ಒಟ್ಟು 9381 ಕಡೆಗಳಲ್ಲಿ , 133 ದಾಸರು , 5307 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಾ ಬಾ ಬೃಂದಾವನಾಲಯಸೋಮ ಶರಣಾವಲಯ ಬಾ ಬಾ ಪರಿಮಳ ಆಚಾರ್ಯ ಸತತಯೋಗಾನಂದ ಪ ಶೋಭಾಲಂಕರಣವಾರಿಧಿ ವೇಣುವಿನೋದ ನರೋತ್ತಮ ಶ್ರೀ ಭೂಮಿನಿಲಯ ಪರಮಸುರುಚಿರ ರಘುವರಾ ಪ್ರಪೂಜಕ ಅ.ಪ ನೀನೇ ದೀನಶರಣಕರುಣನು ಜಾನಿಸುವರ ಸುರತರು ವೆನ್ನಿಪೆ ದ್ವೈತಾಗಮಸರಸಿಜಭಾನು ವೇದಾಂತ ವೈಷ್ಣವಚತುರ 1 ಪ್ರಣವರೂಪ ನಿರುತ ಸುಖಕರಸದನ [ನೀನೆ]ಪಾವನಾ ಪರಮಪುಣ್ಯಕರಾ ಸುಜನಪಾಲ ಶ್ರೀ ಮಾಂಗಿರೀಶ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಬಾ ಬಾ ಭಕುತರ ಹೃದಯ ಮಂದಿರ ಬಾ ಬಾ ಜಗದೋದ್ಧಾರ ಪ ಬಾ ಬಾ ವೇಂಕಟಾಚಲ ವಿಹಾರ ಬಾ ಬಾನೇಕಾವತಾರ ಧೀರ-ಶೂರ ಅ.ಪ. ದಕ್ಷ ಕಮಲಾಕ್ಷ ರಾಕ್ಷಸ ಕುಲ ಶಿಕ್ಷ ಲಕ್ಷ್ಮಣನಗ್ರಜ ಲಕ್ಷ್ಮೀವಕ್ಷ ಪಕ್ಷಿವಾಹನ ಪೂರ್ಣಲಕ್ಷಣ ಸರ್ವೇಶ ಮೋಕ್ಷದಾಯಕ ಪಾಂಡವ ಪಕ್ಷ ಅಕ್ಷಯವಂತ ಸೂಕ್ಷ್ಮಾಂಬರ ಧರಾ- ಧ್ಯಕ್ಷ ಪ್ರತ್ಯಕ್ಷದ ದೈವ ಅಕ್ಷತನಾರೇರ ತಕ್ಷಣದಲಿ ತಂದ ಅಕ್ಷರ ಪುರುಷ ಗೋವಿಂದ 1 ಜಾಂಬೂನಾದಾಂಬರ ಸಾಂಬಜನಕ-ನೀ ಲಾಂಬುದ ವರ್ಣಸುಪೂರ್ಣ ಸಾಂಬವಿನುತ ಸುಗುಣಾಂಬುಧಿ ನಾನಾ ವಿ ಡಂಬನ ತೋರಿದ ಮಹಿಮ ಕಾಂಬುವೆ ನಿನ್ನ ಚರಣಾಂಬುಜ ಮನದೊಳು ಜಾಂಬುವಂತನ ಪರಿಪಾಲಾ ವಿ- ಶ್ವಂಭರಂಬರಗ್ಗಣಿಯ ಪಡೆದ ವೃ- ತ್ತುಂಬರೇಶಾಂಬುಧಿ ಶಾಯಿ 2 ತಾಳ ಜಾಗಟೆ ಮದ್ದಳೆ ದುಂದುಭಿ ಭೇರಿ ಕಾಳೆ ಹೆಗ್ಗಾಳೆ ತಮ್ಮಟಿ ನಿ- ಸ್ಸಾಳೆ ಪಟಹ ತಂಬೂರಿ ಪಣವ ಕಂಸಾಳೆ ಕಂಬುಡಿಕ್ಕಿ ವಾದ್ಯ ಸೂಳೈಸುತಲಿರೆ ಭಾಗವತರು ಸಂ ಮೇಳದಿ ಕುಣಿದೊಲಿದಾಡೆ ಸಾಲುಪಂಜಿನ ಗುಂಜಿ ಛತ್ರ ಚಾಮರ ಧ್ವಜ ಢಾಲುಗಳು ಒಪ್ಪಿರಲು3 ಹಂಸವಾಹನ ಕ್ರತುಧ್ವಂಸಿ ಸುಮನಸೋ ತ್ತಂಸ ಕೃಶಾನು ಪಾಪಿಗಳ ಹಿಂಸೆಯ ಗೊಳಿಸುವ ಪಾಂಸರಕ್ಕಸಪಾಳಿ ಕೌಂಶಿಕಾಪತಿಯು ಧನವ ಅಂಶಮಾಲಿ ಸೋಮಕಂಶಿಕಮುನಿ ಪರಮ ಹಂಸರು ಅಲ್ಲಲ್ಲಿ ನಿಂದು ಸಂಶಯ ಮಾಡದೆ ಸಮ್ಮೊಗರಾಗಿಹರು ಕಂಸಾರಿ ತ್ರಿಗುಣಾತೀಶ 4 ಮೂರು ನಾಮಂಗಳ ಧರಿಸಿದ ದಾಸರು ವೀರ ಮಾರುತಿ ಮತದವರು ಸಾರುತ್ತ ಬೊಮ್ಮಾದಿ ಸುರರುಗಳನ್ನು ತಾರತಮ್ಯದಿಂದ ತಿಳಿದು ವಾರಿಧಿಯಲಿ ಮಗ್ನರಾಗಿ ತಾರರು ಮನಸಿಗೆ ಮುರಡು ದೇವತೆಗಳ ಸಾರ ಹೃದಯರು ನಿಂದಿಹರು 5 ಅಂದು ಬಲೀಂದ್ರನ್ನ ದ್ವಾರದಿ ನೀನಿರೆ ಮಂದಮತಿಯು ರಾವಣನು ಬಂದು ಕೆಣಕೆ ನಗುತ ಮಹಾಲೀಲೆ ಯಿಂದಲಿ ನೀನಾ ಖಳನ ಒಂದು ಶತಯೋಜನ ತಡಮಾಡದಲೆ ನೀ ಹಿಂದಕ್ಕೆ ಬೆರಳಲ್ಲಿ ಒಗೆದೆ ಅಂದವಾಗಿಹುದೇನೊ ದೇವ6 ಬಂಗಾರ ರಥದೊಳು ಶೃಂಗಾರವಾದ ಶ್ರೀ ಮಂಗಳಾಂಗ ಕಳಿಂಗ ಭಂಗ ನರಸಿಂಗÀ ಅಂಗಜ ಜನಕ ಸಾ- ರಥಾಂಗ ಪಾಣಿ ವಿಹಂಗ ಪ್ಲ- ಸಂಗೀತ ಲೋಲ ಗೋಪಾಂಗನೆಯರ ಅಂತ- ರಂಗ ಸಂತಾಪ ವಿದೂರ 7 ತಡಮಾಡಲಾಗದೊ ಪೊಡವೀಶ ನೀನಿಂದು ತಡೆವರಿನ್ನಾರೈಯ ವಡೆಯ ವೇದವೇದ್ಯ ಕಡೆಗಣ್ಣಿನಿಂದ ನೋಡಿದಲೆ ನಡೆವುದು ನುಡಿವುದು ಅಡಿಗಡಿಗೆ ನೀನು ಬಿಡದೆ ಒಳಗೆ ಹೊರಗಿದ್ದು ಸಡಗರ ದೈವವೆ ನುಡಿಯ ಲಾಲಿಸುವುದು ವಡನೊಡನೆ ಪಾಲಿಸುತ್ತ 8 ಹತ್ತವತಾರದ ಹರಿಯೆ ಘನಸಿರಿಯೆ ಮತ್ತೊಬ್ಬರನು ಹೀಗೆ ಕರೆಯೆ ಭೃತ್ಯರ ಸಂಗಡೋಡ್ಯಾಡುವ ದೊರೆಯೆ ಎ- ನ್ಹತ್ತಿಲಿ ಆಡುವ ಮರಿಯೆ ಚಿತ್ತದೊಲ್ಲಭ ನಮ್ಮ ವಿಜಯವಿಠ್ಠಲರೇಯ ಎತ್ತನೋಡಲು ನಿನಗೆ ಸರಿಯೆ ಅತ್ತಿತ್ತ ಪೋಗದೆ ಇತ್ತ ಬಾರೈಯ ಎ- ನ್ಹತ್ತಿಲಿ ವೆಂಕಟದೊರೆಯ 9
--------------
ವಿಜಯದಾಸ
ಬಾ ಬಾ ರಾಘವ ಬಾ ವೀರ ರಾಘವ ಪ ಮತ್ಸ್ಯರೂಪನಾಗಿ ಹೆಚ್ಚಿದ ದೈತ್ಯನ ಇಚ್ಛೆಯಿಂದಲಿ ಕೊಂದ ಅಚ್ಯುತರಾಯನೆ 1 ಕೂರ್ಮರೂಪನಾಗಿ ಅಮರರಿಗೊಲಿದು ನೀ ಕಾಮಜನಕ ಸುಪ್ರೇಮಾವನಿತ್ಯಂತೆ4 2 ವರಹರೂಪನಾಗಿ ಧರಣಿಯ ಚೋರನ ಶಿರವ ತಂದು ನೀ ಜಗವ ಪೊರೆದ್ಯಂತೆ 3 ದುರುಳ ರಕ್ಕಸನ ಕರುಳ ತೆಗೆದು ನಿನ್ನ ಕೊರಳೊಳಗಿಟ್ಯಂತೆ 4 ಚೆಲುವತನದಿ ಪೋಗಿ ಬಲಿಯದಾನವ ಬೇಡಿ ಕಲುಷ ಹರಿಸಿ ಅವನ ಪಾತಾಳಕ್ಕೊತ್ತಿದ್ಯಂತೆ 5 ಕೊಡಲಿಯ ಪಿಡಿಯುತ ದುಗುಡ ರಾಯರುಗಳ ಸೊ ಗಡು ಮುರಿದು ನೀ ಸಡಗರ ಪಟ್ಯಂತೆ 6 ಸೀತೆಗೋಸ್ಕರ ಪೋಗಿ ಸೇತುವೆಯನೆ ಕಟ್ಟಿ ಭೂತ ರಾವಣನ ಖ್ಯಾತಿಯಿಂದಲಿ ಕೊಂದ 7 ವಾರಿಜಾಕ್ಷಿಯರ ಕೂಡಿ ನೀರಾಟದೊಳು ಪೊಕ್ಕು ನೀರೆಯರ1 ಮನ ಅಪಹಾರಮಾಡಿದ ಕೃಷ್ಣ 8 ಚಿತ್ತಜಪಿತ ನೀನು ಬತ್ತಲೆಯೊಳು ಬಂದು ಉತ್ತಮ ಸ್ತ್ರೀಯರ ವ್ರತಗಳಳಿದ್ಯಂತೆ 9 ಸುಂದರ ವಾಜಿಯ ಚೆಂದಾದಿಂದೇರುತ ಮಂದಗಮನೆಯರ ನಂದವಳಿದ್ಯಂತೆ 10 ದೋಷರಹಿತ ನಮ್ಮ ಶೇಷವಿಠ್ಠಲನೆ ಬ್ಯಾಸರವಿಲ್ಲದೆ ಪೋಷಿಸಿ ಸಲಹಲು 11
--------------
ಬಾಗೇಪಲ್ಲಿ ಶೇಷದಾಸರು
ಬಾ ಬಾರೊ ನೀಬಾರೊ ರಂಗಯ್ಯ ಓಡಿ ಪ ಬಾರೊ ರಂಗಯ್ಯ ಓಡಿ ತೋರೊ ಕೃಪೆಯ ಮಾಡಿ ದಾರಿಯ ಕಾಣೆ ಭವದೂರ ಧೀರ ಬೇಗ 1 ತನಯನು ಅಗಲಿರೆ ಮನಕೆ ನೀ ತೆರೆದರೆ ಅನುಚಿತವಲ್ಲ ವೇನೊ ಇನಕುಲಚಂದ್ರ ಬೇಗ2 ಸುರುಪತಿ ವಿನುತನೆ ಧರಸತಿಗೆ ನತನೆ ಗುರುವು ತುಲಶೀರಾಮಾ ಧೊರೆಯೆ ಸರಿಯೆ ಬೇಗ 3
--------------
ಚನ್ನಪಟ್ಟಣದ ಅಹೋಬಲದಾಸರು
ಬಾ ಭಾಗ್ಯಲಕ್ಷ್ಮಿ ನಿನ್ನ ನಾ ಸೇವೆಗೈಯ್ಯುವೆ ನಾ ನಿನ್ನ ಪ್ರಾರ್ಥಿಸಿ ಬೇಡಿಕೊಂಬುವೆ ಪ ನಿನ್ನೇ ನಂಬಿದೆ ಪನ್ನಗವೇಣಿ ನೀಯೆನ್ನ ಕೈಯ ಬಿಡಬೇಡ ತಾಯೆ ಸನ್ನುತ ಚರಿತೆ ನಿನ್ನೇ ನಂಬುವೆ ಪಾದ ತೋರೆ ಸಂಪನ್ನೆ ನಿನ್ನ ಸದಾ ಸೇವೆಗೈವ ಚಿದಾನಂದವೀಯೆ 1 ಸಾರವಾದ ಸಂಸಾರದಲಿ ನೀರೆ ನೀನಲ್ಲದಿನ್ನಾರೆ ತೋರಿ ಕರುಣವ ನೀ ಸಾರೆ ಬಂದು ಪೊರೆ ಕರುಣಾಸಿರಿಯೆ ಎನ್ನ ಸೇವೆಯನು ಕೈಗೊಂಡು ಲಕುಮೀತಾಯೆ ಸದಾನಿನ್ನ ಸೇವೆ ಚಿದಾನಂದವೀಯೆ 2 ಪತಿ ಪಾದಸೇವೆ ಸÀತಿಗೆ ನೀನುಳಿಸಿ ಸತತದಿ ಮಾಂಗಲ್ಯ ಭಾಗ್ಯವ ನೀಡೆ ಸತಿ ನೀನೆಂದು ಸ್ತುತಿಪೆ ಸತತ ಎನ್ನ ಮೊರೆಯಾಲಿಸಿ ಕಾಯೆ ಸದಾ ನಿನ್ನ ಸೇವೆ ಚಿದಾನಂದವೀಯೆ3
--------------
ಸರಸ್ವತಿ ಬಾಯಿ
ಬಾ ವೆಂಕಟಶೈಲಾಧಿಪ ಮನ್ಮನಕೆ ತಡಮಾಡುವುದ್ಯಾಕೆ ಶ್ರೀ ವಲ್ಲಭನಾ ನಿನ್ನಂಘ್ರಿ ಕಮಲಕೆ ನಮಿಸುವೆ ಪ್ರತಿ ಕ್ಷಣಕೆ ಪ ನೀ ಒಲಿದೆನ್ನ ದಯಾವಲೋಕನದಿ ಪಾವನಮಾಡಲು ದೇವವರೇಣ್ಯ ಅ.ಪ. ವೈಕುಂಠಾಧೀಶ ವಿಗತಕ್ಲೇಶ ಚಿತ್ಸುಖಮಯವಪುಷ ಭವ ಮದನ ದಿ ವಾಕರ ಪ್ರಮುಖ ದಿವೌಕಸ ವರದ 1 ಮಮಸಮಾಸ್ವಾಮಿ ಮದಂತರ್ಯಾಮಿ ಸರ್ವಾಂತರ್ಯಾಮಿ ಅಮಿತಾತ್ಮ ಅತಿರೋಹಿತ ನಿಷ್ಕಾಮಿ ಸೇವಿತ ಶ್ರೀಭೂಮಿ ಅಮಿತ ಸುಗುಣಪೂರ್ಣ ಅಮಲಮಹಿಮ ಖಳದಮನ ದಯಾಳೊ 2 ನಾಮಾಭಿಧೇಯ ಲೋಕಾಧ್ಯಕ್ಷಾ ಕಮಲಾಯತಾಕ್ಷ ಸೋಮ ಭೂಮ ನಿಸ್ಸೀಮ ಮಹಿಮ ತ್ರಿ ಧಾಮರಾಮ ಘನಶ್ಯಾಮ ಲಲಾಮ 3 ಪವನಂತರಾತ್ಮಾ ನಿರ್ಮಲಾತ್ಮಾ ಪರಮಾತ್ಮ ಜ್ಞಾನಾತ್ಮಾ ಅವಿಕಾರ ಅತಿರೋಹಿತ ಭೂತಾತ್ಮ ಪೂತಾತ್ಮ ಮಹಿತಾತ್ಮ ತ್ರಿವಿಧ ಜೀವರಿಗೆ ವಿವಿಧ ಫಲಂಗಳ ತವಕದಿ ಕೊಟ್ಟವರವರ ಪಾಲಿಸೋ 4 ಸೃಷ್ಟ್ಯಾದಿಕರ್ತ ತ್ರಿಜಗದ್ಭರ್ತ ಲೋಕೈಕ ಸಮರ್ಥ ವೃಷ್ಣೀಶಾ ವೃಂದಾರಕ ರಿಪುಹರ್ತಾ ಮುಕ್ತರ ಪುರುಷಾರ್ಥ ಪರಮೇಷ್ಟಿ ಜನಕ ಶಿ ಷ್ಟೇಷ್ಟ ಹೃಷ್ಟ ಅನಿವಿಷ್ಟ ನಿವಿಷ್ಟ 5 ವೇದಸ್ತೇಯಾರಿ ಮಂದರಧಾರಿ ಭೂವರ ನರಹರಿ ಭೂ ದಾನವ ಬೇಡಿದ ಚಾಪಕುಠಾರಿ ರಾವಣಕುಲವೈರಿ ಯಾದವ ವಂಶ ಮಹೋದಧಿ ಚಂದಿರ ಸಾದಿತ ತ್ರಿಪುರ ಖಳೋದರ ಪಾಹಿ 6 ದಯದಿಂದ ನೋಡೊ ದೀನೋದ್ಧಾರ ಸದ್ಗುಣ ಗಂಭೀರಾ ಪ್ರಿಯ ನೀನೇ ಎನಗೆ ಲೋಕೋದ್ಧಾರ ಸೌಂದರ್ಯಸಾರಾ ಹಯಮುಖ ಲೋಕತ್ರಯ ಪತ್ರಯಾಮಯ ವಯನಗಯ್ಯ ನಾ ಬಯಸುವೆ ನಿನ್ನ7 ಭವ ಭಯಹಾರಿ ಬಿನ್ನೈಸುವೆ ಶೌರಿ ವಿಹಿತಾಹಿತಗಳು ನಿನ್ನನು ಮೀರಿ ಮಾಳ್ಪೆಗೆ ಕಂಸಾರೀ ಮಹಿತ ಶಮಲ ಸದಹಿತ ಲಕುಮಿ ಭೂ ಸಹಿತ ಮನದಿ ಸನ್ನಿಹಿತನಾಗೆಲೋ 8 ದಾತಾ ನೀನಲ್ಲದನ್ಯರರಿಯೇ ಕಂಡವರನು ಕರಿಯೇ ಪ್ರೀತನಾಗೆನ್ನೊಳು ಶ್ರೀ ಹರಿಯೇ ಮೂರ್ಲೋಕದ ದೊರೆಯೇ ಶ್ರೀ ತರುಣಿಯೊಡಗೊಡೀ ತನು ಸದನಕೆ ನೀ ತ್ವ ರಿತದಿ ಜಗನ್ನಾಥ ವಿಠ್ಠಲ 9
--------------
ಜಗನ್ನಾಥದಾಸರು
ಬಾಗಿ ಬೇಡುವೆ ಪ್ರಾಣರಾಯ ಭಕ್ತಪ್ರಿಯ ಪ ಭಾಗವತ ಜನಪ್ರಿಯ ಅ.ಪ ಚಿತ್ರಾವತಿಯ ತೀರವಾಸ ಭಕ್ತಪೋಷ ಗಾತ್ರ ಮರೆದು ನಿನ್ನ ಸ್ತೋತ್ರ ಮಾಡುತಲಿ1 ಬಂದೆ ನೀನೇ ಗತಿಯೆಂದು ಎನ್ನ ತಂದೆ ಮುಂದಿನಾಗಮಗಳ ಒಂದು ನಾನರಿಯೆ 2 ಅನಾಥ ರಕ್ಷಕನೆಂದು ಎನ್ನಬಂಧು ಪ್ರಾಣನಾಥವಿಠಲ ಸರ್ವರಿಗೆ ಬಂಧು ಎಂದು 3
--------------
ಬಾಗೇಪಲ್ಲಿ ಶೇಷದಾಸರು
ಬಾಗಿ ಭಜಿಸಿರೋ | ಭಾಗಣ್ಣ ದಾಸರನಾ | ನಮಿಪರ ಬೀಷ್ಟದನಾ ಪ ಭೋಗಿ ಭೂಷಣ ಸುತನಾ | ಮನ್ಮಥ ಸದೃಶನನಾ ಅ.ಪ. ಮುರಹರ ನಾಮಕನರಸಿಯುದರದಲ್ಲಿ | ಜನುಮತಾಳಿ ಅಲ್ಲೀಸುರಪುರ ವೈದಲು ತನ್ನ ಪಿತನು ಮುಂದೇ | ಸಂಕಾರ ಪುರಸೇರ್ದೇ | ವರಚಿಂತಲ ವೇಲಿಲಿ ಧ್ಯಾನಕಾಗಿ ನಿಂದು | ಗಾಯಿತ್ರಿ ಜಪಿಸು ತಂದು ವರಮಾರುತಿ ಗುಡಿಯೊಳು ನೆಲಿಸುತ್ತಾ | ವರಪಡೆದೆಯೊ ಜಪಿಸುತ್ತಾ 1 ತ್ರಿಲಿಂಗಪುರಕೇ ಕವಿಯೈತರಲೂ | ಪಂಡಿತರನು ಗೆಲಲೂಬಲುಚಿಂತಿಸಿ ಜನಸಭೆಯ ಸೇರಿ ಆಗ | ತೀರ್ಮಾನಿಸಿ ವೇಗ |ಕಳುಹಿದರವನ ಭಾಗಣ್ಣನ ಬಳಿಗಾಗೀ | ಬಲವನು ತೋರೆನಲಾಗೀ ನಿಲಲಾರದೆ ತೆರಳಿದ ಭೀತಿಯಲೀ | ವರಕವಿ ಮೆರೆದನು ಕೀರ್ತಿಯಲೀ2 ಪರಿ ನಿತ್ಯ ಶ್ರೀ ವೆಂಕಟಕೃಷ್ಣನ ಪಾಡುತ್ತಾ | ನರ್ತನ ಗೈಯ್ಯುತ್ತಾ ಸುತ್ತಿ ಬರುವ ಜನರ ದೃಷ್ಠಾರ್ಥಾ | ಪೇಳುತ ಗಳಿಸಿದೆ ಅರ್ಥಾ 3 ತಿಮ್ಮಣ್ಣ ದಾಸಾರ್ಯರ ಬಳಿಯಲೀ | ಆದವಾನಿಯಲ್ಲೀನೆಮ್ಮದಿಲಿದ್ದಲ್ಲಿಂದಲಿ ತೆರಳಿ | ಕಾಶೀಶನ ಬಳೀಕ್ರಮ್ಮಿಸಿ ದಿನ ಗುರು ಸೇವೆಯಲ್ಲಿ ಬಹಳಾ | ಮೆಚ್ಚಿಸಿ ಗುರುಗಳ | ಹಮ್ಮಿನ ವಿಜಯರಿಂದುಪದೇಶಾ | ಗೋಪಾಲ ವಿಠ್ಠಲದಾಸ 4 ವೆಂಕಟರಾಮಗೆ ರಾತ್ರಿಕಾಲದಲ್ಲೀ | ಆಘ್ರ್ಯವ ಕೊಡುವಲ್ಲೀ ಪಂಕಜಮಿತ್ರನ ತೋರುತಲವರೀಗೆ | ಸಂಶಯ ಕಳೆದವಗೆ | ವೆಂಕಟೇಶನೊಳ್ ಭಕುತಿ ಪುಟ್ಟುವಂತೆ | ಸೇವೆ ವಿಧಿಸಿ ಅಂತೇ ಪಂಕಜನಾಭನ ಕೀರ್ತನಾದಿಗಳನೂ | ಮಾಡಿ ಕಳೆದ ದಿನಗಳನೂ 5 ವೆಂಕಟೇಶನ ಪರೋಕ್ಷಿ ದಾಸರೆಂದು | ಪೇಳೆ ಜನರು ಅಂದು ವೆಂಕಟ ನರಸಿಂಹಾಚಾರ್ಯಾ | ದಾಸರೊಳು ಮಾತ್ಸರ್ಯಾ | ಶಂಕೆಪಟ್ಟು ಭಜನೆಯೊಳಿರುವಂದೂ | ಮುಂದಿನ ಪೀಠದಲೊಂದೂ ಲಂಕೆಯ ಪುರವನು ದಹಿಸಿದನಾ | ಕಂಡರು ಕೋಡಗನಾ 6 ವಾಸುದೇವ ವಿಠಲನ್ನಾ | ಕಾಣುತಲಿ ಮುನ್ನಾ ಅಂಕಿತ ನಾಮದಿ ಪದಪದ್ಯಾ | ರಚಿಸಿ ಮೆರೆದ ನಿರವದ್ಯಾ7 ರೋಗದಿ ಶ್ರೀನಿವಾಸಾಚಾರ್ಯಾ | ಬರಲಾಗ ದಾಸಾರ್ಯ ಜಾಗ ಗುಡಿಯಲಿ ಶುದ್ಧಿ ಮಾಡುತಿರಲು | ಕೇಳಿ ಗೃಹಕೆ ಹೋಗಲು | ವೇಗದಿ ಮಂತ್ರಿತ ರೊಟ್ಟಿ ತಿಂದು ಇನ್ನ | ಕಳೆದ ರೋಗವನ್ನ ನಾಗಶಯನ ಶ್ರೀ ಜಗನ್ನಾಥ ವಿಠಲನ್ನಾ | ತೋರ್ಯರ್ಧಾಯು ಇತ್ತವನ್ನಾ 8 ಮುದದಲಿ ನಿಜಜನರನು ಪೊರೆಯೇ | ಶಾಸ್ತ್ರರ್ಥವ ನೊರೆಯೆ ಪದ ಸುಳಾದಿಯನೆ ಬಲುರಚಿಸೀ | ಭಕುತಿ ಮಾರ್ಗ ಬೆಸಸೀ | ಸುಧೆಸಮವೆನೆ ಹರಿಕಥೆಸಾರ | ರಚಿಸಿ ಜನೋದ್ಧಾರ ಮುದಮುನಿ ಮತಗ್ರಂಥಗಳೊರೆದೇ | ಸಚ್ಛಾಸ್ತ್ರಪೊರೆದೇ 9 ಹತ್ತೆಂಟು ಒಂದು ಮೊಗದ ರೂಪ | ಶ್ರೀ ವಿಶ್ವರೂಪನಿತ್ಯ ಚಿಂತಿಪ ತನ್ನ ಬಿಂಬರೂಪ | ಅಂಶದಿಹನು ಗಣಪಚಿತ್ರಿಸಿರುವ ಚಕ್ರಾಬ್ಜ ವಲಯವನ್ನ | ಧೇನಿಸಿ ವಿಜಯರನ್ನಕೃತ್ಯ ಪೇಳಲೊಶವೆ ಅಪರೋಕ್ಷಿಗಳ | ಮಂದನು ನಾ ಬಹಳ 10 ಚಿತ್ರಮಾರ್ಗದಿ ಭ್ರಾತೃವರ್ಗವನ್ನ | ದೂರಕಳಿಸಿ ಮುನ್ನಚಿತ್ರಭಾನು ಸಂವತ್ಸರದಲ್ಲಿ | ದಶಮಾಸಾಷ್ಟಮಿಲೀ |ಚಿಂತಿಸುತ ಯೋಗಮಾರ್ಗದಲ್ಲಿ | ದಹಿಸಿ ದೇಹವಲ್ಲೀ |ಚಿತ್ರ ಚರಿತ ಗುರುಗೋವಿಂದ ವಿಠ್ಠಲನಾ | ಪದಕಮಲವ ಸೇರಿದನ 11
--------------
ಗುರುಗೋವಿಂದವಿಠಲರು
ಬಾಗಿಲು ತೆಗೆಯಲೆ ಭಾಮತಿ ರನ್ನಳೆ ಈಗ ನಾ ಬಂದೆನು ಇಂದುಮುಖಿ ಪ ನಾಗವೇಣಿಯೆ ನಿನ್ನೀಗಲೆ ನೋಡಲು ಬೇಗನೆ ಬಂದೆನು ತೆಗಿ ಕದವಾ ಅ.ಪ ಯಾರದು ಈ ಸಮರಾತ್ರಿಯ ವೇಳದಿ ಬಾಗಿಲು ತೆಗೆ ಎಂದೆನುತಿಹರು ತೋರದು ಎನಗೊಂದಾಲೋಚನೆ ನಿಮ್ಮ ನಾಮವು ಪೇಳಲು ತೆಗೆಯುವೆನು 1 ನೀಲವೇಣಿಯೆ ಕೇಳೆನ್ನ ಮಾತನು ಬಹಳ ಚಿಂತೆಯಾತಕೆ ಮನದಿ ನೀಲಕಂಠನೆಂದೆನ್ನನು ಕರೆವರು ಕೇಳು ಮನಸು ಚಂಚಲ ಬಿಟ್ಟು 2 ನೀಲಕಂಠನೆಂದರೆ ನೆನಪಾಯಿತು ನವಿಲಿನ ಮರಿ ಬಂದಿಹುದೆಂದು ನಾರಿಯರೆಲ್ಲರು ಹಾಸ್ಯವ ಮಾಳ್ಪರು ಸಾರುತ ವನಗಳ ಚರಿಸೆಂದು 3 ಬೆದರದೆ ತೆರೆ ಕದ ಸುದತಿಮಣಿಯೆ ನಾ ಬದಲೊಂದು ನಾಮವ ಪೇಳುವೆನು ಬುಧ ಜನರೆಲ್ಲರು ಭಕುತಿಲಿ ಸ್ಥಾಣು- ವೆನ್ನುತ ನಾಮವ ಕೊಂಡಾಡುವರು4 ಬೂಟಾಟಿಕೆ ಮಾತುಗಳನ್ನ ಏತಕೆ ಸಾಟಿಯಾರು ಜಗದೊಳಗಿನ್ನು ಮೋಟುಮರಕೆ ಸ್ಥಾಣುವೆನ್ನುತ ಕರೆವರು ಈ ಪೃಥ್ವಿಯ ಮೇಲಿನ ಜನರು 5 ಬಿಸುಜಮುಖಿಯೆ ಇನ್ನೊಂದು ಪೆಸರು ಕೇಳೆ ಪಶುಪತಿಯೆಂದು ಕರೆವರೆನ್ನ ವಸುಧೆಯ ಮೇಲಿನ ಪೆಸರುಗಳಿಗೆ ನೀ ಪ್ರತಿಯಾಗರ್ಥವ ಕಲ್ಪಿಸುವಿ 6 ವೃಷಭರಾಜ ನೀನಾದರೆ ಮುಂದಕೆ ಪಶುಗಳ ಮಂದೆಗೆ ತೆರಳುವದು ಕುಸುಮಗಂಧಿಯರ ಸದನದಿ ಕಾರ್ಯವು ವೃಷಭರಾಜಗಿಲ್ಲವು ಕೇಳೌ 7 ಶೀಲವಾಣಿಯೆ ಸುಶೀಲೆಯೆ ಎನ್ನಯ ವಾಣಿ ಕೇಳಿ ಕದವನು ತೆಗಿಯೆ ಪೇಳುವೆ ಮತ್ತೊಂದು ನಾಮವ ಎನ್ನನು ಶೂಲಿ ಎಂದು ಕರೆವರು ಜನರು 8 ಶೂಲಿಯಾದರೆ ನಿನ್ನ ಬಾಧೆಯ ಕಳೆಯಲು ಯಾರಿಗೆ ಸಾಧ್ಯವು ಜಗದೊಳಗೆ ನಾರಿಯರಿಗೆ ಹೇಳದೆ ಮುಂದಕೆ ನಡೆ ಶೂರರಾದ ವೈದ್ಯರ ಬಳಿಗೆ 9 ಕರಿಯ ಮುಖನ ಮಾತೆಯೆ ತಡಮಾಡದೆ ಕನಕಮಯದ ಕದ ತೆರೆ ಬೇಗ ಕಮಲನಾಭ ವಿಠ್ಠಲನನು ಪಾಡುತ ಶಿವನ ನಮಿಸಿ ತೆಗೆದಳು ಕದವ 10
--------------
ನಿಡಗುರುಕಿ ಜೀವೂಬಾಯಿ
ಬಾಗುವ ತೆಂಗಿನ ಮರನೋಡ ರಂಗನ ಅಂಘ್ರಿಗೆರಗುವಂತೆ ಸಖಿಯೆ ಪ. ಶೃಂಗಾರದ ವನ ನೋಡ ಪಂಚರಂಗದ ಗಿಳಿ ನೋಡ ಮಂಗಳ ಸ್ವರ ನೋಡ ಕೋಕಿಲ ರಂಗನ ಪಾಡುತಲಿವೆ 1 ಮೃಗ ನೋಡ ಕಸ್ತೂರಿ ಹರಿಪಾದಕೆ ಆತುರದಿ ಬರುತಲಿವೆ 2 ನೆಲ್ಲಿ ನೇರಲೆ ನೋಡ ಪುಷ್ಪ ಚೆಲ್ಲಿ ನಲಿಯುತಲಿವೆ ಮಲ್ಲ ಮಲ್ಲಿಗೆ ನೋಡ ಹರಿಪಾದ ಪಲ್ಲವಕೆ ಎರಗುತಿವೆ 3 ಸಾರ ಪಕ್ಷಿಗಳ ನೋಡ ಹರಿಗುಣ ಸಾರುತ ನಲಿಯುತಿವೆ4 ನಾಗ ಪುನ್ನಾಗ ನೋಡ ಸಂಪಿಗೆ ಪರಿಮಳ ನೋಡ ಹಾಂಗೆ ಕ್ಯಾದಿಗೆ ನೋಡ ಹರಿಪಾದ ಕ್ಹೋಗಿ ಎರಗುತಿವೆ 5 ಕುಸುಮ ನೋಡ ತುಳಸಿ ವಿರಾಜಿಸುªವನÀ ನೋಡ ಸಹಜದವನವ ನೋಡ ರಂಗನ ಪೂಜೆಗೆ ಒದಗುವಂತೆ 6 ಮಂದ ಮಾರುತ ನೋಡ ಪರಿಮಳ ತಂದು ಬೀಸುತಲಿದೆ ಸುಂದರ ಲತೆ ನೋಡ ರಂಗಗೆ ಫಲ ತಂದು ಅರ್ಪಿಸುವಂತೆ7 ಓಕುಳಿ ಕುಣಿನೋಡ ನಿಲ್ಲಿಸಿದ ಜೀಕಳಿ ಗೊಂಬೆಗಳ ಲೋಕ ನಾಯಕ ಹರಿಗೆ ಚಿಮ್ಮುತ ಹಾಕುವ ಪರಿಯಂತೆ 8 ಸಾಲು ಮರಗಳ ನೋಡ ರಂಗಗೆ ಫಲ ಮೇಲಾಡಿ ಮೆಲಿಸುವಂತೆ ಲಾಲಿಮಣಿಯ ನೋಡ ರಾಮೇಶನ ವಾಲೈಸಿ ಕರೆಯುತಿವೆ9
--------------
ಗಲಗಲಿಅವ್ವನವರು
ಬಾಗೋ ಬಾಗೋ ಜೀವನೇ ಸಾಗರನಿಲಯಗೆ ಪ ಬಾಗೋ ಮನಸಿನ ನೀಗಿ ಕಲ್ಮಷ ಬೇಗ ತಿಳಿದು ನೀಜೋಗಿವಂದ್ಯಗೆ ಅ.ಪ ಕನಸಿದು ಜಗಮೋಹ ಕಾಣು ಕಾಣೋ ನಿನಗೆ ವೈಕುಂಠ ಒಂದೇ ಗೇಣೋ ಚಿನುಮಾಯಾತ್ಮನ ತ್ವರ ಕಾಣು ಕಾಣೋ ತನುಮನವರ್ಪಿಸಿ ನೆನವು ನಿಲ್ಲಿಸಿ ನಿಜ ಘನಮಹಾತ್ಮನ ಹಿಡಿ ಖೂನ ಖೂನೋ 1 ಕಾಯ ಕಾಯ ಗುರುತಿಟ್ಟರಿಯಿದರ ನೆಲೆಯ ನೆಲೆಯ ಮರುಳನೆ ನರಕದ ಕುಣಿಯು ಕುಣಿಯೋ ನೆರೆದು ತೋರಿ ಸಂತೆ ಹರಿದು ಹೋಗುವಂತೆ ಧರೆ ನಿನಗೊಂದಿನ ಮಾಯ ಮಾಯ 2 ಬಂದದ್ದು ವಿಚಾರ ಮಾಡೋ ಮಾಡೋ ಇಂದಿನ ಸಮಯ ಕಳಿಬೇಡೋ ಬೇಡೋ ಬಂಧುರಸುಖಕೆ ಮನ ನೀಡೋ ನೀಡೋ ಇಂದು ನಾಳೆನ್ನದೆ ತಂದೆ ಶ್ರೀರಾಮನ ಬಂಧುರಚರಣವ ಪಾಡೋ ಪಾಡೋ 3
--------------
ರಾಮದಾಸರು
ಬಾದರಾಯಣ ಪಾದಕೆರಗಿದೆನೊ ಪ ನೀದಯದಿ ಕಾಮಕ್ರೋಧಗಳನೆ ಬಿಡಿಸಿ ಸಾಧು ಕರ್ಮದಲಿ ಆದರವೀಯೊ ಅ.ಪ ಜ್ಞಾನಿ ಗೌತಮಿ ಮೌನಿ ಶಾಪದಿಂದ ಜ್ಞಾನಿಗಳಿಗೆ ಅಜ್ಞಾನತೆ ಬರಲು ದೈನ್ಯದಲಿ ಚತುರಾನನಾದಿಗಳು ನೀನೆ ಗತಿಯೆನಲು ಮಾನಿಸಿದ ಸುಖಾತ್ಮ 1 ತಾಪಸೋತ್ತಮ ಆ ಪರಾಶರರು ದ್ವೀಪದಲ್ಲಿರಲು ನೀ ಪವಳಿಸಿದೆ ಶಾಪದಿಂದ ಕ್ರಿಮಿರೂಪ ಪೊಂದಿದವಗೆ ಭೂಪತನವನಿತ್ತ ದ್ವೈಪಾಯನಾಖ್ಯ 2 ಶೃತಿಗಳರ್ಥ ಮಂದಮತಿಗಳರಿಯದಿರೆ ಹಿತದಿ ಬ್ರಹ್ಮಸೂತ್ರತತಿಗಳನ್ನೆ ರಚಿಸಿ ಭಾಗವತ ವರ ಮಹಾಭಾ- ರತಗಳನ್ನು ರಚಿಸಿ ಅತಿ ಪ್ರಸನ್ನರಾದ 3
--------------
ವಿದ್ಯಾಪ್ರಸನ್ನತೀರ್ಥರು
ಬಾದರಾಯಣನ ಪಾದವ ನಂಬದೆ ಪ ತುಂಬಿ ತುಳುಕುತಿರೆ ವದನದಿ ಮಂತ್ರವ ಪಠಿಸಿ ಫಲವೇನು ಉದರ ಪೋಷಣೆಗಾಗಿಯೆ ಮಾಡುವ ಕರ್ಮ ನೋಡಿ ನಗುವರು 1 ಕಂಣನು ಮುಚ್ಚಿ ಮೌನದಿ ಕುಳಿತು ಪರ ಹೆಂಣಿನ ರೂಪವ ಮನದೊಳು ನೆನೆದು ಚಿಂಣತನದಿ ಅವಳ ಬೆರೆಯಲು ಯೋಚಿಸಿ ಹೊನ್ನು ಕೂಡಿಸುವ ಪರಿಯದಲ್ಲದೆ 2 ಗುಟ್ಟಲಿ ಪೂಜಿಪ ಗುರುತನು ಅರಿಯದೆ ಪಟ್ಟೆ ನಾಮವ ಹಚ್ಚಿ ಮಡಿಗಳನು ದಿಟ್ಟ ರಂಗೇಶವಿಠಲನ ಮರೆದು 3
--------------
ರಂಗೇಶವಿಠಲದಾಸರು
ಬಾನ್ದಳದ ಬುಡವೆನಗೆ ಅತಿದೂರ ಬೆಳಕೇ ಮನ್ದಿರವು ಶುದ್ಧವಿದೆ ಬಾ ಇದರತಳಕೆ ಪ ಸುಂದರದ ಕಾಂತಿಯನು ಚೆಲ್ಲು ಈ ಮನೆಗೆ ಇಂದು ಬಾ ನಾಳೆಯೆನಬೇಡ ನನ್ನೆಡೆಗೆ ಅ.ಪ ಜನುಮದಂಚಿನ ಬೆಳಕು ನಿನ್ನದೇ ಗೊತ್ತು ನಲಿದು ಬಂದಿಹೆನೊಳಗೆ ನಾ ನಿನ್ನ ಸೊತ್ತು ನಿಲುಕದೆಡೆ ನಿಲಬೇಡ ಬಾ ನನ್ನ ಮುಪ್ಪೆ ಬಲಯುತನ ಮಾಡೆನ್ನ ಸುಜ್ಞಾನಚಿತ್ತೆ 1 ನೀ ಮಾತ್ರವಿತ್ತಲಿರೆ ನನ್ನೈದು ಗೆಳೆಯರು ನೇಮಯುತರಾಗುವರು ಸೊಗಬಾಳ್ವರು ನಾ ಮಾಳ್ಪುದೆಲ್ಲವೂ ನಿನ್ನದೇ ಆಗುವುದು ರಾಮಕೃಷ್ಣರ ನೆನಪು ನನಗೆ ದೊರಕುವುದು 2 ನೀನಿರದ ನನ್ನ ಮನೆ ಕಡುಕತ್ತಲೆಯ ಕೋಣೆ ನೀನಿರದೆ ನಾನಿರಲು ಫಲವೇನು ಕಾಣೆ ಕಾನನದ ಹೂವಿನಂತಿದ್ದೇನು ಫಲವಿಲ್ಲ ಜ್ಞಾನ ಹೊಂಬೆಳಕೆ ಮಾಂಗಿರಿರಂಗ ನೋಡೆ ಭಯವಿಲ್ಲ3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಬಾಯಂದು ಕರೆವೆನೊ ದೇವನಿನ್ನ ವೈರಿ ಮಧ್ವರಾಯರ ಪ್ರೀಯನೆ ಪ ರಾಮ ನಿರಾಮಯ ಮಾಮನೋಹರ ಶೌರಿ ಸೋಮಧತಾರ್ಚಿತ ಸಾಮನುತಾ ಭೂಮಿಜ ಸಾಮಜ ಪಾಲ ಬಾರೊ ಕಾಲ ಪ್ರೇಮದಿ 1 ಬಿಸಿಜಾಭಾಸ್ಪಜನ ಮಾನಸಗೆ ಅಸುರ ವೈರಿ ಕುಸಮಶರ ಪಿತ ಸುಮನಸ ವಂದಿತಾ ಅಸಮ ಶೂರ ಬಾರೊ ವಸುಧಿಧರ ಬಾರೊ ವೈರಿ ಕುಶಲದಿ 2 ಇಂದಿರೆ ಮಂದಿರ ಸುಂದರ ಶಿರಿಗೋವಿಂದ ವಿಠಲ ಮಂದರಧರ ಬಾರೋ ಚಂದಿರ ಮೊಗ ಬಾರೊ ಛಂದದ ದೈವ ಬಾರೊ ಇಂದಿನ ಯನ್ನ ಮನಸಿಗೆ 3
--------------
ಅಸ್ಕಿಹಾಳ ಗೋವಿಂದ