ಒಟ್ಟು 423 ಕಡೆಗಳಲ್ಲಿ , 84 ದಾಸರು , 353 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀ ಸತ್ಯಪರಾಯಣ ಸ್ವಾಮಿಗಳ ಸ್ತುತಿ ಕಂಗಳು ದಣಿಯ ನೋಡೆಲೆ ಮನವೆ |ಮಂಗಳಾಂಗ ಸತ್ಯಪರಾಯಣ ಗುರುಗಳ ಪ ಹಿಂದಿನ ಜನುಮದಿಂದ | ಬಂದ ಪಾಪಂಗಳ ||ಇಂದು ತಮ್ಮ ದರುಶನ | ದಿಂದ ಕಳದಾ 1 ನಂದತೀರ್ಥ ಶಾಸ್ತ್ರ | ಸಿಂಧುವಿಗೆ ಪೂರ್ಣ ಚಂದ್ರಾ |ನಂದದಲೊಪ್ಪುವ ಗುಣ | ಸಾಂದ್ರರ ಪದಂಗಳ 2 ವರಸೀತಾರಾಮ ಪದ | ಸರಸಿಜಕೆ ಮಧುಪಾ ||ಗುರುಪ್ರಾಣೇಶ ವಿಠಲಾ ನಿರಸಿಹ ಹೃದಯದಿ 3
--------------
ಗುರುಪ್ರಾಣೇಶವಿಠಲರು
ಶ್ರೀ ಸತ್ಯಸಂಧರು ಸತ್ಯ ಬೋಧರ ಕಂಡ | ಯತಿವರ್ಯ ಸತ್ಯಸಂಧ ಕೃತ್ಯ ನಿಮ್ಮದು ಆನಂದಾ ಪ ಸ್ತುತ್ಯುಯತ್ಯಾಶ್ರಮವ ವಹಿಸುತಪ್ರತ್ಸಹತ ಸಚ್ಚಾಸ್ತ್ರ ಬೋಧಕಪ್ರತ್ಯರ್ಥಿ ಮಾಯ್ಗಳ ಖಂಡಿಸುತಭೃತ್ಯ ಜನಕಭೀಷ್ಟ ಗರೆವಾ ಅ.ಪ. ಗಂಗೆಮೀಯಲು ಸಾಧು ಸಂಗದಿ ತೆರಳುತ್ತಅಂಗಜಾರಿಯ ಪುರದೀ |ಮಂಗಳಾಂಗನು ಹರಿಪದಾಬ್ಜದಿಬೃಂಗರೆನಿಸುತ ಪೂಜೆಯ ಗೈಯ್ಯಲುರಂಗ ಹರಿಪಾದಾರವಿಂದವಕಂಗಳಿಂದಲಿ ಕಂಡಯತಿಯ 1 ಗಯ ಗಧಾದರ ನಂಘ್ರಿಪ್ರಿಯವಿಂದ ಭಜಿಸಲುನಯಸುತ್ತ ಪರಿವಾರವಾ |ಮಾಯಿಗಳ ದುರ್ವಾದ ಖಂಡಿಸಿಹೇಯಮತವಿದ್ವಂಸ ಗೈಯ್ಯುತರಾಯದಶರಥ ಸುತನು ರಾಮಗೆಜಯಪತ್ರಾರ್ಪಿಸಿದ ಮಹಿಮ 2 ವಿಷ್ಣುಪಾದವ ಮನ ಮುಟ್ಟಿ ಭಜಿಸಲು ಪೋಗೆದುಷ್ಟಗಯಾಳವಾರರು |ದಿಟ್ಟತನದಲಿ ಕದವಮುಚ್ಚಲು |ಶ್ರೇಷ್ಠ ಯತಿಗಳ ಭಕ್ತಿಗೊಲಿಯುತಥಟ್ಟನೇ ಕದತೆರೆಯಲಂದಿನಅಟ್ಟಹಾಸದಿ ಪೂಜೆಗೈದ 3 ಬಾಳಲಜ್ಜೆಲಿಗಯ | ವಾಳರು ಶರಣೆನ್ನೆಲಾಲಿಸುವರ ಭಿನ್ನ ಪ |ಮೂಲರಾಮರ ಸೇವೆಯನುಗಯೆವಾಳರೆಲ್ಲರು ಮಾಡಲೆನುತಲೀಲೆಯಿಂ ಮುದ್ರಾಂಕಗೈದಘಜಾಲವನು ತಾ ಕಳೆದ ಯತಿಯ 4 ಮಹಿಷಿ ಕ್ಷೇತ್ರದಿಅಂಗವೃಂದಾವನವ ಪೊಗಿಸುತರಂಗಗುರು ಗೋವಿಂದ ವಿಠಲನಮಂಗಳ ಧ್ಯಾನದಲಿರುತಿಹ 5
--------------
ಗುರುಗೋವಿಂದವಿಠಲರು
ಶ್ರೀಕೃಷ್ಣಪರಬ್ರಹ್ಮ ನಮೊ ಶೇಷತಲ್ಪಶಯಶೌರಿ ನಮೊಪ್ರಾಕೃತರ'ತಾನಂತ ನಮೊ ಪರಮಪುರುಷ ಭವದೂರ ನಮೊ 1ಮದನಾರ್ವಧುಸುರಸ್ತೌತ್ಯ ನಮೊ ಮಧುಕೈಟಭದೈತ್ಯಾರಿ ನಮೊಯದುಕುಲಾಂಬುಧಿಸುಧಾಂಶ ನಮೊ ವಾಸುದೇವ ಪರಮಾತ್ಮ ನಮೊ 2ದೇವಕಿದೇ'ಕಿಶೋರ ನಮೊ ದ್ವಿಜಸುತಪ್ರಾಣಸುರಕ್ಷ ನಮೊಭಾವಜಪಿತ ಜಗನ್ನಾಥ ನಮೊ ಭಕ್ತಪ್ರಿಯಗೋಂ'ದ ನಮೊ 3ಅಷ್ಟಮಗರ್ಭಸಂಜಾತ ನಮೊ ಅ'ುತಧೈರ್ಯಗಾಂಭೀರ್ಯ ನಮೊದುಷ್ಟಪೂತನಧ್ವಂಸ ನಮೊ ಧೇನುಕಶಕಟ'ದೂರ ನಮೊ 4ಗೋವರ್ಧನಗಿರಿಧಾರಿ ನಮೊ ಗೋಪಗೋಪಿಕಾಲೋಲ ನಮೊಶ್ರೀವಸುದೇವಾನಂದ ನಮೊ ಸಾಂದೀಪಪ್ರಿಯಬೋಧ ನಮೊ 5ಯಶೋದನಂದೋತ್ಸಾಹ ನಮೊ ವೇಣುಗಾನ'ನೋದ ನಮೊಶಿಶುಪಾಲಶಿರಚ್ಛೇದ ನಮೊ ಶಂಖಚಕ್ರಕರಧಾರಿ ನಮೊ 6ಕೌರವಗರ್ವ'ದಾರಿ ನಮೊ ಕುಬ್ಜಪಾಲಕಮಲಾಕ್ಷ ನಮೊಪಾರಿಜಾತಮಪಹಾರಿ ನಮೊ ಪಾವನತೀರ್ಥಪದಾಯ ನಮೊ 7ತೃಣಾವರ್ತನಾಶಾಯ ನಮೊ ದ್ವಾರಕಾಪುರ'ಹಾರಿ ನಮೊಮೌನಿಮಾನಸೊಲ್ಲಾಸ ನಮೊ ಮಧುರಾಪುರಿನಾಥಾಯ ನಮೊ 8'ದುರ ಅಕ್ರೂರಸ್ತೌತ್ಯ ನಮೊ ವೃಷಭ ಮ್ಟುಕ ಮುರಾರಿ ನಮೊ (?) 9ಶ್ರೀರುಕ್ಮಣಿಹೃದಯೇಶ ನಮೊ ಸಿಂಧುಶಯನ ಕಂಸಾರಿ ನವನೀತ ನಮೊ ಜಂಭಭೇದಿಸುತಪ್ರೇಮ ನಮೊ 10ವೈಜಯಂತಿವನಮಾಲ ನಮೊ ವನದಶ್ಯಾಮಲವರ್ಣ ನಮೊವಜ್ರಸ್ಥಗಿತಕಿರೀಟ ನಮೊ ವರಮಣಿಕುಂಡಲಧರಣ ನಮೊ 11ಭುಜಕಿರೀಟಶುಭಗಾತ್ರ ನಮೊ ಭುವನಮೋಹನಾಕಾರ ನಮೊಅಜಪಿತಕನಕಸುಚೇಲ ನಮೊ ಆರ್ತಶರಣ್ಯೋದ್ಧಾರ ನಮೊ 12ಕಾಲಯವನಮದಖಂಡ ನಮೊ ಕೋಟಿರ'ಪ್ರಭಾಭಾಸ ನಮೊಮಾಲಾಕಾರುಪಕಾರ ನಮೊ ಲೀಲಾಮಾನುಷವೇಷ ನಮೊ 13ದ್ರೌಪತಿಕಭಯೋದ್ಧಾರ ನಮೊ ಧನಂಜಯಾದಿಸುಪಕ್ಷ ನಮೊಶ್ರೀಪತಿಸಕಲಾಧಾರ ನಮೊ ಸರ್ವಭೂತಹೃದಯಾತ್ಮ ನಮೊ 14ನಿಖಿಲಚರಾಚರದೂಪ ನಮೊ ನಾಮರೂಪಕ್ರಿಯರ'ತ ನಮೊಅಖಂಡಮಚಲಾಕಾರ ನಮೊ ಅದ್ಭುತಮ'ಮಾಪಾರ ನಮೊ 15ಸಗುಣನಿರ್ಗುಣಾತೀತ ನಮೊ ಸತ್ಯಾಸತ್ಯಸುಬೋಧ ನಮೊನಿಗಮಾಗನಶೃತಿಸಾರ ನಮೊ ನಿರ್ವಿಷಯಾಭವಪ್ರಣವ ನಮೊ 16ಅಜಪಸೂತ್ರಸಂಕೇತ ನಮೊ ಹಂಸತತ್ವಸುಪ್ರಕಾಶ ನಮೊತ್ರಿಜಗಾಂತರ್ಬ'ವ್ಯಾಪ್ತ ನಮೊ ತ್ರಿಗುಣಾಪ್ರತಿಭಾಗಮ್ಯ ನಮೊ 17ತುಳಸಿರಾಮ ಗುರುಸ್ತೌತ್ಯ ನಮೋ ತಾಕ್ಷ್ರ್ಯಾಚಲವರವಾಸ ನಮೊಮುಳಬಾಗಿಲಪುರಿಪಾಲ ನಮೋ ಮಹಾನುಮಪ್ರಿಯ ವಂದ್ಯ ನಮೋ 18ಮಂಗಳಮಘಚಯಭಂಗ ನಮೋ ಮಂಗಳಂ ಪಾ' ಪಾ' ನಮೋರಂಗಸ್ವಾ'ುದಾಸ ಪೋಷ ನಮೋ ಮಂಗಳಾಂಗ ಶ್ರೀಕೃಷ್ಣ ನಮೋ 19
--------------
ಮಳಿಗೆ ರಂಗಸ್ವಾಮಿದಾಸರು
ಶ್ರೀದೇವಿಯಂ ಭಕ್ತರೊಡನೆ ಶುಭಕಾಯವೊಲಿದು ಆಡಿದನುಯ್ಯಾಲ ಪ ನೀಲಿಮಾಣಿಕದ ಮಂಟಪವ ಕಟ್ಟಿ ಮುತ್ತಿನ ಸರಪಣಿಗಳನೆ ಬಿಗಿಸಿ ಮೇಲುಕಟ್ಟುಗಳ ಹಾಸಿ ಮಲ್ಲಿಗೆಮಾಲೆಗಳ ಶೃಂಗರಿಸಿ 1 ಪಟಹ ನಿಸ್ಸಾಳ ಭೇರಿ ಕೊಳಲು ತಮಟವಾದ್ಯ ಮೊಳಗುತಿರಲು ಕುಟಿಲಕುಂತಲೆಯರೊಡನೆ ಆದಿಪತಿ ವಿಠಲನಾಡಿದ 2 ಚಂದ್ರಮನ ಪೋಲ್ವ ಮುಖದಿ ಫಣಿಯೊಳು ಶೌನಕಾದಿಗಳು ಸೇರಿ [ಅಂದದಿ] ಸ್ತುತಿಸೆ ಕ್ಷೀರಾಬ್ಧಿಶಯನನಾಡಿದ3 ಭೇರಿ ಶಂಖಗಳ ದ್ವನಿಯ ದುಂದುಭಿಯ ಭೋರಿಡುವ ಜಯರವಗಳ ನಾರಿಯರು ಶೋಭನಗಳ ಪಾಡುತ್ತಿರೆ ಧೀರನಾಡಿದ 4 ವೇದಚೋರನ ತರಿದು ಆದಿಮೂರುತಿ ವರದನ ವಿ- ನೋದದಿ ತೂಗಿದರು ರವಿಸೌಂದರಿಯನಾಡಿದ 5 ನೀಲವೇಣಿಯರು ಪಾಡುತ ತೂಗಿದರು ಗೋಪಾಲನಾಡಿದ 6 ಪರಶುಧರನೆನಿಸಿ ಹರನ ಶ್ರೀರಾಮಚಂದ್ರ ಕರುಣಾ ವಾರಿಧಿ ಕೃಷ್ಣನ ತೂಗಿದರು ವರಸತಿಯರು 7 ಚೋಜಿಗದಮತ್ಪುರದಸತಿಯರನುವೋಜಿಗಲಿಸಿದಭೌದ್ಧನಾ ತೇಜಿವಾಹನಕಲ್ಕ್ಯನಾ ತೂಗಿದರು ರಾಜೀವನೇತ್ರೆಯರು ಪಾಡುತ 8 ಚಿತ್ತಜೌಘ ಮನಮನದ ಚದುರೆಯರು ಮುತ್ತು ಸರಗಳನೆ ಧರಿಸಿ ದತ್ಯಂತ ಮೋಹದಿಂದ ತೂಗಿದರು ಹಸ್ತಿನೀಕಾಮಿನಿಯರು9 ಮತ್ತೆಸಾರಂಗವೆನಲುನಡೆಯುತಲಿವಿಸ್ತರಿಸಿಕುಚಯುಗಳದಿ ಕಸ್ತೂರಿಯ ಗಂಧವೆಸೆಯೆ ತೂಗಿದರು ಚಿತ್ತಿನೀಜಾತದವರು 10 ಕುಂಕುಮಾಂಕಿತ ಚದುರೆಯರಲಂಕರಿಸಿ ಭೂಷಣಗಳ ಶಂಕರನಸಖನ ಪಾಡಿ ತೂಗಿದರು ಶಂಖಿನೀಕಾಮಿನಿಯರು 11 ಕದಪುಗಳ ಕಾಂತಿಹೊಳೆಯೆ ಮೊಗಸಿರಿಯಪದುಮವನು ಪೋಲ್ವಂದ ಯದುವೀರನನು ಪಾಡುತತೂಗಿದರು ಕುಮುದಿನೀಕಾಮಿನಿಯರು 12 ಅಂಗನಮಣಿ ಪಾರ್ವತಿ ಸರಸ್ವತಿಯರು ರಂಗುಮಾಣಿಕರತ್ನದ ಮಂಗಳಾರತಿಯನೆತ್ತಿ ತೂಗಿದರು ಗಂಗೆಯನು ಪಡೆದಯ್ಯನ 13 ಚಿಂತಿತಾರ್ಥವ ಸಲಿಸುವ ಮುದ್ದುವೆಂಕಟೇಶನು ತಾನೆನಿಸುವ ಪಿತ ದೇವಪುರದ ಶ್ರೀಲಕ್ಷ್ಮೀಕಾಂತನಾಡಿದನುಯ್ಯಾಲಾ 14
--------------
ಕವಿ ಲಕ್ಷ್ಮೀಶ
ಶ್ರೀನಿವಾಸ ಪಾಹಿಮಾಂ ಸದಾ ಶ್ರಿತಜನಾಮೋದ ಮೌನಿಜನ ಚಾತಕಾಂಭೋದ ಪ ಸಾನುರಾಗ ಯುಗಮುನಿ ಮಾನಿತಾವರಾರವಿಂದ ಭಾನುಕೋಟಿ ತೇಜ ಸಾಮಗಾನಲೋಲ ಶ್ರೀಮುಕುಂದ ಅ.ಪ ವಾರಿಜಾಸನಾರ್ಚಿತ ಪ್ರಭೋ ವಂ ದಾರುಜನ ಪಾರಿಜಾತ ಧೃತಕೌಸ್ತುಭ ಶಾರದೇಂದೀವರನೇತ್ರ ಶ್ಯಾಮಳನೀರದ ಗಾತ್ರ ಸಾರ ಸನ್ಮಣಿ ಕೇಯೂರ ಹಾರ ಭೂಷಾ ಸುಪವಿತ್ರ 1 ಸರ್ವಲೋಕಪಾಲಕೇಶ್ವರಸೇವಿತಸುಪರ್ವಗಣಸದ್ಗುಣಾಕಾರ ಶರ್ವ ಸುರಪತಿ ಮುಖ್ಯ ಸರ್ವದೇವವರವರ್ಯ ಸೂರ್ಯ ಪರ್ವತಾಧಿರಾಜ ಧೈರ್ಯ 2 ಸೃಷ್ಟಿ ರಕ್ಷಣಾಂತಕಾರಕ ಸರ್ವಾತ್ಮಕ ಶಿಷ್ಟದೇವ ದ್ವಿಜರಕ್ಷಕ ಅಷ್ಟಸಿದ್ಧಿಪ್ರದಾ ಸರ್ವೋತ್ಕøಷ್ಟ ಕಷ್ಟನಿವಾರಣ ಅಷ್ಟಮೂರ್ತಿ ಪ್ರಿಯ ಸರ್ವಾಭೀಷ್ಟದ ಗೋಪಾಲಕೃಷ್ಣ 3 ಶ್ರೀಕರ ಶೃಂಗಾರಶೇಖರ ಶ್ರೀಕರಗೃಹ ಶ್ರೀಕರಧಾರಿತ ಮಂದರ ಪಾಕವೈರಿ ಮಣಿನೀಲ ಪಾವನ ಸುಗುಣಶೀಲ ಶೋಕ ಮೋಹ ಸುವಿವೇಕ ನಿತ್ಯೋದಾರ ಶೂರ 4 ಮಾರಜನಕ ಮಂಗಳಾಕಾರ ಮಾರಶತಕೋಟಿ ಸುಂದರ ಸಾರವಸ್ತುಚಯಪರಿಪೂರ ವ್ಯಾಘ್ರಾಧ್ರಿವಿಹಾರ ಧೀರ ವರದವಿಠಲ ಸುರಾಸುರಾರ್ಚಿತಾಂಘ್ರಿಕಮಲ 5
--------------
ವೆಂಕಟವರದಾರ್ಯರು
ಶ್ರೀನಿವಾಸ ಪಾಹಿಮಾಂ ಸದಾ-ಶ್ರಿತಜನಮೋದ ಮೌನಿಜನಜಾತಕಾಂಬೋದ ಪ ಭಾನುಕೋಟಿ ತೇಜ ಸಾಮಗಾನ ಲೋಲ ಶ್ರೀಮುಕುಂದ ಅ.ಪ ವಾರಿಜಾಸನಾರ್ಚಿತ ಪ್ರಭೋ-ವಂದಾರುಜನ ಪಾರಿಜಾತ ಧೃತಕೌಸ್ತುಭ ಶಾರದೇಂದೀವರನೇತ್ರ ಶ್ಯಾಮಳನೀರದ ಗಾತ್ರ ಸಾರ ಸನ್ಮಣಿ ಕೇಯೂರ ಹಾರ-ಭೂಷಿಸುಪವಿತ್ರ 1 ಸರ್ವಲೊಕಪಾಲಕೇಶ್ವರ-ಸೇವಿತಸುಪರ್ವಗಣಸದ್ಗುಣಾಕರ ಗರ್ವಿತದೈತ್ಯಾಂಧಃಸೂರ್ಯ-ಪರ್ವತಾಧಿರಾಜಧೈರ್ಯ 2 ಸೃಷ್ಟಿರಕ್ಷಣಾಂತಕಾರಕ-ಸರ್ವಾತ್ಮಕ-ಶಿಷ್ಟದೇವ ದ್ವಿಜರಕ್ಷಕ ಅಷ್ಟಸಿದ್ಧಿಪ್ರದಾ ಸರ್ವೋತ್ಕøಷ್ಟ ಕಷ್ಟನಿವಾರಣ ಅಷ್ಟಮೂರ್ತಿ ಪ್ರಿಯ ಸರ್ವಾಭೀಷ್ಟದ ಗೋಪಾಲಕೃಷ್ಣ 3 ಧಾರಿತ ಮಂದರ ಪಾಕವೈರಿಮಣಿನೀಲ ಪಾವನ ಸುಗುಣ ಶೀಲ ಶೋಕಮೋಹಸುವಿವೇಕ ನಿತ್ಯೋದಾರ ಶೂರ 4 ಮಾರಜನಕ ಮಂಗಳಾಕಾರ ಮಾರಶತಕೋಟಿ ಸುಂದರ ಸಾರವಸ್ತುಚಯಪರಿ ಪೂರವ್ಯಾಘ್ರಾದ್ರಿ ವಿಹಾರಧೀರ ವರದ ವಿಠಲ ಸುರಾಸುರಾರ್ಚಿತಾಂಘ್ರಿಕಮಲ 5
--------------
ಸರಗೂರು ವೆಂಕಟವರದಾರ್ಯರು
ಶ್ರೀರಂಗೇಶವಿಠಲ | ಪೊರೆಯೆನ್ನ ಹೃದಯಾ- ಧಾರನೆ ಮಾಲೋಲ | ಸ್ಮರಕೋಟಿ ಸುಂದರಾ- ಕಾರ ನತಜನಪಾಲ | ಅರಿಮಸ್ತಕ ಶೂಲ ಪ ಆರು ಅರಿಗಳ ಗೆಲಿಸಿಯೆನ್ನಿಂ- ದಾರು ಎರಡನು ಮುರಿಸಿ ನಿನ್ನೊಳು ಆರು ಮೂರನೆಯಿತ್ತು ಸರ್ವದ ಪಾರುಗೈಯ್ಯಬೇಕೆಂಬೆ ದೇವ ಅ.ಪ. ಆನೆಗೊಂದಿ ನಿವಾಸ | ಭಕುತರ ನಿರಂತರ ಮಾನದಿಂ ಪೊರೆವ ಶ್ರೀಶ | ಎಂದೆಂದಿಗು ನಾನಿನ್ನ ದಾಸರ ದಾಸ | ನೆಂದು ಕರುಣಿಸು ನೀನೆನಗೆ ಲೇಸ | ಭಾನುಕೋಟಿ ಪ್ರಕಾಶ ಮಾನ ಅವಮಾನಗಳು ನಿನ್ನಾ- ಧೀನವೆಂದೇ ನಂಬಿಕೊಂಡಿಹ ದೀನನೆನ್ನನು ದೂರ ನೋಡದೆ ಸಾನುರಾಗದಿ ಪೊರೆವುದೈಯ್ಯಾ ನಳಿನಭವ ಅಂಡದೊಳಗೆ ದಾನಿ ನೀನಲ್ಲದನ್ಯರುಂಟೆ ಏನ ಬೇಡೆನು ನಿನ್ನ ಬಳಿಯಲಿ ಜ್ಞಾನ ಭಕುತಿ ವೈರಾಗ್ಯವಲ್ಲದೆ1 ವರಾಹ ಜನ ತಾಪ | ತ್ರಯ ದೂರ ವಾಮನ ಮಾನವೇಂದ್ರರ ಪ್ರತಾಪ | ವಡಗಿಸಿದೆ ಪ್ರಬಲ ದಾನವೇಂದ್ರನ ಶಾಪ | ನೀನೆ ಕಳೆದೆಯೊ ಶ್ರೀಪಾ ವಾನರ ಬಲ ನೆರಹಿಕೊಂಡು ನೀನು ರಾವಣನನ್ನು ಕೊಂದು ಮಾನಿನಿಯ ಪೊರೆದು ಶರಣಗೆ ನಿ ದಾನ ಮಾಡದೆ ಪಟ್ಟಗಟ್ಟಿದೆ ದಾನವಾಂತಕನೆಂಬ ನಾಮವ- ನ್ಯೂನವಿಲ್ಲದೆ ಪರಸತಿಯರಭಿ ಮಾನ ಕಳುಪಿದ ಜಾಣ ಕಲ್ಕಿಯೆ 2 ಸೂರಿಜನ ಪರಿಪಾಲ ಸದ್ಗುಣಗಣನಿಲಯ ಘೋರರಕ್ಕಸಕಾಲ | ವರಶೇಷತಲ್ಪವ ನೇರಿ ನಿರುಪಮ ಬಾಲ | ನಂದದಿ ನಿರುತ ನೀ ತೋರುತಿರುವೆಯೊ ಲೀಲ | ಶ್ರೀ ರಂಗೇಶವಿಠಲ ಮಾರ ಜನಕನೆ ಮಂಗಳಾಂಗನೆ ಕ್ರೂರ ಕುಲವನದಾವ ಅನಲನೆ ಭೂರಿ ಕರುಣವ ಬೀರಿ ಎನ್ನಸು ಭಾರ ನಿನ್ನದು ವಾರಿಜಾಕ್ಷನೆ ಎನ್ನ ಹೃದಯದಿ ಚಾರು ಬಿಂಬವ ಸಾರಿ ಬೇಡುವೆ ಬಾರಿ ಬಾರಿಗೆ ಶರಧಿ ಬಡಬನೆ3
--------------
ರಂಗೇಶವಿಠಲದಾಸರು
ಶ್ರೀರಾಘವೇಂದ್ರರು ಸಂತಜನರ ಪ್ರಿಯ ಸಂತತಕರುಣಿಸು ಮಂತ್ರಾಲಯ ಸುಖದಾತ ನಮೋ ಮಂತ್ರಮೂರ್ತಿ ಗುರುನಾಥ ಪ ಬಾಗಿವಂದಿಪೆ ದಯಾಸಾಗರ ನಿಜಯತಿ ರಾಘವೇಂದ್ರ ಸುಖದಾತ ನಮೋ ಮಂತ್ರಮೂರ್ತಿ ಗುರುನಾಥ 1 ಜ್ಞಾನಕವಚ ತೊಟ್ಟು ಕ್ಷೋಣಿಯೊಳ್ ಅವತರಿಸಿದಿ ಜ್ಞಾನಶರಧಿ ಸುಖದಾತ ನಮೋ ಮಂತ್ರಮೂರ್ತಿ ಗುರುನಾಥ 2 ಮೇದಿನ್ಯುದ್ಧರಿಸಿದಿ ವೇದವೇದಾಂತದ ಸ್ವಾದವರಿದು ಸುಖದಾತ ನಮೋ ಮಂತ್ರಮೂರ್ತಿ ಗುರುನಾಥ 3 ವಾದಿಮತರ ಕುವಾದ ಮುರಿದು ಸು ಮಂತ್ರಮೂರ್ತಿ ಗುರುನಾಥ 4 ಜಗದೊಳಗನುಪಮ ಭಗವದ್ಭಕ್ತಿ ಘನ ಮಿಗಿಲೆನಿಸಿದಿ ಸುಖದಾತ ನಮೋ ಮಂತ್ರಮೂರ್ತಿ ಗುರುನಾಥ 5 ನಿತ್ಯ ನೆನಿಪ ನಿಜ ತತ್ತ್ವದಾದಿ ಜಗ ಕುತ್ತರಿಸಿದಿ ಸುಖದಾತ ನಮೋ ಮಂತ್ರಮೂರ್ತಿ ಗುರುನಾಥ 6 ಸತ್ಯವಾದ ಪರಮಾರ್ಥಪಥದಿ ನಿಂತು ನಿತ್ಯದಾಡಿದಿ ಸುಖದಾತ ನಮೋ ಮಂತ್ರಮೂರ್ತಿ ಗುರುನಾಥ 7 ಪೃಥ್ವಿಯೊಳು ನಿಮ್ಮ ಭಕ್ತಜನರ ಬಿಡ ಗುರುನಾಥ 8 ಕೂಡಿಸಿ ದ್ವಿಜವೃಂದಾಡುತಲನುದಿನ ಮಂತ್ರಮೂರ್ತಿ ಗುರುನಾಥ 9 ನಿರುತ ಭೂಸುರಗಣಕ್ಹರುಷವಿತ್ತು ಸದಾ ಮಂತ್ರಮೂರ್ತಿ ಗುರುನಾಥ 10 ಬೇಡಿದವರಿಗೆ ಬೇಡಿದ ವರಗಳ ಮಂತ್ರಮೂರ್ತಿ ಗುರುನಾಥ 11 ಗಾಢಮಹಿಮೆ ತೋರಿ ರೂಢಿಜನರ ಕಾ ಪಾಡ್ಹಿದ್ಹಿತದಿ ಸುಖದಾತ ನಮೋ ಮಂತ್ರಮೂರ್ತಿ ಗುರುನಾಥ 12 ಧರೆಯೊಳು ನರಹರಿ ಶರಣಜನರ ಕೂಡಿ ಮಂತ್ರಮೂರ್ತಿ ಗುರುನಾಥ 13 ಮುಳುಗಿರ್ದ ಪುಣ್ಯಮಯದಿಳೆಯನು ನಿಮ್ಮೊಳು ಗುರುನಾಥ 14 ಧರ್ಮಗೆಟ್ಟಿಳಗೆ ಸದ್ಧರ್ಮ ಬಿತ್ತಿದಿ ಸ್ಥಿರ ಮಂತ್ರಮೂರ್ತಿ ಗುರುನಾಥ 15 ಸಾಧಿಸಿ ಮಹ ತಪದಾದಿ ಮೂರ್ತಿಯಿಂ ಮಂತ್ರಮೂರ್ತಿ ಗುರುನಾಥ 16 ನಿಗಮಾತೀತನೊಳ್ ಬಗೆಬಗೆಯಾಟವ ಮಂತ್ರಮೂರ್ತಿ ಗುರುನಾಥ 17 ಮಂಗಳಮೂರ್ತಿಯ ಕಂಗಳಿಂದ ಕಂಡು ಭವ ಮಂತ್ರಮೂರ್ತಿ ಗುರುನಾಥ 18 ತುಂಗನಿವಾಸ ಮಹ ಮಂಗಳಾಂಗ ಸುಜ ಮಂತ್ರಮೂರ್ತಿ ಗುರುನಾಥ 19 ನಿತ್ಯ ನಿಮ್ಮಪಾದ ಭಕ್ತಿಯಿಂ ಭಜಿಸಲು ಮಂತ್ರಮೂರ್ತಿ ಗುರುನಾಥ 20 ಮುಕ್ತಿದಾಯಕ ಜಗದಾಪ್ತ ಶ್ರೀರಾಮನಂ ಮಂತ್ರಮೂರ್ತಿ ಗುರುನಾಥ 21
--------------
ರಾಮದಾಸರು
ಶ್ರೀರಾಮ ಜಯರಾಮ ಶ್ರೀರಾಮರಾಮ ಕಾರುಣ್ಯ ನಿಧಿರಾಮ ಕೌಸಲ್ಯ ರಾಮ ಪ ಜಾನಕೀ ಪತಿರಾಮ ಜಯರಘುರಾಮ ಜಾನ್ಹವೀ ಪಿತರಾಮ ಸರ್ವೇಶರಾಮ 1 ಭಯ ನಿವಾರಣರಾಮ ಪಾವನರಾಮ ನಯಗುಣ ಶ್ರೀರಾಮ ನರಹರೇ ರಾಮ 2 ತ್ರಿಜಗ ಮೋಹನ ರಾಮ ದಿವಿಜೇಶರಾಮ ಅಜಭವನುತರಾಮ ಆನಂದರಾಮ 3 ಭುವನ ಪಾಲಕರಾಮ ಭೂಪತೆ ರಾಮ ಸವನ ರಕ್ಷಕರಾಮ ಶತ್ರುಘ್ನ ರಾಮ 4 ಭವ ವಿಮೋಚನ ರಾಮ ಪದ್ಮಾಕ್ಷರಾಮ 5 ವೈದೇಹಿ ಪತಿರಾಮ ವೈಕುಂಠರಾಮ ವೇದಗೋಚರ ರಾಮ ವೆಂಕಟೇಶರಾಮ 6 ಮಂಗಳಾತ್ಮಕರಾಮ ಮಾಧವರಾಮ ಶೃಂಗಾರ ಶೇಖರರಾಮ ಶ್ರೀರಾಮ ರಾಮ7 ದಶರಥಸುತರಾಮ ದನುಜಾರಿರಾಮ ಕುಶಲವ ಪಿತರಾಮ ಕೋದಂಡರಾಮ 8 ಕರುಣಸಾಗರ ರಾಮ ಕಾಕುಸ್ಥರಾಮ ಶರಧಿಶಯನ ರಾಮ ಶಾಶ್ವತರಾಮ9 ಶ್ರೀಕರಾವ್ಹಯರಾಮ ಶ್ರೀಧರರಾಮ ಪಾಕಾರಿಸುತ ರಾಮ ಪರಮೇಶರಾವÀು 10 ಮಧುರ ಭಾಷಣರಾಮ ಮಧುವೈರಿರಾಮ ಮದನಾರಿನುತರಾಮ ಮೌನೀಶರಾಮ 11 ಸತಿ ಶಾಪ ಖಂಡನ ರಾಮ ಪಾತಕ ಹರ ರಾಮ ಪ್ರಖ್ಯಾತ ರಾಮ12 ರಾಮ ಗರ್ವವಿರಾಮ ರಾಮಾಭಿರಾಮ ಸೌಮಿತ್ರಿವರರಾಮ ಸೌಂದರ್ಯರಾಮ 13 ಸುಗ್ರೀವಸಖರಾಮ ಶುಭಕರ ರಾಮ ಅಗ್ರಜಾಧಿಪ ರಾಮ ಅಮಿತಬಲರಾಮ 14 ಅನ್ಯಮಾನಸರಾಮ ರಘುರಾಮ ಇನಕುಲೇಶ್ವರ ರಾಮ ವಿಭುದೇಂದ್ರರಾಮ 15 ಚಾರು ಚರಿತ ರಾಮ ಜಯಜಯ ರಾಮ ಮಾರುತಾತ್ಮಜ ವಂದ್ಯ ಮಾನಿತರಾಮ 16 ವಾಲಿ ಮರ್ದನರಾಮ ವರದಶ್ರೀರಾಮ ಫಾಲಾಕ್ಷ ಸಖರಾಮ ಭದ್ರಶ್ರೀರಾಮ 17 ಸೇತುಬಂಧನ ರಾಮ ಚಿನ್ಮಯರಾಮ ಸೀತಾಪತೆ ರಾಮ ಜಿತದೈತ್ಯ ರಾಮ 18 ನತವಿಭೀಷಣರಾಮ ನಗಧರ ರಾಮ ಚತುರಾಶ್ಯಪಿತ ರಾಮ ಚಂದ್ರಶ್ರೀರಾಮ 19 ಮಾರೀಚ ಮದಭಂಗ ಮಹಾದೇವರಾಮ ವೀರಾಗ್ರಣೀರಾಮ ವಿಶ್ವೇಶರಾಮ 20 ರಾಮರಾಮ ರಾಮರಾಮ ಶ್ರೀರಾಮ ಕಾಮಿತಾರ್ಥಪ್ರದ ಕಲ್ಯಾಣರಾಮ 21 ಅಗಣಿತ ಮಹಿಮ ವಿಲಾಸ ಶ್ರೀರಾಮ ನಿತ್ಯ ಶ್ರೀರಾಮ 22 ಕಂಬುಕಂಧರ ರಾಮ ಘನತರರಾಮ ಕುಂಭಕರ್ಣಾಂತರ ಗೋವಿಂದರಾಮ 23 ಸುಜನ ಹೃತ್ಕಮಲ ಭಾಸುರ ಸೂರ್ಯರಾಮ ನೃಪತಿ ಶ್ರೀರಾಮ 24 ಲೀಲಾ ಮನುಜ ವೇಷ ರಿಪು ಜೈತ್ರರಾಮ ಪ್ರಕಟ ಪರಾಕ್ರಮ ರಾಮರಾಮ ಶ್ರೀರಾಮ 25 ಅಕಲಂಕ ನಿರುಪಮಾನ ಸಹಾಯ ರಾಮ ಭಕ್ತವತ್ಸಲ ದೀನ ಬಂಧು ಶ್ರೀರಾಮ 26 ಮುಕ್ತಿದಾಯಕ ರಾಮ ಪೂಜಿತರಾಮ ದಶಕಂಠ ಮರ್ದನ ತಾರಕನಾಮ 27 ಶಶಿಬಿಂಬ ವದನ ದಾಶರಥಿ ಶ್ರೀರಾಮ ನಾರಾಯಣಾಚ್ಯುತಾನಂತ ಶ್ರೀರಾಮ 28 ವಾರಿಜೋದರ ಶ್ರೀನಿವಾಸ ಶ್ರೀರಾಮ ಹರಧನುರ್ಭಂಗ ದಯಾನಿಧೆ ರಾಮ 29 ಪುರುಷೋತ್ತಮ ಪುರಾಣ ಪುರುಷ ಶ್ರೀರಾಮ ಸರ್ವಲೋಕ ಶರಣ್ಯ ಸೌಭಾಗ್ಯರಾಮ 30 ಶರ್ವರೀಚರ ಹರಕ್ಷ್ಮಾಪತೇರಾಮ ಸರಶಿಜನಾಭ ದಾಶಾರ್ಹ ಶ್ರೀರಾಮ 31 ಶರಣಾಗತ ತ್ರಾಣ ಶರಣು ಶ್ರೀರಾಮ ಮೂರ್ತಿ ಶ್ರೀರಾಮ 32 ಬುಧ ಜನಾಧಾರ ಸರ್ವೋತ್ತಮರಾಮ ವರ ಹೆನ್ನೆಪುರನಿವಾಸ ಶ್ರೀರಾಮ 33 ನರಸಿಂಹ ಭಕ್ತ ಚಿಂತಾಮಣಿ ರಾಮ ಇಷ್ಟದಾಯಕ ಹೆನ್ನೆ ವಿಠಲರಾಮ 34 ಕಷ್ಟ ರಕ್ಷಿಸುಯನ್ನ ಶ್ರೀರಾಮರಾಮ ಕುಜನವನ ಕುಠಾರ ಕೋವಿದ ರಾಮ 35
--------------
ಹೆನ್ನೆರಂಗದಾಸರು
ಶ್ರೀರಾಮಾ ರಘುಕುಲಸೋಮ ಕಾಮಿತ ಶುಭಫಲದಾಯಕ ಪ. ರಮಾರಮಣನೆ ಭೀಮ ಪರಾಕ್ರಮ ಸುಂದರ ಅ.ಪ. ದಾನವಾಂತಕ ಶ್ರೀ ಜಾನಕೀ ನಾಯಕರಾಮ ದೀನಾನಾಥ ಪರಿತ್ರಾಣ ಪ್ರಪನ್ನ ಜನಪ್ರಾಣ 1 ವಾಸವಾನುಜ ಜಗದೀಶ ಪರೇಶ ಪರಾತ್ಪರ ದಾಸಜನಾಶ್ರಯ ಶ್ರೀಶ ಸರ್ವೇಶ ದಯಾಸಾಗರ 2 ಮಂಗಳಾತ್ಮಕ ಭವಭಂಗ ಶ್ರೀರಂಗನಾಯಕಿ ರಮಣ ಅಂಗಜಜನಕ ಪಾಂಡುರಂಗ ಕರುಣಾಂತರಂಗ 3 ನಾಗೇಶಪಾಲಕ ನಾಗೇಶವರತಲ್ಪನೆ ಶ್ರೀ ನಾಗಾರಿವಾಹನ ವರನಾಗಾದ್ರಿನಿಕೇತನ ರಾಮಾ 4
--------------
ನಂಜನಗೂಡು ತಿರುಮಲಾಂಬಾ
ಶ್ರೀಶ ವೇದವ್ಯಾಸನಾದನು ಪ ಶ್ರೀಶ ವೇದವ್ಯಾಸನಾಗಲು ಸಾಸಿರ ನಯನ ಸಾಸಿರ ವದನ ಕರ ಮಿಕ್ಕ ಸುರರೆಲ್ಲ ತು- ತಿಸಿ ಹಿಗ್ಗುತ ಹಾರೈಸಲಂದು ಅ.ಪ. ದರ್ಪಕ ಜನಕ ಸರ್ಪತಲ್ಪನಾಗಿ ತಪ್ಪದನುಗಾಲ ಇಪ್ಪ ವಾರಿಧೀಲಿ ಕಂದರ್ಪ ಹರನೈಯ ಸುಪರ್ಣರಥನಾಗಿ ಒಪ್ಪಿಕೊಂಡು ಇಪ್ಪತ್ತು ಲಕ್ಷಗಲಿಪ್ಪ ಯೋಜನದ ಅಪ್ಪನ ಅರಮನೆ ದರ್ಪಣದಂತೆ ತಾ ರಪ್ಪಥ ಮೀರಿದಂತಿಪ್ಪದು ನೋಡಿ ಸಾ- ಮೀಪಕ್ಕೆ ವಾಣೀಶ ಬಪ್ಪ ಬೇಗಾ 1 ಬಂದು ಬೆನ್ನೈಸಿದ ಮಂದಮತಿ ಕಲಿ- ಯಿಂದ ಪುಣ್ಯಮೆಲ್ಲ ಹಿಂದಾಯಿತೆನೆ ಮು ಕುಂದ ಭಕ್ತನಿಗೆ ಒಂದೆ ಮಾತಿನಲಾ- ನಂದ ಬಡಿಸಿ ಪೋಗೆಂದು ಪೇಳೆ ಅಂದು ಸುಯೋಜನಗಂಧಿ ಗರ್ಭದಲ್ಲಿ ನಿಂದವತರಿಸುತ ಪೊಂದಿದ ಅಜ್ಞಾನ ಅಂಧಕಾರವೆಲ್ಲ ಹಿಂದು ಮಾಡಿ ಸುರ- ಸಂದಣಿ ಪಾಲಿಸಿ ನಿಂದ ದೇವ 2 ಕೆಂಜೆಡೆವೊಪ್ಪ ಕೃಷ್ಣಾಜಿನ ಹಾಸಿಕೆ ಕಂಜಾಪ್ತನಂದನದಿ ರಂಜಿಸುವ ಕಾಯ ಮಂಜುಳ ಸುಜ್ಞಾನ ಪುಂಜನು ವಜ್ಜರ- ನಿತ್ಯ ಅಂಜಿದಗೆ ಸಂಜೆಯ ತೋರಿ ಧನಂಜಯ ಶಿಷ್ಯ ನೀ- ಗಂಜದಂತೆ ಕರಕಂಜವ ತಿರುಹಿ ನಿರಂಜನ ಪೇಳಿದ ಕುಂಜರ ವೈರಿಯ ಭಂಜನನು 3 ಗಂಗಾತೀರದಲಿ ಶೃಂಗಾರ ಉಪವ- ನಂಗಳದರೊಳು ಶಿಂಗಗೋಮಾಯು ಭು ಮೂಷಕ ಮಾತಂಗ ಸಾರಮೇಯ ಕೊಂಗಹಂಗ ಸರ್ವಾಂಗ ರೋಮ ಶರಭ ವಿಹಂಗ ಶಾರ್ದೂಲ ಸಾ- ರಂಗ ಕುರಂಗ ಕುಳಿಂಗ ಪಾಳಿಂಗ ಪ್ಲ ವಂಗ ತುರಂಗ ಪತಂಗ ಭೃಂಗಾದಿ ತು- ರಂಗವು ತುಂಬಿರೆ ಮಂಗಳಾಂಗ 4 ಬದರಿ ಬೇಲವು ಕಾದರಿ ಕಾಮರಿ ಮಧುಮದಾವಳಿ ಅದುಭುತ ತೆಂಗು ಕದಳಿ ತಪಸಿ ಮದಕದಂಬ ಚೂ- ತದಾರು ದ್ರಾಕ್ಷಿಯು ಮೃದು ಜಂಬೀರವು ಬಿದಿರು ಖರ್ಜೂರ ಮೋದದಿ ದಾಳಿಂಬ ತುದಿ ಮೊದಲು ಫ ಲದ ನಾನಾವೃಕ್ಷ ಪದಲತೆಯ ಪೊದೆಯು ಫಲ್ಲಸೈ ಇದೆ ಆರು ಋತು ಸದಾನಂದ 5 ವನದ ನಡುವೆ ಮುನಿಗಳೊಡೆಯ ಕಾನನ ಸುತ್ತಲು ಆ- ನನ ತೂಗುತ್ತ ಧ್ವನಿಯೆತ್ತಿ ಬಲು- ಗಾನ ಪಾಡಿದವು ಗುಣದಲ್ಲಿ ಕುಣಿದು ಖಗಾದಿ ಗಣಾನಂದದಿಂದಿರೆ ವನನಿಕರ ಮೆಲ್ಲನೆ ಮಣಿದು ನೆ- ಲನ ಮುಟ್ಟುತಿರೆ ಅನಿಮಿಷರು ನೋ ಡನಿತಚ್ಚರಿಯನು ಪೇಳೆ 6 ಮೌನಿ ನಾರದನು ವೀಣೆ ಕೆಳಗಿಟ್ಟು ಮೌನವಾದನು ಬ್ರಹ್ಮಾಣಿ ತಲೆದೂಗಿ ಗೀರ್ವಾಣ ಗಂಧರ್ವರು ಗಾನ ಮರೆದು ಇದೇನೆನುತ ಮೇನಕೆ ಊರ್ವಸಿ ಜಾಣೀರು ತಮ್ಮಯ ವಾಣಿ ತಗ್ಗಿಸಿ ನರ್ತನೆಯ ನಿಲ್ಲಿಸಿ ದೀನರಾದರು ನಿಧಾನಿಸಿ ಈಕ್ಷಿಸಿ ಎಣಿಸುತ್ತಿದ್ದರು ಶ್ರೀನಾಥನ 7 ನಮೋ ನಮೋಯೆಂದು ಹಸ್ತ- ಕಮಲ ಮುಗಿದು ನಮಗೆ ನಿಮ್ಮಯ ಅಮಲಗುಣ ನಿಗಮದಿಂದೆಣಿಸೆ ಕ್ರಮಗಾಣೆವು ಉತ್ತಮ ದೇವ ಕೂರ್ಮ ಖಗಮೃಗ ಸಮವೆನಿಸಿ ಅ- ಚಮತ್ಕಾರದಲ್ಲಿ ನಾಮಸುಧೆಯಿತ್ತ ರಮೆಯರಸ ಆಗಮನತ8 ಇದನು ಪಠಿಸೆ ಸದಾ ಭಾಗ್ಯವಕ್ಕು ಮದವಳಿ ದಘವುದದಿ ಬತ್ತೋದು ಸಾಧನದಲ್ಲಿಯೆ ಮದುವೆ ಮುಂಜಿ ಬಿಡದಲ್ಲಾಗೋದು ಶುಭದಲ್ಲಿ ಪದೆಪದೆಗೆ ಸಂಪದವಿಗೆ ಜ್ಞಾನ- ನಿಧಿ ಪೆಚ್ಚುವುದು ಹೃದಯ ನಿರ್ಮಲ ಬದರಿನಿವಾಸ ವಿಜಯವಿಠ್ಠಲ ಬದಿಯಲ್ಲೆ ಬಂದೊದಗುವ 9
--------------
ವಿಜಯದಾಸ
ಶ್ರೀಹರಿ ಸ್ತವನ ಅರ್ಜುನಗಾನಂದಾ ಮಾಡಿದ ಗೋವಿಂದಾ ಪ ರಥದಿ ಮಂಡಿಸಿ ಚತುರತನದಲಿಂದಾ ಚತುರ ಹಸ್ತದಿಂ ವಾಜಿಯಂ ಪಿಡಿದು ರಥಕನ ಬೆನ್ಹಿಂದಿಟ್ಟುಕೊಂಡು ಸಾ- ರಥಿಯು ತಾನೆ ಅಶ್ವವ ನಡಿಸುತಲಿ ರತಿಪತಿಪಿತನತಿಚಮತ್ಕಾರದಿಂ ಪೃಥಿವಿಯ ಮೇಲೆ ನರನಟನ ತೋರುತಲಿ ಪತಿತ ಪಾವನನು ಫಲ್ಗುಣ ಸಖನು ನುತಿಸಿದವರ ನೆರೆ ಪಾಲಿಸುತಿಹನು ಅತುಳ ಶಂಖದಿಂ ಭೌಂ ಭೌಂ ಎನಿಸುತ ರಥದ ಗಾಲಿ ಛಿಟ್ ಛಿಟ್ ಛಿಟಿಲೆನುತ ಕುದುರೆ ಖುರಪುಟಧ್ವನಿ ಫಳ್ ಫಳ್ ಫಳ್ಳೆ ಗೋವಿಂದನು ರಭಸದಿ ಭಕ್ತನೂಳಿಗಾ1 ಮಂದಜಭವ ಮುಖ್ಯಾಮರ ವೃಂದವು ನಂದತನುಜನಾರಂದಲೀಲೆಯಂ ಛಂದದಿ ನೋಡುತ ನಭೋಮಾರ್ಗದೊಳ್ ಬಂದು ಕುಸುಮಗಳ ವೃಷ್ಟಿಯ ಸುರಿದು ಸಿಂಧುಶಯನ ನಾಮಾಮೃತ ಸುರಿದು ಬೃಂದಾರಕ ನಿಕರವು ಕೈಯೆತ್ತಿ ಇಂದುಕಲಾಧಿಪ ಪ್ರಾರ್ಥನೆ ಸೈ ಸೈ ಎಂದು ದೇವದುಂದುಭಿ ಧೋಂ ಧೋಂ ಕಂಸಾ- ಳದರವ ಖಿಣಿಖಿಣಿ ಖಿಣಿ ಭೇರಿ ನಾದ ಖಡ್ ಖಡ್ ಖಡಲ್ ಭಾರಿ ತಾ- ಹತಜಂತರಿಧೂಂ ನರ್ತನಗೈವುತ ತೆರಳುತ 2 ಮಂಗಳ ರವದಿಂ ಜಯಜಯ ಎನಿಸುತ ಮಂಗಳಾಂಗಿ ರುಕ್ಮಿಣಿ ವಲ್ಲಭನು ರಂಗಿನಿಂದ ರಥವಿಳಿದು ಗೆಳೆಯನ ಮುಂಗೈಯನೆ ಪಿಡಿದು ಅಂಗಜನಯ್ಯ ರಂಗುಮಣಿಯ ಉಂಗುರದಿ ಒಪ್ಪುತಲಿ ಭಂಗಾರಕೆ ಮಿಗಿಲೆನಿಪ ದುಕೂಲದಿ ಶೃಂಗರದಲ್ಲಿ ಉತ್ತುಂಗ ಪರಾಕ್ರಮ ಅಂಗಳದೋಳ್ ನಲಿದಾಡುತ ರಂಗನು ತಿಂಗಳ ಕುಲದೀಪನ್ನ ನೋಡುತಲಿ ರಂಗ ಕದರುಂಡಲಗೀಶನ ಒಡೆಯನು ತಾ 3
--------------
ಕದರುಂಡಲಗೀಶರು
ಶ್ರೀಹರಿಸ್ತುತಿ ಮಂಗಳಾಚರಣೆ ಉಡುಪ ವಂಶಜ ಹರಿಯು ಉಡುಪತಿಯ ತಪದೆಡೆಯೊ ಳುಡುಪ ಶೇಖರನನ್ನು ತನ್ನ ಬಳಿಯಿರಿಸಿ ಕಡೆಗೋಲು ನೇಣುಗಳ ಪಿಡಿದು ನಿಂತಿರುವ 1 ಬೆನಕ ದೇವನೆ ನಿಜದಿಯಾಗಸಕೆ ಒಡೆಯನವ ನಾದವಾಹಿನಿಯನ್ನು ತನ್ನಲ್ಲಿಯಿರಿಸಿ ಗುರುಗಳುಪದೇಶದಿಂ ಜ್ಞಾನವೊದಗಿಪ ಜನಕೆ ಪೊಡಮಡುವೆನವನಡಿಗೆ ಯೆಡರು ಬರದಂತೆ 2 ಸರಸತಿಯೆ ನೀ ನನ್ನ ರಸನೆಯಲಿ ನೆಲೆನಿಂತು ನಿನ್ನ ಮಾವನ ಪೊಗಳಲೆನಗೆ ಮತಿತೆತ್ತು ಅವನೊಲುಮೆಯಿಂದೆನಗೆ ಮುಕುತಿಯನು ಪಡೆವಂತೆ ಹರಸು ನೀನ್ ಭಗವತಿಯೆ ನಿನ್ನ ವಂದಿಸುವೆ 3
--------------
ನಿಡಂಬೂರು ರಾಮದಾಸ
ಷೋಡಶೋಪಚಾರ ಪೂಜೆಪೂಜಿಸುವೆನನವರತ ಪರಮ ಪುರುಷನನುನೈಜ ಮೂರ್ತಿಯನೀಗಲಭಿಮುಖಿಸಿ ನಿರ್ಗುಣದಿ ಪಹೃದಯಕಾಶಿಯಲಿಪ್ಪ ಜ್ಞಾನಗಂಗೆಯ ಮಿಂದುಮೃದುತರದ ಸತ್ವಗುಣವೆಂಬ ನಿತ್ಯಕರ್ಮವ ಮಾಡಿಒದಗಿ ಶಮೆದಮೆಯೆಂಬ ನಿತ್ಯಕರ್ಮವ ಮಾಡಿಮುದದಿಂದ ಪರಮಾತ್ಮನಿಹ ಮಂದಿರಕೆ ಬಂದು1ಧ್ಯಾನಪ್ರಣವ ಮಂಟಪದಲ್ಲಿ ಕನಕಮಯ ಪೀಠವನುತನುಕರಣಮನಃಪ್ರಕೃತಿ ಯೆಂಬ ನೆಲೆಗಳನುಅನುಕೂಲದಿಂ ರಚಿಸಿ ಸಚ್ಚಿದಾನಂದನನುಮನದಲ್ಲಿ ಧ್ಯಾನವನು ಬಳಿಕೀಗ ಮಾಡುವೆನು2ಆವಾಹನ-ಆಸನ-ಪಾದ್ಯದೇಶಕಾಲಾತೀತ ಪರಿಪೂರ್ಣನಾಗಿರುವವಾಸುದೇವನನೊಮ್ಮೆಯಾವಾಹಿಸುವೆನುಆಸನವನೀವೆ ಸರ್ವಾಧಾರವಸ್ತುವಿಗೆದೋಷರಹಿತನ ಪಾದಗಳ ತೊಳೆವೆನೊಲವಿನಲಿ 3ಅಘ್ರ್ಯ-ಆಚಮನ-ಮಧುಪರ್ಕಬೆಲೆರಹಿತಗಘ್ರ್ಯವನು ನೆರೆಕೊಟ್ಟು ಕರಗಳಿಗೆಸಲಿಲದಿಂ ಶುದ್ಧನಿಗೆ ಶುದ್ದಾಚಮನವಸಲಿಸಿ ಮಧುಪರ್ಕವನು ಕ್ಷೀರಸಾಗರಗಿತ್ತುವಿಲಯಾದಿ ಪಂಚಪದಗೆರೆದು ಪಂಚಾಮೃತವ 5ಸ್ನಾನ-ವಸ್ತ್ರಸ್ಮರಿಸಿದರೆ ಸಂಸಾರಮಲವಳಿವ ಮಹಿಮನಿಗೆಸುರನದಿಯ ಪಡೆದವನಿಗಭಿಷೇಕಗೊಳಿಸಿನಿರತ ದಿಗ್ವಸ್ತ್ರನಿಗೆ ವರದುಕೂಲವನುಡಿಸಿಕರಣ ಪ್ರೇರಕನಿಗುಪವೀತದುಪಚಾರದಲಿ 5ಆಭರಣಅಷ್ಟವಿಧಗಂಧವನು ಅಷ್ಟಮದ ರಹಿತನಿಗೆನಿಷ್ಠೆುಂ ಭಕ್ತಿರಸದಿಂದ ಹದಗೊಳಿಸಿಅಷ್ಟ ವಿಧಮೂರುತಿಗೆ ಮುಟ್ಟ ಲೇಪವ ಮಾಡಿದುಷ್ಟಮದವನು ಕುಟ್ಟಿ ದಿವ್ಯ ಕುಂಕುಮವಿಟ್ಟು 7ಪುಷ್ಪ-ಧೂಪ-ದೀಪ-ನೈವೇದ್ಯ-ತಾಂಬೂಲಪರಿಪರಿಯ ಪುಷ್ಪಗಳ ನಿರ್ವಾಸನಗೆ ತಿಮಿರಹರಪ್ರಭಗೆ ಧೂಪದೀಪಂಗಳನು ಬೆಳಗಿಪರಿಪೂರ್ಣಕಾಮನಿಗೆ ಷಡುರಸಾನ್ನವನಿತ್ತುಪರಮ ಮಂಗಳಗೆ ತಾಂಬೂಲದುಪಚಾರದಲಿ 8ಕೋಟಿಸೂರ್ಯಪ್ರಭಗೆ ಕೋಟಿವರ್ತಿಗಳುಳ್ಳಮೀಟಾದ ಮಂಗಳಾರತಿಯ ಪಿಡಿದೆತ್ತಿಕೋಟಿ ಮೂವನ್ಮೂವರೂರ ಪುಷ್ಪವ ಚಂದ್ರಜೂಟಸಖ ತಿರುಪತಿಯ ವೆಂಕಟನ ಪದಕಿತ್ತು 9ಓಂ ಶ್ರೀಶಾಯ ನಮಃ
--------------
ತಿಮ್ಮಪ್ಪದಾಸರು
ಸಂಗಮಾಡೆಲೋ ಶ್ರೀಹರಿ ದಾಸರಾ ಹಿಂಗಿ ಹೋಹುದು ತಾಭವದಾಸರಾ ಮಂಗಳ ಮಂಗಳಾತ್ಮಕ ಕೈಗೂಡಿ ಬಾಹನು ಅಂಗಜ ಜನಕ ಸಚತುರ್ಬಾಹನು 1 ಅವರ ವಾಕ್ಯ ಸುಧಾರಸ ಪಾನವಾ ಶ್ರವಣದಿಂದಲಿ ಮಾಡೆಲೊ ಪಾನವಾ ಭವದ ಜನ್ಮ ಜರಾಲಯ ಜಾರುವೀ ತವಕದಿಂದ ಚಿತ್ಸುಖ ಸೇರುವಿ 2 ಹಲವು ಸಾಧನಭರಿಗೆ ಬೀಳದೇ ಕಲಿತ ವಿದ್ಯತ್ವ ಗರ್ವವ ತಾಳದೇ ಬಲಿದು ಭಕ್ತಿಯ ಹೋಗದೆ ಸಿಂತರಾ ನೆಲಿಯ ಕೇಳೆಲೋಭಾವದಿ ಸಂತರಾ 3 ಮರಹು ಕತ್ತಲಿವೆಂಬುದು ಹಾರಿಸೀ ಅರಿಗಳಾರರೆ ಸಂಕಟ ಹಾರಿಸೀ ಅರಹು ಭಾಸ್ಕರ ತೋರುವ ಬೋಧಿಸಿ ಹೊರವ ಸಜ್ಜನ ಸಂಗವ ಸಾಧಿಸಿ 4 ನೆಲಿಯ ಹೊಂದುವ ಪರಿಯನಿಲ್ಲದೇ ಸುಲಭಸಾಧನ ತೋರಿಪರಲ್ಲದೇ ಬಳಲುವಾಬಾಹಳ ಸಾಪೇಳರು ಬಲಿದು ಪಾಯವ ಸಂತರ ಕೇಳರು 5 ಹರಿಕಥಾ ಮೃತಸಾರಸ ಪೇಳುತಾ ದುರಿತ ದುಷ್ಕøತ ತರುಗಳ ಶೀಳುತಾ ಪರಮ ಭಕ್ತಿಯ ಭಾಗ್ಯವ ಕುಡುವರು ಅರಿತು ಸಂತರ ಸಂಗವ ಬಿಡುವರು 6 ಏಳು ಭೂಮಿಕಿ ಮಾರ್ಗವ ತೋರಿಸಿ ಮಾಲ ಚಿತ್ಸುಖ ಮಂದಿರ ಸೇರಿಸಿ ಕಾಲಕರ್ಮದ ಕೋಟಲೆ ವಾರಿಸೀ ಪಾಲಿಸುವರು ಭವದಿಂತಾರಿಸಿ 7 ಸಂಗದಿಂ ಚಂದನಾಹದು ಪಾಮರಾ ಜಂಗಮೊತ್ತಮನಾಗನೇಪಾಮರಾ ಅಂಗದಿಂಮಾಡು ಸಂತರ ವಂದನಾ ಇಂಗಿಥೇಳಿದ ಮಹಿಪತಿ ನಂದನಾ 8
--------------
ಕಾಖಂಡಕಿ ಶ್ರೀ ಕೃಷ್ಣದಾಸರು