ಒಟ್ಟು 34 ಕಡೆಗಳಲ್ಲಿ , 18 ದಾಸರು , 31 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾನಾ ಚಿಂತನೆ ಎನಗಿಲ್ಲ ಹರಿ ನಿನ್ನ ಚಿಂತನೆ ಎನಗನುಗಾಲ ಪ ಮಾನಾಪಮಾನದ ಭಯವಿಲ್ಲೆನಗೆ ತವ ಧ್ಯಾನವೊಂದೆ ನೀಡು ಬಹು ಮಿಗಿಲ ಅ.ಪ ಉಪವಾಸಬಿದ್ದರೆ ಆಡ್ಡಿಯಿಲ್ಲ ಎನ ಗಪರೂಪ ಊಟಾದರ್ಹಿಗ್ಗಿಲ್ಲ ಕಪಟದಿ ಬೈದರೆ ಅಹಿತಿಲ್ಲ ಜನ ನಿಪುಣನೆಂದರೆ ಎನಗ್ಹಿತವಿಲ್ಲ ಸುಪಥದಿ ನಡೆಸೆನ್ನ ಸಫಲನೆನಿಸಿ ನಿಮ್ಮ ಗುಪಿತ ಮಂತ್ರ ಮಾಡನುಕೂಲ 1 ಪರಮ ಬಡತನವಿರೆ ಪರವಿಲ್ಲ ಬಲು ಸಿರಿ ಸಂಪದವಿರೆ ಹರುಷಿಲ್ಲ ಸಿರಿವರ ನಿಮ್ಮಯ ಚರಣ ಸ್ಮರಣೆವೊಂದೆ ಸ್ಥಿರಮಾಡು ಮರೀದಂತೆ ಗೋಪಾಲ 2 ಕಾಮಿನಿಯರ ಪ್ರೇಮ ನಿಜವಿಲ್ಲ ಮತ್ತು ಹೇಮ ಮುತ್ತು ರತ್ನ ಇರೋದಲ್ಲ ಭೂಮಿಸೀಮೆಯ ಸುಖವಿಲ್ಲ ಇದು ನೇಮವಲ್ಲೊಂದಿನ ಬಟ್ಟಬೈಲ ಕ್ಷೇಮಮಂದಿರ ಭಕ್ರಪ್ರೇಮದಿ ಕೊಡು ಶ್ರೀರಾಮ ನಿಮ್ಮಡಿ ಭಕ್ತಿ ನುತಪಾಲ 3
--------------
ರಾಮದಾಸರು
ನಿನ್ನ ಉನ್ನತ ಮಹಿಮೆಯನ್ನು ಬಣ್ಣಿಪ ಶಕ್ತಿ ಎನಗೆಂತು ಕರುಣಾರ್ಣವ ಪ ಅನ್ಯಕುಲದಲಿ ಜನಿಸಿ ಅನ್ಯ ಆಹಾರಗಳುಂಡು ಕುನ್ನಿಯಂತೆ ಕಳೆವೆ ದಿನವ ಅಭವ ಅ.ಪ ಶೋಧಿಸಿಶಾಸ್ತ್ರಪದ ಛೇದಿಸಿ ಬಣ್ಣಿಸಲೆ ಓದು ನಾ ಕಲಿತಿಲ್ಲವೋ ವೇದಪೂರ್ವಕಮಾಗಿ ಸಾಧನದಿ ಬಣ್ಣಿಸಲೆ ವೇದ ಎನಗೊಳುಪಿಲ್ಲವೋ ಸಾಧುವರ್ತನದ ಮಹಾದಾದಿಯಿಂ ಬಣ್ಣಿಸಲೆ ಸಾಧುಪಥ ಗುರ್ತಿಲ್ಲವೋ ಆದಿಮೂರುತಿ ನಿನ್ನ ಪಾದಪೊಗಳಲು ಒಂದು ಹಾದಿಗೊತ್ತೆನಗಿಲ್ಲವೋ 1 ದೃಢಮಾಗಿ ನಿನ್ನ ಸಮದೃಢ ಮಹಿಮೆ ಬಣ್ಣಿಸಲೆ ದೃಢಭಕ್ತಿಯೆನಗಿಲ್ಲವೋ ಎಡಬಿಡದೆ ಬಣ್ಣಿಸಲೆ ಪೊಡವಿಯೋಳ್ನಿನ್ನವರ ಒಡನಾಟ ಎನಗಿಲ್ಲವೋ ಕಡು ಗೂಢವಾಗಿ ನಿನ್ನಡಿಗಳನು ಬಣ್ಣಿಸಲೆ ಜಡಮತಿ ನಾ ಬಣ್ಣಿಪೆನೆ ಕಡೆಯಿಲ್ಲದ ತವಮಹಿಮೆ ಮೃಡ ಅಜರಿಗಸದಳವೋ ತಿಳಿವೋ 2 ಸುಗುಣಗುಣಾಂತ ನಿನ್ನ ಸುಗುಣಗಳ ಬಣ್ಣಿಸಲು ಸುಗುಣಗುಣ ಎನಗಿಲ್ಲವೋ ನಿಗಮಾತೀತನೆ ನಿನ್ನ ಗುಟ್ಟು ಬಣ್ಣಿಸಲೆ ನಿಗಮವ ನಾನರಿತಿಲ್ಲವೋ ಅಗಣಿತಮಹಿಮ ನಿನ್ನ ಹಗರಣದ ಮಹಿಮೆಯ ಬಗೆಬಲ್ಲವ ನಾನಲ್ಲವೋ ಪೊಗಳುವೆನು ಮಿಗಿಲೆನ್ನುತ ಸತತ3
--------------
ರಾಮದಾಸರು
ನಿನ್ನ ನಾ ಮರೆತರೂ ಎನ್ನ ಕೈ ಬಿಡದಿರು ಕರುಣಿಚನ್ನಕೇಶವ ಶ್ರೀ ವೆಂಕಟಾದ್ರಿನಿಲಯ ಪ ಎನ್ನ ತಪ್ಪುಗಳ ನಾನು ಮರೆಯಲೆಂತು ಎನ್ನಬೆನ್ನ ನೋಡಿಕೊಳ್ಳಲಹುದೆ ಎನ್ನಿಂದ ಅ ಮಂಜು ಮರೆಯಾಗುವುದು ಮಾರ್ತಾಂಡ ಮೂಡೆಕಂಜಲೋಚನ ನಿನ್ನ ಪದಕಮಲ ಸ್ಮರಣೆರಂಜಿಸಿ ಮನವನು ಪಾರಾಗಿಪುದು ಪಾಪಗಳಅಂಜಿಕೆಯ ಬಿಡಿಸುತ ಅನುಗ್ರಹಿಪ ಕರುಣಿ 1 ದಯೆ ನಿನ್ನದಿರೆ ಭಯ ಎನಗಿಲ್ಲ ಹರಿಮಾಯೆ ಮೋಹಗಳಿಗೆ ಮರುಳಾಗಿಹ ಬೊಂಬೆಜಯವಾಗಿಸಿ ಈ ಜನ್ಮ ಕೃತಾರ್ಥವ ಮಾಡುತೋಯಜಾಕ್ಷ ಶ್ರೀ ನೆಲೆಯಾದಿಕೇಶವರಾಯ2
--------------
ಕನಕದಾಸ
ನಿನ್ನ ಮಾತಿಗೆ ಮೆಚ್ಚುವನಾವಾವಾ ಪರಾಕು ಎಲೊ ಎಚ್ಚರಿಕೆ ಪ ಎಂತಾಗುವದೆಂದು ನುಡಿಯದಿರಿ ಕಂತುವಿನ ಪಿತ ನಿನಗೆ ನಮೊ ನಮೊ ಬಿನ್ನೈಪೆ ಸಂತು ಧ್ರುವರಾಯನು ಸಂತತ ಇದಕೆ ಸಾಕ್ಷಿ 1 ಒಂದೆ ರೂಪದಲಿ ಪೂಜೆಯಗೊಂಬೆ ಎನಗೆ ಮ ತ್ತೊಂದು ರೂಪಕೆ ಶಕ್ತಿ ಇಲ್ಲೆನ್ನದಿರು ಸಂದೇಹ ಎನಗಿಲ್ಲ ಎಲ್ಲಿದ್ದರು ದೇವ ನಂದನಂದನ ಇದಕೆ ರಾಯ ಬ್ರಾಹ್ಮಣ ಸಾಕ್ಷಿ 2 ಬದಿಯಲಿದ್ದರೆ ಇಷ್ಟೆ ಮುಂದೆ ಬರುವ ಆಪತ್ತು ಒದಗಿ ಕಳೆವೋಪಾಯ ಕಡಿಮೆನ್ನದಿರೊ ಮುದದಿಂದ ನಿನ್ನಂಘ್ರಿಗೆರಗುವೆನು ಗತಿಪ್ರದಾ ಕದನದೊಳು ಬದುಕಿ ನರಧ್ವಜನೆ ಸಾಕ್ಷಿ3 ಆಪತ್ತು ಕಳೆವೆ ಬೇಡಿದ ಭೋಜನ ಕೊಡುವೆ ಈ ಪರಾಕ್ರಮ ನಿನಗಲ್ಲೆನ್ನದಿರು ಶ್ರೀಪತಿ ನಿನ್ನ ಲೀಲೆಗೆ ಬೆರಗಾಗುವೆನೊ ತಾಪಸರ ಮಧ್ಯದಲಿ ದುರ್ವಾಸಮುನಿ ಸಾಕ್ಷಿ 4 ನಾನಾ ಭಕ್ತರು ಇನಿತು ಸಾಕ್ಷಿಯಾಗಿರಲಿಕ್ಕೆ ಏನು ಸೋಜಿಗವೆಂಬೊ ಸೋಗು ಯಾಕೆ ಸಿರಿ ವಿಜಯವಿಠ್ಠಲರೇಯಾ ನಾನು ಬೇಡುವದೇನು ಸರ್ವಪ್ರೇರಕೆ ಪ್ರೀಯಾ5
--------------
ವಿಜಯದಾಸ
ಪತಿತನ್ನ ಪಾವನ ಮಾಡುವ ರಂಗಾ | ಗತಿಯಿಲ್ಲದವರಿಗೆ ಗತಿಯೇ ನೀನೇ ಗತಿ ಪ ನಿಂದಿರಲು ನೆರಳಿಲ್ಲ ನಿಲ್ಲಲು ನೆಲೆಯಿಲ್ಲ | ತಂದಿ-ತಾಯಿಯೆಂಬೋರು ಮೊದಲೆ ಇಲ್ಲ|| ಒಂದು ಸಂಗತಿ ಇಲ್ಲ ಪಡದಾನಂದನರಿಲ್ಲ | ಬಂದು-ಬಳಗದವರು ಆರಿಲ್ಲ ಹರಿಯೇ 1 ಕುಡಿಯಲು ನೀರಿಲ್ಲ ಕಾಲಿಡಲು ಇಂಬಿಲ್ಲಾ | ಪಿಡಿವೆನೆಂದರೆ ಮೇಲೆ ಕೊಡೆಯಿಲ್ಲ || ಒಡನೆ ಬರುವರಾರಿಲ್ಲ ಸಂಗಡದಿ | ಆಡಿವೆನೆಂದರೆ ವಳ್ಳಿಗಾಯಿತೊ ಹರಿಯೆ 2 ಧೈರ್ಯ ಕೊಡುವವರು ಇಲ್ಲ ದಾತರೊಬ್ಬರಿಲ್ಲ | ಕಾರ್ಯವೆಂದರೆ ಕೇಳಿ ಅರಿವರಿಲ್ಲಾ || ವೀರ್ಯವು ಎನಗಿಲ್ಲ ವಸಿಷ್ಠನು ನಾನಲ್ಲ | ಧೈರ್ಯವು ದು:ಖವು ವೆಗ್ಗಳಿಸಿತೋ ಹರಿಯೆ 3 ತನ್ನವರು ತನಗಿಲ್ಲ ತಾಳು ಎಂಬುವರಿಲ್ಲ | ಸಣ್ಣ ಮನಸ್ಸು ಅಲ್ಲದೇ ಘನವು ಯಿಲ್ಲ || ಕರ್ಮ ಬೆನ್ನ ತೊಲಗಲಿಲ್ಲ | ಇನ್ನು ಜನ್ಮ ವ್ಯರ್ಥವಾಯಿತೊ ಹರಿಯೇ 4 ಪಾದ | ಸಾಕಾರ ಮಾಡಿಕೊಂಬುವರ ಸಂಗಡ || ಶ್ರೀಕಾಂತ ವೆಂಕಟ ವಿಜಯವಿಠ್ಠಲರೇಯ | ನೀ ಕರುಣಸಿದರೆ ಸಕಲಾರ್ಥವಹುದು 5
--------------
ವಿಜಯದಾಸ
ಪಾದದರ್ಶನವೀಯೈ ಜಾನಕೀನಾಥ ಪ ವೇದ ವೇದಾಂತಗಳ ಓದಿದವ ನಾನಲ್ಲ ವಾದ ವಾಕ್ಯಾರ್ಥಗಳ ಭೇದ ಎನಗಿಲ್ಲ ಅ.ಪ ಪಾತಕಂಗಳ ಗೈದು ಭೀತನಾಗಿಹೆನಯ್ಯ ನೀತಿನಿಯಮಗಳಿಂದ ದೂರ ನಾನು ಈತಿ ಬಾಧೆಗಳಿಂದ ನಾ ತಪಿಸುತಿಹೆನಯ್ಯ ಮಾತುಮಾತಿಗೆ ನಿನ್ನ ನಾಮ ಜಪವೀಯೆಂದು 1 ಕೆಸರೊಳಗೆ ಹಾಕುವೆಯೊ ಹೊಸ ಜನುಮವೀಯುವೆಯೊ ಬಿಸಜಾಕ್ಷ ನಿನ್ನ ಮನಬಂದಂತೆ ಮಾಡೊ ಉಸಿರಾಡುವನ್ನೆಗಂ ನಿನ್ನ ಭಜನೆಯ ಗೈಸಿ ರಸ ಕಸಗಳೊಂದೆನಿಸೊ ಮಾಂಗಿರಿಯರಂಗ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಮಾವಿನಕೆರೆ 4 ನೀನಿಲ್ಲದೆನಗಾರೋ ಮಾಂಗಿರಿಯ ರಂಗ ಪ ಮಾನಾಪಮಾನಕ್ಕೆ ಹೊಣೆಗಾರ ರಂಗಾ ಅ.ಪ ಗಿರಿಯೊಳಗೆ ವಾಸಿಸುವೆ ನರರ ಗೋಜೆನಗೇಕೆ ನರರ ನೇತ್ರಂಗಳಿಗೆ ಹರನಂತೆ ಕಾಂಬೇ ಧರೆಯೊಳಗೆ ವಾಸಿಸುವರಾರ ಹಂಗೆನಗಿಲ್ಲ ಕೊರತೆಯೇ ಎನಗಿಲ್ಲವೆಂದರಿಯಬೇಡಾ 1 ಗಿಯಾದರೇನಯ್ಯ ಸುರಲೋಕಕದು ಪೂಜ್ಯ ಹರನಾದಡೇನಯ್ಯ ಹರಗೆ ಪಿತನೀನು ನರರ ಹಂಗೇಕಿಲ್ಲ ಗಿರಿಯನೇರುವ ಭಕ್ತ [ಜ] ನರಅಂಜಿಟ್ಟಾ ಹರಕೆಗಳು ಸಾಲವೇ ರಂಗ 2 ಶಾಮಜೋಯಿಸ ನಿನ್ನ ಸೋಮಧರನೆಂಬರಿಗೆ ವಿಭೂತಿ ಅಕ್ಷತೆಯ ನೀಡುವಾ ಸೋಮಸುಂದರ ನಮ್ಮ ಮಾಂಗಿರಿಯ ರಂಗಯ್ಯ ಸ್ತೋಮ ಜನಗಳಿಗದು ತಿರುಮಣಿಯೂ ಜೀಯ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಶ್ರೀಶನು ತನ್ನಯ ದಾಸತ್ವ ಕೊಟ್ಟೆನ್ನ ಧ್ಯಾಸದಿ ಬಂದು ಸ್ಥಿರಮಾದ ಪ ಧ್ಯಾಸದೊಳಗೆ ಬಂದು ಸ್ಥಿರವಾಗಿ ನಿಂತಿನ್ನು ನಾಶನ ಜಗದಾಸೆ ಎನಗೇನೆ ಅ.ಪ ಸುಂದರಮಾದ ಸುಸಂಧಿಯೆನಗೆ ಫಲಿಸಿತು ಸುಕೃತ ಫಲದಿಂದೆ ಸುಕೃತ ಫಲದಿಂದ ಎನ್ನಗೆ ತಂದೆ ಗೋವಿಂದ ತಾನೆ ಗೋವಿಂದ 1 ಕೆಟ್ಟ ಬವಣೆಯಿಂದ ಕೆಟ್ಟು ಹೋಗುತಲಿರ್ದೆ ಸೃಷ್ಟೀಶ ದಯದಿ ನೋಡಿದ ಸೃಷ್ಟೀಶ ದಯದಿಂದ ನೋಡಿ ಮುಂದಕೆ ಕರೆದು ನೆಟ್ಟನ ಮಾರ್ಗಕೆ ಹಚ್ಚಿದ 2 ಸಾಧ್ಯವಲ್ಲಾರಿಗೀತಸಾಧ್ಯಮಾಗಿ ತಾನೆ ಸಾಧ್ಯವಿಲ್ಲದ ಸುದ್ದಿ ತಿಳಿಸಿದ ಸಾಧ್ಯವಿಲ್ಲದ ನಿಜ ಸುದ್ದಿ ತಿಳಿಸಿ ಪರಿ ಶುದ್ಧನ್ನ ಮಾಡಿ ನಿಲಿಸಿದ 3 ಮೂಲೆಗೆ ಬಿದ್ದ್ವೊಸ್ತು ಮೇಲಕ್ಕೆ ಎತ್ತಿ ತವ ಲೀಲೆ ನಾಲಗೆಮೇಲೆ ಬರೆದನೆ ಲೀಲೆ ನಾಲಗೆಮೇಲೆ ಬರೆದೆನ್ನಜ್ಞಾನ ಕಾಳೆಂಬ ಕತ್ತಲ ಕಳೆದನೆ 4 ಮಂತ್ರಮೂಲನು ಸರ್ವಾಂತರ್ಯಾಮಿಯು ಸ್ವ ತಂತ್ರ ತಾನೆಂಬ ನಿಜ ತಿಳಿಸಿದ ಸ್ವ ತಂತ್ರ ತಾನೆಂಬ ನಿಜ ತಿಳಿಸಿ ಎನಗನ್ಯ ಚಿಂತೆ ಭ್ರಾಂತಿಗಳೆಲ್ಲ ಬಿಡಿಸಿದ 5 ಮರವೆಯ ಹಾರಿಸಿ ಕರುಣಿಸಿ ಸ್ಥಿರಜ್ಞಾನ ಪರಿಭವ ದು:ಖ ಪರಿಹರಿಸಿದ ಪರಿಭವ ದು:ಖ ಪರಿಹರಿಸೆನಗೆ ಸ್ಥಿರವಾದ ಪರಲೋಕದರಿವು ನಿಲಿಸಿದ 6 ಆಶದಿ ಬಿದ್ದು ನಾ ದೇಶದೇಶವ ತಿರುಗಿ ಬೇಸತ್ತು ಬಾಯ ಬಿಡುತಿರ್ದೆ ಬೇಸತ್ತು ಬಾಯ ಬಿಡುತಿರ್ದೆ ಕಂಡೆನ್ನಯ್ಯ ಲೇಸಾದ ಪದವಿ ತೋರಿಸಿದ 7 ಜಗಸುಖಕೊಲತಿದ್ದೆ ಜಗದಾತ್ಮನು ಈಗ ಜಗದ್ಹಗರಣ ತೋರಿಸ ನಗಿಸಿದ ಹಗರಣ ತೋರಿಸಿ ನಗಿಸಿದಚಲಸೌಖ್ಯ ಬಗೆ ತೋರಿ ಜಗಸುಖ ಮರೆಸಿದ 8 ಏನೆಂದು ಪೇಳಲಿ ಸಾನಂದನುತ ಮಹ ದಾನಂದದಾಲಯ ಪೊಗಿಸಿದ ಆನಂದದಾಲಯ ಪೊಗಿಸೆನ್ನ ವದನದಿ ತಾ ನಿಂದು ನಿಖಿಲ ನುಡಿಸಿದ 9 ಭವಭಯಹರಿಸುವ ಸವಿನುಡಿಗಲಿಸಿದ ಭವರೋಗದ್ವೈದ್ಯ ಮಮಪಿತ ಭವರೋಗದ್ವೈದ್ಯ ಮಮಪಿತ ಮುಂದಿನ್ನು ಸಾವ್ಹುಟ್ಟೋಭೀತಿ ಎನಗಿಲ್ಲ 10 ಕರ್ತು ಸರ್ವೋತ್ತಮ ನಿತ್ಯನಿರ್ಮಲ ಎನ್ನ ಮತ್ರ್ಯದ ಗುಣವ ತೊಡೆದೆನ ಮತ್ರ್ಯದ ಗುಣ ತೊಡೆದು ಸತ್ಯ ಶ್ರೀರಾಮ ಎನ್ನ ಮುಕ್ತಿ ಸಾಮ್ರಾಜ್ಯ ತಖ್ತೆ ಏರಿಸಿದ 11
--------------
ರಾಮದಾಸರು
ಸತಿಯಿಲ್ಲಸುತರಿಲ್ಲ ಬಂದು ಬಾಂಧವರಿಲ್ಲ ನುತ ಕೇಶವನಲ್ಲದೆ ಸದ್ಗತಿ ಎನಗಿಲ್ಲ ಪ ಹೆರರನಾಶ್ರಯಿಸಿ ಬದುಕಬೇಕಲ್ಲ ನರರನನುಸರಿಸಿ ಬಡವಾದೆನಲ್ಲ ಇರುವ ನಾಲ್ಕು ದಿನದ ಬರಿದೆ ಸುಖಕ್ಕಾಗಿ ನರನಿಗೆ ನೀಚನಿಗೆ ಈ ಸ್ಥಿತಿ ಒದಗಿತಲ್ಲ 1 ಹರಿನಿನ್ನ ಭಜಿಸದೆ ಬಲು ಬಾಧೆಯಾಗಿದೆ ಪರಿಪರಿಯ ನೋವನ್ನು ನೀಗುವವರಾರಿಲ್ಲ ಸಿರಿಸಂಪತ್ತಿರುವರೆಗೆ ಸತಿಸುತರೆಲ್ಲ ಕರೆದರೂ ಬರರಲ್ಲ ಬಾಂಧವರು ಸ್ನೇಹಿತರು 2 ಸುಖದಲಿರುವಾಗ ಮನ್ನಿಪರೋ ಎಲ್ಲ ಅಖಿಲಗೋತ್ರಜರು ನೆರೆಹೊರೆಯವರು ಸಖರು ಯಾರಿಲ್ಲ ಸಾವು ಬಂದೆಳೆವಾಗ ಅಖಂಡ ಒಡೆಯ ಜಾಜಿಪುರೀಶ ಕಾಯಬೇಕಯ್ಯ 3
--------------
ನಾರಾಯಣಶರ್ಮರು
ಸಿರಿನರಸಿಂಹನೆ ಕರಿಗಿರಿ ನಿಲಯನೆ ಶಿರಬಾಗಿ ನಮಿಸುವೆ ಭಕ್ತಿಯಲಿ ಪ ಕರುಣಾಸಾಗರ ನಿನ್ನ ಚರಣ ಕಮಲದಲಿ ಸ್ಥಿರ ಸ್ಮರಣೆಯ ಕೊಟ್ಟು ಸಲಹೆನ್ನನು ಅ.ಪ. ನೆಲೆಗೆ ನಿಲ್ಲದು ಮನ ಹಲವಕ್ಕೆ ಹರಿವುದು ಸುಲಲಿತವಲ್ಲವು ಸಾಧನವು ನಳಿನನಾಭನೆ ಎನ್ನ ಕುಲದೈವ ನಾರಸಿಂಹ ಒಲಿದು ನೀನಾಗಿಯೆ ಸಲಹುವುದು 1 ಅತ್ತಿತ್ತ ಓಡುವ ಚಿತ್ತವ ನಿಲಿಸುವ ಶಕ್ತಿಯು ಎನಗಿಲ್ಲ ಲವಲೇಶವು | ಚಿತ್ತಜಪಿತ ಎನ್ನ ಚಿತ್ತದೊಳಗೆ ನಿಂತು ಭಕ್ತಿಯ ಕರುಣಿಸೋ ತವ ಪಾದದಿ 2 ನೆಲದ ಮೇಲಲೆವಾಗಯಲರುಣಿ ಗಮನವು ಹಲವು ರೀತಿಯಲಿ ವಕ್ರವಲೆ ಘಳಿಲನೆ ತನ್ನಯ ಬಿಲದೊಳು ಪೋಪಾಗ ಸಲೆ ನೇರವಲ್ಲವೆ ಸಿರಿವರನೇ 3 ವನ ವಿಷಯಗಳಲದಲಿ ಬರಲಾರವು ಘನಭಕ್ತಿರಸದಿಂದ ತೊಳೆದು ನಿರ್ಮಲಗೈದು ಮನವ ನೀ ಮಡಿ ಮಾಡು ಘನಮಹಿಮ 4 ಕಳೆಗಳೆ ಬೆಳೆದಿವೆ ಮನಕ್ಷೇತ್ರದೊಳಗೆಲ್ಲಾ ಫಲ ಸಸ್ಯಗಳಲ್ಲಿ ಸ್ಥಳವಿಲ್ಲವು | ಕಳೆಗಳ ಕಳೆದು ಉತ್ತಮ ಫಲ ಕೊಡುವಂಥ ಬೆಳೆಯ ನೀನು ಬೆಳಸಯ್ಯಾ ಕರಿಗಿರೀಶ 5
--------------
ವರಾವಾಣಿರಾಮರಾಯದಾಸರು
ಹನುಮ-ಭೀಮ-ಮಧ್ವ ಸ್ತೋತ್ರ ಅಪಮೃತ್ಯು ಪರಿಹರಿಸೊ ಅನಿಲದೇವಾ ಕೃಪಣ ವತ್ಸಲನೆ ಕಾಯ್ವರ ಕಾಣೆ ನಿನ್ನುಳಿದು ಪ ನಿನಗಿನ್ನು ಸಮರಾದ ಅನಿಮಿತ್ತ ಬಂಧುಗಳು ಎನಗಿಲ್ಲವಾವಾವ ಜನ್ಮದಲ್ಲಿ ಅನುದಿನ ನೀನೆಮ್ಮನುದಾಸೀನ ಮಾಡುವುದು ಅನುಚಿತವು ಜಗಕೆ ಸಜ್ಜನ ಶಿಖಾಮಣಿಯೆ 1 ಕರಣಮಾನಿಗಳು ನಿನ್ನ ಕಿಂಕರರು ಮೂಲೋಕ ದೊರೆಯು ನಿನ್ನೊಳಗಿಪ್ಪ ಸರ್ವಕಾಲ ಪರಿಸರನೆ ಈ ಭಾಗ್ಯ ದೊರೆತನಕೆ ಸರಿಯುಂಟೆ ಗುರುವರಿಯ ನೀ ದಯಾಕರನೆಂದು ಮೊರೆ ಹೊಕ್ಕೆ 2 ಭವರೋಗ ಮೋಚಕನೆ ಪವಮಾನರಾಯಾ ನಿ ನ್ನವರನು ನಾನು ಮಾಧವಪ್ರಿಯನೇ ಜವನ ಬಾಧೆಯ ಬಿಡಿಸು ಅವನಿಯೊಳು ಸುಜನರಿಗೆ ದಿವಿಜಗಣ ಮಧ್ಯದಲಿ ಪ್ರವರ ನೀನಹುದಯ್ಯ 3 ಜ್ಞಾನಾಯು ರೂಪಕನು ನೀನಹುದೋ ವಾಣಿ ಪಂ ಚಾನನಾದ್ಯಮರರಿಗೆ ಪ್ರಾಣದೇವಾ ದೀನವತ್ಸಲನೆಂದು ನಿನ್ನ ಮೊರೆ ಹೊಕ್ಕೆ ದಾನವಾರಣ್ಯ ಕೃಶಾನು ಸರ್ವದ ಎಮ್ಮ 4 ಸಾಧನ ಶರೀರವಿದು ನೀ ದಯದಿ ಕೊಟ್ಟದ್ದು ಸಾಧಾರಣವು ಅಲ್ಲ ಸಾಧುಪ್ರಿಯಾ ವೇದವದೋದಿತ ಜಗನ್ನಾಥ ವಿಠಲನ ಮೋದ ಕೊಡು ಸತತ5
--------------
ಜಗನ್ನಾಥದಾಸರು
ಕಂಡು ಕಂಡು ನೀ ಎನ್ನ ಕೈ ಬಿಡುವರೆ ಕೃಷ್ಣಪುಂಡರೀಕಾಕ್ಷಪುರುಷೋತ್ತಮ ಹರೇಪಬಂಧುಗಳು ಎನಗಿಲ್ಲ ಬದುಕಿನಲಿ ಸುಖವಿಲ್ಲನಿಂದೆಯಲಿ ನೊಂದೆನಯ್ಯನೀರಜಾಕ್ಷ||ತಂದೆ ತಾಯಿಯು ನೀನೇ ಬಂಧು ಬಳಗವು ನೀನೇಎಂದೆಂದಿಗೂ ನಿನ್ನ ನಂಬಿದೆನೊ ಕೃಷ್ಣಾ 1ಕ್ಷಣವೊಂದು ಯುಗವಾಗಿ ತೃಣವು ಪರ್ವತವಾಗಿಎಣಿಸಲಳವಲ್ಲ ಈ ಭವದ ವ್ಯಥೆಯ ||ಸನಕಾದಿ ಮುನಿವಂದ್ಯ ವನಜಸಂಭವನಯ್ಯಫಣಿಶಾಯಿ ಪ್ರಹ್ಲಾದಗೊಲಿದ ನರಹರಿಯೆ 2ಭಕ್ತ ವತ್ಸಲನೆಂಬ ಬಿರುದು ಬೇಕಾದರೆಭಕ್ತರ ಅಧೀನನಾಗಿ ಇರಬೇಡವೆ ||ಮುಕ್ತಿದಾಯಕ ದೇವ ಹೊನ್ನೂರ ಪುರವಾಸಶಕ್ತಪುರಂದರವಿಠಲ ಶ್ರೀ ಕೃಷ್ಣಾ3
--------------
ಪುರಂದರದಾಸರು
ಕೊಡು ಕಂಡೆಯಾ ಹರಿಯೆ-ನಿನ್ನ ನಾಮ-|ಕೊಡು ಕಂಡೆಯಾ ಹರಿಯೆ ಪಬಡವ ನಾನೆಂದು ಕಾಡಲಿಲ್ಲ ಹರಿಯೆ ಅ.ಪಒಡಲುತುಂಬದು ಎಂದು ಬಳಲಿಸೆ ಬರಲಿಲ್ಲ |ಸಡಗರದಿಂ ಭಾಗ್ಯ ಬೇಡಲಿಲ್ಲ ||ಮಡದಿ-ಮಕ್ಕಳಿಗಾಗಿ ಕಡು ಮೋಹವೆನಗಿಲ್ಲ |ಬಿಡದೆ ನಾಮಸ್ಮರಣೆ ಕೊಡು ಒಂದೇ ಸಾಕೊ 1ಸ್ನಾನ-ಮೌನ ಜಪ-ತಪಗಳು ಎನಗಿಲ್ಲ |ನಾನಾಯೋನಿಗಳಲ್ಲಿ ಬಳಲಿ ಬಂದೆ ||ದೀನರಕ್ಷಕ ನೀನೆ ದಯದಿಂದಲೆನಗಿನ್ನು |ಧ್ಯಾನಸುಧೆಯನಿತ್ತು ಸಲಹಯ್ಯ ಹರಿಯೆ 2ಬಲೆಗೆ ಸಿಲುಕಿದ ಮೃಗದಂತೆ ಬಾಯ್ಬಿಡುತಲಿ |ಅಲಸಿ ಕೋಟಲೆಯ ಸಂಸಾರದಿಂದ |ತಲೆಹುಳಿತ ನಾಯಂತೆ ಬಯಲಾಸೆಗೆ ಸಿಲುಕಿದೆ |ಸಲಹೊ ದೇವರ ದೇವಪುರಂದರವಿಠಲ3
--------------
ಪುರಂದರದಾಸರು
ತಪ್ಪುಗಳನೆಲ್ಲ ನೀನೊಪ್ಪಿಕೊಳ್ಳೊ - ನ-|ಮ್ಮಪ್ಪ ಕಾಯಬೇಕುತಿಮ್ಮಪ್ಪನೀನೆಪಸತಿ-ಸುತ ಸಂಸಾರಗಳಿಗೆ |ಮತಿ ಹೀನನಾದೆನು ವ್ಯರ್ಥ ||ಮಿತಿಗಾಣೆನಯ್ಯ ಎನ್ನ ಪಾಪಗಳಿಗೆ |ಗತಿಯದಾವುದು ಪೇಳೊ ಮುಂದೆನಗೆ 1ಬಿಸಿಲು ಬಿರುಮಳೆ ಗಾಳಿಯೊಳಗೆ-ಬಲು-|ದೆಸೆಗೆಟ್ಟು ದೇವ ತಿರುಗಿದೆ ||ಹಸಿವು-ತೃಷೆಗಳು ಬಹು ಬಾಧಿಸಲು |ಹುಸಿಯಾಡಿದೆನಯ್ಯ ಹುಟ್ಟು ಮೊದಲು 2ಸ್ನಾನ-ಸಂಧ್ಯಾವಂದನವರಿಯೆ-ನಾನಾ-|ದಾನ-ಧರ್ಮದ ಗುರುತುಗಳಿಯೆ ||ಹೀನಜನರ ಸಂಗವ ಮರೆಯೆ-ಸು-|ಙ್ಞÕನಿಗಳನು ಬಾಯೆಂದು ಕರೆಯೆ 3ಗಂಗೆ ಅಗ್ರೋದಕಗಳ ತಂದು - ನಾ-|ಮಂಗಳಮಜ್ಜನಮಾಡಲಿಲ್ಲವೆಂದೂ ||ಹೊಂಗೇದಗೆ ಪುಷ್ಪವನೊಂದು ಶ್ರೀ-|ರಂಗಗರ್ಪಿಸಲಿಲ್ಲ ಕಾಯೊ ಬಂದು 4ಪೀತಾಂಬರದಿ ವಸ್ತ್ರಗಳಿಂದ -ದಿವ್ಯ-|ನೂತನವಾದ ಆಭರಣದಿಂದ ||ಪ್ರೀತಿಪಡಿಸಲಿಲ್ಲಾದರದಿಂದ-ಹೇ-|ಸೀತಾಪತೆ ಕೃಷ್ಣ ಹರಿಮುಕುಂದ 5ಗಂಧಾಕ್ಷತೆ ಪುಷ್ಪಗಳಿಂದ -ಬರಿ-|ಒಂದುದಳಶ್ರೀ ತುಳಸಿಯಿಂದ ||ಇಂದಿರೇಶನ ಅರ್ಚಿಸದರಿಂದ -ಬಹು-|ನೊಂದು ದೂರಾದೆ ಸದ್ಗತಿಯಿಂದ 6ಏಕಾರತಿ ದೂಪಾರತಿಯ -ಎಂದು-|ಶ್ರೀಕಾಂತ ನಿನಗೆ ನಾ ಮಾಡಲಿಲ್ಲ ||ವ್ಯಾಕುಲದಲಿ ಹೋಯಿತು ಹೊತ್ತು -ಬಂದು-|ನೀ ಕರುಣಿಸು ಲಕ್ಷ್ಮೀರಮಣ 7ಪಾಯಸ ಪಂಚಭಕ್ಷ್ಯಗಳಿಂದ -ಬಲು-|ಆಯತವಾದ ಶಾಕಗಳಿಂದ ||ತೋಯೆ ಶಾಲ್ಯನ್ನ ಸದ್ಘøತದಿಂದ -ಶ್ರೀ-|ಮಾಯಾಪತಿಗೆ ಅರ್ಪಿಸಲಿಲ್ಲ 8ಮಂಗಳಾರತಿಯ ನಾ ಮಾಡಲಿಲ್ಲ-ಜಯ-|ಮಂಗಳವೆನ್ನುತ ಪಾಡಲಿಲ್ಲ ||ಕಂಗಳ ನೋಟದಿ ನೋಡಲಿಲ್ಲ -ನರ-|ಸಿಂಗನೀ ಬಾಯೆಂದು ಕರೆಯಲಿಲ್ಲ9ಹರಿಯ ಪಾದಕೆ ಬಿದ್ದವನಲ್ಲ -ನರ-|ಹರಿಗೆ ಪ್ರದಕ್ಷಿಣೆ ಮಾಡಲಿಲ್ಲ ||ಹರಿದಿನದುಪವಾಸ ವ್ರತವು ಇಲ್ಲ -ಬಲು-|ಹರಿಯ ದಾಸರ ಸಂಗ ಎನಗಿಲ್ಲ 10ಹೋಮಾರ್ಚನೆ ಔಪಾಸನವೆಲ್ಲ |ನೇಮದಿಂದಲಿ ನಾ ಮಾಡಲಿಲ್ಲ ||ಕಾಮಾತುರನಾಗಿ ಕಂಡಕಂಡ ಕಡೆ |ಸ್ವಾಮಿಯ ಕಾಣದೆ ತಿರುಗಿದೆನೊ 11ಅತಿಥಿಗಳ್ ಬಂದರೆ ಮನೆಗೆ -ಅಂದೆ-|ಗತಿಯಿಲ್ಲವಯ್ಯ ಕೊಡುವುದಕೆ ||ಯತಿಯ ಕಂಡರೆ ನಿಂದಿಸಿದೆ-ಶ್ರೀ-|ರತಿಪತಿ ಪಿತ ನೀ ದಯ ಮಾಡೊ 12ಎಷ್ಟು ಹೇಳಲಿ ಎನ್ನವಗುಣವ -ಅವು-|ಅಷ್ಟು ಇಷ್ಟೆಂದು ಎಣಿಕೆಯಿಲ್ಲ ||ದೃಷ್ಟಿಯಿಂದ ನೋಡಿ ದಯ ಮಾಡೊ -ಶ್ರೀ-|ಬೆಟ್ಟದ ವೆಂಕಟ ಪುರಂದರವಿಠಲ 13
--------------
ಪುರಂದರದಾಸರು
ಯಾಕೆ ನಿನ್ನ ಮನಕೆ ಬಾರೆನೋ ಹೇ ವೇಂಕಟೇಶ ಪಕಾಕುಬುದ್ಧಿ ಎನಗಿಲ್ಲೋ ಹೇ ವೆಂಕಟೇಶಾಅ.ಪಬೆದರಿ ನಿನ್ನ ನೊದೆಯಲಿಲ್ಲೊ ಹೇ ವೆಂಕಟೇಶಾ 1ತಿನಿಸಿದ ತರ ನಾ ತಿನಿಸಲಿಲ್ಲವೋ ಹೇ ವೆಂಕಟೇಶಾ 2ಭಂಡಿ ಹೊಡಿ ಎಂದು ನಡೆಸಲಿಲ್ಲವೋ ಹೇ ವೆಂಕಟೇಶಾ 3ಕಟ್ಟಿಗೆಯ ಹೊರಿಸಲಿಲ್ಲವೋ ಹೇ ವೆಂಕಟೇಶಾ 4ಕೆಟ್ಟ ಕಾರ್ಯ ಮಾಡಿಲಿಲ್ಲವೊ ಹೇ ವೆಂಕಟೇಶಾ 5ಮುಟ್ಟಿ ನಿನ್ನ ಭಜಿಸಿದ ಫಲವೇನೋ ಹೇ ವೆಂಕಟೇಶಾ 6ದಾತಶ್ರೀ ಗುರುಜಗನ್ನಾಥ ವಿಠಲನೆಂದು ನಾಪ್ರೀತಮನದಿ ಬಂದೆನೋ ವೆಂಕಟೇಶಾ 7
--------------
ಗುರುಜಗನ್ನಾಥದಾಸರು