ಒಟ್ಟು 774 ಕಡೆಗಳಲ್ಲಿ , 85 ದಾಸರು , 607 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾಲಿಸು ಪರಮೇಶ | ಪಾಪ ವಿನಾಶ ಪ ಫಾಲನಯನ ತ್ರಿಶೂಲಧರ ಕರು ಣಾಲವಾಲ ವಿಶಾಲ ಮಹಿಮನೆ ಕಾಲಕಾಲ ಕಪಾಲಧರ ಸುರ ಜಾಲನುತ ಪದ ಶೈಲಜಾವರ ಅ.ಪ. ಶಂಕರ ಶಶಿಶೇಖರ | ಸದಾಶಿವ ಸಂಕಟಹರ ಈಶ್ವರ | ವರದಾನ ಶೂರ ಶಂಕೆಯಿಲ್ಲದೆ ತ್ವತದಾಂಬುಜ ಪಂಕ ಕಳೆವ ಅಕ ಳಂಕ ಮತಿಯನು ಕರುಣಿಸುವ ಮೀ ನಾಂಕ ಮದಹರ ಮೃಡಸುರೇಶ್ವರ 1 ಗಜ ಚರ್ಮಾಂಬರಧರನೆ | ಗೌರೀವರನೆ ಅಜಸುತಾಧ್ವರ ಹರನೆ | ಪ್ರಣಿತಾರ್ಥಿಹರನೆ ನಿಜಪದಾಂಬುಜ ಪೂಜೆ ಮಾಡುವ ಸುಜನ ಮನ ಅಂಬುಜ ದಿವಾಕರ ಭಂಜನ ಭುಜಗಭೂಷಣ ನಿಜ ಚರಣ ಪಂಕಜವ ತೋರಿಸಿ..... 2 ಹರಿನೀಲನಿಭಕಂಧರ | ಮುಪ್ಪುರಹರ ಶರಣಜನ ಮಂದಾರ | ಕೈಲಾಸಮಂದಿರ ವರ ವಿನಾಯಕ ಜನಕ ಜಾಹ್ನವಿ ಧರನೇ ಕರುಣಾಭರಣ ಪಾವನಕರಿಗಿರೀಶನ ಪರಮಪ್ರಿಯ ಹರಿ..... 3
--------------
ವರಾವಾಣಿರಾಮರಾಯದಾಸರು
ಪಾಲಿಸೆನ್ನ ಮಾತೆ ಕರುಣದಿ ಪಾಲಾಂಬುಧಿ ಜಾತೆ ಪ ಕಾಲಕಾಲಕೆ ಕಮಲಾಲಯೆ ಗೋಪಿಯ ಬಾಲನಾಳುಗಳ ಊಳಿಗವಿತ್ತು ಅ.ಪ ಜಾನಕಿಶುಭಗಾತ್ರೆ ನಮಿಸುವೆ | ಮಾನಿತೆ ಚರಿತ್ರೆ ಸಾನುರಾಗದಿ ತವ ಸೂನುವೆನಿಪ ಪವ ಮಾನಸುಶಾಸ್ತ್ರದ ಜ್ಞಾನವಿತ್ತು ಸದಾ 1 ಶಂಭು ದೃಹಿಣಿ ವಿನುತೆ ತ್ರೈಜಗ ದಂಬೆ ಸುಗುಣ ಭರಿತೆ | ಕುಂಭಿಣಿ ಸುತೆ ದುರ್ಗಾಂಭ್ರಣಿ ಮಮಹೃದ ಯಾಂಬುಜದೊಳಿಹ ಬಿಂಬನ ತೋರಿ 2 ಪ್ರೇಮದಿಂದ ನೋಡೆ ಮನ್ಮನ | ಧಾಮದಿ ನಲಿದಾಡಿ | ಕಾಮಿನಿಮಣೀ ಗಜಗಾಮಿನಿ ಗೋಮಿನಿ ಶಾಮಸುಂದರನ ವಾಮಾಂಗಿಯೆ ಸದಾ 3
--------------
ಶಾಮಸುಂದರ ವಿಠಲ
ಪಾಲಿಸೈ ಗೋಪಾಲರಾಯಾ ಶೀಲ ಭಕುತಿ ಜ್ಞಾನವ ನಿತ್ಯ ಸಲಿಸುತ ಪ್ರಸನ್ನನಾಗಿ ಪ ಓಡಿಸಿ ವಿಷ್ಣುವ ನೀಡು ವೈರಾಗ್ಯವ ಬೇಡುವೆ ನಾ ಕೃಪೆ ಮಾಡಿ ಗತಿ 1 ಆರ್ತರಭೀಷ್ಟೆಯ ಪೂರ್ತಿಪದಾನಿ ಶುಭ ಮೂರ್ತಿಸದಾ 2 ಶಾಮಸುಂದರ ಸ್ವಾಮಿಯ ನಿಜ ದಾಸ ಮೌನಿಯ ಘನ ಪ್ರೇಮಾನಿಸ್ವಿತಾ 3
--------------
ಶಾಮಸುಂದರ ವಿಠಲ
ಪಾಲಿಸೈ ಶ್ರೀ ಲೋಲನೆ ಎನ್ನ ಪ ಕಾಲ ಯಾಲ, ಶೋಭಿತ ರತ್ನಜಾಲ, ಭೂಷಿತ ಲೀಲ ಅ.ಪ ತ್ರಿಜಗ ಬಂಧು, ಪೊರೆಯೊ ದಯಾಸಿಂಧು ನುತಿಪೆನಿಂದು 1 ಹಾರ, ಭವದೂರ, ಸುಖಸಾರ, ಯದುವೀರನೆ 2 ಭವ ರ್ವೇಶ, ದೇವೇಶ ಸದಾನಂದ ಶ್ರೀನಿವಾಸ 3
--------------
ಸದಾನಂದರು
ಪಾಲಿಸೋ ಶ್ರೀ ಗುರುರಾಯಾ ಪ ಕಾಯ - ಭವ ಜಾಲ ತಪ್ಪಿಸೊ ಮಹರಾಯ - ಆಹಾ ಪಾಲಗು ಜನರ ಸು - ಪಾಲಕ ಹರಿಪಾದ ಭವ - ತೂಲಕಾನಲನೆ ಅ.ಪ ಶೇಷಾಂಶ ಪ್ರಹ್ಲಾದ ವ್ಯಾಸಾ - ಮುನಿ ವೇಷ ತಾಳಿದೆಯೊ ಯತೀಶಾ - ಜಾಗು ಪೋಷಣೆ ಗೈಯ್ಯೊ ಮನೀಷಾ - ಎನ್ನಾ - ಶೇಷ ಕ್ಲೇಶವಳಿದೀಶಾ - ಆಹಾ ಭವ ನಿ - ಸ್ಸೇಷ ಮಾಡಿ ಎನ್ನ ಪೋಷಿಸೊ ನಿರುತ ಧೃ - ತಾಷಾಢ ಗುರುವರ 1 ಕಾಮಧೇನು ಕಲ್ಪವೃಕ್ಷಾ - ನಿನ್ನ ಈ ಮಹಮಹಿಮೆ ನಿರೀಕ್ಷಾ - ಮಾಡಿ ಈ ಮಹಿ ಯಾಕೆಂದುಪೇಕ್ಷಾ - ಮಾಡಿ ಧಾಮ ಸೇರಿದವೊ ಭಕ್ತಪಕ್ಷಾ - ಆಹಾ ಸಾಮಜನಾಥನ ಪ್ರೇಮ ಪಾತ್ರನೆ ನಿನ್ನ ಈ ಮಹ ಮಹಿಮೆಗೆ ನಾಮಾಳ್ಪೆ ನಮೊ ನಮೊ 2 ಆಸೇತು ಹಿಮಾದ್ರಿ ತನಕಾ - ನಿನ್ನ ಆಸೆಯ ಮಾಳ್ಪರನೇಕಾ - ಅಂಥ ದಾಸಜನರಿಗೆ ಅನೇಕಾ - ಫಲ ರಾಶಿಯ ಕೊಡುವಿ ಮಜ್ಜನಕಾ - ಆಹಾ ಮಾನವ ಜನ್ಮ ಈಸೆ ಸಾಕೆಲೊ ಸ್ವಾಮಿ ಎಸು ಪೇಳಲಿ ನಿನ್ನ ದಾಸರ ದಾಸನೋ 3 ಎಲ್ಲಿ ಪೋದರು ಕಾಯ್ವರಿಲ್ಲ - ಜಗ - ದ್ವಲ್ಲಭ ಬಲ್ಲಿ ನಿನೆಲ್ಲಾ - ಬಹು ಬಲ್ಲಿದನೆಂಬುವರೆಲ್ಲಾ - ಜನ ಸೊಲ್ಲು ಕೇಳಿಬಂದೆನಲ್ಲಾ - ಆಹಾ ಪುಲ್ಲಲೋಚನ ನೀ - ನಲ್ಲದೆ ಎನ ಭವ ಣೆಲ್ಲ ಮಾತ್ರವು ಕಳೆಯೊ - ರಿಲ್ಲವೊ ಎನ್ನಜೀಯಾ 4 ನಾಥ ನಿನ್ನೊಳು ಜಗಕೆಲ್ಲ - ಮಹ ಪ್ರೀತಿಯು ಇರುತಿಹುದಲ್ಲ - ಸದ - ತಾತ ನೀನಾಗಿ ಜಗಕೆಲ್ಲಾ - ಮತ್ತೆ ಪೂತ ಫಲ ಕೊಡುವಿಯಲ್ಲಾ - ಆಹಾ ದಾತ ಗುರುಜಗ - ನ್ನಾಥವಿಠಲ ಸದಾ ಪ್ರೀತಿಂದ ಇರುವೊನು5
--------------
ಗುರುಜಗನ್ನಾಥದಾಸರು
ಪಾಲಿಸೋ ಸದಾ ಪರಿಪಾಲಿಸೋ ಪಾಲಿಸೋ ಪಾರ್ವತಿ ರಮಣ | ತ್ರಿದ ನಾಲಿಗೆಯಿಂದಲಿ | ಶ್ರೀಲಕುಮೀಶನ ಕಾಲ ಕಾಲಕ್ಕೆ ಕೊಟ್ಟು ಅ.ಪ ಭೇಷಪಾವಕ ಪತಂಗ | ನಯನ ಭಾಸುರ ಸ್ಪಟಿಕ ನಿಭಾಂಗ | ಹರಿ ದಾಸ ಜನರ ಸುಸಂಗವಿತ್ತು ದೋಷ ಕಳೆಯೊ ರಾಮಲಿಂಗ ಆಹಾ 1 ಕೇರ ಕುಮಾರ ಕುಮಾರ | ಪಿತ ಕೀರನಾಮಕನವತಾರ |ಕೀರಾ ದೇವನ ಗರ್ವಪರಿಹಾರ | ತಾಟ ಕಾರಿನಾಮ ಸವಿಗಾರ | ಆಹಾ ಶರಧಿ ವೈಕಾರಿಕÀ | ತತ್ವಾಧಿ ಕಾರಿ ವಿಕಾರಿ ಷಕಾರ ಪದಾರ್ಚಕ 2 ನಂದಿವಾಹನ ನಾಗಶರನೆ | ನೀಲ ಸುರನದಿ ಧರನೆ | ಶಾಮ ಸುಂದರ ವಿಠಲನ ಸಖನೆ ಮಹಿ ಶ್ಯಂದನ ಶಿವಶಂಕರನೆ | ಆಹಾ ಒಂದೂರಾರ್ಯರ ಕರದಿಂದ ಪೂಜಿತನಾಗಿ ನಿಂದು ಭಜಿಪರಿಗಾನಂದವೀವ ದೇವ 3
--------------
ಶಾಮಸುಂದರ ವಿಠಲ
ಪಾವನಿ ನಿರಂಜನಿ ಪಾವನಿ ಧ್ರುವ ಆದಿನಾರಾಯಣಿ ಸಾಧುಜನವಂದಿನಿ ಸದಾನಂದರೂಪಿಣಿ ಸದ್ಗತಿ ಸುಖದಾಯಿಣಿ 1 ಲಕ್ಷುಮಿ ರೂಪಿಣಿ ಸಾಕ್ಷಾತ್ಕಾರಿಣಿ ರಕ್ಷರಕ್ಷಾತ್ಮಿಣಿ ಅಕ್ಷಯಪದದಾಯಿಣಿ 2 ಅನಾಥರಕ್ಷಿಣಿ ದೀನೋದ್ದಾರಿನೀ ಅನಂತಾನಂತಗುಣಿ ಮುನಿಜನ ಭೂಷಣಿ 3 ದಾರಿದ್ರ್ಯಭಂಜನಿ ದುರಿತವಿಧ್ವಂಸಿನಿ ಪರಮಸಂಜೀವಿನಿ ಸುರಮುನಿರಂಜನಿ 4 ಸ್ವಾಮಿ ಶ್ರೀ ಗುರುವಿಣೆ ಬ್ರಹ್ಮಾನಂದ ರೂಪಿಣಿ ಮಹಿಪತಿಕುಲಸ್ವಾಮಿಣಿ ನೀನೆ ಪರಮಪಾವನಿ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಪಾಹಿ ರಮಾ ಮನೊಹರ ಪಾಪಿ ಪ ಪಾಹಿ ಸದಾಗಮವೇದ್ಯ ಸಕಲ ಕ ಲ್ಯಾಣ ಗುಣಾರ್ಣವ ಲೀಲಾಮಾನುಷ ಅ.ಪ ಆನೆಯೊಂದು ಕರೆಯಲು ಆ ಕ್ಷಣದಲಿ ನೀನೇ ಬಂದುದೇಕೆ ದೇವ ನೀನೇ ಪಡೆದ ಮಕ್ಕಳ ದೈನ್ಯದ ನುಡಿ ನೀನಲ್ಲದೆ ಕೇಳುವರ್ಯಾರಿರುವರು1 ತುರುವಿನ ಕೆಚ್ಚಲ ಕರು ಗುದ್ದಿದರದು ಕರೆಯದೇ ಕ್ಷೀರವನು ದೇವ ಮರೆತು ಎನ್ನ ಅಪರಾಧಗಳೆಲ್ಲವ ಮರೆಯದಿರೆಲೊ ಎನ್ನಯ ಬಾಂಧವ್ಯವ 2 ಅತ್ತು ಕರೆದು ಔತಣ ನೀಡಿದ ಪರಿ ನಿತ್ಯ ಸೇವೆಯಾಯ್ತೋ ಕೃಷ್ಣ ನಿತ್ಯ ಪೂರ್ಣ ಕರುಣಾಮಯ ಕರುಣಿಸೊ ಚಿತ್ತ ಪ್ರಸನ್ನತೆ ಸಾರ್ಥಕ ಜೀವನ 3
--------------
ವಿದ್ಯಾಪ್ರಸನ್ನತೀರ್ಥರು
ಪಾಹಿ ಶ್ರೀ ಉರಗಾದ್ರಿವಾಸವಿಠಲನೇ ಮದ್ಹøಯರಾಂತರಾತ್ಮ ವಿಠಲನೇ ಸಲಹೊ 1 ದೇಹದಲಿ ನಲಿವ ತಾಂಡವ ಕೃಷ್ಣವಿಠಲನೆ ನಿನ್ನಿಷ್ಟ ಭಕುತರ ಮನೋಭೀಘ್ಟವನೆ ಸಲಿಸಯ್ಯ 2 ವಂದಿಪೆ ತಂದೆ ವೇಂಕಟೇಶ ವಿಠಲ ಬಂದು ದಯವೀಯೋ ಜಯಾಪತಿವಿಠಲ ಬಂಧ ಮೋಚಕ ಶಾಂತೀಶ ವಿಠಲನೆ ನಿನ್ನ ಸಂದ ಭಕುತರ ಕಾಯ್ವ ಗಜವರದವಿಠಲ3 ಶೇಷ ಶಯನ ವಿಠಲ ದೋಷರಾಶಿಯ ಕಳೆದು ಮನದಾಶಯ ಸಲಿಸಯ್ಯ ಹರಿವಿಠಲ ಶೈಶವದಿ ಕಾಯ್ದಂತೆ ಧೃವತವರದವಿಠಲನೆ ಈಸಮಯದಲ್ಲೆ ಗುರುವಾಸುದೇವ ವಿಠಲ 4 ವರದ ಲಕ್ಷ್ಮೀ ರಮಣವಿಠಲನೆ ಎನ್ನ ಅವಿದ್ಯೆಯನೆ ಹರಿಸೊ ಪ್ರದ್ಯುಮ್ನವಿಠಲ ಪರಮಪುರುಷಾ ವರದ ವೇಂಕಟೇಶ ವಿಠಲನೆ ಪರಮ ಸಾಧನ ನೀಡೋ ಸುಜ್ಞಾನವಿಠಲ 5 ಶ್ರೀನಾಥವಿಠಲನು ತೈಜಸನು ನೀನೆ ದೀನರಕ್ಷಕ ಭಾರತೀಶಪ್ರಿಯ ವಿಠಲ ಪರಮಪಾವನ ಕಾಯೊ ವರಹವಿಠಲ ಮೂರ್ತೆ ವರಮತಿಯ ನೀಡೊ ಆನಂದಮಯವಿಠಲ 6 ವಿಜ್ಞಾನಮಯ ಮನದ ಅಜ್ಞಾನವನು ಹರಿಸೊ ಸ- ರ್ವಜ್ಞ ನೀನೇ ಶ್ರೀ ಪ್ರಾಜ್ಞವಿಠಲನೆ ಯಜ್ಞ ಭುಗ್ಯಜ್ಞ ಸಾಧಕನು ನೀ ಜಗದ್ಭರಿತ ವಿಠಲ ನೀನೆನ್ನ ಸಲಹೊ 7 ಶುಧ್ದ ಮೂರುತಿ ಶ್ರೀ ವಿಜ್ಞಾನಮಯ ವಿಠಲ ಸರ್ವಕಾರ್ಯದಿ ಮನಶುದ್ಧಿಯ ನೀಡೋ ಮಧ್ವಗುರು ಶ್ರೀಕೃಷ್ಣ ದ್ವೈಪಾಯನ ವಿಠಲ ಮದ್ಭಾರ ನಿಳುಹಿ ನೀ ಉದ್ಧ್ದಾರ ಮಾಡೊ8 ರಕ್ಷಿಸೊ ಲಕ್ಷ್ಮೀಶ ವಿಠಲನೆ ಎನ್ನ ಮನ ದಕ್ಷಿಯೊಳು ನೆಲೆಸೊ ಶ್ರೀ ವೇಂಕಟೇಶವಿಠಲ ಕುಕ್ಷಿಯೊಳು ಬ್ರಹ್ಮಾಂಡ ರಕ್ಷಿಪ ಶ್ರೀರಮಣ ವಿಠಲ ನಿನ್ನದಾಸದಾಸ್ಯವÀ ದೇಹಿ 9 ಶರಣ ಜನ ಪ್ರೀಯ ಶ್ರೀವರದ ವಿಠಲ ದೇವಾ ದುರಿತಾರಿ ಪನ್ನಂಗಶಯನ ವಿಠಲ ಗುರೋರ್ಗುರುಗೋವಿಂದವಿಠಲ ಪಾಹಿ 10 ವರ ತಂದೆ ಮುದ್ದು ಮೋಹನ ವಿಠಲಾತ್ಮಕ ಶ್ರೀ ಉರಗಾದ್ರಿ ವಾಸವಿಠಲ ಸ್ವಾಮಿ ಶರಣರಿಗೆ ಆಯುe್ಞರ್Áನ ಸಂಪತ್ ಭಕ್ತಿಸಾಧನೆಗಳಿತ್ತು ಸಲಹೊ11
--------------
ಉರಗಾದ್ರಿವಾಸವಿಠಲದಾಸರು
ಪುಟ್ಟಿದೆ ಭುವಿಯೊಳು ಬಹುದಿನ ಕಳೆದೆನೊಪುಟ್ಟಿಸ ಬೇಡವೆನ್ನ ಪ ಪಟ್ಟಾಭಿರಾಮನೆ ಪರಮಘಟ್ಯಾಗಿ ನಿನ್ನ ಪಾದಗಳ ನಂಬಿದೆ ದೇವ ಅ.ಪ ಎಂಭತ್ತು ನಾಲ್ಕು ಲಕ್ಷ ಯೋನಿಯಚೀಲಗಳಲಿ ಬಂದೆನೊ ಕುಂಭಿಣಿಯೊಳು ಪುಟ್ಟಿ ಬಹು ಪಾಪಗಳ ಮಾಡಿಕುಂಭೀಪಾಕದಿ ಬೆಂದೆನೊ ಅಖಿಳ ಸುರರೊಡೆಯನೆಅರ್ತಾರ್ತಿಹರನೆಂದು ಕೇಳಿ ಬಂದೆನು ನಾನು 1 ಜನಪಾಶ ಬದ್ಧನಾದೆಮೀನು ಮಾಂಸದಾಸೆಗ್ಹೋಗಿ ಸಿಕ್ಕಿದಂತೆಮೋಸ ಹೋದೆನೊ ಬರಿದೆಏಣವು ಕಿಂಕಿಣಿಧ್ವನಿಗೆ ಮರುಳಾದಂತೆಇಳೆಯೊಳು ಮಂಕಾದೆನೊಏನೆಂಬೆ ದಾಸರಿ ಕೋಡಗದಂದದಿಕುಣಿಯುವೆ ನಾನೆಲ್ಲ ಜನಗಳ ಮುಂದೆ 2 ಕಾಯ ಪೋಷಣೆಗಾಗಿ ಹೇಯಕರ್ಮಂಗಳಕಾಲ ಕಾಲದಿ ಮಾಡ್ದೆನೊಜಾಯಾದಿಗಳ ರಕ್ಷಣೆಮಾಡೆ ಅದರಿಂದಜಾಗರೂಕನಾದೆನೊನ್ಯಾಯರಹಿತನಾಗಿ ಗುರು ಹಿರಿಯರ ಪಾದಭಜನೆ ಮಾಡದೆ ಪೋದೆನೊಕಾಯಜನೈಯನೆ ಶ್ರೀಕೃಷ್ಣರಾಯನೆಕಾಯಬೇಕೆನ್ನಪರಾಧಗಳನು ದೇವ3
--------------
ವ್ಯಾಸರಾಯರು
ಪುರಂಜನೋಪಾಖ್ಯಾನ ಲಾವಣಿ ಗೆರಗಿ ಮಹೇಶ್ವರನಾ ಶಾರದೆಯ ಸರಸಿಜಸಂಭವನಾ | ಇಂದಿರೆ ಪರಮಭಕ್ತಿಯಲಿ ಪ್ರಾರ್ಥಿಸಿ ಸತ್ಕವಿ ಕರುಣಿಪುದು ಜ್ಞಾನ | ಚರಣಗಳಿಗೆ ಬಿನ್ನೈಸುವೆನಾ 1 ಯತಿಗಣಪ್ರಾಸೊಂದಾದರು ತಿಳಿಯದು ಮತಿಹೀನನು ನಾನು | ನಾನಾಚಮ- ತ್ಕøತಿಗಳರಿಯದವನು | ಆದರೀ ಕೃತಿಯಲಿ ತಪ್ಪೇನು | ಮತಿವಂತರಾಲಿಸುವುದು ನೀವಿದನು 2 ಒಂದರೊಳಗೆ ಎರಡಾಗಿ ಎರಡರೊಳು ಹೊಂದಿ ಮೂರ್ನಾಲ್ಕೈದಾಗಿ ಆರೇಳೆಂಟೊಂಬತ್ತುಗಳಾಗಿ | ಸಕಲದೊಳು ಹೊಂದಿರುವುದುತಾಗಿ ಕುಂದಿಲ್ಲದೆ ಇರುತಿರುವ ಮಹಾತ್ಮನ ರಂದವ ಚನ್ನಾಗಿ | ತಿಳಿದು ಸುಖ ತಂದವನೇಯೋಗಿ 3 ಮೊದಲು ಮಹತ್ ಸೃಷ್ಟಿಯಲಿ ಎಲ್ಲತ- ತ್ವದಲಿ ತೋರುತಿಹುದು ಬೇರೆಬೇರಾಗಿ ಕಾಣಿಸುವುದು ಅದುಭುತವಾಗಿಹ ಅನಾದಿ ಕರ್ಮತ್ರಿ- ವಿಧದಿ ಭಾದಿಸುವುದು | ಅದರೊಳು ಬಿ- ಡದೆ ತಾ ಮುತ್ತುವುದು ಎಂದಿಗು ನಿಜವತಿ ರಹಸ್ಯವಿದು 4 ಮೊಟ್ಟೆವೊಂದು ದಶಸಾವಿರವರುಷಗ ಳಿಟ್ಟು ಜಲದಿತಾನು | ಅದಕೆ ಕೈ- ಗೊಟ್ಟು ಎಬ್ಬಿಸಿದನು | ನಾನಾ ವಿಧ ವೆಷ್ಟಿ ಸಮಷ್ಟಿಗಳೆರಡೆಂದದರೊಳು ಗುಟ್ಟಂಗಡಿಸಿದನು | ಗುರಿಯಮಾ ಡಿಟ್ಟು ಚೇತನಗಳನು | ಅನೇಕವು ಪಟ್ಟಣ ರಚಿಸಿದನು 5 ಈ ಪಟ್ಟಣಕಾರ್ ಮಂದಿ ಇರುವರತಿ ಕಾಪಾಡುವರದರೊಳು ವ್ಯಾಪಾರಗಳನು | ಬಹುವಿಧಮಾಡುವ- ರಾಪುರ ಜನರುಗಳು | ಇವರುನಡೆ ಕೋಪಿಸೆ ಹಗಲಿರುಳು 6 ಎರಡು ಮಾರ್ಗದೊಳಿರುತಿಹರೆಲ್ಲರು ಹುರುಡಿಲ್ಲವುನೋಡೆ | ಗಜಿಬಿಜಿಯು ತರತರದಲಿಮಾಡೆ | ನಮಗಿದೆ ಸ್ಥಿರವೆನ್ನುತ ಕೂಡೆ | ಪರಿಪರಿ ಬಗೆಯಲಿ ಭೇದ ಪುಟ್ಟುವುದು ಕರೆಕರೆಯಂದುಡೆ | ವಳಗೆಕೆಲ ಬರುಹರುಷದಿ ನೋಡೆ | ಯುವಶೃಂ- ಗರುವು ಇದಕೆ ಈಡೆ 7 ಇದೆತನ್ನದೆನುತೋರ್ವಳು ಮಾನಿನಿ ಚದುರತನದಿ ಬಂದು | ಊರ ಮುಂದಿರುವ ವನದಿ ನಿಂದು | ಅವಳಿಗಿರು ವುದು ಜನ ಹನ್ನೊಂದು ಚದುರೆಯೈದುತಲೆ ಸರ್ಪವಾಡಿಸುತ ಜಾಣೆಯಿರುವಳಂದು | ತಾನೊಬ್ಬನ ಇಂದು | ಸುಖದೊಳಾ- ಳ್ಬೇಕುರಾಜ್ಯವೆಂದು 8 ಅರಸನೊಬ್ಬ ವಿಜ್ಞಾತನೆಂಬ ಭೂ- ಸುರನಸಹಿತನಾನಾ | ದೇಶಗಳ ತಿರುಗುತ ಉದ್ಯಾನ | ವನದಿಕಂ- ಡನು ಆತರುಣಿಯನ ಪರಮ ಮಿತ್ರನಹ ಬ್ರಾಹ್ಮಣನ ಮರೆತು ಹರುಷದಿ ಪೊಕ್ಕುವನ | ಸ್ಮರಶರಕೆ ತರಹರಿಸುತಲಿರೆ ಮನ | ಕೇಳಿದನು ನಗುತಲಿ ನಾರಿಯನ 9 ಯಾರೆ ಹುಡುಗಿ ನೀನ್ಯಾರೆ ನಿನ್ನ ಪೆಸ- ರೇನು ಪೇಳೆ ಹೆಣ್ಣೆ | ಮಾತನಾ- ಡೆಲೆ ತಾವರೆಗಣ್ಣೆ | ನಿನ್ನ ಮೈ- ಸುಲಿದ ಬಾಳೆಯ ಹಣ್ಣೆ ಯಾರದು ಈ ಜನ ಉರಗವೇನು ವನ- ವಾರದು ಶಶಿವದನೆ | ಈ ಪುರವ- ನಾಳುವನಾವವನೆ | ಒರ್ವಳಿ- ಲ್ಲಿರುವುದಕೇನ್ಹದನೆ 10 ಎನಲು ನಸುನಗುತವನಿತೆನುಡಿದಳೀ ಜನಗಳು ನನ್ನವರು | ಇಲ್ಲಿಕಾ- ಣುವ ಪುರ ನನ್ನೂರು | ಸರ್ಪನ- ನ್ನದು ಇದಕಿನ್ನಾರು | ಅರಸರಿಲ್ಲ ನಾನೊಬ್ಬಳಿರುವೆನೀ ವನದೊಳು ನೀನ್ಯಾರು | ನಿನ್ನಕಥೆ ವಿವರಿಸೆನಗೆ ತೋರು | ಯನ್ನ ಬಳಿ- ಗಿಷ್ಟವಿರಲುಸಾರು 11 ಎಲ್ಲಿ ನೋಡೆ ಸ್ಥಳವಿಲ್ಲವೆನಗೆ ನಿ- ನೆನ್ನ ಪುಷ್ಪಶರನು | ನೀನುಪೇ- ಪರಿ ವಲ್ಲಭನನು ಮಾಡಿಕೊ ಎನ್ನನು ಬಹು ಬಲ್ಲಿಯಳೆ ನೀನು | ನಿನ್ನಸರಿ ಚಲ್ವೆಯರಾರಿನ್ನು | ಇಬ್ಬ- ರಾಳ್ವೆಯೀವೂರನ್ನು 12 ಎನಲು ಹರುಷಗೊಂಡಾಕೆ ಸಮ್ಮತಿಸಿ ಜನವೆರಗಿತಂದು | ನುಡಿದಳಾಮೊಗದ- ಲಿನಗೆತಂದು | ನಿನ್ನಮೇಲ್ ಮನಸಾಯಿತುಯಿಂದು ನಿನ್ನನು ಮಾನವೇತಕಿಂದು | ಆಳು ಜನಸಹಿತ ಪುರವ ಮುಂದು ನೀನು ನಾನಿರುವೆವಾಗಿವಂದು 13 ಸರ್ವವನ್ನು ಭವದಿ ಆದರಿಸುತತತ್ಪುರ ಮಧ್ಯ | ದೊ ಳುಪ್ಪರಿಗೆಯೇರಿ ತ್ವರದಿ | ಸರ ಸಗಳನಾಡಿ | ಬಹುತರದಿ ಮುಳುಗಿ ಸಂಸಾರವೆಂಬಶರಧಿ 14 ಅನ್ನಪಾನಾಭರಣ ಕುಸುಮ ವಿನ್ನು ಗಂಧಧೂಪ | ತಾಂಬೂಲಗಳ ಮನ್ನಣೆಯಲಿ ಭೂಪ | ಪೊಂದಿದ ಸುಖ ವನು ನಾನಾರೂಪ | ನನ್ನದು ಎನ್ನುತಲಿ ಪ್ರತಾಪ | ಶಾಲಿತಾ- ರಾಜ್ಯವಾಳಿದನಾಗುತಭೂಪ 15 ದ್ವಾರಗಳೊಂಭತ್ತಾಪುರಕಿರುವುದು ಮೂರು ಪೂರ್ವದಲ್ಲಿ | ಮೇ- ಲೆರಡು ಕಿಟಕಿಗಳಿಹವಲ್ಲಿ | ಬಿಗಿಸಿ ಕಟ್ಟಿಹುದು ಕನ್ನಡಿಯಲಿ ತೋರುವುದುತ್ತರದಕ್ಷಿಣದೊಳೆರಡು ದ್ವಾರ ಪಶ್ಚಿಮದಲಿ ಕಾರಣವದರಲ್ಲಿ 16 ಮತ್ತದರೊಳಗಾರ್ಸುತ್ತು ಕೋಟೆ ಒಂ- ಬತ್ತು ಬಾಗಿಲ ಪುರದಿ | ಅನೇಕವು ಗೊತ್ತನಾವವಿಧವಿ | ಉತ್ತಮವಹಪುರದಿ | ಮುಖ್ಯವಾ- ಗಿರುವದೆರಡು ಬೀದಿ | ದೊರೆಯಮನೆ- ಯಿರುವುದು ವಿಸ್ತರದಿ17 ಇಂತರಮನೆಯಲಿ ದೊರೆ ಕಲಿಯಾಗುತ ಕಾಂತೆಯೊಡನೆ ಸೇರಿ | ಸದಾಸು- ಸ್ವಾಂತನಾಗಿಮೀರಿ | ಸೌಖ್ಯಹೊಂ- ದುತಲಾವೈಯ್ಯಾರಿ ನಿಂತರೆ ನಿಲುವನು ಕುಳಿತರೆ ಕೂಡುವ ಮಲಗಿದರೆ ನಾರಿ | ತಾನು ಮಲಗುವಯೇಕದಿ ಸೇರಿ | ಉಂಡ- ರುಣ್ಣುವನು ಅವಳನುಸಾರಿ 18 ಮನದಿಯೋಚಿಸದನೂ | ಈಗಲೆ ಮೃಗಯಾತ್ರೆಗೆತಾನೂ | ಸೊಗಸಿಂದ ಸೈನ್ಯವ ಕೂಡುತ ಪುಂ- ಚಪ್ರಸ್ಥವನವನು | ಪೊಕ್ಕು ಅ- ಲ್ಲಿರುವಮೃಗಗಳನ್ನು | ಹೊಡೆದು ಸಂ- ತೋಷದಿ ಸುಖಿಸುವೆನು 19 ಮೂರೆರಡು ಕುದುರೆಯೈದು ಮೇಲ್ ಮೂರು ಪತಾಕಿಗಳು | ಅ- ಚ್ಚೆರಡು ಎರಡು ಕೂಬರಗಳು | ಚಕ್ರ ವೆರಡುವರೂಥಗಳೇಳು ಆರಥಕೊಪ್ಪುವದೇ- ಕರಶ್ಮಿನಾಲ್ಕೊಂದು ವಿಕ್ರಮಗಳು | ಒಬ್ಬ ಸಾರಥಿ ಎರಡು ಗತಿಗಳು | ಬಿಗಿಸಿಹುದು ಕನಕಭೂಷಣಗಳು 20 ಪುರಂಜನ ಭೂ- ಕಾಂತಕರದಿ ಧನುವ | ಪಿಡಿದುಸು- ಸ್ವಾಮತದಿಂದಲನುವಾ | ಗಿಬಹ ಹನ್ನೊಂ- ದು ತನ್ನ ಜನನ | ಸಂತಸದಲಿ ಕೂ- ಡುತ ಹೊರಡುತ ತಾ ಪೊಕ್ಕನು ಕಾನನವಾ | ಶರಗಳಿಂ- ದ್ಹೊಡದು ಮೃಗನಿವಹವಾ | ಮೇರೆಯಿಲ್ಲ- ದೆ ತಟ್ಟುತ ಭುಜವಾ 21 ಇನಿತು ಬೇಟೆಯಾಡುವ ಕಾಲದಿ ತನ್ನ ಮನದಿ ನೆನೆದು ಸತಿಯಾ | ತಕ್ಷಣವೇ ಬಂದು ಸೇರಿ ಮನೆಯ | ಕಾಣದೆ ಹುಡುಕಿದನು ಯುವತಿಯ ಮಂಚದೊಳಿಹ ಸತಿಯ | ಕಂಡುಲಾ- ಲಿಸುತ ಚಮತ್ಕøತಿಯಾ | ನುಡಿಯಲುಪ- ಚರಿಸಿದನಾಕಾಂತೆಯ 22 ನೂರುವರುಷವೀರೀತಿಯವಳೊಡನೆ ನೂರುಹನ್ನೊಂದು ಮಕ್ಕಳನ್ನು | ಪಡೆದು ಸಂ- ಸಾರದಿ ಕಾಲವನು | ಯಾರೆ- ಮೀರಿ ಹೋದುದಿನ್ನು | ಮೊಮ್ಮಕ್ಕಳ ಪಡೆದನನೇಕರನು ದೇಶತುಂಬಿಸಿದ ತನ್ನ | ವರನು 23 ಉತ್ತರ ದಕ್ಷಿಣ ಪಾಂಚಾಲಗಳಾ ಳುತ್ತಲಿವನು ತನ್ನ | ಸುತರಬೆರೆ- ಯುತ್ತಸದಾ ಚಿನ್ನ | ಬೆಳ್ಳಿ ನವ- ರತ್ನರಾಶಿಗಳನಾ | ಮತ್ತೆ ಮತ್ತೆ ಕೂಡಿ- ಸುತೈಶ್ವರ್ಯದಿ ಮತ್ತನಾ | ಗುತಲನ್ಯಾ ಚಿಂತೆಯಿಲ್ಲದೆ ನಾ | ಬಲು ಪುಣ್ಯವಂತನೆ | ನ್ನುತ್ತತಿಳಿದಿರುವನಾ 24 ಚಂಡವೇಗವೆಂಬುವರಾ ತಮ್ಮತಮ್ಮ ಹೆಂಡಿರುಗಳು ತಾವು | ಸೇರಿಮು- ನ್ನೂರರವತ್ತು ಜನವು | ಗಂಧರ್ವರು ಬಂಡೆಬ್ಬಿಸಿ ಪುರವು | ದಂಡು ಮುಂದಾಗೆ ರಿಪುಬಲವು | ಕ್ಷೀಣಗತಿ ಹೊಂದುತಲಿರೆ ಪುರವು 25 ಸ್ತ್ರೀಜಿತನಾಗಿಹಕಾರಣದಲಿಯಾ ರಾಜಪುರಂಜನಗೆ | ಯತ್ನವಿ- ಲ್ಲದೆ ತನ್ನಯಪುರಿಗೆ | ಕೇಡುಬಂ- ದರು ತೋರದು ಕೊನೆಗೆ | ಶೋಕದಿ ಮನದೊಳಗೆ | ಮಿ ಡುಕುತಲಿರಲಾನೃಪತಿಮೇಗೆ | ಮತ್ತು ಶತ್ರುಗಳುನೆರೆಯೆ ಹೀಗೆ 26 ಯವನೇಶ್ವರನೊಬ್ಬನುಭಯಪ್ರಜ್ವಾ ರಾದಿ ಸೈನಿಕರನು | ಕಾಲಕನ್ಯಾಖ್ಯ ಯುವತಿಯನ್ನು | ಕರೆದುಕೊಂ- ಡೀಪುರವ ಸೇರಿದನು | ಬವರದಿ ಗೆದ್ದನು ಭವಿಸಿದನಾ ಕನ್ಯಾಮಣಿಪಟ್ಣವನು | ಭೋಗಿಸಿದ- ಳಾಪ್ರಜ್ವಾರನನು | ಸುಡಲುಪುರಿ ಕಂಡು ಪುರಂಜನನು 27 ಕಾಲಕನ್ಯೆ ತಾ ಲೀಲೆಯಿಂದಲಿ ನೃ- ಪಾಲನ ಹತ್ತಿಗೆಯಾ | ಪಿಡಿಯೆ ಹಾ- ಹಾಯೆನಲಾರಾಯಾ | ಅಬಲತೋ- ರದು ಮುಂದೆ ಉಪಾಯ | ಬಾಲಕರನು ಪತ್ನಿಯ | ನುಕೂಗಿಬಿಡು-
--------------
ಗುರುರಾಮವಿಠಲ
ಪೂಜೆಯ ಮಾಡಿದೆನೆ ದೇವರ ಪೂಜೆಯ ಮಾಡಿದೆನೆಈ ಜಗದರಸ ಚಿದಾನಂದ ತಾನೆಂದು ಪ ಶುದ್ಧ ಸ್ನಾನವನೆ ಮಾಡುತ ನಿರ್ಮಲ ವಸನವನುಬಂಧಿಸಿ ಬಿಗಿದು ಸ್ವಸ್ಥಾನಾಸ ಮಧ್ಯದಲ್ಲಿ ಕುಳಿತು 1 ನಿಸ್ಪøಹ ಭಸಿತವನೇ ಧರಿಸುತ ನಿಷ್ಕಲಂಕನಾಗಿವಿಶ್ವೇಶ್ವರ ವಿರೂಪಾಕ್ಷನೇ ತಾನೆಂದು 2 ಸರ್ವ ಪೂಜಿತನು ತಾನೀಗ ಸರ್ವನಿವಾರಿತನುಸರ್ವರೂಪಕ ತಾನೀಗೆಂದು ಧ್ಯಾನವರ್ಪಿಸಿದೆನೆ3 ಆನಂದ ವ್ಯಾಪಕನೆ ತಾನೀಗ ಆನಂದ ರೂಪಕನೇಆನಂದಾತ್ಮಕ ತಾ ನೀಗೆಂದಾಹ್ವಾನ ವರ್ಪಿಸಿದನೆ 4 ಇಂದ್ರಿಯ ರೂಪಕ ತಾನೀಗ ಇಂದ್ರಿಯ ವ್ಯಾಪಕನೇಇಂದ್ರಿಯ ಸಾಕ್ಷಿಕ ತಾನೀಗೆಂದು ಸಿಂಹಾಸನವರ್ಪಿಸಿದೆನೆ 5 ನಿಶ್ಚಲಾತ್ಮಕನವ ತಾನೀಗ ನಿಶ್ಚಲೈಕ್ಯನಾದನಿಶ್ಚಲವಸ್ತು ನಿಜತಾನೇ ಎಂದಘ್ರ್ಯವರ್ಪಿಸಿದೆನೆ 6 ವಿಶ್ವ ವಿಶ್ವಭೋಕ್ತøವಿಶ್ವಲೀಲಾತ್ಮಕ ತಾನೀಗೆಂದು ಪಾದ್ಯವರ್ಪಿಸಿದೆನೆ 7 ನಿಗಮ ಗೋಚರ ತಾನೆಂದು ಸ್ನಾನವರ್ಪಿಸಿದೆನೆ 8 ಅಂಬರ ವ್ಯಾಪಕನೇಅಂಬರದೊಳು ಚಿದಂಬರ ತಾನೆಂದು ವಸ್ತ್ರವರ್ಪಿಸಿದೆನೆ9 ಚೈತನ್ಯಾಧಾರ ತಾನೀಗ ಚೈತನ್ಯಾದೂರ ಚೈತನ್ಯಾಧಿಪತಾನೆಂದು ಯಜ್ಞೋಪವೀತ ವರ್ಪಿಸಿದನೆ10 ಕಲುಷ ನಿರ್ಜಿತನೇಕಲುಷ ಹರತಾ ನಿಜವೆಂದಾಭರಣವರ್ಪಿಸಿದೆನೆ11 ಲೇಪಕ್ಕಾಧಾರ ತಾನೀಗ ಲೇಪ ನಿರಾಧಾರಲೇಪಹರ ತಾ ನಿಜವೆಂದು ಅನುಲೇಪವರ್ಪಿಸಿದೆನೆ12 ಪುರತನು ವಿಸ್ತರಿಸಿ ತಾನೀಗ ಪುರಾಧಿಪತಾನೆನಿಸಿಪುರುಷೋತ್ತಮ ತಾನೆಂದು ಸುಪುಷ್ಪವರ್ಪಿಸಿದೆನೆ13 ಪರ ಇಹವು ತಾನೇ ತಾನೀಗ ಪರಾತ್ಪರನು ತಾನೆಪರವಸ್ತು ತಾ ನಿಜವೆಂದು ಧೂಪವರ್ಪಿಸಿದೆನೆ 14 ಜ್ಯೋತಿಯ ರೂಪ ತಾನೀಗ ಜ್ಯೋತಿ ನಿರ್ಮಯನುಜ್ಯೋತಿಯಹ ಚಿಜ್ಯೋತಿಯು ತಾನೆಂದು ಜ್ಯೋತಿಯರ್ಪಿಸಿದೆನೆ 15 ನಿತ್ಯ ತೃಪ್ತನುನಿತ್ಯತೃಪ್ತ ತಾನೆಂದು ನೈವೇದ್ಯವರ್ಪಿಸಿದೆನೆ 16 ಮಂಗಳವೆ ಆದ ತಾನೀಗ ಮಂಗಳಾಂಗನಾದಮಂಗಳ ಮೂರುತಿ ತಾನೆಂದು ತಾಂಬೂಲವರ್ಪಿಸಿದೆನೆ 17 ನಿರ್ವಿಕಾರ ನಿಜ ತಾನೀಗ ನಿರಾವಲಂಬ ನಿಜ ನಿ-ರಾವರಣ ತಾನೆಂದು ಪ್ರದಕ್ಷಿಣವರ್ಪಿಸಿದೆನೆ 18 ಜಯ ಜಯಾತ್ಮಕನೆ ತಾನೀಗ ಜಯ ಸದಾತ್ಮಕನೆಜಯನಿತ್ಯಾತ್ಮಕ ತಾನೆಂದು ನಮಸ್ಕಾರವರ್ಪಿಸಿದೆನೆ19 ಲೋಕೈಕನಾಥ ತಾನೀಗ ಏಕೈಕ ನಾಥನುಏಕ ನಾಥನು ತಾನೆಂದು ವಿಸರ್ಜನವರ್ಪಿಸಿದೆನೆ 20 ಪರಿ ಪರಿ ಮಾಡಿದೆನೆ 21
--------------
ಚಿದಾನಂದ ಅವಧೂತರು
ಪೂರ್ಣಪ್ರಜ್ಞರ ನೆನೆದು ಜ್ಞಾನಪೂರ್ಣರಾಗಿರೊ | ಆನಂದ ಜನನದಲಿ ಜನನಗಳ ನೀಗಿರೊಪ ಮಲಗಿ ಏಳುವಾಗ ಮಾತುಗಳನಾಡುವಾಗ | ಇಳಿಯ ಮೇಲಡಿಯಿಟ್ಟು ತಿರುಗುವಾಗ || ಜಲದಲಿ ಮಿಂದಘ್ರ್ಯೆ ಪ್ರಣವ ಜಪಿಸುವಾಗ | ಮಲಿನ ಸಂಕರನಳಿದಮಲಬೋಧನ ನೆನೆಯಿರೊ 1 ದೇವತಾ ಪೂಜೆಮಾಡಿ ಸ್ತೋತ್ರ ಪಠಿಸುವಾಗ | ಪಾವಕಾವನಿ ಸುರರ ಉಣಿಸುವಾಗ || ಕೋವಿದರ ಸಂಗಡ ಸಂತೋಷಬಡುವಾಗ | ಶ್ರೀ ವೀರ ವೈಷ್ಣವಾಚಾರ್ಯನ ನೆನೆಯಿರೊ2 ಸತಿಸುತರ ಕೂಡ ಹರಿ ಚರಿತೆಗಳ ಪೇಳುವಾಗ | ಪ್ರತಿ ದಿವಸÀ ಷಟ್ಕರ್ಮ ಮಾಡುವಾಗ || ಪತಿತ ಪಾವನ ವಿಜಯವಿಠ್ಠಲನ ಭಜಿಪ ಸದಾ |ಗತಿಯಾದ ಸುಜನರಿಗೆ ಯತೀಶ್ವರನ ನೆನೆಯಿರೊ3
--------------
ವಿಜಯದಾಸ
ಪೇಳಲೇನು ವಿಧಿಯ ಲೀಲೆಯ ಮಹಿಮೆ ಪ ವ್ಯಾಳಶಯನನ ಸಂಕಲ್ಪದಂತಿಹುದು ಅ.ಪ. ಮೂರ್ತಿ ನೋಡುವ ಕಂಗಳು ಅಂಗನೆಯರ ರೂಪ ನೋಡಲೆಳಸಿದವು 1 ಶ್ರೀ ರಮಣನ ಕಥೆ ಕೇಳುವ ಕರ್ಣಗಳು ವಾರನಾರಿಯರ ವಾರ್ತೆಗೆ ಸೋತವು 2 ಮಂಧರಧರನ ನಿರ್ಮಾಲ್ಯವನೊಲ್ಲದೆ ಸುಂದರಿಯರ ಮೈ ಗಂಧ ಬಯಸಿತು ಘ್ರಾಣ 3 ಹರಿಯ ಪ್ರಸಾದವು ಭುಜಿಸದೆ ಜಿಹ್ವೆಯು ಪರಮ ನಿಷಿದ್ಧ ಪಾನ ಭೋಜನ ಬಯಸಿತು 4 ರಂಗನ ಭಕ್ತರ ಸಂಗವ ಬಿಟ್ಟು ಸ್ಪರ್ಶ ಅಂಗನೆಯ ದೇಹಾಲಿಂಗನ ಬಯಸಿತು 5 ಶ್ರೀನಿಕೇತನ ನಾಮ ನುಡಿಯುವ ನಾಲಿಗೆ ದೀನ ಕಾಮಾತುರ ನುಡಿಯಲಿ ನಲಿಯಿತು 6 ಪಾದ ಸ್ಮರಣೆಯ ಬಿಟ್ಟಾ ಮನ ತರುಣಿಯರು ಸದಾ ನೆನೆಸಿತು ಅಕಟಾ 7
--------------
ವರಾವಾಣಿರಾಮರಾಯದಾಸರು
ಪೊಗಳು ಮನವೆ ನೀ ಯುಗಯುಗದಲಿ ‌ಘನ ಸೊಗಸಿಲಿಂದ ಗುರು ಜಗನ್ನಾಥರಾಯರ ಪ ಪುಲ್ಲಜಾಂಡದಿ ಸಿರಿವಲ್ಲಭನ ಪದ ಪಲ್ಲವ ಪೂಜಿಸಿದ ಸಹ್ಲಾದರಾಯರ 1 ಮಾನವಿಕ್ಷೇತ್ರದಿ ಧೇನಿಪ ಸುಜನರ ಮಾಣದೆ ಕಾಯುವ ಮಹಾನುಭಾವರ ಸದಾ 2 ಧರಿವರ ಶಾಮಸುಂದರ ಚರಿತಾಮೃತ ಸರಸ ಸುಗ್ರಂಥವ ವಿರಚಿಸಿದೋಡೆಯರ 3
--------------
ಶಾಮಸುಂದರ ವಿಠಲ