ಒಟ್ಟು 118 ಕಡೆಗಳಲ್ಲಿ , 40 ದಾಸರು , 117 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಚ್ಚರಿಕೆಚ್ಚರಿಕೆ ಮನವೆ ಇನ್ನು | ಎಚ್ಚರಿಕೆಚ್ಚರಿಕೆ ಯಮನ ಪುರದ ಬಾಧೆ ಪ ಕಿಚ್ಚನಾದರು ಕೇಳಿ ದುಶ್ಚಿಂತನ ಬಿಡು ಅ.ಪ ಗಂಡ ಅತ್ತೆ ಮಾವ ಮೈದುನರ ಬೈವರ | ಖಂಡ ತುಂಡನೆ ಮಾಡಿ ಖಂಡವ ಕೊಯಿದು | ಕಂಡದೊಳಗೆ ಬೇಯ್ಸಿ ದಿಂಡುಗೆಡಹಿ ಕಟ್ಟಿ | ಮಂಡೆಯ ಒಡೆದು ಡಂಡದಿ ಶಿಕ್ಷಿಸಿ | ಹಿಂಡಿ ಹಿಪ್ಪೆಯ ಮಾಡಿ ಕೊಂಡೊಯ್ದು ಅಗ್ನಿಯ ಕುಂಡವ ಹೋಗಿಸುವರೊ-ಎದೆಯ ಮೇಲೆ | ಗುಂಡನೆ ಹೊರಿಸುವರೊ-ಬಾಯೊಳಗೆ | ಕೆಂಡವ ಸುರಿಸುವರೊ-ಕೋಟಿ ಜನ್ಮ ಚಂಡಾಲ ಯೋನಿಯಳಿಟ್ಟು ಬಾಧಿಸುವರೊ 1 ಉತ್ತಮ ಗುರು ಹಿರಿಯರುಗಳ ಬೈವರ | ತಿತ್ತಿಯ ಸುಲಿದು ಕತ್ತರಿಪ ಬಾಚೆಯ ತಂದು | ಕೆತ್ತಿ ಶರೀರಕ್ಕೆ ಹತ್ತೊ ನೀರನೆ ಚೆಲ್ಲಿ | ನೆತ್ತಿಯ ಕೊರೆದು ಖಾರವನೊತ್ತಿ ಹಾವಿನ ಹುತ್ತವ ಹೊಗಿಸಿ ವಿಷವನಿತ್ತು ಕೈ ಕಾಲು | ಕಿತ್ತು ಹೊಟ್ಟೆಯ ಕೊಯ್ವರೊ ಬೊಬ್ಬಿರಿ | ಯುತ್ತುರುಳು ಹಾಕುವರೊ ಬೆನ್ನೊಳಗೇ | ಎತ್ತಿ ಕರುಳ ತೆಗೆವರೊ ದೊಡ್ಡ ಬೆಟ್ಟ | ಹತ್ತಿಸಿ ತಲೆಕೆಳಗಾಗಿ ನೂಕಿಸುವರೊ 2 ಪರಧನ ಪರಸತಿ ಪರನಿಂದೆಗೆಳೆವರ | ಮರುಳುವ ಮರಳಿನೋಳ್ ಹೊರಳಿಸಿ ಅಸ್ಥಿಯ | ಮುರಿದು ಮುಟ್ಟಿಗೆ ಮಾಡಿ ಉರೆದ ಗುಂಡಿಗೆ ಸೀಳಿ | ಜಿಹ್ವೆ ಕೊರೆದು ತೈಲದೊಳಗೆ | ಅರಿವೆಯೆದ್ದಿ ಮೈಗೆ ಉರಿಯ ಸುತ್ತಲಿಕ್ಕೆ | ಉರವಣಿಸು ಕುಣಿಸುವರೊ-ಹೆರೆದಂಬಿಗೆ | ಗುರಿಮಾಡಿ ನಿಲಿಸುವರೊ ಉಕ್ಕಿನ ಕಂಭ | ಕ್ಕೊರಗಿಸಿ ನಿಲಿಸುವರೊ ಶೂಲಕೆ ಹಾಕಿ | ಎರಡು ಕಾಲೆಳೆದು ಕಾವಲಿ ಮೇಲೆ ನಿಲಿಸೀರೊ 3 ಹೆಣ್ಣುಮಾರಿ ಹೊನ್ನು ಕಟ್ಟಿದ ಮನುಜರ | ತುಂಬಿ | ಸುಣ್ಣದೊಳಗೆ ಹೂಳಿ ಜನ್ಮ ಕಳೆದು ಶಿರ | ವಣ್ಣಿಕಲ್ಲನೆ ಆಡಿ ಇನ್ನು ಉಕ್ಕಿನ ಕಾದ- | ಎಣ್ಣೆಯ ಸುರಿದು ನೀರನ್ನೆರದು ನರಮಾಂಸ- | ಉಣ್ಣೆಂದು ತಿನಿಸುವರೊ-ತಿತ್ತಿಯನಿಕ್ಕಿ | ಹಣ್ಣಣ್ಣು ಮಾಡುವರೊ-ಅಸೀಪತ್ರಾ- | ರಣ್ಯವ ಹೊಗಿಸುವರೊ-ಕ್ಷುಧೆಯೆನ್ನೆ | ತುಂಬಿ ಕುಟ್ಟಿ ಮೆಲ್ಲಿಸುವರೊ4 ವಾಸುದೇವನ ವಾಸರದಲ್ಲಿ ಉಂಬರ | ಹಾಸುಗಲ್ಲಿನ ಮೇಲೆ ಬೀಸಿ ಅಪ್ಪಳಿಸಿ ಆ- | ಕಾಶಕ್ಕೊಗೆದು ಖಡ್ಗ ರಾಸಿಯೋಳ್ ಬೀಳಲು | ಕೇಶ ಪಿಡಿದು ಕೆಡಹಿ ಘಾಸಿಸಿ ಬಾಯೊಳು | ತುಂಬಿ | ನಾಸಿಕ ಕೊಯ್ಸುವರೋ-ಕೀಸಿಸಿ ಗೂಟ | ಹೇಸದೆ ಬಡಿಸುವರೊ ಹಂದಿಯಂತೆ | ಈ ಶರೀರ ಸುಡಿಸವರೊ-ತಮಸಿನೊಳು | ಏಸು ಜನ್ಮಕೆ ಗತಿಯಲ್ಲವೆನಿಸುವರೊ 5 ಎಲ್ಲ ಒಂದೇ ಎಂಬ ಪಂಚ ಮಹಾಪಾತಕಿಯ | ಹಲ್ಲನ್ನು ಮುರಿದು ಗಂಟಲ ಶೀಳಿ ಅಂಗುಳಿಗೆ | ಮುಳ್ಳನ್ನು ತಂದೂರಿ ತಪ್ತ ಲೋಹದ ಮೇಲೆ | ಕುಳ್ಳಿರಿಸಿ ಕೊಡಲಿಯೊಳ್ ಎಲ್ಲವನು ಕಡಿದು | ಕೊಲ್ಲ ಬಡಿದು ಅಂಬಿನಲಿ ಚುಚ್ಚಿ ರಕ್ತ- | ಚೆಲ್ಯಾಡಿ ಬಗೆಯುವರೊ-ಉರಿಯ ಕೊಂಡ- | ದಲ್ಲಿ ಮುಳುಗಿಸಿಬಿಡವರೊ-ಹೊತ್ತು ಒಯ್ದು | ಕಲ್ಲುಗಾಣಕೆ ಹಾಕುವರೋ-ಕುಂಭೀಪಾಕ | ದಲ್ಲಿ ಕುದಿಸಿ ಬೇಯ್ಸಿ ಬೆಂಡು ಮಾಡುವರೊ6 ಒಂದು ನೋಡಿದರೊಂದು ಅಧಿಕ ಪಾಪಗಳಿವೇ- ನೆಂದು ಪೇಳಲಿ ಎನಗೊಂದಾದರಳವಲ್ಲ | ಹಿಂದಿನ ದುರ್ವಾರ್ತೆ ಮರೆದು ಮುಂದಾದರು | ನಂದತೀರ್ಥರ ಪಾದಾನಂದದಿ ಭಜಿಸಿ ಪು | ರಂದರನನು ಸರಿಸಿ-ವಿಜಯವಿಠ್ಠಲ | ನ್ಹೊಂದಿ ಪತಿಕರಿಸಿ-ಮುಕ್ತಿ ಮಾರ್ಗ- | ವಿಂದು ಆಶ್ರಿಯಿಸೊ ಗೋವಿಂದನ ಸ್ತುತಿಸಿ | 7
--------------
ವಿಜಯದಾಸ
ಎಂಥ ಆಟವಿದು ಕ್ಷಿತಿಜಪತಿದೆಂಥ ಆಟವಿದು ಪ ಎಂಥ ಆಟ ಶ್ರೀ ಕಂತುಜನಕ ಭ ಕ್ತಾಂತರಂಗ ಸುರಚಿಂತಾಮಣಿಯೇ ನಿನ್ನದೆಂಥ ಅ.ಪ ಮಡುವಿನೊಳಡಗಿರುವ ಉರಗನ ಹೆಡೆಮೆಟ್ಟಿ ನಾಟ್ಯಮಾಡುವ ಸಡಗರದಲಿ ಗೊಲ್ಲ ರ್ಹುಡುಗರ ಕೂಡಿಸಿ ಒಡನೆ ಬಿಲ್ಲಿನಾಟ ರಚಿಸಿ ಮಧುರಪುರ ಬಿಡದೆ ಸೇರಿ ಗಡಕಡಿದು ಮಾವನ ಶಿರ ತಡೆಯದೆಮನಪುರಪಥವ ಪಿಡಿಸಿದ್ದು 1 ಗೋವಳರೊಡಗೂಡಿ ಗೋವುಗಳ ಕಾಯಲ ಡವಿಸೇರಿ ಮಾಯವೃಷ್ಟಿ ಅತಿಭರದಿ ಗೈಯಲಾಗ ಗೋವರ್ಧನ ಗಿರಿಯೆತ್ತೆ ಏಳುದಿನ ಗೋವುಗಳನು ಮತ್ತು ಗೋವಳರೆಲ್ಲರ ಜೀವ ಸಮಾನಮಾಡಿ ಪ್ರೇಮದಿ ಸಲಹಿದ್ದು 2 ಎಷ್ಟು ಕ್ಷೀರ ನೀಡೆ ಜನನಿಗಿನ್ನಿಷ್ಟೆಂದ್ಹಟ ಮಾಡೆ ಸಿಟ್ಟಿನಿಂದ ತಾಯಿ ಕಟ್ಟಲು ಒರಳಿಗೆ ಅಟ್ಟಹಾಸದಿ ಡುರುಕಿಟ್ಟು ನಡೆದು ಶಾಪ ಪಟ್ಟು ಪಟ್ಟಣಮುಂದೆಷ್ಟೋಕಾಲದಿಂದ ಕಷ್ಟಪಡುವರ ದಯದೃಷ್ಟಿಯಿಂ ಸಲಹಿದ್ದು 3 ದುರುಳ ಭಸ್ಮನಂದು ಹರನಿಂ ಉರಿಹಸ್ತವನು ಪಡೆದು ಪರಮಪಾಪಿ ವರ ಕರುಣಿಸಿದವನಿಗೆ ಮರುಳಮಾಡವನ ಕರವೆ ಅವನ ಮೇ ಲ್ಹೊರೆಸಿ ಉರುವಿಸಿ ಹರನ ರಕ್ಷಿಸಿದ್ದು 4 ಬತ್ತಲೆ ಪುರಗಳನ್ನು ಪೊಕ್ಕು ನೀ ಸತಿಯರ ವ್ರತಗಳನು ಹತಗೈದು ತ್ರಿಪುರದ ಪಥಪಿಡಿಸೆಮಪುರ ಹಿತದಿಂ ಸುರಗಣಕತಿಸೌಖ್ಯವ ನಿತ್ತು ಜತನಗೈದಿ ಸಿರಿಪತಿಯ ಶ್ರೀರಾಮನೆ ಸತತದಿಂಥ ಮಹಪತಿತ ಮಹಿಮದಿಹ 5
--------------
ರಾಮದಾಸರು
ಎಂಥ ಶೂರನೊ ರಾಮ ಎಂಥ ಧೀರನೊ ಪ ಕಂತುಹರನ ಧನುವನೆತ್ತ ಪಂಥದಿಂದ ಮುರಿದು ಬಿಸುಟ ಅ.ಪ. ಹಲವು ಶೂರರಾಜರದನು ಚಲಿಸಲಾಗದ ಧನುವ ಸುಲಭದಿಂದಲೆತ್ತಿ ಮುರಿದು ಲಲನೆ ಸೀತೆಯೊಲಿಸಿದವನು 1 ಸಕಲ ಕ್ಷತ್ರಿಯರನು ಗೆಲಿದು ಪ್ರಕಟನಾದ ಪರಶುರಾಮ ಶಕುತಿಯನ್ನು ತಾನು ಪರಮ ಯುಕುತಿಯಿಂದ ಗೆಲಿದು ಬಂದ 2 ಸಾಲು ಶಿರನ ಕೀಟವೆಂದು ಬಾಲದಲ್ಲಿ ತಂದ ವೀರ ವಾಲಿಯನೇಕ ಬಾಣದಲಿ ಲೀಲೆಯಿಂದಲಿರಿದ ಜಾಣ 3 ಹತ್ತನಾಲ್ಕು ಲೋಕಗಳನು ಸುತ್ತಿಗೆಲಿದು ಖ್ಯಾತನಾದ ಹತ್ತು ತಲೆಯ ದುಷ್ಟನನ್ನು ಕತ್ತು ಕಡಿದು ಕೆಡಹಿದವನು 4 ರಾಸಿ ದೈತ್ಯರನ್ನು ಕೊಂಡು ದೇಶವನ್ನು ಉದ್ಧರಿಸಿದ ವಾಸವಾದಿ ಸುರನುತ ರಂ- ಗೇಶವಿಠಲರೇಯನವನು 5
--------------
ರಂಗೇಶವಿಠಲದಾಸರು
ಎಂದು ಪೇಳಯ್ಯ ಕಂದಗೆಂದು ಪೇಳಯ್ಯ ಹರಿ ಯೆಂದು ಪೇಳಯ್ಯ ಮಂದಮತಿ ನಿವಾರಣೋದಯ ಪ ಜಡಭವದ ಜಡರು ಕಡಿದು ದೃಢತರದ ಜ್ಞಾನ ಕೊಡುವ ಒಡೆಯ ನಿಮ್ಮ ಪುಣ್ಯ ನಾಮ ಕಡು ಪಾಪಿ ಜಿಹ್ವೆಗುದಯ 1 ಸೂತ್ರಧಾರ ನಿನ್ನ ಪಾದ ಖಾತ್ರಿಗೊಳಿಸಿ ನಿಜ ಸುಖದ ಪಾತ್ರನೆನಿಪ ಸತತ ಎನ್ನ ನೇತ್ರಕೆ ನಿನ್ನ ದರ್ಶನೋದಯ 2 ಅಧಮತನ ದೂರಮಾಡಿ ಸದಮಲ ಮತಿಯಿತ್ತು ವಿಧ ವಿಧದಿ ಕಾಯ್ವ ಸದಾಯೆನ್ನ ಹೃದಯದಿ ಶ್ರೀರಾಮೋದಯ 3
--------------
ರಾಮದಾಸರು
ಎನ್ನ ಹಣೆಯ ಬರಹಕೆ ಎಂಥಾ ಗಂಡ ದೊರೆತನೇಎನ್ನ ಮನವೆಂಬ ಗಂಡನ ಪರಿಯ ಪೇಳುವೆನೆ ಪ ಅಡಕಿಲಿಗಳನೆಲ್ಲವ ಹುಡುಕುವನೇಅಡುಗೆಯ ಮಡಕೆಯನೆಲ್ಲ ಒಡೆದನೇಗುಡುಗುಟ್ಟುತ ಯಾವಾಗಲೂ ಇಹನೇಗುಡ್ಡವನೇರುವನೇ 1 ಮುನಿಸಿಕೊಂಡು ಮೇಲಟ್ಟದಿ ಕೂರುವನೇಘನ ಹುಟ್ಟನೆ ಮುಂದಿಹನೇಮನೆಯಲೆಲ್ಲರ ಬಡಿವನೇಮತವನು ಕೆಡಿಸಿದನೆ 2 ದುಡಿವ ಕೋಣನನು ಕೊಂದನೇಕಡಿದುಬಿಟ್ಟನೆ ಕಾಯುವ ನಾಯನುಪುಡಿ ಮಾಡಿದ ಕಟ್ಟುವ ಹಗ್ಗವನೇ ಪಂಕ್ತಿಯ ಸೇರದಿಹನೆ 3 ಒತ್ತೆಯ ಒಡವೆಯನೆ ತಿಂದನೇಬತ್ತಿಯ ಹಿರಿದಾಗೆ ಚಾಚುವನೇಕಿತ್ತು ಒಗದನೇ ದೇವರನೇ ಕಡಿದನೇ ಮರವನ್ನೇ 4 ತ್ಯಜಿಸಿದ ನೆಚ್ಚಿದ ಮಡದಿಯನೇತ್ಯಜಿಸಿದ ಮೋಹದ ಮನೆಯನ್ನೇಭಜಿಸಿದ ಚಿದಾನಂದ ಗುರುವನ್ನೇನಿಜದಲಿ ಬೆರೆತನು ಅವರನ್ನೇ 5
--------------
ಚಿದಾನಂದ ಅವಧೂತರು
ಏನಗೈದೊಡೇನು ನಿನ್ನ ಬಿಡೆನು ನಾನೆಲೈ ಉದಧಿಶಯನ ಕೇಳೆಲೈ ಈ ಹದನ ಲಾಲಿಸೈ ಪ. ಎತ್ತ ಪೋದಡತ್ತ ನಿನ್ನ ಬೆನ್ನ ಹತ್ತುವೆ ನಿನ್ನ ಸುತ್ತಿ ಕಾಡುವೇ ನೀನೆತ್ತ ಪೋಗುವೆ 1 ಜಲಧಿಯಲ್ಲಿ ವಾಸಗೈದೆ ಬೇಸರಿಲ್ಲದೆ ಮೋದದೆ ನೀ ಏನಗೈದೆ 2 ಘೋರ ರೂಪಕಲಸದೆ ಕೆನ್ನೀರ ನೀಂಟಿದೆ ಕರುಳಮಾಲೆ ಧರಿಸಿದೆ ಕಪಟರೂಪ ತಾಳಿದೆ 3 ನಲಿದು ತಾಯ ತಲೆಯ ಕಡಿದು ಬಲಿದನೆನಿಸಿದೆ ಜಲಧಿಯನ್ನೆ ಕಟ್ಟಿದೆ ಛಲದಿ ದ್ವಿಜನ ಕೆಡಹಿದೆ 4 ಜಾರಚೋರನೆನಿಸಿ ಜಗವಗಾರುಗೊಳಿಸಿದೆ ಕುದುರೆಯೇರಿದೆ ಇನ್ನೇನು 5 ಇಷ್ಟು ಪಾಡುಪಟ್ಟ ನಿನ್ನ ಬಿಟ್ಟು ಪೋದೆನೆ ದಿಟ್ಟತನಕೆ ಭೀತಿಪಟ್ಟೆನೇ ನಿನ್ನ ಪಿಡಿಯದಿರ್ಪನೆ6 ಮೋಸಗಾರ ಶೇಷಶೈಲವಾಸನಹುದೆಲೈ ವಾಸಿಪಂಥವೇನೆಲೈ ಮೀಸಲಾಗಿ ಭಜಿಪೆ ನೋಡಲೈ7
--------------
ನಂಜನಗೂಡು ತಿರುಮಲಾಂಬಾ
ಏನಬೇಡಲಿ ನಿನ್ನ ನಾ ಬಯಸಿ ಸ್ವಾಮಿ ಐಹಿಕ ಸುಖ ನಿಖಿಲ ಪುಸಿಯಾಗಿ ಪ ವನಿತೆಯನು ಬೇಡಲೆ ತನಗೆ ಅಲ್ಲದೆ ಮತ್ತೆ ಮನೆತುಂಬ ಮರಿಮಾಡಿ ತಿನಿಸಿಗ್ಹಾಕೆಂದು ಅನುಗಾಲ ಬೆನ್ನ್ಹತ್ತಿ ತಿನುತಿಹ್ಯಳು ಹರಿದ್ಹರಿದು ಬಿನುಗರಲಿ ಬಿನುಗೆನಿಸಿ ಘನತೆಯನು ಕೆಡಿಸಿ 1 ಘನವೆಂದು ನಂಬಿ ನಾ ಧನವನಾಪೇಕ್ಷಿಸಲೆ ಸನುಮತದಿ ಒತ್ತಟ್ಟಕ್ಷಣ ಕೂಡ್ರಗೊಡದೆ ದಣಿವಿಕಿಲ್ಲದೆ ದುಡಿಸಿ ಅಣುಮಾತ್ರ ಸುಖಕೊಡದೆ ಚಿನುಮಯಾತ್ಮನೆ ನಿನ್ನ ನೆನವೆ ಮರೆಸುವುದು 2 ಭೂಮಿಯನು ಬೇಡಲೆ ಸ್ವಾಮಿಯಂತೆ ಸೇವೆಗೊಂಡು ತಾಮಸದಿ ನೂಕಿ ಬಲು ಪಾಮರೆನಿಸುವುದು ಸ್ವಾಮಿಯೆನ್ನಯ ಸಕಲ ಕಾಮಿತ ಕಡಿದು ನಿಮ್ಮ ನಾಮಬಲ ಕರುಣಿಸು ಶ್ರೀರಾಮ ಪ್ರಭುತಂದೆ3
--------------
ರಾಮದಾಸರು
ಏನು ಪೇಳಲಮ್ಮಯ್ಯಾ ರಂಗನ ಕ್ರೀಡಾ ಏನು ದಂಡಿಸಲಮ್ಮಯ್ಯಾ ಶ್ರೀ ಕೃಷ್ಣನ್ನ ಪ ಪಿಡಿದು ನಿಂದಾ ದುರುಳ ದೈತ್ಯನ್ನೆಳದೊಡಲವೆ ಸೀಳಿದಾ ಬಲಿಯಲ್ದೈನ್ಯದಿ ದಾನಬೇಡಿ ತಾಯ ಶಿರವ ಕಡಿದು ತೋರಿದಾ ಕಲೆವೆಣ್ಣೈದ್ಮೊಲೆಯುಂಡು ಕಳದ್ವಟ್ಟೆ ಹಯವೇರಿದಾ 1 ಕಾನನದಾ ವರಹನಾದಾ ಆಗಲು ಪಂಚಾನನ ರೂಪನಾದಾ ಸೂನು ಪರಶುರಾಮನಾಗಿ ಜಾನಕಿವರನಾಗಿ ರಾವಣನಾಗಿ ಮಾನಬಿಟ್ಟು ವಾಜಿಯನೇರ್ದಾ 2 ನಿಗಮ ತೋರ್ದಾ ಬೆನ್ನಲಿ ಬೆಟ್ಟವಿರಿಸಿ ಸುರರಾ ಪೊರೆದಾ ಧರಾಲಲನೆಯನೆತ್ತಿ ತಂದಾ ದೈತ್ಯನ ಶೀಳಿ ತರಳನಳಲನು ಕಳೆದಾ ಸುರತಟಿನಿಯಂಗುಟದಿ ಜನಿಸೆ ಧರೆಯ ಪಾವನಗೊಳಿಸೆ ನರಲೋಕವುದ್ಧಾರ ಜನಕ ಸಿರಿಪಾವನ ನರಸಿಂಹವಿಠಲನ 3
--------------
ನರಸಿಂಹವಿಠಲರು
ಕಂಡದಿಲ್ಲದ ಚಿತ್ರ ನಾ ಕಂಡೆ ಪ ಕೋತಿ ಸತ್ತುದ ಕಂಡೆ ಕೋಣನಳಿದುದ ಕಂಡೆಮಾತಿಗೆ ಬಾರದ ನಾಯ ಹರಿ ತಿಂಬುದ ಕಂಡೆ 1 ಕಾಗೆ ಕಣ್ಣು ಹೋದುದ ಕಂಡೆ ಕಳ್ಳರ ತಲೆ ಬಿದ್ದುದ ಕಂಡೆಕೋಗಿಲೆ ಕೊನೆಯಲಿ ಕೂಗಿದುದ ಕಂಡೆ 2 ಮರವ ಕಡಿದುದ ಕಂಡೆ ನೆರಳಲಿ ನಿಂತುದ ಕಂಡೆಬರಿಯ ವೋಡಲಿ ಹಾಲ ಕರೆದುಂಬುದ ಕಂಡೆ 3 ನೀರ ಮೇಲೆ ಒಲೆ ಉರಿವುದ ಕಂಡೆಮೇರುವಿನ ಶಿಖರದಿ ಜ್ಯೋತಿಯ ಕಂಡೆ 4 ಇರುಳು ಹಗಲು ಒಂದಾಗಿ ಇರುವುದ ಕಂಡೆಗುರು ಚಿದಾನಂದ ಬ್ರಹ್ಮವ ಗುರುತಿಲ್ಲದ ಕಂಡೆ5
--------------
ಚಿದಾನಂದ ಅವಧೂತರು
ಕಮಲನಾಭ ನಿಮ್ಮ ಪಾದಕಮಲ ನಂಬಿ ಭಜಿಪೆ ಶ್ರೀ ಮಾಧವ ಪ ಪಕ್ಷಿಗಮನ ನಿಮ್ಮ ನಿರ್ಮಲಕ್ಷಯನಾಮ ಎನ್ನ ಜಿಹ್ವೆಗೆ ಲಕ್ಷ್ಯದಿತ್ತು ಪಿಡಿದು ಬಿಡದೆ ರಕ್ಷಿಸ್ಯಾದವ 1 ಮಂದಭಾಗ್ಯ ನಾನು ನಿಮ್ಮ ಬಂಧುರಂಘ್ರಿಕುಸುಮ ಮರೆ ಬಂದು ಬಿದ್ದೆ ದಯದಿ ಕಾಯೋ ಮಂದರೋದ್ಧಾರ 2 ಅರಿಯದೆ ನಾ ಮಾಡಿದಂಥ ಪರಮದುರಿತ ತರಿದು ತವ ಚರಣಸೇವೆ ನೀಡಿ ಪೊರೆಯೈ ಉರಗಶಯನ 3 ನಾನಾ ಬೇನೆಯೊಳಗೆ ಬಿದ್ದು ಹಾನಿಯಾಗಿ ಬಳಲುವಂಥ ಹೀನ ಬವಣೆ ತಪ್ಪಿಸಿನ್ನು ದಾನವಾಂತಕ 4 ಕ್ಷಣಕೆಕ್ಷಣಕೆ ಮಾನವರಿಗೆ ಮಣಿದು ಬೇಡಿ ಜೀವಿಸುವ ಬಿನಗುಕೃತಿ ಗೆಲಿಸು ದಯದಿ ದೀನಮಂದಾರ 5 ಜನಿಸಿದಂದಿನಿಂದ ನಾನು ಘನ ತಾಪತ್ರಯದಿ ನೊಂದೆ ಮನಕೆ ತಂದು ರಕ್ಷಿಸಿನ್ನು ಜನಕಜಾವರ 6 ಬುದ್ಧಿಯಿಲ್ಲದೆ ಕೆಟ್ಟೆನಭವ ಬಧ್ಧಜನರ ಸಂಗದಿ ಬಿದ್ದು ಶುದ್ಧಮತಿಯ ನೀಡಿ ಸಲಹು ಪದ್ಮನಾಭನೆ 7 ವಿಶ್ವ ವಿಶ್ವಾಕಾರ ನಿಮ್ಮ ವಿಶ್ವಾಸೆನಗೆ ಕೃಪೆಯ ಮಾಡಿ ನಶ್ವರೆನಿಪ ಮತಿಯ ಬಿಡಿಸು ವಿಶ್ವರಕ್ಷನೆ 8 ನೀನೆ ಗತಿಯು ಎನಗೆ ದೇವ ನಾನಾದೈವವರಿಯೆ ಸತ್ಯ ಜ್ಞಾನಪಾಲಿಸೊಳಿದು ಬೇಗ ಜ್ಞಾನಸಾಗರ 9 ಕೆಟ್ಟ ಹೊಟ್ಟೆ ಕಷ್ಟಕಡಿದು ದುಷ್ಟ ಭ್ರಷ್ಟ ಸಂಗ ತರಿದು ಶಿಷ್ಟ ಸಂಗ ದೊರಕಿಸೆನಗೆ ಸೃಷ್ಟಿಕರ್ತನೆ 10 ಸುಜನ ಸಹ ವಾಸದಿರಿಸನುಮೇಷ ಎನ್ನ ವಾಸುದೇವನೆ 11 ಹೀನ ಹೀನ ಜಗ ಅಭಿಮಾನ ತೊಲಗಿಸಧಿಕ ನಿಮ್ಮ ಧ್ಯಾನಾನಂದ ಕರುಣಿಸಯ್ಯ ಜನಾರ್ದನ12 ಭಾರವೆನಿಪ ವಿಷಮಸಂಸಾರ ಸುಲಭದಿಂದ ಗೆಲಿಸು ಘೋರ ಭವದ ತಾಪಹರ ನಾರಾಯಣ 13 ದೇಶದೇಶಂಗಳನು ತಿರುಗಿ ಅಸಂಬದ್ಧನಾದೆ ಸ್ವಾಮಿ ದೋಷ ಮನ್ನಿಸಯ್ಯ ಎನ್ನ ಈಶಕೇಶವ 14 ಸಂಚಿತಿಂದೀಗಳಿ( ಯಿ)ಸೆನ್ನ ಮುಂಚಿತಾಗಮ ಗೆಲಿಸು ಜೀಯ ಸಂಚಿತಾಗಮ ರಹಿತ ವಿರಂಚಿತಾತನೆ 15 ಚಾರುವೇದ ಪೊಗಳುವಂಥ ತೋರಿಸಯ್ಯ ನಿನ್ನ ಮೂರ್ತಿ ಮೂರು ಲೋಕ ಸಾರ್ವಭೌಮ ನಾರಸಿಂಹ 16 ಮದನನಯ್ಯ ಮುದದಿ ಬೇಡ್ವೆ ಸದಮಲ ಸಂಪದವ ನೀಡು ಸದಮಲಾಂಗ ಸರ್ವಾಧಾರ ಮಧುಸೂದನ 17 ಸಕಲ ವಿಘ್ನದೂರ ಮಾಡಿ ಮುಕುತಿಪಥಕೆ ಹಚ್ಚು ತ್ವರಿತ ಭಕುತರಿಷ್ಟ ಪೂರ್ಣ ಆದಿಲಕುಮಿನಾಯಕ 18 ದರ್ಜುಮಾಡಿಸೆನ್ನ ನಿಮ್ಮ ಮರ್ಜಿಪಡೆದ ಭಕ್ತರೊಳಗೆ ದುರ್ಜನಾಗಿ ದಯಾರ್ಣವ ನಿರ್ಜರೇಶನೆ 19 ಪೋಷಿಸೆನ್ನನುಮೇಷ ನಿಮ್ಮ ದಾಸನೆನಿಸಿ ವಸುಧೆಯೊಳು ಆಸೆಯಿಂದ ಬೇಡಿಕೊಂಬೆ ಕ್ಲೇಶನಾಶನೆ 20 ನಿರುತ ಮನದಿ ಹರಿಯ ನಾಮ ಬರೆದು ಓದಿ ಕೇಳುವರಿಗೆ ಪರಮ ಮುಕ್ತಿ ಕೊಡುವ ಮಮ ವರದ ಶ್ರೀರಾಮ 21
--------------
ರಾಮದಾಸರು
ಕರಿಮುಖದ ಗಣಪತಿಯ ಚರಣಕ್ಕೆಯೆರಗಿ ಶಾರದೆಗೆ ಸೆರಗೊಡ್ಡಿ ವರವನು ವರವ ಬೇಡಿಕೊಂಡೆ ಸ್ಥಿರವಾದ ಭಕುತಿ ಕೊಡುಯೆಂದು 1 ವಾಯು ಬ್ರಹ್ಮ ಭಾರತಿಗೆ ಬಾಳ ಬೇಡಿಕೊಂಡ್ವೇ- ದವ್ಯಾಸರಿಗೆ ನಮೋಯೆಂಬೆ ನ- ಮೋಯೆಂದು ನಾರದರ ಪಾದಪದ್ಮಗಳಿಗೆರಗುವೆ 2 ಅತ್ರಿ ಅಂಗೀರಸ ವಸಿಷ್ಠಗೌತಮ ವಿಶ್ವಾ- ಮಿತ್ರ ಮಾರ್ಕಾಂಡೇಯ ಚ್ಯವನರು ಚ್ಯವನ ಭಾರದ್ವಾಜ ಬಕದಾಲ್ಭ್ಯರಿಗೆ ನಮಿಸುವೆ 3 ಪಂಡಿತ್ವಾಲ್ಮೀಕಿ ಕೌಂಡಿಣ್ಯ ಕೌಂಡಿಣ್ಯ ಅಗಸ್ತ್ಯಮುನಿ ಮರೀಚರಿಗೆ ನಾನು ನಮೋಯೆಂಬೆ4 ಶೇಷಗಿರಿವಾಸನ ಆಕಾಶನಳಿಯನೆ ವೆಂಕ- ಟೇಶ ನೀ ನಮ್ಮನೆ ದೈವ ಮನೆದೈ- ವ ಸಲಹೆನ್ನ ಪದ್ಮಾವತೀಶ ಪರಮಾತ್ಮ 5 ಮಂಗಳಾಂಗನೆ ನೀನು ಮಂಗಳಮಹಿಮನೆ ಮಂಗಳದೇವಿ ರಮಣನೆ ನೀನೆಮಗೆ ಜಯ ಮಂಗಳವ ಕೊಟ್ಟು ಸಲಹೆನ್ನ 6 ವಾಸುದೇವನೆ ನೀನು ವಾಸುಕಿಶಯನನೆ ವಾಸವಿಯ ರಥವ ನಡೆಸಿದೆ ನಡೆಸಿದಂಥ ಶ್ರೀನಿ- ವಾಸ ನೀನೆಮಗೆ ದಯಮಾಡು 7 ಎನ್ನಲ್ಲೆ ನೀನಿದ್ದು ನಿನ್ನಗುಣ ಬಹುರೂಪ- ವನ್ನು ತಿಳಿಸದಲೆ ಇರುವೋರೆ ಇರುವೋರೆ ನೀನು ಪ್ರ- ಸನ್ನನಾಗೆನಗೆ ದಯಮಾಡು 8 ಕಾಲ ಕಾಲಕೆ ನಿನ್ನ ನಾಮವನು ನಾಲಿಗೆ ಮ್ಯಾಲಿಟ್ಟು ನಿನ್ನ ನೆನೆವಂತೆ ನೆನೆವಂತೆ ಅನಿರುದ್ಧ 9 ಕಾಮಕ್ರೋಧವು ಮದ ಮಾತ್ಸರ್ಯ ಲೋಭಗಳು ಮೋಹ ಮಡುವಿನಲಿ ಮುಣುಗಿದೆ ಮುಣುಗಿದೆನೊ ಎನ್ನ ಕೈ ನೀನೆ ಪಿಡಿದೆತ್ತಿ ಕರೆದೊಯ್ಯೊ 10 ಐದು ಮಂದ್ಯೆನ್ನಲ್ಲಿ ಐದಾರೆ ಮಾರಾಯ ಬೈದರು ಬಿಡರೋ ಎನ್ನೀಗ ಎನ್ನೀಗ ಕಟ್ಟಿ ಕೊಂಡೊಯ್ದು ಹಾಕುವರೊ ಯಮನಲ್ಲಿ 11 ಆರು ಮಂದ್ಯರಿಗಳು ಕ್ರೂರ ಶತ್ರುಗಳುಂಟು ಘೋರಬಡಿಸುವರೊ ಅನುಗಾಲ ಅನುಗಾಲ ದುರ್ವಿಷಯ ತಾವೆನಗೆ ಕಲಿಸಿ ದಣಿಸೋರು 12 ಹತ್ತು ಮಂದಿ ಯೆನ್ನ ಸುತ್ತ ಮುತ್ತಿರುವರೊ ಕೂಪ ಭವದೊಳು ಭವದೊಳಗೆ ಬಳಲುವೆನು ಚಿತ್ತಕ್ಕೆ ತಂದು ದಯಮಾಡು 13 ಸಂಚಿತಾಗಾಮಿಗಳ ಮುಂಚೆ ದಹಿಸಿ ಈ ಪ್ರ- ಪಂಚವನು ಬಿಡಿಸೊ ಪರಮಾತ್ಮ ಪರಮಾತ್ಮ ನೀಯೆನ್ನ ವಂಚನಿಲ್ಲದಲೆ ಸಲಹೈಯ್ಯ 14 ಜ್ಞಾನ ಭಕ್ತಿ ಗಾನ ವೈರಾಗ್ಯ ಭಾಗ್ಯಗಳು ಜಾನಕಿರಮಣ ಜಗದೀಶ ಜಗದೀಶ ಜನಕನ ಜಾಮಾತ ನೀನೆ ತಿಳಿಸಯ್ಯ 15 ದ್ವಾಸುಪರುಣನಂತೆ ಈ ಶರೀರದೊಳಿದ್ದು ಏಸೇಸು ಜನ್ಮಕ್ಕಗಲದೆ ಅಗಲದಂತಿದ್ದು ಉ- ದಾಸೀನವ ಮಾಡೋದೊಳಿತಲ್ಲ 16 ಇಂದುಕುಲಜಾತ ನಿನ್ನೊ ್ಹಂದಿಕೊಂಡಿದ್ದು ಎಂದೆಂದಿಗು ಬಿಡದೆ ಗೆಳೆತನ ಗೆಳೆತನವಿದ್ದಲ್ಲಿ ಸಂದೇಹವ್ಯಾಕೊ ಸಲಹಲು 17 ಮುಕ್ತಿದಾಯಕ ನಿನ್ನ ಭಕ್ತರೇಸುಮಂದಿ ಹೆತ್ತಾಯಿಸುತರೇನವರೆಲ್ಲ ನಾ ಹುಟ್ಟಿದೆನೆ ಮತ್ತೆ ಮಲತಾಯಿ ಉದರದಿ 18 ಶ್ರೀಶನೆ ಕೇಳ್ ನಿನ್ನ ದಾಸರಂಗಳದಲ್ಲಿ ಬೀಸಿ ಬಿಸಾಕೊ ಎನ್ನನು ಎನ್ನ ಹರಿದಾಸರ ದಾಸತ್ವಯೆನಗೆ ಕೊಡಿಸಯ್ಯ 19 ಅಂಬರೀಷ್ವರದ ನಿನ್ನ ್ಹಂಬಲೆನಗಿರಲಯ್ಯ ಬಿಂಬ ಮೂರುತಿಯೆ ಬಿಡದೆನ್ನ ನಿನ್ನೂರಲ್ಲಿ ಇಂಬುಕೊಟ್ಟೆನ್ನ (ಅ)ಲ್ಲಿರಿಸಯ್ಯ 20 ಕಡಿದು ಹೊಡೆದು ಬಯ್ದು ಬಂದು ಕಾಲಿಂದೊದ್ದ- ರ್ಹಿಡಿಯದೆ ಅವರ ಅಪರಾಧ ಅಪರಾಧವೆಣಿಸದಿರೆ ನಡೆದರೊ ನಿನ್ನ ಪುರಕಾಗ 21 ಪುಟ್ಟ ಪ್ರಹ್ಲಾದ ಧ್ರುವ ಕೊಟ್ಟರೆಷ್ಟು ಭಾಗ್ಯ ಕಷ್ಟಕ್ಕೆ ಬಂದು ಒದಗಿದೆ ಒದಗಿ ಬಂದವರ ಆಪತ್ತು ಬಂಧನ ಬಿಡಿಸಿದೆ 22 ತನ್ನ ಮಗನ ಕರೆಯೆ ಎನ್ನ ಕರೆದನೆಂದು ನಿನ್ನ ದೂತರನು ಕಳಿಸಿದೆ ಕಳಿಸಿದ್ಯಜಮಿಳಗೆ ಮನ್ನಿಸಿ ಕೊಟ್ಟ್ಯೊ ನಿನಲೋಕ 23 ತಿರುಕ ತಂದವಲಕ್ಕಿ ಕರಕÀರನೆ ನೀಮುಕ್ಕಿ ದೊರೆತನವ ಕೊಟ್ಟು ದಾರಿದ್ರ್ಯ ದಾರಿದ್ರ್ಯ ಕಳೆದದ್ದು ಅರಿಕಿಲ್ಲವೇನೊ ಜನಕೆಲ್ಲ 24 ನಿಲ್ಲಬೇಕೆಂದಿಟ್ಟಿಕಲ್ಲು ಕೊಟ್ಟವಗೆ ಕೈ- ವಲ್ಯವನು ಕೊಟ್ಟ್ಯೋ ಕರುಣಾಳು ಕರುಣಾಳು ಬುಕ್ಕಿ ್ಹಟ್ಟು ಮಲ್ಲಿಗೆಯ ಮಾಲೆಗೊಲಿತೀಯೊ 25 ಕರೆದು ಕಂಸಗೆ ಕೊಟ್ಟು ಕೊಲಿಸಬಂದ- ಕ್ರೂರ(ಗೆ) ನದಿಯಲ್ಲೆ ನಿನ್ನ ನಿಜರೂಪ ನಿಜರೂಪ ತೋರಿದ್ದು ಇದುಯೇನು ನಿನ್ನ ಮಹಿಮೆಯು 26 ಗಂಧಕ್ಕೆ ಒಲಿದು ಕುಬ್ಜೆಯ ಡೊಂಕನೆ ತಿದ್ದಿ ಸುಂದರಿಯ ಮಾಡಿ ಸುಗುಣನೆ ಸುಗುಣನೆ ನೀನಾಕೆ- ಯಂಗಸಂಗ್ಯಾಕೆ ಬಯಸಿದಿ 27 ಕಲ್ಲಾದಹಲ್ಯೆಯನು ಕಡು ಚೆಲ್ವೆಯನು ಮಾಡಿ ಎಲ್ಲಿ ಮಲಗಿದ್ದ ಮುಚುಕುಂದ ಮುಚುಕಂದನ ಗುಹೆ- ಕೈವಲ್ಯ ಕೊಡಹೋದ್ಯೊ 28 ಮಗ್ಗವನೆ ಹಾಕಿ ಮಾರುಬಟ್ಟೆ ನೇದಿಲ್ಲ ರೊಕ್ಕವನೆ ಕೊಟ್ಟು ತರಲಿಲ್ಲ ತರಲಿಲ್ಲ ದ್ರೌಪದಿಗೆ
--------------
ಹರಪನಹಳ್ಳಿಭೀಮವ್ವ
ಕಾವದೇವ ನಿನಗೆ ನಾ ಕೈಮುಗಿದು ಬೇಡ್ವೆ ಕಾಮಜಪಿತ ಎನ್ನ ಕಾಯಮೋಹ ಬಿಡಿಸೈ ಪ ಮಸಣಬುದ್ದಿಯ ಮರೆಸು ಪುಸಿನುಡಿಯ ಪರಿಹರಿಸು ವಸನ ಒಡವ್ಯೆಂದೆಂಬ ವ್ಯಸನ ಕಡೆಹಾಯ್ಸು ದಿಸೆಗೆಡಿಸಿ ಬಳಲಿಸುವ ಹಸಿವು ತೃಷೆಯನಡಗಿಸಿ ಹಸನಗೆಡಿಸುವ ಮಮ ರಸನೆರುಚಿ ಕೆಡಿಸು 1 ಅಳದ್ಹೋಗ್ವ ಇಳೆಸುಖದ ಹಲುಬಾಟವನೆ ಬಿಡಿಸು ಮಲಿನಸಂಸಾರಮಾಯ ಕಳವಳಿಕೆ ತಪ್ಪಿಸು ಸಲೆ ಸಾಧುಸಂತತಿಯ ಬಳಗದೊಳು ಕೂಡಿಸು ಹೊಳೆಯಮನಸಿನ ಸಕಲ ಚಲನೆ ದೂರೆನಿಸುತ 2 ದೋಷರಾಶಿಯ ತೊಡೆದು ಮೋಸಪಾಶವ ಕಡಿದು ಆಸೆ ನಾಶಗೈದು ನಿರ್ದೋಷನೆನಿಸಿ ಶ್ರೀಶ ಶ್ರೀರಾಮ ನಿಮ್ಮ ಸಾಸಿರ ನಾಮವೆನ್ನ ಧ್ಯಾಸದಲಿ ಸ್ಥಿರನಿಲಿಸಿ ಪೋಷಿಸನುದಿನದಿ3
--------------
ರಾಮದಾಸರು
ಕುಂಟೆ ಹೊಡೆಯೊ ಜಾಣ ಅದನೋಡಿ ಕುಂಟೆ ಹರಗೋ ಜಾಣ ಪ ಕುಂಟೆ ಹೊಡ್ಸೋನಾಗಿ ಕಂಟಿಕಡಿದು ನೀ ಎಂಟೆತ್ತುಗಳ ಹೂಡಿ ಮಂಟಪದ್ಹೊಲವನ್ನುಅ.ಪ ಅರಿವೆಮಡಿಕೆಹೊಡೆಯೊ ಮರವ್ಯೆಂಬ ಕರಿಕಿದಡ್ಡನಳಿಯೊ ಶರಣೆಂಬಗುದ್ದಲ್ಹಿಡಿಯೊ ಗರುವೆಂಬ ದುರಿತಕರುಣಗಳಗಿಯೊ ತೆರಪಿಲ್ಲದ್ಹೇಳುತ ಜರಾಮರಣೆಂಬ ಕಸ ಕರುಣೆಂಬ ಮಾಗಿ ಮಡಿ ಮಾಡಿ ಭರದಿ ಹಸನಮಾಡು 1 ಧ್ಯಾನ ದಾಸರಸೇವೆಯೆಂದೆಂಬುವ ಖೂನ ಮಾಡೆಲೊ ಬದುವ ದಾನಧರ್ಮಯೆಂಬುವ ಸತತದಿ ಹನಿಸು ಗೊಬ್ಬರವ ಜ್ಞಾನಿಸಂಗವೆಂಬ ಜಾಣಬೆದೆಗಾಲದಿ ಜ್ಞಾನಕೂರಿಗೆಯಿಂದ ಧ್ಯಾನಬೀಜವ ಬಿತ್ತು 2 ಮನನೆಂಬಬೆಳೆ ಕಾಯೋ ನಿಜವಾದ ನೆನೆವೆಂಬರ ಕವಣ್ಹಿಡಿಯೊ ಮನಚಂಚಲ್ಹಕ್ಕ್ಹೊಡೆಯೊ ಶಾಂತಿಸದ್ಗುಣವೆಂಬ ಫಲ ಪಡೆಯೊ ಘನತರ ದೃಢವೆಂಬ ಧಾನ್ಯರಾಸಿಮಾಡಿ ವನಜಾಕ್ಷ ಶ್ರೀರಾಮನೊನರುಹಕರ್ಪಿಸು 3
--------------
ರಾಮದಾಸರು
ಕೇಳು ಕಂಡ್ಯಾ ಒಂದು ಮನವೇ | ಕೇಳು ಕಂಡ್ಯಾ ಪ ಕೇಳು ಕಂಡ್ಯಾ ವಂದ | ಪ್ರೇಮ ಭಾವದಿಂದ ಬಾಳು ದೀಪರಿಂದ ನಿನಗೆ ಬಂದಕೀದೆ ಛಂದ 1 ವಿಡಿದು ಗುರುಪಾದಾ ಪಡಿಯೋ ನಿಜಬೋಧಾ | ಕಡಿದು ಕಾಮ ಕ್ರೋಧ | ನೀಗು ವ್ಯವಾಧಾ 2 ಅನ್ಯ ಮಾರ್ಗ ನೋಡಾದಿರುವ ಬಲಿದೃಢಾ | ಘನಗುರು ಗೂಢಾ | ವಿದ್ಯೆ ಸಾಧಿಸೆಲೋ ಮೂಢ 3 ದೊಡ್ಡವ ನಾನೆಂಬ ದೋರದೆÉ ನೀಡಂಭ | ಜಡ್ಡಾಗದೇ ಗುಂಭಿ | ನಿಜ ನೋಡಿ ನಿರಾಲಂಬ 4 ಮಹಿಪತಿ ಜನಸೊಲ್ಲ ಹಾದಿಯಂತಿದಲ್ಲ ಮಹಿಮನೇ ಬಲ್ಲನಿದರ ಸವಿಸುಖವೆಲ್ಲ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕೇಳು ನಾ ಪೇಳ್ವದೊಂದಾ ನಿತ್ಯಾನಂದಾ ಪ. ಕೇಳು ನಾ ಪೇಳ್ವದೊಂದಾ ಕಂಸಾದ್ಯಸುರವೃಂದ ಸೀಳಿ ಶೀಘ್ರಾದಿ ಪರಿಹರಿಸಿದಿ ಪಿತೃ ಬಂಧ ಅ.ಪ. ನಿಗಮ ತತಿಗಳು ನಿಶ್ಯೇಷ ತಿಳಿಯದ ಸುಗುಣವಾರಿಧಿ ಸುಖಬೋಧ ದೇಹ ಸ್ವಗತ ಖೇದೊಝ್ಝಿತ ಸರ್ವ ನಿಯಾಮಕ ಖಗಪತಿವಾಹನ ಕಾಮಿತ ಭಾವನ ಪಾಲನ ಪರಾತ್ಪರ ಸ್ವಗತಿ ನಿಯತಿ ಜ್ಞಾನ ದಾಯಕ ತ್ರಿಗುಣ ವರ್ಜಿತ ತ್ರಿಭುವನೇಶ್ವರ ಮಗುವು ನುಡಿವುದ ಮಾತೆಯಂದದಿ 1 ಮೊದಲಿನ ಭವಗಳ ಹದನ ಒಂದರಿಯೆನು ಪಾದ ಪದುಮಗಳ ಸದರದಿ ಸೇವಿಸಲಧಿಕ ಸಾಧನ ಮಾನು ಷ್ಯದಿ ಬಂದು ವೈಷ್ಣವ ಬುಧರಾ ಸೇವೆಯ ಬಿಟ್ಟು ವಿಧವಿಧ ಮೋಹಾಂಧಕಾರಗ- ಳುದಿಸಲದರೊಳು ಸಿಲುಕಿ ನಿರುಪದಿ ಬಧಿರ ಮೂಕ ಜಡಾಂಧನಾದೆನು ಸದಯ ಇನ್ನಾದರೂ ಕಟಾಕ್ಷದಿ 2 ತಾಪತ್ರಯೋನ್ಮೂಲನೇಶಾ ಕೌಸ್ತುಭಭೂಷ ಸುಜನ ಗಣೈಕ ಪೋಷಾ ಈಪರಿಯೊಳಗೆನ್ನ ಜರಿವದುಚಿತವೇನೊ ಕಾಪುರುಷರ ಸಂಗ ಕಡಿದು ಕರುಣವಿಟ್ಟು ಶ್ರೀ ಪಯೋಜ ಭವೇಂದ್ರ ವಂದ್ಯ ಪ್ರ- ದೀಪ ಸತ್ಸಿದ್ಧಾಂತ ತಿಳಿಸಿ ಪ- ದೇ ಪದೇ ಕಾಪಾಡು ವೆಂಕಟ ಭೂಪ ನೀ ಗತಿಯೆಂದು ನಂಬಿದೆ ಕೇಳು 3
--------------
ತುಪಾಕಿ ವೆಂಕಟರಮಣಾಚಾರ್ಯ