ಒಟ್ಟು 56123 ಕಡೆಗಳಲ್ಲಿ , 139 ದಾಸರು , 12212 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೊಟ್ಟ ಭಾಗ್ಯವೆ ಸಾಕೋ ಶ್ರೀ ಪ ಕೃಷ್ಣನ ದಯಬೇಕೋ ದೇವ ಅ.ಪ ಸಾಸಿರ ಬಂದರೆ ಶಾಂತಿಯೆಂದರಿತೆನೊ ಸಾಸಿರ ಬಂದಿತು ಶಾಂತಿ ಕಾಣಲಿಲ್ಲ ಸಾಸಿರ ಸಾಸಿರವೇಸು ಬಂದವೋ ಕ್ಲೇಶವು ಏರಿತು ಮೋಸಹೋದೆನೊ 1 ಗಾಳಿಯ ಗುದ್ದಿ ಕೈ ಕೀಲು ಮರಿಯಿತೊ ಕೇಳುವುದಿಲ್ಲವೊ ನಾಳಿನ ಕೂಳನು ಕಾಲಕಾಲಕೆ ಹುಲಿ ಹಾಲನು ತರುತಿಹ ಬಾಲಗೋಪಾಲನ ಕೇಳಿ ಮೋಸಹೋದೆ 2 ಬೇಡವೆನ್ನುವರಿಗೆ ನೀಡುವ ದೊರೆ ನೀ ರೂಢಿಯ ಬಲ್ಲೆನೋ ಕಾಡುವುದಿಲ್ಲವೊ ನೀಡಿದ ಭಾಗ್ಯವು ಕೇಡುತರದೆ ಕಾ ಪಾಡಬೇಕೆಲೊ ಪ್ರೌಢÀ ಪ್ರಸನ್ನನೆ 3
--------------
ವಿದ್ಯಾಪ್ರಸನ್ನತೀರ್ಥರು
ಕೊಟ್ಟರೂ ಸರಿ ನೀನು ಕೊಡದಿದ್ದರೂ ಸರಿ ಕೆಟ್ಟ ಮನುಜರ ಕಾಲಕಟ್ಟರು ನಿನ್ನ ಭಕ್ತರು ನೀ ಕೊಟ್ಟುದೆ ಎಮಗಧಿಕವೆಂದು ತಿಳಿದು ನೀ ಕೊಟ್ಟಷ್ಟಕ್ಕೆ ಸಂತಸದಿ ಸ್ವೀಕರಿಸುವರು ಕಾಲ ಏಳು ಬೆಟ್ಟದೊಡೆಯ ವೆಂಕಟೇಶ
--------------
ಸರಸ್ವತಿ ಬಾಯಿ
ಕೊಟ್ಟಿಗೋತ್ಸವ ಗೀತೆ ಕೊಟ್ಟೊಗೋತ್ಸವ ನೋಡಿ ಸೃಷ್ಟಿಗೀಶ್ವರನ ಪ. ವಾಸುದೇವನ ಸಹಸ್ರಸ್ತಂಭಮಂಟಪವ ದಾಸರು ಬಂದು ಶೃಂಗಾರವ ಮಾಡಿ ದೇಶದ ಮೇಲುಳ್ಳ ಬೊಂಬೆಗಳನು ರಚಿಸಿ ಲೇಸಾದ ಮೇಲುಕಟ್ಟುಗಳ ಕಟ್ಟಿದರು 1 ಸೃಷ್ಟಿಗೀಶ್ವರನಾದ ರಂಗನಾಥನಿಗೆ ಕೊಟ್ಟಿಗೋತ್ಸವವನ್ನು ನಡೆಸಬೇಕೆನುತ ಕಟ್ಟಿ ಕಂಕಣವನ್ನು ನಾಲ್ಕುವೇದಗಳಿಂದ ಭಟ್ಟರು ಓದಿ ಪೇಳಿದರು ಸಂಭ್ರಮದಿ 2 ವಜ್ರದ ಕಿರೀಟವಿಟ್ಟು ರತ್ನದಂಗಿಯ ತೊಟ್ಟು ಅರ್ಜುನಸಖ ಸಂಭ್ರಮದಲಿ ಪೊರಟು ಸ್ವರ್ಗದ ಬಾಗಿಲೊಳಗೆ ತಾ ನಿಂದು ಮೂರ್ಜಗವೆಲ್ಲ ಮೋಹಿಸುತಲೆ ಬಂದು 3 ಮಂದಹಾಸದಲಿ ನಿಂದು ಮಂಟಪದಲಿ ಬಂದ ಆಳ್ವಾರರಿಗಾಸ್ಥಾನವಿತ್ತು ಚಂದದಿಂದ ದಿವ್ಯ ಪ್ರಬಂಧವ ಕೇಳಿ ಒಂದುಅಂಕಣ ಬಿಡದೆ ಬಂದ ಶ್ರೀರಂಗ 4 ಸಂಕ್ರಾಂತಿಯಲಿ ಶಂಕರನ ಪ್ರಿಯನು ಶಂಕೆ ಇಲ್ಲದೆ ಆಭರಣವನು ಧರಿಸಿ ಪಂಕಜಮುಖಿಯರೊಡಗೊಂಡು ಹರುಷದ ಲಂಕಾರವಾಗಿ ಬಂದನು ಮಂಟಪಕೆ 5 ಮತ್ತೆ ಮರುದಿನದಲ್ಲಿ ಭಕ್ತವತ್ಸಲನು ಮುತ್ತಿನಅಂಗಿ ಮುಂಡಾಸನಳವಡಿಸಿ ಮುತ್ತಿನಛತ್ರಿ ಚಾಮರ ಸೂರೆಪಾನದಿ ಮುತ್ತರಸಿಯ ಮಂಟಪಕೆ ನಡೆತಂದ 6 ಅರ್ಥಿಯಿಂಬಂದು ತಾ ಅಶ್ವವನೇರಿ ಮತ್ತೆ ಬೇಟೆಯಮೃಗವನೆ ಕೊಂದು ಸಂ ಕ್ರಾಂತಿಯ ಪಾರ್ವೇಟೆಯನಾಡಿ ಸಂತೋಷದಿ ಬಂದ 7 ನಾರಿವೇಷವ ಆಳ್ವಾರರಿಗೆ ಧರಿಸಿ ಪೇರಿಯ ತಾ ಬಿಟ್ಟು ತೇಜಿಯನೇರಿ ಚೋರತನವ ಮಾಡಿದ ಭಕ್ತರಿಗೆ ಮೂಲಮಂತ್ರವ ಪೇಳಿ ಮುಕ್ತಿಯನಿತ್ತ 8 ಮಿಂದು ಮಡಿಯನುಟ್ಟು ಅಂದು ರಾತ್ರಿಯಲಿ ಹ ನ್ನೊಂದು ವಿಧ ಭಕ್ಷ್ಯಗಳನು ತಾ ಗ್ರಹಿಸಿ ಬಂದ ಆಳ್ವಾರರಿಗೆ ಮುಕ್ತಿಯನಿತ್ತು ಬಂದು ಆಸ್ಥಾನದಿ ನಿಂದ ಶ್ರೀರಂಗ 9 ಭಕ್ತರು ಮಾಡಿದ ಪ್ರಬಂಧವನೆಲ್ಲ ಭಕ್ತಿಯಿಂದಲೆ ಪೇಳಿದ ಆಚಾರ್ಯರಿಗೆ ಯುಕ್ತಿ ತೋರಿದ ಪರಾಶರವ್ಯಾಸರಿಗೆ ಬ್ರಹ್ಮ ರಥವನಿತ್ತ ಬ್ರಹ್ಮಾಂಡರೂಪ 10 [ಶೌ]ರಿಯು ತಾನಿರಲು ಮೇಘಮಂಡಲದಂತೆ ತೋರುವುದು ತಾರಕೆಯಂತೆ ಮೈಯುಡುಗೆ ವಾರಿಜನಾಭನ ಮುತ್ತಿನಂಗಿಯ ನೋಡು ವವರಿಗೆ ತಾ ಆನಂದವಾಗಿಹುದು 11 ಕ್ಷೀರಸಾಗರದಲ್ಲಿ ಪವಡಿಸಿಹ ಹರಿಗೆ ಕ್ಷೀರಬಿಂದುಗಳು ಮೈಯೊಳಗೆ ಬಿದ್ದಂತೆ ವಾರಿಜನೇತ್ರಗೆ ವಜ್ರದನಾಮವು ಧರಿಸಿದರು ಹೇಮದ ಪಾದಹಸ್ತಗಳ 12 ಮುತ್ತಿನಂಗಿಸೇವೆ ನೋಡಬೇಕೆನುತ ಹತ್ತುಸಾವಿರ ಪ್ರಜೆ ಬಂದು ನಿಂತಿರಲು ಇತ್ತು ಕಾಣಿಕೆಯನು ನೋಡಿ ವೆಂಕಟರಂಗನ ಮುಕ್ತರಾದೆವೆಂದು ಭಕ್ತರು ನುಡಿದರು 13
--------------
ಯದುಗಿರಿಯಮ್ಮ
ಕೊಟ್ಟು ಕೊಂಡಾಡ ಬೇಕು ಘಟ್ಟಿಕೊಂಡು ಗುರುಭಕ್ತಿ ಗುಟ್ಟಿನೊಳು ನೋಡ ಬೇಕು ಇಟ್ಟು ದೋರುತದ ಮುಕ್ತಿ ಧ್ರುವ ಕೊಟ್ಟು ಗುರುವಿಗೆ ಮನಕೊಳ್ಳಬೇಕು ನಿಜಘನ ಇಟ್ಟಾದೆ ನಿಜಧನ ಪಡಿಬೇಕು ಸಾಧನ ಕೊಟ್ಟಾಂಗ ಕೊಂಬು ಖೂನ ಹೇಳಿ ಕೊಡುವ ಗುರು ಜ್ಞಾನ ಮುಟ್ಟಿ ಭಜಿಸುದು ಪೂರ್ಣ ಸ್ವಾಮಿ ಶ್ರೀನಾಥಾರ್ಪಣ 1 ಕೊಟ್ಟು ಕೊಂಡು ನೋಡಿ ನೇಮ ಸೃಷ್ಟಿಯೊಳು ಸುಧಾಮ ಕೊಂಡ ದಿವ್ಯಗ್ರಾಮ ಕೊಟ್ಟು ಶ್ಯಾಖದಳವಮ್ಮ ದ್ರೋಪದ್ಯಾದಳು ಸಂಭ್ರಮ ಕೃಷ್ಣಗಿದೆ ಅತಿ ಪ್ರೇಮ ಶಿಷ್ಟ ಜನರ ಸುಕ್ರಮ 2 ಮುಕ್ತಿಗಿದೇ ಮೇಲು ಭಕ್ತಿನೋಡಿ ಸಜ್ಜನರ ಯುಕ್ತಿ ಭೋಕ್ತ ಬಲ್ಲ ಗುರುಮೂರ್ತಿ ಮಾಡಬೇಕು ಭಾವ ಭಕ್ತಿ ಮುಕ್ತ ಜನರಿಗಿದೇ ಗತಿ ಕೊಟ್ಟು ಕೊಂಡಾಡುವ ಶಕ್ತಿ ಅರ್ತು ಇದೇ ಮಹಿಪತಿ ಕೊಂಡಾಡೋ ಗುರುಸ್ತುತಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕೊಂಡಜ್ಜಿ ಶ್ರೀ ಜನಾರ್ದನ ಸ್ವಾಮಿ ಸ್ತೋತ್ರ ಎಂಥಾ ಸುಂದರನೊ ಶ್ರೀಕಾಂತನೂ ||ಅ|| ಸಂತರ ಮನೋರಥ ಸಂತತ ಪಾಲಿಸಿಪಂಥಾವ ಗೆಲಿಪ ಮಹಾಂತನೋ - ಶ್ರೀಕಾಂತನೂ ಅ.ಪ. ಮಾನಿನೀಯಳ ಬಿಟ್ಟು | ಮೌನಿಯಂದದಿ ನೀನುಕಾನನವನೆ ಸೇರಿ ನೆಲೆಸೀರ್ಪುದೂ | ಮುನಿಜನ ವಂದ್ಯಾ 1 ತೊಂಡ ಜನರು ನಿನ್ನ | ಬಂಡುಣಿಯಂದದಿಪುಂಡು ಮಾಡುವರೆಂದು ಬಂದೆಯಾ | ಪುಂಡರಿಕಾಕ್ಷಾ 2 ಹಿಂಡು ಭಕ್ತರು ತಮ್ಮ | ದಿಂಡು ಮಂಡಿಪರೆಂದು ಕೊಂಡಜ್ಜಿಯಲಿ ನೆಲಿಸೀದ್ಯಾ | ಪಾಂಡವ ಪ್ರೀಯಾ 3 ವೇಲಾಪುರಿಗೆ ಪೋಗ | ಲೊಲ್ಲೆನೆಂದೆನುತಲಿಇಲ್ಲೇ ನೆಲಸಿ ಪೂಜೆಗೊಂಬುದು ಫಾಲಾಕ್ಷ ಪ್ರಿಯನೇ 4 ಎಲ್ಲಿಪೋದರೂ ಬಿಡ | ಲೊಲ್ಲರೂ ನಿನ್ನ ಜನಸಲ್ಲಿಸೆನ್ನಯ ಮನೋಭೀಷ್ಟವ | ಹೇ ಜನಾರ್ಧನಾ 5 ಆರು ಕಾಯುವರಿಲ್ಲ | ಸಾರಿದೆ ತವ ಚರಣಪೋರನಾಮಯ ಹರಿಸಯ್ಯಾ | ನಾರದ ವಂದ್ಯಾ 6 ಗುರುಗಳಂತರ ಗುರು | ಗೋವಿಂದ ವಿಠಲನೆಪರಿಪರಿ ನಿನ ಕೀರ್ತಿ ನುಡಿಸಯ್ಯಾ | ಸುರವರ ವಂದ್ಯಾ7
--------------
ಗುರುಗೋವಿಂದವಿಠಲರು
ಕೊಡಬೇಕು ದಾನಗಳ ಸತ್ಕಾರ್ಯಕೆಬಿಡಬೇಕು ಕೈಸಡಿಲು ಮೋಕ್ಷಸಾಧನೆಗೆ ಪಬೇಡದಲೆ ಕೊಡುವವರು ರೂಢಿಯೊಳಗುತ್ತಮರುಬೇಡಿದರೆ ಕೊಡುವ ದಾನಿಯು ಮಧ್ಯಮಬೇಡಿದರು ಕಾಡಿದರು ಕೊಡದವರು ಅಧಮರುಕೊಡೆದೆ ಬಡಬಡಿಸುವವರು ಮೂರ್ಖ ಅಧಮಾಧವುರು 1ದುಡ್ಡು ಇದ್ದರೆ ಮಾತ್ರ ದೊಡ್ಡವರು ಅನಬೇಡದುಡ್ಡಿದ್ದು ದಾನ ಧರ್ಮವು ನಡೆಯಬೇಕುದುಡ್ಡು ಕಾಯುವ ಸರ್ಪಕ್ಕೆ ಇಹ'ಲ್ಲ ಪರ'ಲ್ಲಬಿದ್ದು ಹೋದರೆ ಅವರ ಬಾಯೊಳಗೆ ಮಣ್ಣು 2ಧನಿಕರಿಗೆ ಭೂಷಣವು ದಾನಧರ್ಮವು ಸದಾಧನ'ದ್ದ ಜಿಪುಣತಾ ಜೀವಂತ ಹೆಣವುಧನ'ದ್ದು ದಾನಮಾಡುವ ಪುಣ್ಯವಂತರಿಗೆಘನಮ'ಮ ನಮ್ಮ ಭೂಪತಿ'ಠ್ಠಲನೊಲಿಯುವನು 3ತಾುಯ ಹರಕೆ
--------------
ಭೂಪತಿ ವಿಠಲರು
ಕೊಡಲು ನೀನಾರು ಬಿಡಲು ನೀನಾರುಪೊಡವಿಗೊಡೆಯ ಶ್ರೀಹರಿ ಲೀಲೆಯದು ಪ ಪಾಡುವ ಪದ್ಯಗಳಲಿ ಭಾವವಾಗಿರುವನೋಡುವ ನೋಟಗಳ ನೋವು ಗ್ರಹಿಸುವನುಡಿವ ನುಡಿಯ ತಾತ್ಪರ್ಯವನರಿವನಾಡಿ ನರಗಳಂತೊಲಿವ ಆದಿಕೇಶವರಾಯ 2
--------------
ಕನಕದಾಸ
ಕೊಂಡಾಡಬಹುದೆ ಯತೀಂದ್ರ ಎನ್ನಾ ಪಾಂಡವಪ್ರಿಯನಾಭಜಕ ವಾದಿರಾಜಯತಿ ಪ ನಾನಾ ಜನುಮದಾ ಯೋನಿಮುಖದಲಿ ಬಂದು ಮಾನವಳಿದು ಜ್ಞಾನಶೂನ್ಯನಾಗಿಹ ಶ್ವಾನಮನದ ಮೂಢಮನುಷ್ಯನಾಗಿ ಹೀನ ಅಹಂಕಾರಪೂರಿತ ದೋಷಿಂiÀi1 ಅರಿಷಡ್ವರ್ಗದೊಳು ಸಿಲುಕಿ ನರಗುರಿಯಾಗಿ ಪರರವಾರ್ತೆಯ ಸವಿವ ಹಗಲು ಇರಳೂ ದುರುಳ ದುಶ್ಚೇಷ್ಟಿಕನು ಬಹುದುರಾತ್ಮನು ನಾನು ಗುರುಹಿರಿಯರಿಗೆ ಎರಗದ ಗೂಢಪಾಪಿಯನು 2 ಒಡೆಯ ವೈಕುಂಠ ವಿಠಲನ ಭಜಿಸದೆ ಪೊಡವಿಯೊಳು ಕ್ಷುದ್ರ ದೈವಗಳಿಗೆಲ್ಲ ಪೊಡಮಡುತಿಹೆ ಸ್ವಾಮಿದ್ರೋಹಿ ಗರುವಿಯಾ ಕಡುಪಾತಕನ್ನ ನಡತೆಯನು ನೀನರಿಯದಲೇ 3
--------------
ಬೇಲೂರು ವೈಕುಂಠದಾಸರು
ಕೊಂಡಾಡಲಳವೆ ನಿನ್ನಯ ಕೀರ್ತಿ ಭೂ- ಮಂಡಲದೊಳು ಹಯಗ್ರೀವಮೂರ್ತಿ ಪ. ವೇದಂಗಳ ಜಲದಿಂದ ತಂದೆ ನೀ ಪೋದ ಗಿರಿಯ ಬೆನ್ನೊಳಾಂತು ನಿಂದೆ ಮೇದಿನಿಯ ಕದ್ದೊಯ್ದನ ಕೊಂದೆ ಸಂ- ವಾದದಿಂದ ಕಂಬದಿಂದಲಿ ಬಂದೆ 1 ಚರಣಾಗ್ರದಲಿ ನದಿಯನು ಪೆತ್ತೆ ತೀಕ್ಷ್ಣ ಪರಶು ಪಿಡಿದು ಬಾಹುಜರ ಕಿತ್ತೆ ನೆರೆನಂಬಿದಗೆ ಸ್ಥಿರಪಟ್ಟವನಿತ್ತೆ ದೊಡ್ಡ ದುರುಳಕಾಳಿಂಗನ ಶಿರದಿ ನಿಂತೆ 2 ಪರವ್ರತೆಯರ ಮಾನಭೇದನ ಚತುರ ತುರಗವೇರಿ ನಲಿವನ ಕ್ಷಿತಿಯೊಳುತ್ತಮ ವಾದಿರಾಜನ ಸ್ವಾಮಿ ಸತತ ರಕ್ಷಿಪ ಶ್ರೀ ಹಯವದನ 3
--------------
ವಾದಿರಾಜ
ಕೊಂಡಾಡುವರ ಪ್ರಿಯನ ವಿಠ್ಠಲನ ಪ ಸಮಚರಣ ಭುಜನ ನಿಗಮಾ ಗಮತತಿಗೋಚರನಾ ಅಮಿತ ಪರಾಕ್ರಮನ ರುಕ್ಮಿಣಿ ರಮಣ ರವಿಕ್ಷಣನಾ ವಿಠ್ಠಲನ 1 ಕಾಮಿತಾರ್ಥ ಪ್ರದನ ಶ್ರೀ ತುಲಸೀ ಧಾಮ ವಿಭೂಷಿತನ ಪತಿ ಪಾಲನ ತ್ರಿಭುವನ ಸ್ವಾಮಿ ಚಿತ್ಸುಖಮಯನ ವಿಠ್ಠಲನ 2 ಗೋಕುಲ ಪೋಷಕನ ಮುನಿ ಪುಂಡ ರೀಕಗೋಲಿದು ಬಂದನ ಲೋಕವಿಲಕ್ಷಣನ ಪ್ರಣತರ ಶೋಕವಿನಾಶಕನ ವಿಠ್ಠಲನ 3 ವಿಧಿ ವಿಹ ಗೇಂದ್ರ ಮುಖಾರ್ಚಿತನ ಇಂದ್ರೋತ್ಪಲನಿಭನ ಗುಣಗಣ ಸಾಂದ್ರ್ರ ಸರ್ವೋತ್ತಮನ ವಿಠ್ಠಲನ 4 ಶ್ವೇತವಾಹನ ಸಖನ ಸತಿಗೆ ಪಾರಿ ಜಾತನ ತಂದವನಾ ವೀತ ಶೋಕ ಭಯನಾ ಶ್ರೀ ಜಗ ನ್ನಾಥ ವಿಠಲರೇಯನಾ 5
--------------
ಜಗನ್ನಾಥದಾಸರು
ಕೊಂಡಿರ್ಯಾ ನೀವು ಕೊಂಡಿರ್ಯಾ ಮಂಡಲದೊಳು ವಸ್ತು ಕೊಂಡಿರ್ಯಾ ಧ್ರುವ ಕೊಳಬೇಕಾದರ ನೀವು ತಿಳಿದುಕೊಂಡು ಬನ್ನಿ 1 ತಿಳಿಯದಿದ್ದರೆ ಖೂನ ಕೇಳಿ ಸದ್ಗುರುವಿನ 2 ಬೆಲೆಯು ಹೇಳುವದಲ್ಲ ನೆಲೆಯ ತಿಳಿಯುವದಲ್ಲ 3 ಕೊಳಗ ಎಣಿಸುವುದಲ್ಲ4 ತೂಕ ಮಾಡುವುದಲ್ಲ ಲೆಕ್ಕ ಇಡುವುದಲ್ಲ 5 ಇಟ್ಟು ಮಾರುವದಲ್ಲ ಕೊಟ್ಟರ್ಹೋಗುವುದಲ್ಲ 6 ಪಂಡಿತರಿಗೆ ಪ್ರಾಣ ಕೊಂಡವರಿಗೆ ತ್ರಾಣ 7 ಹೇಳಿದ ನಾ ನಿಮಗೊಂದು ಸುಲಭವಾಗಿಂದು 8 ಒಮ್ಮನವಾದರ ಸುಮ್ಮನೆಬಾಹುದು 9 ಸಾಧುಸಜ್ಜನರಿಗೆ ಸಾಧ್ಯವಾಗುದಿದು 10ಸಾರಿ ಚೆಲ್ಲೇದ ಮಹಿಪತಿ ವಸ್ತುಮಯಮಿದು11
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕೊಡಿಸೊ ಅಂಕಿತವಾ ಗುರುರಾಯಾ ನಿನ್ನ ಅಡಿಗಡಿಗೆರಗಿ ನಾ ಬೇಡುವೆನಯ್ಯಾ ಪ ನಾ ಶರಣೆಂಬೆ ತಂದೆ ದರುಶನ ನುಡಿಯ ಪಾಲಿಸೋದಯದಿಂದ 1 ಎಂದು ಬಿಡದಲೇ ಕಾಡಿ ನೀ ದಯ ಮಾಡಿ 2 ಬೇಡ್ವೆ ಈ ಭಾಗ್ಯ ಯೋಗಿ 3 ಇಷ್ಟಾ ಪೂರೈಸೋ ನೀನು ನೋಡೊ ಸುರ ಕಾಮಧೇನು 4 ಅಂತರ್ಯಾಮಿ ಬಲ್ಲ ಇತ್ತರೆ ನಿನ್ನ ಕೇಳ್ವರಿಲ್ಲಾ 5
--------------
ಹನುಮೇಶವಿಠಲ
ಕೊಡು ಕಂಡ್ಯಾ ಹರಿಯೇ | ಶ್ರೀಪತಿ ಉತ್ತಮರ ಸಂಗತಿಯಲೆನ್ನಯಿಟ್ಟು ಪ ಬಂದು ಕುಳ್ಳಿರುವಲ್ಲಿ ಸಿಂಹಾಸನನಾಗುವೆನು | ನಿಂದಲ್ಲಿ ಮೆಟ್ಟುವ ಹಾವಿಗೆಯಾಗುವೆ | ಮಿಂದ ಬಚ್ಚಲಿಗೆ ಹಚ್ಚಿದ ಶಿಲೆಯಾಗುವೆ | ಗಂಧವಾಗುವೆ ನಿನ್ನ ಅಂಗಾಲಿಗೆ 1 ಉಂಬಲ್ಲಿ ಬಿದ್ದ ಎಂಜಲ ತಿಂದು ಬದುಕುವೆ | ಕರವ ತೊಳಿವೆ | ಅಂಬುಜ ಕುಸುಮವಾಗಿ ಹಾಸಿಕೆಯಾಗುವೆ ಬಾಯ | ದೊಂಬಲಿಗೆ ಕರವಡ್ಡಿ ಛಲ ಹೊರುವೆ2 ಪವಡಿಸುವ ಮನೆಯೊಳಗೆ ಸೂಜ್ಯೋತಿಯಾಗುವೆ | ಸಿರಿ ವಿಜಯವಿಠ್ಠಲ | ಜವನ ದೂತರನೊದದು ಸುಶುಚಿಯಾಗುವೆ3
--------------
ವಿಜಯದಾಸ
ಕೊಡು ಕೃಷ್ಣನೇ ಎನ್ನ ಸಾಲವ ಬೇಗ ಕೊಡದಿದ್ದರೆ ಬಿಡೆನೊ ಪ. ತಡ ಮಾಡಿದೊಡೆ ನಿನ್ನಾಟದ ಬೆಡಗನು ಪೊಡವಿಗೆ ತಿಳಿಸುವೆನು ಜೋಕೆ ಅ.ಪ. ನೀರ ಪೊಕ್ಕರು ಬಿಡೆ ನಿನ್ನ ಭವ ವಾರಿಧಿ ದಾಟಿಸುವೆಂಬೆ ಭಾರ ಪೊತ್ತರೆ ನೀನೇ ಎನ್ನ ಸಂಸಾರ ಭಾರಕೆಂಬೇ ದೇವ ಕೋರೆ ತೋರಲು ಅಂಜುವೆನೆ ಭೂಮಿಯ ಮೇರೆ ಸಿಲಿಕದೋಡಿದರೂ ದೃಢವನು ಕೊಡದಿದ್ದರೂ ಬಿಡೆ ನಾ 1 ಕಂಬದೊಳಡಗಲು ಬಿಡೆನು ನಿನ್ನ ಡಿಂಬ ಭಜಿಪೆ ನರಹರಿಯೆ ಸಂಭ್ರಮದೊಳು ಬ್ರಹ್ಮಚಾರಿಯಾಗಲು ನಿನ್ನ ಹಂಬಲು ಬಿಡೆ ಕೊಡಲಿಯನು ತೋರಲು ಕದಂಬ ಬಾಹು ಛೇದಿಸಲು ರಾಮ ಕೊಡದಿದ್ದರೆ ದೃಢನಾ ದೇವ 2 ಒಂದು ಸ್ಥಳದಿ ಪುಟ್ಟಿ ತಿಳಿಸದೆ ಇ ನ್ನೊಂದು ಸ್ಥಳಕೆ ಪೋಗೆ ಕೃಷ್ಣಾ ಅಂದದ್ವಸನ ಬಿಟ್ಟು ಸುಂದರಿಯರ ವ್ರತ ಛಂದದಿ ಕಳೆದುನೀ ತೇಜೀಯೇರಲು ಸುಂದರ ಶ್ರೀ ಶ್ರೀನಿವಾಸ ನಿನ್ನಡಿ ದೃಢ ಕೊಡದಿದ್ದರೆ ಬಿಡೆನಾ 3
--------------
ಸರಸ್ವತಿ ಬಾಯಿ
ಕೊಡು ಕೊಡು ಕೊಡು ಹರಿಯೆ ಕೆಡದಂಥ ಪದವಿಯ ಒಡನೆ ನಿಮ್ಮಂಘ್ರಿಯ ಕಡುದೃಢ ಭಕುತಿಯ ಪ ತ್ರಿಜಗ ಪರಿಪಾಲಕ ಭಜಿಸಿಬೇಡುವೆ ನಿಮ್ಮ ಭಜನೆಸವಿಸುಖಲಾಭ 1 ಪರಕೆ ಪರತರವೆನಿಪ ಪರಮಪಾವನ ನಿಮ್ಮ ಚರಿತ ಪೊಗಳಿ ಬಾಳ್ವ ಪರಮಾನಂದದ ಜೋಕು 2 ಯತಿತತಿಗಳು ಬಿಡದೆ ಅತಿ ಭಕ್ತಿಯಿಂ ಬೇಡ್ವ ಪತಿತ ತವಸೇವೆಯಭಿರುಚಿ ಎನ್ನೊಡಲಿಗೆ ಸತತ 3 ಪರಿಭವ ಶರಧಿಯ ಕಿರಿಯಾಗಿ ತೋರಿಪ ಪರಮಪುರುಷ ನಿಮ್ಮ ಕರುಣ ಚರಣ ಮೊರೆ 4 ದುಷ್ಟ ಭ್ರಷ್ಟತೆಯಳಿದು ಶಿಷ್ಟರೊಲುಮೆಯಿತ್ತು ಅಷ್ಟಮೂರುತಿ ನಿಮ್ಮ ಶಿಷ್ಟಪಾದದ ನಿಷ್ಠೆ 5 ಕನಸು ಮನಸಿನೊಳೆನ್ನ ಕೊನೆಯ ನಾಲಗೆ ಮೇಲೆ ನೆನಹು ನಿಲ್ಲಿಸಿ ನಿಮ್ಮ ಕರುಣಘನ ಕೃಪೆ 6 ನಾಶನಸಂಸಾರದಾಸೆಯಳಿದು ನಿಜ ಸಿರಿ 7 ಮೂರ್ಹತ್ತು ಮೂರುಕೋಟಿ ವಾರಿಜಾಸನ ಸುರರು ಸೇರಿ ಭಜಿಪ ನಿಮ್ಮ ಮೂರುಕಾಲದ ನೆನಪು 8 ಅಂತರ ಶೋಧಿಸಿ ಅಂತರಾತ್ಮನ ಕಂಡು ಸಂತಸದ್ಹಿಗ್ಗುವ ಸಂತರ ಮತವರ್ಣ 9 ಸರ್ವಜ್ಞರೆನಿಸಿದವರ ಶರಣರ ಸಂಗಕರುಣಿಸಿ ಕರುಣದಿ ಪರಮ ಜ್ಞಾನೆನುವ ಪದವಿ 10 ಮಿಗಿಲಾಗಿ ನಿರ್ಧರಿಸಿ ಸಿರಿವರನಂಘ್ರಿಯೇ ಜಗಮೂರಧಿಕೆಂಬ ಸುಗುಣಗುಣಾಶ್ರಮ11 ಧರೆಮೂರು ತಲೆಬಾಗಿ ಪರಮಾದರದಿ ಪಾಡ್ವ ಹರಿನಾಮ ಕೀರ್ತನೆ ಪರಮಾದರದಿ ಪಾಡ್ವ 12 ಶಮೆಶಾಂತಿದಯೆಭಕ್ತಿ ವಿಮಲಗುಣಭೂಷಣತೆ ಸುಮನಸಸಮನಿಷ್ಠೆ ಅಮಿತಮತಿವರ ಶ್ರೀ 13 ಮಿಥ್ಯೆವರ್ಜಿತವಖಿಲ ಸತ್ಯತೆ ಸದಮಲ ನಿತ್ಯ ನಿರ್ಮಲವೆನಿಪ ತತ್ವದರ್ಥದ ವಿವರ 14 ತನುನಿತ್ಯ ಸ್ವಸ್ಥತೆ ಘನಕೆ ಘನತರವಾಗಿಮಿನುಗುವ ಘನಮುಕ್ತಿ ಮನುಮುನಿಗಳ ಪ್ರೇಮ ಶ್ರೀರಾಮ15
--------------
ರಾಮದಾಸರು