ಒಟ್ಟು 15585 ಕಡೆಗಳಲ್ಲಿ , 137 ದಾಸರು , 6785 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೆನೆಸು ಮನವೆ ನಲಿವಿನಿಂದಲಿ ನೆನೆಸು ಮನವೆ ನಲಿವಿನಿಂದಲಿ ಮನಸಿಜನ್ನ ಪೆತ್ತ ಹರಿಯ ವನಜ ಚರಣವನ್ನು ಹೃ ದ್ವನಜದೊಳಗೆ ನಿಲಿಸಿ ನಗುತ ಪ ಪ್ರಳಯದಲ್ಲಿ ವರ ರಮಾ ಕ ಳವ ತಾಳಿ ಲೀಲೆಯಲ್ಲಿ ಪೊಳವ ಕಂಗಳಿಂದ ಕಿಡಿ ಗಳನು ತೋರಿ ಕುಣಿವುತ ಜಲಜ ಪೀಠ ಸುರಪ ಪುಲಿದೊ ಗಲ ವಸನ ಉಳಿದ ಸುರರ ಅಳಿದು ಏಕಮೇವನಾಗಿ ನಲಿವ ನಾರಸಿಂಹನೆಂದು 1 ಜರಾಮರಣರಹಿತ ಸುಜ ನರನ ಕಾಯ್ದು ಕರುಣದಲ್ಲಿ ಜರಿದು ಅದ್ರಿಯಲ್ಲಿ ದನುಜರನ್ನು ಶೀಳಿ ವೇಗ ನಿ ಪರಮನೆಂದೆನಿಸಿ ಚರಿಸುತಿಪ್ಪ ಅರುಣಪ್ರಭೆಗೆ ಕೋಟಿ ಮಿಗಿಲು ಪರಮಪುರುಷ ಸಿರಿಧರನ್ನ 2 ಕೆಡದೆ ಪರಮ ಭಕುತಿ ಮಾರ್ಗ ವಿಡಿದು ಗರ್ವವೆಂಬ ಕವಚ ದುರುಳ ಚೇತನಕ್ಕೆ ಕೊಡದೆ ಮನಸು ವಿನಯದಿಂದ ಕಡಲಶಯನನಾದ ಒಡಿಯ ವಿಜಯವಿಠ್ಠಲನ್ನ ಬಿಡದೆ ನುಡಿಯೆ ಬಂದ ಅವ ಘಡವ ದಾಟಿಸು ವೊಲಿದು ಕಾಯುವಾ3
--------------
ವಿಜಯದಾಸ
ನೆರೆ ಪ್ರಚಂಡ ಬರತಕದ ನಿರಗೊಡದ ಮನ್ಮಥನ ಪರಿಯನೆಲ್ಲ ಕೇಳು ಕೆಳದಿ ಸುರಪುರದ ಕರಿವರದ ಗರುಹಿದಡೆ ಮುತ್ತಿನ ಸರದ ಹಾರವ ನೀವೆ ಕೆಳದೀ ಪ ಸಸಿ ಬಿಂಬ ದೆಸೆ ತುಂಬಿ ಪಸರಿಸಿತೆಂಬುದನು ಪಿಕ ಕುಸುಮಾಂಬರಗೆ ಪೇಳೆ ಕೆಳದೀ ಮಸರೆಳೆಯದಸು ಬಿಳಿ ಯೆಸಳು ಕೇದಗೆಯಲರ ಹಸಮಾಡಿದನು ನಲಿದು ಕೇಳದಿ 1 ಅಸಿನನೆಯ ಹೊಸಮನೆಯ ಬಿಸುಗಣೆಯೆಂದಳೆಸೆಯೆಮಣಿಸಲುತರಹರಿಸುವುದುಕೆಳದಿ ಬಿಸಜಾಕ್ಷನ ನುಶಿಕ್ಷಣದಿ ತನು ಉಚ್ಚಿಕಡುಸುಡುತಲಿದೆ ನೀ ಸಾಕ್ಷಿ ಕೆಳದೀ 2 ತಂಬೆಲರ ಮುಂಬೆಲರ ಪಂಬೆಲರನುಳಿದು ಮರಿ- ದುಂಬಿಗಳ ಸಂಭ್ರಮದಿ ಕೇಳದ ಕೆಳದೀ ಬೆಂಬಿಡದೆ ಇಂಬುಗೊಂಡಂಬುಜಾಸ್ತ್ರವ ತುಡುಕಿ 3 ಪೊಂಬಲಕೆ ಕೊಳಗಾದೆ ಕೆಳದೀ ಪಣೆ ಯೆಂಬುವಗೆ ಕುಂಬಿನಿಯೊಳೇ ಮಣಿಹ- ದೆಂಬುದನು ಕೊಡಬಹುದೆ ಕೆಳದೀ 4 ನಂಬಿದಳು ಕಂಬನಿಯ ತುಂಬಿರಲು ಸಖಿಯರೊಳು ಗಾಂಭೀರ್ಯತನವಹುದೇ ಕೆಳದಿ ಕಂತುಶರವಂತಿರದೆಂತೊರೆಯಬಹುದೆನಗೆ ಚಿಂತೆ ತಲ್ಲಣ ಕೆಳದೀ 5 ದಂತಿ ನಡೆಯಂತೆ ಬೆಡಗಿಂತವಳ ಕಾಣೆ ಗುಣ ವಂತೆ ವಿಧಾನ್ಯಾಯದಲಿ ಸಂತೈಸಿ ಯೆನ್ನ ನೆರೆವಂತೆ ಸುರಪುರದ ಲಕ್ಷ್ಮೀ ಕಾಂತನಿಗೆ ಬಿನ್ನಯಿಸು ಕೆಳದೀ 6
--------------
ಕವಿ ಲಕ್ಷ್ಮೀಶ
ನೆರೆದು ಗೋಪಿಯರೆಲ್ಲರು - ಕೃಷ್ಣಯ್ಯನಕರವ ಪಿಡಿದುಕೊಂಡುಭರದಿಂದ ಬಂದು ಯಶೋದೆಗೆ ಚಾಡಿಯಅರುಹಿದರತಿ ವೇಗದಿ ಪ ಬಲು ಕಳ್ಳ ನಿನ್ನ ಮಗ - ಯಶೋದೆ ಕೇಳೆಹಾಲು ಕರೆಯುತಿರಲುತೊಲೆಗೆ ನಿಚ್ಚಣಿಕೆಯನೆ ಹಾಕದೆ ಸುರಿದನುನೆಲುವಿನ ಪಾಲ್ಮೊಸರ 1 ಅಮ್ಮಯ್ಯ ಇಲ್ಲ ಕಾಣೆ - ಇವಳು ಎನ್ನಸುಮ್ಮನೆ ದೂರುವಳೆಹಮ್ಮಿಂದ ನಾನವಳ ಅಟ್ಟಕ್ಕೆ ನೆಗೆಯಲುಬೊಮ್ಮ ಜಟ್ಟಿಗನೇನಮ್ಮ2 ಮತ್ತೆ ಮುತ್ತಿನಂಥ - ನಿನ್ನೀ ಮಗಹತ್ತಿ ಗವಾಕ್ಷದಿಂದಎತ್ತಿಟ್ಟ ಬೆಣ್ಣೆಯನೆಲ್ಲದ ಮೆದ್ದನುಹೆತ್ತ ಮಕ್ಕಳಿಗಿಲ್ಲದಂತೆ 3 ಗಡಿಗೆ ಬೆಣ್ಣೆ ಮೆಲ್ಲಲು - ಎನ್ನ ಹೊಟ್ಟೆಮಡುವು ಭಾವಿಯೇನೆಹುಡುಗರಿಗರಿಯದೆ ಎತ್ತಿಟ್ಟ ಬೆಣ್ಣೆಯಹೊಡೆದರವರ ಮಕ್ಕಳು 4 ಮರೆತು ಮಂಚದ ಮೇಲೆ - ನಾ ಮಲಗಿರಲುಹರಿವ ಹಾವನೆ ತಂದುಅರಿಯದಂತೆ ಬಂದು ಮುಸುಕಿನೊಳಗಿಟ್ಟುಸರಸರ ಪೋದನಮ್ಮ 5 ಹರಿದಾಡುವ ಹಾವನು - ನಾ ಹಿಡಿಯಲುತರಳ ನಾ ತಡೆಗಾರನೆಹರಕೆಯ ಹೊತ್ತುದನೊಪ್ಪಿಸದಿರಲುಗುರುತು ತೋರಲು ಬಂತೇನೊ6 ಕಕ್ಕಸ ಕುಚಗಳಮುಸುಕಿನೊಳಗೆ ಹಿಡಿದ 7 ಕೇಳು ಕೇಳೆಲೆ ಅವ್ವ - ಇವಳು ಬೇ-ತಾಳನಂತಿರುವಳುಬಾಲಕ ನಾನವಳುದ್ದಕೆ ನೆಗೆವೆನೆಜೋಲುವ ತೊಗಲಿಗಾಗಿ 8 ಮಕ್ಕಳು ಪಡೆದವರು - ಇಲ್ಲದ ಕಳವಿಕ್ಕಬಹುದೆ ಕೃಷ್ಣಗೆಸಿಕ್ಕ ತಪ್ಪು ಸಮೇತ ಎಳೆತಂದರೆತಕ್ಕ ಬುದ್ಧಿಯ ಹೇಳುವೆ 9 ಅಣುಘನರೂಪ ಕಾಣೆ - ನಿನ್ನೀ ಮಗಚಿನುಮಯ ರೂಪ ಕಾಣೆಘನ ಮಹಿಮನು - ಇಂಗಳಗೊಂದಿಯಚೆನ್ನಕೇಶವರಾಯ ಕಾಣೆ 10
--------------
ಕನಕದಾಸ
ನೆರೆನಂಬಿ ಬೇಡುವೆನೊ ಶ್ರೀಹರಿಯೆ ನಿನ್ನ ಪರಮ ಪರತರ ತವಬಿರುದುಗಳರಿದು ಪ ಪುರನಾಶಗೈದು ನೀ ಪುರಸತಿಯರ್ವ್ರತ ಕೆಡಿಸಿ ಪುರದೊಳಗೆ ತೋರಿದೆಲೋ ಪರಿಪರಿಯ ಲೀಲೆ ಕರುಣಿಸದ್ಯಸಮಸುಖ ಪರಮ ದಯಾನಿಧಿಯೆ 1 ಸತಿ ಅಹಲ್ಯಾದೇವಿಗೆ ಪತಿಯಿತ್ತ ಶಾಪವನು ಅತಿಹಿತದಿ ಪರಿಹರಿಸಿ ಗತಿಯಿತ್ತಿ ದೇವ ಕ್ಷಿತಿಜಾತೆಪತಿ ನಿನ್ನ ಪತಿತಪಾವನಪಾದ ನುತಿಪ ಭಕ್ತರಿಗೆ ಜವಮೃತ್ಯುಭಯತರಿವಿ 2 ಮೃಡಸಖ ಶ್ರೀರಾಮ ದೃಢದಿ ಭಜಿಪರ ಬೆಂ ಬಿಡದಿರ್ದು ಕಾಯ್ವಂಥ ಕಡುದಯದ ದೇವ ದೃಢದಿಂದ, ನಂಬಿದೆ ಒಡಲಾಸೆ ಪೂರೈಸು ಜಡಜಾಕ್ಷ ಕಡುದಯದಿ ಪಿಡಿಯೆನ್ನ ಕೈಯ 3
--------------
ರಾಮದಾಸರು
ನೆರೆನಂಬಿದವನೆ ಧನ್ಯಾ ಈ ಗುರುಪದ ಪ ನೆರೆನಂಬಿದವ ರಘತರಿವ ವೇದವ್ಯಾಸ ಕರ ಪಾದ ಅ.ಪ ವರಮಣಿಯೊಳು ಶಿರಿತನದಿಂದಲ್ಲಿ ಮೆರೆವ ನಾಯ ಕರ ಮಂದಿರದಿ ಜಾತರಾಗಿ ಪರಮ ಮಹಿಮರಾದ ಗುರು ರಘೋತ್ತಮರಿಂದ ಪರವಿದ್ಯೆಯನು ಪೊಂದಿ ಚರಿಸಿ ದಿಗಂತದಿ ವರವೇದ ವ್ಯಾಸರಿಂದ ತುರಿಯಾಶ್ರಮ ಪಡೆದು ಸಚ್ಚಿಷ್ಯರಿಂದÀ ಸಂತತ ಪ್ರವಚನ ಮಾಡುತಲಿ ಆನಂದ ತೀರ್ಥರ ಮತ ಶರಧಿಗೆ ಪೂರ್ಣ ಚಂದಿರನೆನಿ ಪರ ಪದ 1 ಯಾದವಾರ್ಯರಿಗೆ ಅಗಾಧ ಮಹಿಮರು ಈ ಪೂರ್ಣಬೋಧ ಗ್ರಂಥಾರ್ಥ ಗ್ರಂಥಗಳನ್ನು ಟೀಕಾ ಕೃ ಕೌವÀುುದಿಗಳನು ರಚಿಸಿದಂಥಾ ವಾದಿ ಮಾತಂಗ ಮೃಗಾಧಿಪರನ್ನು 2 ಕರೆದು ಶಿಷ್ಯರಿಗೆ ಹರಿ ಪಾದಂಗುಟದಿಂದ ಸುರನದಿಯನು ಸಾಕ್ಷಾ- ತ್ಕರಿಸಿ ತೋರಿಸಿದಂಥ ಗುರು ಕೃಷ್ಣದ್ವೈಪಾಯನ ತೀರ್ಥರಿಗೆ ಘನವಾದ ಮಹಿಮೆಯನಾ ಸುರತರು ಸಮ ಚರಣ 3 ವೃಂದಾವನದೆಡೆ ಒಂದು ಪ್ರದಕ್ಷಿಣಿ ವಂದನೆ ಮಾಡಲು ಮಂದನಾದರು ಪ್ರಾಜ್ಞನೆಂದು ಕರೆಸುವನು ವಂಧ್ಯೆಯಾದರು ಬಹುಕಂದರ ಪಡೆವಳುಸಂದೇಹವ್ಯಾಕಿಲ್ಲಿ ದೂರಮಾಡುತಲಿ ಆ ನಂದವ ಗರಿಯುವರ ಭಕ್ತರ ದುರಿತಾಂಧಕಾರಕ್ಕೆ ರವಿ ಯಂದದಲಿಪ್ಪರ 4 ವರಭೀಮಾತೀರದಿ ಪರಿಶೋಭಿಸುವ ಮಣಿ ಪುರದಿ ಪಂಡಿತ ಭೂಮಿ ಚರಣಾರಾಧಕರನು ಸುಮಂದಿರದಿ ಕುಳಿತು ನಿತ್ಯ ಮೂಲದಲಿ ಮೆರೆವ ಧೇನಿಸುತಿಪ್ಪ ಗುರುವೇದೇಶರ ಶುಭ ಚರಣ ಯುಗಲವ 5
--------------
ಕಾರ್ಪರ ನರಹರಿದಾಸರು
ನೆಲೆಗೊಂಡದೇನು ಮನಮೇಗಚಲಿಸುವೆ ನೀನು ಹಲವು ವಿಷಯದೊಳು ಪಸಿಲುಕಿದ ಬಗೆುಂದ ಹೊಲಬುದಪ್ಪಿತು[ಸಲೆ]ನಿನ್ನ ನಿಜವ ನೀ ಕಾಣು ಅ.ಪಗುರುವಿನಂಘ್ರಿಗೆ ನೀನು ನಮಿಸಿ ನಿನ್ನಮರವೆಯ ಭಾವವ ಕೆಡಿಸಿಕರಣವ ನಿಲುಕಡೆಗೊಳಿಸಿ ಬಹುಕರುಣವ ನಿನ್ನೊಳಗಿರಿಸಿಪರಮಾತ್ಮನಾಗ್ಯನ್ಯ ವಿಷಯಮೊಂದಲಾಶೆಪರಿದು ಭ್ರಾಂತಿಯಲೊಂದಿದ ಸುಖವ ಸೂಸಿ 1ಮನೆಯೊಂದು ನನಗಿಹುದೆಂದು ಅಲ್ಲಿಜನರೆಡೆಗೊಳೆ ದುಃಖ ಬಂದುಅನುಭವಿಪುದು ಯುಕ್ತವೆಂದು ಅದ[ಕನು]ಕೂಲವಾಗಬೇಕೆಂದುಅನುದಿನವನು ಸಂಧಾನದಿ ನಿಂದು ಗುರು ಕೊಟ್ಟಅನುಭವ ಬಯಲಾಗಿ ಭ್ರಮೆಗೆ ನೀ ಸಂದು 2ನೀನೊದು ಕೊಡಹೇಳಿ ಕೇಳಿ ಅಲ್ಲಿಹೀನತೆಯನು ಬಹುತಾಳಿದೀನರು ನೀವೆಂದು ಪೇಳಿ ಅನುಮಾನದ ಬಲು ಬಿರುಗಾಳಿಏನೆಂಬೆ ಬೀಸಲು [ತಾ] ನದರೊಳಗಾಳಿಜ್ಞಾನಹೋುತು ಭೇದ ಬುದ್ಧಿಯ ತಾಳಿ 3ಮಾಯಕವಾಗಿರೆ ಜಗವೂ ಬಹೂಪಾಯಗಳಿಂದ್ರಜಾಲಕವೂಆಯವರಿಯದದರಿರವೂ ತನ್ನತಾಯ ಕಾಣದ ಶಿಶುತನವೂಈಯಶೇಷವು ಸ್ವಪ್ನದನುಭವವಳಿವವುಬಾಯಮಾತಿನಜ್ಞಾನ ಕಪಟ ಸಂಭ್ರಮವೂ 4ಪರಮಾತ್ಮನೊಬ್ಬನಾಗಿಹನೂ ತಾನುಪರಿ ಪರಿ ರೂಪ ತೋರುವನುಅರಿತೆ ಭೇದವನಿದ ನೀನು ಬಹುಜರೆಯುತ ಗುಣದೋಷಗಳನುಗುರುವಾಸುದೇವರೂಪಿಲಿ ನಿನ್ನ ಕರವನುತಿರುಪತಿ ವೆಂಕಟ ಪಿಡಿಯೆ ಭ್ರಾಂತೇನು 5
--------------
ತಿಮ್ಮಪ್ಪದಾಸರು
ನೆಲೆಯಾಗಿ ನಿಲಿಸೆನ್ನ ನಿಲಯದಿ ಶ್ರೀಕಾಂತ ಸಿರಿ ಲಲನೆಯರೊಡಗೂಡಿ ಪ. ಸೂಕ್ತ ಪುರಾಣ ಭಾರತಗಳು ಪೊಗಳುವ ಭಕ್ತ ವತ್ಸಲತೆಯ ಬಹುಮತಿಯ ನಿತ್ಯ ಕೊಂಡಾಡುವ ಭೃತ್ಯಜನರ ಬೇಗ ಹೆತ್ತ ತಾಯಿವೊಲೆತ್ತಿ ಪಾಲಿಪ ಹರಿ 1 ವಿಧಿ ವಿಹಿತಗಳಾದ ಸದಮಲ ಕೃತಗಳ ಮುದದಿ ಮಾಡುವ ಸರ್ವ ಬುಧ ಜನರ ಸದನಕ್ಕೆ ಕರತಂದು ವಿಧವಿಧ ಪೂಜೆಯ ಒದಗಿ ಮಾಡುವ ಪೂರ್ಣ ನಿಧಿಮತಿಗಳನಿತ್ತು 2 ಬಂದ ಅತಿಥಿಗಳ ನಿಂದಿಸದಲೆ ಅಭಿ ವಂದಿಸಿ ಸತ್ಕರಿಸುತ ಫಲವ ಕುಂದಿಲ್ಲದಾನಂದ ಸಂದೋಹದಾಯಿ ಮುಕುಂದಗರ್ಪಿಸಿ ಸುಖದಿಂದ ಚರಿಸುವಂತೆ 3 ಅಹಿತಲ್ಪ ಶಯನನೀ ವಹಿಸಿದ ದಾಸರ ಸುರರು ಸಂಗ್ರಹಿಸುವರು ಕುಹಕ ವೈರಿಗಳನ್ನು ಬಹು ದೂರೋಡಿಸಿ ಮಹಾಮಹಿಮ ನೀ ಕರುಣದಿ 4 ಚತುರ ಹಸ್ತಗಳಿಂದ ಚತುರ್ವಿಧ ಫಲರಸ ಸ್ತುತಿಸುವ ದಾಸರೀ ಗತಿ ಬೇಗದಿ ಸತತ ಸುರಿವ ನಾಗಪತಿ ಗಿರಿನಿಲಯ ಶ್ರೀ ಪತಿ ನೀನೆ ಎನಗೆ ಸದ್ಗತಿಯಾಗಿ ಪೊಳವುತ್ತ 5
--------------
ತುಪಾಕಿ ವೆಂಕಟರಮಣಾಚಾರ್ಯ
ನೇತ್ರಾವತಿಯ ವಾಸಾ | ಪ್ರಮಥ ಪೋಷಾಸೂತ್ರತನಯನೆ ಕಾಯೊ | ಭಕ್ತ ಜನ ಪೋಷಾ ಪ ಲೌಕಿಕ ಕುಕರ್ಮಗಳ | ನಾಚರಿಸಿ ಬಲು ವಿಧಧಿಕಾಕು ಜನರಾ ಸಂಗ | ಬಳಸಿ ಭವದೀ |ಏಕಮೇವನ ಚರಣ | ತೋಕನೆಂದೆನಿಸದಲೆನೂಕಿ ಎನ್ನಾಯುಗಳ | ವ್ಯರ್ಥ ಕಳೆವೇ 1 ಕೃತ ತ್ರೇತ ದ್ವಾಪರದಿ | ವ್ಯಕ್ತನಾಗುತ ನೀನುಚತುರದೊಳಗೇ ಮಂಜು | ನಾಥನೆನಿಸೀ |ಕೃತಿಪತಿಯ ಸಚ್ಚರಣ | ಶತಪತ್ರ ಭಜಿಪರಿಗೆಗತಿ ತೋರಿ ಸನ್ಮುಕುತಿ | ಪಥಕೆ ಕೊಂಡೊಯ್ವೇ 2 ಯತಿವಾದರಾಜರಿಂ | ಹಿತದಿ ಕದರೀಯಿಂದಪೃಥುಕು ನೃಹರಿಯ ಶಿಲೆಯು | ಸ್ಥಿತ ಧರ್ಮಸ್ಥಳದೀಕೃತವು ವೈಷ್ಣವ ಪೂಜೆ | ಚತುರಯುಗ ಮೂರುತಿಯೆವಿತತ ಮಹಿಮನ ತೋರ್ವ | ಮತಿಮಾಡೊ ಶರ್ವಾ3 ವೈಕಾರಿಕಾದಿ | ಸಾಕಾರಿ ಮಹದೇವಕೈಕೊಳುತ ಮನ್ಮಾತ | ನೋಕರಿಸದೇ |ಪ್ರಾಕ್ಕು ಕರ್ಮವ ಕಳೆದು | ನೀ ಕೊಡುವುಧ್ಹರಿ ಭಕುತಿನಾಕಪತಿ ವಂದ್ಯ ಸ | ನ್ನಾಕನದಿ ಧರನೇ 4 ಗುಣ ಪೂರ್ಣನಾದ ಗುರು | ಗೋವಿಂದ ವಿಠಲ ಪದವನಜ ಬೇಡುವೆ ಮನದಿ | ಕರುಣಾನಿಧೇ |ಅನಲಾಕ್ಷ ನಿನ್ನೊಲಿಮೆ | ಇಲ್ಲನಕ ಗತಿಯಿಲ್ಲಬೆನಕ ಪಿತ ಮನಮಾನಿ | ಎನಗೊಲಿಯೊ ಶಿವನೇ5
--------------
ಗುರುಗೋವಿಂದವಿಠಲರು
ನೇಮವಿಲ್ಲದ ಹೋಮವೇತಕೆರಾಮನಾಮವಿರದ ಮಂತ್ರವೇತಕೆ ಪ ನೀರ ಮುಣುಗಲು ಏಕೆ ನಾರಿಯಳ ಬಿಡಲೇಕೆವಾರಕೊಂದುಪವಾಸ ಮಾಡಲೇಕೆನಾರಸಿಂಹನ ದಿವ್ಯನಾಮವನು ನೆನೆದರೆಘೋರ ಪಾತಕವೆಲ್ಲ ತೊಲಗಿ ಹೋಗುವುದು 1 ಅಂಬರವ ತೊರೆಯಲೇಕೆ ತಾಂಬೂಲ ಬಿಡಲೇಕೆಡಂಭಕದ ವೃತ್ತಿಯಲಿ ಇರಲೇತಕೆಅಂಬುಜನಾಭನನು ಭಾವದಲಿ ನೆನೆದರೆಇಂಬುಂಟು ವೈಕುಂಠವೆಂಬ ಪುರದೊಳಗೆ 2 ಬಂಧದೊಳಗೆ ಬಿದ್ದು ಹರಿಯನೆ ನೆನೆಯುತಿರೆಬೆಂದು ಹೋಗುವುವು ದುರಿತಂಗಳೆಲ್ಲಬಂದ ದುಃಖಗಳೆಲ್ಲ ನಿಲ್ಲದಲೆ ಕಳೆಯುವವುಚೆಂದಾಗಿ ನೆಲೆಯಾದಿಕೇಶವನ ನೆನೆಯೆ3
--------------
ಕನಕದಾಸ
ನೈವೇದ್ಯ ಸಮರ್ಪಣೆ ಸುಳಾದಿ ಸಿರಿ ದಧಿ ವರುಣಧನ್ಯ ಸುಗಂಧಿನೀ ವಾಮನ್ನರೂಪವನ್ನು ಚಿಂತಿಸು ಸೂಪಕೆ ಗರುಡ - ನೀರನ್ನ ತಿಳಿದು ಸುಂದರಿ ಶ್ರೀಧರನೆನ್ನುಪನ್ನಂಗಶಯ್ಯ ಗುರು ಗೋವಿಂದ ವಿಠಲನುಮನ್ನಿಸಿ ಕೈಗೊಂಡು ಉನ್ನತ ಪದ ಕೊಡುವ 1 ಹುಳಿ ತೊವ್ವೆಯಲಿ ಸೌಪರಣಿ ಮತ್ತೆ ಪ್ರತಾಪಓಲೈಸು ಸುಂದರೀ ಶ್ರೀಧರ ದೇವನ್ನತಿಳಿ ಪತ್ರ ಶಾಖಕೆ ಮಿತ್ರನೆಂಬಿನನಗಾಳಿ ದೇವನೆ ಸಾಧು ಅವನೊಳಗೆ ವಿದ್ಯಾಒಲಿಸು ಹೃಷಿಕೇಶ ದೇವನ್ನಫಲಶಾಖಕೆ ಶೇಷ ಶೂರಾಧಭಿನ ಸು-ಶೀಲಾದೇವಿ ಪದ್ಮನಾಭನ್ನ ತಿಳಿದುಹುಳಿ ಸೊಪ್ಪು ಗೊಜ್ಜು ಸಾರು ಇವುಗಳೊಳ್‍ಶೈಲಜೆ ಕಪಿ ಸಲಕ್ಷಣಾ ದಾಮೋದರತಿಳಿ ಅನಾಮ್ಲ ಸಪ್ಪೆ ಭಕ್ಷಗಳಲ್ಲಿ ರುದ್ರ - ಅ-ನಿಲನು ಜಗತ್ಪತಿ ಜಯಲಕ್ಷ್ಮೀ - ಇವಳಲ್ಲಿ ಶ್ರೀ ಜಯಾಪತಿಯ ಚಿಂತಿಸೆವಲಿವ ಗುರುಗೋವಿಂದ ವಿಠಲ ಆನಂದ 2 ಶರ್ಕರ ಗುಡ ಭಕ್ಷ ಇಂದ್ರನು ಮಹಾಬಲಲಕ್ಕೂಮಿಯಾ ರೂಪ ಶ್ರೀ ವಾಸುದೇವನು ಸೋ-ಪಸ್ಕರಕೆ ಗುರು ಆಕಾಶಾಶ್ರಯ ಮನೋಜವರಲೆಕ್ಕಿಸು ಕಮಲೆಯ ಪ್ರದ್ಯುಮ್ನ ದೇವನಮಿಕ್ಕ ಕಟು ದ್ರವ್ಯವು ಖಾರಕೆ ಯಮಧರ್ಮಸತ್ಕರಿಸೆ ಜಿತನ ಪದ್ಮಾನಿರುದ್ದರಸೊಕ್ಕವರರಿ ಗುರು ಗೋವಿಂದ ವಿಠಲಯ್ಯಸಿಕ್ಕಾ ಸುಳಿವ ಮುಂದೆ ಕಕ್ಕುಲಾತಿಯ ಸಲ್ಲ 3 ಅಚ್ಯುತ ದೇವನ್ನ ಚಿಂ-ತಿಸು ಉಪ್ಪು ಉಪ್ಪಿನಕಾಯಿ ನಿರಋತಿ ಚಿರಚೀವಿವಾಸುವು ಧನ್ಯಾದೇವಿ ಜನಾರ್ಧನನು ಫಲರಸವು ಫಲೋದಕ ಶೀಕರಣೀತ್ಯಾದಿರಸದೊಳ ಹಂಪ್ರಾಣ ಣ್ರಾಣನು ಆದ್ವಯರುಭಾಸಿಸುವಳು ವೃದ್ಧೀದೇವಿ ಉಪೇಂದ್ರನುದೋಷದೂರನು ಗುರು ಗೋವಿಂದ ವಿಠಲ ಪ್ರ-ಕಾಶಿಸುವನು ಬಿಡದೆ ಈಪರಿ ಗುಣಪರ್ಗೆ 4 ಸದನ ಯಜ್ಞಾದೇವಿಯರರಂಗನು ಹರಿ ರೂಪದಲ್ಲಿರುವನು ಉತ್-ತುಂಗ ಸ್ವಾದೋದಕದೊಳಗಿರುವನು ಬುಧನುಪಿಂಗ ಕಣ್ಣಿನ ಮತಿಮತನ ಸುಧಾದೇವಿಅಂಗಜನಯ್ಯ ಶ್ರೀಕೃಷ್ಣನ್ನಧೇನಿಸೆಗಂಗಾಜನಕ ಗುರು ಗೋವಿಂದ ವಿಠಲನುಮಂಗಳ ಕೊಡುವನು ಸಂದೇಹವಿಲ್ಲದೆ5 ಭೋಜನ ದ್ರವ್ಯದಿ ಯೋಚಿಸ್ಯಭಿಮಾನಿಗಳಭೋಜ್ಯ ಗುರು ಗೋವಿಂದ ವಿಠಲನೆ ಭೋಜಕ6
--------------
ಗುರುಗೋವಿಂದವಿಠಲರು
ನೊಂದು ಬಂದೆನೊ ಕಾಂತೇಶ | ಕೈಯನೆ ಪಿಡಿಯೊ ಮಂದಭಾಗ್ಯಳ ಜೀವೇಶ ಪ. ಅಂದು ಶ್ರೀ ರಾಮರ ಸಂದೇಶವನ್ನೆ ಭೂ- ನಿಂದನೆಗೆ ಅರುಹುತಲಿ ಬಹು ಆನಂದಪಡಿಸಿದ ವಾನರೇಶ ಅ.ಪ. ಶೌರಿ | ಭಕ್ತರ ಕಾಯ್ವ ದುರಿತದೂರನೆ ಉದಾರಿ ಚರಣಕ್ಕೆ ನಮಿಸುವೆ ಹರಿಗೆ ಪರಮಾಪ್ತನೆ ದುರಿತ ತರಿಯುತ ಪೊರೆಯೊ ಗುರುವರ ರಾಮಕಿಂಕರ 1 ಗುರುಕರುಣದ ಬಲದಿ | ಅರಿತೆನೊ ನಿನ್ನ ಚರಣ ನಂಬಿದೆ ಮನದಿ ಪರಿ ಭವಕ್ಲೇಶ ಪರಿಯ ಬಣ್ಣಿಸಲಾರೆ ಹರಿವರನೆ ದಯಮಾಡು ಶ್ರೀ ಹರಿ ದರುಶನವನನವರವಿತ್ತು 2 ಕಾಂತನ ಅಗಲಿರಲು | ಚಿಂತೆಯಲಿ ಭೂ ಕಾಂತೆ ವನದೊಳಗಿರಲು ಸಂತೋಷದಿಂ ರಾಮನಂತರಂಗವನರುಹಿ ಸಂತಸವಪಡಿಸುತಲವನಿಸುತೆಯ ನಿಂತೆ ರಾಮರಿಗ್ಹರುಷ ತೋರಿ 3 ದ್ರುಪದ ಸುತೆಯಳ ಕೀಚಕ | ದುರ್ಮನದಲಿ ಅಪಮಾನಪಡಿಸೆ ದುಃಖ ತಪಿಸಿ ನಿನ್ನನು ಬೇಡೆ ಆ ಪತಿವ್ರತೆ ಸತಿ ಕುಪಿತದಿಂದಲಿ ಖಳನ ಕೊಂದೆ ಅಪರಿಮಿತ ಬಲಭೀಮ ಪ್ರೇಮ 4 ಮಿಥ್ಯಾವಾದದ ಭಾಷ್ಯಕೆ | ಸುಜ್ಞಾನಿಗಳ್ ಅತ್ಯಂತ ತಪಿಸುತಿರೆ ವಾತಜನಕನಾಜ್ಞೆ ಪ್ರೀತಿಯಿಂದಲಿ ತಾಳಿ ಘಾತುಕರ ಮತ ಮುರಿದ ಮಧ್ವನೆ ಖ್ಯಾತಿ ಪಡೆದೆÀ ಸಿದ್ಧಾಂತ ಸ್ಥಾಪಿಸಿ 5 ಪ್ರಾಣಪಾನವ್ಯಾನ | ಉದಾನ ಸ ಮಾನ ಭಾರತಿ ಕಾಂತನೆ ಜ್ಞಾನಿಗಳಿಗೆ ಪ್ರೀತ ಜ್ಞಾನ ಭಕ್ತಿಪ್ರದಾತ ದೀನಜನ ಮಂದಾರ ಕಾಯೊ ದೀನಳಾಗಿಹೆ ಕೈಯ ಮುಗಿವೆ 6 ನೋಯಲಾರೆನೊ ಭವದಿ | ಬೇಗನೆ ತೋರೊ ಧ್ಯೇಯ ವಸ್ತುವ ದಯದಿ ವಾಯುನಂದನ ನಿನ್ನ ಪ್ರಿಯದಿಂ ನಂಬಿದೆ ಕಮಲ ದ- ಳಾಯತಾಕ್ಷನ ಮನದಿ ತೋರಿ7 ಹರಣ ನಿನಗೊಪ್ಪಿಸಿದೆ | ಸುರವಂದಿತ ಕರೆದು ಮನ್ನಿಸಿ ಕಾಪಾಡೊ ಸಿರಿವರನನು ಹೃತ್ಸರಸಿಜದಲಿ ತೋರೊ ಧರೆಯ ವಸ್ತುಗಳ್ ಮಮತೆ ತೊರೆಸು ಹರಿಯ ನಾಮಾಮೃತವನುಣಿಸು 8 ಈ ಪರಿಬಂದೆ ಅನಿಲ | ನಿನ್ನೊಳು ವಾಸ ಗೋಪಾಲಕೃಷ್ಣವಿಠ್ಠಲ ಶ್ರೀಪತಿ ಕೃಪೆಯಿಂದ ನೀ ಪ್ರೀತನಾಗುತ ಕೈಪಿಡಿದು ಸಂತೈಸು ಕರುಣದಿ ಭಾಪುರೇ ಕದರುಂಡಲೀಶ 9
--------------
ಅಂಬಾಬಾಯಿ
ನೊಂದು ಸಂಸಾರದೊಳಗೊಂದಿಸುವೆನೋ ಇಂದು ಮಾಧವ ಯಾದವ ಪ ಕರುಣಬಾರದೆ ನಿನಗೆ ಅಕಟಕಟ ಅಕಟಕಟ ಶರಣ ನಾ ನಿನಗಲ್ಲವೇ ಸ್ವಾಮಿ ನಿನ್ನ ಮೊರೆಹೊಕ್ಕೆ ಸರ್ವಾಂತರ್ಯಾಮಿ-ಎನ್ನ ಎರವು ಮಾಡುವರೇನೋ ಪ್ರೇಮಿ-ಇನ್ನು ಪರಿಹರಿಸು ಸಂಚಿತಾಗಾಮಿ-ಇದೇ ಸರಿಯೇನೊ ಜಗದೊಳಗೆ ಭಕುತವತ್ಸಲನೆಂಬ ಬಿರುದು ಪೊಳ್ಳಾಗದೇನೊ ನಿರುತ ಖ್ಯಾತ1 ಸತತ ಸುಖವುಳ್ಳರೆ ಬಾಯ್ದೆರೆದು ಪಲ್ಗಿರಿದು ನುತಿಸಿ ಬೇಡಿಕೊಂಬೆನೇ ನಿನ್ನ- ಮುಂದೆ ಗತಿಯ ಕಾಣದಲೆ ಚಾಲ್ವರಿದೆ ಭೇದ- ಮತಿ ಕೊಡದೆ ನೋಡುವುದು ಬರಿದೆ-ಸರ್ವ ಕ್ಷಿತಿಯೊಳಗೆ ನೀನೆಂದು ಅರಿದೆ-ವರ- ತತುವ ನಿಯ್ಯಾಮಕರ ಬಳಿ ಪಿಡಿದು ನಿನ್ನಂಘ್ರಿ ಶತಪತ್ರ ತೋರಿಸೈಯ್ಯಾ ಜೀಯಾ 2 ಶೃತಿಶಾಸ್ತ್ರ ಪೌರಾಣ ಭಾರತ ರಾಮಾಯಣ ಇತಿಹಾಸ ಪಾಂಚರಾತ್ರ ನಿಗಮ-ನಿನ್ನ ತುತಿಪ ಭಕುತರಿಗೆ ತಲೆಬಾಗಿ-ಕೊಂಡು ಪ್ರತಿದಿವಸದಲಿ ಚೆನ್ನಾಗಿ-ವಲಿದು ಅತಿಶಯವ ಕೊಡುತ ಲೇಸಾಗಿ-ವಿಘ್ನ ತತಿಕಳೆದು ನೀ ಬಂದು ಸಾರೆ ಬೆರಗಾಗುತಿದೆ ಪತಿತಿ ಪಾವನ ಮೋಹನ-ಚೆನ್ನ3 ತಡವ್ಯಾಕೆ ಗುಣಕಾಲ ಕರ್ಮದೇಶಗಳೆಲ್ಲ ವಡೆಯ ಎನ್ನಾಧೀನವೇ ಪೇಳೊ-ದು:ಖ ಬಿಡಿಸುವುದು ನಿನಗುಚಿತವಲ್ಲ-ಪಾಟು ಸಿರಿ ಲಕುಮಿನಲ್ಲ-ಒಂದು ನುಡಿವೆ ನಾನಾಂತರ್ಯ ಸೊಲ್ಲ-ಇಂತು ಕಡೆಮಾಡಿ ನೋಡದಿರು ದಿವಸ ಹಿಂದಾಗುತಿದೆ ಬಡವರಾಧಾರಿ ಕರುಣೀ-ದಾನಿ4 ಧ್ರುವನು ನಭದೊಳು ಇಲ್ಲಿ ರಾವಣಾನುಜ ಅಧೋ ಭುವನದಲಿ ಬಲಿರಾಯನ ನೋಡಿ, ನಾನು ತವಪಾದ ಗತಿಯೆಂದು ಬಂದೆ-ಮಹಾ ಭವಣೆ ಬಟ್ಟೆನೊ ಕೇಳು ಹಿಂದೆ-ಜಗದಿ ತ್ರಿವಿಧ ತಾಪಗಳಿಂದ ನೊಂದೆ-ಈ ಅವಸರಕೆ ಬಂದೊದಗಿ ನಿನ್ನ ನಾಮಾಮೃತದ ಸವಿದೋರೊ ದ್ವಾರಾವತಿಯ-ಜೀಯ 5 ಅಂಧಕೂಪದಲಿ ಬಿದ್ದವನ ನೋಡಿ ನಿನಗೆ ಚ ಕ್ಕಂದವಾಗಿದೆಯೊ ಕಾಣೆ-ನಾನು ಸಂದೇಹ ದ್ವೇಷದವನಲ್ಲ-ಇದು ಎಂದೆಂದಿಗೂ ಪುಸಿಯು ಅಲ್ಲ-ಹೃದಯ- ಮಂದಿರದೊಳು ಬಲ್ಲೆಯೆಲ್ಲ-ಸ್ವಾಮಿ ನೊಂದು ಕೂಗಿದರೆ ಎಳೆಗಂದಿಯೆಂಬಾ ಮಾತು ಇಂದು ಎತ್ತಲಿ ಪೋಯಿತೋ ತಾತ-ನೀತ 6 ಗುಣವಂತ ಬಲವಂತ ಜಯವಂತ ಸಿರಿವಂತ ಘನವಂತ ಧೈರ್ಯವಂತ ಶ್ರೀಕಾಂತ-ಎನ್ನ ಮನದ ದುಮ್ಮಾನವನೆ ಬಿಡಿಸೊ-ನಿನ್ನ ಅನವರತ ನಾಮವನು ನುಡಿಸೊ-ಮಧ್ವ ಮುನಿ ಕರುಣ ಕವಚವನು ತೊಡಿಸೊ-ಇದೇ ಜನುಮ ಜನುಮಕೆ ಬೇಡಿಕೊಂಬೆ-ಶರಣೆಂಬೆ ಪ್ರಣತ ಹೃದಯಾಬ್ಜ ತುಂಬೆ-ಕಾಂಬೆ 7 ಮಾನಸ್ನಾನವನುಂಡು ಮತಿಗೆಟ್ಟ ಪೂರ್ಣ ವಿ ಜ್ಞಾನಮಯನೆ ನಿನ್ನ ಮರೆದೆ-ಕರ್ಮ ಪ್ರಾಣೇಂದ್ರಿಯಂಗಳು ನಿನ್ನ ವಶವೊ-ಇಂಥ ಜಾಣತನ ಬಹಳ ಸಂತಸವೊ-ಹೀಗೆ ಮಾಣದಲೆ ಇಪ್ಪ ಸಾಹಸವೋ ಚನ್ನ ಜ್ಞಾನ ಭಕುತಿ ವಿರಕುತಿ ಕೊಟ್ಟು ನಿನ್ನವರೊಳಾನಂದದಲಿ ನಿಲ್ಲಿಸೈಯ್ಯ ಜೀಯ 8 ಶಂಖ ಚಕ್ರ ವರಾಭಯ ಹಸ್ತದಲಿ ನಿಂದ ವೆಂಕಟಾಚಲ ನಿವಾಸ ಶ್ರೀಶ-ನಿನ್ನ ಕಿಂಕರನ ಕಿಂಕರನೊ ನಾನು-ಅಕ- ಳಂಕ ಮನುಜನ ಮಾಡೊ ನೀನು-ಭವ ಸಂಕಟವ ಕಳೆಯಾ ಸುರಧೇನು-ಬೊಮ್ಮ ವಿನುತ ವಿಜಯವಿಠ್ಠಲ ಹರಿ- ಣಾಂಕ ಸೌವರ್ಣ ಪೂರ್ಣ ಸಂಪೂರ್ಣ 9
--------------
ವಿಜಯದಾಸ
ನೊಂದೆ ನಾ ಹರಿಯೆನ್ನದೆ ಪ ವೈರಿ ಷಡ್ವರ್ಗದಾಟಗಳಿಂದ ನೊಂದೆ ನಾ ಹರಿಯೆನ್ನದೆ ಅ ಮಾಸ ತಾಯುದರದಲಿಸಂದೇಹವಿಲ್ಲ ನವಮಾಸ ಮಲ ಮೂತ್ರದೊಳುಒಂದಾಗಿ ನಿಂದು ಕುದಿಕುದಿದು ಹುಟ್ಟಿಬಂದೆ ಎಂಬತ್ತು ನಾಲುಕು ಲಕ್ಷ ಯೋನಿಯೊಳುನೊಂದೆ ಮುನ್ನೂರ ಅರವತ್ತು ಬೇನೆಗಳಿಂದಒಂದು ಕ್ಷಣವೂ ಯಮನ ಬಾಧೆ ತಾಳಲಾರೆನುಹಿಂದೆಗೆಯದಿರು ಇಂಬಿತ್ತು ಕಾಯೊ ಮುರಾರಿ 1 ಎಲುವುಗಳ ಗಳ ಮಾಡಿ ಬಲು ನರಂಗಳ ಬಿಗಿದುಚೆಲುವ ತೊಗಲಂ ಪೊದಿಸಿ ಮಜ್ಜೆ ಮಾಂಸವ ತುಂಬಿಹೊಲೆ ಗೂಡಿನೊಳು ಪೊಗಿಸಿ ತಲೆ ಹುಳಕ ನಾಯಂತೆಅಲೆದು ಮನೆಮನೆಯೆದುರು ಉಚ್ಚಿಷ್ಟವನು ತಿಂದುಕಳವು ಹಾದರ ಪಂಚಪಾತಕಂಗಳ ಮಾಡಿನೆಲೆಯಿಲ್ಲದಧಿಕತರ ನರಕದೊಳಗಾಳ್ದೆನೈಒಲಿದು ಬಂದು ರಕ್ಷಿಸು ನಾಗವೈರಿ ವಾಹನನೆನಳಿನ ಲೋಚನನೆ ನೀ ಎನ್ನ ಕೈ ಬಿಡದೆ 2 ಹುಟ್ಟುವಾಗಲೆ ಜಾತಕರ್ಮ ಷೋಡಶವೆಂಬಕಟ್ಟಳೆಯ ದಿವಸದಲಿ ನಂಟರಿಷ್ಟರು ಕೂಡಿಕಟ್ಟಿ ಮುಂಜಿಯ, ಹರುಷದಲಿ ಮದುವೆ ಮಾಡಿ ಉಂ-ಡುಟ್ಟು ಹಾಡಿ ಹರಸಿದರು ನೂರ್ಕಾಲ ಬದುಕೆಂದುಬಿಟ್ಟು ಪ್ರಾಣಂ ಪೋಗೆ ಪೆಣನೆಂದು ಮೂಲೆಯೊಳುಕಟ್ಟಿ ಕುಳ್ಳಿರಿಸಿ ಹೊಟ್ಟೆಯ ಹೊಯ್ದುಕೊಂಡಳುತಸುಟ್ಟು ಸುಡುಗಾಡಿನಲಿ ಪಿಂಡಗಳನಿಕ್ಕಿ ಬಲುಕಟ್ಟಳೆಯ ಕಾಣಿಸಿದರಯ್ಯ ಹರಿಯೆ 3 ಹಲವು ಜನುಮದಿ ತಾಯಿ ಎನಗಿತ್ತ ಮೊಲೆಹಾಲುನಲಿನಲಿದು ಉಂಬಾಗ ನೆಲಕೆ ಬಿದ್ದುದ ಕೂಡಿಅಳೆದು ನೋಡಿದರೆ ಕ್ಷೀರಾಂಬುಧಿಗೆ ಎರಡು ಮಡಿಹಲವಾರು ಸಲ ಅತ್ತ ಅಶ್ರುಜಲವನು ಕೂಡಿಅಳೆದು ನೋಡಿದರೆ ಲವಣಾರ್ಣವಕೆ ಮೂರು ಮಡಿಎಲುವುಗಳ ಕೂಡಿದರೆ ಮೇರುವಿಗೆ ನಾಲ್ಕು ಮಡಿಸುಲಿದು ಚರ್ಮವ ಹಾಸಿದರೆ ಧರೆಗೆ ಐದು ಮಡಿನೆಲೆ ಯಾವುದೀ ದೇಹಕೆ ನರಹರಿಯೆ4 ಸತಿ ಇಂದು ಕಾಯ್ವರದಾರುದಂದುಗವನಿದನೆಲ್ಲ ನೀಬಲ್ಲೆ ನಾನರಿಯೆತಂದೆ ನೆಲೆಯಾದಿಕೇಶವನೆ ನಿನ್ನಯ ಪಾದದ್ವಂದ್ವವನು ಎಂದಿಗೂ ಬಿಡೆನು ಬಿಡೆನೊ 5
--------------
ಕನಕದಾಸ
ನೊಂದೆನೊ ಭವದೊಳಗೆ | ಗೋಪಾಲ | ಇಂದು ನೀ ಕಾಯಬೇಕು | ಗೋಪಾಲ ಪ ಸಿಂಧುಶಯನಯನ್ನ | ಕುಂದುಗಳೆಣಿಸದೆ | ಬಂದು ನೀ ಸಲಹಬೇಕೋ | ಗೋಪಾಲಅ.ಪ ನಾನಾಜನುಮದಿ | ನಾನಾರೂಪವ | ನಾನೆನಿತಾಂತೆನೋ | ಮಾನನಿಧೇ || ಹೀನಜನರ ಕೂಡಿ | ನಾನರಿಯದೆ ನಿನ್ನ | ಶ್ವಾನನಂತಾದೆನಲ್ಲೋ | ಗೋಪಾಲ 1 ಎಳೆಯತನದಿ ನಾ | ಬೆಳೆದೆನೊ ಲೀಲೆಯೋಳ್ | ಇಳೆಯಭೋಗಕೆ | ಮನವೆಳೆದಿತೊಪ್ರಾಯ || ಕಾಯ | ಬಳಲುವೆನಿಳೆಯೊಳಗೆ | ಗೋಪಾಲ 2 ಸಿರಿಯತನದಿ ನಾ | ಮರೆಯುತ ನಿನ್ನನು | ಪರಿಪರಿವಿಭವದಿ | ಮೆರೆದೆನೊ ಜೀಯ || ಸಿರಿಯು ತಾ ತೊಲಗಲು | ಹೆರರ ಹಾರೈಸಿದೆ | ಪೊರೆಯುವರಾರಿಹರೋ | ಕೃಪಾಳೋ 3 ಎನ್ನಪರಾಧ ಗ | ಳಿನ್ನು ಗಣನೆಯಿಲ್ಲ | ಉನ್ನತಮಹಿಮನೆ | ಘನ್ನಸಂಪನ್ನ || ಮುನ್ನಮಾಡಿದ | ಪರಾಧಗಳೆಣಿಸದೆ | ಮನ್ನಿಪರಾರಿಹರೋ | ಮುರಾರೆ4 ಆಶಪಾಶಂಗಳು | ಬೀಸಿದ ಬಲೆಯೊಳು | ಮೋಸದಿ ಸಿಲುಕುತೆ | ಘಾಸಿಯಾಗಿಹೆನೊ || ಶ್ರೀಶಕೇಶವ | ಯನ್ನಕ್ಲೇಶಗಳಳಿಯುತೆ | ದಾಸನೆಂದೆನಿಸೊ ನಿನ್ನಾ | ಗೋಪಾಲ 5
--------------
ಶ್ರೀಶ ಕೇಶವದಾಸರು
ನೋಡಯ್ಯ ನಿನ್ನ ದಾಸರ ಮೇಲೆ ಕೃಪೆಗಳನುಮಾಡಯ್ಯ ಮನ್ಮನಕೆ ಸಂತಸವನುತೀಡಯ್ಯ ಭವಭಯದ ಪಾತಕಂಗಳ ದಾನವಾಡ ಗುಡ್ಡದ ತಿರುಮಲೇಶ ಸರ್ವೇಶ ಪ ಆದಿಯಲಿ ವೇದಗಳ ಕದ್ದುಕೊಂಡೊಯ್ದವನಸಾಧನಂಗೆಯ್ವೆನೆಂದಾಕ್ಷಣದೊಳುಪೋದನೆಲ್ಲೆನುತ ಶರನಿಧಿಯೊಳಗೆ ಪೊಕ್ಕ ಮ-ತ್ತಾ ದಿತ್ಯನಂ ಕೊಂದು ತಿಕ್ಕಿಮುಕ್ಕೆನೀ ದಯಾ ಪಾತ್ರನೆಂಬುದ ಕೇಳಿ ನಾನರಿತೆಭೂ ಧರೆಯ ಸುರರ ನೀ ಸಲುಹಲಾಗಪೋದ ನಿಗಮಂಗಳನು ತಂದು ಸಲೆ ರಕ್ಷಿಸಿದೆಆದಿ ಮತ್ಸ್ಯವತಾರ ಶರಣೆಂಬೆನು 1 ಮೂರ್ತಿ ನೀನಂದು ಬೇರೆಸುಮತವನು ಬೆನ್ನಲ್ಲಿ ಸಲೆ ಆತು ರಕ್ಷಿಸಿದೆಕಮಠಮೂರುತಿ ನಿನಗೆ ಶರಣೆಂಬೆನು 2 ಚಿನ್ನಗಣ್ಣವನೆಂಬನೊರ್ವ ಖಳ ಭೂದೇವಿಕನ್ನಿಕೆಯನೊಯ್ಯುತಿರೆ ಕನಲಿ ಮನದಿಇನ್ನು ಅವನನು ಸೆಣಸಿ ಜಯಿಸುವವರನು ಕಾಣೆನೆನ್ನುತಲಿ ರೋಮಗಳನುಬ್ಬೆತ್ತುತತನ್ನ ಮುಂಗೋರೆಗಳ ಮಸೆದೊಡನೆ ರಕ್ಕಸನಬೆನ್ನಟ್ಟಿ ಬರಸೆಳೆದು ಸದೆದೊರಗಿಸಿಚೆನ್ನಾಗಿ ಧರಣಿಯನು ತಂದು ಸಲೆ ರಕ್ಷಿಸಿದೆಹನ್ನೆರಡು ಪೆಸರವನೆ ಶರಣೆಂಬೆನು3 ಹೇಮಕಶ್ಯಪನೆಂಬ ನಾಮಜನ ಸುತನೊರ್ವನಾ ಮಹಾಘನವೆಂದು ನೆನೆಯುತಿರಲುತಾಮಸದ ಖಳ ತನ್ನ ತನುಜನನು ಮಥಿಸುತಿರೆರಾಮನನು ತೋರೆಂದು ಬಾಧಿಸುತಿರೆಧೂಮಜ್ವಾಲೆಗಳೊಡನೆ ಭುಗುಭುಗಿಲು ಛಿಟಿಲೆನುತಆ ಮಹಾ ರಕ್ಕಸನ ಪೊಡೆಯ ಸೀಳಿಪ್ರೇಮದಲಿ ಪ್ರಹ್ಲಾದಗೊಲಿದು ಪಟ್ಟವನಿತ್ತೆಸಾಮಜಾರಿಯ ವದನ ಶರಣೆಂಬೆನು 4 ಬಲಿಯಧ್ವರದ ಸಾಲೆಗೊಂದು ವೇಷವನಾಂತುಸಲೆ ಬಂದು ಧರೆಯ ಮೂರಡಿಯ ಬೇಡೆಒಲಿದು ಇತ್ತಪೆನೆನಲು ಧಾರೆಯನೆರೆಯಲಸುರಕುಲಗುರುವು ಜುಳಿಗೆಯೊಳು ತಡೆದು ನಿಲಲುಸಲಿಲ ವರ್ಜಿತ ನಯನನನು ಮಾಡಿ ಆಕಾಶನೆಲವೆರಡು ಪಾದವನ್ನಳೆದ ಬಳಿಕತಲೆ ಮೇಲೆ ಇರಿಸೆನಲು ತಳಕಿಳಿಸಿ ಅವನ ಬಾ-ಗಿಲ ಕಾಯ್ದ ವಾಮನನೆ ಶರಣೆಂಬೆನು 5 ರೇಣುಕೆಯ ಬಸುರಿನಲಿ ಜನಿಸಿ ಪಿತನಾಜ್ಞೆಯನುಮಾಣಬಾರದು ಎಂಬ ಮತವ ಪಿಡಿದುಕ್ಷೂಣವಿಲ್ಲದೆ ತಾಯ ಶಿರವರಿದು ತಂದೆಯನುಪ್ರಾಣಹತ್ಯವ ಮಾಡಿದರ ಕುಲವನುಕ್ಷೋಣಿಗೆರಗಿಸಿ ಕಾರ್ತವೀರ್ಯಾರ್ಜುನನ ಮಡುಹಿಜಾಣತನದಲ್ಲಿ ಭೂದಾನಗಳ ಭೂಸುರರಕಾಣುತಲೆ ಕರೆಕರೆದು ಕೊಟ್ಟೆಯೈ ನೀನು ಪೂಬಾಣಜನಕನೆ ರಾಮ ಶರಣೆಂಬೆನು 6 ಸೀತೆಯನು ಕದ್ದು ಒಯ್ದವನ ಕೊಲ್ಲುವ ಭರದಿಭೂತಳದ ಕಪಿಗಳನು ಕೂಡಿಕೊಂಡುಸೇತುವೆಯ ಕಟ್ಟಿ ಶರನಿಧಿ ದಾಟಿ ಬರಲಾಗಭೂತಗಣ ಸಂತತಿಯು ನಡುನಡುಗುತಿರಲುಚೇತನದ ರಾವಣೇಶ್ವರ ಕುಂಭಕರ್ಣ ಸ-ತ್ತ್ವಾತಿಶಯ ರಕ್ಕಸರ ಇರಿದೊರಗಿಸಿಮಾತು ಲಾಲಿಸಿ ವಿಭೀಷಣಗೆ ಪಟ್ಟವನಿತ್ತದಾತ ರಘುನಾಥನೇ ಶರಣೆಂಬೆನು 7 ಶಕಟ ಕುಕ್ಕುಟ ಧೇನುಕಾಸುರರ ಪೂತನಿಯಬಕ ವತ್ಸಹಕ ವೃಷಾಸುರ ಮುಖ್ಯರಪ್ರಕಟದಿಂದರಿದು ಕರಿಯನು ಸೀಳಿ ತನಗೆ ಸಂ-ಮುಖರಾದ ಮಲ್ಲರನು ಇರಿದೊರಗಿಸಿಮುಕುರ ದಂತ್ಯದ ಹಮ್ರ್ಯದೊಳಗಿಂದ ಕಂಸನಪುಕಪುಕನೆ ತಿವಿದವನನಿರಿದೊರಗಿಸಿಸಕಲವೆಸೆದಿರ್ದ ಮಧುರಾಪುರವ ಉಗ್ರಸೇನಕಗಿತ್ತ ಕೃಷ್ಣನೇ ಶರಣೆಂಬೆನು 8 ಮೂರು ಪುರದಬಲೆಯರ ವ್ರತಗಳನೆ ಕೆಡಿಸಲಿಕೆಬೇರೊಂದು ಅಶ್ವತ್ಥ ವೃಕ್ಷವಾಗಿನಾರಿಯರ ವ್ರತಭಂಗಗೆಯ್ಯಲಾ ದೆಸೆಯಿಂದಊರುತ್ರಯವದು ತಿರುಗುವುದು ನಿಲ್ಲಲಾಗನೀರ ಮಸ್ತಕದಲ್ಲಿ ಧರಿಸಿದನ ಕರವಿಲ್ಲನಾರಿಯೊಳು ನಾರಾಯಣಾಸ್ತ್ರವಾಗಿಘೋರತನವೆತ್ತ ತ್ರಿಪುರದ ಕೀಲ ಪರಿದ ಮದನಾರಿ ಸಖ ಬುದ್ಧನೇ ಶರಣೆಂಬೆನು 9 ಮದವೆತ್ತ ರಕ್ಕಸರು ಮಹಿಯೊಳಗೆ ಹೆಚ್ಚಲುತ್ರಿದಶಾಂತ ನಡನಡನೆ ನಡುಗುತಿರಲುಬೆದರಬೇಡೆನುತ ಅಭಯವನಿತ್ತು ಮುದದಿಂದಸುಧೆಯೊಳಗೆ ಬಂದು ಜನಿಸಿಕುದುರೆವಾಹನನಾಗಿ ಕುಂಭಿನಿಯ ಮೇಲೆ ತನಗಿದಿರಾದ ರಾವುತರನಿರಿದೊರಗಿಸಿಮೊದಲ ಭಾಷೆಯನು ದಿವಜರಿಗಿತ್ತೆ ಬೇಗದಲಿಚದುರ ಕಲ್ಕ್ಯವತಾರ ಶರಣೆಂಬೆನು10 ಇಂತು ದಶ ಅವತಾರಗಳನೆತ್ತಿ ರಕ್ಕಸರಸಂತತಿಯನೊರಸಿ ಭೂಭಾರವಿಳುಹಿಕಂತುಪಿತ ತಿರುವೆಂಗಳೇಶ ತಿರುಮಲೆಯೊಳಗೆಚಿಂತಿಸುವ ಭಕ್ತರನು ಪಾಲಿಸುತಲಿದಂತಿರಾಜನ ಪೊರೆದು ದಾನವಾಡಿಗೆ ಬಂದುನಿಂತಾದಿಕೇಶವನೆ ಶರಣೆಂಬೆನು 11
--------------
ಕನಕದಾಸ