ಒಟ್ಟು 7530 ಕಡೆಗಳಲ್ಲಿ , 133 ದಾಸರು , 4766 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮದ ಮತ್ಸರವ ಬಿಡದನಕಾ ವಿಧ ವಿಧದ ಸಾಧನವ ಮಾಡಲೇನೋ ಪ ವೇದ ಶಾಸ್ತ್ರಗಳೋದಲೇನು ಗಂಗಾ ಗೋದಾವರಿಯಲಿ ಸ್ನಾನವ ಮಾಡಲೇನು ಸಾಧು ಕರ್ಮವಾಚರಿಸೇನು ವಿಷ್ಣು ಪಾದದಿ ಪಿಂಡ ದಾನವ ಮಾಡಲೇನು 1 ಸನ್ಯಾಸಾಶ್ರಮ ಧರಿಸಲೇನೂ ಗೋಹಿ ರಣ್ಯಾದಿಗಳಲಿ ಮಮತೆ ಬಿಟ್ಟರೇನು ಪುಣ್ಯ ಕ್ಷೇತ್ರಕೆ ಪೋಗಲೇನು ಅನ್ನ ಕನ್ಯಾದಿ ದ್ರವ್ಯದಾನವ ಮಾಡಲೇನು 2 ಪಾಪ ಕರ್ಮವ ತೊರೆದರೇನೊ ಲಕ್ಷ ದೀಪಾರಾಧನೆ ದಿನ ದಿನ ಮಾಡಲೇನು ಶಾಪಾನುಗ್ರಹ ಶಕ್ತಿ ಇದ್ದೇನು ಪೂಜಾ ಸೋಪಸ್ಕರ ಬಹುತರವಿರಲೇನು 3 ಶ್ವಾಸ ನಿರೋಧಿಸಲೇನು ಪಕ್ಷ ಮಾಸೋಕ್ತ ಧರ್ಮ ಕರ್ಮವ ಮಾಡಲೇನು ಆಸನ ಜಯ ಸಂಪಾದಿಸಲೇನು ಉಪ ವಾಸ ವ್ರತದಿ ದೇಹ ಬಳಲಿಸಲೇನು 4 ಜ್ಯೋತಿಷ್ಟೋಮ ಮಾಡಲೇನು ಲಕ್ಷ ಶ್ರೀ ತುಳಸಿ ಅರ್ಪಿಸಲೇನು ಭೂತದಯವು ಇದ್ದರೇನು ಜಗ ನ್ನಾಥ ವಿಠಲನಂಘ್ರಿ ಪೊಂದಿದ್ದವರೊಳು 5
--------------
ಜಗನ್ನಾಥದಾಸರು
ಮದನ ಮೋಹನ ಕೃಷ್ಣ ಉದಧಿ ಶಯನ ಹರಿ ಮಾಧವನ ಪ ಮದಗಜಗಮನೆ ಶ್ರೀ ಪದುಮಲೋಚನೆ ಪ್ರಿಯ ಅದ್ಭುತ ಮಹಿಮ ಶ್ರೀ ಅಚ್ಚುತನ ಅ.ಪ ಇಂದಿರೆ ರಮಣ ಗೋವಿಂದನ ಮಹಿಮೆಯ ಒಂದೆ ಮನದಿ ಸ್ತುತಿಸುವ ಜನರ ಕುಂದೆಣಿಸದೆ ಮುಚುಕುಂದ ವರದ ಹೃನ್ಮಂದಿರದಲಿ ನಲಿದಾಡುವನು 1 ಗೋಕುಲಪತಿ ಜಗದ್ವ್ಯಾಪಕ ಹರಿ ಎಂದ- ನೇಕ ವಿಧದಿ ಸ್ತುತಿಸುವ ಜನರ ಶೋಕಗಳಳಿದು ಏಕಾಂತ ಭಕ್ತರೊಳಿಟ್ಟು ತೋಕನಂದದಿ ಪರಿಪಾಲಿಸುವ 2 ಪದ್ಮನಾಭನ ಪಾದಪದ್ಮವ ಸ್ಮರಿಸುತ ಶುದ್ಧಮನದಿ ಪಾಡಿ ಪೊಗಳುವರಾ ಸಿದ್ಧಾರ್ಥನಾಮ ವತ್ಸರದಲಿ ಸುಜನರ ಹೃದ್ರೋಗವಳಿಯುತ ಸಲಹುವನೂ 3 ಚಿಂತೆ ಎಲ್ಲವ ಬಿಟ್ಟೀ ವತ್ಸರದಲಿ ಲಕ್ಷ್ಮೀ- ಕಾಂತನನೇಕ ವಿಧದಿ ಸ್ಮರಿಸೆ ದಂತಿವರದ ಅನಂತ ಮಹಿಮ ತನ್ನ ಕಾಂತೆ ಸಹಿತ ಒಲಯುವನವರ್ಗೆ4 ಕಮಲಸಂಭವಪಿತ ನಮಿಸಿ ಸ್ತುತಿಸುವೆನು ಕಮಲ ಪತ್ರಾಕ್ಷಹರಿ ಕರುಣಾನಿಧೆ ಕಮಲನಾಭ ವಿಠ್ಠಲ ವಿಠ್ಠಲ ರಕ್ಷಿಸೆನೆ ಹೃ- ತ್ಕಮಲದಿ ಪೊಳೆಯುವ ಸುಜನರಿಗೆ5
--------------
ನಿಡಗುರುಕಿ ಜೀವೂಬಾಯಿ
ಮದನನಗೇಹ ಸುಖ ಮರಣ ಸುಖಮದನನ ತೊತ್ತಿನ ಮಕ್ಕಳಾಗ ಬೇಡಿರೋ ಪ ಸ್ತ್ರೀಯರೂಪವ ಕಂಡು ಸೈರಿಸದೆ ಕಳಕಳಿಸಿಸುಯ್ಗರೆದು ಶರೀರವು ಬೆವರೇರುತಕೈಕಾಲ್ಗಳಿಗೆ ನಡುಕ ಹುಟ್ಟಿ ಕಾಮ ಶರಕೆ ಮೈಯನಿತ್ತುಕೊಯಿಸಿಕೊಳ್ಳುವ ಕೊರಳ ನಿತ್ಯದಿ ಕಷ್ಟದಿ ಸುಖವು 1 ಮುಖ ಕಾಂತಿಯ ನೋಡಿ ಮೋಹದಲಿ ಮುಳುಗಾಡಿಸುಖವೆಂದು ಬಗೆಯುತ ಸಂಗಯೋಗದಕಕುಲಾತಿಪಡುತಲಿ ಕೆಡೆದುತಾಪದಿ ಹೊರಳಿಬಕಧ್ಯಾನದಲಿ ತನ್ನ ನಿಜಸುಖವ ಮರೆವ 2 ಪತಿ ಚಿದಾನಂದ ಕಾಣದ ಸುಖವು3
--------------
ಚಿದಾನಂದ ಅವಧೂತರು
ಮಂದಮತಿಯೇ ಮಾನವಾ ಪ ಹಿಂದೊ ಮುಂದೊ ಎಂದು ಯೋಚಿಸದಿರು ಅ.ಪ ಸತತವು ಲಕ್ಷ್ಮೀಪತಿಯ ಭಜಿಸು 1 ಭಾವದಿ ತಿಳಿದತಿಭಕ್ತಿಯೊಳಿರು 2 ಈ ಚರಾಚರಕು ಗೋಚರಿಸುವ ಕಂಜ- ಲೋಚನನೆಂದು ನಿನ್ನ ನಾಚಿಕೆ ಬಿಡು 3 ಕೊರಳು ನೋಯುವಂತೆ ಕೂಗುತಲಿರು 4 ಪರದಲಿ ಮುಕ್ತಿಯು ಇಹದಲಿ ಸೌಖ್ಯವು ಗುರುರಾಮವಿಠಲನೆ ಕರುಣಿಸುವನು 5
--------------
ಗುರುರಾಮವಿಠಲ
ಮಂದರೋದ್ಧರಾ-ಬಂದು ಕಣ್ಣಮುಂದೆ ನಿಲ್ಲೋ ಪ ಬಡವರೊಡೆಯನೆಂದು ನಿನ್ನ ಅಡಿಯ ಬಿಡದೆ ನಂಬಿದೆನೋ ಕಡುದಯಾನಿಧೆ ಬಡಕುಚೇಲನ ಪಿಡಿಯವಲಿಗೆ ಒಲಿದು ಪೊರೆದೆ1 ಸರ್ವಸಾರಭೋಕ್ತ ನೀನೆ ತೋರ್ವುದಿಲ್ಲ ಕೊಡಲು ನಿನಗೆ ಸರ್ವದೇವಸಾರ್ವಭೌಮನೀ ನೋರ್ವ ವ್ಯಾಪ್ತನಿರ್ಲಿಪ್ತ 2 ಪ್ರಣತಕಾಮದನೆಂದು ಅಂದು ಅಣುಗಧೃವನಾಕ್ಷಣದಿ ದಣಿಸಲಾಗದೋ ದೀನರಕ್ಷಕ 3 ಮುಕುತರೊಡೆಯ ಭಕುತವತ್ಸಲ ಯುಕುತಿತೋರದೊ ನಿನ್ನ ಧ್ಯಾನಕೇ ಶಕುತಿಯಿತ್ತು ಸಲಹೊ ಎನ್ನನು ಸಕಲಲೋಕೋದ್ಧ್ದಾರ ಧೀರ 4 ಎಲ್ಲಜನರ ಪೊರೆಯಲು ಶ್ರೀನಲ್ಲ ನಿಂತೆಯೊ ಶೇಷಶೈಲದಿ ವಲ್ಲಭಾ ಶ್ರೀ ವೆಂಕಟೇಶ ನೀ- ನೆಲ್ಲಬಲ್ಲೆನ್ನ ಸೊಲ್ಲ ಲಾಲಿಸೊ 5
--------------
ಉರಗಾದ್ರಿವಾಸವಿಠಲದಾಸರು
ಮಂದಾನ ಬಾಧೆಗೆ ಮನಿ ಮಂದಿ ನಾವು ಸಹಿತ ಬೆಂದು ಬೇಸರ ಗೊಂಡು ಬಳಲು ತೇವು ಹರಿ ತಂದಿ ಬೇಗದಿ ಬಂದು ದಯಮಾಡಿ ಸಲಹೋ ಗೋವಿಂದಾ ಕೃಪಾಳು ಶ್ರೀ ಕರುಣಾಂಬುಧಿಯೆ ಪ ಕೃಷ್ಣಾ ರೌದ್ರಾಂತಕನ ಕ್ರೂರದೃಷ್ಟಿ ಮುಖ ಹಲಾ ತ್ಕøಷ್ಠವಾಗಿ ಎನ್ನ ಕಾಡುತಿರಲು ನಿಷ್ಠೆ ನೇಮಗಳೆಲ್ಲ ಜರಿದು ಮತಿ ಭೃಷ್ಟನಾಗಿ ಕಷ್ಟಕ್ಕೆ ಒಳಗಾದೆ ಕಡೆಹಾಯಿಸೊ ಧೊರಿಯೆ ಇಷ್ಟದಾಯಕ ನಿನ್ನಲ್ಲಿನ ಮಾಯವೆ ಆಡುದು (ಅಹುದು) ಕೃಷ್ಣಮೂರುತಿ ಬೇಗ ಕೈಹಿಡಿ ಇನ್ನಾ ಸೃಷ್ಟಿಗೊಡೆಯ ಶ್ರೀನಿವಾಸಕೇಶವ ಎನ್ನ ಕಷ್ಟವು ಪರಿಹರಿಸಿ ಕಾಯೋ ಸಂಪೂರ್ಣ 1 ಸೂರ್ಯಾನ ಪುತ್ರನ ಕಾರ್ಯಾವು ಎಮ್ಮ ಮೇಲೆ ಭಾರಿ ಕಾಣುತಲಿದೆ ಪರಮಾತ್ಮನೆ ------- ಘಟಗಳಿಗುಪದ್ರಕಾರನಾಗಿ ವ್ಯಾಧಿ ಖಂಡಿಸೋ ವೇಳೆ ಆರು ಈ ಗ್ರಹಕರ್ತರಾಗಿರಲು ದೇವರಿನ್ನು ಧಾರುಣಿಯೊಳು ಹರಿ ದನುಜಾಂತಕಾ ವಾರಿಜಾನಾಭಾ ಶ್ರೀ ವೈದೇಹಿ ಪತಿರಾಮಾ ಸಾರನೆ ಗಡ ಬಂದು ಸಲಹೋ ತಂದೆ 2 ಗರ್ಭಾದಿ ಮುದನಿಂ ಸುಖಭ್ರೂಣ ಭಯವೆಂಬ ದೆಬ್ಬಿಗೆ ತಾಳದೆ ತಲ್ಲಣಿಸುವೆ ಅರ್ಭಕ ನಾನೊಂದು ಅರಿತು ಅರಿಯೆ ದೇವ ಸಭ್ಯಾ ನೀ ನಂದ ಸರ್ವೋತ್ತುಮಾ ನಿರ್ಭಯನನು ಮಾಡಿ ನೀನೆ ರಕ್ಷಿಸದಿರೆ ದಾರು ಮನಸು----ಳಗೆ ದರ್ಭಶಯನ ರಾಮನ-----'ಹೊನ್ನ ವಿಠ್ಠಲ’ ಸಾಕಾರ ನೀ ಎನ್ನ ತ್ವರದಿ ಪೊರೆಯೊ 3
--------------
ಹೆನ್ನೆರಂಗದಾಸರು
ಮಂದಾರ ತರುವೇ | ನಾ ಬೇಡುವೇ | ಮಂದಾರ ತರುವೇ ಪ ಇಂದು ಮೌಳಿನುತ | ಸಂದರುಶನ ತವ ಅ.ಪ. ಸಾರಥಿ ಪದ ಬಿಸಜಯುಗಳದಿ ನಿಜಗತಿಯ ಕೊಡುತ ನಡೆಸು ಸುಪಥದಿ 1 ದಶರಥ ಹರಿ ವಚೋನಯ | ಅಸುಪತಿಪರಿಕೃಷ್ಣ ವಚೋನಯಯಶದಿ ಮೆರೆದು ಮುಂಬರುವ ಅಸುಪತಿ ವಸುದೆಜೆರಮಣನ ಯಶವ ನುಡಿಸು ಯತಿ 2 ಭವ ತಾರಕ ನಿರುತಿಹೆ ಮುದಮುನಿ ಮತೋದ್ಧಾರಕ 3
--------------
ಗುರುಗೋವಿಂದವಿಠಲರು
ಮಂದಾಸಲ ರಗಳೆ ರಾಮ ಪದಾಂಬುಜ ಭೃಂಗಗೆ ಜಯ ಜಯ ತಾಮಸ ಕುರುಕುಲ ಧ್ವಂಸಕ ಜಯ ಜಯ ಶ್ರೀ ಮತ್ಪೂರ್ಣ ಪ್ರಜ್ಞಗೆ ಜಯ ಜಯ 1 ವಾಸುದೇವ ಸುನಾಮಕ ಜಯ ಜಯ ದೋಷ ಜ್ಞಾನ ವಿನಾಶಕ ಜಯ ಜಯ ಸೂರ್ಯ ವ್ಯಾಸ ಸುಭೋಧೆಯ ದರ್ಪಣ ಜಯ ಜಯ 2 ಶುಭಗುಣಲಕ್ಷಣ ಶೋಭಿತ ಜಯ ಜಯ ಭವ ಮೋಚಕ ಜಯ ಜಯ ಇಭವರದಾಜ್ಞಾಧಾರಕ ಜಯ ಜಯ ವಿಭುಧ ಸುಖಾಂಬುಧಿ ಸೋಮನೆ ಜಯ ಜಯ3 ನಿತ್ಯ ಸದಾಗಮ ಕೋಶಗೆ ಜಯ ಜಯ ಸತ್ಯವತೀಸುತ ಪ್ರೀಯಗೆ ಜಯ ಜಯ ಸತ್ಯಾಖ್ಯಾತ ಸುಮಿತ್ರಗೆ ಜಯ ಜಯ ಸುರತರು ಜಯ ಜಯ 4 ಅಚ್ಚುತ ಪ್ರೇಕ್ಷರ ಶಿಷ್ಯಗೆ ಜಯ ಜಯ ಸ್ವಚ್ಚಗುಣಾರ್ಣವ ಋಜುಪತಿ ಜಯ ಜಯ ಕೆಚ್ಚೆದೆ ವೀರಾಗ್ರೇಸಗೆ ಜಯ ಜಯ ಪಾವಕ ಜಯ ಜಯ 5 ಶೃತಿತತಿ ವಿಮಲ ಸುಭೋದಕ ಜಯ ಜಯ ರತಿಪತಿ ಪಿತವರ ದೂತಗೆ ಜಯ ಜಯ ಕ್ಷಿತಿಧರ ದ್ವಿಜಶಿವವಂದಿತ ಜಯ ಜಯ 6 “ಶ್ರೀ ಕೃಷ್ಣವಿಠಲ” ಸದಾರತ ಜಯ ಜಯ ಲೋಕ ಹಿತಪ್ರದ ನಿಜಗುಣ ಜಯ ಜಯ ಶ್ರೀಕರ ಶುಭಕರ ಜಯಕರ ಜಯ ಜಯ ಆಕಮಲಾಸುತ ರಯೀಪತಿ ಜಯ ಜಯ 7
--------------
ಕೃಷ್ಣವಿಠಲದಾಸರು
ಮಧುಪುರದ ವಿಘ್ನೇಶ ದೇವ ಜಗದೀಶ ಫ ಪುರುಷಪಿತನಮಿತ ಕಮಲ ಗಿರಿಜಾತೆಯಣುಗಾದಿತ್ಯ ಕೋಟಿ ಪ್ರಕಾಶ ಕರಿವದನ ಕರುಣನಿಧಿ ಸಮುದ್ರ ಬಹುಕ್ಷಿಪ್ರ 1 ಭರದಿಂದ ರಕ್ಕಸ ಪುರವನು ದಹನಮಾಡೆ ಹರ ಮೊದಲು ನಿಮ್ಮನು ಅರ್ಚಿಸಿ ಮೆಚ್ಚಿಸಿ ಹರಿ ವಿರಂಚಾದಿಗಳೆಲ್ಲ ಜಯ ಜಯವೆನಲು ವರವಿತ್ತು ಮೆರೆದೆ ಗಣನಾಥ ವಿಖ್ಯಾತ 2 ಅರರೆ ನಿಮ್ಮ ಮಹಿಮೆಯನು ಪೊಗಳಲೆನಗಳವಲ್ಲ ಧರಣಿಯ ಪೊತ್ತಿಹ ಶೇಷಗರಿದು ಹರನಸುಕುಮಾರ ಸಕಲಾಗಮಕೆ ಸಾಕಾರ ಧರೆಯೋಳ್ ಮಧುಪರ ವಿಘ್ನೇಶ 3
--------------
ಕವಿ ಪರಮದೇವದಾಸರು
ಮಧುರಾಪುರದಿಂದ ಎಂದಿಗೆ ಬರುವಿಯೊ ಕೃಷ್ಣಾ ಮಧುರಾಪುರದ ಬಾಲೆಯರು ಬಲು ಮೋಸಗಾರರು ಪ. ಗೋಕುಲದ ನಾರಿಯರು ನಾವು ಏಕವಾಗಿ ಬರುವೆವು ಅನೇಕ ಬಗಿಯ ಸುಖದಿಂದಾ ಗೋಪಿಯ ತಂದಾ ಅ.ಪ. ಯೆಂದಿಗೆ ನಿನ್ನ ಮುಖಾರವಿಂದವ ನೋಡುವೆವೋ ಅಂದಿಗೆ ಸುಖವೋ ಮಾಧವ ಮಂದರೊದ್ಧರನೆ ಮಾವ ಕಂಸನ ಕೊಂದು ಸಿಂಧುರನಯನನೆ ನೀ ಬೇಗ ಬರಬೇಕೆಂದು ನಾವು ಬೇಡುವೆವು ಬಂದು 1 ಮಧುವನದಲ್ಲಿ ನಿನ್ನಾ ಮಧುರ ಸ್ವರವನ್ನು ಕೇಳಿ ಮದನ ತಾಪಕೆಮ್ಮ ಮರುಳು ಮಾಡಿಸಿ ಮುರಲಿ ನುಡಿಸಿ ಆಧರಾಮೃತ ಪಾನವನ್ನೇ ಮಾಡಿಸಿದ ನಿನ್ನ ಮಹಿಮೆಯನ್ನು ತೋರಿದಿ2 ಯೆಷ್ಟು ಮೊರೆ ಪೊಕ್ಕಾರು ಒಂದಿಷ್ಟು ದಯವ್ಯಾಕೆ ಬಾರದೊ ನಿನ್ನ ಬಿಟ್ಟು ಒಂದರಘಳಿಗಿರಲಾರೆವು ನಾನು ಪ್ರಾಣನಾಯಕನೇ ಎನ್ನ ಪ್ರಾಣದೊಲ್ಲಭನೆ ಕೇಳೊ ಸರ್ವಪ್ರಾಣಿಗಳಿಗೆ ಪ್ರೇರಕನೆ ನಮ್ಮ ಕಾಳಿಮರ್ಧನ ಕೃಷ್ಣನು 3
--------------
ಕಳಸದ ಸುಂದರಮ್ಮ
ಮಧುರೆಗೆ ಪೋಗಬ್ಯಾಡಾ ರಂಗಯ್ಯ ರಂಗಾ ಪ. ಮಧುರೆಗೆ ಪೋದಾರೆ ಚದುರಿ ನಾರಿಯರು ಬೆದರುತಲಿರುವೆವು ಹರಿಯೇ ಎನ್ನಯ ದೊರೆಯೇ ಅ.ಪ. ಮಧುರಾಪುರದಿಂದ ಅಕ್ರೂರ ಕರಿಲಿಕ್ಕೆ ಬಂದಾನು ಮಲ್ಲನ ಕೊಂದನು ಕೃಷ್ಣ ರಜಕನ ಕೊಂದನು ರಕ್ತಾಲಂಕೃತನಾಗಿ ಕುಬಜಿಯಿಂದ ಗಂಧವಾ ಕೊಂಡನು ಡೊಂಕನು ತಿದ್ದಿದನು 1 ಚಾಣಿಕರ ಮುಷ್ಟಿಕರ ಕೂಡಾ ಮುಷ್ಟಿ ಯುದ್ಧವ ಮಾಡಿ ಕುಟಿಲರ ಕೊಂದು ರಂಗಮಂಟಪಕೆ ಬಂದು ನಾನಾಭರರಣ ಭೂಷಿತನಾಗಿ ರಾಜ ಬೀದಿಯೊಳು ಸಾಗಿ 2 ಮಧುರಾಪುರದ ನಾರಿಯರು ಬಲು ಚೆಲುವಿಯರು ನಿನ್ನನೆ ಮರುಳು ಮಾಡುವೋರು ಯಮ್ಮನಗಲಿಸುವೋರು ಇವರು 3 ಕನಿಕರವಿಲ್ಲವೆ ನಾವು ನಿನ್ನನು ಬಿಟ್ಟು ವೊಂದು ನಿಮಿಷವಾದರು ಕಾಲಹ್ಯಾಗ ಕಳಿಯೋಣ ಘನ ಮಹಿಮನ ಅಧರಾಮೃತ ಪರವಶವಾದೆವು 4 ಮಲ್ಲಯುದ್ಧವ ಮಾಡಿ ಮಾವ ಕಂಸನ ಕೊಂದು ಉಗ್ರಸೇನರಿಗೆ ಅನುಗ್ರಹವ ಮಾಡಿ ಶೀಘ್ರದಿ ಬರಬೇಕೆಂದು ಬೇಡುವೆ ನಾ ಬಂದು ಕಾಳಿಮರ್ಧನಕೃಷ್ಣ ನಿನಗಿಂದು 5
--------------
ಕಳಸದ ಸುಂದರಮ್ಮ
ಮಧ್ವ ಸರೋವರದ ಸ್ನಾನವ ಮಾಡಿರೊ ಬುದ್ಧಿವಂತರು ಕೇಳಿ ಇದರ ಮಹಾತ್ಮೆಯನು ಪ ತ್ರೇತಾಯುಗದಲ್ಲಿ ವರುಣತೀರ್ಥ ಕ್ಷಿತಿಯೊಳಗೆ ದ್ವಾಪರದಿ ಚಂದ್ರ ಪುಷ್ಕರಣಿ ಉ- ನ್ನತ ಕಲಿಯುಗದಲ್ಲಿ ಮಹಾ ತೀರಿಥ 1 ಸುರನದೀ ಮಿಕ್ಕಾದ ಸ್ಥಾನದಲಿ ಸೇವೆ ವಿ- ಸ್ತರವಾಗಿ ಕೊಳುತಿಪ್ಪಳು ಉಪೇಕ್ಷದಿ ಧರೆಯೊಳಗೆ ಇಲ್ಲಿ ಗುರು ಮಧ್ವಮುನಿ ಸರ್ವಾರ್ಥ ನಿರುತದಲ್ಲಿ ತೀವ್ರಗತಿ ಕೊಡುವಳೂ2 ಸಕಲ ವೇದಶಾಸ್ತ್ರ ಓದಿದವನಾದರೂ ಶಕುತಿವಂತನಾಗಿ ಇದ್ದನಾಗೆ ಸುಖ ತೀರ್ಥ ಸರೋವರದ ಸ್ನಾನ ಮಾಡದಿರಲು ಶಕಲ ಮತಿಯಲಿ ಮಹಾನರಕ ಭುಂಜಿಸುವಾ 3 ಮಜ್ಜನ ತಂದು ಕೊಡುವದು ನರಗೆ ಮಿಂದ ಫಲವೊ ಎಂದೆಂದಿಗೆ ಇಲ್ಲಿ ಬಿಡದೆ ವಾಸವಾದ ಮಂದಿಗಳ ಪುಣ್ಯ ಪ್ರತಾಪ ಎಣಿಸುವರಾರು 4 ಛೇದಿಸುವದಕೆ ಇದೇ ಸ್ನಾನವೆನ್ನಿ ಮೋದ ಮೂರುತಿ ನಮ್ಮ ವಿಜಯವಿಠ್ಠಲ ಕೃಷ್ಣ ಭೇದಾರ್ಥ ಮತಿಕೊಟ್ಟ ಭೇದವನು ತೊಲಗಿಸುವಾ5
--------------
ವಿಜಯದಾಸ
ಮಧ್ವಮತವ ಪೊಂದದವನ ಭಕುತಿಯಾತಕೆ ಪ ಊಧ್ರ್ವಪುಂಡ್ರ ತಿದ್ದದವನ ಕರ್ಮವ್ಯಾತಕೆಅ.ಪ ದಾನವನ್ನು ಮಾಡದವನ ದ್ರವ್ಯವ್ಯಾತಕೆ | ಸ್ನಾನವನ್ನು ಮಾಡದವನ ಮೌನವ್ಯಾತಕೆ | ಮಾನಿನಿಯು ಇಲ್ಲದವನ ಬದುಕು ಯಾತಕೆ | ಧ್ಯಾನವನ್ನು ಅರಿಯದವನ ಪೂಜೆ ಯಾತಕೆ 1 ವಂಶವನ್ನುದ್ಧರಿಸದಂಥ ಮಗನು ಯಾತಕೆ | ಹಿಂಸೆಯನ್ನು ಪಡಿಸುವಂಥ ಅರಸು ಯಾತಕೆ || ಸಂಸಾರವನು ಒಲ್ಲದಂಥ ಸತಿಯು ಯಾತಕೆ | ಕಂಸಾರಿಯನು ತಿಳಿಯದಂಥ ಜ್ಞಾನವ್ಯಾತಕೆ 2 ಬಂಧು ಬಳಗ ಬಿಟ್ಟು ಉಂಬ ನೆಂಟರ್ಯಾತಕೆ | ಕಂದರನ್ನು ಮಾರುತಿಪ್ಪ ತಂದೆಯಾತಕೆ || ಬಂದ ಅತಿಥಿಗನ್ನವಿಕ್ಕದ ಸದನವ್ಯಾತಕೆ | ನಿಂದೆಗಳು ಮಾಡುತಿಹನಾಚಾರವ್ಯಾತಕೆ 3 ಗುರೂಪದೇಶವಿಲ್ಲದಂಥ ಮಂತ್ರವ್ಯಾತಕೆ | ಹಿರಿಯರನ್ನು ಸಾಕದವನ ಪುಣ್ಯವ್ಯಾತಕೆ || ಚರಿಸಿ ತೀರ್ಥಯಾತ್ರೆ ಮಾಡದ ದೇಹವ್ಯಾತಕೆ | ವರ-ಪ್ರಸಾದವೀಯದಂಥ ದೇವರ್ಯಾತಕೆ4 ಏಕಾದಶಿಯ ಮಾಡದವನ ವ್ರತವು ಯಾತಕೆ | ಏಕಮನಸು ಇಲ್ಲದವನ ನಡತೆ ಯಾತಕೆ || ಸಾಕಿದವನ ಕೊಲ್ಲುವಂಥ ಭಂಟನ್ಯಾತಕೆ | ಲೋಕವಾರ್ತೆ ಬಿಡದವನ ಜಪವು ಯಾತಕೆ 5 ಭಾಷೆ ಬದ್ಧವಿಲ್ಲದವನ ಮಾತು ಯಾತಕೆ | ಕಾಸುವೀಸÀಕೆ ಬಡಿದಾಡುವ ಅನುಜರ್ಯಾತಕೆ || ಲೇಸು ಹೊಲ್ಲೆಹ ನೋಡದಂಥ ಗೆಳೆಯನ್ಯಾತಕೆ | ಆಸೆಯನ್ನು ಬಿಡದ ಸನ್ಯಾಸವ್ಯಾತಕೆ 6 ತಪ್ತ ಮುದ್ರೆಯಿಲ್ಲದವನ ಜನ್ಮವ್ಯಾತಕೆ | ಗುಪ್ತದಲ್ಲಿ ನಡೆಯದಿಪ್ಪ ದಾಸನ್ಯಾತಕೆ || ಆಪ್ತಬಂಧು ವಿಜಯವಿಠ್ಠಲನ ಶ್ರೀ ಚರಣದಿ | ಕ್ಲುಪ್ತ ಮೀರದೆ ನಡೆದ ಮೇಲೆ ನರಕವ್ಯಾತಕೆ 7
--------------
ವಿಜಯದಾಸ
ಮಧ್ವಮತವ ಪೊಂದಿ ಭಜಿಸಿರೊ | ಉದ್ಧಾರವಾಗಲು ಮಧ್ವಮತವ ಪೊಂದಿ ಭಜಿಸಿರೊ ಪ ಮಧ್ವಮತವ ಪೊಂದಿ ಭಜಿಸಿ ಶುದ್ಧ ಜ್ಞಾನ ಭಕುತಿಗಳಿಸಿ ಗೆದ್ದು ಈ ಭವಾಬ್ಧಿಯನ್ನು ಪದ್ಮನಾಭನ ಪಾದವ ತೋರೆ ಅ.ಪ. ನಾನೆ ವಾಸುದೇವನೆಂದು ಹೀನ ಪೌಂಡ್ರಕನು ತಾನು ಏನು ಗತಿಯ ಕಂಡನೆಂದು ಜ್ಞಾನದಿಂದ ತಿಳಿದು ಮುನ್ನ 1 ಹರಿಯೆ ಸರ್ವೋತ್ತಮನು | ವಿಶ್ವ ವಿರುವುದಯ್ಯ ಸತ್ಯವಾಗಿ ತಾರತಮ್ಯ ಪಂಚಭೇದ ಸ್ಥಿರವೆಂದು ಸಾರಿಪೇಳ್ವ 2 ಭಕುತಿಯಿಂದ ಸೇವಿಪ ಜನಕೆ ಮುಕುತಿಯಲ್ಲಿ ನೈಜ ಸುಖವ ಲಕುಮಿಕಾಂತನು ಪಾಲಿಪನೆಂದು ಯುಕುತವಾಗಿ ಪ್ರಕಟಿಸಿದಂತ 3
--------------
ಲಕ್ಷ್ಮೀನಾರಯಣರಾಯರು
ಮಧ್ವಮುನಿಯೇ ಎನ್ನ ಹೃತ್ಕುಮುದ ಚಂದ್ರ ಪ ಅದ್ವೈತಮತಾರಣ್ಯ ದಹನ ಗುಣಸಾಂದ್ರ ಅ.ಪ. ನೊಂದೆ ಎಂಭತ್ನಾಲ್ಕು ಲಕ್ಷಯೋನಿಗಳಲ್ಲಿ ಒಂದೇ ಪ್ರಕಾರ ಸಂಚgಣೆಯಿಂದ ಒಂದೊಂದು ಕರ್ಮಗಳನರಸಿ ನೋಡಲು ಅದ- ರಿಂದ ಭವಾಬ್ಧಿಗೆ ಬಂದುಪಾಯವ ಕಾಣೆ 1 ನೀರು ಚಳಪಳಕಾಸಿ ಆರಲಿಟ್ಟು ಹೆಪ್ಪು ನೀರಿನಿಂದಲಿ ಕೊಡಲು ಬಪ್ಪುದೇನೊ ಮಾರುತೀ ನಿನ್ನ ಕೃಪೆ ಪಡೆಯದಲೆ ಉಳಿದವರ ಕಾರುಣ್ಯವಾಗಲು ಮೋಕ್ಷಸಾಧನವಿಲ್ಲ2 ಹರಿಸಿರಿಗೆ ಎರಗುವ ಸತ್ವ ಶರೀರನೆ ನಿರುತ ಎನ್ನೊಳಗಿಪ್ಪ ಮೂಲಗುರುವೆ ನೆರೆ ನಂಬಿದೆನೊ ಸ್ವಾಮಿ ವಿಜಯವಿಠ್ಠಲರೇಯನಚರಣದಲ್ಲಿರುವಂತೆ ಸಾಧ್ಯವಾಗಲಿ ಮನಸು 3
--------------
ವಿಜಯದಾಸ