ಒಟ್ಟು 6534 ಕಡೆಗಳಲ್ಲಿ , 130 ದಾಸರು , 4232 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರವಿಸುತನ ಪ್ರಧಾನಿಯೆ ರಾ ಘವ ಕಾರ್ಯ ಧುರಂಧರಾಗಣಿತ ವಿಕ್ರಮಯಂ- ಮವಗುಣಗಳನೆಣಿಸದೆ ಕಾ ಯುವದೈ ನೀಂ ಪುಟಪರ್ತಿ ವೀರ ಹನುಮನೆ 1 ಮಾರುತನ ಕುಮಾರ ಪವಿ ಶ ರೀರ ಕಪಿವರಾಗ್ರಗಣ್ಯ ವರದಾಯಕ ನೀ ನಾರಾಧಕರಿಗೆ ಕೊಡು ದಿ ವ್ಯಾರೋಗ್ಯವ ಪುಟಪರ್ತಿ ವೀರ ಹನುಮನೆ 2 ವೈರಾಗ್ಯವು ಭಕ್ತಿ ಜ್ಞಾನವಂ ಪಾಲಿಸುವೈ ರಾರಿಳೆಯೊಳು ಪುಟಪರ್ತಿ ವೀರ ಹನುಮನೆ 3 ನೆರೆ ಪ್ರಾಣಗಳಿತ್ತೆ ಧೀರನೊಲಿಯುವಲೀ ತರಳನ ಜ್ವರಾದಿಗಳ ಪರಿ ಹರಿಸುತ ಪೊರೆ ಪುಟಪರ್ತಿ ವೀರ ಹನುಮನೆ 4 ರಾವಣನ ಗುದ್ದಿದಾತನೆ ಪಾವನ ಪರಮ ಪವಿತ್ರ ಕೃ ಪಾವನಧಿಯೇ ಪುಟಪರ್ತಿ ವೀರ ಹನುಮನೆ 5 ನರಿತನುದಿನ ಪಠಿಸುವರಿಗೆಯಾರೋಗ್ಯಸುವು ಸ್ಥಿರ ವೈರಾಗ್ಯಾಯುಗಳನು ಶ್ರೀ ಗುರುರಾಮ ವಿಠಲನು ಬಿಡದೆ ಕರುಣಿಸುತ್ತಿರುವಂ 6
--------------
ಗುರುರಾಮವಿಠಲ
ರಾಘವ ಹರಿ ವಿಠಲ | ಕಾಪಾಡೊ ಇವಳಾ ಪ ಅಘದೂರ ಶ್ರೀ ಹರಿಯೇ | ಪಾಪಘಗಳ ಕಳೆದೂ ಅ.ಪ. ಮುಕ್ತಿಗೇ ಸೋಪಾನ | ತಾರತಮ್ಯ ಜ್ಞಾನಮತ್ತೈದು ಭೇದಗಳ | ಅರಿವನೆ ಇತ್ತೂಪ್ರತ್ಯಹರ ತವನಾಮ | ಚಿತ್ತದಲಿ ನೆನೆವಂಥಉತ್ತಮದ ಸಂಸ್ಕøತಿಯ | ಕೊಟ್ಟು ಕಾಪಾಡೋ 1 ಪರಿ | ಇತ್ತಿಹೆನೊ ಅಂಕಿತವಚಿತ್ತದೊಲ್ಲಭ ಹರಿಯೆ | ಕರ್ತೃ ಕರ್ಮದಲೀವ್ಯಾಪ್ತ ನೀನಾಗಿದ್ದು | ಸತ್ಸಾಧನೆಯ ಗೈಸೀಎತ್ತು ಭವದಿಂದಿವಳ | ಉತ್ತಮೋತ್ತಮನೆ 2 ಇತ್ತು ವೈರಾಗ್ಯವನು | ಮತ್ತೆ ಜ್ಞಾನ ಸಂಪದಇತ್ತು ಕಾಪಾಡಿವಳ | ಕರ್ತೃ ರಾಮಚಂದ್ರಾ |ಉಕ್ತಿ ಎನ್ನದು ಇದೂ | ಮತ್ತನ್ಯ ನಾನೊಲ್ಲೆಮುಕ್ತಿ ದಾಯಕ ಗುರೂ | ಗೋವಿಂದ ವಿಠಲಾ 3
--------------
ಗುರುಗೋವಿಂದವಿಠಲರು
ರಾಘವೇಂದ್ರ ಗುರುರಾಯ ರಮಣೀಯ ಕಾಯ ಭೃಂಗ ಭವ ಭಂಗ ಪ ನೋಡಿದೆ ನಿಮ್ಮ ಮಹಿಮೆಯ ಹಾಡಿ ಪಾಡುವೆನೊ ನಿತ್ಯ ಆಡಿ ಕೊಂಡಾಡಲು ಬಲು ಗೂಢವಾಗಿದೆ ನಾಡಿನೊಳಗೆ ವೊಮ್ಮೆ ಸ್ಮರಣೆ ಮಾಡಿದವ ಧನ್ಯ ಎನ್ನು ಮೂಢ ಬುದ್ಧಿಯನು ಬಿಡಿಸು ಕೂಡಿಸು ಸಜ್ಜನರೊಳಗೆ 1 ನಾಮಾಭಿವಿಡಿದು ಉಮಾಪತಿ ಪರಿಯಂತ ಈ ಮನ ಎರಗಲಿ ಯಾಮ ಯಾಮಕೆ ಕಾಮಿಪೆ ಇದನೆ ಗುರುವೆ ವಾಮದಕ್ಷಣ ಮಾರ್ಗ ನೇಮ ತಪ್ಪುದಂತೆ ತಿಳಿಸಿ ಭ್ರಾಮ ಬುದ್ಧಿಯ ಓಡಿಸುವುದು 2 ಚಿಂತಾಮಣಿ ಕಂಡ ಮೇಲೆ ಭ್ರಾಂತಿಗೊಳಿಪÀ ವಿಷಯ ಚಿಂತಿಸಿ ಬೇಡುವುದು ಲೋಕಾಂತದ ಸುಖವು ಇಂತು ಬಾಗಿ ನಿಂತು ಕೇಳುವಂತೆ ಮಾಡದಿರು ಕರುಣಿ ಸಂತತ ನಿನ್ನ ಪಾದಕ್ರಾಂತನಾಗಿ ತುತಿಸುವೆ 3 ಸಾರಿಸಾರಿಗೆ ಈ ಚಿತ್ರ ತಾರತಮ್ಯವ ವಿಚಾರಗೈದು ನಲಿದಾಡಿ ಮೇರೆ ಇಲ್ಲದೆ ಕೋಶ ಇಂದಿರೇಶನ್ನ ಹೃ ದ್ವಾರಿಜದೊಳು ನಿಲಿಸಿ ಆರಾಧನೆ ಮಾಡುವ ವೈಕಾರಿಕ ಭಾಗ್ಯವೆ ಬರಲಿ 4 ನಮೋ ನಮೋ ಯತಿರಾಜ ಮಮತೆ ರಹಿತ ಅನುಪಮ ಚರಿತಾ ಪರಬೊಮ್ಮ ವಿಜಯವಿಠಲ ನಾ ತುಮ್ಮದೊಳಚಿನಪ ಜ್ಞಾನೋತ್ತುಮ ತುಂಗಭದ್ರವಾಸ 5
--------------
ವಿಜಯದಾಸ
ರಾಘವೇಂದ್ರ ಗುರುವರ್ಯ ಮಮಾಘನಾಶನಾ ಪ ಪಾದ ಪದ್ಮಕ್ಕನುದಿನ ಅ.ಪ ಕನಕ ಕಶ್ಯಪನಾತ್ಮಜನೆಂದೆನಿಸಿ ಮೋದದಿ ವನಜನಯನ ಸ್ಥಂಭದಿ ಬರುವಂದದಿ ಗೈದಿ 1 ದೋಷರಹಿತ ಹರಿಭಕ್ತರಿಗೆ ಸುರತರುವೆ 2 ಗುರುರಾಮ ವಿಠಲನ ಪ್ರಿಯಕಿಂಕರವರೇಣ್ಯನೆವರಮಂತ್ರಾಲಯನಿಲಯ ನೀಂ ಕರುಣಿಸೆನ್ನನೆ 3
--------------
ಗುರುರಾಮವಿಠಲ
ರಾಘವೇಂದ್ರ ಜಯತು ಗುರುವರಗೌತಮ ಗೋತ್ರಜ ಪ ರಾಗರಹಿತಾಂತರಂಗ ಭಕ್ತಾವಳಿ ಸಂಗ ಶೃಂಗ ಅ.ಪ ಅಂಬಾಸುತ ಪರಿಪೂಜಿತ ಪಾದವ ತೋರೈ ವಂದಿಪೆ 1 ನಿರುತನಿನ್ನ ಪಾದಪದ್ಮವ ನಮಿಸುವಂಥ ಮನವ ಕೊಡೈ ಪರಮವೈದಿಕನ ಅರಿಯುವ ಶಕ್ತಿಯ ನೀಡು ರಾಘವೇಂದ್ರ2 ತರಳ ಸರಳ ಮೃದುವಚನಪೂರಣ ಸಾಧು ಪೂರ್ಣಸದನ ಶರಣಸುಜನ ವಾಂಚಿತಾರ್ಥದಾತ ಮಾಂಗಿರೀಶ ಪ್ರೀತ3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ರಾಘವೇಂದ್ರ ತೀರ್ಥರು ಕರುಣಿಗಳೊಳಗೆಣೆಗಾಣಿ ನಾ ನಿನಗೆ ಸ ದ್ಗುರುವರ ರಾ‌ಘವೇಂದ್ರ ಚರಣ ಕಮಲಯುಗ ಮೊರೆಹೊಕ್ಕವರ ಮನದ ಹರಕೆಯ ನಿರುತ ಈವೆ ನೀ ಕಾವೆ ಪ ರಾಘವೇಂದ್ರ ಗುರುವೆ ನೀ ಗತಿ ಎಂದನು ರಾಗದಿಂದಲಿ ಭಜಿಪ ಭಾಗವತರ ದುರಿತೌಘಗಳಳಿದು ಚ ನ್ನಾಗಿ ಸಂತೈಸುವೆ ನೀ ಸನ್ಮೌನಿ 1 ಸುಧೀಂದ್ರ ಯತಿಕರ ಪದುಮ ಸಂಭವ ಮಧು ವದ ಪಾದಾಂಬುಜ ಮಧುಪಾ ತ್ರಿದಶ ಭೂರುಹದಂತೆ ಬುಧ ಜನರೀಪ್ಸಿತ ಒದಗಿ ಪಾಲಿಸಿ ಪೊರೆವೆ ಮದ್ಗುರುವೆ 2 ಕುಧರದೇವನ ದಿವ್ಯರದನದಿ ಜನಿಸಿದ ನದಿಯ ತೀರದಿ ಶೋಭಿಪ ಸದಮಲ ಘನಮಂತ್ರ ಸದನನಿಲಯ ಜಿತ ಮದನ ಶ್ರೀ ಜಗನ್ನಾಥ ವಿಠಲದೂತ 3
--------------
ಜಗನ್ನಾಥದಾಸರು
ರಾಘವೇಂದ್ರ ಹರಿ ವಿಠಲ | ಕಾಪಾಡೊ ಇವಳಾ ಪ ಭೋಗಿ ಶಯನನೆ ಹರಿಯೆ | ನಾಗಾರಿವಾಹಾ ಅ.ಪ. ಮಂತ್ರಮಂದಿರ ಧೊರೆಯ ಅಂತರಂಗದಿ ಭಜಿಪಸತತದಿ ವಿಜಯಾರ್ಯ | ಚಿಂತೆಯಲ್ಲಿಹಳಾ |ಅಯೆ ಸತ್ಸುಕೃತದಿಂ ಹರಿದಾಸ್ಯ ಕಾಂಕ್ಷಿಪಳಮಾತೆ ಕೈ ಪಿಡಿ ಹರಿಯೇ | ಸಂತರುದ್ಧರಣಾ 1 ಭಾವದಲಿ ತವ ಮಹಿಮೆ | ಸ್ತವನಗೈಯ್ಯುವ ಕಾರ್ಯದಿವಸ ದಿವಸದಿ ವೃದ್ಧಿ | ಭಾವವನೆ ಪೊಂದೀಕವನ ರೂಪದಿ ಪ್ರವಹ | ಭುವಿಯೊಳಗೆ ಹರಿವಂತೆಹವಣಿಸೋ ಶ್ರೀಹರಿಯೇ | ಪವನ ವಂದಿತನೆ 2 ಭವ ಭಂಗ | ಕಾರುಣ್ಯಪಾಂಗ 3 ಭವ ಶರಧಿ | ದಾಟಿಸೋ ಹರಿಯೇ 4 ಕೈವಲ್ಯಪ್ರದ ಪುರುಷ | ದೇವದೇವೇಶ ಹರಿಗೊವತ್ಸನದಿಗಾವು | ಧಾವಿಸುವ ತೆರದೀನೀವೊಲಿಯು ತಿವಳಿಗೆ | ಭಾವದಲಿ ಮೈದೋರೊಭಾವಜನಯ್ಯ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ರಾಘವೇಂದ್ರಯತಿ ಗುರುರಾಯರ ಮಹಿಮೆ ಕೇಳಿರಿ ನಮ್ಮ ಗುರುರಾಯರ ಮಹಿಮೆ ಪ ಪರಮ ಭಕುತಿಯಿಂದ ಸ್ಮರಿಸುವ ಸುಜನರ ದುರಿತಗಳÀ್ಹರಿಸಿ ಸದ್ಗತಿ ಪಥವ ತೋರುವ ಅ.ಪ ಇಂದಿರೇಶನ ಮಹಿಮೆ ಪೊಗಳುವ ಭಕ್ತ ಸಂದಣಿ ಪೊರೆಯುವರ ಹಿಂದಿನ ಅಘಗಳನೊಂದೂ ನೋಡದೆ ಶ್ರೀ- ಮುಕುಂದನ ಭಜಕರ ಸಂಗಡ ನೀಡುವ ದಿವ್ಯ 1 ದೇಶ ದೇಶದೊಳಿವರ ಮಹಿಮೆಗಳ ಉ- ಲ್ಲಾಸದಿ ಪೊಗಳುವರ ದಾಸರೆಂತೆಂದು ಸಂತೋಷದಿ ಸೇವಿಪ ಮೀಸಲ ಮನದವರ ಪೋಷಿಸುತಿರುವಂಥ 2 ಹಲವು ಸಾಧನವೇತಕೆ ತನುಮನವ ಶ್ರೀ- ಹರಿಗೆ ಸಮರ್ಪಿಸಿರಲು ಕುಲಕೋಟಿ ಪಾವನ ಮಾಳ್ಪ ಶ್ರೀ ಗುರುಗಳ ಚರಣ ಸೇವಕರೆಂದು ಸಿರಬಾಗಿ ನುತಿಸಿರೊ 3 ನಿದ್ರೆ ಮಾಡುವ ಬಾಲೆಯ ಕರಗಳಿಗೆ ಶ್ರೀ- ಮುದ್ರಾಧಾರಣ ಮಾಡಿಹ ಸಜ್ಜನರಿಗಿವರ ಭಯ ವಜ್ರಕವಚವು ಸತ್ಯ ಹೃದ್ಗøಹದಲಿ ರಾಮಭದ್ರ ಮೂರುತಿ ಕಾಂಬ 4 ಸವಿನಯ ತೋರುವರ ಕನಲಿಕೆ ಕಳೆದು ಶ್ರೀ ಕಮಲನಾಭ ವಿಠ್ಠಲನೊಲುಮೆಯ ಪಡೆದ ಮಂತ್ರಾಲಯ ನಿಲಯ5
--------------
ನಿಡಗುರುಕಿ ಜೀವೂಬಾಯಿ
ರಾಘವೇಂದ್ರಯತಿಗಳು ಗುರುರಾಯರ ನಂಬಿರೋ ರಾಘವೇಂದ್ರ ಗುರುರಾಯರ ನಂಬಿರೋ ಜಗದೊಳು ಪ. ಗುರುರಾಯರ ನಂಬಿ ವರಗಳ ಬೇಡಿರೊ ನರಹರಿ ಪದ ಧ್ಯಾನಿಪ ಕರುಣವ ಬೀರುವಂಥ 1 ಆದಿ ಪ್ರಹ್ಲಾದರು ಮೋದದಿ ಹರಿಪದ ಆದರದಿಂದ ಜಗಕೆ ಸಾಧಿಸಿ ಬೀರಿದರೊ 2 ದ್ವಿತೀಯ ವ್ಯಾಸರಾಜ ಸ್ತುತ ಬ್ರಹ್ಮಣ್ಯಾರ್ಯ ಕರ ಗತಪುರುಷೋತ್ತಮ ಗುಹ ಪಥದೊಳಗಿಪ್ಪರ 3 ತೃತೀಯ ರಾಘವೇಂದ್ರ ಪತಿತ ಪಾವನ ನಾಮ ರತ್ನ ಖಚಿತವಾಗಿದೆ ಭಕ್ತ ಸುಚರಿತರೆಲ್ಲ ಬೇಗ 4 ಭೂತ ಪ್ರೇತಗಳ ಪ್ರೀತಿಯೊಳಳಿದು ಶ್ವೇತ ಕುಷ್ಠಗಳ ದೂರ ಮಾಳ್ಪವರ 5 ಪಾದ ಪಂಕಜ ದುರಿತ ದೂರ ಶ್ರೀ ಶ್ರೀನಿವಾಸನ ಭಜಿಪ ಗುರು 6
--------------
ಸರಸ್ವತಿ ಬಾಯಿ
ರಾಘವೇಂದ್ರರಾಯರೆಂಬ ರತುನ ದೊರೆಕಿತೋ ಪಾದಸೇವೆ ಮಾಡುವಂಥ ಭಾಗ್ಯ ಲಭಿಸಿತೋ ಪ ಮಂಗಳಾರಿಗರು ತುಂಗಾತೀರದಿ ನಿಂದಿಹರೋ ಕಂಗಳಿಂದಲಿ ಕಂಡು | ಮನದಿ ಹರುಷಗೊಳುವರೋ1 ನಿತ್ಯ ನಿತ್ಯದಿ ಭಕ್ತಾದಿಗಳು ಹಾಡಿ ಪೊಗಳುವರೋ ತುಷ್ಟ ಬಾಗುತಲವರ ಮನದಿಷ್ಟಗಳನೆ ಸಲಿಸುವರೊ 2 ಬಂದ ಬಂದ ಜನರಿಗೆಲ್ಲ ಮೃಷ್ಟಾನ್ನ ಉಣಿಸುವರೊ ಉಣಿಸಿ, ದಣಿಸಿ, ಹರಸಿ, ಅವರನಾದರದಿ ಕಳಿಸಿಕೊಡುವರೋ 3 ಶ್ರೀ ರಾಘವೇಂದ್ರರೂ ನಂತ ಮಹಿಮರೂ 4 ಅಂದಣವೇರಿ ರಾಯರು ಬರುವಾ ವೈಭವ ನೋಡುತ್ತಾ ಮುಂದೆ ಬಂದು ಶ್ರೀ ರಾಘವೇಂದ್ರರಿಗೊಂದಿಸೂವರೂ 5
--------------
ರಾಧಾಬಾಯಿ
ರಾಘವೇಂದ್ರರು ಸುಂದರ ಗುರು ರಾಘವೇಂದ್ರರೆಂತೆಂಬುವೋ ಕರ್ಮಂದಿಗಳರಸನೆ ವಂದಿಸುವೆ ಪ ಸನ್ನುತ ಮಹಿಮರೆಂದು ನಾ ಬೇಡುವೆ ಅ.ಪ. ಪರಮ ಕರುಣೀ ನಿಜ ಚರಣ ಸೇವಕರನ್ನು ಉದ್ಧರಿಸುತಲನುದಿನ ಪೊರೆವನೆಂದೂಕರವ ಪಿಡಿದು ತ್ವರ ಪರಿಪರಿಯಲಿ ನಿನ್ನಾತಪೊರೆಯುವೆ ಕೈ ಪಿಡಿಯೆಂದು ಕರೆಯುವೆಧರೆಯೊಳಗೆ ನಿಮ್ಮಯ ಸರಿ ಧ್ವರೆಗಳ ಕಾಣೆ ಮ-ದ್ಗುರುವೆ ಯನ್ನಂಥ ಪಾಮರ ನರನ ಕಾಯೋದು ನಿಮಗಾಶ್ಚರ್ಯವೇವರಯೋಗಿವರ್ಯನೆ ನಿರುತ ಬೃಂದಾವನದಿ ರಾಜಿಪೊಮೆರೆವ ಮಂಗಳ ಚರಣ ತವಪದಸ್ಮರಿಪೆ ಸಂತತ ನೀಡು ತ್ವರಿತದಿಹರುಷದಲಿ ನಿರ್ಜರರ ತರುವೆ 1 ಪಾದ ಚಾರು ಭೂರಿ ಕಿಟೀತಜಧೀರ ನಿನ್ನನು ಸಾರಿದವರನು ಪಾರುಗಾಣಿಪನೆಂದು ಡಂಗುರಸಾರುತಲಿದೆಯದು ವೀರಸಲಿಸೊ 2 ಏಸೇಸು ಜನ್ಮದಿ ಕ್ಲೇಶವನನುಭವಿಸಿಘಾಸಿ ಮಾಡೆನೊ ಮನದಾಶೆಯಿಂದಾಹೇಸಿ ವಿಷಯಂಗಳು ಲೇಸುತಿಳಿದು ಮರೆಮೋಸಾದಿ ದುಷ್ಟರ ಸಹವಾಸದಿ ಸೇರಿದೆಮಂದಹಾಸಾದಿ ಸಂತೈಸು ರವಿ ಸಂಕಾಶಜನಹೃದೋಷ ಸಾಗರದಿಕಾಷಾಯವಸನ ಭೂಷಿತಾಂಗ ವ್ಯಾಸಮುನಿ ಭರದೀಗಜರಾಮಪುರದೀಶ ಮುಖರಿಗೆ ತೋಷ ನೀ ಗರದಿಈ ಸಮಯ ಸ್ತುತಿಸುವೆನುಶ್ರೀ ಸಮೀರ ಮತಾಬ್ಧಿ ಚಂದಿರಈಶಗೆದುರ ರತೀಶ ಸನ್ನುತಶ್ರೀಶ ಗುರು ಇಂದಿರೇಶನಂಘ್ರಿಗೆದಾಸ್ಯ ಭಾವ ರಹಸ್ಯ ತೋರಿದೆ 3
--------------
ಗುರುಇಂದಿರೇಶರು
ರಾಜರ ನೋಡಿದಿರಾ _ ಗುರು _ ರಾಜರ ನೊಡಿದಿರಾ ಪ ರಾಜರ ನೊಡಿ _ ಭಕುತಿಯ ಮಾಡಿ ಗೋಜನ ಕರುಣಕೆ _ ಭಾಜನ ರಾದೀರಾ ಅ.ಪ. ತುಂಗ ಮಹಿಮರು _ ನರ - ಸಿಂಗ ಭಕ್ತರು ಭಂಗರಹಿತರು _ ಸುರ _ ಸಂಘ ಮಾನಿತರು 1 ಯೋಗಿ ವರ್ಯರು _ ಬಹು _ ತ್ಯಾಗಶೀಲರು ಭವ _ ರೋಗ ವೈದ್ಯರು 2 ತಂತ್ರ ಮಲ್ಲರು _ ಬಹು _ ಗ್ರಂಥಕರ್ತೃಗಳು ಮಂತ್ರ ಸಿದ್ಧರು _ ಮ _ ಹಂತ ಮಠದವರು 3 ಶಾಂತ ಮೂರ್ತಿಗಳು _ ವೇ _ ದಾಂತ ಬಲ್ಲವರು ದಾಂತ ಶೇಖರರು _ ಏ _ ಕಾಂತ ಭಕ್ತರು 4 ರಾಘವೇಂದ್ರರು _ ಇವರೆ _ ವ್ಯಾಸರಾಜರು ಭಾಗ್ಯವಂತರು _ ಪ್ರ _ ಹ್ಲಾದರಾಜರು 5 ದೂಡು ಸಂಶಯಾ ನೀ _ ಮಾಡು ಭಕುತಿಯಾ ಬೇಡು ಬಯಕೆಯಾ ಪೋ _ ಗಾಡು ದುಃಖವಾ 6 ಸೃಷ್ಠಿ ನಾಯಕಾ _ ಶ್ರೀ _ ಕೃಷ್ಣವಿಠಲನ ಶ್ರೇಷ್ಠ ಭಕ್ತರೂ _ ಸಂ-ತುಷ್ಠಿ ನೀಡುವರು 7
--------------
ಕೃಷ್ಣವಿಠಲದಾಸರು
ರಾಧಾಕೃಷ್ಣ ಮುರಾರಿ ಜಯ ಜಯ ವೇದ ವೇದ್ಯನೆ ವಿಷ್ಣು ಜಯ ಜಯ ಮೋದತೀರ್ಥ ಸುವಂದ್ಯ ಜಯ ಜಯ ಮಾಧವಾ ಮಧುಸೂದನಾ ಪ ಶ್ರೀಧರಾ ಪ್ರದ್ಯುಮ್ನ ಜಯ ಜಯ ಮತ್ಸ್ಯ ಜಯ ಜಯ ಕೂರ್ಮ ಜಯ ಜಯ ಭೂಧವ ದಾ-ಮೋದರಾ 1 ನಾರಸಿಂಹ ಉ-ಪೇಂದ್ರ ಜಯ ಜಯ ಚಾರುವಾಮನ ಪೋರ ಜಯ ಜಯ ಶ್ರೀ ತ್ರಿವಿಕ್ರಮ ವೀರ ಜಯ ಜಯ ಭಾರ್ಗವಾ-ದ್ವೀಜ ಪೋಷಕಾ 2 ರಾಮ ಲೋಕೋ-ದ್ಧಾರ ಜಯ ಜಯ ಬುದ್ಧ ಜಯ ಜಯ ಶ್ರೀಮನೋಹರ ಕಲ್ಕಿ ಕಲಿವೈರಿ 3 ಈಶ ರಸ ಅನಿ-ರುದ್ಧ ಜಯ ಜಯ ದೋಶಹರ ಸಂ-ಕಷ್ರ್ಣ ಜಯ ಜಯ ಶ್ರೀಶಹರಿ ಹೃಷಿಕೇಶ ಜಯ ಜಯ ಕೇಶವಾ ನಾರಾಯಣಾ 4 ಬಾದರಾಯಣ-ದತ್ತ ಜಯ ಜಯ ವೇಧ ಅಚ್ಚುತ-ಕಪಿಲ ಜಯ ಜಯ ಮಧ್ವಗುರು ಮಹಿ-ದಾಸ ಜಯ ಜಯ ಅಧೋಕ್ಷಜ 5 ಶ್ರೀ ಜನಾರ್ಧನ-ಋಷಭಜಯ ಜಯ ನೈಜತೇಜಾ ನಂತ ಜಯ ಜಯ ವಾಜಿವದನ ಇಂ-ಇಂದ್ರ ಜಯ ಜಯ ರಾಜ ಭಕುತರ ಭೋಜ ಸುರರಾಜ 6 ಅಜ ಧನ್ವಂತ್ರಿ ಜಯ ಜಯ ಪೃಶ್ನಿ ಗರ್ಭ ಮುಕುಂದ ಜಯ ಜಯ ಚೆನ್ನ ಬೋಧಕ ಹಂಸ ಜಯ ಜಯ ಶಿಂಶುಮಾರ ಸುಮೋಹಿನಿ 7 ಪಾಂಡುರಂಗ ವಿ-ಠೋಬ ಜಯ ಜಯ ತೊಂಡವತ್ಸಲ-ವರದ ಜಯ ಜಯ ಗಂಡುಗಲಿ ತಿ-ಮ್ಮಪ್ಪ ಜಯ ಜಯ ರಂಗನಾಥ ಪ-ರಾದ್ಯನಂತನೆ 8 ವಿಶ್ವತೈಜಸ-ಪ್ರಾಜ್ಞ ಜಯ ಜಯ ಶಶ್ವದೇಕನೆ-ತುರಿಯ ಜಯ ಜಯ ಶ್ರೀಶ “ಶ್ರೀ ಕೃಷ್ಣ-ವಿಠಲ” ಜಯ ಜಯ ಗೋವಿಂದಾ ಪುರು-ಷೋತ್ತಮಾ 9
--------------
ಕೃಷ್ಣವಿಠಲದಾಸರು
ರಾಧಾರಮಣ ವಿಠಲ ನೀನಿವಳಸಾದರದಿ ಕಾಪಾಡೊ ಹರಿಯೇ ಪ ವೇದವೇದ್ಯನೆ ಪೂರ್ಣ ಬೋಧಸನ್ನುತ ನಿನ್ನಪಾದ ಭಜಕಳ ಬಿಡದೆ ಕಾಪಾಡೊ ಹರಿಯೇಅ.ಪ. ದಾಸದೀಕ್ಷೆಯಲಿ ಅಭಿಲಾಷೆ ಪೊಂದಿಹಳಿವಳುಶ್ರೀತ ತವ ಪಾದಾಬ್ಜ ದಾಸ್ಯವನೆ ಇತ್ತೂನೀಸಲಹೊ ಸುಜ್ಞಾನ ಭಕುತಿ ಭಾಗ್ಯವನಿತ್ತುಶೇಷಾದಿ ದಿವಿಜೇಡ್ಯ ವಾಸುದೇವಾಖ್ಯಾ 1 ನಿತ್ಯ ಮಂಗಳ ಮೂರ್ತೇಸತ್ಯಭಾಮಾ ಪತಿಯೆ ಪ್ರತ್ಯಹರ ನಿನ್ನ ಸ್ಮøತಿಇತ್ತು ಪಾಲಿಸು ಎಂದು ಪ್ರಾರ್ಥಿಸುವೆ ನಿನ್ನಾ 2 ಆಪನ್ನ ಪರಿಪಾಲಕಾಪಾಡ ಬೇಕಿವಳ ಗೋಪಾಲ ಬಾಲಾ 3 ಪತಿಯೆ ಪರದೈವವೆಂಬುನ್ನತದ ಮತಿಯಿತ್ತುಹಿತದಿಂದ ಮಧ್ವಮತ ತತ್ವಾಮೃತವನುಣಿಸೀಕೃತ ಕಾರ್ಯಳೆಂದೆನಿಸಿ ಹೃತ್ಸರೋಜದಿ ಚರಣಶತ ಪತ್ರ ತೋರಯ್ಯ ಶ್ರುತಿವಿನುತ ಹರಿಯೆ 4 ಘೋರ ದುರಿತಾಬ್ಧಿಯನು ಪಾರಗೈಸುವ ನಿನ್ನಕಾರುಣ್ಯಕೆಣೆಯುಂಟೆ ನೀರಜಾಕ್ಷಾಚಾರುಗುಣವಂತೆ ಬಾಲೆಯನು ಉದ್ಧರಿಸುಮಾರಾರಿ ಸಖ ಗುರು ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ರಾಧೆ ಗೋಪಾಲ ಕೃಷ್ಣ ರಾಧೆಗೋಪಾಲ ರಾಧೆ ಗೋಪಾಲ ಕೃಷ್ಣ ರಾಧೆಗೋಪಾಲ ಪ ನಂದನಕಂದ ಮುಕುಂದಮುರಾರೆ ಇಂದಿವರಾಕ್ಷ ಗೋವರ್ದನಧಾರೆ ವೃಂದಾವನ ಸಂಚಾರ ವಿಹಾರೇ ಸಿಂಧುಶಯನ ಕ್ಷೀರಾಬ್ಧಿವಿಹಾರ 1 ಚಕ್ರಧರ ವೇಣುವಿನೋದ ಶಂಕರಾದಿ ವಂದಿತ ದಿವ್ಯಪಾದ ಬಿಂಕದಿಂದ ಕೊಳಲೂದುವನಾದ ಪಂಕಜಾದಿಗಳು ನಲಿವ ಸುಸ್ವಾದ 2 ಮಂದರಧರÀ ಗೋವರ್ಧನ ಧಾರಿ ಮಂದೆ ಗೋವತ್ಸವ ಕಾಯ್ವ ಶೌರಿ ಇಂದಿರೆಯರಸ ಶ್ರೀಹರಿಯೆ ಮುರಾರಿ ನಂದಯಶೋದೆಯ ಮೋಹದ ಶೌರಿ3 ವೃಂದಾವನದೊಳು ನಿಂದ ಗೋವಿಂದ ಮಂದಹಾಸ ಮುಖನಗೆ ಮೊಗದಿಂದ ಸುಂದರ ಗೋಪಿಯರೊಡಗೂಡಿ ಬಂದ ಮಂದರಧರ ಆನಂದ ಮುಕುಂದ 4 ಕಾಮನಪಿತ ಶ್ರೀ ಕಂಜಜನಾಭ ಕಾಮಿತ ಫಲಗಳ ಕರುಣಿಪ ಶ್ರೀಧ ಕಮಲನಾಭ ವಿಠಲ ನಿಮ್ಮ ಪಾದ ಕರುಣದಿ ನೆನೆವರ ಸಲಹುವಮೋದ 5
--------------
ನಿಡಗುರುಕಿ ಜೀವೂಬಾಯಿ