ಒಟ್ಟು 1305 ಕಡೆಗಳಲ್ಲಿ , 97 ದಾಸರು , 1006 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೃಷ್ಣಾರ್ಪಿತವೆಂದು ಕೊಡುಲು ಎ-| ಳ್ಳಷ್ಟಾದರೂ ಮೇರು ಪರ್ವತ ಮೀರುವದು ಪ ಗಣ್ಯವಿಲ್ಲದೆ ಶಿಷ್ಯ ಸಹಿತ ಹರರೂಪ ಮುನಿ ಅ- ರಣ್ಯದಲಿ ಪಾಂಡವರು ಇರಲು ಬಂದು || ಪುಣ್ಯಬೇಕೆಂದೆನಲು ಬಂದು ದಳ ಶಾಖಾ ಕಾ- | ರುಣ್ಯದಲಿ ಹರಿ ಎನಲು ಅಪರಿಮಿತವಾದುದು 1 ಹಸ್ತಿನಾಪುರದಲ್ಲಿ ಸಕಲ ದೇವಾದಿಗಳ | ಮಣಿ ವಿದುರನ ಮನೆಯಲ್ಲಿ || ಹಸ್ತು ಬಂದುದಕೆ ಉಪಾಯವೇನೆಂದೆನಲು | ಹಸ್ತದೊಳು ಪಾಲ್ಗುಡತಿಯೆರಿಯೆ ಮಿಗಿಲಾದುದೊ2 ಅಣು ಮಹತ್ತಾಗಲಿ ಆವಾವ ಕರ್ಮಗಳು | ತೃಣನಾದರರಿತು ಅರಿಯದೆ ಮಾಡಲು || ಕ್ಷಣ ತನ್ನದೆನ್ನದೆ ಅರ್ಪಿತನೆ ನಿಕ್ಷೇಪ | ಗುಣನಿಧಿ ವಿಜಯವಿಠ್ಠಲನ ಪುರದಲ್ಲಿ 3
--------------
ವಿಜಯದಾಸ
ಕೆಡುವೆಯೇಕೋ ಮನುಜ ಕೆಡುವೆಯೇಕೋ ಪ ಪೊಡವಿಯಾ ಸುಖ ಸ್ಥಿರವದೆಂಬ ದೃಢವನಾಂತು ನೀ ಅ.ಪ ಧನವಗಳಿಸಲೇಂ ಮನುಜಾ ಮನೆಗಳೀಡಾಡೆ ಎನಿತು ಬಳಗಮಿರ್ಪೊಡೇನು ತನುವಿನಾಸೆಯಿಂ 1 ಮರೆವೆಯೇತಕೋ ಮನುಜಾ ಅರಿಯಲೆನ್ನುತಾ ಬರಿಯ ಮಾಯೆಯೀ ಪ್ರಪಂಚ ಚಿರವೆಂದೆನ್ನುತಾ 2 ರಂಗಮಾಲೋಲನಾ ಮಾಂಗಿರೀಶನ ನೆನೆ[ದರೆ] ಹಿಂಗದೇ ಭವಬಂಧಗಳನು | ಭಂಗಗೈಯನೇ 3 ಕಾಲದೂತ ರಂಗ ಕಾಲಿನಿಂದೊದೆಯುವಾಗ ಬಾಲರಾಮದಾಸ[ನುತನ] ನಲಿದು ನೆನೆಯದೆ 4
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಕೇಳಮ್ಮ ತಂಗಿ ಕೇಳಮ್ಮ ಪ ಕೇಳಿ ಪುರಾಣದಿ ಪೇಳಿದ ಕೃಷ್ಣನ ಲೀಲೆಯ ಪಾಡುತ ``ಬಾಳಮ್ಮ'' ಅ.ಪ ನಿಷ್ಟೆಯಿಂದಲಿ ಬಲು ಶಿಷ್ಟಳಾಗುತ ದುಷ್ಟರಿಂದ ದೂ``ರಾಗಮ್ಮ'' 1 ಹರಿದಾಸರಪದ ಹರುಷದಿ ಹಾಡುತ ಗುರು ಹಿರಿಯರ ಮನ ``ಕೊಪ್ಪಮ್ಮ'' 2 ಕಾಲ ಕಳೆಯದೆ ಶೀಲಮತಿ ನೀ “ನಾಗಮ್ಮ'' 3 ವಿದ್ಯೆಯ ಕಲಿತು ಬದ್ಧಿವಂತ | ಳಾ | ಗಿದ್ದರೆ ಸುಖ ಶತ “ಸಿದ್ಧಮ್ಮ'' 4 ವಂದಿಸಿ ತುಲಸಿ ವೃಂದಾವನ ಪೂಜಿಸು ಮುಂದೆ ನಿನಗೆ ``ಆನಂದಮ್ಮ'' 5 ಹೀನರ ಬೆರೆಯದೆ ಮೌನವ್ರತದಲಿ | ಜ್ಞಾನಿ ಜನರ ನೀ ``ನರಸಮ್ಮ'' 6 ಮೂಢ ಜನರ ಒಡನಾಡದೆ ಭಕ್ತಿಲಿ ಮಾಡುವ ಸಜ್ಜನರ ``ಸಂಗಮ್ಮ'' 7 ಧರ್ಮದಿಂದ ಸತ್ಕರ್ಮ ಮಾಡುತ ನಿರ್ಮಲಗೊಳಿಸಿ ಸಂತ ``ರಂಗಮ್ಮ'' 8 ಪವನ ಪಿತನ ಕಥಾಶ್ರವಣವೆ ಪುಣ್ಯವು ಭವ ವಿದು ಕತ್ತಲು ``ಕಾಳಮ್ಮಾ'' 9 ಸದನಕೆ ಬಂದಿಹ ಬುಧರಾವರಿಸಲು ಮಂದಬಲು ನಿನಗದ ``ರಿಂದಮ್ಮ'' 10 ಎಂದೆಂದಿಗು ಪರನಿಂದೆಯ ಮಾಡದೆ ಮಂದಿರದಿರುವದೆ ``ಚಂದಮ್ಮ'' 11 ಸಾರಿದ ಜನರಘದೂರಗೈದು ಹರಿ ತೋರುವ ನುಜಗುರು ``ಈರಮ್ಮ'' 12 ಅತ್ತಿಯ ಮನಿಗೆ ಹೆತ್ತವರಿಗೆ ಉತ್ತಮ ಕೀರ್ತಿ ``ತಾರಮ್ಮ'' 13 ಗೋವಿಪ್ರಾಳಿ ಸೇವಿಸುತಿರುವದೆ ಕೋವಿದರಿಗೆ ಬಲು ``ಜೀವಮ್ಮ'' 14 ಭಾವದೊಳಗೆ ಪರದೇವನೆ ಪತಿಯೆಂದು ಪಡಿ ``ಭೋಗಮ್ಮ'' 15 ಭೇದಜ್ಞಾನ ಸಂಪಾದಿಸು ಕ್ಷಮಿಸುವ ಶ್ರೀಧರ ನಿನ್ನಾಪ ``ರಾಧಮ್ಮ'' 16 ಕೋಪದಿ ಪರರಿಗೆ ತಾಪವ ಬಡಿಸಲು ಲೇಪವಾಗುವದು ``ಪಾಪಮ್ಮ'' 17 ಇಂಗಡಲಾತ್ಮಜನಂಘ್ರಿ ಸರೋಜಕೆ ಸತಿ ``ತುಂಗಮ್ಮ'' 18 ದಾಸಜನರ ಸಹವಾಸದೊಳಿರುವದೆ ಕಾಶಿಗಿಂತ ವಿ``ಶೇಷಮ್ಮ'' 19 ಕಲಿಯುಗದಲಿ ಸಿರಿನಿಲಯನ ನೆನೆದರೆ ಸುಲಭ ಮುಕ್ತಿ ತಿಳಿ ``ಕಂದಮ್ಮ'' 20 ಪತಿಯು ಸದ್ಗತಿಗೆ ಗತಿ ಎಂದರಿತಹ ಮತಿಯುತ ಸತಿಯೆ ``ಯವನಮ್ಮ'' 21 ಮಧ್ವಸಿದ್ಧಾಂತದ ಪದ್ಧತಿ ತಪ್ಪದೆ ಇದ್ದರೆ ಹರಿಗತಿ ``ಮುದ್ದಮ್ಮ'' 22 ಸೋಗಿಗೆ ನೀ ಮರುಳಾಗಿ ನಡೆದರೆ ಯೋಗಿ ಜನರ ಮನ ``ಕಲ್ಲಮ್ಮ'' 23 ಶೀಲೆ ಗುಣದಿ ಪಾಂಚಾಲೆಯು ಎಲ್ಲ ಬಾಲೆಯರೊಳು ``ಮೇಲಮ್ಮ'' 24 ನೇಮದಿ ನಡೆದರೆ ಪ್ರೇಮದಿ ಸಲಹುವ ಶಾಮಸುಂದರನು ``ಸತ್ಯಮ್ಮ'' 25
--------------
ಶಾಮಸುಂದರ ವಿಠಲ
ಕೇಳು ಕಿವಿಗೊಟ್ಟು ನಿನ್ನ ನಿಜಗುಹ್ಯದ ಸುಮಾತ | ಹೇಳುತಿಹ್ಯಾ ನಂದಬೋಧ ತಿಳಿಯಾ ವಿಶ್ವನಾಥ ಧ್ರುವ ನೋಡಿ ನಿನ್ನ ಗೂಡಿನೊಳು ಮಾಡಿಕೊ ಸ್ವಹಿತ ಚಾಡುವಿಡಿದು ನಡೆದು ಹೋಗಿ ಕೂಡಿರೊ ಸುಪಥ ಹಿಡಿಯದೆ ಆಲೇಶದ ಮನೆಯ ನೀ ಪಡಕೊ ಘನ ಅಮೃತ ಬೇಡಿ ಬಯಸಿದರಾಗದು ವಸ್ತು ಹಿಡಕೊಡುವ ಗುರುನಾಥ 1 ಖೂನ ಕಂಡು ಗುರುಪಾದದಲಿ ತನುಮನದಲಿ ನೀಜಡಿಯೊ | ಮೌನಮುಗ್ದದಲಿ ನೀನೆಂದು ಅನುಭವದ ನೀಹಿಡಿಯೊ ನಾನು ನೀನೆಂಬುದು ತಾ ಬಿಟ್ಟರೆ ಸನ್ಮತ ಸುಖನಿಲುಕಡಿಯೊ ಜ್ಞಾನ ದೈವತೆಯಂಬು ಮಾರ್ಗದಲಿ ಅನುಸರಿಸಿ ನೀ ನಡಿಯೋ 2 ಒಂದೆ ಮನದಲಿ ಹೊಂದಿ ನಿಜವುಸಂದಿಸಿಕೊಸ್ವಾನಂದ ಬಂದ ಜನ್ಮವು ಸಾರ್ಥಕ ಮಾಡುದು ಇದು ನಿನಗೆ ಬಲುಚಂದ ಹಿಂದೆ ಮುಂದೆ ತಾ ತುಂಬ್ಯಾನೆ ಮಹಿಪತಿಸ್ವಾಮಿ ಸಚ್ಚಿದಾನಂದ ಹೊಂದಿದವರನುಮಾನವ ಬಿಡಿಸಿ ಛೇದಿಸುವ ಭವಬಂಧ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕೇಳು ಶ್ರೀನಿವಾಸ ಕಷ್ಟವ ತಾಳಲಾರೆ ಶ್ರೀಶ ಕಂಜಜೇಶ ಪ. ಮಾತ ಕೇಳದಿರುವ ಮನ ಬಹು ಕಾತರಗೊಂಡಿರುವ ರೀತಿಯಿಂದ ಬಹು ಸೋತೆನು ಷಡ್ರಿಪು ಜಾತ ಬಂಧಿಸಿರುವ 1 ಕಟ್ಟಿ ಸಹಿಸಲಾರೆ ಮೊದಲ ವಿಠಲ ನೀ ಕೈಬಿಟ್ಟರೆ ಮಾಜದು ಅಟ್ಟಹಾಸ ತೋರೆ 2 ಉದಯ ಮೊದಲುಗೊಂಡು ನಾನಾ ವಿಧದಲಿ ಭ್ರಮೆಗೊಂಡು ಸದಯ ನಿನ್ನ ಪಾದಾಬ್ಜ ನೆನೆಯದೆ ಚದುರೆಯ ಮನಗೊಂಡು 3 ನಿತ್ಯ ಕರ್ಮವೆಲ್ಲ ಕಂಬಳಿ ಬುತ್ತಿಯಾಯಿತಲ್ಲ ಕತ್ತರಿಸಿ ಬ್ರಹ್ಮೆತ್ತಿಯನ್ನು ಪುರು- ಸಿರಿನಲ್ಲ 4 ತಲ್ಲಣಗೊಳಿಸುವುದು ತುದಿಮೋದ- ಲಿಲ್ಲದೆ ದಣಿಸುವುದು ನಿಲ್ಲೆ ನಡೆಯ ಮಲಗೆಲ್ಯು ಬಿಡದು ದೂ- ರೆಲ್ಲು ಪೇಳಗೊಡದು 5 ಮೆಲ್ಲ ಮೆಲ್ಲನೆದ್ದು ನೀ ಮನ ದಲ್ಲಿ ಸೇರುತ್ತಿದ್ದು ನಿಲ್ಲಲು ತೀರಿತಲ್ಲದೆ ಲೋಕ ದೊಳಿಲ್ಲ ಬೇರೆ ಮದ್ದು 6 ನಿತ್ಯ ನಿನ್ನ ಮುಂದೆ ಸೇವಾ ವೃತ್ತಿ ಮಾಳ್ಪದೊಂದೆ ಎತ್ತಾರಕವೆಂದಾಶ್ರಯಿಸದೆ ಮೇ- ಲೊತ್ತಿ ಬೇಗ ತಂದೆ 7 ಭೃತ್ಯರ ಬಿಡನೆಂದು ಶ್ರುತಿ ಶಿರ ವೃತ್ತಿ ವಚನವೆಂದು ಸತ್ಯವೆಂದು ನಂಬಿದ ನೀನರಿಯೆಯ ಔತ್ತರೆಯ ಬಂಧು 8 ವಿಜಯಸೂತನಿಂದ ಪಾದವ ಭಜಿಸಿದ ಮ್ಯಾಲೆನ್ನ ನಿಜ ಜನದೊಳು ಸೇರಿಸುವುದು ಚಿತ ಸಾಮಜ ವರದನೆ ಮುನ್ನ 9 ಭವ ಪರಿಪಾಲ ಪಾಲಿಸು ವ್ರಜ ಯುವತಿ ಲೋಲಾ ಪಾದ ಪಂ- ಕಜ ಕೊಡು ಗೋಪಾಲ 10
--------------
ತುಪಾಕಿ ವೆಂಕಟರಮಣಾಚಾರ್ಯ
ಕೇಳುವದರೊಳಗೆ ಕಳದಿಯಲ್ಲ ದಿನ ಮಾಡುವ- ದೆಂದ್ಹೇಳಲೆ ಮನವೆ ಪ ಮನನ ಮಾಡಿ ಮಾಧವನ ಮಹಿಮೆ ಅನುಭವಕೆ ತಾರದೆ ಈ ಪರಿಯಲಿ ಬರೆ ಅ.ಪ ಕಾಲ ಕಳೆವೆ ಗುರುಹಿರಿಯರ ನುಡಿಗಳು 1 ಕೆಡದಿರೆಲೊಯಂದೆನುತ ಆಚರಿಸುತಿರುವಿಯಾ 2 ಗಾನಮಾಡು ಶ್ರೀಹರಿಗುಣವಾ ಸಿರಿ ಲೇಸುಗಳ ಅರ್ಪಿಸು ಮರೆಯದೆ 3
--------------
ಅಸ್ಕಿಹಾಳ ಗೋವಿಂದ
ಕೈಪಿಡಿದೆನ್ನನು ಕಾಪಿಡು ನಲವಿಂ ಕನ್ನಡ ನುಡಿವೆಣ್ಣೆ ಪ. ಈ ಪಸುಳೆಗೈದಾ ಪಾಪವದಾವುದು ಕೋಪಿಸದಿರೆನ್ನಾಣೆ ಅ.ಪ ಮುಳಿವಿಂತೇತಕೆ ನಳಿನದಳಾಂಬಕೆ ಎಳೆಗೂಸಿನ ಮನಕೆ ಕಳವಳದಿಂದತಿ ಬಳಲಿಕೆಯಾದರು ತಳುವುದಿದೇನಿದು ಸಾಕೇ 1 ಮಾತೆಯ ಮಮತೆಗೆ ಸೋತು ಭಜಿಸುವೀ ಪೋತನ ನೆರೆನೋಡಿ ಪ್ರೀತಿಯಿಂ ಕರೆದಾತುಕೋ ನಲ್ವಾತಿನಿಂ ಕೈನೀಡಿ 2 ಪರಿಪರಿಯೆಡರಿನ ಗಿರಿದುರ್ಗಂಗಳಾವರಿಸಿರುತಿಹುದೆ ಪರಿಯಿಂದದನುತ್ತರಿಸಿ ಬಂದಪೆ ಕರುಣಿಸು ಭರದೆ 3 ಕಾರ್ಯ ಕಾರಣ ಕರ್ತೃ ನೀನಹುದಾರ್ಯೆ ಸದಾ ಪೊರೆಯೇ ಕೋರಿಕೆಗಳನೀಡೇರಿಸಿಯಣುಗರ ನಿರಪಾಯದೆ ಕಾಯೇ 4 ಭಾಷೆಗೆ ತಪ್ಪಿದ ದೋಷಿಯೆನ್ನುತುಪೇಕ್ಷಿಸಬೇಡೆನ್ನ ಶೇಷಗಿರೀಶನೆ ಪೋಷಕನಾಗಿರೆ ನಿರ್ದೋಷಿಯೆನಿಸುವೆ ನೀಂ5
--------------
ನಂಜನಗೂಡು ತಿರುಮಲಾಂಬಾ
ಕೈಲಾಸದಾಶೆಯಲ್ಲಿಹುದೊಶೈಲೇಂದ್ರಸುತೆಯರಸ ಶಿವನ ಒಲವಿಲ್ಲದವಗೆ ಪ. ಗುರುಹಿರಿಯರರಿಯದಗೆ ಪರಗತಿಯ ತೊರೆದವಗೆವರಧರ್ಮಪಥವ ಮರೆದವಗೆದುರುಳರನೆ ಪೊರೆದು ಪರಸತಿಯ ನೆರೆದವಗೆ 1 ದೀನಜನರೊಡನಾಡಿ ಹೀನಕರ್ಮವ ಮಾಡಿಆನೆಂಬ ಮಮತೆಯನೆ ಕೂಡಿದಾನವನೆ ಬೇಡಿ ದುರ್ದಾನಕೆ ಮರುಳಹಗೆ 2 ಅನಾಚಾರಂಗಳ ಬಿಡÀದೆ ಮನೆಗೆ ಬಂದರು ಕೊಡದೆಧನದ ಗಂಟುಗಳನು ಕಡಿಯದೆಅನುಸರಿಸಿ ನಡೆಯದೆ ಪರರ ಜರಿದು ನುಡಿವವಗೆ 3 ವಾದಿರಾಜನ ನುಡಿಯ ಹಿತವೆಂದು ಲಾಲಿಸದೆಕ್ರೋಧಮಯನಾಗಿ ದೂಷಿಪಗೆಪಾದಕೆರಗದೆ ಜನನಿಯನಾದರಿಸದವಗೆ 4 ಹಯವದನನಲ್ಲೆಂದು ತಾನೆಲ್ಲ ಬಲ್ಲೆಯೆಂದುದಯವುಳ್ಳವರ ದೈವನೆನದೆ ಈಸ್ವಯಂಭು ಲಿಂಗದ ಕಲ್ಲೇ ದೈವವೆಂಬುವಗೆ 5
--------------
ವಾದಿರಾಜ
ಕೊಡು ಕೊಡು ಕೊಡೋ ವರವಾ ತಡವ್ಯಾಕೋ ದೇವಾ ನೀ ಪ ಒಡೆಯ ನಿನ್ನಯ ಯುಗ ಅಡಿಗಳ ಭಜಿಸುವೋ ಸು ಧೃಢ ಭಕುತಿ ಜ್ಞಾನವನ್ನು ತಡೆಯದೆ ಎನಗೆ ನೀ ಅ.ಪ ಪೊಡವಿ ಪಾಲಕ ನೀನೆಂದು ಭಿಡೆಯವನ್ನು ನಾ ಮಾಡೆ ಕಡಲಶಯನ ಸುಮ್ಮನೆ ಮಡದಿಸಹಿತಾಗಿ ನೀ 1 ಜಡಜಲೋಚನ ದೇವಾ ಹುಡಗ ನೀನೆಂದು ನಾ ನುಡಿದ ಮಾತುಗಳ ನಿ ನ್ನೊಡಲೊಳಗಿಡದೆ ನೀ 2 ಚಟುಲಗುರು ಜಗನ್ನಾಥಾ ವಿಠಲ ನಿನ್ನ ನಾ ಕÀರಾ ಪುಟದಿ ಬೇಡುವೆ ಮಮ ಹೃ ತ್ಪುಟದಿ ತೋರುವೆನಿಂದು ನೀ 3
--------------
ಗುರುಜಗನ್ನಾಥದಾಸರು
ಕೊಡುಜಡಜಾಕ್ಷ ನಿಮ್ಮಡಿ ಧ್ಯಾನಮೃತ ಕಡುದಯದೆನ್ನಯ ಜೆಹ್ವೆಗೆ ಸತತ ಪ ದುರುಳ ದಾನವರೊದೆದ ಸುರರನುದ್ಧರಿಸಿದ ಪರಮಪಾವನ ಪಾದಸ್ಮರಣಸಂಜೀವನ 1 ಅತ್ರಿಮುನಿಯ ಕಾಯ್ದ ಸತ್ರಾಜಿತನ ಪೊರೆದ ಸತ್ಯವ್ರತೆಗೆ ವರವಿತ್ತ ಅಮಿತಪುರುಷ 2 ಭಕ್ತರಾಪತ್ತು ಕಳೆದು ಅರ್ಥಿಯಿಂ ಕಾಯ್ವ ಪ ವಿತ್ರ ಶ್ರೀರಾಮನಾಮ ಮುಕ್ತಿ ಸಂಪದಸಿದ್ಧಿ 3
--------------
ರಾಮದಾಸರು
ಕೊಡುವುದು ಮನದಿಷ್ಟ ತಡೆಯದೆ ದೇವ ಪ ಅಡಿಯಿಡೆ ಬಿಡೆ ಮುಂದೆ ನಡೆಯಲು ದೇವಾ ಅ.ಪ ವಾರಿಧಿ ಸುರಮುನಿ ವಂದಿತ ಪರಮೇಶ ಪುತ್ರ ಕೊಡು | 1 ವಾಹನ ವಲ್ಲೀಲೋಲಾ |ಕೊಡು | 2 ಸೇವಕ ದಾಸನ ಕಾವ ಕಾರ್ತಿಕೇಯ | ಕೊಡು | 3
--------------
ಬೆಳ್ಳೆ ದಾಸಪ್ಪಯ್ಯ
ಕೊರಡು ಎಂಬೆನು ಇಂಥವನ ಕಂಡು ಕೊರಡು ಎಂಬೆಹುಸಿಯದೆಕೊರಡು ಅಲ್ಲದೆ ಶಿವನಿರೆ ಜೀವನೆಂಬುವನ ಕೊರಡು ಎಂಬೆ ಪ ಹಿರಿಯರು ಬರಲು ಏಳದವನನು ಕಂಡು ಕೊರಡು ಎಂಬೆಮರೆತು ತನ್ನನು ಕಲ್ಲ ಪೂಜಿಪ ಕಂಡು ಕೊರಡು ಎಂಬೆಅರಿತು ತನ್ನನು ಅಹುದಲ್ಲವೋ ಎಂಬುವನ ಕೊರಡು ಎಂಬೆಗುರುಪಾದ ಹೊಂದಿ ತನ್ನನು ತಿಳಿಯದವನು ಕೊರಡು ಎಂಬೆ 1 ತನ್ನೊಳು ಪರಮಾತ್ಮನಿರಲು ಕಾಣದವನನು ಕೊರಡು ಎಂಬೆಅನ್ನವ ಬಿಟ್ಟು ತೊಪ್ಪಲ ತಿಂಬನ ಕಂಡು ಕೊರಡು ಎಂಬೆತಿನ್ನುವನಿರುಲು ಉಪವಾಸ ಬೀಳ್ವನ ಕಂಡು ಕೊರಡು ಎಂಬೆಚೆನ್ನಾಗಿ ಹಮ್ಮಳಿಯದೆ ಶ್ರೇಷ್ಠನೆಂಬುವನ ಕೊರಡು ಎಂಬೆ 2 ನೀನಾರು ಎಂಬುವನ ಅದಾರೆನ್ನದನ ಕಂಡು ಕೊರಡು ಎಂಬೆವೇದಶಿರವನೋದಿನರ ತನ್ನನೆಂಬನ ಕೊರಡು ಎಂಬೆವಾದಕ್ಕೆ ಠಾವಿಲ್ಲ ಖೇದ ಮಾಡುವನ ಕಂಡು ಕೊರಡು ಎಂಬೆಬೋಧ ಚಿದಾನಂದನಿರೆ ಕಾಣದವನನು ಕೊರಡು ಎಂಬೆ 3
--------------
ಚಿದಾನಂದ ಅವಧೂತರು
ಕೊರವಂಜಿ ಪದ ಬಾರೆ ಸತ್ಯಭಾಮೆ ತೋರೆ ನಿಮ್ಮ ಸುಹಸ್ತದ ಠೇವೆ ಧ್ರುವ ಸರ್ಕನೆ ಬಾರವ್ವಾ ಅರಿಕ್ಯುಳ್ಳ ಗರತಿ ಕರವ ಕೊರವತಿ ತಾರ್ಕಣ್ಯ ಬರುತಾದ ಪರಮ ಸುವಾರ್ತಿ ತರ್ಕರಹಿತ ವಸ್ತು ಕರಕೊ ಸುಮೂರ್ತಿ 1 ಓಯವ್ವ ಅವ್ವ ಬಾರೆ ನಮ್ಮವ್ವ ದೈವುಳ್ಳ ಗರತಿ ನೀನವ್ವ ದೈವ ಬರುದೆ ನಿನ್ನೊಳಗವ್ವ ಕೈದೋರೆ ಕೈದೋರೆ ಕೈದೋರೆ ನಿಮ್ಮ 2 ಕೈದೋರೆ ಕೈದೋರೆ ಕೈದೋರೆ ನಿಮ್ಮ ಕೈಯ ಲಕ್ಷಣ ನೋಡಿ ಹೇಳುವೆನಮ್ಮ ಅಯ್ಯ ಬರುತಾನೆ ಆಶೇಲಿ ನಿಮ್ಮ ಕೈಗೊಟ್ಟು ಕೇಳೆ ನಿಜ ಗುಹ್ಯವರ್ಮ 3 ಸುಳ್ಳು ಮಾತನಾಡಿ ಒಡಲ ಹೊರಳವಲ್ಲ ಬಲ್ಲಷ್ಟು ಬೊಗಳುವೆ ವಿಷಯ ದಾಸ್ಯವಳಲ್ಲ ಉಳ್ಳಷ್ಟು ಹೇಳುವೆ ಕೇಳೆ ಶಿವ ಸೊಲ್ಲ ಹೇಳುವ ಮಾತಿದು ಘನ ಗುರು ತಾ ಬಲ್ಲ 4 ಕೊರವಂಜಿ ಮಾತಿದು ಕಿವಿಗೊಟ್ಟು ಕೇಳಮ್ಮ ಬರುತಾನ ಉದರಲಿ ಹುಟ್ಟಿ ಸಗುಣ ನಿಮ್ಮ ತಾರಿಸುವ ಸ್ವಾಮಿ ಪತಿತ ಪಾವನ ನಿಮ್ಮ ಹರಷದೋರುವ ನಿತ್ಯಾನಂದೋ ಬ್ರಹ್ಮ 5 ಎಂದ ಮಾತನೆ ಕೇಳಿ ಬಂದಳು ಭಾವೆಮ್ಮ ಚೆಂದ ಉಳ್ಳ ಸುರಸ ವಾಕ್ಯ ಕೇಳಿದಳೊಮ್ಮೆ ಬಂದು ಹರುಷದಿ ಪೂರ್ಣ ಸಂದಿಸಿಟ್ಟಳು ಪ್ರೇಮ ಒಂದೆ ನಿಜಸುಮಾತ್ಹೇಳ್ಯೆಂದಳು ನೇಮ 6 ಎಲ್ಲಿಂದ ಬಂದೆವ್ವ ಸೊಲ್ಲ ಬೀರುತ ಶಿವ ಬಲ್ಲ ಮಹಿಮಳೆಂದು ನಾನರಿಯೆನವ್ವ ಇಲ್ಲೆವೆ ಕಂಡೆ ನಾ ಸೊಲ್ಲಿನ ಮಹಿಮರು ಎಲ್ಲ ನೆಲೆನಿಭೇಳೌವ್ವ 7 ಸರಿಯ ಬಂದರ ನಿನ್ನ ಮರಿಯೆನವ್ವ ಎಂದು ಖರೆ ಉಳ್ಳ ಮಾತನೆ ಹೇಳೆ ನಿಜ ಒಂದು ಹಿರಿಯರಗೀ ಮಾತು ಸರಿಯ ಬಾವ್ಹಾಂಗಿಂದು ಬೀರವ್ವ ನಿಜಸಾರವಿಂದು 8 ಲಕ್ಷ ಎಂಬತ್ತುನಾಲ್ಕು ಗ್ರಾಮವ ನೋಡಿ ಲಕ್ಷಿಸುತ ಬಂದ ಲಕ್ಷಣ ನಿಜಗೂಡಿ ಲಕ್ಷುಮಿ ಕರದೋರುತದ ನಿಮ್ಮೊಳೊಡಮೂಡಿ ಅಕ್ಷಯಾನಂದ ಬರುತಾನೆ ಇದರಿಡಿ 9 ಕರ ಕೊಟ್ಟಳು ಸುಶೀಲೆ ವರ ಕೃಪೆಯಲಿ ಕೊರವಂಜಿ ಮಾತಲಿ ಅರಿತಳು ತಾ ತನ್ನಲಿ ಪರಮಾನಂದ ಲೀಲೆ ಬೆರದಳು ಕೇಳಿ 10 ನುಡಿಯುವ್ವ ಸಲಲಿತವಾದ ನಿಜವಾಕ್ಯ ಬಡುವಂತೆ ಹರುಷವು ನೋಡಿ ತ್ರಯಲೋಕ್ಯ ಬಡಸವ್ವ ನನಗಿಂದು ಇದೆ ನಿಜ ಮುಖ್ಯ ಕುಡಲಿಕ್ಕೆ ನಿನಗಿದು ಶಕ್ಯ 11 ಮನದಂತೆಯಾದರ ನೆನದೇನವ್ವ ನಿಮ್ಮ ಅನುಕೂಲಾಗುವ ಪುಣ್ಯ ಪೂರ್ವಾರ್ಜಿತ ನಮ್ಮ ಸಾನುಕೂಲಾಗುವಂತೆ ಬೇಡಿಕೊಳ್ಳಮ್ಮ ನೆನಿ ಎಕನಾತಿ ಎಲ್ಲಮ್ಮ 12 ಒಡಮೂಡಿ ಬಂದರ ಉಡಿಯ ತುಂಬೇನವ್ವ ಜಡಿತಾಭರಣದುಡಿಗಟ್ಟೆ ನಿನಗವ್ವ ಹಿಡಿಯದೆ ಅನುಮಾನ ನುಡಿ ನಿಜ ಸಾರವ್ವ ಕುಡಲಿಕ್ಕೆ ನಿಧಾನದವ್ವ 13 ಕೈಯ ಲಕ್ಷಣದಲಿ ಶ್ರೇಯ ತೋರುತಲ್ಯದ ದಯ ಉಳ್ಳ ಮಹಿಮದ ಸೋಹ್ಯ ಬೀರುತಲ್ಯದ ಭಯವಿಲ್ಲದ ಭಾಗ್ಯ ಅಚಲ ತಾನಾಗ್ಯದ ಜಯಜಯಕಾರ ಭಾಸುತದ 14 ಪುಣ್ಯ ಪ್ರಭೆಯ ಚೆನ್ನಾಗಿ ಭಾಸುತಲ್ಯದೆ ಕಣ್ಣಿಗೆ ಸುಚಿನ್ಹ ಹೊಳವುತದೆ ಚಿನ್ನುಮಯದ ಸುಪುತ್ಥಳಿ ಬರುತದೆ ಬಣ್ಣ ಬಣ್ಣದ ಸುಖ ಬೀರುತದೆ 15 ಅಂಗದೊಳಗ ನಿಮ್ಮ ರಂಗ ಬರುತಾನಮ್ಮ ಕಂಗಳಿಗಿದರಿಡುತದೆ ಹರುಷವು ನಿಮ್ಮ ಭವ ಬಂಧದ ದುಷ್ಕರ್ಮ ಮಂಗಳಕರಾನಂದೊ ಬ್ರಹ್ಮ 16 ನಿನ್ನ ಭಾಗ್ಯಕ ಸರಿ ಇಲ್ಲೆ ಸಂಜೀವನಿ ಚೆನ್ನಾಗಿ ಕೇಳೆ ನೀ ಭಾವೆಗುಣಮಣಿ ಧನ್ಯವಾಯಿತು ನಿನ್ನಂದೆವೆ ಯತಿಮುನಿ ನಿನ್ನೊಳಗುಂಟು ದೇವಶಿಖಾಮಣಿ 17 ಭಾವೆ ನಿನ್ನಿಂದ ಪಾವನ್ನವಾಯಿತು ಜಗ ದೇವಾಧಿದೇವ ಮೂಡುವ ನಿನ್ನೊಳಗೀಗ ಕಾವಕರುಣ ಪ್ರತ್ಯಕ್ಷವಾಗುವ ಯೋಗ ಸುವಿದ್ಯ ಭಾಸುವ ದಿವ್ಯಭೋಗ 18 ಉಂಡ ಊಟ ಕಂಡ ಕನಸು ಪಿಂಡಲಕ್ಷಣ್ಹೇಳುವೆ ಮಂಡಲೊಳಗ ಮಂಡಿಸಿಹ್ಯ ಮಹಿಮೆ ನೀನಗ್ಹೇಳುವೆ ಹಿಂಡದೈವದೊಡಿಯ ನಿನ್ನೊಡಲೊಳಗ ತಾಳುವೆ ಪಂಡಿತರಿಗೆ ಪ್ರಿಯವಾದಾಗ್ಯ ಖಂಡನೀನೆ ಬಾಳುವೆ 19 ನೀನೆ ಜಗಕ ತಾರಿಸುವ ದೈವದೋರಿಕುಡುವೆ ನೀನೆ ಭಕ್ತಜನರ ಜನ್ಮಸಾರ್ಥಕವು ಮಾಡುವೆ ಜ್ಞಾನಗಮ್ಯವಾದ ವಸ್ತುಹಿಡದು ನೀನೆ ಕುಡುವೆ ನಿತ್ಯ ಆಡುವೆ 20 ಅಮ್ಮ ನಿಮ್ಮೊಳು ಘಮ್ಮನ್ಹೊಳುವ ತಮ್ಮ ಬರುತಾನ ಸುಮ್ಮಾನಿಹ್ಹಾ ಸಮೀಪಲೆ ಧಿಮ್ಮ ಹಿಡಿದ ಹಮ್ಮಿನೊಳು ಘುಮ್ಮವಾದರು ಬ್ರಹ್ಮಾದಿಗಳೆ ನಮ್ಮ ನಿಮ್ಮದೆಂಬು ಭ್ರಮೆ ಸುಮ್ಮನ್ಯಾಕಿದೊ ಅಮ್ಮಕೇಳೆ 21 ಬಯಕಿ ಲಕ್ಷಣ ನಿನ್ನ ಹೇಳ್ಹೆನವ್ವಾ ತಾಯಿ ಮಾಯಿಕ ಗುಣ ಸುಟ್ಟು ತಿಂದೇನೆಂಬುದು ಬಾಯಿ ಕೈಕಚ್ಚಿಲೆ ಶುದ್ದಿಲ್ಲಾದವರ ತಾಳದು ಸೋವಿ ಐರಾವತ ಬರುತಾನ ನಿನ್ನೊಳು ಪನ್ನಂಗಶಾಯಿ 22 ಬಾಹ್ಯನಿಷ್ಟರ ಕಂಡು ಬದಿಗೆ ಬರಗುಡಿ ನೀನು ಅಹಂಭಾವಕ ಹೇಸಿ ವಾಕರಿಸುವೆ ನೀನು ಗುಹ್ಯ ಹೇಳುವೆ ನಾನು ಸಾಹ್ಯ ಮಾಡುವ ಶ್ರೀಗುರು ತಾನು 23 ಕಾಮಕ್ರೋಧ ಕರದು ತಿಂದೇನೆಂಬುದು ಬಯಕಿ ನೇಮದಿಂದಲಿ ಮದ ಮತ್ಸರನೆ ನೂಕಿ ಪ್ರೇಮವಿಲ್ಲದವರ ಎಂದಿಗಾದರ ಸೋಕಿ ವರ್ಮಿಕರಿಗೆ ನೀ ಕೈಯಗುಡುವಾಕಿ 24 ಆಸಿ ಎಂಬುದು ಅಟ್ಟುಅರದೇನೆಂಬುದು ಬ್ಯಾಗ ಹುಸಿನುಡಿವೆಂಬದು ಹುರವಾದೀಗ ಹಸನಾದ ಬಯಕೀದು ಋಷಿ ಮುನಿಗಳ ಯೋಗ ಲೇಸು ಲೇಸು ನಿನ್ನ ಅಂತರಂಗ 25 ಧನ್ಯವಾದ ರಾಜಯೋಗವ ಬಯಸುದು ಉನ್ಮನವಾಗಿ ಊರ್ಜಿತವಾದೇನೆಂಬುದು ಸ್ವಾನುಭವದ ಸುಖ ಸೂರ್ಯಾಡೇನೆಂಬುದು ಭಿನ್ನ ಭೇದಕ ಕಣ್ಣ ತ್ಯರಿಯದಿದು 26 ವಾಸುದೇವನ ಭಕ್ತಿ ಆಶ್ರೈಸೇನೆಂಬುದು ಶ್ವಾಸೋಚ್ಛ್ವಾಸಕ ಒಮ್ಮೆ ಬಯಸುವುದು ವಿಷಯ ಪ್ರಪಂಚಕ ಹೇಸಿ ತಾ ಜರೆವುದು ಕುಸುಮನಾಭನ ಸೇವೆ ಇಚ್ಛಿಸುವದು 27 ಒಮ್ಮೆ ಸರಸ್ವತಿ ಕೂಡ ಸರಸಾಡೇನೆಂಬುದು ಒಮ್ಮೆ ಲಕ್ಷುಮಿ ಕೂಡ ಲೋಲಾಡೇನೆಂಬುದು ಒಮ್ಮೆ ಪಾರ್ವತಿ ಕೂಡ ಪವಡೀಸೆನೆಂಬುದು ಒಮ್ಮೆ ಏನುನೊಲ್ಲ್ಯೆನೆಂಬುದು 28 ಹೇಳೇನೆಂದರೆ ನಿನ್ನ ಬಯಕಿಯ ಉಲ್ಹಾಸ ತಿಳಿಯದಿನ್ನೊಬ್ಬರಿಗ ಗರ್ಭದ ಸುವಾಸ ಉಲವುತದೆ ನಿನ್ನೊಳು ಸುಪ್ರಕಾಶ ಥಳಥಳಗುಡುತಿಹ್ಯ ಬಾಲವೇಷ 29 ಧನ್ಯ ಧನ್ಯ ನಿನ್ನ ಗರ್ಭಹೊಳುವ ಹೊಂಬಣ್ಣವು ಒಡಲು ನಿನ್ನ ಪುಣ್ಯ ಪಾವನ್ನವು ಧನ್ಯ ಧನ್ಯ ನಿನ್ನ ದರುಷಣದ ಜೀವನವು ಧನ್ಯ ಧನ್ಯ ನಿನ್ನ ಕಂಡ ಜನರ ಜೀವಪ್ರಾಣವು 30 ಭಾವೆ ನಿನ್ನಿಂದ ಖ್ಯಾತಿಪಡೆದ ಪ್ರಹ್ಲಾದನು ದೇವ ದೇವ ಬಂದು ಸ್ತಂಭದೊಳು ಮೂಡಿದನು ಆವಾವ ಠಾವಿನೊಳು ಬಂದು ರಕ್ಷಿಸಿದನು ಜೀವ ಜೀವ ತಾನೆ ಅಗಿ ಪ್ರಾಣನುಳಹಿದನು 31 ನಿನ್ನ ಬಲಗೊಂಡು ದ್ರೌಪದಿಯ ಖ್ಯಾತಿಪಡೆದಳು ಪುಣ್ಯ ಉಳ್ಳ ಮಹಿಮನಂಘ್ರಿ ಕಣ್ಣಾರ ಕಂಡಳು ಚೆನ್ನಾಗಿ ಬಂದು ಸ್ವಾಮಿ ಲಜ್ಜೆಗಾಯ್ದು ಸಭೆಯೊಳು ಬಣ್ಣ ಬಣ್ಣ ವಸ್ತ್ರ ಪೂರಿಸಿದಾನೇಕಗಳು 32 ಸ್ತುತಿಯು ಮಾಡಲು ನಿನ್ನ ಯತಿಮುನಿಗಳವಲ್ಲ ಗತಿಯ ಪಡೆದರು ಸಕಲ ಮುನಿಜನರೆಲ್ಲ ಅತಿ ಹರುಷವು ಕೂಡಿದರು ಜಗದೊಳಗ್ಯಲ್ಲ ಹಿತದೋರುತಿದೆ ವಸ್ತು ಮಯವೆಲ್ಲ 33 ಹೊಳೆವ ಸುಳಿವ ಚೆಲುವ ನಿನ್ನೊಳಗ ನಲುವನೆ ಕಳವಿಲೊಯಿದ ವೇದನುಳುಹಿದವನು ಬೆಳೆವನೆ ಭಾರ ತಾಳಿದವನು ಉಲುವನೆ ನೆಲವ ಗೆದ್ದ ಬಲಿಯು ನಿನ್ನೊಳಗೆ ಒಲುವನೆ 34 ಸೀಳಿ ದೈತ್ಯನ ಕೊಂದ ಶೂರ ಘಮಗುಡತಾನೆ ಅಳದು ಭೂಮಿಯ ಕೊಂಡು ಬೆಳದವ ಬರುತಾನೆ ತಿಳಿದು ಪಿತರ ಸೂಡುಕೊಂಡವ ಬರುತಾನೆ ಬಲುಪರಾಕ್ರಮದವ ತೋಳುತಾನೆ 35 ತಾಂ ಸಂಚರಿಸ್ಹ್ಯಾನ ನಿನ್ನೊಳಗ ಮೂಡಿ ಬರುತಾನೆ ಬ್ಯಾಗೆ ನಗುತ ಬರುತಾನೆ ಈಗ ಕೈಯಗೊಟ್ಟು ಬರುತಾನೆ ನಿನಗೆ 36 ಸಾಧೀಸಿ ಕೇಳೆ ಕಿವಿಗೊಟ್ಟು ಒದುಗುವ ತಾಂ ಇದರಿಟ್ಟು ಉದಿಯವಾಗುವ ದಯವಿಟ್ಟು ಸದ್ಬಕ್ತರಿಗೆ ಕೈಯಗೊಟ್ಟು 37 ಹುಟ್ಟುವ ಶಿಶುವಿನ ಘಟಣಿಯ ಬಹಳ ಗುಟ್ಟೊಡಿಯಲು ತಾಂ ಮುಟ್ಟನು ತಾಳ ಕಟ್ಟುವ ದೈತ್ಯರ ದಿಟ್ಟ ಮಾ ಸಾಳ ದೃಷ್ಟಿಸಿ ನೋಡುವ ನಿಷ್ಠರ ಮೇಳ 38 ಶಿಶುವಿನ ಲಕ್ಷಣ ಬಲು ಅಗಾಧ ಪರಿ ಮಾಟವು ಋಷಿಗಳ ಬೋಧ ಹಸು ನೀರಡಿಸರವುದು ಶ್ರೀಪಾದ ಬಸುರಿನ ಬಯಕಿದು ಬಲುಸುಸ್ವಾದ 39 ಘಮಗುಡುತದೆ ಅನಾಹತದ ಧ್ವನಿಯು ಕ್ರಮ ತಿಳಿವದು ಸುಯೋಗದ ಮನಿಯು ಧಿಮಿಗುಡುತದ ಆನಂದದ ಖಣಿಯು ಭ್ರಮ ಬಿಡಿಸುವ ಘನ ಚಿಂತಾಮಣಿಯು 40 ಹುಟ್ಟಿ ಬರುತಾನಿವ ಶಿಷ್ಟರ ಮನಿಲಿವ ದುಷ್ಟ ಮರ್ದನ ದೇವ ನಿಷ್ಠರಿಗೆ ಕಾವ ಎಷ್ಟೆಂದ್ಹೇಳಲವ್ವ ಸೃಷ್ಟಿಗಧಿಕನಿವ ಮುಟ್ಟಿ ಮುದ್ರಿಸುವ ದಿಟ್ಟೆದೆ ಕೂಸವ್ವ 41 ವರ್ಣಿಸಲಾಗದು ಶಿಶುವಿನ ವಿವರಣ ದಣಿಯಿತು ಕೊಂಡಾಡಿ ವೇದಸುಪುರಾಣ ಖೂನ ತಿಳಿಯದು ತಾನು ಶಾಸ್ತ್ರಕ ಸಂಪೂರ್ಣ ದ್ಯಾನ ಮೋನಕ ದೂರಗಮ್ಯ ಸ್ಥಾನ 42 ಗುಟ್ಟು ತಿಳಿಯದ ವಸ್ತು ಹುಟ್ಟಿಬಾಹುದು ಕೇಳಿ ಉಂಟಾಗುವದು ನಿನ್ನೊಳು ನೆನದಾಗಳೆ ಘಟ್ಯಾಗಿ ಅನುಭವಿಸುತ ನೀನೆ ಬಾಳೆ ದೃಷ್ಟಿಯೊಳೀಗುಟ್ಟು ಆರೀಗ್ಹೇಳೆ 43 ಬಸುರು ಬಯಕೆಂಬುದು ಹೆಸರಿಸಲಳವಲ್ಲ ಹಸನಾಗಿ ಅನುಭವಿಸುವ ಪುರುಷನೆ ಬಲ್ಲ ವಾಸುದೇವನ ಕಾಣದಿಹ್ಯದೆ ಕಣ್ಣಲ್ಲ ಆಸಿ ಅಳಿದವರೆ ತಾಂ ತಿಳಿದರೆಲ್ಲ 44 ಹುಟ್ಟುವ ಲಕ್ಷಣ ಕೇಳೆ ನೀ ಕಿವಿಗೊಟ್ಟು ಮುಟ್ಟಿ ಮುದ್ರಿಸಿಹ್ಯ ಗುರು ಕಟಾಕ್ಷವ ಕೊಟ್ಟು ಇಟ್ಟುಕೊ ಈ ಮಾತು ಆರಿಗ್ಹೇಳೆ ಬಿಟ್ಟು ಗಂಟು ಕಟ್ಟಿದ ಮಾತು ಹೇಳೆಬಿಟ್ಟು 45 ಆಲಕ್ಷವೆಂಬ ಸುನಕ್ಷತ್ರದಲಿ ಪುಟ್ಟಿ ಸುಲಕ್ಷಣದಲಿ ಬರುತಾನೆ ಜಗಜಟ್ಟಿ ನೆಲಯುಗೊಂಡಾಡಿಸಿ ಮನಮುಟ್ಟಿ 46 ಜನ್ಮನಾಮೆಂಬುದು ಕೂಸಿನ ನಿರ್ಗುಣ ಸಮಸ್ತರಿಗೆ ನಡವ ನಾಮವೆ ಸಗುಣ ಬ್ರಹ್ಮಾನಂದದಿ ಲೋಲ್ಯಾಡುವ ಪರಿಪೂರ್ಣ ಕಮಲನಯನ ಸ್ವಾಮಿ ರಮಾರಮಣ 47 ಕೂಸು ಎಂದರ ತಾನು ಕೂಸು ಎನಲಾಗದು ವಾಸವಾಗ್ಯಾಡುದು ವಿಶ್ವಲಿದು ಹೆಸರನೇಕಪರಿಯಲಿ ಕರಿಸಿಕೊಂಡು ಲೇಸು ಲೇಸಾಗಿ ತಾ ಆಡುವುದು 48 ಹಿಂದ ಅಡಿದ ಆಟ ಮಂದದೆ ಆಡುದು ಎಂದಿಗ್ಯದರ ಗುಟ್ಟು ತಿಳಿಯಗುಡುದು ಒಂದಿಸಿದವರ ತನ್ನೊಳು ಕೂಡಿಕೊಂಬುದು ಒಂದೆ ವಸ್ತುವಾಗಿ ತೋರುವುದು 49 ಹೇಳುವೆ ಕೇಳೆ ಶಿಶುವಿನ ಆಟ ತಿಳಿಯಲು ಜಗದೊಳು ಬಲು ಅವ್ಹಾಟ ನೆಲಿ ತಿಳಿದವರಿಗೆ ತೋರುದದು ನೀಟ ನಲಿನಲಿದಾಡುವ ಸಲಲಿತದಾಟ 50 ಒಮ್ಮೆ ನೀರನೆ ಚಲಿಪಿಲಿ ಮಾಡುವ ಒಮ್ಮೆ ಬಾಗಿ ಜಗನೆಗುವ ಒಮ್ಮೆ ಹಲ್ಲಿಲೆ ಬೇರನೆ ಅಗಳುವ ಒಮ್ಮೆ ಬರುತಲಿ ಗುರುಗುಡುವ 51 ಒಮ್ಮೆ ಬಲು ಗಿಡ್ಡಾಗಿ ತೋರುವ ಒಮ್ಮೆ ಪರಾಕ್ರಮ ಹಿಡುವ ಒಮ್ಮೆ ವನದೊಳಗಾಡುತ ಹೋಗುವ ಒಮ್ಮೆ ಕಡವ ಬೆಣ್ಣೆಯ ಮೆಲುವ 52 ಒಮ್ಮೆ ಬತ್ತಲೆ ತ್ರಿಪುರದಲಿ ಸುಳಿವ ಒಮ್ಮೆ ಏರುವ ತಾ ಹಯವ ಒಮ್ಮೊಮ್ಮಾಗುವ ತಾನೆವೆ ಸಗುಣವ ಒಮ್ಮೊಮ್ಮಾಗುವ ನಿರ್ಗುಣವ 53
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕೋನೇರಿ ವಾಸ ವಿಠಲ | ನೀನೆ ಪೊರೆ ಇವನ ಪ ಕಾಣೆ ನಿನ್ಹೊರತು ಕಾ | ರುಣ್ಯ ಮೂರುತಿ ಹರಿಯೆ0ಜ್ಞಾನಗಮ್ಯನೆ ಸಲಹೊ | ಮಾಣದಲೆ ಇವನಾ ಅ.ಪ. ಸುಕೃತ | ರಾಶಿ ಫಲಿಸಿತೊ ಇವಗೆ ದಾಸ ದೀಕ್ಷೆಯಲಿ ಬಹು | ಆಶೆ ತೋರುವನೋವಾಸವಾನುಜ ನಿನ್ನ | ದಾಸತ್ವ ಪಾಲಿಸುತಪೊಷಿಸೂವುದು ಬಿಡವೆ | ಶೇಷಾದ್ರಿವಾಸಾ 1 ತೈಜಸನು ಗುರುವಾದಿ | ರಾಜಾಖ್ಯ ರೂಪದಲಿಮಾಜದಲೆ ಪೇಳ್ವ ವಿ | ಭ್ರಾಜದಂಕಿತವಾವಾಜರೂಪಯು ಹರಿಯೇ | ಯೋಜಿಸಿಹೆ ಇವಗೆನಿವ್ರ್ಯಾಜ ಕರುಣಿಯೆ ಪೂರ್ಣ | ತೇಜೌಜ ನಿಧಿಯೇ 2 ಮಧ್ವ ಸಮಯದ ಜ್ಞಾನ | ವೃದ್ಧಿ ಗೈಸಿವನಲ್ಲಿಅದ್ವೈತ ತ್ರಯದರಿವು | ಬುದ್ಧಿಗೇ ನಿಲುಕೀಅಧ್ವಯನು ಹರಿಯೆಂಬ | ಸಿದ್ಧಾಂತ ಮನಸಿನಲಿಬದ್ಧವಾಗುವ ತೆರದಿ | ಸಿದ್ಧಿಸೋ ಹರಿಯೇ 3 ಕಂಸಾರಿ ತವನಾಮ | ಶಂಸನ ಪ್ಲವದಿಂದಸಂಸಾರ ನಿಧಿ ತರಣ | ಸಂಶಯವು ರಹಿತಾಅಂಶ ಅವತಾರ ಆ | ವೇಶ ವಿಷಯಗಳ ನಿಸ್ಸಂಶಯದಿ ತಿಳಿಸಿ ಪದ | ಪಾಂಸು ಸೇವೆ ಈಯೋ 4 ಸರ್ವಜ್ಞ ಸರ್ವೇಶ ಸರ್ವಮೂಲನೆ ದೇವದುರ್ವಿಭಾವ್ಯದೆ ಹರಿಯೆ | ಶರ್ವವಂದ್ಯಾಸರ್ವಾಂತರಾತ್ಮ ಗುರು | ಗೋವಿಂದ ವಿಠ್ಠಲನೆದರ್ವಿ ಜೀವಿಯ ಪೊರೆಯೆ | ಪ್ರಾರ್ಥಿಸುವೆ ಹರಿಯೆ 5
--------------
ಗುರುಗೋವಿಂದವಿಠಲರು
ಕೋಲು ಕೋಲೆನ್ನಕೋಲೆ ಕೋಲು ಕೋಲೆನ್ನಕೋಲೆ ಸದ್ವಸ್ತುವಿನ ಬಲಗೊಂಬೆಕೋಲೆ ಧ್ರುವ ಕೋಲುನಿಕ್ಕುತ ಬನ್ನಿ ಬಾಲೇರೆಲ್ಲರು ಕೂಡಿ ಮ್ಯಾಲ್ಯೆ ಮಂದಿರದ ಹಾದೀಲಿ ಕೋಲೆ ಮ್ಯಾಲೆ ಮಂದಿರದೊಳು ಬಾಲಮುಕುಂದತಾನು ಲೋಲ್ಯಾಡುತ ಒಳಗಿದ್ದಾನೆ ಕೋಲೆ 1 ಆದಿಗಿಂತಲ್ಯದೆ ಹಾದಿ ಅನಾದಿಯು ಸಾಧಿಸ ಬನ್ನಿ ಒದಗಿನ್ನು ಕೋಲೆ ಸಾಧಿಸಿ ಬರಲಿಕ್ಕೆ ಸಾಧ್ಯವಾಗುತಲ್ಯಾದೆ ಭೇದಿಸಿ ನೋಡಿ ಮನದಲಿ ಕೋಲೆ 2 ಕಣ್ಣಿನೊಳಿಹ್ಯ ಬೊಂಬೆಕಾಣಬರುತ್ತದೆ ಜಾಣ್ಯೇರು ನೀವು ತಿಳಕೊಳ್ಳಿಕೋಲೆ ಜಾಣ್ಯೇರು ನೀವು ಕಾಣದೆ ಹೋಗಬ್ಯಾಡಿ ಜಾಣ್ರಿಸುತ್ಹಾನೆ ಸದ್ಗುರು ಕೋಲೆ 3 ಸದ್ಗುರುಪಾದಕೆ ಸದ್ಭಾವವಿಟ್ಟು ನೀವು ಸದ್ಭೋಧ ಕೇಳಿ ಸಾಧಿಸಿ ಕೋಲೆ ಸಾಧಿಸಿ ಕೇಳಿ ನೀವು ಬುಧಜನರೊಡಗೂಡಿ ಚದುರತನದಲಿ ಅತಿ ಬ್ಯಾಗೆ ಕೋಲೆ 4 ಅರಹುವೆಂದ ಸೀರೆಯನುಟ್ಟು ಕುರವ್ಹೆಂಬ ಕುಪ್ಪಸಲಿ ಇರವಂತಿ ಪುಷ್ಪಲಿ ಮುಡಿದಿನ್ನು ಕೋಲೆ ಮುಡಿದು ಬರಲು ಪೂರ್ಣ ಒಡಗೂಡಿ ಬರುತಾನೆ ಬಡವನಾ ಧಾರಿ ಬಲಗೊಂಬೆ ಕೋಲೆ5 ಬಲಗೊಂಬೆ ಸಾಧನವು ನೆಲೆಗೊಂಡು ಮಾಡಬೇಕು ವಲವ್ಹಾಂಗ ತಾನೆ ಶ್ರೀಹರಿ ಕೋಲೆ ಶ್ರೀಹರಿ ಮುಂದೆ ನೀವು ಸೋಹ್ಯ ತಿಳಿದುಬನ್ನಿ ಸಾಹ್ಯಮಾಡುವ ಇಹಪರಕೆ ಕೋಲೆ 6 ದಾತ ಮಹಿಪತಿಸ್ವಾಮಿ ಸಹಕಾರನೊಬ್ಬ ಶ್ರೀಪತಿಕೋಲೆ ಶ್ರೀಪತಿಸ್ತುತಿ ಕೊಂಡಾಡಲಿಕ್ಕೆ ಪೂರ್ಣ ಭುಕ್ತಿ ಮುಕ್ತಿಯ ನೀಡು ತಾನೆ ಕೋಲೆ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು