ಒಟ್ಟು 86 ಕಡೆಗಳಲ್ಲಿ , 33 ದಾಸರು , 80 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಒಂದೇ ಬ್ರಹ್ಮವು ಮತ್ತೊಂದಿಲ್ಲವುಇದ್ದುದು ಬ್ರಹ್ಮವು ಒಂದೇಒಂದನು ಎರಡಾಗಿ ಮಾಡುವುದೆಂತೈಮಾಡಲು ಕೆಡುವನು ಮುಂದೆ 1 ಕನಕದಿಂದ ಒಡವೆ ಬಹಳಾಗಲು ಒಡವೆಗೆಲ್ಲಕನಕವೊಂದೇ ಘನ ಬ್ರಹ್ಮದಿಂದ ನಾನಾ ಜೀವವಾಗೆನಾನಾ ಜೀವಕೆ ಬ್ರಹ್ಮವೊಂದೇ2 ಲೋಹಗಳಿಂದಲಿ ಅನೇಕ ವಿಧವಿರೆಅನೇಕ ವಿಧಕೆ ಲೋಹವೊಂದೇಮಹಾಬ್ರಹ್ಮಾದಿ ಮಹತ್ತು ಅಣುವಿರೆಮಹತ್ತು ಅಣುವಿಗೆ ಬ್ರಹ್ಮವೊಂದೇ 3 ಬೀಜದಿಂದ ಬೀಜವನೇಕವಾಗಲುಅನೇಕ ಬೀಜಕೆ ಬೀಜವೊಂದೇತೇಜ ಚಿದಾನಂದ ಬ್ರಹ್ಮವು ಸರ್ವವುಆ ಸರ್ವಕೆ ಬ್ರಹ್ಮವು ತಾನೊಂದೆ 4
--------------
ಚಿದಾನಂದ ಅವಧೂತರು
ಒಪ್ಪಿಸಿದೆ ಒರೆದು ದೂರ ಮುಂದೆನ್ನ ತಪ್ಪನೆಣಿಸದಿರು ಧೀರ ಅಪ್ಪಳಿಸು ಕಡು ಮೂರ್ಖರ ನಿನಗೆಂದು ತಪ್ಪುವುದೆ ಭಕ್ತಭಾರ ಪ. ದುರ್ಗಾಧಿಪತಿ ಲಾಲಿಸು ಮನಸಿಜನ ಮಾರ್ಗಣಕೆ ಸಿಲುಕಿ ಮನಸು ನಿರ್ಗಮಿಸದೊಳಸರಿದು ಮುಳುಗಿ ಸ- ನ್ಮಾರ್ಗಗಾಣದೆ ಕುಂದಿತು 1 ಪಂಚಾಂಗ ಪಲುಗುತಿರಲು ಮನೆಯ ಮ್ಯಾ- ಲ್ಹಂಚುಗಳಸ್ಥಿರವಾಗಲು ಚಂಚಲದಿ ಮನ ಕೆದರಲೂ ತದಧೀನ ಪಂಚಕರಣವು ಕೆಡುವವು 2 ಹೀಗಾದ ಬಳಿಕ ನಿನ್ನ ಸೇವೆ ಚೆ- ನ್ನಾಗುವದ ಕಾಣೆ ಮುನ್ನ ಶ್ರೀ ಗುರುವೆ ತ್ವರೆಯೊಳೆನನ ಮನವ ಪದ ರಾಗಿಯಾಗಿಸು ರನ್ನ 3 ಮೂರು ಋಣಬಾಧೆಯನು ಸಹಿಸುವದ- ಕಾರಿಂದ ಶಕ್ಯವಿನ್ನು ತೋರು ತ್ವಕ್ಕರುಣವನ್ನು ದಾಸನ್ನ ದೂರ ಬಿಡಲ್ಯಾತಕಿನ್ನು 4 ಸಂದಣಿಸಿಕೊಂಡು ಬರುವ ಸರ್ವ ಪ್ರತಿ ಬಂಧಕಗಳೆಲ್ಲ ತರಿವ ಕರವ ಶಿರದಿ ಭುಜ- ಗೇಂದ್ರ ಗಿರಿನಾಥ ದೇವ 5
--------------
ತುಪಾಕಿ ವೆಂಕಟರಮಣಾಚಾರ್ಯ
ಕಂ||ಮಂಗಳವಾರದ ಪೂಜೆಗೆಮಂಗಳ ನೈರುತ್ಯದಲ್ಲಿ ಶಿವನಪ್ಪಣೆುಂಮಂಗಳ ನಾಮವ ಜಪಿಸುತಮಂಗಳವನ್ನೀಯುತೆಮಗೆ ಶೋಭಿಸುತಿಪ್ಪಳ್‍ನಿನ್ನ ಚರಣವ ನಂಬಿ ಭಜಿಸುತಿಹ ಭಕ್ತನಿಗೆ ುನ್ನುಂಟೆ ಗ್ರಹಗತಿಗಳು ಕೃಷ್ಣಾ ಪಉನ್ನತದ ಚಕ್ರವರ್ತಿಯ ಹೊಂದಿ ಬದುಕುವನಿಗನ್ಯರಟ್ಟುಳಿ ಬರುವದೇ ಕೃಷ್ಣಾ ಅ.ಪನೀನೊಬ್ಬನೇ ದೇವನೆಂದು ಪೇಳುತಲಿಹುದುಸಾನುನಯವುಳ್ಳ ಶ್ರುತಿಯು ಕೃಷ್ಣಾಏನೊಂದು ರೂಪಾಗಿ ತೋರಿದರು ಸಕಲವೂನೀನಲ್ಲದನ್ಯವುಂಟೇ ಕೃಷ್ಣಾಏನೆಂಬೆ ಚಿನ್ನ ಹಲವಂದದಾಭರಣದಲಿಕಾಣಿಸಿದರದು ಭೇದವೇ ಕೃಷ್ಣಾನೀನೇ ದೇವಾತ್ಮಕನು ನೀನೆ ಗ್ರಹರೂಪಕನುನೀನೊಲಿದ ನರಗೆ ಭಯವೇ ಕೃಷ್ಣಾ 1ಉತ್ತವನು ಬಿತ್ತುವನು ಬಿತ್ತಿದವನುಂಬವನುಮತ್ತೊಬ್ಬನದಕೆ ಬಹನೇ ಕೃಷ್ಣಾಉತ್ತು ಬಿತ್ತಿದೆ ಮಾಯೆಯೆಂಬ ಕ್ಷೇತ್ರದಿ ನಿನ್ನಚಿತ್ತೊಂದು ಬೀಜವನ್ನು ಕೃಷ್ಣಾಬಿತ್ತು ವೃಕ್ಷಾಕಾರವಾದಂತೆ ಲೋಕವಿದುವಿಸ್ತರದಿ ಬಹುವಾುತು ಕೃಷ್ಣಾಬಿತ್ತಿ ಬೆಳೆದುಂಬಾತನುತ್ತಮನು ನೀನಿರಲುಮತ್ತೊಂದು ಭಯವದೇಕೆ ಕೃಷ್ಣಾ 2ಇಂದ್ರಾದಿ ದಿಕ್ಪಾಲಕರ ರೂಪನಾಗಿರುವೆಚಂದ್ರಾದಿ ಗ್ರಹರೂಪನು ಕೃಷ್ಣಾಇಂದ್ರ ಚಂದ್ರಾದಿತ್ಯ ವರುಣಾದ್ರಿ ಗಗನಾದಿಇಂದ್ರಿಯಾಧೀಶ ನೀನೆ ಕøಷ್ಣಾಇಂದ್ರಿಯಾಧೀನರಾಗಿರುವರರಿಯರು ನಿನ್ನಮಂದಬುದ್ಧಿಯ ಮೂಢರು ಕೃಷ್ಣಾತಂದ್ರಿಯನು ಪರಿಹರಿಸಿ ಹೊಂದಿ ನಿನ್ನನು ಭಜಿಪಛಂದವನು ನೀ ತೋರಿಸು ಕೃಷ್ಣಾ 3ಒಡೆಯನೊಬ್ಬನು ಜಗಕೆ ಬಳಿಕಾತನಾಜ್ಞೆಯಲಿನಡೆವರೆಲ್ಲರು ಮೀರದೆ ಕೃಷ್ಣಾನಡೆಯಲರಿಯದು ಹಲಬರೊಡೆಯರಾಗಲು ನೀತಿಕೆಡುವುದದು ಕದನಮುಖದಿ ಕೃಷ್ಣಾನುಡಿದು ಭೇದವ ನಿತ್ಯ ಕದನವನು ಮಾಡುತಿಹಜಡರ ಮಾತದು ಸತ್ಯವೇ ಕೃಷ್ಣಾಬಿಡಿಸಿ ಭೇದವನೊಬ್ಬನೊಡೆಯನೆಂದುರು ಸಾರ್ವಸಡಗರದ ಶ್ರುತಿ ನಿತ್ಯವು ಕೃಷ್ಣಾ 4ಬಿಡದೆ ನಿನ್ನಂಘ್ರಿಯನು ದೃಢವಾಗಿ ಭಜಿಸುವರುಜಡತೆಯಳಿದ ಮಹಾತ್ಮರು ಕೃಷ್ಣಾಬಿಡುವದವರಿಗೆ ಲೋಕ ನಡೆವ ನಡತೆಯ ಭ್ರಮೆಯುನಡತೆಯದು ನಿನ್ನ ನಿಜವು ಕೃಷ್ಣಾನಡೆದು ಬಳಿಕಾ ಮಾರ್ಗವನು ಹೊಂದಿದವ ನಿಪುಣಬಿಡಬೇಕು ಮೂಢಮತವ ಕೃಷ್ಣಾಪೊಡವಿಯೊಳು ತಿರುಪತಿಯ ವಾಸ ವೆಂಕಟರಮಣಕೊಡು ನಿನ್ನ ಭಜಿಪ ಮತಿಯ ಕೃಷ್ಣಾ 5ಓಂ ಅವ್ಯಕ್ತ ಗೀತಾಮೃತ ಮಹೋದಧಯೇ ನಮಃ
--------------
ತಿಮ್ಮಪ್ಪದಾಸರು
ಕಾಲ ತಪ್ಪದು ನಿನಗೆಂದಿಗು ಮರುಳೆಒಳ್ಳಿತಾಗಿ ಕೇಳಿಕೋ ಹಿರಿಯರನು ಮರುಳೆನಾಳೆ ನಾಡದೋ ಆವಾಗಲೋ ತನು ನಿತ್ಯವಲ್ಲಕಾಲಕೆ ಸಿಕ್ಕಬೇಡ ಮರುಳೆ ಪ ಆಳುವ ಮಠಪತಿ ಊರಲ್ಲಿ ತನ್ನನ್ನುಹೂಳ್ಯಾರು ಎನಬಾರದೆ ಮರುಳೆಮೂಳ ಸಂಸಾರ ನೆಚ್ಚಲು ಕೆಡುವೆಆಲೋಚನೆ ಮಾಡಿಕೋ ಮರುಳೆ 1 ಮನವುಳ್ಳವರು ಇಹರೆ ಸಂಸಾರವೇನೆಂಬೆ ನೀನು ಸಂಗವ ಮರೆವೆ ಮರುಳೆಮಾನಿನಿ ಸುತರ ಮೋಹಕೆ ಬಿದ್ದುನಿನಗಾಗುವ ಮಾನಹಾನಿಯ ಕಾಣೆ ಮರುಳೆ 2 ಸಂಸಾರಕಾಂಕ್ಷೆಯ ಮನದಿ ತ್ಯಾಗವ ಮಾಡುಸಂಸಾರವಿದು ಮಾರಿಯು ಮರುಳೆಹಂಸ ಚಿದಾನಂದ ಸದ್ಗುರು ಹೊಂದಿಯೇನೀ ಸದಾಸುಖಿಯಾಗು ಮರುಳೆ 3
--------------
ಚಿದಾನಂದ ಅವಧೂತರು
ಕಿನ್ನೇಶದೂತರು ಎಳಿಯಾರೆ ಪ ಹಿಂದಿನ ದುಃಖವ ನೆನಸಿಕೊ | ನೀನು | ಬಂದದೆ ಒಂದೊಂದು ಗುಣಿಸಿಕೊ | ಮುಂದೀಗ ಎಚ್ಚತ್ತು ನೋಡಿಕೊ | ಇದು ಸಂದೇಹವೆನದೆ ನಿಜವಾಗಿ ತಿಳಿದಕೊ 1 ಗರ್ಭಯಾತನೆ ಬಲು ಹೇಸಿಕೆ | ವಳಗೆ | ನಿರ್ಬಂಧವಾಗಿ ಬೆಳೆದು ಮೇಲಕೆ | ದೊಬ್ಬುವರು ನಿನ್ನ ಕೆಳಿಯಿಕೆ | ಬಿದ್ದು ಅಬ್ಬಬ್ಬ ಐಯ್ಯಯ್ಯವೆಂದು ಅಳಲೇಕೆ2 ಬಾಯಿಗೆ ಬಜೆ ಬೆಣ್ಣೆ ಕೊಡುವರು | ತಾಯಿ | ಬಳಗವೆಲ್ಲ ಸಂತೋಷಬಡುವರು | ಆಯಿತು ಮಗುವೆಂದು ನುಡಿವರು | ಇವನ ಆಯುಷ್ಯ ಕಡಿಮೆಯೆಂದದು | ಅರಿಯದೆ ಕೆಡುವರು 3 ಚಿಕ್ಕಂದು ಎತ್ತಿ ಮುದ್ದಾಡಿ ಬೆಳಸಿ | ಅಕ್ಕರದಿಂದಲಿ ನೋಡಿ ಕೊಂಡಾಡಿ | ಫಕ್ಕನೆ ಕುಲಗೋತ್ರರ ಕೂಡಿ | ಒಬ್ಬ | ರಕ್ಕಸಿಯ ತಂದು ನಿನಗೆ ಜತಿ ಮಾಡಿ 4 ನೆಲೆ ಇಲ್ಲದ ಮಮತೆಯೊಳು | ಮುಳುಗಿ | ತಲೆಕೆಳಗಾಗಿ ನಡೆದು ಹಗಳಿರುಳು | ಕುಲನಾಶಕನೆಂಬೊದು ಬಾಳು | ಬಿಡು | ತಿಳಿಯ ಪೇಳುವೆನು ಎತಾರ್ಥವ ಕೇಳು5 ದುರ್ವಾಸನೆ ನಾರುವ ಬೀಡು | ಇದು | ಸ್ಥಿರವಲ್ಲ ಎಂದಿಗು ಹಂಬಲ ಬಿಡು | ಹರಿದಾಸರ ಸಂಗ ಮಾಡು | ಇನ್ನು | ಹರಿನಾಮಗಳ ಕೊಂಡಾಡು 6 ಆವಾವ ಜನ್ಮದಲಿ ನೀನು | ಒಮ್ಮೆ | ದೇವ ಎಂದೆನಲಿಕ್ಕೆ ನಾಲಿಗಿತ್ತೇನು | ಈ ಉತ್ತಮವಾದ ಈ ತನು | ಬಂತು | ಕೋವಿದನಾಗಿ ಶ್ರೀ ಹರಿಯನ್ನು ಕಾಣು7 ಆ ಮರ ಈ ಮರ ಎನಲಾಗಿ | ಅವನ | ತಾಮಸದ ಜ್ಞಾನ ಪರಿಹಾರವಾಗಿ | ಸ್ವಾಮಿಯ ದಯದಿಂದ ಮಹಯೋಗಿ | ಎನಿಸಿ | ಭೂಮಿಯೊಳಗೆ ಬಾಳಿದನು ಚನ್ನಾಗಿ 8 ಸಿರಿ | ರಂಗ ಯೆನಲಾಗಿ ಕಾಯ್ದ ಶ್ರೀಪತಿ | ವಿಜಯವಿಠ್ಠಲ ನಂಬು 9
--------------
ವಿಜಯದಾಸ
ಕೆಡದಿರು ಕಡುಮೋಹದಡವಿಬಿದ್ದು ಮನ ಕೆಡುವ ಶರೀರ ಜಡದೃಶ್ಯವಿದು ಪ ಜಲದ ಮೇಲಿನ ಗುರುಳೆಯಂತೆ ಈ ದೇಹ್ಯ ಗಳಿಗೆ ಚಲಿಸಿ ಒಡೆದು ನೆಲಕೆ ಬೀಳುವುದು ಬಳಿದ ಕಸದತೆರಗಳಿಗೆ ನಿಲ್ಲದೆ ಇದನು ಎಳೆದುಹಾಕುವರಂತ್ಯ ಕಾಲದಲಿ 1 ಕ್ಷಿತಿಯೊಳಿರುವ ತನಕ ಸತಿಸುತರೆಲ್ಲರು ಸತತ ಹಿತದಿ ಬಲುಪೂಜೆ ಮಾಳ್ಪರು ಸತ್ತ ಬಳಿಕ ತಮಗ್ಹತ್ತಿತ್ತು ಮುಟ್ಟೆಂದು ಹಿತದವರೆಲ್ಲ ಮುಟ್ಟುತೊಳಕೊಂಬರು2 ಗಳಿಸಿದ ಧನಮಾನ್ಯ ಬಲುಸಂಪದವೆಲ್ಲ ಉಳಿವುದು ಎಲ್ಲ ಇಲ್ಲೇ ಜತೆಯಲಿ ಬರದೇನು ತಿಳಿದು ಶ್ರೀರಾಮನ ಚರಣಕಮಲಧ್ಯಾನ ಗಳಿಸಿ ಘನಮುಕ್ತಿ ಪಡಕೊಳ್ಳೆಲೊ 3
--------------
ರಾಮದಾಸರು
ಕೆಡುವೆಯೇಕೋ ಮನುಜ ಕೆಡುವೆಯೇಕೋ ಪ ಪೊಡವಿಯಾ ಸುಖ ಸ್ಥಿರವದೆಂಬ ದೃಢವನಾಂತು ನೀ ಅ.ಪ ಧನವಗಳಿಸಲೇಂ ಮನುಜಾ ಮನೆಗಳೀಡಾಡೆ ಎನಿತು ಬಳಗಮಿರ್ಪೊಡೇನು ತನುವಿನಾಸೆಯಿಂ 1 ಮರೆವೆಯೇತಕೋ ಮನುಜಾ ಅರಿಯಲೆನ್ನುತಾ ಬರಿಯ ಮಾಯೆಯೀ ಪ್ರಪಂಚ ಚಿರವೆಂದೆನ್ನುತಾ 2 ರಂಗಮಾಲೋಲನಾ ಮಾಂಗಿರೀಶನ ನೆನೆ[ದರೆ] ಹಿಂಗದೇ ಭವಬಂಧಗಳನು | ಭಂಗಗೈಯನೇ 3 ಕಾಲದೂತ ರಂಗ ಕಾಲಿನಿಂದೊದೆಯುವಾಗ ಬಾಲರಾಮದಾಸ[ನುತನ] ನಲಿದು ನೆನೆಯದೆ 4
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಗುರುಮಾರ್ಗ ಧನ್ಯಧನ್ಯವೆನ್ನಿ ಕರುಮುಗಿದು ಅನ್ನಿ ಧ್ರುವ ಮರೆವ ಗರ್ವವ ಮುರಿವ ಹರಿವ ಮೂರೆರಡಂಕುರವ ತೋರುವ ದೋರುವ ಯರ್ಹ ಪಜರುವ ಹೊಡೆವ ಮರುವ್ಹ ಅರುವ ಗುರುವಿನ ಕರುವ್ಹ ಬೆರುವ ಪರಾತ್ಪರವ ಇರುವ ಹರುಷದಿ ಸ್ಥಿರುವ ಕರೆವ ಸಾರಾಯ ಸುರೆವ 1 ಕಾಯ ಕಳವಳವ ಅಳೆವ ಚಿತ್ತ ಚಂಚಲವ ಗಳುವ ಭಾವದುಶ್ಚಲವ ಉಳುವ ಉಪಾಯಲಳಿವ ನಲುವ ನೋಡಿ ನಿಶ್ಚಲವ ಬಲಿವ ಭಕ್ತಿ ಅಚಲವ ತಿಳುವ ಸದ್ವಸ್ತುದ ಹೊಳೆವ 2 ಕೆಡುವ ಬುದ್ದಿಯ ಬಿಡುವ ಕಡೆವ ಸಂದೇಹ ದೃಢವ ನುಡಿವ ಶ್ರುತಿಯಂತೆ ನಡುವ ಜಡೆವ ಸದ್ಬಕ್ತಿವಿಡುವ ತುಡುವ ವೈರಾಗ್ಯನೆ ಮುಡುವ ಸದ್ಗತಿ ಸದ್ಗುರುಗತಿಪಡೆವ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಛೀ ಯಾತರ ಬುದ್ಧಿ | ಸೊಕ್ಕಿನ ಮಾತಿಲಿ ಬಲು ನÉೂಂದಿ ಪ ಗುರುಹಿರಯರ ಅನುಸರಿಸದೇ | ಹರಿಚರಣವ ಕೊಂಡಾಡದೇ | ಬರಡಾ ನಾಲಿಗೆ ಮಾಡಿದಿ ಬರಿದೇ 1 ವಳ್ಹವ ಹೊಲ್ಲವರಿಯದೇ | ಯಳ್ಳಿನಿತು ನೀ ವಿಚಾರಿಸದೇ | ನಿಲ್ಲದೇ ಮಾಡುವಿ ಬಗಳುವದೇ 2 ಕೆಂಡವ ಕಂಡು ನೆರೆ | ಮಂಡಿಯಾ ತುರಿಸುವರೆ | ತುಂಡತನ ಗುಣ ಬಿಡು ಇನ್ನಾರೆ 3 ಪೊಡವಿ ದೇವತೆಯ ಕೋಣಾ | ಯಡಬಲ ನೋಡದಿರಲೇನು | ಕಡೆಯಲಿ ಕೆಡುವರು ಒಂದಿನಾ 4 ಮಹಿಪತಿಸುತ ಪ್ರಭು ದಾಸರ ಕೈ | ಅಹುದೆನಿಸಿಕೊಂಬುದೆ ಸ್ವರ್ಗಯ್ಯ | ವಿಹಿತಲ್ಲೆಂಬುದೇ ನರ್ಕದಾಶ್ರಯಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಜನಿಸಿ ನಾ ಬುವಿಯೊಳು ನಿನಗೆ ದುಡಿಯುವುದಾಯ್ತು ಎನಗೇನುಫಲ ಪೇಳು ಮಾಯವೆ ಎಲೆ ಜೀವವೆ ಪ ನಿನಗೆ ನೀ ದುಡಿಯುವಿ ಎನಗೆ ದುಡಿಯುವುದೇನು ದಿನಸರಿಯದೆನುವುದು ನ್ಯಾಯವೆ ಎಲೆ ಕಾಯವೆ ಅ.ಪ ಘನರೋಗ ತಾಪತ್ರವನುಭವಿಸುವುದೆಲ್ಲ ನಿನಗಾಗಲ್ಲೇನು ಪೇಳು ಮಾಯವೆ ಎಲೆ ಜೀವವೆ ನಿನಗೆ ಬಂದ ಕರ್ಮವನುಭವಿಪೆಯಲ್ಲದೆ ಎನಗಾಗೆನುವುದು ನಿಜನ್ಯಾಯವೆ ಎಲೆ ಕಾಯವೆ 1 ಬನ್ನ ಬಡುವೆನಲ್ಲ ಕರ್ಮ ಮಾಯವೆ ಎಲೆ ಜೀವವೆ ಎನ್ನ ಜೋಪಾನವು ನಿನ್ನಿಂದಲೆಂಬುವುದು ಮಣ್ಣುಗೊಂಬೆ ನಿನಗೆ ನ್ಯಾಯವೆ ಎಲೆ ಕಾಯವೆ 2 ಚಳಿಮಳೆಬಿಸಿಲಿನ ಬಲುತಾಪದಲಿ ನಿನ್ನ ಸಲಹುವರಾರ್ಹೇಳು ಮಾಯವೆ ಎಲೆ ಜೀವವೆ ಚಳಿಮಳೆಬಿಸಿಲಿನ ಬಲುತಾಪ ಎನಗೆಲ್ಲಿ ಎಲುವಿನ್ಹಂದರ ನಿಂದೀನ್ಯಾಯವೆ ಎಲೆ ಕಾಯವೆ 3 ಭಿನ್ನ ಮಾತುಗಳೇನೋ ಮಾಯವೆ ಎಲೆ ಜೀವವೆ ನಿನ್ನದು ದಾವೂರು ನನ್ನದು ದಾವೂರು ಎನ್ನ ಸರಿಗಟ್ಟುವುದು ನ್ಯಾಯವೆ ಎಲೆ ಕಾಯವೆ 4 ನಾನಿಲ್ಲದಿರೆ ನಿನ್ನ ಖೂನವರಿವರಾರು ನೀನೆ ಪೇಳೆಲೋ ನಿಜ ಮಾಯವೆ ಎಲೆ ಜೀವವೆ ಹೀನನೆ ನೀನೆನ್ನ ಖೂನವರಿಯದೆ ಬಿನಗು ಶ್ವಾನನಂತೊದರುವುದು ನ್ಯಾಯವೆ ಎಲೆ ಕಾಯವೆ 5 ಹೊನ್ನೂ ಹೆಣ್ಣು ಮಣ್ಣು ಎನ್ನಿಂದ ಪಡೆದು ನೀ ಧನ್ಯನೆನಿಸುವೆಯಲ್ಲ ಮಾಯವೆ ಎಲೆ ಜೀವವೆ ನಿನ್ನಗದರ ಫಲ ಎನ್ನಗೇನೆಲೆ ಪಾಪಿ ನಿನ್ನ ಮೋಹಿಸಿ ನಾನು ಕೆಡುವೆ ಎಲೆ ಕಾಯವೆ 6 ಎನ್ನಿಂದ ಕೆಡುವೆನೆಂಬನ್ಯವಾದವು ಬೇಡ ನಿನ್ನದೆಲ್ಲವ ಬಲ್ಲೆ ಮಾಯವೆ ಎಲೆ ಜೀವವೆ ಬನ್ನ ಬಡುವೆ ಸತತ ಎನ್ನನರಿವುದು ನಿನ್ನಗಳವೇ ಎಲೆ ಕಾಯವೆ 7 ಹೇವನಿನಗ್ಯಾಕಿಷ್ಟು ಸಾವುತ್ಹುಟ್ಟುತ ನೀನು ನೋಯುವುದ ಬಲ್ಲೆ ನಾ ಮಾಯವೆ ಎಲೆ ಜೀವವೆ ಹೇವದಮಾತಲ್ಲ ಸಾವುಹುಟ್ಟೆನಗಿಲ್ಲ ಕೇವಲನಾದಿಕಾಲದಿರುವೆ ಎಲೆ ಕಾಯವೆ 8 ಕೇವಲನಾದಿಯು ಜೀವ ನೀನಾದರೆ ದೇವರೆ ನೀನಿದ್ದಿ ಮಾಯವೆ ಎಲೆ ಜೀವವೆ ದೇವರು ನಾನಲ್ಲ ದೇವ ಶ್ರೀರಾಮನ ಕೇವಲದಾಸ ನಾನಿರುವೆ ಎಲೆ ಕಾಯವೆ 9
--------------
ರಾಮದಾಸರು
ಜಯ ಜಯ ನಿಮಗೆ ಜಯವಣ್ಣ ಭಯವಿಲ್ಲೀನುಡಿ ಕೇಳ್ ಚಿಣ್ಣ ಪ ಶ್ರೀ ಮನೋಹರನ ಲೀಲೆಯಿದು ಸು ಕ್ಷೇಮವಹುದು ಸತ್ಪುರುಷರಿಗೆ1 ಈ ಜಗತ್ತನೂ ಈಶ್ವರನೂ ತಾ ರಾಜನಾಗಿ ಕಾಪಾಡುವನು 2 ಕುರುಡರು ತಾವ್ ಕೆಡುವರು ಕೊನೆಗೆ 3 ಇದರೊಳುಂಟು ಬಹುವಿಧ ಭೇದ ವದರುತಿಪ್ಪದು ಸಕಲವೇದ4 ಅಂತ್ಯವಿಲ್ಲದಿಹ ಕಾರಣದಿ ಅ ನಂತ್ಯವೆಂದು ಪೇಳ್ವರು ಭರದಿ 5 ಮನುಜ ಜನ್ಮ ಬಹುದುರ್ಲಭವು ಮನನಶೀಲರಿಗಹುದು ಶುಭವು 6 ಮರೆಯಬೇಡಿ ಜನರೆ ನೀವು ಅರಿತು ಅರಿಯದವರಿಗೆ ನೋವು 7 ಕತ್ತಲೆ ಕೊನೆಯಿಲ್ಲದ ಘೋರ 8 ವುಳಿಯದು ನಿಮಗದು ಕೇಳ್ ಜನರೆ 6 ಧರ್ಮವೆಂಬ ಮೂಟೆಯ ಕಟ್ಟೆ ಬಟ್ಟೆ 10 ಗುರುವಾಜ್ಞೆಯ ಮೀರುವುದು ಸಲ್ಲ ಈ ದುರುಳತನ ನಿಮಗೆ ಸರಿಯಲ್ಲ 11 ನಾನೇ ಶ್ರೇಷ್ಠನೆಂಬುವ ಮಾತು ಶಾನೆ ವಡಕು ಗಡಿಗೆಯು ತೂತು 12 ಹಿಂದಿನವರ ಕಷ್ಟವ ನೋಡಿ ಮುಂದಕೆ ಸತ್ ಸಾಧನೆ ಮಾಡಿ 13 ಮೂರು ಕರಣ ಶುದ್ಧಿಯು ಬೇಕು ಧೀರ ಜನರಿಗಿಷ್ಟೇ ಸಾಕು 14 ಜನರ ನೋಡಿ ನಡೆಯಲಿಬೇಡಿ ಕೊನೆಗೆ ನಿಮಗೆ ಕಾಲಿಗೆ ಬೇಡಿ 15 ಹೆಚ್ಚಪೇಕ್ಷಿಸೆ ಬರುವುದಿಲ್ಲ ಮೆಚ್ಚನು ನಿಮಗೆ ಸಿರಿಯನಲ್ಲ 16 ನಿರ್ಮಲ ಮಾರ್ಗ ಹುಡುಕಿದಿರಾ 17 ಜ್ಞಾನರತ್ನ ಸಂಪಾದನೆಯು ಹೀನ ಜನರಿಗಾಗದು ಕೊನೆಯು 18 ದುರಾಸೆಯಲಿ ಕೆಡುವರು ಕೆಲರು ನರಾಧಮರು ಎಂದೆನಿಸುವರು 19 ಪರಿಯಂತ ತಂ ತಮ್ಮಟ್ಟಿಗಿಹುದು ಅಂತ 20 ಗೂಡಿನ ಮೇಲೆ ದುರಭಿಮಾನ ಮಾಡಿ ಮಾಡಿ ಕೆಡುತಿಹರು ಜನ 21 ಯೀಗೂಡಿಗೆವೊಂದಾಧಾರ ಯೋಗಿಗಳರಿವರಿದರಸಾರ 22 ವರ ರಸಗಳು ನಾಲ್ಕು ತೊಗರು 23 ಹಂಚೇಳರಿಂ ಮಾಡಿಹದೇವ 24 ಘಟಿಸಿರುವುದು ಪತ್ತಲೆಯಿದರೊಳ್ 25 ಮರನಿದೆಂದು ಶಾಸ್ತ್ರದ ಮೂಲ ಅರಿಯದೆ ನಾನೆಂಬೆನು ಬಾಲ 26 ಪಕ್ಷಿಗಳೆರಡೀ ಮರದಲ್ಲಿ ಸಾಕ್ಷಿ ಒಂದು ಒಂದಕೆ ಅಲ್ಲಿ 27 ಮರದ ಪಣ್ಣು ತಿಂಬುವದೊಂದು ನಿರುತವು ನೋಡುತಿರುವದೊಂದು 28 ದ್ವಾಸುಪರ್ಣ ಶೃತಿ ಇದರರ್ಥ ದಾಸನಾಗದಿರುವನು ವ್ಯರ್ಥ 29 ಅಧ್ಯಾತ್ಮ ವಿದ್ಯದಲಿ ತೋರುವುದೇ 30 ಜೀವನಾಮ ಆತ್ಮನಿಗುಂಟು ದೇವತಾನು ತಬ್ಬಿದ ಗಂಟು 31 ಅಭೇದ ಶೃತಿಗಳೇನಕ ವಿಧ ಸ್ವಭಾವದಿರುನಡೆ ತೋರುವದ32 ಸುರರುತ್ತಮರು ನರರಾನಿತ್ಯ ಸುರೇತರರು ನೀಚರು ಸತ್ಯ 33 ನೂರು ವರುಷ ಬದುಕುವರೆಂದು ಮೀರಿ ಮನದಿ ಯೋಚಿಸಿ ಮುಂದು 34 ಬಹು ಧನಾರ್ಜನೆಯ ವೂಹೆಯಲಿ 35 ಮೊದಲು ಅನ್ನಕಿಲ್ಲೆಂದು ಮತಿ ವಿಧ ವಿಧ ವಸ್ತ್ರಗಳಲಿ ಪ್ರೀತಿ 36 ನಾಬಡವನು ಎಂದಗಲಿರುಳು 37 ತನಗೆ ಬೇಕಂತ ಚಿಂತೆಯೊಳು 38 ಇತರರ ನೋಡಿ ತನಗಪೇಕ್ಷೆ ಗತಿ ಇಲ್ಲದೆ ಇರುವುದೆ ಶಿಕ್ಷೆ 39 ತಾವ್ ಸಮಂಜಸದಿ ಪೇಳಿದರು 40 ಪ್ರವೃತ್ತಿ ಮಾರ್ಗದ ಸಂಪತ್ತು ಭವಾಂಬುಧಿ ಸುಳಿಯು ವಿಪತ್ತು 41 ಫಲವ ಕೋರಿ ಕರ್ಮವ ಮಾಡಿ ಹಲವು ಯೋನಿಗಳೊಳೋಡಾಡಿ42 ಮರಳಿ ಮರಳಿ ಜನನ ಮರಣದೆ ದರಿಯ ಕಾಂಬ ಬಗೆ ದಾರಿಯದೆ 43 ಇದುವೆ ದೊಡ್ಡ ಸಂಸೃತಿ ವೃಕ್ಷ ತುದಿ ಮೊದಲಿಗು ದೊರಕದು ಮೋಕ್ಷ 44 ಇನ್ನು ಅಕ್ಕ ತಂಗಿಯು ಮೊದಲು 45 ಸತಿ ಸುತರು ಬಳಗಗಳು 46 ಇವರು ತನ್ನವರಿತರರಲ್ಲ ಭವ ಜಲಧಿಯ ಜಂತುಗಳೆಲ್ಲ 47 ಕೊಡದಿದ್ದರೆ ಕೋಪವು ಬಹಳ 48 ವಿತ್ತವಿರಲು ಬಂಧುಗಳೆಲ್ಲ ಹತ್ತಿ ಇವನ ಬಾಧಿಪರೆಲ್ಲ 49 ಸುಳ್ಳುಹೇಳಿದರೆ ಬಹುನಂಬಿಕೆ 50 ಹಿತೋಪದೇಶದಿ ಬಹುಕೋಪ ಪತಿತ ಜನರಿಗೆ ಇದು ಪಾಪ 51 ಒಬ್ಬ ದೈವಲೋಕಕೆ ಸತ್ಯ ಹಬ್ಬವವನ ಭಜಿಪುದಗತ್ಯ 52 ಕಾಮುಕರಿಗೆ ಕಡೆಗೂ ದುಃಖ ನೇಮವದಕೆ ಮೂಲವುರೊಕ್ಕ 53 ಸ್ಪøಹದಿಂದಲೆ ಕೋಪವು ಬಹುದು ವಿಹಿತವೆಂದು ನಗುವನೆ ಸಾಧು 54 ಲೋಭದಿಂದ ಮೂಲಕೆ ನಾಶ ಸ್ವಾಭಾವ್ಯದಿ ದುರ್ಜನಕಾಶಾ 55 ರಾಶಿ ಧನವ ಕೊಳ್ಳೆಯು ಕೊಡುವ 56 ದಾನಕೆಂದರಿಲ್ಲವು ಕಾಸು ದಂಡಕೊಡುವುದಕೆ ಬಹುಲೇಸು 57 ನಷ್ಟವಾದರೂ ಮನಕಿಷ್ಟ ದುಷ್ಟಾತ್ಮರು ಪಡುವರು ಕಷ್ಟ 58 ಆರ್ಯರುಕ್ತಿ ಕೇಳುವುದಿಲ್ಲ ಕಾರ್ಯದಲಿ ವಿಘಾತವೆ ಎಲ್ಲ 59 ಧನವಿದ್ದರು ಸೌಖ್ಯವು ಕಾಣೆ ಘನದುರಾಸೆ ಕುಜನರಿಗೆ ಆಣೆ 60 ಭೂಮಿ ಉಂಟು ತನಗೆಂಬುವರು ನೇಮದಿ ದಂಡವ ತೆರುತಿಹರು 61 ಮಳೆಬೆಳೆಯನು ನಿಂದಿಪರು ಕೆಲರು ಖಳರು ಸುಮನಸರ ದೂಷಿಪರು62 ಮೊದಲು ತುದಿಯಲಿ ದುರಭಿಮಾನ 63 ವ್ಯಾಪಾರದಿ ಧನ ಕಳಕೊಂಡು ಕೋಪ ವ್ಯಾಜ್ಯಕೆಳೆವದೆ ಫಂಡು 64 ಬಲುಧನವ ಕೂಡಿಸುತಲಿ ಮುಂದು 65 ಮುಖದಾಕ್ಷಿಣ್ಯದಿ ಮಾತಾಡಿ ವಿಕಲರನರ ಸ್ನೇಹದಿ ಕೂಡಿ66 ದೊಡ್ಡದಾಗಿ ಮನೆಯನು ಕಟ್ಟಿ ದುಷ್ಟತನದಿ ವಾದಿಸಿ ಬಿಟ್ಟಿ 67 ಕೂಲಿಯವರ ಹೊಟ್ಟೆಗೆ ಕೊಡದೆ ಲೋಲನಾಗಿ ವಂಚನೆ ಬಿಡದೆ 68 ಸಂಸಾರವಿದೆ ಸ್ಥಿರವೆಂದು ಹಿಂಸೆಪಡುತಲಿ ಸದಾನೊಂದು 69 ಚತುರ ಶೀತಿ ಲಕ್ಷಯೋನಿಗಳೊಳ್ ಮತಿಹೀನರಾಗಿ ಜನಿಸುತಲೂ 70 ಭದ್ರವು ತಮಗೆಂದು ಪ್ರಾಣಿಗಳು 71 ಇದಕ್ಕಾಗಿ ಪರಾಧೀನದಲಿ ಪದೇ ಪದೆಗೆ ತಾವು ನೋಯುತಲಿ 72 ಮನುಜ ಜನ್ಮ ಬರುವುದೆ ಕಷ್ಟ ಮಾನಿತನಾದವನೆ ಅತಿ ಶ್ರೇಷ್ಠ 73 ಭೋಧಿಸುವಾತನೆ ಶುಭತಮನು 74 ಸುಜನರಿಲ್ಲವವರದೆ ಪಂಥ 75 ಕರ್ಮಾರ್ಥ ಶೃತಿ ಗಹನದಲಿ ನಿರ್ಮಲರಾಗದೆ ಚಿಂತೆಯಲಿ&ಟಿbsಠಿ
--------------
ಗುರುರಾಮವಿಠಲ
ತನ್ನ ತಿಳಿದು ತಾನಾದಂಥ ಗುರುವಿನ ಪಾದವ ಹೊಂದುತನ್ನನರಿಯದ ಗುರುವ ಹೊಂದಬೇಡೆಂದೆಂದು ಪ ನಿನ್ನನು ದೇವನೆಂದೆನ್ನುವಗೆ ಈಗ ಶರಣು ಮಾಡೋಅನ್ಯ ದೇವರನೆಂದೆನ್ನುವನ ಹಾದಿ ಹೋಗಬೇಡೋ 1 ಕೋಟಿರವಿ ತೇಜವ ಕಣ್ಣಲಿ ನೋಡುಬೂಟಿಕ ಕಾಯಕಗಳ ದೂರಮಾಡು 2 ಸೋಹಂ ಮಂತ್ರವ ಹೇಳದವನ ಸೆರಗ ಬಿಟ್ಟು ನೀನುಊಹಿಸುವ ಬೇರೆ ಗುರುವನು ಉತ್ತಮ ಅವನು3 ವಾಸನೆ ಕಳೆದಾತಂಗೆ ಒಪ್ಪಿಸಯ್ಯ ತನುವಆಸೆ ಹಚ್ಚುವವನತ್ತ ಬಿಡಲಿ ಬೇಡ ಮನವ 4 ಚಿದಾನಂದ ಗುರುವ ಹೊಂದು ಚಿನ್ಮಾತ್ರನಹೆ ಮದಮುಖ ಗುರುವ ಹೊಂದದಿರು ತಿಳಿ ಮುಂದೆ ನೀನು ಕೆಡುವೆ 5
--------------
ಚಿದಾನಂದ ಅವಧೂತರು
ತಾರಿಸಬೇಕೋ ಎನ್ನಾ|ಯಾದವ ರನ್ನಾ ಪ ತಾರಿಸಬೇಕೋ ಎನ್ನಾ | ಯಾದವ ರನ್ನಾ| ಸಾರಿದೆ ನಾನು ನಿನ್ನಾ|ಘೋರ ಭವಾಂಬುಧಿಯಾ| ಪಾರಗಾಣೆನೋ ಜೀಯಾ | ವಾರೆ ಕಂಗಳೆನ್ನಾ ನೋಡಿ| ದಯಮಾಡಿ ಒಡಮೂಡಿ ಅಭಯವ ನೀಡಿ1 ತಾನಾರೆಂಬುದು ನೋಡದೇ ತನುವಿನೊಳು| ನಾ ನನ್ನದೆಂದು ಪಾಡಿದೇ| ಶ್ರೀನಾಥ ನಿನ್ನ ನಾಮಾ|ನೆನೆಯದೆ ಮನದೊಳೊಮ್ಮಾ| ನಾನಾ ವಿಷಯದೊಳು ಬೆರೆದು|ಮೈಮುರಿದು| ಹಿತಜರಿದು ಕೆಡುವಾದೇನರಿದು 2 ಶರಣರಾ ಸಂಗದೋರಿಸಿ|ಸ್ವರೂಪವಾ| ಮರೆದ ವಿಭ್ರಮ ಹಾರಿಸೀ| ಗುರುಮೂರ್ತಿ ಪ್ರಭು|ಅರಹು ನೀಡೋ ಭಕ್ತಿಯಾ| ಸುರಸಾ ಸಾರಾಯದ|ಸುಖನುಂಬೆ|ಬಲಗೊಂಬೆ| ನಮೋಯೆಂಬೆ ಎನ್ನಿಂಬ ಬಿಂಬವೇ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ದಾವಲ್ಲಿ ಕೂತಿದ್ದೀಯೊ ರೋಗಿಷ್ಠ ಕಾಯ ಎನ್ನನು ಕಾಯ್ಕೊಂಡು ಪ ಜೀವಕಂಟಕನಾಗಿ ಹೇಯದಿಂದೊಡಗೂಡಿ ಆವಕಾಲದಿ ರೋಗದ್ಹೊರಳುತ ಎಲೆ ಖೋಡಿ ಅ.ಪ ಏನು ಕರ್ಮವ ಮಾಡಿದ್ದೋ ಪಾಪಾತ್ಮ ನೀ ಹೀನಸ್ಥಿತಿಯ ಪೊಂದಿದಿ ನಾನಾವಿಧದಿ ಮಹಬೇನೆಯಿಂ ನರಳುತ ನೀನೆನ್ನ ಜತೆಗೂಡಿ ಬನ್ನಬಡಿಸುವಿ ಪಾಪಿ1 ಹೊಲಸಿನ ದ್ವಾರದಿಂದ ಇಹ್ಯಕೆ ಬಂದಿ ಮಲಮೂತ್ರ ತುಂಬಿಕೊಂಡು ತೊಳೆಯದಿರಲು ನಿಮಿಷ ಹೊಲಸಿಕ್ಕಿನಾರುವಿ ತಿಳಿದುನೋಡಲು ನಿನ್ನ ಸಲಿಗೆಯಿಂ ನಾ ಕೆಡುವೆ 2 ಎನ್ನ ಜೊತೆಯ ಪೊಂದಿರ್ದ ಕಾರಣದಿಂ ನಾ ನಿನ್ನ ಕ್ಷೇಮವ ಬಯಸುವೆ ಎನ್ನಯ್ಯ ಶ್ರೀರಾಮನುನ್ನತಡಿಗಳ ನಂಬಿ ಸನ್ನುತಿಯಿಂ ಕ್ಷಮೆಬೇಡಿ ಧನ್ಯನಾಗೆಲೋದೇಹ್ಯ3
--------------
ರಾಮದಾಸರು
ದಿವನಿಶಿ ತವಪಾದ ದಿವ್ಯಧ್ಯಾನವನಿತ್ತು ಪ ವಿಷಯಲಂಟಪನಾಗಿ ವ್ಯಸನ ಕೂಪದಿ ಬಿದ್ದು ಮಸಣ ಬುದ್ಧಿಯಿಂ ಕೆಡುವ ಶಿಶುವನುಲಕ್ಷಿಸಿ 1 ಪುಸಿಯ ಸಂಸಾರವ ವಿಷಮವೆಂದರಿಯದೆ ದೆಸೆಗೆಟ್ಟು ಬಳಲುವ ದಾಸನೋಳ್ದಯವಿಟ್ಟು2 ಸುಜನರೊಲುಮೆಯಿತ್ತು ಗಜಿಬಿಜಿ ತೊಲಗಿಸಿ ನಿಜಜ್ಞಾನ ದಯಮಾಡು ಸುಜನಾರ್ಯ ಶ್ರೀರಾಮ3
--------------
ರಾಮದಾಸರು