ಒಟ್ಟು 342 ಕಡೆಗಳಲ್ಲಿ , 67 ದಾಸರು , 299 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

2. ಕವಿ ಲಕ್ಷ್ಮೀಶನ ವಸಂತ ವರ್ಣನೆಯ ಹಾಡುಗಳು ಇಂದು ಮುಖಿಯರು ಬಂದು ನೆರದು ಕಂದರ್ಪನಯ್ಯಗೋವಿಂದ ಮುಕುಂದನೊಳು ದ್ವಂದ್ವದಿಂದೊಲಿದು ವಸಂತವಾಡಿದರೂ ಪ ನವರತ್ನ ಖಚಿತ ಮೋಹನದ ಮಂಟಪದಲ್ಲಿ ನವಕುಸುಮ ಫಲಗಳನು ಕಟ್ಟಿದರು ನಲವಿನಲಿ ನವಮೋಹನಾಂಗಿಯರು ನವರಸ ಪ್ರೌಢೆಯರು ನವನೀತ ಚೋರನನು ನಿಲಿಸಿ ತವ ತವಕದಿಂದ ತರುಣಿಯರೆಲ್ಲ ವೊಲವಿನಲಿ ಕವಕವಿಸಿ ಹೊಳೆವ ಹೊನ್ನಂದುಗೆ ಘಲಿರೆನಲು ಭವ ಭವಕೆ ಕಾಣೆ ಯೆಂದತಿ ಮನೋಪ್ರೀತಿಯಲಿ ಪವಣರಿತು ಕುಂಕುಮವ ತಳಿದರು ಶ್ರೀಹರಿಗೆ 1 ಕಳಹಂಸ ಗಮನೆಯರು ತಳಿರಡಿಯ ನೀರೆಯರು ಸೆಳೆನಡುವಿನಬಲೆಯರು ಹೊಳೆವ ನಳಿದೋಳವನು ಥಳಥಳಿಪ ಕುಚದ ಕಾಂತೆಯರು ನಳನಳಿಪ ವದನೆಯರು ಎಳೆನಗೆಯ ಭಾವೆಯರು ಸುಳಿಗುರುಳ ನಾರಿಯರು ಅಳವಟ್ಟ ಚಲುವೆಯರು ನಳಿನನೇತ್ರನಿಗೆ ಕಮ್ಮಲರ ಸೂಸಿದರೂ 2 ಪುಣುಗು ಜವ್ವಾಜಿ ಪಚ್ಚೆ ಪರಿಮಳವನೆ ತೆಯಿದು ಘಣಿರಾಜಶಯನ ಬಾಬಾಯೆಂದು ಪ್ರೇಮದಿ ಕುಣಿವ ಸೋಗೆಗಳ ಮುಡಿಯಂದದಬಲೆ ಬಲೆಯರೆಯಡಿ ಗುಣನಿಧಿಯ ಹಿಡಿಯ ಬೇಕೆನುತಾ ಕ್ಷಣ ಬೇಗದಲಿ ಹಾಯ್ದು ಗಿಣಿವಾಕಿನಲಿ ನುಡಿದು ಕ್ಷಣ ಬೇಗದಲಿ ಹಾಯಿದು ಗಿಣಿವಾಕಿನಲಿ ನುಡಿದು ಯೆಣೆಯಿಲ್ಲ ನಿನಗೆಂದು ಪ್ರಣವಗೋಚರಗೆ ಚಂದನವ ಮಾಡಿದರೂ 3 ಮತ್ತಗಜಗಾಮಿನಿಯರೊತ್ತಾಗಿ ಒಡಂಬಟ್ಟು ಹತ್ತಬಿಗಿದಂಬರವನುಟ್ಟೂ ಒತ್ತರಿಸಿ ಸು ತ್ತುವರಿಯುತ್ತ ಹಾಹಾಯೆಂದು ಚಿತ್ತಿನಿ ಪದ್ಮಿನಿ ಶಂಖಿನಿಯರೊಂದಾಗಿ ಚಿತ್ತಜನ ಪಿತಗೆ ಕತ್ತುರಿಯ ರಚಿಸಿದರೂ 4 ಅಂಬುಜಾಕ್ಷಿಯರೆಲ್ಲ ಹರುಷದಿಂದನೆರದು ಚೆಂಬೊನ್ನ[ಕಳಸ]ಗಳ ಪಿಡಿದು ಪುಳಕವ ಜಡಿದು ಸುರರು ಪೂಮಳೆಗರೆದು ಹಾಯೆಂದು ಕಂಬುಧರ ನಿಲ್ಲು ನಿಲ್ಲೆಸುತಾ ಕುಂಭಿನಿಯೊಳಧಿಕ ಸುರಪುರದ ಲಕ್ಷ್ಮೀಪತಿಯ ಬೆಂಬಿಡದೆ ಪೊಂಬಟ್ಟೆಯಂ ಪಿಡಿದು ಸರಸದಿ ಕುಂಭಕುಚದಿಂದಪ್ಪಿ ತಕ್ಕೈಸಿ ಮನ ಬಂದು ಸಂಭ್ರಮದಲೋಕುಳಿಯನಾಡಿದರು 5
--------------
ಕವಿ ಲಕ್ಷ್ಮೀಶ
ಅಂಜಿಕೆಯಾಗುತಿದೆ ುದನೋಡಿ ಅಂಜಿಕೆಯಾಗುತಿದೆಮಂಜಿನಂದದ ಮಾಯೆ ರಂಜನೆಯಾಗಿ ರಂಜನನರಿಯದಿರೆ ಪಹುಸಿಯೆಂದು ಶ್ರುತಿ ಸಾರ್ದರೂ ತಾನೊಮ್ಮೆ ನಸಿಯದೆ ನಿಜದಂತಿರೆಹೊಸದು ಕಟ್ಟಿದ ಬಲೆ ಹೊದಿಸಿದಂದದಿ ಮತ್ತೂ ಹೊಸಹೊಸತಾಗಿರಲುಹಸಿವು ತೃಷೆಗಳೆಂಬಿವು ದಿನದಿನ ಹಸಗೆಡಿಸುತಲಿರಲುಕುಸುಮಬಾಣನ ಕಾಟ ಕುಸಿಯ ಮೆಟ್ಟಲು ಮನ ಮಸಿಯಾಗಿ ಮುದ್ರಿಸಲು 1 ಪೇಳ್ವದು ಪರತತ್ವವು ಬುದ್ದಿಯ ಬಾಳ್ವಿಕೆ ಬಹು ಬದ್ಧವುಕೋಳ್ವೋದ ಶೂರನ ಕಲಿತನದಂತಿದು ಕೀಳ್ವಾಯಕಿಳೀಯುತಿರೆಕೇಳ್ವರೆ ಮಾರ್ಗವನು ಜ್ಞಾನಿಯು ಕೋಳ್ವಿಡಿಯಲಿ ಬದ್ಧನುಹಾಳ್‍ವಾದದಲಿ ಹೊತ್ತು ಹೋಗುತ ನಿಜವಾಗಿ ಆಳ್ವನನರಿಯದಿರೆ 2 ಯೋಗಿಗಳ್‍ಕಾಣದಿರೆ ಕರ್ಮದ ರಾಗಿಗಳ್ ಕಾಳಾಗಿರೆಭೋಗಿಗಳೆಲ್ಲರು ಭಯದಲ್ಲಿ ಮುಳುಗಿರೆ ರೋಗಗಳ್ ಬಹುವಾಗಿರೆಸಾಗದೆ ಮಾರ್ಗವಿರೆ ಪುನರಪಿ ಪ್ರಾಗನೆ ಪಡೆಯುತಿರೆಹಾಗೆ ವಾಸನೆಯನ್ನು ಹೊದ್ದಿ ಮತ್ತತಿಶಯವಾಗಿಯೆ ವರಕೊಂಡಿರೆ 3ಧರ್ಮವ ಮಾಡದಿರೆ ಮನ ಪಾಪ ಕರ್ಮವ ಕೂಡುತಿರೆದುರ್ಮಾರ್ಗವೆಂದರೆ ದೃಢವಾಗಿ ನಲಿದು ವಿಕರ್ಮಕ್ಕೆ ವೊಡಲಾಗಿರೆಹಮ್ಮನು ನೆಗ್ಗಿದರೆ ಹೋಗದೆ ಬಿಮ್ಮಾಗಿ ಬೆಳೆಯುತಿರೆನೆಮ್ಮುತ ವಿಷಯವ ನೆನೆಯುತಲೀ ಪರಿ ಹೆಮ್ಮೆಯೆ ಹೆಚ್ಚುತಿರೆ 4ಮೊಳೆಯುತ ಮೇಲ್ಮುಟ್ಟಿರೆ ಹಮ್ಮಿದು ಬೆಳೆಯುತ ಬೇರ್ಬಿಟ್ಟಿರೆಕಳಚಿದರ್ಕೆಡದಾಶೆ ಕಾಲ್ಕಟ್ಟಿ ಕೆಡಹಿರೆ ತಳತುದಿ ತೋರದಿರೆಅಳಿಯುವದೆಂದಿಗಿದು ಸುಖ ತಾನು ಹೊಳೆಯುವದೆಂದಿಗದುನಳಿನಾಕ್ಷ ತಿಳುಹಿಸು ನಂಬಿದೆ ತಿರುಪತಿನಿಳಯ ವೆಂಕಟನಾಥನೆ 5ಕಂ||ಎಡೆಬಿಡದನುತಪಿಸುತ ಪದವಿಡಿದೆರಗಿಯೆ ಬಿನ್ನವಿಸಲು ತಿರುಪತಿಯೊಡೆ ಯಂಕಡು ಕರುಣದಿಂದ ಗುರುತನು ವಿಡಿದಭಯವನಿತ್ತ ನುಡಿಯನನುವದಿಸುವೆನಾಂ ಓಂ ಪರಸ್ಮೈಬ್ರಹ್ಮಣೇ ನಮಃ
--------------
ತಿಮ್ಮಪ್ಪದಾಸರು
ಅಧ್ಯಾಯ ಮೂರು ಜನ್ಮನಾಕಾಶನಂದಾ ವಸುಧಾನಾಗ್ರಜಾ ನಿಜಾನ್ ಪದ್ಮಾವತೀ ಪದ್ಮಭವಾ ವನಕ್ರೀಡಾರತ್ಯಾವತಾತ್ ವಚನ ಸಂದರ್ಶನಾದದ್ದು ತಂದೆಯ ಕಥೆಸ್ಮøತಿಗೆ ತಂದು ಅದು ವಿಸ್ತಾರದಿಂದ ಪೇಳುವೆನು ಸುಧರ್ಮನೆಂದು ಇರವನು ಅವಗೆ ಮುಂದೆ ಇಬ್ಬರು ಸುತರು ಚಂದದಲಿ ಆಕಾಶನೆಂದು ತೊಂಡಮಾನಸೆನಿಸುವನು 1 ವ್ಯಾಕುಲದಿ ಹೀಗೆ ಇಲ್ಲೆಂದು ಶೋಕದಲಿ ಕಣ್ಣೀರು ಹಾಕಿ ಸ್ಮರಿಸಿದ ದೇವಲೋಕ ಗುರುವ ಯಾಕೆ ಸ್ಮರಿಸಿದೆ ಎನ್ನನೀಕಾಲದಲಿ ಏನುಬೇಕು ಬೇಡಲೋನೀನು ನಾ ಶೋಕವನು ನುಡಿದಾ2 ಪಾಪಿಷ್ಠ ಏನು ಇದ್ದೇನು ನಾನು ಮಾಡಿದ ಪೇಳೋ ಹೀನಬುದ್ಧಿ ಕೊಲಿಸಿದೆನೇನು ಏನು ಕಾರಣ ಸಂತಾನ ಕಣ್ಣಿಲಿ ಕಾಣೆ ನಾನು ಅಯ್ಯಯ್ಯೊ 3 ಮಕ್ಕಳಾಡಿದರೆ ಬಹಳಕ್ಕರತೆ ಜೀವಕ್ಕೆ ಮಕ್ಕಳಿಲ್ಲದೆ ಮತ್ತೆ ಮಿಕ್ಕರಸ ಮಕ್ಕಳಿÀಂದಲೆ ಹಬ್ಬ ಹುಣ್ಣಿಮೆಯು ಉಲ್ಲಾಸ ಮಕ್ಕಳಿಂದಲೆ ಮುಂಜಿ ಮದುವೆಯ ಧರೆಯೊಳಗಿಲ್ಲ ಮಕ್ಕಳಿಂದಲೆ ಇಹವು ಮಕ್ಕಳಿಂದಲೆ ಪರವು ಮಕ್ಕಳಿಲ್ಲೆನ್ನ ಭಾಗ್ಯಕ್ಕೆ ಅಯ್ಯಯ್ಯ 4 ನೋಡಿಲ್ಲ ಮಕ್ಕಳಾಡಿದ ಮಾತು ನಕ್ಕು ಕೇಳಿಲ್ಲ ನಾ ಮಕ್ಕಳಿಂದಲೆ ಕೂಡಿ ಅಕ್ಕರದಿ ಉಣಲಿಲ್ಲ ಮಕ್ಕಳನು ಎತ್ತಿ ಮುದ್ದಿಕ್ಕಿದವನಲ್ಲ ಮಕ್ಕಳಿಲ್ಲದ ಮನುಜ ಲೆಕ್ಕದಾವದರೊಳಗೆ ಬೆಕ್ಕು ಮೊದಲಾದಂಥ ಮಿಕ್ಕ ಪ್ರಾಣಿಗಳೆಲ್ಲ ಮಕ್ಕಳಾಡಿದ ಬಹಳ ಚಕ್ಕಂದವನು ನೋಡಿ ಸೌಖ್ಯ ಪಡುತಿಹದಯ್ಯ ಧಿಕ್ಕರಿಸು ಎನ ಜನ್ಮ ಅದಕ್ಕಿಂತ ವ್ಯರ್ಥ 5 ಮುನ್ನ ನಮ್ಮೊಳಗಾರು ಉಣ್ಣದಲೆ ಈ ಬದುಕು ಮಣ್ಣು ಪಾಲಾಗುವದು ಘನ್ನ ಈ ಚಿಂತಿಯಲಿ ಬಣ್ಣಗೆಟ್ಟೆನು ಕುದ್ದು ಸುಣ್ಣಾದೆನಯ್ಯ ಉಭಯಕುಲ ತಾರಿಸುವಂಥ ನಾನು ಅಣ್ಣತಮ್ಮರ ಒಳಗೆ ಪುಣ್ಯ ಇಲ್ಲೊಬ್ಬನಲಿ ಪುಣ್ಯಗುರುವೆ 6 ರಾಗ:ಶಂಕರಾಭರಣ ಆದಿತಾಳ ಇಂಥ ಮಾತಿಗೆ ಜೀಯ ಹೀಗಂತ ನುಡಿದನು ಚಿಂತೆ ಮಾಡಬೇಡ ಭೂಕಾಂತ ಎಂದನು 1 ಪುತ್ರ ಕಾಮೇಷ್ಟಿಮಾಡು ಭಕ್ತಿಯಿಂದಲಿ ಪುತ್ರನಾಗುವನು ನಿಮಗೆ ಸತ್ಯ ನೀ ತಿಳಿ 2 ಗುರುವಿನ ಮಾತುಕೇಳಿ ಪರಮ ಹರುಷದಿಂದಲಿ ಅರಸ ಬ್ರಾಹ್ಮಣರನೆಲ್ಲ ಕರೆಸಿದಾಗಲೇ 3 ಮುಂದೆ ಯಜ್ಞ ಮಾಡಬೇಕು ಎಂದÀು ತ್ವರದಲಿ ಒಂದು ಭೂಮಿ ಶೋಧಿಸಿದನು ಚಂದದಲಿ 4 ಚಲುವ ನೇಗಿಲ ಜಗ್ಗಿ ಎಳೆವ ಕಾಲಕೆ ಹೊಳೆವ ಪದ್ಮ ಬಂತು ಅಲ್ಲಿ ಸುಳಿದು ಮೇಲಕೆ 5 ಇರುವಳೊಬ್ಬಳಲ್ಲಿ ಮತ್ತೆ ಪರಮಸುಂದರಿ ಅರಸನೋಡಿ ಬೆರಗಿನಿಂತ ಸ್ಮರಿಸಿ ಪರಿಪರಿ 6 ಕಾಣಿಸಿದಲೆ ಗಗನದಲಿ ವಾಣಿಯಾಯಿತು ಕಾಣದಿದ್ದರೂ ಈಗ ಸಕಲಪ್ರಾಣಿ ಕೇಳಿತೊ 7 ಇನ್ನು ಚಿಂತೆ ಮಾಡಬೇಡ ಧನ್ಯ ಅರಸ ನೀ ನಿನ್ನ ಮಗಳು ಎಂದು ಚೆನ್ನಾಗಿ ತಿಳಿಯೋ ನೀ8 ಕ್ಲೇಶ ಹಿಂದೆ ಬಿಡುವಿಯೊ ಮುಂದೆ ಮುಂದಕಿನ್ನು ಆನಂದ ಬಡವಿಯೊ9 ಗಗನ ವಾಣಿಯನ್ನು ಕೇಳಿ ಅರಸ ಬಗೆಯಲಿ ಮಗಳ ನೆತ್ತಿಕೊಂಡನಾಗ ಮುಗಳು ನಗೆಯಲಿ 10 ತಂದೆ ಮಗಳ ಜನ್ಮ ಪದ್ಮದಿಂದ ತಿಳಿದನು ಮುಂದೆ ಪದ್ಮಾವತಿಯೆಂದು ಕರೆದನು11 ಮಗಳಕಾಲಗುಣದಿ ಮುಂದೆ ಮಗನು ಆದನು ಅವನ ಕರೆದ ವಸುಧಾನನೆಂದು ಗಗನರಾಜನು 12 ತಕ್ಕವಾಗಿ ಅರಸಗ್ಹೀಗೆ ಮಕ್ಕಳಾದರು ಸೌಖ್ಯದಿಂದ ಮುಂದೆ ದಿನದಿನಕ್ಕೆ ಬೆಳೆದರು13 ಬಂತು ಯೌವನವು ಭೂಕಾಂತ ಪುತ್ರಿಗೆ ಬಂತು ಆಗ ಮತ್ತೆ ಬಹಳ ಚಿಂತೆ ಅರಸಗೆ 14 ಇಂಥ ಮಗಳಿಗಿನ್ನು ತಕ್ಕಂಥ ಪುರುಷನು ಪ್ರಾಂತದೊಳಗೆ ಇಲ್ಲದಿವ್ಯ ಕಾಂತಿ ಮಂತನು 15 ಎಂತು ನೋಡಲಿನ್ನು ಹುಡುಕಿ ಶ್ರಾಂತನಾದೆನು ಚಿಂತೆಯೊಳಗೆ ಬಿದ್ದು ಮುಂದೆ ಪ್ರಾಂತಗಾಣೇನು 16 ಅಂತರಂಗದೊಳಗೆ ಹೀಗಂತ ಅನುದಿನ ಚಿಂತಿಸಿದನು ಮರೆತು ಅನಂತಾದ್ರೀಶನ17 ವಚನ ಚಂದಾದ ಕುಸುಮಗಳ ಕೂಡಿ ಮುಂದೆ ಇಂದು ಮುಖಿಯು ನೋಡುತಲೆ ಮುಂದೆ ತೆಗೆದು ತ್ವರದಿಂದ ಆಭರಣಗಳ ಮುಂದೆ ತರಿಸಿದಳು1 ಕೆತ್ತಿಸಿದ ರಾಗುಟಿಯ ಒತ್ತಿ ಮೊದಲ್ಹಾಕಿ ಹತ್ತೊತ್ತಿದಳು ಸಾಲ್ಹಿಡಿದು ಇತ್ತಿತ್ತು ಮತ್ತೆ ತುದಿಗೆ ಅತ್ತಿತ್ತ ಮತ್ತ ಮೇಲರಿಸಿನವ ಚಿತ್ತಗೊಟ್ಟಚ್ಚಿದಳು ಚಿತ್ತಾರ ಬರೆದಂತೆ ಮತ್ತ ಗಜಗಮನೆ 2 ಥಳಥಳನೆ ಜಾತಿಯಿಂದ್ಹೊಳೆವ ಮುತ್ತಿನ ಭವ್ಯ ಎಳೆಯ ಇಮ್ಮಡಿ ಮಾಡಿ ನಳಿನಾಕ್ಷಿ ಬೈತಲಗೆ ಅಳತೆಯಿಂದ್ಹಾಕಿದಳು ತಳಪಿನಲಿ ಎಡಬಲಕೆ ಎಳೆದು ಕಟ್ಟಿದಳ್ಹಿಂದೆ ಹೆರಳಿಗ್ಹಾಕಿ ತೊಳೆದ ಮುತ್ತಿನ ಬುಗಡಿ ಪೊಳೆವ ಮೀನ್ಬಾವಲಿಯು ಝಳಿ ಝಳಿತವಾಗಿರುವ ಗಿಳಿಗಂಟಿ ಚಳತುಂಬುಗಳ ನಿಟ್ಟು ಕರ್ಣದಲಿ ಉಳಿದ ದ್ರಾಕ್ಷಾಲತೆಯ ಎಳೆದು ಬಿಗಿದಳು ಮೇಲೆ ಸುಳಿಗುರಳಿನಲ್ಲಿ 3 ಇದ್ದ ಮುತ್ತುಗಳ್ಹಚ್ಚಿ ತಿದ್ದಿ ಮಾಡಿದ ನತ್ತು ಉದ್ರೇಕದಿಂದಿಡಲು ಮುದ್ದು ಸುರಿವುತ ಮುಂಚೆ ಇದ್ದ ಮುಖ ಮತ್ತೆ ಎದ್ದು ಕಾಣಿಸಿತು ಪ್ರದ್ಯುಮ್ನ ಚಾಪದಂತೆರಡÀು ಹುಬ್ಬುಗಳ ಮಧ್ಯೆ ನೊಸಲಿನ ಮೇಲೆ ಶುದ್ಧ ಕಸ್ತೂರಿಯನ್ನು ತಿದ್ದಿ ತಿಲಕವನಿಟ್ಟು ತಿದ್ದಿದಳು ಕಾಡಿಗೆಯ ಪದ್ಮಲೋಚನಗಳಿಗೆ ಪದ್ಮಜಾತೆ 4 ಚಂದ್ರಗಾವಿಯನ್ನುಟ್ಟು ಚಂದಾದ ಕುಪ್ಪಸವ ಮುಂದೆ ಬಿಗಿ ಬಿಗಿತೊಟ್ಟು ಮುಂದಲೆಗೆ ಶೋಭಿಸುವ ಚಂದ್ರಸೂರ್ಯರನಿಟ್ಟು ಚೆಂದಾಗಿ ಬೈತಲೆಗೆ ಚಂದಿರವ ಸುರಿದಳು ಚಂದ್ರಮುಖಿಯು ಪರಿ ಗೀರು ಗಂಧವನು ಕೈಗ್ಹಚ್ಚಿ ಮುಂದೆ ಕೊರಳಿಗೆ ಒರಿಸಿ ಚಂದ್ರಸರ ಮುಂದೆ ಹಾಕಿದಳು 5 ಮೇಲಿಟ್ಟು ಚಿಂತಾಕವನು ಕಟ್ಟಿ ತಾಯತ ಬಟ್ಟಕುಚಗಳ ಏಕಾವಳಿಯ ಇಟ್ಟು ಪುತ್ಥಳಿ ಸರವು ಅಷ್ಟು ಸರಗಳನೆಲ್ಲ ಮೆಟ್ಟಿ ಮೇಲ್ಮೆರೆವಂಥ ಶ್ರೇಷ್ಠ ಸರಿಗಿಯತರಿಸಿ ಇಟ್ಟಳಾಕೆ6 ಟೊಂಕದಲಿ ಒಡ್ಯಾಣ ಮುಂದಲಂಕರಿಸಿದಳು ಪೊಂಕದಿಂದಿಟ್ಟು ಅಕಳಂಕ ಕೊಂಕವನು ಮಾಡುತಲೆÉ ಕಿಂಕಿಣಿಪೈಜಣ ಇಟ್ಟಳಾಕೆ7 ಪಿಲ್ಲೆ ಮೇಲಾದ ಮುಸುಕಿಕ್ಕಿ ಬಹು ಬಾಲೆಯರು ಕೊಟ್ಟ ಕೂಡಿ ಭಾಳ ಹರುಷದಿ ಹೊರಟಳಾಕಾಲದಲ್ಲಿ. 8 ವಚನ ಪರಿ ಗಜಗಮನದಿಂದಾ ವನ ಮದನ ಸತಿಯಂತಿಪ್ಪ ತರುಣಿರೂಪವ ತಾಳಿ ವನಮಧ್ಯದಲ್ಲಿ ತಾಂ ಬೆಸಗೊಂಡಳು ಯಾರಲೆ ಬಾಲೆ ನೀ ಬಾಲಚಂದ್ರ ಲಲಾಟೆ ಕಾಳಾಹಿ ವೇಣೀ ನೀ ಜಾತೆಯರ ಕೂಡಿ ಬಳಗವು ಕಾಂತನ್ಯಾರು ಪೇಳೆಂದು 1 ಧ್ವನಿ ಕೇಳೆ ಕುಸುಮಕ್ಕೆ ನಾ ಬಂದೆ ತಿಳಿಯೆ ಮಾತಿನರಗಿಳಿಯೆ 1 ಅಸಮ ತೋಂಡಮಾನನೆಂಬುವನು ನಮ್ಮ ಕಕ್ಕನು 2 ನಾ ಖೂನವನು ಪೇಳಿದೆ ಸಾರಿ ಪೇಳಿದೆ &ಟಿ
--------------
ಅನಂತಾದ್ರೀಶ - ಕಥನಕಾವ್ಯಗಳು
ಅಧ್ಯಾಯ ಮೂರು ಪದ ಸಾವಿರ ಬುಧರÀರನೆಲ್ಲ ಮೀರಿ ಪರಮೇಶ್ವರಗೆ ಹಾರ ಹಾಕುವೆನೆಂದು ಪಾರಿಜಾತದ ಕುಸುಮ ಪಾರ್ವತಿಯು ತಾತರಿಸಿ ಪೂರ್ವದಲಿ ಮಾಡಿದಳ ಪೂರ್ವ ಮಾಲೆಯ ಭಕ್ತಿಪೂರ್ವಕವಾಗಿ ಚಾರುತರವಾಗಿಹ ಅಲಂಕಾರಗಳ ನಿಟ್ಟು ಶೃಂಗಾರ ಭರಿತಳು ಆಗಿ ಪಾರಿಜಾತದ ಹೂವಿನ ಹಾರಕೈಯಲಿ ಪಿಡಿದು ಚಾರು ಸಖಿಯಲ್ಲಿ 1 ಚಂದ್ರವದನೆಯ ಬಹಳ ಛಂದಾದ ಮುಖನೋಡಿ ಚಂದ್ರಮನು ಇದುಕಾಂತಿ ನಂದು ಒಯ್ದಳು ಈಕೆ ಮುಂದಿವಳನೊಯ್ಯಬೇಕೆಂದು ಕುಚಗಳ ಕಂಡು ಇಂದ್ರ ತಾ ಯನ ನಾ ಗೇಂದ್ರನ ಶಿರವೆಂದ ಮುಂದದರ ಸೊಂಡೆ ಇದು ಯೆಂದು ಕರಗಳಿಗೆಂದಾ ಮಂದಗತಿ ಮತ್ತಾದರರಿಂದ ನಡಗಿಯ ಕಂಡು ಸುಂದರಿಯ ಆಹುಬ್ಬು ಕರಿದರ್ಪ ತಾ ಕಂಡು 2 ಎರಳೆ ನೋಟವ ಕಂಡು ಎರಳೆವಾಹನ ನುಡಿದ ಯರವಿಂದವಯವಕ್ಹಿಗ್ಗಿ ಹೊರಳು ವಳು ಯಂತೆಂದು ಕೊರಳವನು ಕಂಡು ಹರಿ ಕರದಲೊಪ್ಪುವಯೆನ್ನ ವರಪಾಂಚಜನ್ಯವಿದು ಸರಿಯೆಂದು ನುಡಿದಾ ಗುರುಳು ಗೂದಲದವಳ ಹೆರಳವನು ನೋಡಿಹರಿ ಇರುಳ ಮಲಗುವಯನ್ನ ಸರಳ ಹಾಸಿಗೆಯೆಂದು ಸುರರು ಎಲ್ಲರು ಪರಿ ಪರಿಯಿಂದ ನುಡಿದರನುಸರಿಸಿಯಿದರಂತೆ 3 ಪದ ಮುಂದೆ ಆ ಪಾರ್ವತಿ ಬಂದು ಕುಳಿತಳಲ್ಲೆ ಬಂದ ಶಿವನು ತಾ ಬಾಲಕನಾಗಿ 1 ಲೀಲೆಯಿಂದಲಿ ತೊಡೆಯ ಮೇಲೆ ಮಲಗಿದನಾಗ ಬಾಲೆ ಹೀಗೆಂದಳು ಎಲ್ಲರಿಗೆ 2 ಮುನ್ನೆತ್ತಿದವರಿಗ್ಹಾಕುವೆ ಮಾಲೆ 3 ಅಂದಮಾತನು ಕೇಳಿ ಇಂದ್ರ ಬಂದನು ಆಗ ಮುಂದೆ ಆ ಬಾಲನೆತ್ತುವೆನೆಂದು4 ಚನ್ನಿಗನಂತಾದ್ರೀಶನ ಹಿಂದಕೆ ಮಾಡಿ ಸಣ್ಣ ಬಾಲನ ತಾ ಮುಂದಕೆ ಕರೆದಾ 5 ಪದ ಸಣ್ಣಬಾಲನೇ ಬಾರೋ ಹಣ್ಣು ಕೊಡುವೆ ನಿನಗಿನ್ನು ಕೈತಾರೋ ಪ ಚಂಡು ಬೊಗರಿ ಗೋಲಿಗುಂಡು ನಾ ಕೊಡುವೆ ಬೆಂಡು ಬತ್ತಾಸವ ಕೊಂಡು ನಾ ಕೊಡುವೆ 1 ಚಿಣಿಕೋಲು ಮತ್ತೆ ಈಕ್ಷಣ ತಂದು ಕೊಡುವೆ ಮನಸಿಗೊಪ್ಪುವ ಚಿಂತಾಮಣಿ ತಂದು ಕೊಡುವೆ 2 ನಡಿಯೋ ನಿನಗೆ ದೊಡ್ಡ ಗುಡಿಯ ತೋರಿಸುವೆ ಒಡೆಯ ನಂತಾದ್ರೀಶನಡಿಯ ತೋರಿಸುವೆ 3 ಪದ್ಯ ಮತ್ತೇ ಮತ್ತೀಪರಿಯ ಒತ್ತಿ ಒದರಿದರೇನು ವ್ಯರ್ಥ ಬಾಲನು ಕಣ್ಣೆತ್ತಿ ನೋಡಲುವಲ್ಲ ಒತ್ತಿ ತೋಳುಗಳ್ಹಿಡಿದು ಎತ್ತಿನೋಡಿದನಾಗ ಯತ್ನದಿಂದಲ್ಲಿಯೆ ತಿತ್ತಿದಮ್ಮನೆ ದಣಿದು ಮತ್ತ ದೇವೇಂದ್ರ ಬಲು ಮೆತ್ತಗಾದ ವ್ಯರ್ಥ ಈ ಬಾಲಕನ ಎತ್ತಿ ನಗೆಗೀಡು ಈವತ್ತು ಆಯಿತು ಎಂದು ವೃತ್ರಾರಿ ತಾ ಮುಂದೆ ಅತ್ಯಂತ ಕೋಪದಲಿ ಎತ್ತಿದನು ವಜ್ರವನು ಎತ್ತಿದಾ ಕೈಬರದೆ ಮತ್ತಲ್ಲಿ ನಿಂತಿಹುದು ಚಿತ್ರದಲ್ಲಿಯ ಗೊಂಬೆ ಹಸ್ತದಂತೆ 1 ಪದ ಆಯಿತು ಈ ಪರಿಯು ದೇಹಕೆ ಆಯಾಸವೇ ಸರಿಯ ಪ ಮತ್ತೆ ಅಗ್ನಿಯು ಅಲ್ಲೆ ಬಾಲನ ಎತ್ತದೆ ದಣಿವುತಲೆ ಶಕ್ತಿ ಎತ್ತಿದ ಮೇಲೆ ಮತ್ತಾ ಶಕ್ತಿ ನಿಂತಿತು ಅಲ್ಲೆ1 ದಂಡಧರನು ಆಗ ಯೆತ್ತದೆ ಭಂಡಾದನು ಬೇಗ ದಂಡ ನೆತ್ತಿದನಾಗ ಎತ್ತಿದ ದಂಡ ನಿಂತಿತುಹಾಗೆ 2 ಮತ್ತೆ ನೈರತಿ ಅಲ್ಲೆ ಬಾಲನ ಎತ್ತದೆ ದಣಿವುತಲೆ ಕತ್ತಿಯೆತ್ತಿದ ಮೇಲೆ ಮುಂದಾ ಕತ್ತಿನಿಂತಿತು ಅಲ್ಲೆ 3 ಪಾಶಧರನು ಆಗ ಬಹು ಕಾಸೋಸಿ ಬಿಟ್ಟು ಬೇಗ ಪಾಶವೆತ್ತಿದನಾಗ ಮುಂದಾ ಪಾಶನಿಂತಿತು ಹಾಗೆ 4 ವಾಯು ಬಂದನಲ್ಲೆ ಬಳಲಿದ ಕಾಯಕ್ಲೇಶದಲ್ಲೆ ಕಯ್ಯನೆತ್ತಿದ ಮೇಲೆ ಮತ್ತಾಕೈಯು ನಿಂತಿತು ಅಲ್ಲೆ 5 ಸತ್ವರ ಬರವುತಲೆ ಕುಬೇರ ನಿಸ್ಸತ್ವನಾದನಲ್ಲೆ ಶಸ್ತ್ರಯೆತ್ತಿದ ಮೇಲೆ ಮುಂದಾ ಶಸ್ತ್ರ ನಿಂತಿತು ಅಲ್ಲೆ 6 ಶೂಲಧರನು ಅಲ್ಲೆ ಮತ್ತಾ ಬಾಲನಯೆತ್ತದಲೆ ಶೂಲನೆತ್ತಿದ ಮೇಲೆ ಮುಂದಾಶೂಲ ನಿಂತಿತು ಅಲ್ಲೆ7 ಬುಧಜನಕನು ಅಲ್ಲೆಬರವುತ ಗದಗದ ನಡುಗುತಲೆ ಗದೆಯನೆತ್ತಿದ ಮೇಲೆ ಮುಂದಾಗದೆಯು ನಿಂತಿತು ಅಲ್ಲೆ8 ಗೋಣನಲ್ಲಾಡುವ ತಲೆಯತ್ತಿದ ಹರಿ ತಾನು ಚಕ್ರವು ಮೇಲೆಖೂನದಿ ಅದು ಅಲ್ಲೆ ಆಯಿತು ಗೋಣವು ತಿರುವುತಲೆ 9 ಅಲ್ಲೆ ಪೂಷಣ ಬೇಗ ಕರಕರ ಹಲ್ಲು ತಿಂದನಾಗ ಹಲ್ಲು ಬಿದ್ದವಾಗ ತೋರಿದ ಎಲ್ಲ ದೇವತೆಗಳಿಗೆ 10 ಕೂಸನೆತ್ತದಾಗಿ ಎಲ್ಲರು ಮೋಸವಾದರು ಹೋಗಿ ಆ ಸ್ವಯಂವರಕಾಗಿ ಅನಂತಾದ್ರೀಶನ ಸಹಿತಾಗಿ 11 ಪದ್ಯ ಅಂಬುಜೋದ್ಭವ ತಾನು ಸ್ತಂಭಿತಾಗಿಸುರ ಕ ದಂಬವನು ಕಾಣುತಲೆ ಸಾಂಬನ ಮಹಿಮೆಯಿದು ಅಂಬಿಕೆಯ ತೊಡೆಯ ತಲೆಗಿಂಬು ಮಾಡಿಹ ಬಾಲ ಸಾಂಬನಿವನಹದೆಂದು ಸಂಭವಿಸಿದಾಗ ನಂಬಿ ಸ್ತುತಿ ಮಾಡಿದನು ಸ್ತಂಭೀತರು ಎಂದೆನಿಸಿ ಕೊಂಬುವರು ಎಲ್ಲಾರು ನಂಬಿ ಸ್ತುತಿಸಿದರು ಆ ಸಾಂಬಗೀಪರಿಯು ಪದ ಸಾಂಬಸದಾಸಿವನೆ ರಕ್ಷಿಸು ಬಾಲಕನೇ ಸಾಂಬಸದಾಶಿವನೆಂಬುವ ಬಾಲಕ ನೆಂಬುವದರಿಯದೆ ಸ್ತಂಭಿತರಾದೆವು ನಂಬಿಗೆ ತಿಳಿಯದೆ ನಂಬಿದೆವೋ ಜಗ ದಂಬೆಯ ತೊಡೆ ತಲೆ ಗಿಂಬು ಇಟ್ಟವನೆ ಪ ಪಟುತರನಾದಂಥವನೆ ತಿಳಿಯದೋ ನಿನ್ನ ಘಟಿತ ಘಟನೆ ಹರನೆ ಸ್ಫಟಿಕ ಸನ್ನಿಭ ಧೂರ್ಜಟಿಯೆ ನಿನಗೆ ಸಂ ಘಟಿತಳಾದ ಈ ಕುಟಿಲ ಕುಂತಳೆಯು ಹಟದಲಿ ಗೆಲವುದುವ ಹಟವೊಂದಿದು ಈ ಸ್ಪುಟವಾಯಿತು ಸಂಕಟ ಪರಿಹರಿಸು 1 ಸರ್ವರನೆಲ್ಲಾ ತರಿಸಿ ಸರಸ ಮಾಡಿದೆಯೊ ಗರ್ವವ ಪರಿಹರಿಸಿ ಉರ್ವಿಯೊಳಗೆ ನಿನಗಿರ್ವರಾರು ಸರಿ ಸರ್ವರನ್ನು ಮೀರಿರುವ ದೇವನೆ ಸರ್ವಪ್ರಕಾರದಿ ಸರ್ವರ ಅವಯವ ಪೂರ್ವದಂತಾಗಲಿ ಪಾರ್ವತಿಪ್ರಿಯನೇ 2 ಭೋ ಶಿಶುವರ ರೂಪ ಬೇಗನೆ ಬಿಡು ಈ ಸಮಯಕ್ಕೆ ಕೋಪ ಈ ಶಶಿವದನೆಯ ಆಶೆಗೆ ವ್ಯರ್ಥದಿ ಮೋಸಹೋಗಿ ಕಾಸೋಸಿ ಬಟ್ಟೆವು ಘಾತಿ ಮಾಡಬೇಡಾಸೆಯ ಪೂರಿಸು ಶ್ರೀ ಅನಂತಾದ್ರೀಶ ಪ್ರಿಯನೆ 3 ಪದ್ಯ ವಿರಳಾಟ ಈ ಸ್ತುತಿಗೆ ಮರುಳಾಗಿ ತಾನು ಗರಳ ಗೊರಲಿಸಾ ಮೂರುತಿಯ ಸರಳ ಮಾಡೆಲ್ಲವರು ಗುರುಳು ಗೂದಲದವ ಸರಳಾದವ ತೊಡೆಯಲ್ಲಿ ಹೊರಳೆದ್ದು ತೋರಿಸಿದ ಸರಳ ನಿಜರೂಪ ವಿರಳೆ ನೋಟದಲಿರುವ ತರಳೆ ಆ ಪಾರ್ವತಿಯು ಹೊರಳಿ ನೋಡುತಲೆದ್ದು ಹರಳಿನುಂಗರ ಕೈಯ್ಯ ಹೆರಳಿನೊಳಗಿರುವಂಥ ಅರಳಿದ್ಹೂವಿನ ದಿವ್ಯ ಸರಳ ಮಾಲೆಯ ಅವನ ಕೊರಳಿಗ್ಹಾಕಿದಳು 1 ಗಂಭೀರ ವಾದ್ಯಗಳೇಳು ಸಾರಿ ನುಡಿದವು ಆಗ ಸಾವಿರಬುಧರ ಎಲ್ಲ ವೃಷ್ಟಿಸೂರಿಮಾಡಿದರು ಚಾರ್ವನಂತಾದ್ರಿಯಲ್ಲಿರುವ ದೇವನ ಬಿಟ್ಟು ಸಾರ ಪರಮೇಶ್ವರಗೆ ಹಾರ ಹಾಕುವೆನೆಂಬ ಪಾರ್ವತಿಯ ಅಭಿಲಾಷೆ ಪೂರ್ಣವಾದಲ್ಲೆ ಸಂಪೂರ್ಣ ಸಾಂಬ ಮೂರುತಿಯ ದಯೆಯಿಂದ ಮೂರು ಅಧ್ಯಾಯ
--------------
ಅನಂತಾದ್ರೀಶ - ಕಥನಕಾವ್ಯಗಳು
ಅಪ್ಪನ ನೋಡಿರೊ ವರಗಳ ತಪ್ಪದೆ ಬೇಡಿರೋ ಸರ್ಪನಮೇಲೆ ಉಪ್ಪವಡಿಸಿ ಮುಪ್ಪು ಇಲ್ಲದೆ ಭಕ್ತರನ ಪೊರೆವಾ ಪ ಬಲುವಾ ನಂದಗಡಲ ಸುಖವೊ ತೂಗುವ ಸುಳಿಗುರುಳ ಚುಂಚೊ ಸುಂದರದವತಾರ ಮಂದರಧರನೋ 1 ಅರಳಿದ ಸಂಪಿಗೆ ತೆನೆಯು ನಾಸಾ ಕೊನೆಯಲ್ಲಿ ಮಣಿಯು ತರುಳ ಹಾರವೋ ಮುಂದಲೆಯಲ್ಲಿ ಅರಳೆಲೆ ವೈಯಾರವೋ ತಿಲಕಾಂಬರದ ಬಿದಿಗೆ ತಿಂಗಳೊ ಮಕರ ಕುಂಡಲವೊ 2 ಕುಸುಮ ವನದ ಹಬ್ಬೊ ಗಲ್ಲದ ಚಿಬವೊ ಕಮಠದ ಬೆನ್ನೊ ಹೋಲಿಕೆ ಅಧರಾಮೃತದ ಸುರಿಯು ಅಲ್ಲಲ್ಲಿಗೆ ಕಿರಿಬೆವರಿಡೆ ನಿಲ್ಲದೆ ವೀಳ್ಯದ ಜೊಲ್ಲಿನ ಧಾರೆಯು 3 ಬಾಳಿದಿಂಡಿನ ತೋಳು ಕಟ್ಟಿದ ತಾಯಿತಗಳೇಳು ಕೀಲು ಕಡಗ ಝಣವೊ ದ್ವಾರೆ ಘಟ್ಟಿ ಕಂಕಣವೋ ನೀಲದುಂಗುರ ಹರಳೊ ಮುಂಗೈ ಸರಪಳಿಯ ಬೆರಳೊ ಬಾಲಲೋಲ ಗೋಪಾಲನೊ 4 ಪನ್ನಲಗ ಮುರಿಗ್ಯೂರಕ್ಷಿಯ ಮಣಿಯು ಥೋರ ದಾಸರಿಗೆ ಕೌಸ್ತುಭ ಶೃಂಗಾರವೊ ರನ್ನದ ಮಾಲೆ ತುಲಸಿ ಪದಕ ಹಾಕಿದ ಎಣ್ಣಿನುಲೊ ಗೋಪಿ ಮನ್ನಿಸುತಲಿ 5 ಹುಲಿಯುಗುರೂಮುತ್ತಿನಮಾಲಿಕಿಯುಪೂಸಿದಗಂಧಗರೊ ವೀಳೆಯರುಣನೊ ಅಂಗೈಯ ಗೆರೆಯು ವಿಸವ ಲಕ್ಷಣನೊ ವೈಜಯಂತಿ ಸುಳ್ಳುವೊ ಒಲಿಸಿದಳೊ ಮಗನ ಯಶೋದೆ 6 ಕಂಬು ಕೊರಳೊ ಮೂರೇಖಿಯು ಅಂಗೈಯಿವರಿಗೆ ಮರುಳೊ ತುಂಬಿ ಸೂಸುವ ಹೊಳೆಯು ಜಠರದ ನಾಭಿ ತ್ರಿವಳಿಯು ಬಿಸಲಿನ ಘನ ಹರಿಯು ಭೊಂ ಭೊಂ ಭೊಮೆಂದು ಕೊಂಬಿನ ಊದು ಎಂಬೊ ನುಡಿಯಲಿ ರಂಬಿಸಿ ಕೃಷ್ಣನ 7 ಕಮಲದ ಮಗ್ಗ್ಯೊ ಉಂಗುರ ನಡುವಿದು ಅಲಂಕಾರದ ಸುಗ್ಗ್ಯೊ ಅಮಮ ಧೊರೆಯು ನಾದದ ಘಂಟ್ಯೊ ಮಣಿಶಿಂಗನ ಮರಿಯು ಜಾನು ಕನ್ನಡಿ ಕ್ರಮವೊ ಧಿಮಿ ಧಿಮಿ ಎಂದು ರಂಗನ ಕುಣಿಯೆಂದು ನಿಮನಿಮಗೆಲ್ಲ 8 ಕಾಲಲಿಯಿಟ್ಯ ಗೆಜ್ಜ್ಯೋ ಅಂದಿಗೆ ತಪ್ಪು ತಪ್ಪು ಹೆಜ್ಜ್ಯೊ ನೀಳದ ದಂತೊ ಜಂಘ ಸರಪಳಿಯ ಗಗ್ಗರಿಯ ಯಿಂತೊ ನಖ ಕೇದಿಗೆ ಮುಳೆಯು ಲಾಲಿ ಲಾಲಿ ಕಂದ ಎನುತಲಿ ಶ್ರೀ ಲಕುಮಿ ಲೋಲನ ಎಬ್ಬಿಸಿ 9 ನೆರೆದವರಿಗೆ ತರುಳರನೆಲ್ಲಾ ಕರೆದು ಸುತ್ತಲು ನಿಲಿಸಿ ಹರಿಹರಿ ಎಂದು ಹರದಾಡುತಲಿ ಪರಮ ಸಂಭ್ರಮದಿಂದ ಕರೆಕರೆದು ವಿಜಯವಿಠ್ಠಲನ ತರಕಿಸಿ ಸಂತತ ಉಡಿಯಲಿ ಎತ್ತಿ 10
--------------
ವಿಜಯದಾಸ
ಅಂಬಾ ನೀ ಹೂವ ಪಾಲಿಸೆÉ ವರ ನೀಡೆ ಶ್ರೀ ಜಗ- ದಂಬಾ ನೀ ಹೂವ ಪಾಲಿಸೆ ಅಂಬಾ ನೀ ಹೂವ ಪಾಲಿಸೆ ಶಂಭು ಶಂಕರನ ರಾಣಿ ರಂಭೆ ಪಾರ್ವತಿ ನಿನ್ನ ಪಾದಾಂಬುಜಕ್ಕೆರಗುವೆ ಪ ಬಳೆಯು ಕರಿಯಮಣಿ ಕೊರಳÀ ಮಂಗಳ ಸೂತ್ರ ಸ್ಥಿರವಾಗಿಯಿರುವಂತೆ ಸರ್ವ ಸಂಪತ್ತು ನೀಡಂಬಾ 1 ಮಕ್ಕಳು ಮನೆ ಭಾಗ್ಯ ತೊಟ್ಟಿಲು ತೂಗುವಂತೆ ಮೃಷ್ಟಾನ್ನ ದಾನ ಮಾಡಲಿಷ್ಟಾರ್ಥದ್ವರಗಳ ಅಂಬಾ2 ರುದ್ರನ ಸತಿಯಳೆ ಬುದ್ಧ್ಯಾತ್ಮಳೆನಿಸುವಿ ಭದ್ರೆ ನಿನ್ನಯ ಮುಡಿಯಲ್ಲಿದ್ದ ಮಲ್ಲಿಗೆಯ ನೀಡಂಬಾ 3 ಇಂತು ಬೇಡುವೆ ನಿನ್ನ ಸಂಪಿಗೆ ಮುಡಿಮ್ಯಾಲಿ- ದ್ದಂಥ ಕುಸುಮದೊಳು ಶಾವಂತಿಗೆ ಸರವ 4 ಭೀಮೇಶಕೃಷ್ಣನ ನಿಜ ಪಾದಭಜಕಳೆ ನೀ ದಯದಿಂದ ಧರ್ಮ ಕಾಮ್ಯಾರ್ಥದ್ವರಗಳ 5
--------------
ಹರಪನಹಳ್ಳಿಭೀಮವ್ವ
ಅಸಿಸ್ಟೆಂಟ್ ಅಮಲ್ದಾರ್ರು ಹೇಳಿಕಳುಹಿಸಿದ್ದಾರೆ ಪ ಬಿಸಿ ನೀರು ನಿನಗಾಗಿ ಹಸನಾದ ಪನ್ನೀರ- ರಿಸಿನ ಕುಂಕುಮ ಕಳಶ ಕನ್ನಡಿಗಳಾ ಶಶಿಮುಖಿಯರೆಲ್ಲರು ತಂದು ಕಾದಿಹೆವಿಲ್ಲಿ ಕುಸುಮಾಸ್ತ್ರ ನಾಟದಲಿ ನಿಶಿ ನಿದ್ರೆ ಇಲ್ಲವೇನೋ 1 ಒಬ್ಬ ಒಡವೆಗಳು ಮತ್ತೊಬ್ಬ ಸೀರೆಗಳು | ಇ ನ್ನೊಬ್ಬ ಪರಿಮಳ ದ್ರವ್ಯ ತಂದು ಕೊಡುವಾ ಹಬ್ಬ ಪ್ರತಿದಿನ ರಾತ್ರಿಯಾಗುತ್ತಲೆ ನಿನಗೆ ನಮ್ಮ ಸುಬ್ಬ ಪೋಲೀಸನವರಿಂದ ಬಿಡಿಸಲಿಲ್ಲವೆ 2 ಹೊನ್ನು ಹಣಗಳಿಗೇನು ಕಡಿಮೆಯಿಲ್ಲ ಇನ್ನಾದರು ಸ್ಮರಿಸಿ ಕಣ್ದೆರೆದು ನೋಡೆ 3
--------------
ಗುರುರಾಮವಿಠಲ
ಅಸುರಾಂತಕನರಸಿಯೆ ನೀಬೇಗ ಪ ಕುಸುಮಾಕ್ಷತೆ ಲಾಜಗಳಿಂದಲಿ ಮೇ- ಲೆ ಸುರಾರ್ಚೆಲ್ಲಿ ಪ್ರಾರ್ಥಿಸುವರು ನಿನ್ನ ಅ.ಪ ಸುರರು ಮೋದದಿಂದ ತಾವು ಪೊಗಳುತಿಪ್ಪರು ಪಾದನೂಪುರವಲುಗದಂತೆ ನೀ ಸಂ- ಮೋದವ ಬೀರುತ್ತ ಸುಜನರಿಗೆಲ್ಲ 1 ಗಿರಿಜಾವಾಣೀಯಾರ್ಕರವ ಕೊಡಲು ಅರುಂಧತಿ ಮುಖರೆಚ್ಚರಿಕೆ ಪೇಳಲು ಕರುಣಾರಸವ ಸುರಿಸುತ್ತ ನೀ ಭ- ಕ್ತರು ಬೇಡಿದಿಷ್ಟಾವರವ ನೀಡಲು2 ಇಂದಿರೆ 3
--------------
ಗುರುರಾಮವಿಠಲ
ಆದಿಯುಗದಿ ಮಹ ಆದಿದೈತೇಯನೊಬ್ಬ ಮೇದಿನಿಯೊಳ್ ಸ್ವರ್ಣಕಶ್ಯಪು ನಾಮದಿ ಸಾಧಿಸಿ ಬಂದವಗೊಬ್ಬ ಸೋದರ ಸ್ವರ್ಣಾಂಬಕನೆನಿಸಿ ಮೇದಿನಿ ಚೋರನಾಗಿ ಹತನಾದನು ಆದಿಶೇಷನೆ ವಿಷ್ಟಕ್ಸೇನ ತಾ- ನಾದ ಪ್ರಹ್ಲಾದ ಪ್ರಾಣಾವೇಶದಿಂದ ಸೋದರ ಜೀವಾಂಶಾಪಾನಾವಿಷ್ಟ ಸ- ಲ್ಹಾದನಾಮಕ ಮಿತ್ರನಾದ ಕ ಹ್ಲಾದ ವ್ಯಾನಾವೇಶದಿಂದ ಮೋದದಿ ಸೋಮಾಂಶೋದಾನಾಯುತ ನು- ಹ್ಲಾದ ನಾಮಕ ಸಂಭೂತನಾದ ಆದರೈವರಾದೈತ್ಯಗೆ ಪುತ್ರರು ಮೇದಿನಿ ಸುರರುದ್ಧಾರಗೋಸುಗ ಆದಿದೈವ ನಾರೇಯಣ ತಾ ನಾದಿಕಾರಣ ವಿಶ್ವಕರ್ತಾ ಮೋದಾನಂದ ಮೂರುತಿ ಸುಗುಣ ಭೋಧಪೊರ್ಣ ಸರ್ವಜ್ಞ ಸ್ವಾತಂತ್ರ ವೇದಪುರುಷಾದಿ ಜಡಾದಿ ಜಗಕೆ ಆಧಾರ ಹರಿ ಎಂಬ ಜ್ಞಾನವ ಭೋದಿಸಿ ಬೊಮ್ಮಮುಖರು ಹರಿ ಪಾದಸೇವಕರೆನುತ ನಿತ್ಯ ವಾದದಿ ವಾದಿಗಳ ಜಯಸಿದರವರ ಪಾದಸೇವಿಸಿ ಕರುಣಾಪಡೆದು ಆದಿ ಗುರು ಜಗನ್ನಾಥವಿಠಲನ್ನ ಆದರದಲಿ ಭಜಿಪೆ ಪರಮ ಸುಖ ರಾಗ :ಕಲ್ಯಾಣಿ ಅಸುರರ ಜನ್ಮದಿ ಪುಟ್ಟಿದ ಇವರಿಗೆ ಶ್ವಸನನ ಆವೇಶ ಸುರರಾವೇಶ ಬಲದಿ ಅಸಮಙÁ್ಞನ ಭಕುತಿ ವಿರಾಗವು ವಸುಧಿಯ ತಳದಿ ದಿನದಿನದಲ್ಲಿ ಪಸರಿಪ ಸೂರ್ಯನ ಪ್ರಭೆಯಂದದಲಿ ಮಿಸುಪದಕಿದೇ ಕಾರಣ ಉಂಟು ಬಿಸಜಾಂಬಕ ಹರಿಪೇಳಿದ ಇವರಿಗೆ ಅಸುರೇಶ ಹಿರಣ್ಯಕಶಿಪುವಿನಲ್ಲಿ ಶಿಶುಭಾವದಿಂದ ಜನಿಸಲು ಪೋಗಿರಿ ಪುಸಿಯಲ್ಲ ಮಚ್ಛಾಪÀ ಅಸುರಭಾವ ಪ್ರಲ್ಹಾದಾದ್ಯ ರಸಮಮಹಿಮರಾಗೀ ಜನಿಸಿರೆಂದು ಉಸುರಿದ ವಾಕ್ಯವು ಪ್ರಮಾಣ ಸಿದ್ಧವೆನ್ನಿ ವ್ಯಸನzಲೈವರು ಹರಿಯನೆ ಮತ್ತೆ ಬೆಸಗೊಂಡರೀಪರಿ ಪರಿಯಾ ಅಸುರನ ಪತ್ನಿಯ ಬಸಿರೊಳು ಪುಟ್ಟುವುದು ವಶವಲ್ಲವೋ ಸ್ವಾಮಿ ಕುಸುಮನಾಭನೆ ನಿನ್ನ ಅಸಮಲೋಕದ ಸುಖ ವಸುಧಿತಳಾದಲ್ಲಿ ಎಸಗದು ಎಸಗದು ಎಂದಿನಕಾಲಕ್ಕೂ ಮುಸುಕುವದಙÁ್ಞನ ದುಃಖದ ಭವದಲ್ಲಿ ಕಸವಿಸಿಗೊಳುತಾ ಙÁ್ಞನವನೀಗಿ ಬಿಸನಿಲಯನೆ ನಿನ್ನ ದರುಶನವಿಲ್ಲದೆ ಅಸುನಿಲ್ಲುವ ಬಗೆ ಯಾವುದು ಪೇಳೋ ಶಶಿಧರವಂದ್ಯ ಗುರುಜಗನ್ನಾಥ ವಿಠಲ ನಮ್ಮ ವ್ಯಸನವನು ಕಳೆದು ಸುಖವನು ಸಲಿಸೋ ರಾಗ - ಕಾಂಭೋದಿ ತಾಳ - ತ್ರಿವಿಡಿ ಭಕುತವಾಕ್ಯವ ಲಾಲಿಸಿ ತಾನಾಗ ಪರಿ ನುಡಿದನು ವಿಕಳ ಪೊಂದದೆ ನೀವು ತ್ವರಿತಾದಿ ಧರೆಯೊಳು ಸಕಲರು ಜನಿಸಲು ಮುಸಕದಙÁ್ಞನ ಲಕುಮಿ ಭೂಮಿಯ ಸಹಿತ ಇರುವೆನು ನಿಮ್ಮೊಳು ನಿತ್ಯ ಪರಿಪರಿ ಮಹಿಮವ ಪ್ರಕಟಮಾಡುವೆ ಮುಖ್ಯಪ್ರಾಣನಿಪ್ಪನು ಸತತ ಕಕುಲಾತಿ ಯಾಕಿನ್ನು ನಡಿರೆಂದು ಹರಿಯೆಂದ ಉಕುತ ವಾಕ್ಯದಲಿಂದ ದಿತಿಜನಲ್ಲಿ ಸುಕೃತಿಗಳೈವರು ಉದಯವೈದಿದರಾಗ ಮುಕುತಿದಾಯಕ ಗುರುಜಗನ್ನಾಥ ವಿಠಲನೆಂಬ ಭಕುತಿ ಪೂರ್ವಕ ಙÁ್ಞನವೃದ್ಧಿಯೈದಿದರು ರಾಗ - ಆರಭಿ ತಾಳ - ಅಟ್ಟ ಪಿರಿಯ ಪ್ರಲ್ಹಾದನ್ನ - ಕರದು ತೊಡೆಯ ಮೇಲೆ ಇರಿಸಿ ಪ್ರೇಮದಿ ನಿಮ್ಮ - ಗುರುವೇನು ಪೇಳ್ಯಾನೆ ಮರಿಯಾದೆ ಎನಮುಂದೆ - ಅರಹು ಎನಲು ಬಾಲ ಕಿರಿನಗೆ ಮುಖದಿಂದ - ಹರಿಯೆ ಸರ್ವೋತ್ತಮ ಹರಬೊಮ್ಮ ಮುಖರೆಲ್ಲ - ಪರಿವಾರಭೂತರು ಅರಿದಿಪ್ಪೆ ಎನ್ನಯ್ಯ ಸರಸಿಜಜಾಂಡಕ್ಕೆ ಅರಸು ತಾನಾಗಿದ್ದು ಇರುವಾದಿ ಚೇತನ ತರುವಾದಿ ಜಡಮಯ ಸರ್ವಸ್ಥಳದಲ್ಲಿ ನಿರುತದಿ ವ್ಯಾಪಿಸಿ ಇರುತಿಹ ಹರಿ ಎಂದು ಅರಿತ ಮಾನವÀÀನಿಗೆ ದೊರೆವೋನು ನಿಶ್ಚಯ ಅರಿತು ಪೇಳಿದ ತನ್ನ ತರಳಾನ ನುಡಿಕೇಳಿ ಭರದಿಂದ ಕಂಬವ ಕರದಿಂದ ಬಡಿಯಾಲು ನರಮೃಗಾಕಾರದಿ ಹೊರಗೆ ಬಂದಾದೈತ್ಯನು ದರವ ಬಗೆದು ಕರುಳಮಾಲೆಯತಾ ಕೊರಳೊಳು ಧರಿಸಿದ ಚರಜನ ಪರಿಪಾಲ ಬಿರುದು ಬೀರಿದ ನಮ್ಮ ಗುರುಜಗನ್ನಾಥವಿಠಲ ಶರಣರ ಮರೆಯನೋ ಧರಿತಳದೊಳಗೆ ರಾಗ :ಇಚ್ಛಾ :ತಾಳ - ಆದಿ ಈ ತೆರ ಪ್ರಹ್ಹಾದ ಹರಿಪಾದವ ಭಜಿಸಿ ಪ್ರೀತಿಯ ಪಡೆದು ಭೂಸುರಗಣಕೆ ಭೂತಳದೊಳಗೆ ಯತಿಗಳ ಕುಲಕೆ ನಾಥನು ವ್ಯಾಸಮುನಿ ಎನಿಸಿ ಮರಳಿ ಖ್ಯಾತ ಶ್ರೀ ರಾಘವೇಂದ್ರನೆಂದೆನಿಸಿ ಪ್ರೀತಿಯಿಂದಲಿ ಭಕ್ತರ ಪೊರೆಯಲು ನೀತಿ ಭಾವದಲಿ ಯತಿಯಾಶ್ರಮ ಪೊಂದಿ ಸೀತಾಪತಿರಾಮ ಯದುನಾಯಕ ಕೃಷ್ಣ ಭೀತಿಹರ ನರಸಿಂಹ ವ್ಯಾಸರ ಭಜಿಸಿ ದೂತರ ಮನೋರಥ ಪೂರ್ತಿಸಿ ಪೊರೆವನು ದಾತಗುರುಜಗನ್ನಾಥ ವಿಠಲನ್ನ ನೀತ ವಿಭೂತಿಯ ಪಡೆದು ನಿರ್ಭೀತನಾಗಿಹನು ಜತೆ ದೂತಜನರ ಮಹಾಪಾತಕ ಹರನೆನ್ನಿ ಪ್ರೀತಗುರುಜಗನ್ನಾಥವಿಠಲನೊಲಿವ ರಾಗ :ಶಂಕರಾಭರಣ :ತಾಳ :ಏಕ
--------------
ಗುರುಜಗನ್ನಾಥದಾಸರು
ಆನಂದತೀರ್ಥರ ಆರಾಧನೆಯಿದು ಆನಂದಪೂರಿತ ಮಹೋತ್ಸವ ಪ ನಾವಿಂದು ನಿರ್ಮಲ ಮಾನಸದಿಂದ ಗೋವಿಂದ ಭಕುತರ ಪೂಜಿಸುವ ಅ.ಪ ಜೀವನ ಚರಿತೆಯ ಕೇಳಿ ಮಹಾತ್ಮರ ಜೀವನ ಮಾದರಿ ಎಮಗಿರಲಿ ಜೀವನದಲಿ ಬೇಸರ ಪಡಬೇಡಿರಿ ಜೀವೋತ್ತಮರೇ ರಕ್ಷಿಸಲಿ 1 ಎಮ್ಮ ಮತಕೆ ಸಮಮತವಿಲ್ಲವು ಪರ ಬೊಮ್ಮನ ಸಮ ದೇವತೆ ಇಲ್ಲ ಎಮ್ಮ ನುಡಿಗೆ ಸಮ ಹಿತನುಡಿಯಿಲ್ಲವು ಹಮ್ಮಿನಲೀಪರಿ ಬೋಧಿಸುವ 2 ನಿನ್ನಯ ವಿಷಯವ ವರ್ಣಿಪುದೆಲ್ಲ ಪ್ರ ಸನ್ನ ಹೃದಯದಲಿ ಧೈರ್ಯದಲಿ ಇನ್ನು ವೀರ ವೈಷ್ಣವನಾಗುವೆ ವೆನ್ನುವ ವಚನ ಕುಸುಮವೆರಚಿ 3
--------------
ವಿದ್ಯಾಪ್ರಸನ್ನತೀರ್ಥರು
ಆರತಿ ಮಾಡೆ ನೀರೆ ಭಾರತಿ- ಗಾರತಿ ಮಾಡೆ ನೀರೆ ಗಾರತಿ ಮಾಡೆ ನೀರೆ ಪ ಅರಸು ಭೀಮರಾಯಗ್ಹೊಂದಿ ಕುಳಿತಿರೆ ಕೃಷ್ಣೆ ಅರಿಷಿಣ ಕುಂಕುಮ ಹಚ್ಚಿ ಹರುಷದಿ ದ್ರೌಪದಿ1 ಸುಂದರ ಭೀಮಸೇನ ತಂದ ಸುಗಂಧ ಕುಸುಮ ಗಂಧ ಪರಿಮಳ ಹಚ್ಚಿ ಮುಡಿಸಿ ಮಲ್ಲಿಗೆ ಕೃಷ್ಣೆ 2 ವಾಸವಾಗಿ ಬೊಮ್ಮಗಟ್ಟಿಲಿ ಕುಳಿತ ಭೀ - ಸತಿ 3
--------------
ಹರಪನಹಳ್ಳಿಭೀಮವ್ವ
ಆಲದೆಲೆಯ ಮ್ಯಾಲೆ ಮಲಗಿದ್ದಾದಿಕೇಶವ(ನ) ನೋಡ ಬನ್ನಿರಾಲದೆಲೆಯ ಮ್ಯಾಲೆ ಕೃಷ್ಣ ಬಾಲರೂಪ ಧರಿಸಿ ಅಂಧಕಾರ ಪ್ರಳಯ ಜಲದ ಒಳಗೊಂದಾಲದೆಲೆÉಯ ಮ್ಯಾಲೆ ಕೃಷ್ಣ ಪ ಪ್ರಳಯ ಕಾಲದಲ್ಲೆ ಹರಿಯು ಸರ್ವ ಜೀವರನೆಲ್ಲ ತನ್ನ ಉದರದೊಳಗಿಂಬಿಟ್ಟುಕೊಂಡು ಛಲವ ಮಾಡದಂತೆ ರಂಗ ಬೆರಳು ಬಾಯೊಳಗಿಟ್ಟು ಚೀಪುತ ಹರಳು ಮಾಣಿಕ್ಯದರಳೆಲೆ ಮಾಗಾಯಿ ಕೌಸ್ತುಭ ಕಟಿಸೂತ್ರ ಕರುಣ ಸಾಗರಗಿನ್ನು ವರ ವೈಕುಂಠವಾಸ ಒಂದಾಲದೆಲೆಯ ಮ್ಯಾಲೆ 1 ಅಷ್ಟು ಜೀವರನೆಲ್ಲ ತನ್ನ ಹೊಟ್ಟೆಯೊಳಗಿಂ ಬಿಟ್ಟು ಕೊಂಡು ಸೃಷ್ಟಿ ಲಯಕೆ ಕರ್ತನಾದ ಶ್ರೇಷ್ಠ ಸುಂದರಾಂಗ ತನ್ಹೆಬ್ಬೆಟ್ಟು ಬಾಯೊಳ ಗಿಟ್ಟು ಚೀಪುತ ವಕ್ಷಸ್ಥಳದಿ ಹೆಚ್ಚಿನ ಶ್ರೀವತ್ಸ ತೋರುತ ಉತ್ತಮ ವೈಜ(ಯಂ)ತಿ ವಜ್ರ ಕೆತ್ತಿದ ಕಿರೀಟ ಲಕ್ಷ್ಮೀಚಿತ್ತ ಚೋರನಾದ ಪರಮಾತ್ಮ ಪರಮ ಹರುಷದಿಂ ದ್ವೊಂದಾಲದೆಲೆಯ ಮ್ಯಾಲೆ 2 ಗಂಧ ಕಸ್ತೂರಿ ಪರಿಮಳ ಸುಗಂಧವಾದ ಕುಸುಮ ಕೆಲದಿ ಹೊಂದಿ ಕಟ್ಟಿದ ತುಳಸಿಮಾಲಿಕಿಂದೆ ಪರಮ ಶೋಭಿತವಾದ ಬಂದಿ ಕಂಕಣ ಬಾಹುಪ್ಪುರಿಗಳು ದುಂಡುಮುತ್ತಿನ ಕೂದಲ ಕಾಂತಿ ಕದಪಿಲೆಸೆಯಲು ಅಂದಿಗೆ ಪಾಗಡ ಗೆಜ್ಜೆ ಚೆಂದವಾದ ನಾದಗಳಿಂದ ಇಂದುಕೋಟಿ ರವಿಯ ತೇಜ ಮಂದಹಾಸ ಮುಖದ ಹರಿ ಒಂದಾಲದೆಲೆಯ ಮ್ಯಾಲೆ 3 ಥಳಥಳಿಸುವಂತ್ಹೊಳೆವೊ ಚಕ್ರ ಧವಳವರಣ ಶಂಖ ಕರದಿ ಹವಳದುಟಿಯು ಹರಿಯ ಪದ್ಮ ದಳಗಳಂತಕ್ಷಿಗಳ ಚೆಲುವ ಅರುಣನಂತೆ ಚರಣ ಕರದಲ್ಲಿ ಒತ್ತುವೊ ಸಿರಿಯ ಪರಮಪುರುಷ ನೋಡಿ ಸರಸದಿ ಜರ ಪೀತಾಂಬರ ನಾಭಿಕಮಲಕ್ಕೊಲೆವೊ ಒಡ್ಯಾಣವನೆ ಇಟ್ಟು ಹಲವು ಸೂರ್ಯರಂತೆ ಲಕ್ಷ್ಮೀರಮಣ ಶ್ಯಾಮವರಣ ಹರಿ ಒಂದಾಲದೆಲೆಯ ಮ್ಯಾಲೆ 4 ಅಳಕÀನಂದನ ಪಿತನು ತಾ ಘ- ನೋದಕÀದೊಳು ತಾ ರಂಗ ಚಾಮರ ಎಣಿಕಿಲ್ಲದೆ ಮಾ ಣಿಕ್ಯದಾಭರಣ ಫಣಿಪಮಂಚಶಯನ ನೀಲ ಕನಕರತ್ನ ಬಿಗಿದ್ಹಾಸಿಕೆಯಲಿ ಪಂಚಶರನ ಜನಕ ಜಗವ ನಿಟ್ಟು ತನ್ನಲ್ಲಿ ಅಳಕಗೂದಲು ಚೆಂಡಿಕೆಲ್ಲೆ ಅರಳುಮಲ್ಲಿಗೆ ಸುತ್ತಿಹರಿಗೆ ಝಳಕು ಮಿಂಚಿನಂತೆ ಜಗಕÉ ಬೆಳಕಿನÀಲಿ ಭೀಮೇಶ ಕೃ ಷ್ಣೊಂದಾಲದೆಲೆಯ ಮ್ಯಾಲೆ 5
--------------
ಹರಪನಹಳ್ಳಿಭೀಮವ್ವ
ಆವರೀತಿಲಿ ಎನ್ನ ಕಾವದೇವರು ನೀನಿ ನ್ನಾವ ದೈವದ ಬಲವು ನಾನೊಲ್ಲೆ ಸ್ವಾಮಿ ಪ ಆವರೀತಿಲಿ ಬಿಡದೆ ನೀ ಎನ್ನ ಕಾಯೊ ಭಕ್ತರ ಜೀವದರಸನೆ ಭಾವಜಪಿತ ನಿನ್ನ ಬಿಟ್ಟ ನ್ನ್ಯಾವ ದೇವರು ಇಲ್ಲ ಎನಗೆ ಅ.ಪ ಕುಸುಮಾಕ್ಷ ತವಧ್ಯಾನ ನಿಶಿದಿವದೊಳು ಬಿಡದೆ ಹಸನಾಗಿ ಭಜಿಪಂಥ ಕುಶಲಮತಿ ನೀಡಿ ಪುಸಿಯ ಸಂಸಾರದ್ವೆಸನವಳುಕಿಸಿ ಅಸಮ ಸಂತಸಸುಖವ ಕರುಣಿಸಿ ಅಸುವುಪೋದರು ಪುಸಿಯನಾಡದ ಸುಶೀಲ ಮನವಿತ್ತು ಪೋಷಿಸಭವ 1 ಬಿಡದೆಕಾಡುವ ಎನ್ನ ಕಡು ಜಡಮತಿಯನ್ನು ಕಡಿದೊಡನೆ ನುಡಿಯಂತೆ ನಡೆಯನೆನ್ನೊಡಲಿಗೆ ಗಡನೆ ಸ್ಥಿರಮಾಡಿ ಎಡರು ತೊಡರಿನ ಜಡರಿನೊಳಗಿಂದ ಕಡೆಗೆ ನಿಲ್ಲಿಸಿ ಒಡೆಯ ನಿನ್ನ ಅಡಿದೃಢವನಿತ್ತು ಪಿಡಿದು ನೀ ಎನ್ನ ಬಿಡದೆ ಸಲಹೊ 2 ರತಿಪತಿಪಿತ ನೀನೆ ಗತಿಯೆಂಬ ಸಿದ್ಧಾಂತ ನುತಿಯ ಮಂತ್ರವನೆನಗೆ ಹಿತದಿಂ ಪಾಲಿಸು ಸತತ ನಿನ್ನನು ಸ್ತುತಿಪ ಭಕ್ತರ ಹಿತದ ದರುಶನ ಪ್ರಥಮವಿತ್ತೆನ್ನ ಗತಿಸದಂಥ ನಿಜಸ್ಥಿತಿಯ ಸಂಪದ ವಿತ್ತು ರಕ್ಷಿಸೋ ಶ್ರೀರಾಮ ಪ್ರಭುವೆ 3
--------------
ರಾಮದಾಸರು
ಇಂತುಯನ್ನಾ ಬಯಕೆ ಕೈಗೂಡಿಸೋ ದೇವಾ ಅಂತರ, ಗಲಿದೇ ಹಂಬಲಿಸುತಿದೇ ಜೀವಾ ಪ ನಿನ್ನ ಸಿರಿಪದಾ ಸಖಚಂದಿರದಲಿ ಎನ್ನ ಕಂಗಳು ಚಕೋರಾಗಿ ನೋಡಲಿ ನಿನ್ನ ಕಥೆಯಾ ಘನ ಗರ್ಜನೆಯಲಿ ಘನ್ನ ಶ್ರವಣ ಮಯವಾಗಿ ನಲಿಯಲಿ 1 ನಿನ್ನ ನಾಮಾ ಮೃತ ಫಲ ಸೇವಿಸಲಿ ಎನ್ನ ನಾಲಿಗೆ ಶುಕವಾಗಿರಲಿ ನಿನ್ನ ಚರಣಾರ್ಪಿತ ತುಲಸಿ ಕುಸುಮದಲಿ ಎನ್ನ ಪ್ರಾಣವು ಮಧುಪಾಗಿ ಕೂಡಲಿ 2 ನಿನ್ನ ಮನೆಯಾಶೆಯಾ ಊಳಿಗದಲಿ ಎನ್ನಂಗ ನಿರುತ ಮಾರಿಸಿ ಕೊಳ್ಳಲಿ ಘನ್ನ ಗರು ಮಹಿಪತಿ ಪ್ರಭು ಯಚ್ಚರದಲಿ ನಿನ್ನಂಕಿತದಾ ಜನ್ಮಗಳೇ ಬರಲಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಇಂದಿರೆ ಇಂದೀವರಾಕ್ಷಿ- ಸುಂದರಿ ಅರ- ವಿಂದ ಮಂದಿರೆ ಪೂರ್ಣೆ | ಪ ಇಂದುವದನೆ ಅಮರೇಂದ್ರ ವಂದಿತೆ | ಸಿಂಧುಸುತೆ ಆನಂದ ಫಲದೆ ಅಪ ರಾರರಮಣನ ಸೋಲಿಪ ನಖದಕಾಂತಿ | ಚಾರು ಚರಣತಳ ವಾರಿಜಾಂಕುಶ ಧ್ವಜ | ವಾರಣ ಕನಕ ಮಂಗಳರೇಖೆವೊಪ್ಪೆ | ನೂ- ಪುರ ಕಡಗ ಪೆಂಡ್ಯೆ ಪರಡೆ ಜಾನು ಜಂಘೆ | ಕಟಿ ನಾಭಿ ಉದರ ತ್ರಿವಳಿ | ಧಾರ ಶೋಭನವಾದ ಹೊನ್ನುಡಿ | ಧಾರ ಕಿಂಕಿಣಿ ತೋರಮುತ್ತಿನ- ಹಾರ ಉರವಿಸ್ತಾರ ಗುಣವಂತೆ 1 ಕಂಬು - ಗ್ರೀವ ಸರಿಗೆ ದಿವ್ಯಚಂದನ ಲೇಪಿಸಿ | ಕಂಚುಕ ಹಸ್ತಕಡಗ ಮುದ್ರೆ ಪ್ರವಳಮಣಿಯು ಕೇಯೂರ ದಂಡೆಯ ಸರ | ಬೇವಿನೆಸಳಂತೆ ಪುಬ್ಬು ಢಾಳಿಪ | ತಾವರೆಯ ಫಣೆಯೂ ಸಂಪಿಗೆ | ನಾಸಿಕ ವೇಣಿ | ಹಾವಿನಂದದಿ ಒಪ್ಪುತಿರೆ ದೇವಿ 2 ವಾಲೆಮೂಗುತಿ ಹೊನ್ನಹೂವು ತೂಗುವ ತುಂಬು | ಕದಪು ಮುಂಗೂದಲು | ಮೇಲೆ ರ್ಯಾಕಟೆ ಚೌರಿ ಮುಡಿದ ಕುಸುಮವು | ಸಾಲು ಮುತ್ತಿನ ಜಾಳಿಗೆ ಗೊಂಡ್ಯ ಶಿರದಲ್ಲಿ | ಪಾಲ ಸಾಗರ ಶಾಯಿ ವಿಜಯವಿ- ಠ್ಠಲರೇಯನ ಉತ್ಸಾಹದಲಿ | ತೋಳಿನಲ್ಲಿ ಬಿಗಿದಪ್ಪಿ ಪವಳಿಪ | ಶ್ರೀ ಲಕುಮಿ ತ್ರೈಲೋಕ್ಯ ಮಾತೆ 3
--------------
ವಿಜಯದಾಸ