ಒಟ್ಟು 7932 ಕಡೆಗಳಲ್ಲಿ , 127 ದಾಸರು , 4530 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಹಾಲಕ್ಷ್ಮಿದೇವಿ ಪ ಆಹಾ ನಿನ್ನ ಮಹಿಮೆ ಹೊಗಳಲಳವೆ ಅ.ಪ ಮೂಲ ಪ್ರಕೃತಿ ಮಹಾಮಾಯೆ ನಿನ್ನ ಲೀಲೆಯಲ್ಲವೆ ಸಮಸ್ತವೂ ಸಾಲದೆಂಬುವ ದುಸ್ವಭಾವ ಬಿಡಿಸಮ್ಮ 1 ಕ್ಷೀರಸಾಗರಾತ್ಮಜೇ ಭಜೇ ಅಂ ಭೋರುಹಾಕ್ಷನರ್ಧಾಂಗಿ ಸಾರಸ ವೈರಿಯ ತಂಗಿ ಶುಭಾಂಗಿ 2 ತುತ್ತುಮಾಡಿವುಣಿಸಮ್ಮ ಮತ್ತಾರನು ಕಾಣೆಮ್ಮ ನಮ್ಮಮ್ಮ 3 ತಾನೆ ಶ್ರೇಷ್ಟನೆಂಬ ಹೀನರ ಸಂಗವು ಜ್ಞಾನಿಗಳಿಗೆಯಿದು ಹಾಸ್ಯವಲ್ಲದೆ 4 ನಿನ್ನ ಪತಿಯಾದ ಗುರುರಾಮ ವಿಠಲನ ಘನ್ನ ಚಿತ್ತಗನುಸಾರ ಮನ್ನಿಸಿ ಕಾಯಿ ನೀ ನೆನ್ನನು ನಿಜದೆÉ ಮಹಾಲಕ್ಷ್ಮಿದೇವಿ 5
--------------
ಗುರುರಾಮವಿಠಲ
ಮಹಾಲಕ್ಷ್ಮೀ ಎನ್ನ ಪಾಲಿಸೆ ಇಂದಿರಾದೇವಿ ಜ- ಗನ್ನುತ ಚರಿತೆ ಭಕ್ತ ಸಂಜೀವಿ ಪ ಸನ್ನುತಾಂಗಿಯೆ ದೀನ ಜನರಾಪನ್ನರಕ್ಷಕಳಲ್ಲವೇ ನೀ- ಕೃಪಾ ಕಟಾಕ್ಷದಿ ಅ.ಪ ಕಮಲನಾಭನರಾಣಿ | ಕಲ್ಯಾಣಿ ಪಂಕಜ ಪಾಣಿ ಶಮದಮಾದಿ ಸುಖಂಗಳಿತ್ತೆಮ್ಮಮಿತದುರಿತಗಳೋಡಿಸಿ ಅಹಂ ಕ್ರಮದಿ ತೋರಿಸಿ 1 ಎಷ್ಟೊ ಜನ್ಮಗಳೆತ್ತಿದೆನಮ್ಮಾ | ಬಲು ಕಷ್ಟಕಾಡುತಿಹುದು ಕರ್ಮ ಪೊಟ್ಟೆಗೋಸುಗ ತಿರುಗಿ ತಿರುಗೆಳ್ಳಷ್ಟು ಸುಖವನು ಕಾಣದೆ ಸಂ- ಪರಮೇಷ್ಠಿ ಜನಕನ ಪಟ್ಟದರಸಿಯೆ2 ಸಾಮಜಗಮನೆ ಸದ್ಗುಣರನ್ನೆ | ಕ್ಷೀರ - ಪ್ರಾಣನಾಯಕಿ 3
--------------
ಗುರುರಾಮವಿಠಲ
ಮಹಾಲಕ್ಷ್ಮೀ ಅಷ್ಟಕಂ ಪಂಕಜ ಮಾಲಿನಿಪಾಹಿಮಾಂ ಕರವೀರವಾಸಿನಿ ಪಾಹಿ ರಾಘವ ಕಾಮಿನಿ ಪ ಚಂದ್ರಮಂಡಲ ಹಾಸ ಸನ್ಮುಖ ಮಂದಹಾಸ ಸುಶೋಭಿತೆಸಿಂಧುರೇಂದ್ರ ಕರಾಮೃತೌಘ ಸುಗಂಧ ಬಿಂದು ನಿಷೇಚಿತೆಕುಂದರೋಜ್ವಲ ಇಂದ್ರನೀಲ ಮಣೀಂದ್ರಹಾರ ವಿಲಾಸಿತೇಬಂದ್ರಿರಾಜಸುತೇವ ಸೂನುಮನಾದಿ ಬಂಧ ವಿವರ್ಜಿತೇ 1 ಸಾಂಬ ಸುಶಾಂತಿ ಕಾಂತಿ ಸಹೋದ್ಭವೆ 2 ಚಾರು ಸುರಾಳಿ ಮೌಳಿಗ ಹಸ್ತತೇ 3 ತಪ್ತಕಾಂಚನ ನೂಪುರೋಜ್ವಲ ರಕ್ತಪಾಲ ಸರೋರಹೆಚಿತ್ರಪೇಟ ಪಟೋಲ್ಲ ಸತ್ಕಟೆ ರತ್ನ ಕಾಂಚಿ ಗುಣೋದ್ಭವೇನಿತ್ಯತೃಪ್ತ ನಿರಂಜನೈಸುರ ಮೃತ್ಯುಮೋಹನ ವಿಗ್ರಹೆತತ್‍ಕೃಪೈವಪು ಮೃತ್ಯುಸಾಧನ ಸಪ್ತ ಮೋಡಿಹ ವಿದ್ಮಹೆ 4 ಅಂಬಜಾವಕ ಲಕ್ಷ್ಮೀ ಮೇಷ ಕದಂಬಿನೀನಿಲಯಸ್ಥಿತೆಕಂಬುಕಂಜರ ತಾರಿಬೇಟ ಕರಾಂಬು ಸಂಭವ ಸೇವಿತೆಶಂಭರಾರಿ ಸುತಾಂಘ್ರಿಪಂಕಜೆ ಬಿಂಬರಾಹಿ ಭೂಸುತೆಸಾಂಬಹೀಂಬ ನಿಹಾ ಸುದರ್ಶಯ ಜಂಜವೈರಿನಿ ಸೇವಿತೆ 5 ತಲ್ಪ ಮಂದ ಸೌಭಗ ಶಾಲನಂವಂದ್ಯ ಮಾನ ವಿದೇಂದ್ರ ದೈವತ ವೃಂದ ವೈಭವದಾಯಿನಂಸುಂದರಾಂಗಿಣಿ - ನಿವೇದಗೇಹ ಭವಾಂಧಿ ಪೋಪನೀ ಶೋರ್ಪಣಂ 6 ಜೀವವರ್ಗ ಹೃದಾಲಯ ಸ್ಥಿತ ಭೂವರಾಹಸಹಾನನೇಪಾವನೀತಾಹೇ ವಸೇದ್ರುಮ ಹಾನು ಭಾವ ಶಿಖಾಮಣಿಹಾವಭಾವ ವಿಲಾಸಿನಾಕಿ ಸುವಾಸಿನಿನುತ ಸದ್ಗುಣಿಸೇವಕೇಯ ವಿಭಾವಿತಾಖಿಲ ಭಾವಕಾಯದ ಶಿಕ್ಷಣಿ 7 ಇಂದಿರೇಶ ಸತೀಂದುಮೌಳಿ ಕರಾರವಿಂದ ನಿಷೇವಣೇಚಂದ್ರಮಾರುತರೇಂದು ಸೈಂದವವೀಂದ್ರ ಪೂರ್ವಸು ವಾಹನೇಅಂಧಕೂಪ ಸಮಾನ ದುರ್ಭವ ಬಂಧ ಸೇಘನೀ ಪೋಷಿಣಿನಂದನಂದನ ಮಾಸುದರ್ಶಯ ಬಂಧುರಾಮೃತ ಭಾಷಿಣಿ 8
--------------
ಇಂದಿರೇಶರು
ಮಹಿಮೆ ಸಾಲದೆ, ಇಷ್ಟೇ ಮಹಿಮೆ ಸಾಲದೆ ಪ ಅಹಿಶಯನನ ಒಲುಮೆಯಿಂದಮಹಿಯೊಳೆಮ್ಮ ಶ್ರೀಪಾದರಾಯರ ಅ.ಪ ಮುತ್ತಿನ ಕವಚ ಮೇಲ್ಕುಲಾವಿರತ್ನ ಕೆತ್ತಿದ ಕರ್ಣಕುಂಡಲಕಸ್ತೂರಿ ತಿಲಕ ಶ್ರೀಗಂಧ ಲೇಪನವಿಸ್ತರದಿಂದ ಮೆರೆದು ಬರುವ 1 ವಿಪ್ರ ಹತ್ಯ ದೋಷ ಬರಲುಕ್ಷಿಪ್ರ ಶಂಖೋದಕದಿ ಕಳೆಯೆಅಪ್ರಬುದ್ಧರು ದೂಷಿಸೆ ಗೇರೆಣ್ಣೆಕಪ್ಪು ವಸನ ಶುಭ್ರಮಾಡಿದ2 ಹರಿಗೆ ಸಮರ್ಪಿಸಿದ ನಾನಾಪರಿಯ ಶಾಕಗಳನು ಭುಂಜಿಸೆನರರು ನಗಲು ಶ್ರೀಶಕೃಷ್ಣನಕರುಣದಿಂದಲಿ ಹಸಿಯ ತೋರಿದ3
--------------
ವ್ಯಾಸರಾಯರು
ಮಹಿಮೆಯನಾರು ಬಲ್ಲರುನಹಿಪ್ರತಿಯೆಂದು ನಿನ್ನ ಪಾಡುವರಲ್ಲದೆ ರಂಗ ನಿನ್ನ ಪ. ವಾಮನನಾಗಿ ಬಂದು ಬಲೀಂದ್ರನಿಗೆ ಸಂದಸೀಮೆಯನೆಲ್ಲವ ಸಲೆವಿಟ್ಟ ತ್ರಿವಿಕ್ರಮ ನಿನ್ನಸಾಮಥ್ರ್ಯವ ಶ್ರುತಿಗಳು ಪೇಳೆ ಉಗುರ್ಗೊನೆಆ ಮಹಾ ಬೊಮ್ಮಾಂಡವ ಸೀಳೆ ದೇವೇಂದ್ರನುಸಾಮ್ರಾಜ್ಯದಿ ಸುಖದಿಂ ಬಾಳೆ ಕೃಷ್ಣ ನಿನ್ನ1 ಇಂದ್ರ ಕೋಪಿಸಿ ಮಳೆಗರೆಯಲು ನಿನ್ನತಂದೆ ತಾಯಿ ಬಂಧು ಬಳಗಂಗಳೆಲ್ಲ ಕಂಗೆಡಲುಅಂದು ಬಲುಗಿರಿಯನೆತ್ತಿ ಗೋ ಗೋಪಾಲರವೃಂದದ ಭಯವ ನುಗ್ಗೊತ್ತಿ ಪಾಲಿಸಿದೆಚೆಂದದಿ ನಿನ್ನಯ ಸಂಪತ್ತಿ ಕೃಷ್ಣ ನಿನ್ನ2 ಇಂದು ಮಧ್ವಮುನೀಂದ್ರಗೊಲಿದು ಕಡುಕೃಪೆಯಿಂದತÀಂದೆ ಹಯವದನ ಮುಕುಂದ ಉಡುಪಿನೊಳಗೆನಿಂದು ಸದಾ ಪೂಜಿಸಿಕೊಂಡೆ ನಿನ್ನ ಮುಂದೆನಂದಾದೀಪಗಳನು ಕಂಡೆ ಭಕ್ಷ್ಯಭೋಜ್ಯಕಂದಮೂಲ ಫಲಂಗಳುಂಡೆ ಕೃಷ್ಣ ನಿನ್ನ 3
--------------
ವಾದಿರಾಜ
ಮಳೆಯ ಪಾಲಸಯ್ಯ ಮಂಗಳ- ನಿಳಯ ಪಾಲಿಸಮ್ಮ ಪ ಬಿನೆಯೊಳು ಮಳೆಯನು ತಳೆಯದೆ ತೃಣಗಳು ಬೆಳೆಯದ ಗೋವುಗಳಳವುವಯ್ಯ ಅ.ಪ ಗೋವಿಪುರ ಕುಲವ ಕಾಯುವ ದೇವನು ನೀನಲ್ಲವೇ ಮೇವುಗಳಿಲ್ಲದೆ ಗೋವುಗಳೆಲ್ಲವು ಸಾವುವು ನಿನ್ನೊಳಿದಾವನು ಕಾವನು 1 ಕರೆಯೊಳು ನೀರಿಲ್ಲ ಬಾವಿಗ- ಳೊರತೆಯ ಸೋರಿಲ್ಲ ತುರುಗಳು ಜೀವನದಿರವನು ಕಾಣದೆ ಹರಣವ ಬಿಡವುವು ಕರುಣದಿ ಬೇಗನೆ 2 ಬಲರಿಪುಖತಿಯಲಿ ಬಾಧಿಪೆ ಜಲಮಯ ರೀತಿಯಲಿ ಚಲಿಸದೆ ಕೊಡೆವಿಡಿದಳುಹಿದೆ ಕರದೊಳು ಚಲವನು ಗೋವ್ಗಳ ಬಳಗವನೀಗಳು 3 ಜಲನಿಧಿ ಕೃತ ಶಯನ ಶಾರದ ಜಲರುಹದಳನಯನ ಜಲಜರ ಮೂರುತಿ ಜಲಜಕರಗಳು ಜಲದಾಗರದಿಂ 4 ದಾರಿಯ ಜನರೆಲ್ಲ ಬಹು ಬಾ- ಯಾರಿ ಬರುವರಲ್ಲ ದೂರಗಿಂ ತಂದಿಹ ನೀರನು ಲೋಭದಿ ನಾರಿಯರೆಲ್ಲ ವಿಚಾರಿಸುತಿರ್ಪರು 5 ಬೆಳೆದಿಹ ಸತ್ಯಗಳು ಬಿಸಿಲಿನ ಜಳದಲಿ ಬಾಡಿಹುವು ನಡಿನ ನಯನ ನಿನ್ನೊಲುಮೆಯ ತೋರಿಸಿ ಘಳಲನೆ ಪೈರುಗಳಳಿಯುತ ತೆರದೊಳು 6 ಕರುಣಾನಿಧಿಯೆಂದು ನಿನ್ನನು ಶರಖಹೊಕ್ಕೆನಿಂದು ಶರಣಭರಣ ಪುಲಿಗಿರಿಯೊಳು ನೆಲೆಸಿಹ ವರದ ವಿಠಲ ದೊರೆ ವರದ ದಯಾನಿಧೆ 7
--------------
ವೆಂಕಟವರದಾರ್ಯರು
ಮಳೆಯ ಪಾಲಿಸ್ಯಯ್ಯ-ಮಂಗಳ-ನಿಳಯ ಲಾಲಿಸಯ್ಯ ಪ ಗೋವುಗಳಳಿವುವಯ್ಯಾ ಅ.ಪ. ಗೋವಿಪ್ರರ ಕುಲವ-ಕಾಯುವ-ದೇವನು ಸಾವುವುನಿನ್ನುಳಿದಾವನು ಕಾವನು1 ಕೆರೆಯೊಳು ನೀರಿಲ್ಲಾ-ಭಾವಿಗಳೊರತೆಯ ಸೊರಿಲ್ಲಾ ತುರುಗಳು ಜೀವನದಿರವನು ಕಾಣದೆ ಹರಣವ ಬಿಡುವುವು ಕರುಣದಿ ಬೇಗನೆ 2 ಬಲರಿಪುಖಾತಿಯಲಿ ಬಾಧಿಸೆ ಜಲಮಯ ರೀತಿಯಲಿ ಚಲಿಸದೆ ಕರದೊಳಾಚಲವನು ಕೊಡೆವಿಡಿದುಳುಹಿದೆ ಗೋವ್ಗಳ ಬಳಗವ ನೀಗಳುಂ 3 ಜಲನಿಧಿಕೃತ ಶಯನ ಶಾರದ ಜಲರುಹದಳನಯನ ಜಲಧೀದಿತಿ ಜಲಚರಮಾರುತಿ ಜಲಜಕರಗಳಿಂ ಜಲದಾಗರದಿಂ4 ದಾರಿಯಜನರೆಲ್ಲ-ಬಹುಬಾಯಾರಿ ಬರುವರಲ್ಲಾ ವಿಚಾರಿಸುತಿರ್ಪರು 5 ಬೆಳಿದಿಹ ಸಸ್ಯಗಳು ಬಿಸಲಿನ ಝಳದಲಿ ಬಾಡಿಹವು ನಳಿನನಯನ ನಿನ್ನೊಲುಮೆಯ ತೋರಿಸಿ ಘಳಿಲನೆ ಪೈರುಗಳುಳಿಯುವ ತೆರೆದೊಳು6 ಕರುಣಾನಿಧಿಯೆಂದುನಿನ್ನನು ಶರಣುಹೊಕ್ಕೆನಿಂದೂ ಶರಣಾಭರಣ ಪುಲಿಗಿರಿಯೊಳು ನೆಲಸಿಹ ವರದ ವಿಠಲದೊರೆವರದ ದಯಾನಿಧೆ 7
--------------
ಸರಗೂರು ವೆಂಕಟವರದಾರ್ಯರು
ಮಾಡಬಾರದೆ ಹರಿಪಾದ ಪೂಜೆ ಪ ಮಾಡಬಾರದೇನೋ ಕೂಡುತಾ ಸನಾದಿಬೇಡಿದೊರವನೀವ ಗಾಡಿಕಾರನ ಪೂಜೆ ಅ.ಪ. ನರಜನ್ಮವು ಬರಿದೆ ಪೋಗುತಿದೆ ಗರುವತನದಿ ನೀಮೆರೆಯ ಬೇಡೆಲವೋ ಮಾರಜನಕ ಕೃಷ್ಣನನ್ನರಿತು ಪೂಜೆಯನು 1 ಪಾದ 2ಕರುಣಾಸಾಗರ ಕರಿವರದಾ ಕೃಷ್ಣ ದುರಿತಗಳನೆ ಕಳೆದುಪರಮಪದವನೀವ ಗರುಡಗಮನ ತಂದೆ ವರದ ವಿಠಲನ ಪೂಜೆ 3
--------------
ಸಿರಿಗುರುತಂದೆವರದವಿಠಲರು
ಮಾಡಿ ನೀವು ಸತ್ಸಂಗ ನೋಡಿ ಘನ ಅಂತರಂಗ ಧ್ರುವ ಸಾರಿದೂರಲಿಕ್ಕೆ ವೇದ ಅರರಿವದೆನಗಗಾಧ ದಾರಿದೋರಿಕುಡು ಬೋಧ ಗುರುಪ್ರಸಾದ 1 ಬದಿಲಿರಲಿಕ್ಕೆ ಖೂನ ಇದಕ್ಯಾಕುದ್ದರಿ ಜ್ಞಾನ ಛೇದಿಸಿ ಅನುಮಾನ ಭೇದಿಸಿರೊ ಪೂರ್ಣ 2 ಹಿಡಿಯಲಿಕ್ಕೆ ಸತ್ಸಂಗ ಓಡಿಬಾವ್ಹಾ ಶ್ರೀರಂಗ ಮಾಡಿ ಭವಭಯಭಂಗ ನೋಡುವ ಕೃಪಾಂಗ3 ಎಲ್ಲಕ್ಕೆ ಶಿಖಾಮಣಿ ಸುಲಭ ಈ ಸಾಧನಿ ಸೊಲ್ಲಿಗೆ ಮುಟ್ಟಿದ ಪ್ರಾಣಿ ಬಲ್ಲವ ಸುಜ್ಞಾನಿ 4 ಪಿಡಿದು ಸತ್ಸಂಗತಿ ಕಡಿದು ಹೋಯಿತು ಭ್ರಾಂತಿ ಪಡೆದ ಸುಖ ವಿಶ್ರಾಂತಿ ಮೂಢ ಮಹಿಪತಿ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮಾಡಿದಫಲವನುಭವಿಸಣ್ಣ ನೀ ಒಲ್ಲೆಂದರೆ ಬೆನ್ನ ಬಿಡದಣ್ಣ ದೊರಕುವುದ್ಹ್ಯಾಗಣ್ಣ ಪ ಜತೆಯಿಲ್ಲದೆ ನೀ ಮೊದಲ್ಹುಟ್ಟಿ ಮತ್ತು ಜತೆಯಿಲ್ಲದ್ಹೋಗ್ವುದು ಮರೆತುಬಿಟ್ಟಿ ಸತಿಸುತರ್ಹಿತರೆಂದು ಮತಿಗೆಟ್ಟ ಮಂದ ಮತಿಯಾಗಿ ಸಂಸಾರ ತಿಳಿದಿ ಗಟ್ಟಿ ಗತಿಸುವ ದೇಹದ ಸ್ಥಿತಿ ವಿಚಾರಿಸದೆ ಸತತ ಒದ್ದಾಡಿದಸತ್ಯದೊಳಗೆ ಭ್ರಷ್ಟ 1 ಗಳಿಸಲು ತುಸು ಬೇಸರಲ್ಲದ್ಹೋಗಿ ಕೇಳಿದಳುಕಿ ಅಳುಕಿ ಜನರಿಗೆ ಬಾಗಿ ಅಳಿದುಪೋಗುವ ಕಾಸು ಹಣಕಾಗಿ ಕೆಟ್ಟು ಬಳಲಿಬಳಲಿ ದುಡಿದೆಲೆ ಗೂಗಿ ನಳಿನಾಕ್ಷನ ಪೂಜೆ ಒಮ್ಮೆ ಮಾಡೆನ್ನಲು ಅಳುಮೋರೆ ಮಾಡಿದಿ ತಲೆಬಾಗಿ 2 ಕೆಟ್ಟ ಕೃತ್ಯದಿ ನಿನ್ನ ವಯ ಕಳೆದಿ ಮನೆ ಗಿಷ್ಟಮಿತ್ರರು ಬರಲತಿ ನೊಂದಿ ಕೊಟ್ಟದ್ದು ಕೊಡಲಿಕ್ಕೆ ಸಿಟ್ಟಿಗೆದ್ದಿ ನೀ ಶಿಷ್ಟರ ಸಂಗಕೆ ದೂರಾದಿ ಇಷ್ಟದಾಯಕ ನಮ್ಮ ಶಿಷ್ಟ ಶ್ರೀರಾಮನಡಿ ಗಟ್ಟ್ಯಾಗಿ ಭಜಿಸದೆ ಕೆಟ್ಟ್ಹೋದಿ 3
--------------
ರಾಮದಾಸರು
ಮಾಡಿದಿ ಸಂಧ್ಯೆಯನು ವೆಂಕಟಕೃಷ್ಣಾಮಾಡಿದಿ ಸಂಧ್ಯೆಯನು ಕೂಡುತಾಸನದೊಳುಜೋಡು ಬಾಲಕರಿಬ್ಬರಾಡುತ ಮನೆಯೊಳು ಪ ತಂಬಿಗಿ ಥಾಲಿಯ ತುಂಬಿಸಿಟ್ಟಿದ ಗೋಪಿಡಿಂಬುರಿಬ್ಬರು ಆಪಸ್ತಂಭ ಶಾಕದಲಿ 1 ಕೇಶವ ತುದಿ ಮೊದಲೀಸು ಸಂಧ್ಯೆಯ ಮಾಡಿಕೂಸುಗಳು ಭಯತರಾಸು ಭುಂಜಿಸಿರಿ 2 ಶೇಷ ಮಂಚದಿ ರಮಾ ಹಾಸಿಯೊಳ್ಹಾಸಿರೆತೋಷದಿ ಮಲಗಿಂದಿರೇಶ ಸುಳಿಸಿರಿ 3
--------------
ಇಂದಿರೇಶರು
ಮಾತನಾಡೈ ಮನ್ನಾರಿ ಕೃಷ್ಣ ಮಾತನಾಡೈ ಪ ದಾತನು ನೀನೆಂದು ಬಯಸಿ ಬಂದೆನು ಮಾತನಾಡೈಅ.ಪ. ಸಿರಿ ಪೊಂಗೊಳಲೊ ಜಗ-| ದಾಧಾರದ ನಿಜ ಹೊಳೆಯೋ || ಪಾದದ ಪೊಂಗೆಜ್ಜೆ ಥಳಿಲೊ ಸರ್ವ | ವೇದಗಳರಸುವ ಕಲ್ಪಕ ಸೆಳಲೊ 1 ಕಸ್ತೂರಿ ತಿಲಕದ ಮದವೊ ಮ- ಕುಟ ಮಸ್ತಕದಿ ಝಗಝಗವೊ || ವಿಸ್ತರದಿ ಪೊತ್ತ ಜಗವೊ ಪರ- | ವಸ್ತುವು ನಂದ ಯಶೋದೆಯ ಮಗುವೊ 2 ನವನೀತವ ಪಿಡಿದ ಕರವೊ ನವ-| ನವ ಮೋಹನ ಶೃಂಗಾರವೊ || ಅವತರಿಸಿದ ಸುರತರುವೊ ಶತ- ರವಿಯಂದದಿ ಉಂಗುರವಿಟ್ಟ ಭರವೊ 3 ಆನಂದ ಜ್ಞಾನದ ಹೃದವೊ ಶುಭ-| ಮಾನವರಿಗೆ ಬಲು ಮೃದುವೊ || ಆನನ ಛವಿಯೊಳು ಮಿದುವೊ ಪಾಪ-| ಪಾವಕ ಪದವೊ 4 ತ್ರಿಜಗದಧಿಕ ಪಾವನನೊ ಪಂ-| ಕಜ ನೇತ್ರೆಯ ನಾಯಕನೊ || ಅಜಭವಾದಿಗಳ ಜನಕನೊ ನಮ್ಮ |ವಿಜಯವಿಠ್ಠಲ ಯದುಕುಮಾರಕನೊ 5
--------------
ವಿಜಯದಾಸ
ಮಾತನ್ನಾಡೊ ಮನ್ನಾರಿ ಕೃಷ್ಣ ಮಾತನ್ನಾಡೊಧಾತನ ಪಿತ ಸಂಪ್ರೀತಿಲಿ ಮುದ್ದು ಮಾತನ್ನಾಡೊ ಪ. ಅಕ್ಷಯ ಪದಕ ಮುಕುಟಲಕ್ಷ ಸೂರ್ಯರ ಬೆಳಕಿಲೆಲಕ್ಷ ಸೂರ್ಯರ ಬೆಳಕಿಲೆ ಹೊಳೆವೊ ವಸ್ತಲಕ್ಷ್ಮಿನರಸಿಂಹಗೆ ಉಡುಗೊರೆ 1 ಚಂದ್ರ ನಂತೊಪ್ಪುವ ಚಂದ್ರಗಾವಿ ಸೀರೆತಂದೆ ಮಾಣಿಕದಾಭರಣವ ತಂದೆ ಮಾಣಿಕದಾಭರಣ ಕುಂದಣದ ಕುಪ್ಪುಸವ ಇಂದಿರಾದೇವಿಗೆ ಉಡುಗೊರೆ2 ವರಗಿರಿವಾಸಗೆ ತುರಗ ತಾಪತಿ ಭೇರಿದೊರೆಗಳು ತಂದ ಉಚಿತವ ದೊರೆಗಳು ತಂದ ಉಚಿತವ ಭಕ್ತಿಯಿಂದ ಕರಗಳ ಜೋಡಿಸುತ ಕರುಣಿಗೆ ಉಡುಗೊರೆ 3 ಜಾಂಬೂನದಾಂಬರ ನಿನಗೆ ತಂದೆವು ಸ್ವಾಮಿಜಾಂಬವತೀಶಗೆ ಉಡುಗೊರೆಜಾಂಬವತೀಶಗೆ ಉಡುಗೊರೆ ನಮಗಿನ್ನುಕಂಡು ಬರುವ ಭೂವೈಕುಂಠಾಧೀಶಗೆ ಉಡುಗೊರೆ4 ಅನಘ್ರ್ಯವಾಗಿದ್ದ ಅನಂತ ವಸ್ತ್ರಾಭರಣಚಂದಾಗಿ ನಾವು ತಂದೇವ ಚಂದಾಗಿ ನಾವು ತಂದೇವ ರಮಿಯರಸುನಿನ್ನ ಬಳಗಕ್ಕೆಲ್ಲ ಉಡುಗೊರೆ 5
--------------
ಗಲಗಲಿಅವ್ವನವರು
ಮಾತಿನೊಳು ಕಡುಜಾಣ ನೀತಿಯೆಂಬುದ ಕಾಣ ಪ್ರೀತಿಯಿಲ್ಲದ ಪ್ರಾಣನಾಥನಮ್ಮ ಕಪಿಜನಗಳೊಡನಾಡಿ ಚಪಲಚಿತ್ತನುಮಾದ ಕೃಪೆಯಿಲ್ಲವೆಳ್ಳನಿತು ಕೃಪಣನಕಟ ಸ್ತ್ರೀಹತ್ಯ ನರಹತ್ಯ ಬ್ರಹ್ಮಹತ್ಯವಗೈದ ಸಾಹಸಿಯೆದೇನೆಂಬೆ ಘನನಿತಂಬೆ ಪಕ್ಷಪಾತಿಗಳೊಳಗೆ ಈಕ್ಷಿಸಲ್ ಧರೆಯೊಳಗೆ ದಕ್ಷನೀತಗೆ ಸರಿಯೆ ಪೇಳೆ ಸಖಿಯೆ ಶರವೊಂದು ನುಡಿಯೊಂದರಿಂದ ನಲಿವ ತಿರುಕ ಹಾರುವರೊಡನೆ ಚರಿಸುತಿರುವ ಪರಮಸಾತ್ವಿಕ ಮೂರ್ತಿಯೆಂದು ನುಡಿವ ವರಶೇಷಗಿರಿವಾಸ ನೆಂದುಮೆರೆವ
--------------
ನಂಜನಗೂಡು ತಿರುಮಲಾಂಬಾ
ಮಾತೆಂದೆನಬ್ಯಾಡಿ ಧ್ರುವ ಎಲ್ಲಿ ನೋಡಿದರೆ ತಾ ಅಲ್ಲಿಗಲ್ಲಿಗಿಹ್ಯ ಎಲ್ಲ ಕಡೆಯಲ್ಲೇಕೋಮಯವೊ ಸುಲ್ಲಭವಾಗಿಹ್ಯಬಲ್ಲ ಜ್ಞಾನಿಗೆ ಭಾಸುತಿಹ್ಯ ಫುಲ್ಲಲೋಚನ ಪ್ರಾಣದೊಲ್ಲಭನು 1 ಎತ್ತ ನೋಡಿದರತ್ತ ಸುತ್ತಸುತ್ತಲಿಹ್ಯ ನಿತ್ಯವಾಗಿಹ್ಯ ಹೃತ್ಕಮಲದಲಿ ತುತ್ತಾಯಿತ ತಾ ಮಾಡಿ ನಿತ್ಯಸಲಹುವ ಹತ್ತಿಲೆ ಹೊಳೆಯುತ ಚಿತ್ತದಲಿ 2 ಹಿಂದೆನೋಡಿದಿರಿಹ ಮುಂದೇನೋಡಿದಿರಿಹ್ಯ ಸಂಧಿಸಿಹನು ಅಂತರಾತ್ಮದಲಿ ತಂದೆ ತಾಯಿಯು ಬಳಗಾಗಿಹ್ಯ ತಾನೆ ಎಂದಿಗೆ ಅಗಲದೆ ಅನುದಿನದಲಿ 3 ಜನವನದೊಳಗಿಹ್ಯ ಜನಾರ್ಧನ ತಾನು ತನುಮನದೊಳು ಥಳಥಳಸುತಲಿ ಅನುಮಾನವಿಲ್ಲದೆ ಅನಿಮಿಷದಲಿ ನೋಡಿ ಆಣುರೇಣುದಲಿ ಪರಿಪೂರ್ಣನು 4 ಸಾರಿಚಲ್ಲೆದ ಪರಬ್ರಹ್ಮಸ್ವರೂಪವಿದು ಸೂರ್ಯಾಡಬಹುದು ಸುಜ್ಞಾನಿಗಳು ತೋರದು ಎಂದಿಗೆ ಗುರುಕೃಪೆಯಿಲ್ಲದೆ ತರಳಮಹಿಪತಿ ವಸ್ತುಮಯವಿದು 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು