ಒಟ್ಟು 24701 ಕಡೆಗಳಲ್ಲಿ , 138 ದಾಸರು , 9090 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಾತ್ವಿಕ ಕೃತಿಗಳು ಅಂಥಾ ಕರುಣನೇ ನಮ್ಮ ರಂಗ ಅನಂತ ಶರಣನೇ ಪ ಎಂಥ ಕರುಣ ನಮ್ಮ ರಂಗ ಅಂತರಾತ್ಮ ಪಾಂಡುರಂಗ ಚಿಂತೆಗಳನು ದಹಿಪ ರಂಗ ಅಂತರಾ ಅಭ್ಯಂತರಂಗ ಅ.ಪ ಮೂಡಲಾದ್ರಿಯ ವೆಂಕಟೇಶ ಆಡಬಂದನೇ ನಾಡಿನೊಳಗೆ ಮೂಡಿ ನಿಂದನೇ ಗಾಡಿಕಾರ ರಂಗಧಾಮ ಕೇಡುಗಳನು ಬಡಿವನಾಮ ವಾಡಿಗೆಗಳಂತಿರುವ ಭಕ್ತ ಕೋಟಿಗೇ ವರವೀವ ಪ್ರೇಮ1 ಹರನ ರೂಪವತಾಳಿ ನಿಂದ ಹರಿಮಾಧವ ಒರಳಿನೊಳು ಮೆರೆಯುತಿರುವವ ಹರಿಯುಹರನು ಬೇರೆಯಲ್ಲ | ನರರನೋಡಿ ನೋಡಿ ಸೊಲ್ಲ ಬರಿದೆಭ್ರಾಂತಿ ಲೇಸದಲ್ಲ ಅರುಹುವನೆಂಬುವ ಗೊಲ್ಲ 2 ಯುಕ್ತಿಯವರನ್ಯರಿಲ್ಲ ವಿ ರಕ್ತನಾಗಿ ಗುಣವದಿಲ್ಲ ಭಕ್ತಗೊಲಿವ ಹರಿಯುಬಲ್ಲ ಯುಕ್ತಿ ಇದಕೆ ಬೇರೆ ಇಲ್ಲ 3 ತನಯನೋರ್ವನನೆ ಪಡೆಯಲೆಳಸಿವನಜನಾಭನ ಕರುಣದಿಂದ ತನಯನುದಯಿಸಲು ಧನಿಕ ಕೈಂಕರ್ಯವನು ಗೈದು ಧನವ ಗಣನೆಗೈಯಲದು ಮನದಿ ಮರುಗಿ ಕೆಳಕ್ಕೈತಂದ| ವನಿತೆಯಿತ್ತ ಪೊಂಗಲ ಸವಿದ4 ಕಾಮಜನಕನೇ ನಮ್ಮರಂಗ | ಕೋಮಲಾಂಗನೇ ಕರುಣಾಪಾಂಗ ಭೀಮವಿಕ್ರಮನೇ ಭೂಮಿಜಾತೆಯ ರಸಭರಿತ ರಾಮದಾಸವಿನುತಲೀಲ ವಾಸುದೇವನ ಹೋಲುವರಂಗ5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ತಾತ್ವಿಕ ಕೃತಿಗಳು ನಾನಾವಿಧ ನರರಿವರಿಗೆ ಸರಿಯೆ ಪ ವಿಧಿನಿನ್ನ ಸ್ಮರಣೇವಿನಾನಿಷೇಧ ವಿಸ್ಮøತಿಯೆಂಬ ವಿಧಿಯನೊಂದನೆಬಲ್ಲರಲ್ಲದೆ ಮತ್ತೊಂದು ಅ.ಪ ನುಡಿವುದೆಲ್ಲ ಗಾಯಿತ್ರಿಮಂತ್ರಗಳು ಕೊಂಡುದೆಲ್ಲವು ವಿಷಯೇಂದ್ರಿಯಜ್ಞ ಹೋಮ ದೃಢ ಪ್ರಾಜ್ಞರೇನ ಮಾಡಿದರದೆ ಮರಿಯಾದೆ 1 ಕಂಡಕಂಡದ್ದೆಲ್ಲ ನಿನ್ನ ಮೂರ್ತಿಗಳು ಭೂ ಮಂಡಲಶಯನವೇ ನಮಸ್ಕಾರ ಮಂಡಿಯಾಗಿ ಬಿದ್ದುದೆ ಬಲಯುತರಿಗೆ 2 ಬಂದುದೆ ಪುಣ್ಯಕಾಲ ಸುಜನರು ಸಂದೇಹವೇಕೆ ಮದ್ದಾನೆ ಹೊದ್ದುದೆ ಬೀದಿ 3
--------------
ಕೋಸಲ ಪುರೀಶರ
ತಾತ್ವಿಕ ಹಿನ್ನೆಲೆ ಅಗಣಿತಾಗಣಿತ ಮಹಿಮ ಜಗದೊಳು ನಿಮ್ಮ ಬಗೆ ತಿಳಿಯುವರಾರಮಮ ಪ ಮಗನ ಮಗನಿಗೆ ಒಲಿದು ಮಗಳಧಾರೆಯನೆರದಿ ಮಗಳಮಗನ್ವೈರಿಯ ನಿಗಯಿಟ್ಟು ಸಲಹಿದಿ ಅ.ಪ ಓಂಕಾರದಾಚೆಗಿರ್ದ ಅಮಲರೂಪ ಓಂಕಾರದೊಳು ನೆಲೆಸಿದಿ ಅಂಕುರಿಸಕ್ಷರ ತ್ರಯಲಂಕಾರದಿಂ ಸೃಷ್ಟಿ ಸಂಕಲ್ಪಗೈದು ನಿಷ್ಕಲಂಕನೆಂದೆನಿಸಿದಿ 1 ಸೃಷ್ಟಿ ಉತ್ಪತ್ತಿಗೈದಿ ಉದರದಿ ಇಟ್ಟು ರಕ್ಷಕನೆಂದೆನಿಸಿದಿ ಶಿಕ್ಷಕೆನಿಸಿ ಸರ್ವಸಾಕ್ಷಿನೀನೆಯಾಗಿ ಮೋಕ್ಷ ನೀಡುವ ಮದಧ್ಯಕ್ಷನೆಂದೆನಿಸಿದಿ 2 ಮೇದಿನಿಗೆ ಪತಿಯೆನಿಸಿದಿ ದಾಸರ ಪ್ರಿಯ ಮೇದಿನಿಸುತೆ ಮದುವ್ಯಾದಿ ವೇದಸಮ್ಮತಗೈದಿ ಸಾಧುಜನಕಹುದಾದಿ ಆದಿಶ್ರೀರಾಮ ಮಮ ಬೌದ್ಧದೇವನಾದಿ 3
--------------
ರಾಮದಾಸರು
ತಾತ್ವಿಕ ಹಿನ್ನೆಲೆ ಕರ್ತನೆಂಬೋದು ಖರೆ ಖರೆ ಪ ಇಪ್ಪನೆಂಬೋದು ಖರೆ ಖರೆ 1 ಜಗವು ಇಪ್ಪದೆಂಬೋದು ಖರೆ ಮೃಗ ಖರೆ 2 ಇಂಬಾಗಿಹನೆಂಬೋದು ಖರೆ ತುಂಬಿ ಇಪ್ಪನೆಂಬೋದು ಖರೆ3 ಸ್ಥಳ ಇಲ್ಲೆಂಬೋದು ಖರೆ ಖರೆ 4 ಇಲ್ಲೆಂಬೋದು ಖರೆ ವಿಲ್ಲವೆಂಬೋದುಖರೆ 5 ವೇದತಂದು ವೇದನಿಗಿತ್ತಾತನೆ ಭೂಧರನೆಂಬೋದು ಖರೆ ಖರೆ 6 ಬದ್ಧರೂಪನೆಂಬೋದು ಖರೆ ಖರೆ 7 ಮಾಳ್ಪನೆಂಬೋದು ಖರೆ ಖರೆ 8 ಎನಿಸಿದನೆಂಬೋದು ಖರೆ ಖರೆ 9 ಪೊರೆವನೆಂಬೋದು ಖರೆ ಖರೆ 10 ತಲಿಹ ವೆಂಬೋದು ಖರೆ ಖರೆ 11 ಯಂಬೋದು ಖರೆ ಭವ ಖರೆ 12 ಹುದೆಂಬೋದು ಖರೆ ಖರೆ 13 ಮಗನೆಂಬೋದು ಖರೆ ಖರೆ 14 ಕೇಳ್ವನೆಂಬೋದು ಖರೆ ಖರೆ 15 ಬಂದನೆಂಬೋದು ಖರೆ ಖರೆ 16 ಪರಿಶುದ್ಧವಾದುದೆಂಬೋದು ಖರೆ ಖರೆ 17 ಹರಿನಾಮಕೆ ಹರಿಯದ ಪಾಪಿಗಳೀಧರೆಯೊಳಿ- ಲ್ಲವೆಂಬೋದು ಖರೆ ಖರೆ 18 ಕರ್ಮ ಹರಿಸೇವೆಯನಿಪವೆಂಬೋದು ಖರೆ ಖರೆ 19 ನಿಜದ್ವಿಜರಹುದೆಂಬೋದು ಖರೆ ಖರೆ 20 ಬುಧರಿಗಿಲ್ಲವೆಂಬೋದು ಖರೆ ಖರೆ 21 ವರವೆಂಬೋದು ಖರೆ ಯುಕ್ತಿಯ ವಚನಗಳಲ್ಲವು ಇವು ವೇದೋಕ್ತಿಗಳ- ಖರೆ 22 ಸದ್ಗುರುವರಬೇಕೆಂಬೋದು ಖರೆ ಪರಮಸೌಖ್ಯವೆಂಬೋದುಖರೆ 23 ಖರೆ ಖರೆ ಖರೆ ಖರೆ 24 ಖರೆ ಖರೆ ಖರೆ 25
--------------
ಅಸ್ಕಿಹಾಳ ಗೋವಿಂದ
ತಾತ್ವಿಕ ಹಿನ್ನೆಲೆಯ ಕೀರ್ತನೆಗಳು ಅದಕೋ ವೈರಾಗ್ಯ ಅದಕೋ ವೈರಾಗ್ಯಅದಕೋ ವೈರಾಗ್ಯ ಕೇಳದಕೋ ವೈರಾಗ್ಯ ಪ ಸತಿಸುತ ಭಾಗ್ಯವ ಸರ್ವವ ತ್ಯಜಿಸಿಯೆಮತಿಬ್ರಹ್ಮವಾದುದೆ ಅದಕೋ ವೈರಾಗ್ಯ1 ಅನ್ನೋದಕ ವಸ್ತ್ರ ಅಪೇಕ್ಷೆ ಅಡಗಿಯೆಚಿನ್ಮಾತ್ರನಾದುದೆ ಅದಕೋ ವೈರಾಗ್ಯ2 ದೂಷಣಭೂಷಣವೆರಡಕ್ಕೆ ಹೊಂದದೆವಾಸನ ಕ್ಷಯವಿರೆ ಅದಕೋ ವೈರಾಗ್ಯ 3 ಇಹಪರ ಭೋಗವ ತೊರೆದಿಹ ಭಾವವೆಮಹಾಶಿವನಾದುದೆ ಅದಕೋ ವೈರಾಗ್ಯ 4 ಇರುಳು ಹಗಲು ಚಿದಾನಂದ ಸದ್ಗುರುವಾಗಿಶರೀರವ ಕಳೆದುದೆ ಅದಕೋ ವೈರಾಗ್ಯ5
--------------
ಚಿದಾನಂದ ಅವಧೂತರು
ತಾತ್ವಿಕ ಹಿನ್ನೆಲೆಯ ಹಾಡುಗಳು (ಸರ್ವೋತ್ತಮತ್ವ ವರ್ಣನೆ) ಸಕಲವು ತ್ವದಧೀನವು ಶ್ರೀಶನೀ ಕೇಳು ಪ. ಸಕಲವು ತ್ವದಧೀನ ಸಾಕಯ್ಯ ಸತ್ಯಮಾನ ವಿಖನ ಸಗಣಧಾಮ ವಿಶ್ವಗುಣಾಭಿರಾಮ ಅ.ಪ. ಕಮಲ ಸಂಭವ ಮುಖರು ಶ್ರೀಶ ತ್ವತ್ಪಾದ ವಿಮಲ ಪದ್ಮ ಸೇವಕರು ಅಮಿತ ಗುಣಾಂಬುಧಿ ಆಡುವಿ ನಿರುತದಿ ದುರಿತ ಬೀಜ ಶ್ಯಾಮ ಸುಂದರ ರಾಜ 1 ದೇಹ ಗೇಹಾದಿಗಳೆಲ್ಲ ಸುವರ್ಣ ಪಕ್ಷಿ ವಾಹ ನಿನ್ನೊಶ ಭೂನಲ್ಲ ಮೋಹದಿ ತನ್ನದೆಂದು ಜೋಹಗೊಂಡ ಪರಿಗೆ ಬಾಹದಿರದು ಕೇಡು ಬಿಡದೆಂದು ನಗೆಗೇಡು 2 ಪರಮ ಕೃಪಾಳು ನಿನ್ನ ಪಾದವ ನಂಬಿ ಮರೆದೆ ದುರ್ಮಾನವನ್ನ ಉರಗ ಗಿರೀಂದ್ರನೋಳ್ಮೆರೆವ ಮಹಾತ್ಮನೆ ಶರಣ ಜನ ಮಂದಾರ ಸೇರಿಸು ಕೃಪಾಧಾರ3
--------------
ತುಪಾಕಿ ವೆಂಕಟರಮಣಾಚಾರ್ಯ
ತಾತ್ವಿಕವಿವೇಚನೆ ಏರಿಸಿ ಏರಿಸಿ ಮಾರುತ ಮ್ವತಧ್ವಜ ಸಾರ ಸುಖಂಗಳ ನಿತ್ಯದಲುಂಬುವ ಯೋಗ್ಯತೆ ಯುಳ್ಳವರೂ ಪ ಈರನ ಮತವೇ ಸಾರವು ಶ್ರುತಿಗಳ ಶೌರಿಯ ಮತವೇ ಈರನ ಮತ ಖರೆ ದೂಡಿರಿ ಸಂದೇಹ ಅ.ಪ ಇಲ್ಲವು ಜಗವಿದು ಭ್ರಾಂತಿಯ ಕಲ್ಪನೆ ಸುಳ್ಳೇ ಎಲ್ಲವು ಬ್ರಹ್ಮನ ಬಿಟ್ಟರೆ ಬ್ರಹ್ಮನೆ ಸತ್ಯವೆನೆ ಅಲ್ಲವು ನುಡಿಯಿದು ಬ್ರಹ್ಮನು ಕಾರಣ ಸುಳ್ಳಾಯಿತು ನುಡಿ ಅಲ್ಲವೆ ಯೋಚಿಸಿ ಕೊಡದು ಈ ಮನವು 1 ಉಂಬುದು ಉಡುವುದು ಕಾಂತೆಯ ಸಂಗವು ನಂಬಲು ಬೇಡಿರಿ ಸುಳ್ಳೇಯೆಂತೆಂನೆ ಸಾಕ್ಷಿಯು ಒಪ್ಪುವುದೇ ನಂಬಲನರ್ಹವೆ ಕಾರ್ಯಸುಕಾರಿಯ ಖರೆ 2 ಒಂದೇ ತೆರವಿಹ ವಸ್ತು ದ್ವಯವಿರೆ ಒಂದನು ಮತ್ತೊಂದೆಂಬುವ ಭ್ರಾಂತಿಯು ಕೊಡುವದೂ ಪೊಂದಿಹ ಹೇಗೆನೆ ಉತ್ತರ ಸಿಕ್ಕದು ಯೋಚಿಸಿ ಕೋವಿದರೆ 3 ಭ್ರಾಂತಿಯ ಪೆಣ್ಣನು ಕೊಡುತ ತಾಸ್ವಾ ತಂತ್ರ ವಿಹೀನನು ಆಗುತ ಮಿಡುಕುವ ದೇವನು ಎನಿಸುವನೆ ಮಂತ್ರಿಸೆ ಬ್ರಹ್ಮನ ನಾನಿಹೆ ನೆಂಬುದ ಭ್ರಾಂತಿಯ ತೊಲಗುತ ಬ್ರಹ್ಮನು ಆಹನೆ ಮನವ ವಿಚಾರಿಸಿರಿ4 ನಾನೇ ಬ್ರಹ್ಮನು ಎಂಬೀ ಜ್ಞಾನವು ತಾನೇ ಬಾರದು ಸಹಜ ವಿದಲವು ಅನುಭವ ವಿರುದ್ಧಾ ತಾನೇ ಬ್ರಹ್ಮನು ಆಗಿರೆ ಭವದೊಳು ನಾನಾ ದುಃಖವ ನುಣ್ಣಲು ಬಂದರೆ ಹುಚ್ಚನೆ ಅವಸರಿಯು5 ಬ್ರಹ್ಮ ದ್ವಯವಿದೆ ಸತ್ಯ ದ್ವಯವಿದೆ ಬ್ರಹ್ಮನು ಆಹುದು ಕೊನೆ ಮಾತೆಂದರೆ ಬ್ರಹ್ಮನು ಶೂನ್ಯನಿಹ ಬ್ರಹ್ಮನು ನಿರ್ಗುಣ ನಂದವಿಹೀನನು ಬ್ರಹ್ಮನ ಗತಿಯೆನೆ ಸರ್ವವಿನಾಶವೆ ಯಾರಿದ ಬಯಸುವರೂ6 ವ್ಯಕ್ತಿತ್ವವು ತಾನಾಶವು ಆಹುದೆ ಮುಕ್ತಿಯು ಯೆಂತೆನೆ ಸರ್ವವಿನಾಶಕೆ ಸಾಧನೆಯೇ ಬತವು ಮುಕ್ತಿಯು ದುಃಖವಿವರ್ಜಿತ ಬರಿಸುಖ ರಿಕ್ತವು ಬರಿಯೆನೆ ಭವವಿದು ವರವೈ ಬೇಡವು ಆ ಮುಕ್ತಿ7 ಸತ್ಯವ ನುಡಿವುದು ವೇದವು ಒಂದೆಡೆ ಮಿಥ್ಯವ ನುಡಿವುದು ಮತ್ತೊಂದೆಡೆಯೆನೆ ಯಾವುದು ಸಿದ್ಧಾಂತ ಮೊತ್ತವ ನೂಕುತ ಕಿಚ್ಚಡಿ ವೇದಕೆ ಮೊತ್ತವ ಕೊಳ್ಳುತ ಒಂದೇ ಅರ್ಥವ ಜೋಡಿಸಿ ಇದು ನೀತಿ8 ಬೌದ್ಧರು ಒಪ್ಪನು ಶ್ರುತಿಗಳ ದೇವನ ವೇದವ ಒಪ್ಪುವ ಮಾಯಾವಾದಿಯ ಬ್ರಹ್ಮನು ಸೊನ್ನೆಯಿಹ ವೈದಿಕ ವೇಷದ ಬೌದ್ಧನ ವಾದವೆ ಶೋಧಿಸಿ ನೋಡಲು ಮತ್ತೇನಿಲ್ಲವು ಚಿಂತಿಸೆ ಸರಿಯಿಷ್ಠೆ9 ತರತಮ ಬಹುವಿಧ ಭೋಗವ ಮುಕ್ತಿಲಿ ಇರುವುದು ಸಿದ್ಧವು ಶೃತಿಗಳ ನಂಬಲು ಜೀವರ ಭಿನ್ನತೆಯು ಸ್ಥಿರವೇ ಆಯಿತು ಇದರಿಂ ಮುಕ್ತಲಿ ಪರಿ ಬಗೆತಾ ವಿದಿತವೆ ಜಗದಲಿ ಭೇದವೆ ಸರ್ವತ್ರ10 ನಾಸ್ತಿಕ ವಾದವ ತಳ್ಳಿರಿ ಆಚೆಗೆ ನಾಸ್ತಿಕ ಬಂದನೆ ತಂದೆಯು ಇಲ್ಲದೆ ಕಾರ್ಯವು ಜಗವಿರಲು ಆತನು ನೊಡಿಹ ಜ್ಞಾನಿಗಳಿಲ್ಲವೆ ಪೊಗಳವೆ ಗೋತತಿಯು11 ಪ್ರಕೃತಿ ವಿಕಾರದ ಜಗವಿದು ವಿದಿತವೆ ವಿಕಲ ವಿಶೇಷದ ಜೀವನು ಹಾಗೆಯೆ ಉಭಯರ ಆಳುವನು ವಿಕಲ ವಿವರ್ಜಿತ ಸಕಲ ಗುಣಾರ್ಣವ ಸಕಲ ನಿಯಾಮಕ ಸರ್ವ ಸಮರ್ಥನು ಇರಲೇ ಬೇಕಷ್ಟೆ12 ನಿತ್ಯವು ಈತ್ರಯ ಸಿದ್ಧವು ಆದರೆ ನಿತ್ಯ ಪರಸ್ಪರ ಸಂಬಂಧ ತ್ರಯ ಜ್ಞಾನವೆ ಪುರುಷಾರ್ಥ ಉತ್ತಮ ನೊಬ್ಬನು ಅಧಮರು ಇಬ್ಬರು ಮತ್ತಿವರಲಿ ಹಾಗಧಮನು ಜೀವನು ಚೇತನ ಪ್ರಕೃತಿ ವರ13 ಸರ್ವ ಸ್ವತಂತನು ಒಬ್ಬನೆ ಇರದಿರೆ ಸರ್ವಾ ಭಾಸವೆ ಜಗವಿದು ಆಹುದು ಪ್ರಭು ದ್ವಯ ಕೂಡುವುದೆ ಸರ್ವಗ ಶಾಶ್ವತ ಪೂರ್ಣಾ ನಂದನು ಸರ್ವ ವಿಚಿತ್ರನು ಮುಕ್ತಿದನಿರದಿರೆ ಪ್ರಭು ಅವನೆಂತಾಹ14 ಶುರುಕೊನೆ ಮಧ್ಯವು ಇದ್ದ ದೇವಗೆ ಬರುವನೆ ಹೊಸ ಹೊಸ ದೇವನು ಪ್ರತಿಪ್ರತಿ ಕಲ್ಪದಿ ಯೋಚಿಸಿರಿ ಇರದಿರೆ ಸಕಲೈಶ್ವರ್ಯವು ಆತಗೆ ತರುವನು ನಂದದ ಸೃಷ್ಠಿಯ ಹೇಗವ ವರಸಮರಿಲ್ಲವಗೆ15 ಸುಳ್ಳಿರೆ ಜಗವಿದು ಪಾಲಿಪ ದೊರೆಯದ ಕಳ್ಳನೆ ಅಲ್ಲವೆ ಅಷ್ಠಕರ್ತುತ್ವವು ಕೂಡುವ ದ್ಹೇಗಿನ್ನು ಎಲ್ಲಾ ಜಗವಿದು ನಿತ್ಯಾ ನಿತ್ಯವು ಎಲ್ಲಾ ಸತ್ಯವೆ ಶ್ರುತಿಗಳ ನುಡಿಗಳು ಭೃತ್ಯರು ಜೀವಗಣ16 ನಿತ್ಯವು ಪ್ರಕೃತಿಯು ಜೀವರು ಈಶನು ಸತ್ಯವು ಇದುಯೆನೆ ಪಂಚಸುಭೇದವು ನಿತ್ಯವೆ ಎಲ್ಲೆಲ್ಲು ನಿತ್ಯ ಸುಖಂಗಳ ಬಯಸುವ ನಮಗವು ಹತ್ತವು ಕಾರಣ ಸರ್ವಸ್ವತಂತ್ರನು ದೇವನೆ ಸತ್ಯವಿದು17 ಚೇತನ ಪ್ರಕೃತಿಯೆ ಲಕ್ಷ್ಮಿಯು ತಿಳಿವುದು ಆತನ ರಾಣಿಯು ನಿತ್ಯಸುಮುಕ್ತಳು ನಿತ್ಯಾವಿಯೋಗಿನಿಯು ಚೇತನ ನಿಚಯದ ಚೇತನ ಹರಿ ಇಹ ಆತನೆ ದೊರೆ ಜಗ ಜಂಗಮ ಸ್ಥಾವರ ಸತ್ತಾದಾಯಕನು 18 ದೋಷ ವಿದೂರ ಅಶೇಷ ಗುಣಾರ್ಣವ ದಾಸ ಪೋಷನಿಜ ಮುಕ್ತಿದ ನಿರದಿರೆ ಭಜಿಸುವದೇಕವನ ಶ್ರೀಶನು ಬಿಡೆ ಜಡ ಚೇತನ ಚೇಷ್ಠೆಯು ನಿಹ ಉಲ್ಲಾಸದಿ ಭಜಿಸುವುದು 19 ಪರಿಮಿತ ಶಕ್ತನು ದೇವನು ಇದ್ದರೆ ಪರಿಮಿತ ಜೀವರ ತೆರವೇ ಆಹನು ಕಾರಣ ನಿಸ್ಸೀಮ ಹರಿಗುಣವಗಣಿತ ಸಿಗ ಸಾಕಲ್ಯದಿ ನಿರುಪಮ ಸುಖಜ್ಞಾನಾತ್ಮಕ ವಿಭುವರ ಅನಾದಿ ಸಿದ್ಧವಿದು 20 ಪ್ರಾಕೃತ ಗುಣಗಣ ವರ್ಜಿತ ದೇವನ ಜ್ಞಾನ ಸುದೃಷ್ಠಿಗೆ ಗೋಚರನು ಸ್ವೀಕೃತ ನಾದರೆ ಜೀವನು ಹರಿಯಿಂ ತಾಕಿಸಿ ದೃಷ್ಠಿಗೆ ತನ್ನನೆ ತೋರುವ ಭಕ್ತರ ಬಾಂಧವನು 21 ತರತಮ ಜ್ಞಾನದಿ ಗುಣ ಉತ್ಕರ್ಷವು ಬರುವುದು ಕಾರಣ ತಿಳಿಯುತ ಹರಿಪರ ಮೋಚ್ಛನು ಹೌದೆನ್ನಿ ಅರಿವುದು ಅತಿಪರಿ ಪಕ್ವದ ಭಕ್ತಿಯ ಮಾಧವ ಮೆಚ್ಚುವನು22 ವೇದಗಳಿಂದಲೆ ದೇವನು ವ್ಯಕ್ತನು ವೇದಗಳಿಂದಲೆ ಧರ್ಮಾಧರ್ಮವಿ ವೇಕವು ಸರಿಯಷÉ್ಠ ವೇದ ನಿಜಾರ್ಥವೆ ಸಚ್ಛಾಸ್ತ್ರಂಗಳು ಮೋದವೆ ದೊರಕದು ಬಿಟ್ಟರೆ ಇವುಗಳ ಸಾದರ ಭಜಿಸುವುದು23 ಬಿಂಬನು ಹರಿ ಪ್ರತಿ ಬಿಂಬನು ಜೀವನು ಬಿಂಬಾಧೀನವು ಪ್ರತಿ ಬಿಂಬನ ಚೇಷ್ಠೆಗಳೆಂತರಿತು ಉಂಬುತ ಮುದದಿಂ ಸುಖದುಃಖಂಗಳ ಬಿಂಬಕ್ರಿಯೆಯೆನುಸಂಧಾನವ ಗುರುವಿಂದರಿತು ಸಮರ್ಪಿಸಿ24 ಮೆಚ್ಚುಲು ಮಾಧವದಾವುದಸಾಧ್ಯವು ಅಚ್ಚುತನೊಲಿಮೆಗೆ ಹೆಚ್ಚಿದುದೇನಿದೆ ಕೊಚ್ಚುತಕಲಿ ಸೊಂಕು ತಚ್ಛಭಿಮಾನ ಫಲೇಚ್ಛೆಯ ತ್ಯಜಿಸುತ ಕಚ್ಛಪ ನೊಲಿಮೆಗೆ ವಿಧಿಯ ನಿಷೇಧವ ಮರೆಯದೆ ಗೈಯುತಲಿ25 ಪರ ಮೋಚ್ಚನು ವರಸಮರಿಲ್ಲವು ಸಿರಿ ವರ ವಿಧಿಪಿತ ಸೃಷ್ಠ್ಯಾದ್ಯಷ್ಠಸು ಕರ್ತನು ವಿಭುವೆಂದು ನಿರುಪಮ ನಿಖಿಳಾಗಮ ಪ್ರತಿ ಪಾದ್ಯನು ಸ್ವರತ ಸ್ವತಂತ್ರನು ಪೂರ್ಣಾನಂದನು ಎನ್ನುತ ಸಾರುತಲಿ26 ಸಾಮನು ಸರ್ವರ ಬಿಂಬನು ಸರ್ವಸು ನಾಮನು ಸರ್ವಾಧಾರನು ಜಡಜಂಗಮ ವಿಲಕ್ಷಣನು ಭೂಮನು ಭಕ್ತ ಪ್ರೇಮಿಯು ಸದ್ಗುಣ ಧಾಮನು ಪೂರ್ಣನು ನಿಜ ಸುಖ ಮುಕ್ತಿದನೆನ್ನುತ ಸಾರುತಲಿ27 ವಿಧಿ ಪರಿಸರ ವಿಪಶಿವ ಪ್ರಮುಖರು ಪರಿವಾರವು ನಿರವದ್ಯನು ಮುಕ್ತಾ ಮುಕ್ತರ ನಾಯಕನು ಉರುಗಾಯನ ಜಗದೊಳ ಹೊರವ್ಯಾಪ್ತನು ಪರಿಮರ ಸ್ವಗತ ಭೇದ ವಿವರ್ಜಿತನೆಂಬುದ ಸಾರುತಲಿ28 ತರತಮ ಪಂಚಸುಭೇದವು ನಿತ್ಯವು ನಿರುತದಲುಂಬುವ ಸಾರವೆ ದುಃಖ ನಿರ್ಲೇಪನು ಅದ್ಭುತನು ಅರಿಯರು ಯಾರೂ ಇವನೇ ವಲಿಯದೆ ಪುರುಷೋತ್ತುಮ ಸಾಕಲ್ಯದವಾಚ್ಯನು ಎಂದು ಡಂಗುರ ಹೊಡೆಯುತ 29 ಗುರುವಿನ ದ್ವಾರವೆ ಹರಿತಾ ವಲಿಯುವ ಗುರುವೆನೆ ಮುಖ್ಯದಿ ಮುಖ್ಯ ಪ್ರಾಣನೆ ಸರಿಸಿರಿ ಯೆಂತೆಂದು ಗುರುಗಳು ಹಿರಿಯರು ಎಲ್ಲಾ ಕ್ರಮದಲಿ ಮಧ್ವರಿಗೊಂದಿಸಿ ಮುದದಿ 30 ಅನುಭವವಿಲ್ಲದ ಜ್ಞಾನವು ವಣವಣ ಸಾಧನೆ ಇದು ಖರೆಯ ಚಿನುಮಯ ನೊಲಿಸಲ್ ಮನೆಧನ ಬೇಡವು ತನುಮನೆ ವಿಷಯಗಳಿಂದಲೆ ಪೂಜಿಪ ಕ್ರಮದಿಂಯಜಿಸುತ 31 ಕಲಿಯುಗವಿದು ವರ ಸುಲಭದಿ ಸಾಧನೆ ವಲಿಯುವ ಬೇಗನೆ ನಾಮ ಸ್ಮರಣೆಗೆ ಭಜಿಸಿರಿ ಹರಿನಾಮ ವಳದಾರಿಯು ಸರಿ ಕ್ರಮದಿಂ ಪಾಡಲು ಮುಳುಗುತ ಭಕ್ತಿಯ ಕಡಲೊಳ್ ನಿಜಹರಿ ದಾಸರು ದೀಕ್ಷೆಯಲಿ32 ಕವಿಗುರು ರಾಜರ ಚರಣದಿ ಬಾಗುತ ಪವನ ಮತಾಂಬುಧಿ ಸೋಮನು ಜಯಮುನಿ ಹೃದಯಗ ವಾಯುವಲಿ ಅವಿರತ ನಲಿಯುವ ಶ್ರೀ ಕೃಷ್ಣವಿಠಲನು ತವಕದಿ ವಲಿಯುವ ಗ್ರಹಿಸಲ್ ಈ ಪದ ಜಯ ಜಯವೆನ್ನುತ33
--------------
ಕೃಷ್ಣವಿಠಲದಾಸರು
ತಾನಸÉ ತಾನಾದೆನ್ನ ಸ್ವಾಮಿ ಭಾನುಕೋಟಿ ಅಂತರ್ಯಾಮಿ ಧ್ರುವ ಕಾಣಬರುತಾದೆ ನೋಡಿ ಙÁ್ಞನವಂದಭ್ಯಾಸ ಮಾಡಿ ಭಾನು ಭವದಲಿ ಕೂಡಿ ನಾನು ನೀನೆಂಬುದೀಡ್ಯಾಡಿ 1 ತಿರುಗಿ ನೋಡು ದೋರುತಾನೆ ಅರುವಿನೊಳು ನಿಂತಾನೆ ಸಾರಸುಖ ಬೀರುತಾನೆ ಕೋರಿ ತಾರ್ಕಣ್ಯಾಗ್ಯಾನೆ 2 ಧ್ಯಾನ ಮೌನಾಗ್ಯಾನೆ ತಾನೆ ಜ್ಞಾನಗುರು ದೋರುತಾನೆ ದೀನ ಮಹಿಪತಿಗೆ ತಾನೆ ಖೂನ ಪರಿಪೂರ್ಣಾಗ್ಯಾನೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ತಾನಾ ತಂದನಾನಾ ತಾನಾ ತಂದನಾನಾ ತಾನಾ ತಂದನಾನಾ ತಾನಾ ತಂದನಾನಾ ಧ್ರುವ ತಾನಾ ತಂದನಾನಾ ತಾನೆಂಬುವದರ ಖೂನ ಏನೆಂದರಿಯ ಹೀನ ಮನುಜ ಪಾಮರ ಪೂರ್ಣ 1 ತಾನೆಂಬುದೆ ತಾ ದೈವ ನಾನೆಂಬುದೆ ತಾ ಜೀವ ಜ್ಞಾನದಿಂದ ತಿಳಿವ ಅನುಭವ ಆಶ್ರೈಸುವ2 ತಾನೆ ತಂದರ ನಾನಾ ತನ್ನಿಂದವೇ ಜೀವನ ನಾನೆಂಬುದವಗುಣ ಜನ್ಮಕಿದೆ ಸಾಧನ 3 ತಾನೆ ತಂದರ ತಾರಕ ನಾನೆಂದರೆ ನರಕ ಜ್ಞಾನ ಗುರುಮುಖ ಖೂನ ತಿಳಿವುದು ಸುಖ 4 ತಾನೆಂದವ ತಾ ಬ್ರಹ್ಮ ನಾನೆಂದರ ಅಹಮ್ಮ ಅನುಭವದಿಂದ ವರ್ಮ ಖೂನಾದರ ಸಂಭ್ರಮ 5 ಅರ್ಕ ನಾನೆಂದರೆ ತಾ ತರ್ಕ ಹೀನಗುಣ ಸಂಪರ್ಕ ಏನೆಂದರಿಯ ಮೂರ್ಖ 6 ತಾನೆಂದರೆ ತಾಂ ಮಾನ್ಯ ನಾನೆಂದರಮಾನ್ಯ ಖೂನಮಾಡಿ ತಾರ್ಕಣ್ಯ ಅನುಭವಿಸಲು ಧನ್ಯ 7 ತಾನೆಂದರೆ ತಾ ಬಂದೆ ನಾನೆಂದು ಬಲು ನೊಂದೆ ಅನೇಕ ಜನ್ಮದಿಂದ ದಣಿದು ನಾ ಸಾಕೆಂದೆ 8 ತಾನೆಂಬುದು ಸುಜ್ಞಾನ ನಾನೆಂಬುದು ಅಜ್ಞಾನ ತಾನೆಂದರೆ ಅಣುರೇಣು ನಾನೆಂದರನುಮಾನ 9 ತಾನೆಂಬುದ ತೋರಿಸಿ ನಾನೆಂಬುದ ಮರಸಿ ತಾನೆತಾನಾದ ಋಷಿ ಆನಂದೋಬ್ರಹ್ಮ ಸೂಸಿ 10 ತಾನೆ ತಾನಾಗಿ ಒಂದೆ ಖೂನ ದೋರಿದ ತಂದೆ ಭಾನುಕೋಟಿ ತೇಜೊಂದೆ ಪೂರ್ಣ ಮಹಿಪತಿಗೊಂದೆ11
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ತಾನಾ ತಂದನಾನಾ ತಾನಾ ತಂದನಾನಾ ತಾನಾ ತಂದನಾನಾ ತಾನಾ ತಂದನಾನಾ ಧ್ರುವ ತಾನೆ ತಾನಾದ ಖೂನ ತಾನೆ ದೋರುದು ಘನ ತಾನೆ ತಾನಾಗಿ ತಾನೆಂಬುದು ಲೇಸು ನಾನಾ 1 ತಾನಾಗದೆ ಜ್ಞಾನ ನಾನಾ ಎಂಬುದೆ ಹೀನ ಸೂಕರ ನಾನಾ ಜನುಮ ತಾಳ್ದೆಖೂನ 2 ತಾನೆ ತಾನಾದ ಪೂರ್ಣ ಭಾನುಕೋಟಿಸುಘನ ಖೂನ ಮಹಿಪತಿಗಿದೆ ತಾನೆ ತಾನಾದ ತಾನಾ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ತಾನಾ ತಂದನಾನಾ ತಾನಾ ತಂದನಾನಾ ತಾನಾ ತಂದನಾನಾ ತಾನಾ ತಂದನಾನಾ ಧ್ರುವ ಬಲ್ಲೆ ಬಲ್ಲೆನೆಂಬರು ಬಲ್ಲರಿಯದಿಹದನು ಬಲ್ಲರೆ ನೀವಿನ್ನು ಹೇಳುವುದು ತಾನಾ 1 ಕಣ್ಣು ಕಾಂಬುವದೇನು ಕಣ್ಣಿನೊಳಿಹುದೇನು ಕಣ್ಣು ಕಾಂಬುವ ಗತಿ ತಿಳಿಯುವುದು ತಾನಾ 2 ಕಿವಿಯ ಕಿವಿಯೆಂಬುದೇನು ಕಿವಿಯ ಕೇಳುವುದೇನು ಕಿವಿಯ ಕೇಳುವ ಗತಿ ತಿಳಿಯುವದು ತಾನಾ 3 ಮೂಗು ಮೂಗೆಂಬುದೇನು ಮೂಗಿನೊಳಾಡುವದೇನು ಆಡುವ ಗತಿಗಳ ತಿಳಿಯುವದು ತಾನಾ 4 ಬಾಯಿ ಬಾಯೆಂಬುದೇನು ಬಾಯಿಯೊಳ ನುಡಿವದೇನು ಬಾಯಿ ನುಡಿವ ಗತಿ ತಿಳಿಯುವದು ತಾನಾ 5 ದೇಹ ದೇಹೆಂಬುದೇನು ದೇಹದೊಳಿಹುದೇನು ದೇಹದೊಳಿಹ ವಸ್ತು ತಿಳಿಯುವದು ತಾನಾ 6 ಪ್ರಾಣವೆಂಬುದೇನು ಕರಣವೆಂಬುದೇನು ತತ್ತ್ವವೆಂಬುದೇನು ತಿಳಿಯುವದು ತಾನಾ 7 ಜೀವ ಅಂಬುದೇನು ಜೀವಭಾಗಗಳೇನು ಜೀವ ಶಿವದ ಗತಿ ತಿಳಿಯುವದು ತಾನಾ 8 ಆರುವ್ಹೆಂಬುದೇನು ಮರವ್ಹುವೆಂಬುದೇನು ಇದರೊಳು ಖೂನ ಕುರುಹು ತಿಳಿಯುವುದು ತಾನಾ 9 ಕನಸುವೆಂಬುದೇನು ಕನಸು ಕಾಂಬುವದೇನು ಕನಸು ಹೇಳುವದೇನು ತಿಳಿಯುವುದು ತಾನಾ 10 ಹಗಲು ಎದ್ದಿಹದೇನು ಇರಳು ಮಲಗುವದೇನು ಇದರ ಹಗರಣವನು ತಿಳಿಯುವದು ತಾನಾ 11 ಹುಟ್ಟಿ ಬಾಳುವದೇನು ಸತ್ತು ಹೋಗುವದೇನು ಸತ್ತು ಹುಟ್ಟುವದೇನು ತಿಳಿಯುವದು ತಾನಾ 12 ಹೆಣ್ಣು ಗಂಡೆಂಬುವದೇನು ಹೆಣ್ಣು ಗಂಡು ಕೂಡುವದೇನು ಕೂಡುವದೇನೆಂದು ತಿಳಿಯುವದು ತಾನಾ 13 ಅನುಭವ ಗತಿಗಳ ತಿಳಿಯಲು ಆತ್ಮದೊಳು ತಿಳಿಯಲು ಜನ್ಮವು ಅಳಿಯುವದು ತಾನಾ 14 ಆತ್ಮ ಅನುಭವವು ತಿಳಿಯುವದು ಗುರುಕೃಪೆಯು ತಿಳಿಯಲು ಜೀವನ್ಮುಕ್ತಿಯು ತಾನಾ 15 ಮಹಿಪತೆಂಬ್ಹೆಸರನು ಕರೆದರೊ ಎಂಬುವದೇನು ಓ ಎಂಬುವದೆನಗಿನ್ನು ತಿಳಿಯಿತು ತಾನಾ 16 ಇಂತು ಪರಿಯಾಯವು ತಿಳುಹಿದ ಗುರುರಾಯ ಎನ್ನೊಳು ಭಾಸ್ಕರ ಗುರು ತಾನೆ ತಾನಾ 17
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ತಾನಾಗಿ ದೊರಕುವುದು ಹರಿದರುಶನ ಪ ಶ್ರೀನಾಥವಿಠಲನಲಿ ದೃಢಭಕ್ತಿವುಳ್ಳವಗೆ ಅ.ಪ ಅರುಣೀಯದೊಳೆದ್ದು ಹರಿಕೃಷ್ಣ ಎನುವವಗೆ ಹರಿಹರಿ ಹರಿ ಎಂದು ಸ್ನಾನಗೈವವಗೆ ಹರಿಯ ದ್ವಾದಶನಾಮ ಪಠಣೆಯಿಂಮಣಿವವಗೆ ಗರುಡವಾಹನ ಕೃಷ್ಣ ಗೋಪಾಲಯೆನುವವಗೆ1 ನಿತ್ಯಕರ್ಮವಗೈದು ಫಲವ ಬಯಸದ ಕತ್ರ್ಯವ್ಯಗಳ ಗೈದು ಫಲ ಕೃಷ್ಣಗರ್ಪಿಪ ನರಗೆ ಉತ್ಸಾಹದಿಂದ ಅಭ್ಯಾಗತರ ಪೂಜಿಪಗೆ ಸತ್ಯದೈವವು ಎಂದು ಗೋಸೇವೆ ಗೈವವಗೆ 2 ಕುಳಿತು ನಿಲುವೆಡೆಗಳೊಳು ಹರಿಕೃಷ್ಣ ಎನುವವಗೆ ಇಳೆಯೊಳಿಹ ನರರೆಲ್ಲ ಭ್ರಾತರೆಂದವಗೆ ಉಳಿವು ಅಳಿವುಗಳೆಲ್ಲ ಹರಿಕರುಣವೆಂಬವಗೆ ಜಲಜನಾಭನ ದಿವ್ಯ ನಾಮಗಳ ಭಜಿಸುವಗೆ3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ತಾನಾರು ತನುವು ಆರು ತಿಳಿದು ನೋಡಿ ಧ್ರುವ ತಾನಾರು ತನುವಾರು ತನ್ನೊಳೂ ತಾನೆ ತಿಳಿದು ನೋಡಿ ಘನ ಬ್ರಹ್ಮದೊಳು ಮನ ಬೆರೆದಾತ ಶರಣನು 1 ಕಾಯದೊಳಿಹ್ಯ ಕಳವಳಗಳೆದು ಮಾಯ ಮೋಹದ ಮಲಗಳ ತೊಳೆದು ದೇಹ ವಿದೇಹವಾದಾತ ಶರಣನು 2 ಭ್ರಾಂತಿಯ ಅಭಾವಗಡಿದು ನೀತಿ ಸುಪಥದ ಮಾರ್ಗವ ಹಿಡಿದು ಜ್ಯೋತಿ ಸ್ವರೂಪವ ಕಂಡಾತ ಶರಣನು 3 ಭಾವ ಭಕ್ತಿಯ ಕೀಲವ ತಿಳಿದು ಹ್ಯಾವ ಹೆಮ್ಮೆಯ ಮೂಲವನಳಿದು ಜೀವ ಶಿಶುವು ತಿಳಿದಾತ ಶರಣನು4 ಜಾತಿಯ ಕುಲಗಳ ಭೇದವ ತಿಳಿದು ಯಾತನೆ ದೇಹದ ಸಂಗವನಳಿದು ಮಾತಿನ ಮೂಲವ ತಿಳಿದಾತ ಶರಣನು 5 ಸೋಹ್ಯ ಸೊನ್ನೆಯ ಸೂತ್ರವಿಡಿದು ಲಯ ಲಕ್ಷಿಯ ಮುದ್ರೆಯ ಜಡಿದು ದ್ಯೇಯ ಧ್ಯಾತವ ತಿಳಿದಾತ ಶರಣನು 6 ನಾದದಿಂದ ಕಳೆಯ ಮುಟ್ಟಿ ಸಾಧಿಸಿ ಉನ್ಮನ ಮುದ್ರೆಯ ಮೆಟ್ಟಿ ಆದಿತತ್ವದ ಗತಿ ತಿಳಿದಾತ ಶರಣನು 7 ಆಧಾರ ದೃಢದಿಂದ ಅರಹುತನಾಗಿ ಮಧ್ಯ ಮುಪ್ಪರದಲಿ ಸ್ಥಿತಿವಾಗಿ ಊಧ್ರ್ವ ಮಂಡಲಗತಿ ಬೆರೆದಾತ ಶರಣನು 8 ಬಾಹ್ಯಾಂತ್ರ ಪರಿಪೂರ್ಣ ಘನಮಯಗಂಡು ಸಾಯೋಜ್ಯ ಸದ್ಗತಿ ಸವಿಸುಖನುಂಡು ಮಹಿಪತಿ ಗುರುಮನಗಂಡಾತ ಶರಣನು 9
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ತಾನೆ ತಾನಾದನಮ್ಮಾ ಎನ್ನೊಳು ಘನಬ್ರಹ್ಮ ಧ್ರುವ ಕಣ್ಣಿಲೆ ನೋಡಲಿಕ್ಕೆ ಕಣ್ಣಿನೊಳಾದನಮ್ಮ ಕಣ್ಣಿಗೆ ಕಣ್ಣಾಗಿ ಪೂರ್ಣ ಕಾಣಿಸಿದಾನಂದೋಬ್ರಹ್ಮ ಅಣುರೇಣುದೊಳು ವ್ಯಾಪಿಸಿ ಜನ ಮನ ದೊಳು ತುಂಬಿಹ ತನುಮನದೊಳು ತಾನೆತಾನಮ್ಮ 1 ಎತ್ತ ನೋಡಿದತ್ತ ಸುತ್ತ ಸೂಸುವನಮ್ಮ ನೆತ್ತಿ ಒಳಗೆ ಪೂರ್ಣ ಮೊತ್ತವಾದ ಪರಬ್ರಹ್ಮ ಅನುದಿನ ಸಂತತ ಸದ್ಗುರು ಪೂರ್ಣ ಅಂತರಾತ್ಮದೊಳಗಿಹನಮ್ಮ 2 ನಾನು ನಾನೆಂಬುದಿದು ಇಲ್ಲದಂತಾಯಿತು ನಮ್ಮ ತಾನೆ ತಾನಾದ ನಿಜ ಓಮಿತ್ಯೇಕಾಕ್ಷರ ಬ್ರಹ್ಮ ಚೆನ್ನಾಗಿ ಮಹಿಪತಿಗೆ ಸನ್ಮತಸುಖದೋರಿತುಉನ್ಮನವಾಗ್ಯೆನ್ನೊಳಗೆ ಘನಸುಖ ಹೊಳೆಯಿತು ಸಂಭ್ರಮ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ತಾನೆ ದೊರೆವುದೇನೋ ಸುಖ ನಾನಾಜನ್ಮದ ಪುಣ್ಯವಿಲ್ಲದೆ ಪ ಮೃಷ್ಟಾನ್ನವುಂಡು ಮೆರೆವುದೀಗ ಕೊಟ್ಟು ಅನ್ನ ಹುಟ್ಟಿದವಗಿಲ್ಲದೆ ಇಟ್ಟುತೊಟ್ಟು ಶೃಂಗಾರದಿಂದ ಸೃಷ್ಟಿಯಿಂದ್ವಸ್ತ್ರ ವಡವೆಗಳು ಕೊಟ್ಟು ಹುಟ್ಟಿದ ಪುಣ್ಯರಿಗಲ್ಲದೆ 1 ಕೋಮಲಯುವತಿ ದೊರೆವುದೀಗ ಭೂಮಿಯೋಳ್ಕನ್ಯಾದಾನಿಗಲ್ಲದೆ ಭೂಮಿಸೀಮೆಗಳಿಸಿ ಬಲು ಕ್ಷೇಮದಿಂದ ಬಾಳ್ವುದೀಗ ಭೂಮಿಸೀಮೆ ದಾನಗೈದ ಆ ಮಹಾಪುಣ್ಯವಂತರಿಗಲ್ಲದೆ 2 ನಿಖಿಲಸುಖದಿ ಮೆರೆವುದೀಗ ಭಕುತಜನರಪ್ಪ ತೃಪ್ತರಿಗಲ್ಲದೆ ಅಖಿಲಪದಕೆ ಅಧಿಕವೆನಿಪ ಮುಕುತಿಪದವಿ ಪಡೆವುದಮಿತ ಮುಕುತಿದಾಯಕ ಶ್ರೀರಾಮಪಾದ ಭಕುತಾನುಭಕುತರಿಗಲ್ಲದೆ 3
--------------
ರಾಮದಾಸರು