ಒಟ್ಟು 2875 ಕಡೆಗಳಲ್ಲಿ , 108 ದಾಸರು , 1453 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರೆವರು ಬಾ ಮನೆಗೆ ಶ್ರೀ ಕೃಷ್ಣ ಮೂರ್ಜಗಂಗಳಿಗೆ ರಾಜಾಧಿರಾಜ ಪ ರಾಜಿಸುವ ಸೋಜಿಗದ ಬಲು ಸೋಜಿಗದ ಮನೆಗೆ ಶ್ರೀ ಕೃಷ್ಣ ಅ.ಪ ಸಾರಸಲೋಚನೆ ಭೀಷ್ಮಕ ಕುವರಿ ನೂರು ವಿಧದ ಬಲು ಪರಿಮಳದ ಚಾರು ಕುಸುಮಗಳ ಹಾರವ ಪಿಡಿದು ಮಾರಜನಕ ನಿನ್ನ ಕೋರುವಳು 1 ಚಿತ್ತಜನಯ್ಯನ ಚಿತ್ತದ ರಾಣಿ ಯತ್ನದಿ ನಿನ್ನನು ಕರೆಸಿದಳು ಚಿತ್ರವಿಚಿತ್ರದ ಮುತ್ತುರತ್ನಗಳ ಉತ್ತಮ ಪೀಠಕೆ ದಯಮಾಡೊ 2 ಯದುಕುಲ ನಂದನ ನೀ ಬಾರೋ ಮಧುರಾನಾಥಾ ನೀ ಬಾರೋ ಮದಗಜಗಮನದಿ ಬಾರೊ ಪ್ರಸನ್ನ ವದನೆಯರಾರತಿ ಬೆಳಗುವರು3
--------------
ವಿದ್ಯಾಪ್ರಸನ್ನತೀರ್ಥರು
ಕರ್ಮ ಮಾಳ್ಪ | ಜಾಣ ಬಾರೋ ಪ ಪಂಚ ರೂಪದಿ ಪ್ರಾ | ಪಂಚ ವ್ಯಾಪ್ತ ಬಾರೋ |ಹಂಚಿಕೇಲಿ ದೈತೇಯರ | ವಂಚಕನೆ ಬಾರೋ1 ಕರ್ಮ | ಗೈವಾಪಾನ ಬಾರೊ |ವಾಯುವ ನೀ ನಿರೋಧಿಸೆ | ಕಾಯ್ವರ್ಯಾರೋ 2 ಭಾರ ಹೊರೆವ || ವ್ಯಾನ ಬಾರೋ |ಪ್ರಾಣ ಪಂಚವ್ಯೂಹ ಮುಖ್ಯ | ವ್ಯಾನ ಬಾರೊ 3 ಉದಕ ಅನ್ನಕ್ಕವಕಾ | ಶುದಾನ ಬಾರೊ |ಮುದದಿ ಶ್ವಾಸಮಂತ್ರ ಜಪ | ಜಾಣ ಬಾರೋ 4 ವೈದಿಕ ಲೌಕಿಕ ಶಬ್ದ | ನುಡಿಸೆ ಬಾರೊ |ಊಧ್ರ್ವಗತಿ ದಾತನೆ | ಉದಾನ ಬಾರೋ 5 ಪಾನ ಅನ್ನಗಳ್ಹಂಚೆ ಸ | ಮಾನ ಬಾರೊ |ಧ್ಯಾನ ವಿಂತು ಈವ ಮುಖ್ಯ | ಪ್ರಾಣ ಬಾರೊ 6 ಕರುಣಸಾಗರ ದೇಹ ವೀಣೆ | ಚರಿಸೆ ಬಾರೊ |ಗುರು ಗೋವಿಂದ ವಿಠಲಾಧಿಷ್ಠಿತ | ಗುರುವೆ ಬಾರೋ 7
--------------
ಗುರುಗೋವಿಂದವಿಠಲರು
ಕಲಿಯುಗದೊಳು ಕಂಡೆನು ನಿನ್ನೊಬ್ಬನ | ಕಲಿವಾಳದನಿಂಗಪ್ಪ || ಕಲಿತ ಬುದ್ಧಿಯು ಕಡೆಯಲಿ ನಿನ್ನ |ಕೆಲಸಕೆ ಏನೂ ಬಾರದಪ್ಪ ಪ ಎತ್ತು ಎಮ್ಮಿ ಆಕಳ ಹೋರಿ | ಜತನ ಮಾಡೀದೆಪ್ಪ || ಮೃತ್ಯು ದೇವತೆಗೆ ತುತ್ತು ಇದರೊಳು | ಮುಕ್ತಿ ನಿನಗಿಲ್ಲಪ್ಪಾ 1 ಹೊಲಮನಿಯೆಂದು ನಲಿನಲಿದಾಡುತ | ಒಲಒಲ ಗುಟ್ಟುವಿಯಪ್ಪಾ || ಹೊಲಮನಿ ಸಾಧಿಸಿ ಸಂಗಡ |ಒಯ್ದಿಲ್ಲಾ ನಿಮ್ಮಪ್ಪಾ 2 ಶುದ್ಧವಾಗಿ ನೀ ಕೋಶವ ಕಲಿತು | ಬದ್ಧವ ತಿಳಕೋಳಪ್ಪಾ || ಬುದ್ಧಿವಂತನು ನೀ ಸ್ವರ್ಗದ ಸುದ್ದಿಯು | ಸ್ವಲ್ಪವು ನಿನಗಿಲ್ಲಪ್ಪಾ 3 ರೋಗವ ನೀಗಿಸಿ ಜನರಿಗೆ ಭೋಜನ | ಭೋಗವನ್ನು ನೀ ಪಡೆದೆಪ್ಪಾ || ಹೋಗದು ಕರ್ಮವು ಇದರಲಿ ಮುಂದಿನ | ಆಗಮ ಮಹಿಮೆಯ ತಿಳಕೋಳಪ್ಪಾ 4 ಅಪರೂಪದ ನರದೇಹಕೆ ಬಂದು | ವಿಪರೀತ ವಿದ್ಯಾಕಪ್ಪ || ಗುಪಿತದಿ ಭವತಾರಕನ ಭಕ್ತರ |ಕೃಪೆಯನು ನೀ ಸಂಪಾದಿಸಪ್ಪಾ 5
--------------
ಭಾವತರಕರು
ಕಲುಷಗಳ ಪರಿಹರಿಸು ಕಲುಷಕಂಠಾ ಪ ಸುಮ ಶರಗಳಿಂದಲಿ ಬೆಂದು ನೊಂದು ತವ ದ್ವಂದ್ವಗಳಿಗಭಿವಂದಿಸುವೆನೊ ರಾಜ ಅ.ಪ. ತಾಪಗಳಿಗೊಳಗಾಗಿ ಪರರ ತಾಪವನು ಕಾಣದೆ ಆಲಾಪನೆಯ ಮಾಡುತಲಿ ಕೂಪದೊಳು ಪೋಪ ನೋಡುವೆನಯ್ಯ ಜೀಯ್ಯಾ 1 ಬರುವದೆಂತೆಂದು ಬಯಸಬಾರದ ವಿಷಯಗಳ ಬಯಸಿ ಭವದೊಳಗೆ ಬವಣೆ ಬಡುವೆನು ಪರಿಹರಿಸು ಭವಕೆ ಭೀಮಾ 2 ಕಾಮನಯ್ಯನೆ ಕೇಳು ಕಾಮಗಳ ಪೂರೈಸು ಕಾಮಿನಿಯರಾ ಕಂಡು ಮೋಹಿಸಿದ ಕಾರಣದಿ ಪೂರೈಸು ಮನಾಧಿಪ ತಂದೆವರದಗೋಪಾಲವಿಠಲನ ದೂತಾ 3
--------------
ತಂದೆವರದಗೋಪಾಲವಿಠಲರು
ಕಂಸಾರಿ ಬೇಗ ಬಾರೋ ಹರಿ ಭೇಷಜ ಕೃಷ್ಣ ಪ. ಸಾಗರ ಶಯನ ಮನೋಗತ ಫಲಕಾರಿ ಅಕ್ರಮದಲಿ ಬರುವ ಭಯಂಕರ ವಕ್ರ ಮುಖವ ತೋರುವ ಹರಿವು ಚಕ್ರವ ಕರಧೃತ ಚಕ್ರದಿ ತರಿದು ಪರಾಕ್ರಮವ ತೋರಿ 1 ದಾಸರ ರಕ್ಷಿಪುದು ಎಂದಿಗು ಶ್ರೀನಿ- ವಾಸ ನಿನ್ನಯ ಬಿರುದು ದ್ವೇಷಿ ಜನರ ಮೂಲ ನಾಶಗೈದನುಗಾಲ ಶ್ರೀಶತ್ವದ ಸೇವಾವಾಸನ ಬೆಳಸುತ್ತ 2 ನೀ ನೆಟ್ಟು ಬೆಳಸಿರುವ ವೃಕ್ಷವನು ನಿ- ಧಾನದಿಂದಲಿ ಪೊರವ ಮಾನ ನಿನ್ನದು ಪದ್ಮಮಾನ ವೆಂಕಟರಾಜ ದೀನ ಬಂಧು ನಿನಗೇನ ಪೇಳುವದಿನ್ನು 3
--------------
ತುಪಾಕಿ ವೆಂಕಟರಮಣಾಚಾರ್ಯ
ಕಳವಳಿಪುದೆನ್ನ ಮನ ಕಮಲಾಕ್ಷ ಬಾರದಿರೆ ಪ ನಳಿನಸಂಭÀವ ಲಿಖಿತವೇನಿಹುದೊ ಸಖಿಯೆ ಅ.ಪ. ಪೋದ ವಿಪ್ರನು ಬರದಿರಲು ಏನು ಕಾರಣವೊ ಹಾದಿಯಲಿ ವಿಘ್ನ ತಾನೊದಗಿತೊ ಮಾಧವನಿಗೆನ್ನೊಳು ಮಮತೆ ಬಾರದೆ ಹೊಯ್ತೆ ಮೇದಿನಿಯೊಳೇಕೆ ನಾ ಪುಟ್ಟಿ ಬಂದನೆ ಸಖಿಯೆ 1 ನಿನ್ನ ಹೊರತೆನಗಿನ್ನು ಅನ್ಯಗತಿಯಿಲ್ಲೆಂದು ಭಿನ್ನವಿಸಿಕೊಂಡಿದ್ದೇನಾಯಿತೆ ಕರ್ಮ ಬಲವಂತವಾಗಿರಲು ಬನ್ನಪಡಿಸುತಲೆನ್ನ ಬಳಲಿಪುದು ಸರಿಯೆ 2 ವಸುದೇವ ಸುತನಾಗಿ ಶಿಶುತನದ ಕ್ರೀಡೆಯೊಳ್ ಅಸುರರನು ಸಂಹಾರ ಮಾಡಿದವಗೆ ಶಿಶುಪಾಲನಾಕಾಲದ ವಶಮಾಡಲಸದಳವೆ ಕುಸುಮಾಕ್ಷಿ ಕರಿಗಿರೀಶನೆ ಗತಿಯು ಸಖಿಯೆ 3
--------------
ವರಾವಾಣಿರಾಮರಾಯದಾಸರು
ಕಾಕು ದೇಹದ ಮೇಲೆ ಪ ಲೋಕೇಶ ನಿಮ್ಮಯ ಶ್ರೀಪಾದಕಮಲಕ್ಕೆ ಜೋಕೆ ಮಾಡೆನ್ನೆಂದು ಮರೆಹೊಕ್ಕೆ ಸ್ವಾಮಿ ಅ.ಪ ಹೀನ ಬವಣೆಯ ಕಳೆದು ಜ್ಞಾನಪಾಲಿಸೆಂದು ದೈನ್ಯಬಡುವೆನು ನಿನಗೆ ನಾನಾ ಪರಿಯಲಿಂದ ಏನು ಕಾರಣ ನಿನಗೆ ದಯ ಬಾರದೆನ್ನೊಳು ದೀನಜನರ ಬಂಧು ಧ್ಯಾನಿಸುವ ಪ್ರಾಣ 1 ರಿಣದಿ ಮುಕ್ತನ್ನ ಮಾಡೆಂದ್ವಿಧವಿಧ ಬೇಡುವೆ ದಿನ ದಿನ ಮತ್ತಿಷ್ಟು ಘನವಾಗುತಿಹ್ಯದು ಮನಸಿಜಪಿತ ನಿನಗಿನಿತು ಭಾರನೆ ನಾನು ಕನಿಕರಬಡದಿಹಿ ಅನುಗನೋಳ್ವನಜಾಕ್ಷ 2 ಇಂತು ನಿರ್ದಯನಾಗಿ ಚಿಂತೆಯೆಂದೆಂಬುವ ಚಿಂತೆಚಿತೆಯೊಳು ನೂಕಿ ಎನ್ನ ಭ್ರಾಂತಿಪಡಿಸಬೇಡೋ ಅಂತ:ಕರಣದ ದೇವ ಅಂತ:ಕರುಣಿಸಿ ಎನ್ನ ಅಂತರಂಗದೊಳಿಹ್ಯ ಚಿಂತೆಯಳಿ ಶ್ರೀರಾಮ 3
--------------
ರಾಮದಾಸರು
ಕಾಖಂಡಕಿ ಪ್ರಸನ್ನ ವೆಂಕಟದಾಸರು ಸಿರಿ ಪ್ರಸನ್ನವೆಂಕಟನ್ನನಿರುತ ಸ್ಮರಿಪ ಕಾಖಂಡಿಕಿ ವೆಂಕಪ್ಪನವರ ಚರಣವನೆ ನೆನೆವನೆ ಧನ್ಯಾಮಾನ್ಯ ಪ ಮರುತ ಮತಾಬ್ಧಿ ಮರಕತ ಭೂಸುರಜನ್ಮ ಧರನಾಗಿಭೂಮಿಯೊಳುದಿಸಲುತರುಳತ್ವ ಕಳೆದು ತರುಣತನ ಬರಲಿನ್ನು ಅರಿವ ಕಾಣದೆ ಇರುತಿರಲುಹರಿನಾಮಾವಳಿಗಳು ಬರೆದು ಓದುವ ಭಾಗ್ಯ ಅರಿವೆನೆಂದರೆ ಬಾರದಿರಲುತೊರೆದು ಮನೆಯವರ ಗಿರಿಯಾತ್ರೆ ಮಾಳ್ಪರನನುಸರಿಸಿ ತೆರಳಿಬರುತಿರಲು 1 ವರಾಹ ಮೂರ್ತಿಯನೆ ಕಂಡಾಲಸವ ಮಾಡದಲೆಚೆನ್ನಾಗಿಝಷಕೇತು ಜನಕನ ಪುಟ್ಟಿಸಿದ ಕಾರಣವೇನು ಉಸಿರೆಂದು ಚರಣಕ್ಕೆಬಾಗಿ 2 ವಂದಿಸಿದ ಕ್ಷಣ ಸ್ವಪ್ನದಿ ಪ್ರಸನ್ನವೆಂಕಟನೆಂದು ಬರೆಯೆ ನಾಲಿಗೆಲಿನಂದದಿಂದೆಚ್ಚೆತ್ತು ಜ್ಞಾನವುದಿಸೆ ಮುಕುಂದನ ಕಂಡು ಎದೆಯಲಿಚಂದ ಚಂದದಿ ಪೊಗಳುತ್ತ ಕಂಗಳಿಂದಾ ನಂದಬಾಷ್ಪ ಸುರಿಸುತಲಿಇಂದು ಧನ್ಯನಾದೆನೆಂದು ತೋಷಾಬ್ಧಿಯ ಹೊಂದಿ ಹರಿಯಾಜ್ಞೆಯಲಿತೆರಳಿ 3 ಭಾಗವತ ಪೂರ್ವಾರ್ಧಕನ್ನಡದಿಮತಿಪೂರ್ವಕ ರಚಿಸುತಾನಂದವು ತುಳುಕು ತಿಹುದು ಕವಿತೆಯಲಿನುತಿಸಿ ದುರ್ಮತ ನಿರಾಕರಿಸಿ ಬಾಳಿ ಬಲು ಕುಲ ತತಿ ಶುದ್ಧಮಾಳ್ಪರು ಹರಿಪುರವಹೊಂದಿ 4 ಕಲಿಕಾಲದಿ ನರಹರಿ ನಾಮ ಸ್ಮರಣೆಯು ಮುಖದಿಂದ ಬರುವುದು ಅತ್ಯಸಾಧ್ಯಲಲಿತಕವನದಿ ತುತಿಸೆ ರಮಾಪತಿವಿಠಲನು ಒಲಿವನು ಇದು ಸತ್ಯಹಲವು ಮಾತೇಕಿವರು ಸುರರೇ ಸರಿ ನರರಲ್ಲ ಇದು ಸಿದ್ಧವೇ ಸಿದ್ಧಛಲದಿ ಮನುಜನೆಂಬಧಮನು ಹರಿಯಾಜ್ಞೆಯಲಿ ಬಲು ಬಲು ನರಕದೊಳು ಬೇಳುವುದುರಾದ್ಧ 5
--------------
ರಮಾಪತಿವಿಠಲರು
ಕಾಣಿ ನಿನ್ನಂಥವಳ ಪ. ಮುದ್ದು ರುಕ್ಮಿಣಿಯು ದೂತೆಗೆ ತಿದ್ದಿ ಮಾತುಗಳ ಹೇಳಿ ಬುದ್ಧಿವಂತಳೆ ರಾಯಗ ಸುದ್ದಿ ಹೇಳಮ್ಮ ಹೋಗಿ1 ಮಾನ ಮಾಡಿ ದೂತೆಗೆ ಆನೆ ಅಂಬಾರಿ ಕೊಟ್ಟುನಾನಾ ಭೂಷಣಗಳಿಟ್ಟು ತಾನು ವಸ್ತ್ರಗಳನೆ ಕೊಟ್ಟು2 ಹರದಿ ರುಕ್ಮಿಣಿಯು ದೂತೆಗೆ ತುರಗ ಬಿರುದುಗಳೆ ಕೊಟ್ಟುಎರಗಿ ಹೇಳಮ್ಮ ಅಷ್ಟು ಹಿರಿತನಗಳಟ್ಟು 3 ರಂಗ ಬಂದಿಳಿದಾನೆಂಬೊ ಮಂಗಳವಾರ್ತೆಯಸಂಗೀತಲೋಲರಾಯನ ತಂಗಿಗ್ಹೇಳಮ್ಮ ಹೋಗಿ 4 ಭರದಿ ದ್ರೌಪತಿಗೆ ಮುಯ್ಯಾ ತಿರುಗಿಸಿ ತಂದಾರೆಂದು ಎರಗಿ ಹೇಳಮ್ಮ ಮೈಯ್ಯ ಮರೆತಿರಬ್ಯಾಡಿರೆಂದು5 ಮಂದಗಮನೆಯರು ಮುಯ್ಯ ತಂದಾರೆ ತಾರಾರೆಂದು ಸಂದೇಹ ಬಿಟ್ಟು ಊಟ ಚಂದಾಗಿ ಮಾಡಿರೆಂದು6 ಧೀರರಾಯಗೆ ಮುಯ್ಯ ನಾರಿಯರು ತಂದಾರೆಂದು ಬಾರಿ ಬಾರಿಗೆ ನಮಿಸಿ ಸಾರಿ ಹೇಳಮ್ಮ ಹೋಗಿ 7 ಧಿಟ್ಟೆಯರು ಮುಯ್ಯ ಉತ್ಕøಷ್ಟದಿ ತಂದಾರೆಂದು ಕೃಷ್ಣರಾಯನ ಬಂದದ್ದಷ್ಟು ಹೇಳಮ್ಮ ಹೋಗಿ8 ಇಂದು ರಾಮೇಶನ ಮಡದಿಯರು ಬಂದರು ದ್ವಾರದಿ ಒಂದೊಂದು ಮಾತುರಾಯಗೆ ಚಂದಾಗಿ ಹೇಳಮ್ಮ ಹೋಗಿ9
--------------
ಗಲಗಲಿಅವ್ವನವರು
ಕಾಮಿತಾರ್ಥದಾಯಿನೇ | ತುಳಸಿ ಕಲ್ಯಾಣಿ ಶ್ಯಾಮಾ ವಿಶಾಲನಯನೇ ಪ ಹಸುರು ಕಂಚುಕಧರೆ ಆನಂದ ರಸಿಕೇ ಶಶಿ ಬಿಂಬಸಮ ಸುಂದರಮುಖೇ ಉಸಿರುಬಿಡದೆ ನಿನ್ನ ಕೊಸರುವೆ ವರಗಳ ಹಸನಾಗಿ ಕೊಡುವೆನೀ ಅತಿಶಯದಿಂದಲಿ 1 ಬಣ್ಣಾದ ಸರಪಳಿ ಹಾಕಿದ ಕೊರಳೇ ಬಟ್ಟ ಮುತ್ತಿನ ಹರಳೇ ಹುಣ್ಣಿಮೆ ಚಂದ್ರನಂತೆ ಸುಂದರಮುಖದವಳೇ ಪನ್ನಂಗ ಶಯನಗೆ ಮಾಡಿದೆ ಮರುಳೇ 2 ಬಡನಡುವಿಗೆ ಒಡ್ಯಾಣಾ | ರುಳಿ ಪೈಜಣ ಕಡಗಾ ಕಂಕಣ ಹೊಳಿಯುವ ಜಾಣೆ | ನಡೆದು ಬಾರೆ ಶ್ರೀ ನರಸಿಂಹವಿಠಲನ ಪಾದ ಬಿಡದೆ ಭಜಿಪೆನಮ್ಮ 3
--------------
ಓರಬಾಯಿ ಲಕ್ಷ್ಮೀದೇವಮ್ಮ
ಕಾಯೊ ಬಾರೊ ಹರಿಯೆ ಕರುಣಾ ಪಯೋಂಬುಧಿ ಪ. ಕಾಯೊ ಬಾರೊ ಕರುಣಾಂಬುಧಿ ಕಮಲದ- ಳಾಯತ ನೇತ್ರ ರಸಾಯನ ಸುರಿವುತ ಅ.ಪ. ಸಿಲುಕಿ ಬಾಧೆಗೊಂಡು ಬಹು ಬೆದರುವ ದಾಸನ ಕಾದುಗೊಳ್ಳು ಕಂಬ್ವರಿಗದಾಬ್ಜಧರ ಮಾಧವ ಮಧುಮಥನ ಮನದಿ ವಿನೋದಿಸುವ ಕಥನ ಶ್ರೀ ಪದಾಬ್ಜಾಮೋದಯುಗ ಸಾಸ್ವಾದನಾತ್ಮಕ ವಿನೋದ ನಲಿವುತ 1 ಕತ್ತಲೆ ಮುಸುಕಿರುವ ಸಮಯದಿ ಸುತ್ತ ವ್ಯಾಘ್ರವಿರುವ ವನದಲಿ ಸತ್ವಹೀನವಾದೆತ್ತಿನ ಕೆಡಹುವದುತ್ತಮವೆ ಪುರುಷೋತ್ತಮ ನಿನ್ನಯ ತತ್ವಮಾರ್ಗ ತಿಳಿಸಿ ತ್ರಿಕರಣವೆತ್ತಿ ಬೋಧೆಗೊಳಿಸಿ ಜನೋತ್ತಮನೆನಿಸುತ 2 ಇಂದಿರೇಶ ನಿನ್ನ ಚರಣವನೆಂದಿಗು ನಂಬಿದನ ಬಂಧ ಬಿಡಿಸಿ ಕೃಪೆಯಿಂದ ಪೊರೆವನೆಂಬಂದಕಪಾಯವ ಕರುಣಾಸಿಂಧು ನಿನ್ನ ಕೀರ್ತಿ ಮನೋಗತ ಸಂದಣಗೊಳಿಸುತ 3
--------------
ತುಪಾಕಿ ವೆಂಕಟರಮಣಾಚಾರ್ಯ
ಕಾಯೋ ಬಾರೋ ಹರಿ ಈಯ್ಯೋ ವರ ಥೋರೀ ಜಾರಚೋರಖರ ಅರಿನಾಶಕಾರಿ ಪ ವಾಯುದೇವಪಿತ ತೋಯಜಾಕ್ಷಿ ಸೀತಾ ಪ್ರಿಯ ನೀನು ತ್ರಾತ ರಾಯ ಜಗನ್ನಾಥ 1 ಕಾಮನಯ್ಯ ನೀನು ಮಾಮನೋಹರನು ವಾಮನಾದಿ ನೀನು ರಾಮನಾಮಕನು 2 ಕರಿರಾಜನನ್ನು ತ್ವರಿತಾದಿ ಕಾಯ್ದಿ ಶ್ರೀವತ್ಸಾಂಕಿತ ಹರಿ ವೆಂಕಟೇಶ3
--------------
ಸಿರಿವತ್ಸಾಂಕಿತರು
ಕಾಲ ತಪ್ಪದು ನಿನಗೆಂದಿಗು ಮರುಳೆಒಳ್ಳಿತಾಗಿ ಕೇಳಿಕೋ ಹಿರಿಯರನು ಮರುಳೆನಾಳೆ ನಾಡದೋ ಆವಾಗಲೋ ತನು ನಿತ್ಯವಲ್ಲಕಾಲಕೆ ಸಿಕ್ಕಬೇಡ ಮರುಳೆ ಪ ಆಳುವ ಮಠಪತಿ ಊರಲ್ಲಿ ತನ್ನನ್ನುಹೂಳ್ಯಾರು ಎನಬಾರದೆ ಮರುಳೆಮೂಳ ಸಂಸಾರ ನೆಚ್ಚಲು ಕೆಡುವೆಆಲೋಚನೆ ಮಾಡಿಕೋ ಮರುಳೆ 1 ಮನವುಳ್ಳವರು ಇಹರೆ ಸಂಸಾರವೇನೆಂಬೆ ನೀನು ಸಂಗವ ಮರೆವೆ ಮರುಳೆಮಾನಿನಿ ಸುತರ ಮೋಹಕೆ ಬಿದ್ದುನಿನಗಾಗುವ ಮಾನಹಾನಿಯ ಕಾಣೆ ಮರುಳೆ 2 ಸಂಸಾರಕಾಂಕ್ಷೆಯ ಮನದಿ ತ್ಯಾಗವ ಮಾಡುಸಂಸಾರವಿದು ಮಾರಿಯು ಮರುಳೆಹಂಸ ಚಿದಾನಂದ ಸದ್ಗುರು ಹೊಂದಿಯೇನೀ ಸದಾಸುಖಿಯಾಗು ಮರುಳೆ 3
--------------
ಚಿದಾನಂದ ಅವಧೂತರು
ಕಾಲಕಾಲದಿ ಕರುಣಿಗಳರಸನಾದ ರಾಮಾ ಎನಬಾರದೇ | ಜಗ | ಪಾಲಕ ನಿನಗಿಹಪರಗಳ ನೀವಾ ಪ ಪಂಚಾಗ್ನಿಯಲಿ ದೇಹ ಬಳಲಿಸುವದ್ಯಾತಕ | ರಾಮಾ ಎನಬಾರದೇ | ಪ್ರ | ಪಂಚ ತೊರೆದು ವನವಾಸ ಹಿಡವುದ್ಯಾಕ | ರಾಮಾ ಎನಬಾರದೇ || ಒಂಟಿ ಕಾಲಿನ ಯೋಗಧಾರಣವ್ಯಾಕ | ರಾಮಾ ಎನಬಾರದೇ | ಪುಣ್ಯ | ಸಂಚಿಸೆ ಕೃಚ್ಛೆ ಚಾಂದ್ರಾಯಣಿ ವೃತವ್ಯಾಕ | ರಾಮಾ ಎನಬಾರದೇ 1 ರಾಮಾ ಎನಬಾರದೇ | ಅ| ಖಂಡದಿ ಛಟಪಟ ಕರ್ತಬೋಧಗಳ್ಯಾಕ ರಾಮಾ ಎನಬಾರದೇ || ಮಂಡೆ ಬೋಳಿಸಿ ಭಿಕ್ಷಾನ್ನ ಬಯಸುವದ್ಯಾಕ | ರಾಮಾ ಎನಬಾರದೇ | ಜಗ | ಭಂಡರಂದದಿ ಬತ್ತಲೆ ತಿರುಗುವುದ್ಯಾಕ | ರಾಮಾ ಎನಬಾರದೇ 2 ಉಂಬಾಗ ಉಡುವಾಗ ಕೊಂಬು ಕೊಡುವಾಗ | ರಾಮಾ ಎನಬಾರದೇ | ಸರ್ವಾ | ರಂಭದಿ ಸತಿಸುತಲಾಲನೆ ಮಾಳ್ಪಾಗ | ರಾಮಾ ಎನಬಾರದೇ || ತಿಂಬು ತಾ ಕಳಿಸುತಾ ಎಡಹುತಾಣಕಿಸುತಾ ರಾಮಾಎನಬಾರದೇ | ಇದು | ಸಂಭ್ರಮದಲಿ ಮಹಿಪತಿ ಸುತ ಸಾರಿದಾ ರಾಮಾ ಎನಬಾರದೇ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕಾಲು ತೊಳೆದವನೊಬ್ಬ ತೊಳೆಸಿಕೊಂಡವನೊಬ್ಬ ಮೌಳಿ ಮೇಲಾಜಲವ ಸತತ ಧರಿಸಿದನೊಬ್ಬ ಪಾಲಿಸುವ ಪ್ರಭುವೊಬ್ಬ ಕೊಲುವ ತಳವಾರನೊಬ್ಬ ಮೂರ್ಲೋಕವರಿಯೆ ಪುಟ್ಟಿಸಿದ ಪಿತನೊಬ್ಬ ಆಲೋಚನೆಯ ಬಲ್ಲವಗೆ ಸಂಶಯ ಸಲ್ಲ ಮಾಲೆಯನು ಮಹಲಕ್ಷುಮಿ ಹಯವದನಗಿತ್ತಳಾಗಿ 1 ರಾವಣನ ಕೊಂದ ಪಾಪವ ಕಳೆಯಬೇಕೆಂದು ದೇವ ರಘುಪತಿ ಸದಾಶಿವನ ಪೂಜಿಸಿದ ಗಡಾ ಆ ವಿಧಿಯ ಒಂದು ತಲೆಯನು ಕಡಿದ ಮಾತ್ರದಿಂದ ಆವಾಗ ಕರದಲ್ಲಿ ಇಹ ಕಪಾಲವ ಕಾಣನೆ ದಾವಘದೊಳು ಪೊರಳುವನ ದಾವಾತ ಭಜಿಸುವನು ಜೀವರಿಗೆ ಉಳ್ಳಷ್ಟು ವಿವೇಕ ಹಯವದನಗಿಲ್ಲವೆ 2 ರಾಮಾಯಣದ ಕತೆಯು ಮಹಾಪುಣ್ಯ ಕಥೆಯು ಗಡಾ ರಾಮ ರಾವಣನ ಕೊಂದದ್ದು ಮಹಾಪಾಪ ಗಡಾ ಆ ಮನುಮುನಿಗಳೆಲ್ಲ ಪಾಪಕಂಗೀಕರಿಸಿದರೆ ಸ್ವಾಮಿಯು ಲಯದಿ ಬೊಮ್ಮನ ಮೊದಲು ಕೊಲಿಸದೆ ಧೀಮಂತ ಹಯವದನ ಕೊಂದ ಹಿರಣ್ಯಕ ಮುಖ್ಯ ತಾಮಸ ದಿತಿಜರು ಕಶ್ಯಪ ಋಷಿ ಸುತರಲ್ಲವೆ3 ಶ್ರುತಿಯಿವ ಕರ್ಮಣಾನೋಕನೀಯ ಎಂದು ತುತಿಸುತಿರೆ ನಿಮ್ಮ ನಿರ್ಗುಣ ಬೊಮ್ಮಗೆ ಕರ್ಮವುಂಟೆ ಕ್ಷಿತಿಯೊಳಗೆ ರಾವಣನ ವಧೆಯ ಮಾಡಿದ ಸೇತುಪತಿಯ ಪಾವನನೆನಲು ಅವನ ಕೊಂದವನ ಪತಿತಪಾವನನೆಂಬುದೆ ಕುಚಿತ್ತಯುಕುತಿಯು ಸತತ ಹಯವದನನೊಬ್ಬನೆ ಶುದ್ಧ ಕಾಣಿರೊ 4 ಒಂದು ಕಡೆಯಲಿ ವಿಭೀಷಣನ ಪ್ರತಿಷ್ಠಿಸಿದನು ಮ- ತ್ತೊಂದು ಕಡೆಯಲಿ ಸದಾಶಿವನ ಪೂಜಿಸಿದ ಇಂ- ತೆಂದು ಪುರಾಣಗಳು ಕೂಗುತಿವೆ ತ್ರಾಸಿನೊಳು ಹೊಂದಿಸಿ ಸಮನೆಂದು ತೂಗಿ ತೋರು ಮದದಲಿ ಸಂದೇಹ ಸಲ್ಲ ಹಯವದನ ರಘುಪತಿಗಿಬ್ಬರು ಸಂದ ಭಕುತರೆಂಬುದು ಸಲೆ ಸುಪ್ರಸಿದ್ಧ 5 ಸೇತುವೆಯ ಕಂಡ ನರರಿಗೆ ಬ್ರಹ್ಮಹತ್ಯಾದಿ ಪಾತಕವು ಬಿಡುವುದೆಂಬ ಶ್ರುತಿಯ ಮನ್ನಿಸಲು ಖ್ಯಾತ ಬೊಮ್ಮನ ತಲೆಯ ಕಡಿಯೆ ಕರದಲಿಕೊಟ್ಟ ತಾ- ಸುಕೃತ ಸೇತುಮುಖದಿಂದ ಸೀತೆಯರಸನು ಶಿವನ ನಿಲ್ಲಿಸಿ ಪ್ರತಿಷ್ಠಾಪಿಸಿದ ಜಗನ್ನಾಥ ಹಯವದನ ಭಕ್ತರಬಂಧು ಕಾಣಿರೊ 6 ರಾಮ ಶ್ರೀರಾಮರಾಮೇತಿ ರಮೆಯೆಂಬ ಆ ಮಹಾದೇವ ಭಗವದ್ಭಕ್ತನಲ್ಲವೆ ಸ್ವಾಮಿ ತನ್ನ ಭಕ್ತರÀನು ಪ್ರತಿಷ್ಠಿಸಿದ ನಿ- ಸ್ಸೀಮ ಕರುಣಾಂಬುಧಿ ಮಹಾಮಹಿಮನೆಂಬರು ಭ್ರಾಮಕದ ನುಡಿಗೆ ಮರುಳಾಗದಿರು ಹಯವದನ ರಾಮಚಂದ್ರನೆ ಕಾಶಿಯ ತಾರಕಬೊಮ್ಮ ಕಾಣಿರೊ 7 ಕಾಶಿಯಲಿ ರಾಮಮಂತ್ರೋಪದೇಶವ ಮಾಳ್ಪ ಈಶ ಜಾಣರ ಮತದಿ ಜಗಕೆ ಗುರುವೆಂತೆಂಬ ಆ ಶಿವನ ಮಂತ್ರದೇವತೆ ತಾರಕಬೊಮ್ಮಯೆನಿಪ ವಾಸುದೇವನೆ ಜಗಕೆ ಪರದೈವ ಕಾಣಿರೊ ಈ ಸುತತ್ವÀವ ಪೇಳ್ವ ಹರಗೆ ನಮ್ಮ ಹಯವದನ ಏಸುಮನ್ನಣೆ ಮಾಡಿದರುಚಿತ ಕಾಣಿರೊ 8 ಕರವ ಶಿರದ ಮೇಲೆ ಇರಿಸಬಂದ ಖಳಗಂಜಿ ಹರ ಸಕಲ ಸುರೇಶ್ವರರ ಅರಮನೆಗಳಿಗೆ ಪೋಗಿ ಪರಿಹರವ ಕಾಣದೆ ನಮ್ಮ ಸಿರಿವರನ ಮರೆಹೊಗಲು ಪÀರಿಣಾಮವನು ಪೊರೆದ ಗಡಾ ಶರಣರಕ್ಷಕನೆಂಬ ಬಿರುದುಳ್ಳ ಹಯವದನ ಹರಿಯಲ್ಲದೆ ಪಿರಿದೊಂದು ಪರದೈವವಿಲ್ಲವಯ್ಯ 9 ರೋಮಕೋಟಿಲಿಂಗನೆನಿಸಿದ ಹನುಮನೊಂದು ರೋಮಕೆ ಕೋಟಿ ಶಿವರ ಮಾಡುವ ಶಕ್ತ ಕಾಣಿರೊ ಆ ಮಹಾತ್ಮನ ತನ್ನ ಆಳುಮಾಡಿ ನಡೆಸಿಕೊಂಡ ರಾಮಚಂದ್ರನೆ ಜಗಕ್ಕೆ ಪರದೈವ ಕಾಣಿರೊ ಸ್ವಾಮಿ ಹಯವದನ ವೇದವ ತಂದು ಕಮಲಜನ ಕಾಮಿತವನಿತ್ತನಾಗಿ ಅವನೆ ಜಗದೊಡೆಯ 10 ನೂರು ರುದ್ರರು ಪೇಳೆ ಕಾರ್ಯವಾದರೇನವರು ಈರೇಳು ಜಗವ ಸಂಹರಿಸಲರಿಯರು ಗಡಾ ಕಾರ್ಯವಿಲ್ಲದ ಶಿವರ ಪೇಳಲದ್ವೈತಮತ ಹಾರಿಹೋಗದೆ ಬರಿದೆ ಹಲವು ಹಂಬಲಿಸದೆ ಶ್ರೀರಮಣ ಹಯವದನನೊಡಂಬಟ್ಟನಿ ಬರನು ದೂರ ಕಳಚಿದನೆಂದು ಪೂರ್ವದವರನೆ ನಂಬು 11 ಯಾತ್ರೆಯ ಮಾಡಿಸಿಕೊಂಡು ಹರ ಹಿರಿಯ ತಾನಾಗಿ ಯುಕ್ತಿ ಬಾಧಕವಾಯಿತ್ತು ಹರಿಹರರೊಳೈಕ್ಯ ಚಿತ್ರ ನಿನ್ನ ಮತಕೆ ನೀನೆ ಶತ್ರುವಾದೆ ಪ್ರತ್ಯುತ್ತರವ ಪೇಳೆ ಪರಾಜಯ ಬಾರದಿಹುದೆ ಮತ್ತೆ ನೆನೆಯೊ ಶ್ರೀಹಯವದನಗಿದು ಲೀಲೆಯಾದರೆ ಸತ್ವ ಹೆಚ್ಚಿತು ಸರ್ವೋತ್ತಮನೆಂಬ ಶ್ರುತಿಗೆ 12 ವಂದ್ಯಮಾನಂ ಪಿತಾನಾಂ ಪ್ರತಿ ಪ್ರಮಾಣಂ ಎಂದು ರುದ್ರನ ಕೂಡೆ ಶ್ರುತಿ ಪೇಳಿತಾಗಿ ತಂದೆ ಮಕ್ಕಳ ಮನೆಗೆ ಪೋದಂತೆ ಪೋಗಿ ಮು- ಕುಂದ ಮೊಮ್ಮಗನಿಗೆ ಹಿರಿತನವ ಕೊಡಲೆಂದು ಮುಂದೆ ಜನಿಸುವ ಕಿರಿಯ ಕುವರರೊಳು ತನ್ನ ಕಂದನ ಸೃಜಿಸಿದ ಹಯವದನ ಚತುರನಲ್ಲವೆ 13 ಸುರರು ದ್ವಾರಕಾಪುರ ಯಾತ್ರೆಯಲಿ ಪಾಲಸಾಗರಯಾತ್ರೆ ಗರ್ಭಯಾತ್ರೆ ಕಳೆಯೆ ಶೂಲಧರ ಖಳಗಂಜಿ ಭುವನವೆಲ್ಲವ ಸುತ್ತಿ ಶ್ರೀ- ಲೋಲನಿಹ ವೈಕುಂಠಯಾತ್ರೆಯಿಂದ ಬದುಕನೆ ಭೂಲೋಕದಲಿ ಪುಟ್ಟಿ ಹಯವದನ ಕೃಷ್ಣ ಮಾಡಿದ ಕೈಲಾಸಯಾತ್ರೆ ಕೈವಲ್ಯಪತಿಗೆ ಲೀಲೆ 14 ಹರನಾರು ಪುರಾಣಗಳು ವಿರಿಂಚನಾರು ಪುರಾಣಗಳು ಹರ ವಿರಿಂಚರವಲ್ಲವೆಂದು ಹಿರಿಯರೆ ಮನ್ನಿಸಲಾಗಿ ಪರಮ ಸಿದ್ಧಾಂತಕೋವಿದರೆನಿಪ ಬುಧರಿಗೆ ಪುರಾಣಗಳ ಮ್ಯಾಲೆ ಮಾಡುವ ಪರಮಾದÀರ ಸಲ್ಲದಯ್ಯ ದುರಾಗ್ರಹವ ಮಾಡಬ್ಯಾಡ ಗುರುಮತವ ಬಿಡಬ್ಯಾಡ ಸಿರಿ ಹಯವದನನಾರುಪುರಾಣಗಳ ನೋಡಿರೊ 15 ಒಂದು ಬೊಮ್ಮಚಿತ್ತು ಒಂದು ಜೀವಚಿತ್ತು ಇಂ- ತೆಂದು ಶ್ರುತಿಸ್ಕಂಧÀ ಚೇತವೆಲ್ಲ ಗ್ರಂಥ[ಆ]ಸ್ಯ ದಿಂದ [ಒರೆಯೆ] ಹರಿಜಡನೋ ಹರಜಡನೋ ಮಂದಹಾಸದಿಂದ ಜಡರು ಮನುಮುನಿಗಳೆಲ್ಲ ಇಂಥ ಶಿವನ ವಹಿಸಿಕೊಂಡು ವಾದಿಸುವರು ಹಿಂದು ಮುಂದರಿಯರೆಂದು ಹಯವದನ ನಗನೆ 16 ಯಂ ಬ್ರಹ್ಮವೇದಾಹಂ ಬ್ರಹ್ಮ ವೇದಶ್ರುತಿಶಬ್ದ ಬ್ರಹ್ಮ- ವೆಂಬ ವೇದ ಬೋಧಿಸಿತಾಗಿ ಇಂಥ ಮನುಜರಿಗೆಲ್ಲ ಭಾವಾಭಾವ ಪೇಳ್ವ ಹೊಂದಿಬದುಕು ಹಯವದನನ ಚರಣವ ಹೊಂದಿಬದುಕೊ ಜೀವ ಹರಿಯೆ ನಾನೆನ್ನಬ್ಯಾಡ 17
--------------
ವಾದಿರಾಜ