ಒಟ್ಟು 1321 ಕಡೆಗಳಲ್ಲಿ , 103 ದಾಸರು , 1056 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುವರ್ಯ ವಿಶ್ವಪ್ರಿಯ ಶಿಷ್ಯರ ಪ ಆಂಗ್ಲದೇಶದ ರಾಣಿಯು ನಿಮ್ಮಯ ಶಾಸ್ತ್ರ ಸಂಪÀದ ಮಹಿಮೆಯನು ಆಂಗ್ಲೇಯ ಜನರಿಂದ ತಿಳಿದು ತಾ ಬಹುಮಾನ- ವಾಂಗ್ಲೇಯ ಭಾಷೆಯೊಳಿತ್ತಳಾದರದಿ 1 ಪಂಡಿತಾಗ್ರಣಿಯಾದರು 2 ಅರುವತ್ತನೆಯ ವರ್ಷದಿ ಪ್ಲವಾಬ್ದದಿ ರಾಜೇಶ ಹಯಮುಖನ ಚರಣವ ಸ್ಮರಿಸುತ್ತ ಸ್ಮರತಾತನನೈದಿದ ಕರುಣಾಸಮುದ್ರರ ಚರಣಕ್ಕೆ ನಮಿಸುವೆ 3
--------------
ವಿಶ್ವೇಂದ್ರತೀರ್ಥ
ಗುರುವಿನರಿಯದೆ ಮರುಳಲೋಕ ಒಂದೊಂದು ಪರಿ ಗುರುಮಾಡಿಕೊಂಡುದರ ಹೊರವುತಿದೆ ಧರೆಯೊಳು ಬರಿದೆ ಭ್ರಮೆಗೊಂಡಿಹ್ಯದು ಪರಗತಿಯ ಜರೆದು ಶ್ರೀ ಗುರುಪಾದವನ್ನರಿಯದೆ 1 ಸತ್ವಧಾತುದ ನೆಲೆಯು ತತ್ವ ಮೋಹಲಾದನು ಮತ್ತೈದು ಮುದ್ರೆಗಳ ವ್ಯಾಪಿಸಿಹ ಪ್ರಾಣವನು ಮುದ್ರಿಸಿದಾತ ಪರಮಗುರುವು 2 ಸತ್ವ ರಜ ತಮವು ಮೊದಲಾದ ಗು- ಣತ್ವಗಳು ಪಂಚಭೂತಾತ್ಮದ ವಸ್ತಿ ವಿವರಣಗಳು ವಿಸ್ತಾರಗತಿಗಳನು ವಿಸ್ತರಿಸಿ ತೋರಿಸಿದಾತ ಸಾಕ್ಷಾತ ಗುರುವು 3 ಸ್ವಪ್ನ ಸುಷುಪ್ತಿ ಜಾಗ್ರತಿ ತ್ರಯವಸ್ಥಿತಿಗಳು ಪ್ರಾಣಪ್ರಣಮ್ಯ ಪ್ರವೃತ್ತಿ ನಿವೃತ್ತಿಗಳು ಶಕ್ತಿ ಉನ್ಮನಿಯ ಉದ್ಬವ ಗತಿಯು ತೋರಿಸಿದಾತ ಸಾಕ್ಷಾತ ಗುರುವು 4 ಹತ್ತು ಮತ್ತೆರಡು ಧ್ವನಿ ವತ್ತಿಗ್ಹೇಳೆನಿಸುವದ ರತ್ನ ಮೂರರ ಪ್ರಭೆಯ ದಾಟಿ ಸಂಜೀವನಿಯ ಸತ್ರಾವಿ ಜೀವನ ಕಳಾ ಮೃತವದೋರಿಸಿದಾತ ಸಾಕ್ಷಾತ ಗುರುವು 5 ಒತ್ತಿ ಆಧಾರ ಬಲದೆತ್ತಿ ಕುಂಡಲಣಿಯ ಕೆತ್ತಿ ಸರ್ಪೆತ್ತಿ ಮುಖ ಮಾಡಿ ಊಧ್ರ್ವ ಗತಿಯು ಮತ್ತೆ ಷಡಚಕ್ರಗಳ ಗತಿಗಳನು ದೋರಿದಾತ ಸಾಕ್ಷಾತ ಗುರುವು6 ಪತಿತ ಮಹಿಪತಿಯ ಪಾವನ್ನಗೈಸುತ್ತಮದಿ ಉತ್ಪತ್ತಿ ಸ್ಥಿತಿ ಲಯವು ತಾರಿಸಿ ಸ- ದ್ಗತಿಯು ನಿತ್ತಿಹ್ಯಾನಂದ ಘನ ಸತ್ಯ ಸದ್ಗುರು ಮೂರ್ತಿ ಸಾಕ್ಷಾತ ಪರಮಗುರುವು | 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಗುರುವು ಗುರುವು ಎಂದು ಜಗದೊಳಗಿಹರುಗುರುವು ಅದ್ಯಾತರ ಗುರುವುನರನನು ತಿಳುಹಿಯೆ ಹರನನು ಮಾಡುವಗುರುವು ಆತನೆ ಸದ್ಗುರುವು ಪ ಜ್ಞಾನವನರುಹಿ ಅಜ್ಞಾನವ ಹರಿಸುವಜ್ಞಾನಿಯಾದವ ಗುರುವುಏನೇನೋ ಭ್ರಾಂತಿಯದೆಲ್ಲವ ನೀಗಿ ನಿ-ಧಾನ ಮಾಡಿದನಾತ ಗುರುವುನೀನೀಗ ನಾನೆಂದು ಸಂಶಯ ಬಿಡಿಸಿಸನ್ಮಾನ ಮಾಡಿದನಾತ ಗುರುವು 1 ಯಮ ನಿಯಮಾಸನ ಎಲ್ಲವನರುಹಿಯೆಎಚ್ಚರಿಸಿದಾತನೆ ಗುರುವುಸಮರಸವಾಯು ಮನವ ಮಾಡಿಕುಂಭಕಕಮರಿಸಿದಾತನೆ ಗುರುವುಘುಮು ಘುಮು ಘುಮು ಎಂಬ ಘಂಟಾಘೋಷವನ್ನೆಬ್ಬಿಸಿ ಅನುವುಮಾಡಿದವ ಗುರುವುದ್ಯುಮಣಿಕೋಟಿ ಕಳೆದೃಷ್ಟಿಗೆ ತುಂಬಿಸಿದೃಢವ ಮಾಡಿದನಾತನೆ ಗುರುವು 2 ದೃಷ್ಟಿಯ ನಿಟ್ಟು ಖೇಚರಿ ಮುದ್ರೆ ನಿಲಿಸಿದಯ ಮಾಡಿದಾತನೆ ಗುರುವುಕಟ್ಟಳಿಲ್ಲದ ತೇಜ ಖವಖವ ನಗಿಸಿಯೆದಿಟ್ಟ ಮಾಡಿದನಾತ ಗುರುವುಮುಟ್ಟಿ ತುಂಬಿದ ಬೆಳದಿಂಗಳ ಖಂಡದಿಮುಳಿಗಿಸಿದಾತನೆ ಗುರುವುಶಿಷ್ಟ ಚಿದಾನಂದ ಸದ್ಗುರುವನಮಾಡಿಸಾಕ್ಷಿ ಮಾಡಿದನಾತ ಗುರುವು 3
--------------
ಚಿದಾನಂದ ಅವಧೂತರು
ಗುರುವೆ ನಮ್ಮ ತಾಯಿ ತಂದೆ | ಗುರುವೆ ನಮ್ಮ ಬಂಧುಬಳಗಗುರುವೆ ನಮ್ಮ ಸರ್ವಸ್ವವು ಗತಿಗೋತ್ರರಯ್ಯಾ ಪ ತಂದೆ ತಾಯಿ ಮಗುವಿಗಾಗಿ | ನೊಂದಿ ಬಳಲಿ ಸಾಕುವಂತೆಎಂದೆಂದು ಅವರೆ ನಮ್ಮ ಸದುಪದೇಶದೀ |ಬಂಧನಕ್ಕೊಳಗಾಗದಂತೆ | ಮಂದರೋದ್ಧರನ ನಾಮಅಂದದಿಂದ ಬೋಧಿಸುತ್ತ | ಉದ್ಧರಿಸುವರಯ್ಯಾ 1 ಮುದ್ದು ಮೋಹನದಾಸರಿಂದ | ಬದ್ಧಶಿಷ್ಯರೆನಿಸಿಕೊಂಡುಶುದ್ಧರು ಅವಧೂತರು | ಹರಿಯನ್ನೆ ಕಂಡೂ |ಗೆದ್ದು ತಾವು ಬಂಧದಿಂದ | ಉದ್ಧರಿಸಲನ್ಯರನುಸಿದ್ಧರಾಗಿ ಕರಿಗಿರೀಲಿ | ದಾಸಕೂಟ ನೆರೆಸೀದ 2 ಸನ್ನುತ ಪರ | ವಸ್ತುವೆಂದು ಬೋಧಿಸಿದ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಗುರುವೆ ನಿಮ್ಮನು ನಾ ಮೊರೆಹೊಕ್ಕೆನಲ್ಲದೆ ಅರಿಯೆ ಅನ್ಯರನಿನ್ನು ಪೊರೆಯಿರೀಗ ಪ. ಸಿರಿಯರಸನ ತೋರಿ ಗುರುವೆ ಕರುಣಿಸಿರಿ ತರತಮ್ಯ ತಿಳಿಸುತ ಹರಿಸಿರಿ ಭವದುಃಖಅ.ಪ. ಬಂದೆನು ಭವದೊಳು ನಿಂದೆನು ತಾಪದಿ ಹಿಂದು ಮುಂದರಿಯದೆ ಕುಂದಿದೆನು ಬಂದು ಕರುಣದಿ ಆನಂದವ ನೀಡುತ ನಂದಕಂದನ ಲೀಲೆಯಿಂದ ರಕ್ಷಿಸಿದಿರಿ1 ಮುಸುಕಿದ ಅಜ್ಞಾನ ಹಸನಾಗಿ ತೊಲಗಿಸಿ ಕುಶಲದ ಮತಿಯಿತ್ತು ಪಾಲಿಸುತ ಬಿಸಜಾಕ್ಷನು ದಯ ಎಸೆವ ಕರುಣದಿಯಿತ್ತು ಘಸಣೆಗೊಳಿಸದಲೆ ವಸುಮತಿಯೊಳು ಪೊರೆವ 2 ಕಷ್ಟವಪಡಲಾರೆ ಸೃಷ್ಟಿಯೊಳಗಿನ್ನು ತಟ್ಟದೆ ಎನ್ನ ಮೊರೆ ಮನಸಿಗೀಗ ಕೊಟ್ಟು ಅಭಯವನು ಘಟ್ಯಾಗಿ ಪೊರೆಯಿರಿ ಕೆಟ್ಟ ಕಲ್ಮಷ ಕಳೆದು ಸೃಷ್ಟಿಗೊಡೆಯನ ತೋರಿ 3 ತಲ್ಲಣಿಸುತಿಹೆ ಕ್ಷುಲ್ಲ ದೇಹದಿ ಬಂದು ಒಲ್ಲೆನು ಈ ದುಃಖಭವ ಎಲ್ಲ ಮನಸು ನಿಮ್ಮ ಪಾದದಲಿರುವುದು ತಲ್ಲಣಗೊಳಿಸದೆ ಪೊರೆಯಿರಿ ಗುರುದೇವ 4 ತಂದೆ ಮುದ್ದುಮೋಹನವಿಠ್ಠಲನೆಂಬೊ ಇಂದಿರೇಶನ ಅಂಕಿತದಿ ಮೆರೆವೊ ಸುಂದರ ಗೋಪಾಲಕೃಷ್ಣವಿಠ್ಠಲನ ಎಂದೆಂದಿಗೂ ಮನಮಂದಿರದಲಿ ಕಾಂಬ 5
--------------
ಅಂಬಾಬಾಯಿ
ಗುರುವೇ ನೀ ಕರುಣಿಸದಿರಲಿನ್ಯಾರು ಕರುಣಿಪರೋ ಪ ಕರಿಗಿರಿಪುರ ತಂದೆ ಮುದ್ದು ಮೋಹನ್ನ ಅ.ಪ. ಮೊರೆಹೊಕ್ಕ ಜನರ ಕೈ ಬಿಡುವರೇನೋಚರಣ ಯುಗ್ಮಕೆ ನಿನ್ನ ನಮಿಸುವೆನೋ |ಭಾರ ವಹಿಸಿ ಬೇಗ ಸಲಹಬೇಕೋ |ಜರೆಯು ನುಂಗುವ ಮುನ್ನ ಪೊರೆಯ ಬೇಕೋ 1 ಭವ ರೋಗವ ಕಳೆಯೋಉನ್ನತ ಪದವಿಗೇರುವ ದಾರಿ ತೋರೋ |ಘನ್ನ ಮಹಿಮ ನಿನ್ನ ಹೊರತು ಮತ್ಯಾರೋಎನ್ನ ಅಂಕಿತ ನಾಮ ಹರಿಯನ್ನ ತೋರೋ 2 ಹಂಬಲ ಕೊಡು ಎನಗೆ ಹರಿಪಾದದಲ್ಲೀನಂಬಿ ತುತಿಪೆನಯ್ಯ ತವ ಪಾದದಲ್ಲೀ |ಬಿಂಬ ಗುರು ಗೋವಿಂದ ವಿಠ್ಠಲನಲ್ಲಿಹಂಬಲ ಸ್ಥಿರವಾಗಿ ನಿಲಿಸೋ ನೀನಲ್ಲೀ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಗೂಳ್ಯಾಗಿ ಮೆರೆಯಣ್ಣ ಶ್ರೀಹರಿ ಗೂಳ್ಯಾಗಿ ಮೆರೆಯಣ್ಣ ಪ ಗೂಳ್ಯಾಗಿ ಮೆರೆಯೆಲೊ ಮೂಳಮಾನವರ ಆಳಾಗಿ ಕೆಡದ್ಯಮದಾಳಿಯ ಗೆಲಿದು ಅ.ಪ ಅದ್ರಿಧರನಡಿಯ ಪ್ರೇಮವೆಂಬ ಮುದ್ರೆಯನ್ನು ಪಡೆಯೋ ಕ್ಷುದ್ರದಾನವ ಹರರುದ್ರಾದಿನುತ ಸ ಮುದ್ರಶಾಯಿಧ್ಯಾನ ಭದ್ರಮಾಡಿಟ್ಟುಕೊಂಡು 1 ಕುಜನರ ಸಂಗ ತಳ್ಳೋ ಸುಸಂಗ ಭುಜವ ಬೆಳೆಸಿಕೊಳ್ಳೋ ಭುಜಗಶಯನನ ನಿಜಚರಣದ ಮಹ ಭಜನೆವೆಂದೆಂಬುವ ಝಾಲ ಧರಿಸಿಕೊಂಡು 2 ತಾಮಸವನ್ನು ನೀಗಿ ಸುಜನರ ಪ್ರೇಮಪಾತ್ರನಾಗಿ ಶಾಮಸುಂದರ ಶ್ರೀರಾಮನಾಮ ತ್ರಿ ಭೂಮಿಗಧಿಕೆಂದು ನಿಸ್ಸೀಮ ಡುರುಕಿ ಹೊಡಿ 3
--------------
ರಾಮದಾಸರು
ಗೋದಾ ಎನ್ನೊಳ್ವಿನೋದದಿಂದ ಪಾದ ಪ ಸಾಧು ಸಜ್ಜನರಿಗೆ ಸ್ನಾನದಫಲ ಕೊಟ್ಟು ಬೋಧಿಸಿ ಹರಿದಯ ಸಾಧಿಸಿ ಕೊಡಿಸುವಿ 1 ಅಕ್ಕ ತಂಗೇರು ಕೂಡಿ ಉಕ್ಕೋ ಉಲ್ಲಾಸದೆ ಲಕ್ಕುಮೀಶನ ಮುದ್ದು ಮಕ್ಕಳ ಮನೆಗೊಯ್ವೆ 2 ದೂರದಿ ಬಂದೆ ನಾ ಗೋದಾವರಿಯೆ ನೀನು ತೋರೆ ಭೀಮೇಶಕೃಷ್ಣನ್ನೂರು ದಾರಿಗಳ 3
--------------
ಹರಪನಹಳ್ಳಿಭೀಮವ್ವ
ಗೋಪಾಲ ಬಾಲಾ ತ್ರಿಭುವನ ಪಾಲಾ ಕರುಣಾಲವಾಲ ಗೋಪಾಲ ಬಾಲಾ ಗೋಪೀ ಬಾಲಾ ಭಕುತಾನುಕೂಲ ಪ ಪಾಪಕುಲಾನಲ ತಾಪಸ ಸಂಕುಲ ಶ್ರೀಪತೆ ಮಾಂಗಿರಿನಿಲಯ ಶುಭಾಕುಲ ತಾಪತ್ರಯ ಕುಲಜಾಲ ನಿರ್ಮೂಲ ಗೋಪಗೋಪಿಕಾನಂದದುಕೂಲಾಅ.ಪ ಮುರಳೀಧರ ಘನಸುಂದರ ಭಾವ ದೇವಾದಿದೇವ ಸರಸೀರುಹದಳನಯನ ಸ್ವಭಾವಾ ಜೀವಾದಿಜೀವ ವರದಾಯಕ ಶರಣರ ಸಂಜೀವಾ ಮೃದುಮಧುರಸ್ವಭಾವ ಸ್ವರನಾದದಿ ಘಲು ಘಲ್ಲೆನುತಿರುವಾ ವರನೂಪುರದುಂಗುರ ಝಣ ಝಣರವ ಹರುಷದೊಳೆಲ್ಲೆಡೆಯೊಳು ನಲಿನಲಿದಾಡುವ 1 ಮುದ್ದಾಡಿ ನಲಿಯಳೆ ನಿನ್ನ ಯಶೋದಾ ಅಘರೂಪವಾದ ಮುದ್ದೆ ಬೆಣ್ಣೆಯ ಮೆಲುವಾತುರದಿಂದ ಕರಯುಗಗಳಿಂದ ಕದ್ದು ನೀ ನೋಡುವುದೇ ಅತಿಚೆಂದ ಭಕ್ತರಾನಂದಾ ಮದ್ದುಣಿಸಿದಳ ಒದ್ದು ಸಂಹರಿಸಿದ ಮೆದ್ದು ಉದ್ಧರಿಸೊ ಗೋವಿಂದ ನಂದನಕಂದ 2 ಅಕ್ಕೋ ಬೃಂದಾವನದಾನಂದ ಹೊಂಗೊಳಲಿಂದಾ ಇಕ್ಕೋ ಚೆಂದದ ಗಾನಾನಂದ ಕಿರುನಗೆಯಿಂದ ಕಕ್ಕುಲತೆಯ ಮದದಿಕ್ಕೆಗೆ ಸಿಲುಕದ ಠಕ್ಕುಗಾರ ಸೊಬಗಿಂದ ರಾಧೆಗೆ ಮುದ ವಿಕ್ಕಿ ಮಡುವ ಧುಮ್ಮಿಕ್ಕಿ ನರ್ತನಗೈದ 3 ವೈರಿ ಕಂಸಾರಿ ಶೌರಿ ಬಾ ಬಾರೋ ಪಾಂಡವ ಪಕ್ಷ ವಿಹಾರೀ ಶಿಶುಪಾಲ ಸಂಹಾರೀ ಭವ ಬಂಧನ ಪರಿಹಾರಿ ಶರಣರಿಗುಪಕಾರೀ ಇಭಕುಲಕೇಸರಿ ಘನ ಗಿರಿಧಾರೀ ಅಭಯಪ್ರದ ಹರಿ ಗೂಢಸಂಚಾರಿ ನಭಚರಹರಿ ಮಾಂಗಿರಿ ಸುವಿಹಾರೀ 4
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಗೋಪಾಲಕೃಷ್ಣರಾಯ ತಾಪತ್ರಯಗಳೆಲ್ಲ ನೀ ಪರಿಹರಿಸು ಜೀಯ್ಯಾ ಪ ವಿದ್ಯಾಶ್ರೀ ಸಿಂಧುತೀರ್ಥ ಶುದ್ಧ ಪದ್ಧತಿಯಿಂದ ಶುದ್ಧ ಪೂರ್ವಕ ನಿನ್ನ ಭಜಿಪೆನು ಅನುದಿನ ಮುದ್ದುಮೋಹನ ನೀನು ತಿದ್ದಿ ಸರ್ವರ ಹೃದಯ ಬದ್ಧನಾಗಿರುತಿ ಪ್ರಸಿದ್ಧ ಮೂರುತಿ ವೇಣು 1 ಸುರಪನ ಗರ್ವವ ಹರಣವ ಮಾಡಿ ನೀ ವರವಿತ್ತೆ ಕಾಳಿಂಗ ಉರಗನಿಗೆ ಸುರರ ವೃಂದಗಳೆಲ್ಲ ಪೊರೆವುತ ಸರ್ವದಾ ವರ ಕಲ್ಪತರುವೆಂದು ಮೆರೆಯುವಿ ಧರೆಯೊಳು 2 ಗಿರಿಯನು ಪೊತ್ತು ನೀ ಪೊರೆದಿಹ ತುರುಗಳ ಮರೆಯೋದು ಯನ್ನನು ಸರಿಯೆನೊ ಹರಿಯೆ ಶರಣ ರಕ್ಷಕ ಬೇಗ ಕರುಣಾಳು ಕಾಯಯ್ಯ ಶ್ರೀವತ್ಸಾಂಕಿತನಾದ ವರಜಾರಚೋರ ವೇಣು 3
--------------
ಸಿರಿವತ್ಸಾಂಕಿತರು
ಗೋಪಿ | ತೋರಿಸೇ || ಅವನ ದೂರಿಂದ ಸಾಕಾರ | ನೋಡುವೆ ಜೋಗಿಯಾ ಪ ಚಿಕ್ಕ ಮಕ್ಕಳು ಅಂಜಿ | ಪಕ್ಕನೆ ಒಳಮನೆ || ಪೊಕ್ಕರು ನೋಡುತಾ || ಮುಕ್ಕಣ್ಣಿನವನ 1 ಎಂದ ಮುದ್ದಿನ ನುಡಿ | ಚೆಂದದಿ ಕೇಳುತ || ಕಂದನೆತ್ತಿಕೊಂಡು | ಬಂದಳೆಶೋದಾ 2 ಇಂದು ಮೌಳಿಯ ನೋಡಿ | ಮಂದಹಾಸದಲಿಂದಾ | ನಂದವ ನಿತ್ತನು | ಬಂದ ಮಹೇಶಗೆ || 3 ಶುಭ | ಚರಣಕೆ ಎರಗುತ || ತೆರಳಿದ ಸಾಂಬನು | ಹರಷದಲಿಂದ 4 ಅನುದಿನ | ಧರೆಯೊಳು ಕಾಂಬುವರ | ಸುಕ್ರತವೆಂತೋ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಗೋಪಿ ನಿನ್ನಯ ಬಾಲಕೃಷ್ಣನ ಚೇಷ್ಟೆಯ | ತಾಳಾಲಾರೆನು ನೀನು ಕರೆದು ಪೇಳದಿದ್ದರೆ ಬುದ್ಧಿಯ 1 ಮನೆಮನೆಗಳ ಪೊಕ್ಕು ಪೊಕ್ಕು ಪಾನ ಮಾಡುವ ಬಾಲನು | ಮಾನಿನೀಯರು ಕಂಡು ತಡೆದರೆ ಸ್ತನವ ಪಿಡಿದು ಮುದ್ದಿಪ 2 ಬೆಳಕು ಇಲ್ಲದ ಎಡೆಯಲ್ಲಿದ್ದರು ಹೊಳೆವನೇ ಸುರಧೀಪತಿ | ಉಳಿಯದಂತೆ ಕದ್ದು ಮೆದ್ದವ ಬಾಲನೆಂಬುದು ಉಚಿತವೆ 3 ಪರಿ ತನ್ನನೆಂದರೆ ಪರಮ ಹರುಷವ ಮಾಡುವ 4 ಮಣಿ ಏನು ಮಹಿಮೆಯ ಬಲ್ಲನೇ ರಘುತಿಲಕನೇ 5
--------------
ಅನ್ಯದಾಸರು
ಗೋಪಿ ನೋಡಮ್ಮಾ ಪ ಗೋಪಿ ನೋಡಮ್ಮಾ ದೇವ ದೇವೋತ್ತಮನಾದ ಕೇವಲ ಪರಬ್ರಹ್ಮ| ದೇವಿಮಗನಾಗಿ ಬಂದಿಹನೆ ನರರಂದದಿ ನಮ್ಮಾ ಭಾವಿಸಿ ಬ್ರಹ್ಮನ ಜನಕನ ಶಿಶುವೆಂದು ಮುದ್ದಾಡಿಸುವಾ ಸಂಭ್ರಮಾ1 ಮುಖಸಾರಭೋಕ್ತನಿಗೆ ಮೊಲೆ ಹಾಲನುಣಿಸಿ| ಮಜ್ಜನ ಗೈಸಿ| ಪ್ರಕಟಿದಿ ಶೇಷಶಾಯಿಗೆ ತೊಟ್ಟಿಲದಿ ಮಲಗಿಸಿ| ಸುಖಯೋಗ ನಿದ್ರೆಯುಳ್ಳಂಗೆ ಮಲಗೆಂದು ಜೋ ಜೋ ಎಂಬಳಾಕೆ 2 ಆವ ಯೋಗ ಮಾಯದಲಿ ಮೂಜಗವಾಡಿಸುವ| ಆವ ಮುಂಜರಗ ಸಿಡಿದು ಬೆಣ್ಣೆ ಬೇಡುತ ಕುಣಿವಾ| ಗೋಪಿ ಕೈಯೊಳಾಡುವಾ| ಆವನಲಿ ಮಹಿಪತಿ-ಸುತ ಪ್ರಭು ಲೀಲೆಯ ಕಣ್ಣಲಿ ನೋಡಿ ಸುಖಿಸುವಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಗೋಪಿ ಬಾಲನೇ ಪ ಮುದ್ದು ಕುಂಡಲಧರ ಮಿದ್ದು ಚಪ್ಪಿರವನು1 ಎತ್ತಿಕೊಳಲು ಉಗುರೊತ್ತುವ ನೆದಿಯಲಿ 2 ಗುರುಮಹಿಪತಿ ಪ್ರಭು ಚರಿತವ ತಿಳಿಯದು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಗೋಪಿ ನಿನ್ನ ಮಗನು ಬಂದು ತಾಪಿಸಿದ ಮಕ್ಕಳನ್ನುಪ. ಕೋಪಿಸಬ್ಯಾಡವೆ ನೀನು ಭೂಪತಿಗ (ಳಿಗ್ಯೇಳೆ) ನುಅ. ಪ. ಕಂಡವರ ಮನೆಯೊಳಿವನು ಪುಂಡುತನವ ಮಾಡಿದದುಮಕ್ಕಳೆಂಬುವನು ದಿಂಡೆತನವ ಮಾಡಿದನು 1 ಹಿತ್ತಿಲ ಬಾಗಿಲೊಳ್ಬಂದು ಒತ್ತಿದ ಹಾಲನ್ನೆ ತಂದವೃತ್ತಪಯೋಧರಿಯರ ಮುತ್ತಿನ ಹಾರವ ಕಳೆದ 2 ಬೆಣ್ಣೆಗಳ ಕದ್ದು ತಿಂದು ಮಣ್ಣಿನ ಭಾಂಡವನೊಡೆದಹೆಣ್ಣುಗಳ ಬೆನ್ನ ಬಡಿದ ಸಣ್ಣ ಮೊಲೆಗಳ ಪಿಡಿದ 3 ನಿದ್ರೆ ಹೊತ್ತಿನೊಳು ಬಂದು ಕ್ಷುದ್ರತನವ ಮಾಡುತ್ತನಿಂದಸದ್ದು ಮಾಡದಿರೆಯೆಂದ ಮುದ್ದು ಕೊಡುವೆ ನಿನಗೊಂದ 4 ಸಿರಿ ಹಯವದನ ಬಂದ 5
--------------
ವಾದಿರಾಜ