ಒಟ್ಟು 9830 ಕಡೆಗಳಲ್ಲಿ , 132 ದಾಸರು , 5659 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪೇಳುವೆ ಮನವೆ ನಿನಗೊಂದು ಕುಳಿತು ಲಾಲಿಪುದು ಮುಕ್ತಿಗೆ ಹಾದಿ ಎಂದು ಪ ಹರಿಯ ಚರಣಾಬ್ಜ್ಬಕೆ ಎರಗು ಬಡ ವರನ ಕಂಡರೆ ಅಕಟಾ ಎಂದು ಮರಗು ಹರಿ ಭಕುತಿಗೆ ನೀನೆ ಕರಗು ಇಹ ಪರದಲ್ಲಿ ಉತ್ತಮ ಯೆಂದೆನಿಸಿ ತಿರುಗು 1 ಅಹಂಕಾರ ಮಮಕಾರ ಬಿಟ್ಟು ಅಂಬು ರುಹಲೋಚನನ ಸುಮತವನ್ನೆ ತೊಟ್ಟು ಕುಹಕ ಮತಿಗಳನ್ನು ಬಿಟ್ಟು ಗುರು ದ್ರೋಹಿಗಳಾದವರ ಹೃದಯವÀ ಮೆಟ್ಟು 2 ಅಲ್ಪ ಬುದ್ಧಿಗಳನ್ನು ಮಾಣು ಒಂದು ಸ್ವಲ್ಪವಾದರು ಜ್ಞಾನದ ಮಾರ್ಗ ಕಾಣು ಬಲ್ಪಂಥದಲಿ ಬಾಹದೇನು ಬಿಡು ಅಲ್ಪಗಳ ಸಂಗ ಎಂದು ಸಾರಿದೆನು 3 ಸ್ವಾಮಿಯ ಪಾದವ ನೋಡು ನಿನ್ನ ಕಾಮ ಕ್ರೋಧಗಳೆಲ್ಲ ಕಳೆದು ಈಡಾಡು ನಾಮ ಕೀರ್ತನೆಗಳನ್ನು ಪಾಡು ತ್ರಿ ಧಾಮದೊಳಗೆ ಒಂದು ಇಂಬನೆ ಬೇಡು 4 ಎಚ್ಚತ್ತು ತಿಳಿದುಕೋ ಸೊಲ್ಲಾ ನಾನು ಮುಚ್ಚುಮೊರಿಲ್ಲದೆ ಪೇಳಿದೆನಲ್ಲಾ ಅಚ್ಚುತ ವಿಜಯವಿಠ್ಠಲನಲ್ಲದಿಲ್ಲ 5
--------------
ವಿಜಯದಾಸ
ಪೊಡವಿ ಪತಿಯೇ ನಿನ್ನಾ ಅಡಿಗಳಿಗೆರಗುವೆ ತಡೆಯಲಾರೆನೋ ಈ ಕಡುತಾಪದಿಂದೆನ್ನ ಕಡೆಗ್ಹಾಯಿಸೆನ್ನ ಶ್ರೀ ರಾಘವಾ ಪ ಧರಣೀಶ ನಿನ್ನ ಚರಣವೇ ಗತಿ ಎಂದು ಸ್ಮರಿಸುತ್ತಲಿರುವೆನೋ ರಾಘವಾ ಸ್ಥಿರ ಭಕುತಿಯ ನಿನ್ನೊಳಿರಿಸಿ ಸತ್ವರದಿಂದ ಕರುಣಿಸಿ ಸಲಹೈಯಾ ರಾಘವಾ 1 ಪುಟ್ಟಿದುದಕೆ ನೀ ಹೊಟ್ಟೆಗೆ ಸಾಕಷ್ಟು ಕೊಟ್ಟು ಕಾಪಾಡೊ ಶ್ರೀ ರಾಘವಾ ಇಟ್ಟು ತವ ಸ್ಮರಣೆಯ ಕೊಟ್ಟೆನ್ನ ಪುಷ್ಟವ ಮಾಡೋ ಶ್ರೀ ರಾಘವಾ 2 ತನು ಧನ ನೀನೆ ಜನನಿ ಜನಕನು ನೀನೆ ವನಿತೆ ಸುತರು ನೀನೆ ರಾಘವಾ ಹನುಮೇಶ ವಿಠಲನೆ ದಿನಗಳೆಯದೇ ತ್ವರ ಮನದಘ ಬಿಡಿಸೋ ಶ್ರೀ ರಾಘವಾ 3
--------------
ಹನುಮೇಶವಿಠಲ
ಪೊಂದಿ ಭಜಿಸೊ ನಿರುತ ಮಾನವ ಮಹಿವೃಂದಾರಕವ್ರಾತ ಪ ವಂದಿತ ಶ್ರೀ ಸುಯಮೀಂದ್ರರ ಹೃದಯಾರ ವಿಂದ ಭಾಷ್ಕರ ಸುವೃತೀಂದ್ರ ಪದಮುಗ ಅ.ಪ ಧರೆಯೊಳು ದ್ವಿಜನಿಕರ ಉದ್ಧರಿಸಲು ಗುರುವರ ಸುಶೀಲೇಂದ್ರರ ಕರದಿ ತುರಿಯಾಶ್ರಮ ಧರಿಸುತ ಶ್ರೀಮೂಲ ತರಣಿ ಕುಲೇಂದ್ರನ ಚರಣವ ಪೂಜಿಸಿ ಮರುತ ಶಾಸ್ತ್ರವ ಭಕ್ತಿ ಪೂರ್ವಕ ನಿರುತ ಪ್ರವಚನ ಗೈದು ಶಿಷ್ಯರಿ ಗೊರೆದು ಕರುಣದಿ ಪೊರೆದ ಪಾವನ ಚರಿತರಡಿದಾವರೆಗಳ್ಹರುಷದಿ 1 ಸತಿಭಕ್ತಿ ಸುವಿರಕತಿ ಶಾಂತಾದಿ ಹಲವು ಸದ್ಗುಣ ಪ್ರತತಿ ಕಲಿಯಾಳಿಕೆಯೊಳು ಸ್ಥಳವಕಾಣದೆ ವಿಧಿ ಬಳಿಗೆ ಬಿನ್ನೈಸಲು ನಳಿನಜ ಯೋಚಿಸಿ ಇಳೆಯೊಳಗೆ ಸುವೃತೀಂದ್ರ ತೀರ್ಥರ ಚಲುವ ಹೃದಯ ಸ್ಥಾನ ತೋರಲು ಬಳಿಕ ಸುಗುಣಾವಳಿಗಳಿವರೊಳು ನೆಲಸಿದವು ಇಂಥ ಅಲಘು ಮಹಿಮರ 2 ಸಿರಿಯಾಸ್ಯ ಸಂವತ್ಸರದಿ ಸುವೈಶಾಖ ವರಮಾನ ಶಿತಪಕ್ಷದಿ ಹರಿದಿನದಲಿ ದಿವ್ಯ ಮೂರನೆಯಾಮದಿ ವರ ಮಂತ್ರ ಮಂದಿರ ಪರಮ ಸುಕ್ಷೆತ್ರದಿ ಸಿರಿಮನೋಹರ ಶಾಮಸುಂದರ 3
--------------
ಶಾಮಸುಂದರ ವಿಠಲ
ಪೊರಿಯ ಬೇಕೆಲಾ |ಮರಿ ನೀನು ಛಲಾ ಪ ಏಸು ಜನ್ಮದಿ ನಿನ್ನ ದಾಸನೆನಿಸಿದೆ | ಉ |ದಾಸ ಮಾಡದೆ ಮಹಿದಾಸ ಎನ್ನನು ನೀ 1 ನಿನ್ನನೆ ಮರೆವುದು ಎನ್ನ ಸ್ವಧರ್ಮವು |ನಿನ್ನ ಘನ್ನತಿಗಿದು ಸನ್ನು ಮತವೆ ಹರಿ 2 ಸರುವಜ್ಞ ನೀನೆಂದೂ ಒರೆದವು ಶೃತಿಗಳು |ಮರೆವುದುಚಿತವೇನೊ ಗುರು ಪ್ರಾಣೇಶ ವಿಠಲಾ 3
--------------
ಗುರುಪ್ರಾಣೇಶವಿಠಲರು
ಪೊರಿಯದಲಿರುವರೇನು ಶ್ರೀಹರಿ ನೀನು ಪ ನಿರುತ ನಿನ್ನನಾನು ಸ್ಮರಿಸುತಲಿರುವೆನು ಕೌಸ್ತುಭ ಭೂಷಾ ಹರುಷದಿ ಮಂಜುಭಾಷಾ 1 ಭವಾರ್ಣವ ಪಾರಗಾಣಿಸೋ ದೇವಾ ಸಾರಸದಲನೇತ್ರ ನೀರದ ನಿಭಗಾತ್ರ 2 ದಿನಕರ ಕೋಟಿ ತೇಜ ಘನ ಗರುಡಧ್ವಜ ವನಧಿ ಕನ್ಯಾಧವ 3 ವರಗಿರಿಧರ ಕರುಣಾಕರ ಶುಭವದನ ಶರಣರ ಕಾಯುವಂತಹ ಬಿರುದು ನಿನ್ನದೊ ಅನಂತ 4 ಪರಮ ಪಾವನನಾದ ತರುಳ ಪ್ರಹ್ಲಾದಗೊಲಿದ ನರಹರಿ `ಹೆನ್ನೆಯ ಪುರನಿಲಯ ಪ್ರಮೇಯ 5
--------------
ಹೆನ್ನೆರಂಗದಾಸರು
ಪೊರೆ ದೊರೆಯೆ ಪ. ನಿನ್ನ ಮಾಯ ಅ.ಪ. ಎಷ್ಟು ಛಲವೋ ಎನ್ನಿಂದಲಿ ಸೇವೆಯನು ಕೈಕೊಳ್ಳು ಇನ್ನು ಶ್ರೇಷ್ಠರಾದ ಶ್ರೀ ಗುರುಗಳ ಆಜ್ಞೆಯಲಿ ಬಂಧಿಸಿ ಎನ್ನಿಲ್ಲಿ ಮಹ ಮಹಿಮನೊ ನೀನು ಗುಟ್ಟು ಪೇಳಲು ಎನ್ನಿಂದಲಿ ಅಳವೇ ನಿತ್ಯದಿ ನಿನ್ನ ನೆನವೆ 1 ನಾನಾ ರೂಪ ಧ್ಯಾನದಲಿ ಬಂದ್ಯೊ ಎನ್ನಲಿ ನಿಂದ್ಯೊ ಮಾನವ ಜನ್ಮ ಸಾರ್ಥಕವೆನಿಸಿದ್ಯೊ ಶ್ರೀ ಗುರುದಯ ನೀಡ್ದ್ಯೊ ನಿನ್ನ ಪಾದದಲಿ ಮಮತೆ ಸಾನುರಾಗದಿ ಕೊಟ್ಟು ಎನ್ನ ಸಲಹೊ ಬಿಡೆನು ನಿನ್ನೆಲವೊ 2 ಮಚ್ಛಕೂರ್ಮ ಹರಿ ಸ್ವಚ್ಛ ವರಹರೂಪ ನರಹರಿ ಪ್ರತಾಪ ಸ್ವಚ್ಛಮನದಲಿಹ ಬಲಿಯನೆ ಬಂಧಿಸಿದ್ಯೊ ರಾಜರ ಮರ್ಧಿಸಿದ್ಯೊ ಅಚ್ಚ ಜೀವೋತ್ತಮಗಜನ ಪದವನಿತ್ಯೊ ಗೋಪಿಗೆ ಮುದವಿತ್ಯೊ ಬಿಚ್ಚಿ ವಸನವ ಹಯವನೇರಿದ್ಯಲ್ಲಾ ಗೋಪಾಲಕೃಷ್ಣವಿಠಲಾ 3
--------------
ಅಂಬಾಬಾಯಿ
ಪೊರೆ ಸುರೇಶ ಶ್ರೀಶ ಶ್ರೀನಿವಾಸ ದುರಿತವಿನಾಶ ಪರಮಪ್ರಕಾಶ ಪ ಅನುದಿನ ನಿಮ್ಮಯ ನೆನವಿನಘನಸುಖ ಕರುಣಿಸಿ ಎನ್ನ ಕನಿಕರದೊಡನೆ 1 ಚಿಂತೆನಿವಾರಣ ಚಿಂತೆನೀಗಿಸಿ ಎನ್ನ ಸಂತತದಿಂಪೊರೆ ಸಂತರ ಪ್ರಿಯಕರ 2 ಹರಣಹೋದರು ನಿಮ್ಮ ಚರಣಭಕ್ತಿಯನು ಮರೆಯದದಟ ಮಿಗೆ ಕರುಣಿ ಶ್ರೀರಾಮ 3
--------------
ರಾಮದಾಸರು
ಪೊರೆಯದಿರುವರೇ _ ಶ್ರೀ ರಮಣಾ ಪ ದುರಿತಗಜಕೆ ನೀ ಪಂಚಾನನಾ ಅ.ಪ. ಸಿರಿಯ ಮದದಿ ನಾನರಿಯದೆ ಪೋದರೆ ಗರುಡಗಮನ ನೀ ಮರೆತುಬಿಡುವರೇ ಕರುಣಶರಧಿ ಸರಿ ಬಿರುದು ಪೊಳ್ಳಾಗದೇ ಚರಣಪಿಡಿವೆ ಪೊರೆ ಮರುತನೊಡೆಯ ಹರಿ1 ಪಾತಕಿ ಎಂಬುವ ನೀತಿಯನುಡಿದೊಡೆ ಪೂತರಮಾಡುವ ಖ್ಯಾತಿಯ ಬಿಡುವೆಯ ನಾಥನೆ ನಂಬಿದೆ ಕಾತರ ಪಡುತಿಹೆ ಪ್ರೀತಿಲಿ ಕಾಣಿಸು ಆರ್ತಿವಿದೂರ 2 ನಡಿಯುವ ಚರಣವು ಎಡುವುದು ಸಹಜವೆ ಮೃಡ ಭೃಗು ಭೀಷ್ಮರು ದುಡುಕಲಿಲ್ಲೆ ದೊರೆ ಮಿಡಕಿ ನಡುಗುತಿಹೆ ನಡೆವುದು ಜಗಬಿಡೆ ಕಡಲಶಯನ ಪಿಡಿ ಬಿಡದೆ ಕೊಡುತ ರತಿ 3 ಸಿರಿವಿಧಿ ಶಿವನುತ ಸ್ವರತ ಸ್ವತಂತ್ರನೆ ಶರಣರ ಪೊರೆಯುವ ವರಗುಣ ಭೂಷಣ ಅರಿಯೆನುಪಾಯವ ಶರಣುಶರಣೈಯ ಪರಮಪುರುಷ ಭಗಸರಸದಿ ನಲಿನಲಿ 4 ಸಾಕುವ ಬಿಂಬನೆ ನೂಕಿದೆ ಯಾತಕೆ ಹಾಕುತ ಮಂಕನು ಏಕಾಯತನ ನಾಕರೊಡೆಯ ಭವನೂಕುತ ಬೇಗನೆ ಸ್ವೀಕರಿಸೆನ್ನನು ಶ್ರೀ ಕೃಷ್ಣವಿಠಲಾ 5
--------------
ಕೃಷ್ಣವಿಠಲದಾಸರು
ಪೊರೆಯಲಿದು ಸಮಯ ಗೋವಿಂದ ದೇವ ಶರಣರಕ್ಷಕ ನೆಂಬ ಬಿರುದು ಮೆರೆದ ಮುಕುಂದ ಪ ಬಂಧನದ ಭವದೊಳಗೆ ನಾನೊಂದು ದಿನ ಸುಖವನರಿಯೆ ಮಂದ ಮತಿಯಲಿ ತೊಳಲಿ ಕಂದಿಕುಂದಿ ಮುಂದು ಗಾಣದೆ ಯಮನ ಬಂಧದೊಳು ಸಿಲುಕಿದನು ಮಂಧರಧರ ಕರುಣಸಿಂಧು ನೀ ಬಂದು 1 ಘೋರ ತಾಪವು ಬಂದು ಸಾರಿ ಎನ್ನನು ಮುಸುಕೆ ಭೋರ ನುರಿಯಲಿ ಬಳಲಿ ಚೀರಿಹಾರಿ ದುರಿತ ವಾರಿಧಿಯೋಳ್ ಬಿದ್ದು ಬಾಯಾರಿ ಮೊರೆಯಿಡುವೆ ನರಕಾರಿ ದಯತೋರಿ 2 ತಂಡತಂಡದಿ ವೈರಿಗಳು ಕೂಡಿ ಕಾಯದೊಳು ಅಂಡುಗೊಂಡೆನ್ನಳೆದು ತಂದು ಕೊಂಡು ಹಿಂಡು ಖಂಡವನು ಸುಟ್ಟುರುವಿ ನುಂಗುವರೆನುತ ಕಂಡು ಕೊಂಡಾನು ಸಾರಿದೆನಿಂದು ಬಂದು 3 ತರಳತನ ದಾಯಸದÀಲಿ ನೊಂದೆ ಮುನ್ನಬಲು ತರುಣಿಯರ ಸಂಗದಲಿ ಮರುಳಾದೆನು ಜರೆಬಂದು ಮುಸುಕಿ ಕಣ್ಗಾದೀ ಪರಿಯಭವ ಶರಧಿಯೊಳು ಮುಳುಗಿ ಮೊರೆಯಿಡುವ ಚಿನ್ಮಯನೆ 4 ಹಿಂಗದಿದು ಭಯವ ಪೇಳಲು ತೀರದೆನಗೆ ಶ್ರೀ ರಂಗನಿನ್ನಧೀನ ಜನವರಿಯಲೂ ಮಂಗಳಾತ್ಮಕ ವಾಯುಜನ ಕೋಣೆ ಲಕ್ಷ್ಮೀಶ ನಿನ್ನ ಡಿಂಗರಿಗನ ಕಾಯ್ವುದೀಗ ಸಮಯ ಕೃಪಾಳೋ 5
--------------
ಕವಿ ಪರಮದೇವದಾಸರು
ಪೊರೆಯುವಳು ದೇವಿ ಪೊರೆಯುವಳು|| ಕರುಣದಿಂದ ನಮ್ಮ ಪೊರೆಯುವಳು ಪ ಶರಣರಿಗೊಲಿದವರಿಷ್ಟವ ಸಲಿಸುವ| ಪರಮಪಾವನೆ ದೇವಿ ಪೊರೆಯುವಳು ಅ ಪ ತೋಷದಿಂದಲವಳಾಶ್ರಿತ ಜನರಭಿ| ಲಾಷೆಯ ಸಲಿಸುತ ಪೊರೆಯುವಳು|| ವಾಸವಾದಿ ಸುರವಂದಿತೆ ಶ್ರೀ ಪರ| ಮೇಶ್ವರಿದೇವಿಯು ಪೊರೆಯುವಳು 1 ಮಹಿಷಾಸುರನನು ಮಹಿಯೊಳು ಕೆಡಹಿದ| ಮಹಿಷಮರ್ದಿನಿದೇವಿ ಪೊರೆಯುವಳು|| ಮಹಿಮೆಯದೋರುತ ಖಳ ಧೂಮ್ರಾಕ್ಷನ| ದಹಿಸುತ ಮಹಿಯನು ಪೊರೆದವಳು 2 ಚಂಡ ಮುಂಡ ಖಳ ತಂಡವಳಿಸಿ ಬ್ರ | ಹ್ಮಾಂಡದ ಭಾರವ ಕಳೆದವಳು|| ರುಂಡವ ತರಿಯುತ ಚೆಂಡಾಡಿದ ಶ್ರೀ| ಚಾಮುಂಡೇಶ್ವರಿ ಪೊರೆಯುವಳು 3 ಭಕ್ತರ ಪೊರೆಯಲು ರಕ್ತಬೀಜಾಖ್ಯನ| ರಕ್ತ ಪಾನÀವನು ಗೈದವಳು|| ಯುಕ್ತಿಯಿಂದಲಾ ನಕ್ತಂಚರನನು| ಶಕ್ತಿಸ್ವರೂಪಿಣಿ ತರಿದವಳು 4 ಶುಂಭ ನಿಶುಂಭರ ವಧಿಸಿದ ಶ್ರೀ ಜಗ| ದಂಬಾದೇವಿಯು ಪೊರೆಯುವಳು|| ಅಂಬುಜಲೋಚನೆ ಶಂಭುಮನೋಹರೆ | ಇಂಬುಗೊಡುತ ನಮ್ಮ ಪೊರೆಯುವಳು 5 ದುರುಳರ ಬಾಧೆಗೆ ಬೆದರುತ ಸುರತತಿ | ಮೊರೆಯಿಡಲಭಯವನಿತ್ತವಳು|| ಅರುಣಾಸುರನ ಸಂಹರಿಸುತ ನಂದಿನಿ| ನದಿಯೊಳು ಶರಣರಿಗೊಲಿದವಳು 6 ಪರಿಪರಿ ವಿಧದಲಿ ಧರಣಿಯ ಭಾರವ ಪರಿಹರಿಸುತಲಿ ಪೊರೆದವಳು|| ಪರಮಕೃಪಾಕರಿ ಶ್ರೀ ಜಗದೀಶ್ವರಿ ಶರಣರಾದ ನಮ್ಮ ಪೊರೆಯುವಳು 7 ಶಂಕರಿ ಶುಭಕರಿ ಕಿಂಕರಪ್ರಿಯಕರಿ|| ಪಂಕಜಲೋಚನೆ ಪೊರೆಯುವಳು|| ಶಂಖಚಕ್ರಾಂಕಿತೆ ಶ್ರೀ ದುರ್ಗಾಂಬಿಕೆ| ಕಿಂಕರರೆಮ್ಮನು ಪೊರೆಯುವಳು 8 ಕೈಟಭಾದಿ ಖಳಸಂಕುಲವಳಿಸಿದ| ನಿಟಿಲಾಂಬಕಿ ಶಿವೆ ಪೊರೆಯುವಳು|| ಜಟಾಮಕುಟ ಸುರತಟನೀಧರಸತಿ| ಕಟಿಲಪುರೇಶ್ವರಿ ಪೊರೆಯುವಳು9
--------------
ವೆಂಕಟ್‍ರಾವ್
ಪೊರೆಯುವುದೆಮ್ಮನು ನರಹರಿ ನೀನು ಸ್ಮರಿಪೆವು ತವ ಪದಸರಸಿಜಗಳನು ಪ. ತರಳ ಪ್ರಹ್ಲಾದನು ಮೊರೆಯಿಟ್ಟು ತಾನು ಕರೆಯಲಾಕ್ಷಣ ಬಂದೆ ತ್ವರಿತದಿ ನೀನು 1 ದುರುಳ ಹಿರಣ್ಯಕಸುರನನು ಸೀಳಿ ಸುರರನ್ನು ಸಲಹಿದೆ ಕರುಣವ ತಾಳಿ 2 ಮಿತ್ರ ಮಂಡಳಿ ಶತಪತ್ರಕೆ ನೀನು ಮಿತ್ರನಂತೆಸಗು ವಿಮಿತ್ರತೆಯನ್ನು 3 ಕಾರುಣ್ಯಾಮೃತವಾರಿಧೇ ಮೂರ್ತೇ ವರ ಲಕ್ಷುಮಿನಾರಾಯಣ ಸತ್ಕೀರ್ತೇ 4
--------------
ತುಪಾಕಿ ವೆಂಕಟರಮಣಾಚಾರ್ಯ
ಪೊರೆಯೊ ಶ್ರೀಶನೆ ಸರುವ ಲೋಕ ಪೊರೆವನೆ ಪ ಅರಿತು ಅರಿಯದಂತೆ ನಾನು ಗರುವದಿಂದ ಮೆರೆದನಯ್ಯ ಅ.ಪ ಅರುಣ ಉದಯದಲ್ಲಿ ಎದ್ದು ಹರಿಯೆ ನಿನ್ನ ಸ್ಮರಣೆ ಬಿಟ್ಟು ಗೊರಿಕೆ ಹೊಡಿದು ನಿದೆÀ್ರಮಾಡಿ ದುರಿತದಲ್ಲಿ ಪೊರಳುವವನ 1 ಕುತುಬ ಕಾಲದಲ್ಲಿ ಬಂದ ಅತಿಥಿಗಳನು ಜರೆದು ನೂಕಿ ಮಿತಿಯ ಮೀರಿ ಸವಿಯುತ ಪರ- ಗತಿಯ ದಾರಿ ಕಾಣದವನ 2 ದಾನಧರ್ಮ ಕೇಳಬಂದ ಮಾನವಂತ ಜನರ ಬಹಳ ಹೀನ ಮಾತಿನಿಂದ ಬೈದ ಜ್ಞಾನರಹಿತನಾದ ನರನ 3 ರೊಕ್ಕವಿರುವದೆಂದು ಬಹಳ ಸೊಕ್ಕಿನಿಂದ ಬಡವರನ್ನು ಲೆಕ್ಕಿಸದೆ ಮಾತನಾಡಿ ಧಿಕ್ಕರಿಸಿದ ಅಧಮ ನರನ 4 ಪಟ್ಟದರಸಿಯಿರಲು ಅವಳ ಬಿಟ್ಟು ಪರರ ಸತಿಯ ಬಯಸಿ ಅಟ್ಟಹಾಸದಿಂದ ನಗುತ ಕೆಟ್ಟು ಹೋದ ಭ್ರಷ್ಟ ನರನ 5 ಎಷ್ಟು ಮಾಡಲೇನು ಎಳ್ಳಿ ನಷ್ಟು ಸುಖವ ಕಾಣಲಿಲ್ಲ ಇಷ್ಟ ಮಿತ್ರ ನೀನೆಯೆಂದು ಗಟ್ಟಿಯಾಗಿ ತಿಳಿದುಕೊಂಡೆ 6 ಶ್ರಿಷ್ಟಿಗೊಡೆಯನು ರಂಗೇಶ- ವಿಠಲನೆಂಬ ಮತಿಯ ಎನಗೆ ಎಷ್ಟು ಮಾತ್ರ ಕೊಟ್ಟು ಸಲಹೊ ಕೆಟ್ಟ ಮೇಲೆ ಬುದ್ಧಿ ಬಂತು 7
--------------
ರಂಗೇಶವಿಠಲದಾಸರು
ಪೋಗದಭಿಮಾನವೇಗೈವೆನಕಟಾಆಗದಾನಂದಪದ ಇದರಿಂದಲಕಟಾ ಪತನುವೆನ್ನದೆಂದು ಪೋಸಿ ಪೊರೆದಫಲವೇನುಧನವೆನ್ನದೆಂದು ಸಾಧಿಸಿದುದೇನುಮನವೆನ್ನದೆಂದು ಮತಿಯನು ಪಡೆದ ಬಗೆಯೇನುಅನುಕೂಲವಾಗಿ ಬಾಳಿಸಿದುದೆ ತಾನು 1ವನಿತೆಯೆನ್ನವಳೆಂದು ಒಡಲಾದ ಬಗೆಯೇನುತನುಜರೆನ್ನವರೆಂದು ತಡಿಗಂಡುದೇನುಮನುಜರೆನ್ನವರೆಂದು ಮೃತ್ಯುತೊಲಗುವದೇನುಇನಿತು 'ಧದಲಿ ಸುಖವ ಕಾಣದೆುನ್ನು 2ಇದರಿಂದ ಬಂತು ಋಣಬಾಧೆ ಮಾಸಿತು ಬೋಧೆಒದಗಿದಾ 'ರತಿಯನು ನೀಗಿ ನಿಂದೆಮದ ಹೆಚ್ಚಿ ಮೈಮರೆದೆ ಮೋಹಕ್ಕೆ ಒಳಗಾದೆಎದೆಯಲಿ 'ಷಯಸುಖಕಾಗಿ ಮತಿದೊರೆದೆ 3ಆವ ಜನ್ಮಾಂತರದ ಪೈಶಾಚವೋ ಕಾಣೆಆವ ಮಾಂತ್ರಿಕನಿದನು ಬಿಡಿಸುವನೊ ಕಾಣೆಆವ ವ್ರತನಿಯಮಗಳಿಗಂಜುವುದೊ ನಾ ಕಾಣೆಆವ ಜಪಗೈದಿದನು ಕಳೆಯಲೊ ಕಾಣೆ 4ಕರುಣಿ ಚಿಕನಾಗಪುರವರನಿಲಯ ಎನ್ನೊಡೆಯಗುರುವಾಸುದೇವಾರ್ಯ ಗೂಢಚರ್ಯಮರೆಯೊಕ್ಕೆ ನಿನ್ನಡಿಯ ಮಾನಪೈಶಾಚಭಯಹರಿವಂತೆ ಮಾಡು ನ'ುಸಿದೆನು ದಮ್ಮಯ್ಯ 5
--------------
ವೆಂಕಟದಾಸರು
ಪೋಗವಲ್ಲದು ಇಹ್ಯಭೋಗದಾಸೆಯು ಇನ್ನು ನಾಗಶಯನ ನೀನೆ ನೀಗಿಸು ಇದನು ಪ ಏಸು ಸಾರ್ಹುಟ್ಟ್ಹುಟ್ಟಿ ಆಶಪಾಶದಿ ಬಿದ್ದು ನಾಶ ವೊಂದುತ ಬಲು ಬೇಸತ್ತೆ ಹರಿಯೆ 1 ಹೇಯಭರಿತವಾದ ಕಾಯಸುಖಕ್ಕೆ ಮೆಚ್ಚಿ ಪಾವನಪಥ ಮರೆದು ಬವಣೆಬಟ್ಟೆಭವ 2 ಅರಿದು ತವಪದಕ್ಕೆ ಎರಗಿ ಬೇಡುವೆ ಸ್ಥಿರ ವರಮುಕ್ತಿಸುಖ ನೀಡಿ ಪೊರೆಯೊ ಶ್ರೀರಾಮ 3
--------------
ರಾಮದಾಸರು
ಪೋದರಯ್ಯ ತೆರಳಿ ಪೋದರು | ಸಾಧುನರಸಿಂಹಾರ್ಯರು ಮಾಧವನ ಮಂದಿರಕೆ ಪ ಶ್ರೀಕರ ಕೃಷ್ಣಾತಟದಿ ಐಕೂರು ಗ್ರಾಮದಿ ನೆಲೆಸಿ | ಏಕೋ ಭಾವದಿಂ ಸದಾ ಶ್ರೀಕಾಂತನ್ನ ಧ್ಯಾನಂಗತರು 1 ಭಾಗವತ ಸಾರೋದ್ಧಾರ ಸತ್‍ಶಿಷ್ಯರಿಗೆ ಸಾರುತ ಸದ್ಭಕ್ತಿಜ್ಞಾನ | ವೈರಾಗ್ಯಮಾರ್ಗವ ತೋರಿ 2 ಮಧ್ವಮತದಿ ಸಿದ್ಧಾಂತ ಪದ್ಧತಿಯನುಸರಿಸಿ | ಸದ್ಧರ್ಮದಿ ನಡೆಸುವ ಪ್ರಸಿದ್ಧ ವಿದ್ವಾಂಸರು 3 ವ್ಯಾಸದಾಸಕೂಟ ಮರ್ಮಲೇಸಾಗಿ ಸಜ್ಜನ ತತಿಗೆ ಬ್ಯಾಸರಿಲ್ಲದಲೆ ಪ್ರತಿವಾಸರುಪದೇಶಿಸುವರು 4 ನಿತ್ಯಗೈವ ಕೃತ್ಯಂಗಳು | ತತ್ವೇಶ್ವರ ದ್ವಾರಾ ಹರಿಗೆ ಚಿತ್ತಪೂರ್ವಕರ್ಪಿಸುವ ಸೋತ್ತುಮರೋತ್ತುಮರು ಲೋಕಕೆ 5 ಅಂತರಂಗದಲ್ಲಿ ಲಯದ ಚಿಂತನೆಯಗೈದು ಮುಕ್ತಿ ಪಂಥವನ್ನೆ ಪಿಡಿದು | ಜ್ಞಾನ ಸಂತತಿಯ ಜಗದಿ ನೆಲೆಸಿ 6 ಯಾವ ಸಂಶಯವ್ಯಾಕೆ ಕೋವಿದವರ್ಯರಾದ | ಭಾವಜ್ಷರ ಮುಖದಿಂದ ದೇವಾಂಶರೆನಿಸಿಕೊಂಡವರು 7 ವ್ಯಯ ಸಂವತ್ಸರಂತ್ಯಮಾಸ | ದ್ವಯತಿಥಿ ಸಿತವರ್ಷ ಹಯಸಪ್ರಸುತನ ವಾರದಿ ತ್ರಯ ಝಾವ ರಜನಿಯಲ್ಲಿ 8 ಆಸನಸ್ಥರರಾಗಿ ನಾಸಿಕಾಗ್ರದಲಿಟ್ಟು ಶ್ವಾಸಮಂತ್ರ ಜ ಪಿಸಿ ಬಿಂಬೋಪಾಸನಗೈವ ಬುಧರು 9 ಸಾಗರಶಯನನ ಧ್ಯಾನ ಯೋಗ ಬಲದಿ ತಿಳಿದು ಭುವಿ ಭೋಗ ತೀರಿತೆಂದು ಕೊಯಿಲು ತಾಗಿದ್ದೊಂದೆ ನೆವನದಿಂದ 10 ಆಶೆಕ್ರೋಧಂಗಳನಳಿದು | ಕ್ಲೇಶಮೋದ ಸಮ ತಿಳಿದು | ಭೂಸುರ ವೃಂದಕೆ ಸುಗ್ರಾಸವಿತ್ತು ತೋಷಿಸುವರು 11 ಹರಿಯಪುರಕೆ ಪೋಪ ಸಮಯ ಹರಿಸು ಬಂದು ಕೃಪ್ಣೆ ಇವರ ಚರಿಯ ನರೆÉದ ಜನಕೆ ತೋರಿ 12 ಸ್ವಾಮಿಶಾಮಸುಂದರನ | ನಾಮದ ಸನ್ಮಹಿಮ ಸತತ | ಪಾಮರ ಜನಕೆ ಪೇಳಿ ಪ್ರೇಮದಿಂ ಸಲಹಿದವರು 13
--------------
ಶಾಮಸುಂದರ ವಿಠಲ