ಒಟ್ಟು 1644 ಕಡೆಗಳಲ್ಲಿ , 117 ದಾಸರು , 1328 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಣೆ ಲೋಕದೊಳಗೆ ಮುಖ್ಯ ಪ ಪ್ರಾಣೋಪಾನ ವ್ಯಾನೋದಾನ ಸಮಾನನೆನಿಪ ಮುಖ್ಯ ಅ.ಪ. ವಾಸವ ಕುಲಿಶದಿ ಘಾತಿಸೆ ಜೀವರ ಶ್ವಾಸ ನಿರೋಧಿಸಿದೆ ಆ ಸಮಯದಿ ಕಮಲಾಸನ ಪೇಳಲು ನೀ ಸಲಹಿದೆ ಜಗವಾ ಮುಖ್ಯ1 ಅಂಗದ ಪ್ರಮುಖ ಪ್ಲವಂಗರು ರಾಮನ ಅಂಗನೆಯನು ಪುಡುಕೆ ತಿಂಗಳು ಮೀರಲು ಕಂಗೆಡೆ ಕಪಿಗಳ ಜಂಗುಳಿ ಪಾಲಿಸಿದೆ ಮುಖ್ಯ 2 ನೀಲ ಸು ಗ್ರೀವ ಮುಖ್ಯರ ಬಿಗಿಯೆ ಸಾವಿರದೈವತ್ತು ಗಾವುದದಲ್ಲಿಹ ಸಂ ಜೀವನ ಜವದಿ ತಂದೆ ಮುಖ್ಯ 3 ಪರಿಸರ ನೀನಿರೆ ಹರಿತಾನಿಪ್ಪನು ಇರದಿರೆ ತಾನಿರನು ಕರಣ ನಿಯಾಮಕ ಸುರರಗುರುವೆ ನೀ ಕರುಣಿಸೆ ಕರುಣಿಸುವಾ 4 ಭೂತೇಂದ್ರಿಯದಧಿನಾಥ ನಿಯಾಮಕ ಆ ತೈಜಸಹರನಾ ತಾತನೆನಿಪ ಜಗನ್ನಾಥ ವಿಠಲನ ಪ್ರೀತಿ ಪಾತ್ರನಾದ ಮುಖ್ಯ 5
--------------
ಜಗನ್ನಾಥದಾಸರು
ಕಾದನಾ ವತ್ಸವ ಹರಿ ಕಾದನಾ | ಮಾಧವ ಪ ವೇದವೇದ್ಯ ಸಾಧುವಿನುತÀರಾದಿಕಾ ರಮಣ ಕೃಷ್ಣ ಅ.ಪ. ಎಳೆಯ ಗರಿಕೆ ಇರುವ ಸ್ಥಳದಿ ನೆರೆದು ವತ್ಸಗಳನೆ ನಿಲಿಸಿ || ಕೊಳಲು ಕೈಲಿ ಪಿಡಿದು ಮುರಲಿಗಾನ ಮಾಡುತ್ತಾ 1 ತನ್ನ ಶೆರಗು ತೆಗೆದು ಕೃಷ್ಣ ಕರುಗಳನ್ನೆ ಬೆನ್ನೊರಿಸಿ | ತಿನ್ನು ತಿನ್ನು ಪುಲ್ಲು ಯೆನುತ ಘನ್ನ ಕರುಗಳೊತ್ತುತ್ತ 2 ಉಡುಗಳಂತೆ ಕರಗಳು ನಡುವೆ ಚಂದ್ರ ಧರೆಯೊಳು || ಪೊಡವಿಯೊಳಗೆ ಬೆಳಗಲು ಆ ಮೃಡನು ಕೊಂಡಾಡಲು3 ಒಂದು ತಿಂಗಳ ಕರುಗಳು ಇಂದಿರೇಶನು ಮೇಯಿಸಲು | ಬಂದು ವರುಷ ಕರುಗಳಂತೆ ಆನಂದದಿಂದ ಬೆಳೆದವು 4 ಕನಕ ರಜತ ಸರಪಳಿ ದನಕರುಗಳ ಕೊರಳಲ್ಲಿ | ಇಣಕುವಂತರಳೆಲೆ ಅನೇಕ ನಾದ ಬೆರಳಲಿ ಮಾಡುತ5 ಮರದ ನೆರಳು ವೊಳಗೆ ಕೃಷ್ಣ | ಮೆರೆದು ವತ್ಸಗಳನೇ ನಿಲಿಸಿ | ಕರೆದ ಪಾಲು ಕರದಿ ಪಿಡಿದು ನೆರೆದು ಬಾಯಲುಣಿಸುತ6 ಅಜಗಳ್ಹಾಂಗ ಇದ್ದ ಕರುಗಳು ಗಜಗಳ್ಹಾಂಗ ಆದವು | ತ್ರಿಜಗದೊಡೆಯ ವಿಜಯವಿಠ್ಠಲ ವ್ರಜಕೆ ದೊರೆಯಾಳುವ | 7
--------------
ವಿಜಯದಾಸ
ಕಾದಿರುವೆನೋ ಕೃಷ್ಣ ಕಾದಿರುವೆನೋ ಪ ಮೋದಕ ನಿನ್ನ ನೆನಪಿನ ದೇಗುಲದಲ್ಲಿ ಆದಿನ ಕಾದಿದ್ದ ರಾಧೆ ಶಬರಿಯೊಲು ಅ.ಪ ಹಗಲಿರುಳೂ ನಿನ್ನ ಸ್ಮರಣೆಯ ಮಾಡುತ ಬಗೆಬಗೆಯಲು ನಿನ್ನ ಬಾಹ್ಯದಲೂ ನಿನ್ನ ನಗಧರ ಕಾಣಲು ಕಾದಿಹೆನೋ ಚ- ನ್ನಿಗ ನಿನ್ನ ನೆನೆನೆನೆದು ಹಾಡುವೆನೋ 1 ನನ್ನೀ ಸ್ಮರಣೆಯ ನುಡಿ ನುಡಿಯಲ್ಲೂ ಚಿನ್ಮಯ ನೀ ಕುಣಿದಾಡುತಿಹೆ ನನ್ನಯ ಪೂಜೆಯ ಆಡಿ ಅಡಿಯಲ್ಲೂ ಎನ್ನಯ್ಯ ಸಾಮೀಪ್ಯವಾಗಿರುವೆ 2 ಜಾಜಿಪುರಿಯ ಚೆನ್ನಕೇಶವ ನಿನ್ನ ಮೋಜಿನ ಚಿತ್ರವ ಚಿತ್ತದಿ ನಿಲಿಸಿಹೆ ಈಜಿಸಬೇಡಯ್ಯ ಸಾಕು ಸಂಸಾರ ಪಾದ ತೋರೊ ಪವಡಿಸುವೆ3
--------------
ನಾರಾಯಣಶರ್ಮರು
ಕಾಮಕೋಟಿ ಸುಂದರಾ | ತಿರುಪತಿಯಸ್ವಾಮಿ ತೀರ್ಥಮಂದಿರಾ ಪ ಕಾಮಜನಕ ಭಕ್ತಪ್ರೇಮಿ ಭವಾಟವಿಧೂಮಕೇತು ಹೃತ್ | ಧಾಮದಿ ನೆಲಿಸೋ ಅ.ಪ. ವೃಷಭಾಚಲಾ | ಸನ್ನಿಲಯನೆವೃಷಭಾ - ಬಲಾ ||ಒಸೆದು ಪರಿಕಿಸುತ || ಅಸುರನ ಸವರುತಅಸಮಗಿರಿಗೆ ನೀ | ಅಸುರನ ಪೆಸರಿತ್ತೆ 1 ಭಂಜನ ಶರದಿಜೆಕಂಜಜಾಕ್ಷಿ ಪ್ರಿಯ | ಅಂಜನಿವರದಾ 2 ಶೇಷಾ _ ಭೂಧರಾ | ಮನಸಿನ ಬಹುಕ್ಲೇಶಾ _ ಅಪಹರ ||ಶೇಷದೇವ ಮದ | ಲೇಸು ಹರಿಸಿ ಅವನಾಶೆ ಸಲಿಸಿ ಹರಿ | ಶೇಷಾಚಲನಾದೇ 3 ವೆಂಕಟಾಚಲಾ | ಮಾಧವನಾಸಂಕಟಾಗಳಾ ||ಅಂಕುರಿಸದೆ ನಿ | ಷ್ಪಂಕನೆಂದೆನಿಸಿಕಿಂಕರ ತನಯಳ | ಕಂಕಣ ಕಟ್ಟಿದೆ 4 ಶ್ರೀವರ - ಭೂವರಾ | ಪೊರೆಯುವೆ ನೀಜೀವರಾ - ಅಂತರಾ ||ಜೀವನಾಮಕನಾಗಿ | ಜೀವ ಭಿನ್ನ ಹರಿಕೈವಲ್ಯದ ಗುರು | ಗೋವಿಂದ ವಿಠಲ 5
--------------
ಗುರುಗೋವಿಂದವಿಠಲರು
ಕಾಮಹರ ಒಬ್ಬ ತಾನೆ ಬಲ್ಲಾ | ರಾಮ ರಾಮ ಸೀತಾರಾಮ ರಾಮನಲ್ಲದಿಲ್ಲವೆಂದು ಪ ಕೈಯಲಿ ಕಿನ್ನರಿ ಧರಿಸಿ ಸಿರಿಮೊಗದಿಂದ | ಕೈಲಾಸಗಿರಿಯಲ್ಲಿ ಪಾರ್ವತಿ ಕೂಡ ಜಗ ದಯ್ಯನಯ್ಯ ಜಗದೊಡಿಯ ರಾಮನಲ್ಲದಿಲ್ಲೆಂದು 1 ಫಣಿಯಾಭರಣವು ಪೆಡೆಯೆತ್ತಿ ಇರಲು | ಮಣಿ ರುಂಡಮಾಲೆ ತೂಗಾಡಲು | ಕುಣಿದು ಕಣಕಾಲಿಂದ ಥಕ್ ಥಕ್ ಥೈ ರು ಪತಿ ಸರ್ವೋತ್ತಮ ರಾಮನಲ್ಲದಿಲ್ಲವೆಂದು 2 ಕಾಳಕೂಟದ ವಿಷಬಿಂದು ಮಾತುರನುಂಗೆ | ತಾಳಲಾರದೆ ತಳಮಳವಗೊಂಡು | ಕಾಳಿಮರ್ದನ ಕಮಲಾಯತಾಕ್ಷ ಎನ್ನ | ಪಾಲಿಸಿದ ಪರಮಾತ್ಮ ರಾಮನಲ್ಲದಿಲ್ಲವೆಂದು3 ಗಜಮುಖ ತಾಳವ ಪಿಡಿದು ತಥೈ ಎನ್ನಿ | ಅಜಸುತ ರಿಪು ಮದ್ದಳಿಯೆ ಮುಟ್ಟಿ | ಗಜ ಚರ್ಮಾಂಬರ ಗಾಯನವ ಮಾಡುತ-ತ್ರಿ | ಜಗಾಧಿಪತಿ | ವಿಷ್ಣು ರಾಮನಲ್ಲದಿಲ್ಲವೆಂದು 4 ಆರು ಮುಖದವ ಶಂಖವನ್ನು ಊದೆ | ಭೈರವ ನಾಗಸ್ವರವ ನುಡಿಸೆ | ಚಾರು ಪ್ರಥಮ ಭೂತ ತಲೆ ಚಪ್ಪಳಿಡೇ| ಧಾರಣಿಧರ ಸೀತಾರಾಮನಲ್ಲದಿಲ್ಲವೆಂದು 5 ಗೋರಾಜ ಸರಿಗಮಪದನಿಸ ಎಂದು ನಲಿಯೇ | ಉರಗಾದಿ ಮೂಷಕಾದಿ ಚಿಗಿದಾಡಲು | ವಾರಣದ ಗಂಗೆ ಸಿರದಲಿ ತುಳುಕಲು | ನಾರಾಯಣ ಪರದೈವ ರಾಮನಲ್ಲದಿಲ್ಲವೆಂದು 6 ತುಂಬುರನಾರಂದ ತಂದನ್ನಾತಾ ಎನ್ನೆ | ಅಂಬರದಿಂದ ಪೂಮಳೆಗೆರೆಯೆ | ಅಂಬುಜಪತಿ ಶಿರಿ ವಿಜಯವಿಠ್ಠಲ ವಿ ಶ್ವಂಭರಜಾಂಡಕರ್ತು ರಾಮನಲ್ಲದಿಲ್ಲವೆಂದು 7
--------------
ವಿಜಯದಾಸ
ಕಾಮಾನ ಜನನಿಯೆ ಸೋಮಾನ ಸೋದರಿ ಸಾಮಾಜ ವರದನ ಪ್ರೇಮವ ಕೊಡಿಸಮ್ಮ ಪ ನೇಮಾದಿಂದಲಿ ಹರಿ ನಾಮಾವ ನುಡಿಸುತ ತಾಮಾಸ ಓಡುವಂತೆ ನೀಮಾಡಬೇಕಮ್ಮ ಅ.ಪ ನಿತ್ಯ ತೃಪ್ತಳೆನಿನ್ನ ನಿತ್ಯದಿ ಬೇಡಿಕೊಂಬೆ ಭೃತ್ಯರೊಳಗೆ ಎನ್ನ ಎತ್ತಿ ಸೇರಿಸೆ ತಾಯೆ || ಮತ್ತನಾಗದೆ ಭವದಿ ಉತ್ತುಮನೆನಿಸುತ ಆತ್ಮದಿ ಹರಿ ತೋರಿ ಕೃತಕೃತ್ಯನೆನಿಸಮ್ಮ 1 ದೇಶಕಾಲದಿನೀನು ಶ್ರೀಶಗೆ ಸಮಳಮ್ಮ ನಾಶಮಾಡುತ ದೋಷ ದಾಸಾನು ಎನಿಸಮ್ಮ || ಶ್ವಾಸಾಶೇಷರನೆಲ್ಲ ಲೇಸಾಗಿ ಆಳುವಳೆ ವಾಸುದೇವನಲ್ಲಿ ಆಸೇಯ ನೀಡಮ್ಮ 2 ಶೃತಿಯಲ್ಲಿ ನೀನಿದ್ದು ಸ್ತುತಿಸೀ ಶ್ರೀಹರಿಯನ್ನ ಮತ್ತೆಸೃಜಿಸುವಂತೆ ಎತ್ತಿಗಾನವ ಮಾಳ್ವೆ || ಎತ್ತ ನೋಡಲು ಬಲು ಕತ್ತಲೆಕಣಿ ತಾಯೆ ಸತ್ಯವ ಬಿಡದಂತೆ ಹತ್ತೀಸೆ ಹರಿದಾರಿ3 ಹರಿಯಂತೆ ಅವತಾರ ನಿರುತನೀ ಮಾಡುತ ಪರಿ ರೂಪದಿಂದ ಪರಿಚರಿಯ ನೀಮಾಳ್ವೆ || ಸರ್ವೇಶ ಹರಿಯಿಂದ ಸರ್ವಕಾಲದಿ ಕೂಡಿ ಸರ್ವಕಾರ್ಯವ ಮಾಳ್ವೆ ಸರಿಯಾರೆ ನಿನಗಮ್ಮಾ 4 ಅಕ್ಷರ ರೂಪಳೆ ಈಕ್ಷಿಸುಕರುಣದಿಂದ ತ್ರ್ಯಕ್ಷೇಶ ವಿಧಿಮಾತೆ ಅಕ್ಷರನರ್ಧಾಂಗಿ || ಕುಕ್ಷೀಲಿ ಬ್ರಹ್ಮಾಂಡ ಲಕ್ಷ್ಯವಿಲ್ಲದೆ ಪಡೆದಿ ಅಕ್ಷಯ ಮಾಡಿ ಜ್ಞಾನ ಮೋಕ್ಷಾವ ಕೊಡಿಸಮ್ಮಾ5 ವಿಕಾರ ಶೂನ್ಯಳೆ ಪ್ರಕೃತಿಗೆ ಮಾನಿಯೆ ನೀಕಾರ್ಯ ಕಾರಣಕ್ಕೆ ಮುಖ್ಯ ಹೇತುವೆ ತಾಯೆ || ಪ್ರಕೃತಿ ಬಂಧವ ಬಿಡಿಸಿ ಸಾಕಾರ ಮೂರುತಿ ಲೋಕನಾಯಕ ಹರಿಯ ಏಕಾಂತದಲಿ ತೋರೆ6 ತ್ರಿಗುಣ ಕಾರ್ಯಗಳೆಲ್ಲ ಸುಗುಣಿ ನೀ ಮಾಡುತ ನಿತ್ಯ ಪೊಗಳಿ ಹಿಗ್ಗುವೆ ಮಾತೆ || ಜಗವೆಲ್ಲ ಕುಣಿಸುತ ನಗುತಲೀಲೆಯಿಂದ ನಿಗಮಾದಿಗಳ ಮೀರಿ ಬಗೆ ಬಗೆ ಲೀಲೆ ಕಾಂಬೆ 7 ನಿತ್ಯಾ ಮುಕ್ತಳು ನೀನು ಪ್ರೀತಿಲಿ ನಮಿಪೆನೆ ಮಾತುಲಾಲಿಸಿ ಎನ್ನ ನಿತ್ಯದಿ ಸಲಹೆಮ್ಮ || ಹೆತ್ತ ತಾಯಿಯು ನೀನು ಎತ್ತಿ ಪೊರೆಯದಿರೆ ಎತ್ತ ಪೋಗಲಿ ನಾನು ಉತ್ತುಮರಮೆ ಹೇಳೆ 8 ಸಾಗರನ ಮಗಳೆ ಆಗಮರೂಪಳೆ ಹೋಗೀಸುಲಿಂಗವ ಸಾಗಿಸಿಗುಣಕಾರ್ಯ || ಭಾಗ್ಯ ಸ್ವರೂಪಳೆ ಬಾಗಿ ನಮಿಸುವೆ ಆಗು ಮಾಡಿಸು ಹರಿ ಗೀತೆಗಳೆನ್ನಿಂದ 9 ಮರುತ ದೇವನ ಪಿತನ ಉರದಲಿ ವಾಸಿಪಳೆ ಹರಿಗುರು ಚರಣದಿ ನಿರುತ ಭಕ್ತಿಯ ಕೊಟ್ಟು || ವಾರಿಜನಾಭನಲ್ಲಿ ಧಾರೆ ಧಾರೆಯ ಭಕ್ತಿ ಸಾರಸ ದಳನಯನೇ 10 ಮಾತು ಮಾತಿಗೆ ನಮ್ಮ ಖ್ಯಾತಾಜಯತೀರ್ಥ ನವನೀತ ಧರಿಸೀಹ || ಶ್ರೀ ತಾಂಡವ ಕೃಷ್ಣ ವಿಠಲರಾಯನ ಸ್ಮರಣೆ ಆತ್ಮಾದೊಳಗೆ ನಿಂತು ಖ್ಯಾತೀಲಿನಡಿಸಮ್ಮಾ 11
--------------
ಕೃಷ್ಣವಿಠಲದಾಸರು
ಕಾಮಿತವನು ಪಡಿಯೋ ಪ ಈ ಮಹಿಯೊಳು ರಘುವೀರ ತೀರ್ಥರ ಕರ- ತಾಮರಸೋದ್ಭವರೆನಿಸಿ ಮೆರೆದ ಗುರು ಅ.ಪ ಧರೆಸುತ ಮಂಡಿತ ಸುರಪುರದಲಿ ದ್ವಿಜ ವರ ಕುಲದಲಿ ಜನಿಸಿಯಳಿಮೇ- ಲಾರ್ಯರ ಬಳಿಯಲಿ ಶಬ್ದಾವಳಿ ಶಾಸ್ತ್ರವ ಪಠಿಸಿ ಇಳಿಸುರನುತ ಕರ ಜಲಜೋದ್ಭವ ರೆನಿಸಿ ಕಲಿತು ಗುರುಮುಖದಿ ಮರುತ ಶಾಸ್ತ್ರವನು ತಿಳಿಸುತ ಬುಧಜನ ರೊಲಿಸಿದಂಥ ಗುರು 1 ಹೇಮಮಂಟಪದಿ ಭೂಮಿ ಸುತಾನ್ವಿತ ರಾಮನ ಪೂಜಿಸು ತಾ ಶ್ರೀಮನ್ಮಧ್ವಕ ರಾಬ್ಜಾದಾಗತ ಸೌಮಿತ್ರಿಯ ಸಹಿತ ಸಾಮವ ಪಠಿಸುವ ಭೂಮಿಸುರಜನ ಸ್ತೋಮದಿ ಶೋಭಿಸುತ ಧೀಮಜನರಿಗೆ ಪ್ರೇಮದಿಂದ ಮೃಷ್ಟಾನ್ನದಾನ ಸನ್ಮಾನ ಮಾಡುತಿಹ 2 ಭೂತಳದಲಿ ಸುಕ್ಷೇತ್ರ ಬಹು ಆರ್ಥ ಯಾತ್ರಿಗಳಾ ಚರಿಸಿ ಭೂತಬಾಧೆ ರೋಗಾತುರ ಜನಗಳ ಭೀತಿಯ ಪರಿಹರಿಸಿ ಶಾಸ್ತ್ರಸುಧಾರಸ ಸತ್ಯಮೋದ ಯತಿ- ನಾಥರಿಂದ ಗ್ರಹಿಸಿ ಖ್ಯಾತ ಕಾರ್ಪರ ಕ್ಷೇತ್ರದಿ ನರಮೃಗನಾಥನ ಪ್ರೀತಿಗೆಪಾತ್ರರೆನಿಸಿರುವ 3
--------------
ಕಾರ್ಪರ ನರಹರಿದಾಸರು
ಕಾಮಿತಾರ್ಥದಾಯಿ ಸೀತಾರಾಮರಾಜ ರಾಜ ಸ್ವಾಮಿಯೆನ್ನ ಕಾಯೊ ಖಳನಿರ್ನಾಮ ಭಕ್ತಕಲ್ಪಭೂಜ ಪ. ಸಾಕೇತಪುರದಿ ವಾಸಪ್ರಾಕೃತ ಲೀಲಾ ವಿಲಾಸ ಸ್ವೀಕೃತ ರಕ್ಷಾವಿಭೂಷ ಯಾಕೆನ್ನೊಳುಪೇಕ್ಷೆ ಶ್ರೀಶಾ ಬೀಕೃತಿಗಳ ದೂರೀಕರಿಸುವ ಕರು ಣಾಕರ ಭಕ್ತ ಪರಾಕ ಪರಾತ್ಪರ 1 ಪಾತಕಿ ಜನೋದ್ಧಾರೈಕ ಹೇತುವ ತೋರುವೆನೆಂದು ಸೇತು ನಿರ್ಮಿಸಿದ ರಘುನಾಥ ನೀನೆ ದೀನ ಬಂಧು ವಾತಜಾತನಿಗೊಲಿದು ಸಂಪ್ರೀತಿಯೊಳಂಬುಜ ಜಾತನಪದವಿಯನಾತಗೆ ಸಲಿಸಿದ 2 ಪಾಮರ ಪಾವನದಿವ್ಯ ನಾಮದೇವ ಸಾರ್ವಭೌಮ ಸೀಮಾಹಿತಸದ್ಗುಣೈಕ ಧಾಮಾ ಸೀತಾಪೂರ್ಣಕಾಮಾ ತಾಮರಸಾಸನವಂದ್ಯ ಶೇಷಗಿರಿ ಧಾಮ ದಯಾಂಬುಧಿ ದಶರಥ ರಾಮಾ 3
--------------
ತುಪಾಕಿ ವೆಂಕಟರಮಣಾಚಾರ್ಯ
ಕಾಯಬೇಕೆಲೋ ರಂಗಾ ಎನ್ನಾ | ನೀ ಕಾಯಬೇಕೆಲೋ ರಂಗಾ | ತೋಯಜಾಕ್ಷ ದಯಾನಿಧಿ ತರಣೋ | ಪಾಯದೋರೋ ಶುಭಾಂಗಾ ಪ ದುರಿತ ಸಮೂಹವ ಬಂದು | ಶಣಸುತ | ಹರಿದಂಜಿಸುತಿವೆಯಿಂದು | ನರಹರಿ ನಿನ್ನ ನಾಮದ ಘನಗರ್ಜನೆಯ |ಕೊಡು | ಮರಳು ಮಾನವನಿವನೆಂದು 1 ಕುಂದನಾರಿಸಿಯೆಲ್ಲಾ ನೋಡಲು | ಒಂದೆರಡೆನಲಿಕ್ಕಿಲ್ಲಾ | ಮಂದಮತಿ ಅವಗುಣ ರಾಶಿ ಪತಿತರ | ವೃಂದದೊಳೆನ್ನಧಿಕಲಾ2 ಕೊಂಬು ನೀಚನವಾದರೆ ಬಿರದಾ | ಡಂಬರ ನೀಚನಲ್ಲಾ | ಇಂಬುದೋರೆಲೆ ನಿನ್ನ ದಾಸರ ದಾಸ | ಎಂಬದೆನ್ನಧಿಕಾರವಿಲ್ಲಾ 3 ಬಿನ್ನಹವೆನ್ನ ಮುರಾರಿ | ಪಾಲಿಸಿ | ನಿನ್ನ ಚರಣವ ದೋರಿ | ಧನ್ಯಗೈಸೆಲೋ ಗುರುವರ ಮಹಿಪತಿ ಚಿನ್ನನೊಡಿಯ ಸಹಕಾರಿ 4
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕಾಯಯ್ಯಾ ಎನ್ನದಯದೀ ಸಿಂಹಾದ್ರೀಶಾ ಪ ಅಖಿಲದೊಳಗೆ ಅತಿ ದುರ್ಜನ ಪ್ರಭೆಯಲಿ ನಿಖಿಳ ಧರ್ಮಗಳಡಗಲು ಕಂಡು ಭಕುತರ ಗೋಸುಗ ಅವತಾರವತಾಳಿ ಪ್ರಕಟಿಸಿದಿಳೆಯೊಳು ಚಿನ್ಮಯನೇ1 ಪರಿ ಸಾಧನದಿಂದಲಿ ದೇಹವ ನಿರುಪಮ ವಜ್ರದಂದದಿ ಮಾಡೀ ಮೆರೆವ ಗೋರಕ್ಷಗ ಬೋದಿಸ್ಯಕಲ್ಪಿತ ಶರೀರವ ಮಾಡಿ ನಿಲಿಸಿದೆಯ್ಯಾ2 ಅನಸೂಯಾ ಜಠರದಲುದ್ಭವಿಸಿ ಅನುದಿನ ಮುನಿ ಮಾನಸಲಿರುವಾ ಅನುಪಮ ಚರಿತನೆ ಮಹಿಪತಿ ನಂದನ ಮನ ದೈವಾಗಿಹೆ ಘನ ಕರುಣಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕಾಯೆ ಕರುಣಾಂಬುಧಿಯೆ ತೋಯಜನಯನೆ ಪ ಕಾಯೆ ಕರುಣಿ ಗಿರಿರಾಯನ ಪಟ್ಟದ ಜಾಯೆ ಭವದಲಿ ನೋಯಗೊಡದಲೆನ್ನ ಅ.ಪ ಅಂಬುಜಾಂಬಕೆ ಅಂಭ್ರಣಿ ಸುಗುಣ ಸನ್ಮಣಿ ಕಂಬುಚಕ್ರಾಂಕಿತಪಾಣಿ ಅಂಬೆ ನಿನ್ನಯ ಪಾದಾಂಬುಜ ನಂಬಿದೆ ಬಿಂಬನ ಎನ ಹೃದಯಾಂಬರದಲಿ ತೋರೆ 1 ಕಾಮಿತಾರ್ಥ ಪ್ರದಾತೆ ಜಗದೊಳಗೆ ಖ್ಯಾತೆ ಕಾಮಿತ ಸಲಿಸೆನ್ನ ಮಾತೆ ಪ್ರೇಮದಿ ನಿನ್ನನು ನೇಮದಿ ಭಜಿಪೆನ್ನ ಧಾಮದೊಳಗೆ ನೀ ಕ್ಷೇಮದಿ ನಿಲಿಸೀ 2 ದೂತಜನಕತಿ ಪ್ರೀತೆ ಈ ಜಗಕೆ ಮಾತೆ ಸೀತೆ ಪಾಲ್ಗಡಲಾ ಸಂಭೂತೆ ದಾತ ಗುರುಜಗನ್ನಾಥ ವಿಠಲಗೆ ಪ್ರೀತ ಸತಿಯೆ ಸುಖವ್ರಾತವ ಸಲಿಸಿ ನೀ 3
--------------
ಗುರುಜಗನ್ನಾಥದಾಸರು
ಕಾಯೊ ಕರುಣಾಬ್ಧಿ ಗುರು ಎನಗೆ ದಯವುಳ್ಳ ಸ್ವಾಮಿ ನೀನಹುದೊ ಜಗದೊಳಗೆ ಧ್ರುವ ಶಿರದಲಭಯವ ನೀಡಿ ಕರುಣದಯದಲಿ ನೋಡಿ ಹರುಷ ಮನವನು ಮಾಡಿ ದುರಿತಭವ ಈಡ್ಯಾಡಿ ಗುರುತ ನಿಜ ಮಾಡರಹು ನೀಡಿ ಪರಮ ಗತಿ ಇದರಿಡಿ ವರಕೃಪೆಯ ಮಾಡಿ 1 ಒಂದು ಪಥವನು ತಿಳಿಸಿ ದ್ವಂದ್ವ ಭೇದವನಳಿಸಿ ಕುಂದ ದೋಷವ ತೊಳಿಸಿ ಒಂದರೊಳು ನಿಲಿಸಿ ನೆಲೆಗೊಳಿಸಿ ಸಂದು ಜನ್ಮಗಳಳಿಸ್ಯಾನಂದ ಸುಖ ಹೊಳಿಸಿ 2 ಕರುಣಿಸೊ ಗುರು ಎನಗೆ ಶರಣ ಹೊಕ್ಕಿದೆ ನಿಮಗೆ ದೋರುದನುಭವ ಈಗೆ ಕರಗಿ ಮನವೆರಗುವ್ಹಾಂಗೆ ಸ್ಮರಣ ಸುಖ ಎದುರಿಡು ಬ್ಯಾಗೆ ತರಣೋಪಾಯದಲೆನೆಗೆ ಪೊರೆಯೊ ಮಹಿಪತಿಗೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕಾಯೊ ಕಾಯೊ ಕಾಯೊ ಕಾಯೊ ಕೃಪಾನಿಧಿ ಕಾಯೊ ಕೃಪಾಳು ಸದ್ಗುರು ದಯ ನೀ ಪಾಲಿಸಿ ಸೋಹ್ಯಸೊನ್ನೆ ಸೂತ್ರಗುಹ್ಯ ಗೂಢದೋರಿ ಸಾಹ್ಯಮಾಡೊ ಸ್ವಾಮಿ ಸಾಕ್ಷಾತ್ಕಾರ ನೀ ದೋರಿಸಿ ನ್ಯಾಯದಲಿ ಮಿಥ್ಯಾಮಾಯ ಮೊನೆಮುರಿಸಿ ತೋಯಜಾಕ್ಷ ನಿಮ್ಮ ಶ್ರಯ ಸುಖ ಬೀರಿ ಭವ ಭಯ ಹರಿಸೊ ಗುರು ಕರುಣಿಸೊ 1 ನಾನಾರು ಎಂದು ಸಾಖೂನ ತಿಳಿಯದೆ ನಾನಾ ಯೋನಿಮುಖ ಜನಿಸಿ ಬಂದೆÀನಯ್ಯ ಜನುಮ ಜ್ಞಾನಗಮ್ಯವಾದ ಸ್ಥಾನದೋರಿ ನಿಜ ಧ್ಯಾನ ಮೌನದನುಭವ ಸುಖ ನೀಡೊ ನಿಮ್ಮ ನ್ಯೂನ ಪೂರ್ಣ ಎನ್ನ ನೀ ನೋಡದೆ ಸ್ವಾಮಿ ಸ್ವಾÀನುಭವದ ಸುಜ್ಞಾನ ದೀಪಲಿಡೊ ನಮ್ಮ ಮನೋನ್ಮನವಾಗಿ ಘನ ಕೈಗೂಡುವಾ ಸನ್ಮತ ನೋಡಿ ಸುವರ್ಮ 2 ನೋಡದೆ ಗುಣದೋಷ ಮಾಡಿ ಉಪದೇಶ ದೃಢಭಾವದ ಸುಪಥ ಒಡನೆ ಗೂಡಿಸೊ ನೋಡಿ ದೃಷ್ಟಿಲೆನ್ನ ಒಡೆಯ ಸದ್ಗುರು ಪೂರ್ಣ ಓಡಿಹೋಗುವಂತೆ ಭಕ್ತಿ ಜ್ಞಾನ ವೈರಾಗ್ಯವಿಡಿಸೊ ನೀಡಿ ಅಭಯಕರುಣಕವಚವ ತೊಡಿಸೊ ಪಿಡಿದು ಎನ್ನ ಕೈಯಾ ಮೂಢ ಮಹಿಪತಿಯ ಬಿಡದೆ ಕಡೆಗಾಣಿಸೊ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕಾಯೋ ಕಾಯೋ ಪ ಕಾಯೋ ಕಾಯೋ ಕಮಲಯತಾಕ್ಷ ಭವ ತೋಯಧಿಯೊಳು ಬಿದ್ದು ಬಾಯ ಬಿಡುವನ ಅ ಅದ್ವೈತ ತ್ರಯದಧ್ವ ಪ್ರವರ್ತಕ ಸದ್ವೈಷ್ಣವರ ಪದದ್ವಯತೋರಿ 1 ಸಂಜೆಯ ತೋರಿ ಧನಂಜಯನುಳುಹಿದ ನಿರಂಜನ ಮೂರ್ತೆ 2 ಸತ್ಯಕಾಮ ತವ ಭೃತ್ಯೆಗೆ ಬಂದಪ ಮೃತ್ಯು ಕಳೆದು ಸಂಪತ್ತು ಪಾಲಿಸಿದೆ 3 ಕುಕ್ಷಿಯೊಳಂದು ಪರೀಕ್ಷಿದ್ರಾಜನ ರಕ್ಷಿಸಿದಂತೆ ಪ್ರತಿಕ್ಷಣದಲಿ 4 ಎಲ್ಲರೊಳಿಹ ಕೈವಲ್ಯದರಸು ನೀ ಬಲ್ಲಿದನೆಂಬುದ ಬಲ್ಲೆ ಬಹು ಬಗೆ 5 ನೀ ದಯ ಮಾಡದಿರೀ ದಿವಿಜರು ಒಲಿ ದಾದರಿಸುವರೆ ವೃಕೋದರ ವಂದ್ಯ 6 ಅಧಮ ನಾನಹುದುದಧಿ ಮಥನ ಸ ನ್ಮುದ ಮುನಿಮತ ಪೊಂದಿದವರಣುಗನು 7 ಕ್ಷುದ್ರ ಭೂಮಿಪರುಪದ್ರವ ಕಳೆದು ಸು ಭದ್ರವೀಯೋ ಕ್ಷುದ್ರುಮದಂತೆ 8 ವೀತಭಯ ಜಗನ್ನಾಥ ವಿಠಲ ಸುಖೇತರ ಕಳೆದು ಮಹಾತಿಶಯದಲಿ 9
--------------
ಜಗನ್ನಾಥದಾಸರು
ಕಾಯೋ ಕೇಶವ ದೇವ ದೂರ್ವೆಶಾ ಪಾಯವ ನರಿಯೆನು ಪೊರೆಯೊ ಸರ್ವೇಶಾ ಪ ಸುಜನರ ರಕ್ಷಿಸಿ ಭಜಕರ ಸಲಹುವ ಅಜಪಿತ ಶ್ರೀಹರಿ ಸೇವೆಯ ಗೈವೆ 1 ಸಾಸಿರ ನಾಮಗಳಿಂದ ರಂಜಿಪ ದೇವ ವಾಸುಕಿಶಯನನ ಸೇವೆಯ ಗೈವೆ 2 ವೇದವ ಪಾಲಿಸಿ ಧರಣಿಯ ಸಲಹಿದ ಮಾಧವ ಶ್ರೀಹರಿ ಸೇವೆಯ ಗೈವೆ 3
--------------
ಕರ್ಕಿ ಕೇಶವದಾಸ