ಒಟ್ಟು 447 ಕಡೆಗಳಲ್ಲಿ , 64 ದಾಸರು , 334 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸ್ಮರಿಸೊ ಮನವೇ ಹರಿಯ ನರಹರಿಯ ಅರಸಾಗ್ಯಾಳುವ ಸಿರಿಯ ಧ್ರುವ ಕರಿಯ ಕೇಳಿದ ಮೊರಿಯ ನೀನರಿಯ ಸುರರ ಬಿಡಿಸಿದ ಸರಿಯ ಧರೆಯೊಳಗಿದು ಖರಿಯ ಯುಗಮೊರಿಯ ಹೊರೆವನು ತಾ ಪರೋಪರಿಯ 1 ಸರ್ವದೈವಕೆ ಹಿರಿಯ ಮುರ ಅರಿಯ ಹರ ಹೃದಯದಲಿ ಪರಿಯ ಸ್ಮರಿಸುವದೀ ಪರಿಯ ದುರಿತ ಕರುಣಕಿಲ್ಲೀತನ ಸರಿಯ 2 ಸೆರಗವಿಡಿದು ಹರಿಯ ಪರಿಪರಿಯ ಅರಿಯೋ ನವವಿಧ ಪರಿಯ ಶರಣಾಗತರ ಸಿರಿಯ ಸುರವರ್ಯಾ ತರಳಮಹಿಪತಿ ದೊರೆಯ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸ್ವಾಮಿ ನೀನೆ ಸಾರ್ವಭೌಮ ಶ್ರೀ ರಘುರಾಮ ಸೋಮಶೇಖರ ಪ್ರಿಯ ದಿವ್ಯ ನಿನ್ನ ನಾಮ ಧ್ರುವ ಕಾಕುಸ್ಥತಿಲಕ ಕಾರುಣ್ಯನಿಧಿ ಕೃಪಾಲ ಪ್ರಕಟ ಪ್ರಖ್ಯಾತಲಿಹ ಸತ್ಯಶೀಲ ನಾಕಜರ ಸೆರೆಬಿಡಿಸ್ಯಾದೆ ಸಾನುಕೂಲ ಸಕಲ ಸುಖದೀವ ಮೂಲೋಕಪಾಲ 1 ಖರದೂಷಣಾರಿ ಶರಣಾಗತರ ಸಹಕಾರಿ ಸರ್ವರಾಧಾರಿ ಕೋದಂಡ ಧಾರಿ ದುರುಳ ದುಷ್ಟ ಜನಸಂಹಾರಿ ವರಪೂರ್ಣವೀವ ಪರಮ ಉದಾರಿ 2 ಅನುದಿನದಲಿ ನಿನ್ನ ನಡಿನುಡಿಗಳೊಂದವೆ ನೇಮ ಅನಂತಗುಣ ಪೂರ್ಣಾನಂದ ಮಹಮಹಿಮ ದೀನ ಮಹಿಪತಿ ಅತ್ಮಾರಾಮ ಪೂರಿತ ಕಾಮ ಭಾನುಕೋಟಿ ತೇಜ ಘನದಯ ನಿಸ್ಸೀಮ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸ್ವಾಮೀ ರಕ್ಷಿಸು ಸುಬ್ರಹ್ಮಣ್ಯ ಕಾಮಿತಪ್ರದ ಸುರಸ್ತೋಮಾಗ್ರಗಣ್ಯಪ. ಜನ್ಮ ಜನ್ಮಾಂತರದ ಕರ್ಮಾನುಸಾರದಿಂ ದುರ್ಮತಿಗೆಳಸಿಯಹಮ್ಮಮತೆಯಲಿ ದುರಿತ ದೂರವಿರಿಸು ನಿರ್ಮಲಜ್ಞಾನೋಪದೇಶವನಿತ್ತೆನ್ನ1 ಪ್ರತ್ಯಗಾತ್ಮನ ನಾಮ ಕೀರ್ತನೆ ಗೈಯುತ್ತ ಭಕ್ತಿಸೌಭಾಗ್ಯವಿರಕ್ತಿಯ ನೀಡು ಭೃತ್ಯವತ್ಸಲ ಭವಭಯಹರ ಗಿರಿಜಾ- ಪುತ್ರನೆ ಪರಮಪವಿತ್ರ ಸುಚರಿತ್ರನೆ2 ಸುರಲೋಕವನು ಕಾವ ಧುರಧೀರ ಪ್ರಭು ನಿನಗೀ ನರಲೋಕವನು ಕಾವದುರು ಕಷ್ಟವೇನು ಪರಿಶುದ್ಧ ಸ್ಥಾನಿಕಧರಣೀಸುರಕುಲ- ಗುರುವೆಂದು ಚರಣಕ್ಕೆ ಶರಣಾಗತನಾದೆ3 ಸಾಕುವಾತನು ನೀನೆ ಸಲಹುವಾತನು ನೀನೆ ಬೇಕು ಬೇಡೆಂಬುವರ ನಾ ಕಾಣೆ ದೊರೆಯೆ ಲೋಕೇಶ ಸುಕುಮಾರ ಶೋಕಮೋಹವಿದೂರ ನೀಕರಿಸದೆಯೆನ್ನ ಸ್ವೀಕಾರ ಮಾಡಯ್ಯ4 ಪೃಥ್ವಿಯೊಳ್ಪಾವಂಜೆ ಕ್ಷೇತ್ರಾಧಿವಾಸನೆ ಸುತ್ರಾಮಾದಿ ಸುರಮೊತ್ತ ಪೂಜಿತನೆ ಕರ್ತ ಲಕ್ಷ್ಮೀನಾರಾಯಣನ ಸಾರೂಪ್ಯನೇ ದೈತ್ಯದಲ್ಲಣ ವಲ್ಲೀದೇವಿ ಮನೋಹರನೆ5
--------------
ತುಪಾಕಿ ವೆಂಕಟರಮಣಾಚಾರ್ಯ
ಹರಿ ವಿಠಲ - ವಿಠಲ ಜಯ ವಿಠಲಾ ಹರಿ ವಿಠಲ - ಜಯ ವಿಠಲ ಪ ಜಯವಿಠಲಾ ನಮೋ ವಿಠಲಾ ಅ.ಪ ಹೇ ಮುರಾರೀ ಶ್ರೀ ಹರೀ ಬಾರೈ ಕೃಪಾಶರನಿಧಿ ಶೌರೀ ಶರಣಾಭರಣನೆಂದೆ ಬಿರುದನ್ನು ಕೇಳಿ ಬಂದೆ ಅರಿಯೆ ಇನ್ನೊಂದ ತಂದೆ ನೀನಾಗಿ ಪೊರೆಯೆಂದೆ ಇನ್ನು ಮುಂದೇ 1 ಇಂದಿರಾ ಮಂದಿರಾ ಹೇ ಸುಂದರಾನಂದ ಕುವರ ವರಾ ಇಂದೀವರಾಕ್ಷ ನಿನ್ನಾ ಸಂದರುಶನವೆನ- ಗೆಂದಿಗಾಹುದೋ ಮನವಾ ನಂದ ಹೊಂದುವುದು ಅಂದೇ 2 ಸರ್ವೇಶಾ ಶಾಶ್ವತ ಸರ್ವೋತ್ತಮ ಪರಮೋದಾರವರ ಸರ್ವಕಾರಣ ಕರ್ತಾ ಸರ್ವಸ್ವತಂತ್ರ ಶಕ್ತ ಸರ್ವತ್ರದಲಿ ವ್ಯಾಪ್ತ ಸರ್ವಾಂತರ್ಯಾಮಿ ಗುಪ್ತ ಶಿರಿಕಾಂತ 3
--------------
ಲಕ್ಷ್ಮೀನಾರಯಣರಾಯರು
ಹರಿಹರರು ಸರಿಯೆಂಬ ಮರುಳು ಜನರುಹರಿಹರರ ಚರಿತೆಯನು ತಿಳಿದು ಭಜಿಸುವುದು ಪ ಸುರರು ಮುನಿಗಳು ಕೂಡಿ ಪರದೈವವಾರೆಂದುಅರಿಯಬೇಕೆಂದೆರಡು ವರಧನುಗಳಹರಿಹರರಿಗಿತ್ತು ಸಂಗರವ ಮಾಡಿಸಿ ನೋಡೆಮುರಹರನು ಪುರಹರನ ಗೆಲಿದುದರಿಯಾ 1 ಕರವ ಶಿರದ ಮ್ಯಾಲಿರಿಸಿ ಖಳ-ನುರುಹಿ ಹರನನು ಕಾಯಿದ ಕಥೆಯ ನೀನರಿಯಾ 2 ದೂರ್ವಾಸರೂಪ ಹರನಂಬರೀಷನ ಮುಂದೆಗರ್ವವನು ಮೆರೆಸಿ ಜಡೆಯನು ಕಿತ್ತಿಡೆಸರ್ವಲೋಕದೊಳವನ ಚಕ್ರನಿಲಲೀಯದಿರೆಉರ್ವೀಶನನು ಸಾರಿ ಉಳಿದನರಿಯಾ 3 ಹರನಂಶ ದ್ರೋಣಸುತನು ಪಾಂಡವಾ ಎಂದುಉರವಣಿಸಿ ನಾರಾಯಣಾಸ್ತ್ತ್ರವನು ಬಿಡಲು ಹರಿ ಬಂದು ಬೇಗ ತನ್ನಸ್ತ್ರವನು ತಾ ಸೆಳೆದುಶರಣಾಗತರ ಕಾಯಿದ ಕಥೆಯನರಿಯಾ 4 ನರನಾರಾಯಣರು ಬದರಿಕಾಶ್ರಮದಲಿರೆಹರನು ಹರಿಯೊಡನೆ ಕದನವನು ಮಾಡೆಹರಿ ಹರನ ಕಂಠವನು ಕರದಲಿ ಪಿಡಿದು ನೂಕೆಕೊರಳ ಕಪ್ಪಾದ ಕಥೆ ಕೇಳಿ ಅರಿಯಾ 5 ಹರಿ ಸುರರಿಗಮೃತವನು ಎರೆದ ರೂಪವನೊಮ್ಮೆಹರ ನೋಡುವೆನೆಂದು ಸಂಪ್ರಾರ್ಥಿಸೆಪರಮ ಮೋಹನ ರೂಪಲಾವಣ್ಯವನು ಕಂಡುಹರ ಮರಳುಗೊಂಡ ಕಥೆ ಕೇಳಿ ಅರಿಯಾ 6 ಹರಿಯ ಮೊಮ್ಮನ ಬಾಣಾಸುರನು ಸೆರೆವಿಡಿಯೆಗರುಡವಾಹನನಾಗಿ ಕೃಷ್ಣ ಬಂದುಹರನ ಧುರದಲಿ ಜಯಿಸಿ ಅವನ ಕಿಂಕರನ ಸಾ-ವಿರ ತೋಳುಗಳ ತರಿದ ಕಥೆಯ ನೀನರಿಯಾ 7 ಸುರತರುವ ಕಿತ್ತು ಹರಿ ಸುರಲೋಕದಿಂದ ಬರೆಹರನು ಹರಿಯೊಡನೆ ಕದನವನು ಮಾಡೆತರಹರಿಸಲಾರದೋಡಿದ ಕಥೆಯ ನೀನೊಮ್ಮೆಹಿರಿಯರ ಮುಖದಿ ಕೇಳಿ ನಂಬು ಹರಿಯಾ 8 ಹರಸುತನು ತಪದಿಂದ ಹರಿಯ ಚಕ್ರವ ಬೇಡೆಪರಮ ಹರುಷದಲಿ ಚಕ್ರವನೀಯಲುಭರದಿಂದ ಧರಿಸಲಾರದೆ ಚಕ್ರವನಂದುಹರನು ಭಂಗಿತನಾದನೆಂದರಿಯಲಾ 9 ರಾವಣಾಸುರ ಕುಂಭಕರ್ಣ ನರಕಾದಿಗಳುಶೈವತಪವನು ಮಾಡಿ ವರವ ಪಡೆಯೆಅವರುಗಳನು ವಿಷ್ಣು ನರರೂಪಿನಿಂದರಿದುದೇವರ್ಕಳನು ಕಾಯಿದ ಕಥೆಯ ನೀನರಿಯಾ 10 ಗಂಗಾಜನಕನÀ ಸನ್ಮಂಗಲ ಚರಿತ್ರ್ರೆಗಳಹಿಂಗದಲೆ ಕೇಳಿ ಸುಖಿಸುವ ಜನರಿಗೆಭಂಗವಿಲ್ಲದ ಪದವನಿತ್ತು ಸಲಹುವ ನಮ್ಮರಂಗವಿಠ್ಠಲರಾಯನ ನೆರೆ ನಂಬಿರೋ11
--------------
ಶ್ರೀಪಾದರಾಜರು
ಹಿಡಿ ಮನವೇ ಸಂತರ ಸಂಗ ಪ ಹಿಡಿಮನವೇ ಸಂತರ ಸಂಗಾ | ಭವ ಭಯ ಭಂಗಾ | ಅಡಿಗಳಗೆರಗುತ ಸಾಷ್ಟಾಂಗಾ | ಪಡಕೋ ಚಿತ್ಸುಖದಂಗಾ 1 ಸಿಕ್ಕಿದು ಭಾಗವತರಣ | ಶರಣಾ | ಸಿಕ್ಕಲು ದಕ್ಕಿಸಿಕೋ ಕರುಣಾ | ಉಕ್ಕಲು ಜ್ಞಾನದಾ ನಿಜ ಸ್ಪರಣಾ | 2 ಗುಕ್ಕದವನೇ ತಾ ಹರಿಶರಣಾ | ಶರಣೆಂಬುದು ಸು¯ಭವಲ್ಲಾ | ಹರಿಮಯ ಕಾಂಬನು ಜಗವೆಲ್ಲಾ | ನೆರೆ ಹಮ್ಮ ಮಾತುಗಳುಳದಿಲ್ಳಾ | ಸರಿ ಸ್ತುತಿ ನಿಂದೆಗೆ ಬಗಿಬಲ್ಲಾ 3 ಎಲ್ಲರ ಮನದಂತಾನಾಗಿ | ನಿಲ್ಲುವ ಜನದೊಳು ನಿಜಯೋಗಿ | ಫುಲ್ಲನಾಭನ ಭಕುತಿಲಿ ಮುಣುಗಿ | ಬಲ್ಲವಿಕೆಯ ದೋರನು ಬಾಗೇ 4 ಏನೋ ಜ್ಞಾನಿಗಳಾನಂದಾ | ತಾನೇ ಬಲ್ಲನು ಶ್ರೀ ಗೋವಿಂದಾ | ಖೂನಕ ಸಾರಿದ ನುಡಿವಂದಾ | ಸ್ವಾನುಭವದೀ ಮಹಿಪತಿ ಕಂದಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹ್ಯಾಂಗೆ ನಿಮ್ಮ ಚರಣಾ | ಕಾಂಬೆನೊಯೋಗಿ ಜನರ ಶರಣಾ ಪ ನಾಗಶಯನ ಭವಸಾಗರ ಮಮತೆಯನೀಗಿ ನಿರುತ ಅನುರಾಗದಿಂದ ಪೊರೆ ಅ.ಪ. ವ್ಯರ್ಥವಾಯಿತಲ್ಲಾ | ಜನ್ಮವು | ಸಾರ್ಥಕಾಗಲಿಲ್ಲಾಮುಕ್ತಿ ಬಯಸಲಿಲ್ಲಾ | ಜ್ಞಾನ ವಿ | ರಕ್ತಿಯು ಮೊದಲಿಲ್ಲಎತ್ತ ತಿಳಿಯದೇ ಸುತ್ತಿ ಭವದೊಳುನ್ಮತ್ತ ನಡತೆಯಲಿ ಹೊತ್ತು ಕಳೆದ ಪೊರೆ 1 ಮಾಯ ಬಿಡದು ಹರಿಯೇ | ಮುಂದೆ ಉಪಾಯವೇನು ದೊರೆಯೇ ||ಧೇಯ ನಿಮ್ಮನು ಮರೆಯೇ | ಅನ್ಯ ಸಹಾಯವು ನಾನರಿಯೇ ||ಕಾಯಜ ಪಿತ ಕಮಲಾಯತ ಲೋಚನಮಾಯವ ಬಿಡಿಸಯ್ಯ ನ್ಯಾಯದಿಂದ ಹರಿ 2 ವಾಕು ಪಾಲಿಸೊ ಹರೆ 3 ಮಲ್ಲಮರ್ದನ ಕೃಷ್ಣ 4 ವ್ಯಾಸವಿಠಲರಾಯಾ | ಮನದಭಿಲಾಷೆ ಸಲ್ಲಿಸಯ್ಯಾ ||ದಾಸನೆಂದು ಕಯ್ಯಾ | ಪಿಡಿದುಪೋಷಿಸುವುದು ಪ್ರೀಯಾ ||ಶ್ರೀಶನೆಂದು ನಿನ್ನ ಸೇರಿದೆನೋ ಪರದೇಶಿಯೆಂದು ಉದಾಸೀನ ಮಾಡದೆ 5
--------------
ವ್ಯಾಸವಿಠ್ಠಲರು
(ಮಂಗಳೂರಿನ ಪ್ರಾಣದೇವರನ್ನು ನೆನೆದು)ಪಾಲಿಸೆನ್ನಪಾವಮಾನಿಪಾವನಾತ್ಮ ಸುಜ್ಞಾನಿಪ.ಮೂರ್ಲೋಕದ ಸಚರಾಚರಜಾಲದಂತರಂಗ ಕರುಣಿ ಅ.ಪ.ಮೂರವತಾರವ ಗೈದು ಮುರಾರಿಯ ಪೂಜಿಸಿದೆಪಾರಮೇಷ್ಠಿಪದ ಪೊಂದಿದೆ ಭಾರತಿಮನೋಹರ 1ಪಾರಗಾಣರು ನಿನ್ನ ಮಹಿಮೆ ಫಾಲನಯನಾದಿಗಳುಕ್ರೂರಕರ್ಮಿಗಳೇನರಿವರು ಶ್ರೀರಾಮಶರಣ್ಯ 2ಪುರಹೂತಾದ್ಯಮರಾರ್ಚಿತ ಪೂರ್ವಮಧ್ವಂಸಅರಿವರ್ಗಗಳತಿಕ್ರಮವ ಧಿಕ್ಕರಿಸೈ ಸುಜ್ಞಾನವಿತ್ತು 3ಸರ್ವಾಪರಾಧಗಳನು ಸಾಧುವರದ ಕ್ಷಮಿಸುಗರ್ವಹಂಕಾರವೀಯದೆ ಗಜವರದನ ಭಕ್ತಿಯಿತ್ತು 4ಕರಣೀಕಾಗ್ರಣಿ ಮಂಗಲಪುರವರ ಪ್ರಾಣೇಶವರಲಕ್ಷ್ಮೀನಾರಾಯಣ ಶರಣಾಗತರೀಶ5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
(ಮೂಲ್ಕಿಯ ನರಸಿಂಹ ದೇವರು)ರಕ್ಷಿಸು ಮನದಾಪೇಕ್ಷೆಯ ಸಲಿಸುತಲಕ್ಷ್ಮೀನರಹರಿ ರಾಕ್ಷಸವೈರಿ ಪ.ಅಕ್ಷಮ ದುಶ್ಯೀಲ ದುವ್ರ್ಯಾಪಾರದಿಕುಕ್ಷಿಂಭರನೆಂದುಪೇಕ್ಷೆಯ ಮಾಡದೆ ಅ.ಪ.ಉಭಯ ಶುಚಿತ್ವವು ಊರ್ಜಿತವೆನೆ ಜಗ-ದ್ವಿಭುವಿಶ್ವಂಭರವಿಬುಧಾರಾದ್ಯಶುಭಮತಿ ಸಂಸ್ಥಿತಿಯಭಯವ ಪಾಲಿಸೊತ್ರಿಭುವನಮೋಹನ ಪ್ರಭು ನೀನನುದಿನ 1ತಂದೆಯ ಮುನಿಸಿನ ಕಂದನ ಸಲಹುತಸಿಂಧುಶಯನ ನಿತ್ಯಾನಂದ ಗುಣಾಬ್ಧೇಹಿಂದಣ ಪಾಪವು ಮುಂದೆಸಗದ ರೀತಿಮಂದರಾದ್ರಿಧರ ಮಾಮವ ದಯಾಕರ 2ಪಾಪಾತ್ಮರಲಿ ಭೂಪಾಲಕನು ನಾಶ್ರೀಪತಿ ಕರುಣದಿ ಕಾಪಾಡುವುದುಗೋಪೀರಂಜನ ಗೋದ್ವಿಜರಕ್ಷಣಕಾಪುರುಷರ ಭಯ ನೀ ಪರಿಹರಿಸಯ್ಯ 3ಸರ್ವೇಂದ್ರಿಯ ಬಲತುಷ್ಟಿಪುಷ್ಟಿಯಿತ್ತುಸರ್ವಾಂತರ್ಯದೊಳಿರುವನೆ ಸಲಹೊದುರ್ವಾರಾಮಿತ ದುರ್ವಿಷಯದಿ ಬೇ-ಸರ್ವೇನು ಪನ್ನಗಪರ್ವತವಾಸನೇ 4ಶರಣಾಗತನಾಗಿ ಸೆರಗೊಡ್ಡಿ ಬೇಡುವೆವರಮೂಲಿಕಪುರ ದೊರೆಯೇಹರಿಲಕ್ಷ್ಮೀನಾರಾಯಣತ್ರಿಜಗದ್ಭರಿತ ಉತ್ಪ್ರೇರಕ ಸ್ಥಿರಭಕ್ತಿಯನಿತ್ತು 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
126 - 3ಚತುರ್ಥ ಕೀರ್ತನೆಸತ್ಯ ಬೋಧಾರ್ಯರ ವೃತತಿಜಾಂಘ್ರಿಗಳಲ್ಲಿಸತತ ಶರಣಾದೆ ನಾಹಿತದಿ ಪಾಲಿಪರುಪ್ರತತ ಭೂಮಾದಿ ಗುಣಸಿಂಧು ಪುರುಷೋತ್ತಮನವಿತತ ಮನದಲಿ ಧ್ಯಾನಿಸಿ ಒಲಿಸಿಕೊಂಡ ಪಸತ್ಯಬೋಧಾರ್ಯರು ಭಾಗೀರಥಿ ಕುರಿತುಯಾತ್ರೆ ಮಾಡಲು ಮನದಿ ಯೋಚಿಸುತಲಿದ್ದಾಗಇದ್ದ ಕಡೆಯಲ್ಲೆ ಗಂಗಾ ಬಂದು ಒದಗುವಳುಎಂದು ಸ್ವಪ್ನವು ಆಯಿತು ಅಂದು ರಾತ್ರಿಯಲಿ 1ಶ್ರೀ ಮಠಕ್ಕೆ ಅರ್ಧಗಾವುದ ದೂರ ಇರುವಂಥಭೂಮಿಯಲಿ ಕೃಷಿಕೂಪ ಬಹು ದೊಡ್ಡದಲ್ಲಿಸಮೀಪಸ್ತ ಔದುಂಬರತರುಮೂಲದಿಂಅಮರ ತಟನೀ ಬರುವ ವೇಳೆಯು ತಿಳಿಯಿತು 2ಶ್ರೀಗುರು ನವಾಬನಿಗೂ ಖಂಡೇರಾಯನಿಗುನಗರಜನರಿಗು ತಿಳಿಸಿ ಆ ಸ್ಥಳಕ್ಕೆ ಪೋಗೆಗಂಗಾವತರಣವು ಆಯಿತು ಸೂಚಿತವೇಳೆಕಂಗೊಳಿಸುವ ಬಾಗೀರಥೀ ಧಾರಾಸುರಿದು 3ತ್ರಿವಿಕ್ರಮ ಸುಪಾದಜಾ ತ್ರಿಜಗತ್ ಪಾವನಿಗಂಗಾತ್ರಿದಶೇಶ್ವರಿ ನಳಿನಿ ಸೀತಾನಮಸ್ತೆತ್ರಾಹಿಜಾಹ್ನವಿಭಾಗೀರಥೀ ನಮೋ ಭೋಗವತಿತ್ರಿಪಥ್‍ಗಾಮಿನಿಪಾಹಿಮಾಲತಿ ನಂದಿನಿ4ನವಾಬನು ಮಂತ್ರಿಯು ನೆರೆದಿದ್ದ ಜನರೆಲ್ಲದೇವ ತಟಿನಿ ಧಾರಾ ಸುರಿದದ್ದು ನೋಡಿದೈವೀಕ ಈ ಮಹಿಮೆ ಕೊಂಡಾಡಿ ಸ್ನಾನಜಪಸೇವೆದಾನಾದಿಗಳ ಮಾಡಿದರು ಮುದದಿ 5ವಿಷ್ಣುತೀರ್ಥ ಎಂಬ ನಾಮ ಈ ತೀರ್ಥಕ್ಕೆವಿಷ್ಣು ಭಕ್ತಾಗ್ರಣಿ ಸದಾಶಿವನ ಲಿಂಗವಿಷ್ಣು ತೀರ್ಥದ ದಡದಿ ಇಹುದು ಶರಣೆಂಬೆವಿಷ್ಣು ್ವಂಘ್ರಿ ಜಾತೆಗೂ ಉಮೇಶನಿಗೂ ಶ್ರೀಶಗೂ 6ಶ್ರೀ ಸತ್ಯಬೋಧರು ಗಂಗೆಯ ತರಿಸಿದ್ದುಶ್ರೀ ಸತ್ಯಬೋಧರ ಬಹು ಇಂಥ ಮಹಿಮೆವಸುಮತಿಯಲಿ ಹರಡಿ ದೇಶ ದೇಶಗಳಿಂದಭೂಸುರರು ಸಜ್ಜನರು ಬಂದು ಸೇವಿಪರು 7ಪಟ್ಟಣದ ಮಧ್ಯದಿ ನವಾಬ ಕೊಡಿಸಿದ ಸ್ಥಳದಿಕಟ್ಟಡವು ಶ್ರೀಮಠ ವಿಸ್ತಾರವಾದ್ದುಮಠದಲ್ಲೇ ಉಂಟೊಂದು ಸೋಪಾನ ಭಾವಿಯುಕಟ್ಟೆಯಲಿ ಶಿವಲಿಂಗ ಭಾವಿಯಲಿ ಗಂಗಾ 8ಭೃಗು ಅಂಶ ವಿಜಯದಾಸಾರ್ಯರ ಪ್ರಭಾವವುಏಕದಂತಾಂಶ ಗೋಪಾಲ ದಾಸಾರ್ಯರ ಪ್ರಭಾವಭಾಗಣ್ಣಾನುಜರು ಈರ್ವರು ಪ್ರಭಾವವಶ್ರೀ ಗುರುಗಳು ಮೆಚ್ಚಿ ಮಾನ್ಯ ಮಾಡಿದರು 9ವಿದ್ವತ್ಸ್‍ಭೆಯಲಿ ಗೋಪಾಲದಾಸಾರ್ಯರುಆ ದಾಸವರ್ಯರ ಅನುಜರು ಈರ್ವರುದೇವತಾಂಶದವರುಅಪರೋಕ್ಷಪ್ರಚುರರುಎಂದು ಜನರಿಗೆ ನಿದರ್ಶನ ತೋರಿಸಿದರು 10ವಿಠ್ಠಲ ನೃಹರಿವ್ಯಾಸ ಶ್ರೀಸಹ ವೇಂಕಟರಾಮಘೋಟಕಾಸ್ಯ ಮಧ್ವೇಶನ್ನರಾಧಿಪಂತಮಠದಲ್ಲಿ ಜಗನ್ನಾಥ ದಾಸಾರ್ಯರ ಸೇವೆಕೊಂಡು ಬಹು ಪ್ರೀತಿಯಲಿ ಅನುಗ್ರಹ ಮಾಡಿಹರು 11ಅಮಲ ವೈದಿಕ ತತ್ವ ಮಧ್ವಸಿದ್ಧಾಂತವಭೂಮಿ ದೇವರಿಗೆ ಬೋಧಿಸಿ ಸರ್ವಜನರ್ಗುಕ್ಷೇಮ ಒದಗಿಸಿ ರಮಾಕಾಂತನ್ನ ಸ್ಮರಿಸುತಈ ಮಹಿಯೋಳ್ ಸರ್ವಜನ ಪ್ರಿಯತಮರಾಗಿಹರು 12ಒಳ್ಳೆರೀತಿಯಲಿ ಚತ್ವಾರಿವತ್ಸರಮಠಆಳಿ ಶಾಲಿಶಕ ಹದಿನೇಳ್ ನೂರೈದುಫಾಲ್ಗುಣ ಕೃಷ್ಣ ಪ್ರತಿಪದ ದಿನ ಹರಿಧ್ಯಾನದಲ್ಲಿ ಕುಳಿತರು ಲೋಕ ಚಟುವಟಿಕೆ ತೊರೆದು 13ಸತ್ಯಬೋಧರ ವೃಂದಾವನದಿ ಅವರೊಳಿಹನುಸತ್ಯಬೋಧಾಹ್ವಯನು ಶ್ರೀಸಹಹಯಾಸ್ಯವಾತಸೇವಿತ ರಾಮಕೃಷ್ಣನೃಹರಿ ವ್ಯಾಸಭೃತ್ಯವತ್ಸಲ ವಾಮದೇವನುತನಾಗಿ 14ದರ್ಶನ ಪ್ರದಕ್ಷಿಣೆ ನಮನ ಪಾದೋದಕಸಂಸ್ಕøತಿಸುಚರಿತ್ರೆ ಪಾರಾಯಣಸಚ್ಛಾಸ್ತ್ರ ಪ್ರವಚನ ಜಪತಪದಾನಾದಿಗಳುವಾಂಛಿತಪ್ರದ ಸರ್ವ ಪೀಡಹರವು 15ಪುತ್ರಧನ ಆರೋಗ್ಯ ಆಯುಷ್ಯ ಮಾಂಗಲ್ಯತಾಪತ್ರಯ ಪರಿಹಾರ ರೋಗ ನಿವೃತ್ತಿಕ್ಷಿಪ್ರಲಭಿಸುವುವು ಹರಿಗುರುಗಳ ದಯದಿಂದಸುಶ್ರವಣ ಪಠನ ಈ ಗ್ರಂಥಮಾಳ್ಪರಿಗೆ 16ಸತ್ಯಸಂಧಾರ್ಯರು ಮಹಾಮಹಿಮ ಶಿಷ್ಯರುಸತ್ಯಬೋಧರ ಆರಾಧನ ಭಕ್ತಿಉತ್ಸಾಹದಿ ಮಾಡಿದರು ಅದ್ಯಾಪಿ ಸಹಸ್ರಾರುಭಕ್ತರು ಸೇವಿಸುತಿಹರು ಪ್ರೇಮದಲಿ 17ಹೇಮಗರ್ಭನತಾತಶ್ರಿಪತಿ ಜಗನ್ನಾಥಅಮಲಗುಣಗಣಸಿಂಧು ಪ್ರಸನ್ನ ಶ್ರೀನಿವಾಸರಾಮ ಹಯಮುಖವ್ಯಾಸನೃಹರಿಗೆ ಪ್ರಿಯತಮರೆನಿಮ್ಮಲ್ಲಿ ಶರಣಾದೆ ಸತ್ಯಬೋಧಾರ್ಯ 18 ಪ|| ಇತಿ ಶ್ರೀ ಸತ್ಯಬೋಧ ಚರಿತ್ರೆ ಸಂಪೂರ್ಣಂ ||
--------------
ಪ್ರಸನ್ನ ಶ್ರೀನಿವಾಸದಾಸರು
126-1ದ್ವಿತೀಯಕೀರ್ತನೆಸತ್ಯ ಬೋಧಾರ್ಯರ ವೃತತಿಜಾಂಘ್ರಿಗಳಲ್ಲಿಸತತ ಶರಣಾದೆ ನಾಹಿತದಿ ಪಾಲಿಪರುಪ್ರತತ ಭೂಮಾದಿ ಗುಣಸಿಂಧು ಪುರುಷೋತ್ತಮನವಿತತ ಮನದಲಿ ಧ್ಯಾನಿಸಿ ಒಲಿಸಿಕೊಂಡ ಪವೇಲೂರು ಚಿತ್ತೂರು ಚಂದ್ರಗಿರಿ ಮಾರ್ಗದಲಿಅಲ್ಲಲ್ಲಿ ಪ್ರಮುಖ ಭೂಪಾಲರ ಕೈಯಿಂದಬಲು ಭಕ್ತಿಯುತ ಪೂಜೆ ಮರ್ಯಾದೆಕೊಂಡುವ್ಯಾಳಗಿರಿ ವೇಂಕಟನ ತಿರುಪತಿ ಸೇರಿದರು 1ತಿರುಪತಿಯಲಿ ಹನುಮದಾದಿ ಲಕ್ಷ್ಮಣಸೇವ್ಯಶ್ರೀರಾಮಸೀತಾ ಸಮೇತನಿಗೆ ನಮಿಪೆಉರುಗೇಶಶಯ್ಯ ಶ್ರೀ ಗೋವಿಂದರಾಜನಿಗುಶಿರಬಾಗುವೆ ಶ್ರೀ ಲಕ್ಷ್ಮೀಗೂ ಸತತ 2ಒಂದು ಗಾವುದ ದೂರದೊಳಗೇವೆ ಇರುತಿಹುದುಪದ್ಮ ಸರೋವರವು ತತ್ತೀರದಲ್ಲಿವೇದವಿಗ್ರಹ ಘೃಣಿ ಆದಿತ್ಯ ಸೂರ್ಯನುನಿಂತಿಹನು ಸರ್ವೇಷ್ಟ ಶ್ರೀದವೃಷ್ಟಿದನು 3ಸಮೀಪದಲಿ ದೊಡ್ಡ ಆಲಯವಿಹುದಲ್ಲಿಬೊಮ್ಮದಿ ಸುಮನಸಾರ್ಚಿತ ಕೃಷ್ಣ ಅಣ್ಣರಾಮನ ಸಹಕುಳಿತು ವಂದಿಸುವ ಸಜ್ಜನರಕ್ಷೇಮಲಾಭವ ಸದಾ ಪಾಲಿಸುತಿಹನು 4ದಕ್ಷಪಾಶ್ರ್ವದ ಗುಡಿಯಲ್ಲಿ ಸುಂದರರಾಜಲಕ್ಷ್ಮೀಸಮೇತನು ಕಾರುಣ್ಯಶರಧಿಪಕ್ಷ್ಮಗಳು ಅಕ್ಷಿಗಳ ರಕ್ಷಿಸುವ ತೆರದಲ್ಲಿವಿಷ್ಣು ಭಕ್ತರ ಸದಾಕಾಯುತಿಹನು 5ಕೃಷ್ಣನಾಲಯ ವಾಮಪಾಶ್ರ್ವ ಮಂದಿರದಲ್ಲಿವನಜಆಸನದಲ್ಲಿ ಶ್ರೀ ಪದ್ಮಾವತಿಯುದೀನ ಕರುಣಾಕರಿಯುವರಅಭಯನೀಡುತ್ತಶ್ರೀನಿವಾಸನ ಬದಿಯಲ್ಲಿ ಕುಳಿತಿಹಳು 6ದ್ವಾದಶಾಕ್ಷರ ಕಮಲವಾಸಿನಿ ಮಂತ್ರಪ್ರತಿಪಾದ್ಯಳು ಪದ್ಮಾವತಿ ಕಮಲವಾಸಿನಿಯುಪದ್ಮಲೋಚನೆ ಸರ್ವಾಲಂಕಾರ ಸಂಪನ್ನೆಸದಾಯೆಮ್ಮ ಪಾಲಿಸುವಳಿಗೆ ನಮೋ ಎಂಬೆ 7ವೇಂಕಟಾಚಲದ ಅಡಿವಾರದಲಿ ಇರುತಿದೆಅಕಳಂಕ ಸುಪವಿತ್ರ ಕಪಿಲತೀರ್ಥಲಿಂಗ ಆಕಾರದಲಿ ಕಪಿಲೇಶ್ವರ ಇಹನುಬಾಗುವೆ ಶಿರ ಶಿವಗು ಉಮಾಮಹೇಶ್ವರಿಗೂ 8ಕಪಿಲೇಶ್ವರಾನುಗ್ರಹದಿಂದ ಗಿರಿ ಏರಿಗೋಪುರಾಲಯದಲ್ಲಿ ನೃಸಿಂಹನ ನಮಿಸಿಶ್ರೀಪವರಾಹವೇಂಕಟನ ಕಾಣಿಸುವಂತಆ ಭೇಟಿ ಹನುಮನಿಗೆ ಶರಣು ಶರಣೆಂಬೆ 9ಸ್ವಾಮಿವೇಂಕಟನ ಆಲಯದ ಗೋಪುರಕಂಡುಸ್ಮರಿಸಿದ ಮಾತ್ರದಲೆ ಪಾಪ ನೀಗಿಸುವಸ್ವಾಮಿ ತೀರ್ಥಕು ಭೂರಾಹಕರುಣಾಬ್ಧಿಗೂನಮಿಸುವೆ ಅಶ್ವತ್ಥನಾರಾಯಣಗು 10ಕಪಿಲೇಶ್ವರಾನುಗ್ರಹದಿ ಹನುಮಂತನಅ ಪವನಜನ ದಯದಿ ಭೂಧರಾ ವರಾಹನಪುಷ್ಪಭವ ಪೂಜಿತ ಶ್ರೀ ಶ್ರೀನಿವಾಸನಶ್ರೀ ಪದ್ಮ ಪದಯುಗದಿ ಶರಣು ಶರಣಾದೆ 11ಶ್ರೀವಕ್ಷ ವೇಂಕಟೇಶನ್ನ ಧ್ಯಾನಿಸಿ ನಮಿಪೆದೇವ ದೇವಶಿಖಾಮಣಿಕೃಪಾನಿಧಿ ಸುಹೃದನವರತ್ನ ಖಚಿತ ಆಭರಣ ಕಿರೀಟಿಯುಶಿವದವರಅಭಯಕರಕಟಿ ಚಕ್ರಿಶಂಖಿ12ಭಕ್ತವತ್ಸಲ ದಯಾನಿಧಿ ಶ್ರೀನಿವಾಸನ್ನಸತ್ಯಬೋಧತೀರ್ಥಾರ್ಯರು ವಂದಿಸಿ ಸುತ್ತಿಸಿಆ ದೇವಸ್ಥಾನದಲಿ ಮಾರ್ಯಾದೆಗಳ್ ಕೊಂಡುಪದುಮ ಸರೋವರಾಲಯಗಳ ಐದಿದರು 13ವೇಂಕಟಗಿರಿಯಿಂದ ಕರ್ನೂಲು ಗದ್ವಾಲಪೋಗಿ ಸತ್ತತ್ವ ಸಿದ್ಧಾಂತವ ಬೋಧಿಸಿಭಕುತರಿಗೆ ದರ್ಶನ ಉಪದೇಶ ಕೊಟ್ಟರುಮಾರ್ಗದಲಿ ಹನುಮಂತ ಕ್ಷೇತ್ರ ಇಹುದು 14ಕ್ಷೇತ್ರಗಂಡಿಗ್ರಾಮ ತತ್ರಸ್ಥ ಹನುಮನಿಗೆಶರಣೆಂಬೆ ಸ್ಮರಿಸಲು ಬುದ್ಧಿರ್ಬಲ ಯಶಸ್ಸುಧೈರ್ಯವು ನಿರ್ಭಯತ್ವವು ಆರೋಗ್ಯವುದೊರೆಯುವುದು ನಿಶ್ಚಯ ಆಜಾಡ್ಯ ವಾಕ್ಪಟುತ್ವ 15ಹೇಮಗರ್ಭನತಾತಶ್ರಿಪತಿ ಜಗನ್ನಾಥಅಮಲಗುಣಗಣಸಿಂಧು ಪ್ರಸನ್ನ ಶ್ರೀನಿವಾಸರಾಮ ಹಯಮುಖವ್ಯಾಸನೃಹರಿಗೆ ಪ್ರಿಯತಮರೆನಿಮ್ಮಲ್ಲಿ ಶರಣಾದೆ ಸತ್ಯಬೋಧಾರ್ಯ 16 ಪ|| ಇತಿ ದ್ವಿತಿಯ ಕೀರ್ತನೆ ||
--------------
ಪ್ರಸನ್ನ ಶ್ರೀನಿವಾಸದಾಸರು
130-1ದ್ವಿತೀಯ ಕೀರ್ತನೆಶ್ರೀ ಹರಿಪಾದಾಬ್ಜರತ ಶ್ರೀ ವಿಷ್ಣು ತೀರ್ಥವನ-ರುಹಅಂಘ್ರಿಯುಗ್ಮದಲಿ ಶರಣಾದೆ ಸತತಪಮಹಾಕರುಣಿಯು ಪರಮಹಂಸ ಕುಲತಿಲಕರುಅಹರ್ನಿಶಿಒದಗುವರು ಶರಣು ಸುಜನರಿಗೆಅ ಪದ್ವಿತೀಯಾಶ್ರಮವನ್ನು ಯುಕ್ತ ಕಾಲದಿ ಕೊಂಡುಸದ್ಧರ್ಮ ಆಚರಿಸಿ ಗೃಹಕೃತ್ಯದಲ್ಲಿಇದ್ದರು ಜಯತೀರ್ಥ ಆಚಾರ್ಯ ಆದರುಸದಾ ಹರಿಯಲ್ಲೇ ಧಾವಿಸಿತು ಮನಸ್ಸು 1ಕ್ಷೀರಫೇಣವೊಲ್ ತೂಲಿಕ ಹಂಸ ತಲ್ಪವುಶುಭ್ರ ಕನ್ನಡಿ ಚಿತ್ರಾಲಂಕಾರಗಳುಕೊರತೆ ಏನೂ ಇಲ್ಲ ಐಹಿಕ ಸಂಪತ್ತಿಗೆಸ್ಪುರದ್ರೂಪಿಣಿಸತಿಸುಶೀಲೆ ಸುಗುಣೆ2ಪ್ರಾರಬ್ಧ ಕರ್ಮನಿಮಿತ್ತ ಶ್ರೀಹರಿಯೇವೆಪರಿಪರಿಭೋಗಗಳ ಒದಗಿಸಿದ್ದೆಲ್ಲಹರಿಗೆ ಅರ್ಪಿಸುತ ಅನುಭವಿಸುತಿರಲಾಗಹೊರಗಿಂದ ಓರ್ವನು ಹಾಡಿದನು ನುಡಿಯ 3ಮಂಚಬಾರದು ಮಡದಿಬಾರಳು ಕುಂಚುಕನ್ನಡಿ ಬಾರದುಸಂಚಿತಾರ್ಥವು ಮತ್ತೆ ಬಾರದು ಮುಂಚೆ ಮಾಡಿರಿ ಧರ್ಮವಕಂಚಿನ ಗಂಟೆ ಧ್ವನಿ ಅಂದದಿ ಈ ನುಡಿಕೇಳಿಮಂಚದಿಂದಿಳಿದರು ಕುಳಿತರು ಚಿಂತೆಯಲಿ 4ಅಕಳಂಕ ಗುಣನಿಧಿ ನಾರಾಯಣ ಮಾಯೇಶಸಂಕರುಷಣ ಪ್ರದ್ಯುಮ್ನ ಅನಿರುದ್ಧಶ್ರೀಕರಾರ್ಚಿತ ಪಂಚರೂಪನ ಪ್ರೇರಣೆಯೆಂದುಮಾಕಳತ್ರನ ಸ್ಮರಿಸಿ ಹೊರಟರು ಹೊರಗೆ 5ಲೌಕಿಕ ವಿಷಯ ವಿಜೃಂಭಣಾಡಂಬರವಲೆಕ್ಕಿಸದೆ ವೈರಾಗ್ಯ ಮನಪಕ್ವದಿಭಕುತಿ ಉನ್ನಾಹದಿ ಅವಧೂತಚರ್ಯದಿಶ್ರೀಕರ ನಾರಾಯಣನ ಸೇವಿಸಿದರು 6ತೀರ್ಥಕ್ಷೇತ್ರಾಟನ ಮಾಡಲಿಕೆ ಹೊರಟರುಹಾದಿಯಲಿ ಸರ್ಪವು ಅಡ್ಡ ಬರಲುವೇದ್ಯವಾಯಿತು ಜಯತೀರ್ಥ ಮುನಿಗಳು ತಾವೇಬಂದು ತಡೆದರು ಸರ್ಪರೂಪದಲಿಯೆಂದು 7ಈ ಪುಣ್ಯ ಶ್ಲೋಕರು ಜಯತೀರ್ಥವಿಪ್ರಸರ್ಪರೂಪಶೇಷದೇವರ ಜಯಮುನಿಗಳಅಭಿಪ್ರಾಯವನ್ನರಿತು ಶಾಸ್ತ್ರಪ್ರವಚನಶಿಷ್ಯೋಪದೇಶದಿ ಹರಿಯ ಸೇವಿಸಿದರು 8ಮಲಾಪಹಾರಿಣಿ ತೀರಸ್ಥ ಮುನವಳ್ಳಿಶೀಲತಮ ಅಡವಿ ಪ್ರದೇಶ ಗ್ರಾಮದಲಿಕುಳಿತು ಶಿಷ್ಯರಿಗೆ ಸುಧಾದಿಗಳ ಪೇಳಿದರುಪೊಗಳ ಬಲ್ಲೆನೆ ಇವರ ಮಹಿಮೆಸಾಕಲ್ಯ9ಸುಮಧ್ವವಿಜಯ ಪಾರಾಯಣ ಮಾಡುತ್ತಕಲ್ಮಷ ಕಿಲುಬು ಹತ್ತಿದ ಪಾತ್ರೆಯನ್ನಕಲ್ಮಷ ಕಿಲಬನ್ನ ತ್ವರಿತದಿ ನೀಗಿಸಿಹೇಮಮಯ ಮಾಡಿದರು ಜನರು ಕಂಡಿಹರು 10ಹನ್ನೆರಡುಬಾರಿಸುಧಾದಿಗಳ ಪ್ರವಚನ ಮಾಡಿವಿನಯ ಸಂಪನ್ನಶ್ರದ್ಧಾಳು ಶಿಷ್ಯರಿಗೆಹನ್ನೆರಡಾವರ್ತಿ ಸುಧಾ ತತ್ವ ಪ್ರಕಾಶಿಕ ಪೇಳಿಘನಮಹಿಮ ಟಿಪ್ಪಣಿ ಮಾಡಿಹರು ಎರಡಕ್ಕೂ11ಭುಜಗಶಾಯಿ ಕ್ಷೀರಾಬ್ಧಿವಾಸನ ಪ್ರೀತಿಗೂಸುಜನಅಧಿಕಾರಿಗಳ ಉದ್ಧಾರಕ್ಕುರಚಿಸಿ ಗ್ರಂಥಗಳನ್ನ ಕೃತಕೃತ್ಯ ಮನದಲ್ಲಿರಾಜರಾಜೇಶ್ವರಿ ಶ್ರೀ ಹರಿಗರ್ಪಿಸಿದರು 12ಸತ್ಯಸಂಧಾರ್ಯರ ಹಸ್ತಪದ್ಮೋತ್ಪನ್ನಸತ್ಯವರ ತೀರ್ಥರ ಕರಕಂಜದಿಂದಜಯತೀರ್ಥಾಚಾರ್ಯರು ಕೊಂಡರು ತುರ್ಯಾಶ್ರಮತೋಯಜಾಕ್ಷಶ್ರೀ ವಿಷ್ಣುತೀರ್ಥ ನಾಮದಲಿ13ಬೃಹತಿಸಹಸ್ರಪ್ರಿಯ ಮಹಿದಾಸ ಜಗದೀಶಬ್ರಹ್ಮಪಿತ ಭಕ್ತಪಾಲಕ ಪರಮಹಂಸಮಹಿಶಿರಿಕಾಂತ `ಶ್ರೀ ಪ್ರಸನ್ನ ಶ್ರೀನಿವಾಸ'ನಮಹಾಭಕ್ತ ಶ್ರೀ ವಿಷ್ಣು ತೀರ್ಥಾರ್ಯಶರಣು 14 ಪ
--------------
ಪ್ರಸನ್ನ ಶ್ರೀನಿವಾಸದಾಸರು
130-2ತೃತೀಯ ಕೀರ್ತನೆಶ್ರೀ ಹರಿಪಾದಾಬ್ಜರತ ಶ್ರೀ ವಿಷ್ಣು ತೀರ್ಥವನ-ರುಹಅಂಘ್ರಿಯುಗ್ಮದಲಿ ಶರಣಾದೆ ಸತತಪಮಹಾಕರುಣಿಯು ಪರಮಹಂಸ ಕುಲತಿಲಕರುಅಹರ್ನಿಶಿಒದಗುವರು ಶರಣು ಸುಜನರಿಗೆಅ ಪಸ್ಥೂಲಪ್ರವಿವಿಕ್ತಆನಂದ ಭುಕ್ ಅವ್ಯಯನಶೀಲತಮ ಮಂತ್ರ ಶ್ರೀ ಸತ್ಯವರವದನಸಲಿಲೋರುಹದಿಂದ ಶ್ರೀ ವಿಷ್ಣು ತೀರ್ಥರುಬಲುಭಕ್ತಿಯಿಂದಲಿ ಕೊಂಡರುಪದೇಶ 1ಪೂರ್ವಾಶ್ರಮದಲ್ಲಾಚರಿಸಿದ ರೀತಿಯಲಿತತ್ವಪ್ರಕಾಶಿಕಾ ಸುಧಾಭಾಗವತಸರ್ವಸಚ್ಛಾಸ್ತ್ರ ಬೋಧಿಸುತ ಕುಶಾವತಿಯಪವಿತ್ರ ತೀರದಿ ಮಾದನೂರು ಸೇರಿದರು 2ಸುಧಾವನ್ನು ತತ್ವಪ್ರಕಾಶಿಕವನ್ನುಒಂದು ನೂರೆಂಟು ಅವರ್ತಿ ಪಠಿಸುತಮಧ್ವಹೃತ್ಪದ್ಮಸ್ತ ಮಾಧವನ ಅರ್ಚಿಸುತಮಾದನೂರಲ್ಲೇವೆ ವಾಸಮಾಡಿದರು 3ಪೂರ್ವಾಶ್ರಮ ನಾಮ ಜಯತೀರ್ಥಾಂಕದಲ್ಲಿತತ್ವಪ್ರಕಾಶಿಕಾ ಸುಧಾ ಟಿಪ್ಪಣಿಯುಮೂವತ್ತು ಪ್ರಕರಣ ಶ್ರೀಭಾಗವತಸಾರೋ-ದ್ಧಾರವ ಚತುರ್ದಶಿ ಷೋಡಶಿ ಬರೆದಿಹರು 4ತತ್ವಬೋಧÀಕ ಸುಸ್ತೋತ್ರ ಬಿನ್ನಹರೂಪಆಧ್ಯಾತ್ಮ ರಸರಂಜಿನಿ ಅಮೃತ ಫೇಣಭಕ್ತಿಯಲಿ ಪಠಿಸಲುಅಪರೋಕ್ಷಪುರುಷಾರ್ಥಸಾಧನವಾಗಿಹುದನ್ನ ರಚಿಸಿಹರು ಇವರು 5ಹದಿನಾರು ನೂರೆಪ್ಪತೆಂಟು ಶಾಲಿಶಕಯದುಪತಿ ಅಷ್ಟಮಿ ಈಶ್ವರ ಶ್ರಾವಣದಿಜಾತರಾಗಿ ಶ್ರೀಹರಿಪಾದಾಂಬುಜದಲ್ಲಿಸದಾರತರಾದರು ಐವತ್ತು ವರುಷ 6ಕೃತಕೃತ್ಯ ಧನ್ಯ ಮನದಿಂದಲಿ ಈ ಮಹಾನ್ಐದೆಹರಿಪುರ ಲಯವ ಚಿಂತನೆ ಮಾಡಿಹದಿನೇಳ್ ನೂರಿಪ್ಪತ್ತು ಎಂಟು ಶಕ ಮಾಘ ತ್ರ -ಯೋದಶಿ ಕೃಷ್ಣದಲ್ಲಿ ಕೃಷ್ಣನ ಸೇರಿದರು 7ಮತ್ತೊಂದು ಅಂಶದಿ ವೃಂದಾವನದಲ್ಲಿಹರುಭಕ್ತಿಯಿಂ ಸ್ಮರಿಸಿದರೆ ಬಂದು ಸಲಹುವರುಬಹುದೂರ ಧಾರವಾಡ ಕುಶನೂರು ಮತ್ತೆಲ್ಲಬಹುದೂರದವರ ಸಹ ಸೇವಿಪರು ಇವರ 8ಬೃಹತಿಸಹಸ್ರಪ್ರಿಯ ಮಹಿದಾಸ ಜಗದೀಶಬ್ರಹ್ಮಪಿತ ಭಕ್ತಪಾಲಕ ಪರಮಹಂಸಮಹಿಶಿರಿಕಾಂತ `ಶ್ರೀ ಪ್ರಸನ್ನ ಶ್ರೀನಿವಾಸ'ಮಹಾಭಕ್ತ ಶ್ರೀ ವಿಷ್ಣು ತೀರ್ಥಾರ್ಯಶರಣು 9 ಪ
--------------
ಪ್ರಸನ್ನ ಶ್ರೀನಿವಾಸದಾಸರು
139-1ಶ್ರೀರಮಣ ಕರಕಮಲ ಪೂಜಿತ ಪದಾಂಬೋಜಸರಸಿಜಾಸನ ಶಿವಾದ್ಯಮರ ಜನವಿನುತಉರುಗುಣಾರ್ಣವ ಜಗಜ್ಜನ್ಮಾದಿಕರ್ತನರ-ಹರಿಗೆ ಪ್ರಿಯ ಜಗನ್ನಾಥದಾಸಾರ್ಯ ಶರಣು ಪ.ಶ್ರೀನಿವಾಸಾಚಾರ್ಯ ಪಂಡಿತೋತ್ತಮರುಅನಿಮಿಶಾಂಶರು ಹೌದು ಭುವಿಯಲ್ಲಿ ಹುಟ್ಟಿಮಾನುಷಾನ್ನವನುಂಡು ಕರ್ಮವಾತಾವರಣಸನ್ನಿವೇಶದ ಬಲದಿ ಗರ್ವಕೊಳಗಾದರು 1ಆದಿತೇಯರು ಭೂಮಿಯಲ್ಲಿ ಜನ್ಮವ ತಾಳೆಜಾತಾಪರೋಕ್ಷಿಗಳು ಶಕ್ತ್ಯಾತ್ಮನಾವ್ಯಕ್ತ್ಯಾತ್ಮನಾಅಪರೋಕ್ಷಪ್ರಕಾಶವುಒದಗಿ ಗುರುಗಳು ಅನುಗ್ರಹವು ಮಾಡಿದರೆ 2ದೇವತಾ ಕಕ್ಷದಲಿ ದೊಡ್ಡ ಮಟ್ಟದವರುವಿಶ್ವಾಮಿತ್ರರಿಗೆ ಉತ್ತಮರು ನಾರದಗೆಆವರರೆನಿಸುವ ಭೃಗುಋಷಿಯೇ ವಿಜಯಾರ್ಯರುತಾವೆ ಬಂದರು ಶ್ರೀನಿವಾಸರ ಬಳಿಗೆ 3ಪೂರ್ವದಲೆ ಕೇಳಿಹರು ಈ ವಿಜಯದಾಸರುದೇವಾಂಶಅಪರೋಕ್ಷಜ್ಞಾನಿಗಳು ಎಂದುಈ ವಿಧದಿಪೇಳುವುದುಪುಸಿಎಂದು ನೆನೆದರುಗರ್ವಮೌಢ್ಯದಿ ಶ್ರೀನಿವಾಸ ಆಚಾರ್ಯ 4ಕನ್ನಡ ನುಡಿ ಹಾಡಿ ಕುಣಿಕುಣಿವ ಈ ದಾಸಜ್ಞಾನಿಯೆ ? ಅರಿತವನೇ ಬ್ರಹ್ಮವಿದ್ಯೆ ಎಂದುಹೀನಮಾತ್ಸರ್ಯದಿ ಮನಸೋತು ಅವಹೇ -ಳನ ಮಾಡಿದರು ವಿಜಯಾರ್ಯರಲ್ಲಿ 5ತಾಳುವ ತನ್ನಲ್ಲಿ ಮಾಡುವ ಅಪರಾಧತಾಳಹರಿ ತನ್ನ ಭಕ್ತರಲಿ ಮಾಡುವುದುಮಾಲೋಲ ನಿಯಮನದಿ ಸ್ವೋತ್ತಮಾಪರಾಧಫಲವು ಕಂಡಿತು ಶ್ರೀನಿವಾಸರಲಿ ಬೇಗ 6ರಾಜಯಕ್ಷ್ಮವೋಗುಲ್ಮಮತ್ತೇನು ರೋಗವೋರಾಜವೈದ್ಯರು ಸಹ ನಿರ್ಣಯಿಸಲಶಕ್ಯಭೋಜನ ಅರುಚಿ ಉದರಶೂಲಿತನು ಕುಗ್ಗಿಲಾಜವೂ ಸಹ ಜೀರ್ಣ ಆಗದ ಮಾಂದ್ಯ 7ಇಂದಿರೇಶಗೆ ಪ್ರಿಯ ಮಹಾತ್ಮ ಸ್ವೋತ್ತಮರಲ್ಲಿಗೈದ ಅಪರಾಧ ಫಲವೆಂದರಿಯದೆವೈದ್ಯಕ್ಕೆ ಹಣ ವೆಚ್ಚ ಮಾಡಿ ಕ್ಷೇತ್ರಗಳಿಗೆಪೋದರು ದೈವಾನುಗ್ರಹ ಪಡೆಯಲಿಕ್ಕೆ 8ವಾದೀಂದ್ರಸನ್ನುತರಾಘವೇಂದ್ರಾರ್ಯರವೃಂದಾವನದಲ್ಲಿ ಸೇವೆ ಮಾಡಿದರುಮುಂದು ಯಾತ್ರೆ ಗೈದು ಘಟಿಕಾದ್ರಿ ಹನುಮಗೆದುಗ್ಧಾಭಿಷೇಕ ಹರಿವಾಯುಸ್ತುತಿಯಿಂದ 9ಮಂತ್ರಾಲಯ ವೆಂಕಟಗಿರಿ ಘಟಿಕಾದ್ರಿಇಂಥಾ ಸುಪುಣ್ಯ ಕ್ಷೇತ್ರಗಳಿಗೆ ಪೋಗಿಮಂತ್ರಾಲಯ ಮತ್ತೂ ಬಂದು ಶ್ರೀ ರಾಘ-ವೇಂದ್ರ ತೀರ್ಥರಪಾದಭಜಿಸಿ ನಮಿಸಿದರು10ಹರಿವಾಯುಸ್ತುತಿ ಪುರಶ್ಚರಣ ಆದರದಿಚರಿಸೆ ಭಾರತೀಶನು ಮತ್ತುಗುರುರಾಘವೇಂದ್ರರುಅರುಪಿದರು ಸ್ವಪ್ನದಿ ವಿಜಯವಿಠಲ ದಾÀಸಆರ್ಯರಲಿ ಶರಣಾಗುಕ್ಷಮೆಬೇಡು ಎಂದು11ಶ್ರೀನಿವಾಸ ಆಚಾರ್ಯರು ಎಚ್ಚರಿತುತಾನು ವಿಜಯಾರ್ಯರಲಿ ಗೈದ ಅಪರಾಧನೆನೆದು ಬಹುವ್ಯಾಕುಲಪಶ್ಚಾತ್ತಪ್ತರು ಆಗಿಕ್ಷಣದಿ ಹೊರಟರು ವಿಜಯದಾಸರ ಬಳಿಗೆ 12ದೀನ ಕರುಣಾಕರರುವಿಜಯದಾಸಾರ್ಯರುಘನದಯದಿ ಶ್ರೀನಿವಾಸಾಚಾರ್ಯರ ಕ್ಷಮಿಸಿತನ್ನ ಶಿಷ್ಯ ಗೋಪಾಲದಾಸಾರ್ಯರುಅನುಗ್ರಹ ಮಾಡುವ ಗುರುಗಳು ಎಂದರು 13ಪರಮಗುರುವರ್ಯ ಶ್ರೀ ವಿಜಯದಾಸಾರ್ಯರನಿವ್ರ್ಯಾಜ ಪ್ರೀತಿ ಅಪ್ಪಣೆಯ ತಾ ಕೊಂಡುಗುರುಗಳು ಗೋಪಾಲದಾಸಾರ್ಯರಲಿ ಪೋಗಿಶರಣಾಗಿ ಶ್ರೀನಿವಾಸರು ನಮಿಸಿದರು 14ತನ್ನಲ್ಲಿ ಗುರುಗಳು ಕಳುಹಿಸಿದವರೆಂದುದೀನ ಆಚಾರ್ಯರು ನಿಜ ಶರಣರೆಂದುಚೆನ್ನಾಗಿ ಆತನ ಪರಿಸ್ಥಿತಿ ಅರಿತುಅನುಗ್ರಹಿಸಿದರು ಗೋಪಾಲವಿಠಲರು 15ಅನ್ನ ಫಲಹಾರಗಳ ಕೊಳ್ಳದ ವ್ಯಾಧಿಯಲಿಸಣ್ಣ ಬಡವಾದಂಥ ಗಾತ್ರದಿಂದಸನ್ನಮಿಸಿದ ಶ್ರೀನಿವಾಸಾಚಾರ್ಯನ್ನಮನೆಯಲ್ಲಿ ಉಪಚರಿಸಿ ಆದರಿಸಿದರು 16ಗುರುಗ ಶಿರಿವಿಜಯವಿಠಲ ತನ್ನೊಳಿಪ್ಪಶಿರಿ ಗೋಪಾಲ ವಿಠsÀಲ ಶ್ರೀನಿವಾಸಸರಸಿಜಭವಾಂಡ ದೊರೆ ಶ್ರೀ ಜನಗ್ನಾಥನ್ನಸ್ಮರಿಸಿ ಅರ್ಚಿಸಿ ನೈವೇದ್ಯ ಮಾಡಿದರು 17ನಿವೇದಿತಾನ್ನ ಜೋಳದ ರೊಟ್ಟಿ ಕೊಟ್ಟುದ್ರವ ಮಾತ್ರ ಕೊಳ್ಳುವ ರೋಗಿ ಆಚಾರ್ಯಗೆದೇವರ ಅನಿಲನಪರಮಗುರುಗಳ ನೆನೆದುಸವಿದು ಉಣ್ಣುವುದೆಂದು ಹಿತದಿ ಪೇಳಿದರು 18ಶ್ರೀನಿವಾಸಾಚಾರ್ಯ ಉಣ್ಣಲು ರೋಗವುದಿನದಿನದಿ ಕ್ರಮದಿಂದ ನಿವಾರಣ ಆಯ್ತೂಧ್ಯಾನ ಪೂಜಾಅನುಸಂಧಾನಕ್ರಮಗಳುಚೆನ್ನಾಗಿ ಆಚಾಯರಾಕರ್ಷಿಸಿದವು 19ಶ್ರೀನಿವಾಸಾಚಾರ್ಯರ ರೋಗಮೋಚನಕೆಧ್ಯಾನಿಸಿ ಜಪಿಸಿ ಶ್ರೀ ಧನ್ವಂತರಿ ಮಂತ್ರಬಿನ್ನಪವ ಮಾಡಿದರು ಕೀರ್ತನಾ ರೂಪದಿದೀನದಯಾಳು ಗೋಪಾಲದಾಸಾರ್ಯ 20ಆಹ್ನಿಕ ಜಪಗುರುಪರಮಗುರು ನಮನವಿಘ್ನವಿಲ್ಲದೆ ಆಚಾರ್ಯರು ಚರಿಸಿದರುಘನರೋಗ ಹೋಯಿತು ತ್ರಾನ ಇನ್ನೂ ಬೇಕುಶ್ರೀನಿಧಿ ನೋಡಿದನು ಕೃಪಾದೃಷ್ಟಿಯಿಂದ 21ಶ್ರೀ ನಿಧಿಃ ಸರ್ವಭೂತಾನಾಂ ಭಯಕೃದ್ಭಯನಾ -ಶನನು ವಿಜಯದಾಸಾರ್ಯ ರೂಪದಲಿತಾನೆ ಸ್ವಪ್ನದಿ ಪೇಳ್ದ ಗೋಪಾಲದಾಸರಿಗೆದಾನ ಕೊಡು ಆಯುಷ್ಯ ಚತ್ವಾರಿವರ್ಷ 22ಶಿರಿವಿಜಯವಿಠ್ಠಲ ವಾಯುಗುರುಇಚ್ಛಾನು -ಸಾರದಿ ಶ್ರೀನಿವಾಸಾಚಾರ್ಯನಲಿ ವಾತ್ಸಲ್ಯಕಾರುಣ್ಯ ತೋರಿಸಿ ತಮಗಿದ್ದ ಆಯುಸ್ಸಲಿಎರೆದರು ಧಾರೆಯ ನಲವತ್ತು ವರ್ಷ 23ಏನೆಂಬೆ ಈ ನಮ್ಮ ಗುರುಗಳ ಔದಾರ್ಯದೀನಕರುಣಾಂಬುಧಿ ಗೋಪಾಲದಾಸರದಾನಕ್ಕೆ ಎಣೆಯುಂಟೆ ಎಲ್ಲಾದರೂ ಯಾರೂತನ್ ಆಯುಷ್ಯವ ಕೊಡುವರೆ ಅನ್ಯರಿಗೆ 24ರೋಗಕಳೆದು ಆಯುರ್ದಾನವಕೊಂಡಈಬ್ಯಾಗವಟ್ಟ ಶ್ರೀನಿವಾಸಾಚಾರ್ಯಜಗನ್ನಾಥವಿಠ್ಠಲ ದಾಸರಾಯರು ಎಂದುಜಗತ್ತಲ್ಲಿ ಖ್ಯಾತರಾಗುವ ಬಗೆ ಮಾಡಿದರು 25ಗುರುಹಿರಿಯರಲಿ ಮಾಳ್ಪ ಉದಾಸೀನ ಎಷ್ಟುಭಾರಿತರ ಆಪತ್ತು ಕೊಡುವುದು ಎಂದುಗುರುಅನುಗ್ರಹದಿಂದ ಸೌಭಾಗ್ಯಲಾಭವುಅಪಮೃತ್ಯು ಪರಿಹಾರ ಎಂದು ತಿಳಿಯುತ್ತೆ 26ವಾರಿಜಾಸನ ಪಿತನು ಪೂರ್ಣಪ್ರಜÕರ ಹೃತ್‍ಸ್ಥಶಿರಿಪ್ರಸನ್ನ ಶ್ರೀನಿವಾಸನಿಗೆ ಪ್ರಿಯತರರುಪುರಂದರವಿಜಯಗೋಪಾಲ ದಾಸಾರ್ಯರಚರಣರತ ಜಗನ್ನಾಥ ದಾಸಾರ್ಯ ಶರಣು 27-ದ್ವಿತೀಯಕೀರ್ತನೆ ಸಂಪೂರ್ಣಂ -
--------------
ಪ್ರಸನ್ನ ಶ್ರೀನಿವಾಸದಾಸರು
139-5ಶ್ರೀ ರಮಣಿ ಕರಕಮಲ ಪೂಜಿತ ಪದಾಂಬೋಜಸರಸಿಜಾಸನ ಶಿವಾದ್ಯಮರ ಜನವಿನುತಉರುಗುಣಾರ್ಣವ ಜಗಜ್ಜನ್ಮಾದಿಕರ್ತ ನರ-ಹರಿಗೆ ಪ್ರಿಯ ಜಗನ್ನಾಥದಾಸಾರ್ಯ ಶರಣು ಪ.ವಿಠ್ಠಲನ ಮಂದಿರದಿ ತಪ್ಪದೇ ಪ್ರತಿದಿನಪಠಿಸಿ ಅರ್ಪಿಸುತ್ತಿದ್ದವಿಶ್ವವಿಷ್ಣುವಷಟ್ಕಾರ ಮೊದಲಾದ ಸಹಸ್ರನಾಮಗಳದಿಟ ಜ್ಞಾನ ಭಕ್ತಿಯಿಂ ಮಾರ್ಗದಿ ಸ್ಮರಿಸಿದರು 1ತನ್ನ ಹೊರ ಒಳಗೆ ಶ್ರೀಹರಿಯ ತಿಳಿಯುತ್ತಕಾಣುವುದು ಎಲ್ಲವೂ ಅನಘಹರಿ ಆವಾಸ್ಯತನಗೆ ಯದೃಚ್ಛದಿ ಲಭಿಸುವುವು ಹರಿಕೊಡುವುವುಎನ್ನುತ ಅನಪೇಕ್ಷಿ ನಿರ್ಭಯದಿ ನಡೆದರು 2ಮಾರ್ಗಸ್ಥ ಅಕ್ಷೋಭ್ಯ ಜಯಮುನಿಗಳಲಿಪೋಗಿ ಬಾಗಿ ಶಿರಸ್ಸಾಷ್ಠಾಂಗ ನಮಸÀ್ಕರಿಸಿ ಮುಂದುಪೋಗಿ ಕೃಷ್ಣಾ ತೀರ ಹನುಮನ್ನ ವಂದಿಸಿಚೀಕಲಪರಿವಿಗೆ ನಮಿಸಿ ಕರಮುಗಿದರು 3ಗುರುಗುಣಸ್ತವನಾದಿ ಗ್ರಂಥಗಳ ರಚಿಸಿರುವಸೂರಿವಾದೀಂದ್ರರ ನಮಿಸಿ ಅಪ್ಪಣೆಯಿಂಶ್ರೀರಾಘವೇಂದ್ರ ತೀರ್ಥರ ನಮಿಸಿ ಶರಣಾಗಿಸ್ತೋತ್ರ ಅರ್ಪಿಸಿದರು ಕವಿತಾರೂಪದಲಿ 4ಹರಿಶಿರಿ ಹನುಮ ಶಿವಗುರು ಅನುಗ್ರಹಕೊಂಡುದಾರಿಯಲ್ಲಿರುವಂಥ ಕ್ಷೇತ್ರ ಮೂರ್ತಿಗಳದರುಶನ ಮಾಡಿ ಗೋಪಾಲ ದಾಸಾರ್ಯರುಇರುವ ಸ್ಥಳ ಸೇರಿದರು ಜಗನ್ನಾಥದಾಸರು 5ಗುರುಗಳ ನೋಡಿ ಆನಂದ ಬಾಷ್ಪವ ಸುರಿಸಿಚರಣಪದ್ಮಗಳಲ್ಲಿ ನಮಿಸಿ ಶರಣಾಗಿಘೋರವ್ಯಾಧಿಹರಿಸಿ ಅಪಮೃತ್ಯು ತರಿದಂಥಕಾರುಣ್ಯ ನಿಧಿ ಉದ್ಧಾರಕರು ಎಂದರು 6ರಾಜೀವಾಲಯಪತಿವಿಜಯಗೋಪಾಲನುಭಜತರ ರಕ್ಷಿಸುವ ಕರುಣಾಸಮುದ್ರಈ ಜಗನ್ನಾಥನೇ ನಿನಗೆ ಒಲಿದಿಹನುಭುಜಗಾದ್ರಿವಾಸ ಫಂಡರಿ ವಿಠ್ಠಲ 7ನಿಜಭಕ್ತಾಗ್ರಣಿ ಗೋಪಾಲ ದಾಸಾರ್ಯರುನಿಜಭಾವದಲಿ ಈ ರೀತಿಯಲಿ ಹೇಳೆಐಜೀ ಮಹಾತ್ಮರು ಸೂಚಿಸಿದರು ಹರಿಯಭೋಜನ ಜಗನ್ನಾಥದಾಸಗೆ ಮಾಡಿಸಿದ್ದು 8ಜಗನ್ನಾಥದಾಸರು ನಡೆದ ವೃತ್ತಾಂತವಮುಗಿದು ಕರಗದ್ಗದ ಕಂಠದಲಿ ಪೇಳೆಚಕಿತರಾದರು ಅಲ್ಲಿ ನೆರೆದಿದ್ದ ಸಜ್ಜನರುಉದ್ಘೊಷ ಜಯ ಜಯ ಶಬ್ದ ಮಾಡಿದರು 9ಉತ್ತನೂರಿಗೆವೇಣಿಸೋಮಪುರದಿಂ ಪೋಗಿಮತ್ತೂವೇಣಿಸೋಮಪುರವನ್ನು ಯೈದಿಸತ್ತತ್ವ ಬ್ರಹ್ಮ ಜಿಜ್ಞಾಸವೂ ಭಾಗ -ವತ ಧರ್ಮ ಆಚರಿಸಿದರು ಮುದದಿಂದ 10ಗೋಪಾಲಕೃಷ್ಣ ಪ್ರಿಯ ಐಜೀಮಹಂತರುಗೋಪಾಲದಾಸಾರ್ಯ ªರದ ಗುರುತಂಗೋಪಾಲ ದಾಸಾರ್ಯರುಗಳ ಸಮೇತದಿಭೂಪಾಲ ಪ್ರಮುಖರು ಸಾಧುಜನಗುಂಪು 11ಶಿರಿವಾಸುದೇವಪ್ರಿಯವಾಸತತ್ವಜÕರಗುರುಗಳು ಗೋಪಾಲದಾಸರ ಅನುಗ್ರಹದಿವರದ ಗುರುತಂದೆ ಗೋಪಾಲರು ಮತ್ತೆಲ್ಲರಿಗೂಕರಮುಗಿದು ಹೊರಟರು ಅಪ್ಪಣೆಕೊಂಡು 12ಗದ್ವಾಲ ಮಾರ್ಗದಿ ಮಂತ್ರಾಲಯ ಪೋಗಿಮಧ್ವಮತ ದುಗ್ಧಾಬ್ಧಿ ಚಂದ್ರ ಶ್ರೀ ರಾಘವೇಂದ್ರ ವಾದೀಂದ್ರರ ನಮಿಸಿ ಅಲ್ಲಿಂದಯೈದಿಹರು ಪರಮಗುರುಗಳು ಇದ್ದ ಸ್ಥಳವ 13ಪರಮಗುರುಗಳು ವಿಜಯವಿಠ್ಠಲ ದಾಸಾರ್ಯರಚರಣಾರವಿಂದದಿ ಶರಣಾಗಿಅವರಕರದಿಂದ ನರಸಿಂಹ ವಿಜಯವಿಠ್ಠಲನಸುಪ್ರಸಾದವ ಕೊಂಡು ಮಾನವಿಗೆ ಹೋದರು 14ಮನುತೀರ್ಥ ತಟದಲಿ ಮನೆಯಲ್ಲಿ ವಾಸಿಸುತಹನುಮಂತಸ್ಥ ನರಹರಿ ಜಗನ್ನಾಥನ್ನಹನುಮನ್ನ ಪೂಜಿಸುತ ಗುರುಗಳ ಸ್ಮರಿಸುತ್ತಜ್ಞಾನಾರ್ಥಿ ವಿದ್ಯಾರ್ಥಿಗಳಿಗೆ ಒದಗಿಹರು 15ಇಷ್ಟರಲ್ಲೇ ಜಗನ್ನಾಥದಾಸರ ಕೀರ್ತಿಅಷ್ಟದಿಕ್ಕಲ್ಲು ಪ್ರಖ್ಯಾತಿಯ ಹೊಂದಿಇಷ್ಟಾರ್ಥ ಸಿದ್ಧಿಗೆ ಬರುವರಾದರು ಜನರುಕೃಷ್ಣನ ಒಲಿಮೆ ಈ ದಾಸರಲಿ ಪೂರ್ಣ 16ಮಾಧ್ವ ಮೂಲಗ್ರಂಥ ಟೀಕಾಟಿಪ್ಪಣಿಗಳುಸಾಧು ಹರಿದಾಸರ ಕೀರ್ತನೆಗಳುವೇದವ್ಯಾಸೋದಿತ ಪುರಾಣ ಇತಿಹಾಸವಿದ್ಯಾರ್ಥಿಗಳಿಗೆಲ್ಲ ಪಾಠ ಪ್ರವಚನವು 17ಯೋಗಿವರ ಪ್ರಾಣೇಶವಿಠ್ಠಲ ದಾಸಾರ್ಯರುಭಾಗವತವರಶ್ರೀಶ ವಿಠ್ಠಲದಾಸಾರ್ಯನಿಗಮವೇದ್ಯನ ಭಕ್ತಜನರು ಬಹುಮಂದಿಯುಬಾಗಿ ದಾಸಾರ್ಯರಿಗೆ ಶಿಷ್ಯ ಜನರಾದರು 18ಪ್ರಾಣೇಶ ದಾಸರಿಗೆ ಶರಣಾದೆ ಎಂದೆಂದುಪ್ರಾಣದೇವನು ಇವರೊಳ್ ಪ್ರಸನ್ನನಾಗಿಹನುಪ್ರಾಣದೇವಾಂತಸ್ಥ ಶ್ರಿಹರಿ ಕೇಶವನಕಾಣುತ ಭಜಿಸುವ ಭಾಗವತರೆಂದು 19ಜಗನ್ನಾಥದಾಸರ ಶಿಷ್ಯ ಸಜ್ಜನರಿಗೆಭಾಗವತವರಶ್ರೀಶ ಶ್ರೀದವಿಠ್ಠಲಾದಿಭಗವದ್ದಾಸರಿಗೆ ನಮಿಪೆ ಶ್ರೀ ಹರಿವಾಯುಝಗಝಗಿಪ ಇವರುಗಳೊಳ್ ಸಂತತ ಎಂದು 20ನೋಡಬೇಕಾಗಿದ್ದ ಕ್ಷೇತ್ರಗಳಿಗೆ ಪೋಗಿನಾಡಿನಲಿಭಾಗವತಧರ್ಮವ ಬೆಳೆಸೆಬೇಡುವ ಯೋಗ್ಯರಿಗೆ ಉಪದೇಶ ಕೊಡೆ ಶಿಷ್ಯರೊಡಗೂಡಿ ಹೊರಟರು ಜಗನ್ನಾಥದಾಸರು 21ಕರ್ಜಗಿ ಕ್ಷೇತ್ರದಲ್ಲಿ ಇರುವ ವರದಾ ನದಿಯುಸಜ್ಜನ ಸಮೂಹವು ಬಹಳ ಅಲ್ಲುಂಟುಶ್ರೀ ಜಗನ್ನಾಥನ್ನ ಭಜಿಸುತ್ತ ದಾಸರುಕರ್ಜಗಿ ಜಮೀನ್ದಾರ ಮನೆಯಲ್ಲಿ ಕುಳಿತರು 22ಸಾಧ್ವಿ ಶಿರೋಮಣಿ ಆ ಗೃಹಸ್ಥನ ಪತ್ನಿಪಾದನಮಿಸಿ ಪತಿಗೆ ಬಿನ್ನಹ ಮಾಡಿದಳುಇಂದುಲೌಕಿಕ ವಿಷಯಲಾಂಪಟ್ಯ ನಿಲ್ಲಿಸಿವಂದಿಸಿ ದಾಸರಿಗೆ ಪೂಜೆ ನೋಡೆಂದು 23ಅಹರ ಆರಾಧಿಸುವ ಕ್ರಮದಿ ದಾಸಾರ್ಯರುಸಾಯಾಹ್ನ ಸಾಮವಾಪ್ರತಿಪಾದ್ಯ ನರಸಿಂಹನವಿಹಿತದಿ ಅರ್ಚಿಸಿ ಕೀರ್ತನೆಗಳರ್ಪಿಸಿಮಹಾಹರ್ವ ಭಜಿಸುವರು ಶಿಷ್ಯರ ಸಮೇತ 24ಅಂದು ಈ ಗೃಹಸ್ಥನು ಹೆಂಡತಿ ಕೋರಿಕೆಯಂತೆಬಂದು ಕುಳಿತನು ದಾಸಾರ್ಯರ ಮುಂದೆಅಂದೇ ಆ ವಿಪ್ರನ ಅನಿಷ್ಠ ಪ್ರಾರಬ್ಧವುಚಂದದಿ ಪೋಪುವದೆಂದರಿತರು ದಾಸಾರ್ಯ 25ಪೂಜಾ ಆರಂಭ ಆಗಲಿಕೆ ಇರುವಾಗ ಆದ್ವಿಜನ ನೋಡಿ ಪ್ರಾಣೇಶ ದಾಸಾರ್ಯಗರ್ಜಿಸಿದರು ಇನ್ನಾದರೂ ಒಳ್ಳೆಋಜುಮಾರ್ಗ ಹಿಡಿ ಹರಿಯ ಒಲಿಸಿಕೊಳ್ಳೆಂದು 26ವಾಗ್ವಜ್ರಧಾರೆಯು ಪರಿಣಮಿಸಿ ವಿಪ್ರನತೀವ್ರ ಆ ಕ್ಷಣದಲ್ಲೆ ಮನಕಲುಷಕಳೆದುಶ್ರೀವರನ ಪ್ರಿಯತರ ಜಗನ್ನಾಥದಾಸರಿಗೆಸುವಿನಯದಿ ನಮಿಸಿ ಉದ್ಧರಿಸಿ ಎಂದ 27ಪ್ರಾಣೇಶ ದಾಸರಿಗು ಜಗನ್ನಾಥದಾಸರಿಗುತನ್ನ ಕೃತಜÕತೆಯನ್ನು ಚೆನ್ನಾಗಿ ತಿಳಿಸಿಮನ ಶುದ್ಧಿ ಭಕ್ತಿಯಿಂದಲಿ ಪೂಜೆ ನೋಡಲುಹನುಮಂತ ದೇವರು ಕುಳಿತಿದ್ದು ಕಂಡ 28ಶ್ರದ್ಧೆ ಭಕ್ತಿಯಿಂದ ಗೃಹಸ್ಥನುದಾಸರಪಾದಕೆರಗಿ ತನ್ನನ್ನು ಹರಿದಾಸವೃಂದದಲಿ ಸೇರಿಸಬೇಕೆಂದು ಪ್ರಾರ್ಥಿಸಿಶ್ರೀದವಿಠ್ಠಲನಾಮ ಅಂಕಿತವಕೊಂಡ29ಜಗನ್ನಾಥದಾಸಾರ್ಯಪರಮದಯಮಾಡಿಆ ಗೃಹಸ್ಥಗೆ ಶ್ರೀದವಿಠ್ಠಲಾಂಕಿತವುಭಕುತ ಜನರಿಗೆ ಫಲಮಂತ್ರಾಕ್ಷತೆ ಕೊಟ್ಟುಶ್ರೀಕರನ ಸ್ಮರಿಸಿ ಸವಣೂರಿಗೆ ಹೊರಟರು 30ವಾರಿಜಾಸನ ಪಿತನು ಪೂರ್ಣ ಪ್ರಜÕರ ಹೃತ್‍ಸ್ಥಶಿರಿ ಪ್ರಸನ್ನ ಶ್ರೀನಿವಾಸನಿಗೆ ಪ್ರಿಯತರರುಪುರಂದರವಿಜಯಗೋಪಾಲದಾಸಾರ್ಯರಚರಣರತ ಜಗನ್ನಾಥ ದಾಸಾರ್ಯ ಶರಣು 31- ಇತಿ ಷಷ್ಠ ಕೀರ್ತನೆ ಸಂಪೂರ್ಣಂ -
--------------
ಪ್ರಸನ್ನ ಶ್ರೀನಿವಾಸದಾಸರು