ಒಟ್ಟು 4759 ಕಡೆಗಳಲ್ಲಿ , 126 ದಾಸರು , 3131 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿನ್ನನು ನಂಬಿದೆನು ನಾ ಸುಂದರ ಗೋವಿಂದನೇ | ಪನ್ನಗಾಶಯನಗೋಪಿಕಂದನೇ | ಮುಕುಂದನೆದುಷ್ಟರ ಶಿಕ್ಷಿಪಘೋರಕಾಲನೆ | ರಣಶೂರನೆ |ಶಿಷ್ಟರ ರಕ್ಷಿಪ ಭಕ್ತಪಾಲನೆ ಗುಣಶೀಲನೇ ಪಹೊಳೆವ ಮತ್ಸ್ಯಾವತಾರನೆನ್ನಿಸಿಇಳೆಯ ಭಾರವ ಕಳೆದನೆ ||ಜಲದಿವಾಸವಮಾಡಿಕೊಂಡು |ಜಲದಿನಾಲ್ದೆಸೆ ನಲಿದನೆ 1ಧರೆಯ ಬೆನ್ನಲಿ ಪೊತ್ತು ನೆಲಸಿದಕೂರ್ಮನೆ |ಸ್ಮøತಿಧರ್ಮನೇ ||ಶರದ ಸೇತುವೆ ಧರಿಸಿ ನಿಂದಾ |ಮರ್ಮವರಿತೇ | ಸುಶರ್ಮನೆ 2ರಸತಳದಿ ಕೆಸರೊಳಗೆ ಹೊರಳುವಹಂದಿಯೇ | ಭೂಮಿ ತಂದಿಯೇ ||ಬಸುರ ಬಗಿದಾ ಹೇಮನೇತ್ರನಕೊಂದೆಯೇ ಮಮ ತಂದೆಯೇ 3ಕಂಬದಲಿ ಮೈದೋರಿ ತರಳನ |ಪೊರೆದನೇ ನರಸಿಂಹನೇಕುಂಭಿನಿಯ ಬಾಧಿಸಲು ದುರುಳನ |ಕರುಳನೇ ಹರಿದೆಳದನೇ 4ಭೂಮಿಯಲಿ ಮೂರಡಿಯದಾನವ ಕೊಟ್ಟಾನೇಬಲಿಕೆಟ್ಟಾನೇವಾಮನನು ಎರಡಡಿಯ ತೀರಿಸಿ |ಮೆಟ್ಟುತಲಿವರಕೊಟ್ಟನೇ 5ಕೊರಳ ಕುತ್ತಿಯೆ ಮಾಲೆಮಾಡುತ್ತಾಹೆತ್ತವಳ ಕತ್ತರಿಸಿದೆ ||ಧರಣಿಪರ ಶಿರವದೆಭಾರ್ಗವ|ಸತ್ಯ ಭೂಮಿಯ ಸುತ್ತಿದೆ6ವನದಿ ರಾಮನ ಸತಿಯರಾವಣ ಕದ್ದನೇ ವಿಷ ಮೆದ್ದನೇ ||ವನದಿ ಕಪಿಗಳ ಕೂಡಿ ದೈತ್ಯರಕೊಂದನೆ ಸೀತೆಯ ತಂದನೇ 7ಸರಸಿಯಲಿ ಮೊರೆಯಿಡುವ ಗಜವ |ಕಾಯ್ದನೇ ಯಾದವನೇ ||ಧುರದಿ ಕಾಳಿಯ ಶಿರದಿ ನಲಿದ |ದೇವನೇ ಮಾಧವನೇ 8ಬತ್ತಲೆಯ ಬೌದ್ಧಾವತಾರನೆ |ಮೃತ್ಯು ತೆಕ್ಕಲ ಹೊಕ್ಕನೇ ||ಸತ್ಯ ಧರ್ಮವನರಿಯದಧರ್ಮರ |ಸೊಕ್ಕ ಮುರಿವನೆ ಪಕ್ಕನೆ 9, 10ಕಲಿಯುಗದ ಕಡುಪಾಪಿ ನರರನು |ಕಡುಗದಿಂದಲಿ ಕಡಿದನೇ ||ಕಾಲಭೈರವನಂತೆ ಕಲ್ಕ್ಯನು |ಕಿಡಿಯನುಗುಳುತ ಸುಡುವನೇ 11ದಾಸಜನರನು ಪೊರೆವಶ್ರೀನಿವಾಸನೇ | ಜಗದೀಶನೇ |ಶೇಷಶಯನನೆಂದೆನಿಪ |ಗೋವಿಂದನೇ | ಗುಣವೃಂದನೇ 12
--------------
ಗೋವಿಂದದಾಸ
ನಿಲ್ಲಿಸಬೇಕೊ ಯಾದವರ ಹೊಲ್ಲಗುಣದವರನಿಲ್ಲಿಸಬೇಕೊ ಇವರ ಬಿಲ್ಲಿಗೆ ಅಂಜದವರಗೊಲ್ಲರು ನಮ್ಮ ಸರಿ ಅಲ್ಲವೊ ಧರ್ಮರಾಯ ಪ.ಒಡೆಯ ಧರ್ಮನು ಹರಿಯ ಅಡಿಗೆರಗುವೆÉನೆಂದನಡೆದು ಹೋಗಲುರಾಯ ತಡೆಯಬೇಕೆಂದ ಭೀಮ 1ಕಂಜನಾಭನ ಮನೆಯ ಎಂಜಲು ಬಳೆವವನರಂಜಿಸಿ ಕರೆಯಬ್ಯಾಡ ಅಂಜಿಕೆ ಏನು ಅವನ 2ಪಾರ್ಧನು ರಾಯಗೆ ಪಾರ್ಥಿಸಿ ಹೇಳಿಕೊಂಡಸಾರಥಿಯ ಕರೆಯೋದು ಕೀರ್ತಿ ಅಲ್ಲವೊರಾಯ 3ನಕುಲನುರಾಯಗೆ ಯುಕ್ತಿಲೆ ಹೇಳಿಕೊಂಡಸಖನಯ್ಯನ ಕುಶಲವು ಮುಖವ ಮಾಡಿದವನಲ್ಲೊ 4ಕೇಳಯ್ಯ ರಮಿ ಅರಸು ಗಾಳಿಸಿ ಬಯಸಿಕೊಂಡಬಹಳ ಮನ್ನಿಸ ಬ್ಯಾಡ ಹೇಳಿಕೊಂಡ ಸಹದೇವ 5
--------------
ಗಲಗಲಿಅವ್ವನವರು
ನೀ ಕೊಡೆ ನಾ ಬಿಡೆ ಕೇಳಯ್ಯ-ಹರಿ-|ಗೋಕುಲಪತಿಗೋವಿಂದಯ್ಯಪನೋಡುವೆ ನಿನ್ನನು ಪಾಡುವೆ ಗುಣಗಳ |ಕಾಡುವೆ ಬೇಡುವೆ ನಾಡೊಳಗೆ ||ಮೋಡಿಯ ಬಿಡು ಕೊಡು ಮೊದಲಿಗೆ ಬಡ್ಡಿಯ |ಕಾಡೊಳು ತುರುಗಳ ಕಾಯ್ದರಸನೆಹರಿ1ಎಂಟಕ್ಷರವಿವೆ ದ್ವಯಸಾಕ್ಷಿಗಳಿವೆ |ಗಂಟಿಗೆ ಮೋಸವೆ ದಾಸರಿಗೆ ||ಎಂಟುಂಟೆನಿಸುವೆ ಬಂಟರ ಬಾಯಲಿ |ತುಂಟತನವ ಬಿಡು ತುಡುಗರರಸೆ 2ಅಪ್ಪನೆ ಅಯ್ಯನೆ ಅಮರರಿಗೊಲಿದನೆ |ಸರ್ಪನೆ ಮೇಲೆ ಮಲಗಿಪ್ಪವನೆ |ಒಪ್ಪಿಸಿಕೊಟ್ಟರೆಪುರಂದರವಿಠಲನೆ |ಒಪ್ಪವ ತೋರುವೆ ಒಡೆಯನಿಗೆ 3
--------------
ಪುರಂದರದಾಸರು
ನೀ ದಯದಿ ನೋಡಿದರೆ ನಾ ಧನ್ಯ ಶ್ರೀರಂಗನೀ ಮುಖವ ತಿರುವಲು ನಾ ಪರದೇಶಿ ವಿಮಲಾಂಗ ಪವನಜಾಕ್ಷ ನೀ ಕೊಡಲು ಧನವಂತನೆನಿಸಿಹ್ಯದೀಜನರೊಳಗೆ ಘನವಂತನೆನಿಸಿಕೊಂಬೆಅನುಗಾಲ1ಹರಿನಿಮ್ಮ ವರಚರಣಕರುಣವಿರೆ ಧರೆಮೇಲೆದುರುವಾದಿಗಳ ಜೈಸಿ ನಿರುತನೆನಿಪಿಅನವರತ2ವರವೇದಸ್ಮøತಿಶಾಸ್ತ್ರ ಸ್ಥಿರದರಿವು ನಿಜಜ್ಞಾನವರಮುಕ್ತಿ ಲಭ್ಯತವಕರುಣದಿಂ ಶ್ರೀರಾಮ 3
--------------
ರಾಮದಾಸರು
ನೀ ಸಾಕದಿದ್ದರೆ ಸಾಕುವರಾರೊದಾಸಾಭಿಮಾನಿ ನೀನಲ್ಲದಾರೊ ಕೃಷ್ಣಾ ಪ.ನಿನ್ನವರನು ಬಾಧಿಸ ಬಂದ ಮೂರ್ಖರುಮುನ್ನೆ ದುರ್ಭಾಗ್ಯರಾಗಿ ಹೋದರುಕುನ್ನಿ ಕಚ್ಚಿದರಾನೆ ಅಳುಕುವುದೆ ರಂಗಎನ್ನ ನಂಬಿಕೆಯ ಮೂರುತಿ ಶ್ರೀನಿವಾಸ 1ಹಸಿದು ಮಳಲ ಮೆದ್ದವನಂತೆ ಕಂಗೆಟ್ಟುತೃಷೆಯಾಗಿ ಬಿಸಿಲ್ದೊರೆಗೋಡುವನಂತೆವಿಷಮ ಮಾನಿಸರನುಸರಿಸುವುದುಚಿತಲ್ಲಬಿಸಜದೇವಿಯರಸ ಸುದಾಮಘಭಂಗ2ಬಂಟರ ಮಾತ ಕೇಳದೆಭಾರತಾಳದೇನುಂಟು ಕಾರ್ಯವು ನಿನಗೆಲೆ ದಯಾಳುಕಂಟಕಜನಕಪಕಾರಿ ದೀನೇಶ ವೈಕುಂಠವಲ್ಲಭ ಪ್ರಸನ್ವೆಂಕಟ ಬಂಧು 3
--------------
ಪ್ರಸನ್ನವೆಂಕಟದಾಸರು
ನೀ ಸಾಹೆಯಾಗು ಯಮಗನುಗಾಲ |ಶೇಷಾದೇವರೆ ರೋಹಿಣಿ ಬಾಲಾ ಪಮೂರುತಿಯಲ್ಲಿ ಪುಟ್ಟಿ | ನಾರಾಯಣನ್ನ ಕೂಡಿ ||ಚಾರುಬದರಿಯಲ್ಲಿ ತೋರುತಿಹನೆ 1ದಶರಥನ ಮಡದಿ | ಬಸುರೀಲಿ ಜನಿಸೀದಿ ||ಕುಸುಮನಾಭನರ್ಚನೆ ಎಸಗಿದಿಯೋ 2ಪ್ರದ್ಯುಮ್ನಪರಿಯಂಕ| ರುದ್ರಾನಲಂಕಾರ ||ಭದ್ರ ಪ್ರದಾಯಕ ಭಕ್ತ ಪೋಷಾ3ನೀಲಾಂಬರವನುಟ್ಟ | ತಾಳಾಂಕಬಿನ್ನಪ||ಲಾಲೀಸೊ ನಿನ್ನವನೆಂದ ನಿಶಾ4ಪ್ರಾಣೇಶ ವಿಠಲನ | ಧ್ಯಾನದೋಳಿರುವಂತೆ ||ನೀನೊಲಿವದು ದೂರು ನೋಡದಲೇ 5
--------------
ಪ್ರಾಣೇಶದಾಸರು
ನೀನೆ ಕರುಣಿ ಗುರುವಾಸದೀನಬಂಧು ಭಕುತಪೋಷ ಪನೆರೆದು ಭಕುತಜನರುಸ್ಮರಿಪ ವರವ ನಡೆಸಿದರುಶನಿತ್ತು ದುರಿತರಾಸಿ ಪರಿಹರಿಸಿಪೊರೆವೆ ಸತತಪರಮಚರಿತ1ಒಪ್ಪಿ ಕಾಸುರುವ್ವಿಬಿಡದೆತಪ್ಪದೆ ಮೂರುಲೋಕದವರಿಂಕಪ್ಪಕೊಳ್ಳುವಿ ಅಸಮಲೀಲಅಪ್ಪ ತಿರುಪತಿತಿಮ್ಮಪ್ಪ2ಮಾರನಯ್ಯ ಮರಣದೂರಮೂರಜಗದ ಸಾರ್ವಭೌಮಧೀರ ಶ್ರೀರಾಮ ನಿಮ್ಮಪಾದವಾರಿಜದಾಸನೆನಿಸು ಎನ್ನ 3
--------------
ರಾಮದಾಸರು
ನೀನೆ ಪರಬ್ರಹ್ಮಾ ಸತ್ಯವು ನೀನೆ ಪರಬ್ರಹ್ಮಾ | ನೀನೆಪರಶಿವ ನೀನೆ ಪರತರ ನೀನೆಪರಮಪರನಿನ್ನಿಂದ ನೀನೈಪಅನೇಕ ಕೊಡಗಳೊಳುರವಿತಾ | ಅನೇಕನೆನಿಸಿರಲು |ಅನೇಕ ವಾಘಟಉಪಾಧಿಯಳಿಯಲು |ಅನೇಕವೆಲ್ಲವು ಒಬ್ಬನೇ ನೀನೈ1xmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'ಸರ್ವಾಲಂಕಾರಾ ಕರಗಲು ಸರ್ವವು ಬಂಗಾರಾ |ಸರ್ವ ಜಗವೆಲ್ಲವು ನಿನ್ನೊಳಗಿರುವದು |ಸರ್ವ ರಹಿತ ನಿಜ ಶರ್ವನೆ ನೀನೈ2ಮಾಯಾಅವಿದ್ಯೆಯೊಳು ಶಿವ ಜೀವ ಕಾಯವು ಬಂದಿರಲು |ಮಾಯಾಅವಿದ್ಯೆಯ ಪರದೆಯು ಅಳಿಯಲು |ಕೇವಲ ಅತಿ ನಿಜ ಶಂಕರ ನೀನೈ3
--------------
ಜಕ್ಕಪ್ಪಯ್ಯನವರು
ನೀನೆ ಭಕುತಾಭಿಮಾನಿ ಕರುಣಿ ಪಮರೆಬಿದ್ದ ಭಕುತರ ಪೊರೆಯಲು ತವಸಮಕರುಣಿ ದೇವರ ಕಾಣೆಧರೆಎರಡೇಳರೊಳ್1ಶಿಲೆಯನು ಪೆಣ್ಣೆನಿಸಿ ಕುಲದೊಳು ಕಲೆಸಿದಿಸಲಹಿದಿ ಗಜನ ಮಹ ವಿಲಸಿತಮಹಿಮ ಪ್ರಭು 2ಮೊರೆಯಿಟ್ಟು ಸ್ಮರಿಸುವ ಚರಣದಾಸನ ಆಸೆಕರುಣದಿಂ ಪೂರೈಸು ಪರತರ ಶ್ರೀರಾಮ 3
--------------
ರಾಮದಾಸರು
ನೀನೆಗತಿನೀನೆ ಮತಿ ನೀನೆ ಸ್ವಾಮಿನೀನಲ್ಲದನ್ಯತ್ರ ದೈವಗಳ ನಾನರಿಯೆ ಪನಿನ್ನ ಪಾದಾರವಿಂದದ ಸೇವೆಯನು ಮಾಡಿನಿನ್ನ ಧ್ಯಾನದಲಿರುವ ಹಾಗೆಮಾಡು||ನಿನ್ನ ದಾಸರ ಸಂಗದಿಂದ ದೂರಿಡದೆನಗೆಸನ್ಮಾರ್ಗವಿಡಿಸೊ ಜಗದೀಶ ಅಘನಾಶ 1ಕಮಲನಾಭಿಯೊಳು ಬೊಮ್ಮರ ಪುಟ್ಟಿಸಿದೆ ಹರಿಯೆಕಮಲಸಖಕೋಟಿ ಪ್ರಕಾಶ ಈಶಕಮಲಕರ ತಳದಿ ಅಭಯವನಿತ್ತು ಭಕುತರಿಗೆಕಮಲಾಕ್ಷನೆನಿಸಿದೆಯೊ ಕಮಲಾರಮಣನೆ 2ಶಿಶುಪಾಲ ದಂತವಕ್ತ್ರರ ಶಿರವ ಭೇದಿಸಿದೆಪಶುಪತಿಯ ಆಭರಣ ವೈರಿವಾಹನನೆ ||ಅಸುರಕುಲ ಸಂಹರಿಸಿ ಭಕ್ತಜನರನು ಪೊರೆದೆವಸುಧೇಶಸಿರಿಪುರಂದರವಿಠಲರಾಯಾ3
--------------
ಪುರಂದರದಾಸರು
ನೀನೇ ಅಚ್ಚುತ ನೀನೇಮಾಧವ|ಹರಿಗೋವಿಂದನು ನೀನೆ ||ನೀನೆಗತಿಯೆಂದು ನಂಬಿದ ದಾಸಗೆ |ಅಭಯಕೊಟ್ಟಾತನು ನೀನೆಪಜಲದೊಳು ಪೊಕ್ಕು ಮೈನಡುಗಿಸಿ ಭಾರವ |ತಳೆದಾತನು ನೀನೆ ||ಇಳೆಯ ಕದ್ದ ಸುರನ ದಾಡೆಯಿಂದ ಸೀಳಿ ಕಂಬ |ದೊಳು ಉದ್ಭವಿಸಿದೆ ನೀನೆ 1ಬಲಿಯ ಪಾತಾಳಕೆ ತುಳಿದೆಯೊ ನೀನು ಕೊ-|ಡಲಿಯ ಪಿಡಿದವನು ನೀನೆ ||ಜಲಧಿಯ ದಾಟಿ-ಅಸುರರ ಕಡಿದು |ಲಲನೆಯ ತಂದಾತ ನೀನೆ 2ಗೊಲ್ಲರ ಮನೆಯಲಿ ಬೆಣ್ಣೆಯ ಕದ್ದು |ಕಳ್ಳನೆನಿಸಿದವ ನೀನೆ ||ಬಲ್ಲಿದತ್ರಿಪುರದಿ ಬತ್ತಲೆ ನಿಂತು |ಒಳ್ಳೆ ಹಯವ ಹತ್ತಿದೆ ನೀನೆ 3ಪಾಂಡವರಿಗತಿ ಪ್ರಿಯನೆಂದೆನಿಸಿದ |ಪುಂಡರೀಕಾಕ್ಷನು ನೀನೆ |ಪುಂಡಲೀಕ ಪುರುಷೋತ್ತಮ ಮೂರುತಿ |ಪುರಂದರವಿಠಲನು ನೀನೆ 4
--------------
ಪುರಂದರದಾಸರು
ನೀನೇ ದಯಾಳು ನಿರ್ಮಲಚಿತ್ತ ಗೋವಿಂದನಿಗಮಗೋಚರ ಮುಕುಂದಪಜ್ಞಾನಿಗಳರಸು ನೀನಲ್ಲದೆ ಜಗಕಿನ್ನುಮಾನದಿಂದಲಿಕಾವದೊರೆಗಳ ನಾ ಕಾಣೆಅ.ಪಬಗೆಬಗೆಯಲಿ ನಿನ್ನ ಸ್ತುತಿಪೆನೊನಗಧರಖಗಪತಿವಾಹನನೆ ||ಮಗುವಿನ ಮಾತೆಂದು ನಗುತ ಕೇಳುತ ನೀನುಬೇಗದಿಂದಲಿ ಕಾಯೋ ಸಾಗರಶಯನನೆ 1ದಾನವಾಂತಕ ದೀನ ಜನ ಮಂದಾರನೆಧ್ಯಾನಿಪರ ಮನದೊಳು ಸಂಚರನೆ ||ಮೌನನಾದೆನು ನಿನ್ನ ಧ್ಯಾನಾನಂದದಿ ಈಗಸಾನುರಾಗದಿ ಕಾಯೊ ಸನಕಾದಿ ವಂದ್ಯನೆ 2ಮಂದರೋದ್ಧರ ಅರವಿಂದ ಲೋಚನ ನಿನ್ನ ||ಕಂದನೆಂದೆನಿಸೂ ಎನ್ನ ||ಸಂದೇಹವೇತಕೆ ಸ್ವಾಮಿ ಮುಕುಂದನೆಬಂದೆನ್ನ ಕಾಯೊ ಶ್ರೀಪುರಂದರವಿಠಲನೆ3
--------------
ಪುರಂದರದಾಸರು
ನುತಿಪ ಸುಜನರಿಗೆ ದೊರೆವೋನು ಕರುಣಿ ಪಕ್ಷಿತಿಯೊಳಗೆಮಣಿಮಂತಮೊದಲಾದತುಳ ಮಹಿಮನ ಸತತ ಸ್ಮರಿಸುವೆ ಅ.ಪತನುಜಸಂಭವ ದೇವಿಕಾಯನೋಡಿದನುಜಕೌರವರ ಕೊಂದನು ಭೀಮರಾಯಅಣುಗನೆನಿಸುತ ಘನದಿ ಮೆರೆದನು 1ರಾವಣಿಹಂತಕ ಹನುಮನೆನಿಸಿದೇವರೆಂತೆಂಬೊ ಸಂಕರನನಿರ್ಧೂಮದೇವಿ ಮೊರೆಯನುಕೇಳಿಕುರುಗಳಶೈವ ಶಾಸ್ತ್ರವ ಮುರಿದ ಮಧ್ವನು 2ನಗವೈರಿಮಗನಿಗೆ ನಿರುತ ಸಂತ್ರಾಣನಿಗಮವಾಕ್ಯದಿ ನಗುತ ಪೇಳಿದ 3
--------------
ಗುರುಜಗನ್ನಾಥದಾಸರು
ನೆಚ್ಚಬೆÉೀಡ ಭಾಗ್ಯವನು ಹುಟ್ಟುಗೊಂಡ ಮನುಜಾವೆಚ್ಚವಾಗಿ ಹೋಗುವುದು ಏಸೊಂದು ಬಗೆಯಲಿ ಪ.ಮುತ್ತು - ಮಾಣಿಕ - ನವರತ್ನದ ಗದ್ದುಗೆಯುಎತ್ತ ನೋಡಲು ಸಿರಿಕೋ ಎನುತಲಿಸತ್ಯ ಹರಿಶ್ಚಂದ್ರ ಮತ್ತೆ ಸುಡುಗಾಡಿನಲ್ಲಿಎತ್ತುವ ಹಣೆಯಕ್ಕಿ ಹಾಗದ ಕಾಸ 1ದೇವತೆಗಳ ಕೈಯ ಸೇವೆಯ ಕೊಳುತಿರ್ದರಾವಣನ ಬದುಕು ಮತ್ತೇನಾಯಿತು?ಜೀವದ ಪರಿಯರಿತು ನಾವು ದೊರೆಯೆಂಬುವುದೆಸಾವಿನ ಮನೆಹೊಕ್ಕು ಸಾಹಸ ಪಡಲೇಕೆ 2ಹದಿನೆಂಟುಕೋಟಿ ಧನ ಉದಯಕೆ ಬರುತಿರಲುಒದಗಿತೆ ಆ ರಾಶಿ ದಿನ ಕರ್ಣಗೆ ?ತುದಿ ಮಧ್ಯಾಹ್ನಕ್ಕೆ ದರಿದ್ರನೆನಿಸುವಇದರಿಂದ ಕಡೆಗಂಡರಾರು ಜಗದೊಳಗೆ ? 3ಬೆಳ್ಳಿಯ ಗಿಣಿಲು ಬಂಗಾರದಹರಿವಾಣಕುಳಿತಲ್ಲಿ ಕನಕದ ರಾಶಿಗಳುಗಳಿಗೆಗೆ ಈ ಭಾಗ್ಯ ಕಾಳಬೆಳುದಿಂಗಳುಉಳಿದವು ನಾ ಕಾಣೆ ಚಿರಲಕ್ಷ್ಮಿಯೆನಲು 4ಇಂತು ಈ ಪರಿಯಲನಂತರು ಹೋದರುಎಂತು ಪೇಳಲಿಅವರ ಪೆಸರುಗಳ ?ಚಿಂತಾಯತ ಶ್ರೀ ಪುರಂದರವಿಠಲನಸಂತತ ಪಾದಕಮಲವ ಭಜಿಸೊ ಮನುಜಾ 5
--------------
ಪುರಂದರದಾಸರು
ನೆಚ್ಚಿಕೆಯಿಲ್ಲದ ದೇಹ ನಂಬಬೇಡಿರೊ ಗಡಅಚ್ಯುತಾನಂತನ ಪಾದದಿಂಬು ಬೇಡಿರೊ ಪ.ದಿನಪನುದಯದಲೆದ್ದು ನಿತ್ಯಕರ್ಮವಜರಿದುದೀನ ವೃತ್ತಿಯಲಿ ಧನವನೊದಗಿಸಿದಿರೊವಿನಯವಿಲ್ಲದೆ ವೈವಸ್ವತನ ಭಟರೊಯ್ವಾಗಮನಸಿನ ಹವಣು ಸಂಗಡ ಬಾಹದೆ 1ಅರಿಯಾರು ವರ್ಗಾಳಿಗೊಳಗಾಗಿ ಸತಿಸುತರಪರಕಿಂದಧಿಕರೆಂದು ಬಗೆವರೇನೊಕರುಣವಿಲ್ಲದೆ ಯಾತನೆಗೆ ಪೊಗಿಸಿ ಬಡಿವಾಗತರುಣಿ ಸಂಪದವಾಗ ಸಹಾಯವಾಹದೆ 2ಮುನ್ನೇಸು ಜನ್ಮಗಳ ವೃಥಾ ಕಳೆದೆಯಲ್ಲದೆ ಪ್ರಸನ್ನವೆಂಕಟನ ಪದವಿಡಿಯಲಿಲ್ಲಚೆನ್ನಾಗಿ ಮರುತಮತವಿಡಿದು ನಡೆದರೆ ನಿಮ್ಮಮನ್ನಿಸಿ ಗತಿಗೊಡದಿಹನೆ ರಂಗ ನೋಡಿ 3
--------------
ಪ್ರಸನ್ನವೆಂಕಟದಾಸರು