ಒಟ್ಟು 362 ಕಡೆಗಳಲ್ಲಿ , 73 ದಾಸರು , 346 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸರೋಜಲೋಚನಸುರಾರಿ ಮಥನ ಮುರಾರಿ ಮಾರಮಣ ಪುರಾರಿಮಿತ್ರಾ ನಿರೀಕ್ಷಿಸೆನ್ನ ನಿರಾಕರಿಸದಿರಿನ್ನು ಪ. ಬಲೀಂದ್ರಗೊಲಿದೆ ಬಾಗಿಲೋಳ್ನಿಂದೆ ಗೊಲ್ಲನು ನೀನಾದೆ ಬಲೀಂದ್ರ ಪೂಜಾಬಲದಿ ಜಗಮಂ ಕಳೆಯೇರಿಸಿ ಮೆರೆದೆ 1 ತಳಿರ್ದೋರಣಂಗಳ್ ಎಲೆಬಾಳೆಲೆಗಳ್ ನಳನಳಿಸುವ ಬಗೆಯೊಳ್ ಬೆಳಗುವ ದೀಪಾವಳಿಯಿಂ ಜಗಮಂ ತೊಳಗುವದೆಲ್ಲೆಡೆಯೊಳ್ 2 ಚಿತ್ತಜಪಿತ ಬಾ ಉತ್ಸವಪ್ರಿಯ ಬಾ ಸತ್ಯವಿಕ್ರಮ ನೀ ಬಾ ಬಾ ನಿತ್ಯ ತೃಪ್ತನೆ ಬಾರೈ 3 ಮದಮತ್ಸರಗಳ ಸದೆವಡೆದೇಗಳು ಸದಯನೆ ನೀ ಎಮ್ಮೊಳು ಸದನವ ಮಾಡೈ ಹೃದಯ ಪೀಠದ ಅಧಿಪತಿ ನೀನಹುದೈ 4 ಮಾಯಾಪಾಶದಿ ಗಾಯಗೊಂಡೆವು ಜೀಯ ಪಾಲಿಪುದೈ ಧೈೀಯಮಾರ್ಗದೆ ನಡೆಯಿಸು ನೀ ನಿರಪಾಯದೆ ಸತತಂ5 ಕೈಪಿಡಿದೆಮ್ಮಂ ಕಾಪಿಡು ನಲವಿಂ ತಾಪತ್ರಯ ಹರ ನೀಂ ಭೂಪಶೇಷಾದ್ರೀಶನೆ ನೋಡೈ ಶ್ರೀಪಾದದಾಸರನು 6
--------------
ನಂಜನಗೂಡು ತಿರುಮಲಾಂಬಾ
ಸಲಹಿಕೊಂಬವರಿಲ್ಲವೋ ವೆಂಕಟರಾಯ ಗೆಲುವ ಪರಿಯ ಕಾಣೆನು ಪ ಛಲವೇಕೋ ನಿನಗಿಷ್ಟು ಹೊಲಬುದಪ್ಪಿದ ಮೇಲೆ ಫಲವಿತ್ತು ಕರುಣದಿ ಕುಲವೃಕ್ಷವನು ಕಾಯೋ ಅ.ಪ ಅರಳಿಯ ವೃಕ್ಷದೊಳು ಆನೆಯ ತಂದು ಸ್ಥಿರವಾಗಿ ಕಟ್ಟಿದಂತೆ ದುರುಳರು ಬಂದೆನ್ನ ಕೊರಳು ಕೊಯ್ದೀಗ ಪರಿ ಇರವ ಕಾಣುತ ಮುಂದೆ 1 ಮಾಡಿದ ಉಪಕಾರವ ಮರೆತು ಮುಂದೆ ಕೇಡನು ನೆನೆವರಿಗೆ ನೋಡಿದೆ ಯಾತಕೆ ಮಾಡದೆ ಶಿಕ್ಷೆಯ ಆಡಿದೆ ನಿನ್ನೊಳು ಬೇಡ ಇನ್ನವರೊಳು 2 ವಾರಿಧಿ ತೀರದಲಿ ನೆಲ್ಲನು ತಂದು ಹಾರಿಸಿ ಬಿತ್ತಿದಂತೆ ಭವ ಘೋರ ಕಾನನದೊಳು ಸೂರೆವೋದೆನು ನಿನ್ನ ಮಾರಿಹೋದೆನು ಎನ್ನ 3 ಒದಗಿದ ನ್ಯಾಯದಲಿ ಇದಿರು ಬಂದು ಕದನವ ಕಟ್ಟುತಲೆ ಬೆದರುಗೊಳಿಸಿ ಎನ್ನ ಸದನಕ್ಕೆ ಮುನಿವುದ ಅದನೆಲ್ಲ ಚರಣದ ಪದುಮಕ್ಕೆ ಅರುಹುವೆ 4 ನೊಂದೆನು ಬಹಳವಾಗಿ ಈ ಭವದ ಸಿಂಧುವ ದಾಟಿ ಹೋಗಿ ಚಂದದಿ ನಿನ್ನಯ ಚರಣಾರವಿಂದವ ಎಂದಿಗೆ ತೋರ್ಪೆಯೊ ವರಾಹತಿಮ್ಮಪ್ಪ 5
--------------
ವರಹತಿಮ್ಮಪ್ಪ
ಸಾಕು ಸಾಕು ರಂಗನಾಥ ಮನುಜ ಜನ್ಮವು ಲೋಕ ದೊಳಗೆ ಜನಿಸಲಾರೆ ಸಾಕು ಭವದಬೇಗೆಯಿನ್ನು ಬೇಕು ನಿನ್ನ ನಾಮವೊಂದೆ ಸಾಕುರಂಗ ಪಾಲಿಸೋ ಪ ಸುದತಿ ಸುತರ ಪೊರೆವುದಕ್ಕೆ ತಿರುಗಿ ಹೋಯಿತು ಸದನಕೈದಿ ಬರಲುಹಸಿದು ದಣಿದುಸ್ನಾನ ಜಪವ ತೊರೆದು ಕುಡಿದು ತಿಂದು ಒಡಲ ಹೊರೆದು ಬಿಟ್ಟುದಾಯಿತು1 ಕೊಂಡ ಭ್ರಷ್ಟ ಹಣವ ಕೊಟ್ಟು ಹೋಗು ಎಂಬುದಾಯಿತು ಕಷ್ಟ ಬೇಡವೆಂದು ಗಡುವ ಕೊಟ್ಟು ಕಳುಹಲವರ ಬಳಿಕ ಹೊಟ್ಟೆ ಹಸಿದು ನೇಮಗಳನು ಬಿಟ್ಟುದಾಯಿತು 2 ಮನೆಯ ಮಾಡಿಯಿರಲು ತಿಂದು ಅಸ್ತಿಮಾಂಸವನ್ನು ಅಂದ ಗೆಡಿಸಿತು ಹಿಂದೆ ಹಮ್ಮಿನೊಳಗೆ ತಂದು ತಿಂದುದನ್ನು ನೆನೆದು ನೆನೆದು ಮಂದನಾಗಿ ಮುಂದೆ ಗತಿಯು ಕುಂದಿಹೋಯಿತು 3 ಕಣ್ಣು ಕಾಣ ಬೆನ್ನದುಡುಗಿ ಬಣ್ಣಗೆಟ್ಟು ದಂತಬಿದ್ದು ಉಣ್ಣಲಿಕ್ಕು ಆಗದಾಗಿ ಕಿವಿಯು ಕೇಳದಾಯಿತು ತಿಣ್ಣ ಯಮನ ದೂತಬಂದು ಎನ್ನ ಕೊರಳ ಎಳೆಯುವಾಗ ಅಣ್ಣ ತಮ್ಮದಿರರು ಬೆನ್ನ ಬರುವರಿಲ್ಲವೋ 4 ಮುಪ್ಪು ಹರಯ ಬಾಲಕತ್ವ ಒಪ್ಪದಿಂದ ಮರಳಿಮರಳಿ ಬಪ್ಪ ಭವದ ಶರಧಿಗೊಂದು ತೆಪ್ಪವಿದ್ದಿತು ಅಲ್ಪಹೊತ್ತು ಆದರೇನು ಚಿಪ್ಪಳಿಯ ಗೋಪಿವರನ ಸ್ವಲ್ಪಮಾತ್ರ ಭಜಿಸೆ ಜನ್ಮ ತಪ್ಪಲಾಯಿತು 5
--------------
ಕವಿ ಪರಮದೇವದಾಸರು
ಸಿದ್ಧಿದಾಯಕ ವಿಘ್ನರಾಜ ಸುಪ್ರ ಸಿದ್ಧ ಮಹಿಮಯೋಗಿಹೃದ್ಯ ರವಿತೇಜ ಪ. ಬಾದರಾಯಣ ಸುಪ್ರಸಾದ ಸತ್ಪಾತ್ರ ಶ್ರೀಧರೋಪಾಸನಶೀಲ ಸುಪವಿತ್ರ 1 ಭೋಗೀಂದ್ರಭೂಷಣ ನಾಗೇಂದ್ರವದನ ಭಾಗವತರ ಭಾಗ್ಯಸದನ ಜಿತಮದನ 2 ಸರ್ವಾಪರಾಧವ ಗುರುವರ್ಯ ಕ್ಷಮಿಸಯ್ಯ ಸರ್ವೋತ್ತಮ ಲಕ್ಷ್ಮೀನಾರಾಯಣಪ್ರಿಯ 3 ಶ್ರೀಹರಿ ಸಂಕೀರ್ತನ
--------------
ತುಪಾಕಿ ವೆಂಕಟರಮಣಾಚಾರ್ಯ
ಸೀಸಪದ್ಯ ಧರಣಿ ಮೊರೆಯನು ಕೇಳಿ ಸರಸಿಜಾಸನ ಸಕಲ ಸುರರ ಸಹಿತದಿ ಶರಧಿಶಯನಗÀರುಹೆ ವಸುದೇವ ದೇವಕಿ ಸುತನೆನಸಿ ಅಜನಯ್ಯ ವಸುಮತಿಯಲವತರಿಸಿ ಲೀಲೆಯಿಂದ ದುರುಳ ದೈತ್ಯರ ಸದೆದು ಪರಿಪಾಲಿಸಿದ ಸಾಧು ಸುಜನರನ್ನು ನಿಜಭಕ್ತ ಪಾಂಡವರ ನೆಂಟನೆಂದೆನಿಸಿ ಭೂ ಭುಜ ಸುಯೋಧನ ಮುಖ್ಯ ದುರುಳರನ್ನು ಸದೆಬಡಿಸಿದಾ ಬಳಿಕ ಮದದಿ ಕೊಬ್ಬಿದ ಯದು ಬಳಗವನು ವಿಪ್ರಶಾಪದಿಂದ ಕೊಲಿಸಿ ಪದುಮಸಂಭವಜನಕ ಕರಿಗಿರೀಶನು ತನ್ನ ಸದನಕ್ಕೈದಿದ ಸರ್ವವ್ಯಾಪ್ತ ಸರ್ವೇಶ
--------------
ವರಾವಾಣಿರಾಮರಾಯದಾಸರು
ಸುಖ ಪೂರ್ಣ ವಿಠಲನೆ | ಸಲಹ ಬೇಕಿವಳಾ ಪ ವಿಖನ ಸಾಂಡವ ಬಾಹ್ಯ | ಒಳಗೆಲ್ಲಾ ವ್ಯಾಪ್ತ ಅ.ಪ. ನಾರಿಮಣಿ ಪತಿಸೇವೆ | ಸಾರತರದಲಿಗೈದುಭೂರಿಭಕ್ತಿಯಲಿಂದ | ಸಂತಾನಕಾಗೀಶ್ರೀ ರಮಣ ತವಪಾದ | ದಾರಾಧನೆಯಗೈದುಭೋರಿಟ್ಟು ಪ್ರಾರ್ಥಿಪಳು ಕಾರುಣ್ಯ ಮೂರ್ತೇ 1 ಭಕುತರ್ಗಭೀಷ್ಟಗಳ | ನೀ ಕೊಡುವಿ ಎಂತೆಂಬಉಕುತಿಯನೆ ನಾ ಕೇಳಿ | ಅರಿಕೆಯನೆ ಮಾಳ್ವೇಈಕೆಯ ಮನೋರಥವ | ನೀ ಕೊಟ್ಟು ಸಾಧನವವೈಖರಿಯಲಿಂದೆಸಗೊ | ರುಕುಮಿಣೀ ಪತಿಯೇ 2 ಉಚ್ಛನೀಚಾದಿಗಳು | ಸ್ವಚ್ಛ ತಿಳಿಸಿವಳೀಗೆಅಚ್ಛ ಕನ್ನಿಕೆ ರಮಣ | ಅಚ್ಯುತಾನಂತಾಮುಚ್ಚು ಕಾಣಿಕೆಗೊಂಡು | ಇಚ್ಛೆ ಪೂರೈಸುವುದುಸಚ್ಚದಾನಂದಾತ್ಮ | ಚಿತ್ಸುಖಪ್ರದನೇ3 ಹರಿಗುರು ಸದ್ಭಕ್ತಿ | ದುರ್ವಿಷಯ ವೀರಕ್ತಿಹರಿಯ ವಿಷಯಕ ಜ್ಞಾನ | ಕರೋಣಿಸೋ ದೇವಾನಿರುತನಾಮ ಸ್ಮರಣೆ | ಇರಲಿವಳ ಮುಖದಲ್ಲಿಮರುತಾಂತರಾತ್ಮಕನೆ | ಶಿರಿ ರಮಣ ಹರಿಯೇ 4 ಶ್ರೀವತ್ಸಲಾಂಚನನೇ | ಭಾವುಕರ ಪರಿಪಾಲಗೋವತ್ಸದನಿ ನಾವು | ತೀವ್ರ ಬರುವಂತೇಶ್ರೀವರ ಶ್ರೀಗುರೂ | ಗೋವಿಂದ ವಿಠಲನೆನೀವೊಲಿಯ ಬೇಕೆಂದು ಬೇಡ್ವೆ ಗೋಪಾಲ 5
--------------
ಗುರುಗೋವಿಂದವಿಠಲರು
ಸುಜನ ವಂದ್ಯನ ಪಕಾಮ ತಾಮಸಗಳಲಿ ಬಳಲುತ್ತ ಸೀಮೆ ಸೀಮೆಗಳನುಸುತ್ತುವೀಮನೋರಥಗಳಲೇನು ಗುರುವಿನನೇಮ ಕೀರ್ತನೆಯನಿರಾಮಯಾಮಲಾರ್ಥ ನಿಷ್ಕಾಮ ರಾಮಣೀಯಕವನು ಪ್ರೇಮದಿಂದ ಪೊಗಳುತ 1ಯೋಗ ರಾಗದಿಂದ ಮನವ ನಾಗಲಾಗಲಧಿಕ ಭಕ್ತಿಯೋಗ ವೇಗ ಜನಿತ ಸದನುರಾಗದಿಂದ ನಿಲ್ಲಿಸಿರಾಗ ರೋಗವೆಂಬ ತಮವ ನೀಗಿ ಸದ್ವಿರಾಗದಿಂದ ಆಗಮಾಗಮಾಂತ ವಚನದಾಗು ಪೋಗನರಿತು ನೀ 2ಕಾಲ ಕಾಲದಲ್ಲಿ ಬಾಲಲೀಲೆುಂದ ನಡೆದು ನುಡಿದುಶೀಲ ಲೋಲನಾಗಿ ಲೋಕ ಜಾಲ ಮೂಲವಾಮೇಲೆ ಮೇಲೆ ತಿಳಿದು ಬೆಳೆದು ನಲಿದು ಭಕ್ತಪಾಲ ಗೋಪಾಲಯತಿ ಕೃಪಾಲ ಸದ್ವಿಶಾಲಸುಖವ ತಳೆದು ನೀ 3
--------------
ಗೋಪಾಲಾರ್ಯರು
ಸುಮ್ಮನೇಕೆ ಪರದಾಡುವೆಯೊ ಪರ ಬೊಮ್ಮನ ಚರಣಕೆ ಶರಣು ಹೊಡಿ ನಮ್ಮನು ಸೃಜಿಸುವ ಪೊರೆಯುವ ಕೊನೆಯಲಿ ನಮ್ಮನೇ ನುಂಗುವ ಗುಮ್ಮನಿವ ನಮ್ಮ ಶರೀರದೊಳಿರುವ ಯಂತ್ರಗಳು ನಮ್ಮಧೀನವೆ ಯೋಚಿಸೆಲೊ ವಾತ ನಮ್ಮಾಕಾಂಕ್ಷೆಯೆ ಯೋಚಿಸೆಲೊ 1 ಮೂರಂತಸ್ಥಿನ ನೂರು ಸದನಗಳು ನೂರು ರೂಪಗಳು ನಿನಗಳವೆ ಚಾರು ಮನೋಹರ ಸತಿಯಳಿರಲು ಮನ ಕೋರಿಕೆಯವಳಲಿ ಶಾಶ್ವತವೆ ನೂರು ಎಕರೆ ಹೊಲ ಗದ್ದೆ ತೋಟಗಳು ಮೂರು ಲಕ್ಷಗಳು ಬೆಲೆಯಿರಲು ಮೂರು ಚಟಾಕಿನ ಅನ್ನ ಹೊರತು ಅದ ಮೀರಿ ನುಂಗುವುದು ನಿನಗಳವೇ 2 ಶೂರನು ನಾ ಬಲುಧೀರನು ನಾ ಅಧಿ ಕಾರಿಯು ನಾ ಈ ಜಗದೊಳಗೆ ಕೋರಿದ ಜನರನು ಸದೆಬಡಿಯುವೆ ಎನ ಗಾರು ಸಮರು ಈ ಧರೆಯೊಳಗೆ ಕೋರುವ ಸುಖಗಳನನುಭವಿಸುವ ಮಮ ಕಾರದ ಗತಿಯನು ಯೋಚಿಸೆಲೊ ಹೇರಳ ಗಜತುರಗಾದಿ ವಾಹನಗ ಳೇರಿದ ನೀ ಹೆಗಲೇರಿ ಹೋಗುವಿಯೊ 3 ಸಾಸಿರ ಸಾಸಿರ ಬಡ್ಡಿ ಬಾಚಿಗಳ ಬೇಸರವಿಲ್ಲದೆ ಗಳಿಸಿದೆಯೊ ಕಾಸಿನ ಲೋಭಕೆ ಮೂಸಲು ಬಾರದ ಕಾಸಕ್ಕಿ ಅನ್ನವ ನುಂಗಿದೆಯೊ ಲೇಶವು ಗಮನಕೆ ತರಲಿಲ್ಲ ಈ ಸವಿನುಡಿ ಬಲು ಹಳೆಯದೆಂದು ಆಕ್ರೋಶವ ಮಾಡದೆ ಯೋಚಿಸೆಲೊ 4 ಮಾಯವು ತಾ ಈ ಜಗತ್ತಿನ ಜೀವನ ರುಚಿ ತೋರುವುದು ಕಾಯವು ಶಾಶ್ವತವೆಂಬ ಭ್ರಾಂತಿಯಲಿ ಹೇಯ ವಿಷಯಗಳನುಣಿಸುವುದು ಪ್ರಾಯಶರೆಲ್ಲರು ಬಲ್ಲರಿದನು ಬರಿ ಬಾಯಲಿ ನುಡಿಯುವರೊ ಸತತ ಕಾಯವಚನಮನದಿಂದ ಪ್ರಸನ್ನನ ಮಾಯವನರಿತಾಚರಿಪರು ವಿರಳ 5
--------------
ವಿದ್ಯಾಪ್ರಸನ್ನತೀರ್ಥರು
ಸುಮ್ಮನೊಲಿವನೆ ಪರಬೊಮ್ಮನಾದ ತಿಮ್ಮರಾಯ ಸುಮ್ಮನೊಲಿವನೆ ಪ ಮಂದವಾರ ದಿವಸದಲ್ಲಿ ಮಿಂದು ಮಡಿಯನುಟ್ಟುಕೊಂಡು ಗೋ ವಿಂದ ಎನುತ ನಾಮವಿಕ್ಕಿ ವಂದನೆಯ ಮಾಡದನಕ 1 ಗರ್ವವನು ಉಳಿದು ಮನದಿ ಸಾರ್ವಭೌಮನನ್ನು ನೆನೆದು ನಿರ್ವಹಿಸಿ ಶೇಷನು ಸುತ್ತಿದ ಪರ್ವತವನ್ನು ಏರದನಕ 2 ಕಾಸು ದುಡ್ಡು ಚಕ್ರ ನಾಣ್ಯ ವೀಸವುಳಿಯದಂತೆ ಬಡ್ಡಿ ವಾಸಿಯಿಕ್ಕಿ ಗಂಟ ಕಟ್ಟ ಈಸುಕೊಂಡು ಸೂಸದನಕ 3 ದೇಶ ದೇಶದಿಂದ ಕಪ್ಪ ಗಾಸಿಯಾಗದಂತೆ ತರಿಸಿ ಕೋಶಕಿಕ್ಕಿ ಕೊಂಬ ಲಕ್ಷ್ಮಿಯ ಈಶನನ್ನು ನೆನೆಯದನಕ 4 ಗುಡವ ಕದಡಿಕೊಂಡು ಸಂಗಡ ಕಡಲೆಯನ್ನು ನೆನಸಿಯಿಟ್ಟು ಒಡೆದ ನಾರಿಕೇಳವು ಸಹಿತ ಒಡೆಯಗೆಂದು ಇಡದ ತನಕ 5 ಆಶಾಪಾಶವನ್ನು ಬಿಟ್ಟು ದೇಶವನ್ನು ತೊಳಲಿ ಬಳಲಿ ಕೇಶವಾದಿ ನಾಮದೊಳಗೆ ವಾಸುದೇವನ ನೆನೆಯದನಕ 6 ಸೃಷ್ಟಿಪಾಲ ಮೆಟ್ಟಿದಂಥ ಬೆಟ್ಟವನ್ನು ಏರಿ ಹೋಗಿ ವರಾಹ ತಿಮ್ಮ ಶೆಟ್ಟಿಯನ್ನು ನೋಡದನಕ 7
--------------
ವರಹತಿಮ್ಮಪ್ಪ
ಸುರಸತಿಯರ ಆರತಿ-ಶೋಭನೆಕಂ|| ಹರೆದುದು ಜನತತಿ ಶ್ರೀಹರಿವರಶಯ್ಯಾಸನದಲಿಪ್ಪ ಸಮಯದಲೆನ್ನಾಪರಿಯನು ಬಿನ್ನವಿಸುವೆ ನಾಂಸಿರಿಚರಣವನೊತ್ತುತೊತ್ತುತೆಮ್ಮರಸನಿಗೇಆದಿತ್ಯವಾರದರ್ಚನೆಯಾದುದು ನಿನ್ನೊಲವಿನಿಂದ ಬಿನ್ನಹವಿದ ನೀನಾದರಿಸಿ ಸಲಹು ತಿರುಪತಿಭೂಧರ ಶುಭದಿವ್ಯಸದನ ವೆಂಕಟರಮಣಾಸಿರಿಧರಣಿಯರೊಡೆವೆರಸಿ ಹರುಷದಿ ವೆಂಕಟಪತಿಯುಇರೆ ಹಂಸತಲ್ಪದೆಡೆಯಲ್ಲಿ ಸುರಸತಿಯರುಕುರುಜಿನಾರತಿಯಾ ಬೆಳಗಿದರು ಶೋಭನವೆ 1ವೇದವನುದ್ಧರಿಸಿದಗೆ ಭೂಧರವನು ತಾಳ್ದವಗೆಮೇದಿನಿಯನೆತ್ತಿ ನಿಲಿಸಿದಗೆ ನಿಲಿಸಿದ ವೆಂಕಟಪತಿಗೆಮೋದದಲಾರತಿಯಾ ಬೆಳಗಿದರು ಶೋಭನವೆ 2ನರಹರಿ ರೂಪಾದವಗೆ ಧರಣಿಯನಳೆದಾ ಹರಿಗೆದುರುಳ ಕ್ಷತ್ರಿಯರಾ ತರಿದವಗೆ ತರಿದಾ ವೆಂಕಟಪತಿಗೆತರುಣಿಯರಾರತಿಯಾ ಬೆಳಗಿದರು ಶೋಭನವೆ 3ಜಾನಕಿಯನು ವರಿಸಿದವಗೆ ಧೇನುಕನನು ಬಡಿದವಗೆಮಾನಿನಿಯರ ವ್ರತವನಳಿದವಗೆ ಅಳಿದಾ ವೆಂಕಟಪತಿಗೆಜಾಣೆಯರಾರತಿಯಾ ಬೆಳಗಿದರು ಶೋಭನವೆ 4ತುರುಗವನೇರಿದ ಹರಿಗೆ ಶರಣಾಗತವತ್ಸಲಗೆತಿರುಪತಿಯ ಕ್ಷೇತ್ರದರಸಗೆ ಅರಸ ವೆಂಕಟಪತಿಗೆಪರಿಪರಿಯಾರತಿಯಾ ಬೆಳಗಿದರು ಶೋಭನವೆ 5ಓಂ ಬರ್ಹಿಬರ್ಹಾವತಂಸಕಾಯ ನಮಃ
--------------
ತಿಮ್ಮಪ್ಪದಾಸರು
ಸ್ಥಾಣುಂಕರ ವಿರಾಜಿತ ರಮಾಸದನ ಮೋಹನ ಪ ವಾಣೀಶ ಸಂಭಾವಿತ ಗೋಪೀಜನ ಸೇವಿತಾ ಅ.ಪ ಮಣಿಭೂಷಣ ರಂಜಿತ ಮುಕ್ತಜನಾನಂದಿತಾ 1 ಫಣಿಮಣಿಗಣ ಸಂಭೂಷಿತ ವನಿತಾಜನ ತೋಷಿತ 2 ಅಣುರೇಣು ತೃಣಪೂರಿತ ಗುಣಸಾಗರ ಮಾಂಗಿರೀಶ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಸ್ಮರಿಸುವೆನು ಗುರುರಾಯ ವರಮಂತ್ರ ಪುರಾಧಿಪ ಪೊರೆಯೊ ಎನ್ನನು ಜೀಯಾ ತವ ಮಹಿಮ ವರ್ಣಿಸ ಲರಿಯ ಮುರಹರಪ್ರೀಯಾ ಅಧ ಮಾಧಮನ ಮಮ ಪರಿಯ ನೀ ಬಲ್ಲೆಯ್ಯಾ ತೋರಯ್ಯಾ ದಯ ವರದ ಚರಿತೆಯ ಅರುಹುವದಕೆ ಪರವಾಕ್ಯರಣಿಯನು ಪಾಲಿಸಿ ನಿರುತ ಹರಿಗುರು ಚರಣದಲಿ ರತಿ ತ್ವರಿತ ಕರುಣಿಸು ರಾಘವೇಂದ್ರನೆ ಪ ಹಿಂದೆ ಕೃತಯುಗದಲಿ ಪ್ರಹ್ಲಾದ ನಾಮದಿ ತಂದೆ ಹಿರಣ್ಯಾಕ್ಷನಲಿ ಸರ್ವೋತ್ತಮನು ಹರಿ ದ್ವಂದ್ವ ಕರ್ಮವನಲಿ ಅರ್ಪಿಸಲು ಮಹದಾ ನಂದ ಪೊಂದುವರಲ್ಲಿ ಎಂದು ಪೇಳುತಿರೆ ಮಂದ ದೈತ್ಯವನಂದ ಮಾತಿಗೆ ಬಂಧನಾದಿಗ ಳಿಂದ ಶಿಕ್ಷಿಸೆ ಬಂದ ದುರಿತವನಂದು ಕಳೆದಾ ಕಂದನನು ಹರಿಪೊರೆಯೆ ದಿತಿಜನು ಒಂದೂ ತಿಳಿಯದೆ ಮಂದಿರ ಗೋವಿಂನೆಲ್ಲಿಹ ನೆಂದು ಕೇಳುತ ಮಂದರರೋದ್ಧಾರ ನಿಲ್ಲದಿಹ ಸ್ಥಳ ವಂದೂ ಇಲ್ಲವೂ ಎಂಂದು ಸಾರಿದೆ ತಂದು ತೋರಿಸು ಸ್ತಂಭದಲಿ ತವ ಇಂದಿರಾಪತಿಯೆಂದು ಗರ್ಜಿಸೆ ಕಂದನಾಡಿದ ಮಾತುಗಳನು ನಿಜ ವೆಂದು ನರಹರಿ ಪೊರೆದೆ 1 ಶ್ರೀಶನಾಜ್ಞೆಯ ವಹಿಸಿ ದ್ವಿತೀಯಾವತಾರದಿ ವ್ಯಾಸರಾಯನು ಎನಿಸಿ ಬ್ರಹ್ಮಣ್ಯರÀಲಿ ಸ ನ್ಯಾಸವನು ಸ್ವೀಕರಿಸಿ ಸರ್ವಜ್ಞ ಶಾಸ್ತ್ರಾಭ್ಯಾಸವನು ಪೂರೈಸಿ ವ್ಯಾಸತ್ರಯ ರಚಿಸಿ ದೇಶದೇಶಗಳನ್ನು ಚರಿಸುತ ಆ ಸಮಸ್ತ ಕುವಾದಿಗಳ ಮತ ನಾಶಗೊಳಿಸಿ ರ ಮೇಶ ಶ್ರೀ ವೆಂಕಟೇಶನನು ಬಹುದಿನವು ಪೋಜಿಸಿ ವಾಸಿಸುತ ಗಜರಾಮ ಪುರಧಾಧೀಶರಾಯನ ಕುಹಯೋಗವ ಪುರಂದರ ದಾಸರಿಂದೊಡಗೂಡಿ ಕೃಷ್ಣನುಪಾಸನೆಯ ಭಕ್ತಿಯಲಿ ಗೈಯುತ ವಾಸುದೇವನ ಶಿಲ್ಪ ಶಾಸ್ತ್ರದ ಶಾಸನಕೆ ಪ್ರತಿಯಾಗಿ ನಿಲ್ಲಿಸಿ ತೋಷಿಸಿದ ಸೌಭಾಗ್ಯ ವೈಭವ 2 ಪದುವ ಸಂಭವ ಜಾತ ಶ್ರೀ ರಾಘವೇಂದ್ರ ಸು ಪದವ ಪಡೆದ ಪ್ರಖ್ಯಾತ ಜಯತೀರ್ಥ ಮುನಿಕೃತ ಸುಧೆಗೆ ಪರಿಮುಳ ಗ್ರಂಧ ರಚಿಸಿ ಮೆರೆದಾತ ಬಧಿರ ಮೂಕಾಂಧ ವ್ಯಂಗ್ಯರು ವಿಧ ವಿಧಿದ ಘನರೋಗಗ್ರಸ್ತರು ಸದಯ ನೀಗತಿಯೆಂದು ಸೇವಿಸೆ ತ್ರಿದಶ ಭೂರುಹದಂತೆ ಸಲಹುವಿ ಕುಧರ ತೀರದಿ ಮೂಲ ರಘುಪತಿ ಪದವ ಪೂಜಿಸುತಲಿ ಸಜೀವದಿ ಮುದದಿ ವೃಂದಾವನ ಪ್ರವೇಶಿಸಿ ಪದುಮನಾಭ ಶ್ರೀ ಶಾಮಸುಂದರ ಮಧು ವಿರೋಧಿಯನು ಧ್ಯಾನಿಸುತ ಶಿರಿ ಸದನನು ವಲಿಸುತ್ತ ಕರುಣಾ ನಿಧಿಯು ಭಜಕರ ಪೊರೆವ ಮಹಿಮೆಯ 3
--------------
ಶಾಮಸುಂದರ ವಿಠಲ
ಹಯಾಸ್ಯ ವಿಠಲ ಸಲಹೊ |ಶುದ್ಧ ಭಕ್ತನ ಪೊರೆಯೆ ಭಿನ್ನವಿಪೆ ಸತತ ಪ ಮಧ್ವವಿಜಯದಿ ಸದ್ಬುದ್ಧಿ ಪ್ರದನೀನೆನಿಸಿಮಧ್ವಗುರು ಸತ್ಕರುಣ ಕವಚವನೆ ತೊಡಿಸೀ |ಸಿದ್ಧಾಂತ ಜ್ಞಾನದಲಿ ಶುದ್ಧ ಬುದ್ಧಿಯ ನಿತ್ತುಉದ್ಧರಿಸ ಬೇಕಿವನ ಉದ್ಧವನ ಪ್ರಿಯನೇ 1 ಪಾದ ಭವ ಹರಿಸೋ 2 ಗುಣರೂಪ ಕ್ರಿಯ ನಿನ್ನ ಧ್ಯಾನುಪಾಸಾನೆ ಇತ್ತುತನುಸದನ ಹೃದ್ಗಹದಿ ಕಾಣಿಸೀ ಕೊಳುತಾ |ಘನವೆನಿಪ ಸಂಚಿತಾಗಾಮಿಗಳ ಪರಿಹರಿಸಿಅಣುಗನನ ಸಲಹೆಂಬ ಪ್ರಾರ್ಥನೆಯ ಸಲಿಸೋ3 ಕ್ಲೇಶ ನಿಸ್ಸಂಶಯದಿ ಕಳೆಯುತಿಹಕಂಸಾರಿ ತವಪಾದ ಪಾಂಸು ಭಜಿಪನಿಗೇ |ವಂಶ ಉದ್ಧರಿಸಿ ಸಂತೈಸು ಶ್ರೀ ಹರಿಯೆಅಂಶುಮಾಲೀಕುಲಜ ಶ್ರೀರಾಮಚಂದ್ರಾ 4 ದೀಕ್ಷೆದಾಸತ್ವದಲಿ ಕಾಂಕ್ಷಿತಗೆ ತೈಜಸನುಈಕ್ಷಿಸುತ ಕರುಣಾಕಟಾಕ್ಷದಲಿ ಪೇಳೇ |ಸಾಕ್ಷಿ ಮೂರುತಿ ಗುರು | ಗೋವಿಂದ ವಿಠಲ - ಅಪೇಕ್ಷೆ ಪೂರ್ತಿಸಿಹೆ | ಋೂಕ್ಷ ಸನ್ನುತನೇ 5
--------------
ಗುರುಗೋವಿಂದವಿಠಲರು
ಹರಿ ಎಂಬ ನಾಮ ಎರಡಕ್ಷರವ ದುರಿತ ಕಾನನ ಛೇದ ಪ ವೇದರಾಶೀ ಎಂಬ ಭೂಸುರನು ಯಮಪುರದ ಹಾದಿಯಲಿ ಪೋಗುತಿರೆ ಎಡಬಲದಲಿ ಬಾಧೆ ಬಡುವ ಪಾಪಿ ಜೀವರಾಶಿಯ ನೋಡಿ ಮಾಧವಾ ಹರಿ ಎನಲು ಮುಕ್ತರಾದರು ಎಲ್ಲಾ 1 ಮತ್ತೆ ಪುಷ್ಕರನೆಂಬ ಹರಿಭಕ್ತ ಬರಲಾಗಿ ಮೃತ್ಯು ನಡುಗೀ ನಿಂದು ಪೂಜೆ ಮಾಡೀ ಉತ್ತಮಗೆ ಅಲ್ಲಿದ್ದ ನರಕಗಳು ತೋರಿಸೆ ಬತ್ತಿ ಪೋದವು ಹರಿ ಎಂಬ ಶಬ್ದವ ಕೇಳಿ 2 ಕೀರ್ತಿ ಮಾನವನೆಂಬೊ ಭೂಪಾಲ ಯಮಪುರದ ಆರ್ತಿಯನು ಕಳೆದ ಶ್ರೀಹರಿಯ ವೊಲಿಸೀ ಅಂತಕ ಬಂದು ಕಾದೆ ಸ ಮರ್ಥನಾಗದೆ ಪೋದ ಏನೆಂಬೆ ಜಗದೊಳಗೆ3 ಹದಿನಾರು ಸಾವಿರ ತರುಣಿಯರು ಅಸುರನ್ನ ಸದನದಲಿ ಸೆರೆಬಿದ್ದು ಹರಿಯ ತುತಿಸೇ ಮುದದಿಂದ ಹರಿಪೋಗಿ ಖಳನ ಕೊಂದು ಆ ಸುದತಿಯರಿಗೆ ತನ್ನ ಅಂಗಸಂಗವನಿತ್ತ4 ಕಂಡವರ ಮನೆ ಉಂಡು ಚಾಂಡಾಲರ ಕೂಡ ಮಂಡಲದೊಳಗೆ ಪಾತಕನಾದರೂ ಗಂಡುಗಲಿ ವಿಜಯವಿಠ್ಠಲ ಹರೆ ಹರೇ ಎಂದುಕೊಂಡಾಡಿದರೆ ಮುಕುತಿ ಸುರರಿಗಿಂತಲೂ ವೇಗ5
--------------
ವಿಜಯದಾಸ
ಹಂಸವಾಹನಪಿತನೆ _ ಹಂಸಾ ಢಿಭಿಕವೈರಿ ಶೌರಿ _ ಬಾ ಬಾ ಬಾ ಪ ಸಾಸಿರನಾಮದೊಡೆಯ ವಾಸವವಿನುತನೆ ಲೇಸಾಗಿಸ್ತುತಿಸುವೆ _ಬಾ ಬಾ ಬಾ ಅ ವೇದಾವಕದ್ದಂಥ ಉದ್ದಂಡ ದೈತ್ಯನ ಮರ್ಧಿಸಿ ವೇದವ ತಂದು ವೇಧನ ಸಲಹಿದ ಮತ್ಸ್ಯ ಬಾ ಬಾ ಬಾ 1 ಸಿಂಧು ವಿನೊಳಗಿದ್ದ ಮಂದರಗಿರಿಯನ್ನು ಬಂದು ಬೆನ್ನಿಲಿಪೊತ್ತು ತಂದು ಪೀಯೂಷವ ಚಂದದಿ ಸಲಹಿದ ಕೂರ್ಮಸ್ವರೂಪನೆ _ ಬಾ ಬಾ ಬಾ 2 ಕನಕನೇತ್ರನ ಕೊಂದು ಕಾಂತೆಯಹಿಡಿದೆತ್ತಿ ಕನಕಗರ್ಭನಿಗೊಲಿದ ಕಾರುಣ್ಯನಿಧಿಚಂದ್ರ ಕ್ರೋಢ ಯಜ್ಞ ಸ್ವರೂಪನೆ _ ಬಾ ಬಾ ಬಾ 3 ತರುಳನಮೊರೆಕೇಳಿ ದುರುಳನ ಕರುಳನೆ ಬಗೆದು ಕೊರಳೊಳು ಕರುಳ ಧರಿಸಿ ಸುರರನ್ನು ಪೊರೆದಂಥ ಸರ್ವವ್ಯಾಪಿ ಕರುಣಿಯೆ ಮೂರ್ತಿ _ ಬಾ ಬಾ ಬಾ 4 ಅನುಜನ ಪೊರೆಯಲು ತನುವನು ಮರೆಸಿಕೊಂಡು ದಾನವನು ಬೇಡುತ ಬಲಿ ಯನು ತುಳಿದು ಪೊರೆದ ಘನ್ನ ಮಹಿಮ ವಟು ವಾ ಮನ ರೂಪಿಯೆ _ ಬಾ ಬಾ ಬಾ 5 ಕೊಡಲಿಯ ಪಿಡಿಯುತ ಒಡೆಯರ ತರಿದು ಕಡಿದು ಮಾತೆಯ ಪಿತ ನುಡಿಯನು ಸಲಿಸಿದ ಚಂಡವಿಕ್ರಮ ಮಹಿಮ ಭಾರ್ಗವ ಮೂರುತಿ _ ಬಾ ಬಾ ಬಾ 6 ಕಾಂತೆಯನೆಪದಿಂದ ಕದನವ ಹೂಡಿಕೊಂಡು ಅಂತಕಸದನಕೆ ಅರಿಗಳ ತಳ್ಳುತ ಶಾಂತತೆ ಬೀರಿಪೊರೆದ ದಶರಥ ರಾಮನೆ _ ಬಾ ಬಾ ಬಾ 7 ಚೋರತನದಿ ಬಲು ಬೆಣ್ಣೆಯ ಮೆಲ್ಲುತ ಜಾರತನದಿ ಋಷಿ ಸ್ತ್ರೀಯರಿಗೊಲಿದಂಥ ಮಾರಜನಕ ಶ್ರೀ ರುಕ್ಮಿಣಿ ಕೃಷ್ಣ _ ಬಾ ಬಾ ಬಾ 8 ವೇದಗೋಚರ ವಿಶ್ವ ವೇದ ಬಾಹ್ಯರಿಗೆಲ್ಲ ವೇದ ವಿರುದ್ಧವಾದ ವಾದಗಳ ತೋರಿ ನಿಂದು ಬೆತ್ತಲೆ ಮೆರದ ಬೌದ್ಧ ಸ್ವರೂಪನೆ _ ಬಾ ಬಾ ಬಾ 9 ಕಲಿಬಾಧೆ ಹೆಚ್ಚಾಗೆ ಕಲಿಯುಗ ಕೊನೆಯಲ್ಲಿ ಮಲಿನಾರ ಮರ್ಧಿಸಿ ಉಳಿಸಲು ಧರ್ಮವ ಚಲುವ ರಾಹುತನಾದ ಕಲ್ಕಿ ಸ್ವರೂಪನೆ _ ಬಾ ಬಾ ಬಾ 10 ಸತ್ಯಸಂಕಲ್ಪನೆ ನಿತ್ಯಸ್ವರೂಪನೆ ಉತ್ತಮನೀನೆಂದು ಒತ್ತೊತ್ತಿ ಪೊಗಳುವೆ ಭೃತ್ಯನು ನಿನ್ನವನು ಕಣ್ಣೆತ್ತಿ ನೋಡುತ _ ಬಾ ಬಾ ಬಾ11 ಏಕರೂಪನೆ ನಿನ್ನನೇಕ ರೂಪಂಗಳ ಸಾಕಲ್ಯದಿಂದಲಿ ಶ್ರೀಕಾಂತೆ ಅರಿಯಳು ಕಾಕುಮತಿಯು ನಾನು ಎಂತು ವರ್ಣಿಸಲಯ್ಯ _ ಬಾ ಬಾ ಬಾ12 ಪೂರ್ಣಸ್ವರೂಪನೆ _ ಪೂರ್ಣ ಗುಣಾಬ್ಧಿಯೆ ಪೂರ್ಣನಂದಾನೆ ಪೂರ್ಣ ಸ್ವತಂತ್ರನೆ ಪೂರ್ಣಬೋಧರ ಪೂರ್ಣ ಕರುಣಾವ ಬೀರಿಸು _ ಬಾ ಬಾ ಬಾ 13 ಮಾತುಮಾತಿಗೆ ನಿನ್ನ ನಾಮದಸ್ಮರಣೆಯ ನಿತ್ತು ಪಾಲಿಸು ಎನ್ನ ಮೃತ್ಯೋಪಮೃತ್ಯುವೆ ದೇವ ಭಕ್ತಿಭಾಗ್ಯವನಿತ್ತು ಮನ್ನಿಸಿ ಸಲಹುತ _ ಬಾ ಬಾ ಬಾ 14 ದೋಷದೂರನೆ ನಿನ್ನ ದಾಸನುನಾನಯ್ಯ ವಾಸವ ಜಯಮುನಿ ವಾತನೊಳ್ವಾಸಿಪ ಈಶ ಸಿರಿಕೃಷ್ಣ ವಿಠಲರಾಯನೆ ಬೇಗ ಬಾ ಬಾ ಬಾ 15
--------------
ಕೃಷ್ಣವಿಠಲದಾಸರು