ಒಟ್ಟು 14553 ಕಡೆಗಳಲ್ಲಿ , 132 ದಾಸರು , 6967 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೀ ಬಾರದಿರೆ ಬಾರನು ಶ್ರೀ ನರಹರಿ ಪ ನೀ ಬಾರದಿರೆ ಬಾರ ನೀರಜಾಕ್ಷನು ಹರಿನಾನು ನಂಬಿದೆ ನಿಮ್ಮ ನೀವು ಪಾಲಿಸಬೇಕು ಅ.ಪ. ನೀನು ಆತನ ಕಾಯ್ದಿ ತಾನು ಆತನ ಕಾಯ್ದನೀನು ಬಿಡಲು ಬಿಟ್ಟ ಭಾನುಸುತನ ಕೃಷ್ಣ 1 ನಿಮ್ಮ ಮಾತುಗಳನ್ನು ಒಮ್ಮೆ ಮೀರನು ಹರಿನಮ್ಮ ಬಿಡುವುದ್ಯಾಕೊ ಬ್ರಹ್ಮ ಪದಾರ್ಹನೆ 2 ಇಂದು ನಾಳೆನ್ನದೆ ಆನಂದತೀರ್ಥರೆ ನಮ-ಗಿಂದು ತೋರಿಸು ಹರಿಯ ಇಂದಿರೇಶನ ಪ್ರೀಯ 3
--------------
ಇಂದಿರೇಶರು
ನೀ ಬಿಟ್ಟ ಬಳಿಕೆನ್ನ ಸಾಧ್ಯವೇನಿಹ್ಯದು ನೀ ಕರುಣಗೈದರೆ ಸಕಲ ಸಾಧ್ಯ್ಹರಿಯೆ ಪ ಯಂತ್ರವಾಹನೆ ಯಂತ್ರ ನಡೆಸದೆಯಿರಲು ಯಂತ್ರ ನಡೆಯುವುದೆಂತು ಸ್ವಂತ ತಾನೇ ಮಂತ್ರಗಾರಿಲ್ಲದೆ ತಂತ್ರ ತೋರ್ವುದೆ ಸ್ವ ತಂತ್ರ ನೀನಲ್ಲದೆ ಅತಂತ್ರನಿಂದೇನಹುದು 1 ಪಡೆದ ಮಾತೆಯು ಕೂಸಿನೊಡಲು ತಾ ನೋಡದಿರೆ ಒಡಲೊಳಿಟ್ಟ್ಹದಿನಾಲ್ಕುಪೊಡವಿಗಳನಾಳುವ ಒಡೆಯ ಕೊಡದಿರೆ ಕೀರ್ತಿ ಪಡೆಯುವುದೆ ಜೀವಿ 2 ನಿನ್ನಿಂದೆ ಬೆಳಗುವುದು ನಿನ್ನಿಂದೆ ಮುಳುಗುವುದು ನಿನ್ನಿಂದಳಿಯುವುದು ನಿನ್ನಿಂದಲುಳಿಯುವುದು ನಿನ್ನಿಬಿಟ್ಟಿನ್ನಿಲ್ಲ ಎನ್ನಯ್ಯ ಶ್ರೀರಾಮ ಮನ್ನಿಸಿ ಕೃಪೆಮಾಡು ಎನ್ನ ನೀ ಬಿಡದೆ3
--------------
ರಾಮದಾಸರು
ನೀ ಬುದ್ಧಿ ಕೊಡದಿರಲು ಮನುಜ ಪಶುವೊ ಜೀವ ಪಶುವೊ ಪ ಶ್ರೀ ಭೂಮಿ ದುರ್ಗೇಶ ಗೋವಿಂದ ಪರಿಪೂರ್ಣ ಅ.ಪ ಜಡಜನ್ಮದಿಂದಲೆ ದ್ವಿಜ ಜನ್ಮ ಬಂದಿಹುದು ಒಡೆಯಾ ನಮ್ಮೆತ್ನವೇ ಸತ್ಯ ಪೇಳೊ ಕಡುನಿದ್ರೆಯಲಿ ಜೀವ ನಿಶ್ಚೇತನಾಗಿರಲು ಬಿಡದೆ ದಿನದಿನದಲ್ಲಿ ಎಚ್ಚರಿಕೆ ಯಾರಿಂದ 1 ಸೃಷ್ಟಿಗೆ ಬರಲಿನ್ನು ಜೀವ ಯತ್ನವು ಉಂಟೆ ಸೃಷ್ಟಿ ಸ್ಥಿತಿ ಲಯ ಕರ್ತ ನೀನೆ ತಿಳಿಯೊ ಮೊಟ್ಟ ಮೊದಲಿಗೆ ನಿನ್ನ ವಶನಾಗಿ ನಾನಿರಲು ಸೃಷ್ಟಿಯಲಿ ನಮ್ಮೆತ್ನ ಕಲ್ಪಿಸುವುದುಂಟೆ 2 ಇಂತಿರಲು ನಿಜತತ್ವ ಎಂಥ ಶಕ್ತಿಯು ನಮಗೆ ಸ್ವಾಂತ ಮಂಗಳ ಸುಗುಣ ನಿಧಿಯೆ ಪೇಳೊ ಭ್ರಾಂತಿ ಜೀವನ ಬಿಡಿಸಿ ಜಯೇಶವಿಠಲ ಶಾಂತಿ ಪಾಲಿಸು ನಮಗೆ ಅಂತರಾತ್ಮಕ ದೇವ3
--------------
ಜಯೇಶವಿಠಲ
ನೀ ಮನಒಲಿಯುತೆ ಬಾರಮ್ಮ ಪ ನಲಿನಲಿದಾಡುತ | ಒಲುಮೆಯದೋರುತ | ನಲವಿನಿಂದ ಸ | ಜ್ಜನರಿಗೊಲಿವಳೇ ಅ.ಪ ಖಳಕುಲವಳಿಸುತಲಿ | ಶರಣರಿಗೊಲಿಯುತ ಹರುಷದಲಿ || ಇಳೆಯೊಳು ಮೆರೆಯುವ | ನಂದಿನಿ ನದಿಯೊಳು | ನೆಲೆಯಾಗಿರುತಿಹ | ಜಲದುರ್ಗಾಂಬಿಕೆ1 ಕರುಣವ ಬೀರುತಲಿ | ತವ ಪದ | ಶರಣರ ಪೊರೆಯುತಲಿ || ಪರಿಪರಿವಿಧದಲಿ | ಧರಣಿಯ ಭಾರವ | ಪರಿಹರಿಸಿದ ಶ್ರೀ | ಪರಮೇಶ್ವರಿಯೆ2 ಅಂಬುಜದಳನಯನೆ | ನಿನ್ನನು | ನಂಬಿದೆ ಗುಣಸದನೆ || ಶಂಭುಮನೋಹರೆ | ಶಾಂಭವಿ ಶಂಕರಿ | ನಂಬಿದ ಭಕುತರಿ | ಗಿಂಬು ಗೊಡಲು ನೀ 3 ದೇಶ ದೇಶದೆಲ್ಲ | ನಿನ್ನಾ | ಶ್ರೈಸುವ ಜನಕೆಲ್ಲ || ತೋಷವ ಪಡಿಸುತ | ಆಸೆಯ ನೀವೆ | ನ್ನಾಸೆಯ ಸಲ್ಲಿಸು | ಕಟಿಲಪುರೇಶ್ವರಿ4
--------------
ವೆಂಕಟ್‍ರಾವ್
ನೀ ಮಾಡಿದ ಮಾಯವು ನಾನೇನು ಬಲ್ಲೆ ಸ್ವಾಮಿ ನೀ ಮಾಡಿದ ಮಾಯವು ಪ ಕಣ್ಣು ಕಿವಿ ಕೈಕಾಲು ಮುನ್ನ ನಾಲಗೆ ಬಾಯಿ ನಿನ್ನ ಸೂತ್ರದಲಾಡ್ವವೆನ್ನದೇನಪರಾಧ 1 ಕಾಯ ಎಂಬ ಗೊಂಬೆಯಾಕಾರ ನಿರ್ಮಿಸಿ ಬೇಕಾದಂತಾಡಿಸುವಿ ಶ್ರೀಕರ ಒಳಗಿರ್ದು2 ಭೂಮಿತ್ರಯವ ಸೃಷ್ಟಿ ನೀ ಮಾಡಿ ತೋರಿದಿ ಕ್ಷೇಮದಿಂ ಸಲಹೆನ್ನ ಸ್ವಾಮಿ ಶ್ರೀರಾಮ ತಂದೆ 3
--------------
ರಾಮದಾಸರು
ನೀ ಯಾಕ ಮನವೇ ಚಿಂತಿಸಿ ಬಳಲುವೆ ಬರಿದೇ | ಶ್ರೀಯರಸನ ಮೊರೆ ಹೋಗದೇ ಪ ಸಾಧುರಾ ಸಂಗ ಜರಿದು ಕುಜನರ ನೆರೆವಿಡಿದು | ಮೇದಿನಿಯೊಳು ನಿನ್ನ ನೀ ಮರೆದು 1 ಇರಲು ಮುಳ್ಳಿನಾಗ್ರದಲಿ ಹೀನ ಕೀಟಕಾವಳಿ | ಪೊರೆವಾನಿತ್ತು ಆಹಾರದಯಲೀ 2 ಮನುಜರಿಗೆ ತಲೆವಾಗಿ ಗೇಣು ವಡಕಲಾಗಿ | ಮನಸಾ ಹಿಡಿವರೇ ಪರರು ಹೋಗಿ 3 ಹುಟ್ಟಿಸಿದಾ ದೇವನು ಹುಲ್ಲು ಮೇಯಿಸುವನೇನು | ಅಷ್ಟಾಸಾಯಸ ಬಡದಿರು ನೀನು 4 ಅನುದಿನ ಗುರುಮಹಿಪತಿ ಚರಣಾ | ತಂದಿದಿರುಡುವ ನಿಧಾನಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೀ ಸುಮಂಲಿ ವರಗುಣಶೀಲೆ ನೀ ಸುಮಂಗಲಿ ಪ ಸತತ ಮಾತಾ ಪಿತರ ವಚನ ಹಿತದಿ ನೀನು ಆಲಿಸುತ | ಪತಿಯು ಪರದೈವವೆಂದು ನೇಮದಿ ತಿಳಿದು ನೀ ಮಾಡುವುದು ವ್ರತ 1 ನಿರುತ ಗೋವು ಭೂಸುರರ ಸೇವಾ ಹರುಷದಲಿ ಶ್ರೀ ಗೌರಿ ಪೂಜಾ ತರುಣಿ ಗೈದು ಜಗದಿ ನೀನು ಪಾದ ಸುಕುಮಾರ ಪಿತನಪಾದ ಭಜಿಸೆ 2 ಕೋಮಲಾಂಗಿ ಸೋಮವದನೆ ಆ ಮಹಾತ್ಮ ಶೀಲೆ ರಾಧಾ ಭಾಮೆ ತಾರಾಸೀತೆಯಂತೆ ಶಿರಿಶಾಮಸುಂದರ ದಯ ಪಡೆಯೆ ನೀ 3
--------------
ಶಾಮಸುಂದರ ವಿಠಲ
ನೀಚಕೃತ್ಯದ ಮನಸೇ ನಿನಗೆ ತುಸು ನಾಚಿಕಿಲ್ಲಲೆ ಹೊಲಸೆ ಪ ಪ್ರಾಚೀನಹಿರಿಯರ ಯೋಚಿಸಿನೋಡದೆ ನೀಚತನದ ಆಲೋಚನೆಯೊಳು ಬಿದ್ದು ಅ.ಪ ಕುಂತಿಸುತನ ರಥವ ನಡೆಸಿದನು ಅ ತ್ಯಂತ ಕೃಪೆಯಿಂದ ಹರಿಯು ಕಂತುಜನಕ ಭಕ್ತ ಚಿಂತಾಯಕನೆಂದು ಅಂತರಂಗದಿ ಭಜಿಸಿ ಸಂತಸ ಪಡುವಲ್ಲಿ 1 ಅಂಬರೀಷನೆಂಬುವ ನೃಪಗೆ ಮುನಿ ಡೊಂಬೆಯಿಂಬ (?) ಶಾಪಿಸಲು ಅಂಬುಜಾಸನ ಬಂದು ಬೆಂಬಲಿಸಿ ನೃಪನನ್ನು ಇಂಬಿಟ್ಟು ಪೊರೆದದ್ದು ನಂಬಿ ಭಜಿಸವಲ್ಲಿ 2 ಭೂಮಿಪ ಬಲಿಚಕ್ರನ ಬಾಗಿಲ ಕಾಯ್ದ ಪ್ರೇಮದಿಂ ರಮೆಯರಸನು ಪ್ರೇಮದಿಂ ಭಕುತರ ಕಾಮಿತವೀಯಲು ಕಾಮಧೇನೀತನೆಂದು ನೇಮದಿಂದರವಲ್ಲಿ 3 ಗೌತಮ ಮುನಿಸತಿಯು ಪಾಷಾಣವಾಗಿ ಕ್ಷಿತಿಮೇಲೆ ಎರಗಿರಲು ಕ್ಷಿತಿಜಾತೆಪತಿ ತಾನು ಅತಿಹಿತದ ಕೃಪೆಯಿಂದ ಪತಿತಗೈದವನೆಂದು ಸ್ತುತಿಸಿ ಒಲಿಸವಲ್ಲಿ 4 ಹನುಮಂತನೊಡೆಯನಾದ ಜನಕಜೆಪತಿ ವನಜಾಕ್ಷ ಶ್ರೀರಾಮನ ಘನತರಮಹಿಮೆಯ ಅನುದಿನಕೊಂಡಾಡು ಘನಮುಕ್ತಿ ಸಾಮ್ರಾಜ್ಯ ಕನಿಕರದಿಂ ಕೊಡುವ 5
--------------
ರಾಮದಾಸರು
ನೀಚನಲ್ಲವೇ ಇವನು ನೀಚನಲ್ಲವೇ ಪ ಕೀಚಕಾರಿಪ್ರಿಯನ ಗುಣವ ಯೋಚಿಸದಲೆ ಯಾಚಿಸುವÀನು ಅ.ಪ. ಶ್ರೀಕಳತ್ರನಂಘ್ರಿ ಕಮಲವೇಕಚಿತ್ತದಲ್ಲಿ ಮನೋ ವ್ಯಾಕುಲಗಳ ಬಿಟ್ಟು ಸುಖೋದ್ರೇಕದಿಂದ ಭಜಿಸದವನು 1 ಲೋಕವಾರ್ತೆಗಳಲಿ ಏಡ ಮೂಕರೆನಿಸಿ ವಿಷಯಗಳವ ಲೋಕಿಸದಲೆ ಶ್ರೀಶಗಿವು ಪ್ರತೀಕವೆಂದು ತಿಳಿಯದವನು 2 ಜನನಿ ಜನಕರಂತೆ ಜನಾರ್ದನನು ಸಲಹುತಿರಲು ಬಿಟ್ಟು ಧನಿಕರ ಮನೆಮನೆಗಳರಸಿ ಶುನಕನಂತೆ ತಿರುಗುವವನು 3 ಹರಿಕಥಾಮೃತವ ಬಿಟ್ಟು ನರ ಚರಿತ್ರೆಯಿಂದ ದ ರ್ದುರಗಳಂತೆ ಹರಟೆ ದಿವಸ ಬರಿದೆ ಕಳೆಯುತಿಪ್ಪ ಮನುಜ4 ಕರ್ಮ ತೊರೆದು ಪರರ ಗೃಹಗಳಲ್ಲಿ ಸಂಚರಿಸುತ ನಿಂದಿಸುವ ಮನುಜ5 ಬಹಳ ದ್ರವ್ಯದಿಂದ ಗರುಡ ವಾಹನನಂಘ್ರಿ ಭಜಿಸಿ ಅನು ಗ್ರಹವ ಮಾಡು ಎಂದು ಬೇಡಿ ಐಹಿಕಸುಖವ ಬಯಸುವವನು 6 ಕರಣ ಜನ್ಯ ಪುಣ್ಯಪಾಪವೆರಡು ಹರಿಯಧೀನವೆಂದು ಸ್ಮರಿಸುತಲತಿ ಭಕುತಿಯಿಂದ ಹರುಷಪಡದಲಿಪ್ಪ ಮನುಜ 7 ಜೀವನ ಕರ್ತೃತ್ವ ಬಿಟ್ಟು ದೇವನೊಬ್ಬ ಕರ್ತೃ ರಮಾ ದೇವಿ ಮೊದಲುಗೊಂಡು ಹರಿಯ ಸೇವಕರೆಂದರಿಯದವನು 8 ವಾತಜನಕನೆನಿಪ ಜಗನ್ನಾಥವಿಠ್ಠಲನ ಪದಾಬ್ಜ ಭವ ವೈತರಣಿಯ ದಾಟದವನು 9
--------------
ಜಗನ್ನಾಥದಾಸರು
ನೀಚಮತಿ ಎಲೆ ನೀಚಮತಿ ಊಚನೆನಿಸಿಕೊಂಬ ಯೋಚನೆ ಬಿಡುಕಂಡ್ಯ ಪ ತರಿಯದೆ ಕುಟಿಲತ್ವ ಮರೆಯದೆ ದುಶ್ಚಟ ಧರೆಯ ಭೋಗವ ನೆಚ್ಚಿ ಶರಣರ್ವೇಷÀವÀ ತಾಳಿ ಮರವೆ ಮಾಯದಿ ಬಿದ್ದು ಒರಲುವ ನರರಿಗೆ ಬರಿದೆ ಬೋಧಿಪೆನೆಂಬ ಭ್ರಮೆಯಿಂದ ಫಲವೆ 1 ಮಾಯಮೋಹಿಗಳ ಉಪಾಯದಿ ಕೂಡಿಸಿ ಸೇವಿಸದಾಹಾರ ಸೇವಿಸುತನುದಿನ ಕಾಯಬಲಿಸಿ ಕುಣಿವ ಮಾಯಮೋಹಿಯ ಬರಿ ಬಾಯ ಬ್ರಹ್ಮತ್ಯಬಂಧ ಬಯಲಪ್ಪುದೇನೆಲೆ 2 ಧರಿಸಿದ ಲಾಂಛನ ಅರಿಯದೆ ಮೇಲೆ ನೀ ಬರಿದೆ ಕಾವಿಯನ್ಹೊದ್ದು ಕರದಿ ಕಮಂಡಲ ಧರಿಸಿ ಮರುಳರಿಗೆಲ್ಲ ಪರತತ್ತ್ವವರಿಯಲು ಜರೆಮರಣದು:ಖವು ಪರಹಾರಮೆಂತೆಲೆ 3 ಭವಭವದಲಿ ಬಟ್ಟಬವಣೆಯ ಸ್ಮರಿಸಿದೆ ಭವಗೆಲಿಸುವ ಅನುಭವ ತಿಳಿಯದೆ ಸ ದ್ಭವಿಗಳ ನೆರೆಯಿಸಿ ಕವಿತೆ ಬಿಡಿಸಿ ಬಹು ಸವಿಮಾತ್ಹೇಳಲು ಮೂಲಭವಭೀಜಳಿಯುವುದೆ 4 ತನ್ನ ತನ್ನದುಯೆಂಬ ಭಿನ್ನವಿಲ್ಲದೆಸದಾ ತನ್ನ ಸ್ವರೂಪ ಪರರನ್ನು ಬಗೆದು ನಿತ್ಯ ಸನ್ನುತ ಶ್ರೀರಾಮನುನ್ನತಂಘ್ರಿಗೆ ಪೊಂದಿ ಧನ್ಯರಾಗದೆ ನರಕುನ್ನಿಯೆನಿಸುವರೇನೋ5
--------------
ರಾಮದಾಸರು
ನೀಚಮನಸೆ ನೀ ಯೋಚಿಸಿ ಕೆಡಬೇಡ ಬರಿದೆ ಪ ಸಾರವಿಲ್ಲದ ನಿಸ್ಸಾರ ಸಂಸಾರವೆಂಬುದು ಮಾಯಾಬಜಾರ ತೋರಿ ಅಡಗುತಿಹ್ಯದು ನಿಮಿಷ ನೀರಮೇಲಿನ ಗುರುಳೆತೆರದಿ ಪರಿ ಸ್ಥಿರವಲ್ಲದನರಿದು ನೋಡೋ 1 ಕಾರಣಲ್ಲದ ಕಾಯವಿದು ಮೂರುದಿನದಸುಖವ ಬಯಸಿ ಮೀರಿಸಿ ಗುರುಹಿರಿಯರ್ವಚನ ಪಾರಮಾರ್ಥವಿಚಾರ ಮರೆಸಿ ಸೂರೆಗೈದು ಸ್ವರ್ಗಭೋಗ ಘೋರನರಕಕೆಳಸುತಿಹ್ಯದು 2 ಆಶಾಬದ್ಧನಾಗಿ ಭವಪಾಶದೊಳಗೆ ಸಿಲುಕಬೇಡೆಲೊ ವಾಸನಳಿದು ಐಹಿಕಸುಖದ ಕ್ಲೇಶನೀಗಿ ಸುಶೀಲನಾಗಿ ಬೇಸರಿಲ್ಲದೆ ಶ್ರೀಶಜಗದೀಶ ಶ್ರೀರಾಮನಂಘ್ರಿ ಭಜಿಸು 3
--------------
ರಾಮದಾಸರು
ನೀಡೆಲೋ ಶ್ರೀರಂಗಾ ನಿನ್ನ ದಾಸರ ಸಂಗಾ ಪ ಕೂಡಿಸಿ ತವ ಚರಿತಾಮರ ಗಂಗಾ | ಮಾಡುವದು ಭವಭಂಗಾ1 ಮೂಡಲುದಯದಲಿ ಜ್ಞಾನಪತಂಗಾ | ಓಡುದು ತಮ ಅಂತರಂಗಾ 2 ಸುಗಮದಿ ಗುರುಮಹಿಪತಿ ಪ್ರಭು | ಕಂಗಳಿಗೆ ದೋರುವುದು ಸುಖದಂಗಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೀತಿಯೆ ಎನ್ನ ಬಾಧಿಸುವುದಿನ್ನು ಪ. ಎಲ್ಲಿಯೂ ಎನಗೆ ನೀನಲ್ಲದೆ ಬೇರೆ ಗತಿ ಸಿರಿನಲ್ಲ ನೀ ಬಿಡುವುದು 1 ಶ್ರೀಯರಸ ನೀನೆ ತಂದೆತಾಯಿಗಳೆಂದು ಬಾಯಬಿಟ್ಟೊದರಲು ಕಾಯದೆ ಕಠಿಣ 2 ಭೂಧರಾಧೀಶಾಯುರ್ವೇದ ವಿದಾಯಕ ಮಾಧವ ನೀ ಎನ್ನ ವ್ಯಥೆಗೊಳಿಸುವುದು 3
--------------
ತುಪಾಕಿ ವೆಂಕಟರಮಣಾಚಾರ್ಯ
ನೀದಯಮಾಡಿ ಸಲಹೊ ಎನ್ನ ಪರಮಾತ್ಮ ಭವ ತೊಡರು ಬಿಡಿಸೊ ಪರಮಾತ್ಮ ಪ -----ಸಂಖ್ಯಾನೂರು ಬಳಲುತಿರೆ ಪರಮಾತ್ಮ ಇವರ ಸಂಚಿತವು ಏನೋ ಕಾಣೆನು ಪರಮಾತ್ಮ ಕೋಟಿ ಉದ್ಯೋಗದವರು ---- ಪರಮಾತ್ಮ ಪ್ರಪಂಚಕ್ಕೆ ಸರಿ ಕಾಣಲಿಲ್ಲ ಪರಮಾತ್ಮ 1 ನಾನಾ ಪರಿಯಿಂದ ನಡೆದೆ ಕಷ್ಟದಿಂದ ಪರಮಾತ್ಮ ನಿಮ್ಮ ಧ್ಯಾನವು ಎನ್ನ ಮನಕೆ ನಿಲಕದು ಪರಮಾತ್ಮ ------- ಜೀವಕೆ ಇನ್ನು ಪರಮಾತ್ಮ ಸುಜ್ಞಾನಿಗಳಿಗೆ ಜೀವನ ನೀನು ಪರಮಾತ್ಮ 2 ಸಾರಜಗವ ರಕ್ಷಿಸುವಂಥ ಪರಮಾತ್ಮ ನಿ- ಸ್ಸಾರ ಮಾಡುವರೆ ಎನ್ನ ಪರಮಾತ್ಮ ವೀರ ' ಹೊನ್ನ ವಿಠ್ಠಲಾ’ ಶ್ರೀ ಪರಮಾತ್ಮ ಗುಣ ಗಂಭೀರ ಪುಣ್ಯಪರುಷ ಕೇಳೊ ಪರಮಾತ್ಮ 3
--------------
ಹೆನ್ನೆರಂಗದಾಸರು
ನೀನಲ್ಲದಲೆ ಇನ್ನು ನಾನಾರ ಕೂಗಲೊ ಮಾನನಿಧಿ ಗೋಪಾಲ ಶ್ರೀನಿಧಿಯೇ ಪ. ಶ್ರೀನಿವಾಸನೆ ಎನ್ನ ನಾನಾ ಪರಿಯ ಕಷ್ಟ ನೀನೆ ಬಿಡಿಸಿ ಸಲಹೊ ಮಾನಾಭಿಮಾನದೊಡೆಯ ಅ.ಪ. ಕಡುಕೋಪದಿಂ ಖಳನು ಹುಡುಗನ ಬಾಧಿಸೆ ದೃಢ ಭಕ್ತಿಯಿಂದ ನಿನ್ನಡಿಯ ಭಜಿಸೆ ಕೆಡಹಿ ಅಸುರನ ಕೊಂದು ಒಡನೆ ಭಕ್ತನ ಕಾಯ್ದೆ 1 ತೊಡೆಯನೇರಲು ಬರೆ ಜಡಿದು ನೂಕಲು ತಾಯಿ ಒಡನೆ ಮನದಿ ನೊಂದು ಪೊಡಮಡುತ ಅಡವಿ ಅಡವಿ ತಿರುಗಿ ದೃಢದಿ ಭಜಿಸೆ ಧ್ರುವ ಒಡನೆ ಓಡಿ ಬಂದು ದೃಢಪಟ್ಟ ಕೊಡಲಿಲ್ಲೆ 2 ಕರಿ ಕರೆಯೆ ತಡೆಯದೆ ಸಲಹಿದ ಪೊಡವೀಶ ನೀನಲ್ಲೆ ಕಡುಕರುಣಿ ಬಡವಗೆ ಸಿರಿಯಿತ್ತೆ ಮಡದಿಗಕ್ಷಯವಿತ್ತೆ ಕಡುದ್ರೋಹಿಗಳ ಕೊಲಿಸಿ ಒಡನೆ ಐವರ ಕಾಯ್ದೆ3 ಚಿನುಮಯ ಗುಣಪೂರ್ಣ ಅಣು ಮಹತ್ ಅಂತರಾತ್ಮ ಎಣಿಸಲಾಹೊದೆ ನಿನ್ನ ಘನ ಮಹಿಮೆ ಮನಸಿಜಪಿತ ಸರ್ವ ಮನನಿಯಾಮಕ ಹರಿ ಮನದಲ್ಲಿ ನೀ ನಿಲ್ಲೊ 4 ಶ್ರೀಪದ್ಮಭವನುತ ನಾ ಪಾಮರಾಳಿಹೆ ಗೋಪಾಲಕೃಷ್ಣವಿಠಲ ಶ್ರೀಪತಿಯೆ ನೀ ಪಾರು ಮಾಡದೆ ಕಾಪಾಡುವವರ್ಯಾರೊ ತಾಪ ಬಿಡಿಸಿ ಸಲಹೋ5
--------------
ಅಂಬಾಬಾಯಿ