ಒಟ್ಟು 5063 ಕಡೆಗಳಲ್ಲಿ , 120 ದಾಸರು , 3402 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹೂವಿನ ಚೆಂಡನಾಡುವ ಕಾಂತ ಭಾವಿಪರಿರುವರು ನೋಡುತ್ತ ಪ ಆಹ ದುಂಡುಮಲ್ಲಿಗೆ ಸಂಪಿಗೆ ಅ.ಪ ಅಂಬರದೊಳು ವರರಂಭೋರ್ವಶಿಯರು ಸಂಭ್ರಮದಿಂ ಪೂಮಳೆಗರೆವರ್ ಅಂಬುಜವಾಸಿನಿ ಕೇಶವರೆಂಬೊಲು ಕಂಬುಕಂದರಮೊಲ್ಲೆ ಹೂವಿನ ಚೆಂಡ 1 ತಾಳಮದ್ದಳೆ ವೀಣೆಯ ನುಡಿಸಿ ಗಾನವಗೈವರು ಗಂಧರ್ವರು ನೀನೀಗ ಜಾಲವಮಾಡದೆ ಜಾಜಿ ಶ್ರೀಶನ ಧ್ಯಾನಿಸಿ ಆಡು ಜಾಜಿಯ ಹೂವಿನಚೆಂಡ 2
--------------
ಶಾಮಶರ್ಮರು
ಹೃತ್ಪದ್ಮದೊಳಿದ್ದು ಹೃತ್ತಾಪಗಳ ಕಳೆಯೊ ಜೀ- ವತ್ಪಿತಾಮಹ ಜನಕನೇಪ ಮೃತ್ಪಿಂಡದಂತೆನ್ನ ಉತ್ಪತ್ತಿಗೆ ಕ- ಣ್ಣೆತ್ತಿ ನೋಡಲರಿಯಾ ಜೀಯಾ ಅ.ಪ ನಿತ್ಯ ನಿತ್ಯ ಜಗವೆಲ್ಲವು ನಿತ್ಯವು ನಿತ್ಯತ್ವವೆಲ್ಲ ಸರಿಯೇ ಏನಿದ್ದರೇನು ಅನಾದಿಕರ್ಮದ ಬವಣೆ ಬೆನ್ನಟ್ಟಿ ಬರುತಿರ್ಪುದ- ಜ್ಞಾನಾಂಧಕಾರದಿಂ ಧ್ಯಾನವನು ತಿಳಿಯದೇ ಕಾನನದೊಳಿಪ್ಪೆನೋ ಜ್ಞಾನಗಮ್ಯನೆಂದು ಸಾರುತಿದೆ ಶ್ರುತಿ ಶಾಸ್ತ್ರ ಜ್ಞಾನಗುರು ದೊರೆತಿಲ್ಲವೋ ಸಾನುರಾಗದಿ ನೀನೆ ಸಾಧನಕೆ ಕರುಣಿಸಿ ಧ್ಯಾನದಲಿ ಮನಸು ನಿಲಿಸೋ ಉಳಿಸೋ 1 ಬಂಧ ಮೋಕ್ಷಕೆ ಎಲ್ಲ ಮನವೆ ಕಾರಣವೆಂದು ಎಂದೆಂದಿಗು ಪೇಳುತಿಹರು ಸಿಂಧುಶಯನನೆ ಭವಬಂಧಮೋಚಕನೆಂದು ವಂದಿಸಿ ಪೊಗಳುವರೊ ಮಂದರೊದ್ಧರ ನಿನ್ನ ಮಂದಮತಿಯಿಂದಲಿ ವಂದಿಸಲು ನಾನರಿಯೆನೊ ಕಂದರ್ಪಜನಕ ನೀ ಮಂದಭಾಗ್ಯನ ಮನವ ನೋಯಿಸದೆ ನಿನ್ನ ಪದದಲ್ಲಿರಿಸೊ ಅಂದೆ ಎನ್ನಯ ಭವಬಂಧನಾಶವಾಗುವು- ದೊಂದೆ ನಿನ್ನನು ಬೇಡುವೆನೊ ಜೀಯ 2 ಜೀವರೆಲ್ಲರು ಗುಣತ್ರಯಾವರಣದಿಂದ ಕರ್ಮ- ಪ್ರವಹದೊಳಿಪ್ಪರೊ ಕವಿಸಿ ಮೋಹವ ನೀನು ಭವಕೆ ಕಾರಣವಹುದು ದೇವೇಶ ನಿನ್ನಾಟವೋ ಶ್ರವಣದಿಂದಲಿ ಭವಬಂಧಮೋಚಕನೆಂದು ತವ ಬಿರುದು ಸಾರುತಿದೇಕೋ ಭಾವ ಬಲ್ಲವರಾರೋ ಕಾವ ಕರುಣಿ ನೀನೆ ಭಾವಜನ ಪಿತನು ಅದೇ ಭವಪಾಶ ಬಿಡಿಸೆ ನಾ ಭಕುತಿಪಾಶದಿಂದ ಪಾದ ಬಿಗಿವೆನಯ್ಯ ಜೀಯ 3 ಸ್ವಾತಂತ್ರ್ಯವೆಲ್ಲಿಹುದು ಸ್ವಾಮಿತ್ವವೆಲ್ಲಿಹುದು ಅ- ಸ್ವತಂತ್ರನಾಗಿಪ್ಪೆನೊ ಕಾತುರದಿ ನಾ ಮಾಳ್ಪ ಕ್ರಿಯೆಗಳೆಲ್ಲವು ಎನ್ನ ಸ್ವಾತಂತ್ರ್ಯವೆಂದ್ಹೇಳುವೆ ನೀ ತಂತ್ರಿಯಾಗಿದ್ದೆನ್ನ ನಡೆಸುವುದನರಿಯೆ ಕು- ತಂತ್ರವನು ನಾ ಮಾಡುವೆ ಸ್ವಾ- ತಂತ್ರನು ನೀನು ಸೂತ್ರನಾಮಕ ದೇವ ಮಂತ್ರಿಯಾಗೀದೇವ ಯಂತ್ರ ನಡೆಸುವ ಎಂತಾದರಡಿಗಡಿಗೆ ಅತಂತ್ರನಾಗಿಹೆ ನಾನೇ ಭ್ರಾಂತಿಪರಿಹರಿಸಿ ಕಾಯೊ ಶೌರೇ 4 ಭಕ್ತಿ ಇಲ್ಲದೆ ನಿನ್ನ ಭಕ್ತನಾಗುವುದೆಂತೋ ಭುಕ್ತಮಾತ್ರನು ನಾನು ಮುಕ್ತರೊಡೆಯ ನೀನು ಯುಕ್ತಿತೋರಿಸು ಎನಗೆ ಭಕ್ತಾಪರಾಧಸಹಿಷ್ಣು ಶಕ್ತ ನೀನಹುದೊ ವೇದೋಕ್ತ ಮಹಿಮಾತೀತ ಸಕ್ತವಾಗಲಿ ನಿನ್ನ ಪದದಿ ಮನಸು ವ್ಯಕ್ತನಲ್ಲವೊ ಸರ್ವ ಸಾರಭೋಕ್ತನು ನೀನು ಭಕ್ತವತ್ಸಲ ಪುರುಷಸೂಕ್ತಮೇಯ ಅಪ್ರಮೇಯ ಯುಕ್ತಿಮಾತಲ್ಲಿದು ಭಕ್ತಿಪೂರ್ವಕ ನಿನ್ನ ಭಕ್ತ ಶ್ರೇಷ್ಠರ ಸೇವೆ ಕೊಟ್ಟು ರಕ್ಷಿಸೊ ದೇವಾ 5 ನಾದಕ್ಕೆ ಪರನಾಗಿ ವಾದಕ್ಕೆದೊರೆಯೇ ನೀ ವೇದವೇದಾಂತವೇದ್ಯ ಸಾಧನವು ಕಾಣೆ ಸಾಧನಶರೀರವಿದು ಸಾದರದಿ ಕರುಣಿಸಿದೆ ಅನಿರುದ್ಧದೇವ ಬಾಧಿಪುದು ಬಂಧಗಳು ಅನಾದಿಕರ್ಮದಿ ಬಂದು ನಾ ಅಧಮತಮಸಾಧನವನ್ನೆಸಗಿದೆ ನೀ ದಯಾಸಿಂಧು ಎಂದಡಿಗಡಿಗೆ ಬೇಡುವೆನು ಕೃದ್ಧನಾಗದೆ ಇನ್ನು ಉದ್ಧರಿಸು ತಂದೇ ಎಂದೇ 6 ಶಂಖಚಕ್ರಾಂಕಿತನೆ ಮಂಕುಬುದ್ಧಿಯ ಬಿಡಿಸೋ ಅಂಕಿತವೆನಗೆ ಇಲ್ಲ ಅಂಕೆ ಇಲ್ಲವೊ ನಿನ್ನ ನೆನೆಹುದಕೆ ಎಂದಿಗೂ ಶಂಕೆಯ ಪಡುವನಲ್ಲ ವೇಂಕಟಾದ್ರಿಯ ವಾಸ ಶ್ರೀ ವೇಂಕಟೇಶನು ಮಮಕುಲಸ್ವಾಮಿ ದೈವವೆಂದನುದಿನ ಸಂಕಟಾಗಾಮಿಗಳ ಕಂಟಕವ ಹರಿಸಿ ಪದ ಪಂಕಜದಿ ಮನವ ನಿಲ್ಲಿಸೋ ಬಿಂಕದ ಮಾತಲ್ಲ ಪಂಕಜದಳಾಯತಾಕ್ಷ ಅಕ- ಳಂಕಮಹಿಮ ಕಾಯೋ ಜೀಯಾ7
--------------
ಉರಗಾದ್ರಿವಾಸವಿಠಲದಾಸರು
ಹೃದಯಾಧಿವಾಸಾ ಚಿನ್ಮಂiÀi ಪಾವನ ಅವನೆ ದೇವಾಧಿದೇವ ಮೂರು ಕಾಲದ ಸಾಕ್ಷಿ ಪರಮಾತ್ಮನೇ ಅವನೇ ಜಗದಾಧಿವಾಸ ಪ ಆಕಾರದೊರ ಏಕಾಂತಪೂರ ಏಕಾಂತಘನಪೂರ ತಾ ನಿರ್ವಿಕಾರ ಮನೋವಾಣಿದೂರ ಮನೋವಾಣಿಗೆದೂರ ಜಗಕೆಲ್ಲ ಆಧಾರ ತಾನಾಗಿಹ ಇವನೆ ಪರಮಾತ್ಮ ಈಶ ಹೃದಯಾಧಿವಾಸ 1 ಮನವೆಲ್ಲ ಉಡುಗಿ ಅನಿಸಿಕೆಯಡಗಿ ಅನಿಸಿಕೆ ತಾನಡಗಿ ತನಿನಿದ್ರೆಯಲ್ಲಿ ಇವು ಎಲ್ಲ ಮುಳುಗಿ ತಾನೇ ತಾನಾಗಿರ್ದ ಚಿನ್ಮಾತ್ರನೆ ಅವನೆ ಆನಂದರೂಪ ಹೃದಯಾಧಿವಾಸ 2 ಅವನೇ ನಾನೆಂದು ತಿಳಿ ಈಗ ನಿಂದು ಜಗವೆಲ್ಲ ಕನಸೆಂದು ಪರಮಾರ್ಥ ಸತ್ಯ ಶ್ರೀನಾರಾಯಣ ಇವನೇ ಗುರುಶಂಕರೇಶ ಹೃದಯಾಧಿವಾಸ 3
--------------
ಶಂಕರಭಟ್ಟ ಅಗ್ನಿಹೋತ್ರಿ
ಹೆಂಗಳೆಯರು ನಾವು ರಂಗೈಯ್ಯ ಮಾನಂಗಳ ಕಾಯಬೇಕೋ ಭಂಗ ಬಡುವೆವು ಮಂಗಚೇತನದಂಬಿಗನು ವಾಸಂಗಳನು ನೆರೆ ಸೆಳೆದಿಹಾನು ಪ ಗೋಪಿವೃಂದವು ಕೂಡಿ ಚಿತ್ತದ ಸಂತಾಪ ನೀಗಲು ಮಾಡಿ ತೋಷಗೊಳಿಸಲು ಪಾಪಿಯಂಬಿಗ 1 ಬಯಕೆಯಾ ಹಾರವನು ನಾವೆಲ್ಲರು ವಯನಾಗಿ ಕಟ್ಟಿದ್ದೆವೋ ಮಾಡ್ದೆವು ಮತಿಯು ಪೋದುದು ನಯನದಿಂದವುಗಳನೆ ನೋಡದೆ ಬಯಲುಮಾಡಿದೆವಿತ್ತೀಕಂಗೆ 2 ಎಷ್ಟು ಬಳಲುತಿಹೆವೊ ಶ್ರೀಕೃಷ್ಣ ನಿನ್ನಿಷ್ಟಕ್ಕೆ ಬಂದುದೇನೋ ಇಷ್ಟು ಪರಿಯಲ್ಪರಿವುದೇತಕೆ ಇಷ್ಟ ಮೂರುತಿ ಕೃಷ್ಣನೀಗಲೆ ದುಷ್ಟ ಅಂಬಿಗನಂಗ ತೊಲಗಿ ಶಿಷ್ಟ ನರಸಿಂಹ ವಿಠ್ಠಲಾದ 3
--------------
ನರಸಿಂಹವಿಠಲರು
ಹೆಡಗುಡಿ ಕಟ್ಟಿ ಹೊಡೆಯಿರಿ ಇವನ | ಬಡತನ ಸಂತರಿಗ್ಹೇಳುವನ ಪ ಸೆಡಗರದಲಿ ಸಂಸಾರವ ಮಾಡುತ ಬಿಡದಾಶೆಯಲೀ ಮರಗುವನ ಅ. ಪ ಅನ್ನವ ಬೇಡುವ ಅತಿಥಿಯು ಬಂದರೆ | ನಿನ್ನೆ ನಾ ಉಪವಾಸೆಂಬುವನ | ಅನ್ಯಾಯದಲಿ ಪಾಪವ ಗಳಿಸಿ |ನಾಯ್ ಕುನ್ನಿಯಂತೆ ಎಲ್ಲರ ಬೊಗಳುವನ 1 ವಸ್ತ್ರವ ಕೊಡು ಎಂದವರಿಗೆ ಹರಕೊಂ- | ದೊಸ್ತ್ರವ ತೆರೆದು ತೋರುವನ | ವೇಶ್ಯಾ ಸ್ತ್ರೀಯರ ಕಂಡರೆ ಕರೆದು | ಉತ್ತಮ ವಸ್ತ್ರವನೀಯುವನ 2 ಮಂತ್ರವ ಅರಿಯದೆ | ತಂತ್ರವ ಮಾಡುತ | ಅಂತರ ಪೂಜೆಯ ಅರಿಯದವನ | ಅಂತರಂಗದಿ ಭವತಾರಕನಂಘ್ರಿಯ | ಶಾಂತದಿಂದಲಿ ಧ್ಯಾನಿಸದವನ 3
--------------
ಭಾವತರಕರು
ಹೆದರಿಕೆ ಬರುತದೆಲೋ ಪದುಮಾಕ್ಷ ನಿನ್ನ ಮುಂದೆ ಹೇಳಿಕೊಳ್ಳಲು ಎನಗೆ ಪ ಹೆದರಿಕೆ ಬರುತಿದೆ ಜಗದ ಜನರು ನಿನಗೆ ವಿಧವಿಧದಾಡುವ ಸುದ್ದಿಯ ಪೇಳಲು ಅ.ಪ ಹಳಿವರು ಹೆಳವನೆಂದು ಅಂಜದೆ ನಿನಗೆ ತಲೆಯಿಲ್ಲದವನೆನುವರು ಇಲ್ಲದೆ ಹೊಟ್ಟಿಗೆ ಹುಲ್ಲುಮೆದ್ದವನೆಂದು ಹಲವು ಬಗೆಯಲಿ ಹೀಯಾಳಿಪುದ್ಹೇಳಲು 1 ದೃಢದಿ ಭಕುತಜನರು ಬೇಡಿದ ವರವು ಕೊಡಬೇಕಾಗುವುದೆನುತ ಓಡಿ ಹಾವಿನಮೇಲೆ ಪವಡಿಸಿದ ಮಹ ಕಡುಲೋಭಿಯೆಂದೆಂಬ ನುಡಿನಿನ್ನೊಳ್ಪೇಳಲು 2 ಒದೆಸಿಕೊಂಡ್ವೊಯ್ಕುಂಠದಿ ಶೇಷಾಚಲದಿ ಸದನಗೈದನುಯೆಂಬರು ಇದು ಅಲ್ಲದತಿ ವಿಧವಿಧ ಲೋಕ ಸುಲಿದರ್ಥ ನಿಧಿಗಳಿಸಿದ ಚಿನಿವಾರೆಂಬದ್ಹೇಳಲು 3 ಕುದುರೆಮಾವುತನೆಂಬರು ಎಲವೋ ರಂಗ ಕದನಗಡಕನೆನುವರು ಹದಿನಾರು ಸಾವಿರ ಸುದತಿಯರೊಶನಾದ ಸುಧೆಗಳಜಾರನೆಂಬ ವಿಧಿಯನ್ನು ಪೇಳಲು 4 ವಿಪಿನವಾಸಿಕನೆನುವರು ನಿಷ್ಕರುಣದಿ ನೀ ಕಪಿವರನ ತರಿದೆನುವರು ಕಪಟ ತಿಳಿಯುವರಾರು ಅಪರೂಪಮಹಿಮನೆ ಕೃಪಾನಿಧಿ ಶ್ರೀರಾಮ 5
--------------
ರಾಮದಾಸರು
ಹೆಮ್ಮೆಯಾ ಬಿಡು ಬಿಡು ಮನುಜಾ ಪ ಬೊಮ್ಮ ದೂರ್ವಾಸಾದಿಗಳೆಲ್ಲಾ | ಸುಮ್ಮನೆ ತಲೆವಾಗಿ ಹೋದರೆಂಬುದ ಕೇಳಿ ಅ.ಪ ಕಡಲೊಳು ಕುಳಿತಿಹ ಬಕದಾಲ್ಭ್ಯನೊಳು ಗರ್ವ | ನುಡಿಯಲಿ ತಾ ವಾಯು ವಶದಿಂದಲಿ | ತಡಿಯದೆ ಬಹುಮುಖ ಕಮಲಾಸನ ಕಂಡು | ಒಡನೆ ಲಜ್ಜಿತ ಬ್ರಹ್ಮನಾದ ನೆಂಬುದು ಕೇಳಿ 1 ತುಚ್ಛ ಮಾಡಿದ ಇಂದ್ರನೆಂಬ ಗರ್ವದಿ ಬಂದು | ಮತ್ಸರಿಸಲು ಅಂಬೃಷಿಯೊಡನೆ | ಅಚ್ಯುತನಾಯುಧ ಬೆನ್ನಟ್ಟಿ ಬರಲಾಗ | ಹುಚ್ಚಿಟ್ಟು ದೂರ್ವಾಸ ಹೋದನೆಂಬುದ ಕೇಳಿ 2 ಮೇರು ಗಿರಿಯ ಸಮವಾಗಿ ಸೂರ್ಯನ ರಥಾ | ದಾರಿ ಕಟ್ಟುವೆನೆಂದು ಬೆಳೆಯುತಲಿ | ಧೀರಗಸ್ತ್ಯನ ನುಡಿ ಕೇಳಿ ವಿಂದ್ಯಾದ್ರಿ | ಧಾರುಣಿಯೊಳಗೇ ನಾದನೆಂಬುದ ಕೇಳಿ 3 ಯಕ್ಷರಾಕ್ಷಸದೇವ ದ್ವಿಜರೊಳೆಮಗಸಮ | ಕಕ್ಷದಿ ನಿಲುವ ರರೆನುತಾ | ಭಿಕ್ಷುಕ ಯೋಗಿಯನುತಾ ಶಿವನೆಣಿಸದೆ | ದಕ್ಷ ಮನ್ಮಥರೇನಾದರೆಂಬುದ ಕೇಳಿ 4 ನಹುಷಾದಿ ರಾಯರು ಮೂಢ ಪಂಡಿತರೆಲ್ಲಾ | ಬಹುತರು ನಮ್ರವೃತ್ತಿಯ ತ್ಯಜಿಸಿ | ಮಹಿಪತಿಸುತ ಪ್ರಭು ವಲುಮೆಗೆ ದೂರಾಗಿ | ಅಹಂಕಾರ ಬಲಿಯೊಳು ಕೆಟ್ಟರೆಂಬುದ ಕೇಳಿ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹೆಳೆಲೆ ಸಖಿ ಘಮ್ಮನೆ ಸುಳಿದವನಾರೇ | ಕೇಳಮ್ಮ ಒಮ್ಮಿಂ ದೊಮ್ಮೆಲೆ ಕಂಡೆ ನಾನೀರೆ | ಒಲಿದು ಕರೆ ತಂದೆನಗಿನ್ನೊಮ್ಮೆ ದೋರೇ | ಚಲುವಿಕೆಯವನ ಉಸುರಲಾರೆ ಪ ಪದುಮ ಶಂಖ ಚಕ್ರಾಂಕಿ ತರುಣ ತಳದಾ | ಬಿದಿಗೆ ಚಂದ್ರಮನ ನೀಲಮಣಿಯಂತೆ ಹರಡಿನ ಪಾದಾ | ಚದುರ ನೂಪುರ ಗೆಜ್ಜೆ ರವದಾ 1 ಜಾನೂರು ಪೋಂಬಾಳೆ ಕಟಿ ತಟಾ | ಸುನಾಭಿ ತ್ರಿವಳಿಯ ಕೂಟಾ 2 ಕಿರಿಡೊಳ್ಳು ಮಧ್ಯ ಯಳೆ ವಾಸೆ ಹೃದಯಲಿ ಪದಕಾ | ಸಿರಿವತ್ಸ ಗ್ರೀವ ಕರ ಕಡಗ ತೋಳ ಬಂದಿ ಕುಂಡಲ ರನ್ನನೇಕಾ 3 ಕುರು ಮರಿಯಂದದಿ ಕದಪಿನಮುಖಾ | ಕಿರುನಗೆ ದಂತಾರ ನಯನ ಭ್ರೂತಿಲಕಾ | ನೊಸಲು ಕಸ್ತೂರಿ ತಿಲಕಾ 4 ತೆರಳಿದ ಬೆರಳುಂಗುರ ಸನ್ನೆ ಮಾಡುತಾ | ಗುರು ಮಹಿಪತಿ ನಂದನ ಪ್ರಭುನಿವಸತ್ಯ | ಧರಿಯೋಳಳಿವನ ಗಾಣಿ ಪರತಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹೇಳುತಿ ಕೇಳುತಿ ಏನಿಲ್ಲವೊ ಆಳಿದಾ ಊಳಿಗನ ಬಾಳಿವಿನ್ನೇನೊ ಪ ಭಾರ ಬೆನ್ನಲಿ ಪೊತ್ತು ದೂರದೊಳು ಮುಳುಗಿ ಭೂಭಾರ ನೆಗಹಿ ಧೀರ ಕರ್ಣವು ಮಂದವೊ ಹ್ಯಾಗೊ ತಿಳಿಯದು ಘೋರ ದೈತ್ಯನ ಕೊಲ್ಲೊ ಚೀರಾಟವೊ 1 ಮೇದಿನಿ ಪತಿಯ ತುತಿಸುವ ಭರದಿ ನೀ ಧನುರ್ವೇದಗಳನೋದಿಸುವ ನಿರ್ಭರವೊ ಕಾದÀುವ ರಾಕ್ಷಸರ ಕುಲದ ಕೂಗ್ಯಾಟವೊ ಮೋದದಿ ಗೋಪಿಯರ ಕೋಲಾಟವೊ 2 ಬತ್ತಲೆ ನಿಂತು ನುಡಿಯಲಿ ಬಾರದೊಯೆಂತೊ ಹತ್ತಿದ ವಾಜಿಯು ನಿಲ್ಲದೇನೊ ಇತ್ತ ಬಾರೊ ವಾಸುದೇವವಿಟ್ಠಲರೇಯ ಮತ್ತೆ ಹೇಳೊ ನಿಲ್ಲೊ ಬಾಯೆಂತಲೆನ್ನ 3
--------------
ವ್ಯಾಸತತ್ವಜ್ಞದಾಸರು
ಹೊಟ್ಟೆಪಾಡಿನ ಕೃತ್ಯವಲ್ಲವಿದು ವಿಠ್ಠಲನ ಸೇವೆ ಪ. ಶ್ರೇಷ್ಠ ಗುರುಗಳ ಆಜ್ಞೆಯಿಂದ ಮನ ಮುಟ್ಟಿ ನಡೆಸುವ ದಾಸವೃತ್ತಿಯು ಅ.ಪ. ವಂದನೆ ನಿಂದ್ಯಗಳನ್ನು ಗಮನಿಸದೆ ಇಂದಿರೇಶನ ಪದಕರ್ಪಿಸುತ ಮಂದಭಾಗ್ಯರ ಮಾತನೆ ಗಣಿಸದೆ ಬಂದ ಭಯಗಳ ದೂರೋಡಿಸುತಲಿ 1 ಆಶಪಾಶಗಳ ನಾಶಗೈಸಿ ಮನ ಕ್ಲೇಶಪಡದೆ ಸಂತೋಷಿಸುತ ವಾಸುದೇವ ಆನಂದಪೂರ್ಣ ಸ ರ್ವೇಶ ನಿನಗೆ ನಾ ದಾಸನೆಂತೆಂಬುದು 2 ಗೆಜ್ಜೆ ಕಾಲಿಗೆ ಕಟ್ಟಿ ತಾಳವ ಲಜ್ಜೆಯ ತೊರೆದು ಬಾರಿಸುತ ಮೂರ್ಜಗದೊಡೆಯ ಜಗಜ್ಜನ್ಮಾಧಿಕಾರಣನೆಂದು ಘರ್ಜಿಸುತಲಿ ಸಂಚಾರಮಾಳ್ಪುದೆ 3 ಇಂದು ನಾಳೆಗೆಂಬೋ ಮಂದಬುದ್ಧಿಯ ಬಿಟ್ಟು ಬಂದದರಿಂದಾನಂದಿಸುತ ತಂದೆ ಮುದ್ದುಮೋಹನದಾಸರ ಪದ ದ್ವಂದ್ವವ ಭಜಿಸುತ ಮುಂದೆ ಸಾಗುವುದು 4 ಗುರುಗಳ ಕರುಣದಿ ಅಂಕಿತ ಪಡೆಯಲು ದೊರೆವುದು ದಾಸತ್ವದ ಸಿದ್ಧಿ ಅರಿಯದೆ ವೇಷವ ಧರಿಸಿ ಮೆರೆದರೆ ಸಿರಿವರ ಮೆಚ್ಚನು ಗುರುವು ಒಲಿಯನು 5 ಉಚಿತ ಧರ್ಮಕರ್ಮಗಳನೆ ಮಾಡುತ ಖಚಿತ ಜ್ಞಾನ ಮನದಲಿ ತಿಳಿದು ವಚನದಿ ಹರಿನಾಮಗಳನೆ ನುಡಿಯುತ ಶುಚಿರ್ಭೂತರಾಗಿ ಆನಂದಪಡುವುದು 6 ದುಷ್ಟರ ತೊರೆದು ಶಿಷ್ಟರೊಳಾಡುತ ಶ್ರೇಷ್ಠವಾದ ದಾಸತ್ವದಲಿ ಬಿಟ್ಟು ಪ್ರಪಂಚವ ಸೃಷ್ಟೀಶ ಗೋಪಾಲ ಕೃಷ್ಣವಿಠಲನು ಶ್ರೇಷ್ಠದಿ ಭಜಿಪುದು 7
--------------
ಅಂಬಾಬಾಯಿ
ಹೊನ್ನು ಹೆಣ್ಣು ಮಣ್ಣು ಮಾಯೆಯದು ಮೂರು ರೂಪಗಳ ನಾನು ಪೇಳುವೆನು ಹೊನ್ನು ಹೆಣ್ಣು ಮಣ್ಣು ಎಂಬ ಮೂರವುಗಳ್ ಅವುಗಳನು ಹಂಬಲಿಸಿ ಕೆಡಬೇಡ ಮರುಳೆ ನೀನ್ ಅವುಗಳೇ ಮೃತ್ಯುವಿನ ಕಡೆಗೊಯ್ಯುವವುಗಳ್ 52 ಕಷ್ಟದಿಂ ಸೃಷ್ಟಿಯಲಿ ನಗ್ನತೆಯೆ ಸುಂದರವು ಕಷ್ಟದಿಂ ಮರಣದಲಿ ನಗ್ನತೆಯ ದೇಹ ಕಷ್ಟವಿಕ್ಕ್ಕೆಡೆಗಳಲಿ ನಾಸ್ತಿಸುಖ ಮಧ್ಯದಲಿ ಕನಕ ಕನಕವದೆಂದು ಹೊನ್ನ ಪೇಳುವರು53 ಮೋಹಿನಿಯು ತಾನಾಗಿ ದ್ಯೆತ್ಯರನು ವಂಚಿಸಿದ ಮೋಹಿನಿಯು ತಾನಾಗಿ ರುದ್ರ ವಂಚಿತನು ಮೋಹಿನಿಯು ತಾನಾಗಿ ಸುಂದೋಪಸುಂದ ವಧೆ ಮೋಹಿನಿಯು ಪೆಣ್ಣು ಮೋಸವದಲ್ತೆ ಮನುಜ? 54 ಮಣ್ಣಿನಿಂದಲೆ ಹರಿಯು ದೇಹವನು ಸೃಷ್ಟಿಸುವ ಮಣ್ಣೆ ಅನ್ನವದಾಗೆ ಪಾಲಿಸುವ ನಮ್ಮ ಮರಣಕಾಲದಲದುವೆ ಮಣ್ಣನಪ್ಪುವದು ತಿಳಿ ಮಣ್ಣಿಗಾಗಿಯೇ ನೀನು ಹಂಬಲಿಪೆಯೇಕೆ 55 ಪ್ರಾಣದೇವರೆ ನಿನ್ನ ಉಸಿರಾಟ ಕಾರಣರು ಪ್ರಾಣನುಸಿರಾಟವದು ಯಾರಿಂದಲಹದು? ಅವನೆ ಪರಮಾತ್ಮ ತಿಳಿ ದೇವಾಧಿದೇವನವ ನಿನ್ನ ಬಾಳಿಗೆ ಕಾರಣರು ಇಬ್ಬರಹರು56 ಸೂರ್ಯದೇವನು ನೇತ್ರತತ್ವಕ್ಕೆ ಒಡೆಯನವ ಸೂರ್ಯನದು ಕಣ್ಣು ಯಾರಿಂದ ತೋರುವುದು? ಅವನೆ ಪುರುಷೋತ್ತಮನು ಪರಮಾತ್ಮ ಹರಿಯವನು ಆ ವಿಶ್ವರೂಪಿಯೇ ವಿಶ್ವಧಾರಕನು57 ವಾಸದಿಂ ಬೆಳಗಿಸುವ ಕಾರಣದಿ ಭಗವಂತ ವಾಸುದೇವಾತ್ಮಕನು ಸೃಷ್ಟಿಮೂಲನವ ವಸುದೇವಪುತ್ರನಾಗವತರಿಸಿ ಸಿರಿವರನು ಉಡುಪಿಯಲಿ ಪೂಜೆಗೊಂಬನು ನಿಜವ ಪೇಳ್ವೆ 58 ಕೃತಯುಗದ ಭಾರ್ಗವನು ತ್ರೇತೆಯಲಿ ದಾಶರಥಿ ದ್ವಾರಪದ ಕೃಷ್ಣ ನೀನೇಯಿರುವೆ ದೇವಾ ಮಧ್ವವರದನು ನೀನು ಭಾರ್ಗವನ ನೋಡಲ್ಕೆ ಉಡುಪಿಗೇ ಬಂದಿರುವೆ ಪರಮಾತ್ಮ ನೀನು 59 ಪರಶುರಾಮ ಕ್ಷೇತ್ರ ಶ್ರೀಕೃಷ್ಣನ ಕ್ಷೇತ್ರ ಪದ್ಮನಾಭಕ್ಷೇತ್ರ ಶಂಕರಕ್ಷೇತ್ರ ಹಲವಾರು ದೇವತೆಗಳಿಲ್ಲಿ ನೆಲೆಗೊಳ್ಳುತ್ತ ಪಾವನವ ಗೈಯುವರು ಭೂಮಿಯನ್ನಿದನು 60 ತುಲೆಯಲ್ಲಿ ತೂಗಿದಾಗುತ್ತಮವದದರಿಂದ ತುಲು ದೇಶವಿದು ಜಗದಿ ವಿಖ್ಯಾತವಹುದು ತುಲು ಲಿಪಿಯೆ ಸರ್ವಮೂಲ ಗ್ರಂಥ ಲೇಖನಕೆ ವೇದಾದ್ರಿಯಾಯಿತಿದು ವೇದಾಂತಭೂಮಿ 61 ಮಧ್ಯಗೇಹದ ಭಟ್ಟರಿಂ ಸೇವೆಯ ಪಡೆದು ವಾಯುದೇವೋತ್ತಮನ ಮಗನಾಗಿ ಕೊಡಿಸಿ ಸಜ್ಜನರ ಹೃದಯದಲಿ ಮುಖ್ಯ ತತ್ವವ ತಿಳಿಸೆ ಸರ್ವಜ್ಞ ಮೂರ್ತಿಯನು ತಂದಿರುವೆ ದೇವಾ62 ಪರಶುರಾಮನ ರೂಪದಿಂ ನೀಂ ತಪಗೈದ ಪಾಜಕ ಕ್ಷೇತ್ರದಲಿ ಭಕುತನವತರಿಸೆ ಜ್ಞಾನರೂಪದ ನೀನು ಅವನ ಹೃದಯವ ಪೊಕ್ಕು ಮಧ್ವಮತವನು ನೀನು ಪಸರಿಸಿದೆ ಹರಿಯೆ 63
--------------
ನಿಡಂಬೂರು ರಾಮದಾಸ
ಹೊರಿಯೋ ನರಹರಿಯೆ ಧ್ರುವ ಕರುಣಾಗುರು ಜ್ಞಾನಸ್ಫುರಣ ಪರಮಪುಣ್ಯಚರಣ ಶರಣರಾಭರಣ 1 ದೂರ ಧರ್ಮದ ಸಹಾಕರ ಕರ್ಮ ಪರಿಹಾರ ನಿರ್ಮಳಾಕಾರ 2 ಧೀರ ಪರಮ ಉದಾರ ಕರುಣಾಸಾಗರ ಗುರು ಮುರಹರ 3 ಅರುಣ ಘನಕೋಟಿ ಕಿರಣ ದೀನ ಉದ್ಧರಣ ಆನಂದಪೂರ್ಣ 4 ದೇವ ದೇವ ಸಂಜೀವ ಭಾವಿಕರ ಕಾವ ಶ್ರೀವಾಸುದೇವ 5 ಮಾತಾ ಮಹಿಪತಿಯ ಪಿತ ದಾತ ನೀನೆ ಶ್ರೀನಾಥ 6
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹೋಗಿ ಗುಡಿಯೊಳಗುಂಡು ಬೇಗ ಬಾರೋಭೋಗಿ ವರ ಕಾಲಿಂಗ ನಾಗ ಮರ್ದನನೇ ಪ ಸರಸಿಜಾಸನ ಬ್ರಹ್ಮ ಸರಸತಿಯ ಒಡಗೂಡಿಸಿರಿ ರಮಣ ವೈಕುಂಠ ಗಿರಿವಾಸನೆಸುರ ನದಿಯ ಜಲದಿಂದ ಎರಡು ತುಳಸಿ ಗಂಧಪರಮ ಕುಸುಮಗಳಿಂದ ಪರಿಚರಿಸುತಲಿಹರು 1 ತರಣಿ ಸಹ ಬಂದಿಹನುಸುರರ ತರುಣಿಯರೆಲ್ಲ ನೆರಹಿಕೊಂಡಿಹರು2 ಸುಂದರಾಂಗಿಯು ಬಕುಲೆ ಮಿಂದು ಪಾಕವ ಮಾಡಿತಂದಿಹಳು ಕ್ಷಿರಾಬ್ಧಿ ನಂದನೆಯುಇಂದಿರೇಶಗೆ ಕಾಮಿತೊಂದೊಂದೆ ಬಡಿಸುವಳುನಂದ ಸುಕುಮಾರ ಗೋವಿಂದ ಗಜವರದಾ 3
--------------
ಇಂದಿರೇಶರು
ಹೋತಾರ ಪರುವಾಸ ಶ್ರೀ ಲಕ್ಷ್ಮೀಶಾ ಪ ಶ್ರವಣ ಮನನ ನಿದಿಧ್ಯಾಸನಗಳಿಂದ ಭವ ಪರಿಹಾರ ನಿಮ್ಮ ನಾಮ ಗೋವಿಂದ 1 ಭಕ್ತ ----------------------- ----------------ಭಜಿಸುವನೇಕ 2 ಪನ್ನಗಶಯನ ಸುಪನ್ನಗ ವಾಹನ ಹೆನ್ನೆವಿಠಲರಾಯ ಮೋಹನ 3
--------------
ಹೆನ್ನೆರಂಗದಾಸರು
ಹೌರನೆ ಮತಿಯಿತ್ತು ಸಲಬೇಕೆನ್ನ ಪ ಗೌರವ ಗಾತುರ ತೌರ ಮನೆಯ ಹರ ಕೌರವಾಂತಕನೊಳು ಶೌರಿಯ ತೋರಿಸೋ ಅ.ಪ. ಮೃಗಲಾಂಛನ ಸನ್ಮೌಳಿ ಶಿವ ಮಹಾದೇವ ತ್ರಿಗುಣಾತುವ ಗಾತುರ ಭಕ್ತ ಸಂಜೀವ ನಿಗಮತುರಗ ಪಾವ ವನಮಾಲ ಪಾವಾ ಮೃಗಪಾಣಿ ಮೃತ್ಯುಂಜಯ ಸುಪ್ರಭಾವ ನಗೆಪಗೆ ಮಗನನು ಮೃಗನೆವನದಿ ಕಾ ಅಗಣಿತ ಗುಣಮಣಿ ವಾಲಗ ನಿನ್ನವರೊಳು ಮಗಳೆ ಮಗುಳೆ ಕೊಡು ಗಗನೇಶ ಜನಕ 1 ಅವನಿಯೋಳ್ ಕೈಲಾಸ ವಾಸ ಅಪ್ರತಿ ನವ ವಿಧ ಭಕುತಿ ಕೊಡು ಶಂಭು ಪಶುಪತಿ ದಿವಸ ದಿವಸ ವೈಶ್ರವಣ ಬಾಂಧವ ದೇ ಹವೆ ನಿನಗೊಪ್ಪಿತು ಅವನಿಯೊಳುತ್ತಮ ಶ್ರವಣದೊಳಗೆ ರಾಘವನ ಕಥಾಮೃತ ಸವಿದೋರುವುದೋ ಭುವನ ಪವಿತ್ರ 2 ಅಜಭೃಕುಟ ಸಂಭೂತ ಭೂತಗಣೇಶ ಕುಂಡಲ ವಿಭೂತಿ ಭೂಪ ನಿಜ ಮಹಾ ಸ್ಮಶಾನವಾಸ ಉಗ್ರೇಶ ತ್ರಿಜಗಪಾವನ ಗಂಗಾಧರ ವಿಶ್ವೇಶ ಸುಜನರ ಹೃದಯ ಪಂಕಜದೊಳ್ ಮಿನುಗುವ ಗಜ ಪಾಲಕ ರಂಗ ವಿಜಯವಿಠ್ಠಲನಂಘ್ರಿ ಭಜನೆಯ ಕೊಡು ಭೂಭುಜ ದೇವೋತ್ತಮ ಗಜ ಅಜಿನಾಂಬರ 3
--------------
ವಿಜಯದಾಸ