ಒಟ್ಟು 34 ಕಡೆಗಳಲ್ಲಿ , 18 ದಾಸರು , 32 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭೂಷಣವಿದು ಭೂಷಣ ಕೇಶವಧ್ಯಾನ ಪಭೂಷಣವದನಾ ವಿಭೀಷಣ ಧರಿಸುತೆನಾಶರಹಿತ ಪೌರುಷವಾಂತ ಧರಣಿಯೊಳು ಅ.ಪಶೇಷಶಯನನಾಮ ಭೂಷಣದೋಷರಹಿತ ಶಿರೋಧಿ ಭೂಷಣಶ್ರೀಶ ವಿಠ್ಠಲನಾಮ ಭೂಷಣಶೇಷಫಣಿಮಣಿಧೃತ ಭೂಷಣ1 ಕರಯುಗಗಳ ಭೂಷಣ ಹರಿಪೂಜೆಯುಶಿರಕೆ ವಂದನೆ ಭೂಷಣಹರಿಪಾದದರ್ಶನ ವರನೇತ್ರಭೂಷಣವರಕ್ಷೇತ್ರಸಂಚಾರ ಚರಣಕೆ ಭೂಷಣ 2 ಹರಿಯ ಚರಿತೆಯು ಕರ್ಣಭೂಷಣಹರಿತುಳಸಿ ನಾಸಿಕಕೆ ಭೂಷಣಹರಿಯ ಕೊಂಡಾಡುವುದೆ ರಸನೆಗೆ ಭೂಷಣಹರಿಯ ಭಜನೆಯು [ಜಿಹ್ವಾಭೂಷಣ] 3 ಧರೆಯೊಳು ಜನಿಸಿದ ಮಾನವರಿಗೆಹರಿನಾಮವೆ ಭೂಷಣಾಸಿರಿರಮಣನಾಮ ಕಿರೀಟವಯ್ಯವರದನೆಂಬುವನಾಮ ವರಕರ್ಣಾಭರಣವು 4 ಗಂಗಾಜನಕನೆಂಬ ನಾಮವೆ ಅಂತರಂಗಕೆ ಮಣಿಭೂಷಣಾರಂಗನೆಂಬುವ ನಾಮ ಹಸ್ತಸಿಂಗರದ ಪೀತಾಂಬರವು ತಾಮಾಂಗಿರೀಶನ ನಾಮ ಮಂಗಳಕರ ಭೂಷಣವೈ 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಮಂಗಳಾರತಿ ಎತ್ತಿರೆಲ್ಲ ಮಹಾತ್ಮರೆಲ್ಲಮಂಗಳಾರತಿ ಎತ್ತಿರೆಲ್ಲಸಂಗಾತೀತ ಚಿದಾನಂದಾವಧೂತಾಂಗ ಶ್ರೀಬಗಳಾಮುಖಿ ದೇವಿಗೆ ಪ ಕರದೊಳು ಚೂಡೆ ಕಂಕಣವಿಟ್ಟುಕೊರಳೊಳು ಸರಿಗೆಯ ಧರಿಸಿಶಿರದಿ ರತ್ನದ ಕಿರೀಟವಿಟ್ಟು ಸರ್ವಾಭರಣವಧರಿಸಿ ದುರುಳರ ದುಷ್ಟರ ಛೇಧಿಸಿ ಭ-ಕ್ತರ ಪಾಲಿಪ ಬಗಳಾಮುಖಿಗೆ 1 ನಿತ್ಯ ನಿರ್ಗುಣ ನಿರಾಮಯಗೆ ನಿಂದಕವಿದಾರಣೆಗೆಭಕ್ತ ವತ್ಸಲೆ ಭುವನೇಶ್ವರಿ ಮಾತೆಗೆಭಕ್ತಾಧಾರೆಗೆ ಪ್ರತ್ಯಗಾತ್ಮೆಗೆ ಪರಬ್ರಹ್ಮ ರೂಪಿಣಿಭಕ್ತ ಪ್ರಾಣಿಗೆ ಬಗಳಾಮುಖಿಗೆ 2 ಅದ್ವಯ ಆಗಮಗೋಚರಗೆ ಅಚಲಾನಂದಳಿಗೆ ಶುದ್ಧಸಂವಿಜ್ಯೋತಿರ್ಮಯಳಿಗೆಸರ್ವಸಾಕ್ಷಿಗೆ ಸದ್ಗುರು ಚಿದಾನಂದಾವಧೂತಗೆ ಸಿದ್ಧಪರ್ವತವಾಸಿ ಬಗಳಾಮುಖಿಗೆ 3
--------------
ಚಿದಾನಂದ ಅವಧೂತರು
ಮುಳಬಾಗಲುರಂಗಸ್ವಾ'ುೀ ಯಮ್ಮನುಳುಹಬೇಕು ಭಕ್ತಪ್ರೇ'ುೀ ಪನಳಿತೋಳು ಕಳೆಮುಖ ತಲೆಗೆ ಕಿರೀಟವುನಳಿನಲೋಚನಮೂರ್ತಿ ಕಳೆುಂದ ಬೆಳಗುವೆಅ.ಪಅದ್ವೈತ ಶಾಸ್ತ್ರಾನುಭವರು ನಮ್ಮಅಣ್ಣಯ್ಯಸ್ವಾ'ುಯ ಸುತರೂಸಾಧ್ವೀಗುರ್ರಮಗರ್ಭಾಂಬುಧಿ ಶಶಿಯಾಗಿಸದ್ವಿಲಾಸದೊಳು ಸಂಜನಿಸಿದ ಚಲುವ 1ಕೃತ್ತಿಕಾನಕ್ಷತ್ರ ಪ್ರಥಮಾ ಪಾದತಿಥಿಯು ದ್ವಾದಶಿ 'ಭವನಾಮಾ'ತವಾದ ಧನುರ್ಮಾಸ ಸ್ಥಿರವಾರದುದಯದೊಳ್‍ಪೃಥಿ'ೀಪಥನವಾದ ಪರಮಪುರುಷಮೂರ್ತಿ 2ಸದ್ಗುಣದಾಟಿನೋಟಗಳೂ ಶಾಸ್ತ್ರ'ದ್ಯ ಸಂಯೋಗಪಾಠಗಳೂ ಸದ್‍ವೃದ್ಧಿ ಸ'ಯ ವ್ಯಾಪಾರ ವರ್ಜಿತಮಾಡಿಶುದ್ಧವೈಷ್ಣವ ತುಲಸಿರಾಮರ ಭಜಿಸುವ 3ಹರಸೀ ವಾಗೀಶಕಿರೀಟಾ ಗುರುಪರಂಪರೆ ಕಥೆನುಡಿದಾಟ ಹರುಷದಿ ಮೆಚ್ಚಿಸಿ ಧರಿಸಿ ಕಿರೀಟಾ ನಿರುಪಮ ಪರತತ್ವದೊಳಗೆ 'ಶೇಷಾ 4ಪರಕಾಲಮಠಕಾಗಾ'ುಸಿದೇ ಜನರತರುಣೋಪಾಯಗಳ ಮಾಡಿಸಿದೇತಿರುಮಂತ್ರಸಂಸ್ಕಾರ ಚರಮಾರ್ಥದೊರಕಿಸಿಪರಮಪಾವನರಾಗಿ ಮಾಡುತಲಿರುತಿಹ 5ವರಯತಿಗುರುಗಳ ಭಾಷಾ ಪೂರ್ಣಪರತತ್ವಬೋಧೆ ಗುಣಭೂಷಪರಮಾನುಭವಜ್ಞಾನ ಅರು' ಭಕ್ತರನೆಲ್ಲ ಪರಲೋಕಸಾಧನ ಅರಿವು ತೋರಿಸುವಂಥಾ 6ಚನ್ನಪಟ್ಣಾದಿರಾಮಕೋಟಿ ಅಲ್ಲಿಜನಕೆನೀ ತುಂಬಿದೆ ನಾಟಿಮುನ್ನುಮಾಡಿದ ಪಾಪವೆಲ್ಲವು ಪರಿಹಾರವುನ್ನತಮಾರ್ಗವ ತೋರಿದ ಗುರುದೇವ 7ರಾಮಕೃಷ್ಣೋತ್ಸವಗಳನೂ ಬಹುಪ್ರೇಮದಿನಡೆಸಿದಾದರನೂಆಮಹಾ ಕಾರ್ಯಕಾತುರದುರಂಧರನೂುೀಮ'ಯೊಳು ಪ್ರಖ್ಯಾತನಾಗಿಹನೂ 8ಪುರಪುರಗ್ರಾಮಗಳಲ್ಲಿ ಗುರು ತಿರುನಕ್ಷತ್ರೋತ್ಸವವಲ್ಲಿಪರಮವೈಭವದಿಂದ ಸ್ಥಿರವಾಗಿ ನಡೆಯಲುಹರುಷದಿ ಸೌಲಭ್ಯ ದೊರಿಕಿಸಿ ಇರುವಂಥಾ 9ಪ್ರತಿವರ್ಷ ಧನುರ್ಮಾಸ ಭಜನೇ ಒಳ್ಳೆಶೃತಿಮೃದಂಗವು ತಾಳರಚನೇಸತತವು ಹರಿಕಥೆ ತೀರ್ಥಪ್ರಸಾದವು'ತಕರಗುರುಸೇವಾ ದುರಂಧರಬಿರುದುಳ್ಳ 10ಭರತಪುರೀವಾಸಶ್ರೇಷ್ಟಾ ಗುರುವರತುಲಸಿರಾಮ ಪ್ರತಿಷ್ಠಾಪರಿಪರಿತತ್ಸೇವಾನಿರತ ಸಂತುಷ್ಟಾಗುರುಪಾದಸರಸಿಜ ಭೃಂಗಾವೆ ಸ್ವಷ್ಟಾ 11ಅಪರೋಕ್ಷಜ್ಞಾನ ಸಂಪೂರ್ಣ ಜನ್ಮಸಫಲಮಾರ್ಗದಲ್ಲಿ ಉತ್ತೀರ್ಣಾ ಅಪರಾಧಗಳನು ಮನ್ನಿಸಿ ಶ್ರಿತಜನರನ್ನುಸಫಲಗೊಳಿಸಿ ಜನ್ಮಸಾರ್ಥಕಪಡಿಸುವ 12ಪತಿತಪಾಮರರಿಗೆಯೆಲ್ಲಾಪ್ರತಿಫಲ'ಲ್ಲಾದುಪದೇಶ ಬಲ್ಲಾ'ತಕರವಾಗಿ ತೋರ್ಪುದು ಶಿಷ್ಯಜನಕೆಲ್ಲಾ ಸತತವು ತವಪಾದ ಗತಿಮೋಕ್ಷದಾಯಕ 13ಜ್ಞಾನಭಕ್ತಿಯು ವೈರಾಗ್ಯ ಸುಜ್ಞಾನದಿ ತುಳುಕುವ ಭಾಗ್ಯಮಾನವ ಜನ್ಮದಿ ಅವತರಿಸಿರುತಿಹದೀನರ ಮುಕ್ತಿಗೆ ಕಾರಣವಾಗಿಹ 14ಅಂಗ ದ್ವಾದಶನಾಮಧಾರಾ ಬಹುಶೃಂಗಾರತರ ಮಕುಟಾಂಬರಾರಂಗುಮಂಟಪದಿ ಲಂಘಿಸಿ ರಾಗ ಪಾಡುತ್ತಮಂಗಳಕರ ತುಲಸಿನಳಿನಾಕ್ಷಹಾರುಳ್ಳ 15ಗೃಹಮಣಿ ಸುಬ್ಬಾಂಬನವರೂ ನಿಮ್ಮಮಹದಾಂಶ ಸುಗುಣವಂತೆಯರುಸಹಚರಿಸುತ ಪುರಗ್ರಾಮ ಮಾದರಿಯಾಗಿಸಹಪತ್ನಿಸ'ತ ಭಕ್ತರನು ಪಾಲಿಸತಿರ್ಪಾ 16ದಿನಚರಿಬರುವ ದಾಸರನೂ ಮನದನುವಾರಿತಾನ್ನದಾನವನೂಮನದೊಳು ಭಕ್ತರವೊಡಲ ಪರೀಕ್ಷಿಸಿಘನವಾದ ಮೋಕ್ಷಾರ್ಹವಾದನರ ಕೈಪಿಡಿದ 17ಅಂಕಿತಮಾಡದೆ ುಹೆನೂ ಚಕ್ರಾಂಕಿತ 'ಲ್ಲದ್ಯೋಚಿಪೆನೂ ಕಿಂಕರನಾಗಿ ಬೇಡುವೆ ಪಾದವನೂಅಂಕಿತಕನುವiತಿ ಆಗಹೊಂದುವೆನೂ 18ಸೋಮೆಗೌಡನ ಪುರವಾಸಾ ರಂಗಸ್ವಾ'ುದಾಸರ ದಾಸದಾಸಪ್ರೇಮಭೈರವಗೌಡನೊಳಗೆ ತೋರಿಸಬೇಕು ಸ್ವಾ'ುನಿನ್ನಾಜ್ಞೆಗೇ ಬಾಗಿದಂಕಿತ'ದು19
--------------
ಮಳಿಗೆ ರಂಗಸ್ವಾಮಿದಾಸರು
ರುದ್ರದೇವರು ಪರಿ ವೈರಾಗ್ಯವು ವೀರ ವೈಷ್ಣವ ಭಕ್ತಾಗ್ರಣಿಯೆ ಪ ಮಾರಹರನೆ ಮನ್ಮಥನ ವೈರಿಯೆ ಮನ- ಸಾರ ಶ್ರೀರಾಮ ನಾಮವ ಜಪಿಸುವದಿದು ಅ,ಪ ಮುತ್ತು ಮಾಣಿಕ್ಯದ ಕಿರೀಟವು ಧರಿಸದೆ ನೆತ್ತಿಲಿ ಕೆಂಜೆಡೆ ಸುತ್ತಿಹುದು ಹಸ್ತದಿ ಶಂಖು ಚಕ್ರಗದೆ ಪದುಮವು ಬಿಟ್ಟು ಉತ್ತಮ ಡಮರು ತ್ರಿಶೂಲ ಪಿಡಿವುದಿದು 1 ನೊಸಲಲಿ ಕಸ್ತೂರಿ ತಿಲಕವನಿಡದಲೆ ಭಸುಮವ ಲೇಪಿಸುವುದು ತರವೆ ಕುಸುಮಲೋಚನೆ ಪ್ರಿಯ ಸಖನಾಗಿರುತಿರೆ ಎಸೆವ ಕಪಾಲ ಪಿಡಿದು ಬೇಡುವದಿದು 2 ದುಂಡು ಮುತ್ತಿನ ಹಾರ ಪದಕಗಳಿರುತಿರೆ ರುಂಡಮಾಲೆಯ ಕೊರಳೊಳು ತರವೆ ತಂಡ ತಂಡ ಪರಮಾನ್ನ ಭಕ್ಷಗಳಿರೆ ಉಂಡು ತೇಗದೇ ವಿಷಪಾನ ಮಾಡುವದಿದು3 ಭರ್ಜರಿ ಪೀತಾಂಬರ ಉಡುವುದು ಬಿಟ್ಟು ಕರಿಯ ಚರ್ಮನುಡುವುದು ತರವೆ ಪರಿ ರತ್ನಾಭರಣಗಳಿರುತಿರೆ ಉರಗಗಳಿಂದಲಂಕೃತನಾಗಿರುವದು 4 ಭೃತ್ಯರು ಸೇವೆಗೆ ಬೇಕಾದವರಿರೆ ಮತ್ತೆ ಪಿಶಾಚ ಗಣಗಳೇತಕೆ ಹಸ್ತಿ ತುರಗ ಪಲ್ಲಕ್ಕಿ ಪುಷ್ಪಕವಿರೆ ಎತ್ತನೇರಿ ಚರಿಸುವುದುಚಿತವೆ ಶಂಭೊ 5 ಸಿರದಲಿ ಗಂಗೆಯು ಸ್ಥಿರವಾಗಿರುತಿರೆ ಪರ್ವತರಾಜಕುವರಿಯೇತಕೆ ಅರಮನೆ ವಾಸಕೆ ಯೋಗ್ಯವಾಗಿರುತಿರೆ ಗಿರಿ ಕೈಲಾಸ ಪರ್ವತದಿ ವಾಸಿಸುವದು 6 ಭಕ್ತರು ಭಕುತಿಲಿ ಪಾಡಿ ಕೊಂಡಾಡಲು ನೃತ್ಯವ ಮಾಡುತ ಹರುಷದಲಿ ಕರ್ತೃ ಶ್ರೀ ಕಮಲನಾಭ ವಿಠ್ಠಲನೆಂದು ಪತ್ನಿಗೆ ಉಪದೇಶ ಮಾಡುವದಿದು 7
--------------
ನಿಡಗುರುಕಿ ಜೀವೂಬಾಯಿ
ಲವಕುಶರ ಹಾಡು ಹರಿಹರ ಬ್ರಹ್ಮ ತ್ರಿಮೂರ್ತಿಗಳ ಬಲಗೊಂಡು *ಗುರುಹಿರಿಯರ ಪಾದಕ್ಕೆರಗೀ | ಅಜನ ಪಟ್ಟದ ಶ್ರೀ ಸರಸ್ವತಿಯನೆ ಬಲಗೊಂಡು ತೊಡಗುವೆ ರಾಮರ ಕಥೆಯಾ 1 ಬಣ್ಣದ ಅಕ್ಷತೆ ಕಣ್ಣು ತುಂಬೆ ಪುಷ್ಪ ಸು ವರ್ಣ ದಕ್ಷಿಣೆ ತಾಂಬೂಲಾ | ಉಮ್ಮಿಯ ಪುತ್ರ ಗಣೇಶಗೆ ಅರ್ಪಿಸಿ ವರ್ಣಿಪೆ ಲವಕುಶರ ಕಥೆಯಾ 2 ಕುಲದ ಸ್ವಾಮಿ ಕದ್ರಿ ನರಸಿಂಹನ ಬಲಗೊಂಡು | ಗುರು ಮಧ್ವರಾಯರ ನೆನೆದು | ಮನದಲ್ಲಿ ವಿಷ್ಣು ದೇವತೆಗಳ ಬಲಗೊಂಡು ತೊಡಗುವೆ ರಾಮರ ಕಥೆಯಾ 3 ವೇದಪಾರಾಯಣ ಅಂತ್ಯದ ಪೀಠಕ ಮಾಧವ ಹರಿ ಸುಗೋತ್ರ | ವೇದ ಮೂರುತಿ ಕೊಂಡಪ್ಪನ ಪುತ್ರಿಕೆಗೆ (?) ಹೇಳಿದಳುಹರಿನಾಮ ಕಥೆಯಾ 4 ಯಗ್ನ ಸಂತತಿಯೂ ಪೀಠಕವೂ | ಅಜ್ಞಾನಿ ಮೂಢಜೀವರಿಗೆ 5 ಹರುವುಳ್ಳ ನಿರಯಾಗಿಗಳೂ | ಹರವುಳ್ಳ ಕೈ(?)ಮುನಿವಳ್ಳೇರು ಜಾಣರು ತಿಳಿವೂದು ಅರ್ಥಸಂದೇಶ 6 ನಾಡನ ಕಥೆಯಲ್ಲ ಬೇಡುಂಬ ಪದನಲ್ಲ ನಾಡೊಳಗೆ ಹರಿನಾಮ ಕೇಳಿದ ಜನರಿಗೆ | ವಿಲ್ಲವಾಗುವುದು 7 ಪ್ರಚಂಡರು ರಾಮಲಕ್ಷ್ಮಣರು | ಇತ್ತಬೇಟೆಯನಾಡುವ ಕ್ರಮಗಳ ಚಂದವಿನ್ನೆಂತು ವರ್ಣಿಸಲೆ 8 ತಾಂಬೂಲ ಶ್ರೀಮೊಗದಿಂದೆ | ಇಂದುವದನೆಯ ಬಿಗಿದಪ್ಪಿ ಮುದ್ದಾಡಿದ ಇಂದುವದನೆ ಗರ್ಭವೆಂದ 9 ನಳಿನನಾಭನು ತನ್ನ ಲಲನೇಯ ಮುಖನೋಡಿ ಲಲನೆ ನಿನ್ನ ಪ್ರೇಮವೇನೆ | ಮುನಿಯು ಆಮುನಿಗಳು ಕೂಡಿದ ನಂತ್ರ ವನಭೋಜನ ತನಗೆಂದ್ಲೂ 10 ಹಲವು ಕಾಲವು ಸೀತೆ ಅಸುರರ ವಡನಾಡಿ ನೆನದಳು ಋಷಿಗಳಾಶ್ರಮವಾ | ಹಸನವಲ್ಲವು ಸೀತೆ ಇನ್ನು ನೀನುಳಿವದು ಋಷಿಗಳಾಶ್ರಮಕೆ ಹೋಗೆಂದಾ 11 ಅಯೋಧ್ಯಾಪುರದ ವಾನರರೆಲ್ಲಾ ಬಿಟ್ಟು ಕೈಹಿಡಿದ ಪುರುಷನ ಬಿಟ್ಟು | ನೆನದಾಳು ಋಷಿಗಳಾಶ್ರಮವ 12 ಅಂದು ಶ್ರೀರಾಮರು ಬೇಟೆಗ್ಹೋದೇವೆಂದು ಇಂದು ಡಂಗುರವ ಸಾರಿದರೂ | ಒಂದು ಗಳಿಗೆ ಮುಹೂರ್ತತಡೆಯಲಾಗದು ಎಂದು ಮಂದಿ ಮಕ್ಕಳ ಕರಸಿದರೂ 13 ಬಂದರು ಮಂತ್ರಿ ಮಾನ್ಯರು ಪ್ರಹಸ್ತರು ಬಂದರು ಪ್ರಧಾನೇರು | ಬಂದರು ರವಿಗುರಿನವಿಗುರಿಕಾರರು (?) ಬಂದರು ವಾಲಗದೋರೊಪ್ಪಿದರು 14 ಆಟಪಾಟದೋರು ನೋಟಕ್ಕೆ ದಾರಾರು ಸೂತ್ರದವರು ಸುವ್ವಿಯವರು | ಪಾಟಕ್ಕೆ ದಾರಾರು ಪೊಗಳುವ ಭಂಟರು ರಘು ನಾಥನೋಲಗದಲೊಪ್ಪಿದರೂ 15 ಹೊನ್ನು ಹಲಗೆಯವರು ಬೆನ್ನಬತ್ತಲೆಯವರು ಚಿನ್ನಬಿನ್ನಾಣನಾಯಕರೂ | ಚೆನ್ನಿಗರಾಮರ ಪೊಗಳುವ ಭಂಟರು ಬಿನ್ನಾಣದಿಂದೊಪ್ಪುತಿಹರೂ 16 ಪಟ್ಟಾವಳಿ ಹೊಸಧೋತರವು ಇಟ್ಟರು ಆಭರಣವನ್ನೂ | ಮಕರಕುಂಡಲ ಕಿರೀಟವೂ ಇಟ್ಟರು ನೊಸಲ ಕಸ್ತುರಿಯಾ 17 ಹಾರಮಾಣಿಕನಿಟ್ಟು ಕಾಲುಪೆಂಡೆಯನಿಟ್ಟು ನ್ಯಾವಳದ ಉಡುದಾರನಿಟ್ಟು ಸೂರ್ಯನ ಕುಲದ ಕುಮಾರರು ನಾಲ್ವರು ಏರಿದರು ಹೊನ್ನ ರಥವಾ 18 ವಾಯುವೇಗ ಮನೋವೇಗವೆಂಬೋ ರಥ ಏರಿದರೆ ರಾಮಲಕ್ಷ್ಮಣರೂ | ಸೂರ್ಯ ತಾನೆ ರಥವ ನಡೆಸೆ ಕೂಡ ಬೇಟೆಗೆ ತೆರಳಿದರು 19 ಅತ್ತಿ ಆಲದ ಮರ ಸುತ್ತ ಹೆದ್ದುಮ್ಮರಿ ಉತ್ತತ್ತಿ ಬೆಳಲು ದಾಳಿಂಬ ಉತ್ತಮ ಅಶ್ವತ್ಥ ಇಪ್ಪಿಯ ವನಗಳು ವಿಸ್ತರವನವೊಪ್ಪುತಿಹವೂ 20 ನಾರಂಗ ಬೆರಸಿದ ಕಿತ್ತಳಿ ಹರಿಸಿಣದ ತೋಪು ಎಲಿತ್ವಾಟ ಅರಸುಮಕ್ಕಳು ರಾಮಲಕ್ಷ್ಮಣರೆಲ್ಲರು ಬೆರಸಿ ಬೇಟೆಯ ನಾಡುತಿಹರೂ 21 ಯಾರಾಡಿಗಿಡಗಳು ಕ್ಯಾದೀಗಿವನಗಳು ನಾಗಸಂಪಿಗೆಯ ತೋಪುಗಳು | ಜೋಡೀಲಿ ಭರತ ಶತ್ರುಘ್ನರೆಲ್ಲರು ಕಾಲಾಳು ಬೇಟೆನಾಡಿದರೂ 22 ಉದ್ದಂಡ ಕೇಕಾಪಕ್ಷಿ ಚಂದಾದ ಬಕನ ಪಕ್ಷಿಗಳೂ | ಅಂದಾದ ಆಲಿವಾಣ ಆಲಹಕ್ಕಿಯು ರಾಮ ಚಂದ್ರನು ಬೇಟೆಯಾಡಿದನು 23 ಬೇಟೆನಾಡಿ ಬಂದು ನಿಂತಾರು ನೆರಳಲ್ಲಿ ಒಂದುಗಳಿಗೆ ಶ್ರಮವ ಕಳೆದು ನಂದನವನದಲ್ಲಿ ತನಿಹಣ್ಣು ಮೆಲುವೋರು ಗಂಗೆಯ ಉದಕ ಕುಡಿಯುವೋರು 24 ನಳಿನನಾಭನು ತಾನು ಬಳಲಿ ಬೇಟೆಯನಾಡಿ ನೆರಳಲ್ಲಿ ತುರಗ ಮೇಯಿಸಿದ ಕಿರಿಯಲಕ್ಷ್ಮಣ ದೇವ ತೊಡೆಯನ್ನೆ ಕೊಡು ಎಂದು ಮಲಗೀದ ಒಂದು ನಿಮಿಷವನೂ 25 ಮುಂದಿನ ಆಗೆಂತ್ರವ(?) ಕಂಡನು ಕನಸಿನಲಿ ರಾಮ ಕಂಗೆಟ್ಟು ಮೈಮುರಿದೆದ್ದಾ | ಕಂದ ಲಕ್ಷ್ಮಣ ಕೇಳೊ ಇಂದೆನ್ನ ಸೊಪ್ನದಲಿ ಬಂದಿಹಳೊಬ್ಬ ತಾಟಕಿಯೂ 26 ಇಂದುವದನೆಮುಡಿ ಪಿಡಿದಳೆವೊ ದುಕಂಡೆ ತುಂಡರಾವಣ ಕುಯೋದು ಕಂಡೆ | ಇಂದು ನೀ ಸೀತೆಯ ಕರೆದೊಯಿದು ಕಾನನದಿ ದಿಂಜಾರಿಳಿಸೋದು ಕಂಡೆ 27 ಮುನ್ನ ಅರಿಯದೆ ನಾವು ಬಂದೆವೋ ಲಕ್ಷ್ಮಣ ಇನ್ನು ಸೀತೆಗೆ ಜಯವಿಲ್ಲಾ | ಅಂದು ಶ್ರೀರಾಮರಾ ಬೇಟೆ ಮೂಲಕದಿಂದೆ ಬಂದಾಳು ಮಾಯದ ಗರತಿ | 28 ಬಂದು ಅಯೋಧ್ಯಾಪುರದ ಬೀದಿಯವಳಗೆ ಚಂದದಿ ಕುಣಿದಾಡುತಿಹಳು | ಅಂದು ಶ್ರೀ ರಾಮರ ಅರಮನೆ ಬಾಗಿಲಿಗೆ ಚಂದುಳ್ಳ ದ್ವಾರಪಾಲಕರೂ 29 ಬಂದು ಅಸುರೆ ನಿನ್ನ ಬಿಡವಲ್ಲೆನೆಂದರೆ ಬಂದಡರಿದಳರಮನೆಗೆ ಕಂಡು ಜಾನಕಿ ತಾನು ಕರಸಿದಳಾಗಲೆ ಬಂದಳು ಮಾಯದ ಗರತಿ 30 ಬಂದು ಪಾದಕ್ಕೆರಗಿ ಕೈಮುಗಿದು ನಿಂತಳು ತಂದಳು ನಾಗ ಸಂಪಿಗೆಯಾ | ಅಂಗನೆ ಜಾನಕಿ ನೀಮುಡಿಯೆಂದು ಕೊಟ್ಟರೆ ಸಂದೇಹ ಬಟ್ಟಳಾ ಸೀತೆ 31 ಈನಾಡ ಗರತಿ ನೀನಲ್ಲ | ದಾರು ಬಂಧುಗಳುಂಟು ದಾರ ಬಳಿಗೆ ನೀ ಬಂದೀ 32 ಈರೇಳು ಲೋಕವ ಸುತ್ತಿ ತಿರುಗಿ ಬಂದೆ ನಾಗಲೋಕಕ್ಕೆ ಬಾಹೆನೆಂದು ನಾಗಲೋಕದಿಂದ ದೇವಲೋಕಕ್ಕೆ ಬಂದೆ ದೇವಿಗೆ ಕಾಣಿಕೆ ತಂದೇ 33 ಹೊನ್ನು ಹಣವನೀವೆ ಅನ್ನವಸ್ತ್ರವನೀವೆ ಇನ್ನು ನೀವಲಿದದ್ದು ಈವೆ | ಇನ್ನು ನೀವಲಿದದ್ದು ಚೆನ್ನಾಗಿ ಕೊಡುವೆನು ಬಿನ್ನವಿಸೆ ಗರತಿ ನೀ ಅಂದ್ಲೂ 34 ಹೊನ್ನು ಹಣವನೊಲ್ಲೆ ಅನ್ನವಸ್ತ್ರವನೊಲ್ಲೆ ನಿನ್ನ ಭಾಗ್ಯವು ನಾನೊಲ್ಲೆ | ಮುನ್ನಿನ ಅಸುರರೂಪ ಇನ್ನು ನೀಬರೆದರೆ ಹರಣ ಹೊರುವೆನು 35 ಮುನ್ನವನು ಕಂಡು ಕೇಳರಿಯ | ಪನ್ನಂಗಧರ ರಾಮ ಬಂದರೆ ಬೈದಾರು ಗಮನ ಮಾಡಂದ್ಲೂ36 ಅಂದರೆ ಸೀತೆ ತನ್ನಂಗಕ್ಕೆ ಬರಲೆಂದು ತಂದು ತೊಡೆದಳು ಭಸುಮವನು | ಅಂದೆನ್ನ ವನಕೆ ಪ್ರದಕ್ಷಿಣೆ ಬರುವಾಗ ಉಂಗುಷ್ಟವನು ಕಂಡುಬಲ್ಲೆ 37 ಉಂಗುಷ್ಟದಂದಕ್ಕೆ ಮುಂದೆ ಪಾದವ ಬರಿ ಹಿಂದೆ ಹಿಂಬುಡ ಮೊಣಕಾಲು | ಹೊಂದಿಸಿ ಬರೆ ಎಂದಳವಳು 38 ಚಂದಾದ ಕಾಗದ ಲೆಕ್ಕಣಿಕೆ ಪಿಡಿದು ತಂದು ಕೊಟ್ಟಳು ಸೀತೆ ಕೈಗೆ | ಒಂದು ಕಾಯಕೆ ಹತ್ತು ಸಿರಗಳ ಬರೆದಳು ಮುಂದೆರಡು ಪಾದವ ಬರೆದಳು 39 ಒಂದರ ಹಿಂದೊಂದು ವರ್ಣಿಸಿ ಬರೆದಳು ತಂದು ನಿಲಿಸಿದಳು ರಾವಣನಾ | ಚಂದವಾಯಿತು ದೇವಿ ವರವಕೊಡೆನುತಲಿ ಎಂದೆಂದಿಗೂ ಅಳಿಯದ್ಹಾಗೇ 40 ಅಳಿದು ಉಳಿಯದಿರು ಉಳಿದು ನೀ ಕೆಡದಿರು ಧರಿಯವಳಗೆ ಅಡಗದಿರು | ಕಿರಿಯ ಲಕ್ಷ್ಮಣದೇವ ಹೊಡೆದರೆ ಮಡಿ ಎಂದು ವರವ ಕೊಟ್ಟಳು ಸೀತೆ ಪಠಕೆ 41 ಮರೆ
--------------
ಹೆಳವನಕಟ್ಟೆ ಗಿರಿಯಮ್ಮ
ಲಾಲಿ ರಂಗನ ರಾಣಿ ಪರಮಕಲ್ಯಾಣಿ ಲಾಲಿ ಕೀರವಾಣಿ ಪಂಕಜಪಾಣಿ ಲಾಲಿ ಪ. ಕ್ಷೀರಸಾಗರದಲಿ ಜನಿಸಿ ತಾ ಬಂದು ವಾರಿಜಾಕ್ಷನ ವಕ್ಷಸ್ಥಳದಿ ತಾ ನಿಂದು ಘೋರ ಪಾತಕಿಗಳನು ಪೊರೆವೆನೆಂತೆಂದು ಶ್ರೀರಂಗಕ್ಷೇತ್ರದಲಿ ಬಂದು ತಾ ನಿಂದು 1 ಶುದ್ಧ ಪಾಡ್ಯ ತುಲಾ ಕಾರ್ತೀಕದಲಿ ಮುದ್ದು ಶ್ರೀರಂಗನ ರಾಣಿ ಹರುಷದಲಿ ದಂತದ ಉಯ್ಯಾಲೆಮಂಟಪದಲ್ಲಿ ಕಂತುಪಿತನರಸಿಯಾಡಿದಳೆ ಉಯ್ಯಾಲೆ 2 ಕಸ್ತೂರಿಯನಿಟ್ಟು ಮುತ್ತಿನ ಮೂಗುಬಟ್ಟು ಹಾರಪದಕಗಳು ಪೀತಾಂಬ್ರವನೆ ಉಟ್ಟು ಕುಂದಣದ ಒಡ್ಯಾಣವನ್ನು ಅಳವಟ್ಟು ಇಂದಿರಾದೇವಿ ಆಡಿದಳೆ ಉಯ್ಯಾಲೆ 3 ರತ್ನದಾ ಕಿರೀಟವನ್ನು ತಾ ಧರಿಸಿ ಕಮಲ ಸರಗಳಳವಡಿಸಿ ಮುತ್ತು ಸುತ್ತಿದ ರತ್ನದಸುಲಿಯನು ಧರಿಸಿ ಅ ಚ್ಚುತನರಾಣಿ ಆಡಿದಳೆ ಉಯ್ಯಾಲೆ 4 ದೋಸೆ ವಡೆ ನೈವೇದ್ಯ ಮೀಸಲನು ಸವಿದು ದಾಸರೆತ್ತಿದ ಪಿಷ್ಟದಾರತಿಯಲಿ ನಲಿದು ಲೇಸಾದ ಕರ್ಪೂರ ವೀಳ್ಯವನು ಸವಿದು ವಾಸುದೇವನರಾಣಿ ಆಡಿದಳೆ ಉಯ್ಯಾಲೆ 5 ವರರಂಗವಂಶದವರು ವರದಿಂದ ಪಾಡೆ ಕರುಣಾಕಟಾಕ್ಷದಿಂ ದೇವಿ ತಾ ನೋಡೆ ಪ್ರಜೆಗಳೆಲ್ಲರು ಬಂದು ವರಗಳನು ಬೇಡೆ ವಜ್ರದಭಯಹಸ್ತಗಳಿಂದ ವರಗಳನು ನೀಡೆ 6 ಕರ್ತ ಶ್ರೀ ಶ್ರೀನಿವಾಸ ರಂಗನಾರಾಣಿ ಸಪ್ತದಿನದುಯ್ಯಾಲೆಯನು ತಾ ರಚಿಸಿ ಭಕ್ತರಿಗೆ ತೀರ್ಥ ಪ್ರಸಾದಗಳನಿತ್ತು ಅರ್ಥಿಯಿಂ ತೆರಳಿದಳು ತನ್ನರಮನೆಗೆ 7
--------------
ಯದುಗಿರಿಯಮ್ಮ
ವೃಂದಾವನದಿ ನಿಂದಾಡುತಿಹ ಸುಂದರ ಮೂರುತಿ ಇವನಾರೆ ಪ. ಇವ ನೋಡೆ ಅ.ಪ. ಕಡಗಕಂಕಣ ಬೆಡಗಿಲಿ ಹೊಳೆಯುತ ಸಡಗರದಿಂದಿಹ ಇವನ್ಯಾರೆ, ಸಖಿ ಮೃಡಸಖ ಎಮ್ಮಯ ಒಡೆಯನೆಂದಿಸುವ ಜಡಜಮುಖಿ ಇವನೋಡೆ 1 ಹರವಿದ ಕೇಶದಿ ಶಿರದÀ ಕಿರೀಟವು ವರಗೋವುಗಳ ಕಾಯ್ವ ಇವನ್ಯಾರೆ, ಸಖಿ ವರ ಕಾಳಿಂಗನ ಭಂಗವ ಮಾಡಿದ ಶರಧಿ ಗಂಭೀರ ಇವನೋಡೆ 2 ಪೊಂಗೊಳಲೂದುತ ಕಂಗೊಳಿಸುತಿಹ ಮಂಗಳಮೂರುತಿ ಇವನಾರೆ, ಸಖಿ ಪರಿ ಭಕುತರ ಸಲಹುವ ರಂಗ ಶ್ರೀ ಶ್ರೀನಿವಾಸ ಇವ ನೋಡೆ 3
--------------
ಸರಸ್ವತಿ ಬಾಯಿ
ವೈಶಾಖದುತ್ಸವ ಗೀತೆ ವರ್ಣಿಸಲಳವೆ ವೈಶಾಖದುತ್ಸವವಾ ಪ. ವೃಷಭಸೇರಿದ ವೈಶಾಖಮಾಸದ ಶುಕ್ಲ ಪಕ್ಷದ ಷಷ್ಠಿಯಲಿ ಕಂಕಣವ ಕಟ್ಟಿ ಪಟ್ಟದರಸಿ ಯರ್ಸಹಿತ ದಿಟ್ಟತನದಲಿ ಪೊರಟು ಶ್ರೇಷ್ಠವಾದ ಮಧ್ಯಮಂಟಪಕೆ ನಡೆತಂದ 1 ಮುದ್ದುಮೊಖ ಮುಗುಳ್ನಗೆಯು ವಜ್ರದ ಕಿರೀಟವು ತಿದ್ದಿದ ಕಸ್ತೂರಿತಿಲಕ ಹೊಳೆವ ವಜ್ರದ ಪದಕಗಳು ನಾಲ್ಕು ಮೂರನೆ ಧರಿಸಿ ಪ್ರಜ್ವಲಿಸುತ ಬಂದ ಅರ್ಜುನ ಸಾರಥಿಯು 2 ಶಿರದಿ ಪುಷ್ಪವ ಧರಿಸಿ ಪರಮಪುರುಷನು ತಾನು ಕೊರಳಲ್ಲಿ ವೈಜಯಂತಿಮಾಲೆಯನು ಧರಿಸಿ ಕರದಲ್ಲಿ ಪರಿಮಳದ ಗಂಧವನು ಧರಿಸಿ ಪರಮ ಪುರುಷನು ಬರುವ ಪರಿಯನೇನೆಂಬೆ 3 ದಂತದ ಉಯ್ಯಾಲೆಮಂಟಪದಲಿ ನಿಂದು ಕಂತುಪಿತ ಕರ್ಪೂರದಚೂರ್ಣದಲಿ ಮಿಂದು ಅಂತರಂಗದಿ ಭಕ್ತರಿತ್ತ ನೈವೇದ್ಯ ಉಂಡ ಲಕ್ಷ್ಮೀ ಕಾಂತನು ನಡೆತರುವ ಪರಿಯನೇನೆಂಬೆ 4 ಮುಂದೆ ದ್ರಾವಿಡವೇದ ಹಿಂದೆ ವೇದಘೋಷಗಳು ಆ ನಂದದಿಂ ಭಕ್ತರೆಲ್ಲ ಮುಂದೆ ಬರುತಿರಲು ಛಂದದಿಂ ರಂಭೆಯರ ಕೋಲಾಟಗಳ ನೋಡಿ ಇಂದಿರೆಯಿದಿರು ಮಂಟಪಕೆ ನಡೆತಂದ 5 ಸೃಷ್ಟಿಪತಿ ರಂಗನಿಗೆ ದೃಷ್ಟಿ ತಾಕುವುದೆಂದು ಹಿಟ್ಟಿನಾರತಿಯಿಂದ ದೃಷ್ಟಿಯನು ತೆಗೆದು ಶ್ರೇಷ್ಠವಾದ ಕರ್ಪೂರದ ಆರತಿಯನೆತ್ತಲು ಥಟ್ಟನೆ ತಿರುಗಿದನು ಕೃಷ್ಣಮೂರುತಿ ತಾನು 6 ಸಪ್ತದಿನದಲಿ ರಂಗ ರತ್ನಮೌಳಿಯ ಧರಿಸಿ ಮುತ್ತಿನಾ ಹಾರವನು ಹಾಕಿ ರತ್ನದ ಉಡದಾರ ಉಡಗೆಜ್ಜೆಯನು ಧರಿಸಿ ಪತ್ನಿ ಸಹಿತಲೆ ಬಂದು ಭತ್ತವನಳಿಸುವ ಸೊಬಗ 7 ಮುತ್ತಿನ ಕಿರೀಟವಿಟ್ಟು ಮುದದಿ ನಿಲುವಂಗಿ ತೊಟ್ಟು ರತ್ನದಾ ಹಸ್ತದಲಿ ಅಭಯವನು ಕೊಟ್ಟು ಕತ್ತಿ ಈಟಿ ಗುರಾಣಿ ಬತ್ತಳಿಕೆ ಅಳವಟ್ಟು ಹಸ್ತದಲಿ ಕಡಿವಾಣವಿಟ್ಟು ಬರುವ ಸೊಬಗ 8 ಹತ್ತಿ ಹಯವನು ರಂಗ ಒಂಭತ್ತು ದಿನದಲಿ ಮತ್ತೆ ಪುಷ್ಕರಣಿಯ ತೀರ್ಥದಲ್ಲಿ ಮಿಂದು ಅರ್ತಿಯಿಂ ಬಂದ ನೀರಾಳಿಮಂಟಪಕೆ 9 ಮಿಂದು ಮಡಿಯನೆ ವುಟ್ಟು ಛಂದದಿಂದಲೆ ರಂಗ ಬಂದು ಕಂಕಣವನ್ನು ಬಿಚ್ಚಿ ಆ ಘೃತ ಚೂತಫಲಗಳ ಸವಿದು ನಿಂದ ವೆಂಕಟರಂಗ [ಕರುಣಾಂತರಂಗ] 10
--------------
ಯದುಗಿರಿಯಮ್ಮ
ಶ್ರೀರಂಗ ರಂಗನಾಥ ಎನ್ನ ಕಣ್ಗಾಳೆದುರು ನಿಂತಿದಂತಿದೆ ಪ ವಜ್ರಮಾಣಿಕದ ಕಿರೀಟವನಿಟ್ಟು ಪ್ರಜ್ಜಲಿಸುವ ಹಣೆಯ ಕಸ್ತೂರಿಬಟ್ಟು ವಜ್ರದ ಕರ್ಣಕುಂಡಲ ಅಳವಟ್ಟು ಸಾಜದ ಅಧರಚಂದವಿನ್ನೆಷ್ಟು 1 ಕಬ್ಬುಬಿಲ್ಲನು ಪೋಲ್ವ ಪುಬ್ಬಿನ ಚಂದ ಅಬ್ಜದಂತೆಸೆವಾ ನಯನದಾನಂದ ಕುಸುಮವ ಪೋಲುವ ನಾಸಿಕದಂದ ಕದಪು ಹೊಳೆಯುತ್ತ ಬಂದ 2 ಕಂಠದೊಳಗೆ ಇಟ್ಟ ಕೌಸ್ತುಭಮಣಿಯು ಎಂಟು ಪದಕಗಳನಳವಡಿಸಿದ ಅಣಿಯು ಗಂಟೆ ಗೆಜ್ಜೆವುಡಿದಾರದ ಫಣಿಯು ಸಂಧ್ಯರಾಗವ ಪೋಲ್ವ ಪೀತಾಂಬರದಣಿಯು 3 ಶಂಖಚಕ್ರವು ಗದೆ ಆಭಯಹಸ್ತಗಳು ಪಂಕಜಮುಖಿ ಇರುವ ವಕ್ಷಸ್ಥಳವು ಶಂಕರನಪಿತನ ಪಡೆದ ನಾಭಿದಳವು ಶಂಕೆ ಇಲ್ಲದ ಕಣಕಾಲಿನ ಹೊಳವು 4 ಅಂದುಗೆ ಗೆಜ್ಜೆಗಳ ಚಂದದಿಂದಿಟ್ಟು ಕುಂದಣದ ಪಾಡಗವನಳವಟ್ಟು ಚಂದದಿಂ ವಜ್ರದಾವುಗೆಯ ಮೆಟ್ಟು ತ [ಬಂದ] ಗಂಗೆ ಪಡೆದನಖಾಪಂಕ್ತಿಗಳೆಷ್ಟು5 ವಜ್ರಾಂಕುಶ ಧ್ವಜರೇಖೆಗಳಿಂದ ಪದ್ಮಪಾದದ ಕೆಂಪುಗಳು ಬಹುಚಂದ ಹೊದ್ದಿದ ಭಕ್ತರ ಪಾಪವನೆಲ್ಲ ಒದ್ದು ಮುಕ್ತಿಯನೀವ ಮುದ್ದು ಶ್ರೀ ವೆಂಕಟಕೃಷ್ಣ 6
--------------
ಯದುಗಿರಿಯಮ್ಮ
ಶ್ರೀರಮಣಿ ದಯದೋರು ಬ್ರಹ್ಮ ಸಮೀರಜನ ನೀ ಬೇಗ ಮೂರುತಾಪದ ದೂರಗೈಸಿ ಸರೋರುಹಾಕ್ಷನ ಸಾರಗೈಸುತ ಪ. ಶ್ರೀನಿವಾಸನ ಸರ್ವಸೇವೆಯ ತಾನೆ ಮಾಳ್ಪೆನೆಂದು ಭಾನುಕೋಟಿ ಸಮಾನಭಾಸ ವಿಮಾನವಾಗಿ ನಿಂದು ಮಹಾನಭೀಯ ಸಮಸ್ತ ವಸ್ತು ವಿ- ಧಾನರೂಪಿಣಿಯಾಗಿ ಭಕ್ತಜನಾನುವರ್ತಿಯ ಭಾವ ಗ್ರಹಿಸಿದ 1 ಹಾರಕಟಕ ಕಿರೀಟವರ ಕೇಯೂರ ಬಾಹುಪುರಿಯು ಚಾರುತರ ಗಂಭೀರರವ ಶೃಂಗಾರದ ನೂಪುರವ ಮಾರನೈಯ್ಯನ ಮುದ್ದು ಹಸ್ತದಿ ವಾನೈಜಾರಿಗದಾಬ್ಜರೂಪದಿ ಸೇರಿ ಶೋಭಿಪ ಶಕ್ತಿ ನಿನ್ನ ಪದಾರವಿಂದವ ನಂಬಿ ನಮಿಪೆನು 2 ಕುಂದ ನೋಡದಿಂದೂ ಹರಿ ಚಂದನಾತ್ಮಕ ವೆಂಕಟೇಶನು ಬಂದಿಲ್ಲಿಹನೆಂದು ಮುನಿಜನವೆಂದ ಮಹಿಮೆಯ ನಿಂದು ತೋರುತ ಸನ್ನಿಹಿತಳಾಗೆಂದು ಚರಣದ್ವಂದ್ವ ಪೊಗಳುವೆ 3 ,
--------------
ತುಪಾಕಿ ವೆಂಕಟರಮಣಾಚಾರ್ಯ
ಶ್ರೀಹರಿಸ್ತುತಿ ಅಪ್ಪವೆಂಕೋಬನ ನೇತ್ರದಲಿ ನೋಡಿ ಪವಿತ್ರಳಾದೆನೋ ಇಂದಿಗೆ ತಪ್ಪುಗಳೆಲ್ಲ ನಿನಗರ್ಪಿಸುವೆ ನಾನೀಗ ಒಪ್ಪಿಕೋಬೇಕೋ ತಿಮ್ಮಪ್ಪ ಕರುಣಾನಿಧಿಯೆ ಹೆದÀರದೆ ಭೃಗುಋಷಿಯು ಒದೆಯೆ ಪಾದಗಳಿಂದ ಎದೆಯ ಮೇಲಿರುವ ಲಕ್ಷ್ಮಿ ಕದನಮಾಡುತವೆ ಕೊಲ್ಲಾಪುರಕೆ ನಡೆತರಲು ಒದಗಿ ವೈಕುಂಠ ಬಿಟ್ಟು ಯದುನಾಥ ಯಾರಿಲ್ಲದಂತೆ ಗುಡ್ಡವ ಸೇರೆ ಇದು ನಿನಗೆ ಸದನಾಯಿತೊ ದೇವ 1 ಹುತ್ತಿನೊಳಗಡಗಿ ನೀ ಗುಪ್ತದಿಂದಿರುತಿರಲು ಉತ್ತಮ ಗೋವು ಬಂದು ನಿತ್ಯದಲ್ಲಿ ಕ್ಷೀರವನು ಕರೆಯೆ ಗೋವಳನಿಂದೆ ನೆತ್ತಿಯನೊಡೆದುಕೊಂಡು ಸಿಟ್ಟಿನಿಂದಲಿ ಚೋಳರಾಯಗೆ ಶಾಪವನು ಕೊಟ್ಟು ಕಿರೀಟವನು ಇಟ್ಟು ಮೆರೆಯುವ ದೇವ 2 ಮಾಯಾರಮಣನೆ ನಿನ್ನ ಗಾಯದೌಷಧಕ್ಹೋಗಿ ಭೂರಮಣನ್ವರಾಹನಿಂದ ನೂರುಪಾದ ಭೂಮಿಕೊಟ್ಟರೆ ಸಾಕೆಂದು- ಪಾಯದಿಂದದನ್ವ್ಯಾಪಿಸಿ ತಾಯಿ ಬಕುಳಾದೇವಿಯಿಂದ ಪೂ ಜೆಯಗೊಂಬೊ ಶ್ರೀಯರಸು ನಿನಗೆ ಸರಿಯೆ ದೇವ 3 ನಾಟಕಧಾರಿ ಕಿರಾತರೂಪವ ಧರಿಸಿ ಬೇಟೆಗೆನುತಲಿ ಪೋಗಲು ತೋಟದಲಿ ಚೆಲ್ವೆ ಪದ್ಮಾವತಿಯ ಕಡೆಗಣ್ಣ ನೋಟದಲಿ ಮನಸೋಲಿಸಿ ಬೂಟಕತನದಿ ಜಗಳಾಟವನ್ನೆ ಮಾಡಿ ಪಾಟುಬಟ್ಟು ಕಲ್ಲಲೇಟುತಿಂದೆಯೋ ದೇವ 4 ಗದಗದನೆ ನಡುಗುತಲಿ ಕುದುರೆಯನು ಕಳಕೊಂಡು ಪದ್ಮಾವತಿ ವಾರ್ತೆಯನ್ನು ಬಳಿಯ ಲಿದ್ದ ಬಕುಳಮಾಲಿಕೆಗೆ ಬೋಧಿಸಿ ಕಳಿ ಸಿದಾಕಾಶನಲ್ಲಿ ಚದುರಮಾತಿನ ಚಪಲ ಕೊರವಂಜಿ ನೀನಾಗಿ ಕಣಿಯ ಹೇಳಲು ಎಲ್ಲಿ ಕಲಿತೆಯೊ ಮಹದೇವ5 ಬಂಧುಬಳಗವ ಕೂಡಿ ಭಾರಿ ಸಾಲವ ಮಾಡಿ ಕರ ವೀರದಿಂದೆ ಅಂಡಲೆದು ಕರೆಸಿ ಕಾಣುತಲಿ ಲಕ್ಷ್ಮಿಯನಪ್ಪಿ ಕೊಂಡು ಪರಮ್ಹರುಷದಿಂದ ಮಂದಗಮನೆಯೆ ನಿನ್ನ ಮಾತುಲಾಲಿಸಿ ಮಾಡಿ ಕೊಂಡೆ ಪದ್ಮಾವತಿಯ ಅಂದೆಯೊ ಎಲೆ ದೇವ 6 ಆಕಾಶರಾಜ ಅನೇಕ ಹರುಷದಿ ಮಾಡೆ ತಾ ಕನ್ಯಾದಾನವನ್ನು ಹಾಕಿದ ರತ್ನಮಾಣಿಕ್ಯದ ಕಿರೀಟವನು ಬೇಕಾದಾಭರಣ ಭಾಗ್ಯ ಸಾಕಾಗದೇನೊ ಬಡವರ ಕಾಡಿ ಬೇಡುವುದು ಶ್ರೀಕಾಂತ ನಿನಗೆ ಸರಿಯೆ ದೇವ 7 ಹೇಮಗೋಪುರದಿ ವಿಮಾನ ಶ್ರೀನಿವಾಸ ದೇವರನು ನೋಡಿ ನಮಿಸಿ ಕಾಮಿಸಿ ಕಂಡೆ ಹೊನ್ನ್ಹೊಸ್ತಿಲು ಗರುಡ ಗಂಬದ ಸುತ್ತ ಪ್ರಾಕಾರವೊ ಸ್ವಾಮಿಪುಷ್ಕರಣಿಯಲಿ ಸ್ನಾನ ಪಾನವ ಮಾಡಿ ನೋಡಿದೆನು ನಿನ್ನ ಭಕುತರ ದೇವ 8 ಪÀನ್ನಗಾದ್ರಿ ವೆಂಕಟನ್ನ ರಥ ಶೃಂಗಾರ ವರ್ಣಿಸಲಳವೆ ನಮಗೆ ಕಣ್ಣಾರೆಕಂಡೆ ಗರುಡೋತ್ಸವದಲಂಕಾರ ಇನ್ನೆಲ್ಲು ಕಾಣೆ ಜಗದಿ ಎನ್ನ ಕಿವಿಗಾನಂದವೊ ದೇವ 9 ಪಾದದಲ್ಲೊಪ್ಪೋ ಪಾಗಡ ರುಳಿ ಕಿರುಗೆಜ್ಜೆ ಮೇಲಲೆವೊ ಪೀತಾಂಬರ ಮಾಲೆ ಶ್ರೀವತ್ಸದ್ಹಾರ ಮೇಲಾದ ಸರಿಗೆ ಸರ ಪದಕವೊ ಕಮಲ- ದಳಾಯತಾಕ್ಷನ ನೋಡಿದೆ ದೇವ 10 ಕರಗಳಲ್ಲಿಟ್ಟು ಕಂಕಣ ಕಡಗ ಭುಜಕೀರ್ತಿ ವರ ಶಂಖ ಚಕ್ರಧಾರಿ ಗಿರಿಯ ಭೂವೈಕುಂಠವೆಂದು ತೋರುತ ನಿಂತ ಶಿರದಿ ಕಿರೀಟ ಧರಿಸಿ ಬಿಳಿಯ ತ್ರಿನಾಮ ಭೀಮೇಶಕೃಷ್ಣನ ಮುಖದಿ ಹೊಳೆವ ಮೂರ್ತಿಯ ನೋಡಿ ಹೇ ದೇವ11
--------------
ಹರಪನಹಳ್ಳಿಭೀಮವ್ವ
ಸೀತಾರಾಮ ಶ್ರೀರಘುರಾಮ ಕಾ ಕುತ್ಸ್ಥರಾಮ ಕರುಣಾಳು ರಾಮ ಪ ಉತ್ತಮ ಗುರುಗಳಿಗೆ ಭಕ್ತಿಯಿಂದಲೆ ಎರಗಿ ಭಕ್ತವತ್ಸಲನ ಚರಿತ್ರೆ ಪೇಳುವೆನು 1 ಆದಿಮೂರುತಿಮಹಿಮೆ ವೇದಂಗಳರಿಯದು ಎನ್ನ ಭೇದಬುದ್ಧಿಗೆ ಇದು ಬೋಧವಾಗುವುದೆ 2 ಪತಿತಪಾವನ ನಿಮ್ಮ ಸ್ತುತಿಯ ಮಾಡುವುದಕ್ಕೆ ಮತಿಯ ಪಾಲಿಸಿ ಸದ್ಗತಿಯ ಕೊಡೆನೆಗೆ 3 ಆದಿಸೃಷ್ಟಿಯಲಿ ಆದುದು ಈ ಆತ್ಮ ಬಾಧೆಯ ಪಡುತಿಹುದು ಭವರೋಗದಲಿ 4 ಜನನ ಮರಣವೆಂಬ ಜಾಡ್ಯವನು ಬಿಡಿಸಿ ನಿನ್ನ ಚರಣದೊಳಿರಿಸೆನ್ನ ಕರುಣವಾರಿಧಿಯೆ 5 ಹೃಷಿಕೇಶವ ಎನ್ನ ಹೃದಯದೊಳಗೆ ಇದ್ದು ವಿಷಯಕೆ ಎನ್ನನು ವಶವ ಮಾಡುವರೇ 6 ದೆ ಮನ್ನಿಸಿ ರಕ್ಷಿಸೊ ಪನ್ನಗಶಯನ 7 ಪಾರ್ಥಸಾರಥಿ ನಿಮ್ಮ ಪಾದವ ನಂಬಿದೆ [ಅರ್ಥಿಯಿಂ] ಪಾವನ ಮಾಡೆನ್ನ ಪರಮಪುರುಷನೆ 8 ನಿಮ್ಮ ಪಾದದ ಭಕ್ತಿ ನಿಮ್ಮ ಪಾದದ ಸ್ತುತಿ ನಿಮ್ಮ ಪೊಗಳುವ ಮತಿಗತಿಯ ಕೊಡೆನಗೆ 9 ತಂದೆತಾಯಿಯು ನೀನೇ ಬಂಧುಬಳಗವು ನೀನೆ ಆ ನಂದದಿಂದಲಿ ಕಾಯೊ ಇಂದಿರಾರಮಣ 10 ಸುರರೆಲ್ಲ ಪೋಗಿ ಮೊರೆಯಿಡಲಾಗಿ ಅರಿತನು ಭೋಗಿಶಯನ ತಾನಾಗಿ11 ವಸುಧೆಯ ಭಾರವನಿಳುಹುವೆನೆಂದು ದಶರಥನುದರದಿ ಜನಿಸಿ ತಾ ಬಂದು 12 ಪಂಕಜನೇತ್ರ ಪರಮಪವಿತ್ರ [ಸು]ಕೋಮಲಗಾತ್ರ ಕೌಸಲ್ಯಪುತ್ರ 13 ಪುತ್ರರ ನೋಡಿ ಸಂತೋಷಗೂಡಿ ಅರ್ತಿಯಿಂದಲೆ ಚೌಲ ಉಪನಯನ ಮಾಡಿ 14 ನೋಡಿ ಕೌಶಿಕನ ಚಿಂತೆಯ ಮಾಡಿ ಕೂಡಿ ಅನುಜನ ಮುನಿವರನೊಡನೆ ವೋಡಿ 15 ಕರೂಶದೇಶಕೆ ಬಂದು ತಾಟಕಿಯನು ಕೊಂದು ಮ ಹ ಸ್ತ್ರೀಯೆಂದು ಆನಂದದಿ ಗ್ರಹಿಸಿ 16 ಮಾರೀಚನ ಹಾರಿಸಿ ಕ್ರತುವನ್ನು ಪಾಲಿಸಿ ತೋರಿಸಿ ಗಂಗೆಯ ಆನಂದದಿಂ ಸ್ತುತಿಸಿ 17 ಮಾಡಿ ಶಿಲೆಯ ಪಾವನ ಮಿಥಿಲಪುರಕೆ ವೋಡಿ ನೋಡಿ ಧನುವ ಮುರಿದು ಜಾನಕಿ ಕೂಡಿ 18 ಮಾರ್ಗದಲ್ಲಾಗ ಭಾರ್ಗವನ ಆಗ್ರಹವ ಬೇಗ ಮುರಿದು ತಾ ಶೀಘ್ರದಿಂ ಬಂದ 19 ಸತಿ ಸಹಿತನಿಂದು ರಾಜ್ಯ ಗ್ರಹಿಸುವೆನೆಂದ ಮಾತೆಗಾನಂದ 20 ಮಾತೆಗೆ ವಂದಿಸಿ ಸೀತೆಯನೊಡಗೊಂಡು ಸು ಮಿತ್ರೆಜಾತನ ಸಹಿತ ರಘುನಾಥ ತಾ ಪೊರಟ 21 ಪೋಗಿ ಜನಕನಿಗಾಗಿ ವನಕೆ ತಾ ಯೋಗಿ 22 ಬೇಗ ಭರತನಿಗಾಗಿ ಪಾದುಕೆಗಳ ಅನು ರಾಗದಿಂದಿತ್ತು ಯೋಗದಿಂ ಪೋಗಿ 23 ಅತ್ರಿಮಹಾಮುನಿ ಇತ್ತ ಆಭರಣವ ವಸ್ತ್ರವ ಗ್ರಹಿಸಿದ ಪುರುಷೋತ್ತಮನು 24 ವಿರಾಧನ ಕೊಂದು ಹರುಷದಿಂ ಬಂದು ಕರುಣದಿಂದ ನಿಂದು ಋಷಿಗಳಿಗಭಯವ[ನಿತ್ತು] 25 ದನುಜೆನಾಸಿಕವರಿದು ಖರದೂಷಣರ ತರಿದು ತಾನೊಲಿದು ಸತಿಗೆ ಗುಹೆಯಲ್ಲಿ ನಲಿದು26 ಬಂದು ರಾವಣ ಜಾನಕಿಯ ಕದ್ದೊಯ್ಯಲಂದು ಕೊಂದು ಮಾರೀಚನ ಗೃಧ್ರಗೆ ಮೋಕ್ಷಾವ [ನಿತ್ತು] 27 ಕಬಂಧನ ಗೆಲಿದು ಪಂಪಾತೀರದಿ ನಲಿದು ಶಬರಿಯಿತ್ತ ಫಲವನ್ನು ಸವಿದು ಹರಿಗೆ ತಾನೊಲಿದು 28 ಕುಟ್ಟಿ ವಾಲಿಯ[ನು] ರವಿಜಗೆ ಪಟ್ಟವ ಕಟ್ಟಿ ಸೃಷ್ಟಿಜಾತೆಯನರಸಲು ಕಪಿಗಳನಟ್ಟಿ 29 [ಭರದಿವಾನರ] ಕೈಲಿ ಉಂಗುರವಿರಿಸೆ ಆ ಮಾರುತಿ ಕಪಿಗಳುವೆರಸಿ ಜಾನಕಿ[ಯ]ನರಸೆ 30 ಶರಧಿಯನ್ಹಾರಿ ಸೀತೆಯ ನೋಡಿ ಗುರುತನು ತೋರಿ ದುರುಳನೊಡನ್ಹೋರಿ ಮಣಿಯ ತಂದನಾಧಾರಿ 31 ವನವನ್ನು ಮುರಿದು ಅಕ್ಷನ ತರಿದು ಅಸ್ತ್ರಕ್ಕೆ ಅ [ವನೊ]ಲಿದು ರಾವಣನೆದುರಲ್ಲಿ ನಲಿದು 32 ಪುರವೆಲ್ಲ ಸುಟ್ಟು ವಿಭೀಷಣನ ಗುಟ್ಟು ಬಾಲ ಶರಧಿಯೊಳಿಟ್ಟು ಕಪಿಗಳ ಸೇರಿದನಷ್ಟು 33 ಭಂಗಿಸಿ ಮಧುವನವ ಭರದಿಂದ [ರಾಮನೆಡೆಗೆ] ಲಂಘಿಸಿ ಮಾತೆಯ ಕಂಡೆವೆಂದೊಂದಿಸಿ ಮಣಿಯನಿರಿಸೆ 34 [ವರರಾಮ] ತಾ ನೋಡಿ ವ್ಯಸ ಮಾಡಿ ಹರಿಯನ್ನು ಕೂಡಿ ಆಲಿಂಗನೆ ಮಾಡಿ 35 ಹರಿಗನ ಕೂಡಿ ಭರದಿಂದಲೋಡಿ ಶರಧಿಯ ನೋಡಿ ಯೋಚನೆ ಮಾಡಿ 36 ವರುಣನ ವಂದಿಸಿ ವಿಭೀಷಣನ ಮನ್ನಿಸಿ ಶರಧಿಯ ಬಂಧಿಸಿ ಅಂಗದನ ಸಂಧಿಗೆ ಕಳುಹಿಸಿ 37 ಇಂದ್ರಜಿತುವೊಡನೆ ಛಂದದಿಂದಲೆ ಕಾದಿ ಬಂದ ಸರ್ಪಾಸ್ತ್ರವ ಖಗನಿಂದ ಬಿಡಿಸಿ 38 ಹಂಗಿಸಿ ರಾವಣನಕಿರೀಟವ ಮೈಯೆಲ್ಲ ನಡುಗಿಸಿ ಭಂಗಿಸಿ ತಾ ಜಗದೊಡೆಯನೆಂದೆನಿಸಿ 39 ಕುಂಭನಿಕುಂಭ ಕುಂಭಕರ್ಣರ ಕೊಂದು ಕುಂಭಿನಿಯೊಳು ನಿಂದನಂಬುಜನಾಭ 40 ಪತಿತಪಾವನ [ನನುಜನ] ಪಿತಾಮಹಾಸ್ತ್ರದಿ ಕಟ್ಟೆ ಹಿತದಿಂದೌಷಧಿ ತಂದ ಮಾರುತನ ಕುಮಾರ 41 ಮಾಯೆ ಸೀತೆಯನರಿ[ಯದೆ] ಮೋಹಪಡು ತ ಉ ಪಾಯದಿಂದಲೆ ಬಂದ ಮಾಯಾವಿಯೆಡೆಗೆ 42 ತಮ್ಮ ಲಕ್ಷ್ಮಣ ತಾನು ಹೆಮ್ಮೆಯಿಂದಲೆ ಕಾದಿ ಒಮ್ಮೆ [ಲೆ] ಅಸ್ತ್ರಗಳ ಸುಮ್ಮಾನದಿಂ ಬಿಟ್ಟು 43 ಸತ್ಯಮೂರುತಿ ಪವಿತ್ರ ತಾನಾದರೆ ಅಸ್ತ್ರವೆ ಶತ್ರುವ ಜಯಿಸಲೆಂದನಾಗ 44 ಎಂದು ಬಾಣವಬಿಡೆ ಇಂದ್ರಜಿತುವ ಕೊಂದು ಆ ನಂದದಿಂ ಲಕ್ಷ್ಮಣನ ಹೊಂದಿತಾ ಬಾಣ 45 ವಿರೂಪಾಕ್ಷ ಯೂಪಾಕ್ಷ ಶೋಣಿತಾಕ್ಪನ ಕೊಂದು ಮ ಕರಾಕ್ಷನ ಕೊಂದ ಮಹಾನುಭಾವರಾವಣನ 46 ಮೂಲಬಲವನ್ನೆಲ್ಲ ಲೀಲೆಯಿಂದಲೆ ನಿ ರ್ಮೂಲನ ಮಾಡಿ[ದ] ಲೀಲಾವಿನೋದದಿ 47 ಬಂಧುಗಳೆಲ್ಲರು ಮರಣ ಪೋಗಲು ಕಂಡು ಬಂದ ರಾವಣನು ತಾನು ಒಂದೆಮನಸಿನಲಿ 48 ಯಾರು ಇಲ್ಲದಾಗ ಚೋರತನದಲ್ಲಿ ನಾರಿಯ ಕದ್ದೊಯ್ದ ಧೀರ ಬಾರೆಂದ [ರಾಮ] 49 ಅಸ್ತ್ರಕ್ಕೆ ಅಸ್ತ್ರವ ಒತ್ತಿ ಬಿಡಲು ಆಗ ಮತ್ತೆ ಆಕಾಶವ ಮುತ್ತಿತು ಬಾಣ 50 ರಾಮರಾವಣರ್ಯುದ್ಧ ನೋಡಿ ಮಹಾಸುರರೆಲ್ಲ ಪ್ರೇಮದಿಂದಲೆ [ಹರಸಿದರು] ಆನಂದಗೂಡಿ 51 ಕತ್ತರಿಸಿದ [ರಾವಣನ]ಶಿರ ಮತ್ತೆ ಬೆಳೆಯಲು ನೋಡಿ ಚಿತ್ತದಿಂ ನೆನೆದು [ರಾಮ] ಬ್ರಹ್ಮಾಸ್ತ್ರದಿಂ ಕಡಿದ 52 ದಶಕಂಠನೆಂತೆಂಬ ಹಸನಾದ ವೃಕ್ಷವ ದಶರಥಸುತವಾತ ಬಂದು ಮುರಿಯಿತು 53 ರಾವಣನೆಂತೆಂಬ ವಾರಣ[ದ ಕೋಡ] ವೀರ ರಾ ಘವನೆಂಬ ಕೇಸರಿಯು ಮುರಿಯಿತು 54 ಪುಲಸ್ತ್ಯಪುತ್ರನೆಂಬ ರಾಜವೃಷಭವನ್ನು ಇಕ್ಷ್ವಾಕು [ಕುಲದ] ವ್ಯಾಘ್ರವು ಭಕ್ಷಿಸಿತಾಗ 55 [ಆಮಹಾ] ರಾಕ್ಷಸೇಂದ್ರನೆಂಬ ಜ್ವಲಿಸುವ ಅಗ್ನಿಯ [ಶ್ರೀ] ರಾಮಜೀಮೂತವು ಬಂದು ಕೆಡಿಸಿತು 56 ಸುರರೆಲ್ಲ ಜಯವೆಂದು ಪುಷ್ಪಗಳರಳನ್ನು ಕರೆಯಲು ಶಿರದಲ್ಲಿ ಧರಿಸಿದ [ತಾ] ಪರಮಪುರುಷನು 57 ರಾಕ್ಷಸೇಂದ್ರ [ವಿಭೀಷಣ]ಗೆ ಮಾಡಿ ರಾಜ್ಯಾ ಭಿಷೇಕವ ಮೂರ್ಜಗದಲಿ ಕೀರ್ತಿ ಪಡೆದ ರಾಘವ 58 ತಂದೆಗೆರಗಿ ಅಗ್ನಿತಂದ ಸೀತೆಯ ನೋಡಿ ಆ ನಂದದಿಂದಲೆ ಕೂಡಿನಿಂದ ರಾಘವನು 59 ಅಜಭವಸುರರೆಲ್ಲ ಭುಜಗಶಯನನ ನೋಡಿ ನಿಜವಾಗಿ ಸ್ತೋತ್ರ ಮಾಡಿದರು ನಿರ್ಮಲದಿ 60 ವೇದವನಿತ್ತು ಅಜನಿಗೆ ಭಾರವ ಹೊತ್ತು [ಆ] ಧಾರುಣಿಯ ತಂದು ಕಂಬದಿಂ ಬಂದು 61 ದಾನವ ಬೇಡಿ ಕ್ಷತ್ರಿಯಕುಲವನೀಡಾಡಿ ಜಾನಕಿಯ ತಂದು ಪ್ರಲಂಬನ ಕೊಂದು 62 ಕಾಳಿಯ ಒತ್ತಿ ಕುದುರೆಯ ಹತ್ತಿ ಜಗ ವೆಲ್ಲ ಸುತ್ತಿ ನಿಮ್ಮ ದರ್ಶನ ಮುಕ್ತಿ 63 ಜಗದೋದ್ಧಾರ ದುರಿತಕ್ಕೆ ದೂರ ಜಗಕೆ ಆಧಾರ ದುಷ್ಟರಿಗೆ ಕ್ರೂರ 64 ಪೃಥುವಿಯ ಪಾಲ ದಿಟ್ಟಗೋಪಾಲ ಸತ್ಯದಲಿ ಶೀಲ ರುಕ್ಮಿಣೀಲೋಲ 65 ಅರಿ ನಿ ಸ್ಸೀಮ ಭಕ್ತರಾಪ್ರೇಮ 66 ವಿಶಾಲನೇತ್ರ ಪರಿಪೂರ್ಣಗಾತ್ರ [ವ ರ] ಸೀತಾಕಳತ್ರ ಸುಗ್ರೀವಮಿತ್ರ 67 [ರಾಜ] ದಶರಥ ಬಾಲ ಜಾನಕೀಲೋಲ ಮೂರ್ಜಗಪಾಲ ಕೀರ್ತಿವಿಶಾಲ 68 ಸತ್ಯಮೂರುತಿ ಪವಿತ್ರ ನೀನೆ ಜಗಕೆ ಕರ್ತನೂ ಕಾರಣಮೂರ್ತಿಯೂ ನೀನೆ 69 ನಂದನಕಂದ ಮುಕುಂದ ಗೋವಿಂದ ಇಂದಿರಾರಮಣ ನೀನೆಂದು ಪೊಗಳಿದರು 70 ಪುಷ್ಪಕವನು ಏರಿ ಲಕ್ಷ್ಮೀಸಹಿತವಾಗಿ [ರಾಮ]<
--------------
ಯದುಗಿರಿಯಮ್ಮ
ಕಂಡೆ ತಿರುಪತಿ ವೆಂಕಟೇಶನಕಾರಣಾತ್ಮಕಸಾರ್ವಭೌಮನಕಾಮಿತಾರ್ಥವನೀವ ದೇವನ ಕರುಣನಿಧಿಯೆಂದೆನಿಸಿ ಮೆರೆವನ ಪಕೋಟಿ ಸೂರ್ಯ ಪ್ರಕಾಶವೆನಿಪ ಕಿರೀಟವನು ಮಸ್ತಕದಿ ಕಂಡೆನುನೋಟಕ್ಕಚ್ಚರಿಯೆನಿಪ ನಗೆಮೊಗನೊಸಲೊಳಗೆ ತಿರುಮಣಿಯ ಕಂಡೆನುಸಾಟಿಯಿಲ್ಲದ ಶಂಖ-ಚಕ್ರವ ಚತುರ ಹಸ್ತದಲೀಗ ಕಂಡೆನುಬೂಟಕದ ಮಾತಲ್ಲ ಕೇಳಿ-ಭೂರಿದೈವದ ಗಂಡನಂಘ್ರಿಯ 1ತಪ್ಪುಗಾಣಿಕೆ ಕಪ್ಪುಗಳನು ಸಪ್ತಲೋಕಗಳಿಂದ ತರಿಸುವಉಪ್ಪು ವೋಗರವನ್ನು ಮಾರಿಸಿಉಚಿತದಿಂದಲಿ ಹಣವ ಗಳಿಸುವ ||ಇಪ್ಪತ್ತು ದುಡ್ಡಿಗೆ ಸೇರು ತೀರ್ಥವ ಒಪ್ಪದಿಂದಕ್ರಯ ಮಾಡಿ ಕೊಡಿಸುವಸರ್ಪಶಯನನ ಸಾರ್ವಭೌಮನ ಅಪ್ಪವೆಂಕಟರಮಣನಂಘ್ರಿಯ 2ಉರದಿ ಶ್ರೀದೇವಿ ಇರಲು ಕಂಡೆನುಉನ್ನತದ ಕೌಸ್ತುಭವ ಕಂಡೆನುಗರುಡಕಿನ್ನರನಾರದಾದಿಗಳಿರಲು ಎಡಬಲದಲ್ಲಿ ಕಂಡೆನು ||ತರತರದಿ ಭಕ್ತರಿಗೆ ವರಗಳ ಕರೆದುಕೊಡುವುದ ನಾನು ಕಂಡೆನುಶರಧಿಶಯನನ ಶೇಷಗಿರಿವರಸಿರಿಪುರಂದರವಿಠಲನಂಘ್ರಿಯ3
--------------
ಪುರಂದರದಾಸರು
ನಿನ್ನ ದಿವ್ಯ ಮೂರುತಿಯ ಕಣ್ಣದಣಿಯಲು ನೋಡಿಧನ್ಯನಾದೆನು ಧರೆಯೊಳು ||ಇನ್ನು ಈಭವಭಯಕೆ ಅಂಜಲೇತಕೆ ದೇವಚೆನ್ನ ಶ್ರೀ ವೆಂಕಟೇಶಾ ಈಶಾ ಪಏಸುಜನುಮದಸುಕೃತಫಲವು ಬಂದೊದಗಿತೋಈ ಸ್ವಾಮಿ ಪುಷ್ಕರಣಿಯೊಳ್ನಾ ಸ್ನಾನವನು ಮಾಡಿವರಾಹದೇವರ ನೋಡಿಶ್ರೀ ಸ್ವಾಮಿ ಮಹಾದ್ವಾರಕೆಈ ಶರೀರವನು ಈಡಾಡಿ ಪ್ರದಕ್ಷಿಣೆ ಮಾಡಿಲೇಸಿನಿಂದಲಿ ಪೊಗಳುತಆ ಸುವರ್ಣದ ಗರುಡ ಗಂಬವನು ಸುತ್ತಿ ಸಂತೋಷದಿಂ ಕೊಂಡಾಡಿದೆ ಬಿಡದೆ 1ನೆಟ್ಟನೆಯೆ ದ್ವಾರವ ದಾಟಿ ಪೋಗುತಲಿರಲುದಟ್ಟಣೆಯ ಮಹಾಜನದೊಳುಕೃಷ್ಣಾಜಿನದವರ ಕೈ ಪೆಟ್ಟು ಕಾಣುತ್ತ ಕಂಗೆಟ್ಟು ಹರಿಹರಿಯೆನುತಲಿಗಟ್ಟಿ ಮನಸಿನಲಿ ತಲೆಚಿಟ್ಟಿಟ್ಟು ಶೀಘ್ರದಲಿಕಟ್ಟಂಜನಕೆ ಪೋಗುತಬೆಟ್ಟದಧಿಪತಿ ನಿನ್ನ ದೃಷ್ಟಿಯಿಂದಲಿ ನೋಡೆಸುಟ್ಟೆ ಎನ್ನಯ ದುರಿತವಾ-ದೇವಾ 2ಶಿರದಲಿ ರವಿಕೋಟಿ ತೇಜದಿಂದೆಸೆಯುವಕಿರೀಟವರಕುಂಡಲಗಳಕೊರಳಲ್ಲಿ ಸರವೈಜಯಂತಿವನಮಾಲೆಯನುಪರಿಪರಿಯ ಹಾರಗಳನುಉರದಿ ಶ್ರೀವತ್ಸವನು ಕರದಿ ಶಂಖ-ಚಕ್ರಗಳವರನಾಭಿಮಾಣಿಕವನುನಿರುಪ ಮಣಿಖಚಿತಕಟಿಸೂತ್ರಪೀತಾಂಬರವಚರಣಯುಗದಂದುಗೆಯನು - ಇನ್ನು 3ಇಕ್ಷುಚಾಪನ ಪಿತನೆ ಪಕ್ಷೀಂದ್ರವಾಹನನೆಲಕ್ಷ್ಮೀಪತಿ ಕಮಲಾಕ್ಷನೆಅಕ್ಷತ್ರಯಅಜಸುರೇಂದ್ರಾದಿವಂದಿತನೆಸಾಕ್ಷಾಜ್ಜಗನ್ನಾಥನೇರಾಕ್ಷಸಾಂತಕ ಭಕ್ತ ವತ್ಸಲ ಕೃಪಾಳು ನಿರಪೇಕ್ಷ ನಿತ್ಯತೃಪ್ತನೇಕುಕ್ಷಿಯೊಳಗಿರೇಳು ಭುವನವನು ಪಾಲಿಪನೆರಕ್ಷಿಸುವುದೊಳಿತು ದಯದಿ -ಮುದದಿ 4ಉರಗಗಿರಿಯರಸ ನಿನ್ನಚರಣನೋಡಿದ ಮೇಲೆಉರಗಕರಿವ್ಯಾಘ್ರ ಸಿಂಹಅರಸು ಚೋರಾಗ್ನಿ ವೃಶ್ಚಿಕ ಕರಡಿ ಮೊದಲಾದಪರಿಪರಿಯ ಭಯಗಳುಂಟೇಪರಮವಿಷಯಗಳ ಲಂಪಟದೊಳಗೆ ಸಿಲುಕಿಸದೆಕರುಣಿಸುವುದೊಳಿತು ದಯವಾಸ್ಮರಗಧಿಕ ಲಾವಣ್ಯಪುರಂದರವಿಠಲನೇಶರಣಜನ ಕರುಣಾರ್ಣವಾ ದೇವಾ 5
--------------
ಪುರಂದರದಾಸರು
ನಿಲ್ಲಬೇಕಯ್ಯಾ ನೀನು ಕೃಷ್ಣಯ್ಯಾನಿಲ್ಲಬೇಕಯ್ಯಾ ನೀನು ಪನಿಲ್ಲಬೇಕಯ್ಯಾ ನೀಮಲ್ಲಮರ್ದನಸಿರಿವಲ್ಲಭಎನ್ನ ಹೃದಯದಲಿ ಸತತಅ.ಪಸುಪ್ಪಾಣಿಮುತ್ತಿಟ್ಟು ನೋಡುವೆ ನಿನ್ನಚಪ್ಪಾಳಿ ತಟ್ಟುತ ನಾ ಪಾಡುವೆ ||ಅಪ್ಪ ಶ್ರೀ ಕೃಷ್ಣ ನಿನ್ನನೆತ್ತಿ ಮುದ್ದಿಸಿಕೊಂಬೆಸರ್ಪಶಯನ ಕೃಪೆ ಮಾಡೆಂದು ಬೇಡುವೆ 1ಚೆಂದದ ಹಾಸಿಗೆ ಹಾಸುವೆಪುನಗುಗಂಧದ ಕಸ್ತೂರಿಯ ಪೂಸುವೆ ||ತಂದು ಮುದದಿ ಮುತ್ತಿನ ಹಾರ ಹಾಕುವೆಅಂದದಿಂದಲಿ ನಿನ್ನನೆತ್ತಿ ಮುದ್ದಿಸಿಕೊಂಬೆ 2ನೀಲದ ಕಿರೀಟವನಿಡುವೆ ಬಲುಬಾಲಲೀಲೆಗಳನು ಪಾಡುವೆ ||ಚೆಲ್ವ ಶ್ರೀಪುರಂದರವಿಟ್ಠಲರಾಯನೆನಿಲ್ಲು ಎನ್ನ ಮನದಲಿ ಒಂದೇ ಗಳಿಗೆ 3
--------------
ಪುರಂದರದಾಸರು