ಒಟ್ಟು 8186 ಕಡೆಗಳಲ್ಲಿ , 130 ದಾಸರು , 4775 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಾರತೀ ದೇವಿ ಜಗದುದರನ ಸೊಸೆಯೆ ಶ್ರೀ ವಾಯು ಸತಿಯೆ ಜಗದುದರನ ಸೊಸೆಯೆ ಪ. ಸುಗುಣಿ ನಿನ್ನ ನಾ ಬಗೆ ಬಗೆ ವರ್ಣಿಸೆ ಜಗದೊಳು ಖ್ಯಾತೆಯೆ ನಗಧರ ಪ್ರೀತೆಯೆ ಅ.ಪ. ಸಾರಿ ಬಂದೆ ನಿನ್ನ ನಾರಿಮಣಿಯಳೆ ಭೂರಿ ಕರುಣದಿ ನೀ ಸತಿ ಪದಕೆ ಪತಿ ಸಹ ಭಾರತಿ ನಿನ್ನಯ ವಾರಿಜಪದವನು ಸೇರಿ ಸುಖಿಸುವಂಥ ದಯ ತೋರೆ ನೀ 1 ದಾರಿ ತೋರಿ ನೀ ಪಾರುಗಾಣಿಸೆ ತಾರತಮ್ಯದಿ ವಾರಿಜಾಂಬಕಿಯೆ ಆರು ಅರಿಯದ ಹರಿಯ ಮಹಿಮೆಯ ಸಾರತತ್ವ ನೀ ಪತಿಯಿಂದರಿತಿಹೆ ಬಾರದು ಅಜ್ಞತೆ ನಿನಗೆ ಪ್ರಳಯದಿ ನಾರಿ ರನ್ನೆ ಸರ್ವ ಬುದ್ಯಭಿಮಾನಿಯೆ 2 ಹಾರಪದಕವು ದೋರೆ ಕಂಕಣ ನಾರಿ ನಿನ್ನನು ಯಾರು ವರ್ಣಿಪರೆ ನಾರಿ ನಿನ್ನ ಪತಿದ್ವಾರದಿ ಎನ್ನ ಶ- ರೀರದಿ ಸರ್ವನಿಯಾಮಕರೊಡನೆ ತೋರೆ ಗೋಪಾಲಕೃಷ್ಣವಿಠ್ಠಲನ ನೀರಜನಾಭನ ಶ್ರೀ ರಮೇಶನ 3
--------------
ಅಂಬಾಬಾಯಿ
ಭಾರತೀ ದೇವಿ ಪಾಲಿಸಮ್ಮ ಭಾರತಾದೇವಿ ಪ ಶೀಲಮತಿಯ ಎನಗೆ ಕೊಟ್ಟು ಅ.ಪ ಭಾರನಿಮ್ಮದಮ್ಮಕಾಯೆ ಮಾರುತಿ ಮನಪೂರ್ಣ ಪ್ರಿಯೆ ಕೋರುವೆ ನಿನ್ನ ಪಾದವನ್ನು ತೋರಿ ನೀಡೆ ಜ್ಞಾನವನ್ನು 1 ಪಂಚÀಭೇದ ತಾರತಮ್ಯ ಸಂಚಿಂತನೆಯನ್ನೆ ಕೊಟ್ಟು ಪಂಚಬಾಣನ ಪಿತನ ಚರಿತೆ ವಂಚಿಸದಲೆ ಪೇಳಿಸಮ್ಮ 2 ನಿನ್ನನಂಬಿದ ಭಕ್ತಜನಕೆ ಘನ್ನಸುಖವ ಕೊಟ್ಟು ಪರಕೆ ಸನ್ನುತಾಂಗ ಶೇಷವಿಠಲನನ್ನು ತೋರಿ ಸಲಹಿದಾಪರಿ 3
--------------
ಬಾಗೇಪಲ್ಲಿ ಶೇಷದಾಸರು
ಭಾರತೀ ದೇವಿ ಪಾಲಿಸು ಭಾರತಿಯೆ ದೇವಿಯೆ ಕಾಲಮಾನಿಯ ತಾಯೆ ಪ ಶ್ರದ್ಧಾ ಮೂರುತಿ ತಾಯೆ ಕಾಯೆ ಪ್ರದ್ಯುಮ್ನ ಕುವರಿಯೆ ಶ್ರದ್ಧಾನಾಮಕಳೆ ನೀ ಶ್ರದ್ಧಾಭಕುತಿ ಕೊಟ್ಟು ಶುದ್ಧ ಮುಗ್ಧನೆನ್ನ ಉದ್ಧರಿಸುವುದೀಗಾ 1 ಚಿತ್ತ ವೃತ್ತಿಯ ಬಲ್ಲೆ ಎನಗೆ ನೀ ಉತ್ತಮಗತಿ ಈಯೆ ಚಿತ್ತಶುದ್ದ ಬುದ್ಧಿಯಿತ್ತು ನೀ ಪಾಲಿಸಿ ಚಿತ್ತಜನಯ್ಯನಾ ಹತ್ತಿರಕೊಯ್ಯೆ 2 ಪಂಕಜ ಭವನ ರಾಣಿ ಗುಣಮಣಿ ಶಂಕರನಾ ಜನನಿ ಕಿಂಕರನೆಂದು ಮನ ಶಂಕೆಯ ಹರಿಸಿ ಶ್ರೀ ವೆಂಕಟೇಶನ ಪಾದಪಂಕಜ ತೋರಿಸೆ3
--------------
ಉರಗಾದ್ರಿವಾಸವಿಠಲದಾಸರು
ಭಾರತೀ ನೀ ಪರಿಪಾಲಿಸೇ ಪ ನಾರಿ ಶಿರೋಮಣಿ | ನಿರುತ ನಿನ್ನಯ ಪದವಾರಿಜ ಭಕುತಿಯ | ಗಾರು ಮಾಡದೆ ಕೊಡು ಅ.ಪ. ಉರು ವಿಕ್ರಮನಲಿ | ವರ ಭಕ್ತ್ಯುದಯಕೆಪರಮ ಕಾರಣಳೆಂ | ದರಿತು ನಿನ್ನ ಪದ |ಸರಸಿಜ ಭಜಿಸುವೆ | ಪರಮ ಕೃಪಾಕರೆತ್ವರ ಹರಿ ಭಕುತಿಯ | ಪಾರಿಪಾಲಿಪುದು 1 ವಿಪರೀತದ ಮತಿ | ಅಪಹರಿಸುತ ಬಲುಕೃಪೆಗೈದೆನ್ನಲಿ | ಅಪ ವರ್ಗದ ಹರಿವಿಪಗಮನನ ಸ | ದ್ದಪರೋಕ್ಷವ ಕೊಡುವಿಪ ಅಹಿಪತಿ ನುತೆ | ಅಪ್ರತಿ ಮಾತೆಯೆ 2 ಭೂವಲಯದಿ ನಿನಗಾವರಿಲ್ಲ ಸಮನೀ ವೊಲಿಯದಲಿ | ನಿನ್ನಾವರ ಕಾಣೆನುಮಾ ವಿನೋದಿ ಗುರು | ಗೋವಿಂದ ವಿಠಲನಪಾವನ ಪದವನು | ತೀವರ ತೋರಿಸು 3
--------------
ಗುರುಗೋವಿಂದವಿಠಲರು
ಭಾರತೀ ಪತಿನುತ ವಿಠಲ ನೀನಿವಳ ಉದ್ಧಾರ ಮಾಡುವುದು ಹರಿಯೇ ಪ ತಾರಕನು ನಿನಗನ್ಯ ಉಂಟೇ ಈರೇಳು ಲೋಕದಲಿ ಧೊರೆಯೇ ಅ.ಪ. ಜನ್ಮಜನ್ಮದಲಿ ಬಲುನೊಂದು ಸತ್ಪುಣ್ಯಗಳನೇ ಮಾಡಿಜನ್ಮಪೊಂದುತಲಿ ಸತ್ಕುಲದಿ ಸನ್ಮತದವನ ಕೈಯ ಪಿಡಿದು |ಸನ್ಮಧ್ವಮತ ದೀಕ್ಷೆಗಳ - ಒಮ್ಮನದಿ ತಾಳುತ್ತನಿಮ್ಮಡಿಯ ನಾಶ್ರಯಿಸಿ ಬಂದಿಹಳ ಸಲಹುವುದು 1 ತರತಮ ಜ್ಞಾನದಲಿ - ಉರುತರೋತ್ಸುಕತೆಯನುನಿರತ ಹರಿಗುರುಗಳಲಿ ಉರುತರದ ಭಕ್ತಿಯನೂ |ಹಿರಿಯರನು ವಿನಯದಿಂ ಪರಿಚರಿಪ ಮತಿಯನ್ನುಕರುಣಿಸೀ ಸಲಹಯ್ಯ ಮರುತಾಂತರಾತ್ಮಾ 2 ಪಂಚಭೇಧದ ಜ್ಞಾನ ಸಂಚಿಂತನೆಯನೇ ಕೊಟ್ಟುಮಿಂಚಿನಂದದಿ ತೋರೊ - ಹೃತ್ಪಂಕಜನಲೀಅಂಚೆವಹಪಿತ ನಿನ್ನ ಪದಕಮಲ ಭಜಿಪಳಿಗೆವಾಂಛಿತಾರ್ಥದನಾಗಿ - ಸಲಹ ಬೇಕಿವಳಾ 3 ಪತಿ ನೀನೆ ಎಂಬಂಥಮತಿಯಿತ್ತು ಭವಗಳನ ಉತ್ತರಿಸು ಹರಿಯೇ 4 ನಿನ್ನ ಪದ ಕಮಲದಲಿ ಜ್ಞಾನಭಕುತಿಗಳಿತ್ತುನನ್ನೆ ಯಿಂದಿವಳ ಚೆನ್ನಾಗಿ ಸಲಹೊ ಹರಿಯೇ |ಸನ್ನುತಿಸಿ ಪ್ರಾರ್ಥಿಸುವೆ - ಮನ್ನಿಸೆನ ಬಿನ್ನಪವಘನ್ನ ಮಹಿಮನೆ ಗುರು ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಭಾರತೀ ಮಜ್ಜನನಿಯ ಭಾರತೀ ಪ ಭಾರತೀ ಭರತನಾರ್ಧಾಂಗಿ ಕರು ಣಾರಸ ಪೂರಿತಾಪಾಂಗಿ ಅಹ ತಾರಕ್ಷ್ಯ ಪ್ರಮುಖ ವೈಕಾರಿಕ ದೇವಗ ಣಾರಾಧಿತಾಂಘ್ರಿ ಸರೋರುಹೆ ಪಾಲಿಸೆ ಅ ವಿದ್ಯುನಾಮ್ನಮಕೆ ವಿಧಿಜಾತೆ ಕೃತಿ ಪ್ರದುಮ್ನ ಜಠರಸಂಭೂತೆ ಅನ ವದ್ಯ ಸದ್ಗುಣಗಣವ್ರಾತೆ ಬ್ರಹ್ಮ ವಿದ್ಯವ ಪಾಲಿಸು ಮಾತೆ ಅಹ ಬುಧ್ಯಾಭಿಮಾನಿಯೆ ಸದ್ಯೋಜಾತನ ಪೆತ್ತ ಶ್ರದ್ಧಾ ನಾಮಕೆ ಅನಿರುದ್ಧನ ತೋರಿಸೆ 1 ಗುಣತ್ರಯಾತ್ಮಕವಾದ ಲಿಂಗದೊಳು ಅಣರೂಪಳಾಗಿ ತುರಂಗ ಮುಖ ಅನಿಲಾಂತರ್ಗತ ಪಾಂಡು ರಂಗನಂಘ್ರಿ ಭೃಂಗ ಆಹ ಅನಿರುದ್ಧ ದೇಹಸ್ಥ ಅನಿಮಿಷರೊಳು ಪೊಕ್ಕು ದ್ವಿನವರೂಪದಿ ಮಾಳ್ಪೆ 2 ಕಾಳಿದ್ರೌಪದಿ ಶಿವಕನ್ಯಾ ಮನ್ಮ ನಾಲಯದೊಳು ನಿಲ್ಲೆ ಘನ್ನ ಪ್ರಾಜ್ಞ ನಿತ್ಯ ಎನ್ನ ಪರಿ ಪಾಲಿಸು ನಂಬಿದೆ ನಿನ್ನ ಆಹ ಶೈಲಜೆ ಶ್ಯಾಮಲೆÉ ಪೌಲೋಮಿ ಉಷೇರಿಂದ ಓಲಗ ಕೈಕೊಂಬ ಕಾಲಾಬ್ಧಿ ಮಾನಿಯೆ 3 ವಂದಿಪೆ ನಿನಗಿಂದ್ರಸೇನಾ ನಳ ನಂದಿನಿ ಕರುಣಿಸು ಜ್ಞಾನ ಶ್ರೀ ಮು ಕುಂದನ ಪರಮ ಕಲ್ಯಾಣ ಗುಣ ಸಿಂಧುವಿನೊಳಗೆ ಪಾಠೀನ ಆಹ ನಂದದಿ ಚರಿಸುವ ಗಂಧವಾಹನ ರಾಣಿ ಸಿಂಧೂರ ಗಮನೆ ಪುರಂದರಾರಾಧಿತೆ 4 ನಿಗಮತತಿಗಳಭಿಮಾನಿ ನಿನ್ನ ಪೊಗಳಲೆನ್ನೊಳವೆ ಕಲ್ಯಾಣಿ ಆ ಪ ನ್ನಗರಾಜ ಸಹಸ್ರ ವಾಣಿಯಿಂದ ಬಗೆ ಬಗೆ ತುತಿಪ ಸುಶ್ರೋಣೆ ಆಹ ಮುಗಿವೆ ಕರಗಳೆನ್ನವಗುಣಗಳೆಣಿಸದೆ ಜಗನ್ನಾಥವಿಠಲನಂಘ್ರಿಗಳ ಧ್ಯಾನವನೀಯೆ 5
--------------
ಜಗನ್ನಾಥದಾಸರು
ಭಾರತೀರಮಣ ಸದ್ಭಕ್ತ ಬಂಧೋ ಭವ ಭಯ ಪರಾಭವಗೈಸು ಬೇಗ ಪ ಲೋಕಾಂತರಾತ್ಮಕನೆ ಈ ಕಮಲಜಾಂಡದೊಳು ನೀಕೈಯ ಪಿಡಿದು ಕೃಪಾವಲೋಕನದಿಂದ ಜೋಕೆ ಮಾಡುವುದೆನ್ನ ಮೈನಾಕಿವರಜನಕ 1 ಅನಿಲ ಎನ್ನವಗುಣಗಳೆಣಿಸಲು ಕಡೆಯುಂಟೆ ಕೊನೆಗೆ ನೀನೆ ಗತಿಯೋ ಅನಿಮಿಷೇಶಾ ಜನನಿ ಜನಕ ಭ್ರಾತ ಜನಪ ಗುರುವರ ಮಿತ್ರ ಎನಗೆ ನೀ ಸಕಲ ಸೌಖ್ಯದನೆಂದು ಪ್ರಾರ್ಥಿಸಿದೆ 2 ಹನುಮ ಭೀಮಾನಂದ ಮುನಿರಾಯ ನಿನ್ನ ಪ್ರಾ ರ್ಥನೆ ಗೈಯುವರು ವಾಣಿ ಫಣಿಪ ಮೃಡರು ಅನಿಮಿತ್ತ ಬಾಂಧವ ಶ್ರೀ ಜಗನ್ನಾಥ ವಿಠ್ಠಲನ ತನಯ ತಾವಕರ ಬಂಧನವ ಮೋಚನ ಮಾಡೋ 3
--------------
ಜಗನ್ನಾಥದಾಸರು
ಭಾರತೀರಮಣಾ ಮನ್ಮನದಲಿ ತೋರು ತವ ಚರಣಾ ಪ ಮೂರೇಳು ಸಾವಿರದಾರುನೂರು ಜಪ ಓರಂತೆ ಜಪಿಸಿ ಉದ್ಧಾರ ಮಾಡುವಿ ಎಮ್ಮ ಅ.ಪ. ಮೂರುವಿಧ ಜೀವರೋಳು ಹೊರ ನೀ ಪ್ರೇರಕನೋ ದೇವ ನಾರಾಯಣನ ನಿಜಾರಾಧಕರೊಳು ಆರು ನಿನಗೆ ಸರಿ ಮೂರವತಾರನೆ 1 ಚತುರವಿಂಶಶಿ ತತ್ವೇಶರಾಪತಿಯ ನಿನ್ನ ತುತಿಪ ಉಪೇಂದ್ರ ಸುಯತಿಕರ ಪೂಜಿತ ನತಿಸುವೆ ಎಮಗೆ ಸನ್ನತಿ ಕೊಡು ಸರ್ವದಾ 2 ಪ್ರಾಣಪಂಚಕ ರೂಪನೆ ಖಳ ಶ್ರೇಣೀವಂಚಕ ಕ್ಷೋಣಿಯೊಳಗೆ ಕೃಷ್ಣ ವೇಣೀತರಂಗಿಣಿ ತ್ರಾಣಗೈದ ನಿರ್ವಾಣ ಪ್ರದಾಯಕ 3 ಲೋಕರೂಪನೆ ಜಗದೊಳನೇಕ ಚರಿತನೆ ಪಿನಾಕಿ ಸುರೇಂದ್ರ ದಿ ವೌಕಸರೆಮ್ಮನು ಸಾಕುವರನುದಿನ4 ಮಾತರಿಶ್ವನು ಜಾತಹನುಮ ಜಗನ್ನಾಥವಿಠಲನ ಪ್ರೀತಿಯಿಂದಲಿ ತೋರೋ 5
--------------
ಜಗನ್ನಾಥದಾಸರು
ಭಾರ್ಗವಿ ದೇವಿಭೃಗುವಾರ ಬರಲಿಬೇಕು ಪ ಭೃಗುವಾರ ಬರಲಿಬೇಕ್ಹಗಲು ಪಾಯಸವುಂಡುನಗುತ ರಾತ್ರಿಲಿ ತಾಂಬೂಲಗಳ ಮೆಲ್ಲುವುದಕ್ಕೆ ಅ.ಪ. ನೂಪುರ ಮುಖ ಭೂಷನೀ ಪದ ಕುಣಿಸುತ್ತಶ್ರೀಪತಿ ಸಹ ಸುಖಾಲಾಪಗಳಾಡುತ 1 ಕಂಕಣ ಮುಖರತ್ನಾಲಂಕಾರಗಳನಿಟ್ಟುಕಿಂಕರರಿಗೆ ಮುಖಾಲಂಕಾರ ತೋರುತ2 ಶಂಕರ ಮುಖ್ಯ ಸುರಪುಂಖ ಮಧ್ಯದಿ ಶ್ರೀಮ-ದ್ವೇಂಕಟೇಶನ ದಿವ್ಯ ಟೊಂಕಾದೊಳಗೆ ಕೂತು 3 ಪಕ್ಷಿವಾಹನ ದಿವ್ಯ ವಕ್ಷಸ್ಥಳಾಶ್ರಿತೆಲಕ್ಷ್ಮೀಲೀಲಾಮೃತ ಲಕ್ಷ್ಮೀ ಕೇಳುವುದಕ್ಕೆ 4 ಇಂದಿರೇಶನ ಮೃದು ಸುಂದರೋತ್ಸಂಗದಿಪೊಂದಿ ಭಕ್ತರ ಪೂಜಾನಂದ ಭುಂಜಿಪುದಕ್ಕೆ 5
--------------
ಇಂದಿರೇಶರು
ಭಾವ ನೆಲೆಗೊಳ್ಳಿ ಸಾಧಿಸಿ ದೃಢದಲ್ಲಿ ದೈವ ಪ್ರಕಟಾಗಿ ಒಲಿವುದು ಘನದಲಿ ಧ್ರುವ ಮಾಡಿ ಚಿತ್ತಶುದ್ಧ ನೋಡಿ ಸ್ವತ:ಸಿದ್ಧ ಗೂಢ ಗುಪ್ತ ಘನ ಕೈಗೂಡಿ ತಾಂ ಪ್ರಸಿದ್ದ 1 ನಡಿಯ ಪಡಕೊಳ್ಳಿ ಸದ್ಗುರು ದಯದಲಿ ಕಡೆದು ಹೋಗುವದು ಭವಪಾಶ ಮನದಲಿ 2 ಭಾವಕತಿ ಪ್ರಿಯ ಭಾನುಕೋಟಿ ಉದಯ ಪಾವನ್ನಗೈಸುತಿಹ ನೋಡಿ ಮೂಢ ಮಹಿಪತಿಯ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಭಾವಜನಯ್ಯ ನಿನಗೊಲಿದ ನಾರಿಯರುಗಳ ಲಾಲಿಸೋ ಪ ಇಂದೀವರಾಯತಾಕ್ಷಿಯೊಳು ತಾ ಮುನಿದಿರಲು ಕಂದರ್ಪಣೆರಾಯ ಕೇಳಿ ತನ್ನ ಚಂದಿರನು ದಳಪತಿಗೆ ನೇಮವನು ಕೊಟ್ಟು ನಲ- ವಿಂದ ಗಿಳಿತೇರನೇರಿ ಬರಲೂ ಮುಂದೆ ಉಗ್ಘಡದ ಕೋಗಿಲೆ ಪಾಡಿ ರಭಸ- ದಿಂದ ವಾದ್ಯಗಳು ಮೊಳಗೇ ಸಂದಣಿಸಿ ಝೇಂಕಾರಗೈದ ಭ್ರಮರಾಳಿಗಳ ವೃಂದದವರನೆಂತು ಬಣ್ಣಿಸುವರೆನ್ನಳವಲ್ಲ 1 ಅಗ್ಗದ ವಸಂತ ಮಾರುತರು ಒಗ್ಗಿ ನಲಿದಾಡುತ್ತ ಬರಲು ವೆಗ್ಗಳ ಸುಗಂಧ ಪರಿಮಳದ ಪೂವಲರುಗಳ ಒಗ್ಗಿನಲಿ ಕೂಡೆ ಬರಲೂ ತನ್ನ ಕಗ್ಗೊಲೆಗೆ ದಾಳಿಯಿಟ್ಟುದು ಕಾಮ ಪುಸಿಯಲ್ಲ ದಗ್ಗಡೆಯ ಮಾಡುವುದುಚಿತವೆ ನಿನ್ನ ಸಖಿಯಳನೂ 2 ಈ ತೆರದೊಳಿಹ ಪ ಕೊಳುವಳ್ ಕಳ ರಳ್ತೆ ಸಂಜೆ ಭಟರೊಗ್ಗಿನಲಿ ಭಾರಿಯಾಗಿ ಲಲೂ ಮತ್ತೆ ಕೆಂದಳಿರ ಸಂಪಗೆಯ ಕಿಡಿಯಲರುಗಳು ಒತ್ತಿ ಸೂಸುತ್ತ ಬರಲೂ ತನ್ನ ಬತ್ತಳಿಕೆಯೊಳಗೊಂದು ಕೂರಲಗ ತೆಗೆ ವೃತ್ತ ಕುಚದಬಲೆಯಳ ಮನ್ನಿಸದೆ ಸುರಪುರದ ಸುತ ಲಕ್ಷ್ಮೀಶನಹುದೆ ಭಳಿರೇ 3
--------------
ಕವಿ ಲಕ್ಷ್ಮೀಶ
ಭಾವಜಾರಿವಿನುತ ಮಹಿತ ದಯಿತಾ ಸಮೇತಅ.ಪ ಶ್ರೀಭೂನೀಳಾ ಸಮೇತ ಸತತ ವಿಭವಯುತ ತ್ರಿಭುವನ ಸುಖದಾತ ಶುಭಚರಿತ 1 ರಾಜೇಂದ್ರಪುರಿಧಾಮ ರಘುರಾಮ ಘನಶ್ಯಾಮ ರಾಜಶೇಖರನುತನಾಮ ಜಗದಭಿರಾಮ ಪಾವನಗುಣಧಾಮ2
--------------
ನಂಜನಗೂಡು ತಿರುಮಲಾಂಬಾ
ಭಾವಜ್ಞರ ಪಾದವನೇ ಪಿಡಿಯೋ ಭಾವಜನಯ್ಯನ ಸೇವೆಯ ಪಡೆಯೋ ಪ ಘನಗುರು ಹಿರಿಯರ ಕಾಲಿಗೆ ಎರಗೋ ಘನ ಮಹಿಮನ ಪಾದಕೆ----ಗೋ 1 ಪಂಡಿತ ಆರ್ಯರ ಪೂಜಿಸು ಇಲ್ಲೆ ಪುಂಡರೀಕಾಕ್ಷನ ಭಜಿಸಿ ಪಾದವನು ಪಿಡಿಯೋ 2 ನಿಜ 'ಹೆನ್ನವಿಠ್ಠಲನ್ನ’ ನೀನಾಗ ಕೂಡೊ 3
--------------
ಹೆನ್ನೆರಂಗದಾಸರು
ಭಾವನೆ ಬಲಿದನಕಾ ಒಣಭಕ್ತಿಯ ಮಾಡಿದರೇನು | ದೇವದೇವೋತ್ತಮನಾಪಾದ ಸುಮ್ಮನೆ ಸಿಲ್ಕುವದೇನು ಪ ಸಂಜಿವನಿಲ್ಲದಲೇ ಸಾವಿರ ಗಿಡ ಮೂಲಿಕಿದ್ದೇನು | ರಂಜಕ ತಾನಿಡದೇ ಯಂತ್ರದಿಗುರಿವಡ್ಡಿರಲೇನು 1 ಸೂರಿಯನುದಯಿಸದೇ ಕನ್ನಡಿ ಕಣ್ಣುಗಳಿದ್ದೇನು | ಗುರುರಾಯನ ಕರುಣಾ ಪಡಿಯದೆ ಮಂತ್ರ ಕಲಿತೇನು 2 ಅನುಭವಿಸದೇ ಸುಖವಾ ಜ್ಞಾನದ ಮಾತಾಡಿದರೇನು | ಘನಗುರು ಮಹಿಪತಿ ಸ್ವಾಮಿಯ ನೆನಯದೆ ಜನುಮವೇನು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಭಾವಭಕ್ತಿಗೊಲಿವ ತಾಂ ಶ್ರೀಹರಿ ಕಾವ ಕರುಣದಲಿ ಪರೋಪರಿ ಧ್ರುವ ಕಂದ ಪ್ರಹ್ಲಾದನ ಸದ್ಭಾವಕಾಗಿ ಸಂಧಿಸೊದಗಿ ಬಂದ ನರಸಿಂಹನಾಗಿ ತಂದೆ ತಾಯಿ ಬಂಧು ಸಮಸ್ತವಾಗಿ ಬಂದು ರಕ್ಷಿಸಿದ ಪ್ರತ್ಯಕ್ಷವಾಗಿ 1 ಭಾವದಿಂದ ದ್ರೌಪದಿಗಾಗ್ಯಧ್ಯಕ್ಷ ಠಾವಠಾವಿಲಿ ಕಾಯಿದೆ ಪ್ರತ್ಯಕ್ಷ ಭುವನದೊಳಾಗಿ ಪಾಂಡವಪಕ್ಷ ಜೀವ ಪ್ರಾಣಾಗಿ ಮಾಡಿದ ಸಂರಕ್ಷ 2 ಭಾವದಿಂದಾಗುವ ಭಕ್ತರಾಧೀನ ದೇವೋತ್ತಮದ ಬಿಟ್ಟು ಹಿರಿಯತನ ದಾವದೊಂದೇಕಾಗಿ ತಾಂ ಸಾವಧಾನ ಈವ್ಹಾಭಕ್ತರ ಮನಿಲ್ಯನುದಿನ 3 ಭಾವದಿಂದುದಿಸುವ ಸ್ವಯಂಭಾನು ಭಾವಿಕರಿಗಾಗುವ ಶ್ರಯಧೇನು ಭಾವದಿಂದಾಗುವ ಸಫಲ ತಾನು ಭಾವದಿಂದ ಭಾವ ಪೂರಿಸಿದನು 4 ಭಾವವೆಂಬಂಜನ ಕಣ್ಣಿಲೂಡಿ ಭಾವದಲುಂಬುದನು ಒಡಮೂಡಿ ಭಾವದಿಂದ ಮಹಿಪತಿ ಕೈಯಗೂಡಿ ಜೀವ ಪಾವನ್ನಗೈಸÀುತಿಹ್ಯ ನೋಡಿ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು