ಒಟ್ಟು 10838 ಕಡೆಗಳಲ್ಲಿ , 131 ದಾಸರು , 5127 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬೆಳೆಗಿಂಝಾವದಿ ಬಾರೊ ಹರಿಯೆ ನಿನ್ನ ಕಳೆಕಳೆ ರೂಪ ನೋಡುವೆ ಮುಕುಂದ ಪ. ಭಕ್ತರ ಭಯ ನಿವಾರಣನೆ ಭಕ್ತಿಲಿ ಕರೆವೆ ಗೋವಿಂದ ನಿನ್ನನೆ ಭಕ್ತವತ್ಸಲ ನೀನಲ್ಲವೇ ಸ ದ್ಭಕ್ತರ ಸಲಹೆ ಕಂಕಣ ಧರಿಸಿಹನೆ 1 ಶ್ರೀ ತುಳಸಿಯ ವನಮಾಲ ಶ್ರೀ ಕೃಷ್ಣ ನಿನ್ನ ದರ್ಶನದ ಲಾಭ ಶ್ರೀಶನೆ ಬಯಸುವೆ ದೇವ ಶ್ರೀರಮೆಯರಸ ದಯಪಾಲಿಸೊ ಕೃಷ್ಣ 2 ಒಮ್ಮೆಯಾದರೂ ತೋರೊ ರೂಪ ಎನ್ನ ಕರ್ಮ ಖಂಡನವಹ ತೆರೆದೊಳು ಶ್ರೀಪ ಬೊಮ್ಮನೈಯ್ಯ ನಿನ್ನ ನೋಡ್ವೆ ಸುಮ್ಮಾನವ್ಯಾಕೊ ಶ್ರೀ ಶ್ರೀನಿವಾಸ 3
--------------
ಸರಸ್ವತಿ ಬಾಯಿ
ಬೇಕಾದವನೇ ಹರಿದಾಸ ಪ ಏಕಾದಶಿ ಉಪವಾಸ ಮಾಡಿದರೆ ನಾಕಿಗಳಿಗೆ ಆಗದು ವಿಶ್ವಾಸ ಅ.ಪ ಏಕಾದಶಿಯೆ ಯೋಗಸಿದ್ಧಿ ಏಕಾದಶಿಯೆ ಭೋಗಪ್ರಾಪ್ತಿ ಏಕಾದಶಿಯಲಿ ಎರೆಡು ಕಾರ್ಯಲ- ಕ್ಷೀಕಾಂತನ ಭಜನೆ ರಾತ್ರಿ ಜಾಗರವು 1 ಉಪವಾಸ ವ್ರತವೆ ವ್ರತವು ಜಪಶೀಲರ ತಪವೇ ಸುಖವು ಅಪರಿಮಿತವಾದ ಸತ್ಕರ್ಮಗಳೆಲ್ಲಾ ಚಪಲದಿ ಓಡುವುದುಪವಾಸದ ಹಿಂದೆ 2 ಅನ್ನಸಾರು ಕಾಯಿಪಲ್ಯ ಒಬ್ಬಟ್ಟು ತಿನ್ನುವುದೇ ಪ್ರತ್ಯಕ್ಷ ನರಕವು 3 ಘನಮೋದದಲಿ ಪವನಜನಾದ ಭೀ- ಮನೇ ಸ್ವೀಕರಿಸಿರುವನು ಪೂರ್ವದೊಳು 4 ವಿಕಳ ಬುದ್ಧಿಯಾಗದೆ ಸಮಯದಿ ತನ್ನ ಸುಕುಮಾರನ ಕಡಿಯಲೆತ್ನಿಸಿದನು 5 ನಿರಾಹಾರವು ನಡೆಯಲುತ್ತಮವು ಎರಡನೇಯದು ಮೇಲ್ಪೇಳಿದುದು ಪರಿಪರಿ ಅನ್ನೋತ್ಸವದಿ ಕೆಡುವನು 6 ಮಾನವ ಕರಾಮಲಕ ಮುಕ್ತಿಯಲಿ ಸುಖಪಡುವನು 7
--------------
ಗುರುರಾಮವಿಠಲ
ಬೇಕಿಲ್ಲ ಬೇಕಿಲ್ಲ ಇಹಲೋಕಾಡಂಬರವು ಸಾಕೀ ನಿನ್ನನು ಧ್ಯಾನಿಪ ಪರಲೋಕ ಜ್ಞಾನವನು ಪ. ಶ್ರೀಪ ಕರುಣಿಸಿ ನಿನ್ನ ಸ್ವಂತ ಜನರನ್ನೂ ಕಾಪಾಡೊ ದೊರೆಯೆ ಅ.ಪ. ನಿನ್ನ ಭಕ್ತರ ಸಂಗವನ್ನು ಕೃಪೆದೋರಿ ಸಲಹೊ ಚನ್ನ ಕೇಶÀವರಾಯ ಇನ್ನು ಕೃಪೆ ಮಾಡೊ 1 ಯನ್ನಪರಾಧಗಳನ್ನು ಎಣಿಸುವರೆ ದೇವ ಸನ್ನುತ ಚರಿತ ಭಕ್ತ ಸನ್ಮಾನಯುತ ನಿನ್ನ ಮಹಿಮೆಗಳನ್ನು ವರ್ಣಿಸಲಳವೆ ಮುನ್ನ ಶೇಷಾನಿಂದ ಸೇವ್ಯವಾಗಿರಲೂ ಯನ್ನಿಂದಾಡಿಶಿ ನೀನು ಸನ್ಮಾನಕೊಂಡು ನಿನ್ನಾ ಭಕ್ತಳೆಂದು ಸ್ತುತಿಗೊಂಡು ನಲಿನಲಿದೆ 2 ಯೆನ್ನಿಂದೇನಹುದೋ ಮನ್ಮನದೊಡೆಯ ಚನ್ನ ಶೇಷಾದ್ರಿನಿವಾಸ ಘನ್ನ ಶ್ರೀ ಶ್ರೀನಿವಾಸ ನೀನೇ ಆಡಿಸುತ ನೀನೇ ಮಾಡಿಸುತ ದಾಸಿ ನೀನಾಗಿರೆ ನಾನೇನ ಬಲ್ಲೆನೊ 3
--------------
ಸರಸ್ವತಿ ಬಾಯಿ
ಬೇಗ ಮಾಡೋ ಭಕುತಿ ಆಗುವುದು ಮುಕುತಿಆಗ ಈಗ ಎನ್ನದಿರು ಇದೆ ನಿನಗೆ ಮುಕುತಿ ಪ ಧ್ಯಾನ ಹಲವ ಬಿಡು ಧ್ಯಾನ ಆತ್ಮನ ಮಾಡುಧ್ಯಾನ ಧಾರಣ ಸಮಾಧಿಯಂಗಳ ನೋಡು ನಿಜವ ಕೂಡು 1 ಎಚ್ಚರ ಬಾಹಿರ ಮರೆತು ಎಚ್ಚರ ಅಂತರವರಿತುಎಚ್ಚರ ಬಾಹಿರ ಅಂತರ ಮರೆತು ಎಚ್ಚರ ಬೇರರಿತು 2 ನಿತ್ಯ ಬಿಡದೆ ವಾದಕೆ ಮಯ್ಯ ಕೊಡದೆಸಾಧಿಸು ನಿತ್ಯಾನಿತ್ಯಾ ವಸ್ತುವ ಸಾಧಿಸು ಗುರುವ ಹಿಡಿದೇ 3 ಬೇರೆ ಎಂಬುದ ಮಾಣು ಎಲ್ಲವ ನಿನ್ನಲೆ ಕಾಣು ನಾಬೇರೆಯೆಂಬ ಮತಿಯ ಮಾಣು ಬಳಿಕ ಜಾಣ 4 ಬೋಧ ಬೋಧ ಗುರಿವಿಡಿಯೋ 5
--------------
ಚಿದಾನಂದ ಅವಧೂತರು
ಬೇಗದಿ ಮುಕುಂದ ಪ. ಮಾಡುವ ಭಾಗ್ಯ ಕರುಣಿಸೊ ಕೃಪೆಯಿಂದ ಅ.ಪ. ನಿರುತ ನಿನ್ನೊಳಗಿಹವು ಸರಸಿಜ ಭವಮುಖರು ನಿನ್ನಪಾಂಗಮಸ್ಮರಣೆಯಿಂದಲಿ ಬಾಳ್ವರು ಪೀತಾಂಬರದಿಸರಿರವ ರೂಪಿಯಾಗಿ ಹೊಂದಿರುವಳು ನಗುತ 1 ನಿತ್ಯ ಸಂತೃಪ್ತರೂಪ ಸಕಲ ಲೋಕ ವ್ಯಾಪ್ತನಾಗಿರುವ ಭೂಪ ಜ್ಞಪ್ತಿ ಮಾತ್ರದಿ ಎನಗೆ ಒಲಿವ ಪರಮಾಪ್ತ ನೀನಿರುತಿರಲು ನೆನೆದು ಮರುಳಾದೆನು ವಿಲಿಪ್ತಿಯ ಸಲಿಸು 2 ತೋರದೊ ವರದ ನಿನ್ನನು ಮರೆದ ಕಾಯುವರ ಕಾಣೆ ನಿನ್ನಾಣೆ ಸಲಹೊ ಪುರಂದರಗೊಲಿದ 3 ಧರ್ಮಮಾರ್ಗವ ತೊರೆದು ಶೃತ್ಯದಿತ ಸತ್ಕರ್ಮಗಳ ಮರೆದು ನಿರ್ಮಲರನು ಜರಿದು ನೀಚರನೆಲ್ಲ ಭರ್ಮಗೋಸುಗ ತರಿದು ಸುಖವ ನೀಗಿ ನಾ ಬಾಗಿ ಕೂರ್ಮನಂತಿರುವೆ 4 ಆಸೆಯೆಂಬುದು ಎನ್ನನು ನಾನಾವಿಧ ಕ್ಷೇಶಬಡಿಸುವುದಿನ್ನು ಘಾಸಿಗೆ ಒಳಗಾದೆನು ಕೈಯಲಿ ಒಂದು ಕಾಸಿಲ್ಲದವನಾದೆನು ಶ್ರೀಶ ನೀ ಕರುಣಿಸಿನ್ನು ಸದ್ಗತಿಯನ್ನು ಸುಜನಪಹಾಸಗೊಳಿಸದೆ 5
--------------
ತುಪಾಕಿ ವೆಂಕಟರಮಣಾಚಾರ್ಯ
ಬೇಗನೆ ಪಾಲಿಸೆ ಸಾಗರಸುತೆ ನಿನ್ನ ಈಗ ಪೂಜಿಸುವೆನೆ ನಾಗಶಯನನ ರಾಣಿ ಪ. ಅಂದುಗೆ ಕಿರುಗೆಜ್ಜೆ ಅಂದದ ಪಿಲ್ಲೆನಿಟ್ಟು ಇಂದು ತೋರಿ ಕಾಯೆ 1 ಜರಿಯು ಪೀತಾಂಬರ ನೆರಿಗೆ ವೈಭವಗಳು ಕಿರುಗೆಜ್ಜೆ ವಡ್ಯಾಣ ಹರಿಯಂತೆ ನಡುವು 2 ಒಪ್ಪದಿಂದಲಿ ಜರಿ ಕುಪ್ಪಸವನೆ ತೊಟ್ಟು ಸರ್ಪಶಯನನಿಗೆ ಒಪ್ಪಿಹ ಸತಿಯೆ 3 ಭಾರ ಕುಚದಲಿ ಮೆರೆಯೆ ನಾರಸಿಂಹನ ರಾಣೀ ತೋರೆ ಕರುಣವ 4 ಮೆರೆವ ಮಂಗಳಸೂತ್ರ ಕರದಿ ಕಂಕಣಗಳು ವರ ವಜ್ರದುಂಗುರ ಧರಿಸಿ ಮೆರೆಯುವಳೆ 5 ನಾಗಮುರಿಗೆಯನಿಟ್ಟು ಭೋಗಿಶಯನನ ರಾಣಿ ಮೂಗುತಿ ಮುರವು ಮುಗುಳು ನಗೆಯವಳೆ 6 ಹೊಳೆವ ದಾಳಿಂಬ್ರದಂತೆ ಒಲಿವ ಬುಲಾಕು ಥಳಥಳಿಪೊ ಗಲ್ಲ ಕರ್ಣಭೂಷಣ 7 ಸುರರ ಪಾಲಿಪ ದೃಷ್ಟಿ ವರ ನಯನಗಳು ಫಣಿ ತಿಲುಕವು 8 ಹೆರಳು ಬಂಗಾರದ ಧರಿಸಿ ಶಿರೋರತ್ನ ವರ ಕುಸುಮಂಗಳ ಧರಿಸಿಹ ಚಲುವೆ 9 ಶಿರದಿ ಕಿರೀಟವು ಸರ್ವಾಂಗ ಸುಂದರಿ ಪರಮಾತ್ಮ ಸಹಿತದಿ ಉರದಲಿ ತೋರೆ 10 ಸೃಷ್ಟೀಶ ಗೋಪಾಲಕೃಷ್ಣವಿಠ್ಠಲನೊಳು ಶ್ರೇಷ್ಠ ಭಕ್ತಿಯ ನೀಡೆ ಕೃಷ್ಣನ ಸತಿಯೆ 11
--------------
ಅಂಬಾಬಾಯಿ
ಬೇಗನೆ ಬಾರೊ ದೇವ ಜಾಗೂ ಮಾಡದೆ ಪ ಬೇಗನೆ ಬಾರೊ ನೀನು ನಾಗಶÀಯನ ಕೃಷ್ಣ ಯೋಗಿ ಜನರು ಕಂಡು ಪೋಗಲೀಸರೆ ನಿನ್ನ ಅ.ಪ. ಹತ್ತಾವತಾರವಾಯ್ತು ಮತ್ತಗಜವ ಪೊರೆದೆ ಉತ್ತಮಪದ ಧ್ರುವಗಿತ್ತೆ ಮತ್ತೇನು ಕಾರ್ಯವೈಯ್ಯ 1 ತರಳ ಪ್ರಹ್ಲಾದನ ಕರುಣಾದಿ ಸಲಹಿದೆ ದುರುಳರ ಸದೆದ ಪರಿಯೆಲ್ಲವಾಯಿತು2 ಪರಿ ರೂಪವ ಧರಿಸಿದ ಎನ್ನದೇವ ಸಿರಿರಂಗೇಶವಿಠಲನೆ ಕರವೆತ್ತಿ ಮುಗಿಯುವೆ 3
--------------
ರಂಗೇಶವಿಠಲದಾಸರು
ಬೇಡ ಬೇಡ ಹೋಗೆಂದು ಕಾಡದಿರು ಕೃಪೆಯೊಂದ ಬೇಡದಿರಲಾರೆ ಮಾಂಗಿರಿಯರಂಗ ಪ ಬೇಡುವನ ಕೈ ಕೀಳು ನೀಡುವನ ಕೈ ಮೇಲು ಬೇಡಿದಲ್ಲದೆ ಕೃಪೆಯ ಮಾಡನೈರಂಗಾ ಅ.ಪ ಗಾನಕೆ ನಲಿಯುವೆಯೋ ಧ್ಯಾನಕೆ ಒಲಿಯುವೆಯೋ ಜ್ಞಾನಕೆ ಸಿಗುವೆಯೋ ನಾನರಿಯೆನು ಗಾನದರಿವೆನಗಿಲ್ಲ ಧ್ಯಾನಮಾಡುವನಲ್ಲ ಜ್ಞಾನಾನುಭವವಿಲ್ಲ ಆಧಾರವಿಲ್ಲ 1 ನೀನೆನ್ನ ಕಡೆಗಣಿಸಿ ಹೀನ ಹೋಗೆಂದೆನಲು ನಾನಳುವೆನನವರತ ಶ್ವಾನದಂತೆ ಸೂನು ಬಾ ಬಾರೆಂದು ಸಾನುರಾಗದಿ ರಮಾದೇವಿ ಸಂತೈಪಳು 2 ಎನ್ನಮ್ಮ ಕೃಪೆಯಿಂದ ನಿನ್ನ ಕಾಲ್ವಿಡಿಯೆಂದು ಎನ್ನ ಕಳುಹುತ ನಿನಗೆ ಎನ್ನ ತೋರ್ದು ಎನ್ನನತಿಕೃಪೆಯಿಂದ ಮನ್ನಿಸೆನ್ನುವಳಾಗ ನಿನ್ನ ಕೃಪೆ ಯೆನಗುಂಟು ಮಾಂಗಿರೀಶಾ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಬೇಡಧ್ಯಾನಿಸಿ ನೋಡು ಪ ಭವ ಮುಳುಗಿ ನೀನಾರು ಅಲ್ಲಿ ತಂದೆ ತಾಯಿಗಳು ಮತ್ತವರಾರು ಅಂದಿನವನಿತೆಯಾಗಿಗಳಾರು ನಿನ್ನ ನಂದನರೆನಿಸಿ ಬಂದವ ರಾರೋ 1 ಮುನ್ನ ಮಾಡಿದ ಹೊಲಮನೆಯೆಲ್ಲ ನಿನ್ನ ಬೆನ್ನು ಬಂದಗ್ರಜಾನುಜರೆಲ್ಲ ಚೊಕ್ಕ ಚಿನ್ನ ಚಿಗುರು ಬೆಳ್ಳಿ ನಗವೆಲ್ಲಿ ಪಶು ಹೊನ್ನು ಕನಕ ಮಿತ್ರ ಜನರೆಲ್ಲ 2 ಇಂದಿನ ಭವದೊಳು ನಿನಗೆಲ್ಲಿ ಈಗ ಬಂದು ಕೊಡಿದ ಸಂಸಾರವೆಲ್ಲಿ ಮುಂದೆ ಹೊಂದಿ ಹುಟ್ಟುವ ಠಾವುಗಳೆಲ್ಲ ಅಲ್ಲಿ ಬಂಧು ಬಳಗ ನೆರೆದಿಹುದೆಲ್ಲ 3 ಹಲಬರ ನೆರವಿಯ ದೇಹವಿದು ಹೊಳೆ ಚಳಿಕ ತನ್ನಯ ಈ ಋಣ ತೀರುವುದು ಎಲ್ಲ ಬಯಲಿಗೆ ಬಯಲಾಗಿ ಹೋಗುವುದು 4 ಸಾರವಿಲ್ಲದ ಸಂಸಾರವಿದು ನಿ ಪರ ಕೆಡುತಿಹುದು ಈ ಘೋರವನುಳಿದು ನಿರ್ಮಲನಹುದು ಲಕ್ಷ್ಮೀ ಪಾದ ಕೊಡುವುದು5
--------------
ಕವಿ ಪರಮದೇವದಾಸರು
ಬೇಡಲೇತಕೆ ಪರರ ದೇಹಿಯೆಂದು ಪ ನೀಡುವಾ ಧೊರೆ ಎನಗೆ ನೀನಿರಲು ಸರ್ವದಾ ಅ.ಪ. ಗ್ರಾಸವನು ಬೇಡೆ ದೂರ್ವಾಸ ಮುನಿಗಂದನ್ನ ಅನಾ ಯಾಸದಿಂ ತತ್ಕಾಲದಲಿ ಕಲ್ಪಿಸಿ ಆ ಸಂಯಮಿಗೆ ಉಣಿಸಿ ದಣಿಸಿದ ಮಹಾ ದಾತಾ ದಾಶರಥೆ ನಿನ್ನ ಬಿಟ್ಟನ್ಯ ದೇವತೆಗಳನು 1 ಖಳ ದುಶ್ಯಾಸನನು ದ್ರೌಪದಿಯ ಸಭೆಯೊಳು ದು ಕೂಲವನು ಸೆಳೆಯೆ ದ್ವಾರಕ ಮಂದಿರಾ ಶ್ರೀ ಲೋಲ ಶ್ರೀ ಕೃಷ್ಣ ಕರುಣಿಸು ಕರುಣಿಸೆನೆ ಪಾಂ ಚಾಲಿ ಮೊರೆ ಕೇಳಿ ದಿವ್ಯಾಂಬರ ನಿಚಯವಿತ್ತೆ 2 ಮಡದಿ ಕಳುಹಲು ಬಂದ ಬ್ರಾಹ್ಮಣನ ಪೀಡಿಸುವ ಬಡತನವ ಕಳೆದೆ ಒಪ್ಪಿಡಿಯವಲಿಗೆ ಪೊಡವಿಯನ್ನಾಳಿಸಿದೆ ಕ್ರಿಮಿಗೊಲಿದು ಕಾರುಣ್ಯದಲ್ಲಿ ಮೃಡ ಬಿಡೌಜರೀಪ್ಸಿತ ಕೊಡುವೆ 3 ತಾಪಸೋತ್ತಮ ಮೃಕಂಡಾತೃಜಗೆ ಕಲ್ಪಾಯು ನೀ ಪೂರ್ತಿ ಮಾಡಿ ಅಲ್ಪಾಯು ಕಳೆದು ಆ ಪರ್ವತೇಶ್ವರನ ಪಟ್ಟಣವ ಸಾರ್ದು ಸಾಂ ದೀಪ ತನಯನ ತಂದ ಸರ್ವಾಂತರ್ಯಾಮಿ 4 ವಿಶ್ವ ಜೀವರಿಗನ್ನ ಕಲ್ಪಕನೆ ನೀನಿರಲು ಜ್ಞಾನ ದ್ರವ್ಯ ಅಲ್ಪ ಮಾನವರಿಗಾಲ್ಪರಿರೇನಹುದು ಅಹಿ ತಲ್ಪ ಜಗನ್ನಾಥ ವಿಠ್ಠಲ ಕಲ್ಪತರುವಿರಲು 5
--------------
ಜಗನ್ನಾಥದಾಸರು
ಬೇಡವೋ ಸ್ತ್ರೀಯರ ವಶದಲಿಬಿದ್ದು ಭವಕೆ ಬೀಳಲಿ ಬೇಡ ಪ ಒನಪುಗಳ ಸುಳ್ಳು ವಾಲಿಗಲು ಸಟೆವೈಯ್ಯಾರ ನಚ್ಚಲಿ ಬೇಡ 1 ಮೋರೆ ಮುರುಕಿ ಪದಮೂಗನೇರಿಸುವುದು ಮುಸುಕನು ನೀ ನಚ್ಚಬೇಡಸೀರೆಯನೊಲೆಯುವುದು ಸೆರಗನು ಸಡಿಲಿಪನಾರಿಯ ನಂಬಲು ಬೇಡ 2 ನರಕದ ಕುಂಡವು ನಾರಿಯೆಂಬವಳು ಸತ್ಯ ನೋಡುತ ನೀ ಬೀಳಬೇಡಕರುಣಿ ಚಿದಾನಂದ ಕಟಾಕ್ಷವನು ಪಡೆ ಕಾಲಗೆ ನೀ ಸಿಕ್ಕಬೇಡ 3
--------------
ಚಿದಾನಂದ ಅವಧೂತರು
ಬೇಡಿಕೊಂಬುವೆನಯ್ಯ ಬೇಗ ಬಾರಯ್ಯ ಮಾಡು ಎನ್ನೊಳೂ ದಯ ಪಂಢರಿರಾಯ ಪ ನಾಶನ ಜಗದೊಳಗೆ ಭಾಷಗಡಕನು ಆಗಿ ಸಾಸಿರೊರುಷಿರ್ದೇನು ಹೇ ಈ ಜನುಮ ಶೇಷನಯನನೆ ನಿನ್ನ ದಾಸನ ಅತಿಶಯ ದೋಷವನು ಗಣಿಸದೆ ಪೋಷಿಸೈ ಈಶ 1 ಅರಿದರಿದು ಪತಂಗ ಉರಿಯೊಳಗೆ ಬೀಳ್ವಂತೆ ಖರೆಯ ಈ ಸಂಸಾರ ಸ್ಥಿರವೆಂದು ನಂಬಿ ಪರಿಪರಿಯ ಪಾಪಂಗಳಿರಯದೆ ಮಾಡಿ ನಾ ನರಕಕ್ಕೆ ಗುರಿಯಾದೆ ಪೊರೆಯೊ ಶ್ರೀ ಹರಿಯೆ 2 ಸಿಂಧುಶಯನನೆ ಎನ್ನ ಮಂದಮತಿಯತನದ ಲಿಂದ ಮಾಡಿದ ಪಾಪ ಚಿಂದಿಸೈ ಬೇಗ ಹಿಂದಕಾದದ್ದಾಯ್ತು ಮುಂದೆ ಎನ್ನಯ ಬವಣಿ ಚಂದಾಗಿ ತಿದ್ದಯ್ಯ ತಂದೆ ಶ್ರೀರಾಮ 3
--------------
ರಾಮದಾಸರು
ಬೇಡಿಕೊಂಬೆಗೋಪಾಲ ಬೇಡುವೆನೈ ದಯ ಪ ಮಾಡಿ ಎನ್ನೊಳು ಬೇಗ ಗಾಢ ಮಹಿಮ ವರ ನೀಡೋ ಕೃಪಾಂಬುಧೇ ಅ.ಪ ಮರುಳನಾಗಿ ನಾನು ತಿರುಗುವೆ ಧರೆಯೊಳು ಸಿರಿವರ ನಿಮ್ಮಯ ಚರಣವ ಸ್ಮರಿಸದೆ ಪರಿ ನರಕಕ್ಕೆ ಗುರಿಯಾದೆ ಮುರಹರ ಕರುಣದಿಂ ಮನ್ನಿಸಿ ಪೊರೆ ಸುರವರ 1 ದೀನದಯಾಪರ ಜಾನಕೀ ಮನೋಹರ ನೀನೆ ಗತಿಯೆಂದು ಧ್ಯಾನಿಸಿ ಬೇಡುವೆ ಹೀನನ ಮಾಡದೆ ಧ್ಯಾನಿಪ ಭಕ್ತನಂ ಮಾನದಿಂ ರಕ್ಷಿಸು ವೇಣುಧರಹರಿ2 ಸುರುಪರೀಶ ಹರಿ ಚರಣದಾಸರ ಮೊರೆ ಕರುಣದಿ ಆಲಿಸಿ ಕರಪಿಡಿದು ಪೊರೆ ನೆರೆನಂಬಿದೆ ನಿಮ್ಮ ಚರಣವ ಪರಿಪರಿ ಪರಮಪಾವನ ಮಾಡು ಸಿರಿವರ ಶ್ರೀರಾಮ 3
--------------
ರಾಮದಾಸರು
ಬೇಡಿಕೊಂಬೆನೊ ಶ್ರೀಹರಿಯೆ ನಿಮ್ಮ ಅಡಿಯ ಮರೆಯೆನೊ ಪ ಬೇಡಿಕೊಂಬೆನಯ್ಯ ನಿಮ್ಮ ಅಡಿಯಪಿಡಿದು ಬಿಡದೆ ನಾನು ಗಡನೆ ಎನ್ನ ಕಡುದಾರಿದ್ರ್ಯ ಕಡಿದು ಬಯಲು ಮಾಡಿ ಹರಿಯೇ ಅ.ಪ ದೈತ್ಯಶಿಕ್ಷಕ ಚಿತ್ತಜತಾತ ಭಕ್ತರಕ್ಷಕ ಅ ನಾಥ ಪ್ರೀತ ಮುಕ್ತಿದಾಯಕ ಸತ್ಯಸಂಧನನ್ನು ಮಾಡಿ ಮತ್ರ್ಯಭೋಗದಾಸೆಬಿಡಿಸಿ ನಿತ್ಯನಿರ್ಮಲಾತ್ಮ ನಿಮ್ಮ ಭಕ್ತಿಯಿತ್ತು ಸಲಹೊ ಹರಿಯೆ 1 ಶ್ಯಾಮಸುಂದರ ಸ್ವಾಮಿ ಭಕ್ತಪ್ರೇಮ ಮಂದಿರ ರಮಾ ಸತ್ಯಭಾಮಾ ಮನೋಹರ ಪಾಮರತ್ವ ತಾಮಸ ದುಷ್ಕಾಮಿತಂಗಳ್ಹರಿಸಿ ನಿಮ್ಮ ನಾಮಜಪವು ತಪದೊಳಿರಿಸಿ ಪ್ರೇಮದಿಂದ ಸಲಹೊ ಹರಿಯೆ2 ಪದುಮನಾಭನೆ ಸದಮಲಾಂಗ ಒದಗುಬೇಗನೆ ಈ ವಿಧದಿ ಬೇಡ್ವೆ ಸುದಯವಂತನೆ ಸುದತಿ ಮಾಡಿದಂಥ ಪದದ ಕೃಪೆಯನಿತ್ತು ಎನ್ನ ಮುದದಿ ಸಲಹು ಸಿರಿಯರಾಮ 3
--------------
ರಾಮದಾಸರು
ಬೇಡಿಗೊಂಬೆನೊ ದೇವ ಮಹಾನುಭಾವ ಪ ಮೂಡಲುಗಿರಿವಾಸ ಶ್ರೀ ಶ್ರೀನಿವಾಸ ಅ.ಪ ನಾನಾ ಯೋನಿಗಳಲಿ ನಾ ಬಂದು ನೊಂದೆನೋ ನೀನೇ ಸಲಹಬೇಕೋ ಎನಗೆ ಜನುಮವು ಸಾಕೊ 1 ತನುವೂ ಮನಗಳನ್ನೂ ನಿನಗರ್ಪಿಸಿದೆನೊ ವನಜಾಕ್ಷ ಬಿಡಿಸು ಸಿಕ್ಕುಯೆನಗೆ ನೀನೇ ದಿಕ್ಕು 2 ಮಾನಾಪಮಾನವು ನಿನ್ನದು ಎನಗೇನೊ ದೀನ ಜನರ ಪಾಲ ರಂಗೇಶವಿಠಲ 3
--------------
ರಂಗೇಶವಿಠಲದಾಸರು