ಒಟ್ಟು 7812 ಕಡೆಗಳಲ್ಲಿ , 132 ದಾಸರು , 3804 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶೇಷಶಯನ ನಿನ್ನ ಪರಮ ಭಾಗವತರ ಸಹವಾಸದೊಳಿರಿಸು ಕಂಡ್ಯ ಎನ್ನನು ಪ ಬೇಸರಿಸದೆ ನಿನ್ನ ಹೃದಯಾಬ್ಜದೊಳಗಿರುವದಾಸರೊಳಿರಿಸು ಕಂಡ್ಯ ಎನ್ನನುಅ ತಂದೆಯೊಡಲನು ಸೀಳಿಸಿದವರೊಳು, ದೇ-ವೇಂದ್ರನ ತಲೆಗೆ ತಂದವರೊಳು, ದು-ರ್ಗಂಧ ಪೆಣ್ಣಿಗೆ ಚಂದನದ ಕಂಪನಿತ್ತಂಥಬಾಂಧವರೊಳಗಿರಿಸು ಕಂಡ್ಯ ಎನ್ನನು 1 ತೋಯಜವೆಂಬ ಪುಷ್ಪದ ಪೆಸರವರೊಳುತಾಯ ಸೊಸೆಗೆ ಮಕ್ಕಳಿತ್ತವರೊಳುಆಯದಿ ದ್ವಾದಶಿ ವ್ರತವ ಸಾಧಿಸಿದಂಥರಾಯರೊಳಿರಿಸು ಕಂಡ್ಯ ಎನ್ನನು2 ಗಿಳಿನಾಯಿ ಪೆಸರಿನವರೊಳು, ಮುಗಿಲಹೊಳೆಯ ಹೊಟ್ಟೆಲಿ ಹುಟ್ಟಿದವರೊಳುಕೆಳದಿಯ ಜರಿದು ಶ್ರೀಹರಿದಿನ ಗೆದ್ದಂಥಹಳಬರೊಳಿರಿಸು ಕಂಡ್ಯ ಎನ್ನನು3 ಅನುದಿನ ಸ್ಥಿರರಾಜ್ಯವಾಳಿದಕಿಂಕರರೊಳಿರಿಸು ಕಂಡ್ಯ ಎನ್ನನು 4 ಕಾಟಿಗೆ ಕಾಸಿಲ್ಲದವರು ರಾಯರ ಪಂಕ್ತಿಊಟವ ಬಯಸಿದಂತೆ ನಾ ಬೇಡಿದೆನಾಟಕಧರ ನೆಲೆಯಾದಿಕೇಶವ, ನಿ-ನ್ನಾಟದೊಳಿರಿಸು ಕಂಡ್ಯ ಎನ್ನನು 5
--------------
ಕನಕದಾಸ
ಶೋಕವಾಗುವುದು ಯಾತಕೆ ಎಲಾ | ಕಾಕುಲಾತೀ ಸಲ್ಲ ಕರಣಶುದ್ಧನಾಗು ಪ ಜೀವಕ್ಕೆ ಎಂಬೆನೆ ಆನಂತಕಲ್ಪಕ್ಕೆ ಜೀವನಿತ್ಯ ಸುಖೀ ಎಲ್ಲಿದ್ದರೂ ಸಾವೆ ಹುಟ್ಟೀಯಲ್ಲಿ ಸತತದಲಿ ಚರಿಸಿದರು ಕ್ಲೇಶ 1 ಶರೀರಕೆಂಬೆನೆ ಚೇತನ ತಪ್ಪಿದರೆ ಇರುವುದು ಜಡವಾಗಿ ಬಿದ್ದುಕೊಂಡು ಹಿರಿದಾಗಿ ತಿಳಿವುದು ಜಡಕೆ ಲೇಪನವುಂಟೆ ಚರಾಚರದಲಿ ಇದೆ ಸಿದ್ಧವಾಗಿಪ್ಪಯಾ 2 ಪರಿ ಜ್ಞಾನದಲಿದು ಸಾರ ಕಾಣಿಸದು ಸಂಸಾರದೊಳಗೆ ಮಾರಜನಕ ನಮ್ಮ ವಿಜಯವಿಠ್ಠಲ ಹರಿಯ ಸಾರದಲೆ ಅಭಿಮಾನ ಬಿಡದವಗೆ ಇದೆ ಉಂಟು 3
--------------
ವಿಜಯದಾಸ
ಶೋಭನವೆನ್ನಿರೋ ಶೋಭನ ಬನ್ನಿರೆ ಶೋಭನ ಬನ್ನಿ ಸವ್ಯದಿಂದ ಧ್ರುವ ಶೋಭಾನವೆಂಬೋದು ಸೋಹಂಭಾವಗುಣ ಅಹಂಭಾವಿಗಳು ಅರಿಯವು ಅಹಂಭಾವಿಗಳು ಅರಿಯುವು ಅನಂಗನ ಅಹಂಭ್ರಮೆಯು ವಿಪರೀತ 1 ಶೋಭನವೆನ್ನಿರೇ ಸಿದ್ಧಾಂತನುಭವಿಗಳು ಕಾಮಿ ಕಾಮಣ್ಣನ ಮದುವಿಗೆ ಪ್ರಾಣಿ ಮಾತ್ರಗಳೆಲ್ಲ ಬರಬೇಕು 2 ಶೋಭನವೆನ್ನಿರೇ ಮದೂಣಿಗಾನಂಗಗೆ ಕಾಮಿತದಳಗಿತ್ತಿ ಅರಸಗ ಕಾಮಿತದಳಗಿತ್ತಿ ಅರಸ ಮೋಹನ್ನಗೆ ನೆರೆಯಿತು ಲೋಕ ಧರೆಯೊಳು 3 ಶೋಭನವೆನ್ನಿರೇ ಕಾಮಿ ಕಾಮಣ್ಣಗೆ ಕಾಯದೊಳೀಹ್ಯ ಕರುಣಿಗೆ ಕಾಯದೊಳಿದ್ದು ಮೆರೆವ ಅನಂಗನು ಚರ್ಮದಬೊಂಬಿ ಗುರುತಾಗಿ 4 ಶೋಭನವೆನ್ನಿರೇ ಸಜ್ಜನ ಸಾವಿತ್ರೇರು ಆನಿ ಮೊದಲೆ ಇರುಹು ಕಡಿಗೆಲ್ಲ ಆನಿಮೊದಲೆ ಇರುಹು ಕಡಿಗೆಲ್ಲ ಮಹಿಪತಿ ಶೋಭಾನಯೆಂದ ಸಬೂದಿಂದ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಶೌರಿ ಪ ಸರ್ವಮಂಗಳಮಯನೆ ವಿಧಿತಾತ ಮುದವೀತೊ ಅ.ಪ. ಉದ್ಧವನ ಗುರುವರ್ಯ ನಿರ್ದೋಷ ಗುಣವನಧಿ ನಿದ್ದೆ ಮಾಡುವಗೊಲಿದು ಮುಕ್ತಿ ಇತ್ತೆ ಹದ್ದುಮೀರಿ ಭವದಿ ಬಿದ್ದು ಮೊರೆ ಇಡುತಿಹೆನೊ ಹೃದ್ಧಾಮದಲಿ ನಿನ್ನ ದರುಶನವ ನೀಡೆಯ್ಯ 1 ಮನದಲ್ಲಿ ಮಹಪೂಜೆಕೊಳ್ಳಯ್ಯ ಎನ್ನಿಂದ ಪ್ರಣೀತಪಾಲಕ ಕೃಷ್ಣಪೂರ್ಣ ಪುರುಷ ತೃಣಮೊದಲು ಬ್ರಹ್ಮಾಂಡ ಸರ್ವರಲಿ ಸ್ವಾತಂತ್ರ್ಯ ಅನಿಲಾತ್ಮ ಆನಂದ ಖಣಿ ಕರುಣ ಮಾಡಯ್ಯ 2 ಕೆಸರು ಕಲ್ಕಿದಜ್ಞಾನಕಳವಡುವುದೇ ನಿನ್ನ ಅಸಮ ಮಂಗಳ ಸುಗುಣ ಶ್ರುತಿ ವಿನುತನೆ ದಶಮತಿಯ ಮನದೈವ ನೀ ಕೂತು ಮನದಲ್ಲಿ ವಿಶದ ತಿಳಿಮತಿಯಿತ್ತು ವೈಭವವ ತೋರೆನಗೆ 3 ಜೀವಜಡರಲಿ ಪೊಕ್ಕಾಡುವೆ ಬಹುಲೀಲೆ ಭಾವಸೂತ್ರದಿ ನಮ್ಮ ಕಟ್ಟಿ ಕುಣಿಸಿ ಈ ವಿಧವ ಬಲ್ಲವರ ಮೇಲಾಗಿ ಪಾಲಿಸುವಿ ತಾವೀಶರೆಂಬುವರು ಮುಳುಗುವರು ದುಃಖದಲಿ 4 ದುಷ್ಟಜನ ಸಹವಾಸ ಅಷ್ಟತತ್ವಗಳಲ್ಲಿ ವೃಷ್ಣೀಶ ಬಿಡಿಸಯ್ಯ ಬಂಧ ಕಡಿದು ಇಷ್ಟಾನಿಷ್ಟ ಜೀವರಲಿ ನಿಂತು ನಟಿಸುವ ಗುಟ್ಟುತೋರಿ ಜಯೇಶವಿಠಲನೆ ಕೃಪೆಮಾಡು 5
--------------
ಜಯೇಶವಿಠಲ
ಶ್ರೀ ಅಕ್ಷೋಭ್ಯ ತೀರ್ಥರ ಚರಿತ್ರೆ ಅಕ್ಷೋಭ್ಯ ತೀರ್ಥಗುರು ಸಾರ್ವಭೌಮರು ಎಮ್ಮ ರಕ್ಷಿಪ ಕೃಪಾನಿಧಿಗೆ ಶರಣು ಶರಣೆಂಬೆ ಪಕ್ಷೀಶ ವಾಹನ್ನ ಲಕ್ಷ್ಮೀಶ ಕಮಲಾಕ್ಷ ವಿಷ್ಣು ಆತ್ಮಗೆ ಪ್ರಿಯ ಸತ್ತತ್ವವಾದಿ ಪ ಅಖಿಳಗುಣ ಆಧಾರ ನಿರ್ದೋಷ ಶ್ರೀರಮಣ ಜಗದಾದಿ ಮೂಲಗುರು ಅಗುರು ಶ್ರೀ ಹಂಸ ವಾಗೀಶ ಸನಕಾದಿ ದೂರ್ವಾಸಾದಿಗಳ ಪೀಳಿಗೆ ಗುರುಗಳಿಗೆ ಶರಣು ಶರಣೆಂಬೆ 1 ಅಚ್ಯುತ ಪ್ರೇಕ್ಷಾಖ್ಯ ಪುರುಷೋತ್ತಮತೀರ್ಥ ಅಚ್ಯುತ ಪ್ರೇಕ್ಷರ ಶಿಷ್ಯರೆಂದೆನಿಪ ಅಚ್ಯುತನ ಮುಖ್ಯಾಧಿಷ್ಠಾನ ಶ್ರೀಮಧ್ವ ಖಚರೇಂದ್ರ ಫಣಿಪಮೃಡ ಅಮರೇಂದ್ರವಂದ್ಯ 2 ಕರ ಅಬ್ಜಜರು ಪದ್ಮನಾಭನೃಹರಿ ಮಾಧವಾಕ್ಷೋಭ್ಯ ಈ ಮಹಾಗುರುಗಳು ಸರ್ವರಿಗು ಆನಮಿಪೆ ಸುಮನಸ ಶ್ರೇಷ್ಠರು ಮಹಿಯಲಿ ಪುಟ್ಟಿಹರು 3 ಸಾಧು ವೈದಿಕ ವೇದಾಂತ ಸತ್ತತ್ವ ಮತ ಮಧ್ವ ಮತವೇ ಅನ್ಯ ಯಾವುವೂ ಅಲ್ಲ ಎಂದು ನಿಶ್ಚೈಸಿ ಶೋಭನಭಟ್ಟಸ್ವಾಮಿ ಶಾಸ್ತ್ರಿ ಮೊದಲಾದವರು ಮಧ್ವಗೆರಗಿದರು 4 ಸೂರಿವರ ಶೋಭನ ಭಟ್ಟಾದಿಗಳಂತೆ ಸಾರಾಸಾರ ವಿವೇಕಿ ಗೋವಿಂದ ಶಾಸ್ತ್ರಿಯು ಮಹಾ ದೊಡ್ಡ ಪಂಡಿತರು ತಾನೂ ಎರಗಿ ಶರಣಾದರು ಮಧ್ವರಾಯರಲಿ 5 ಇಂಥಾ ಮಹಾತ್ಮರ ಇನ್ನೂ ಬಹು ಸಜ್ಜರನ ಉದ್ಧರಿಸಲಿಕ್ಕೇವೆ ಹರಿ ಅಜ್ಞೆಯಿಂದ ಈ ಧರೆಯಲ್ಲಿ ತೋರಿಹ ಮಧ್ವರಾಯರ ಶಾಸ್ತ್ರಿ ಬೇಡಿದರು ಸಂನ್ಯಾಸ ಕೊಡು ಎಂದು 6 ಸಚ್ಚಾಸ್ತ್ರ ಪ್ರವಚನ ಪಟು ವಿದ್ವನ್ಮಣಿಯು ನಿಶ್ಚಲ ಭಕ್ತಿಮಾನ್ ಸವೈರಾಗ್ಯ ವಿಪ್ರ ಅಚಲ ಸತ್ತತ್ವನಿಶ್ಚಯ ಜ್ಞಾನಿ ಶಾಸ್ತ್ರಿಗೆ ಅಕ್ಷೋಭ್ಯ ನಾಮನ ಇತ್ತರಾಚಾರ್ಯ 7 ಪ್ರಣವ ಮೂಲಾದಿ ಸುಮಂತ್ರ ಉಪದೇಶಿಸಿ ತನ್ನ ಮಠದಲ್ಲಿ ಅಕ್ಷೋಭ್ಯತೀರ್ಥರಿಗೆ ವನರುಹನಾಭರಿಂದ ನಾಲ್ಕನೇ ಸ್ಥಾನವ ಘನದಯದಿ ಇತ್ತರು ಆನಂದಮುನಿಯು 8 ಬದರಿಗೆ ಮೂರನೇ ಬಾರಿ ತೆರಳುವ ಪೂರ್ವ ಮಧ್ವ ಮುನಿ ನೇಮಿಸಿದ ಕ್ರಮದಿಂದಲೇವೆ ಮಾಧವ ತೀರ್ಥರು ವೇದಾಂತ ಪೀಠದಲಿ ಕುಳಿತುಜ್ವಲಿಸಿದರು 9 ಪದ್ಮನಾಭತೀರ್ಥರ ಪಾದಪದ್ಮಗಳಿಗೆ ಸದಾ ನಮೋ ನಮೋ ಎಂಬೆ ಇವರ ಪೀಳಿಗೆಯ ವಿದ್ಯಾಕುಶಲರು ಸೂರಿಗಳ ಚರಣಕ್ಕೆ ಸಂತೈಪರೆಮ್ಮ ಸದಾ ನಮೋ ಸರ್ವದಾ 10 ನರಹರಿತೀರ್ಥರು ಚರಣ ಸರಸೀರುಹದಿ ಶರಣಾದೆ ಕಾಯ್ವರು ಈ ಮಹಾನ್ ಇಹರು ವರಾಹ ತನಯಾ ಸರಿದ್ವರಾಕ್ಷೇತ್ರದಲಿ ಶ್ರೀ ವೃಂದಾವನದೊಳು ಹರಿಯ ಧ್ಯಾನಿಸುತ 11 ಮಾಧವತೀರ್ಥರ ಪಾದಪದ್ಮಗಳಿಗೆ ಸದಾನಮೋ ನಮೋ ಎಂಬೆ ಇವರ ಪೀಳಿಗೆಯ ಯತಿಗಳೂ ಭಕ್ತಿಮಾನ್ ಜ್ಞಾನಿಗಳ ಚರಣಕ್ಕೆ ಆದರದಿ ನಮಿಸುವೆ ಸದಾ ಪೊರೆವರೆಮ್ಮ 12 ಸುಲಭರು ಸುಜನರಿಗೆ ಶರಣರ ಸಲಹುವರು ಮಾಲೋಲನೊಲಿದಿಹ ಅಕ್ಷೋಭ್ಯತೀರ್ಥ ಬಲು ಖಿನ್ನ ಬ್ರಾಹ್ಮಣನು ಬ್ರಹ್ಮ ಹತ್ಯ ಮಾಡಿದವ ಕಾಲಲ್ಲಿ ಬಿದ್ದು ಶರಣಾದ ಗುರುಗಳಲಿ 13 ಗುರು ದಯಾನಿಧಿ ಅಕ್ಷೋಭ್ಯತೀರ್ಥರು ಆಗ ಶರಣಾದ ಪುರುಷನ ಪಶ್ಚಾತ್ತಾಪ ಖರೆಯೇ ಎಂಬುವುದನ್ನು ಜನರಿಗೆ ತಿಳಿಸಲು ಏರಿ ಮರ ನದಿಯಲಿ ಬೀಳೆ ಹೇಳಿದರು 14 ತನ್ನಯ ಮಹಾಪಾಪ ಕಳೆಯುವ ಗುರುಗಳು ಏನು ಹೇಳಿದರೂ ಮಾಡುವೆ ತಾನೆಂದು ಸನ್ನಮಿಸಿ ಗುರುಗಳಿಗೆ ನದಿ ಬದಿ ಮರಹತ್ತೆ ದೀನ ರಕ್ಷಕ ಗುರು ಇಳಿಯೆ ಹೇಳಿದರು 15 ವೃಕ್ಷದಿಂದಿಳಿದ ಆ ವಿಪ್ರಘಾತುಕನ ಮೇಲೆ ಅಕ್ಷೋಭ್ಯತೀರ್ಥರು ಶಂಖತೀರ್ಥವನ್ನ ಪ್ರೋಕ್ಷಿಸಿ ಆತನ ಮಹಾ ಬ್ರಹ್ಮಹತ್ಯಾ ದೋಷ ಕಳೆದರು ಪಂಕ್ತಿಯಲಿ ಸೇರಿಸಿದರು 16 ಶಂಖತೀರ್ಥದ ಮಹಿಮೆ ಅಲ್ಲಿದ್ದ ಜನರಿಗೆ ಶಂಕೆಯಲ್ಲದೆ ತಿಳಿಸಿ ಬಂದು ಬೇಡುವವರ ಡೊಂಕು ಕೊರತೆಗಳೆಲ್ಲ ನೀಗಿಸಿ ಯೋಗ್ಯದಿ ಶ್ರೀಕಾಂತನಲಿ ಭಕ್ತಿ ಪುಟ್ಟಿಸಿಹರು 17 ತಮ್ಮಲ್ಲಿ ಬೇಡುವ ಅಧಿಕಾರಿಯೋಗ್ಯರಿಗೆ ಶ್ರೀಮಧ್ವಶಾಸ್ತ್ರದ ದಾಢ್ರ್ಯ ಜ್ಞಾನ ಶ್ರೀ ಮನೋಹರನನ್ನ ಅಪರೋಕ್ಷಿಕರಿಸುವ ಸುಮಹಾ ಉಪಾಯವ ಅರುಹಿಹರು ದಯದಿ 18 ಮಧ್ವಸಿದ್ಧಾಂತ ಸ್ಥಾಪನ ಮಾತ್ರವಲ್ಲದೇ ವೇದ ವಂಚಕ ದುರ್ಮತಗಳ ಖಂಡನವ ಪೋದಕಡೆ ಮಾಡುತ್ತಾ ದಿಗ್ವಿಜಯ ಜಯಶೀಲ - ರೆಂದು ಮರ್ಯಾದೆಗಳ ಕೊಂಡಿಹರು ಜಗದಿ 19 ಅದ್ವೈತವಾದಿಯು ಶಾಂಕರ ಮಠಾಧೀಶ ವಿದ್ಯಾರಣ್ಯರು ಪ್ರಸಿದ್ಧ ಪಂಡಿತರು ಎದುರು ನಿಂತರು ಅಕ್ಷೋಭ್ಯ ತೀರ್ಥರ ಮುಂದೆ ವಾದಿಸಿದರು ಮುಳುಬಾಗಿಲು ಸಮೀಪ 20 ಶ್ವೇತಕೇತು ಉದ್ದಾಲಕರ ಸಂವಾದ ತತ್ವ ಮಸಿ ವಾಕ್ಯವೇ ವಾದದ ವಿಷಯ ವೇದಾಂತ ದೇಶಿಕರು ರಾಮಾನುಜೀಯತಿಯ ಅಧ್ಯಕ್ಷತೆಯಲ್ಲಿ ಸಭೆಯು ಕೂಡಿತ್ತು 21 ಛಾಂದೋಗ್ಯ ಉಪನಿಷತ್ತಲ್ಲಿರುವ ವಾಕ್ಯವು ಸಆತ್ಮಾ ತತ್ವಮಸಿ ಎಂಬುವಂಥಾದ್ದು ಭೇದ ಬೋಧಕವೋ ಅಭೇದ ಬೋಧಕವೋ ಎಂದು ವಾದವು ಆ ಈರ್ವರಲ್ಲಿ 22 ಆತ್ಮ ಶಬ್ದಿತ ನಿಯಾಮಕಗು ನಿಯಮ್ಯ ಜೀವನಿಗೂ ಭೇದವೇ ಬೋಧಿಸುವುದು ಆ ವಾಕ್ಯವೆಂದು ಸಿದ್ಧಾಂತ ಬಹುರೀತಿ ಸ್ಥಾಪಿಸಿದರು ಅಕ್ಷೋಭ್ಯರು ಸೋತಿತು ವಿದ್ಯಾರಣ್ಯರ ಐಕ್ಯವಾದ 23 ಅಸಿನಾತತ್ವ ಮಸಿನಾ ಪರಜೀವಪ್ರಭೇದಿನಾ ವಿದ್ಯಾರಣ್ಯ ಮಹಾರಣ್ಯಂ ಅಕ್ಷೋಭ್ಯ ಮುನಿರಚ್ಛಿನತ್ ಎಂದು ಬರೆದರು ತಮ್ಮಯ ಗ್ರಂಥದಲ್ಲಿ ಮಧ್ಯಸ್ತ ವೇದಾಂತದೇಶಿಕ ಸ್ವಾಮಿಗಳು 24 ಇಳೆಯ ಸಜ್ಜನರಿಗೆ ಜಯತೀರ್ಥರನಿತ್ತ ಮಾಲೋಲಪ್ರಿಯ ಅಕ್ಷೋಭ್ಯರ ಮಹಿಮೆ ಅಲ್ಪಮತಿ ನಾನರಿಯೆ ಇಲ್ಲಿ ಒಂದೋ ಎರಡೋ ಸ್ಥಾಲಿ ಪುಲೀಕ ನ್ಯಾಯದಲಿ ಪೇಳಿಹುದು 25 ನದಿ ದಡದಿ ಕುಳಿತಿದ್ದ ಅಕ್ಷೋಭ್ಯತೀರ್ಥರು ಎದುರಾಗಿ ನದಿಯಲ್ಲಿ ಆಚೆ ದಡದಿಂದ ಕುದುರೆ ಸವಾರನು ವರ್ಚಸ್ವಿ ಯುವಕನು ಬೆದರದೆ ಪ್ರವಾಹದಲಿ ಬರುವುದು ಕಂಡರು 26 ಕುದುರೆ ಮೇಲ್ ಆಸೀನನಾಗಿದ್ದ ಯುವಕನು ಕ್ಷುತ್‍ತೃಷಿ ಶಮನಕ್ಕೆ ಯತ್ನ ಮಾಡುತ್ತಾ ಉದಕವ ಕೈಯಿಂದ ತುಂಬಿಕೊಳ್ಳದಲೇ ಎತ್ತುಗಳು ಕುಡಿವಂತೆ ಬಾಯಿ ಹಚ್ಚಿದನು 27 ಮಾಧವ ಮಧ್ವರು ಮೊದಲೇ ಸೂಚಿಸಿದಂತೆ ಇಂದು ಆ ಕುರುಹರಿತು ಅಕ್ಷೋಭ್ಯರು ಇದು ಏನು ಪಶುವಂತೆ ಎಂದು ಧ್ವನಿಗೂಡಲು ಹಿಂದಿನ ಜನ್ಮ ಯುವಕಗೆ ನೆನಪು ಬಂತು 28 ಪಶು ಶಬ್ದ ಗುರುಮುಖದಿಂಬಂದಲಾಕ್ಷಣ ಪೂರ್ವ ಸಂಸ್ಕಾರ ಪ್ರತಿಭೆಯು ಉದಯವಾಯ್ತು ದಶಪ್ರಮತಿಗಳ ತಾನು ಎತ್ತಾಗಿ ಸೇವಿಸಿದ್ದು ಹಸನಾಗಿ ಟೀಕೆ ಬರೆಯಲಾಜÉ್ಞ ಕೊಂಡದ್ದು 29 ನಗಾರಿಸಮ ಬಲಿಯುವಕನು ಪ್ರವಾಹದ ವೇಗ ಲೆಕ್ಕಿಸದಲೇ ದಡಕೆ ತಾ ಬಂದು ಮುಗಿದುಕರ ಬಾಗಿಶಿರ ನಮಿಸಿ ಅಕ್ಷೋಭ್ಯರ ಆಗಲೇ ಸಂನ್ಯಾಸ ಕೊಡಲು ಬೇಡಿದನು 30 ಗಾಧಿ ಅರ್ಜುನ ಸಮ ಬಲರೂಪದಲಿ ತೋರ್ಪ ಈತ ರಾಯರ ಸುತನಾದರೂ ವೈರಾಗ್ಯ ಯುತ ಭಕ್ತಿಮಾನ್ ಸುಶುಭಲಕ್ಷಣನು ಎಂದು ಹರಿ ಮಧ್ವನಿಯಮಿತ ಅವಗೆ ಕೊಟ್ಟರು ಸಂನ್ಯಾಸ 31 ಶ್ರೀಯಃಪತಿಗೆ ಪ್ರಿಯತರ ಜಯತೀರ್ಥನಾಮವ ದಯಾಶೀಲ ಹೊಸಯತಿಗೆ ಇತ್ತು ಅಭಿಷೇಕ ಅಕ್ಷೋಭ್ಯ ಗುರುಮಾಡೆ ಗಗನದಿಂ ಪೂವರ್ಷ ಜಯ ಘೊಷ ಹರಡಿತು ಪರಿಮಳ ಸುಗಂಧ 32 ಶ್ರೀಮಧ್ವಾಚಾರ್ಯರು ಬೋಧಿಸಿ ತೋರಿಸಿದ ರಮಾಪತಿ ಪೂಜಾಸತ್ತತ್ವವಾದ ದುರ್ಮತ ಖಂಡನದ ರೀತಿಯ ಜಯಾರ್ಯರಿಗೆ ಸುಮ್ಮುದದಿ ಅರುಹಿದರು ಗುರುಸಾರ್ವಭೌಮ 33 ಶೀಲತಮ ಗುರುವರ್ಯ ಅಕ್ಷೋಭ್ಯತೀರ್ಥರು ಇಳೆಯಲ್ಲಿ ಮಧ್ವಮತ ಹರಿಭಕ್ತಿಯನ್ನ ಬೆಳೆಸಲು ಪ್ರತ್ಯೇಕ ಮಠವ ಸ್ಥಾಪಿಸಿದರು ತ್ರೈಲೋಕ ಭೂಷಣ ತೀರ್ಥರ ಮೊದಲ್ಮಾಡಿ34 ಆದಿ ಮಠ ಹರಿನೈದು ಸಮೀಪ ಪಟ್ಟವ ಆಳಿ ಹನ್ನೊಂದು ನೂರು ಅರವತ್ತೇಳ ಶಕವರುಷ ವದ್ಯ ಪಂಚಮಿ ಮಾರ್ಗಶಿರ ವಿಶ್ವಾವಸುವಲ್ಲಿ ಮಧ್ವ ಹೃದಯಾಬ್ಜಗನ ಪುರವ ಐದಿದರು 35 ಮತ್ತೊಂದು ಅಂಶದಲಿ ಮಳಖೇಡ ಗ್ರಾಮದಲಿ ನದಿ ತೀರದಲಿ ಹರಿಯ ಧ್ಯಾನ ಮಾಡುತ್ತಾ ಬಂದು ಬೇಡುವವರಿಷ್ಟಾರ್ಥ ಪೂರೈಸುತ ವೃಂದಾವನದಲ್ಲಿ ಕುಳಿತಿಹರು ಕರುಣಿ 36 ಶಾಶ್ವತ ಸರ್ವಾಶ್ರಯ ಗುಣಗಣಾರ್ಣವ ಅನಘ ಜೀವ ಜಡ ಭಿನ್ನ ಪರಮಾತ್ಮ ವಿಧಿತಾತ ಮಧ್ವಹೃತ್ಪದ್ಮಗ ಶ್ರೀ ಪ್ರಸನ್ನ ಶ್ರೀನಿವಾಸಗೆ ಸರ್ವದಾಪ್ರಿಯ ಅಕ್ಷೋಭ್ಯ ಗುರೋ ಶರಣು 37 ಪ || ಶ್ರೀ ಅಕ್ಷೋಭ್ಯ ತೀರ್ಥಚರಿತೆ ಸಂಪೂರ್ಣಂ ||
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ಅನಂತಶಯನನ ಸ್ತೋತ್ರ (ಬೆಳಗಾವಿಯ ಶಹಪೂರ ಪೇಟೆಯ ಅನಂತಶಯನನು ಸ್ತುತಿಸುತ್ತ ಅಲ್ಲಿಯ ಕಟ್ಟಿಯ ಆಚಾರ್ಯರನ್ನು ರಕ್ಷಿಸಬೇಕೆಂದು ಪ್ರಾರ್ಥಿಸಿದ್ದು) ನೋಡಿ ನಾನು ಧನ್ಯನಾದೆನು ಅನಂತಶಯನನ |ನೋಡಿ ನಾನು ಧನ್ಯನಾದೆನು ಪ ನೋಡಿ ನಾನು ಧನ್ಯನಾದೆ |ರೂಢಿಯೊಳಗೆ ಮರುತಮಂದಿರ |ರೂಢಿ ಬೆಳಗಾವಿಯೊಳು ನಿಂದು |ಈಡು ಇಲ್ಲದೆ ಮೆರೆವ ದೇವನ ಅ.ಪ. ಮೂಲರೂಪನು ವೈಕುಂಠ ಬಿಟ್ಟು |ಪಾಲ ಸಾಗರ ಶಾಯಿ ಶ್ರೀಲೋಲ |ಕಾಲಕಾಲದಿ ಭಕ್ತರ ಮೌಳಿ |ಪೊರಿಯಬೇಕೆಂದು ನಿಂದನ 1 ಸಂತಾನ ಸಂಪತ್ತು ಜ್ಞಾನ ಸುಬುದ್ಧಿಯ |ನಂತ ಶಯನ ಇವರಿಗಾ |ನೆಂತು ಸುಖವ ನೀವೆನೆಂದು |ಸ್ವಾಂತದೊಳಗೆ ಬಂದು ನಿಂದನ 2 ಶ್ರೀಶ ಪ್ರಾಣೇಶ ವಿಠಲರೇಯ |ಶ್ರೀ ಸಹಿತವಾಸ ವಾಗಿಲ್ಲ |ಭೂಸುರೋತ್ತಮ ಕಟ್ಟಿಯವರನ್ನ |ಪೋಷಿಸಬೇಕೆಂದು ನಿಂದನ 3
--------------
ಶ್ರೀಶಪ್ರಾಣೇಶವಿಠಲರು
ಶ್ರೀ ಇಭರಾಮಪುರ ಕೃಷ್ಣಾಚಾರ್ಯರ ಸ್ತೋತ್ರ (ಅಪ್ಪಾವರು) 140 ಇಭರಾಮಪುರ ಅಪ್ಪ ಸೌಭಾಗ್ಯದಾಯಕರೇ | ಶುಭನಾಮ ಶ್ರೀ ಕೃಷ್ಣಾಚಾರ್ಯರೇ ನಮಸ್ತೇ || ಇಭರಾಜ ವರದನಿಗು ದ್ರುಪದಾತ್ಮಜಾಪತಿಗು | ಶುಭಚರಿತ ರಾಘವೇಂದ್ರಾರ್ಯರಿಗು ಪ್ರಿಯ ಪ ಶ್ರೀರಾಮನರಹರಿ ಶ್ರೀಕರನಾರಾಯಣ | ವರಾಹ ಹಯಶೀರ್ಷ ಶ್ರೀಕೃಷ್ಣನ ಪೂರ್ಣಾ || ನುಗ್ರಹಕೆ ಪೂರ್ಣಪಾತ್ರರೇ ನಿಮ್ಮ ಚರಣ | ಅರವಿಂದದಲಿ ನಾನು ಶರಣು ಶರಣಾದೆ 1 ಪಂಚಮುಖ ಹನುಮಂತ ನರಸಿಂಹ ಗರುಡ ವರಾಹ ಹಯವದನ || ಈ ಅಂಜನಾಸುತನನ್ನು ತತ್ ಅಂತಸ್ಥ | ಪಂಚರೂಪ ಶ್ರೀಶನ್ನ ಪೂಜಿಪಮಹಂತ 2 ಅಪ್ಪಾವರೆಂದು ಪ್ರೇಮದಿ ಕರೆಸಿಕೊಂಡು ಅಪ್ಪಮಕ್ಕಳಂತೆ ಕಾಯ್ದಿರಿ ಜನರ || ಅಪ್ಪಾ ಎಂದೀಗಲೂ ಸ್ಮರಿಸಿದರೂ ನಿಮ್ಮ ಸಹ ಶ್ರೀಪ ತಿಮ್ಮಪ್ಪ ಬಂದೆಮ್ಮನು ಕಾಯ್ವ 3 ಮೇಲಿಂದ ಬಿದ್ದವನ್ನ ದೂರ ಇದ್ದರೂ ಕಾಯ್ದು ತಾಳಿಗೋರೂಪ ಪಾದಜ ಧಾನ್ಯ ಉಂಡು || ಜಲದಿಂದ ವಿಪ್ರತಮ ಭಕ್ತವರನನ್ನ ಕಾಯ್ದು | ಜಲಜನಾಭನ ಗಾಯಕನೆಂದು ಆಶಿಸಿದಿರಿ 4 ಬೊಮ್ಮನ ಪಿತ `ಶ್ರೀ ಪ್ರಸನ್ನ ಶ್ರೀನಿವಾಸನಲಿ' ಪ್ರೇಮ ಅಚ್ಛಿನ್ನ ಭಕ್ತಿ ನಿಮಗೆ ದ್ವಿಜವರರೆ || ನಿಮ್ಮವನು ಭುವಿಯಲ್ಲಿ ತೋರಿಹ ಎನ್ನನ್ನು ಪ್ರೇಮಾನುಗ್ರಹದಯದಿ ಪಾಲಿಪುದು ಶರಣು 5 ಪ || ಸಂಪೂರ್ಣಂ ||
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ಕರಗ್ರಹ ಎನ್ನ ಸಾಕಲಾರದÉ ಹೀಗೆ ನೂಕಿ ಬಿಡುವುದು ನ್ಯಾಯವೆ ಪ. ಬೇಕೆಂದು ನಿನ್ನ ಪದ ನಾ ಕಾಣ ಬಂದರೆ ಈ ಕಪಟತನವು ಸರಿಯೆ ಹರಿಯೆ ಅ.ಪ. ಎಲ್ಲರನು ಸಲಹಿದಂತೆನ್ನ ನೀ ಸಲಹೆನ ನಿಲ್ಲದೆ ನೀರ ಪೊಗುವೆ ಸೊಲ್ಲು ಸೊಲ್ಲಿಗೆ ನಿನ್ನ ಸ್ತುತಿಪೆನೊ ಬಾರೆನಲು ಕಲ್ಲಡೀ ಅವಿತುಕೊಳುವೆ ಖುಲ್ಲನಲ್ಲವೊ ನಾನು ತಲ್ಲಣಿಪೆ ಪೊರೆ ಎನಲು ಹಲ್ಲು ಕೋರೆಯ ತೋರುವೆ ಎಲ್ಲಿ ಹೋಗಲೊ ನಾನು ಇಲ್ಲವೊ ಇನ್ನೊಬ್ಬ ಸೊಲ್ಲು ಕೇಳುವರನರಿಯೆ | ದೊರೆಯೆ 1 ತಡಬಡಿಸುತಿಹೆನೆನ್ನ ಪಿಡಿದು ಕೈ ಸಲಹೆನಲು ಘುಡು ಘುಡಿಸಿಕೊಂಡು ಬರುವೆ ಬಡವನೋ ನಾನು ನಿನ್ನಡಿಯನೇ ನೀಡೆನಲು ಹುಡುಗತನದಲಿ ಬೇಡುವೆ ತಡೆಯಲಾರೆನೊ ಭವದ ದಡವ ಸೇರಿಸು ಎನಲು ಕೊಡಲಿಯ ಪಿಡಿದು ಬರುವೆ ಕಡು ಬವಣೆ ಬಿಡಿಸೆಂದು ಅಡಿಗಡಿಗೆ ಎರಗಲು ಅಡವಿ ಅಡವಿಯ ತಿರುಗುವೆ | ಥರವೇ 2 ಹತ್ತು ನಾಲ್ಕು ಲೋಕಕೆ ತೆತ್ತಿಗನೊ ನೀನೆನಲು ಮುತ್ತ್ಯದೊರೆ ಎಂದೆನ್ನುವೆ ಸುತ್ತಿರುವ ಆವರಣ ಮತ್ತೆ ನೀ ಛೇದಿಸೆನೆ ಬತ್ತಲೆ ನೀ ನಿಲ್ಲುವೆ ಭೃತ್ಯ ನಾ ನಿನಗೆನಲು ಹತ್ತಿ ಕುದುರೆಯ ಓಡುವೆ ನಿತ್ಯ ಮೂರುತಿ ನಿನ್ನ ಕೃತ್ಯವೇ ಹೀಗಿರಲು ಮತ್ತಿನ್ನ ಹ್ಯಾಗೆ ಪೊರೆವೆ | ಕರೆವೆ 3 ದÉೂರೆಯು ನೀ ಜಗಕೆಂದು ಸುರರೆಲ್ಲ ನುಡಿಯುವರೊ ಅರಿಯೆ ನಾನದರ ಮಹಿಮೆ ಸಿರಿಗೊಡೆಯನಾದರೆ ಪೊರೆಯದೆಲೆ ಎನ್ನನು ಕರೆಕರೆಗೊಳಿಸುವರೆ ತಿರಿಯ ಬರಲಿಲ್ಲ ನಾ ಸಿರಿಯ ನೀಡೆಂದೆನುತ ಉರುತರದ ಭಯವೇತಕೆ ಚರಣ ಧ್ಯಾನವನಿತ್ತು ಪರಮ ಭಕ್ತರೊಳಿಡಿಸಿ ದೊರೆಯೆ ನೀ ಸಲಹ ಬೇಕೋ | ಸಾಕೋ4 ಆಪಾರ ಮಹಿಮನೆ ಆರ್ತಜನ ರಕ್ಷಕ ಪಾಪಿ ನಾನಿಹೆನೋ ಈಗ ನೀ ಪಿಡಿದು ಪೊರೆಯದಿರೆ ಕಾಪಾಡುವವರ್ಯಾರೊ ಶ್ರೀ ಪತಿಯೆ ನೀನೆ ತೋರೊ ತಾಪಪಡಲಾರೆ ಭವಕೂಪದೊಳು ಬಿದ್ದಿಹೆನು ನೀ ಕೃಪಾದಿಂದೀಕ್ಷಿಸೋ ಗೋಪಾಲಕೃಷ್ಣವಿಠ್ಠಲನೆ ನೀನಲ್ಲದಲೆ ಕಾಪಾಡುವವರನರಿಯೆ ದೊರೆಯೆ 5
--------------
ಅಂಬಾಬಾಯಿ
ಶ್ರೀ ಕಲ್ಯಾಣಿ ಸುಗುಣಮಣಿ ಗಿರಿಜೆ ಪ-ರಾಕೆ ಬಾಗಿಲ ತೆಗೆಯೆಸಾಕು ನೀನಾರು ನಿನ್ನಯ ನಾಮವನು ಪ-ರಾಕು ಮಾಡದೆ ಪೇಳಯ್ಯ 1 ಕಾಮಿನಿಯರೊಳು ಕಟ್ಟಾಣಿ ಪಾರ್ವತಿ ಕೇಳೆಕೌಮಾರಿ ಕಾಣೆ ಜಾಣೆಕೌಮಾರಿಯಾದರೊಳ್ಳಿತು ನಡೆ ಋಷಿಗಳಸ್ತೋಮದ ವನಕಾಗಿ 2 ಕಾಳ ಪನ್ನಗವೇಣಿ ಕಲಕೀರವಾಣಿಕೇಳೆ ಶೂಲಿ ಕಾಣೆಲೆ ಕೋಮಲೆಶೂಲಿ ನೀನಾದರೊಳ್ಳಿತು ನಡೆ ವೈದ್ಯರಜಾಲವಿದ್ದೆಡೆಗಾಗಿ3 ನೀಲಕುಂತಳೆ ನಿಗಮಾಗಮನುತೆ ಕೇಳೆನೀಲಕಂಠನು ಕಾಣೆನೀಲಕಂಠನು ನೀನಾದರೆ ತರುಗಳ ಮೇಲೆಕುಳ್ಳಿರು ಪೋಗಯ್ಯ4 ಸೋನೆ ಕೋಕಿಲಗಾನೆಸ್ಥಾಣು ನಾನೆಲೆ ಜಾಣೆನೀನಾದರೊಳ್ಳಿತು ನಡೆ ವಿಪಿನಸ್ಥಾಣದೊಳಿರು ಪೋಗಯ್ಯ5 ಎಸಳುಗಂಗಳ ಬಾಲೆ ಎಸವ ಮೋಹನಮಾಲೆಪಶುಪತಿ ಕಾಣೆ ಕೋಮಲೆಪಶುಪತಿಯಾದರೊಳ್ಳಿತು ನಡೆಗೋಗಳವಿಸರವ ಕಾವುದಕೆ 6 ಜಾತಿನಾಯಕಿ ಕೇಳೆ ನೂತನವೇತಕೆಭೂತೇಶ ಕಾಣೆ ಜಾಣೆಭೂತೇಶನಾದರೊಳ್ಳಿತು ನಡೆ ಭೂತವ್ರಾತದ ವನಕಾಗಿ7 ಮಿಂಚಿನ ಗೊಂಚಲ ಮುಂಚಿ ಪಳಂಚುವಚಂಚಲನೇತ್ರಯುಗೆಅಂಚಿತಮಾದ ವಿಪಂಚಿಯ ಸ್ವರವ ಪಳಂಚುವಿಂಚರದಬಲೆ 8 ಕರಗಿಸಿ ಕರುವಿಟ್ಟೆರದ ಚಿನ್ನದ ಬೊಂಬೆಸುರುಚಿಕರ ಸುನಿತಂಬೆಪರಿಪೂರ್ಣ ಶರದಿಂದುವದನೆ ಕುಂದರದನೆವರಸುಗುಣಾವಲಂಬೆ 9 ಕುಂಕುಮರೇಖಾಲಂಕೃತೆ ಪರತರೆಪಂಕಜಸಮಪಾಣಿಶಂಕರಿ ಪಾಪಭಯಂಕರಿ ಸರ್ವವಶಂಕರಿ ಶುಭವಾಣಿ10 ಚಂಡಮುಂಡಾಸುರಖಂಡನ ಪಂಡಿತೆಮಂಡಲತ್ರಯನಿಲಯೆಮಂಡಿತ ನವರತ್ನಖಚಿತ ಮಹೋಜ್ವಲಕುಂಡಲೆ ಮಣಿವಲಯೆ 11 ವರದಾನದಿಯ ತೀರವಾಸ ಶ್ರೀ ಕೆಳದಿಯಪುರದ ರಾಮೇಶ ಕಾಣೆಪುರದ ರಾಮೇಶನಾದರೆ ನೆರೆಬಾಯೆಂದುಕರೆದಳು ಗಿರಿಜಾತೆ12 ಗಿರಿಜಾ ಶಂಕರರ ಸಂವಾದದ ಪದಗಳಬರೆದೋದಿ ಕೇಳ್ದರಿಗೆಪರಮ ಸೌಭಾಗ್ಯ ಸಂತಾನಗಳನು ಕೊಟ್ಟುಪೊರೆವನು ರಾಮೇಶ13
--------------
ಕೆಳದಿ ವೆಂಕಣ್ಣ ಕವಿ
ಶ್ರೀ ಕೃಷ್ಣ ಚರಿತ್ರೆ ಅಧ್ಯಾಯ ಒಂದು ರಾಗ:ಸೌರಾಷ್ಟ್ರ ತಾಳ:ತಿವಿಡೆ ಸ್ವರ ಋಷಭ ಶ್ರೀ ರಮಣ ಚರಣಾರವಿಂದವ ಆರಡಿ ಪರಿಯಾಗಿ ಸೇವಿಸಿ ಶ್ರೀ ರಮಾ ಬ್ರಹ್ವಾದಿ ಗುರುಪದ ಸೇರಿ ಸೇವಿಸುವೆ| ನಾರಿಮಣಿ ಶಿರಿದೇವಿ ಅಪಾರ ಮಹಿಮೆಯ ತಿಳಿವುದಕೆ ಪೂರ ಮನಗಂಡಿಲ್ಲ ಮತ್ತಿನ್ನಾರು ಬಲ್ಲವರು 1 ಆರಗೊಡವಿನ್ನೇನು ಮತ್ತಿನ್ನಾರು ದೂರಿದರೇನುಸರ್ವವು ಪೂರಮಾಡುವ ನಮ್ಮ ಗುರುಗಳ ಪೂರದಯವಿರಲು| ಮನದಲಿ ಘೋರತರ ಅಭಿಲಾಷೆ ಯೋಗ್ಯತೆ ಮೀರಿ ಇರುವುದು 2 ಮನಸಿನಲಿ ಮಾತ್ಸರ್ಯವಿಲ್ಲದೆ ಘನಕವೀಶ್ವರಗಳಿಗೆವಂದಿಸಿ ಅನುಸರಿಸಿ ಭಾಗವತವನು ಬಹುವಿನುತ ದಶಮ ಸ್ಕಂದದರ್ಥವ ಕನ್ನಡಿ ತೋರಿಸಿದಂತೆ ಸ್ಪಷ್ದದಿ ಕನ್ನಡಿಲ್ಹೇಳುವೆನು 3 ಪದ್ಯ ಭಾರ ಆಘೋರದುಃಖವನು ಶ್ರೀ ರಮೇಶನ ಸ್ತುತಿಸುತಿರುವ ಕಾಲದಲಿ| ಸಾರ ಸಾರಿ ಹೇಳಿದನು ವೃಂದಾರ ಕರುಗಳಿಗೆ 1 ಪದ, ರಾಗ:ಯರಕಲಕಾಂಬೋದಿ ಅಟತಾಳ ಸ್ವರಧೈವತ ಕೇಳಿರೋ ಭೋ ದೇವತೆಗಳಿರಾ ಹೇಳುವೆ ಹರಿಭಾವವ ಹೇಳಿರೋ ನಿಮ್ಮವರಿಗೆಲ್ಲಾ ಭಾಳ ಸಂತೋಷದಿಂದಲೇ ಪ ಇಷ್ಟುದಿವಸ ಭೂದೇವಿ ಕಷ್ಟವ ಬಟ್ಟಳು ಬಹಳ ಸ್ಪಷ್ಟವಾಗಿ ಆಕೆಯಾ ಕಷ್ಟವು ದೂರಾಗುವುದಿನ್ನು || ವಿಷ್ಣುನಾಜ್ಞೆಯಲಿ ನೀವು ವೃಷ್ಣಿ ಕುಲದಲ್ಹುಟ್ಟಿರೋ|| ವಿಷ್ಣುತಾ ದೇವಕಿಯಲ್ಲಿ ಕೃಷ್ಣನಾಗಿ ಹುಟ್ಟುವಾ1 ಪದ ಈ ವಚನವ ಕೇಳಿ ದೇವತಿಗಳಾಗ ಹರಿಸೇವೆ ಆಗಲಿಯೆಂಬೋ ಭಾವದಲಿ ಜನಿಸಿದರು| ಈ ವಸುಧಿಯೊಳಗವರು ಭಾವಕನು ಕಶ್ಯಪ ವಿಭಾವಸುವನ ಪೋಲ್ವ ವಸು ದೇವನಾದನು ಅದಿತಿದೇವಿ ತಾ ಜನಿಸಿದಳು ದೇವಕಿಯು ಆಗಿ| ದೇವ ಪೂಜಕನು ವಸುದೇವ ತಾ ಪ್ರೀತಿಯಲಿ ದೇವಕಿಗೆ ಕೊಟ್ಟ ಸದ್ಭಾವದಲಿ ಬೇಕಾದ್ದು ದೇವಕಿಯಲಿ ವಸುದೇವ ರಥವೇರಿದನು ಆವಾಗ ಕಂಸ ತಾ ತೀವ್ರ ನÀಡಿಸಲಾವತ್ತಿಗಾಯಿತಲ್ಲೆ ವಿಯದ್ವಾಣಿ ಪದ, ರಾಗ(ದೇಸಿ) ಅಟತಾಳ, ಸ್ವರಷಡ್ಜ ಕೇಳು ಕಂಸನೆ ನಿನಗೇಳುವೆ ನಾ ಬಂದು| ಕೇಳು ಕಂಸಾ|| ಬಹಳ ದಿವಸ ಬಾಳಿ ಇರುವವನಲ್ಲ ಕೇಳು ಕಂಸ ಪ ಮಂಗಳಾಂಗಿಯು ಈಕೆ ತಂಗಿ ಎಂದೆನಬೇಡ ಕೇಳು ಕಂಸಾ| ತಂಗಿಯ ಮಗನೇ ನಿನ್ನಂಗಕ್ಕೆ ವೈರಿಯು ಕೇಳು ಕಂಸಾ|| 1 ಭಂಡ ನಾನೆಂದು ಉತ್ಕಂಠಿದಿಂದರ ಬೇಡ ಕೇಳು ಕಂಸಾ| ಎಂಟನೆಯವ ನಿನ್ನ ಘಂಟಸಿ ಕೊಲ್ಲುವನು ಕೇಳು ಕಂಸಾ|| 2 ವೈರಿ ದಾವಾತಿದ್ದಾನೆಂದೆನ ಬೇಡ ಕೇಳು ಕಂಸಾ| ಶುದ್ಧ ಅನಂತಾದ್ರೀಶ ಅವತಿಳಿ ಕೇಳು ಕಂಸಾ|| 3 ಪದ್ಯ ನುಡಿದಿರುವ ಆ ಸತ್ಯವಾಣಿಯ ಕೇಳಿ ಮೃತ್ಯುಗಂಜಿಕೀನ್ನ ಹೊತ್ತುಗಳೆಯದಲೆ ಆ ಹೊತ್ತು ಕೊಲಬೇಕೆಂದು ಸತ್ವರದಿ ಕೇಶದಲಿ ಒತ್ತಿ ಹಿಡಿದು ಕತ್ತಿ ಹಿರಿದೆತ್ತಿದನು ಕÀಂಸಾ| ಆ ವೃತ್ತಿಯನು ತಿಳಯುತಲೆ ಅತ್ಯಂತವಾಗಿ ತನ್ನ ಚಿತ್ತದಲಿ ಮಿಡುಕಿ ಮದಮತ್ತ ಕಂಸಗೆ ನುಡಿದ ಒತ್ತಿ ಈ ಪರಿಯಾ || 1 ಪದ, ರಾಗ:ಆನಂದಭೈರವಿ ಆದಿತಾಳ ಬೇಡಲೊ ನೋಡಿ ಈಕೆಯಲಿ ಮಾಡು ಮಮತೆಯನು ಮಾಡಬೇಡ ಹಿಂಸಾ|| ಪ ಯಾಕೆಕೊಲ್ಲುವಿಯೋ ನೀ ಕರುಣಿಸು ಸಣ್ಣಾಕಿ ನಿರ್ಮಲಾಂಗಿ|| 1 ಕೊಂದರೆ ಎನಗೆ ಕೇಡು | ಮತ್ತದರಿಂದ ನಿನಗೆ ಕೇಡು ತಿಳಿದು ನೋಡು|| 2 ಏಸು ದಿವಸ ನೀನು ಬದುಕುವಿ ನಾಶವಿಲ್ಲವೇನು| ಮೋಸವಾಗದಿರು ಶ್ರೀಶ ಅನಂತಾದ್ರೀ ಕೋಪಿಸುವನು 3 ಆರ್ಯಾ ಬಹಳ ರೀತಿಯಲಿ ಹೇಳಿಕೊಂಡರೂ ಕೇಳಲಿಲ್ಲ ಕಂಸನು ಶೌರಿಯು ಹೀಗೆ || 1 ಪದ, ರಾಗ:ಅನಂದ ಭೈರವಿ ತಾಳ:ಆದಿ ಬೇಡಿದ್ದು ಕೊಡುವೆನು ನಾನು| ಪ ಜೇವ ಹತ್ಯವೇ ಮುಂಚೆ ಕೇವಲ ನಿಂದ್ಯದು ಸ್ತ್ರೀ ವಧಕಂತು ಇನ್ನು ದಾವುದು ಸರಿಯದು || 1 ಹುಟ್ಟುದರೀಕೆಯ ಹೊಟ್ಟೆ | ಮಕ್ಕಳು ಘಟ್ಟಿ ಮನಸು ಮಾಡಿ ಕೊಟ್ಟುಬಿಡುವೆನು ಕೇಳು || 2 ಬಲ್ಲಿದಾನಂತಾದ್ರಿವಲ್ಲಭನ ಆಣಿ|| 3 ಪದ, ರಾಗ:ಯರಕಲಕಾಂಬೋಧಿ ಶೌರಿಯ ವಚನವ ಕೇಳಿ ವೈರಿಯ ಕಂಸನು ಆಗ ಮೋರೆಯ ತೆಗ್ಗಿಬಿಟ್ಟನು ನಾರಿಯ ಕೊಲ್ಲುವದು | ವೈರಿಯ ಭಯ ಕಳೆವುತ ನಾರಿಯ ಕರಕೊಂಡು ||1 ಮುಂದಾ ದೇವಕಿಯಲಿ ಕಂದನು ಆದಾಕ್ಷಣಕೆ ತಂದೊಪ್ಪಿಸಿದನು ಕಂಸಗೆ ನೊಂದ ವಸುದೇವ| ಮುಂದಾ ಕಂಸನ ನೋಡಿ| ಮನನ ಹಾಸ್ಯದಿ ಮತ್ತ ಕಂದನ ತಿರಿಗಿ ಒಪ್ಪಿಸಿ ಆಗಂದನು ಈ ಪರಿಯು || 2 ಶಿಷ್ಟನೆ ನೀಕೇಳೈ ಬಂದಿಷ್ಟಿಲ್ಲಿವನಿಂದೆನಗೆ| ಸ್ಪಷ್ಟದಿ ನಿನಗ್ಹೇಳುವೆ ಎನಗಷ್ಟಮನೇ ವೈರಿ| ದುಷ್ಟನ ಮಾತಿಗೆ ಶೌರಿಯು ತುಷ್ಟನು ಇದು ಎಂದು || 3 ಪದ, ರಾಗ:ಕನ್ನಡ ಕಾಂಬೋದಿ ತಾಳ:ಬಿಲಂದಿ ಮುಂದ ಶೌರಿಯು ತನ್ನ ಮಂದಿರಕ್ಕೆ ಪೋಗಲು ಬಂದ ನಾರದನು ಆಗಲ್ಲೆ ಕಂಸ ಇದ್ದಲ್ಲೆ || 1 ಮಾಡಿದಾ | ಮಾತನಾಡಿದಾ|| 2 ಸುದ್ದಿಯಂಬೋದ್ಹುಟ್ಟಿತು | ಕೆಲಸ ಕೆಟ್ಟಿತು|| 3 ದಾವ ಮೊತೇನ್ಹೇಳಲಿ ದೇವದೇವ ಶ್ರೀಹರಿ ದೇವಕಿಯಲ್ಲಿ ಪುಟ್ಟುವಾ| ನಿನ್ನ ಕೊಲ್ಲುವಾ|| 4 ಅಸುರರಾದವರುಗಳಾ ಅಸುಗಳನ್ನೆ ಹೀರುವಾ ವಸುಧಿ ಭಾರವನಿಳಿಸುವಾ ಕೀರ್ತಿ ಬೆಳಿಸುಮವಾ|| 5 ನಂದಗೋಪಾದಿUಳೆÀಲ್ಲ ನಂದ ಬಾಂದವರು ಮತ್ತು ಮುಂದ ವಸುದೇವಾದಿಗಳು | ದೇವತಿಗಳು|| 6 ಇನ್ನಕೇಳು ಇವರ ಹೊರ್ತು ಅನ್ನರಾದವರು ಎಲ್ಲಾನಿನ್ನ ಅನುಸರಿಸೆ ಇರುವುವರು | ಅಸುರರೇ ಅವರು|| 7 ಮೂಲದಲ್ಲೇ ಮುಂಚೆ ನೀ ಕಾಲನೇಮಿಯೆನಿಸಿ ಈ ಕಾಲಕ್ಕೆ ಕಂಸನಾಗಿರುವಿ | ಮೈಮರ್ತು ಇರುವಿ || 8 ನಿನ್ನ ಪೂರ್ವ ವೈರಿಯು ಚನ್ನಿಗಾನಂತಾದ್ರೀಶಾ ನಿನ್ನ ಕೊಲ್ಲುವನೆಂಬುದದು |ನಿನಗೆ ತಿಳಿಯದು || 9 ಧಿಟ್ಟ ನಾರದನು ಮುನಿಮುಟ್ಟಿ ಬಂದ್ಹೀಂಗನಲು ಥಟ್ಟನೆ ಕಂಸ ಭಯಬಟ್ಟು ಅವರಿಬ್ಬರಿಗೆ ಘಟ್ವ ಬೇಡಿಯ ಬಿಗಿದು ಹುಟ್ಹುಟ್ಟದವರನ್ನ ಬಿಟ್ಟು ಬಿಡುದಲೆÀ ಕೊಂದ ಹುಟ್ಟಿದಾಕ್ಷಣಕೆ|| ಹುಟ್ಟುಗ್ರ ಸೇನನಲಿ ಹುಟ್ಟಿದಾರಭ್ಯ ಬಹು ದಿಟ್ಟಾದ ಸ್ನೇಹವನು ಬಿಟ್ಟ ಆ ಕಂಸ ಕಂಗೆಟ್ಟು ಬಹುಕಾಸೋಸಿ ಬಟ್ಟವನ ಬಂದಿಯ ಲ್ಲಿಟ್ಟುತಾನೆ ಆದ ಪಟ್ಟಕಾಧಿಪತಿಯು|| 1 ಪದ:ರಾಗ:ಶಂಕರಾಭರಣ ಸ್ವರ:ಷಡ್ಜ, ತಾಳ:ಆದಿ ಯೂದವರನ್ನು ಬಹುಪೀಡಾ ಬಡಿಸೀದಾ || 1 ದುಷ್ಟನ ಕೈಯೊಳು ಸಿಕ್ಕು ಶಷ್ಟ ಬಡಲಾರೆವು ಎಂದು ಅಷ್ಟೂರು ನಿಲ್ಲದೆ ದೇಶಭ್ರಷ್ಟರಾಸರು|| 2 ಅನುಬಂಧಿಗಳೆಂಬುವರು ಅನುರಾಗದಿಂದಲ್ಲೆ| ಅವನ ಅನುಸರಿಸಿಕೊಂಡಿರುತಿಹರು ಅನುದಿನದಲ್ಲಿ||3 ಕ್ರೂರಾಗಿ ಇರುವೊನು ಕಂಸಾ ನಾರಿ ದೇವಕ್ಕಿ ದೇವಿಯು ಆರು ಮಹಾಕಾಳಿಯ ಹರೊ ಆಜ್ಞೆಯಿಂದ ಕೀಳುತು ರೋಹಿಣಿ ಗರ್ಭದೊಳಿಟ್ಟಳು|| 4 ದೇವಕಿದೇವಿಯು ವಸುದೇವಾದಿಗಳೆಲ್ಲ ಗರ್ಭ ಸ್ರಾವವಾಯಿತೆಂದೊದರಿದರು ಆ ವ್ಯಾಳ್ಯದಲ್ಲಿ|| 5 ಎಂಟನೆ ಗರ್ಭಾಗಿ ಶ್ರೀ ವೈಕುಂಠೇಶ | ನಿಂತಾನು ಸಾಧು ಕಂಟಕರನ್ನು ಕೊಲ್ಲುವೆ ನೆಂದುತ್ಕಂಠದಿಂದಲಿ || 6 ಶಂಜಾಕ್ಷಿ ದೇವಕಿ ದೇವಿ ಶಂಜನಾಭನುದರವೆಂಬೋ ಪಂಜರದೊಳಿರಲು ತೇಜಃ ಪುಂಜಳಾದಳು7 ಇಂಥಾಕಿಯ ಕಂಡು ಕಂಸಾನಂತಾದ್ರೀಶ ಗರ್ಭದಲ್ಲಿ ನಿಂತಾನೆಂದು ತಿಳದೀಪರಿ ಚಿಂತಿ ಮಾಡಿದಾ|| 8 ಪದ:ರಾಗ:ಶಂಕರಾಭರಣ ಏನು ಮಾಡಲಿ | ನಾ ಇನ್ನೇನು ಮಾಡಲಿ | ಏನು ಮಾಡಲೇನು ವಿಷ್ಟು ತಾನೆ ಬಂದಿನ್ನೇನು ಗತಿ ಇನ್ನೇನು|| ಪ ವೀರರೊಳಗೆ ಸೇರಿ ಎನ್ನ ಮಾರಿ ಹ್ಯಾಂಗ ತೋರಲಿನ್ನೇನು ||1 ತಂಗಿ ವಧ ಜಗಂಗಳೊಳಗೆ ಅಮಂಗಳಿದು ಸು
--------------
ಅನಂತಾದ್ರೀಶ - ಕಥನಕಾವ್ಯಗಳು
ಶ್ರೀ ಗಣರಾಯ ಶ್ರೀ ಗಣರಾಯ ಶ್ರೀ ಗಣರಾಯವಂದಿಸುವೆನೀಗ ಶ್ರೀ ಗಣರಾಯ ಪ. ಪಾದ ಏಕಚಿತ್ತದಲೆಬಲಗೊಂಬೆ ವಂದಿಸುವೆ ಶ್ರೀ ಗಣರಾಯ 1 ನೆನೆಯಕ್ಕಿ ನೆನಗಡಲೆ ಗೊನೆ ಬಾಳೆಹಣ್ಣು ಘನವಾದ ಚಿಗಳಿ ತಂಬಿಟ್ಟುಫನವಾದ ಚಿಗಳಿ ತಂಬಿಟ್ಟು ತಂದಿಹೆ ಗಣಪತಿಮತಿಯ ಕರುಣಿಸು ವಂದಿಸುವೆ 2 ನಿತ್ಯ ಬ್ರಹ್ಮಚರ್ಯ ಉತ್ತಮ ವ್ರತವುಳ್ಳಮತ್ತು ಪಾರ್ವತಿಯ ತನಯನೆಮತ್ತು ಪಾರ್ವತಿಯ ತನಯನೆ ವಿಘ್ನೇಶನೆ ಭಕ್ತಿಯಿಂದ ಮೊದಲೆ ಬಲಗೊಂಬೆ 3 ಸುಲಭದಿ ರುಕ್ಮಿಣಿಯ ಗೆಲಿಯಬೇಕೆನುತಲೆಹಲಧರನ ತಂಗಿ ಸುಭದ್ರೆಹಲಧರನ ತಂಗಿ ಸುಭದ್ರೆ ಮೊದಲಿಗೆ ಚಲುವ ಗಣಪತಿಯ ನೆನೆದಳು 4 ಪರೀಕ್ಷಿತ ಪರೀಕ್ಷಿತ ಮೊದಲೆ ಪೂಜೆಯ ಮಾಡಿಪ್ರತ್ಯಕ್ಷ ರಾಜ್ಯ ಪಡೆದನು 5 ಆನೆಯ ಮುಖದವನ ಮತ್ತಾರು ಪೂಜಿಸಿದರುತಾನು ಮಾಂಧಾತರಾಯ ಮೊದಲಾಗಿತಾನು ಮಾಂಧಾತರಾಯ ಮೊದಲು ಪೂಜೆಯ ಮಾಡಿನಾನಾ ಸೌಭಾಗ್ಯ ಪಡೆದನು 6 ಮುದ್ದು ರಾಮೇಶನ ಪೂಜಿಸಿ ರಾವಣನ ಗೆಲಿದನುಮ್ಯಾಲೆ ಪಾಂಡವರು ಮೊದಲಾಗಿಮ್ಯಾಲೆ ಪಾಂಡವರು ಮೊದಲ ಪೂಜೆಯ ಮಾಡಿಹೀನ ಕೌರವರ ಗೆಲಿದರು 7
--------------
ಗಲಗಲಿಅವ್ವನವರು
ಶ್ರೀ ಗಣೇಶ ಕಂಡೆ ನಿನ್ನ ಕಮಲದಂಘ್ರಿಯ ಈಗ ಪಾಲಿಸೆನಗೆ ನೀನೆ ಮನದಭೀಷ್ಟ ಸಿದ್ದಿಯ ಫ ಕಾಯ ಸುಂಡಲಿಂದ ಮೆಲುವ ಪಂಚಭಕ್ಷ್ಯರಾಶಿಯ ಖಂಡಿಸಿರ್ದ ಇಕ್ಷು ಕಡಲೆ ಮೋದಕ ಪ್ರಿಯ 1 ಭಾರಿಪುರುಷ ಇಲಿಯನೇರಿ ನಿಖಿಲ ಕೈದುವ ತೋರಕರದಿ ಪಿಡಿದು ಬರುವ ಭಕ್ತ ವಿಘ್ನವಾ ಚಾರಿವರಿತು ತರಿದು ತರಿದು ಓರೆ ಮಾಡುವ ಧೀರ ವಿಘ್ನರಾಜಗೆಣೆಯ ಕಾಣಿಪೋಲುವ 2 ಗಂಧ ಚಂದನಾಗರು ಸರ್ವಾಂಗ ಲೇಪನ ಚಂದ್ರ ಶೇಖರ ನರಸಿಯ ಮುದ್ದು ಕಂದನ ಜನರು ಬಂದು ನೋಡಿರೆಲ್ಲ ಮಂಡಲಮನೆಯ ಬೆನಕನ 3
--------------
ಕವಿ ಪರಮದೇವದಾಸರು
ಶ್ರೀ ಗಣೇಶಸ್ತುತಿ ಹಾಡುಗಳು ಬಲ್ಲಡಿವನ ಭಜಿಸಿ ನೆನೆಸಿದೆಲ್ಲ ಪಡೆಯಿರೋ ಪ ನಿತ್ಯ ರುದ್ರದಿಂದ ಜಳಕಗೈದು ಮಡಿಯ ನಡಿಸಿರೋ 1 ಹೊಟ್ಟೆ ತುಂಬ ತುಷ್ಟಿಗೈಸಿ ವಿಘ್ನರಾಜಗೆ 2 ಕರವ ಮುಗಿದು ಡೊಳ್ಳಿನ ಗಣಪನವರಿಗೀವ ನಿಷ್ಟ ಸಿದ್ದಿಯ 3
--------------
ಕವಿ ಪರಮದೇವದಾಸರು
ಶ್ರೀ ಗಿರಿಜಾತನಯಾ ಮಹೋದಯಾಶ್ರೀ ಗಿರಿಜಾತನಯಾ ಪಭಾಗವತಪ್ರಿಯ ಭೋಗಿಜನಾಶ್ರಯಬಾಗಿನ'ುಸುವೆನಯ್ಯಾ ಅ.ಪಸುರವರ ಪೂಜಿತ ವರಸಿದ್ದಿಸಂಯುತಶರಣಪಾಲಕನಿರತ 'ಖ್ಯಾತಾ 1ಪಾಶಾಂಕುಶಧರ ದಾಸಸಂಕಟಹರಈಶಕುವರ ಸುಂದರ ಸುಧೀರ 2ಮೋದಕಸ'ತ ಬಾಧಕರ'ತವೇದವಚನ'ನುತ ಪುನೀತ 3ರಕ್ತಮಾಲ್ಯಾಂಬರಾ ಸಕ್ತದೇವಗುರುಭಕ್ತಿದಾನ ಚತುರದ್ವೈಮಾತುರ 4ಏಕವದನ ಗಣಾಧೀಕ 'ಭೂಷಣಭೀಕರ ರಿಪುಹರಣ ಚಿದ್ವನ 5
--------------
ಹೊಸಕೆರೆ ಚಿದಂಬರಯ್ಯನವರು
ಶ್ರೀ ಗುರು ಆತ್ಮರಾಮ ಸುರಮುನಿ ಸೇವಿತನಾಮ ಸಜ್ಜನ ಹೃದಯ ವಿಶ್ರಾಮ ಶ್ರೀಹರಿ ಸರ್ವೋತ್ತಮ 1 ದೀನೋದ್ದಾರಣ ರಾಮ ಅನಾಥ ಬಂಧು ನಿಸ್ಸೀಮ ಅನಂತ ಗುಣಮಹಿಮ ಶ್ರೀನಾಥ ಕಲ್ಪದ್ರುಮ 2 ಗುರುವರ ಪರಂಧಾಮ ಪತಿತಪಾವನ ನಾಮ ಮಹಿಪತಿ ತಾರಕರಾಮ ಸದ್ಗತಿಸುಖ ವಿಶ್ರಾಮ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು