ಒಟ್ಟು 6051 ಕಡೆಗಳಲ್ಲಿ , 130 ದಾಸರು , 3175 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿನ್ನ ಕೃಪೆಯಿರೆ ಬಲುಸುಖ ಈ ಸಂಸಾರನಿನ್ನ ಕೃಪೆಯಗಲಿದರೆ ಘನಗೋಳು ಹರಿಯೆ ಪಅಲ್ಲ ಅಹುದಾಗುವುದು ಸುಳ್ಳೆ ಖರೆಯಾಗುವುದುಎಲ್ಲಸಿರಿ ಒದಗುವುದು ಒಲ್ಲೆನಲು ಬಿಡದೆಪುಲ್ಲನಾಭನ ಒಲುಮೆವುಳ್ಳ ಮಾನವರಿಗೆಕಲ್ಲಿನೊಳು ಜಲಪುಟ್ಟಿ ಹೊಳೆಯಾಗಿ ಹರಿಯುವುದು 1ಹೀನನಾದರು ಬಹುಮಾನ ಸಿಗುವುದು ಗೊಡ್ಡುಧೇನುಗಳೆಲ್ಲ ಬಿಡದೆ ಹೈನಗರೆಯುವುವುದೀನನಾಥನು ಒಲಿಯೆ ನಾನಾ ಸಿರಿಸೌಭಾಗ್ಯತಾನೆ ಬರುವುದು ತೆಂಗಿನೊಳುದಕದಂತೆ 2ವಿಷವೆ ಅಮೃತವಹುದು ಕಸವೆ ಕರ್ಪುರವಹುದುವಿಷಮ ವಿಷಯದ ಎಡರು ಹಸನಹುದು ನಿಖಿಲವಸುದೆಗಧಿಕ ನಮ್ಮ ಬಿಸಜಾಕ್ಷ ಶ್ರೀರಾಮನೊಶವಾದ ಬಳಿಕ ನಿಜ ಅಸಮ ಮುಕ್ತಿಹುದು 3
--------------
ರಾಮದಾಸರು
ನಿನ್ನ ಕೊಳಲಿಗೆ ಮೋಹಿಸಿ ನಿನ್ನ ಕೊಳಲಿಗೆಅನ್ಯ ವಿಷಯಜರಿದುಬಂದರೆ ಇನ್ನು ಯಾತಕೆ ಬಂದಿರೆÉಂದಿಪ.ಅತ್ಯಂತ ಕಾಳ ರಾತ್ರಿಯೊಳುಮತ್ತೆ ಬಂದ ಬಾಲೆಯರಿಗೆಉತ್ತಮ ಉತ್ತಮವ ನೋಡಿಮತ್ತೆ ಮನೆಗೆ ಪೋಗಿರೆಂದಿ 1ಪ್ರೀತಿ ಪತಿಗಳ ಬಿಟ್ಟು ನೀವುಯಾತಕಿಲ್ಲೆ ಬಂದಿರೆಂದಿಮಾತುಗಳನು ಆಡಿ ಪೋಗಿರಿಘಾತುಕ ಪುರುಷನಯ್ಯ ಕೃಷ್ಣ 2ಭರದಿ ಬಂದ ಬಾಲೆಯರಿಗೆತಿರುಗಿ ಪೋಗಿರೆಂದು ನುಡಿದಿಕರಗಲಿಲ್ಲ ಕಠಿಣ ಹೃದಯಕರೆವರ್ಹ್ಯಾಂಗ ಪತಿಗಳವರ 3ಜಾರರಾಜ ನಿನಗೆ ಒಂದೂತೋರದಿದ್ದ ಭಾವವೇನುಯಾರ್ಯಾರ ಅಂಜಿಕೆ ಇಲ್ಲವೆಂದುನಾರಿಯರಿಗೆ ಖಿನ್ನ ಬಡಿಸಿದೆಲ್ಲೊ 4ಇಂದುರಾಮೇಶ ಬಿಟ್ಟರೆÉ ನೀನುಹೊಂದೋದಿಲ್ಲ ಪತಿಗಳ ಘನ್ನಚಂದಾಗಿ ಬೆರಿಯೆ ಚಕೋರನ್ನಇನ್ನರೆ ರಮಿಸಿದೆಲ್ಲೊ ಚನ್ನ 5
--------------
ಗಲಗಲಿಅವ್ವನವರು
ನಿನ್ನ ಧ್ಯಾನ ಶುಭಮೂಹೂರ್ತ ನಿನ್ನ ಭಜನ ಶುಭದಿನವು ಪನಿನ್ನ ನಾಮ ಜಯಕಾರವು ನಿನ್ನ ಸ್ಮರಣ ಶುಭತಿಥಿಯುನಿನ್ನ ಸ್ತುತಿಯೆ ಶುಭಕಾಲ ಅನ್ಯ ಎಲ್ಲಪುಸಿಮಾಧವದೇವಅಪನಿತ್ಯನಿರುಪಮ ನಿನ್ನ ನಿತ್ಯದಲ್ಲಿ ಪೊಗಳುವುದೆಉತ್ತಮ ಶುಭವಾರವುಚಿತ್ತಜಪಿತ ನಿನ್ನ ಚಿತ್ತದಲಿ ನೆನೆಯುವುದೆಅತ್ಯಧಿಕ ಪಕ್ಷಮಾಸವುಮೃತ್ಯುದೂರನೆ ನಿನ್ನ ಸತ್ಕಥೆಯನಾಲಿಪುದೆ ನಕ್ಷತ್ರ ಶುಭಕರಣವುಭಕ್ತವತ್ಸಲ ನಿನ್ನ ಭಕ್ತಿಯಿಂ ಪಾಡುವುದೆನಿತ್ಯಅಮೃತಯೋಗವು ನಿಜವು1ದಿವನಿಶೆಯ ಇಡದೊಂದೆಸವನೆ ನಿನ್ನರಸುವುದೆರವಿಚಂದ್ರ ಭೌಮ್ಯ ಒಲವುಭವಪರಿಹರ ಸಿರಿಧವ ನಿನ್ನ ಸಚ್ಚರಿತಕವಿಗುರುಸೌಮ್ಯ ಬಲವುಬುವಿಯರಸ ನಿನ್ನಸಮ ಸುವಿಲಾಸ ಲೀಲೆ ಕೇಳಾವುದಮಿತ ಶನಿಬಲವುಭುವಿಜಪತಿ ಭಕ್ತಿಯ ಭವಭವದಿ ರಾಹುಕೇತುನವಗ್ರಹಂಗಳ ಬಲವು ಗೆಲವು 2ಕರಿಧ್ರುವರ ಪೊರೆದ ತವಪರಮ ಬಿರುದುಗಳನ್ನುಸ್ಮರಿಸುವುದೆ ಭವದೂರವುಹರದಿಗಕ್ಷಯವಿತ್ತ ವರದ ನಿನ್ನಡಿ ದೃಢವುಸ್ಥಿರಶಾಂತಿ ಸುಖಸಾರವುಸುರಗಣಕೆ ಸೌಖ್ಯವನು ಕರುಣಿಸಿದ ನಿಮ್ಮ ಮೊರೆಪರಲೋಕ ನಿಜಸ್ವಾದವುವರದ ಶ್ರೀರಾಮ ನಿಮ್ಮ ಚರಣದಾಸತ್ವದೆವರಮುಕ್ತಿ ಕೈಸಾಧ್ಯವು ಸ್ಥಿರವು 3
--------------
ರಾಮದಾಸರು
ನಿನ್ನ ನಾಮದ ಸವಿ ಎಲ್ಲರರಿಯರಂತೆಬಲ್ಲವರೆ ಬಲ್ಲರಂತೆನಿನ್ನ ನಾಮದ ಸವಿ ಎಲ್ಲರರಿಯರಂತೆ ಪಸ್ಥಿರಪದವನುಭವಿ ಧ್ರುವನು ಬಲ್ಲನಂತೆಪರಮಕಂಟಕ ಗೆದ್ದವರಪ್ರಹ್ಲಾದ ನಾಮನೆಲೆ ತಿಳಿದನಂತೆಸ್ಥಿರಪಟ್ಟ ಪಡೆದಂಥ ವರವಿಭೀಷಣನುಸರಿಯಾಗಿ ನಾಮದ ಸವಿಯುಸುರಿದನಂತೆ 1ಅಂಬರೀಷನೆಂಬ ನೃಪನು ಬಲ್ಲನಂತೆಪರಮಪಾವನಪಾದಅಂಬುಜಾಕ್ಷಿಯಳಾದ ಅಹಲ್ಯೆ ಬಲ್ಲಳಂತೆಅಂಬುಜಾಕ್ಷನ ಪಾದಸಂಭ್ರಮದಸವಿಕುಂಭಿನಿಯೊಳುಕರಿತುಂಬಬಲ್ಲನಂತೆ2ಪರಮಜ್ಞಾನಿಯಾದ ವಿದುರ ಬಲ್ಲನಂತೆವರನಾಮದ ಸವಿತರುಣಿ ಪಾಂಚಾಲಿಯು ಅರಿತುಕೊಂಡಳಂತೆಪರಿಯಲಿಅವರಧರ್ಮಜನುನಿರುತ ನಾಮಾಮೃತ ಅರಿತುಸುರಿದನಂತೆ 3ತುಂಬುರಾದಿಮುನಿಸುರರು ಬಲ್ಲರಂತೆವಿಮಲನಾಮದ ಸವಿಅಂಬುಜಾಸನಕಂಡು ಪೊಗಳುತಿರುವನಂತೆಕುಂಭಿಜಾತೆಸಿರಿಅಂಬರೇಶನ ಸುತೆಎಂಬುವರು ನಿನ್ನ ಅಂದ ಬಲ್ಲರಂತೆ 4ಚರಣದೆಡೆಯಲ್ಲಿರ್ದ ಗರುಡ ಬಲ್ಲನಂತೆರಾಗರಹಿತನಾಗವರಹನುಮಂತನು ಪೂರ್ಣಬಲ್ಲನಂತೆಪರಿಯೇನಿರುವುದು ಅರಿತು ಭಜಿಪೆ ನಿನ್ನಕರುಣದೆನತು ತೋರು ರಾಮನಾಮದ ಸವಿ 5
--------------
ರಾಮದಾಸರು
ನಿನ್ನ ಬೆನ್ನುಬಿದ್ದು ಧನ್ಯನಾದೆನು ಪನ್ನಂಗಶಯನನಿನ್ನ ಬೆನ್ನುಬಿದ್ದು ಧನ್ಯನಾದೆನು ಪಇನ್ನು ಭವದೊಳು ಅನ್ಯರಂಜಿಕೆಯನ್ನು ತಪ್ಪಿಸಿನಿನ್ನ ಕರುಣವನು ತೋರಿದಿ ಸನ್ನುತಾಂಗರೂಢಿಯೊಳು ನಾನು ಮೂಢನಾದೆನು ಧೃಢದಿ ನಿನ್ನಗಾಢಮಹಿಮೆಯ ಅರಿಯದಲೆ ಇನ್ನು ಬಡಬಡಿಸಿಕೊಂಡುಕೇಡಿಗೊಳಗಾಗಿ ಕೆಡುತಲಿರ್ದೆನು ಬಿಡದೆ ಪರರನುಬೇಡಿ ಆಸೆಯಿಂ ಭಂಗಮಾಡುತ ಖೋಡಿಯಪ್ಪುದ ಕಂಡು ನೀನೆಮೂಢನೊಳು ದಯಮಾಡಿ ಕರುಣವನೀಡಿ ಕುರುಹನು ತೋರ್ದಿ ದೇವ 1ಹೊಂದಿಕೊಂಡೀ ಮಾಯಾಜಾಲವನು ಒಂದನರಿಯದೆಮಂದಮತಿಯಾಗಿ ಕೆಡುತಲಿ ನಾನುಬಂಧನದ ಭವದ ಸಿಂಧುವಿನೊಳಗಾಡುತಿರ್ದೆನುನೊಂದು ಬೆಂದೆನುಮಂದಭಾಗ್ಯನ ಮಂದಮತಿಗಳುಒಂದು ಉಳಿಯದಂತೆ ಮಾಡೆನ್ನ್ಹøದಯ ಮಂದಿರದೊಳುನಿಂದುನೀನೆ ಮುಂದಕ್ಹಾಕಿದಿ ಮಂದರೋದ್ಧಾರ2ಮರುಳತನವನು ದೂರಮಾಡಿದಿ ಹರಿಯೆ ಎನ್ನಸರುವ ದುರ್ಗುಣ ತರಿದು ಹಾಕಿದಿ ಕರುಣದೆನ್ನದುರಿತಪರ್ವತಮೂಲ ಕಿತ್ತಿದಿ ಮರೆವು ಹರಿಸಿದಿಪರಮಕರುಣಾಕರನೆ ನಿನ್ನುಪಕಾರ ಮರಿಯೆನಾವಕಾಲದಿಪರರ ಬೇಡದಪದವಿನೀಡಿದಿಶರಣಜನಪ್ರಿಯ ಸಿರಿಯರಾಮ 3
--------------
ರಾಮದಾಸರು
ನಿನ್ನದೇ ಹಂಗೆನಗೆ ಶ್ರೀಹರಿನಿನ್ನದೇ ಹಂಗೆನಗೆ ಪನಿನ್ನದೇ ಹಂಗೆನಗುನ್ನತ ಸುಖವಿತ್ತುಮನ್ನಿಸಿ ದಯದಿಂದೆನನುದ್ಧರಿಸಯ್ಯ ಅ.ಪಜಿಹ್ವೆಗೆ ನಿಮ್ಮಯ ಧ್ಯಾನದ ಸವಿಸಾರವಿತ್ತಯ್ಯಾಭವಭವದಲ್ಲಿ ಪುಟ್ಟಿ ಜನಗೀಡೆನಿಸುವದಯದಿ ಪಿಡಿದು ಎನ್ನ ಭವಭಯಹರಿಸಿದಿ 1ವಿಸ್ತಾರ ತವಚರಿತ ಪಾಮರನ್ಹಸ್ತದಿಂ ಬರೆಸುತ್ತಅಸ್ತವ್ಯಸ್ತವೆಲ್ಲ ನಾಸ್ತಿ ಮಾಡಿ ನೀನೆಪುಸಿಯಾಗೆನ್ನಗೆ ಸ್ವಸ್ಥಪಾಲಿಸಿದಿ 2ಸದಮಲ ಶ್ರೀರಾಮ ಭಕುತಾಭಿ ಸದಮಲ ತವನಾಮಸುದಯದಿಂದೆನ್ನಯ ವದನದಿ ನಿಲ್ಲಿಸಿಸದಮಲವೆನಿಪ ಸಂಪದವಿಯ ನೀಡಿದಿ 3
--------------
ರಾಮದಾಸರು
ನಿನ್ನದೋ ನಿಖಿಲ ನಿನ್ನದೋಕುನ್ನಿ ಮನುಜರಾಧೀನೇನಿಲ್ಲ ಶ್ರೀಹರಿ ಪನೀನಿಟ್ಟ ರವಿಶಶಿಗಳುಹರಿನೀನಿಟ್ಟ ದಶದಿಕ್ಕುಗಳುಹರಿನೀನಿಟ್ಟ ಅಗ್ನಿಜ್ಯೋತಿಗಳುಹರಿನೀನಿಟ್ಟ ನದಿತಟಗಳು ಅಹನೀನಿಟ್ಟ ಚಳಿಗಾಳಿ ನೀಕೊಟ್ಟ ಮಳೆಬೆಳೆನೀನಿಟ್ಟ ಉತ್ಪತ್ತಿ ಸ್ಥಿತಿಲಯ ಸಕಲವು 1ನಿನ್ನ ಅಡಿಯೆ ಮಹಾಕ್ಷೇತ್ರಹರಿನಿನ್ನ ನುಡಿಯೆ ವೇದಮಂತ್ರಹರಿನಿನ್ನ ದೃಢವೆ ಸತ್ಯಯಾತ್ರೆಹರಿನಿನ್ನ ಬೆಡಗು ಸ್ಮ್ರತಿಶಾಸ್ತ್ರ ಅಹನಿನ್ನ ಅರಿವೆನಿತ್ಯನಿನ್ನ ಮರವೆಮಿಥ್ಯನಿನ್ನ ಕರುಣ ಎಲ್ಲ ಪ್ರಾರಬ್ಧಗಳ ಗೆಲವು 2ನಿನ್ನ ನಾಮವೆ ಕ್ಷೇಮಕವುಹರಿನಿನ್ನ ನಾಮವೆ ಭವಗೆಲವುಹರಿನಿನ್ನ ನಾಮವೆ ಚಾರುಪದವುಹರಿನಿನ್ನ ನಾಮದ ಬಲವೆ ಬಲವುಹರಿನಿನ್ನ ನಾಮ ಗಾಯತ್ರಿ ನಿನ್ನ ನಾಮತಾರಕನಿನ್ನ ನಾಮ ಭಕ್ತಿ ಯುಕ್ತಿ ಎನ್ನಯ್ಯ ಶ್ರೀರಾಮ 3
--------------
ರಾಮದಾಸರು
ನಿನ್ನನು ನಂಬಿದೆನು ನಾ ಸುಂದರ ಗೋವಿಂದನೇ | ಪನ್ನಗಾಶಯನಗೋಪಿಕಂದನೇ | ಮುಕುಂದನೆದುಷ್ಟರ ಶಿಕ್ಷಿಪಘೋರಕಾಲನೆ | ರಣಶೂರನೆ |ಶಿಷ್ಟರ ರಕ್ಷಿಪ ಭಕ್ತಪಾಲನೆ ಗುಣಶೀಲನೇ ಪಹೊಳೆವ ಮತ್ಸ್ಯಾವತಾರನೆನ್ನಿಸಿಇಳೆಯ ಭಾರವ ಕಳೆದನೆ ||ಜಲದಿವಾಸವಮಾಡಿಕೊಂಡು |ಜಲದಿನಾಲ್ದೆಸೆ ನಲಿದನೆ 1ಧರೆಯ ಬೆನ್ನಲಿ ಪೊತ್ತು ನೆಲಸಿದಕೂರ್ಮನೆ |ಸ್ಮøತಿಧರ್ಮನೇ ||ಶರದ ಸೇತುವೆ ಧರಿಸಿ ನಿಂದಾ |ಮರ್ಮವರಿತೇ | ಸುಶರ್ಮನೆ 2ರಸತಳದಿ ಕೆಸರೊಳಗೆ ಹೊರಳುವಹಂದಿಯೇ | ಭೂಮಿ ತಂದಿಯೇ ||ಬಸುರ ಬಗಿದಾ ಹೇಮನೇತ್ರನಕೊಂದೆಯೇ ಮಮ ತಂದೆಯೇ 3ಕಂಬದಲಿ ಮೈದೋರಿ ತರಳನ |ಪೊರೆದನೇ ನರಸಿಂಹನೇಕುಂಭಿನಿಯ ಬಾಧಿಸಲು ದುರುಳನ |ಕರುಳನೇ ಹರಿದೆಳದನೇ 4ಭೂಮಿಯಲಿ ಮೂರಡಿಯದಾನವ ಕೊಟ್ಟಾನೇಬಲಿಕೆಟ್ಟಾನೇವಾಮನನು ಎರಡಡಿಯ ತೀರಿಸಿ |ಮೆಟ್ಟುತಲಿವರಕೊಟ್ಟನೇ 5ಕೊರಳ ಕುತ್ತಿಯೆ ಮಾಲೆಮಾಡುತ್ತಾಹೆತ್ತವಳ ಕತ್ತರಿಸಿದೆ ||ಧರಣಿಪರ ಶಿರವದೆಭಾರ್ಗವ|ಸತ್ಯ ಭೂಮಿಯ ಸುತ್ತಿದೆ6ವನದಿ ರಾಮನ ಸತಿಯರಾವಣ ಕದ್ದನೇ ವಿಷ ಮೆದ್ದನೇ ||ವನದಿ ಕಪಿಗಳ ಕೂಡಿ ದೈತ್ಯರಕೊಂದನೆ ಸೀತೆಯ ತಂದನೇ 7ಸರಸಿಯಲಿ ಮೊರೆಯಿಡುವ ಗಜವ |ಕಾಯ್ದನೇ ಯಾದವನೇ ||ಧುರದಿ ಕಾಳಿಯ ಶಿರದಿ ನಲಿದ |ದೇವನೇ ಮಾಧವನೇ 8ಬತ್ತಲೆಯ ಬೌದ್ಧಾವತಾರನೆ |ಮೃತ್ಯು ತೆಕ್ಕಲ ಹೊಕ್ಕನೇ ||ಸತ್ಯ ಧರ್ಮವನರಿಯದಧರ್ಮರ |ಸೊಕ್ಕ ಮುರಿವನೆ ಪಕ್ಕನೆ 9, 10ಕಲಿಯುಗದ ಕಡುಪಾಪಿ ನರರನು |ಕಡುಗದಿಂದಲಿ ಕಡಿದನೇ ||ಕಾಲಭೈರವನಂತೆ ಕಲ್ಕ್ಯನು |ಕಿಡಿಯನುಗುಳುತ ಸುಡುವನೇ 11ದಾಸಜನರನು ಪೊರೆವಶ್ರೀನಿವಾಸನೇ | ಜಗದೀಶನೇ |ಶೇಷಶಯನನೆಂದೆನಿಪ |ಗೋವಿಂದನೇ | ಗುಣವೃಂದನೇ 12
--------------
ಗೋವಿಂದದಾಸ
ನಿನ್ನಯ ಬಲವೊಂದಿದ್ದರೆ ಸಾಕಯ್ಯ ಸೀತಾನಾಥ ಮಿಕ್ಕಅನ್ಯರ ಬಲವಿನ್ನ್ಯಾಕೆ ಬೇಕಯ್ಯ ಸೀತಾನಾಥ ಪತನ್ನ ಮುಖವ ಕಂಡ ಜನರಿಂ ಕೇಳ್ವುದಕಿಂತ ಸೀತಾನಾಥತನು ಉನ್ನತವಾದಂಥ ಕನ್ನಡ್ಯೊಂದೇ ಸಾಕೊ ಸೀತಾನಾಥತನ್ನಿಷ್ಟಗರೆವಂಥ ಸುರಧೇನೊಂದೆ ಸಾಕೊ ಸೀತಾನಾಥ ಮತ್ತುಇನ್ನು ಬನ್ನಬಡುತಾನಂತಾಕಳ್ಯಾಕೊ ಸೀತಾನಾಥ 1ವರಹೆಣ್ಣು ಹೊನ್ನು ಮಣ್ಣಿನಕಿಂತ ಸೀತಾನಾಥಸ್ಥಿರ ಸ್ಮರಿಸಿದ್ದನ್ನೀವಂಥ ಸುರತರೊಂದೆ ಸಾಕೊ ಸೀತಾನಾಥಪರಮಚಿಂತಾಮಣಿಯ ಸಾಧ್ಯವೊಂದೆ ಸಾಕೊ ಸೀತಾನಾಥಪರಿಪರಿಮಂತ್ರ ತಂತ್ರದಿ ಸಿದ್ಧಿಗಳ್ಯಾಕೊ ಸೀತಾನಾಥ2ಪಾಮರ್ಹಲವು ಬಂಧುಬಳಗ ಬಲದಕಿಂತ ಸೀತಾನಾಥ ಮಹಾಸ್ವಾಮಿಪ್ರೇಮವೆಂಬ ಪರುಷವೊಂದೆ ಸಾಕೊ ಸೀತಾನಾಥಕಾಮಿಸ್ಹಲವು ದೈವ ಭಜಿಸಲಿನ್ಯಾತಕೊ ಸೀತಾನಾಥ ಶ್ರೀರಾಮ ನಿಮ್ಮಯ ನಿಜ ಧ್ಯಾನವೊಂದೆ ಬೇಕೊ ಸೀತಾನಾಥ 3
--------------
ರಾಮದಾಸರು
ನೀ ದಯದಿ ನೋಡಿದರೆ ನಾ ಧನ್ಯ ಶ್ರೀರಂಗನೀ ಮುಖವ ತಿರುವಲು ನಾ ಪರದೇಶಿ ವಿಮಲಾಂಗ ಪವನಜಾಕ್ಷ ನೀ ಕೊಡಲು ಧನವಂತನೆನಿಸಿಹ್ಯದೀಜನರೊಳಗೆ ಘನವಂತನೆನಿಸಿಕೊಂಬೆಅನುಗಾಲ1ಹರಿನಿಮ್ಮ ವರಚರಣಕರುಣವಿರೆ ಧರೆಮೇಲೆದುರುವಾದಿಗಳ ಜೈಸಿ ನಿರುತನೆನಿಪಿಅನವರತ2ವರವೇದಸ್ಮøತಿಶಾಸ್ತ್ರ ಸ್ಥಿರದರಿವು ನಿಜಜ್ಞಾನವರಮುಕ್ತಿ ಲಭ್ಯತವಕರುಣದಿಂ ಶ್ರೀರಾಮ 3
--------------
ರಾಮದಾಸರು
ನೀನೆ ಕರುಣಿ ಗುರುವಾಸದೀನಬಂಧು ಭಕುತಪೋಷ ಪನೆರೆದು ಭಕುತಜನರುಸ್ಮರಿಪ ವರವ ನಡೆಸಿದರುಶನಿತ್ತು ದುರಿತರಾಸಿ ಪರಿಹರಿಸಿಪೊರೆವೆ ಸತತಪರಮಚರಿತ1ಒಪ್ಪಿ ಕಾಸುರುವ್ವಿಬಿಡದೆತಪ್ಪದೆ ಮೂರುಲೋಕದವರಿಂಕಪ್ಪಕೊಳ್ಳುವಿ ಅಸಮಲೀಲಅಪ್ಪ ತಿರುಪತಿತಿಮ್ಮಪ್ಪ2ಮಾರನಯ್ಯ ಮರಣದೂರಮೂರಜಗದ ಸಾರ್ವಭೌಮಧೀರ ಶ್ರೀರಾಮ ನಿಮ್ಮಪಾದವಾರಿಜದಾಸನೆನಿಸು ಎನ್ನ 3
--------------
ರಾಮದಾಸರು
ನೀನೆ ಪಾಲಿಸು ಕರುಣಾವಾರಿಧಿದೀನಜನರಾಧಾರ ಹರಿಯೆ ಪನಿನ್ನಾಧೀನವು ತೋರ್ಪುದೆಲ್ಲಮಾನವನ ಸ್ವಾಧೀನವೇನಿದೆನಿನ್ನ ನೆರಳಲಿ ಮೂರು ಜಗವುಭಿನ್ನವಿಲ್ಲದೆ ಬದುಕಿ ಬಾಳ್ವುದು 1ನಿನ್ನ ಸಹಾಯವಿಲ್ಲದೀಭವವನ್ನು ಗೆಲಿಯುವ ಸಾಧ್ಯದಾರಿಗೆನಿನ್ನ ಕೃಪಾಕಟಾಕ್ಷದಿಂದಲೆಮುನ್ನ ಹಿರಿಯರು ಧನ್ಯರಾದರು 2ಮತ್ರ್ಯಲೋಕಕ್ಕೆಳೆದು ತಂದೆನ್ನಮರ್ತುಬಿಡುವುದುಚಿತವೇನಯ್ಯನಿರ್ತಸುಖವಿತ್ತು ರಕ್ಷಿಸಭವಕರ್ತುಶ್ರೀಗುರು ರಾಮ ಪ್ರಭುವೆ3
--------------
ರಾಮದಾಸರು
ನೀನೆ ಭಕುತಾಭಿಮಾನಿ ಕರುಣಿ ಪಮರೆಬಿದ್ದ ಭಕುತರ ಪೊರೆಯಲು ತವಸಮಕರುಣಿ ದೇವರ ಕಾಣೆಧರೆಎರಡೇಳರೊಳ್1ಶಿಲೆಯನು ಪೆಣ್ಣೆನಿಸಿ ಕುಲದೊಳು ಕಲೆಸಿದಿಸಲಹಿದಿ ಗಜನ ಮಹ ವಿಲಸಿತಮಹಿಮ ಪ್ರಭು 2ಮೊರೆಯಿಟ್ಟು ಸ್ಮರಿಸುವ ಚರಣದಾಸನ ಆಸೆಕರುಣದಿಂ ಪೂರೈಸು ಪರತರ ಶ್ರೀರಾಮ 3
--------------
ರಾಮದಾಸರು
ನೀನೆ ಸ್ವತಂತ್ರ ಸರ್ವೇಶಧ್ಯಾನಮಾಳ್ಪದಾಸರ ಪ್ರಾಣ ಪಭುವನತ್ರಯದಿ ಬಿಡದೆ ಒಂದೇಸಮದೆ ದೃಢದಿ ವೇದಸ್ಮøತಿಭಯನಿವಾರಣನೆಂಬ ಬಿರುದುಜಯಭೇರಿ ನುಡಿಸುತಿಹ್ಯವು 1ರಂಗ ನಿನ್ನ ದಾಸಜನಕೆಭಂಗವೇನು ಭುವನತ್ರಯದಿಮಂಗಲಮಹಿಮ ಭಕುತಾಂತರಂಗ ಭಜಿಪೆಭಂಗಗೆಲಿಸು2ಮಾಯ ನಾಟಕವಾಡುವ ಮಹಮಾಯಾಮಹಿಮ ಶ್ರೀರಾಮ ತಂದೆಮಾಯಮೋಹಿಗಳಿಂದುಳಿಸಿ ಎನ್ನಕಾಯೊ ಕೈಯ ಪಿಡಿದು ಸತತ 3
--------------
ರಾಮದಾಸರು
ನೀನೇಕೊ ನಿನ್ನ ಹಂಗೇಕೊ - ನಿನ್ನ -ನಾಮದ ಬಲವೆನಗಿದ್ದರೆ ಸಾಕೊ ಪ.ಆ ಮರ ಈ ಮರವೆಂದೆನ್ನುತಿರೆ ರಾಮ - |ನಾಮವೆ ವ್ಯಾಧನ ಮುನಿಪನ ಮಾಡಿತು 1ನಾರಾಯಣೆನ್ನದೆ ನಾರಗನೆನ್ನಲು |ಘೋರಪಾತಕಿಯನು ನಾಮವೆ ಕಾಯ್ದಿತೊ2ತಂದೆ ಪ್ರಹ್ಲಾದನ ಬಾಧೆಯ ಪಡಿಸೆ - ಗೋ |ವಿಂದನೆಂಬ ಸಿರಿನಾಮವೆ ಕಾಯ್ದಿತೊ 3ಉತ್ತರೆಯು ಗರ್ಭದಿ ಸುತ್ತಲಸ್ತ್ರವಿರೆ |ಚಿತ್ತಜಪಿತ ನಿನ್ನ ನಾಮವೆ ಕಾಯ್ದಿತೊ 4ಕರಿಮಕರಿಗೆ ಸಿಲ್ಕಿ ಮೊರೆ ಇಡುತಿರುವಾಗ |ಪರಮಪುರುಷ ಹರಿನಾಮವೆ ಕಾಯ್ದಿತೊ 5ನಾರಿಯನೆಳತಂದು ಸೀರೆ ಸೆಳೆಯುತಿರೆ |ದ್ವಾರಕಾಪತಿ ನಿನ್ನ ನಾಮವೆ ಕಾಯ್ದಿತೊ 6ಹಸುಳೆ ಧ್ರುವರಾಯನು ಅಡವಿಗೆ ಪೋಪಾಗ |ವಸುದೇವಸುತ ನಿನ್ನ ನಾಮವೆ ಕಾಯ್ದಿತೊ 7ನಿನ್ನ ನಾಮಕೆ ಸರಿಯಾವುದ ಕಾಣೆನೊಪನ್ನಗಶಯನ ಶ್ರೀ ಪುರಂದರವಿಠಲ 8
--------------
ಪುರಂದರದಾಸರು