ಒಟ್ಟು 13912 ಕಡೆಗಳಲ್ಲಿ , 138 ದಾಸರು , 7210 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿನ್ನ ನಾನೇನೆಂದೆನೋ ರಾಮೇಶ್ವರನಿನ್ನ ನಾನೇನೆಂದೆನೋ ಸಕಲ ಲೋಕವನ್ನು ಪೊರೆವ ಪಾರ್ವತೀಶನೆಂದೆನಲ್ಲದೆ ಪ ತಾರಕಾಸುರನ ಪುತ್ರರ ಬಾಧೆಯನು ತಾಳಲಾರದೆ ಹರಿಮುಖ್ಯ ನಿರ್ಜರರುಶ್ರೀರುದ್ರ ಸಲಹೆಂದು ಪಾದಕೆ ಮಕುಟವ-ನೂರೆ ಪೊರೆದ ತ್ರಿಪುರಾರಿಯೆಂದೆನಲ್ಲದೆ ವಿಧಿ ಶಿರವ ಕೈ-ಯ್ಯಾರೆ ಕಡಿದನೆಂದೆನೆ ಭಕ್ತವತ್ಸಲವಾರಿಜಭವನುತಿಲೋಲನೆಂದೆನಲ್ಲದೆ 1 ನಾರದಸಹಿತ ಮತ್ಯಾರು ಕಾಣದಂದದಿಓರುಗಲ್ಲರಸಿನ ಮನೆಗೆ ಪೋಗಿತೋರುವ ಭಿತ್ತಿಯ ಕೊರೆದಾತನಿಷ್ಟವಪೂರಿಸಿದನುಪಮಮಹಿಮನೆಂದೆನಲ್ಲದೆಚೋರರ ಗುರುವೆಂದೆನೆ ಪಾರ್ಥಚಾಪದಿಂ-ದೇರುವಡೆದನೆಂದೆನೆ ಬತ್ತಲೆಮದವೇರಿ ಕುಣಿದನೆಂದೆನೆ ಅರ್ಜುನಗೊಲಿದಾರಾಜಿಸುವ ಮಹಾನಟನೆಂದೆನಲ್ಲದೆ2 ಸುರರು ದಾನವರೆಲ್ಲ ನೆರೆದು ವಾದಿಸಿ ಕ್ಷೀರಶರಧಿ ಮಥನವ ವಿರಚಿಸಲುಉರು ಹಾಲಾಹಲಮೊಗೆದುರುಹಲು ಸರ್ವರಪೊರೆದ ಶ್ರೀನೀಲಕಂಧರನೆಂದೆನಲ್ಲದೆಗರವ ಕುಡಿದನೆಂದೆನೆ ಪೆಣ್ಣಿತ್ತನಶಿರವನರಿದನೆಂದೆನೆ ಊರೂರೊಳುತಿರಿದುಗರುವನೆಂದೆನೆ ದುಷ್ಟ ಶಿಕ್ಷಕವರ ಕೆಳದಿಯ ರಾಮೇಶ್ವರನೆಂದೆನಲ್ಲದೆ3
--------------
ಕೆಳದಿ ವೆಂಕಣ್ಣ ಕವಿ
ನಿನ್ನ ನಾಮ ವಾಲ್ಮೀಕಿಯನುದ್ಧರಿಸಿದೆ ದೇವನಿನ್ನ ನಾಮ ಘಂಟಾಕರ್ಣನ ಸಲಹಿದೆ ದೇವನನ್ನನೀಗ ಉದ್ಧರಿಸು ರಂಗಧಾಮ ಪ ತಂದೆಯ ಮುಂದೆ ಮಗನನು ಬೈದು ಭಂಜಿಸಲುತಂದೆಯ ಮುಂದೆ ಪತ್ನಿಯ ಪಿಡಿದೆಳೆದು ಅಂಜಿಸಲುಕುಂದು ಗಂಡಗಲ್ಲದೆ ಹೆಂಡತಿಗುಂಟೆನಿಂದನೆ ಎಲೆ ದೇವ1 ದೊರೆ ನೋಡುತಿದ್ದಂತೆ ಬಂಟನನುಪರರು ಕೊಂಡೊಯ್ಯಲು ಕುಂದುಅರಸಗಲ್ಲದೆ ಆಳಿಗೇನುಅರಿಯಂತೆ ಬಂದೆನ್ನ ನಡವಳಿಯಲಿ ಸ್ವಾನದುರಿತಂಗಳೆಲ್ಲ ಕಾಡುತಿವೆ ಪರಿಹರಿಸು ಎಲೆ ದೇವ 2 ಊದುವ ಕಾಳೆಯದನರ್ಥಕವಾದಲ್ಲಿ ನುಡಿಸುವ ಬಿರುದು ಒಡೆಯಂಗಲ್ಲದೆಮಾಧವನೆ ಎನ್ನ ನಡವಳಿಯಲ್ಲಿ ಹುರುಳಿಲ್ಲಓದುವುದು ನಿನ್ನ ನಾಮಸ್ಮರಣೆಯೆ ಎಲೆ ದೇವಆದರಿಸು ನಿನ್ನ ಲೆಂಕನ ಪ್ರತಿ ಲೆಂಕನಭೇದವೇತಕೆ ನಿನ್ನ ದಾಸ ನಾನು ಬಾಡದಾದಿ ಪ್ರಸನ್ನ ಕೇಶವನೆ ಎನಗಾದ ದುರ್ಮತಿಯ ಪರಿಹರಿಸು ಎಲೆ ದೇವ 3
--------------
ಕನಕದಾಸ
ನಿನ್ನ ನಾಮವೆ ಘನವಆಗಿದೆ ನೆನೆವರಕಾವ ಕರುಣಿಯೆಂದು ಪ ಪಾದ ಯುಗವನಾ ಕಾಣಬಲ್ಲನೆ ಕೇಳಿ ಗರುಢಾ ರೂಢ ನಾಗಿ ಬಂದು ಗಜವ ಕಾಯ್ದವನೆಂದು 1 ಸಂಗದಿಂದಲಿ ಯಿರುತಿರಲು ಬಂದು ಯಮನ ದೂತರೆಳೆಯೆ ಭಯದಿ ತನ್ನ ನಂದನ ಕರೆದರೊಂದು ನಾಮವೆ ಕಾದುದೆಂದು 2 ದುರುಳ ಕಶ್ಯಪುಸುತನ ಭಾಧಿಸೆ ಮೊರೆಯಿಡಲದನುಕೇಳಿ ಭರದಿ ಕಂಬದಿ ಬಂದು ನರಹರಿಯಾಗಿ ನಿಂದು ಕರದೊಳವನ ಕೊಂದು ತರಳನ ಕಾಯ್ದೆಯೆಂದು 3 ಅಂಬುಧಿಶಯನ ನಿನ್ನ ರುಕ್ಮಾಂಗದ ಮೃತ್ಯವೆಂಬುದೆಲ್ಲವಗೆದ್ದು ಕುಂಭಿನಿಯೊಳು ಪೆಸರೊಡೆದರೆಂಬುದ ಕೇಳಿ 4 ಓಲಗದೊಳು ಶಾಲೆಯ ಸುಲಿಯೆ ದ್ರುಪದ ಭೀಮನಕೋಣೆ ಲಕ್ಷ್ಮೀ ಲೋಲ ಸೀರೆಯ ಸೆರಗ ಬೆಳೆಸಿದ ನಾಮವೆಂದು 5
--------------
ಕವಿ ಪರಮದೇವದಾಸರು
ನಿನ್ನ ನೀ ತಿಳಿದು ನೋಡೊ ಪ್ರಾಣಿ ಧ್ರುವ ನಿನ್ನ ನೀ ತಿಳಿಯೊ ನೀ ಭಿನ್ನಬೇದವಳಿದು ಚೆನ್ನಾಗ್ಯನುಭವದಲಿ ಉನ್ಮನವಾಗಿ 1 ನಾನಾರು ಎಂದು ನೀ ಖೂನ ತಿಳಿದು ನೋಡೊ ಘನ ಗುರು ಕೃಪೆಯಿಂದಲಿ ತನುವಿನೊಳು 2 ಎಲ್ಲಿಂದ ಬಂದ್ಯೊ ನೀ ಎಲ್ಲಿಗ್ಹೋಗುವಿ ಮುಂದೆ ಇಲ್ಲೆವೇ ತಿಳಿದು ನೋಡೊ ಸುಲಭದಿಂದ 3 ಬಂದೆ ನಾ ತಂದೆ ನಾ ಬಂದು ಘಳಿಸಿದೆ ನಾ ಹೊಂದಿಕಿ ಹೊಲಬು ನೋಡೊ ಸಂಧಿಸಿ ಘನ 4 ನಡೆದೆ ನಾ ನುಡಿದೆ ನಾ ಹಿಡಿದೆ ನಾ ಪಡೆದೆ ನಾ ಒಡನೆ ನಿನ್ನೊಳು ನೀ ನೋಡೊ ಪಿಡಿದು ನಿಜ 5 ತಾನೇನು ತನುವೇನು ತನ್ನೊಳಗಿಹುದೇನು ಮನಮುಟ್ಟಿ ಘನವ ನೋಡೊ ಚಿನ್ನುಮಯನ 6 ಏನುಂಟು ಏನಿಲ್ಲ ಅನಿಮಿಷದಲಿ ನೋಡೊ ಘನಕ ಘನವ ಬೆರೆದು ಸನ್ಮತವಾಗಿ 7 ಮರ ಹುಟ್ಟಿ ಮರಬಿದ್ದ ತೆರನಾಗದಿರೊ ನೀನು ಎರಗೊ ಶ್ರೀಗುರುಪಾದಕ ಕರಿಗಿ ಮನ 8 ಎಡಬಲ ನೋಡದೆ ಪಿಡಿದು ಸದ್ಗುರು ಪಾದ ಬೋಧ ನೋಡಿ ನಿನ್ನೊಳು9
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನಿನ್ನ ನೀ ತಿಳಿದು ನೋಡೋ ಕೇಳಲೋ ಪ್ರಾಣಿ ಪ ನಿನ್ನ ನೀ ತಿಳಿದು ನೋಡೋ ಪನ್ನಗಾದ್ರೀಶನ ಕೂಡೋ ಬನ್ನ ಭವಣೆ ಈಡ್ಯಾಡೋ ಕೇಳೆಲೋ ಪ್ರಾಣಿ 1 ನಾನಾರು ತನುವಾರು ತನುವಿ ನೊಡೆಯನಾರು ನಾನೀ ನೆಂಬುದರೊಳಾರು ಕೇಳೆಲೋ ಪ್ರಾಣಿ 2 ಹಿಂದಿನ ಪುಣ್ಯಗಳಿಂದ ಬಂದು ನರ ದೇಹದಿಂದ ಬಂದೇನಾ ಘಳಿಸಿನಿಂದೇ ಕೇಳೆಲೋ ಪ್ರಾಣಿ 3 ವಿದ್ಯಾ ವಿತ್ಪತ್ತಿ ತೋರಿ ಗದ್ಯ ಪದ್ಯಗಳ ಬೀರಿ ಬಿದ್ದಿ ಗರ್ವಾರಣ್ಯದಾರೀ ಕೇಳೆಲೋ ಪ್ರಾಣಿ 4 ತಂದೆ ಮಹಿಪತಿ ದಯದಿಂದ ಪಡೆಯೋ ವಿಜಯ ಕಾಯ ಕೇಳೆಲೋ ಪ್ರಾಣಿ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಿನ್ನ ನೋಡಿ ಧನ್ಯನಾದೆನೊ ಹರಿ ಶ್ರೀನಿವಾಸ ಪ ನಿನ್ನ ನೋಡಿ ಧನ್ಯನಾದೆಎನ್ನ ಮನಸು ನಯನ ಸುಪ್ರಸನ್ನವಾಯಿತು ದಯವ ಮಾಡಿಮುನ್ನ ಸಲಹಬೇಕು ಸ್ವಾಮಿ ಅ ಸುಜನ ಪಕ್ಷಾ 1 ವಾಸುದೇವ 2 ಕಂತು ಜನಕ ಎನ್ನ ಮೊರೆಯನಾಂತು ವಿಹಿತದಿಂದ ಸೇವೆಅಂತರವಿಲ್ಲದೆ ದಯಪಾಲಿಸೊಶಾಂತ ಮೂರ್ತಿಯಾದಿ ಕೇಶವ ಮುದ್ದು ವಿಠಲ 3
--------------
ಕನಕದಾಸ
ನಿನ್ನ ನೋಡಿ ಧನ್ಯನಾದೆನೋ | ಶ್ರೀವೇದ ವ್ಯಾಸನಿನ್ನ ನೋಡಿ ಧನ್ಯನಾದೆನೋ ಪ ನಿನ್ನ ನೋಡಿ ಧನ್ಯನಾದೆ | ಯಜ್ಞಕುಂಡ ದೇಶದಲ್ಲಿಘನ್ನ ಮಹಿಮ ಪೂರ್ಣ ಸಂ | ಪನ್ನ ಮೂರುತಿ ಬಾದರಾಯಣ ಅ.ಪ. ಪಾದ ಭಜಿಸಿ ಅರ್ಚಿಸಿರುವ 1 ನವಸುಮೂರ್ತಿಗಳಲಿ ನಿನ್ನ | ನವ ಸುಭಕ್ತಿಗಳನು ಬೇಡೆನವ ಸುಮಹಿಮೆ ತೋರೆ ಕರಗ |ಳವಲಂಬನದಿ ದಯವ ತೋರ್ದ 2 ಅಷ್ಟು ಮೂರ್ತಿಗಳಲಿ ತಮ್ಮ | ಇಷ್ಟ ಮೂರ್ತಿಯನ್ನೆ ಇರಿಸಿಅಷ್ಟದಿಗಿಭದಂತೆ ಮೆರೆದ | ಅಷ್ಟ ಶಿಷ್ಟರಿಗಿತ್ತ ಮುನಿಯು 3 ನಿರ್ಜರ ಅಂಘೇರಿ ಮಣೂರ 4 ವಿನುತ | ವಕ್ರ ಮನದ ಜನಕೆ ಅಮಿತ್ರ 5 ಯೋಗ ಪಟ್ಟಕ ವಸನ ಚೆಲ್ವ | ಯೋಗದಾಸನ ಕೂರ್ಮದುಪರಿನಾಗನಂತೆ ಪೋಲ್ವ ಜಟಾ | ಸೋಗಿನಿಂದ ಮೆರೆವ ದೇವ 6 ಮೂರ್ತಿ ಭೋಕ್ತ ತ್ರಯ ಸುಮೂರ್ತಿಯಜ್ಞ ಗುರು ಗೋವಿಂದ ವಿಠಲ | ಭಗ್ನ ಗೈಸೊ ಮಾಯ ಪಟಲ 7
--------------
ಗುರುಗೋವಿಂದವಿಠಲರು
ನಿನ್ನ ಪಾದವ ನಂಬಿ ಅನ್ಯರಾಶ್ರಯವ್ಯಾಕೆಚನ್ನ ಗುರು ವಿಜಯರಾಯ ಪ ಇನ್ನೇನು ಯಿನ್ನೇನು ಯೆನ್ನ ಕುಲಕೋಟಿ ಪಾ-ವನ್ನವಾದುದು ನಿಶ್ಚಯಾ ಜೀಯ ಅ.ಪ. ಪಂಚ ಮಹ ಪಾತಕರೊಳಗೆ ಮೂರನೆ ಕಕ್ಷಿಕಾಂಚನ ದ್ರೋಹಿ ನಾನು ಯೆನ-ಮುಂಚೆ ಬಂದಾಗ ಕೈ ಬಿಡದೆ ಪ್ರಾ-ಪಂಚವನೆ ಬಿಡುಯೆಂದು ನುಡಿದೆ ಯೆನ್ನಸಂಚಿತಾಗಮವೆಲ್ಲ ತೊಡದೆ ಯೆನ್ನ ||ಕಂಚು ಕಟ್ಬುಳಿ ಕಲ್ಲೊತ್ತಿನ ಮೇಣ್ ಕಾಶಿಗೆ ||ಪಂಛೇರು ಮಾಡಿ ನಡದೆ ಬಿಡದೆ 1 ವ್ಯಾಸರಾಯರ ಗುಹೆಯೊಳಗೆ ನವ ಸಂ-ನ್ಯಾಸಿಗಳ ಸಮಕ್ಷಮದಲಿ ಯೆನ್ನದಾಸನಾಗೆನುತ ನೀ ಪೇಳ್ದೆ ಯೆನ್ನವಾಸಿ ಪಂಥಗಳೆಲ್ಲ ತಾಳ್ದೆವೊಲಿದುದೋಷಾಂಕುರಗಳೆಲ್ಲ ಸೀಳ್ದೆ ಸ್ವಾಮಿ ||ಶ್ರೀಶ ಸರ್ವೋತ್ತಮನೆಂದು ನೀ ಪೇಳಿ ಸಂ-ತೋಷದಿಂದೆನ್ನ ಪೊರದೆ ಬಿಡದೆ 2 ನಿತ್ಯ ಮೆರೆವೆ ಯೆನ್ನ ||ಪೂಜಾ ಫಲವೆಂದು ಆವಾಗೆ ನಿನ್ನ ಪದರಾಜೀವ ಧ್ಯಾನಿಸುವೆ ಸ್ವಾಮಿ 3 ಪುಶಿಯು ಜಗವೆಲ್ಲ ದೈವವು ತಾನೆನುತಅಸಮ ವೇದ ಪೌರುಷ ಯೆಂಬಂಥಭಸುಮಧಾರಿಯನೆ ಕರದೆ ಅವನಅಸುರ ಭಾವವನೆಲ್ಲ ಮುರಿದೆ ನಮ್ಮಬಿಸಜಾಕ್ಷ ಪರನೆಂದು ಪೊರೆದೆ ಸ್ವಾಮಿ ||ಎಸೆವ ದ್ವಾದಶನಾಮ ಪಂಚಮುದ್ರಿಯನಿಡಿಸಿನಸುನಗುತಲವನ ಪೊರದೆ ಬಿಡದೆ 4 ವಾಕು |ಅನ್ಯಥಾ ಮಾಡುವುದು ಸಲ್ಲ ಮೋ-ಹನ್ನ ವಿಠ್ಠಲ ಯಿದನು ಬಲ್ಲ ಮುನ್ನಾಪನ್ನಗಶಯನ ಪ್ರಸನ್ನನಾದದಕೆ ಯಿದುಎನ್ನ ಮನೋರಥ ಸಿದ್ಧಿಯೊ ಸ್ವಾಮಿ 5
--------------
ಮೋಹನದಾಸರು
ನಿನ್ನ ಪೂಜೆಯೊ-ರಾಮ ಪ ನಿನ್ನ ಪೂಜೆ ಹೊರತಿಲ್ಲಎನ್ನ ವ್ಯಾಪಾರವೆಲ್ಲ ಸ್ನಾನ ಸಂಧ್ಯಾವಂದನ ಹೋಮ ಮೌನ ಜಪ ಸದ್ಗ್ರಂಥ ವ್ಯಾ-ಖ್ಯಾನ ಯಜ್ಞಸಾಧನ ಸಂಪಾದನ ಅಧ್ಯಯನನಾನಾ ರಸ ನೈವೇದ್ಯ ಭೋಜನ ತಾಂಬೂಲಚರ್ವಣಮಾನಿನಿ ಮೊದಲಾದ ಸ್ಯಂದನ ಗಾನದ ಭೋಗಗಳೆಲ್ಲ1 ಸರ್ವೇಂದ್ರಿಯಗಳಲಿಹ ಶರ್ವಾದಿ ದೇವರ್ಕಳಿಗೆಸರ್ವಚೇಷ್ಟಾಪ್ರದನಾದ ಪ್ರಾಣಗೆ ನಿರ್ವಾಹಕನಾಗಿಸರ್ವ ಜೀವರ ಕೈಯಿಂದ ಸರ್ವಜ್ಞಾನ ಕರ್ಮಗಳನುಸರ್ವದಾ ಮಾಡಿಸಿ ಅವರ ಸರ್ವಶುಭಭೋಕ್ತನಹೆ 2 ಸುರರು ಕಂಗಳಲ್ಲಿ ಭಾಗ್ಯಲಕ್ಷ್ಮಿಉಂಗುಷ್ಠದಿ ಲೋಕಪಾವನೆ ಗಂಗಾದೇವಿಯುಹಿಂಗದೆ ನಿನ್ನಲ್ಲಿರಲು ತುಂಗಗುಣ ಪರಿಪೂರ್ಣರಂಗವಿಠಲ ನೆಲೆಯಾಗಿ ಮಂಗಳಾಂಗನೆ ಮನ್ನಿಸುವೆಯೊ3
--------------
ಶ್ರೀಪಾದರಾಜರು
ನಿನ್ನ ಪೋಲುವ ಕರುಣಿಗಳನಾರ ಕಾಣೆ ಪ್ರ ಪನ್ನ ತಾ ಪಾಪಹರನೇ ಪ ಎನ್ನಪರಾಧಗಳ ಎಣಿಸದಿರು ಅಜಭವಶ ರಣ್ಯ ಪರಿಪೂರ್ಣೇಂದಿರಾಗಾರ ಅ ಶುದ್ಧಾಖ್ಯ ದ್ವಿಜನು ದಾರಿದ್ರ್ಯದಲಿ ನೆರೆ ನೊಂದು ಸದ್ಧರ್ಮ ತೊರೆದು ಮರೆದು ಶ್ರಾದ್ಧಾದಿ ದುಷ್ಟನ್ನ ಮೆದ್ದು ನಿಂದಿತನಾಗಿ ಬಿದ್ದಿರಲು ಸತಿಯು ಮತಿಯು ತಿದ್ದಿ ಪೇಳಲು ಕೇಳಿ ಶುದ್ಧ ಭಾವದಿ ತವ ಪ ದದ್ವಯಕ್ಕೆರಗಿ ಮರುಗಿ ಪದ್ಮೇಶ ಸಲಹೆನಲು ಸಿದ್ಧಿಸಿ ಮನೋರಥವ ಉದ್ಧಾರವನು ಮಾಡ್ದೆ ನೋಡ್ದೆ 1 ವಿಧಿಯ ಸಂಸ್ತುತಿ ಕೇಳಿ ಮಧ್ವಜಾಕಾರಿ ಮದಡತಮನುದರ ಬಗೆದೇ ಉದಧಿ ಮಥನದಲುದಿಸಿದಮೃತ ದೇವತೆಗಳಿಗೆ ಮುದದಿಂದಲೆರೆದೆ ಪೊರೆದೆ ಹೇಮ ಲೋಚನನ ನೀ ದೌಂಷ್ಟ್ರ ತುದಿಯಿಂದ ಕೊಂದೆÀ ತಂದೆ ಬೆದರದಲೆ ಕರೆದರ್ಭಕನ ನುಡಿಗೆ ಅವನಯ್ಯ ನುದರ ರಕ್ತವನು ಸುರಿದೇ ಮೆರೆದೇ 2 ವೈರೋಚನಿಯ ಭೂಮಿ ದಾನವನು ಬೇಡಿ ಭಾ ಗೀರಥಿಯ ಪಡದಿ ಪದದಿ ಧಾರಿಣಿಯ ದಿವಿಜರಿಗೆ ದಾನವಿತ್ತವನಿಪರ ಗಾರು ಮಾಡಿದೆ ಸವರಿದೇ ನೀರಧಿಯ ಬಂಧಿಸಿ ದಶಾಸ್ಯನ ಬಲವನು ಸಂ ಹಾರ ಮಾಡಿದೆ ರಣದೊಳು ಕಾರಗೃಹದೊಳಗಿಪ್ಪ ಜನನಿ ಜನಕರ ಬಿಡಿಸಿ ತೋರಿಸಿದೆ ವಿಶ್ವರೂಪಾ ಶ್ರೀಪಾ 3 ಆದಿತೇಯರು ಮಾಳ್ಪ ಸಾಧುಕರ್ಮಗಳ ಶುದ್ಧೋದನಾಚರಿಸೆ ತಿಳಿದು ವೇದ ಶಾಸ್ತ್ರಾರ್ಥ ಪುಸಿಯೆಂದರುಪಿ ಜಿನನತಿ ಭೇದಗೈಸಿದೆ ಸಹಿಸಿದೇ ಭೇದಗೊಳಿಸುವ ಕಲಿಯ ಕೊಂದು ಶೀ ಘ್ರದಿ ತಮಸಿಗೈಸಿದೆ ಕಲ್ಕಿ ಭಳಿರೇ ನಿಖಿಳ ಲೋಕವನೆಲ್ಲ ಧರಿಸಿ ಪ್ರಳ ಯೋದಕದಿ ಮಲಗಿ ಮೆರೆದೇ ಪೊರೆದೇ 4 ಹಂಸರೂಪದಲಿ ಕಮಲಾಸನಗೆ ತತ್ವೋಪ ದೇಶಮಾಡಿದೆ ಕರುಣದೀ ವ್ಯಾಸಾವತಾರದಲಿ ದೇವ ಋಷಿ ಪಿತೃಗಳಭಿ ಲಾಷೆ ಪೂರೈಪ ನೆವದೀ ಭಾಷ್ಯತ್ರಯಗಳಿಂದ ಭಗವದ್ಗುಣಂಗಳ ಪ್ರ ಭಾಷ್ಯತ್ರಯಗಳಿಂದ ಭಗವದ್ಗುಣಂಗಳ ಪ್ರ ಕಾಶÀ ಮಾಡಿದೆ ಮೋದದಿ ವಾಸವಾನುಜ ಜಗನ್ನಾಥವಿಠಲ ನಿನ್ನವರ ಸಲ ಹೋ ಸಮರ್ಥಾ ಕರ್ತಾ 5
--------------
ಜಗನ್ನಾಥದಾಸರು
ನಿನ್ನ ಪ್ರೇಮದ ಭೋಗ ಇನ್ನಿಲ್ಲದ ಮನುಜ ಘನ್ನ ಭೂ ಭಾರನವ ಭವನಮಿತ್ರ ಪ ಬನ್ನಬಟ್ಟೆನೊ ಬಹಳ ಬಲುಹೀನ ವೃತ್ತಿಯಲಿ ಮಾನ್ಯರಲಿ ತಲೆಯೆತ್ತಿ ಇರುವಂತೆ ಎಂದಿಡುವಿ ಅ.ಪ. ಏನು ಕೊಟ್ಟರು ಕೊಡು ದಾನವಂತಕ ಎನ್ನ ಜ್ಞಾನದಲಿ ನೀನಿತ್ಯ ನೆಲಸಿ ನಲಿಯೊ ಧೇನುವತ್ಸದ ತೆರದಿ ನೀನೆನಗೆ ಹಿತತೋರು ನಾನೊಲ್ಲೆ ಸುರಲೋಕ ನಿನ್ನೊಲಿಮೆ ಇಲ್ಲದಿರೆ 1 ಮರುವೆಂಬ ಮಾರಿಯನು ಪರಿಹರಿಸು ಪರಿಪೂರ್ಣ ಸುರಿ ನಿನ್ನ ಕರುಣರಸ ಪ್ರಾಣನಾಥ ಸರ್ವೇಶ ನೀನೆಂದು ಪರತಂತ್ರ ನಾ ಸತತ ಶರಣನ್ನ ದಣಿಸುವದು ಘನವೇನೊ ಹರಿಯೆ 2 ಕೋಟಿಕಾಲ ನರಕವಾಸಿಯಾದರು ಎನಗೆ ನೀಟುಗತಿ ದೊರೆವುದೇ ನೀನೊಲಿಯದಿರಲು ಸಾಟಿಯಿಲ್ಲದ ದೈವ ಜಯೇಶವಿಠಲ ನಾಟಿ ಹಿರಿಯರ ಕರುಣ ನೀನಾಗಿ ಕೃಪೆಮಾಡು 3
--------------
ಜಯೇಶವಿಠಲ
ನಿನ್ನ ಬಗೆ ಬಗೆ ರೂಪಗಳ ಉರಗ ಶಯ್ಯ ರಂಗಯ್ಯಾ ಪ ದಿತಿಸುತ ಸೋಮಕ ಶ್ರುತಿತತಿ ಕದ್ದೊಯ್ಯೆ ಶತಧೃತಿ ತಲೆವಾಗಿ ಚತುರತೆÉಯಿಂದಲಿ ಮತಿಪತಿ ಮತ್ಪಿತಾ ಪ್ರತಿಪತಿ ಕಲ್ಪಕ್ಕೆ ಗತಿಸ್ಥಿತಿ ನೀನೆಂದು ಅತಿ ತುತಿಸಲು ಸಂ ತತ ಹಿತ ಹಿರಿದಾಗಿ ಪ್ರತಿಯಿಲ್ಲವೆನಿಸಿದ್ದು ರಿತ ಪುಂಜದಾನವನ ತರಿದೊಟ್ಟಿ ಮತ್ಸ್ಯಾಕೃತಿಯಾ ಜಯ ಜಯವೆನುತಿರೆ ತ್ರಿಭುವನಾ 1 ಕೃತು ಭುಕು ದೇವಾರಿತತಿ ಸಂಗತಿಯಿಂದ ಮತಿ ಏಕರಾಗಿ ಸಂಮತದಿಂದ ನಡೆದು ಪ ರ್ವತವ ಕಿತ್ತಿ ತಂದು ಉ ನ್ನತವಾದ ಕ್ಷೀರೋದ ಪತಿಯೊಳಗಿಟ್ಟು ಅತಿಬಲದಿಂದ ನಗುತ ಮಥಿಸಲು ಮಹಾ ಕ್ಷಿತಿಧರ ಮುಣಗಿ ಪೋಗೆ ಹಾಹೋ ಎಂದು ಗತಿಗೆಟ್ಟ ಯೆಲ್ಲ ಕೂಗೆ ಕೇಳುತ ಬಂದು ಅತುಳ ಕಮಠನಾಗಿ ಪೊತ್ತೆ ಭಳಿರೆ ಮಿಗೆ2 ಗತಮಂದ ಮಾರೀಚ ಸುತ ಹೇಮನೇತುರಾ ಕ್ಷಿತಿಯ ಕದ್ದೌಯಿದು ದುರ್ಮತಿಯಿಂದ ವಿಬುಧÀರ ಖತಿಗೊಳಾಗೈಸಿ ಹಿಗ್ಗುತಲವ ತಿರುಗುತ್ತ ಪ್ರತಿಕೂಲನಾಗಿ ಸುವ್ರತಗಳ ಕೆಡಿಸುತ್ತ ಮಿತಿ ಮೀರಿ ಪಾತಾಳ ವಾಸವಾಗಿರಲು ಅದ್ಭುತ ಕಿಟಿ ರೂಪವಾಗಿ ರುತಲಿರೆ ಸತತಮರರು ಪಾಡೆ ಏನೆಂಬೆ ಶಿರವಾಗಿ 3 ಚತುರ ಮೊಗನವರನುತಿಸಿ ಪಡೆದು ಪ್ರಾಗ ರ್ವಿತನಾಗಿ ನೀಲಲೋಹಿತನ ಭಕುತಿಯಿಂದ ತತುವೇಶಜನರ ಶಕುತಿ ಕುಂದಿಸಿ ತಾನೆ ರತುನ ಗರ್ಭದೊಳು ದೇವತಿಯೆಂದು ಸಾರಿ ಬಾ ಳುತ್ತ ತನ್ನಾತ್ಮಜ ಭಾಗವತನ ಭಾಧಿಸಿ ಶಿರಿ ಗತಿಯೆಂದು ವಂದಿಸಲೆ ಕಂಭದಿ ಬಂದು ಸುರರು ಪೂಮಳೆ ಚೆಲ್ಲೆ 4 ಸುತಳ ಲೋಕಕ್ಕೀಶ್ವರ ಶತಕೃತ ಕವಿಯ ರಚಿಸಿ ಸಿತನಾಗಿ ರಥ ನನ್ನ ಚ್ಯುತ ಪದಸ್ಥನ ಮಾಡಿ ಸತುವ ಮಾರ್ಗದಲಿ ಪೂರಿತ ಭಾಗ್ಯತನದಲ್ಲಿ ಕೃತಕಾರ್ಯನಾಗಿರೆ ರಿತಮದದಲಿ ತಾ ನುತಿಸಲಾದಿತಿಯ ಗರ್ಭದಲ್ಲಿ ಜ ವಿತರಣೆ ನೆವದಿ ನಿಂದು ಭೂಮಿಯ ಕೊಂಡಜ ತತಿ ವಿಕ್ರಮತೀರಿತವಾದ ದಯಾಸಿಂಧು 5 ಸೂನು ಪೂಜಿತನಾಗಿ ಮುನಿಯಿಂದ ಪಿತನಗೋಸುಗ ಉಗ ಳುತ ರೋಷ ಕಿಡಿಗಳಾದ ಈರೈದು ಬಾಹೋ ದ್ವಿತೀಯ ಜಾತಿಯವನ ಹುತವ ಮಾಡಿದ ಗಂಭೀರಾ ನಿ ರುತ ಸತ್ಯವತಿ ನಂದನಕುವರ ಪರುಶ ಪಾಣಿ ಮೃತ ಜೀವಿಗಳ ಬದುಕಿಸಿದ ಮಹಾಧೀರಾ 6 ಚತುರಾತ್ಮ ಹರಿದೈವ ವೈವಸ್ವತ ಮನುಕುಲೋಧ್ಭವನಾ ಅನುಜ ಸಹಿತ ಪೋಗಿ ಮುನಿಯ ವಾ ರುತಿಯ ಮನ್ನಿಸಿ ಶಿಲಿ ಸತಿಯಳ ಮಾಡಿ ಭೂ ಪುರವಸಾರಿ ಪಿತನಾಜ್ಞ ತಿಳಿದು ಮಾ ರುತಿಯಿಂದ ಕಪಿಯ ವಿಗತಸಂತಾಪನ ಮಾಡಿ ಸೇತುವೆ ಕಟ್ಟಿ ಪತಿತರ ಶಿರ ಚೆಂಡಾಡಿ ಲಂಕಾನಗರ ಹಿತದಿಂದ ಭಕ್ತಗೆ ಪಟ್ಟಗಟ್ಟಿದÀ ನೋಡಿ 7 ಶತ್ರಪತ್ರಾರುಣ ದಳಾಯುತ ನಯನಾದೇವ| ತತಿ ವಂದ್ಯ ಗೋಕುಲ ಸ್ಥಿತಿ ಉದ್ಧಾರಕ | ಭಂಗ ಬಲಾ | ಚರಿತಪೂರ್ಣ ಕಂಸಾರಿ ಯುತ ಷೋಡಶಾಖ್ಯ ಯುವತಿಯರ ತಂದ ಅ| ಪ್ರತಿಮಲ್ಲ | ರತಿಪತಿ ಪಿತ ಫಲ್ಗುಣಗೆ ಭಾ | ಸಾರಥಿ ಎನಿಸಿ ಕಾಳಗದೊಳು | ಧೃತರಾಷ್ಟ್ರಜರ ಕೊಲ್ಲಿಸೆ ಸಭಯಲ್ಲಿ ಪರೀ | ಕ್ಷಿತಿನ ಉಳಿಹಿ ಕೀರುತಿ ಪೊತ್ತ ಗುಣರಾಶಿ 8 ವ್ರತದಿಂದ ಖಳರು ಧರಿತ ಸತ್ಕರ್ಮವ ಮಾಡೆ | ಗತಿಗೆಟ್ಟು ಸುರರ ಉಕುತಿಯಿಂದ ಕೈಮುಗಿದು | ಅಪ್ರಾಕೃತ ಕಾಯ ಶಿಶುವಾಗಿ || ಶ್ರುತಿ ಸರ್ವದಲಿ ಅನೃತವೆಂದು ತಿಳುಪಿ ಉ | ಚಿತ ಮಾರ್ಗದ ಬಿಡಿಸಿ ನಿ | ರ್ಜೀತ ಕಾರು ಪಾರ್ವತಿ ಪತಿಗೆ ಮಾರ್ಗಣವೆನಿಸಿ ತ್ರಿಪುರಾರಿಗೆ ಹುತಗೈಸಿ ಶಿವನ ಗೆಲಿಸಿ ವಿವಶಳನೆ ಪತಿವ್ರತೆಯರ ಲಜ್ಜೆಗೊಳಿಸಿದೆ ವಂಚಿಸೀ 9 ವಿಹಿತ ಧರ್ಮ ಮರೆದು | ಮಮತೆ ಜಾತಿ ಸಂಕರ | ವ್ರತದಲ್ಲಿ ನಾನಾ ದುಷ್ಕøತ ತುಂಬಿರಲು ದೇವತೆಗಳು ಮರುಗಿ ಅ | ರತರಾಗಿ ತುತಿಸಿ ತ್ವರಿತ ಸ್ವಭಾವದಲ್ಲಿ ನಿ | ಸಿತ ಖಡ್ಗಧರಿಸಿ ರಾ ಶೌರಿ | ಸುಕೃತ ನೆನೆವವರಿಗೆ ಭವಸಾಗರ ತಾರಿ10 ಶ್ರುತಿ ಶೀರ್ಷ ಶ್ರುತಿ ಉಪ | ಕೃತಿನಯ ಪಂಚಮ ಶ್ರುತಿ ಪಂಚರಾತ್ರಾ ಸಂ | ವತ ಮೂಲ ರಹಸ್ಯ | ತತುವಾದಿನಾಮನು | ಶ್ರುತಿಕಲ್ಪ ಕಥೆ ಸರ್ವ ಪ್ರತಿಪ್ರತಿ ವರ್ಣ ಸಂತತಿಯಲ್ಲಿ ನೀನೆ ವ್ಯಾ | ಪುತಮೂರ್ತಿ ಸಪ್ತ ಸಪುತ ಭುವನೇಶನೆಂದು ಅಚೌಧ್ಯರೊ ಪ್ಪುತ ಕೊಂಡಾಡುವರು ನಿಂದು | ಭಕುತಪೂ ಜಿತ ಕಾಯಾ ವಿಜಯವಿಠ್ಠಲನೆ ಪಾಲಿಸೊ ಇಂದು11
--------------
ವಿಜಯದಾಸ
ನಿನ್ನ ಬಿಟ್ಟಿರಲಾರೆ ನೀರಜಾಕ ್ಷ ಪ ಘನ್ನ ಮಹಿಮನೆ ನಿನ್ನ ಸನ್ನಿಧಾನವನೀಯೊ ಅ.ಪ. ಸರ್ವಧರ್ಮಗಳಿಗೆ ನೀನಿಲ್ಲದಿನ್ನಿಲ್ಲ ಉರ್ವಿಕರಿಗೆ ನೀನೆ ಉರ್ವೀಶನೆ ನಿರ್ವಿಕಾರ ಮಹಾತ್ಮ ನಿಖಿಲಾಂತರಾತ್ಮಕನೆ ಪಾದ ಸೇವೆಯೆನಗೀಯೊ 1 ತಡವ್ಯಾಕೆ ಬರಲಿನ್ನು ಪೊಡವೀಶ ಯನ್ನೊಡನೆ ತಡೆಯಲಾರೆನು ನಿನ್ನ ವಿರಹವನ್ನು ನುಡಿಯಬೇಡವೋ ಎನ್ನ ನೀ ಪೋಗು ಎಂದೆನುತ ಕಡು ದಯಾನಿಧಿ ನಿನ್ನ ನಾ ಬಿಡೆನೊ 2 ಆನಂದ ಪರಿಪೂರ್ಣ ಶ್ರೀನಾಥ ನಿನಗೇಕೆ ಕಾನನಾ ವಾಸವು ಕಮಲನಯನ ಜ್ಞಾನದಾಯಕ ನಿನ್ನ ಚರಣ ಶರಣನೊ ನಾನು ದೀನರಕ್ಷಕ ಸ್ವಾಮಿ ಶ್ರೀ ಕರಿಗಿರೀಶ 3
--------------
ವರಾವಾಣಿರಾಮರಾಯದಾಸರು
ನಿನ್ನ ಬೆನ್ನು ಬಿದ್ದೆ ಪನ್ನಂಗಶಯನ ಎನ್ನನ್ನು ನೀನೀಗ ಮನ್ನಿಸಿ ಸಲಹೆಂದು ಪ ಎನ್ನನೆಲ್ಲಿಗೆ ಒಯ್ವಿ ನಿನಗೆ ಕೂಡಿತು ನಿನ್ನ ಬಿಟ್ಟರೆ ಎನಗೆ ಅನ್ಯ ಗತಿಯಲ್ಲ 1 ವನಜಾಕ್ಷ ನಿಮಪಾದ ನೆನೆವು ನಿಲ್ಲಿಸಿ ಎನ್ನ ಮನದಾಸೆ ಪೂರೈಸಿ ಕನಿಕರದಿ ಕಾಯೆಂದು 2 ಶಾಮಸುಂದರ ಶ್ರೀರಾಮ ನಿಮ್ಮಯ ಪಾದ ಪ್ರೇಮ ಎನ್ನೊಳರಿಸಿ ಕ್ಷೇಮದಿಂ ಪೊರೆಯೆಂದು 3
--------------
ರಾಮದಾಸರು
ನಿನ್ನ ಮಗನೇನೇ ನಂದಗೋಪರಾಣಿ |ಇನ್ನು ಇಂಥ ಚಪಲ ಚಿಕ್ಕವನ ಕಾಣೆ ಪ ಗೊಲ್ಲರಿಗೆ ತಕ್ಕ ತನಯನಿವನಲ್ಲ |ಎಲ್ಲೆಲ್ಲಿಲ್ಲದಂಥ ನಡೆನುಡಿಯ ಬಲ್ಲ 1 ಭಂಗ ಮಳೆ ನಮ್ಮ |ನಾವಿಲ್ಲಿಹುದಿನ್ನು ನಿತ್ಯಲ್ಲ ಕಾಣಮ್ಮ 2 ಕಣ್ಣಲೆ ಎಲ್ಲರ ಮನವ ಕದ್ದು ಕದಡುವನು |ಕಣ್ಣಲಿಳ್ಳೀ ಕಟ್ಟಿಸಿ ಮೊಗವನು ಗಿರುವವನು 3 ದರ ದೂರಾಗಿಹನು 4 ನಕ್ಕು ಮುದ್ದಿಸಿ ನಮ್ಮ ಸೊಕ್ಕು ತಗ್ಗಿಸುವನು |ರುಕ್ಮದಂತೆ ನಾನಾಕಾರ ಧರಿಸುವವನು 5
--------------
ರುಕ್ಮಾಂಗದರು