಳೀ | ವೈರಿ ನೀನಾದೆ ಗೈಯ್ಯಾಳಿ 4 ಮೃಗಜಲ ಹೋಲುವ ವಿಷಯಾ ನಂದಾ | ಬಗೆದೆಲೋ ಶಾಶ್ವತವೆಂದು ನಿನ್ನಿಂದಾ | ಭಕುತಿಯ ಮಾರ್ಗವ ಬಿಟ್ಟೆಲೋ ಛಂದಾ | ಜಗ ದೊಳಗಾದೆಲೋ ನೀ ಮತಿ ಮಂದಾ 5 ಹೆಂಡರು ಮಕ್ಕಳು ಮಮತೆಯ ಸ್ಥೂಲಾ | ಖಂಡದಿ ಬಿದ್ದಿದೆ ಕಾಲಿಗೆ ಕೋಳಾ | ಅಂಡಲೆವುತ ಹೊಟ್ಟೆಹೊರೆದೆಲೋ ಮೂಳಾ 6 ಸುಖವಿಲ್ಲ ಇದರೊಳಗಿಂದು | ಪಾದ ಹೊಂದು 7 ತ್ವರಿತದಿ ಭಾವಭಕ್ತಿಗೆ ಗಮನವಿಟ್ಟು | ತರಳನಾಗಿ ಹೋಗದಿರೆಲೋ ಕೆಟ್ಟು 8 ಚಿನುಮಯ ಗೆಚ್ಚರಗಳೆದೆಲೋ ಭ್ರಾಂತಾ | ಕುಣಿಸ್ಯಾಡುತಿ ಹನು ಅಚ್ಯುತಾನಂತಾ 9 ಒಬ್ಬರು ಶಾಸ್ತ್ರದ ಮದದಲಿ ಬಿಗಿದು ಉಬ್ಬುಬ್ಬಿ ಕುಣಿದರು ಹೇಳಲೇನಿಂದು 10 ಅಷ್ಟಮದದಿಂದ ಕಣ್ಣು ಮುಚ್ಚಿ | ಕುಟ್ಟುವಾಗ ನೆಲ್ಲಿಕಾಲನು ಘಟ್ಟಿಸಿ 11 ಸಂತರ ಕಥೆ ಕಿವಿಯಲಿ ಕೇಳಲಿಲ್ಲಾ | ಭ್ರಾಂತನೆ ನಾಳೆ ಮುರಿವನು ಹಲ್ಲಾ 12 ನೆರೆದಹಿಸುತ ದುರ್ಮದ ಬೂದಿ ಚೆಲ್ಲಿ | ನರಜನ್ಮ ಸಾರ್ಥಕ ಮಾಡೆಲೊಹುಳ್ಳಿ 13 ಕಂದನು ಸಾರಿದಾ ಹೋಳಿಯಾ ವಂದಾ | ಭವ ಬಂದಾ 14
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನನ್ನ ಸ್ವಾಮಿಯು ನೀನಲೆ ಪ ನನ್ನನುದ್ಧರಿಪುದು ನಿನ್ನದಾಗಿರಲಯ್ಯ ಅ.ಪ ನಿನ್ನ ಚರಿತೆಯ ಕೇಳಲಿ ಕಿವಿ ನಿನ್ನನೀಕ್ಷಿಸಲೆನ್ನ ಕಂಗಳು ನಿನ್ನ ಪೂಜಿಸಲೆನ್ನಕೈಗಳು ನಿನ್ನ ಹೊಗಳಲೆನ್ನ ರಸನೆಯು 1 ತಂದೆ ನೀನೆನ್ನತಂದೆ ನಾನು ಅದರಿಂದ ಬಂದೆ ನಿನ್ನಯ ಹಿಂದೆ ಮುಂದೆ ಪೋಗುತಲಿ ಒಂದೆ ನಿಮಿಷದಲಿ ಕಂದನೆನ್ನಿದಿರಿಂದ ಮರೆಯಾದೆ 2 ಅಂದಿನಿಂದ ಮುಕುಂದ ನಿನ್ನರವಿಂದಚರಣದ್ವಂದ್ವ ವಿರಹದಿ ನೊಂದು ನಿಂದೆಡೆನಿಲ್ಲದಲೆವೆನೋ ತಂದೆ ಮಾಂಗಿರಿರಂಗ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನಾ ನಿನಗೇನು ಬೇಡುವುದಿಲ್ಲ-ಎನ್ನಹೃದಯಕಮಲದೊಳು ನೆಲೆಸಿರು ಹರಿಯೆ ಪ ಶಿರ ನಿನ್ನ ಚರಣಕ್ಕೆರಗಲಿ-ಚಕ್ಷುಎರಕದಿಂದಲಿ ನಿನ್ನ ನೋಡಲಿ ಹರಿಯೆ ಕರಣ ಗೀತಂಗಳ ಕೇಳಲಿ-ನಾಸಿಕನಿರುಮಾಲ್ಯಾನುದಿನ ಘ್ರಾಣಿಸಲಿ ಹರಿಯೆ 1 ನಾಲಿಗೆ ನಿನ್ನ ಕೊಂಡಾಡಲಿ-ಎನ್ನ ತೋಳು ಕರಂಗಳ ಮುಗಿಯಲಿ ಹರಿಯೆ ಕಾಲು ತೀರ್ಥಯಾತ್ರೆಗೆ ಪೋಗಲಿ-ಮನಬಲ್ಪಿನಿಂದಲಿ ನಿನ್ನ ಸ್ಮರಿಸಲಿ ಹರಿಯೆ 2 ಚಿತ್ತ ನಿನ್ನೊಳು ಮುಳುಗಾಡಲಿ ನಿನ್ನಭಕ್ತ ಜನರ ಸಂಗ ದೊರಕಲಿ ಹರಿಯೆ ವೃತ್ತಿ ತತ್ವಯೋಗಾಭ್ಯಾಸಕ್ಕಾಗಲಿ-ರಂಗ ವಿಠಲ ನಿನ್ನ ದಯವಾಗಲಿ ಹರಿಯೆ 3
--------------
ಶ್ರೀಪಾದರಾಜರು
ಪರಮ ಪಾಪಿಷ್ಠ ನಾನು ಪ ನರಹರಿಯೆ ನಿಮ್ಮ ನಾಮ ಸ್ಮರಣ ಮಾಡದಲೆ ನರಕಕ್ಕೆ ಗುರಿಯಾದೆನೋ ಹರಿಯೆ ಅ.ಪ. ಹೊಸಮನೆಯ ಕಂಡು ಬಲು ಹಸಿದು ಭೂಸುರರು ಬರೆ ಕೊಸರಿ ಹಾಕುತ ದಬ್ಬುತ ಶಶಿಮುಖಿಯೆ ಬಾರೆಂದು ಅಸಮಸದಿ ಬಣ್ಣಿಸಿ ವಶವಾಗಿ ಅವಳೊಲಿಸುತ ದಶಮಿ ಏಕಾದಶಿ ದ್ವಾದಶೀ ದಿನತ್ರಯದಿ ಅಶನವೆರಡ್ಹೊತ್ತುಣ್ಣುತ ಘಸಘಸನೆ ತಾಂಬೂಲ ಪಶುವಿನಂದದಿ ಮೆದ್ದು ಕುಸುಮ ಗಂಧಿಯ ರಮಿಸುತ ಸತತ 1 ಕೆರೆ ಭಾವಿ ದೇವಾಲಯವ ಕೆಡಿಸಿ ದಿವ್ಯ ಹಿರಿದಾಗಿ ಮನೆ ಕಟ್ಟದೆ ನೆರೆ ನಡೆವ ಮಾರ್ಗದೊಳು ಅರವಟ್ಟಗೆಗಳನ್ನು ಧರಧರದಿ ಬಿಚ್ಚಿ ತೆಗೆದೆ ಪರಮ ಸಂಭ್ರಮದಿಂದ ಅರಳಿಯಾ ಮರ ಕಡಿಸಿ ಕೊರೆಸಿ ಬಾಗಿಲು ಮಾಡಿದೆ ಏಕ ಮಂದಿರವ ಮುಗಿಸಿ ಹರುಷ ಚಿತ್ರವ ಬರೆಸಿ ಪರಿಪರಿಯ ಸುಖ ಸಾರಿದೇ ಮೆರೆದೆ 2 ಸಾಕಲ್ಯದಿಂದ ಸಾಲಿಗ್ರಾಮದ ಅಭಿಷೇಕ ಆಕಳ ಹಾಲಲಿ ಮಾಡದೆ ನಾಕೆಂಟು ನಾಯಿಗಳ ಸಾಕಿ ಮನೆಯೊಳು ಬದುಕ ಬೇಕೆಂದು ಹಾಲು ಹೊಯ್ದೆ ಕಾಕು ಬುದ್ಧಿಗಳಿಂದ ಗುಡಿ ಗುಡಿ ನಸಿ ಪುಡಿ ಹಾಕಿ ಭಂಗಿಯಾ ಸೇದಿದೆ ಲೋಕ ನಿಂದಕ ನಾಗಿ ಪಾಪಕ್ಕೆ ಕೈ ಹಚ್ಚಿ ಅ ನೇಕ ಜೂಜುಗಳಾಡಿದೇ ಬಿಡದೆ 3 ಸ್ನಾನ ಸಂಧ್ಯಾನ ಅತಿಮೌನ ಗಾಯಿತ್ರಿ ಜಪ ಭಾನುಗಘ್ರ್ಯವನು ಕೊಡದೆ ಹೀನತ್ವ ವಹಿಸಿ ದಾನ ಧರ್ಮವ ಮಾಡದೆ ಶ್ವಾನನಂದದಿ ಚರಿಸಿದೇ ಶ್ರೀನಿವಾಸನೆ ನಿನ್ನ ಅನುಪೂರ್ವಕ ಪೂಜೆ ನಾನೊಂದು ಕ್ಷಣಮಾಡದೇ ಬೇನೆ ಬಂದಂತಾಗೆ ಹೀನ ಸಕೇಶಿಯ ಕೈಲೆ ನಾನ ವಿಧಾನ್ನ ತಿಂದೇ ನೊಂದೇ 4 ಭಾಗವತ ಕೇಳಲಿಕೆ ಆದರವೆ ಪುಟ್ಟಲಿಲ್ಲಾ ವಾದಿಗಳ ಮತವಳಿದ ಮಧ್ವ ಸಿದ್ಧಾಂತದ ಹಾದಿಗೆ ಹೋಗಲಿಲ್ಲ ಶೋಧಿಸಿದ ಚಿನ್ನಕೆ ಸಮರಾದ ವೈಷ್ಣವರ ಪಾದಕ್ಕೆ ಬೀಳಲಿಲ್ಲ ವೇದ ಬಾಹಿರನಾಗಿ ಅಪಸವ್ಯ ಮನನಾಗಿ ಓದಿಕೊಂಡೆನೋ ಇದೆಲ್ಲ ಸುಳ್ಳ 5 ಉತ್ತಮ ಬ್ರಾಹ್ಮಣರ ವೃತ್ತಿಗಳನೆ ತೆಗಸಿ ಬ್ರ ಹ್ಮಹತ್ಯಗಾರನು ಎನಿಸಿದೆ ಮತ್ತೆ ಮದುವೆ ಮುಂಜಿ ಸಮಯಕ್ಕೆ ನಾ ಪೋಗಿ ಸತ್ತ ಸುದ್ದಿಯ ಪೇಳಿದೆ ವಿತ್ತವಿದ್ದವರ ಬೆನ್ಹತ್ತಿ ದೂತರ ಕಳುಹಿ ಕುತ್ತಿಗೆಯ ನಾ ಕೊಯ್ಸಿದೆ ನಿತ್ಯ ಕಲ್ಲೊಡೆಯುತಿರೆ ಮೃತ್ಯು ದೇವತೆಯೆನಿಸಿದೆ ಬಿಡದೇ 6 ಕ್ಷಿತಿಯೊಳಗೆ ಇನ್ನಾರು ಹಿತವ ಬಯಸುವವರೆನಗೆ ಗತಿಯೇನು ಪೇಳೊ ಕೊನೆಗೆ ಸತತ ತವ ಧ್ಯಾನದಲಿ ರತನಾಗಿ ಇರುವ ಸ ನ್ಮತಿಯ ಪಾಲಿಸಯ್ಯ ಎನಗೆ ಪತಿತಪಾವನನೆಂಬ ಬಿರಿದು ಅವನಿಯ ಮೇಲೆ ಶ್ರುತಿ ಸಾರುತಿದೆಯೋ ಹೀಗೆ ಶಿತಕಂಠನುತ ಜಗನ್ನಾಥವಿಠ್ಠಲ ನಿನಗೆ ನುತಿಸದೆ ಬೆಂಡಾದೆ ಕಾಯೋ ಹರಿಯೆ 7
--------------
ಜಗನ್ನಾಥದಾಸರು
ಬಣ್ಣ ಬಣ್ಣದ ಬುಗುರಿಯಾಟವ ಅಡುತಿಯರುವೆಯಾ ರಂಗ ಗಿಣ್ಣು ಗಿಣ್ಣಲಿ ಕನಿತುನಿಂತಿಹ ಹಣ್ಣನಿದನು ಕಾಣೆಯಾ ಪ ಮಮತೆ ಇಲ್ಲವೆ ಹೇದೇವ ಮಾತಿಗೆ ಮರುಳುಹೋಗಿ ಅ.ಪ ನಿನ್ನ ಊರಲಿ ನೀನು ಕುಳಿತರೆ ಭಾಗ್ಯವೆನಗದು ಆಯಿತೆ ನನ್ನ ಇಳಿಯಿಸಿ ಅರಿವು ಕೊಟ್ಟು ನಡೆಯ ಕಲಿಸಿದೆ ಏತಕೆ ಇನ್ನು ಬರದೇ ಇರುವೆಯಾ ನನ್ನಲ್ಲಿ ಸಹನೆ ಇಲ್ಲವೆಂದು ಅರಿಯಲಾರೆಯಾ ದೇವನೇ 1 ನೆನಪು ಕೊಟ್ಟಿಹೆ ರಂಗ ಆಸೆ ಮತಿಯು ದಾರಿ ನೋಡಿದೆ ದೂರ ದಡವನು ದಾಟಿಸೈ ನಾನು ಅದರೊಳು ನಿಂತಿಹೆ ಮಾಧವ ಮತ್ತೆಯಾರನು ಕೇಳಲಿ 2
--------------
ಸಂಪತ್ತಯ್ಯಂಗಾರ್
ಬಾ ಬಾ ಬಾರೈಯ್ಯಾ ಶ್ರೀ ಗಿರಿದೊರೆಯೆ ಸಿರಿ ಹರಿಯೆ ಚಿ ಪ ನೀ ಬರುವೆಂದಬುಜಾಭವಾದೀ ಸುರರು ಕಾದೂಕೊಂಡಿಹರು ಶ್ರೀ ಭೂಮಿ ಸಹಿತದಿ ಶ್ರೀ ಗಿರಿಯಿಳಿದು ಈ ಭವನವನು ನೀ ಪಾವನ ಮಾಡಲು ಅ.ಪ ಕರೆದರೆ ಬರೆ ಯಾಕೊ ಬಡವರೊಳೀಪರಿಯ ಪಂಥವು ಸಾಕೊ ಸುಲಭನಾಗಿರಬೇಕೊ ಕೊಡುವ ದೊರೆಯೆಂದು ದೃಢದಿ ತಿಳಿದು ನಿ ನ್ನಡಿ ಬಿಡದೆ ಬಲು ಕಾಡದೆ ಬಿಡುವರೆ 1 ಭವ ಶರಧಿಗೆ ನಾವೆ ಬಡವರಾದರೀಯೂ ನೀನಲ್ಲವೆ ಕೊಡೆನಗೆ ನಿನಸೇವೆ ಒಡೆಯ ನೀನಲ್ಲದೆ ಬಡದೇವತೆಗಳು ಕೊಡಬಲ್ಲವೆ ಪೇಳು ತಡಮಾಡದೆ ನೀ 2 ಹದಿನಾಲ್ಕು ಲೋಕದೊರೆಯು ನೀನು ಎನುತ ತಿಳಿದು ನಾನು ಪದುಳದಿ ನಿನ್ನ ಸೇವಿಸ ಬಂದೆನು ಕೇಳಯ್ಯಾ ಇನ್ನು ಪದುಮನಾಭನೆ ನೀ ಸದಯದಿ ನೋಡಿ ಇದನೆ ಕರುಣಿಸು ನಿನ್ನ ಪದಸೇವೆಯನು 3 ಸಿರಿ ಧರೆ ನಾರಿಯರ ನಾ ಕೇಳಲಿಲ್ಲಾ ಕೊಟ್ಟರು ಬೇಕಿಲ್ಲ ದೊರೆತನ ಬಯಸಿ ನಾ ಬೇಡ ಬಂದಿಲ್ಲ ಕೇಳೆನ್ನೆಯ ಸೊಲ್ಲ ಪರಿ ಬೇಡುವೆ ನಿನ್ನ ಪದಸೇವಕರ ಪರಿಚಾರಕರನೆನಿಸೊ ಪರಮ ದಯಾಳೊ 4 ಮಾತಿದು ಪುಸಿಯಲ್ಲ ನೀರಜ ಭವಾಂಡದಿ ನಿನಗೆದುರ್ಯಾರಿಲ್ಲ ರಂಗೇಶವಿಠಲ ದೂರ ನೋಡುತಲಿ ಘೋರಪಾತಕರೊಳು ಸೇರಿಸದೆನ್ನನು ಪಾರುಮಾಡಲು ಬೇಗ5
--------------
ರಂಗೇಶವಿಠಲದಾಸರು
ಬಾಗಿಲನು ತೆರೆದು ಸೇವೆಯನು ಕೊಡು ಹರಿಯೆಕೂಗಿದರು ಧ್ವನಿ ಕೇಳಲಿಲ್ಲವೇ ನರಹರಿಯೇ ಪ ಪರಮ ಪದದೊಳಗೆ ವಿಷಧರನ ತಲ್ಪದಲಿ ನೀಸಿರಿ ಸಹಿತ ಕ್ಷೀರವಾರಿಧಿಯೊಳಿರಲುಕರಿರಾಜ ಕಷ್ಟದಲಿ ಆದಿಮೂಲಾ ಎಂದುಕರೆಯಲಾಕ್ಷಣ ಬಂದು ಒದಗಿದೆಯೊ ನರಹರಿಯೆ 1 ಕಡುಕೋಪದಿಂ ಖಳನು ಖಡುಗವನು ಪಿಡಿದು ನಿ-ನ್ನೊಡೆಯನೆಲ್ಲಿಹನೆಂದು ಜಡಿದು ನುಡಿಯೆದೃಢ ಭಕುತಿಯಲಿ ಶಿಶುವು ಬಿಡದೆ ನಿನ್ನನು ಭಜಿಸೆಸಡಗರದಿ ಕಂಬದಿಂದೊಡೆದೆ ನರಹರಿಯೆ 2 ಯಮಸುತನ ರಾಣಿಗಕ್ಷಯ ವಸನವನ್ನಿತ್ತೆಸಮಯದಲಿ ಅಜಮಿಳನ ಪೊರೆದೆಸಮಯಾಸಮಯವುಂಟೆ ಭಕ್ತವತ್ಸಲ ನಿನಗೆಕಮಲಾಕ್ಷ ಕಾಗಿನೆಲೆಯಾದಿಕೇಶವನೆ 3
--------------
ಕನಕದಾಸ
ಮುಕುತಿ ತಮಸು ಎರಡಿಲ್ಲೆ ಕಂಡ್ಯಾ ಮುಕುತಿ ಬೇರೆ ತಮಸು ಬೇರಿಲ್ಲ ಕಂಡ್ಯಾ ಪ ಗುರುಪಾದ ಒಡಗೊಂಡು ಮರುತ ಶಾಸ್ತ್ರವ ನೋಡಿ ಹರಿಯ ಗುಣಂಗಳ ಕೊಂಡಾಡುತ ಪರಮ ಉತ್ತಮರು ಬರಲು ಬನ್ನಿ ಬನ್ನೆಂದು ಎರಗಿ ತಕ್ಕೈಸಿ ಕೊಂಡುಂಬುವದೆ ಮುಕ್ತಿ 1 ನಾನು ನೀನು ಎಂದು ಜ್ಞಾನವನೆ ತಿಳಿಕೊಂಡು ತಾ ನಿಲ್ಲದಿಲ್ಲೆಂದು ಪೇಳಿಕೊಂಬಾ ಈ ನಾಡಿನೊಳಗಿವ ಹೀನವನು ಎಂಬರ್ಥ ಈ ನುಡಿ ಎನಿಸಿಕೊಂಬುದೆ ತಮಸು 2 ಒಂದರೊಳಾನಂತ ಅನಂತದಲಿ ಒಂದು ಒಂದೊಂದು ಅನಂತ ಹರಿಪ್ರೇರಕ ಎಂದು ಗ್ರಹಿಸಿ ಹರಿಗುರು ಹರಿದ್ವೇಷಿಗಳನ್ನ ನಿಂದಕವಾಗಿ ಬಾಳುವದೆ ಮುಕ್ತಿ 3 ಅನ್ನದಾ ಸಮಯ ಇಲ್ಲದೆ ಕಂಡಲ್ಲಿ ತಿನ್ನಲೋಡಿ ಸಮಯವೆನ್ನದೆ ಅನ್ಯರ ಬದುಕ ಪಹರಿಸುವ ಖಲು ಗನ್ನ ಫಾತಕನೆನಿಸಿಕೊಂಬುವದೆ ತಮಸು 4 ಮೀಸಲಾ ಮನದಲ್ಲಿ ವಾಸುದೇವನ ನಿಜ ವಾಸರದಲ್ಲಿ ಜಾಗರಾ ಮಾಡುವಾ ಆಶೆಬಡಕನಲ್ಲ ದೇಶದೊಳಗೆ ಹರಿ ದಾಸನೆಂದು ಪೇಳುವುದೆ ಮುಕ್ತಿ 5 ವ್ರತವಿಲ್ಲ ವಾವಿಲ್ಲ ಮತಿ ಮೊದಲು ಇಲ್ಲಾ ಕಥಾಶ್ರವಣ ಒಂದು ಕೇಳಲಿಲ್ಲ ಪಿತ ಮಾತರನ್ನ ಬೊಗಳುವ ನಾಯಿ ಕು ತ್ಸಿತನು ಎಂದೆನಿಸುವದೆ ತಮಸು 6 ಗುಣ ಒಳ್ಳೇದು ನೀತಿ ಮನ ಒಳ್ಳೇದು ಅಜ ತೃಣ ಜೀವಾದಿಯ ಭೇದಬಲ್ಲನಿವ ಗಣನೆಮಾಡ ವಿಜಯವಿಠ್ಠಲನಲ್ಲದೆ ಕ್ಷಣ ಹೀಗೆ ಎಂದೆನಿಸುವದೆ ಮುಕ್ತಿ 7
--------------
ವಿಜಯದಾಸ
ಶ್ರೀ ಕೃಷ್ಣ ಚರಿತ್ರೆ ಅಧ್ಯಾಯ ಒಂದು ರಾಗ:ಸೌರಾಷ್ಟ್ರ ತಾಳ:ತಿವಿಡೆ ಸ್ವರ ಋಷಭ ಶ್ರೀ ರಮಣ ಚರಣಾರವಿಂದವ ಆರಡಿ ಪರಿಯಾಗಿ ಸೇವಿಸಿ ಶ್ರೀ ರಮಾ ಬ್ರಹ್ವಾದಿ ಗುರುಪದ ಸೇರಿ ಸೇವಿಸುವೆ| ನಾರಿಮಣಿ ಶಿರಿದೇವಿ ಅಪಾರ ಮಹಿಮೆಯ ತಿಳಿವುದಕೆ ಪೂರ ಮನಗಂಡಿಲ್ಲ ಮತ್ತಿನ್ನಾರು ಬಲ್ಲವರು 1 ಆರಗೊಡವಿನ್ನೇನು ಮತ್ತಿನ್ನಾರು ದೂರಿದರೇನುಸರ್ವವು ಪೂರಮಾಡುವ ನಮ್ಮ ಗುರುಗಳ ಪೂರದಯವಿರಲು| ಮನದಲಿ ಘೋರತರ ಅಭಿಲಾಷೆ ಯೋಗ್ಯತೆ ಮೀರಿ ಇರುವುದು 2 ಮನಸಿನಲಿ ಮಾತ್ಸರ್ಯವಿಲ್ಲದೆ ಘನಕವೀಶ್ವರಗಳಿಗೆವಂದಿಸಿ ಅನುಸರಿಸಿ ಭಾಗವತವನು ಬಹುವಿನುತ ದಶಮ ಸ್ಕಂದದರ್ಥವ ಕನ್ನಡಿ ತೋರಿಸಿದಂತೆ ಸ್ಪಷ್ದದಿ ಕನ್ನಡಿಲ್ಹೇಳುವೆನು 3 ಪದ್ಯ ಭಾರ ಆಘೋರದುಃಖವನು ಶ್ರೀ ರಮೇಶನ ಸ್ತುತಿಸುತಿರುವ ಕಾಲದಲಿ| ಸಾರ ಸಾರಿ ಹೇಳಿದನು ವೃಂದಾರ ಕರುಗಳಿಗೆ 1 ಪದ, ರಾಗ:ಯರಕಲಕಾಂಬೋದಿ ಅಟತಾಳ ಸ್ವರಧೈವತ ಕೇಳಿರೋ ಭೋ ದೇವತೆಗಳಿರಾ ಹೇಳುವೆ ಹರಿಭಾವವ ಹೇಳಿರೋ ನಿಮ್ಮವರಿಗೆಲ್ಲಾ ಭಾಳ ಸಂತೋಷದಿಂದಲೇ ಪ ಇಷ್ಟುದಿವಸ ಭೂದೇವಿ ಕಷ್ಟವ ಬಟ್ಟಳು ಬಹಳ ಸ್ಪಷ್ಟವಾಗಿ ಆಕೆಯಾ ಕಷ್ಟವು ದೂರಾಗುವುದಿನ್ನು || ವಿಷ್ಣುನಾಜ್ಞೆಯಲಿ ನೀವು ವೃಷ್ಣಿ ಕುಲದಲ್ಹುಟ್ಟಿರೋ|| ವಿಷ್ಣುತಾ ದೇವಕಿಯಲ್ಲಿ ಕೃಷ್ಣನಾಗಿ ಹುಟ್ಟುವಾ1 ಪದ ಈ ವಚನವ ಕೇಳಿ ದೇವತಿಗಳಾಗ ಹರಿಸೇವೆ ಆಗಲಿಯೆಂಬೋ ಭಾವದಲಿ ಜನಿಸಿದರು| ಈ ವಸುಧಿಯೊಳಗವರು ಭಾವಕನು ಕಶ್ಯಪ ವಿಭಾವಸುವನ ಪೋಲ್ವ ವಸು ದೇವನಾದನು ಅದಿತಿದೇವಿ ತಾ ಜನಿಸಿದಳು ದೇವಕಿಯು ಆಗಿ| ದೇವ ಪೂಜಕನು ವಸುದೇವ ತಾ ಪ್ರೀತಿಯಲಿ ದೇವಕಿಗೆ ಕೊಟ್ಟ ಸದ್ಭಾವದಲಿ ಬೇಕಾದ್ದು ದೇವಕಿಯಲಿ ವಸುದೇವ ರಥವೇರಿದನು ಆವಾಗ ಕಂಸ ತಾ ತೀವ್ರ ನÀಡಿಸಲಾವತ್ತಿಗಾಯಿತಲ್ಲೆ ವಿಯದ್ವಾಣಿ ಪದ, ರಾಗ(ದೇಸಿ) ಅಟತಾಳ, ಸ್ವರಷಡ್ಜ ಕೇಳು ಕಂಸನೆ ನಿನಗೇಳುವೆ ನಾ ಬಂದು| ಕೇಳು ಕಂಸಾ|| ಬಹಳ ದಿವಸ ಬಾಳಿ ಇರುವವನಲ್ಲ ಕೇಳು ಕಂಸ ಪ ಮಂಗಳಾಂಗಿಯು ಈಕೆ ತಂಗಿ ಎಂದೆನಬೇಡ ಕೇಳು ಕಂಸಾ| ತಂಗಿಯ ಮಗನೇ ನಿನ್ನಂಗಕ್ಕೆ ವೈರಿಯು ಕೇಳು ಕಂಸಾ|| 1 ಭಂಡ ನಾನೆಂದು ಉತ್ಕಂಠಿದಿಂದರ ಬೇಡ ಕೇಳು ಕಂಸಾ| ಎಂಟನೆಯವ ನಿನ್ನ ಘಂಟಸಿ ಕೊಲ್ಲುವನು ಕೇಳು ಕಂಸಾ|| 2 ವೈರಿ ದಾವಾತಿದ್ದಾನೆಂದೆನ ಬೇಡ ಕೇಳು ಕಂಸಾ| ಶುದ್ಧ ಅನಂತಾದ್ರೀಶ ಅವತಿಳಿ ಕೇಳು ಕಂಸಾ|| 3 ಪದ್ಯ ನುಡಿದಿರುವ ಆ ಸತ್ಯವಾಣಿಯ ಕೇಳಿ ಮೃತ್ಯುಗಂಜಿಕೀನ್ನ ಹೊತ್ತುಗಳೆಯದಲೆ ಆ ಹೊತ್ತು ಕೊಲಬೇಕೆಂದು ಸತ್ವರದಿ ಕೇಶದಲಿ ಒತ್ತಿ ಹಿಡಿದು ಕತ್ತಿ ಹಿರಿದೆತ್ತಿದನು ಕÀಂಸಾ| ಆ ವೃತ್ತಿಯನು ತಿಳಯುತಲೆ ಅತ್ಯಂತವಾಗಿ ತನ್ನ ಚಿತ್ತದಲಿ ಮಿಡುಕಿ ಮದಮತ್ತ ಕಂಸಗೆ ನುಡಿದ ಒತ್ತಿ ಈ ಪರಿಯಾ || 1 ಪದ, ರಾಗ:ಆನಂದಭೈರವಿ ಆದಿತಾಳ ಬೇಡಲೊ ನೋಡಿ ಈಕೆಯಲಿ ಮಾಡು ಮಮತೆಯನು ಮಾಡಬೇಡ ಹಿಂಸಾ|| ಪ ಯಾಕೆಕೊಲ್ಲುವಿಯೋ ನೀ ಕರುಣಿಸು ಸಣ್ಣಾಕಿ ನಿರ್ಮಲಾಂಗಿ|| 1 ಕೊಂದರೆ ಎನಗೆ ಕೇಡು | ಮತ್ತದರಿಂದ ನಿನಗೆ ಕೇಡು ತಿಳಿದು ನೋಡು|| 2 ಏಸು ದಿವಸ ನೀನು ಬದುಕುವಿ ನಾಶವಿಲ್ಲವೇನು| ಮೋಸವಾಗದಿರು ಶ್ರೀಶ ಅನಂತಾದ್ರೀ ಕೋಪಿಸುವನು 3 ಆರ್ಯಾ ಬಹಳ ರೀತಿಯಲಿ ಹೇಳಿಕೊಂಡರೂ ಕೇಳಲಿಲ್ಲ ಕಂಸನು ಶೌರಿಯು ಹೀಗೆ || 1 ಪದ, ರಾಗ:ಅನಂದ ಭೈರವಿ ತಾಳ:ಆದಿ ಬೇಡಿದ್ದು ಕೊಡುವೆನು ನಾನು| ಪ ಜೇವ ಹತ್ಯವೇ ಮುಂಚೆ ಕೇವಲ ನಿಂದ್ಯದು ಸ್ತ್ರೀ ವಧಕಂತು ಇನ್ನು ದಾವುದು ಸರಿಯದು || 1 ಹುಟ್ಟುದರೀಕೆಯ ಹೊಟ್ಟೆ | ಮಕ್ಕಳು ಘಟ್ಟಿ ಮನಸು ಮಾಡಿ ಕೊಟ್ಟುಬಿಡುವೆನು ಕೇಳು || 2 ಬಲ್ಲಿದಾನಂತಾದ್ರಿವಲ್ಲಭನ ಆಣಿ|| 3 ಪದ, ರಾಗ:ಯರಕಲಕಾಂಬೋಧಿ ಶೌರಿಯ ವಚನವ ಕೇಳಿ ವೈರಿಯ ಕಂಸನು ಆಗ ಮೋರೆಯ ತೆಗ್ಗಿಬಿಟ್ಟನು ನಾರಿಯ ಕೊಲ್ಲುವದು | ವೈರಿಯ ಭಯ ಕಳೆವುತ ನಾರಿಯ ಕರಕೊಂಡು ||1 ಮುಂದಾ ದೇವಕಿಯಲಿ ಕಂದನು ಆದಾಕ್ಷಣಕೆ ತಂದೊಪ್ಪಿಸಿದನು ಕಂಸಗೆ ನೊಂದ ವಸುದೇವ| ಮುಂದಾ ಕಂಸನ ನೋಡಿ| ಮನನ ಹಾಸ್ಯದಿ ಮತ್ತ ಕಂದನ ತಿರಿಗಿ ಒಪ್ಪಿಸಿ ಆಗಂದನು ಈ ಪರಿಯು || 2 ಶಿಷ್ಟನೆ ನೀಕೇಳೈ ಬಂದಿಷ್ಟಿಲ್ಲಿವನಿಂದೆನಗೆ| ಸ್ಪಷ್ಟದಿ ನಿನಗ್ಹೇಳುವೆ ಎನಗಷ್ಟಮನೇ ವೈರಿ| ದುಷ್ಟನ ಮಾತಿಗೆ ಶೌರಿಯು ತುಷ್ಟನು ಇದು ಎಂದು || 3 ಪದ, ರಾಗ:ಕನ್ನಡ ಕಾಂಬೋದಿ ತಾಳ:ಬಿಲಂದಿ ಮುಂದ ಶೌರಿಯು ತನ್ನ ಮಂದಿರಕ್ಕೆ ಪೋಗಲು ಬಂದ ನಾರದನು ಆಗಲ್ಲೆ ಕಂಸ ಇದ್ದಲ್ಲೆ || 1 ಮಾಡಿದಾ | ಮಾತನಾಡಿದಾ|| 2 ಸುದ್ದಿಯಂಬೋದ್ಹುಟ್ಟಿತು | ಕೆಲಸ ಕೆಟ್ಟಿತು|| 3 ದಾವ ಮೊತೇನ್ಹೇಳಲಿ ದೇವದೇವ ಶ್ರೀಹರಿ ದೇವಕಿಯಲ್ಲಿ ಪುಟ್ಟುವಾ| ನಿನ್ನ ಕೊಲ್ಲುವಾ|| 4 ಅಸುರರಾದವರುಗಳಾ ಅಸುಗಳನ್ನೆ ಹೀರುವಾ ವಸುಧಿ ಭಾರವನಿಳಿಸುವಾ ಕೀರ್ತಿ ಬೆಳಿಸುಮವಾ|| 5 ನಂದಗೋಪಾದಿUಳೆÀಲ್ಲ ನಂದ ಬಾಂದವರು ಮತ್ತು ಮುಂದ ವಸುದೇವಾದಿಗಳು | ದೇವತಿಗಳು|| 6 ಇನ್ನಕೇಳು ಇವರ ಹೊರ್ತು ಅನ್ನರಾದವರು ಎಲ್ಲಾನಿನ್ನ ಅನುಸರಿಸೆ ಇರುವುವರು | ಅಸುರರೇ ಅವರು|| 7 ಮೂಲದಲ್ಲೇ ಮುಂಚೆ ನೀ ಕಾಲನೇಮಿಯೆನಿಸಿ ಈ ಕಾಲಕ್ಕೆ ಕಂಸನಾಗಿರುವಿ | ಮೈಮರ್ತು ಇರುವಿ || 8 ನಿನ್ನ ಪೂರ್ವ ವೈರಿಯು ಚನ್ನಿಗಾನಂತಾದ್ರೀಶಾ ನಿನ್ನ ಕೊಲ್ಲುವನೆಂಬುದದು |ನಿನಗೆ ತಿಳಿಯದು || 9 ಧಿಟ್ಟ ನಾರದನು ಮುನಿಮುಟ್ಟಿ ಬಂದ್ಹೀಂಗನಲು ಥಟ್ಟನೆ ಕಂಸ ಭಯಬಟ್ಟು ಅವರಿಬ್ಬರಿಗೆ ಘಟ್ವ ಬೇಡಿಯ ಬಿಗಿದು ಹುಟ್ಹುಟ್ಟದವರನ್ನ ಬಿಟ್ಟು ಬಿಡುದಲೆÀ ಕೊಂದ ಹುಟ್ಟಿದಾಕ್ಷಣಕೆ|| ಹುಟ್ಟುಗ್ರ ಸೇನನಲಿ ಹುಟ್ಟಿದಾರಭ್ಯ ಬಹು ದಿಟ್ಟಾದ ಸ್ನೇಹವನು ಬಿಟ್ಟ ಆ ಕಂಸ ಕಂಗೆಟ್ಟು ಬಹುಕಾಸೋಸಿ ಬಟ್ಟವನ ಬಂದಿಯ ಲ್ಲಿಟ್ಟುತಾನೆ ಆದ ಪಟ್ಟಕಾಧಿಪತಿಯು|| 1 ಪದ:ರಾಗ:ಶಂಕರಾಭರಣ ಸ್ವರ:ಷಡ್ಜ, ತಾಳ:ಆದಿ ಯೂದವರನ್ನು ಬಹುಪೀಡಾ ಬಡಿಸೀದಾ || 1 ದುಷ್ಟನ ಕೈಯೊಳು ಸಿಕ್ಕು ಶಷ್ಟ ಬಡಲಾರೆವು ಎಂದು ಅಷ್ಟೂರು ನಿಲ್ಲದೆ ದೇಶಭ್ರಷ್ಟರಾಸರು|| 2 ಅನುಬಂಧಿಗಳೆಂಬುವರು ಅನುರಾಗದಿಂದಲ್ಲೆ| ಅವನ ಅನುಸರಿಸಿಕೊಂಡಿರುತಿಹರು ಅನುದಿನದಲ್ಲಿ||3 ಕ್ರೂರಾಗಿ ಇರುವೊನು ಕಂಸಾ ನಾರಿ ದೇವಕ್ಕಿ ದೇವಿಯು ಆರು ಮಹಾಕಾಳಿಯ ಹರೊ ಆಜ್ಞೆಯಿಂದ ಕೀಳುತು ರೋಹಿಣಿ ಗರ್ಭದೊಳಿಟ್ಟಳು|| 4 ದೇವಕಿದೇವಿಯು ವಸುದೇವಾದಿಗಳೆಲ್ಲ ಗರ್ಭ ಸ್ರಾವವಾಯಿತೆಂದೊದರಿದರು ಆ ವ್ಯಾಳ್ಯದಲ್ಲಿ|| 5 ಎಂಟನೆ ಗರ್ಭಾಗಿ ಶ್ರೀ ವೈಕುಂಠೇಶ | ನಿಂತಾನು ಸಾಧು ಕಂಟಕರನ್ನು ಕೊಲ್ಲುವೆ ನೆಂದುತ್ಕಂಠದಿಂದಲಿ || 6 ಶಂಜಾಕ್ಷಿ ದೇವಕಿ ದೇವಿ ಶಂಜನಾಭನುದರವೆಂಬೋ ಪಂಜರದೊಳಿರಲು ತೇಜಃ ಪುಂಜಳಾದಳು7 ಇಂಥಾಕಿಯ ಕಂಡು ಕಂಸಾನಂತಾದ್ರೀಶ ಗರ್ಭದಲ್ಲಿ ನಿಂತಾನೆಂದು ತಿಳದೀಪರಿ ಚಿಂತಿ ಮಾಡಿದಾ|| 8 ಪದ:ರಾಗ:ಶಂಕರಾಭರಣ ಏನು ಮಾಡಲಿ | ನಾ ಇನ್ನೇನು ಮಾಡಲಿ | ಏನು ಮಾಡಲೇನು ವಿಷ್ಟು ತಾನೆ ಬಂದಿನ್ನೇನು ಗತಿ ಇನ್ನೇನು|| ಪ ವೀರರೊಳಗೆ ಸೇರಿ ಎನ್ನ ಮಾರಿ ಹ್ಯಾಂಗ ತೋರಲಿನ್ನೇನು ||1 ತಂಗಿ ವಧ ಜಗಂಗಳೊಳಗೆ ಅಮಂಗಳಿದು ಸು
--------------
ಅನಂತಾದ್ರೀಶ - ಕಥನಕಾವ್ಯಗಳು
ಶ್ರೀ ಮೊದಲಗಿತ್ತಿ ಕೃಷ್ಣಣ್ಣನವರಿಗೆ ಅಂಕಿತಪದ ಕ |ಳಂಕ ರಹಿತನ ಮಾಡೋ ನೀ ಮಾಡೋ ಅ.ಪ. ಸಂತತ ನಿನ್ನಯ ಚರಿತೆಯ ಕೇಳಲಿ |ಅಂತರಾಗದಿ ಪಾಡಲಿ |ಸಂತರ ಸಹವಾಸವನು ಕೊಟ್ಟು ಸತತ ನಿ |ಶ್ಚಿಂತ ಪುರುಷನ ಮಾಡೋ ಕಾಪಾಡೋ 1 ಪಂಚಭೇದ ಮತಿಯನಿತು |ಮರುತ ಮತವನ್ನು ಪೊಂದಿ |ಸಿರಿಯರಸನೆ ತವಗುಣ ಕರ್ಮನಾಮವ |ವರ ಜಿಂಹ್ವಯೊಳಿರಿಸೋ, ಉದ್ಧರಿಸೋ 2 ಶ್ರೀಶ ಪ್ರಾಣೇಶ ವಿಠಲರೇಯ ನೀನ್ನನು |ಲೇಸಾಗಿ ಪ್ರಾರ್ಥಿಸುವೆ |ಆಶಿಯ ಬಿಡಿಸಿನ್ನು ಮೀಸಲ ಮನಮಾಡಿ |ನೀ ಸುಜ್ಞಾನವನೆ ಪಾಲಿಸೋ, ಲಾಲಿಸೋ 3
--------------
ಶ್ರೀಶಪ್ರಾಣೇಶವಿಠಲರು
ಶ್ರೀನಾಥ ಸಲಹೊ ಸತತ ನಿನ್ನ ಪದ ಧ್ಯಾನಾನಂದವಿತ್ತು ಪ ತಂದೆ ನಿನ್ನನುಗ್ರಹದಿ | ಜಗದೊಳಗೆ ಬಂದೆ ಭೂಸುರ ಜನ್ಮದಿ ಪೊಂದಿ ತ್ವತ್ವದ ಭಜಿಸದೆ ಭವದೊಳಗೆ ಬೆಂದು ಬೆಂಡಾದೆನು ನಾ1 ಪಗೆಯಾರುಖಳರು ಎನ್ನ | ಪಾಶದಲಿ ಬಿಗಿದು ಬಂಧಿನಿ ಎಳೆಯುತ || ಬಗೆ ಬಗೆಯ ಮಂಗನಂತೆ ಕುಣಿಸ್ಯಾಡಿ ಹಗರಣವ ಮಾಡುತಿಹರೋ 2 ಪರಸ್ವತಿಯರ ರೂಪನೋಡಿ | ಮರಳಾಗಿ ಬೆರೆತವಳ ಕ್ರೀಡಿಸುತಲಿ ಪರಗತಿಯ ಚಿಂತೆ ಬಿಟ್ಟು | ಪರಮಾತ್ಮ ನರಕಕ್ಕೆ ಗುರಿಯಾದೆನೋ 3 ಧನದಾಪೇಕ್ಷೆಯಿಂದ | ಧನಿಕರ ಮನೆಗ್ಹೋಗಿ ಲಜ್ಜೆ ತ್ಯಜಿಸಿ ಘನದಾತರೆಂದವರನು | ಬಲು ತುತಿಸಿ ದಿನಗಳೆದೆ ಶುನಕನಂತೆ 4 ಹರಿನಿನ್ನವಾಸರದಿ | ಉಪವಾಸ ಇರುಳು ಜಾಗರವ ಜರಿದು ಬರಿದೆ ಕಾಲವ ಕಳೆದೆನೋ ರವಿಸುತಗೆ | ಅರುಹಲು ಬಾಯಿಲ್ಲವೋ 5 ಪವಮಾನ ಕೃತಸುಶಾಸ್ತ್ರ | ಪ್ರವಚನವ ಕಿವಿಗೊಟ್ಟು ಕೇಳಲಿಲ್ಲ ಅವನಿ ದ್ವಿಜರ ಪಾದವ ಸೇವಿಸದೆ ಭಾರ ನಾನಾದೆನೊ 6 ಬಾಯೆಂದು ಕೂಗಿ ಕರೆವೆ | ಸರ್ವೇಶ ಓಯೆಂದು ಬೇಗ ಬಾರೋ || ಮಾಯಾ ಮೋಹವನೆ ಬಿಡಿಸೋ | ನಿನ್ನಂಘ್ರಿ ತೋಯಜಧ್ಯಾನವನಿತ್ತು 7 ಶಿಲೆಯಾದ ಸಲಹಿದ ತೆರದಿಲಿ ತುಳಿದು ಸಲಹಿದ ತೆರದಲಿ ಇಳಿಸುರನ ಮಹತ್ಪಾಪ ಕಳೆದವಗೆ ಸಲೆಮುಕ್ತಿ ಸಲಿಸಿದಂತೆ 8 ಇಂದಿನಾರಭ್ಯವಾಗಿ | ಎನ್ನಿಂದ ನಿಂದ್ಯಕರ್ಮವ ನಡೆಸದೆ ಮಂದರೋದ್ಮರನೆ ನಿನ್ನ |ಸದ್ಭಕ್ತ ವೃಂದದೊಳು ಕೂಡಿಸಯ್ಯ 9 ಅಪರಾಧ ಕ್ಷಮಿಸುವಲ್ಲಿ | ನಿನ್ನಂಥ ಕೃಪಣವತ್ಸಲ ಕಾಣೆ ಕೃಪೆಯಿಂದ ಕರಪಿಡಿಯೊ ಕರಿವರದ ಕೌಸ್ತುಭ ಕೃಷ್ಣ 10 ನಿನ್ನ ನಾಮದ ಭೂಸುರ ಕುಲಹೀನ ಕನ್ಯೆಯಳ ಸಂಗ ಮಾಡಿ ನಿನ್ನ ಪರ್ವತ ಮೆಟ್ಟಿಲು ಅವಗೊಲಿದು ನಿನ್ನಾಪ್ತನೆನಿಸಿದಂತೆ 11 ನಿನ್ನೊಲುಮೆ ಪಾತ್ರರಾದ ಗುರು ಜಗನ್ನಾಥಾಖ್ಯ ದಾಸಾರ್ಯರ ಸನ್ನಿಧಾನದಲಿ ಇಪ್ಪ | ಇವನೆಂದು ಮನ್ನಿಸೊ ಮಹಮಹಿನೆ 12 ದುರಿತ ರಾಶಿ | ಪೇಳಲ್ಕೆ ಭೂಮಿಧರಗಳವಲ್ಲವೋ ಪ್ರೇಮದಿಂದಲಿ ಪಾಲಿಸೋಮಮಸ್ವಾಮಿ ಶಾಮಸುಂದರ ದಯಾಳು 13
--------------
ಶಾಮಸುಂದರ ವಿಠಲ
ಸುಮ್ಮನಿಹುದು ನ್ಯಾಯವೇ ಪ ದಮ್ಮಯ್ಯ ಪೊರೆಯೆನಲು ಒಮ್ಮೆಯಾದರೂ ಎನ್ನ ದುಮ್ಮಾನವೇನೆಂದು ನಮ್ಮಯ್ಯ ಕೇಳಲಿಲ್ಲ ಅ.ಪ ಸಣ್ಣ ಬಾಲಕನೊಬ್ಬ ಕಣ್ಣೀರ ಸುರಿಸಲು ಪುಣ್ಯ ಲೋಕವನಿತ್ತಮ್ಮಾ ಕಣ್ಣುಕಾಣದೆ ಗೊಂಡಾರಣ್ಯಮಧ್ಯದಿ ನಾನು ಬಣ್ಣಿಸಿ ಕರೆದರೂ ಕಣ್ಣೆತ್ತಿ ನೋಡಲಿಲ್ಲವಮ್ಮಾ 1 ಪರಿದೋಡಿದನಮ್ಮ ನಮ್ಮಯ್ಶ ದುರಿತವಾರಿಧಿಯಲಿ ಕೊರಗುತಲಿಹ ಎನ್ನ ಅರಿತು ಅರಿಯದಂತೆ ಇರುವನಲ್ಲ ಇಂದಿರಮ್ಮ 2 ಮೃತಿಯ ವೇಳೆಯೊಳೊಬ್ಬ ಸುತನಕರೆಯಲಾಗ ಹಿತದಿ ಸೌಖ್ಯವನಿತ್ತನು [ಕೇಳಮ್ಮಾ] ಮಾಂಗಿರಿರಂಗ ಪತಿತಪಾವನಾಯೆಂದು ನುತಿಸಿ ಬೇಡಿದರೂ ಸಂಗತಿಯೇನೊ ಎನಲಿಲ್ಲ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಹರಿದಾಸನಾದರೆ ಹ್ಯಾಂಗಿರಲಿ ಬೇಕು ನರಲೋಕದ ಚಿಂತೆ ಬಿಟ್ಟುಕೊಡಬೇಕು ಪ ಇಂದ್ರಿಯಗಳನ್ನೆಲ್ಲ ಗ್ರಹಿಸಬೇಕು ಬಂದದೆಲ್ಲ ಬರಲಿ ಈಗಲೇ ಎನಬೇಕು ಅಂದವರು ಎನಗೆ ಬಂಧುಗಳು ಎನಬೇಕು 1 ಸ್ನಾನವನು ಬಿಟ್ಟು ಹರಿಕಥೆಯ ಕೇಳಲಿ ಬೇಕು ಮಾನಾಭಿಮಾನಕ್ಕೆ ಹರಿತಾನೆ ಎನಬೇಕು ಏನಾದರಾಗಲಿ ಸುಖಬಡಲಿಬೇಕು 2 ಇರಳು ಹಗಲು ಹರಿಸ್ಮರಣೆ ಮಾಡಲಿ ಬೇಕು ಪರಲೋಕದ ಗತಿ ಬಯಸಬೇಕು ಗುರುಹಿರಿಯರಿಗೆ ವಂದನೆಯ ಮಾಡಲಿ ಬೇಕು ದುರುಳರನ ಕಂಡರೆ ದೂರಾಗಬೇಕು 3 ತಾವರೆಮಣಿ ತುಲಸಿಸರವ ಧರಿಸಲಿಬೇಕು ಭಾವಶುದ್ಧನಾಗಿ ತಿರುಗಬೇಕು ಕೋವಿದರೆ ಸಂಗಡ ಕೂಡ್ಯಾಡುತಿರಬೇಕು ಪಾವಕನಂತೆ ಇಂಪವ ಕಾಣಬೇಕು 4 ಅನ್ನಪಾನಾದಿಗಳಿಗವಸರ ಬೀಳದಿರಬೇಕು ಕಣ್ಣಿದ್ದು ಕುರುಡನೆಂದೆನಿಸಬೇಕು ಚೆನ್ನಾಗಿ ವಾಯುಮತದಲ್ಲಿ ನಿಂದಿರಬೇಕು ತನ್ನೊಳಗೆ ತಾ ತಿಳಿದು ನಗುತಲಿರಬೇಕು 5 ಬಿಂಬ ಮೂರುತಿಯ ಹೃದಯದಲಿ ನಿಲಿಸಲಿ ಬೇಕು ಡಂಭಕ ಭಕುತಿಯ ಜರಿಯ ಬೇಕು ಡಿಂಬುವನು ದಂಡಿಸಿ ವ್ರತವ ಚರಿಸಲಿ ಬೇಕು ನಂಬಿ ನರಹರಿಪಾದವೆನುತ ಸಾರಲಿ ಬೇಕು6 ಹರಿಯಿಲ್ಲದನ್ಯತ್ರ ದೈವವಿಲ್ಲೆನ ಬೇಕು ಮರುತನೆ ಜಗಕೆ ಗುರುವೆನಲಿ ಬೇಕು ಪುರಂದರದಾಸರೇ ದಾಸರೆಂದನ ಬೇಕು ಸಿರಿ ವಿಜಯವಿಠ್ಠಲನ ಸ್ಮರಣೆ ಮಾಡಲಿ ಬೇಕು 7
--------------
ವಿಜಯದಾಸ
ಅಂಜಾನೆತನಯಧ | ನಂಜಾಯನಗ್ರಜ ||ಕಂಜಾಕ್ಷ ಶ್ರೀ ಮಧ್ವ | ಸಂಜಯವಂತಾ 1ಮಾರುತಿ ನಿನ್ನಯ | ಕೀರುತಿ ಜಗದೊಳು ||ಬೀರುತಿದ ಕೊ ನಾ | ಸಾರುತೀ ನೀಗಾ 2ರಾವಣಾನುಜ ಸು | ಗ್ರೀವಾ ವಿಪ್ರಜಾನಂತೆ ||ಭೂವರನಂತೆ ಕಾಯೋ | ದೇವೇಂದ್ರ ಪಾಲಾ3ಪ್ರಸ್ತುತಬಿನ್ನಪ| ವಿಸ್ತರಿಪಕೃತಿಸ ||ಮಸ್ತರೂ ಕೇಳಲಿ | ಆಸ್ಥೀಯಲಿಂದಾ4ಪ್ರಾಣೇಶ ವಿಠ್ಠಲಾ ಪ್ರೀ | ತಾನಾಗಬೇಕೀದಕೆ ||ಹೀನ ವಿಷಯಗಳಾ | ನಾನೊಲ್ಲೆ ದೇವ 5
--------------
ಪ್ರಾಣೇಶದಾಸರು
ಇಂದುನಾಳ್ಯೊ ಈಗಾವಾಗೊ ಈಕಾಯಸ್ಥಿರವಲ್ಲಇಂದಿರೇಶ ನಿನ್ನ ನೆನೆವ ಮತಿಯ ನೀಡೊ ಮನ್ನಿಸಿ ನೋಡೊ ಪ.ಕುಚ್ಛಿತ ಕರ್ಮವಾಚರಿಸಿ ಕಶ್ಮಲ ಜನ್ಮನುಭವಿಸಿದುಶ್ಚಿತ್ತದಿ ಬಾಳ್ದೆನಯ್ಯ ದೂರಾದೆ ನಿಮಗೆ ದಮ್ಮ್ಮಯ್ಯಅಚ್ಚುತ ನಿನ್ನಿಚ್ಛೆಯಿಂದೆ ಆದಿವರ್ಣದವನಾದೆಸ್ವಚ್ಛಿತ ಭಕ್ತಿಯನಿಲಯ ಸುಜನಬಂಧು ಸುಗುಣಸಿಂಧು 1ಹೊಟ್ಟೆಯ ಹೋರಟೆಗಾಗಿ ಹೊತ್ತಾರೆದ್ದು ತಿರುಗಿ ತಿರುಗಿಕೆಟ್ಟ ವೃತ್ತಿಯನ್ನು ಹಿಡಿದೆ ಕೀಳುಮನುಜರೊಳಾಡಿದೆಬಿಟ್ಟೆ ನಿಮ್ಮ ಪೂಜೆಯನ್ನು ಬಿದ್ದೆ ಭವಾಂಬುಧಿಯನ್ನುವಿಠ್ಠಲ ಎನ್ನುದ್ಧರಿಸೊ ವಿದ್ವದ್ಹøದ್ಯ ವೇದವೇದ್ಯ 2ವೇದಶಾಸ್ತ್ರಾಭ್ಯಾಸವಿಲ್ಲ ವೇದಜÕರರ್ಚಿಸಲಿಲ್ಲಬೋಧವನು ಕೇಳಲಿಲ್ಲ ಬುದ್ಧಿ ಎನ್ನೊಳು ಚೂರಿಲ್ಲಸಾಧನವ ತಿಳಿಯಲಿಲ್ಲ ಸಾಧುಮಾರ್ಗವ ಕಾಣಲಿಲ್ಲಭೇದಜÕರೊಳ್ ಕೂಡಿಸೆನ್ನ ಭೀಮಪಾಲಾಭಿನವಲೀಲ 3ಕಾಂತೇರ ಕುಚೇಷ್ಟೆಗಳಿಗೆ ಕೀಳುಚ್ಚಾರದ ಮಕ್ಕಳಿಗೆಭ್ರಾಂತನಾಗಿ ಸ್ನೇಹ ತೋರ್ದ ಬಲೆಯೊಳ್ ಸಿಲುಕಿದೆಸಂತರಂಘ್ರಿ ಸಖ್ಯವನೊಲ್ಲೆ ಸತ್ಕಥೆಯನಾಲಿಸಲೊಲ್ಲೆಅಂತು ಮದವನಿಳಿಸಿ ಕಾಯೊಅಂಗಜಪಿತನೆ ಅಘರಹಿತನೆ4ಬಳಲಿಸಿದೆ ತನುವನು ಬಯಸಿ ಖಳರಾರ್ಥವನ್ನುನಳಿನಾಕ್ಷ ನಿನ್ನ ಬೇಡದೆ ನಾಸ್ತಿಕರಿಗೆ ಕೈಯನೊಡ್ಡಿದೆಹೊಳೆವ ಸುರಭಿಯ ಬಿಟ್ಟು ಹುಲಿಪಾಲಿಗಾಯಾಸಬಟ್ಟೆಕಳೆದೆನನಘ್ರ್ಯಾಯುಷ್ಯವ ಕುಚೇಲಮಿತ್ರ ಕರುಣನೇತ್ರ 5ವಿಷ್ಣು ತತ್ವವರಿಯದೆ ಧೀರ ವೈಷ್ಣವನೆನಿಸದೆಭ್ರಷ್ಟಮನವ ತೊಳೆಯದೆ ಬಹಿಛ್ಛಿನ್ನದಲ್ಲೆ ಮೆರೆದೆಶಿಷ್ಯ ಗುರುಗಳ ಜರಿದೆ ಶಠರನು ಅನುಸರಿಸಿದೆದುಷ್ಟವೃತ್ತಿಯನು ಬಿಡಿಸೊ ದುರ್ಗುಣಧಾಮನ ದುರಿತಶಮನ 6ಇಂದ್ರಿಯಗ್ರಾಮ ನಿನ್ನದು ಇಷ್ಟ ಬಳಗವು ನಿನ್ನದುಸೌಂದರ್ಯ ಸುಖ ನಿನ್ನದು ಸ್ವರೂಪ ಸ್ವಾತಂತ್ರ್ಯ್ರನಿನ್ನದುಮಂದಮತಿಯಿಂದ ಅಹಂಮತಿಯಲ್ಲಿ ನೊಂದೆ ಬಹುಕುಂದನೋಡದೆನ್ನ ಸಲಹೊ ಕುಂಜರವರದ ಕುಶಲಪದದ7ನಿನ್ನ ಕಥಾಮೃತವು ಕಿವಿಗೆ ನಿನ್ನ [ಕೀರ್ತನೆ ನಾಲಗೆಗೆ]ನಿನ್ನ ಲಾವಣ್ಯವು ಕಣ್ಣಿಗೆ ನಿನ್ನ ಸೇವೆ ಸರ್ವ ಇಂದ್ರಿಯಕ್ಕೆಎನಗೆ ಬೇಗ ಕರುಣಿಸಿ ಎಲ್ಲ ದುರಿಚ್ಛೆಗಳ ನೂಕುಇನ್ನು ದಾಸದಾಸ್ಯವು ಬೇಕೊ ಋಷಿಕುಲೇಶ ಹೃಷಿಕೇಶ 8ಅಚ್ಯುತಾನಂತಗೋವಿಂದ ಆದಿಪುರುಷ ಮುಕುಂದಸಚ್ಚಿದಾನಂದಸರ್ವೇಶ ಸುಚರಿತ್ರ ಕರಿವರದನೆಚ್ಚಿದೆ ತವ ಪಾದಾಂಬುಜ ನಮೊ ಬೊಮ್ಮಾದ್ಯರ ದೇವನಿಚ್ಚಪ್ರಸನ್ವೆಂಕಟ [ನಿನ್ನ ನೆನೆವ ಮ್ಮತಿಯನೀಡೊಮನ್ನಿಸಿ ನೋಡೊ] 9
--------------
ಪ್ರಸನ್ನವೆಂಕಟದಾಸರು