ಒಟ್ಟು 9343 ಕಡೆಗಳಲ್ಲಿ , 135 ದಾಸರು , 4870 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾನವಿ ದಾಸರ | ನಿ ಸೇರೋಹೀನ ಮನುಜ ನಿನ್ನಘವನೆ ನೀಗುವ ಪ ಕೃತ ಯುಗದಲಿ ಹಿರಣ್ಯಜನೆನಿಸೀವಿತತ ಮಹಿಮ ಹರಿಯನೆ ಭಜಿಸೀ ||ಸತತದಿ ಸುಜನರ ಸಂತವಿಸಿ ಸಿರಿಪತಿಯ ಸೇವಿಸೆ ಸಹ್ಲಾದ ನೆನಿಸಿದಾ 1 ಎರಡೊಂದ್ಯು ಯುಗದಲಿ ಶಲ್ಯನಾಗಿ ಜನಿಸೀಕುರುಪಗೆ ಋಣರೂಪ ಸೇವೆ ಸಲಿಸಿ ||ಉರುತರ ಭಕುತಿಲಿ ಶೌರಿಯ ನೆನೆಯುತಹರಿಪದ ಸೇರಿದ ನೃಪಕುಲ ಮೌಳೀ 2 ವರಕಲಿಯಲಿ ದ್ವಿಜನಾಗವತರಿಸೀನರಮೃಗಾಖ್ಯಸುತ ಶ್ರೀನಿವಾಸನೆನಿಸೀ ||ವರದೇಂದ್ರ ಯತಿಯಲಿ ತರ್ಕವ ಕಲಿತುದುರುಳರ ಮುರಿದತಿ ಗರ್ವದಿ ಮೆರೆದಾ 3 ಭೃಗ್ವಂಶಜ ವಿಜಯಾಖ್ಯ ದಾಸ ಬಂಧೂಋಗ್ವಿನುತನ ಪ್ರಾಕೃತದೊಳು ಪಾಡೆ ||ದಿಗ್ಗಜ ಗರ್ವದಿ ಗೆಜ್ಜೆಯ ಕಟ್ಟಿದಅಗ್ಗದ ನಟನಿವನೆನುತಲಿ ಜರೆದಾ 4 ದಾಸರ ನಿಂದ್ಯದಿ ಬಂದುದು ಅಪಮೃತ್ಯುದೋಷನೀಗೆ ಗೋಪಾಲರ ಭಜಿಸೆನ್ನ ||ಔಷಧ ಪೇಳಲು ದಾಸರ ನಾಲ್ದಶವರ್ಷಾಯುಷ್ಯವ ಪೊಂದಿದವರನಾ5 ಇಂದು ಭಾಗದಲಾನಂದದಿ ಮೀಯೇಬಂದೊದಗಿತು ಜಗನ್ನಾಥ ನಾಮಾ ||ಪೊಂದುತ ಅಂಕಿತ ಕುಣಿಯುತ ಪಾಡುತಇಂದಿರೆಯರಸನ ಛಂದದಿ ತುತಿಸಿದ 6 ಪಾವನತರ ಹರಿಕಥೆ ಸುಧೆ ರಚಿಸೀಪವನ ಮತದವರನ್ನುತ್ತರಿಸೀ ||ಪವನನ ಹೃತ್ಕಂಜದಿ ನೆಲೆಸಿಹ ಗುರುಗೋವಿಂದ ವಿಠಲ ಪದಾಬ್ಜವ ಸೇರಿದ 7
--------------
ಗುರುಗೋವಿಂದವಿಠಲರು
ಮಾನಸಾಂಡದಿ ಕಾಂಬೊನ್ಯಾರೇ | ನಮ್ಮಮೌನಿ ಧ್ಯಾನಾಗಮ್ಯ ಕೃಷ್ಣಮೂರುತಿಯೇ ಪ ಗುಂಗುರು ಕುಂತಲ ಶೋಭಾನೇ | ನಮ್ಮಗಂಗಾ ಜನಕ ಗೋಪಿರಂಗಾನೇ |ಮಂಗಳ ಮಹಿಮ ಶುಭಾಂಗಾನೇ | ಹೃದ-ಯಾಂಗಣದಲಿ ನಿಂತು ಕುಣಿವಾನೇ 1 ಕೊಳಲ ಕೈಯಲಿ ಧರಿಸ್ಯಾನೇ | ಚಂದ್ರಬೆಳಕಾಮಿತದಲಿ ಕುಣಿದಾನೇ |ಕಲಕುತ್ತಲೆನ್ನಯ ಮನವಾನೇ | ಹರಿಚಳಕದಿ ಕುಣಿವಂತೆ ಮಾಡ್ಯಾನೇ 2 ಅಗಣಿತ ಮಹಿಮ ಲಾವಣ್ಯಾನೇ | ಹರಿಸುಗುಣಿ ಕಾಲಲಿ ಗೆಜ್ಜೆ ಕಟ್ಯಾನೇಝಗಿ ಝಗಿಸುವ ಹಾರ ಪದಕಾನೇ | ಕೃಷ್ಣಮಘವನಾರ್ಚಿತ ದಿವ್ಯ ಚರಣಾನೇ 3 ಯಾದವರೊಡೆಯನು ಬಂದಾನೇ | ಗುರುವಾದಿರಾಜರ ಮಾತು ಸಲಿಸ್ಯಾನೇಸಾದರದಲಿ ಕೈಯ್ಯ ಪಿಡಿದಾನೇ | ಎನ್ನಮೋದದಿ ಕುಣಿವಂತೆ ಮಾಡ್ಯಾನೇ 4 ಗೋವಳರೊಡಯನು ನಗುತಾನೇ | ಹೃದಯನೋವನು ಕಳೆಯಲು ಬಂದಾನೇಸಾವನೀಪರಿ ಕರುಣಿ ಕಳೆದಾನೇ | ಗುರುಗೋವಿಂದ ವಿಠಲ ಹಯಾಸ್ಯಾನೇ 5
--------------
ಗುರುಗೋವಿಂದವಿಠಲರು
ಮಾನಿನಿ ಬಲು ನುಡಿಯೋದುಚಿತವೆಭಲಾ ಭಲಾ ಎನಿಸು ಅನುಗಾಲ ಪ. ಬಂದ ಜನರು ಬಲು ಚಂದಾಗಿ ಕುಳಿತಿಹರು ಚಂದಿರವದನೆ ಸುಭದ್ರಾಚಂದಿರವದನೆ ಸುಭದ್ರಾ ನಿನ್ನ ಮುಖಕುಂದಿತಾಕೆಂದು ಕಮಲಾಕ್ಷ 1 ಬಲ್ಲೆ ಭಾಷೆ ನಿನ್ನ ಕ್ಷುಲ್ಲತನದ ಬುದ್ಧಿಮಲ್ಲಿಗೆಯಂಥ ಸುಕುಮಾರಿಮಲ್ಲಿಗೆಯಂಥ ಸುಕುಮಾರಿ ಗರತಿಗೆ ಹೊಲ್ಲ ಮಾತುಗಳ ನುಡಿಯೋರೆ2 ಮಾನುಳ್ಳ ಮಗಳಿಗೆ ನಾನಾ ಮಾತುಗಳಂದಿ ಏನೆಂಬೋರಿದಕೆ ಜನರೆಲ್ಲಏನೆಂಬೋರಿದಕೆ ಜನರೆಲ್ಲ ಸತ್ಯಭಾವೆಮಾನಾಪಮಾನ ನಿನಗಿಲ್ಲ3 ಮದ್ಗುಣಕಿ ಹೂವು ಉದ್ದಾದರೇನ ಮುದ್ದು ಮಲ್ಲಿಗೆಯ ಸರಿಯೇನ ಮುದ್ದು ಮಲ್ಲಿಗೆಯ ಸರಿಯೇನ ಭಾವೆ ಸುಭದ್ರಾಗೆ ನೀನು ಸರಿಯೇನ 4 ತಂಗಿಗಾಡಿದ ಮಾತು ರಂಗರಾಮೇಶ ಕೇಳಿಬಂಗಾರದಂಥ ಗುಣನಿಧಿಬಂಗಾರದಂಥ ಗುಣನಿಧಿ ಸುಭದ್ರೆಗೆವ್ಯಂಗ್ಯ ಮಾತುಗಳ ನುಡಿವೋರೆ5
--------------
ಗಲಗಲಿಅವ್ವನವರು
ಮಾನಿನಿ ರನ್ನೆ ತಾನ್ಯಾಕೆ ಬಾರನುನೀನೆ ವಿಚಾರಿಸು ಇಬ್ಬರ ನ್ಯಾಯವ ಪ ಮಗಳಿಗೆ ಮಗಳಾದ ಮಗಳಿಗಳಿಯನಾದಮಗಳ ಗಂಡಗೆ ಭಾವ ಮಾವನಾದುದ ಕೇಳಿನಾ ನಿನ್ನ ಪಾದಕ್ಕೆ ಬಂದೆ ಶ್ರೀಹರಿಯೆ 1 ವೈರಿಗೆ ವೈರಿಯಾದೆ ವೈರಿಗೆ ಸುತನಾದೆವೈರಿ ಗಂಡಗೆ ತನ್ನ ಮಗಳ ಕೊಟ್ಟುದ ಕೇಳಿನಾ ನಿನ್ನ ಪಾದಕೆ ಬಂದೆ ಶ್ರೀಹರಿಯೆ 2 ಆನಿ ಬಿದ್ದರ ತನ್ನ ಗ್ಯಾನದಿಂದೇಳುವುದುಏನು ಮಾಡಿದರು ಅದರ ಭಾವ ಹಿಂಗದುಜ್ಞಾನವಂತ ಕಾಗಿನೆಲೆಯಾದಿಕೇಶವರಾಯ ಮುನಿದು ಪೋದನೆ 3
--------------
ಕನಕದಾಸ
ಮಾನಿಸರಿಗೊಶವಲ್ಲ ಪೊಗಳಿ ಪೇಳುವುದು ಪ ಮೇಧಾದಿ ಮುನಿ ತನ್ನ ತಪೋಸಿದ್ಧಿಗೆ ಸರ್ವ | ಮೇದಿನಿ ತಿರುಗಿ ಬರುತಲಿ ಇತ್ತಲು | ಸಾಧನಕೆ ಸೌಮ್ಯವಾದ ಭೂಮಿಯನು ನೋಡಿ ಇವ | ಮಣಿ ಮುಕ್ತಿ ತೀರದಲಿ1 ನೆಸಗಿದ ತಪಕೆ ಮೆಚ್ಚಿ ಹರಿ ಒಲಿದ ತೀವ್ರದಲಿ | ಬಿಸಿಜದಳ ಲೋಚನೆ ಲಕುಮಿಯಿಲ್ಲೀ || ಎಸೆವ ಮಂಜರಿ ವೃಕ್ಷದಲಿ ವಾಸವಾಗಿ | ವಸುಧಿಯೊಳು ವಾಸವಾಗಿ ಅಗ್ರದಲಿ ಮೆರೆದನು 2 ಪರಮೇಷ್ಠಿ ಬಂದು ಈ ಕ್ಷೇತ್ರದಲಿ ನಿಂದು ಚ ಪರಮ ಗತಿ ಕೊಡು ಎಂದು ಸ್ತುತಿಸಿದನು ಹರಿಯ3 ಇಲ್ಲಿಗೆ ಬಂದು ಸತ್ಕರ್ಮವನು ಮಾಡಿದಡೆ | ಎಲ್ಲ ಕ್ಷೇತ್ರದಲಿ ಮಾಡಿದ ಫಲಕಿಂತ | ಎಳ್ಳಿನಿತು ಮಿಗಿಲೆನಿಸಿ ಪುಣ್ಯ ತಂ | ದುಣಿಸುವುದು | ಎಲ್ಲೆಲ್ಲಿ ಇದ್ದರು ಸ್ಮರಣೆ ಮಾಡಿರೊ ಜನರು 4 ಸುಗಂಧ ಪರ್ವತವಾಸ ಪುರುಷೋತ್ತಮ | ನಿಗಮಾದಿಗಳಿಗೆ ಅತಿದೂರತರನೋ | ಸುಗುಣನಿಧಿ ವಿಜಯವಿಠ್ಠಲರೇಯ ಸರ್ವದ | ಗಗನದಲಿ ಪೊಳೆವನು ಬ್ರಹ್ಮಾದಿಗಳ ಸಹಿತಾ 5
--------------
ವಿಜಯದಾಸ
ಮಾಯ ಮೋಹಿಗಳಿಗೆಲ್ಲ ಭವಬಂಧಳಿಯುವುದೇ ಕಾಯ ಶುದ್ಧಲ್ಲದವಗೆ ಕರ್ಮಬಂಧ್ಹರಿಯುವುದೇ ಪ ಮುಣುಗು ಕಲಿತಿರುವನು ದಣಿವಿನಿಂ ಮುಕ್ತಹನೆ ಕುಣಿತಕಲಿತಿರುವವ ಮನದಿ ನಾಚುವನೆ ಒನಪು ಕಲಿತಿರುವಗೆ ಮನಸಿಜ ದೂರನೆ ಮನೆಮನೆ ತಿರುಗುವನು ಘನತೆಗೆ ಬಹನೆ 1 ಪಾದ ತಾಡಣೆಯು ತಪ್ಪುವುದೆ ಕೇಡುಗಾರಿಗೆ ಸುಖದ ಜಾಡು ತಿಳಿಯುವುದೆ ಕಾಡಡವಿಲಿರುವವಗೆ ರೂಢಿಯ ಸುದ್ದಿಹುದೆ ನಾಡ ಮಾತಾಡುವಗೆ ಕೇಡು ತಪ್ಪುವುದೆ 2 ನಿಂದಕಗೆ ಮುಂದಿನ್ನು ಹಂದಿಜನ್ಮ ತಪ್ಪುವುದೆ ಛಂದಸ್ಸರಿಯದವಗೆ ಕವಿತದಂದ ತಿಳಿಯುವುದೆ ಮಂದಿಗೋಷ್ಠಿಗ್ಹೋಗುವಗೆ ಕುಂದೊದಗದಿರುತಿಹ್ಯದೆ ತಂದೆತಾಯನ್ಹಳಿಯುವಗೆ ಬಂಧ ತಪ್ಪುವುದೆ 3 ಮೋಸಕಾರಿಗೆಮಶಾಪವು ತಪ್ಪುವುದೆ ಆಶಕಾರಿಗೆ ಮಹನಾಶ ಬಿಡುತಿಹ್ಯದೆ ದೇಶದೇಶ ತಿರುಗುವಗೆ ಘಾಸಿಯು ತಪ್ಪುವುದೆ ದಾಸಜನ ದೂಷಕಗೆ ಈಶನೊಲಿಮಿಹ್ಯದೆ 4 ಸುಗುಡಿಗೆ ಪತಿಸರಸ ಸೊಗಸಾಗಿ ಕಾಣುವುದೆ ಜಗಳಗಂಟಿಗೆ ವ್ರತದ ಬಗೆಯುಶೋಭಿಪುದೆ ಸುಗುಣೆಯರೊಡನಾಟ ಷಂಡನಿಗೆ ಸಲ್ಲುವುದೆ ಸುಗುಣ ಸಂಗಿಲ್ಲದೆ ನರಕ ಭುಗಿಲು ತಪ್ಪುವುದೆ 5 ಕಪಟತ್ವ ನೀಗದೆ ತಪವೃದ್ದಿಯಾಗುವುದೆ ಕೃಪಣತ್ವ ಬಿಡದವಗೆ ತಾಪತ್ರಳಿಯುವುದೆ ಜಪವಿಲ್ಲದೆ ವಿನಾ ಸುಫಲದೊರಕುವುದೆ ಗುಪಿತವನು ತಿಳಿಯದವಗಪರೋಕ್ಷವಿಹ್ಯದೆ 6 ಮಾನವನ ಗುಣರಿಯದೆ ಜ್ಞಾನ ಸ್ಥಿರವಾಹುದೆ ಜ್ಞಾನವಿಲ್ಲದೆ ಬೇರೆ ಧ್ಯಾನ ಸಿದ್ದಿಪುದೆ ದೀನನಾಥ ಮಮ ಪ್ರಾಣೇಶ ಶ್ರೀರಾಮನಡಿ ಖೂನವರಿಯದೆ ಮುಕ್ತಿ ಜಾಣೆ ಸುಖಬಹುದೆ 7
--------------
ರಾಮದಾಸರು
ಮಾಯದೂರನೆ ಎನ್ನ ಮಾಯ ಬಿಡಿಸಯ್ಯ ಮಾಯದಲಿ ಸಿಲ್ಕಿ ಬಲು ಬಳಲುವೆನಭವ ಪ ಮಾಯದಿಂ ಜನಿಸಿ ನಾ ಮಾಯದಿಂ ಬೆಳೆದಿರುವೆ ಮಾಯವನೆ ಉಟ್ಟು ನಾ ಮಾಯ ತೊಟ್ಟಿರುವೆ ಮಾಯವನೆ ಹಾಸಿ ನಾ ಮಾಯವನೆ ಹೊದ್ದಿರುವೆ ಮಾಯದಲಿ ಬಿದ್ದು ಬಲು ಒದ್ದಾಡುತಿರುವೆ 1 ಮಾಯಕ್ಕೆ ಸತಿಯೆಂದು ಮಾಯಕ್ಕೆ ಸುತರೆಂದು ಮಾಯಕ್ಕೆ ಬಂಧೆಂದು ಮಾಯದ್ಹಿಗ್ಗಿದೆನೋ ಮಾಯಸಂಸಾರದ ಮಾಯನರಿಯದೆ ನಾನು ಮಾಯ ಮೋಹಿತನಾಗಿ ಬಾಯ್ಬಿಡುವೆ ಸತತ 2 ಮಾಯವನು ಕಲ್ಪಿಸಿ ಮಾಯವನೆ ಕುಣಿಸಾಡಿ ಮಾಯದಾಟಾಡುವಿಯೊ ಮಾಯವನು ತುಂಬಿ ಮಾಯಮಹಿಮನೆ ನಿನ್ನ ಮಾಯ ಬಲ್ಲವರಾರು ಮಾಯದಿಂದುಳಿಸೆನ್ನ ಕಾಯೊ ಶ್ರೀರಾಮ 3
--------------
ರಾಮದಾಸರು
ಮಾಯಾ ಕಾರ್ಯವಾಕೆಯೆ ಮಿಥ್ಯವೂಈ ರೀತಿುಂದಲಾತ್ಮನಿಛ್ಛೆಯಲಿದುಸೇರಿದಂತಿಹುದಾಗಿ ಭ್ರಾಂತಿಯು ಜಾರುವನ್ನೆಗ ಪೊಳೆಯಲು1ಮುನ್ನ ನೀ ಬಂದೆನೆಂಬಲ್ಲಿ ಪರವiನುಭಿನ್ನವಿಲ್ಲದೆ ಪೂರ್ಣವಾಗಿರಲಿನ್ನು ನಿನಗೆಡೆಯಾವದೂಅನ್ಯ ವಿಲ್ಲದನನ್ಯನೀಶನೆ ನಾನುನಿನ್ನ ಕಾರ್ಯದ ನೇತ್ರಮಾತ್ರಕ್ಕುನ್ನತ ಕೃತಿಯಾಗಿರೇ 2ಮರುಭೂಮಿಯೊಳು ಮುಸುಕೆ ಮಿತ್ರನ ಕಾಂತಿಕೆರೆಯ ನೀರಿನ ಹಾಗೆ ಕಾಣುತಲಿರಲು ನೋಡಿದರುದಕವೆಬರಿಯ ಚೌಳೆಂತಾ ಪರಿಯು ನಿನ್ನಯ ತೋರ್ಕೆನಿರತ ಉಂಟೆಂಬಂತೆ ನಿನ್ನಯ ಮರುಳಿನಿಂ ಮುಂದಿರುತಿರೆ 3ಹೊಳೆಯಲಿಲ್ಲವು ಹುಸಿಯಾಗಿ ನೀ ಮುನ್ನಬಳಿಕ ನಿನ್ನೊಳು ಬದ್ದನೆಂಬೀ ಬಗೆಯು ತನಗೆಂತಪ್ಪುದೂತಿಳಿದು ನೋಡಲು ತಾನೊಬ್ಬನಾತ್ಮನುಕಳೆದು ಕೂಡುವ ಮಾತು ಮಾತ್ರವೆಯಳವಿಗೊಂಡಿರವಿಷ್ಟಕೆ 4ಅರಿವಿನಾ ಘಟ್ಟಿಯಾಗಿಹೆ ನಾ ನಿತ್ಯವರಿವು ಮರವೆಗಳೆಂದು ತೋರ್ದರು ಕರಣಧರ್ಮಗಳಲ್ಲದೆಬೆರದು ಬೇರಾಹ ಬಗೆಯಂದಿಗಿಲ್ಲವುತಿರುಪತಿಯ ಶ್ರೀ ವೆಂಕಟೇಶನೆ ತರುಬಿಕೊಂಡಿರೆ ವಿಶ್ವವಾ 5ಕಂ||ನುಡಿಯಲು ಜೀವನು ಕೋಪದಿಕಿಡಿಗೆದರುವ ಕಂಗಳಿಂದಭಿಮಾನನ ಬಲದಿಂತಡೆಯದೆ ತನು ಜೀವನನಾರ್ಭಟಿಸುತ ವಾದಿಸಿದುದ ಪುಸಿತನ ಬಂತೆಂಬುದರಿಂ
--------------
ತಿಮ್ಮಪ್ಪದಾಸರು
ಮಾಯಾ ಜಯಕೃತಿಗೆ ಮಂಗಳಂ ಶಾಂತಿ ಸ್ವರೂಪಳಿಗೆ ಮಂಗಳಂ ಭಕ್ತರ ಕಂಗಳಿಂದಲಿ ನೋಡಿ ರಂಗನ ಪಾದವ ತೋರ್ವಳಿಗೆ ಪ. ಮಂಗಳಂ ಜಯ ಮಂಗಳಂ ಅ.ಪ. ಅಲ್ಲಿ ವೈಕುಂಠದೊಳಗೆ ಇರಲು ಬಲ್ಲಿದ ಭೃಗು ಋಷಿ ತಾ ಬರಲು ವಲ್ಲಭನ ವಕ್ಷಸ್ಥಳ ಒದೆಯಲು ಹರಿ ಸೊಲ್ಲು ಕೇಳದೆ ಓಡಿ ಬಂದಳಿಗೆ 1 ಕೊಲ್ಲಾಪುರದಲಿ ನಿಂದಳಿಗೆ ಎಲ್ಲರಭೀಷ್ಟವ ಸಲಿಪಳಿಗೆ ಖುಲ್ಲರ ಮರ್ಧಿಪ ಹರಿಯ ವಕ್ಷಸ್ಥಳ ದಲ್ಲಿ ಸದಾ ನೆಲಸಿರ್ಪಳಿಗೆ 2 ಶ್ರೀ ಜಯದೇವಿಗೆ ಶ್ರೀ ಲಕ್ಷ್ಮಿಗೆ ಶ್ರೀ ರುಕ್ಮಿಣೀ ಸತ್ಯಭಾಮಳಿಗೆ ಶ್ರೀ ಪದ್ಮಾವತಿ ನಾಮಕ ನಾನಾರೂಪ ಗುಣಾನ್ವಿತೆಗೆ 3 ಮುಕ್ತಾಮುಕ್ತರಿಗೊಡೆಯಳಿಗೆ ಮುಕ್ತಿಯ ಭಕ್ತರಿಗೀವಳಿಗೆ ಮುಕ್ತಳೆನಿಸಿ ಮುಕ್ತಾಶ್ರಯನಿಗೆ ಆ- ಸಕ್ತಿಯಿಂದ ಸೇವೆ ಮಾಳ್ಪಳಿಗೆ 4 ಗೋಪಾಲಕೃಷ್ಣವಿಠ್ಠಲನ ಆಪಾದ ಮೌಳಿಯ ಗುಣಗಳನು ತಾ ಪರಿಪರಿಯಿಂದ ವರ್ಣಿಸುತ್ತಿದ್ದರು ಅಪಾರವಾಗಿಯೆ ಕಾಂಬಳಿಗೆ 5
--------------
ಅಂಬಾಬಾಯಿ
ಮಾಯಾ ಭ್ರಮಿತನಾದ ಮೂಢನಪರಾಧ ಶತವನು ಪಗುಣ ಮೂರರೊಳು ಬದ್ಧನಾಗಿ ಮತ್ತೆಗುಣಕಾರ್ಯ ವಿಷಯಂಗಳೊಳು ಸಕ್ತನಾಗಿಗುಣ ಹತ್ತರಭಿಮಾನಿಯಾಗಿ ುಪ್ಪಗುಣಹೀನನಿಗೆ ಜ್ಞಾನ ದೊರಕೊಳ್ಳದಾಗಿ 1ಪುಣ್ಯ ಪಾಪ ಮಿಶ್ರವೆಂಬ ಕರ್ಮಜನ್ಯವಾದ ಸ್ಥೂಲದೇಹ ತಾನೆಂಬಭಿನ್ನಮತಿಗೆ ದೊರಕೊಂಬ ಜ್ಞಾನವಿನ್ನುಂಟೆ ನಿರ್ಣೈಸೆ ಸುಗುಣ ಕದಂಬ 2ಚಂಚಲವಾಗಿಪ್ಪ ಮನವು ಅಲ್ಲಿವಂಚನೆುಂ ಮಾಳ್ಪ ಸ್ತುತಿ ಪೂಜೆ ಜಪವುಸಂಚಿತವಾುತಘ ವ್ರಜವು ಹೀಗೆವಂಚಿಪ ಮಾಯೆಯ ಗೆಲಲಾರಿಗಳವು 3ಕರ್ಮಕಲಾಪವ ಕಳಿದು ಚಿತ್ತನಿರ್ಮಲನಾಗಿ ಬ್ರಹ್ಮವ ನೆರೆ ತಿಳಿದುಹಂಮಳಿದುಳಿವದೆಲ್ಲಿಯದು ನೀನುಸುಮ್ಮನಿರದೆ ಕಾಯೆ ಸುಲಭವಾಗಿಹುದು 4ಬಂಧನವಿದ ಪರಿಹರಿಸು ಕೃಪೆುಂದಲಿ ಭವದಿಂದಲೆನ್ನನುದ್ಧರಿಸು ತಂದೆ ನೀ ತಿರುಪತಿಯರಸು ಲೋಕಬಂಧು ಶ್ರೀ ವೆಂಕಟರಮಣ ನಿರೀಕ್ಷಿಸು 5ಓಂ ವಿಶ್ವರೂಪ ಪ್ರದರ್ಶಕಾಯ ನಮಃ
--------------
ತಿಮ್ಮಪ್ಪದಾಸರು
ಮಾಯಾಮಯ ಜಗವೆಲ್ಲ ಇದ- ರಾಯತ ತಿಳಿದವರಿಲ್ಲಪ. ಕಾಯದಿಂ ಜೀವನಿಕಾಯವ ಬಂಧಿಸೆ ನೋಯಿಸುವಳು ಸುಳ್ಳಲ್ಲಅ.ಪ. ತಿಳಿದು ತಿಳಿಯದಂತೆ ಮಾಡಿ ಹೊರ- ಒಳಗಿರುವಳು ನಲಿದಾಡಿ ಹಲವು ಹಂಬಲವ ಮನದೊಳು ಪುಟ್ಟಿಸೆ ನೆಲೆಗೆಡಿಸುವಳೊಡಗೂಡಿ 1 ಯೋಷಿದ್ರೂಪವೆ ಮುಖ್ಯ ಅ- ಲ್ಪಾಸೆಗೆ ಗೈವಳು ಸಖ್ಯ ದೋಷದಿ ಪುಣ್ಯದ ವಾಸನೆ ತೋರ್ಪಳು ಜೈಸಲಾರಿಂದಶಕ್ಯ2 ಕರ್ತ ಲಕ್ಷ್ಮೀನಾರಾಯಣನ ಭೃತ್ಯರ ಕಂಡರೆ ದೂರ ಚಿತ್ಪ್ರಕೃತಿಯಿಂದ ಪ್ರೇರಿತಳಾಗಿ ಪ- ರಾರ್ಥಕೆ ಕೊಡಳು ವಿಚಾರ3
--------------
ತುಪಾಕಿ ವೆಂಕಟರಮಣಾಚಾರ್ಯ
ಮಾಯೆ ಮುಟ್ಟದಿರೆನ್ನನು ನಿನ್ನಯ ಮೂರುಕಾಯಾಭಿಮಾನವೆನಿಸುವ ಮೈಲಿಗೆಯನು ಹೇಯವಿದೆಂದು ಬಿಟ್ಟರಿಕೆಯ ಮಡಿಯುಟ್ಟೆಬಾಯ ಹೊೈುಸುವೆನಿನ್ನು ತಪ್ಪಿದೆಯಾದರೆ ಪಧೀರತನದಿ ಸದಸದ್ವಿವೇಕವ ತೊಟ್ಟು | ಸಾರಿ ಧನಾದಿ ಭೋಗಗಳ ಬಿಟ್ಟುಸಾರವಲ್ಲೆಂದು ಸ್ವರ್ಗಾದಿ ಸುಖಂಗಳ | ಮೀರಿದ ವಿರತನು ನಾನೆಂದೆನಲ್ಲದೆ ನಿನ್ನನಾರಿಯಬೇಕೆಂದೆನೆ ವಿಷಯವಿ | ಕಾರದೊಳ್ಬಳಿಸಂದೆನೆ ಧ್ಯಾನ ಸಾಧನಕಾರವೆ ಸಾಕೆಂದೆನೆ ಕಲ್ಪಿತವಾದ ಘೋರ ಸಂಸಾರವಸಾರವೆಂದೆನಲ್ಲದೆ 1ಶಮೆುಂದ ಚಿತ್ತ ವಿಕ್ಷೇಪವ ತೊಲಯ | ದಯೆುಂದಿಂದ್ರಿಯಗಳ ತಗ್ಗಿಸಿಕ್ರಮದಿಂ ತಿತಿಕ್ಷೆುಂ ಸಹನವ ಮಾಡಿ | ಯಮಿತೋಪರಮದಲಗ್ಗಳನೆಂದೆನಲ್ಲದೆಸಮತೆುಲ್ಲದೆ ಬಂದೆನೆ ತನು ಭೋಗ | ಮಮತೆಯೊಳಗೆ ನಿಂದೆನೆ ವಿಘ್ನವಿಕ್ರಮಕೊಳಗಾದೆನೆಂದೆನೆ ವೇದಾಂತೋಪಕ್ರಮವೆನ್ನೊಳಾುತೆಂದು ವಿವರಿಸಿದೆನಲ್ಲದೆ 2ದೀಪಿತ ಮೋಕ್ಷೇಚ್ಛೆುಂದ ತೋರುವ ಸಕಲ | ತಾಪತ್ರಯಗಳ ತೊಲಗಿಸಿಈಪರಿ ವೇದಾಂತ ಶ್ರವಣ ಮನನದ ಪ್ರ | ತಾಪದಿಂದರಿಗಳಿಲ್ಲೆನಗೆಂದೆನಲ್ಲದೆನೀ ಪುಸಿಯಲ್ಲೆಂದೆನೆ ಕಲ್ಪಿತ ನಾಮ | ರೂಪವ ನಿಜವೆಂದೆನೆ ತಾದೃಶ್ಯ ವಿಲೋಪಕನಲ್ಲೆಂದೆನೆ ಕೇಳು ಪ್ರತಿಜ್ಞೆಯ | ಗೋಪಾಲಾರ್ಯನೆ ನಾನೆಂದೆನಲ್ಲದೆ3
--------------
ಗೋಪಾಲಾರ್ಯರು
ಮಾರ ಎನ್ನ ಸಂ ಹಾರ ಮಾಡಲು ದಂಡು ತಂದನೆ ಪ ಮುಂದಾಗಿ ಬಂದೊದಗಿದವು 1 ಅಂತರಂಗದಿ ಮನೋಭ್ರಾಂತಿ ಬಿಡಿಸುವವ ಸಂತನೀಗಲೆ ಬಂದಿರುವನೆ2 ಭೃಂಗಗಳೇ ರಣರಂಗದಿ ಕೂಗುವ ಸಂಗತಿಗೆ ಬೆದರಿದೆನೆ 3 ಶುಕವೇರಿ ಧನುವಿನೋಳ್ ವಿಕಸಿತ ಸಮಬಾಣ ಮುಖದೊಳು ಗುರಿಯನ್ನೆ ನೋಡುವ 4 ಆವಾಗಲೂ ವಾಸುದೇವವಿಠಲನ ಪಾದವೆ ಗತಿಯೆಂದಿರುವೆನೆ 5
--------------
ವ್ಯಾಸತತ್ವಜ್ಞದಾಸರು
ಮಾರ ಜನಕನ ನೀರೆ ಪ ಕರವ ಹರುಷದಿಂದಾ ಅ.ಪ ಕ್ಷೀರವಾರ್ಧಿತನಯೆಯೆಂದು ಸಾರಸಾಕ್ಷಿಯರು ಬಂದು ಕೋರಿ ಭಜಿಸುವರು ನಿನ್ನ ಅಪಾರ ಮಹಿಮೆಗಳನು 1 ಸುತ್ತ ಜ್ಯೋತಿಗಳ ಬೆಳಗಿ ಮುತ್ತೈದೆಯರೆಲ್ಲ ಕೂಡಿ ಮುತ್ತು ಮಾಣಿಕ ಪೀಠವಿರಿಸಿ ಭಕ್ತಿಯಿಂದ ಪ್ರಾರ್ಥಿಸುವರು 2 ಜನಕರಾಯನ ಕುಮಾರಿ ಸನಕಾದಿಯೋಗಿ ಜನಾಧಾರೀ ದಿನಕರ ಕೋಟಿ ಪ್ರಕಾಶೆ ದಿವ್ಯಮಣಿಮಯ ಭೂಷೆ 3 ಮಾನಸಾಬ್ಜ ಮಂಟಪದಲಿ ಧ್ಯಾನವೆಂಬೊ ಪೀಠದಲ್ಲಿ ಜ್ಞಾನಿಶಕ್ತಿಗಳು ಪೊಗಳೆ ಸಾನುರಾಗದಿಂದಲೀಗಾ 4 ನಿತ್ಯಸಂಪತ್ಪ್ರದಾಯಿನಿ ಭೃತ್ಯವತ್ಸಲೆ ಜನನೀಸತ್ಯಸಂಕಲ್ಪ ಗುರುರಾಮ ವಿಠಲನ ಪಟ್ಟದರಾಣಿ 5
--------------
ಗುರುರಾಮವಿಠಲ
ಮಾರ ಪ. ನಾನಾಯೋನಿಗಳಲ್ಲಿ ಬಂದು ಬಂದು ಬಳಲಿದೆನುಹೀನಜನರೊಡನಾಡಿ ಕಡುನೊಂದೆನುಶ್ರೀನಾಥ ನಿನ್ನ ಸುಕಥಾಮೃತವ ನೆನೆನೆನೆದುದೀನಜನರನು ಪೊರೆವ ಪಿರಿಯರೊಳು ಎನ್ನನಿರಿಸು 1 ಕಂಡ ಕಂಡವರ ಬೇಡಿ ಬೇಸರಲಾರೆನೊ ತಂದೆಪುಂಡಾರೀಕಾಕ್ಷ ಪುರುಹೂತÀವಂದ್ಯಪಾಂಡವಪ್ರಿಯ ಪರಮಪುರುಷ ನಿರ್ದೋಷ ನಿನ್ನತೊಂಡರೊಳಗೆನ್ನನಿರಿಸೊ ದುರುಳರ ಸಂಗವ ಬಿಡಿಸೊ 2 ಶ್ರೀಹಯವದನರಾಯ ಆಶ್ರಿತಜನಸುಖೋಪಾಯಮೋಹಾಂಧಕಾರಮಾರ್ತಾಂಡ ಶೂರನೇಹದಿಂದೆನ್ನ ಕೈವಿಡಿದು ದುಷ್ಟರ ಬಿಡಿಸುಕಾಹುಕಟ್ಟಳೆಯ ಮಾಡು ಕರುಣಾಕಟಾಕ್ಷದಿ ನೋಡು 3
--------------
ವಾದಿರಾಜ