ಒಟ್ಟು 21 ಕಡೆಗಳಲ್ಲಿ , 10 ದಾಸರು , 21 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಾರಿವದನ ಗೇಹ ವಾಸಮಾಡಿಹನ ಕು ಮಾರಿ ಗಂಡನ ತಲೆ ಕಡಿದಾ ನತ್ತಿಗೆವ್ಯಯ ಸೊಸೆಮಾನ ಕಾಯ್ವನ ತಂದಿಗೆ ಸಾರೂಪದೆಶವಾನೊರದ ನಪ್ಪನ ಪೆತ್ತ ನಾರೀ ಸಖನ ಸೂತನಣ್ಣನ ಪಿತಸಹ ಮೂರು ಮೂವತ್ತುಕೋಟಿ ವಿಭುಧರಿಂಸ್ತುತಿಗೊಂಬ ಶಂಭುರಕ್ಷಿಸುದೆಮ್ಮನು 1 ಶರಣು ಧನಪತಿಮಿತ್ರ ಪಾವನತರಚರಿತ್ರ ಶರಣು ಕರ್ಪುರಗೌರ ವಂಗಗುಣ ಮಂದಾರ ಯೋಗಿ ಮನಕಾ ಭೇದ್ಯ ಶರಣು ಮಹಿಪತಿನಂದ ಮುನಿಜನ ವಂದ್ಯಶರಣು ಆನಂದ ಕಂದ 2
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶಿವನಾ ಭವನಾ ಮನವೇ ನೀನೆನೆ ಗಿರಿಜಾಧವನಾ ಪ ತಿರ್ಪ ಕೈಲಾಸ ಮಂದಿರನಾ | ಕಂ ದರ್ಪನ ಗರ್ವದ ದರ್ಪವ ಮುರಿದಿಹ | ಕರ್ಪುರ ಗೌರವನಾ |1 ಕೆಂಜೆಡೆಯೊಳು ನಂದಿಷನಿಯಳಿಟ್ಟಿ ಹನಾ | ಸಲೆ| ಕುಂಜರ ಚರ್ಮವ ನುಟ್ಟಿಹನಾ | ತೇಜ | ಪುಂಜರ - ಸಂಜಯ ಕಂಜ ಬಾಂಧವ ಶಶಿ ರಂಜಿತ ಮೌಳೀಯನಾ || 2 ಇಹಪರ ದಾಯಕ ಚಿನುಮಯನಾ | ಗುರು ಭವ | ಮಹಿಮೆಯ ಹೊಗುಳುವನಾ ||3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಈ ಜೀವನಿಂದು ಫಲವೇನು |ರಾಜೀವಲೋಚನನ ಮರೆದಿಹ ತನುವಿನಲಿ ಪ.ಅರುಣನುದಯಲೆದ್ದು ಹರಿಸ್ಮರಣೆಯ ಮಾಡಿ |ಗುರು - ಹಿರಿಯರ ಚರಣಕಮಲಕೆರಗಿ ||ಪರಮಶುಚಿಯಾಗಿ ನದಿಯಲಿ ಮಿಂದು ರವಿಗಘ್ಯ |ವೆರೆಯದೆ ಮರೆಹ ಈ ಪಾಪಿತನುವಿನಲಿ 1ಹೊನ್ನಗಿಂಡಿಯಲಿ ಅಗ್ರೋದಕವನೆ ತಂದು |ಚೆನ್ನಾಗಿ ಹರಿಗೆ ಅಭಿಷೇಕ ಮಾಡಿ ||ರನ್ನದುಡಿಗೆಯುಡಿಸಿ ರತುನಗಳಳವಡಿಸಿ |ಕಣ್ಣಿರಲು ನೋಡಲರಿಯದ ಪಾಪಿತನುವಿನಲಿ 2ನಳನಳಿಸುವ ನಾನಾ ಪುಷ್ಪಗಳು ಶ್ರೀತುಳಸಿ |ಹೊಳೆವ ಕಿರೀಟ ಕೊರಳಲಿ ಪದಕ ||ನಳಿನಾಕ್ಷನಿಗೆ ಕರ್ಪುರದಾರತಿಯನೆತ್ತಿ |ಕಳೆಯ ನೋಡಲರಿಯದ ಪಾಪಿತನುವಿನಲಿ 3ವರಭಕ್ಷ್ಯಗಳುಪರಮಾನ್ನ ಶಾಲ್ಯನ್ನವು |ವರವಾದ ಮಧುಘೃತ ಕ್ಷೀರವನ್ನು ||ಸಿರಿನಾರಾಯಣಗೆ ಸಮರ್ಪಣೆ ಮಾಡಿ ತಾ - |ಎರಡು ಕೈಮುಗಿಯದ ಪಾಪಿತನುವಿನಲಿ 4ಉರಗಾದ್ರಿ - ಸ್ವಾಮಿಪುಷ್ಕರಣಿಗಳು ಮೊದಲಾದ |ಪರಿಪರಿ ತೀರ್ಥಗಳನೆಲ್ಲ ಮಿಂದು ||ತಿರುವೆಂಗಳಪ್ಪ ಶ್ರೀ ಪುರಂದರವಿಠಲನ |ಚರಣವನು ಭಜಿಸಲಯದ ಪಾಪಿತನುವಿನಲಿ 5
--------------
ಪುರಂದರದಾಸರು
ನಿನ್ನ ಕೃಪೆಯಿರೆ ಬಲುಸುಖ ಈ ಸಂಸಾರನಿನ್ನ ಕೃಪೆಯಗಲಿದರೆ ಘನಗೋಳು ಹರಿಯೆ ಪಅಲ್ಲ ಅಹುದಾಗುವುದು ಸುಳ್ಳೆ ಖರೆಯಾಗುವುದುಎಲ್ಲಸಿರಿ ಒದಗುವುದು ಒಲ್ಲೆನಲು ಬಿಡದೆಪುಲ್ಲನಾಭನ ಒಲುಮೆವುಳ್ಳ ಮಾನವರಿಗೆಕಲ್ಲಿನೊಳು ಜಲಪುಟ್ಟಿ ಹೊಳೆಯಾಗಿ ಹರಿಯುವುದು 1ಹೀನನಾದರು ಬಹುಮಾನ ಸಿಗುವುದು ಗೊಡ್ಡುಧೇನುಗಳೆಲ್ಲ ಬಿಡದೆ ಹೈನಗರೆಯುವುವುದೀನನಾಥನು ಒಲಿಯೆ ನಾನಾ ಸಿರಿಸೌಭಾಗ್ಯತಾನೆ ಬರುವುದು ತೆಂಗಿನೊಳುದಕದಂತೆ 2ವಿಷವೆ ಅಮೃತವಹುದು ಕಸವೆ ಕರ್ಪುರವಹುದುವಿಷಮ ವಿಷಯದ ಎಡರು ಹಸನಹುದು ನಿಖಿಲವಸುದೆಗಧಿಕ ನಮ್ಮ ಬಿಸಜಾಕ್ಷ ಶ್ರೀರಾಮನೊಶವಾದ ಬಳಿಕ ನಿಜ ಅಸಮ ಮುಕ್ತಿಹುದು 3
--------------
ರಾಮದಾಸರು
ಮುದ್ದು ತಾರೊ-ಕೃಷ್ಣ-ಎದ್ದು ಬಾರೊ |ಶುದ್ಧವಾದ ಕರ್ಪುರದ ಕರಡಿಗೆಯ ಬಾಯಲೊಮ್ಮೆ ಪಕಡೆಯುವ ಸಮಯಕೆ ಬಂದು ಕಡೆವಸತಿಯ ಕೈಯಪಿಡಿದು |ಬಿಡದೆ ಹೊಸ ಹೊಸ ಬೆಣ್ಣೆಯನು ಒಡನೆಮೆಲುವ ಬಾಯಲೊಮ್ಮೆ 1ವಿಷವನುಣಿಸಲು ಬಂದ ಅಸುರೆ ಪೂತನಿಯ ಕೊಂದ |ವಶವಲ್ಲವೊ ಮಗನೆ ನಿನ್ನ ವಿಷವನುಂಡ ಬಾಯಲೊಮ್ಮೆ 2ಪುರಂದರವಿಠಲನೆ ತೊರವೆಯ ನಾರಸಿಂಹ |ಹರವಿಯ ಹಾಲ ಕುಡಿದು ಸುರಿವ ಜೊಲ್ಲ ಬಾಯಲೊಮ್ಮೆ 3
--------------
ಪುರಂದರದಾಸರು
ರುದ್ರದೇವರು157ಪಾಹಿಮಾಂಪಾಹಿಪಾರ್ವತೀಪತೆಪ.ಪಾಹಿಪಾಹಿಗಂಗಾಹಿಮಕರಧರದೇಹಿಕ ಸುರತರೊ ಮೋಹನಮೂರ್ತೆ 1ದರ್ಪಕಮದಹರ ಅರ್ಪಕಮಂದರಸರ್ಪವಿಭೂಷಣ ಕರ್ಪುರಕಾಯ2ಗುಹಗಣಪತಿಪಿತ ಗಜಮಥನವೃಷವಾಹನಪೂಜಕ ವಾಹಿನಿಪಾಲ3ತ್ರ್ಯಂಬಕ ದುರಿತಕದಂಬ ನಿವಾರಕಸಾಂಬಸದಾಶಿವ ಅಂಬರಕೇಶ4ಕಪಟಿ ಜನಾರ್ದಕ ತಪನನಿಚಯಧುತೆತ್ರಿಪುರಾಂತಕ ಭವವಿಪಿನಕೃಶಾನೊ 5ಪ್ರಮಥಜನಾರ್ಥಿತ ಅಮಿತ ದಯಾನಿಧೆಸುಮತಿ ಕುಲೇಶ್ವರ ಕುಮತಿಖಳಾರೆ 6ಕರುಣಾಕರ ಸುಖಕರಣಭುವನನುತಚರಣಯುಗಳ ಖಳವಾರಣ ಪ್ರಹರಣ 7ಶೂಲಡಮರ ಸುಕಪಾಲಧರ ಶಿರೋಮಾಲಾನ್ವಿತ ಗುಣಜಾಲ ಸುಶೀಲ 8ಭಾಸುರಶುಭಕೈಲಾಸನಿಲಯಭೂತೇಶಪ್ರಸನ್ವೆಂಕಟೇಶ ಭಟೇಶ 9
--------------
ಪ್ರಸನ್ನವೆಂಕಟದಾಸರು