ಒಟ್ಟು 6084 ಕಡೆಗಳಲ್ಲಿ , 127 ದಾಸರು , 4047 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಾಯುವೆ ತವಚರಣ | ಸುರಶಿರ ಭೂಷಣಉರು | ಗಾಯನ ದರ್ಶನ | ದಾಯವ ನೀವನೆರಾಯ ರಾಜ್ಯವಾಳ್ದ || ಭೋ ಯತಿವರ ||ಅ|| ಕಾಯ ಶೈಥಿಲ್ಯದಿದಾಯ ವರಿಯದಲೆ | ಮೊರೆ ಹೊಕ್ಕೆ ನಿನ್ನ ಅ.ಪ. ರಾಮರಾಜ್ಞೆಲಿ | ಆ ಮಹಾಬ್ಧಿಯ |ಸೀಮೆ ಮೀರಿ ನಿ | ಸ್ಸೀಮ ಮುದ್ರಿಕೆಭೂಮಿ ಜಾತೆಗೆ | ಇತ್ತು ನಿಶಿಚರಸ್ತೋಮ ಸಂಹರ | ಹೇ ಮಹಾದ್ಭುತ 1 ಪಾಂಡು ಕುವರ ಅ | ಜಾಂಡ ಸೃಜಿಪನೆ |ಹಿಂಡು ಕೌರವ | ದಿಂಡುಗಳ ಶೀಳಿಪಾಂಡುರಂಗಗೆ | ಮಂಡಿಸುತ ಬ್ರ |ಹ್ಮಾಂಡ ಭಾರವ | ಗೊಂಡ ಪ್ರಚಂಡನೆ 2 ಶೌರಿ ಯಾಜ್ಞದಿ | ಕ್ರೂರಿ ಮಾಯ್ಮತ |ಭಾರ ಕಳೆದು ವಿ | ಹಾರ ಗೈದೆಯೊಶೌರಿ ಗುರು ಗೋ | ವಿಂದ ವಿಠಲನ |ಚಾರು ಚರಣವ | ತೋರಿ ನೀ ಪೊರೆ 3
--------------
ಗುರುಗೋವಿಂದವಿಠಲರು
ವಾರಣವದನ ತ್ರೈಲೋಕ್ಯಸುಮೋಹನ ವಾರಣವದನ ಪ. ವಾರಿಜಾಕ್ಷ ವರಗುಣಾಕರ ವಾರಿಜಾಕ್ಷಿ ವರದಾಯಕ ಸನ್ನುತ ನಾರದಾದಿ ಮುನಿವಂದಿತ ಪದಯುಗ ಅ.ಪ. ಸುಂದರಾಂಗ ಸುಕಲಾನ್ವಿತ ನಿಭಚರಣ ಕಟಿಶೋಭಿತ ವ್ಯಾಳಸ- ಬಂಧನಾಬ್ಧಿ ಶತಕೋಟಿಸದೃಶ ಕಿರಣ ಚಂದನಾಂಗಾರ್ಚಿತ ಸುಮನೋಹರ ಮಂದಹಾಸ ಮಹಿಮಾಂಬುಧಿಚಂದಿರ 1 ಕಂಬುಗ್ರೀವ ಕಮನೀಯ ಕರಾಂಬುರುಹ ಪಾಶಾಂಕುಶಧರ ವರ ಶಂಬರಾರಿಜಿತುತನಯ ಮಧುರಗೇಹ ಜಂಭಭೇದಿವಂದಿತ ಅತ್ರಿವಂದಿತ ಲಂಬೋದರ ವಿಘ್ನಾಂಬುಧಿ ಕುಂಭಜ 2 ಚಾರುಭಾರ ಕನ್ಯಾಪುರವರ ನಿಲಯ ಮೃಕಂಡುಜದ ಮುನಿವರ ಸಾರಮಂತ್ರಸ್ಥಾಪಿತ ಮಂಗಲ ಕೆರೆಯ ವರಕಪಿತ್ಥಫಲೋರಸಭುಂಜಿತ ಧೀರ ಲಕ್ಷ್ಮೀ ನಾರಾಯಣಸಖಸುತ 3
--------------
ತುಪಾಕಿ ವೆಂಕಟರಮಣಾಚಾರ್ಯ
ವಾರಣಾಸಿ ಕಾಶೀಪುರಾಧೀಶ್ವರಾ ಶಶಿಧರ ವಾ ಣೀಶ ಪರೇಶ ಸುರೇಶನುತ ಹರ ಪ ಶ್ರೀಶೈಲಜಾಪ್ರಿಯ ಪಾಶಾಂಕುಶಧರ ಶೇಷಾಭರಣ ಪರಮೇಶಾ ಪರಾತ್ಪರ ಅ.ಪ ಇಂದೀವರಾಕ್ಷ ಗೋವಿಂದಾದಿ ಪರಿವೃತ ನಂದೀಶನುತ ಸುರಬೃಂದಾಳಿ ವಿನುತ ಮಂದಾಕಿನೀಧರ ಮಂದಾರ ಸುಮಯುತ ಬಿಂದುಮಾಧವ ಮಾಂಗಿರೀಶರಂಜಿತ 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ವಾರಿಜ ಮುಖಿ ವಾರಿಜಾಕ್ಷಿ ವಾರಿಜ ಗಂಧಿ ವಾರಿಸನಳಿಯನನುಓರಂತೆ ನೀ ಪೋಗಿ ಕರೆತಾರೆನ್ನಯ ಪ್ರಾಣಾಧಾರ ಕೇಶವ ಮೂರ್ತಿಯ ಪ ನಗ ವೈರಿಯಣುಗನಣ್ಣನಯ್ಯನಾಪ್ತಗೆ ಮಿಗೆ ಹುಟ್ಟಿದನ ತಮ್ಮನಸೊಗಸು ವಸ್ತ್ರಕೆ ಸೋತನ ಸುರಪುತ್ರನ ವಾಜಿಯನಿವ ವೈರಿಯ ಪಗೆಯಜಗದೊಳಗೆ ಹಾಟಿದೊಳೇರಾಟದ ವನವ... ನವನಿಂದ ನಗೆತೋರಿನಾವುನಿನಗೆಅಗಣಿತಾಭರಣವೀವೆನು ಅಂಗಜಾಗ್ನಿಯ ತಗಹ ಬಿಡಿಸೆ ತರುಣಿ 1 ಮಿಹಿರ ನಂದನನ ತಂದೆಯ ಪಗೆಯವನ ಮಾವನ ಹಿತನ ಮನೆವೆಸರಮಹಿ ವನ ಕೃತಿಗೊಡೆಯನ ಬಂಟನನುಜನ ಸಹಿಸಿ ತಮ್ಮನ ಮಿತ್ರನ ಕುಹಕದಿ ಶಾಪವಡೆದಳು ಪ್ರಸ್ತರವಾಗಿ ಗಗನ ಮಧ್ಯದೊಳಿರಲು...ಸಿ ಶಾಪವ ದನುಜ... ಕ್ಷಿತಿಯೊಳು ವಿವರಿಸುವವನ ಕರೆತಾರೆ 2 ಸುರಭೇದ ಪ್ರಥಮ ದಾಸಿಯ ಪೆಸರನ ವಾಜಿಯರಸನ ನಖವೈರಿಯಮರೆಯ ಮಾರ್ಗದಿ ಗಮಿಸುವನಾಪ್ತನ ತಾಯ ಧರಿಸಿದಾತನ ಮಿತ್ರನಪೊರೆಯ ದೆಸೆಯ ದಿಕ್ಕರಿಯ ಕೋಪದಿ ಸೀಳ್ದನರಸಿಯಣ್ಣನನೀಕ್ಷಣಕರೆತಂದೆನಗೆ ಕೂಡಿಸು ಕಾಗಿನೆಲೆಯಾದಿಕೇಶವನ 3
--------------
ಕನಕದಾಸ
ವಾರಿಜಗಣ ನಿಲಯೇ ಕಮನೀಯೆ ತಾಯೇ ಕಾಯೇ ನರಹರಿ ಜಾಯೇ ಪ ಸಾರಸಭವಮುಖ ಸುರ ಮಹನೀಯೆ ಚಾರುವದನೆ ಜಾಂಬೂನದ ಛಾಯೆ ಅ.ಪ ನಿನ್ನ ಕಟಾಕ್ಷ ಮಹಾಸುರಧೇನು ನಿನ್ನ ಮನವು ಚಿಂತಾಮಣಿಯು ನಿನ್ನಯ ಕರಗಳು ಸುರತರುವೆನಗೆ ಇಂದಿರೆ 1 ಹೃನ್ಮಂದಿರದಲಿ ಜ್ಞಾನವನು ಮನ್ಮಂದಿರದಲಿ ಭಾಗ್ಯವನು ಅಮ್ಮ ಬೆಳಸೆ ಕಮಲೆ ಸುವಿಮಲೆ ಇಂದಿರೆ 2 ಈಶನಂಘ್ರಿಯಲಿ ಭಕ್ತಿಯನು ಹರಿ ದಾಸದಾಸ್ಯದಲಿ ಶಕ್ತಿಯನು ಮೋಸಕೆ ಸಿಗದ ವಿರಕ್ತಿಯನು ಕರುಣದಲಿ ನೀಡೆ ಪ್ರಸನ್ನೆ3
--------------
ವಿದ್ಯಾಪ್ರಸನ್ನತೀರ್ಥರು
ವಾರಿಜಾಕ್ಷನೆ ನಿನ್ನ ಚಾರುಚರಣದ ಸ್ಮರಣೆ ಬಾರಿ ಬಾರಿಗೆ ಮಾಳ್ಪ ಭಾಗ್ಯವೀಯೊ ಸಾರಸಾಕ್ಷನೆ ಸಂಸಾರ ದು:ಖದಿ ಎನ್ನ ಸೇರದಂದದಿ ಮಾಡೋ ಸರ್ವವಂದಿತ ಕೃಷ್ಣ 1 ಅಂಬುಜಾಕ್ಷನೆ ನಿನ್ನ ನಂಬಿದೆನೊ ಈ ಭವದ ಬಂಧ ತಪ್ಪಿಸಿ ಕಾಯೊ ಇಂದಿರೇಶ ಹಿಂದು ಮುಂದ್ಯಾರಿಲ್ಲವೆಂದು ನಂಬಿದೆ ನಿನ್ನ ಛಂದದಿಂದ ಸಲಹೊ ಮಹೇಂದ್ರತೀರ ನಿವಾಸ 2 ಸುಂದರಾಂಗನೆ ದೇವ ವಂದಿಸುವೆ ತವಪಾದ ಧ್ವಂದ್ವ ಭಜಕರ ಸಂಗ ಬಂದುನೀಡೈ ಇಂದಿರಾರಮಣನೆ ನಂದಗೋಪನ ಕುವರ ಬಂದು ಭಕುತರ ಪೊರೆವ ಆನಂದ ಮೂರುತಿ ಕೃಷ್ಣ3 ಶರಣಜನರನು ಪೊರೆಯೆ ತ್ವರಿತದಲಿ ಬಂದು ಈ ಗಿರಿಯ ಮಧ್ಯದಿನಿಂದೆ ಮಧುಸೂದನ ಶರಣುಶರಣೆಂದು ನಿನ್ನಡಿಗೆರಗುವ ಜನರ ದುರಿತವೆಲ್ಲವ ಕಳೆದು ಪೊರೆವ ದಯಾನಿಧಿ ಕೃಷ್ಣ4 ಕನಕಗರ್ಭನ ಪಿತನೆ ಕಡುಲೋಭವನೆ ಬಿಟ್ಟು ದೃಢವಾದ ಅಭಯವನು ದಯಪಾಲಿಸೊ ಪೊಡವಿಗೊಡೆಯನೆ ದೇವ ಕಮಲನಾಭವಿಠ್ಠಲ ಬಿಡದೆ ನಿನ್ನನು ಭಜಿಪ ಧೃಢ ಮನವ ನೀಡೈ5
--------------
ನಿಡಗುರುಕಿ ಜೀವೂಬಾಯಿ
ವಾರಿಜಾಸನ ವಂದ್ಯ ಚರಣಾ ಲಕ್ಷ್ಮೀ- ನಾರಾಯಣ ಎನ್ನೊಳಿರಿಸು ಸತ್ಕರುಣಾ ಪ. ಶ್ರೀರಮಣಿಯ ಕೂಡಿ ನೀನು ದಯ ದೋರಲನ್ಯರಿಗೆಂದರಂಜೆ ನಾನು ದಾರಿದ್ರ್ಯ ಭಯ ದೋಷಗಳನು ದೂರ ಹಾರಿಸಿ ಪೊರೆವ ಸಕಲ ಸುರಧೇನು1 ನಿನ್ನಂಥ ದಾತರಿನ್ನಿಲ್ಲ ಪರ- ಮೋನ್ನತ ಪದವ ಧ್ರುವನಿಗಿತ್ತಿಯಲ್ಲ ಮುನ್ನ ಕುಚೇಲನ ಸೊಲ್ಲ ಕೇಳಿ ಅನ್ಯರಿಗೊಲಿಯದ ಸಿರಿಯಿತ್ತಿಯಲ್ಲ 2 ಇಂದಿರಾವರ ವೆಂಕಟೇಶ ನೀ ಬಂದುದರಿಂದಾದುದೆನಗೆ ಸಂತೋಷ ಹೊಂದಿದೆ ನಿನ್ನನು ಶ್ರೀಶ ಪೂ- ರ್ಣೇಂದು ವದನ ಕರುಣಾರಸ ಭೂಷಾ 3
--------------
ತುಪಾಕಿ ವೆಂಕಟರಮಣಾಚಾರ್ಯ
ವಾರಿಧಿ ಈರೇಳು ಲೋಕನಾಯಿಕೆ ಪ ದೂರ ನೋಡದಲೆ ಅಪ ನಿತ್ಯ ಕಲ್ಯಾಣಿ ವೇದವತಿಯೆ ರುಕ್ಮಿಣಿ ವೇದ ವೇದಾಂತದಭಿಮಾನಿ ವಾರಿಜ ಪಾಣಿ ಆದಿ ಮಧ್ಯಾಂತ ಗುಣಮಣಿ ಭೇದಗೊಳಿಪ ಕಾಮಕ್ರೋಧಗಳೋಡಿಸಿ ನೀ ದಯದಿಂದಲೆ ಮುಂದೆ ಗತಿಗೆ ಪಂಚ ಮಾಧವ ಪ್ರಿಯಳೆ 1 ಮಾಯಾ ಕೃತಿ ನಾಮದೊಳಪ್ಪ ಗುಣವಂತೆ ಕೋಮಲವಾದ ವೈಜಯಂತೆ ಧರಿಸಿದ ಶಾಂತೆ ಸೋಮಾರ್ಕ ಕೋಟಿ ಮಿಗೆ ಕಾಂತೆ ತಾಮರಸಾಂಬಕೆ ರಮೆ ಲಕುಮಿ ಸತ್ಯ ಭಾಮೆ ಭವಾರಣ್ಯ ಧೂಮಕೇತಳೆ ಯಾಮ ಯಾಮಕೆ ಹರಿ ನಾಮವ ನುಡಿಸಿ ಉತ್ತಮರೊಡನೆ ಪರಿ ಣಾಮವನೀಯುತ 2 ಅನೇಕಾಭರಣ ಭೂಷಿತೆ ಧರಣಿಜಾತೆ ಜ್ಞಾನಿಗಳ ಮನೋಪ್ರೀತೆ ಆನಂದಲೀಲೆ ವಿಖ್ಯಾತೆ ಆದಿದೇವತೆ ಕಾಣೆನೆ ದಾನಿ ಇಂದಿರಾದೇವಿ ನಾನಾ ಪರಿಯಲಿ ಶ್ರೀನಿಧಿ ವಿಜಯವಿಠ್ಠಲನ ಮೂರುತಿಯಧ್ಯಾನದೊಳಿಡುವಂಥ ಜ್ಞಾನ ಭಕುತಿ ಕೊಡು3
--------------
ವಿಜಯದಾಸ
ವಾರಿಧಿನಿಲಯನೆಂಥಾತ ತೀರದ ಮಹಿಮಗಾರನೀತ ಪ ಸಾರಿ ನಂಬಿ ಭಜಿಸಿ ಸತತ ಘೋರ ದುರ್ಭವಳಿರೋ ನಿರುತಅ.ಪ ದೇವದೇವ ದಿವ್ಯಚರಿತ ದೇವಿದೇವಕಿ ಗರ್ಭಸಂಜಾತ ಗೋವುಗಳನು ಕಾಯಿದಾತ ಗೋವಳರೊಡನೆ ಆಡಿದಾತ ಮಾವನಮರ್ದಿಸಿ ಭುವಿಗೀತ ಕೇವಲಸೌಖ್ಯ ನೀಡಿದಾತ 1 ಗೋವರ್ಧನಗಿರಿ ಎತ್ತಿದಾತ ಗೋವಳರನ್ನು ಸಲಹಿದಾತ ಮಾಯಾಪೂತನಿಯಸುವನೀತ ಮಾಯದಿಂದ ಹೀರಿದಾತ ತಾಯಿ ಯಶೋದಾದೇವಿಗೀತ ವಿಶ್ವ ತೋರಿದಾತ 2 ಅಸಮಾಯದಾಟವಾಡುತ ಶಿಶುವಾಗಿ ತೋರಿದಾತ ಕುಶಲಗೋಪಿಕಾಸ್ತ್ರೀಯರನೀತ ವಸನ ಕಳೆದು ನಿಲಿಸಿದಾತ ವಸುಧೆ ಭಾರವನಿಳುಹಿದಾತ ನೊಸಲಗಣ್ಣನ ಸಲಹಿದಾತ 3 ಬಾಲೆಗೋಪಿಯರಿಗೊಲಿದಾತ ಪಾಲಮೊಸರು ಬೆಣ್ಣೆ ಮೆಲಿದಾತ ಕೊಳಲನೂದುತ ನಲಿದಾಡಿದಾತ ಬಾಲನಾಗಿ ಲೀಲೆ ತೋರಿದಾತ ಕಾಳರಕ್ಕಸರ ಕುಲಭೀತ ಕಾಳಿಯನ್ನು ಮೆಟ್ಟಿ ಸೀಳಿದಾತ 4 ಹಿಡಿ ಅವಲಕ್ಕಿಗೆ ಒಲಿದಾತ ಮಾನವ ಕಾಯ್ದಾತ ದೃಢ ಭಕ್ತರೋಳ್ವಾಸವಾದಾತ ಇಡೀ ಭುವನಗಳ್ಹೊತ್ತಾಳುವಾತ ಅಜ ಸುರಾದಿವಂದಿತ ಒಡೆಯ ಶ್ರೀ ರಾಮಯ್ಯ ಮಮದಾತ 5
--------------
ರಾಮದಾಸರು
ವಾಸನ್ಹಿಂಗದವನ ಬಲುಮಡಿ ಮೀಸಲ್ಯಾಕೆ ಆಸೆಬಿಡದವನ ಹರಿದಾಸತ್ವವ್ಯಾಕೆ ಪ ಚಿತ್ತಶುದ್ಧಯಿಲ್ಲದವನ ತತ್ವ ಉಪದೇಶವ್ಯಾಕೆ ಕುತ್ತಿಗೆಯ ಕೊಯ್ವವನ ಭಕ್ತಿಭಾವ್ಯಾಕೆ ಹೆತ್ತವರ ಬಯ್ವವನ ಸತ್ಯರೊಡನಾಟವ್ಯಾಕೆ ಉತ್ತಮರ ಹಳಿವವನ ನಿತ್ಯನೇಮವ್ಯಾಕೆ 1 ಭೇದಕಡಿಯದವನ ಪರಸಾಧನೆಯು ಯಾತಕ್ಕೆ ವಾದಬಿಡದವನ ಸುವೇದ ಓದ್ಯಾಕೆ ಕ್ರೋಧದೊಳುರುಳುವನ ಸಾಧುತ್ವ ಯಾತಕ್ಕೆ ಜಾದುಗಾರನ ಸುಬೋಧವದು ಯಾಕೆ 2 ನಾನೆಂಬುದಳಿಯವ ಜ್ಞಾನಭೋದ್ಯಾಮೃತವ್ಯಾಕೆ ಹೀನಗುಣ ಬಿಡದವನ ಮೌನತ್ವವ್ಯಾಕೆ ದೀನರನು ಬಾಧಿಪರ ದಾನಧರ್ಮವು ಯಾಕೆ ನಾನಾ ಬಯಕ್ಯುಳ್ಳವನ ಧ್ಯಾನವು ಯಾಕೆ 3 ಕುಟಿಲತ್ವ ಸುಡದವನ ಜಟೆ ಕೌಪೀನ್ಯಾತಕೆ ಸಟೆಬೊಗಳಿ ಬದುಕುವನ ಪಟ್ಟೆನಾಮವ್ಯಾಕೆ ದಿಟವರಿಯದಧಮನ ನಿಟಿಲದಲಿ ಭಸಿತ್ಯಾಕೆ ದಿಟ್ಟೆಯರಿಗೆ ಸೋಲುವನ ಹಠಯೋಗವ್ಯಾಕೆ 4 ಯತಿಗಳನು ನಿಂದಿಪನ ಸ್ಮøತಿಶಾಸ್ತ್ರ ಯಾತಕ್ಕೆ ಸತಿಗಳುಕಿ ನಡೆಯುವನ ಅತಿಜಾಣ್ಮೆ ಯಾಕೆ ಸತತ ಖಲು ಕುಹಕನಲಿ ಅತಿಸ್ನೇಹ ಯಾತಕೆ ಕ್ಷಿತಿಯೊಳ್ ಶ್ರೀರಾಮನ ನುತಿಸದವನ್ಯಾಕೆ 5
--------------
ರಾಮದಾಸರು
ವಾಸುದೇವ | ಸಂಕಟ ಹರಣ ಶಂಖ ಚಕ್ರಧಾರಿ ಹರಿ | ವೆಂಕಟಾಚಲಾಧೀಶಾ ಪ ಪಾಹಿ ಪರಮ ಹಂಸವಿನುತ | ಪಾಹಿ ಪರಮ ವೇದಚರಿತ ಪಾಹಿ ಕಮಲಜಾತ ನಮಿತ | ಪಾಹಿಮಾಂ ಹರೇ ಪಾಹಿ ಪರಮ ಕರುಣದಿಂ ಪಾಹಿ ಮಾಂಗಿರಿವಾಸ 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ವಾಸುದೇವ ಶ್ರೀ ಗೋವಿಂದ ವರದ ಶ್ರೀ ಗೋವಿಂದ 1 ಪಾಲಕ ಗೋವಿಂದ ಸಾಗರಗೃಹ ಶರಣಾಗತವಾಂಛಿತ ಭಾಗವತಪ್ರಿಯ ಗೋವಿಂದ 2 ಮಾಧವ ಗೋವಿಂದ ಪ್ರೇರಣ ಕರ್ತುವಿಚಾರಣ ಭಕ್ತೋದ್ಧಾರಣ ಶ್ರೀಹರಿ ಗೋವಿಂದ 3 ಭೂಮಂಡಲನಾಯಕ ಗೋವಿಂದ ಕರದಂಡದಳಾಕ್ಷ ಶ್ರೀ ಗೋವಿಂದ 4 ನಮೋ ನಮೋ ಗೋವಿಂದ ಮತಂಗವರದ ಶ್ರೀ ಗೋವಿಂದ 5 ಶಕ್ರಾರ್ಚಿತ ವಟುವಾಕೃತಿಧರ ಕರಚಕ್ರಾಂಕಿತ ಹರಿ ಗೋವಿಂದ ಅಕ್ರೂರವರದ ಅಖಿಳಪ್ರದ ತ್ರಿವಿಕ್ರಮರಾಯ ಶ್ರೀ ಗೋವಿಂದ 6 ಶ್ರೀ ಭಾರ್ಗವರಾಮ ಶ್ರೀ ಗೋವಿಂದ ಅಗ್ರಗಣ್ಯ ಶುಭವಿಗ್ರಹ ನೃಪಕುಲವರ್ಗವಿದಾರಣ ಗೋವಿಂದ 7 ನೂತನ ಲೀಲ ಶ್ರೀ ಗೋವಿಂದ ವಾತಜವರದ ಸಾಕೇತಾಧಿಕ ನಿರ್ಭೀತ ಶ್ರೀ ರಾಮ ಗೋವಿಂದ 8 ಕರುಣಾಲಯದೇವ ಶ್ರೀ ಗೋವಿಂದ ಕುಚೇಲವರದ ಶ್ರೀ ಗೋವಿಂದ 9 ಬುದ್ಧಾಕೃತಿಧರ ಗೋವಿಂದ ಶುದ್ಧಾತ್ಮಕ ಭವವೈದ್ಯ ವಿಬುಧಾರಾದ್ಯಚರಣ ಶ್ರೀ ಗೋವಿಂದ 10 ಸುರರಾಜಾಧಿರಾಜ ಶ್ರೀ ಗೋವಿಂದ ಪ್ರೌಢ ಶ್ರೀ ಗೋವಿಂದ 11 ಶ್ರೀ ಕಪ್ಪುಗೊರಳಪ್ರಿಯ ಗೋವಿಂದ ಸರ್ಪಾಚಲದಿಂದೊಪ್ಪಿಲ್ಲಿಯೆ ನೆಲಸಿಪ್ಪ ತಿಮ್ಮಪ್ಪ ಶ್ರೀ ಗೋವಿಂದ 12 ತಾನೆ ಭಕ್ತರ ಸನ್ಮಾನದಿ ಸಲಹಲು ತಾನೆತಂದ ಶ್ರೀ ಗೋವಿಂದ ಲಕ್ಷ್ಮೀನಾರಾಯಣ ಹರಿ ಗೋವಿಂದ 13
--------------
ತುಪಾಕಿ ವೆಂಕಟರಮಣಾಚಾರ್ಯ
ವಾಸುದೇವ ಶ್ರೀ ಗೋವಿಂದ ವರದ ಶ್ರೀ ಗೋವಿಂದ 1 ಪಾಲಕ ಗೋವಿಂದ ಸಾಗರಗೃಹ ಶರಣಾಗತವಾಂಛಿತ ಭಾಗವತಪ್ರಿಯ ಗೋವಿಂದ 2 ಮಾಧವ ಗೋವಿಂದ ಪ್ರೇರಣ ಕರ್ತುವಿಚಾರಣ ಭಕ್ತೋದ್ಧಾರಣ ಶ್ರೀಹರಿ ಗೋವಿಂದ3 ಭೂಮಂಡಲನಾಯಕ ಗೋವಿಂದ ಕರದಂಡದಳಾಕ್ಷ ಶ್ರೀ ಗೋವಿಂದ4 ನಮೋ ನಮೋ ಗೋವಿಂದ ಮತಂಗವರದ ಶ್ರೀ ಗೋವಿಂದ 5 ಶಕ್ರಾರ್ಚಿತ ವಟುವಾಕೃತಿಧರ ಕರಚಕ್ರಾಂಕಿತ ಹರಿ ಗೋವಿಂದ ಅಕ್ರೂರವರದ ಅಖಿಳಪ್ರದ ತ್ರಿವಿಕ್ರಮರಾಯ ಶ್ರೀ ಗೋವಿಂದ 6 ಉಗ್ರಕುಠಾರ ನೃಪಾಗ್ರಣಿವಿಪಿ£ ಶ್ರೀ ಭಾರ್ಗವರಾಮ ಶ್ರೀ ಗೋವಿಂದ ಅಗ್ರಗಣ್ಯ ಶುಭವಿಗ್ರಹ ನೃಪಕುಲವರ್ಗವಿದಾರಣ ಗೋವಿಂದ7 ನೂತನ ಲೀಲ ಶ್ರೀ ಗೋವಿಂದ ವಾತಜವರದ ಸಾಕೇತಾಧಿಕ ನಿರ್ಭೀತ ಶ್ರೀ ರಾಮ ಗೋವಿಂದ 8 ಕರುಣಾಲಯದೇವ ಶ್ರೀ ಗೋವಿಂದ ಕುಚೇಲವರದ ಶ್ರೀ ಗೋವಿಂದ9 ಬುದ್ಧಾಕೃತಿಧರ ಗೋವಿಂದ ಶುದ್ಧಾತ್ಮಕ ಭವವೈದ್ಯ ವಿಬುಧಾರಾದ್ಯಚರಣ ಶ್ರೀ ಗೋವಿಂದ 10 ಸುರರಾಜಾಧಿರಾಜ ಶ್ರೀ ಗೋವಿಂದ ಪ್ರೌಢ ಶ್ರೀ ಗೋವಿಂದ11 ಶ್ರೀ ಕಪ್ಪುಗೊರಳಪ್ರಿಯ ಗೋವಿಂದ ಸರ್ಪಾಚಲದಿಂದೊಪ್ಪಿಲ್ಲಿಯೆ ನೆಲಸಿಪ್ಪ ತಿಮ್ಮಪ್ಪ ಶ್ರೀ ಗೋವಿಂದ 12 ತಾನೆ ಭಕ್ತರ ಸನ್ಮಾನದಿ ಸಲಹಲು ತಾನೆತಂದ ಶ್ರೀ ಗೋವಿಂದ ಲಕ್ಷ್ಮೀನಾರಾಯಣ ಹರಿ ಗೋವಿಂದ13
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ವಾಸುದೇವ ಹೃದಯನಮೋ ನಮೋ ನಂದಾಭ್ಯುದಯ ನಮೋ ನಮೋ ಗೋಪಿಕಾ ಪ್ರಿಯ ಪದೀನಜನಾವನಲೋಲ ದಾನವಶಿಕ್ಷಕ ಕಾಲಭಾನುಶತಾಭಜಾಲ ಶ್ರೀ ನಿಜಭೋಗವಿಶಾಲ 1ಮುರಹರ ಮುಚುಕುಂದ ಸೇವ್ಯ ಭಾವ್ಯ 2ಪರಮ ಪುರುಷ ಶ್ರೀ ರಮಣ ಶರಧಿಶಯನ ನಿರಾವರಣದುರಿತತಿಮಿರಹರಚರಣ ತಿರುಪತಿ ವೆಂಕಟರಮಣ 3ಓಂ ಇಳಾಪತಯೇ ನಮಃ
--------------
ತಿಮ್ಮಪ್ಪದಾಸರು
ವಾಸುದೇವ ಕೃಷ್ಣ ವಿಠಲನೇ | ಪಾಲಿಸಿವಳಾದೇಶಕಾಲ ಗುಣ ಅತೀತನೇ ಪ ಬಾಸುರಾಂಗ ನಿನ್ನಪಾದ | ಸೂಸಿ ಭಜಿಪ ಮತಿಯು ಇಹುದುಲೇಸು ನಿನ್ನ ಅಂಕಿತೋಪ | ದೇಶದಿಂದ ಸಲಹೊ ಇವಳ ಅ.ಪ. ಅಂಚೆಗಮನ ಪದಕೆ ಯೋಗ್ಯರಾ | ದೃಶ್ಯತೋರ್ದೆಸಂಚಿತಾದಿ ಕಳೆವ ಮಾರ್ಗದಾ |ಪಂಚಬೇಧ ತಾರತಮ್ಯ | ಮುಂಚೆ ತಿಳಿವ ಮತಿಯನಿತ್ತುಮಿಂಚಿನಂತೆ ಮನದಿಕಾಂಬ | ಪಂಚರೂಪಿ ನೀನೆ ವಲಿಯೊ 1 ಪತಿಯು ಸುತರು ಮಿತ್ರರ್ಗೆ ಸೂಸುವಾ | ಶ್ರೀಶ ಶ್ರೀಪತಿಯ ಸೇವೆ ಎಂದು ಕರೆಸುವಾ | ಮತಿಯನಿತ್ತು ಪೊರೆಯೊ ಹರಿಯೆ | ಗತಿಯು ಇದಕೆ ಅನ್ಯಕಾಣೆ ಪತಿಯ ಪರಮದೈವವೆಂಬ | ಪಥವ ತೋರಿ ಪೊರೆಯೊ ಇವಳಾ 2 ಮುಕ್ತಿಯೋಗ್ಯ ದಾರಿ ಎನಿಸುವಾ | ಮಧ್ವ ಶಾಸ್ತ್ರವೃತ್ತಿಯಲ್ಲಿ ಭಕ್ತಿ ಪೂರ್ಣವಾ |ಇತ್ತು ಜ್ಞಾನ ವೃದ್ಧಿಯ ಪ್ರ | ವೃತ್ತಿ ಮನ ವಿರಕ್ತಿಯಲ್ಲಿಶಕ್ತಿ ಕೊಡುವುದೆಂದು ತುತಿಪೆ | ಪ್ರಾರ್ಥನೆಯ ಸಲ್ಲಿಸಯ್ಯ 3 ಅಂಬುಜಾಕ್ಷ ಭವಸಮುದ್ರವಾ | ದಾಟಿಸೂವಅಂಬಿಗಾನೆ ನಿನ್ನ ನಾಮವಾ |ನಂಬಿಹೇನೊ ದೃಢದಿ ಮನದಿ | ಇಂಬಿನಿಂದ ನಾಮ ಮಂತ್ರಉಂಬ ಸುಖವ ನಿವಳಿಗಿತ್ತು | ಸಂಭ್ರಮವ ತೋರಿ ಸಲಹೋ 4 ಗೋವ್ಗಳೇಶ್ಯುಪೇಂದ್ರ ಹಯಮುಖ | ಶರ್ವ ಗುರು -ಗೋವಿಂದ ವಿಠಲ ಸರ್ವ ಪ್ರೇರಕಾ |ಭಾವದಿಂದ ಭಜಿಪ ನಿನ್ನ ಸೇವಕಾಳ ಸಲಹೊ ಎಂಬದೇವದೇವ ಭಿನ್ನಪಾವ | ಓವಿ ಸಲಿಸು ಎಂದು ಬೇಡ್ವೆ 5
--------------
ಗುರುಗೋವಿಂದವಿಠಲರು