ಒಟ್ಟು 5908 ಕಡೆಗಳಲ್ಲಿ , 129 ದಾಸರು , 4329 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಿಠಲಾ ಕಳೆಮದವಿದ್ಯಾ ಪಟಲಾ |ನಿಟಲಾಕ್ಷನ ಸಖಸಂ | ಕಟ ಕಳೆ ನಿಮ್ನಟಲನ ಮಾಡುತ ಪ ತುರಗ ಗ್ರೀವಾಭಿಧನೆಂಬಸುರಾ | ವೇದಾಪಹಾರನೆರೆವೇರಿಸೆ ಸ್ವೀಕರಿಸವತಾರಾ | ಹಯಮುಖನಾಕರ |ಅರಿಶಿರ ಸರಸದಿ ತತ್ತರಿಸುತ ನೀಸುರರುಗಳನು ಬಹು ಪರಿಪೋಷಿಸಿದ್ದೆ 1 ಧರೆಯನಪಹರಿಸಲು ಸುರವೈರೀ | ವರಾಹಾವತಾರಿತ್ವರದಿ ಹಿರಣ್ಯಾಕ್ಷನ ಸಂಹಾರೀ | ನೀನಾದೆ ಮುರಾರಿ |ಧರಣಿಯ ಕೋರೆಯ ದಾಡಿಯಲೆತ್ತುತ್ತಸುರ ಜೇಷ್ಠಗೆ ತಂದೊಪ್ಪಿಸಿದ್ಯೆಯ್ಯ | 2 ತುರಗವ ನೀನೇರುತ ಬಂದೂ | ನಿನಪುರದೊಳಂದುಇರೆ ಧೇನೂಪಲಾರ್ಯರು ಅಂದು | ನೋಡಿ ಚಕಿತರಂದೂಗುರು ಗೋವಿಂದ ವಿಠಲಾಲೇನಾಹಿ ಎಂದುಬರಿದೋಡಿದೆ ನೀ ದರುಶನ ಕೊಡದೇ 3
--------------
ಗುರುಗೋವಿಂದವಿಠಲರು
ವಿಠ್ಠಲನ ಪದವನಜ ತುಂಬೆ ಸೃಷ್ಟಿಯೊಳಗೆ ಎನ್ನ ಬಿಡದೆ ಪೊರೆ ಎಂಬೆ ಪ ಜ್ಞಾನ ಭಕುತಿ ವೈರಾಗ್ಯದಲಿ ಜಾಣ ದಾನ ಮಾಡುವರೊಳಗೆ ಪೂತುರೆ ನೀನೆ ನಿಪುಣ ಮಾನಸದಲಿ ಹರಿಯ ಧ್ಯಾನ ಮಾಡುವ ಆನಂದಮತಿ ವಿಮಲ ಸರ್ವವಿಧಾನ 1 ಮಾತುಮಾತಿಗೆ ನೆನೆಸಿದವರ ಭವದ ಮಾಯಾ ಸೇತುವಿಯ ಕಡಿದು ಸಂತತವಾಗಿ ಸಹಾಯಾ ಪ್ರೀತಿಯಲಿ ಬಂದು ಶ್ರೀ ಹರಿಯ ಪದ ಸೇವಿಯಾ ತಾ ತೋರಿ ತಿಳಿಸುವಾ ಪ್ರಿಯನೆನಿಸುವಾ ಪುರಂದರ ರಾಯಾ 2 ವಜ್ರ ಪಂಜರಾ ಕೂವಾದಿ ಮತಹರ ನಂಬಿದವರಾಧಾರ ಪಾವಮಾನಿಯ ಮತದಲಿಪ್ಪ ಮನೋಹರ ಶ್ರೀ ವಿಜಯನಗರ ಮಂದಿರದೊಳಗುಳ್ಳ ಶ್ರೀ ವಿಜಯವಿಠಲನ್ನ ಪೂಜಿಸುವ ಧೀರ 3
--------------
ವಿಜಯದಾಸ
ವಿಠ್ಠಲನ ಮಂತ್ರ ಜಪಿಸೋ ಎಲೆ ಮನವೆ ಕುಟಿಲವನು ಕಳೆದು ಬಲು ಕುಶಲತನವೀವದು ಪ ಆಗಮ ಸಿದ್ಧಾಂತದಲ್ಲಿ ಪೊಳೆವ ಮಂತ್ರ ಯೋಗಿಗಳ ಮನಕೆ ಬಲು ಸೌಮ್ಯ ಮಂತ್ರ ಸಾಗರವು ಮಥಿಸಲು ಉದಿಸಿ ಪೊರೆದ ಮಂತ್ರ ಯೋಗಿಗಳು ನೆನೆದರೆ ಸವಿಯಾದ ಮಂತ್ರ 1 ಸುಧಾಮಗೆ ವೊಲಿದು ಸೌಭಾಗ್ಯವಿತ್ತ ಮಂತ್ರ ಕದನದೊಳು ಫಲ್ಗುಣನ ಕಾಯಿದ ಮಂತ್ರ ಮಧುರಾಮೃತವಾಗಿ ಜಿಹ್ವೆಗೆ ಒಪ್ಪುವ ಮಂತ್ರ ಯದುಕುಲಾಗ್ರಣಿಯಾದ ವಿಶ್ವಮಂತ್ರ 2 ಹಾರೈಸಿದವರಿಗೆ ವರವನೀವ ಮಂತ್ರ ಕಾರುಣ್ಯನಿಧಿ ವಿಜಯವಿಠ್ಠಲರೇಯನ್ನ ಮಂತ್ರ ಸೇರಿದವರನ್ನ ಬಿಡದೆ ಪೊರೆವ ಮಂತ್ರ 3
--------------
ವಿಜಯದಾಸ
ವಿತತ ಮಹಿಮನೆ ಘನ್ನ - ಯತಿಕುಲ ಶಿರೋರನ್ನಪ್ರತಿ ರಹಿತ ಸಂಪನ್ನ - ಸರ್ವ ಗುಣ ಪೂರ್ಣ ಪ ಭವ ಕರಿಗೆ ನೀ ಹರಿಯೆಕುತ್ಸಿತನ ಸೊಲ್ಲನ್ನ - ಲಾಲಿಪುದು ಘನ್ನ1 ವೇದ ವಿಭಜನೆ ಗೈದೆ - ಮೋದದಲಿ ಭೋದಿಸಿದೆಹೇ ದಯಾಂಬುಧೆ ವ್ಯಾಸ - ಕಾಯೊ ಮಹಿದಾಸ ||ಬಾದರಾಯಣ ಪೂರ್ಣ - ಭೋದಾರ್ಯನುತ ಚರಣಸಾಧನದಿ ಸಂಪನ್ನ - ಎನಿಸೆನ್ನ ಘನ್ನಾ 2 ಸಾವಧಾನದಿ ಕೈಯ್ಯ - ಪಿಡಿಯನ್ನ ಅಹಿಶಯ್ಯಜೀವ ಬಹು ಪರತಂತ್ರ - ನೀನೆ ಸ್ವಾತಂತ್ರ ||ಗೋವ ಕಾಯುವ ಗುರು ಗೋವಿಂದ ವಿಠಲನೆನೀ ವೊಲಿದು ಕಾಯದಿರೆ - ಕಾವರಿನ್ನಾರೋ 3
--------------
ಗುರುಗೋವಿಂದವಿಠಲರು
ವಿತ್ತ ಅಸಾರ್ಥಕತೆಯ ತಿಳಿದು ಪುರುಷಾರ್ಥ ಪ್ರದನು ಶ್ರೀ | ಹರಿಯ ಪ್ರಾರ್ಥಿಸೋ ಪ ಮಡದಿ ಮನೆ ಮಕ್ಕಳೆಲ್ಲ | ಬಿಡದೆ ನಿನ್ನ ಸೇವಿಸೋರುಹಿಡಿಯ ತುಂಬ ಹೊನ್ನು ಹಣವು | ಬಿಡದೆ ಬರುತಿರೇ 1 ಪ್ರಾಣ ಉತ್ಕ್ರಮಣ ಸಮಯ | ಮಾನಿನೀಯು ರೋದಿಪಾಳುಪ್ರಾಣ ಪೋದ ತನುವ ಸೋಕೆ | ತಾನೆ ಒಲ್ಲಳು 2 ಮಂದ ಮಾನವ 3 ಬಿಂಬ ಚಲಿಸೆ ತಾನು ಪ್ರತಿ | ಬಿಂಬ ಚಲಿಪ ಮತಿಯೆ ನಿಜವುಉಂಬು ಕೊಂಬ ಕೊಡುವುದೆಲ್ಲ | ಬಿಂಬದೆನ್ನೆಲೋ 4 ಇಂದಿರೇಶನರ್ಚಿಸೂತ | ಇಂದೆ ಗಳಿಸೊ ಪುಣ್ಯ ದ್ರವ್ಯನಂದ ಕಂದಗರ್ಪಿಸೋದು | ದ್ವಂದ್ವ ಕರ್ಮವ 5 ತನುವು ಮನವು ನಿನ್ನದಲ್ಲ | ಗುಣದ ಕಾರ್ಯ ನಿನ್ನದಲ್ಲನಾನು ನನ್ನದೆಂಬ ಮತಿಯು | ಹೀನ ತಿಳಿಯೆಲೋ 6 ನಿತ್ಯ ಬದ್ಧ ಜೀವಿ ನೀನು | ಸತ್ಯ ಸ್ವಾತಂತ್ರ ಹರಿಯುದತ್ತ ಕರ್ತೃತ್ವವಿಹುದು | ಕೃತ್ಯ ಉಂಬಲು 7 ಹರಿಯ ರೂಪ ಹೃದಯದಲ್ಲಿ | ಪರಿಕಿಸಾದೆ ಗತಿಯು ಇಲ್ಲಕರುಣಿಸಿಹನು ಮನುಜ ದೇಹ | ಹರಿಯ ಕಾಣಲು 8 ಮಧ್ವ ಮತದಿ ಜನ್ಮವಿರಲ | ಅವಿದ್ಯೆಗಳನ ನೀಗಿಕೊಂಡುಮಧ್ವಮುನಿಯ ಕರುಣ ಪಡೆದು | ಸಿದ್ಧನಾಗೆಲೋ 9 ಕಮಲ | ಭಾವದಿಂದ ಪೂಜಿಸಾದೆಸಾವು ಹುಟ್ಟು ತಪ್ಪೊದಿಲ್ಲ | ಕೋವಿದನಾದರು10 ಅಂಶದಿಂದ ಇರುತ ತಾವು | ಹಂಸ ಮಂತ್ರ ಸರ್ವರಲ್ಲಿವಿಂಶತ್ಯೇಕ ಸಾಸಿರಾವು | ಅಂತೆ ಷಟ್ಯತ 11 ದಿನಕೆ ಇಂತು ಜಪವ ಚರಿಸಿ | ವಿನಯದಿಂದನಿರುದ್ದನೀಗೆಎಣಿಕೆ ಮಾಡಿ ಅನಿಲ ಸಹಿತ | ತಾನೆ ಅರ್ಪಿಪ 12 ಪರ್ವಕಾಲದಿದನು ತಿಳಿದು | ಶರ್ವ ವಂದ್ಯ ಶೇಷಶಾಯಿಸರ್ವ ಕಾರ್ಯಗಳನು ಲಾ | ತವ್ಯ ಗಿತ್ತಿಹ 13 ದೈತ್ಯ ಜನರು ಅರಿಯದಂತೆ | ಯುಕ್ತನಾಗಿ ಬ್ರಹ್ಮ ವಾಯುಆಪ್ತ ವಾಕ್ಯ ಮೀರದಂತೆ | ಗುಪ್ತ ಚರಿಸುವ 14 ತತ್ವಕಿದು ವಿರುದ್ಧವಲ್ಲ | ವ್ಯಕ್ತ ವಿಹುದು ಲೋಕದಲ್ಲಿಮತ್ತೆ ಕ್ಷಣಕೆ ಒಪ್ಪೆನೆಂದು | ಇತ್ತು ಸ್ಥಾನವ 15 ಗೊತ್ತು ಮಾಡಿ ಪೋಗುವಂತೆ | ಭ್ರಾತೃ ವಾದಿರಾಜರೀಗೆಇತ್ತು ಪದವಿಗಳನು ತಾವು | ಸೂಕ್ತ ಪೇಳ್ವರು 16 ಭಾರತೀಶ ಕರ್ಮ ವೀಯೆ ಗುರುಗೋವಿಂದ ವಿಠಲ ಗತಿ ಇತ್ತು | ಕಾವ ಬಿಡದಲೆ 17
--------------
ಗುರುಗೋವಿಂದವಿಠಲರು
ವಿತ್ತ ವನಿತಾದಿ ವಿಷಯವೆಂಬಕನಸಿನ ಸಿರಿಯ ನೆಚ್ಚಿ ತೊನೆದುಕೊಂಬರಲ್ಲದೆ 1ಪೊಲೆಯ ಬೊಂಬೆಯೊಳು ತುಂಬಿದ ಕೀವುಮಲಮೂತ್ರಸಂದೋಹ ತೊಗಲು ರೋಮಎಲು ಮಜ್ಜೆ ಮಾಂಸದವ್ಯೂಹ ಎಷ್ಟು ತೊಳೆದರೂಹೊಲಸು ನಾರುವ ಚೋಹ ಮತ್ತಿದಕೊಂದುಕುಲಗೋತ್ರ ನಾಮರೂಪು ಚಲುವ ಚೆನ್ನಿಗನಿವ ಸಲೆ ಜಾಣನೆಂದು ಮೂಢರುಗಳಹಿಕೊಂಬರಲ್ಲದೆ 2ಮಡದಿಯಾದರಿಲ್ಲ ಮಕ್ಕಳು ಮಕ್ಕಳಾದರೆಒಡಮೆಲ್ಲವದು ಬರಲು ಸತಿಸುತರುಮಡಿದು ಹೋಗುವ ದುಃಖಂಗಳು ಗಳಿಸಿದರ್ಥಕೆಡುವಾ ಸಂಕ್ಲೇಶಂಗಳು ತನಗೆ ಮುಂಚಿಅಡಸಿ ಬರುವದೊ ಮೃತಿ ಜಡರು ಈ ಬದುಕನೆಚ್ಚಿಸಡಗರ ಬಡುತ ಹಿಗ್ಗಿ ಕೊಡಹಿಕೊಂಬರಲ್ಲದೆ 3ಬಾಲಕನಾಗ್ಯೊಂದು ಕ್ಷಣವು ಪ್ರಾಯದಿ ಕಾಮಲೋಲುಪನಾಗ್ಯೊಂದು ಕ್ಷಣವು ಧನಾಢ್ಯನೆಂಬಮೂಳ ಹೆಮ್ಮೆ ಒಂದು ಕ್ಷಣವು ದಾರಿದ್ರ್ಯ ಮುಪ್ಪುಜೋಲುವ ತನುವೊಂದು ಕ್ಷಣವು ನಾನಾವೇಷದಾಳಿದ ನಟನಂತಾಡಿ ಕಾಲನ ಬಾುಗೈದುವಬಾಳುವೆಗೆ ಖೂಳಜನರು ವೋಲಾಡಿಕೊಂಬರಲ್ಲದೆ 4ನೆರೆ ಭೋಗಕೆ ರೋಗಭಯ ಸುತ ಸಂಬಂಧಿನೆರವಿಗೆ ವಿಯೋಗ ಭಯ ದ್ರವ್ಯಕ್ಕೆ ಭೂಪರ ಭಯವು ಚೋರ ಭಯ ಕಾಯಕೆ ಭಯಂಕರನಾದ ಕೃತಾಂತ ಭಯ ತಾಪತ್ರಯವೀಪರಿಯನೇಕ ಚಿಂತೆಯಲ್ಲಿ ಕೊರಗುತುರಿವ ಮನೆಯೊಳಗಿರುವೆ ಸುಖದಲೆಂಬರು ಮೂಕೊರೆಯಮೊಂಡರಲ್ಲದೆ * 5
--------------
ಗೋಪಾಲಾರ್ಯರು
ವಿದ್ಯಾಮರವೇ ಉದ್ಯೋಗದ ಮರವೇ ಪ ಅಂಜನಾ ದೇವಿಯ ನೀ ಜಠರದಿ ಜನಿಸಿ ಕಂಜರಾಕ್ಷ ಶ್ರೀರಾಮಭದ್ರನ ಭೃತ್ಯನೆನಿಸಿ ಸಂಜೀವಿನಿಯ ತಂದೆ ಅಂಜದಾರ್ಣವ ದಾಂಟಿ ತಂದೆ ರಂಜಿಪ ಮುದ್ರಿಕೆಯ ಅವನಿಜಾತಳಿಗಿತ್ತು ಬಂದೆ1 ಹೆಸರಾದ ಕೌರವ ಬಲವ ಸವುರಿ ನೀ ಉಸುರಿಲ್ಲದವರನು ನೆಗಹಿ ನೀ ಮಿಸುಕದೆ ಅಸುರರ ಅಸುವ ಪೀಡಿಸಿದೆ ಅಸುನಾಥ ಹರಿಸಿ ನೀನತುಳ ತೋಷವನಿತ್ತೆ 2 ಧರೆಯೊಳು ನೀ ವರ ಕಾಪ್ಯಪುರದಿ ಜನಿಸಿ ಹರಿಮತವ ಹರಹಿ ಹರಿಸಿ ರೂಹುಗೊಳಿಸಿ ಹರಿಪರಬ್ರಹ್ಮನೆಂದರಿಯೆ ಜಗಕ್ಕೆ ಕೋರಿ ನರಸಿಂಹವಿಠಲನನುಗಾಲ ತೋರುವನು ದಾರಿ 3
--------------
ನರಸಿಂಹವಿಠಲರು
ವಿಧಿ ನಿಷೇಧವು ನಿನ್ನ ಸ್ಮರಣೆ ವಿಸ್ಮರಣೆಯ- ಲ್ಲದಲರಿಯರೇನೊಂದು ಹರಿಭಕ್ತರು ಪ ಮಿಂದದ್ದೆ ಗಂಗಾದಿ ತೀರ್ಥಗಳು ಸಾಧುಗಳು ಬಂದದ್ದೆ ಪುಣ್ಯ ಕಾಲವುಗಳು ಅವರು ನಿಂದದ್ದೆ ಗಯ ವಾರಣಾಸಿ ಕುರುಕ್ಷೇತ್ರಗಳು ಬಂದು ಪೋಗಲು ಅದುವೆ ರಾಜಬೀದಿ 1 ಕಂಡು ಕಂಡದ್ದೆಲ್ಲ ಕಮಲನಾಭನ ಮೂರ್ತಿ ಮಂಡಿಸಿದ ಶಯನ ದಂಡಪ್ರಣಾಮ ತಂಡತಂಡದ ಕ್ರಿಯೆಗಳೆಲ್ಲ ಹರಿ ಪೂಜೆಗಳು ಮಂಡೆ ಬಾಗಿಸಿ ಸಮಿಪ ಶರಣ ಜನಕೆ 2 ನಡೆವ ನಡೆಯೆಲ್ಲ ಲಕ್ಷ ಪ್ರದಕ್ಷಿಣೆ ಮತ್ತೆ ನುಡಿವ ನುಡಿಯೆಲ್ಲ ಗಾಯಿತ್ರಿ ಮಂತ್ರ ಒಡೆಯ ಶ್ರೀಕಾಂತನ್ನ ಅಡಿಗಡಿಗೆ ಸ್ಮರಿಸುತಿಹ ದೃಢ ಪ್ರಜ್ಞರೇಂಗೈಯ್ಯಲದುವೆ ಮರ್ಯಾದೆ 3
--------------
ಲಕ್ಷ್ಮೀನಾರಯಣರಾಯರು
ವಿಧಿಗೆ ದಯವಿಲ್ಲವಕ್ಕ ಎಮ್ಮ ಮ್ಯಾಲೆ ಯದುಪತಿಯನಗಲಿಸಿದ ಒಮ್ಮಿಂದಲೊಮ್ಮೆ ಅ.ಪ. ಎವೆಯ ಮರೆಯ ಮಾತನಾಡಿ ಪೋದ ಯಾಕೋ ವಿಧಿಯೇಸುಳಿಗುರುಳು ಕಡೆಗಣ್ಣ ನೋಟದಿಂದಲಿಕವಕವಿಸಿ ನಗುವ ಮುದ್ದು ಮುಖವನುತವಕದಿಂದ ಮರಳಿ ಮರಳಿ ನೋಡದ್ಹೋದೆವೆ 1 ಹಕ್ಕಿಯ ಮ್ಯಾಲುಳ್ಳ ದಯ ನಮ್ಮ ಮ್ಯಾಲೆಇಕ್ಕದೇಕೆ ಹೋದ್ಯೋ ವಿಧಿಯೇರೆಕ್ಕೆ ಎರಡುಳ್ಳರೆ ಮಧುರೆಗೆ ಪೋಗಿಫಕ್ಕನೆ ಶ್ರೀ ಹರಿಯೊಡನೆ ಕೂಡುತಿದ್ದೆವಲ್ಲ 2 ತಂಗೀ ನಮ್ಮೆದೆಯು ಕಲ್ಲಾಗಿ ಇದ್ದೇವೆಹಿಂಗುವರೆ ಸಖಿಯರು ಒಮ್ಮಿಂದಲೊಮ್ಮೆರಂಗವಿಠಲನ್ನ ಅಂಗ ಸಂಗವ ಬಿಟ್ಟು ಇಂಥಭಂಗ ಜೀವ ಸುಡ ಸುಡ ಸುಡಲ್ಯಾತಕೋ 3
--------------
ಶ್ರೀಪಾದರಾಜರು
ವಿನುತ ಸಿರಿ | ರಾಮ ವಿಠಲ ಕಾಯೋ ಪ ಈ ಸತೀ ಮಣಿಯ ನೀ | ಸಲಹಬೇಕೆಂದುಶೇಷ ಸಂಜ್ಞಿತ ಹರಿಯೆ | ಪ್ರಾರ್ಥಿಸುವೆ ಧೊರೆಯೇ ಅ.ಪ. ಅಮೃತ ಕೂರ್ಮ | ರೂಪದಿಂದರುಹೀಉಪದೇಶ ನೀಡ್ವಗುರು | ರೂಪವನೆ ತೋರಿಸುತಅಪರಿಮಿತ ಕಾರುಣ್ಯ | ರೂಪನಾಗಿರುವೆ 1 ಪರಮ ಗುರು ನಿಜ ರೂಪ | ಎರಡು ಬಾರಿಯು ತೋರಿಸರಸನಾಬ್ಯಾದಿ ಹರುಷ | ಬೀರ್ದೆ ಭಯಹಾರೀಕರುಣವೆಂತುಟೊ ನಿನಗೆ | ಸುರಸಿದ್ಧ ಸಂಸೇವ್ಯಶಿರಿ ರಮಣ ಶ್ರೀರಾಮ | ಪರಮ ಪುರುಷನೆ 2 ಈ ಸತೀಮಣಿ ಬಯಕೆ | ನೀ ಸಲಿಸಿ ಲೌಕಿಕದಿಲೇಸು ಹೊಲ್ಲೆಗಳೆಂಬ | ಪಾಶಗಳ ಬಿಡಿಸೀದೋಷ ದೂರನೆ ಹರಿಯೆ | ನೀ ಸಲಹೆ ಪ್ರಾರ್ಥಿಸುವೆದಾಶರಥೆ ಪೊರೆ ಇವಳ | ಮೇಶ ಮಧ್ವೇಶಾ 3 ಮಧ್ವಮಾರ್ಗದಿ ಇಹಳು | ಶುದ್ಧ ಭಕ್ತಿಜ್ಞಾನಸಿದ್ಧಿಸುತ ಇವಳಲ್ಲಿ | ಉದ್ಧರಿಸೊ ಹರಿಯೇ |ಕೃದ್ಧ ಖಳ ಸಂಹಾರಿ | ಸದ್ಧರ್ಮ ಪಥತೋರಿಅಧ್ವಯನೆ ತವ ನಾಮ | ಶುದ್ಧ ಸುಧೆ ಉಣಿಸೋ 4 ಸರ್ವವ್ಯಾಪ್ತನೆ ದೇವ | ಪವನಾಂತರಾತ್ಮಕನೆದರ್ವಿ ಜೀವಿಯ ಕಾಯೊ | ಶರ್ವವಂದ್ಯಾ |ಸರ್ವ ಸುಂದರ ಗುರು | ಗೋವಿಂದ ವಿಠ್ಠಲನೆಈ ವಿಧದ ಬಿನ್ನಪವ | ನೀವೊಲಿದು ಸಲಿಸೋ 5
--------------
ಗುರುಗೋವಿಂದವಿಠಲರು
ವಿಪರೀತ ಮತಿವಂತೆ ಸರಸ್ವತಿಯೆ ನಿನ್ನ ಕೃಪೆ ಬಯಸಿ ಭಜಿಸುವೆನು ಸಫಲನೆನಿಸೆನ್ನ ಪ ಶುಂಭಾರಾವಣಗಿತ್ತ ಮತಿಯೆನಗೆ ಬೇಡಮ್ಮ ಗುಂಭದಿಂ ವಿಭೀಷಣಗೆ ಕೊಟ್ಟ ಮತಿ ನೀಡು ಕುಂಭಕರ್ಣನಿಗಿತ್ತ ಮತಿ ಕನಸಿನಲಿ ಬೇಡ ಕುಂಭಿನಿಯೊಳ್ಹನುಮನಂಥ ಮತಿ ನೀಡಿ ಸಲಹು 1 ಕೀಲ ಮಾರೀಚಗಿತ್ತ ಕೀಳಮತಿ ನೀಡದಿರು ಪಾಲಿಸು ಜಟಾಯುನಂಥ ಶೀಲಮತಿಯೆನಗೆ ವಾಲಿಗೆ ನೀನಿತ್ತ ಜಾಳುಮತಿ ನೀಡದೆ ಸುಗ್ರೀವಗಿತ್ತ ಮೇಲುಮತಿ ನೀಡು 2 ಮೂಡಣಾಧಿಪನಂತೆ ಕೇಡುಮತಿ ನೀಡದೆ ರೂಢಿಯೊಳ್ಕರಿಯಂಥ ಗಾಢಮತಿ ನೀಡು ನೀಡದಿರು ಶಶಿಯಂಥ ಖೋಡಿ ದುರ್ಮತಿಯನು ನಾಡಿನಲಿ ಧ್ರುವನಂತೆ ಮಾಡುದಯ ಸುಮತಿ 3 ದುರುಳ ಕೌರವನಂತೆ ಕಿರಿಮತಿಯ ಕೊಡಬೇಡ ಪರಮ ಪಾಂಡವರಂಥ ಖರೆಮತಿಯ ನೀಡು ಧರೆಯೊಳ್ಜಯದ್ರಥನಂತೆ ನರಿಮತಿಯ ಕೊಡದಿರು ವರ ವಿದುರನಂತೆ ಬಲು ನಿರುತಮತಿ ನೀಡು 4 ಮರವೆ ಮತಿ ಒಲ್ಲೆನೌ ಹರಿಯ ನಿಜ ದಾಸರಂಥ ಸ್ಥಿರತಿಮತಿಯ ನೀಡು ಹರಣ ಪೋದರು ಬಿಡದೆ ವರದ ಶ್ರೀರಾಮನಡಿ ಅರಿವಿಟ್ಟು ಭಜಿಸುವಪಾರಮತಿ ನೀಡು 5
--------------
ರಾಮದಾಸರು
ವಿಬುಧ ಪ್ರಿಯ ವಿಠಲ | ಶುಭದ ಪೊರೆ ಇವನಾ ಪ ಅಬುಜ ಜಾಂಡೋದರನೆ | ಕುಬುಜೆ ಸದ್ ವರದಾ ಅ.ಪ. ದಾಸನಾಗಲು ಇವಗೆ | ಆಶೆ ಪ್ರೇರಕನಾಗಿವಾಸು ದೇವಾಖ್ಯ ತೈ | ಜಸನೆ ಕಾರ್ಯರೂಪಿಸೂಸಿತವ ರೂಪವನು | ಲೇಸಾಗಿ ತೋರಿಸೆಹೆಕೇಶವನೆ ಅದನೆ ಉಪ | ದೇಶಿಸಿಹೆ ಹರಿಯೆ 1 ಪ್ರೀಯ ಅಪ್ರೀಯ ಉ | ಭಾಯಾನು ಭವದಲ್ಲಿಆಯುತನು ನೀನಾಗಿ | ಉದ್ವೇಗ ಕೊಡದೇನಿಯುತಕರ್ಮದಿ ರತನ | ದಯದಿಂದ ನೀಮಾಡಿಹಯಮೊಗಾಖ್ಯ ಹರಿಯೆ | ಕೈಯಪಿಡಿ ಇವನಾ 2 ಲೋಕವಾಕ್ಯದಿ ವಿರಸ | ಲೋಕೈಕನಾಥನುವಾಕ್ಯದೊಳು ರತಿಯನ್ನೆ | ನೀ ಕೊಟ್ಟಿ ಕಾಯೋ |ಮಾಕಳತ್ರನದಾಸ | ಸಂಕುಲದಿ ಸದ್‍ಭಕ್ತಿಶ್ರೀಕರನೆ ನೀನಿತ್ತು | ಸಾಕ ಬೇಕಿವನಾ 3 ಮಧ್ವಮತದಲಿ ದೀಕ್ಷೆ | ಶುದ್ಧ ಹರಿ ಗುರುಭಕ್ತಿಅದ್ವೈತ ಕ್ರಯವರಿಯೆ | ವಿದ್ಯೆ ಸಂಘಟಿಸೀಕೃದ್ಧಖಳ ನಿವಹಗಳ | ಪ್ರಧ್ವಂಸಗೈಯುತಲೀಉದ್ದರಿಸೋ ಇವನನ್ನು | ಮಧ್ವಾಂತರಾತ್ಮ 4 ವೇದ ಕದ್ದೊಯ್ದವನ | ಬಾಧೆ ನೀ ಪರಿಹರಿಸಿಸಾದುಗಳ ಪೊರೆದಂತೆ | ಆದರಿಸಲಿವನಾಮೋದಿ ಗುರು ಗೋವಿಂದ | ವಿಠಲನೆ ಬಿನ್ನವಿಪೆಮೈದೊರಿ ಸಲಹುವುದು | ಸಾಧುವಂದಿತನೇ 5
--------------
ಗುರುಗೋವಿಂದವಿಠಲರು
ವಿಭೂತಿ ತುಂಬಿ ತಾಂಡುವರೇ | ಪ್ರೇತಗಳ ಹುಯ್ಯಲ್ಲಿ ಗೋ ಎಂದು ನಿಡಿದವರೇ ಸುಯ್ಯಲ್ಲಿ ಸೋಂಕಲಿಸದೆ ಘನದ ಯೋಗದಲಿದ್ದು ನೋಡ ಬಂದ ಕಂತುನ ನೋಡಿ ಬೂದಿ ಮಾಡುವರೇ ಪ ಭಿಲ್ಲನಾಗಿ ಕುಲವ ಕಳೆವರೆ | ನರನ ಬಲವು ಮಲ್ಲಯುದ್ಧ ಮಾಡಿ ತಿರುವರೆ | ಬಲ್ಲಾತನಾಗಿ ಫುಲ್ಲನೇತ್ರಗೆ ರತಿ ಗೆಲುವರೆ || ಸಲ್ಲದಂಗವ ತೋರಿ ನೀ ತಿರುಕನಾಗಿ ತಿರುಗುತ ಮತ್ತೆಲ್ಲ ಮುನಿಗಳ ಸತಿಯರ ಧರ್ಮವನಳಿವರೆ 1 ಕಣ್ಣಿಲಿ ಕಿಚ್ಚು ಗರೆವರೆ | ವರೇಣ್ಯನಾಗಿಹೆಣ್ಣಿಗೆಯ ರಂಗ ಮಾರುವರೆ ಶ-ರಣ್ಯನಾಗಿ ಸಣ್ಣವನ ಶಿರವ ತರುವರೆ |ಮಣ್ಣಿನ ಭಂಡಿಯನೇರಿ ಕಲ್ಲಿನ ಬಿಲ್ಲನೇರಿಸಿ |ಮುಪ್ಪುರಗಳ ಗೆಲಿದು ಸುಡುಗಾಡ ಸೇರುವರೆ 2 ಬತ್ತಲೆ ಕುಣಿವುತಲಿರುವರೆ | ಸ್ಮøತಿಕತ್ತಿನಾಗಿ ಎತ್ತನೇರಿಕೊಂಡು ಮೆರೆವರೆ |ಪುಣ್ಯಾತ್ಮನಾಗಿ | ಸತ್ತನೀ ಚರ್ಮವ ಪೊರುವರೆ |ಉತ್ತಮ ರುಕ್ಮವರ್ಣದ ಜಡೆಯುಳ್ಳ ಸದಾಶಿವನ |ನಂಜಿಗಂಜದೆ ಸವಿಮಾಡಿ ಬಿಗಿಬಿಗಿ ಸುರಿವರೆ 3
--------------
ರುಕ್ಮಾಂಗದರು
ವಿಮಲಮಹಿಮನೆ ದಾಸನಾಸೆಪೂರೈಸೊ ಅಮಿತ ನಿಮ್ಮಯ ಬಿರುದು ಸತ್ಯವೆಂದೆನಿಸೊ ಪ ಕಷ್ಟಹರ ನೀನಹುದೆ ದಿಟ್ಟತನ ಕೊಡುಯೆನಗೆ ಶಿಷ್ಟರೊಡೆಯ ನೀನಹುದೆ ಗಟ್ಟಿಮನವ ಪಾಲಿಸು ಇಷ್ಟಪೂರ್ಣ ನೀನಹುದೇ ಕೊಟ್ಟು ರಕ್ಷಿಸೆನ್ನ 1 ದೀನರಾಸ್ಪದನಹುದೇ ಧ್ಯಾನ ದಯೆ ಪಾಲಿಸೈ ಗಾನಲೋಲಹುದೆ ನೀ ಜ್ಞಾನವನು ನೀಡೊ ಮಾನರಕ್ಷ ನೀನಹುದೇ ಅಭಿಮಾನಯೆನದಿರೆನ್ನ ಧ್ಯಾನಿಕಧೇನಹುದೇ ಆನಂದ ನೀಡೊ 2 ನ್ಯಾಯವಂತ ನೀನಹುದೇ ಮಾಯೆಮೋಹವನು ಬಿಡಿಸು ಪಾವನಾತ್ಮ ನೀನಹುದೇ ಸಾವು ಹುಟ್ಟು ಗೆಲಿಸು ಜಯವಂತ ನೀನಹುದೇ ದೇಹಿಯೆನಿಸದಿರಲ್ಪರಿಗೆ ಕಾವದೇವ ನೀನಹುದೇ ಭಾವದ್ವಾಸಿಸೆನ್ನ 3 ಪೃಥ್ವಿ ವ್ಯಾಪಕನಹುದೇ ಚಿತ್ತಶುದ್ಧಮಾಡೆನ್ನ ಸತ್ ಚಿತ್ತ ನೀನಹುದೇ ಸತ್ಸಂಗ ನೀಡೊ ಭಕ್ತವತ್ಸಲನಹುದೇ ಅನಿತ್ಯಗುಣ ಬಿಡಿಸೆನ್ನ ಕರ್ತನು ನೀನಹದೇ ಸತ್ಪಥದೆನ್ನಿರಿಸೊ 4 ಅಸಮಕರುಣಹುದೇ ನೀ ಪುಸಿಗೊಲಿಸಿದಿರು ಎನ್ನ ದೋಷಹರ ನೀನಹುದೇ ಹಸನೆನಿಸು ಎನ್ನ ದಾಸರಭಿಮಾನ್ಯಹುದೇ ಪೋಷಿಸೆಲೊ ತವಪಾದ ಧ್ಯಾನದಿರಿಸೆನ್ನ ಶ್ರೀಶ ಶ್ರೀರಾಮ5
--------------
ರಾಮದಾಸರು
ವಿರೋಧವ್ಯಾತಕಯ್ಯ ನಿಮಗಿದರೊಳು ಪ ಪರಂಪರದ ಸಂಪ್ರದಾಯಕೆ ನಿಮಗೆ ಅ.ಪ ಈಶ ನಾನೆಂಬುವದೊಂದು ಸರ್ವೇಶ ಹರಿಯಂಬೊದೊಂದು ಲೇಸಾಗಿ ಹೆಚ್ಚು ಕಡಮೆಗಳ ತಿಳಿಯುವದಿನ್ನೊಂದು 1 ಈ ಮೂರು ಮತಗಳಿಗೆ ಪ್ರೇಮವಾದಭಿಪ್ರಾಯಗಳು ನೇಮನೇಮವಾಗಿಟ್ಟು ಕೊಂಡಿರುತಿಹರೆಲ್ಲರು 2 ನಿಮ್ಮ ನಿಮ್ಮ ಮನಗಳಿಗೆ ಸಮ್ಮತವಾಗುವ ಪರಿ ಬ್ರಹ್ಮ ಜ್ಞಾನವೊಂದು ಸಂಪಾದಿಸಿದರೆ ಸಾಕು 3 ಸರಿಯಾದರ್ಥ ತೋರಿ ದಾರಿಯ ಕೊಡುವುದು 4 ಧೀರ ಶ್ರೀಗುರುರಾಮವಿಠ್ಠಲನೊಬ್ಬನೆ 5
--------------
ಗುರುರಾಮವಿಠಲ