ಒಟ್ಟು 22 ಕಡೆಗಳಲ್ಲಿ , 17 ದಾಸರು , 22 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸರಿತಪ್ಪುಗಳ ಗೊಡವೆ ನನಗೇತಕೋ ಸರಿತಪ್ಪ ನಡೆಸುವವನು ನೀನಾಗಿರೇ ಪ ಹರಿ ನಿನ್ನ ಕೈಗೊಂಬೆ ನಾನಾಗಿರೆ ಪರಿಪರಿಯ ಯೋಚನೆಯು ನೀನಾಗಿರೇ ಅ.ಪ ಹಗಲಿರುಳ ಬಗೆ ಭಾವ ಎನಗೇತಕೆ ನಗುವಳಲ ಶೋಕಂಗಳು ಇನ್ನೇತಕೇ ಜಗವೆಲ್ಲ ತುಂಬಿರುವೆ ಭಯವೇತಕೆ ಭಗವಂತ ನಿನ್ನದಯೆ ಇರದೇತಕೆ 1 ಹರಿಚರಣ ಶರಣೆಂಬುದೆನಗಾಗಲಿ ಕರವಿಡಿದು ನಡೆಸುವುದು ನಿನಗಾಗಲೀ ಗುರುದೇವ ನೀನೆಂಬುದರಿವಾಗಲೀ ಸಿರಿ ಮಾಂಗಿರಿಯರಂಗ ದಯೆದೋರಲಿ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಸ್ಮರಿಸುವರ ಪಾಲಿಪ ಬಿರುದು ಭಕುತರ ಪೊರೆವ ಕರುಣಿಯೆಪ ಪರಿಪರಿವಿಧದಲಿ ಪರಿತಪಿಸುವರನು ಕರವಿಡಿದುದ್ಧರಿಸುತ ಸಂತೈಸುವ ಉರಗಾದ್ರಿವಾಸ ವಿಠ್ಠಲ ಸಂತೈಸು ಚರಣಕಮಲಗಳಿಗೆರಗಿ ಭಿನ್ನೈಸುವೆ1 ಮಂದಮತಿಯು ನಾನೆಂದು ವಂದಿಪರ ಬಂಧನ ಕಳೆಯುತ ಮುಂದೆ ಗತಿಯು ತೋರಿ ತಂದೆ ವೆಂಕಟೇಶ ವಿಠ್ಠಲ ಭಕುತರ ಸಂದಣಿ ಪೊರೆಯುವರೆಂಬ ಬಿರುದು ದೇವ 2 ಆಶಾಪಾಶಗಳಿಗೊಳಗಾಗಿಹ ಮನ- ದಾಸೆ ಪೂರೈಸುತ ನೀ ಸಲಹೈ ಗುರು ವಾಸುದೇವ ವಿಠ್ಠಲ ಹರಿ ಭಕುತರ ದಾಸ್ಯವ ಕೊಟ್ಟು ಉಲ್ಲಾಸ ಒದಗಿಸುತ 3 ಮೊದಲೆ ನಿನ್ನಯಪಾದ ಹೃದಯದಿ ಭಜಿಸದೆ ಒದಗಿದ ಪಾಪದಿ ಹೆದರÀುತಲಿದೆ ಮನ ಪದುಮಜಾಂಡ ಸೃಜಿಸಿದ ಪರಮಾತ್ಮನಿ- ಗದ್ಭುತವೇ ಪಾಮರರನು ಪೊರೆವುದು 4 ಮಣಿದು ಬಿನ್ನೈಸುವೆ ಪವನಮತವÀ ತೋರಿ ಬಿನಗು ಬುದ್ಧಿಗಳ ಗಮನಕೆ ತಾರದೆ ಕಮಲನಾಭ ವಿಠ್ಠಲ ತವ ಕರುಣದಿ ಮನದ ಕ್ಲೇಶಗಳ ಕಳೆದು ಉದ್ಧರಿಸುತ 5
--------------
ನಿಡಗುರುಕಿ ಜೀವೂಬಾಯಿ
ಹರಿವಾಸರದ ಮಹಿಮೆಯೆನು ಅರಿತಷ್ಟು ಪೇಳುವೆನು ತರಳರಾಡುವ ನುಡಿಯೆಂದು ಗುರುಜನರು ಮನ್ನಿಸಿರಿನ್ನು ಪ. ಹಿಂದೆ ತಾನಜಾಮಿಳನು ಮಂದಮತಿಯಾಗಿ ಜಗದಿ ನಿಂದಿತಾಚಾರದಲಿ ಮನವಿರಿಸಿ ನಲಿದು ಬಂಧುಮಿತ್ರರ ನುಡಿಗೊಂದಿಷ್ಟು ಕಿವಿಗೊಡದೆ ಮನ ಬಂದಂತೆ ಚರಿಸಿದರನು ಮದಮೋಹದಿಂದ 1 ಮಂದಿರವ ನೊಳಪುಗಲು ಗಂಗೆಯಂತು ದಂದುಗದಿನೊಂದು ಮಡದಿ ಮಕ್ಕಳಿಗಾಗಿ ನಿಂದಂತೆ ತಾನುಪವಾಸ ಜಾಗರದಿ ಕಳೆದು ಮರುದಿನ ದ್ವಾದಶೀ2 ಮರಣದಾಹದಿ ಹರಿವ ನೀರ ಕುಡಿಯೇ ಹರಿಗರ್ಪಿಸಿದ ತುಳಸಿದಳವೊಂದದರೊಳಿರೆ ದುರಿತಕೋಟಿಗಳೆಲ್ಲ ದೂರಸಾರೆ 3 ಅಂತ್ಯಕಾಲದೊಳೈತಂದ ಅಂತಕನದೂತರಂ ಕಂಡು ಇಂದಿರೇಶನಾಣತಿಯಂತೆ ಕಿಂಕರರು 4 ಅರಿಯದಾಚರಿಸಿದೊಡಂ ಹರಿವಾಸರದ ಮಹಿಮೆ ಪರಮಪದನಾಥನೇ ವಶನಪ್ಪನಯ್ಯಾ 5 ಹರಿಭಕ್ತ ರುಕ್ಮಾಂಗದನ ಪರಿಭವಿಸೆ ಬರೆ ಮೋಹಿನಿ ತರಳ ಧರ್ಮಾಂಗದನ ಶಿರವತೆಗೆಯೆಂದೆನಲು ವರಧರ್ಮದೇವನೇ ಕರವಿಡಿದು ಪೊರೆದಂ6 ದಶಮಿ ದ್ವಾದಶೀ ದಿನದಲ್ಲಿ ಅಶನವೊಂದೇಸಾರಿ ಏಕಾ ಕುಸುಮನಾಭನಾ ಶೇಷಗಿರಿವಾಸ ಕೈಬಿಡನೊ 7
--------------
ನಂಜನಗೂಡು ತಿರುಮಲಾಂಬಾ
ಆರು ಬಾರರು ಸಂಗಡಲೊಬ್ಬರು |ನಾರಾಯಣನ ದಿವ್ಯನಾಮ ಒಂದಲ್ಲದೆ ಪಹೊತ್ತು ನವಮಾಸಪರಿಯಂತಗರ್ಭದಲಿ |ಅತ್ಯಂತ ನೋವು ಬೇನೆಗಳ ತಿಂದು ||ತುತ್ತು ಬುತ್ತಿಯ ಕೊಟ್ಟು ಸಲಹಿದ ತಾಯಿಯು |ಅತ್ತು ಕಳುಹುವಳಲ್ಲದೆ ಸಂಗಡ ಬಾಹಳೆ 1ನೆರೆದಿದ್ದ ಪುರಜನ ವಿಪ್ರರಗ್ನಿಯ ಸಾಕ್ಷಿ |ಕರವಿಡಿದು ಕೈಧಾರೆ ಎರಸಿಕೊಂಡ ||ತರುಣಿ ತನ್ನಯ ಗಂಡನನು ಮುಟ್ಟಲಮ್ಮದೆ |ನೆರೆಏನುಗತಿತನಗೆ ಹೇಳಲಮ್ಮಳಲ್ಲದೆ2ಮನೆ-ಮಕ್ಕಳಿವರೆನ್ನ ತನುವು ಒಡವೆ ಎರಡು |ಘನವಾಗಿ ನಂಬಿರೆ ನನ್ನವೆಂದು |ಅನುಮಾನವೇತಕೆ ಜೀವ ಹೋದಬಳಿಕ |ಘನಹೊತ್ತು ಮನೆಯಲಿ ಇರಿಸಿಕೊಳ್ಳರೊ ದೇವ 3ಆತ್ಮ ಬಳಲಿದಾಗ ಬಂಧುಗಳು ಬಂದು |ಹೊತ್ತು ಹೊರಗೆ ಹಾಕು ಎಂತೆಂಬರು ||ಹೊತ್ತುಕೊಂಡು ಹೋಗಿ ಅಗ್ನಿಯಲ್ಲಿ ಬಿಸುಟು |ಮತ್ತೆ ಬೆನ್ನನು ತಿರುಗದಲೆ ಬಾಹೋರಲ್ಲದೆ 4ಹರಣಹೋಗದ ಮುನ್ನ ಹರಿಯ ಸೇವೆ ಮಾಡಿ |ಪರಲೋಕಸಾಯುಜ್ಯಪಡೆದುಕೊಂಡು |ಕರುಣಿ ಕೃಪಾಳು ಶ್ರೀ ಪುರಂದರವಿಠಲನ |ನೆರೆನಂಬಿ ಭಜಿಸಿ ನೀ ಸುಖಿಯಾಗೊ ಮನುಜಾ 5
--------------
ಪುರಂದರದಾಸರು
ಕರವೊಡ್ಡಿ ಬೇಡುವೆನು ಕಮಲದಳನೇತ್ರಕರುಣದಲಿ ಸಲಹೆನ್ನ ಕಾಮಹರ ಮಿತ್ರ ಪಕಾಯದಲಿ ಬಲವಿಲ್ಲ ಕಂಗಳಿಗೆ ಸುಖವಿಲ್ಲಕೈಯ್ಯೊಳಗೆ ಹಣವಿಲ್ಲ ಬಾಯಬಲವಿಲ್ಲಕಾಯವಿದು ನೀನಿಟ್ಟ ಮಾಯಪಾಶಕೆ ಸಿಕ್ಕಿಹೇಯವಾದುದು ಸಲಹೋ ಹೇ ಲಕ್ಷ್ಮೀರಮಣ 1ಕಾಲನಾಳುಗಳೆಮ್ಮ ಕಾಲಕೈಗಳಕಟ್ಟಿಕಾಲದಂಡದಿ ಬಡಿದು ಕಾಲನೆಡೆಗೈದೂಕಾಲಮೇಘದ ತೆರದಿ ಕಾಲನಂತೆ ಘರ್ಜಿಸುವಕಾಲದಲಿ ಕಾಯ್ವವರ ಕಾಣೆ ನಾಳಿನಲೀ 2ಕರಿರಾಜನನು ಕಾಯ್ದೆ ಕಂಬದಲಿ ಮೈತೋರ್ದೆಖರ ದೂಷಣ ನಿನ್ನ ಕರದಿ ಶಿರ ವರಿದೀಕರುಣದಿಂದಲಿ ದ್ರೌಪದಿಯ ಸೆರಗಿಗಕ್ಷಯವಿತ್ತೆಕರವಿಡಿದು ಸಲಹೆನ್ನ ಕಲುಶ ಸಂಹಾರಾ 3ಕಂದನಪರಾಧವನು ತಂದೆ ಕ್ಷಮಿಸುವ ತೆರದಿಕಂದುಕುಂದುಗಳೆನ್ನೊಳಿರಲು ನೀ ಕ್ಷಮಿಸಿಕಂದನಂದದಿ ನೋಡಿಕಂದರ್ಪಜನಕನೆಚಂದದಲಿ ಸಲಹೊ ಗೋವಿಂದದಾಸನನೂ 4
--------------
ಗೋವಿಂದದಾಸ
ಶ್ರೀಗುರುರಘುಪತಿಏನೇನು ಭಯವಿಲ್ಲ ನಮಗೆಪವಮಾನ ಸೇವಕಗುರುರಘುಪತಿಯ ದಯವಿರೆ ಪಜೋಡು ಕರ್ಮದಿ ಬಿದ್ದು ಕೇಡು ಲಾಭಕೆ ಸಿಲ್ಕಿಮಾಡಿದ್ದೆ ಮಾಡುತ ಮೂಢನಾಗಿರೂಢಿವಳಗೆ ತಿರಿಗ್ಯಾಡುವ ಅಜ್ಞಾನಿಕೋಡಗನ್ನ ಸಿಂಹ ಮಾಡಿದ ಗುರುವಿರೆ1ಆವಾನು ದಯಮಾಡೆ ದೇವನು ವಲಿವನುಅವನ ನಂಬಲು ದೇವಗಣಾಕಾವಲಿಗಳಾಗಿ ಕಾವದು ಅಂತಕೋವಿಂದಾಗ್ರಣಿಗುರುರಘುಪತಿ ದಯವಿರೆ 2ಕರವೆಂಬೊ ಲೇಖನ ದ್ವಾರದಿಂದ ನಮ್ಮಶಿರಿ ಗೋವಿಂದ ವಿಠಲರಾಯನಾ ಕರಸಿ ಸುಹೃತ್ಸುಖ ಬೆರಸಿ ಪರಸ್ಪರ ಕರವಿಡಿದುತಿರುಗುವಗುರುಕೃಪೆ ನೆರಳಿರೆ 3
--------------
ಸಿರಿಗೋವಿಂದವಿಠಲ
ಹರಿಕಥಾ ಶ್ರವಣ ಸಾಧನವೆ ಮುಕುತಿ ಇದಕೆಸರಿ ಧರ್ಮವಿಲ್ಲೆಂದು ಪೇಳ್ವವು ಶ್ರುತಿತತಿ ಪ.ಶ್ರವಣದಿಂದಲಿ ಸಕಲ ಸದ್ಧರ್ಮ ಸಾಧನವುಭುವಿಯಲ್ಲಿ ಪೂಜ್ಯರಾಹೋರು ಸುಜನರುಸವೆಯದಾನಂದಮಯ ಭಕುತಿಸಿರಿದೊರಕುವುದುಅವರೇವೆ ಸೂಜÕರಾಗ್ವರು ಹರಿಯ ದಯದಿ 1ಅನವರತಶ್ರವಣವೆ ಮನನ ಮೂಲವು ಗಡಮನನದಲಿ ಹರಿಧ್ಯಾನ ಖಚಿತಾಹುದುಘನಪರಾತ್ಪರ ತತ್ವ ತಿಳುಹಿ ವಿರಕುತಿ ಭಾಗ್ಯವನು ಕೊಟ್ಟು ಶ್ರೀ ವಿಷ್ಣು ತೋರ್ವಗತಿಈವ2ಶ್ರವಣದಲಿ ನಾರದಗೆ ಗತಕಲ್ಪದ್ಯಪರೋಕ್ಷಸವಿಯಾದ ಸಾಮ್ರಾಜ್ಯ ಲೆಕ್ಕಿಸದ ಪ್ರಿಯವ್ರತಅವನಿಪರುವನಪೊಕ್ಕು ಹರಿಯನಾಶ್ರಯಸಿದರುದಿವಸೇಳರಲಿ ವಿಷ್ಣುರತನಿಗೆ ಮೋಕ್ಷ 3ದಿವಿಜಋಷಿ ಗಂಧರ್ವ ನೃಪರು ಮನುಜೋತ್ತಮರುವಿವಿಧ ತಿರ್ಯಗ್ಜಾತಿ ಸಜ್ಜೀವರುಶ್ರವಣಮಾತ್ರದಲಿ ಕಂಡರು ಸದ್ಗತಿಯನವರುದಿವಸಗಳೆಯದಲೆ ಆದರದಿಂದ ಬುಧರು 4ಹರಿಕಥಾಶ್ರೋತರಿಗೆ ಕರತಲವು ಮೋಕ್ಷ ಗಡಗುರುದ್ವಾರದಲಿಹರಿದೊರಕುವನು ಸತ್ಯಗುರುಮಧ್ವವರದ ಶ್ರೀಪ್ರಸನ್ವೆಂಕಟ ಕೃಷ್ಣಕರವಿಡಿದು ಪೊರೆವ ಸದ್ಗುರು ಪ್ರಿಯಜನಕೆ 5
--------------
ಪ್ರಸನ್ನವೆಂಕಟದಾಸರು