ಒಟ್ಟು 1626 ಕಡೆಗಳಲ್ಲಿ , 108 ದಾಸರು , 1289 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕ್ಷೀರಾಬ್ಧಿಜಾರಮಣ ಕ್ಷೀರಾಂಬುನಿಧಿಶಯನ ಸದನ ಗರುಡಗಮನ ಕಾಕುತ್ಸ್ಥವಂಶಾಬ್ಧಿ ರಾಕೇಂದು ಗುಣನಿಧೀ ಪಾಕಾರಿಮುಖದೇವ ನಿಕರಜೀವ ನಿಟಿಲಾಕ್ಷನುತನಾಮ ಜಟಾವಲ್ಕಲಧಾಮ ತಾಟಕಾಂತಕರಾಮ ಸಮರಭೀಮ ಇಂದುಸನ್ನಿಭವದನ ಕುಂದಕುಟ್ಮಲರದನ ಇಂದೀವರ ಸುನಯನ ಕನಕವಸನ ಕವಿಜನಮನೋಲ್ಲಾಸ ಶಶಿಸುಹಾಸ ಸೇವ್ಯ ದೇವದೇವ ಭವಭೀತಿಹರ ಶೇಷಶೈಲನಿಲಯ ಸುವಿಮಲಯಶಶ್ಚಂದ್ರ ರಾಘವೇಂದ್ರ
--------------
ನಂಜನಗೂಡು ತಿರುಮಲಾಂಬಾ
ಖಗವರಧ್ವಜ ವಿಠಲ ಪೊರೆಯ ಬೇಕಿವನ ಪ ಭಾಗವತ ಸುಶ್ಲೋಕ್ಯ ಬಗೆಬಗೆಯಲಿಂದಿವನಮಿಗಿಲಾಗಿ ಪೊರೆಯಲ್ಕೆ | ಪ್ರಾರ್ಥಿಸುವೆ ಹರಿಯೇ ಅ.ಪ. ವಿತ್ತಪತಿಯೊಲಿಮೆಗಳು | ಕತ್ತರಿಸಿ ಪೋಗಿ ಕೃತಕೃತ್ಯತಾನೆಂಬ ಉ | ತ್ಕøಷ್ಟಮತಿಯೊದಗೇಕೃತಿವಾಸನ ತಾತ | ಇತ್ತುದಕೆ ಸಂತೃಪ್ತಿಪೊತ್ತು ತವದಾಸ್ಯವನು | ಅರ್ಥಿಸುವ ಹರಿಯೇ 1 ಪೋರನಾ ಮಯಕಳೆದು | ತಾರತಮ್ಯ ಜ್ಞಾನ ಮೂರೆರಡು ಭೇದಗಳ | ಸಾರವನೆ ಅರುಹೀಕಾರಣಿಕ ನೀನೆ ಉ | ದ್ದಾರವನೆ ಮಾಡೊ ಹರಿಬೇಕೊಂದ ಪ್ರಾರ್ಥಿಪೆನೊ | ಕಾರುಣ್ಯ ಮೂರ್ತೇ 2 ಅನೇಕ ಜನ್ಮದಲಿ | ಹೀನಯೋನಿಲಿ ನೊಂದುಜ್ಞಾನ ಸಾಧನ ವಿರದೆ | ದೀನ ನಾದವಗೇಮಾನ ನಿಧಿ ಶಾಸ್ತ್ರ ಸಂ | ಧಾನ ವೀಯುತ ತ್ವರ್ಯಧ್ಯಾನ ಸಾಧನ ವೀಯೊ | ಪ್ರಾಣಾಂತರಾತ್ಮಾ 3 ಲೌಕಿಕವನೆಲ್ಲ ವೈ | ದೀಕ ವೆಂದೆನಿಸೊ ಹರಿಕಾಕು ಸಂಗವ ಕೊಡದೆ | ನೀ ಕೊಡೊ ಸತ್ಸಂಗಏಕಮೇವನೆ ಸ್ವಾಮಿ | ಮಾಕಳತ್ರನೆ ನಿನ್ನ_ನೇಕ ಬಗೆಯಲಿ ತುತಿಪ | ವಾಕ್ಸಿದ್ಧಿ ಈಯೋ 4 ಪದ್ಮನಾಭನೇ ಹೃ | ತ್ಪದ್ಮದಲಿ ತವರೂಪಸಿದ್ಧಿಸುತ ಸಂಚಿತವ | ಪ್ರಧ್ವಂಸ ಗೈದೂಅದ್ವೈತ ತ್ರಯದರಿವು | ಬುದ್ದಿಗೆ ನಿಲುಕಿಸೆನೆಹೃದ್ಯ ಗುರು ಗೋವಿಂದ ವಿಠಲ ಬಿನ್ನವಿಪೇ 5
--------------
ಗುರುಗೋವಿಂದವಿಠಲರು
ಖೋಡಿಗುಣ ಜಗದಲ್ಲಿ ಹೂಡಿ ನೀ ನಲಿವಾಗ ನಾಡೆದ್ದು ಕುಣಿಯುವದೊ ನಾಸ್ತಿಕಾದಲ್ಲಿ ಪ ಮಾಡಿ ದುಪ್ಕ್ರಿಯ ಜಾಲ ಮತಿಭ್ರಷ್ಟತನದಲ್ಲಿ ನೋಡರೂ ಸನ್ಮಾರ್ಗ ಗಾಡಿಕಾರನೆ ಹರಿಯೆ ಅ.ಪ ಗತಿಸಿದಾ ತನುಗಳಲಿ ರತಿವಿಷಯಗಳ ಮಾಡಿ ಮತಿ ಮನಸು ದುರ್ಭಾವಗಳಲಿ ನೆಯದು ಮತ್ರ್ಯರನು ನೋಡಲತಿ ಭೀತಿ ಆಹುದೊ ಮನಕೆ 1 ನಾನಾಭಾವವ ಪೊಂದಿ ಹಾನಿವಶರಾಗಿಹರು ಜ್ಞಾನನಿಧಿ ತವಕರುಣಕೆರವಾಗಿ ನಡೆದು ನಾನಾ ದುಃಖದಿ ನರಳಿ ನರಕ ಯಾತನೆಗೊಂಬ ಜ್ಞಾನಹೀನರ ನೋಡಿ ನಡುಗುವೆನೊ ಹರಿಕಾಯೊ 2 ಕ್ವಚಿತು ಸಜ್ಜನ ತಾವು ಶುಚಿ ಮನದಿ ನಿನ್ನಲ್ಲಿ ರುಚಿಗೊಳಲು ಎತ್ತೆನಿಸೆ ಎದೆ ಬಿಚ್ಚುವಂತೆ ಹೆಚ್ಚಿ ಆದಿವ್ಯಾಧಿ ನುಚ್ಚು ಮಾಳ್ಪದೊ ಮನಸು ಸಚ್ಚಿದಾನಂದ ಹರಿ ಸಜ್ಜನಾಧಾರಿ ಧೊರಿ3 ವಿಧಿ ಲಕ್ಷ್ಮಿ ಸನ್ನತ ಮಹಿಮ ಬಂದ ಭಯಗಳು ನಿನ್ನ ಇಚ್ಛೆಯಿಂದ ಬಂದದಲ್ಲದೆ ಬೇರೆ ಒಂದು ಕಾರಣ ಕಾಣೆ ಸಿಂಧು ಕೊಡುವವ ನೀನೆ4 ತಾಮಸರ ವಿಕಾರ ದುಃಖರಸÀ ಸೃಜಿಸುವುದು ಸೌಮ್ಯ ಜನ ಸದ್ಭಾವ ಸುಖಸಾರ ಸೃಷ್ಟಿ ಕಾಮಧೇನು ಜಯೇಶವಿಠಲಯ್ಯ ನಿನ್ನ ಮಹ ನೇಮ ಇಂಥಾದ್ದೆ ಪತಿತ ಪಾವನ ಪಾಹಿ 5
--------------
ಜಯೇಶವಿಠಲ
ಗಂಗಾ ಗಂಗಾ ಎಂದು ನಿನ್ನ ಸಾನ್ನಿಧ್ಯದಲ್ಲಿಯೇಇರುವೆನೋ? ಸುಖದಿ ಗಂಗಾ ಪಧರೆಗೊಪ್ಪುವ ಹಾರ'ದೆಂಬಂದದಿಮೆರೆಯುತ್ತಿರುವಾ ಪರಮಪಾವನೆಯೆ 1ಸುರಲೋಕಕೆ ಹತ್ತುವದನು ಸೂಚಿಸುತಿರುವ ಪತಾಕೆಯ ಪರಿಯಳೊಪ್ಪಿರುವ2ಹರಿಚರಣಾಂಬುಜದಿಂದ ಹೊರಡುತಹರನಶಿರಸ್ಯಂ ಹರಿಯುತಾ ಇರುವ 3ಮುಳುಗಿದವರ ಪಾಪಗಳನೆಲ್ಲವನುತೊಳೆಯುವ ಚಿನ್ಮಯೆ ಕಲಿಮಲಾಪಹರೆ 4
--------------
ಹೊಸಕೆರೆ ಚಿದಂಬರಯ್ಯನವರು
ಗಂಗೇ ಜನನೀ ಮಂಗಳರೂಪಿಣಿ ತುಂಗ ಮಹಿಮನ ಪಾದಾಂಗುಳಿಜಾತೆ ಪ ಸಂಗತಿಯರುಹಲು ಬಂದಿರುವೆವು ಕೃಪಾ ಪಾಂಗವ ತೋರೆಲೆ ಇಂಗಿತವರಿತು ಅ.ಪ ನಾಲ್ಕು ಮೊಗನು ಹರಿ ಕಾಲಿಗೆ ಕೆಡುಹಲು ಶೂಲಧರನ ಶಿರ ಆಲಯ ಮಾಡಿದೆ ಶೈಲದಂತಿಹ ಪಾಪ ಜಾಲಿಸಿ ಕಳೆಯುವೆ ಪೇಳಲಳವೆ ನಿನ್ನ ಶೀಲವ ಸುಲಭದಿ 1 ಚಾರು ನದಿಗಳು ಹೇರಳವಿದ್ದರು ಭಾರತ ದೇಶದಿ ಭಾಗ್ಯದೇವತೆ ನೀ ದೂರ ದೂರ ದೇಶಗಳಲಿ ನೆಲೆಸಿಹ ಧೀರರು ನಿನ್ನಯ ಕೋರುತಲಿರುವರು 2 ಅಂಗಳದಲಿ ಬಿದ್ದು ಹರಿವ ಜಲವು ನಿನ್ನ ಸಂಗದಿ ಪರಮಮಂಗಲ್ಯವ ಪಡೆವುದು ಶೃಂಗಾರದ ನಿಧಿ ರಂಗನ ಸೇವೆಗೆ ಗಂಗೇ ಎನ್ನಂತರಂಗವ ಶೋಧಿಸೆ 3 ಭೂಮಿಯ ಭೇದಿಸಿ ಸುಂದರ ರೂಪದಿ ಸ್ವಾಮಿ ಶ್ರೀಮಧ್ವರ ಚರಣಕೆ ನಮಿಸಿ ಆ ಮಹಾತ್ಮರ ದರುಶನದಿ ಪ್ರಸನ್ನಳೇ ಕಾಮಿತ ಕರುಣಿಸೇ ತ್ರಿಕರಣ ಶುದ್ಧಿಯ 4
--------------
ವಿದ್ಯಾಪ್ರಸನ್ನತೀರ್ಥರು
ಗಣೇಶ ಹಿತಮತಿಯ ಪಾಲಿಸೊ ಪ ಗತಿಯ ಕಲ್ಪಿಸಿ ಸಿರಿಪತಿಯ ಪಾದದಿ ಅ.ಪ ಗಜವದನನೆ ಎನ್ನ ನಿಜಭಕುತಿಯೊಳ್ನಿನ್ನ ಭಜನೆ ಮಾಡುವಂಥ ನಿಜವ ಪಾಲಿಸಿ 1 ಹರಣ ಮಾಡಿ ನಿನ್ನ ಸ್ಮರಣೆಯ ಕೊಟ್ಟು 2 ದೀನನಾಗಿ ನಾ ನಿನ್ನ ಸನ್ನಿಧಾನಕೆ ಬಂದೆ ಜ್ಞಾನವಿತ್ತು ಕಾಯೋ ಈಗ ಪ್ರಾಣನಾಥ ವಿಠಲನಲ್ಲಿ 3
--------------
ಬಾಗೇಪಲ್ಲಿ ಶೇಷದಾಸರು
ಗರುಡಧ್ವಜ ಮಾಧವತ್ವಚ್ಚರಣಾಬ್ಜಕೆ ಶರಣು ಪರಿಭವವೆಂದಿಗು ಬಾರದ ತೆರದಲಿ ಸಲಹಿನ್ನು ಪ. ಸರಸಿಜ ಸಂಭವ ಶಂಕರ ಸುರವರ ವಂದ್ಯ ಮರೆಯದಿರೆಂದಿಗು ಕಿಂಪುರುಷಗಣ ವಂದ್ಯ 1 ಅಸಿಧರ ಶಾಙ್ರ್ಞಗದಾಕರ ವರನಂದನಧಾರಿ ಅರಿಪಕ್ಷದ ಮೂಲವ ಕತ್ತರಿಸು ಸುಧಾಕಾರಿ2 ವರವಾಗೀಶ್ವರನೊಳ್ ಸತ್ಕರುಣಾಮೃತನಿಧಿಯ ನಿರುಪಾಧಿಯೊಳಿರಿಸಹಿಪತಿಗಿರಿರಾಯಧ್ವರ ಸದಯ 3
--------------
ತುಪಾಕಿ ವೆಂಕಟರಮಣಾಚಾರ್ಯ
ಗರುವವು ನಿನಗ್ಯಾಕೆಲೋ ಎಲೋ ಜರ ನಾಚಿಕೆ ಬಾರದೇನೆಲೋ ಎಲೋ ಪ ಮರುಳನೆ ನಿನಗೀಪರಿ ಗರುವ್ಯಾತಕೋ ಅರಿತು ನೋಡ್ಹಿರಿಯರನೆಲೋ ಎಲೋ ಅ.ಪ ಘನತೆಲೊಸಿಷ್ಠನೇನೆಲೋ ಎಲೋ ಜನಕ ಭಾಗ್ಯದೊಳೆಲೋ ಎಲೋ ಮನುಗಳಲ್ವ್ಯಾಸನೇನೆಲೋ ಎಲೋ ನೀ ಮುನಿಗಳೋಳ್ಯುಕನೇನೆಲೋ ಎಲೋ ಮನೆತನದಲಿ ಘನದಶರಥನೆ ದಿನಮಣಿಯೆ ನೀ ಪ್ರಭೆಯೋಳೆಲೋ ಎಲೋ 1 ಧುರದಿ ಕಾರ್ತರ್ವ್ಯನೇನೆಲೋ ಎಲೋ ನೀ ನರಿವಿನೋಳ್ಪ್ರಹ್ಲಾದನೇನೆಲೋ ಎಲೋ ವಿರಸದಿ ರಾವಣನೇನೆಲೋ ಎಲೋ ನೀ ಸ್ಥಿರತನದ್ವಿಭೀಷಣನೇನೆಲೋ ಎಲೋ ಹರಿ ಒಲುಮೆಲಿವರ ಅಗಸ್ತ್ಯನೇನು ಸುರ ಗುರುವೇ ನೀ ಮತಿಯೋಳೆಲೋ ಎಲೋ 2 ತ್ರಾಣದಿ ವಾಲಿಯೇನಲೋ ಎಲೋ ನೀ ಜಾಣರೋಳ್ಬಲಿಯೇನೆಲೋ ಎಲೋ ಜ್ಞಾನದಿ ವಾಲ್ಮೀಕಿಯೇನೆಲೋ ಎಲೋ ನೀ ಗಾನದಿ ನಾರದನೇನೆಲೋ ಎಲೋ ದಾನದೊಳಗೆ ಹರಿಶ್ಚಂದ್ರನೇನೋ ನಿ ಧಾನದಿ ನಳನೇನೆಲೋ ಎಲೋ 3 ಪದವಿಯೊಳ್ಧ್ರುವನೇನೆಲೋ ಎಲೋ ನೀ ನಿಧಿಯೋಳ್ಕುಬೇರನೆಲೋ ಎಲೋ ಮದನನೆ ಪುರುಷರೋಳೆಲೋ ಎಲೋ ವರ ಮದದಿ ಕಶ್ಯಪನೇನೆಲೋ ಎಲೋ ಸದಮಲ ಕುಲದಲಿ ಗೌತಮ ಮುನಿಯೇ ನೀ ಕದನದಿ ಕುರುಪನೇನಲೋ ಎಲೋ 4 ನುಡಿವಲಿ ನರನೇನೆಲೋ ಎಲೋ ನೀ ಕೊಡುವಲಿ ಕರ್ಣನೇನೆಲೋ ಎಲೋ ಇಡುವಲಿ ಧರ್ಮನೇನಲೋ ಎಲೋ ನೀ ಕೆಡುಕಲಿ ಶಕುನಿಯೇನೆಲೋ ಎಲೋ ಕಡುಗಲಿತನದಲಿ ಕಲಿಭೀಮನೇ ಸಡಗರದಿಂದ್ರನೇನೆಲೋ ಎಲೋ 5 ಯುಕ್ತಿಲಿ ದ್ರೋಣನೇನೆಲೋ ಎಲೋ ನೀ ಶಕ್ತಿಲಿ ನಕುಲನೇನೆಲೋ ಎಲೋ ಭಕ್ತಿಲ್ವಿದುರನೇನೆಲೋ ಎಲೋ ನೀ ವೃತ್ತಿಲಿ ಸಹದೇನವನೇನೆಲೋ ಎಲೋ ಚಿತ್ತಶುದ್ಧಿಯಲಿ ವೀರ ಸುಧನ್ವನೆ ತೃಪ್ತಿಲಿ ಭೀಷ್ಮನೇನೆಲೋ ಎಲೋ 6 ದಿಟ್ಟರೋಳ್ಗರುಡನೇ ನೆಲೋ ಎಲೋ ನೀ ಶಿಷ್ಟರೋಳ್ಹನುಮನೇನೆಲೋ ಎಲೋ ಸೃಷ್ಟಿಯೋಳಾರನ್ಹೋಲ್ವೆಲೋ ಎಲೋ ನೀ ಭ್ರಷ್ಟನಾಗುವಿ ಯಾಕೆಲೋ ಎಲೋ ಬಿಟ್ಟುಗರ್ವಮಂ ಶಿಷ್ಟಶ್ರೀರಾಮನ ಮುಟ್ಟಿಭಜಿಸಿ ಉಳಿಯೆಲೋ ಎಲೋ 7
--------------
ರಾಮದಾಸರು
ಗುಣಾತೀತ ಸದ್ಗುರು ಗಣನಾಥ ಘನಸುಖದಾಯಕ ಸದೋದಿತ ಧ್ರುವ ಅನುದಿನ ಮಾಡುವೆ ಮನೋಹರ ಅಣುರೇಣುದೊಳು ನೀ ಸಾಕ್ಷಾತ್ಕಾರ ಮುನಿಜನರಿಗಾಗುವಿ ಸಹಕಾರ ನೀನಹುದೋಭಕ್ತರ ವಿಘ್ನಹರ 1 ನಿಮ್ಮ ಭೋಧಗುಣವೆ ಸರಸ್ವತಿ ಸಮ್ಯಜ್ಞಾನ ಬೀರುವ ನಿಜಸ್ಥಿತಿ ಬ್ರಹ್ಮಾದಿಗಳೊಂದಿತ ನಿಜಖ್ಯಾತಿ ಬ್ರಹ್ಮಾನಂದ ದೋರುವ ಫಲಶ್ರುತಿ 2 ಬೇಡಿಕೊಂಬೆ ನಿಮಗೆ ಅನುದಿನ ಕುಡುವವರಿಗೆ ನೀ ನಿಧಾನ ಮೂಢ ಮಹಿಪತಿ ಒಡೆಯ ನೀ ಪೂರ್ಣ ಮಾಡುತಿಹ ನಿತ್ಯವು ನಾ ನಮನ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಗುರು ಅಂತರ್ಯಾಮಿ ಶ್ರೀನಿವಾಸ ಸಿರಿರಮಣ ಶ್ರೀ ಕೃಷ್ಣ ಶ್ರೀನಿಧಿಯೆ ಶ್ರೀಶ ಪ. ಸೃಷ್ಟಿಕರ್ತನೆ ನಿನ್ನ ಲಕ್ಷಿದೇವಿಯು ಸತತ ಶ್ರೇಷ್ಠತನದಲ್ಲಿ ಪೂಜೆ ಮಾಡುತಿಹಳೊ ಅಷ್ಟು ದೇವತೆಗಳು ಆಗಮವನನುಸರಿಸಿ ಶಿಷ್ಟೇಷ್ಟನೆಂತೆಂದು ಪೂಜೆ ಮಾಡುವರೋ 1 ಅಣು ನಾನು ನಿನ್ನ ಅರ್ಚಿಸ ಬಲ್ಲೆನೇ ದೇವ ಘನಮಹಿಮ ಸ್ವೀಕರಿಸೊ ಅಲ್ಪ ಸೇವೆ ಮನ ಮಂದಿರದಿ ನಿಂತು ಅನುಗಾಲ ನಿನ್ನ ದಿವ್ಯ ಘನ ಮೂರ್ತಿಯನೆ ತೋರೋ ಪೂಜೆ ಮಾಡುವೆನೊ 2 ಸರಸಿಜಾಕ್ಷನೆ ನಿನಗೆ ಸರಸದಿಂದ ಗುಲಾಬಿ ಸರದ ಪೂಮಾಲೆಯನು ಕೊರಳಿಗ್ಹಾಕುವೆನೊ ಸುರರ ಪಾಲಿಪ ಹರಿಯೆ ಸುರಹೊನ್ನೆ ಹಾರವನು ಕರ ಚಕ್ರಯುತ ನಿನ್ನ ಕಂಧರದಿ ಧರಿಸೋ 3 ಶ್ಯಾಮವರ್ಣನೆ ರತ್ನಹಾರಗಳು ಹೊಳೆಯುತಿರೆ ಶ್ರೀ ಮನೋಹರ ಮುತ್ತಿನ್ಹಾರ ಪದಕಗಳು ಈ ಮಧ್ಯೆ ದಿವ್ಯ ಶ್ಯಾವಂತಿಗೆ ಸುಮನದಿಂ ಕಾಮಜನಕನೆ ಮಾಲೆಕಟ್ಟಿ ಹಾಕುವೆನೊ 4 ಈ ಜಗವ ಉದರದಲಿ ಧರಿಸಿ ಮೆರೆಯುವ ದೇವ ಜಾಜಿ ಪೂಮಾಲೆಯನು ಕಂಧರದಿ ಧರಿಸೊ ಭೋಜಕುಲ ತಿಲಕನೆ ಕೆಂಡ ಸಂಪಿಗೆ ಸರವ ಮಾಜದೇ ಎನ್ನಿಂದ ಸ್ವೀಕರಿಸೊ ದೇವ 5 ಪಾತಕರಹಿತ ಹರಿ ಪಾವನರೂಪನೆ ಪ್ರೀತಿಯಿಂ ಸ್ವೀಕರಿಸೊ ಕೇತಿಕೆಯ ಸರವ ಶ್ರೀತರುಣಿ ಸತ್ಯಭಾಮೆಯರು ಕದನವಗೈದ ಪ್ರೀತಿ ಪಾರಿಜಾತ ಧರಿಸಯ್ಯ 6 ಮರುಗ ದವನಗಳಿಂದ ಸುರಹೊನ್ನೆಯನೆ ಕಟ್ಟಿ ಇರುವಂತಿಗೆಯ ಹಾರ ಹರಿಯೆ ಅರ್ಪಿಸುವೆ ಪರಿಮಳವ ಬೀರುತಿಹ ಪರಿಪರಿಯ ಮಲ್ಲಿಗೆಯ ಸರಗಳನೆ ಧರಿಸಿನ್ನು ಸಾಕಾರರೂಪ 7 ದುಂಡುಮಲ್ಲಿಗೆಯ ಮೊಗ್ಗು ಪಾಂಡವರ ಪಾಲಕಗೆ ದಂಡೆಯನೆ ಕಟ್ಟಿ ನಾ ಕೊರಳಿಗ್ಹಾಕುವೆನೊ ಚಂಡವಿಕ್ರಮ ಶಂಖ ಚಕ್ರಧಾರಿಯೆ ಪಾದ ಮಂಡೆ ಪರಿಯಂತರದಿ ನೊಡಿ ದಣಿಯುವೆನೊ8 ಸತಿ ನಿನಗಾಗಿ ಕಾಷ್ಟದಳ ಮೃತ್ತಿಕೆಯ ಸೇವಿಸುವ ಜನಕೆ ಇಷ್ಟ ಫಲವನೆ ಇತ್ತು ಕೃಷ್ಣನ್ನ ತೋರಿಸುವ ಶ್ರೇಷ್ಠ ತುಳಸಿಮಾಲೆ ಕಟ್ಟಿ ಹಾಕುವೆನೊ 9 ಕಮಲನಾಭನೆ ಕೃಷ್ಣ ಕಮಲಾಪತಿಯೆ ಸ್ವಾಮಿ ಕಮಲಪಾಣಿಯೆ ದೇವ ಕಮಲಾಕ್ಷನೆ ಕಮಲಮುಖ ನಿನ್ನ ಪದಕಮಲದಲಿ ನಲಿವಂತೆ ಕಮಲದ್ಹಾರವ ಕಟ್ಟಿ ಕೊರಳೀಗ್ಹಾಕುವೆನೋ10 ಈ ಪರಿಯ ಮಾಲೆಗಳ ನೀ ಪ್ರೀತಿಯಿಂ ಧರಿಸಿ ಪಾಪಗಳ ತರಿದೆನ್ನ ಪಾವನವಗೈಯ್ಯೊ ಆಪತ್ತು ಕಳೆವ ಶ್ರೀ ಗುರು ಕಟಾಕ್ಷದಿ ನುಡಿದೆ ಗೋಪಾಲಕೃಷ್ಣವಿಠ್ಠಲನೆ ಕೃಪೆಮಾಡೊ 11
--------------
ಅಂಬಾಬಾಯಿ
ಗುರು ಪ್ರಜ್ಞಾನಿಧಿ ತೀರ್ಥ ಚರಣಾಬ್ಜ ಸೇವೆಯ ನಿರುತ ನೀಡಯ್ಯ ಯತಿವರ್ಯ ಯತಿವರ್ಯ ಪೂರ್ಣಪ್ರಜ್ಞಾರ್ಯರ ತತ್ತ್ವವರುಹಯ್ಯ ಅರುಹಯ್ಯ 1 ಕರುಣಾನಿಧಿಯೆ ನಿನ್ನ ಕಾರುಣ್ಯಕೆಣೆಯೆ ಶ್ರೀ ಕಾರುಣ್ಯ ವಿಠಲನಾ ದಯಾಪಾತ್ರ ದಯಾಪಾತ್ರ ಎನ್ನ ತಾಪತ್ರಯವ ಎನ್ನ ತಾಪತ್ರಯವ ಹರಿಸಿ ಸಲಹಯ್ಯ 2 ಶರಧಿ ದಾಟಿದ ಧೀರಾ ಗುರುತೂರ್ಯ ಶ್ರಮವಹಿಸಿ ಮೆರೆಯುವೆ ಮೆರೆಯುವೆ 3 ಮಾರ್ಗದೊಳು ಬರುತಿಹ ದುರ್ಮಾರ್ಗವನು ಜರಿದು ಸ ಯತಿವರ್ಯ ಎನ್ನ ಭವ ದುರ್ಗವನೆ ಹರಿಸಿ ಸಲಹಯ್ಯ ಸಲಹಯ್ಯ 4 ಗುರುವೆ ನಿನ್ನಯ ಕರುಣ ಕವಚವನೆ ತೊಡಿಸಯ್ಯ ಕಾರುಣ್ಯ ವಿಠಲನ ಅರ್ಚಿಪೆ ಅರ್ಚಿಪಾ ನಿನ್ನೊಳು ಕರುಣಾರಸಕೆ ಕುಂದುಂಟೆ ಕುಂದುಂಟೆ 5 ಹಿಂದಿಲ್ಲ ಮುಂದಿಲ್ಲ ಒಂದು ಬೋಧಿಪೋರಿಲ್ಲ ಮುಂದೆ ಬಾ ಎನ್ನುವರು ಮೊದಲಿಲ್ಲ ಮೊದಲಿಲ್ಲ ಇಂದು ನಾ ಮಂದನಾಗಿಹೆ ಎನ್ನ ಕರುಣಿಸೋ ಕರುಣಿಸೋ 6 ಬಂದುದಾಯಿತು ಜನ್ಮ ಸಂದು ಹೋಯಿತು ಆಯು ಕುಂದಿತೆನ್ನಯ ಕರಣ ಇಂದಿನಾ ಇಂದಿನಾ ಪರಿ ಪಥವೆನಗೆ ತೋರಯ್ಯ ತೋರಯ್ಯ7 ಮಂಕು ಮಾನವನ ಮನ ಡೊಂಕವನೆ ತಿದ್ದಿ ಶ್ರೀ ವೇಂಕಟೇಶನ ಭಕ್ತನೆನಿಸಯ್ಯ ಎನಿಸಯ್ಯ ನಿನ್ನಾ ಕಿಂಕರೊಳಗೆ ಕಿಂಕರನೆನಿಸಯ್ಯ 8 ಕಾರುಣ್ಯವಿಠಲಾಭಿನ್ನ ಶ್ರೀ ಉರಗಾದ್ರಿವಾಸವಿಠಲನ ನಿಜದಾಸ ನಿಜದಾಸ ನೀ ಪರಮೋದಾರ ಗುರುವರ್ಯ ಯತಿವರ್ಯ 9
--------------
ಉರಗಾದ್ರಿವಾಸವಿಠಲದಾಸರು
ಗುರು ಮಧ್ವಮುನಿರನ್ನ ಮೂರುಪರಿಯ ದೋರಿದೆ ನಿನ್ನ ಹರಭಕ್ತಿಯಲಿ ಅವಿಚ್ಛಿನ್ನ ಸರಿಯಾರು ಧರೆಯೊಳು ನಿನ್ನ ಸ್ಮರಣೆಯಲಿಹೆ ರಾಮನ ಪರಮಪಾವನ್ನ 1 ಅತಿಬಾಹು ಪರಾಕ್ರಮ ಕ್ಷಿತಿಯೊಳು ನಿನ್ನದೇ ನೇಮ ಪ್ರಥಮಲ್ಯಾದೆ ಹನುಮ ದ್ವಿತಿಯಲ್ಯಾದೆ ಭೀಮ ತೃತಿಯಲ್ಲಿ ಪೂರ್ಣ ಪ್ರಜ್ಞನೆನಿಸಿದೆ ನಿಸ್ಸೀಮ 2 ಸಾಹ್ಯಕ್ಕೆ ಕಾರಣ ಮಹಾದೈತ್ಯರ ಮರ್ದನ ಶ್ರೀ ಹರಿ ಸಾನ್ನಿಧ್ಯ ಪೂರ್ಣ ಇಹ ಸಕಲ ನಿಪುಣ ಮುಖ್ಯಪ್ರಾಣ ಸ್ವಹಿತ ಸಾಧನ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಗುರು ಮೋಹನ ವಿಠಲ ಸಲಹಬೇಕಿವನಾಕರುಣಾ ಪಯೋನಿಧಿಯೆ ಮರುತಾಂತರಾತ್ಮ ಪ ನಿಗಮವೇದ್ಯನೆ ಹರಿಯೆ | ರಘುರಾಮ ದಾಸರೊಳುಮಿಗೆ ಸುಪ್ರೇರಕನಾಗಿ | ಮಗನ ಮದುವೆಯಲೀಅಘಹರವು ತವನಾಮ | ಸದ್ಗುರೂ ಕರುಣೆಯಲಿನಗುನಗುತ ಒದಗಿಸಿದೆ | ನಗಧರನೆ ದೇವಾ 1 ಮೋದ ಪಾದ ಕಾ ನಮಿಪೇ 2 ಹರಿಗುರೂ ಸದ್ಭಕ್ತಿ | ತರತಮದ ಸುಜ್ಞಾನಕರುಣಿಸೀ ಪೊರೆ ಇವನ | ಗುರುವಂತರಾತ್ಮ |ಪರಮ ಗುರು ಕಾರುಣ್ಯ | ದರುಶನವ ಪಡೆದಿಹನುಪರಿಪರಿಯ ಸೌಖ್ಯಗಳ | ಕರುಣಿಸೋ ಹರಿಯೇ 3 ಸೊಲ್ಲು ಲಾಲಿಸುತಾ 4 ದಾವಾಗ್ನಿಯನೆ ನುಂಗಿ | ಗೋವಳರ ಪಾಲಿಸಿದೆಪಾವಮಾನಿಯ ಪ್ರೀಯ | ನೀ ವೊಲಿದು ಇವಗೇಭಾವದಲಿ ತವರೂಪ | ತೋರೆಂದು ಭಿನ್ನವಿಸೆದೇವದೇವನೆ ಗುರು ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಗುರು ವಾದಿರಾಜರ ಸ್ಮರಣೆಯ ಮಾಡಿರೊ ಪ ಗುರು ವಾದಿರಾಜರ ಸ್ಮರಣೆಯ ಮಾಡಲು ದುರಿತ ಕಳೆದು ಮನಕೆ ಪರಮ ಹರುಷವೀವ ಅ.ಪ. ಪೂರ್ಣಭೋಧರ ಮತ ವಾರಿನಿಧಿಗೆ ಸಂ ಪೂರ್ಣ ಸುಧಾಕರ ಸುಗುಣ ಗಂಭೀರ ಕ್ಷೋಣಿ ಸುರೋತ್ತಮ ಕ್ಷೋಣಿಪಾಲಕ ಮಾನ್ಯ ಜ್ಞಾನಿವರೇಣ್ಯ ಹಯಾನನ ಪರಚರಣ 1 ಮಾನಸದೊಳಗಿಹ ಹೀನಮತಿಯ ಕಳೆ ದಾನಂದ ಕೊಡುವಂಥ ಜ್ಞಾನವ ಕರುಣಿಸಿ ಪ್ರಾಣನಾಥ ಶ್ರೀ ಕರಿಗಿರೀಶನ ಪದ ಧ್ಯಾನಿಪ ಸ್ಥಿರಮತಿ ತಾನಿತ್ತು ಪಾಲಿಪ 2
--------------
ವರಾವಾಣಿರಾಮರಾಯದಾಸರು
ಗುರು ಸ್ವರೂಪದರಹು ಗುರುತದೋರುವ ಕುರುಹು ಗುರುವ್ಹೆ ಇರುವ್ಹಾಂಗ ದೋರುದೆ ಪರಾತ್ಪರವು ಧ್ರುವ ಅರವಿನಾಗ್ರದಲಿಹ ಕುರುಹುದೋರುವ ಖೂನ ಗುರುತವಾಗುದೆ ಗುರುಕೃಪೆಯ ಜ್ಞಾನ ಮರವಿನ ಮೂಲವನು ಮರೆದು ಬಿಡುವಸ್ಥಾನ ಅರವೆ ಅರವಾಗಿದೋರುವ ನಿಜ ನಿಧಾನ 1 ಅರಹು ಮರವನೆ ದಾಟಿ ಮೀರಿ ದೋರುವ ಕುರುಹು ಅರಿತು ಕೊಂಬುದೆ ತತ್ವದರವ್ಹಿನರಹು ತಿರುಹು ಮುರುವ್ಹಿನ ಅರುಹದೋರಿ ಕೊಡುವುದೇ ಸ್ಥಿರವು ಬೆರೆದು ಕೊಡುವದೆ ಗುರುಙÁ್ಞÀ ನಾನಂದ ಕುರುಹು 2 ಕರೆದು ಕರುಣಿಸಿ ದಯವು ಬೀರಿದನುಭವ ಸುಖವು ಗುರುಭಾನುಕೋಟಿ ಪ್ರಕಾಶ ಎನಗೆ ಅರವೆ ಅರಿವ್ಹಾಗಿ ತೋರಿತು ಮನೋನ್ಮನವಾಗಿ ತರಳ ಮಹಿಪತಿಗೆ ಘನ ಬೆಳಗೆ ಬೆಳಕು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು