ಒಟ್ಟು 54 ಕಡೆಗಳಲ್ಲಿ , 22 ದಾಸರು , 51 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೂಗಿತು ತಾಮ್ರದ ಚೂಡ ಪರ ಇಲ್ಲ್ಲೆಂದು ಪ ಪಕ್ಕಗಳೆರಡು ಚಪ್ಪರಿಸಿ ಡಂಗುರುವ ಹೊಯ್ಯೆ ಸೂಕ್ಕಿದವರ ಎದೆ ಜರ್ಝರಿಸೆ ರೆಕ್ಕಿಯ ಮುಖವೆತ್ತಿ ಹರಿಸರ್ವೋತ್ತಮನೆಂದು ಕೊಕ್ಕಟೆ ಕೊಕ್ಕಟೆ ಕೊಕ್ಕಟ್ಟೆ ಕೋ ಎಂದು1 ಒಂದು ಝಾವದಿ ಓಂಕಾರನೆಂದು ಕೂಗೆ ಇಂದಿರಾಪತಿ ವಿಧಿಜನಕನೆಂದೂ ಸಂದೇಹಪಡಬೇಡಿ ಸಕಲಾಂತರ್ಯಾಮಿ ಶ್ರೀ ಬಿಂದುಮಾಧವನಲ್ಲದಿಹಪರವಿಲ್ಲವೆಂದು 2 ಎರಡು ಝಾವದಿ ಪುರುಷೋತ್ತಮನೆಂದು ಗರುಡಾಚಲ ನರಸಿಂಹನೆಂದು ಮೂರನೆ ಝಾವಕ್ಕೆ ವೀರನಾರಾಯಣ ಹÀರಿಗಯಾಗದಾಧರನಲ್ಲದಿಲ್ಲವೆಂದು3 ಏಕೋ ನಾರಾಯಣ ದೇವನೆಂದು ಗೋಕುಲಪತಿಯಲ್ಲದಿಹಪರ ಇಲ್ಲವೆಂದು 4 ಯಾಮ ಆರರೊಳು ವ್ಯಾಸಮೂರ್ತಿ ಎಂದು ರೋಮಕೋಟಿ ಬ್ರಹ್ಮರುದ್ರರೆಂದು ಸಾಮಗಾಯನ ಕಾವೇರಿ ರಂಗೇಶ ಸ್ವಾಮಿ ಅಳಗಿರಿ ತಿಮ್ಮನಲ್ಲದಿಲ್ಲವೆಂದು 5 ಏಳು ಝಾವದಿ ವೇಣಿಮಾಧವನೆಂದು ಮೇಲಗೋಟೆ ಚಳ್ಳಾಬಳ್ಳನೆಂದು ಶ್ರೀಲೋಲ (ಆಯೋಧ್ಯಾ) ರಘುರಾಮ ಗಂಡಕಿ ಪರ ಇಲ್ಲೆಂದು6 ಶ್ವೇತ ವರಾಹನೆಂದು ಮಾವ ಮರ್ದನ ಜನಾದರ್Àನನೆಂದು ಶ್ರೀ ಉಡುಪಿಯ ಕೃಷ್ಣ ವಿಜಯವಿಠ್ಠಲ ತಿಮ್ಮ ದೇವನಲ್ಲದೆ ಬೇರೆ ಇಹಪರ ಇಲ್ಲವೆಂದು 7
--------------
ವಿಜಯದಾಸ
ಕೃಷ್ಣಾ ನೀ ಬೇಗನೆ ಬಾರೊಮುಖವನೆ ತೋರೋ ಪ ಕಾಶೀ ಪೀತಾಂಬರ ಕೈಯಲಿ ಕೊಳಲುಪೂಸೀದ ಶ್ರೀಗಂಧ ಮೈಯೊಳಗಮ್ಮ 1 ಉಡಿಯಲ್ಲಿ ಉಡಿಗೆಜ್ಜೆ ಬೆರಳಲಿ ಉಂಗುರಕೊರಳಲಿ ಹಾಕಿದ ಹುಲಿಯುಗುರಮ್ಮ2 ತಾಯಿಗೆ ಬಾಯಲ್ಲಿ ಜಗವನ್ನೆ ತೋರಿದಜಗದೋದ್ಧಾರಕ ನಮ್ಮ ಉಡುಪಿಯ ಶ್ರೀಕೃಷ್ಣ3
--------------
ವ್ಯಾಸರಾಯರು
ಕೊಳಲೂದೋ ರಂಗಯ್ಯ ರಂಗ ನೀ ಕೊಳಲೂದೋ ಕೃಷ್ಣಯ್ಯ ಪ ಕೊಳಲೂದೋ ಗೋವಳರೊಡಗೂಡಿ ಚೆಲುವ ಶ್ರೀ ವೇಣುಗೋಪಾಲ ಕೃಷ್ಣ ನೀ 1 ಕಡಲೊಳಗಿದ್ದು ಬಂದ್ಹಡಗದಿಂದಲಿ ಕಡಗೋಲ ಪಿಡಿದ ಉಡುಪಿಯ ಕೃಷ್ಣ ನೀ 2 ಎಂಟು ಮಂದ್ಯತಿವರ್ಯರು ನಿನ್ನ ಸೇವೆಗೆ ಬಂಟರಾಗಿಹರ್ವೈಕುಂಠಪತಿ ಕೃಷ್ಣ ನೀ 3 ನಿಜಭಕ್ತರು ಕೈಬೀಸಿ ಕರೆಯಲು ರಜತಪೀಠದ ಪುರವಾಸ ಕೃಷ್ಣ ನೀ 4 ಸತ್ಯವಾದ ಜ್ಞಾನ ಪೂರ್ಣಾನಂದ- ತೀರ್ಥರ ಕರವಶವಾದ ಕೃಷ್ಣ ನೀ 5 ಅಂದಿಗೆ ಕಿರುಗೆಜ್ಜೆ ಘಲ್ಲು ಘಲ್ಲೆನುತ ಕಾ- ಳಿಂಗನ್ನ್ಹೆಡೆಯಲಿ ಕುಣಿದಾಡೊ ಕೃಷ್ಣ ನೀ 6 ದಾಸರ ಮನದಭಿಲಾಷೆ ಪೊರೈಸಿ ಭೀ- ಮೇಶಕೃಷ್ಣನೆ ದಯ ಮಾಡೊ ರಂಗ ನೀ 7
--------------
ಹರಪನಹಳ್ಳಿಭೀಮವ್ವ
ಕ್ಷೇತ್ರ ದರ್ಶನ ಉಡುಪಿಯ ಯಾತ್ರೆಯ ಮಾಡಿ - ಉಡುಪಿಯಾ ಪ ಉಡುಪಿಯ ಯಾತ್ರೆಯನ್ನೆ ಮಾಡಿ | ಭಕ್ತಿಮುಡುಪಿತ್ತು ಪ್ರಮೋದ ಬೇಡಿ | ಆಹನಡುದೇಹ ದೋಳೀಹ | ನಡುನಾಡಿ ಕಮಲದಿಒಡೆಯ ಶ್ರೀ ಕೃಷ್ಣನ್ನ | ಧೃಡ ಭಕ್ತಿಯಿಂ ಭಜಿಸಿ ಅ.ಪ. ಆನಂದ ತೀರಥ ಸರಸಿ | ಯೊಳುಮೀನನಾಗಿ ಬಹು ಈಸಿ | ಹರಿಧ್ಯಾನದಿ ಸ್ನಾನ ಪೊರೈಸಿ | ಮತ್ತೆಮೌನವೆಂಬಾಸನ ಹಾಸಿ | ಆಹಮೂಧ್ರ್ನಿ ಲಲಾಟದೋಳ್ | ಗೋಣು ಮಧ್ಯೋದರಸ್ಥಾನಾದಿಯಲಿ ಹರಿ | ಧ್ಯಾನ ನಾಮವ ಹಚ್ಚಿ 1 ಮಧ್ವ ಕಿಂಕರನೆಂಬೊ ದೊಂದು | ಹರಿವಿದ್ವೇಷಿಗಳ ಬಡಿವೊದೆಂದು | ಮತ್ತೆಸದ್ವೈಷ್ಣವರ ಸೇರ್ವೋದೊಂದು | ಇನ್ನುಬುದ್ಧಿಪೂರ್ವಕ ಹರಿ ಪರನೆಂದು | ಆಹಶ್ರದ್ಧಾಳು ವೆಂದೆನಿಪ | ಮುದ್ದು ಮುದ್ರೆಗಳೈದುತಿದ್ದಿ ವಿಸ್ತರಿಸೂತ | ಕೃದ್ದೋಲ್ಕಾದಿಯನೆನೆ 2 ಸಂಧ್ಯಾ ಮೂಡಿಹುದು ನೀ ನೋಡು | ಕಾಲಮುದ್ಹಿಂದಾಗದಲೆ ನೀ ಮಾಡು | ಯಾವದೊಂದು ಮಂತ್ರಾರ್ಥವ ನೋಡು | ಇನ್ನುಸಂಧ್ಯಾ ನಾಮಕನ ಕೊಂಡಾಡು | ಆಹಛಂದದಿ ನಿನ ಜ್ಞಾನ | ಮುಂದು ಮುಕ್ಕಿಲು ಒಪ್ಪಮಂದೇಹ ದೈತ್ಯರ | ಮಂದಿಯ ಕೊಲ್ಲುತ 3 ಕಂಟಕ ಕಳೆದು ಶರೀರ | ಮಧ್ಯಮಂಟಪ ಚಿಂತಿಸೊ ಧೀರ | ಅದಕೆಎಂಟರ್ಧ ಮತ್ತೊಂದು ದ್ವಾರ | ಕಾಯ್ವಭಂಟ ಮಾರುತನ ವ್ಯಾಪಾರ | ಆಹಎಂಟ್‍ಟಾರು ನಾಲ್ಕು ಸ್ತಂಭ ಮಧ್ಯದಿ ಲಕ್ಷ್ಮಿಮಂಟಪ ಚಿಂತಿಸಿ ಒಂಟಿಯಾಗೊ ಮನದಿ 4 ಕೆಳ ಮುಖಾಬ್ಜವನೇ ನೀ ನೋಡೀ | ಮಂತ್ರಮೂಲದಿಂದ ಮೇಲು ಮಾಡಿ | ಅಲ್ಲಿಇಳೆಯಾಣ್ಮನನ ಚಿಂತೆ ಮಾಡಿ | ಸರ್ವಅಲಂಕಾರ ದಿಂದೊಡಗೂಡೀ | ಆಹನೆಲೆಸೀಹ ಕೃಷ್ಣನ್ನ | ಒಲಿಸೆ ಭಕ್ತಿಯಿಂದಸ್ಥಳ ತನ್ನ ಅರಮನೆ | ಯೊಳು ಕೊಟ್ಟು ಸಲಹುವ 5 ನಿತ್ಯ ಸ್ತವನ | ಆಹಇಂಬಿಟ್ಟು ಸ್ತೋತ್ರದಿ | ಉಂಬುಡುವೋ ಸರ್ವಬಿಂಬನೋಳರ್ಪಿಸಿ | ಸಂಭ್ರಮದಲ್ಲಿರು 6 ಮಧ್ವ ಸರೋವರ ಸ್ನಾನ | ಭಕ್ತಿಶುದ್ಧದಿ ಶ್ರೀಕೃಷ್ಣಧ್ಯಾನ | ಮಾಡೆಹೃದ್ಯನು ಹೃದ್ಯದಿಷ್ಠಾನ | ದಲ್ಲಿಸಿದ್ಧಿಸೂವನು ಗುಣ ಪೂರ್ಣ | ಆಹಮುದ್ದು ಕೃಷ್ಣನು ಗುರು | ಗೋವಿಂದ ವಿಠಲನುಶ್ರದ್ಧೆ ಸತ್ವಕ್ಕೊಲಿವ | ಸಿದ್ಧ ಕನಕನ ನೋಡಿ 7 ತೀರ್ಥ ಕ್ಷೇತ್ರ ಮಾಲಾ 1952 ರಲ್ಲಿ ಇಡೀ ಭರತ ವರ್ಷದಲ್ಲಿ ಪ್ರದಕ್ಷಿಣಾಕಾರವಾಗಿ ಹೊರಟು ಆಸೇತು ಹಿಮಾಚಲ ಪರ್ಯಂತವಿರುವ ಅನಂತ ತೀರ್ಥ ಕ್ಷೇತ್ರಗಳಲ್ಲಿ ಈ ಅಲ್ಪಾಧಿಷ್ಠಾನದ ಯೋಗ್ಯತಾಪ್ರಕಾರ ಬಿಂಬನು ಮಾಡಿ ಮಾಡಿಸಿದ ಯಾತ್ರಾ ಪ್ರಕರಣವೂ, ಮತ್ತೆ, 1954 ರಲ್ಲಿ ಉಡುಪಿ ಇತ್ಯಾದಿ ಪಶ್ಚಿಮ ಕ್ಷೇತಗಳ ಮತ್ತು 1957 ರಲ್ಲಿ ಮಲಖೇಡದಲ್ಲಿ ಬೃಹತೀ ಸಹಸ್ರವಾದಾಗ ಆಕಡೆ ಹೋದಾಗ ನೋಡಿದ ಅನೇಕ ಕ್ಷೇತ್ರಗಳ ಮತ್ತು 1961 ರಲ್ಲಿ ಸ್ವಾದಿ, ದ್ವಾರಕ, ಪುಷ್ಕರ, ಬದರಿ (ದ್ವಿತೀಯಾವರ್ತಿ) ಹೋಗಿ ಬಂದಾಗ ನೋಡಿದ ಯಾತ್ರಾ ಪ್ರಕರಣಗಳ ಜ್ಞಾಪಕಾರ್ಥವಾಗಿ ಈ ತೀರ್ಥಕ್ಷೇತ್ರಮಾಲಾ ಅಸ್ಮದ್ಗುರ್ವಂತರ್ಗತ ಬಿಂಬ ಮೂರುತಿ ಪ್ರೇರಿಸಿದಂತೆ ಬರೆಯಲ್ಪಡುತ್ತೆ :-
--------------
ಗುರುಗೋವಿಂದವಿಠಲರು
ಗೋಪಿ ಎನ್ನ ಕೊಲ್ಲಬೇಕೆಂಬ ಬಗೆಯ ಪ ಹರವಿಯ ಹಾಲು ಕುಡಿಯಲು ಎನ್ನ ಹೊಟ್ಟೆಕೆರೆಯೇನೆ ಹೇಳಮ್ಮಯ್ಯಕರೆದು ಅಣ್ಣನ ಕೇಳಮ್ಮ ಉಂಟಾದರೆಒರಳಿಗೆ ಕಟ್ಟಮ್ಮಯ್ಯ 1 ಮೀಸಲು ಬೆಣ್ಣೆಯನು ಮೆಲುವುದು ಎನಗೆದೋಷವಲ್ಲವೇನಮ್ಮಯ್ಯಆಸೆ ಮಾಡಿದರೆ ದೇವರು ಕಣ್ಣಮೋಸದಿ ಕುಕ್ಕೋನಮ್ಮಯ್ಯ 2 ಅಟ್ಟವನ್ನೇರಿ ಹಿಡಿವುದು ಅದು ಎನಗೆಕಷ್ಟವಲ್ಲವೆ ಹೇಳಮ್ಮಯ್ಯ ನೀಕೊಟ್ಟ ಹಾಲು ಕುಡಿಯಲಾರದೆ ನಾನುಬಟ್ಟಲೊಳಗಿಟ್ಟು ಪೋದೆನೆ 3 ಪುಂಡುತನವ ಮಾಡಲು ನಾನು ದೊಡ್ಡಗಂಡಸೇನೆ ಪೇಳಮ್ಮಯ್ಯ ಎನ್ನಕಂಡವರು ದೂರುತಾರೆ ಗೋಪಮ್ಮ ನಾ ನಿನ್ನಕಂದನಲ್ಲವೇನೆ ಅಮ್ಮಯ್ಯ 4 ಉಂಗುರದ ಕರದಿಂದ ಗೋಪಮ್ಮ ತನ್ನಶೃಂಗಾರದ ಮಗನೆತ್ತಿರಂಗವಿಠಲನ ಪಾಡಿ ಉಡುಪಿಯ ಉ-ತ್ತುಂಗ ಕೃಷ್ಣನ ತೂಗಿದಳು 5
--------------
ಶ್ರೀಪಾದರಾಜರು
ಜÉೂೀಜೋ ಜೋಜೋ ಜೋ ಮುಖ್ಯಪ್ರಾಣ ಜÉೂೀಜೋ [ಮಲೆವರ] ಗಂಟಲಗಾಣ ಪ. ಜÉೂೀಜೋ ರಾಕ್ಷಸಶಿಕ್ಷ ಕಲ್ಯಾಣ ಜÉೂೀಜೋ ಸಕಲವಿದ್ಯಾ ಪ್ರವೀಣ ಅ.ಪ. ಆ ಜಗದಲಿ ನೀ ಬಾಲಬ್ರಹ್ಮಚಾರಿ ಸೋಜಿಗದಲಿ ಕಪಿ ರಾಜ್ಯವನಾಳಿ ತೇಜಮುತ್ತಿನ ಕವಚಕುಂಡಲಧಾರಿ ಪೂಜಿಪರ ಪಾಲಿಪೆ ಸುಜನರುಪಕಾರಿ 1 ಭೂಮಿ ಭಾರವನಿಳಿಸಿದ ಭೀಮ ಕಾಮಿ ಕೀಚಕನ ಕುಟ್ಟಿ ರಣಧಾಮ ಭಾಮಿನಿ ದ್ರೌಪದಿ ಕಷ್ಟ ನಿರ್ಧೂಮ ಕಾಮಿತಾರ್ಥವನೀವÀ ಕಲ್ಪತರು ಭೀಮ 2 ಸೌಂದರ್ಯರೂಪದ ಶ್ರೀಮದಾನಂದ ತಂದೆ ಹಯವದನನ ಮೋಹದ ಕಂದ ಬಂದು ಉಡುಪಿಯಲಿ ನೆಲೆಯಾಗಿ ನಿಂದ ವಂದಿಸುವೆ ನಿದ್ರ್ರೆಗೈ ಹರಿಧ್ಯಾನದಿಂದ 3
--------------
ವಾದಿರಾಜ
ಜೋ ಜೋ ಜೋ ಜೋ ಗೋಪಿಯ ಕಂದಾಜೋ ಜೋ ಜೋ ಜೋ ಸಚ್ಚಿದಾನಂದಾಜೋ ಜೋ ಜೋ ಜೋ ಮಲಗೋ ಮುಕುಂದಾಜೋ ಜೋ ಇಂದಿರಾರಮಣ ಗೋ'ಂದಾ ಜೋ ಜೋ ಪಅಣುರೇಣು ತೃಣಕಾಷ್ಠ ಪರಿಪೂರ್ಣ ಜೋ ಜೋಪ್ರಣತಕಾಮದ ಪದ್ಮಜಾರ್ಜಿತ ಜೋ ಜೋಜಾಣೆರುಕ್ಮಿಣಿಯರಸಿ ಶ್ರೀಕೃಷ್ಣ ಜೋ ಜೋಜಾನಕಿ ಜೀವನ ಶ್ರೀರಾಮ ಜೋ ಜೋ 1ಸ್ಟೃಸ್ಥಿತಿಲಯ ಕಾರಣ ಜೋ ಜೋಇಟ್ಟಿಗೆ ಮೇಲ್ನಿಂತ 'ಠ್ಠಲ ಜೋ ಜೋಬೆಟ್ಟದ ತಿಮ್ಮಪ್ಪ ಶೆಟ್ಟಿಯೆ ಜೋ ಜೋದಿಟ್ಟ ಶ್ರೀ ಉಡುಪಿಯ ಕೃಷ್ಣನೆ ಜೋ ಜೋ 2ಜೋ ಜೋ ಶ್ರೀರಾಮದೂತ ಹನುಮಂತಾಜೋ ಜೋ ಜೋ ಭೀಮ ದ್ರೌಪದಿಕಾಂತಾಜೋ ಜೋಯತಿವರ ಆನಂದತೀರ್ಥಾಜೋ ಜೋ ಮೂರಾವತಾರ 'ಖ್ಯಾತ ಜೋ ಜೋ 3ಜೋ ಜೋ ಮಧ್ವ ಸಂತಾನ ಮುನಿವೃಂದಾಜೋ ಜೋ ಪ್ರಲ್ಹಾದ ವ್ಯಾಸ ರಾಜೇಂದ್ರಾಜೋ ಜೋ ಗುರುಸಾರ್ವಭೌಮಯತೀಂದ್ರಾಭೂಪತಿ'ಠ್ಠಲನ ಮೋಹದಕಂದಾ ಜೋ ಜೋ 4
--------------
ಭೂಪತಿ ವಿಠಲರು
ದಯಾನಿಧಿ ತೋರಿದ ಎನ್ನ ಜಿಹ್ವೆಯೊಳು ಪ ವಸುದೇವಾತ್ಮಜನಾದ ಕೇಶವ ದೇವಕಿ ಬಸುರೊಳಗುದಿಸಿದ ನಾರಾಯಣನು ಎಸೆದು ನಿಂದನು ಗೋಕುಲದೊಳು ಮಾಧವ ಕುಸುಮನಾಭನು ಗೋವಿಂದ ನಂದ ನಂದನಕಂದ 1 ದುಷ್ಟಪೂತನಿಯನ್ನು ವಿಷ್ಣುವೆ ಕೊಂದನು ತೊಟ್ಟಿಲ ಶಿಶುವಾಗಿ ಮಧುಸೂದನ ಮೆಟ್ಟಿ ಕೊಂದನು ತ್ರಿವಿಕ್ರಮ ಶಕಟನ ಕಟ್ಟಿಗೆ ಸಿಲುಕಿದನು ವಾಮನ ಯಶೋದೆಗೆ 2 ಬೆಣ್ಣೆಯ ಮೆದ್ದನು ಮಿಣ್ಣನೆ ಶ್ರೀಧರ ಕಣ್ಣಿಯ ಕರುವನು ಹೃಷಿಕೇಶನು ಉಣ್ಣಬಿಟ್ಟನು ತಾಯ ಮೊಲೆಯ ಪದ್ಮನಾಭ ಸಣ್ಣವ ಕ್ಷಣದೊಳು ದಾಮೋದರನಾದ 3 ವಾಸುದೇವನು ದ್ವಾರಾವತಿವಾಸನೆನಿಸಿದ ಸಾಸಿರ ನಾಮನು ಸಂಕರುಷಣನು ಆಸುರವಾಗಿಯೆ ಪ್ರದ್ಯುಮ್ನನೆಸೆದನು ದೋಷರಹಿತನಾದ ಅನಿರುದ್ಧನು 4 ಉತ್ತಮನಾಗಿ ಪುರುಷೋತ್ತಮನೆಸೆದನು ಅಧೋಕ್ಷಜ ನಾಮದಿ ಮೃತ್ಯುವಾದನು ದೈತ್ಯಕುಲಕೆಲ್ಲ ನರಸಿಂಹ ಮುಕ್ತಿದಾಯಕನಾದನಚ್ಯುತ ನಾಮದಿ 5 ಕಡಲ ನಡುವೆ ಜನಾರ್ದನನೆನಿಸಿ ತಾನು ಹಡಗನು ಸೇರಿಯೆ ಬಂದನುಪೇಂದ್ರನು ಉಡುಪಿಯ ಸ್ಥಳದೊಳು ಹರಿಯೆಂಬ ನಾಮದಿ ಕಡಗೋಲ ಕೈಯೊಳು ಹಿಡಿದು ನಿಂದಿಹ ಕೃಷ್ಣ 6 ಇಪ್ಪತ್ತು ನಾಲ್ಕು ನಾಮದ ಸ್ವಾಮಿಯು ತಪ್ಪದೆ ಒಂಬತ್ತು ಪೂಜೆಯಗೊಂಬನು ವರಾಹ ತಿಮ್ಮಪ್ಪರಾಯನು ಒಪ್ಪುಗೊಂಡನು ಮಧ್ವರಾಯನಾಗಮದೊಳು 7
--------------
ವರಹತಿಮ್ಮಪ್ಪ
ಧನ್ಯನಾದೆ ಪಾಂಡುರಂಗನ ಕಣ್ಣಾರೆ ಕಂಡು¥ತಂದೆತಾುಯ ಸೇವೆ ಮಾಡಿಪುಂಡಲೀಕನ ಭಕ್ತಿಗೊಲಿದುಚಂದ್ರಭಾಗಾ ತೀರದಲ್ಲಿಬಂದು ನಿಂತ 'ಠ್ಠಲನ ಕಂಡು 1ವೆಂಕಟೇಶ ಅಲ್ಲಿರುವಶಂಖಚಕ್ರ ಪಿಡಿದ ಕರವಟೊಂಕದ ಮೇಲಿಟ್ಟುಕೊಂಡುನಿಂತು ಇಲ್ಲಿ 'ಠಲನಾದ 2ಕಡಗೋಲಿಂದ ಗಡಿಗೆ ಒಡೆದುತುಡುಗು ಮಾಡಿದ್ಹುಡುಗ ಬಂದಉಡುಪಿಯಲ್ಲಿ ಕೃಷ್ಣನಾಗಿಓಡಿಬಂದಿಲ್ಲಿ 'ಠಲನಾದ 3ಎಷ್ಟು ಜನ್ಮದ ಸುಕೃತವೊ ಶ್ರೀ-ಕೃಷ್ಣ 'ಠಲರೂಪದಿಂದಭಕ್ತಜನರಿಗಾಲಿಂಗನಭೆಟ್ಟಿ ಕೊಡುತ ನಿಂತುಬಿಟ್ಟ 4ಅನ್ನಬ್ರಹ್ಮ ಉಡುಪಿಯಲ್ಲಿಚಿನ್ನ ಬ್ರಹ್ಮ ಬೆಟ್ಟದಲ್ಲಿಸಣ್ಣ ತುಳಸಿಮಾಲೆ ಸಾಕುನಾದಬ್ರಹ್ಮ ಭೂಪತಿ'ಠಲಗೆ 5ಗಲಗಲಿ ವಾಸಸ್ಥ ಶ್ರೀ ಪಾಂಡುರಂಗ
--------------
ಭೂಪತಿ ವಿಠಲರು
ನಿನ್ನ ಮಗನೇನೆ ಗೋಪಿಚೆನ್ನಾರಿ ಚೆಲುವ ಉಡುಪಿಯ ಕೃಷ್ಣರಾಯಾ ಪ ತೊಡರು ಅಂದಿಗೆ ಘಲು ಘಲುರೆನೆಅಂಗಳದಲಾಡುತ ಈ ಮುದ್ದುಬಾಲ1 ಕೌಪೀನ ಕೊರಳಲ್ಲಿ ಪದಕಸಟೆಯಿಲ್ಲ ಬ್ರಹ್ಮಾಂಡ ಉದರದಲಿಂಬಿಟ್ಟುಮಿಟಮಿಟನೆ ನೋಡುವ ನೀ ಮುದ್ದುಬಾಲ2 ಹರಿವ ಹಾವನು ಕಂಡು ಹೆಡೆ ಹಿಡಿದಾಡುವಕರುವಾಗಿ ಆಕಳ ಮೊಲೆಯುಂಬುವಹಿರಿದಾಗಿ ನೋಡಲು ಅಂತರಂಗದ ಸ್ವಾಮಿಧರೆಯೊಳಂಬುಧಿ ತೀರ ಉಡುಪಿನ ಕೃಷ್ಣ3
--------------
ವ್ಯಾಸರಾಯರು
ನೀನಲ್ಲದಿನ್ನಾರು ಸಲಹುವರೊ ಎನ್ನ ಪ ನಾನು ನನ್ನದು ಎಂಬ ದುರಭಿಮಾನಿಯನ್ನಅ.ಪ. ಶ್ರೀಮದಾಚಾರ್ಯರ ಪುಸ್ತಕ ಭಂಡಾರವನು ಪ್ರೇಮದಿಂ ಧರಿಸುತ ವೃಷಭನಾಗಿರ್ದು ಚರಿಸಿ ಕಾಮಪಿತನೊಲಿಮೆಯಿಂ ಮರಳಿ ಜನಿಸಿ ಗುರುಗಳ ಆ ಮಹಾಭಾಷ್ಯವರುಹಿದ ಜಯತೀರ್ಥ ಗುರುವೆ 1 ಬಾಲತನದಲಿ ಸಕಲ ಲೀಲೆಗಳ ತೊರೆದು ಕಾಲುಂಗುಟಾಗ್ರದಿ ನಿಂದು ತಪವಗೈದು ಶ್ರೀಲೋಲನ ಮೆಚ್ಚಿದಂಥ ಧೀರ ದೈವ ಭೂ- ಪಾಲನಂಶದ ಶ್ರೀಪಾದರಾಜ ಗುರುವೆ2 ಪಿತನ ಮತ ಧಿಕ್ಕರಿಸಿ ಶ್ರೀಪತಿಯೆ ಪರನೆಂಬ ಮತಿಪÉೂಂದಿ ಶಿಶುತನದಲಿ ನರಹರಿಯ ಒಲಿಸಿ ಅತಿಹಿತನಾದ ಪ್ರಹ್ಲಾದದೇವನಂಶದಿಂ ಕ್ಷಿತಿಯೊಳುದ್ಭವಿಸಿದ ವ್ಯಾಸರಾಜ ಗುರುವೆ 3 ಈ ಧರೆಯೊಳೆಸೆಯುತಿಹ ಉಡುಪಿಯೊಳು ನೆಲಸಿರ್ಪ ಯಾದವ ತೀರ್ಥಾಯ ಪದ ಸರಸಿರುಹ ಭೃಂಗ ಮೋದ ತೀರ್ಥಾರ್ಯರ ಪದಕರುಹನಾದಂಥ ಸೋದೆಯೊಳ್ರಾಜಿಸುವ ವಾದಿರಾಜ ಗುರುವೇ 4 ಕಂತುಜನಕನಿಗತ್ಯಂತ ಪ್ರಿಯನಾದ ಮತಿ ವಂತನಾ ವ್ಯಾಸಮುನಿಯೆ ನೀನಾಗಿ ಬಂದು ಸಂತಸದಲಿ ಸಾಧು ಜನರಿಷ್ಟ ಪೂರೈಸುತ ಮಂತ್ರಾಲಯದಿ ಮೆರೆವ ರಾಘವೇಂದ್ರ ಗುರುವೆ 5 ಜಲಜಭವನೂರುಭವನಂಶದಲಿ ಜನಿಸಿ ಕಲಿಯುಗದಿ ಹರಿನಾಮವೆ ಗತಿಯೆಂದು ಸಾರಿ ಹಲವು ಪದ ಸುಳಾದಿಗಳ ರಚಿಸಿ ಸಜ್ಜನರ ಕಲುಷಗಳ ಕಳೆದ ಪುರಂದರದಾಸರಾಯ 6 ಸಕಲ ಋಷಿಗಳ ಸಂಶಯವ ಪರಿಹರಿಸಿ ವೇದ ಉಕುತಿಗಳಿಂದ ಹರಿಯೆ ಪರನೆಂದು ಸ್ಥಾಪಿಸಿ ಭಕುತಿ ವೈರಾಗ್ಯನಿಧಿ ಭೃಗುಮುನಿಯೆಂದೆನಿಸಿದ ಮುಕುತಿಪಥ ತೋರಿಸಿದ ವಿಜಯದಾಸರಾಯ 7 ಸೂತ್ರ ಪುರಾಣಗಳ ರಚಿಸೆ ದಾಸತ್ವವಹಿಸಿ ಸಕಲ ಗ್ರಂಥಗಳ ಬರೆದು ಶ್ರಿಶಗರ್ಪಿಸುತ ಲೇಸು ಜಗಕೆಗೈದಂಥ ಗ ಣೇಶಾವತಾರಿ ಗೋಪಾಲದಾಸರಾಯ 8 ಸಿರಿ ರಂಗೇಶವಿಠಲನ ಕಾಂಬ ತೃಷೆಯಲಿ ಹರಿಗೆ ಹರಿಕಥಾಮೃತಸಾರ ಪಾನಗೈಯಲಿತ್ತ ನರಹರಿಯ ಕೃಪಾಪಾತ್ರ ಸಹ್ಲಾದನಂಶದ ಗುರುವರ ಶ್ರೀ ಜಗನ್ನಾಥದಾಸರಾಯ 9
--------------
ರಂಗೇಶವಿಠಲದಾಸರು
ನೋಡಿದೆ ಶ್ರೀಕೃಷ್ಣನ ನೋಡಿದೆ ಪ. ನೋಡಿದೆ ಒಂಬತ್ತುಗೂಡಿನ ಕಿಟಕಿಯೊಳ್ಕೂಡಿದ ಮಂದಿಯೊಳ್ಗಾಡಿಕಾರನನಿಂದುಅ.ಪ. ನಾರಿಪುರುಷರೊಂದುಗೂಡಿ ಮುಂದೆದಾರಿಯ ಬಿಡದೆ ಹೋರ್ಯಾಡಿ ದೇಹಯಾರದಂತೆÉ ಪುಡಿಪುಡಿ ಮತ್ತೆಶ್ರೀರಮಣನ ಪಾಡಿ ಬೇಡಿ ಆಹಾ ಸುತ್ತಸೇರಿದ ಜನರಿವರ ಮಧ್ಯದಿಚಾರು ಮೌಕ್ತಿಕದ ಮಣಿಹಾರÀ ಶೃಂಗಾರನ್ನ1 ಅಂಗದೊಳಿಹ ದಿವ್ಯಾಭರಣ ಕನ-ಕಂಗಳೊಪ್ಪಿದ ರವಿಕಿರಣ ಮುನಿ-ಪುಂಗವೆ ವಂದಿಪ ಚರಣಕಮ-ಲಂಗಳ ನೆನೆವರ ಕರುಣ ಆಹಾ ಹಿಂಗದೆÉ ಪೊರೆವ ಶ್ರೀರಂಗನುತ್ಸವÀಕೆಂದುಮಂಗಲಾರತಿಯಾಗಿ ಸಂಗಡ ಪೊರಡಲು 2 ಭರದಿಂದ ಪಲ್ಲಕ್ಕಿನೇರಿ ಮಧ್ವಸರೋವರದೆಡೆಯನು ಸಾರಿ ಸುತ್ತಮೆರೆವ ದೀಪದಿಂದೀರಿ (?) ನೋಳ್ಪ ಜ-ನರಿಗೆ ಜಲಕ್ರೀಡೆ ತೋರಿ ಆಹಾಸಿರಿ ಅರಸನು ಹಯವದನನೇರಿ ಮೆರೆವ ಉಡುಪಿಯೊಳ್ಪರಿಯಾಯ ವಿನೋದವನ್ನು 3
--------------
ವಾದಿರಾಜ
ಪಾದ ತೋರೆಂದು ಪಗುರುಸರ್ವಭೌಮರ ಅಖಂಡ ಸೇವೆಯ ಮಾಡಿವರಸುಮಂತ್ರಾಲಯದಿ ವಾಸಮಾಡಿಸುರಪನಾಲಯವು ಮಂತ್ರಾಲಯವು ಎಂಬಂತೆಹರಿದಾಸರಾಶಯವ ನಿಜಮಾಡಿ ತೋರಿಸಿದ 1ಉಡುಪಿಯೊಳು ಗುರುಸಾರ್ವಭೌಮರ ವೃಂದಾವನವಚತುರತನದಿಂದ ಪ್ರತಿಷ್ಠಾಪನೆಯ ಮಾಡಿಭರತಖಂಡದ ತೀರ್ಥಕ್ಷೇತ್ರಗಳ ಸಂಚರಿಸಿಭಕುತರಿಗೆ ಶ್ರೀ ಮಠದ ಮ'ಮೆ ತೋರಿದ ಗುರು2ಶ್ರೀ ಸ'ುೀರ ಸಮಯ ಸಂವರ್ಧಿನಿ ಸಭೆಯಸಂಸ್ಥಾಪನೆಯ ಮಾಡಿ ಪಂಡಿತರಿಗೆಭೂರಿ ಸಂಭಾವನೆ ಮೃಷ್ಟಾನ್ನ ಭೋಜನದಿತ್ಟುಗೊಳಿಸುತ ದೇಶ ದಿಗ್ವಿಜಯ ಮಾಡಿದ 3ಶ್ರೀ ಮಠದ ಕೀರ್ತಿಯನು ಶಿಖರಕ್ಕೆ ಮುಟ್ಟಿಸಿಸ್ವರ್ಣಮಂಟಪರಚಿಸಿ ವೈಭವವ ಬೆಳೆಸಿಶ್ರೀಮೂಲರಾಮ ದಿಗ್ವಿಜಯ ಜಯರಾಮರನುಭಕ್ತಿುಂದ ಪೂಜಿಸಿದ ಭಾಗ್ಯಶಾಲಿ 4ಗುರುಸಾರ್ವಭೌಮರಿಗೆ ಪರಮ ಪ್ರೀತಿಯ ಕಂದವರಮಧ್ವಮತ ಸುಧಾಂಬುಧಿಗೆ ಚಂದ್ರಪರಮಾತ್ಮ ಭೂಪತಿ'ಠ್ಠಲನ ಪೂಜಿಸುವಪರಮ ಪ್ರಶಾಂತ ಧೀರೆಂದ್ರ ಸನ್ನಿಧಿವಾಸ 5
--------------
ಭೂಪತಿ ವಿಠಲರು
ಪೂರ್ವ ಜನ್ಮದಲಿ ನಾ ಮಾಡಿದ ಕರ್ಮದಿಂಉರ್ವಿಯೊಳು ಜನಿಸಿದೆನೊ ಕೃಷ್ಣ ಪ ಕಾರುಣ್ಯನಿಧಿ ಎನ್ನ ಕಾಯಬೇಕಯ್ಯ ಹರಿವಾರಿಜನಾಭನೆ ಮುದ್ದುಕೃಷ್ಣಅ ಪುಟ್ಟಿದಂದಿನಾರಭ್ಯ ಸುಖವೆಂಬುವುದನರಿಯೆಕಷ್ಟ ಪಟ್ಟೆನು ಕೇಳೋ ಕೃಷ್ಣತೊಟ್ಟಿಲ ಶಿಶು ತಾಯ್ಗೆ ಬಾಯ್ಬಿಟ್ಟ ತೆರದಿ ಕಂ-ಗೆಟ್ಟು ಶೋಕಿಪೆನೋ ಕೃಷ್ಣಮುಟ್ಟಲಮ್ಮರು ಎನ್ನ ಬಂಧುಗಳು ಕಂಡರೆಅಟ್ಟಿ ಬಡಿವುತಲಿಹರೊ ಕೃಷ್ಣದಟ್ಟ ದಾರಿದ್ರ್ಯವನು ಪರಿಹರಿಸದಿದ್ದರೆಮುಟ್ಟುವುದು ದೂರು ನಿನಗೆ ಕೃಷ್ಣ1 ಕಾಶಿಯಾ ವಾಸವನು ಬಯಸಿ ಬಹು ದಿನದಿಂದಘಾಸಿ ಪಟ್ಟೆನು ನಾನು ಕೃಷ್ಣಈ ಶರೀರವನಾಂತು ಹೀನಾಯಗೊಂಡೆನುನೀ ಸಲಹಬೇಕಯ್ಯ ಕೃಷ್ಣಹೇಸಿಗೆಯ ಸಂಸಾರದಿ ನೀನಿಂತು ಮಾಯಾಪಾಶದೊಳು ಬಿಗಿವರೇ ಕೃಷ್ಣಘಾಸಿ ಮಾಡದೆ ಎನ್ನ ಪಾಪವನು ಪರಿಹರಿಸೊಸಾಸಿರನಾಮದ ಮುದ್ದುಕೃಷ್ಣ 2 ಲೋಕದೊಳು ಎನ್ನಂಥ ಪಾಪಿಗಳು ಉಂಟೆಂದುನೀ ಕೇಳಿ ಬಲ್ಲೆಯಾ ಕೃಷ್ಣಸಾಕೇಳು ಎನಗೊಂದು ಗತಿಯ ತೋರಿಸಿ ಸದ್ವಿವೇಕಿಯನು ಮಾಡಯ್ಯ ಕೃಷ್ಣರಾಕೇಂದು ಮುಖಿ ದ್ರೌಪದಿಯ ಮಾನವನು ಕಾಯ್ದುಆಕೆಗಕ್ಷಯವಿತ್ತೆ ಕೃಷ್ಣನಾ ಕಾಣುವಂದದಲಿ ಉಡುಪಿಯಾದಿಕೇಶವಏಕೆ ದರಶುನವೀಯೆ ಕೃಷ್ಣ 3
--------------
ಕನಕದಾಸ
ಬಂದು ನಿಲ್ಲೋ ದಯಾನಿಧೇ ಬಂದು ನಿಲ್ಲೋ ಪ ಬಂದು ನಿಲ್ಲೋ ನಿನಗೊಂದಿಸುವೆನು ಗೋ ವಿಂದ ಗೋವಳರಾಯ ಸಂದೇಹಗೊಳಿಸದೆ ಅ.ಪ ಸದೋಷಕ ನಾನು ಸದಾ ನಿರ್ಮಲ ನೀನು ಪದೆಪದೆಗೆ ಪೇಳುವುದುಚಿತವಲ್ಲ 1 ಮನದೊಳು ಪೊಳದು ಚಿಂತನೆಗೆ ನೆಲೆಯಾಗಿ ಘನಮಹಿಮನೆ ಮಧ್ವಮುನಿ ಮನ ಮಂದಿರ 2 ಕಡೆಗೋಲು ನೇಣಪಿಡಿದ ಪರಮಾನಂದ ಉಡುಪಿಯ ಶ್ರೀ ಕೃಷ್ಣ ವಿಜಯವಿಠ್ಠಲರೇಯ3
--------------
ವಿಜಯದಾಸ