ಒಟ್ಟು 21 ಕಡೆಗಳಲ್ಲಿ , 15 ದಾಸರು , 21 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸೃಷ್ಟಿಗೀಶ ನಿನಗಿಷ್ಟು ದಯಬಾರದ್ಯಕೊ ಎಷ್ಟು ಬೇಡಲು ಎನ್ನ ಮೊರೆ ಕೇಳದಿರುವಿ ಪ ಕರಿರಾಜನ ಪೊರೆದೆಲೋ ನರಗೆ ಸಾರಥಿಯಾದಿ ತರುಣಿಯನುದ್ಧರಿಸಿ ಪರಿಶುದ್ಧಗೈದಿ ಪರಮಕುರುಣಿಯು ನೀನು ದುರಿತಕಾರ್ಯದಿಂ ನಾನು ನರಕಿಯಾಗ್ವುದನರಿತು ಅರಿಯದಂತಿರುವಿ 1 ಖುಲ್ಲದಾನವರೊದೆದು ಎಲ್ಲ ದೇವತೇರಿಗೆ ನೀ ನುಲ್ಲಾಸವನು ಕೊಟ್ಟು ಪುಲ್ಲನಾಭ ಹರಿಯೆ ಕ್ಷುಲ್ಲಕರ ಸಂಗದಿಂ ನಾ ಸಲ್ಲದಂತಾಗುವೆ ಕ ಣ್ಣಲ್ಲಿ ಕಂಡು ನೀ ಕಂಡಿಲ್ಲದಂತಿರುವಿ 2 ಮುನಿಶಾಪದಿಂ ನೃಪನ ಕನಿಕರದಿ ಕಾಯ್ದಿ ನಿಂ ತನುದಿನದಿ ಬಾಗಿಲವ ಘನವಾಗಿ ಕಾಯ್ದಿ ಶುನಕನಂದದಿ ನಾನು ದಿನದಿನಕೆ ಮತ್ತಿಷ್ಟು ಘನಪಾಪಿಯಾಗ್ವುದನು ಮನಕೆ ತರದಿರುವಿ 3 ವನವಾಸಗೈದಯ್ಯಾ ವಾನರನ ಸಲಹಿದಿ ದನುಜನನು ಸಂಹರಿಸಿ ದನುಜನನುಜಂಗೆ ಮಾಣದ ಪಟ್ಟವನು ಮೆಚ್ಚಿ ನೀ ಕೊಟ್ಟೆಯ್ಯಾ ಎನಗ್ಯಾಕೀದುರ್ಬವಣೆ ದೂರಮಾಡದಿರುವಿ 4 ಇನಿತೆಲ್ಲ ಯೋಚಿಸಲು ಘನ ಕುರಣಾನಿಧಿ ನೀನು ನಿನಗವರೆ ದಾಸರೆ ನಾನಲ್ಲವೇನು ಮನಸಿಜಪಿತ ನಿನ್ನ ವನರುಹಂಘ್ರಿಯ ನಂಬಿ ಮಣಿದು ಬೇಡುವೆ ಕಾಯೊ ತಂದೆ ಶ್ರೀರಾಮ 5
--------------
ರಾಮದಾಸರು
ಸ್ಮರಿಸುವ ದಾಸರ ಮೊರೆ ಕೇಳದಿರೆ ಹರಿ ಕರುಣಾಳು ನೀನೆಂಬ ಭರವಸಿನ್ಹ್ಯಾಗೆ ಪ ಕರಿಧ್ರುವ ಬಲಿ ಪಾಂಚಾಲಿಯ ಪೊರೆದಂತೆ ಸ್ಮರಿಪರ ಬಿಟ್ಟರೆಘಳಿಗಿರಲಾರಂತೆ ಅರಿತು ವಿಚಾರಿಸು ನೋಡಿದವರಿಗಿದು ಸರಿಬರುವುದೆ ನರಹರಿಯೆ ನೀನರಿಯೆ 1 ಕರುಣಾಕರನು ನೀ ನಿಜವಾಗಿರ್ದರೆ ತ್ವರಿತದಿ ಬಂದೆನ್ನ ಮೊರೆ ಪಾಲಿಸೆಲೊ ದುರಿತಭಯನಿವಾರ ನೀನಾದರೆ ದುರಿತರಾಶಿ ಗಡ ಪರಿಹರಿಸಭವ 2 ಧರೆವರ ಧರ್ಮಗರಣ್ಯದಿ ಮುಗಿದ ಪರುಷದನ್ನವನಿತ್ತು ನೀ ರಕ್ಷಿಸಿದೆ ವರ ಬಿರುದು ನಿನಗಿರಬೇಕಾದರೆ ತ್ವರಿತದಿ ಸಲಹೊ ಶ್ರೀಗುರು ರಾಮ 3
--------------
ರಾಮದಾಸರು
ಹೇಳುವುದು ಬೇಡ | ಜನರ ನುಡಿ ಕೇಳದಿರಲೋ ಮೂಢ ಪ ಶ್ರೀಲೋಲನ ಕಿಂಕರರ ಬಾಗಿಲಲಿ ಬೀಳುನಾಯಿಯಂದದಲಿ ಕೆಲಕಾಲ ಅ.ಪ ದ್ರವ್ಯದಾಸೆಗಾಗಿ | ನಾರಕೀ ಭವಿತವ್ಯರಲ್ಲಿಗೆ ಹೋಗಿ ಕಾವ್ಯನಾಟಕ ಸ್ತುತಿ ಪದ್ಯಗಳನು 1 ನಾನು ಯೋಗ್ಯನೆನ್ನುತ | ತೋರಿಸಿ ಮಾನವಾಗಿದಿರದಲ್ಲಿ ನಿನಗೆ ದುರಭಿ- ಮಾನಿಯಾಗಿ ನೀ ಕೆಡುವೆಯೊ ನಿಜ ನಿಜ 2 ಕೊಂಚ ಬೇಡಬೇಕು ವಂಚನೆಯಿಲ್ಲದೆ ಭಜಿಸು ರಹಸ್ಯವ 3
--------------
ಗುರುರಾಮವಿಠಲ
ಎಂತು ಜೀವಿಸಲಮ್ಮ ರಂಗನನ್ನಗಲಿ ಎನ್ನಂತರಪರಾಧವ ನೋಡದೊದಗನ್ಯಾಕೆ ಪ.ಎಂದೆಂದು ತನ್ನ ಪೊಂದಿದಮಂದಮುಗ್ಧೆಯನುಕಂದರ್ಪಶರಕೆ ಗುರಿ ಮಾಡಬಹುದೆಇಂದುಕಾಂತಿಯು ಅಗ್ನಿಯಂದದಾಯಿತು ಹರಿಯೆಮಂದಸ್ಮಿತಸುಧೆಎನಗೆ ದೊರೆಯದಿರಲು1ಶೃಂಗಾರ ಸೊಬಗ್ಯಾಕೆ ರಂಗನೀಕ್ಷಿಸದಿರಲುಅಂಗದಲಿಲ್ಲದೆ ಪ್ರಾಣ ಸುಖವಾರಿಗೆಕಂಗಳುದಣಿಯೆ ಅಘಭಂಗನ ದಿಟ್ಟಿಸಿ ನೋಡಿಪೊಂಗೊಳಲ ಸವಿ ರವವ ಕೇಳದಿರೆ ನಾನು 2ವಿಪುಲ ತಾಪದಿ ಬಾಲೆ ನೊಂದಳೆಂಬ ಮಾತುಅಪಕೀರ್ತಿ ತನಗೆ ಅಲ್ಲವೇನೆ ತಂಗಿಶ್ರೀಪತಿ ಪ್ರಸನ್ವೆಂಕಟೇಶನು ನೆರೆದ ಸಂಭ್ರಮಕೆನಾ ಪಾವನಳಾದೆನೆ ಜಾಣೆ ನಿನ್ನಾಣೆ 3
--------------
ಪ್ರಸನ್ನವೆಂಕಟದಾಸರು
ಮುಳುಗಿದನುಯೋಗಿಮುಳುಗಿದನುಒಳ್ಳೆ ಬಲಹುಳ್ಳ ನಾದ ಸಮುದ್ರ ಮಧ್ಯದಿಯೋಗಿಪಸತಿಮೂವರ ಸಮನಿಸಲಾರದೆಪಿತರೀರ್ವರ ಕರಕರೆಯನುನೀಗಿಸುತರೈವರೆನಿಪರು ಮಾತು ಕೇಳದಿರೆಮತಿಯೇನು ಹೇಳಲಿ ಎಲ್ಲ ಸಂಗವ ಬಿಟ್ಟು1ಜೇಷ್ಟರಾರುವರ ಕಾಟವ ತಾಳದೆದುಷ್ಟನಾದಿನಿಯ ನಾಲ್ವರ ತೊರೆದುಅಷ್ಟಮಾತುಳರಪ್ರಯೋಜಕವೆಂದುಕಷ್ಟರಿವರು ಎಂದು ಮನವ ಭೀತಿಯ ಬಿಟ್ಟು2ಇಂತು ಎಲ್ಲವ ಬಿಟ್ಟು ಚಿಂತಕ ತಾನಾಗಿಭ್ರಾಂತು ಎಳ್ಳಿನಿತು ಒಬ್ಬರೊಳಿಲ್ಲದೆಚಿಂತಕನು ಚಿದಾನಂದ ಮೂರುತಿಯನುಅಂತು ಬಲಿದು ಎನ್ನ ದೇಹ ಮರೆವಗಿಳಿ3
--------------
ಚಿದಾನಂದ ಅವಧೂತರು
ರಸಿಕರವರ ಪ್ರಿಯರಸ ಕಾವನು ಭಕ್ತಿಕುಶಲನಿಗಿಹಪರಕುಶಲಾಘ ದೂರ ಪ.ಪಥಮನೆ ವನದಿ ಶ್ರೀಪತಿ ಮಹಿಮೆ ಘೋಷಿಸಿಪ್ರಥಮ ಯಾಮದಿ ಹರಿಪ್ರತಿ ಮುದವೇರಿಸ್ತುತಿಸಿ ತಾರತಮ್ಯದ ಸ್ಥಿತಿ ಸನ್ಮತದೊಳಿದ್ದುಸತಿತನುಜಸೌರಂಭ ಸತತ ಹರಿಯದೆಂಬ1ಹಿತಾಹಿತವರಿದು ವಿಹಿತಹೇತು ಬಲಿದು ವಿರತಿಭಕ್ತಿ ಜ್ಞಾನ ನಿರುತ ಭೇದ ನಿರತನಾಗಿ ಕುಜನವಾರತೆಯ ಕೇಳದಿರುವಚತುರರಸುಕೃತಸಂಚಿತದಿರವೇ ಲೇಸು2ವಿಷಮೀರೈದಿಂದ್ರಿಯ ವಶಮಾಡಿ ಮನೋರಿಯೋಲ್ಸುಸುಖಾವಿಡಿದುಕೊಂಬಾ ಸುಸುಖಾವುಂಬಭೈಷಜ್ಯ ಭವರೋಗ ಭೇಷಜನೆನಿಪ ಜಗಪ್ರಸನ್ನ ವೆಂಕಟೇಶಾಂಘ್ರಿ ಸ್ಪøಶ್ಯನಾದಾರೋಗ್ಯ 3
--------------
ಪ್ರಸನ್ನವೆಂಕಟದಾಸರು