ಒಟ್ಟು 381 ಕಡೆಗಳಲ್ಲಿ , 66 ದಾಸರು , 324 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಧ್ಯಾಯ ಏಳು ಜ್ಞಾಪಿತೋ ಬಕುಲಾವಾಕ್ಯಾಚ್ಛುಕ ಜೀವಾನು ಮೋದಿತಃ ಭೂಪೇನ ನಿಶ್ಚಿತೋ ಮಾಯಾದ್ವಿಪಹಾ ಯೋವರೋ ಹರಿಃ ವಚನ ಅರಸಿ ತನ್ನ ತೊಡೆಯಲಿರುವ ಪರಿಯು ಮಾತಾಡಿದಳು ಕೊರವಿ ಮಾತಿನರಗಿಳಿಯೆ ನೀನು ಅರಸಿ ಮಾತಿಗೆ ಬಾಯ ತೆರೆದು ಮಾತಾಡದಲೆ ಪರಮಗಂಭೀರ ಳಾಗಿರುವ ಪದ್ಮಾವತಿಯ ಕರಪಿಡಿದು ಏಕಾಂತ ದಲಿ ಕೇಳಿದಾಗ ಪರಮ ಅಂತ:ಕರಣೆ ಪರವಶದಿ ಆಗ 1 ರಾಗ:ಭೈರವಿ ಅಟತಾಳ ನಾ ಕೊಡಲೋಪ ಪ್ರೀತಿಯ ಮಗಳೆ ನಿನ್ನ ಮಾತಿಗೆ ಹೊರ್ತಿಲ್ಲ ಖ್ಯಾತೀಲೆ ವೇಂಕಟನಾಥ ನೆಂತೆನಿಪಗೆ ಅ.ಪ ಅರಸಗೆ ಪೇಳಲ್ಯೊ ನಾ ಬಲ್ಲಂಥ ಹಿರಿಯರ ಕೇಳಲ್ಯೊ ಸರಿ ಬಂದವರ ನೋಡಿಕಳಹಲ್ಯೊ 1 ಮಂದಿಯ ಕೇಳಲ್ಯೋ ನಾ ಕೊಡಲಾರದೆ ಜರಿಯಲÉ್ಯೂೀ 2 ಮಿತ್ರೇರ ಸಂಗತಿಯೋ ಅದು ಮಿಥ್ಯವೋ 3 ವಚನ ಕಾಮಜನಕರ ಸ್ಮರಿಸುತಲೆ ಜನರಮುಂದ್ಹೇಳುವದಕನು ಬಂದದÀು ತಾನೆ ಅನು ಅಪಹಾಸ್ಯವನು ಒಬ್ಬರನೋವು ತನಗೆಂಬುವದÀು ಹೇಳುವದಕನುಮಾನವ್ಯಾಕೆ 1 ರಾಗ:ನೀಲಾಂಬರಿ ಭಿಲಂದಿತಾಳ ಪತಿ ಅವನ ಸರಿಯಿಲ್ಲವನಿಯೊಳಗ ಅವನೇ ಜಗಜ್ಜೀವನನೆ ಪ ಮಂಜುಳಮಾತಿಗೆ ರಂಜ ಪಾದ ಕಂಜಕೆ ಅರ್ಪಿಸು ಅಂಜುವದ್ಯಾಕಮ್ಮ ಅಂಜನಾದ್ರೀಶಗೆ ಅಂಜಲುಬೇಡ ನಿರಂಜನೆ ಭಯಭಂಜನೆ 1 ಹೂವಿನ ತೋಟಕೆ ಪೋಗಲು ಚಿತ್ತಪಲ್ಲಟವಾಗಿ ನೀಟಾಗಿ ನಿರ್ಮಿಸಿ ಆಟವಮಾಡುವ ಕಪಟ ನಾಟಕನೆ 2 ಭೂಷಣ ಉರದಲ್ಲಿ ಶ್ರೀವತ್ಸವು ಚಲ್ವಿಕೆ ನೋಡಲು ಎಲ್ಲ ಜ್ಯೋತಿಗಳವನಲ್ಲಿ ನಿವಾಳಿಸಿ ಚಲ್ಲವುದು ಅಲ್ಲೇನಿಲ್ಲೆಂದು ಮತ್ತೆಲ್ಲಿ ಹಂಬಲಿಸದೆ ಅಲ್ಯವಗರ್ಪಿಸು ಆಹ್ಲಾದದಿಂದಲ್ಲೇ ಬಲ್ಲಿದನಾಂತಾದ್ರಿಯಲ್ಲಿರುವ ಎನ್ನೊಲ್ಲಭನೆ ಪ್ರಾಣದೊಲ್ಲಭನೆ 3 ವಚನ ಮಗಳಿಗÉಂದಳು ನಾ ನಿನ್ನ ಜಗ ಗಗನ ರಾಜನ ರಾಣಿ ಸುಗುಣ ಬಕುಲಾ ಬರುವರ ಕೂಡಿ ಬರುವಳಾ ಅಗಸಿಯೊಳಗೆ 1 ಹೊರಳಿ ನೋಡಿದ ಬರುವಳಿವಳ್ಯಾರೆಂದು ಕೊರವಿ ಕರೆಸಿದಳು ಬೇಗ ಸರಸಿ- ಎಂದು ಸುರಿಸಿ ಅಮೃತದ ವಾಣಿ ಬೆರೆಸಿ ಸ್ನೇಹವ ಮತ್ತೆ ತರಿಸಿ ರತ್ನದಪೀಠ ಇರಿಸಿ ಕೂಡೆಂದು ಕುಳ್ಳಿರಿಸಿ ಕೇಳಿದಳಾಗ ಹರುಷದಿಂದಾ2 ರಾಗ:ಗೌರಿ ಆಟತಾಳ ಲಲನೆ ನೀ ದಾರಮ್ಮ ಹೆಸರೇನು? ಶೇಷಾ ಚಲವಾಸಿ ಬಕುಲಾವತಿ ನಾನು 1 ಎಲ್ಲಿಗ್ಹೋಗುವೆ ಮುಂದೆ ನೀನು? ತಿಳಿ ಇಲ್ಲಿಗೆ ಬಂದೆ ನೇಮಿಸಿ ನಾನು 2 ನಿನ್ನ ಮನದ ಕಾರ್ಯಗಳೇನು? ಮುಖ್ಯ ಕನ್ಯಾರ್ಥಿಯಾಗಿ ಬಂದೆನು ನಾನು 3 ದಾವಾತ ವರನಾಗಿರುವನು?ದಿವ್ಯ ದೇವ ನೆಂದೆನಿಸುವ ತಿಳಿ ನೀನು4 ಕೃಷ್ಣವೇಣಿಯೆ ಅವನ್ಹೆಸರೇನು? ಶ್ರೀ ಕೃಷ್ಣನೆಂದೆನಿಸುವ ತಿಳಿ ನೀನು5 ತಾಯಿ ತಂದೆಗಳೆಂಬುವರಾರು?ತಿಳಿ ದೇವಕಿ ವಸುದೇವರು ಅವರು 6 ಚಂದಾಗಿ ಕುಲದಾವದ್ಹೇಳಮ್ಮ ಶುಭ ಚಂದ್ರಮನ ಕುಲಕೇಳಮ್ಮ 7 ಶ್ರೇಷ್ಠವಾಗಿಹ ಗೋತ್ರದಾವದು?ವಾ ಶಿಷ್ಠ ನಾಮಕವಾಗಿರುತಿಹುದು 8 ನಕ್ಷತ್ರ ಪೇಳು ಪನ್ನಗವೇಣಿ ಶ್ರವಣ ನಕ್ಷತ್ರ ತಿಳಿ ರಾಜನ ರಾಣಿ 9 ವಿದ್ಯೆಯಿಂದ ಹ್ಯಾಂಗಿರುವ? ಬ್ರಹ್ಮ ವಿದ್ಯೆಯಿಂದಲಿ ಗಮ್ಯ ಎನಿಸುವ 10 ಧನವಂತನೇನಮ್ಮ ಗುಣನಿಧಿಯೇ? ಬಹು ಧನವಂತರಾಗುವರವನಿಂದೆ 11 ಕಣ್ಣುಮೂಗಿಲೆ ಹ್ಯಾಗಿರುವವ?ಕೋಟಿ ಮನ್ಮಥ ಲಾವಣ್ಯ ಎನಿಸುವ 12 ಹೆಣ್ಣಿನ ಮನಸೀಗೆ ಬಂದೀತೇ? ಅವನ ಕಣ್ಣಿಲಿ ಕಂಡರೆ ತಿಳಿದೀತೆ 13 ಅದಾವು ದಿವಸೆಷ್ಟು ಪೇಳಮ್ಮಾ?ಇಪ್ಪ- ತ್ತೈದರ ಮೇಲಿಲ್ಲ ತಿಳಿಯಮ್ಮ 14 ಚಿಕ್ಕಂದು ಮದುವೆ ಇಲ್ಯಾಕಮ್ಮ?ಅವನ ತಕ್ಕ ಹೆಂಡತಿ ಇರುತಿಹಳಮ್ಮ 15 ಮುಖ್ಯಳಿರಲು ಮದುವ್ಯಾಕಮ್ಮ?ತಿಳಿ ಮಕ್ಕಳಿಲ್ಲದ ಕಾರಣವಮ್ಮ 16 ನೇಮದಿಂದಿರುತಿಹ ತಾನೆಲ್ಲಿ ತಿಳಿ ಶ್ರೀಮದನಂತಾದ್ರಿಯಲಿ 17 ರಾಗ:ಯರಕಾಲ ಕಾಂಬೋದಿ ಭಿಲಂದಿತಾಳ ಕಾಂತನ ಮುಂದ್ಹೇಳಿದಳೇ ಅಂತರಂಗದೊಳು ಚಿಂತೆ ಮಾಡಲು ಬೇಡ ಕೇಳು ಸಂತೋಷದ ಸುದ್ದಿ 1 ಕೊರವಿ ಬಂದಿದ್ದಳು ಮರಗುತ ಮಲಗಿದ ಕೊರವಿ ಕಾಲ್ಗುಣದಿ 2 ಪರಿ ಕೊರವಿ ನಾಡ ಸಖಿಯರ ಕೂಡಿ ಪ್ರೌಢ ಪುರುಷನ 3 ಪ್ರಾಕೃತ ಪುರುಷನಲ್ಲ ಜ್ವರಮಗಳಿಗೆ ಬಂತೆಂದು ಕಾಮಜ್ವರವಂತೆ ಕೇಳು 4 ನಾಶಾವಾಯಿತು ಇನ್ನು ನಿತ್ಯನಿವಾಸಿಯೆನಿಸುವ ಅವಗೆ ತೋಷದಿ ಕೊಟ್ಟರೆ ಜ್ವರ ನಿಶ್ಯೇಷ ಹೋಗುವದು 5 ಎನ್ನ ಮನೆಯಲಿ ಚೆನ್ನಾಗಿ ಪೇಳುವಳು ಚೆನ್ನಿಗವನನ್ಯಾರೆಂದು 6 ಪೇಳುವಳು ಇನ್ಯಾತಕೆ ಸಂಶಯ ಮಾಡಿನ್ನು ಶುಭಶೀಘ್ರಾ 7 ವಚನ ಸಂಭ್ರಮದಿ ಆನಂದವೆಂಬ ತುಂಬ ರೋಮಗಳುಬ್ಬಿ ರಂಭೆ ಪೂರ್ವದ ಪುಣ್ಯ ಎಂಬುವರು ಮುಕ್ತ ಬಹಳ ಗಂಭೀರ ಅಂಬುಜೋದ್ಬವ ಪಿತನ ತುಂಬಿ ಕುಳಿತದ್ದು ಕಣ್ಣುತುಂಬ ನೋಡೇನು ಎಂದು ಅಂಬುಜಾಕ್ಷಿ 1 ಆಕಾಶಪರಿವೃಡನು ಕ್ಲೇಶದ ಮಗಳಿದ್ದಲ್ಲೆ ನಡೆದು ಒಡೆದು ಆಡಿದನು ಹರುಷ ಹಿಡಿಯಲಾಗದು ನಿನ್ನೊಳು ನೀನೆ ಮಿಡುಕಿ ಬೇಡ ಎನ್ಹಡೆದವ್ವನೆ ನೀನು ಮೂಡಲಗಿರಿ ಒಡೆಯ ವೇಂಕಟಪತಿಗೆ ಕೊಡುವೆ ನಿನ್ನ 2 ಶುಭ ಪತ್ರವನು ಕೊಟ್ಟು ಬೃಹಸ್ಪತಿಯು ವೃತ್ರಾರಿ ಧರಿತ್ರೀಯಲ್ಲೀ ಪೃಥ್ವೀಶ ತಾನು ನತಿಸಿ ವಿಧಿಯುಕ್ತ ಪೂಜೆ ಉತ್ತಮನೆ ನೀ ಕೇಳು ಸತ್ಯ ನಿತ್ಯ ನೀನೆ 3 ಪನ್ನಗಾಚಲದಲ್ಲಿ ನಿನ್ನ ಅನುಮತಿಯಿಂದ ಬಿನ್ನಹದ ನುಡಿ ಕೇಳಿ ಮನಸಿಗೆ ಹರುಷ ಪೇಳುವೆ ಕೇಳು ಚನ್ನಾಗಿ 4 ನಿತ್ಯ ಅವನ ಆ ವಿಸ್ತಾರವೆಲ್ಲ ಪಂಚಕೋಶದಲಿ ಇಲ್ಲಿರುವ ಅವನೇ ಶ್ರೀ ಶುಕಾಚಾರ್ಯ
--------------
ಅನಂತಾದ್ರೀಶ - ಕಥನಕಾವ್ಯಗಳು
ಅಧ್ಯಾಯ ಹತ್ತು ತಾಕ್ರ್ಷಸ್ಕಂಧ ಸಮಾರೂಢಃ ಶ್ರೀ ಬ್ರಹ್ಮಾದಿಭಿರಾವ್ನತಃ | ಧ್ವನಿ ಪರಿ ಪರಿ ಪ ಗರುಡನೇರಿದ ಶ್ರೀನಿವಾಸನು ರಾಜ ವರ ಹಂಸವನೇರಿದ ಬ್ರಹ್ಮನು ತ್ವರ ನಂದಿಯೇರಿದ ರುದ್ರನು ಅ ವರ ನಡುಮಧ್ಯೆ ನಡೆದ ಶ್ರೀಹರಿ ತಾನು 1 ದೇವಿಯೇರಿದಳಾಗ ರಥದಲಿ ಬಕುಲಾ ದೇವಿ ಯೇರಿದಳೊಂದು ರಥದಲಿ ಕೇವಲ ತಮ್ಮ ತಮ್ಮ ರಥದಲಿ ಉಳಿದ ದೇವಿಯರೇರಿ ಕೊಂಡರು ಅಲ್ಲಿ 2 ಉತ್ತಮ ಮಂಗಳವಾದ್ಯವು ನË ಬತ್ತು ನಗಾರಿಗಳಾದವು ಮತ್ತೆ ಉಳಿದ ಎಲ್ಲ ವಾದ್ಯಗಳು ಬಹು ವತ್ತಿ ಶಬ್ದಮಾಡಿ ನುಡಿದವು 3 ನಡೆದರು ಋಷಿಗಂಧರ್ವರು ಬಹು ಸಡಗರದಿಂದಲ್ಲೆ ಅಪ್ಸರರು ಬಡವ ಬಗ್ಗರು ಉಳಿದ ಮನುಜರು ಬಹು ಗಡಿಬಿಡಿಯಿಂದಲ್ಲೆ ನಡೆದರು 4 ಕುಂಟರು ಕುರುಡರು ಕಲ್ಲು ಕಂಟಕ ಕಾಲಿಲೆ ತುಳಿವವರೂ ಗಂಟು ತಲಿಯಲಿಟ್ಟುನಡಿಯುವರು ತಪ್ಪ ಗಂಟಾಗಿ ಒದರುತಲಿಹರು 5 ಕೆಲವರು ಗಂಡನ ಒದರುವರು ಮತ್ತ ಕೆಲವರು ಮಕ್ಕಳನೊದರುವರು ಕೆಲವರು ಎಡವುತಲಿರುವರು ಮತ್ತು ಕೆಲವರು ಭರದಿಂದ ಬೀಳುವರು 6 ಕೆಲವರೆಳೆದು ಎಬ್ಬಿಸುವರು ಮತ್ತು ಕೆಲವರು ನೋಡುತ ನಗುವವರು ಬಾಲರಳುವ ಧ್ವನಿ ಆಯಿತು ಜಗತ್ ಪಾಲನಸೈನ್ಯ ನಡೆಯಿತು ಮೇಲಾದನಂ ತಾಂದ್ರೀ ಇಳಿಯಿತು ಭೂಪಾಲಪುರದ್ಹಾದಿ ಹಿಡಿಯಿತು7 ವಚನ ಶೈಲವನು ಹಿಡಿದು ಭೂಪಾಲನಪುರತನಕ ಸಾಲ್ಹಿಡಿದು ನಡೆವಂಥ ಕಾಲದಲಿ ಮತ್ತಲ್ಲಿಡುವದಕ್ಕೆ ಎಳ್ಳು ಕಾಳಷ್ಟು ಸ್ಥಳವಿಲ್ಲ ಶ್ರೀಲಲಾಮನು ಮಧ್ಯಸಾಲಿನ ಮಧ್ಯಾಹ್ನ ಕಾಲ ದಲಿ ಶುಕಮುನಿಯ ಆಲಯಕೆ ಬಂದು ಕಾಲಿಗೆರಗಿದನು ಆಕಾಲಕೆ ಮುನಿ ಬಂದು ಹೇಳಿಕೊಂಡೀ ಪರಿಯು ಶೈಲ ಭೋಜನವು ಎನ್ನ ಮೇಲೆ ಕರುಣಿಯಿಂದಾ 1 ಹೀಗೆಂದು ನುಡಿದ ಶುಕಯೋಗಿಯ ವಚನವ ಕೇಳಿ ಬಾಗಿ ತಾ ನಮಿಸುತಲೆ ಆಗ ಶ್ರೀಹರಿ ನುಡಿದ ಯೋಗಿಗಳು ನಾ ಸಂಸಾರಿ ಆಗಿ ಇರವೆ ಇಲ್ಲೆ ಉಂಡರೆ ಮಿತಿಯ ಇಲ್ಲದಲೆ ಪುರದಲ್ಲೆ ಪೋಗುವುದು 2 ಮುನಿ ಮಂಡಲೇಶನು ಕೇಳಿಕೊಂಡು ಹೀಗೆಂದು ಬ್ರಹ್ಮಾಂಡ ಪತಿಯೆ ಒಬ್ಬ ಉಂಡರೆ ಜಗವೆಲ್ಲ ಉಂಡಂತೆ ಆಗುವುದು ಪುಂಡರೀಕಾಕ್ಷಾ ಭಾಳ ಕೇಳುತಲೆ ಮುಂದೆ ಬಾಲಕನ ಮುಖನೊಡಿ ಬಾಲೆ ನುಡಿದಳು ಬಕುಲ ಮಾಲಿಕೆಯು ತಾನು3 ಧ್ವನಿ:ವಸಂತಭೈರವಿ ಆದಿತಾಳ ತರವೆ ಹರಿಯೆ ಈ ಪರಿಯ ಮಾಡುವದುಪ ಸುಖಕರವಾಗಿಹ ಶುಕಮುನಿ ವಚನವು || ಲಕ್ಷಿಸದೆ ಶುಭಕಾರ್ಯಕೆ ಪೋಗುವದೂ 1 ಬಲ್ಲಿದ ಶಕುನವು ಇಲ್ಲೆನಿನಗೆ ತಿಳಿ| ಊಟಕೆ ಒಲ್ಲೆನೆಂಬುವದೂ 2 ಶ್ರೀಶ ಅನಂತಾದ್ರೀಶ ಮಹಾತ್ಮರ|| ಭಾಷೆಯ ಕೇವಲುದಾಸೀನ ಮಾಳ್ಪುದು 3 ವಚನ ಹೆತ್ತಾಯಿ ಪರಿಯಾಗಿ ಹೊತ್ತು ಹೊತ್ತಿಗೆ ತನಗೆ ಅತ್ಯಂತ ಹಿತ ಮಾಡುತಿರ್ದ ಬಕುಲಾವತಿ ಸತ್ಯವಚನ ಹರಿಯು ಮತ್ತು ಶುಕಮುನಿಗೆ ಉತ್ತರವ ಕೇಳಿ ಮುನಿ ಉತ್ತರಣೆಯು ಬೀಜ ಒತ್ತಿಕೈಯಲಿ ಮಾಡಿ ವೃತ್ತಾದ ಗುಳ್ಳ ಫಲದುತ್ತಮೋತ್ತಮಶಾಕ ತಿಂತ್ರಿಣಿಯ ರಸಸಹಿತ ಪಾತ್ರದಲಿ ಬಡಿಸಿ ಸತ್ಪಾತ್ರನಾಗಿರುವ ಸರ್ವೋತ್ತಮಗೆ ಅರ್ಪಿಸಿದ ಭಕ್ತಿಯಿಂದ 1 ತೃಪ್ತನಾದನು ನಿತ್ಯತೃಪ್ತ ಹರಿ ತಾ ಉಂಡು ಮತ್ತೆ ಮುನಿಗಳು ಎದ್ದರತ್ಯಂತ ಕೋಪದಲಿ ಚಿತ್ತಜನ ಪಿತ ಅವರ ಚಿತ್ತವೃತ್ತಿ ಸತ್ಯದಲಿ ಎಲ್ಲರಿಗೂ ತೃಪ್ತಿಯಾಗಲಿ ಎಂದು ತಿಳಿದು ಪೂತ್ಕಾರ ಮಾಡಿದನು ತತ್ಕಾಲದಲ್ಲಿ ಉತ್ತಮಳು ಶ್ರೀರಮಾ ಮತ್ತೆ ಬ್ರಹ್ಮಾದಿಗಳು ಸುತ್ತಸನ ಶುಕ ಸತ್ವ ಶೀಲರು ಉಳಿದ ಸುತ್ತೆಲ್ಲ ಜನರು ಸಂತೃಪ್ತರಾದರು ಹರಿಯ ಫೂತ್ಕಾರದಿಂದ 2 ನಿದ್ರೆಯನು ಮಾಡಿ ಅಲ್ಲಿದ್ದು ಆ ರಾತ್ರಿಯಲಿ ಎದ್ದು ಮರು ಕೂಡಿ ವಾದ್ಯ ವೈಭವ ದಿಂದ, ಸಿದ್ಧಾಗಿ ಬಂದರು ವಿಯದ್ರಾಜನ ಪುರಕೆ ಶುದ್ಧ ಸಂಜೆಯಲಿ ಮುದ್ದು ವೇಂಕಟ ಬಂದ ಸುದ್ದಿಯನು ಕೇಳುತ ವಿಯದ್ರಾಜ ತಾ ಬಹಳ ಉದ್ರೇಕದಿಂದಲೆ ಇದ್ದ ಜನರನು ವೈಭವದಿಂದ ಸಿದ್ಧನಾಗಿ3 ಧ್ವನಿ:ಕಾಂಬೋಧಿ ಆದಿತಾಳ ಆಕಾಲದಲಿ ಕಂಡನು ಹರಿಯಮುಖ ಆಕಾಲದಲಿ ಕಂಡನು ಎಲ್ಲರ ಕೂಡ ಆಕಾಶ ರಾಜನು ತಾನು1 ಹರುಷದಿಂದಲಿ ಉಬ್ಬಿದ ಹರಿಯ ಕಂಡು ಹರುಷದಿಂದಲಿ ಎದರುಗೊಂಡು ವರಪೂಜೆಯನು ಮಾಡಿದ 2 ಅಳಿಯಗಾಭರಣವನು ವಸ್ತ್ರವ ಕೊಟ್ಟು ಅಳಿಯಗಾಭರಣವನು ಉತ್ಸವದಿಂದೆ ಕಳಿಸಿ ಮನೆಗೆ ಪೋದನು3 ಶ್ರೀನಾಥದೇವ ತಾನು ಆ ಕಾಲಕ್ಕೆ ಶ್ರೀನಾಥದೇವ ತಾನು ಕರೆದುತೊಂಡ ಮಾನರಾಜಗೆ ನುಡಿದನು 4 ಹಸಿದು ಬಂದೆವು ನಾವೆಲ್ಲ ಉಣ್ಣದೆ ಬಹಳ ಹಸಿದು ಬಂದೆವು ನಾವೆಲ್ಲ ಬೇಗನೆ ಪಾಕ ಹಸನಾಗಿ ಮಾಡಿಸೆಲ್ಲ5 ಅಕ್ಕರದಲಿ ರಾಜನು ಆನುಡಿ ಕೇಳಿ ಅಕ್ಕರದಲಿ ಮಾಡಿಸಿದನು ರುಕ್ಕೋತದಡಿಗೆಯನು 6 ಮಂಡಿಗೆ ಗುಳ್ಳೋರಿಗೆ ಶಾವಿಗೆ ಮೊದಲು ತೊಂಡಮಾನÀನು ಚಂದಾಗಿ 7 ಹರಿಗೆ ಅರ್ಪಣೆ ಮಾಡಿದ ಎಲ್ಲರ ಕೂಡಿ ಹರಿಯು ಭೋಜನ ಮಾಡಿದ 8 ಆನಂದದಿಂದಿದ್ದನು ಆ ರಾತ್ರಿಯೊಳ್ ಆನಂದದಿಂದಿದ್ದನು ಮಾಡಿದ ನಿದ್ರೆ `ಅನಂತಾದ್ರೀಶ' ತಾನು 9 ವಚನ ಶ್ರೀನಿವಾಸ ಎದ್ದು ತಾನು ಮರುದಿನದಲಿ ಮಾನಿತ ವಶಿಷ್ಠ ಲಕ್ಷ್ಮೀಸಹಿತ ನೀನು ಬ್ರಹ್ಮನು ಮತ್ತೆ ಮಾನಿತಳು ಎನ್ನತಾಯಿ ತಾನು ಐವರು ಅನ್ನಹೀನರಗಿರುವುದು ಖೂನದಲಿ ಕನ್ನಿಕೆಯ ದಾನ ಪರ್ಯಂತ ಮಾನಿತನು ಆರಾಜಮಾನಿನಿಯು ಮತ್ತೆ ವಸು ದಾನರಾಜನು ಅನ್ನರಹಿತರೈವರು ಅವರು ಖೂನದಲಿ ಕನ್ನಿಕೆಯ ದಾನಪರ್ಯಂತ 1 ಪೇಳು ಅರಸನಿಗೆಂದು ಹರಿಯು ಹೇಳಿದಂತಾ ಭೂಮಿಪಾಲ ಮಾಡಿದನು ಮುನಿಹೇಳಿದಂತೆ ಮೇಲೆ ಮುನ್ನ ಸಾಯಾಹ್ನಕಾಲದಲಿ ಚತುರಂಗ ಸಾಲ ಸೈನ್ಯವು ನಡೆಸಿ ಕಾಳಿ, ಕರ್ಣಿಯ ತೂರ್ಯ, ತಾಳಮದ್ದಲೆ ಮೊದಲು ಭಾಳವಾದ್ಯ ಗಳಿಂದ ಮೇಲಾದ ಗುರುಮುಂದೆ ಮೇಲೆ ತನ್ನವರಿಂದ ಕಾಲನಡುತಿಯಲೆ ಹರಿಯ ಆಲಯಕೆ ಬಂದ 2 ಈ ವ್ಯಾಳ್ಯದಲಿ ಧರಣಿದೇವಿ ತಾ ಲಜ್ಜೆಯಲಿ ದೇವ ಗುರು ಬ್ರಹಸ್ಪತಿಯ ಕೇವಲಾಜ್ಞದಿ ದೇವದೇವ ಎನಿಸುವ ಅಳಿಯ ಶಾವಿಗೆಯ ಪರಮಾನ್ನ ವಿಯದ್ರಾಜ ಮುಂದಾ ವೇಳೆಯಲಿ ಐರಾವತದ ಮೇಲೆ ದೇವನ ಕುಳ್ಳಿರಿಸಿ ಬಂದನು ಮನೆಗೆ ತೀವ್ರದಿಂದ 3 ಆಕಾಲದಲಿ ತೋಂಡ ಸತಿ ನಿವಾಳಿಸುವತ ಚಲ್ಲಿದಳು ಶೈಲದೊಡೆಯನು ಗಜದ ಮೇಲಿಂದ ಇಳಿದು ಆಮೇಲೆ ತಾ ಬಂದಾ ಸುವಿಶಾಲ ಮಂಟಪಕೆ ಮೇಲಾದ ಗದ್ದಿಗೆಯ ಮೇಲೆ ವೇಂಕಟರಮಣನು ಕಾಲಿಟ್ಟು ಕುಳಿತನಾಮೇಲೆ ಬ್ರಹ್ಮಾದಿ ಗಳು ಗಾಲವ, ವಶಿಷ್ಠಮುನಿ ವಾಲ್ಮೀಕಿ ಭೃಗು ಜಟಾಜಾಲ ಸಂಪನ್ನ, ಶುಕ, ದಾಲ್ಭ್ಯ ಮೊದಲಾದವರು ಸಾಲ್ಹಿಡಿದು ಕುಳಿತರಾ ಕಾಲಕ್ಕೆ ಎಲ್ಲಾ ಒದಗಿ ಬೇಗನೆ ವಿಷ್ಣು ಪದರಾಜ4 ತೊಳೆದು ಆ ಉದಿಕ ಮಧುಸೂದನನ ಪೂಜೆ ಮಧುಪರ್ಕದಿಂದ ಬುಧಜನರು ಪೇಳಿದಾಜ್ಞೆಯಲಿ ಗೃಹ ದೇವತಾಸನದಲಿ ಹರಿಯ ಧ್ಯಾನದಲಿ ಇರುತಿರುವ ಮದನ ಮೋಹನ ಸನ್ನಿಧಿಗೆ ಸಮ್ಮುಖವಾಗಿ ಮುದದಿ ಇರಿಸಿದನಾಗ ಬದಿಲಿದ್ದ ಬೃಹಸ್ಪತಿಯ ಒದಗಿ ವಧು ವರಗಳಿಗೆ ವಿಹಿತದ ಅಂತಃಪÀಟವ ಮುದದಿ ಮಧ್ಯದಲ್ಲಿ ಪಿಡಿದು ಒದರಿದನು ಈ ಪರಿಯು ಮದವೆಯ ಕಾಲಕ್ಕೆ ಮಧುರÉೂೀಕ್ತಿಯಿಂದ5 ಧ್ವನಿ:ಸೌರಾಷ್ಟ್ರ ಅಟತಾಳ ಸಾವಧಾನ ಧೇ ವಾಧೀಶನ ಲಗ್ನ ದಿವ್ಯ ವೇಳೆಯಲ್ಲಿ ಸಾವಧಾನ ಪ ಪದ್ಮನಾಭನೆ ನೀನು ಸಿದ್ಧಾಗಿ ಇರು ಕಂಡ್ಯ ಸಾವಧಾನ ಪದ್ಮಾವತಿಯೆ ನೀನು ಪದ್ಮನಾಭನ ಸ್ಮರಿಸು ಸಾವಧಾನ 1 ಫಲಕಾಲದಲಿ ಚಂಚಲರಾಗದಲೆ ನೀವು ಸಾವಧಾನ ಕುಲದೇವಿ ಸ್ಮರಣಿ ನಿರ್ಮಲವಾಗಿ ಮಾಡಿರಿ ಸಾವಧಾನ 2 ಶ್ರೇಷ್ಠಾದ ಅತಿ ವಶಿಷ್ಠ ಮುನಿಗಳೆಲ್ಲ ಸಾವಧಾನ ಸ್ಪಷ್ಟಾಗಿ ಶ್ರೀ ಮಂಗಳಾಷ್ಟಕ ಪಠಿಸಿರಿ ಸಾವಧಾನ 3 ಮಂಗಳ ಮೂರುತಿ ಮನದಿಂ ಸ್ಮರಿಸಿರಿ ಸಾವಧಾನ
--------------
ಅನಂತಾದ್ರೀಶ - ಕಥನಕಾವ್ಯಗಳು
ಅನರತ ಜಿವ್ಹದಿ ಆದಿನಾರಾಯಣನಾ ಕೃಷ್ಣಾ ಎನಬಾರದೆ ಮಹಿಮನಾದ ಕರುಣಾಸಾಗರ ಹರಿಯ ಕೃಷ್ಣಾ ಎನಬಾರದೆ ಪ ಗೋಕುಲವಾಸ ಗೋಪಿಯಕಂದನ ಕೃಷ್ಣಾ ಎನಬಾರದೆ ಕಾಕುಸ್ಥ ತಿಲಕನ ಕನಕಾಂಬರಧರನ ಕೃಷ್ಣಾ ಎನಬಾರದೆ ಶ್ರೀಕರ ಭಕ್ತರ ಪೊರೆವನ ಕೃಷ್ಣಾ ಎನಬಾರದೆ ಕೃಷ್ಣಾ ಎನಬಾರದೆ 1 ನವನೀತ ಚೋರನ ಕೃಷ್ಣಾ ಎನಬಾರದೆ ಸಿಂಧುಶಯನ ಗುಣಸಿಂಧು ಗಂಭೀರನ ಕೃಷ್ಣಾ ಎನಬಾರದೆ ಕೃಷ್ಣಾ ಎನಬಾರದೆ 2 ಕೃಷ್ಣಾ ಎನಬಾರದೆ ಮಾರಜನಕ ಕೋಟಿ ಮನ್ಮಥ ರೂಪನ ಕೃಷ್ಣಾ ಎನಬಾರದೆ ಧೀರ 'ಹೆನ್ನೆವಿಠ್ಠಲ’ ದಿವ್ಯ ಬಿಲವಾಸನ ಕೃಷ್ಣಾ ಎನಬಾರದೆ ದುರಿತ ಕೃಷ್ಣಾ ಎನಬಾರದೆ 3
--------------
ಹೆನ್ನೆರಂಗದಾಸರು
ಅನಿರುದ್ಧ ನೀಯನ್ನ ಮಾಧವ ಕೃಷ್ಣಾ ಪ ಪಾಂಡುತನಯ ಪರಿಪಾಲನ ಹರಿ ವೆತಂಡ ವರದ ಶ್ರೀಕುಂಡಲಿ±ಯÀನ 1 ಅಂಡಜಗಮನ ಪ್ರಂಚಂಡ ಮಹಿಮಾ ಭವ ಖಂಡನ ಮುನಿನುತ ಮಂಡನಭೀಮ 2 ನವನೀತ ಚೋರ ಗೋ ಪಾಲ ಮುರಾರಿ ದಯಾಲು ರಮೇಶ 4 ಕಂಬುಕಂಠ ಕನ ಕಾಂಬರಧರ ಶಶಿ ಬಿಂಬ ವಿಜಿತ ಮುಖ ಅಂಬುರುಹಾಕ್ಷ 5 ಪಾಪರಹಿತ ನಿರ್ಲೇಪ ನಿರಂಜನ ಶ್ರೀಪತಿ ಘನ ಹೆನ್ನೆಪುರನಿಲಯ 6
--------------
ಹೆನ್ನೆರಂಗದಾಸರು
ಅಪ್ಪನ ನೋಡಿರೊ ವರಗಳ ತಪ್ಪದೆ ಬೇಡಿರೋ ಸರ್ಪನಮೇಲೆ ಉಪ್ಪವಡಿಸಿ ಮುಪ್ಪು ಇಲ್ಲದೆ ಭಕ್ತರನ ಪೊರೆವಾ ಪ ಬಲುವಾ ನಂದಗಡಲ ಸುಖವೊ ತೂಗುವ ಸುಳಿಗುರುಳ ಚುಂಚೊ ಸುಂದರದವತಾರ ಮಂದರಧರನೋ 1 ಅರಳಿದ ಸಂಪಿಗೆ ತೆನೆಯು ನಾಸಾ ಕೊನೆಯಲ್ಲಿ ಮಣಿಯು ತರುಳ ಹಾರವೋ ಮುಂದಲೆಯಲ್ಲಿ ಅರಳೆಲೆ ವೈಯಾರವೋ ತಿಲಕಾಂಬರದ ಬಿದಿಗೆ ತಿಂಗಳೊ ಮಕರ ಕುಂಡಲವೊ 2 ಕುಸುಮ ವನದ ಹಬ್ಬೊ ಗಲ್ಲದ ಚಿಬವೊ ಕಮಠದ ಬೆನ್ನೊ ಹೋಲಿಕೆ ಅಧರಾಮೃತದ ಸುರಿಯು ಅಲ್ಲಲ್ಲಿಗೆ ಕಿರಿಬೆವರಿಡೆ ನಿಲ್ಲದೆ ವೀಳ್ಯದ ಜೊಲ್ಲಿನ ಧಾರೆಯು 3 ಬಾಳಿದಿಂಡಿನ ತೋಳು ಕಟ್ಟಿದ ತಾಯಿತಗಳೇಳು ಕೀಲು ಕಡಗ ಝಣವೊ ದ್ವಾರೆ ಘಟ್ಟಿ ಕಂಕಣವೋ ನೀಲದುಂಗುರ ಹರಳೊ ಮುಂಗೈ ಸರಪಳಿಯ ಬೆರಳೊ ಬಾಲಲೋಲ ಗೋಪಾಲನೊ 4 ಪನ್ನಲಗ ಮುರಿಗ್ಯೂರಕ್ಷಿಯ ಮಣಿಯು ಥೋರ ದಾಸರಿಗೆ ಕೌಸ್ತುಭ ಶೃಂಗಾರವೊ ರನ್ನದ ಮಾಲೆ ತುಲಸಿ ಪದಕ ಹಾಕಿದ ಎಣ್ಣಿನುಲೊ ಗೋಪಿ ಮನ್ನಿಸುತಲಿ 5 ಹುಲಿಯುಗುರೂಮುತ್ತಿನಮಾಲಿಕಿಯುಪೂಸಿದಗಂಧಗರೊ ವೀಳೆಯರುಣನೊ ಅಂಗೈಯ ಗೆರೆಯು ವಿಸವ ಲಕ್ಷಣನೊ ವೈಜಯಂತಿ ಸುಳ್ಳುವೊ ಒಲಿಸಿದಳೊ ಮಗನ ಯಶೋದೆ 6 ಕಂಬು ಕೊರಳೊ ಮೂರೇಖಿಯು ಅಂಗೈಯಿವರಿಗೆ ಮರುಳೊ ತುಂಬಿ ಸೂಸುವ ಹೊಳೆಯು ಜಠರದ ನಾಭಿ ತ್ರಿವಳಿಯು ಬಿಸಲಿನ ಘನ ಹರಿಯು ಭೊಂ ಭೊಂ ಭೊಮೆಂದು ಕೊಂಬಿನ ಊದು ಎಂಬೊ ನುಡಿಯಲಿ ರಂಬಿಸಿ ಕೃಷ್ಣನ 7 ಕಮಲದ ಮಗ್ಗ್ಯೊ ಉಂಗುರ ನಡುವಿದು ಅಲಂಕಾರದ ಸುಗ್ಗ್ಯೊ ಅಮಮ ಧೊರೆಯು ನಾದದ ಘಂಟ್ಯೊ ಮಣಿಶಿಂಗನ ಮರಿಯು ಜಾನು ಕನ್ನಡಿ ಕ್ರಮವೊ ಧಿಮಿ ಧಿಮಿ ಎಂದು ರಂಗನ ಕುಣಿಯೆಂದು ನಿಮನಿಮಗೆಲ್ಲ 8 ಕಾಲಲಿಯಿಟ್ಯ ಗೆಜ್ಜ್ಯೋ ಅಂದಿಗೆ ತಪ್ಪು ತಪ್ಪು ಹೆಜ್ಜ್ಯೊ ನೀಳದ ದಂತೊ ಜಂಘ ಸರಪಳಿಯ ಗಗ್ಗರಿಯ ಯಿಂತೊ ನಖ ಕೇದಿಗೆ ಮುಳೆಯು ಲಾಲಿ ಲಾಲಿ ಕಂದ ಎನುತಲಿ ಶ್ರೀ ಲಕುಮಿ ಲೋಲನ ಎಬ್ಬಿಸಿ 9 ನೆರೆದವರಿಗೆ ತರುಳರನೆಲ್ಲಾ ಕರೆದು ಸುತ್ತಲು ನಿಲಿಸಿ ಹರಿಹರಿ ಎಂದು ಹರದಾಡುತಲಿ ಪರಮ ಸಂಭ್ರಮದಿಂದ ಕರೆಕರೆದು ವಿಜಯವಿಠ್ಠಲನ ತರಕಿಸಿ ಸಂತತ ಉಡಿಯಲಿ ಎತ್ತಿ 10
--------------
ವಿಜಯದಾಸ
ಅಂಬಾ ತ್ರಿಪುರ ಸುಂದರೀ ಅದ್ವೈತಕಾರೀ ಸಾಂಬೆ ಪರಬ್ರಹ್ಮಣಿ ಪ ಶುಂಭಾಸುರ ಮರ್ದಿನೀ ಸಹಜಾನಂದೆಕ್ಯವಾಣಿ ತುಂಬುರಗಾನ ಪ್ರಿಯೆ ಮಹಾಮಾಯೆ ಸುಖದಾಯೆ ಸರಸಿಜದಳಾಯೆ ಅ.ಪ. ತ್ರಿದಶ ವಂದಿತೆ ತ್ರಿಮೂರ್ತಿ ತ್ರೈಲೋಕ್ಯಗಾತ್ರಿ ತ್ರಿಗುಣರಹಿತೆ ಪಾರ್ವತಿ ತ್ರಿಪುರ ಪ್ರಹಾರೆ ದೇವೀ ತ್ರಿಶೂಲಧರ ಸಂಜೀವಿ ತ್ರಿಗುಣ ಸೋಮ ಸೂರ್ಯಗ್ನಿ ನೇತ್ರೆ ಶುಭಗಾತ್ರೆ ಸುಚರಿತ್ರೆ ಸನ್ಮುನಿಸ್ತೋತ್ರೆ 1 ಪರತರದೇವಿ ಪರಮಪಾವನ ಪ್ರಭಾವಿ ಪರಮಾತ್ಮ ಸ್ವರೂಪಿಣಿ ಪರಮಾನಂದೆಕ್ಯವಾಣಿ ಪರಿಪೂರ್ಣಭರಿತೆ ಶರ್ವಾಣಿ ಶಿವರಾಣಿ ಫಣಿವೇಣಿ ನಿತ್ಯಕಲ್ಯಾಣಿ 2 ವರಕೊಡಶಾದ್ರಿ ನಿವಾಸೆ ವರÀಸುಪ್ರಕಾಶೆ ವರ ಸಿಂಹಾ ರೂಢೆ ಮಹೇಶೇ ವರದೇ ಶ್ರೀ ಮೂಕಾಂಬಿಕೇ ವಿನುತಾನಂದೈಕ್ಯರೂಪಿ ಗುರುವಿಮಲಾನಂದ ಸ್ವರೂಪಿ ಸುಪ್ರತಾಪಿ ಸ್ತುತಿ ದೀಪಿ ಮಂತ್ರಕಲಾಪಿ 3
--------------
ಭಟಕಳ ಅಪ್ಪಯ್ಯ
ಅಂಬಾ ಮೂಕಾಂಬಾ ಪಾಹಿ ಭಕ್ತಾವಲಂಬಾ ಅಂಬಾ ಮೂಕಾಂಬಾ ಪಾಹಿ ಪ ಶುಂಭ ದನುಜ ಸಂಹಾರಿಣಿ ತಾರಿಣೇ ಶಾಂಭವಿ ಶೂಲಿನಿ ವರಗೌರೀ ಸಾಂಬಶಿವೇ ಸಚರಾಚರ ಸಾಕ್ಷಿಣೆ 1 ಕಾಮ ಜನನಿ ಕರುಣಾ ಜಲಧೇ ಶುಭ ಫಲದೇ ಕಾಮೇಶ್ವರಿ ಕಮಲಾಸನ ಸನ್ನುತೇ ಭೀಮ ಪರಾಕ್ರಮಿ ಭವಭಯ ಭಂಜಿನಿ 2 ವರ ಕುಟಿಜಾಚಲಪುರ ನಿಲಯೇ ಸುರಮುನಿ ಸೇವಿತೆ ಸಹೃದಯೇ ಶರಣಾಗತ ಪರಿಪಾಲಿತೆ ಸುಲಲಿತೆ ಗುರುವಿಮಲಾನಂದಭರಿತೆ ಮೂಕಾಂಬಿಕೆ ಶ್ರೀ ಶ್ರೀ ಶ್ರೀ 3
--------------
ಭಟಕಳ ಅಪ್ಪಯ್ಯ
ಅವನೆವೆ ಯೋಗ್ಯ ನೋಡಿರೈ ಭಕುತಿಗೆ | ಸಾಯಾಸವಿಲ್ಲದ ಯೈದನವನಿಯೊಳಗ ಮುಕುತಿಗೆ ಪ ನಿತ್ಯ ಶ್ರವಣ ಮಾಡಲೆಂದು ಬ್ಯಾಸರಾ | ಹ್ಯಾವ ಹೆಮ್ಮೆಯಲ್ಲಿ ಕಳಿಯ ವ್ಯರ್ಥವಾಸರಾ | ನೋವ ಮಾಡುತಿರಲು ತಾಪತ್ರಯದ ತೂರಾ | ಬಳಲ ಆವಗಿರುವ ಕೂಡಿಕೊಂಡು ಹರಿಯ ದಾಸರಾ 1 ನ್ಯೂನ ನೋಡದೆ ಪರರ ಸದ್ಗುಣವನೆ ಕೊಂಬನು | ದಂಭ | ಮಾನ ತೊರೆದು ಸ್ತುತಿಯ ನಿಂದ್ಯ ಸರಿಯ ಕಾಂಬನು | ಜ್ಞಾನದಿಂದ ಪಡೆದು ಗುರುಹಿರಿಯರಿಂಬನು | ತ್ವರಿತ | ಸ್ವಾನುಭವದ ಸೌಖ್ಯಸಾರ ಸವಿಯನುಂಬನು 2 ಬಲಿದು ಭಾವನಿಂದ ತಿಳಿದು ಸ್ವಹಿತುಪಾಯನು ದೃಢದಿ | ಹುಲು ಮನಿಜರಿದಿರ ಹೋಗಿ ದೆರಿಯ ಬಾಯನು | ತಳೆದು ವೇಷದಿಂದ ದಣಿಸವಾವ ಕಾಯನು | ಹೃದಯ | ದೊಳನವನ ನಲುವ ಗುರುಮಹಿಪತಿ ಪ್ರೀಯನು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಆತ್ಮ ನಿವೇದನೆ ಅನಾಥ ಬಂಧೋ ಆದಿ ಪುರುಷ ಪ. ಅನಾಥ ಬಂಧೋ ಗುಣ ಗಣ ಸಿಂಧೋ ಮನಸಿಜ ಜನಕನೆ ಮರೆಯದಿರೆಂದೂ ಅ.ಪ. ಅನುಚಿತ ಕರ್ಮದ ಬಲೆಯಲಿ ಸಿಕ್ಕಿ ದಿನಗಳ ಕಳೆದನು ಮನೆಯಲ್ಲಿ ತನುವಿನ ಸ್ಥಿತಿಯನು ಪೇಳಲೇನು ಶ್ರೀ- ವನಜ ಭವಾರ್ಚಿತ ಒದಗುವಿ ಸಮಯದಿ 1 ವಿಧಿ ನಿಮಯಗಳನುಸರಿಸದೆ ಕ- ಣ್ಣಿದಿರಲಿ ಕಾಂಬುದ ಗ್ರಹಿಸದೆ ಮಧುಮಥನನೆ ತ್ವತ್ಪರ ಪದ್ಮವ ನಂ- ಬಿದೆ ಕರುಣೋದಧಿ ಕಾಯೊ ಬೇಗದಲಿ 2 ಸರ್ವಭಾರವು ನಿನ್ನ ಮೇಲಿಹುದು ಮ ತ್ತೋರ್ವಗುಂಟೆ ನಿನ್ನಯ ಬಿರುದು ಮರ್ವನೀಯದೆ ಮನದಲ್ಲಿರು ವೆಂಕಟ ಪರ್ವತೇಂದ್ರ ಪೂರ್ಣಾನಂದಪ್ರದ 3
--------------
ತುಪಾಕಿ ವೆಂಕಟರಮಣಾಚಾರ್ಯ
ಆತ್ಮನಿವೇದನೆ ಅಂಜಬ್ಯಾಡ ಅಂಜಬ್ಯಾಡೆಲೋ ಜೀವ ಭವ ಭಂಜನ ಹರಿ ಶರಣರ ಕಾವಾ ಪ ಮಾತ ಹೇಳುವೆ ನಿನಗೊಂದ ಪರರಜ್ಯೋತಿ ಕಾಣುವತನಕೀ ಬಂಧ ಭೂತ ಭೇತಾಳಗಳಿಂದ ನಿನಗೆ ಭೀತಿ ಪುಟ್ಟಲಿಲ್ಲೋ ಮತಿಮಂದ 1 ಛೇದ ಭೇದಗಳು ನಿನಗೆಲ್ಲಿ ನೀ ಅ- ನಾದಿ ನಿತ್ಯವೆಂಬುದ ಬಲ್ಲಿ ವೇದ ಬಾಹ್ಯರಾಗದೆ ಇಲ್ಲಿ ಹರಿ ಪಾದ ಇನ್ಯಾಕೆ ಪೂಜಿಸಲೊಲ್ಲಿ 2 ನೀನು ನಿನ್ನದು ಅಲ್ಲವೋ ನೋಡಾ ದೇಹ ನಾನು ನನ್ನದೆಂಬರೋ ಮೂಢಾ ಮಾನಹಾನಿ ಮಾಡಿಕೊಳಬೇಡ ಬಿಡು ಸಾನುಬಂಧಿಗಳ ಸ್ನೇಹವ ಗಾಢ 3 ಅಹಿತಾದಿ ವಿಭೂತಿಯ ನೋಡೋ ಸೋಹಂ ಎಂಬರೆ ವಿಘಾತಿಯ ನೇಹವ ಪಡೆವರೆ ಗೀತೆಯ ಕೇಳಿ ಮೋಹವ ಕಳಕೋ ವಿಜಾತಿಯ 4 ಮಧ್ವವಲ್ಲಭ ಮಾಡಿದ ಗ್ರಂಥ ದೊಳಗದ್ವೈತತ್ರಯ ತಿಳಿದಂಥ ವಿದ್ವಾಂಸರು ಚರಿಸುವ ಪಂಥವನ್ನು ಸದ್ಭಕ್ತಿಲಿ ಸಾಧಿಸು ಭ್ರಾಂತ 5 ಜಾಗರ ಸ್ವಪ್ನ ಸುಷುಪ್ತಿಗಳೊಳು ವರ ಭೋಗಿಶಯನನ ರೂಪಗಳೇಳು ಭಾಗವತ ಬಲ್ಲವರ ಕೇಳು ಬೃಹ- ದ್ಯಾಗವ ಹರಿಗರ್ಪಿಸಿ ಬಾಳು 6 ಪಂಚಾತುಮ ಸಿಲುಕವ ಷಟ್ ಪಂಚ ಪಂಚಿಕೆಗಳ ಕರ್ಮವ ಮೀಟಿ ಪಂಚಿಕೆ ತಿಳಿದುಕೊಂಡರೆ ನಿಷ್ಪ್ರ ಪಂಚನಾಗಿ ನೀ ಕಡೆದಾಟಿ7 ಜ್ಞಾನೇಚ್ಛಾ ಕ್ರಿಯಾ ಶಕ್ತಿಗಳೆಂಬ ಈ ಮ- ಹಾನುಭಾವದಿ ನಿನ್ನ ಬಿಂಬ ತಾನೇ ಸರ್ವತ್ರದಲಿ ಕಾಂಬ ಇದ- ಕೇನು ಸಂದೇಹವಿಲ್ಲವೋ ಶುಂಭ 8 ತಾಪತ್ರಯಂಗಳು ನಿನಗೆಲ್ಲಿ ಪುಣ್ಯ ಪಾಪಕ್ಕೆ ಲೇಪನಾಗೋಕೆ ಹೊಲ್ಲ ಪ್ರಾಪಕ ಸ್ಥಾಪಕ ಹರಿಯೆಲ್ಲ ಜಗ ದ್ವ್ಯಾಪಕನೆಂದರಿತರೆ ಕೊಲ್ಲ 9 ಡಿಂಭದೊಳಗೆ ಚೇತನವಿಟ್ಟು ಜಗ- ದಂಬಾರಮಣ ಮಾಡಿದ ಕಟ್ಟು ಉಂಬುಡುವ ಕ್ರಿಯೆಗಳನಷ್ಟು ನಿನ್ನ ಬಿಂಬನಾಧೀನನಾದರೆ ಇಷ್ಟ 10 ಲಕ್ಕುಮಿ ಅವನ ಪಟ್ಟದ ರಾಣಿ ದೇ- ವರ್ಕಳು ಪರಿಚಾರಕ ಶ್ರೇಣಿ ವಕ್ಕಲು ನಾವೆಲ್ಲರು ಪ್ರಾಣಿ ದಶ- ದಿಕ್ಕುನಾಳುವ ನಮ್ಮ ದೊರೆಯ ನೀ 11 ಮತ್ರ್ಯಲೋಕದ ಸಂಪದ ಪೊಳ್ಳು ಜಗ ಮಿಥ್ಯಮತವೆಂದಿಗು ಜೊಳ್ಳು ಶ್ರುತ್ಯನ್ನರ್ಥ ಪೇಳ್ವದೇ ಸುಳ್ಳು ನೀ ಭೃತ್ಯನು ಕರ್ತನಾಗದಿರೆಲೋ ಕೇಳು12 ಮಾಧವನಲಿ ತನುಮನ ಮೆಚ್ಚು ಕ್ರೋಧರೂಪದ ಕಲಿಮಲ ಕೊಚ್ಚು ಮೋದತೀರ್ಥರ ವಚನವ ಮೆಚ್ಚು ವಾದಿ ಮತಕ್ಕೆ ಬೆಂಕಿಯ ಹಚ್ಚು 13 ಸವಿವುಳ್ಳರೆ ಕೇಳೆನ್ನಯ ಸೊಲ್ಲ ನಮ್ಮ ಪವನನಯ್ಯನ ಪ್ರೇರಣೆಯಿಲ್ಲ ಎವೆಯಿಕ್ಕಲರಿಯದೀ ಜಗವೆಲ್ಲ ಎಂದು ಶಿವ ತನ್ನ ಸತಿಗೆ ಹೇಳಿದನಲ್ಲ 14 ಧ್ರುವ ಬಲ್ಯಾದಿ ರಾಯರ ನೋಡು ನಿನ್ನ ಅವಗುಣಗಳನೆಲ್ಲಾ ಈಡ್ಯಾಡೋ ಅವಶ್ಯವಾಗಿ ಕರ್ಮವ ಮಾಡೋ ಮಾ- ಧವ ನಿನ್ನವನೆಂದು ನಲಿದಾಡೋ 15 ನಿಂದಾ ಸ್ತುತಿಗಳ ತಾಳಿಕೋ ಬಲು ಸಂದೇಹ ಬಂದಲ್ಲಿ ಕೇಳಿಕೋ ಬಂದವರಿಂದಲಿ ಬಾಳಿಕೋ ಗೋ- ವಿಂದ ನಿನ್ನವನೆಂದು ಹೇಳಿಕೋ 16 ತತ್ವವಿಚಾರವ ಮಾಡಿಕೋ ನಿನ್ನ ಭಕ್ತಿಯ ಆಳವ ಅಳಿದುಕೋ ಮಾಯಾ ಮೋಹ ಕಳೆದುಕೋ ನಿನ್ನ ಹತ್ತಿರ ಹರಿಯಿರುವ ನೋಡಿಕೋ 17 ಹಿಂಡು ದೈವಗಳಿಂದ್ಹಿರಿಯನೀತ ತನ್ನ ತೊಂಡನೆಂದದವರಿಗೆ ತಾ ಸೋತಾ ದಂಡಿಸಿ ದಯಮಾಡುವ ದಾತಾ ಭೂ- ಮಂಡಲದೊಳಗೆಲ್ಲ ಪ್ರಣ್ಯತಾ 18 ನಾಡ ಖೋಡಿ ದೈವಗಳಂತೆ ತನ್ನ ಬೇಡಲು ತಾ ಬೇಡಿಕೊಳನಂತೆ ನೀಡುವ ನಿಖಿಳಾರ್ಥವದಂತೆ ನಿಜ ನೋಡಿಕೋ ನಿನಗ್ಯಾತರ ಚಿಂತೆ 19 ಏನು ಕೊಟ್ಟರೆ ಕೈಚಾಚುವ ತನ್ನಾ- ಧೀನವೆಂದರೆ ನಸುನಾಚುವಾ ದಾನವ ಕೊಡಲೂರಿ ಗೀಚುವ ತನ್ನಲಿ ತಾನೇವೇ ಮನದೊಳು ಸೂಚುವ20 ಕರಕರದಲ್ಲಿ ತಾ ಬರುವಾನು ಮರತುಬಿಟ್ಟವರ ತಾ ಮರೆಯಾನು ನಿಜ ಶರಣರ ಕಾದುಕೊಂಡಿರುವಾನು ತನ್ನ ಸರಿಯಂದವರ ಹಲ್ಲು ಮುರಿದಾನು 21 ಆರು ಮುನಿದು ಮಾಡುವದೇನು ಪ್ರೇರ್ಯ ಪ್ರೇರಕರೊಳಗಿದ್ದು ಹರಿ ತಾನು ಓರಂತೆ ಕಾರ್ಯವ ನಡೆಸೋನು ಮುಖ್ಯ ಕಾರಣ ಶ್ರೀಹರಿ ಅಲ್ಲವೇನೋ 22 ಹಲವು ಹಂಬಲಿಸಲ್ಯಾತಕೆ ಹುಚ್ಚಾ ವಿದ್ಯಾ ಕುಲಶೀಲಧನದಿಂದ ಹರಿ ಮೆಚ್ಚಾ ಕಲಿಯುಗದೊಳಗಾರ್ಯರ ಪೆಚ್ಚಾ ತಿಳಿ ಸುಲಭೋಪಾಯಾದಿಗಳ ನಿಚ್ಯಾ 23 ದುರ್ಜನರೊಳು ದೈನ್ಯ ಬಡದಿರು ಸಾಧು ಸಜ್ಜನರೊಳು ವೈರ ತೊಡದಿರು ಅರ್ಜುನಸಖನಂಘ್ರಿ ಬಿಡದಿರು ನಿ- ರ್ಲಜ್ಜನಾಗಿ ಬಾಯ್ಬಿಡದಿರು 24 ಭಯರೂಪದಿ ಒಳಹೊರಗಿದ್ದು ನಿ- ರ್ಭಯ ನಾಮಕನು ಧೈರ್ಯವನೆ ಗೆದ್ದು ಭಯದೋರುವನೆಂಬುದೆ ಮದ್ದು ಮಹಾ ಭಯಕೃದ್ಭಯಹಾರಿಯನೆ ಪೊಂದು 25 ಪರಸತಿಯರ ಸಂಗವ ಬಿಡು ಹರಿ ಸರ್ವೋತ್ತಮನೆಂದು ಕೊಂಡಾಡು ಪರಮಾತ್ಮನ ಧ್ಯಾನವ ಮಾಡು ನರ ಹರಿದಾಸರಂಗಳ ಒಡಗೂಡು 26 ಸೃಷ್ಟಿಗೊಡೆಯ ಶ್ರೀದವಿಠಲ ವಿಷ್ಟಾವಿಷ್ಟನಾಗಿದ್ದೆಲ್ಲ ಇಷ್ಟಾನಿಷ್ಟವ ಕೊಡಬಲ್ಲ ಮನ- ಮುಟ್ಟಿದವರ ಬೆಂಬಿಡನಲ್ಲಾ 27
--------------
ಶ್ರೀದವಿಠಲರು
ಆನಂದ ಗಂಭೀರ ನೀಲಾಂಗ ರಂಗ ಭಂಜನ ಹರೇ ಹರೇ ಪ ಮುನಿಜನ ವಂದಿತ | ವನರುಹ ಲೋಚನ ಘನ ನೀಲಾಂಬುದಸಮಾ ಹರೇ ಅ.ಪ ವನಜನಯನ ಹರಿಕೇಶವ ಮಾಧವ ಕನಕಾಂಬರಧರ ಗೋಪಾಲ ದನುಜ ಕುಲಾಂತಕ ಧೇನುಕ ಸಂಹಾರ ಅನಂತ ಶ್ರೀಧವ ಶ್ರೀಬಾಲಾ 1 ಭುವನಮನೋಹರ ಮುರಳೀಧೃತಕರ ಭವಸಾಗರದೂರ ನಮೋ ನಮೋ ಪವನಾತ್ಮಜಕರ ಮಾಂಗಿರಿನಾಯಕ ತವಸೇವಿತಪದ ನಮೋ ನಮೋ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಆನಂದಕರಮಾದ ಇಂದಿರಾರ್ಯ ತವ ಧ್ಯಾನಾನಂದೆನಗೆ ದಯಪಾಲಿಸು ಪ ನೊಂದೆ ಭವದೊಳು ಬಿದ್ದು ಮಂದನಾಗಿ ತಿಳಿಯದೆ ಅಂದಮಾದ ತವ ಮಹಿಮೆಯ ದೇವ ಅ.ಪ ಕಾಣುವ ಜಗವೆಲ್ಲ ಏನೆಂಬ ನಿಜತವನು ನಾನರಿಯದೊರಲುತಿಹೆನು ನಾನಿಲ್ಲದಮೊದಲು ಏನಿತ್ತು ಎಂಬುದನು ನಾನೆಂತು ತಿಳಿಯುವೆನು ನಾನು ಯಾರೆಂಬ ನಿಜ ಖೂನವರಿಯದೆ ಬಲು ಹೀನತೆಗೆ ಬಂದಿದ್ದೆನು ನೀನೆ ಸ್ವತಂತ್ರಖಿಲ ದೀನಗರಿವಿಕೆ ನೀಡಿ ಜ್ಞಾನದಿಂ ಪೊರೆ ದಯದಿ ಜವದಿ 1 ಎಲ್ಲಿರ್ದೆಮೊದಲು ನಾನೆಲ್ಲಿಂದ ಬಂದೆ ಮ ತ್ತೆಲ್ಲಿಗೆ ಪೋಗುವೆನು ಎಲ್ಲಿರುವೆ ಈಗ ನಾನೆಲ್ಲಿಂದ ನುಡಿಯುವೆನು ಎಲ್ಲಿಗೆ ಕೊಡುವೆನು ಎಲ್ಲನಿಂದಿದರೊಳಗೆ ಇಲ್ಲದ್ದು ಕಲ್ಪಿಸಿ ಎಲ್ಲಿಂದ ಕಾಂಬುವೆನು ಎಲ್ಲಿಟ್ಟಿರುವಿದರ ಸಲ್ಲಲಿತ ಸೂತ್ರವನು ಪುಲ್ಲನಾಭ ದಯಪಾಲಿಸು ತಿಳಿಸು 2 ಆರೊಂದುಗೇಣಿನಾಪಾರ ಸೂತ್ರದಗೊಂಬೆ ಆರಿಂದಲಾಗಿಹ್ಯದು ಸೋರುತಿಹ್ಯ ಒಂಬತ್ತು ದ್ವಾರಹಚ್ಚಲು ಇದರ ಕಾರಣವೇನಿಹ್ಯದು ತೋರುವುವು ಇದರೊಳಗೆ ಮೂರುವಿಧಮಾಗಿ ಆರಸಾಕ್ಷದಕ್ಕಿಹ್ಯದು ತೋರದೇನೇನಿದರ ತಾರತಮ್ಯಜ್ಞಾನ ಸುವಿ ಚಾರ ಎನಗೊಲಿದು ತಿಳುಹು ಸಲಹು 3 ಕಾಲು ಕಯ್ಯಿಗಳಾಡಿ ಬೀಳುವೇಳುವ ಮೂಲ ಕೀಲಿಯೆಲ್ಲಿರುತಿಹ್ಯದು ಜ್ಯಾಲದಂದದಿ ಹರಕು ಚೀಲದೊಳು ತುಂಬಿರುವ ಗಾಳ್ಯೆಂತುನಿಂತಿಹ್ಯದು ಕಾಲಮಹಿಮ ನೀ ಗೈದ ಮೇಲುಯಂತ್ರದಿ ಇಂದ್ರ ಜಾಲವೇ ತುಂಬಿಹ್ಯದು ಕಾಲಚಕ್ರನ ಮಹ ದಾಳಿಯನು ಗೆಲಿಸಿ ತವ ಲೀಲೆಯೊಳೆನ್ನಾಡಿಸು ಪಾಲಿಸು 4 ಬಂಧರೂಪಕಮಾದ ದಂದುಗದ ಭವವು ದಾ ರಿಂದಲುತ್ಪತ್ತಿ ಯಾಯ್ತು ಸತಿ ಸುತರು ಬಂಧಬಳಗ ಎ ಲ್ಲಿಂದ ಬಂದಿವಗೆ ಜೊತೆಗೂಡಿತು ಒಂದಕ್ಕೊಂದರ ಸಂಬಂಧವೇ ಇಲ್ಲಿವಗೆ ಬಂಧ ಮತ್ತೆಲ್ಲೊದಗಿತು ನಿಂದುನೋಡಲು ಸಕಲ ತಂದೆ ಶ್ರೀರಾಮ ನಿನ್ನಿಂದ ಕಂಡು ನಿನ್ನೊಳೈಕ್ಯ ಮಾಯ ಖರೆಯ 5
--------------
ರಾಮದಾಸರು
ಆರತಿಯನು ನಾನು ಬೆಳಗುವೆ ನಮ್ಮಪ್ರೇರಿಪ ಪ್ರಭುವ ಪಡೆವೆನೆಂಬ ಪವಿಷಯಂಗಳಾರತಿ ವಿಸ್ತರಿಸಲು ಬಹುವಿಷಮಮಾರ್ಗವ ಕಾಬ ವೊಡಲಿತ್ತವುವಿಷವಾುತಾ ಸುಖ ವಿವಿಧ ಭೋಗಂಗಳುಮೃಷೆಯೆಂದು ಹರಿಯನ್ನೆ ಮಚ್ಚಿಕೊಂಬ 1ಲೋಕಂಗಳೈದಲು ಲೋಪವಾದವುಯೆಲ್ಲಸಾಕಾುತವರಲ್ಲಿ ಸಂಚರಿಸಿಈ ಕುಹಕವ ನಂಬಲೆಲ್ಲವು ಬಹು ದುಃಖಶ್ರೀಕಾಂತನ ಕೂಡಿ ಸುಖವಿರುವ 2ಹದಿನಾಲ್ಕು ಕರಣದ ಹವಣಿನಾರತಿಯಲ್ಲಿಹುದುಗಿಸಿ ಜ್ಞಾನದ ಹೊಸ ದೀಪವಹೃದಯಕಮಲದಲ್ಲಿ ಹೊಂದಿಹ ತಿರುಪತಿಸದನ ವೆಂಕಟಗೆತ್ತಿ ಸುಖಿಯಾಗುವ 3ಓಂ ಶಿಶುಪಾಲ ಶಿರಶ್ಛೇತ್ರೇ ನಮಃ
--------------
ತಿಮ್ಮಪ್ಪದಾಸರು
ಆವಪರಿಯಿಂದಲಾದರೂ ರಾಮನಾಮವನು ಆವ ಪರಿಯಲಿ ನೆನೆದು ಸುಖಿಯಾಗು ಮನವೆ ಪ ಪಿತನಾಜ್ಞೆ ಲಕ್ಷಿಸದೆ ದೃಢದಿ ಪ್ರಹ್ಲಾದನು ಅತಿಶಯದಿ ಹರಿಯ ಧ್ಯಾನವ ಮರೆಯದೆ ಮತಿಗೇಡಿಯಾದ ಮಗನೆನುತ ಕುಲಗೆಡಿಸೆ ಶ್ರೀ ಪತಿಯು ತಾ ಬಂದು ಕಾಯ್ದುದೇ ಸಾಕ್ಷಿ 1 ದೋಷಹಿತನಾದ ದಶಶಿರನ ಒಡಹುಟ್ಟಿ ಕೇಶವನ ಧ್ಯಾನವನು ಮರೆಯದಿರಲು ಸಾಸಿರ ರಾಮಕಥೆಯುಳ್ಳನಕಾ ವಿ- ಭೀಷಣಗೆ ಸಾಮ್ರಾಜ್ಯವಿತ್ತುದೇ ಸಾಕ್ಷಿ 2 ಗಂಡರೈವರು ಸುತ್ತ ಕೆಲದಲಿರಲಾ ಸತಿಯ ಲಂಡ ದುಶ್ಶಾಸನ ಹಿಡಿದೆಳೆಯುತಿರಲು ಪುಂಡರೀಕಾಂಬಕನೆ ಸಲಹೆನಲು ಕರೆಯಲು ದ್ದಂಡನಾಭನೆ ಬಂದು ಕಾಯ್ದುದೇ ಸಾಕ್ಷಿ 3 ಯುದ್ಧಕೆ ನಡೆದಾಗ ಹಂಸಧ್ವಜಸುತನು ತನ್ನ ಬೇ ಕಾದ ಸತಿಯ ಆಜ್ಞೆಯ ನಡೆಸಲು ಪಿತನು ಕಾದೆಣ್ಣೆ ಕೊಪ್ಪರಿಗೆಯೊಳಗೆ ಸುಧನ್ವನ ಹಾಕೆ ಹರಿ ಕಾಯ್ದನೆಂಬುದ ಲೋಕವರಿದುದೆ ಸಾಕ್ಷಿ 4 ಉರ್ವಿಯೊಳು ವಿಪ್ರಜನ್ಮದಿ ಜನಿಸಿದಜಮಿಳಗೆ ಪೂರ್ವಸಂಚಿತ ಪಾಪಶೇಷವಿರಲು ಓರ್ವ ಸತಿಗಾಗಿ ಚಂಡಾಲತಿಯೊಳಗಾಗಿರೆ ಗೀರ್ವಾಣಪುರಿ ಲಕ್ಷ್ಮೀಶನೊಲಿದುದೇ ಸಾಕ್ಷಿ 5
--------------
ಕವಿ ಲಕ್ಷ್ಮೀಶ
ಇಂತಕಿ ವಚ್ಚಿನ್ನಾಡು ಸೀತಾರಾಮುಡಿಂಟಿಕಿ ವಚ್ಚಿನಾಡು ಪಅಂಟಿ ಭಜಿಂಚಿತೆ ಅಭಯ'ುಚ್ಚೇವಾಡುವೆಂಟಿ ತನ ಸೀತನುಗೂಡುಕೊನಿ ರಾಮುಡಿಂಟಿಕಿ ಅ.ಪಋಣಮುಲ ದೀರ್ಚವಲೆನನುಕೊನಿಮನಸುಬೆಟ್ಟಿ ವಚ್ಚನುಕನಕಾಂಬರಧರ ಕೌಸಲ್ಯಾತನಯುಡುಅಣುರೇಣು ತೃಣಕಾಷ್ಠ ಪರಿಪೂರ್ಣುಡು ರಾಮುಡಿಂಟಿಕಿ 1ಇದಿ ಮಂಚಿ ಸಮಯಮನಿ ಶ್ರೀರಾಮುನಿ'ಧ'ಧಮುಗ ವೇಡಿತಿಪದಮನಾಭ ಶ್ರೀರಾಮುಡು ನಿರತಮುಮದಿಲೋ ಕೋರಿನ ಕೋರಿಕಲಿಚ್ಚೆಟಂದುಕಿಂಟಿಕಿ 2ಗುರು ವಾಸುದೇವಾರ್ಯುಲ ರೂಪಮು ತಾಳಿತರುಣ ನಾಗಪುರಮುಲೋತಿರುಪತೀಶ ಶ್ರೀ ವೆಂಕಟರಮಣುಡುಕರುಣಿಂಚಿ ನಾರಾಯಣದಾಸುನಿ ಬ್ರೋಚುಟಕಿಂಟಿಕಿ 3
--------------
ನಾರಾಯಣದಾಸರು