ಒಟ್ಟು 14318 ಕಡೆಗಳಲ್ಲಿ , 131 ದಾಸರು , 5549 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾದ ಕಿಂಕರ ನನ್ನ ಕೈಬಿಡು- ವುದುಚಿತವೇ ರಂಗ ಪ. ಮುದದಿಂದ ನಿನ್ನ ಪಾದಗೆರಗುವೆ ನಾನು ತ್ವರಿ- ತದಿ ನೀ ಕಾಯೊ ಎನ್ನೊಡೆಯ ರಂಗ ಅ.ಪ. ಅಜಗರಶಯನನೆ ಬುಧಜನ ನಮಿತನೆ ತ್ರಿಜಗವಂದಿತಪಾದ ಪದುಮಜ ಜನಕನೆ 1 ಶಿಶುವಾಗಿ ಗೋಕುಲದ ಪಶುಗಳ ಸಲಹಿದೆ ಶಶಿಭೂಷಣಸಖ ಶಿಶುವ ಕಾಪಾಡೊ 2 ಸಾಂದೀಪಗೊಲಿದೆ ಸಂದೇಹವಿಲ್ಲ ತಂದೆ ಹೆಳವನಕಟ್ಟೆ ರಂಗ ಕೃಪಾಂಗ 3
--------------
ಹೆಳವನಕಟ್ಟೆ ಗಿರಿಯಮ್ಮ
ಪಾದ ಕೂಡು | ಸಾಯಾಸಗಳನೇ ಬಿಡು ಪ ಪಾದ ಕೂಡು ಸಾಯಾಸಗಳನೇ ಬಿಡು | ಸಾಧಿಸುವದು ನೋಡು ಸದ್ಗತಿಯ ಸುಖಾಡು 1 ತನುವಿಟ್ಟು ಧನವಿಟ್ಟು ಚರಣಕ ಮನಕೊಟ್ಟು | ಅನುವಾಗಿ ತಿಳಿಗಟ್ಟು ಮದಗರ್ವಗಳ ಬಿಟ್ಟು 2 ನಿನ್ನಾ ನೀ ತಿಳಿಯಣ್ಣಾ ಮ್ಯಾಲ ದೋರುದ್ಯಾಕ ಬಣ್ಣಾ | ಇನ್ನಾರೆ ದೆರಿಕಣ್ಣಾ ಆಗದಿರು ಮಸಿಮಣ್ಣಾ 3 ತನಗ ತಾನೇವೇ ಬಂಧು ತನಗೆ ತಾನೇ ಹಗೆಯೆಂದು | ವನಜಾಕ್ಷ ಹೇಳಿದುದು ಅನುಮಾನಿಲ್ಲಿದಕಿಂದು 4 ಇನ್ನೊಂದು ಸಾಧನಿಲ್ಲಾ ಇದರಿಂದಧಿಕವಿಲ್ಲಾ | ಮನ್ನಿಸಿ ಕೇಳಿರೆಲ್ಲಾ ಮಹಿಪತಿಜನ ಸೊಲ್ಲಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಪಾದ ನನ್ನದಯ್ಯಾ ಚನ್ನಕೇಶವ ಪ ಲಕ್ಷ್ಮೀಕಾಂತ ಜಾಜಿಪುರೀಶ ನೀನೆ ಕಾಯಬೇಕಯ್ಯಾ ಅ.ಪ ಮನೆಯಾಸೆ ಬಲು ಬಾಧಿಸುತಿದೆ ತನು ಮಡದಿಮಕ್ಕಳ ಮೋಹವೆಂದಿದೆ ಮನದ ಚಪಲತೆ ಸಾಧಿಸು ತಂದೆ ಇನಿತಾಸೆ ಬಿಡಿಸು ಬುದ್ಧನಂತೆ 1 ನಿನ್ನನೆ ನೆನೆವಂತೆ ಮಾಡು ಕೇಶವನೆ ಜನ್ಮವಿದು ಸಾಕು ಕರೆಯೋ ಮಾಧವನೆ ನಿನ್ನ ಪಾದದಲಿಟ್ಟು ಪಾಲಿಸು ಮಧುಸೂದ ನನೆ ಜಾಜಿಪುರಿಯ ಕೇಶವ ಶೆಲ್ವಪಿಳ್ಳೆ 2
--------------
ನಾರಾಯಣಶರ್ಮರು
ಪಾದ ಪಂಕಜವನು ಪ ಮಂಕುಮತಿಯ ಬಿಡಿಸಿ ನಿನ್ನ ಕಿಂಕರನೆಂದೆನಿಸೊ ಅ.ಪ. ಕಲಿಯುಗದೊಳು ನೀನು ಸಕಲ ಸುಜನರ ಕಲುಷ ಕಳೆಯುವೆನೆಂದು ಬಹುಮೋದದಿಂದ ಎಲರುಣಿ ಪರುವತದೊಳಗೆ ವಾಸನಾಗಿ ಕರ ಪಿಡಿದಂಥ 1 ತೆತ್ತೀಸಕೋಟಿ ದೇವತೆಗಳು ತನ್ನ ಸುತ್ತಲು ನಿಂತು ಪರಿಚರಿಯವನು ಮಾಡೆ ಎತ್ತ ನೋಡಲು ಸಿರಿಯು ಓ ಎನುತಿರೆ ಚಿತ್ತಜನೈಯ್ಯನು ನಗುತ ನಿಂದಿರುವಂಥ 2 ಭುವನತ್ರಯಂಗಳನೆಲ್ಲ ಲೀಲೆಯಿಂ ಕಾವ ಪವನವಂದಿತನೆ ಮಹಾನುಭಾವ ನವ ಮೋಹನಾಂಗ ಶ್ರೀ ರಂಗೇಶವಿಠಲಜವನ ಬಾಧೆಯ ಬಿಡಿಸಯ್ಯಾ ಶ್ರೀಲೋಲ 3
--------------
ರಂಗೇಶವಿಠಲದಾಸರು
ಪಾದ ಪದ್ಮದಲಿಮಾಯೆ ದಾಟಿತು ಮಹಿಮಳೇ ದೇವಿ ಪಕಾಯ ಕರ್ಮಗಳೆಂಬ ಕಾತ್ಯ ಸಮುದಾಯವನುದಾಯದಿಂದಳವಡಿಸಿದೆ ದೇವಿ ಅ.ಪಆಜಸುರಾದಿಗಳಿಂಗೆ ಅಮರಿಸಿಹೆ ಭಾಗ್ಯವನುಭಜಿಸುತಿಹರನವರತವೂ ದೇವಿನಿಜದಿರವನೂ ಕೊಟ್ಟು ನಿಲಿಸಿರಲು ನೀನವರತ್ರಿಜಗ ವಂದಿತರಾದರು ದೇವಿಸುಜನ ವಂದಿತನಾದ ಶ್ರೀಹರಿಯೆ ನೀನಾಗಿರುಜುಕರದಲಾಳುತಿರುವೆ ದೇವಿಕುಜನನಾದರು ನಾನು ಕರವಿಡಿದು ನೀ ಕಾಯ್ದುದ್ವಿಜಜನ್ಮದೆಣಿಕೆದೋರ್ದೆ ದೇವಿ 1ಅಣುಮಾತ್ರವಿರಲಿಲ್ಲ ವಿಷಯ ಭೋಗಕೆ ಬೀಜದಣಿಸಿದುದು ದಾರಿದ್ರವು ದೇವಿಕಣುಗಾಣದಿದ್ದವಗೆ ಕೊಟ್ಟಿಯನ್ನವ ನೀನೆಮಣಿವದನು ಮಾಡ್ದೆ ನೀನೆ ದೇವಿಪ್ರಣತ ರಕ್ಷಾಮಣಿಯೆ ಪರತತ್ವವನ್ನಿತ್ತೆಎಣಿಪುದೆಂತೀ ಮಹಿಮೆಯಾ ದೇವಿಕ್ಷಣಮಾತ್ರ ಪೂಜೆಯನು ಕ್ರಮದಿ ಮಾಡ್ದವನಲ್ಲಭಣಿತೆುದ ಬಗೆವರಾರು ದೇವಿ 2ಪರಿತೃಪ್ತಳಾಗಿರುವೆ ಪರಮಭಾಗ್ಯವನೀವೆನೆರೆ ನೀನೆ ನಿರ್ಮಿಸಿರಲು ದೇವಿಇರಿಸಿದಂತಿರುವರಿಂದೇನಹುದು ಕೊಡುವದಕೆಅರಿಯಲಖಿಳವು ನಿನ್ನದೇ ದೇವಿಮರುಗಿ ನೀನೇ ಕಾಯ್ವೆ ಮಾತೃ ರೂಪಹುದಾಗಿಸುರತರುವಿನುಪಮಾನಳೇ ದೇವಿವರದ ತಿರುಪತಿ ವಾಸ ವೆಂಕಟೇಶನ ರೂಪಧರಿಸಿಹಳೆ ದಿವ್ಯ ಲಕ್ಷ್ಮೀದೇವಿ 3ಕಂ||ಸ್ಥಿರವಾರವಿಂದು ಕೇಶವಸ್ಥಿರವಹುದಿತ್ತಭಯವೆನಗೆ ಭಯವನು ಬಿಡಿಸೈಸ್ಥಿರವಲ್ಲದ ಸಂಸಾರವಸ್ಥಿರವೆಂದೇ ನೊಂದೆನೈಯ ವೆಂಕಟರಮಣಾಓಂ ನಾರಾಯಣಾಯ ನಮಃ
--------------
ತಿಮ್ಮಪ್ಪದಾಸರು
ಪಾದ ಬಿಡಲಾರೆ ಎನ್ನೊಡೆಯ ರಂಗ ಭಾರ ನಿನ್ನಗೆ ಕೂಡಿತು ಪ ನೀನೆ ಚಿಂತಾಮಣಿ ನೀನೆ ಪರುಷದ ಖಣಿ ನೀನೆ ಎನ್ನಗೆ ಧಣಿ ವೇಣುಗೋಪಾಲ 1 ಪಕ್ಷಿವಾಹನ ಲೋಕರಕ್ಷಿಪನು ನೀನೆಲೊ ಅಕ್ಷಯದಿ ದ್ರೌಪದಿಯ ರಕ್ಷಿಸಿದವ ನೀನೆ 2 ಪಾರ ಮಹಿಮನೆ ಸರ್ವಭಾರ ನಿನ್ನದಯ್ಯ ಸೇರಿದೆನು ನಿಮ್ಮ ಪದಕೆ ಮಾರಪಿತ ಶ್ರೀರಾಮ 3
--------------
ರಾಮದಾಸರು
ಪಾದ ಭಜಿಸುವೆ ಅ.ಪಜ್ಞಾನವೆಂಬೊ ನವರತ್ನದ ಮಂಟಪದ ಮಧ್ಯದಲ್ಲಿಗಾನಲೋಲನ ಕುಳ್ಳಿರಿಸಿಧ್ಯಾನದಿಂದ ಭಜಿಸುವೆ1ಭಕ್ತಿರಸವೆಂಬ ಮುತ್ತು ಮಾಣಿಕ್ಯದ ಹರಿವಾಣದಿಮುಕ್ತನಾಗಬೇಕು ಯೆಂದು ಮುತ್ತಿನಾರತಿ ಎತ್ತುವೆ 2ನಿನ್ನ ನಾನು ಬಿಡುವನಲ್ಲಎನ್ನ ನೀನು ಬಿಡಲು ಸಲ್ಲಘನ್ನ ಮಹಿಮ ವಿಜಯವಿಠ್ಠಲ ನಿನ್ನ ಭಕ್ತರ ಕೇಳೊ ಸೊಲ್ಲ 3
--------------
ವಿಜಯದಾಸ
ಪಾದ ಮಾಡಿದೆನೆ ಸಾಷ್ಟಾಂಗ ಬೇಡಿದೆನೆ ಮನದಭೀಷ್ಟ ಪ. ನೀಡು ಕೊಲ್ಲಾಪುರದ ನಾಡಿಗೊಡೆಯಳೆ ಲಕುಮಿ ಮಾಡಮ್ಮ ಕೃಪೆಯ ಬೇಗಾ ಈಗಾ ಅ.ಪ. ಬಂದೆನೇ ಬಹುದೂರ ನಿಂದೆನೇ ತವಪದ ದ್ವಂದ್ವ ಸನ್ನಿಧಿಯಲೀಗ ವಂದನರಿಯೆನೆ ನಿನ್ನ ಚಂದದಿ ಸ್ತುತಿಪೊದಕೆ ಮಂದಮತಿಯಾಗಿಪ್ಪೆನÉೀ ತಂದೆ ಮುದ್ದುಮೊಹನ್ನ ಗುರು ಕರುಣ ಬಲದಿಂದ ಇಂದು ನಿನ್ನನು ಕಂಡೆನೇ ಮುಂದೆನ್ನ ಮಾನಾಭಿಮಾನ ನಿನಗೊಪ್ಪಿಸಿದೆ ಸಿಂಧುಸುತೆ ಪಾಲಿಸಮ್ಮಾ ದಯದೀ 1 ಉತ್ತರಾಯಣ ಪುಣ್ಯ ದಿನದಿ ನಿನ್ನನು ಕಂಡೆ ಮುಕ್ತರಾಧೀಶೆ ಕಾಯೆ ಉತ್ತಮಾಭರಣ ನವರತ್ನ ಪದಕವು ದಿವ್ಯ ನತ್ತು ಧರಿಸಿದ ಚಲ್ವಳೇ ಮುತ್ತೈದೆಯರು ಮತ್ತೆ ಭಕ್ತ ಸಂದಣಿ ಇಲ್ಲಿ ಎತ್ತನೋಡಲು ಕಂಡೆನೇ ಸತ್ಯ ಸಂಕಲ್ಪ ಶ್ರೀ ಹರಿಯ ಪಟ್ಟದ ರಾಣಿ ಚಿತ್ತಕ್ಕೆ ತಂದು ಕಾಯೆ ಮಾಯೆ 2 ರೂಪತ್ರಯಳೆ ನಿನ್ನ ವ್ಯಾಪಾರ ತಿಳಿಯಲು ಆ ಪದ್ಮಭವಗಸದಳಾ ಶ್ರೀಪತಿಯ ಕೃಪೆ ಯಿಂದ ಸೃಷ್ಟಿಸ್ಥಿತಿಲಯಗಳನು ವ್ಯಾಪಾರ ಮಾಳ್ಪ ಧೀರೆ ಕೃಪೆಯ ನೀ ಮಾಡದಲೆ ಉಭಯ ಸುಖವೆತ್ತಣದು ಭೋಪರೀ ನಂಬಿದರಿಗೆ ಗೋಪಾಲಕೃಷ್ಣವಿಠ್ಠಲನ ಹೃದಯದಿ ತೋರಿ ನೀ ಪಾರುಗೊಳಿಸೆ ಭವದೀ ದಯದೀ 3
--------------
ಅಂಬಾಬಾಯಿ
ಪಾದ ಮುಖ್ಯ ಪ್ರಾಣ ನಂಬಿದೆ ನಿನ್ನಯ ಪಾದ* ಪ ನಂಬಿದೆ ನಿನ್ನಯ ಪಾದಾಡಂಬರ ತೊಲಗಿಸಿಡಿಂಬದೊಳಗೆ ಹರಿಯ ಬಿಂಬ ಮೊಳೆವಂತೆ ಮಾಡೋ ಅ.ಪ. ಇಪ್ಪತ್ತು ಒಂದು ಸಾವಿರ ಐದೊಂದು ನೂರು ಅಪ್ರತಿ ಹಂಸಮಂತರ ತಪ್ಪದೆ ದಿನದಿನ ಒಪ್ಪದಿಂದಲಿ ಜಪಿಸಿತಪ್ಪಿಸೋ ಭವವ ಸಮೀಪದ ಜೀವಗೆ ||ಅಪ್ಪನಂದದಿ ಪುಣ್ಯವಪ್ಪಂತೆ ಕರುಣಿಸೊಕಪ್ಪು ವರ್ಣನ ಕೂಡೊಪ್ಪಿಸಿ ಪಾಲಿಸೊ 1 ಸೂತ್ರ ಮಾರುತಉತ್ತರ ಲಾಲಿಸೋ ಉತ್ಕøಮಣದಲ್ಲಿನೆತ್ತಿಯ ದ್ವಾರದಿಂದಲೆತ್ತ ಪೋಗಲೀಸದೆ ||ತತ್ತುವರೊಳು ಜೀವೋತ್ತಮನೆ ಸತ್-ಚಿತ್ತೆನಗೆ ಕೊಡು ಉತ್ತರ ಧರಿಸೊ (ಲಾಲಿಸೋ) 2 ಕಂತು ಜನಕನಲ್ಲಿಮಂತ್ರಿಯೆನಿಸಿ ಸರ್ವರಂತರ್ಯಾಮಿ ಆಗಿ ||ನಿಂತು ನಾನಾ ಬಗೆ ತಂತು ನಡಿಸುವ ಹಂತಕಾರಿ ಗುಣವಂತ ಬಲಾಢ್ಯ 3 ಕಾಯ ಪರಮೇಷ್ಠಿ ಸಂಚಿತಾಗಾಮಿ ಓಡಿಸಿಕೊಂಚ ಮಾಡೋ ಪ್ರಾರಬ್ಧ ವಂಚನೆಗೈಸದೆ ||ಅಂಚಂಚಿಗೆ ಪರಪಂಚವ ಓಡಿಸಿ ಪಂಚವಕ್ತ್ರ ಹರಿಮಂಚದ ಗುರುವೆ 4 ಜಾಗರ ಮೂರುತಿ 5
--------------
ಗುರುವಿಜಯವಿಠ್ಠಲರು
ಪಾದ ಮುಖ್ಯ ಪ್ರಾಣಾ ನಂಬಿದೇ ನಿನ್ನಯ ಪಾದಾ ಡಂಬರ ತೊಲಗಿಸಿ ಡಿಂಬದೊಳಗೆ ಹರಿಯ ಬಿಂಬ ಪೊಳೆವಂತೆ ಮಾಡೊ ಪ ಇಪ್ಪತ್ತು ಒಂದು ಸಾವಿರ ಐದೊಂದು ನೂರು ಅಪ್ರತಿಹಂಸಮಂತ್ರ ತಪ್ಪದೆ ದಿನದಿನ ಒಪ್ಪದಿಂದಲಿ ಭಜಿಸಿ ತಪ್ಪಿಸೋ ಭವವಾ ಸ ಮೀಪದ ಜೀವ ಕೊ ಅಪ್ಪನಂದದಿ ಪುಣ್ಯ ವಪ್ಪಂತೆ ಕರುಣಿಸೊ ಕಪ್ಪುವರ್ಣನ ಕೂಡಪ್ಪಿಸಿ ಪಾಲಿಸೋ 1 ಹತ್ತೇಳು ಎರಡಾಯುತ ನಾಡಿಯೊಳು ಉತ್ತರÀ ಪಾಲಿಸೋ ಉತ್ಕ್ರಮಣದಲ್ಲಿ ನೆತ್ತಿಯದ್ವಾರದಿಂದ ಎತ್ತಮರಿಯಲೀ ಸದದೆ ತತ್ತುವರೊಳು ಜೀವೋ ತ್ತಮನೆ ಸತ್ ಚಿತ್ ಎನಗೆ ಕೊಡು ಉತ್ತರ ಧರಿಸೋ 2 ಅಂತರಂಗದಿ ಉಸುರಾ ಹೊರಗೆ ಬಿಟ್ಟು ಅಂತರಂಗಕ್ಕೆ ಸೇರುವ ಪಂಥದೊಳು ನೀನೆ ನಿಂತು ನಾನಾಬಗೆ ತಂತು ನಡಿಸುವ ಹೊಂತಕಾರಿ ಗುಣವಂತ ಬಲಾಢ್ಯ 3 ಪಂಚಪರಣ ರೂಪನೆ ಸತ್ವ ಕಾಯಾ ಪಂಚೇಂದ್ರಿಯಗಳ ಲೋಪನೆ ಪರಮೇಷ್ಟಿ ಸಂಚಿತಾಗಾಮಿ ಬಿಡಿಸಿ ಕೊಂಚ ಮಾಡೋ ಪ್ರಾರಬ್ಧ ವಂಚನೆ ನೆನೆದೊ ಅಂಚಗಂಚಿಗೆ ಪರಪಂಚವೆ ಓಡಿಸಿ ಪಂಚವಕ್ತ್ರ ಹರಿ ಮಂಚದ ಗುರುವೇ 4 ಯೋಗಾಸನದೊಳಿಪ್ಪ ಯಂತ್ರೋದ್ಧಾರಾ ಭಾಗವತರಪ್ಪಾ ಯೋಗಿಗಳೀಶಾ ವ್ಯಾಸಾ ಯೋಗಿಗೊಲಿದ ವ್ಯಾಸಾ ಶ್ರೀ ತುಂಗಭದ್ರಾ ವಾಸಾ ಬಾಗುವೆ ಕೊಡು ಲೇಸಾ ಜಾಗರ ಮೂರುತಿ5
--------------
ವಿಜಯದಾಸ
ಪಾದ ವಂದಿಸುವ ಎನ್ನ ಮಂದಿರದಲ್ಲಿ ನಿಲ್ಲೆ ಕೇಳುವದೆನ ಸೊಲ್ಲೆ ಪ ಭವ ಸಿಂಧೂವಿನೊಳು ಬಹು ನೊಂದು ನಿನ್ನ ಬೇಡಿಕೊಂಬೆ ಪಾಲಿಸು ಜಗದಂಬೆ1 ಇಂದಿರೇಶನರಾಣಿ ಮಂದಭಾಗ್ಯನ ಕರುಣ - ದಿಂದಲಿ ಎನ್ನ ನೋಡೆ ನೀ ನಲಿದಾಡೆ 2 ಮಂದಜಾಸನ ಜನನಿ ಸುಂದರ ಸುಗುಣಿ ನಿನ್ನ ಕಂದನು ನಾನಮ್ಮ ಶಿರಿಯೆ ನೀ ಸುಖ ಸುರಿಯೆ 3 ಎಂದಿಗು ಎನ್ನನು ಪೊಂದಿದ ಈ ಭವ ಬಂಧನ ಬಿಡಿಸೆಂದೆ ನಿನ್ನನು ಬೇಡಿಕೊಂಡೆ 4 ದಾತ ಗುರುಜಗನ್ನಾಥ ವಿಠಲನ ಪ್ರೀತಿಯಿಂದ ಎನಗೆ ತೋರೆ, ನೀ ಎನ್ನ ಮನೆಗೆ ಬಾರೆ 5
--------------
ಗುರುಜಗನ್ನಾಥದಾಸರು
ಪಾದ ವನಜ | ಸೂಸಿ ಭಜಿಸಿರೋ |ವ್ಯಾಸ ತೀರ್ಥ ಶಿಷ್ಯರೆಂದು | ಭಾಸಿಸಿದ್ದರೋ ಪ ಪುರಂದರ ಗಡದಿ | ವಾಸರಿದ್ದರಾಪರಮ ಲೋಭಿ ನವ ಕೋಟಿ | ದ್ರವ್ಯವಿದ್ದರಾ 1 ಬಂದ ಕಾರ್ಯ ಮರೆತನೆಂದು | ಹರಿಯು ಚಿಂತಿಸೀಇಂದಿರೇಶ ದ್ವಿಜನಾಗಿ | ಹುಡುಗನಾವೆರಸೀ ||ಬಂದು ಮಗನ ಮುಂಜಿಗಾಗಿ | ಧನವನು ಬಯಸೀ ||ನಂದ ಕಂದ ತಿರುಗುತ್ತಿದ್ದ | ಅಂಗಲಾಚಿಸೀ 2 ಭಿಕ್ಷುಕನ್ನ ಬಿಡದಂತೆ | ಅಂಗಡಿಯಲ್ಲಿಶಿಕ್ಷಿಸೀದ ಆಳುಗಳ | ಲೋಭಿ ತಾನಲ್ಲಿ ||ತ್ರ್ಯಕ್ಷಸೇವ್ಯ ತಿಂಗಳಾರು | ತಿರುಗಿದನಲ್ಲೀಲಕ್ಷಿಸಾದೆ ಮೆರೆಯುತಿದ್ದ | ಕಾಣದಂತಲ್ಲಿ3 ಕಟ್ಟಕಡೆಗೆ ಸವೆದ ನಾಣ್ಯ | ಚೀಲ ವೆಸೆಯುತ್ತಕಟ್ಟು ಮಾಡ್ದ ದುಡ್ಡೊಂದನ್ನು | ಕೊಳ್ಳೆಂದೆನುತ್ತ ||ಅಟ್ಟುಗಳಿಗೆ ಬೇಸರಿಸಿ | ಮುಂದೆ ಹೋಗುತ್ತ |ಥಟ್ಟನ್ಹೋದ ಹಿತ್ತಲಿನ | ಕದವ ಸಾರುತ್ತ 4 ಅಲ್ಲಿನಿಂತ ಲೋಭಿ ಸತಿಯ | ಬಳಿಗೆ ಪೋಗುತ್ತಬಲ್ಲ ಹರಿಯ ಧನವ ಬೇಡ್ದ | ಮುಂಜಿಗೆನ್ನುತ್ತ ||ನಲ್ಲ ಬೈವನೆಂದು ಬೆದರಿ | ಇಲ್ಲವೆನ್ನುತ್ತಚೆಲ್ವ ಸತಿಯು ಪೇಳೆ ಅವಳ | ಮೂಗ್ತಿ ನೋಡುತ್ತ 5 ತವರು ಮನೆಯ ದ್ರವ್ಯದಾನ | ಮಾಡು ನೀನೆಂದಅವಳು ತನ್ನ ಮೂಗುತಿಯ | ಕೊಟ್ಟುದೆ ಛಂದ ||ಇವನು ಅದನ ಸಾಹುಕಾರ್ನ | ಮುಂದಾಕಿ ಅಂದಜವದಿ ನಾನೂರ್ಪಾಕಿ ಹಣ | ತನಗೆ ಬೇಕೆಂದ 6 ನಾಯಕನು ಕೈಲಿ ತೆಗೆದು ನೋಡುತ್ತಲಿರೇಶ್ರೀಯರಸ ಪೋದತಾನು | ಕಣ್ಣಿಗೆ ಮರೇ ||ಕಾಯುತ್ತಿದ್ದ ಆಳು ಹಿಡುಕಿ | ಸಿಗದೆತಾಬರೇನಾಯಕನದ ಭದ್ರಮಾಡಿ | ಸತಿಬಳಿಗೆ ಬರೇ 7 ಬರಿಯ ನಾಸಿಕವ ನೋಡಿ | ಮೂಗ್ತಿ ಎಲ್ಲೆನಲುಸರಿಯ ಪಡಿಸಲಿಕ್ಕೆ ಕೊಟ್ಟು | ಇರುವೆ ನೆನ್ನಲುತ್ವರದಿ ತೋರದಿರೆ ನಿನ್ನ | ಅರೆವೆ ನೆನ್ನಲು |ಬರುವೆ ಬೇಗ ಎಂದು ಪೋಗಿ | ಗರದ ಬಟ್ಟಲು 8 ಕರದಿ ಪಿಡಿದು ತುಳಸಿ ಮುಂದೆ | ಮೊರೆಯ ನಿಡುತಿರೇಗರದ ಬಟ್ಟಲೊಳು ಬಿದ್ದ | ಶಬ್ದವು ಬರೇ ||ಹರುಷದಿ ದಿಗ್ಗನೆ ಎದ್ದು | ಪತಿಗೆ ತಾತೋರೇಗರ ಹೊಡೆದಂತವನಾಗಿ | ಮೋರೆಯ ತೋರೇ 9 ಹೆಂಡತಿಯ ಕೇಳಿ ತಿಳಿದ | ಆದ ಪರಿಯಾಮಂಡೆ ಬಾಗಿ ತಾನು ಆದ | ಹೊಸ ಪರಿಯಾ ||ಕೊಂಡಾಡಿದ ಪತ್ನಿ ಚರ್ಯ | ಹರಿಯ ಭಕ್ತಿಯಬಂಡುಣಿ ಹರಿಪಾದಾಬ್ಜದಿ | ತೊರೆದ ಮನೆಯ 10 ಪಾದ ನಮಿಸೀಬಾರಿ ಬಾರಿ ಹರಿಯ ತತ್ವ | ಕೇಳಿ ಸುಖಿಸೀ 11 ಪುರಂದರ ಸಾರ ಭಾಷೆ | ಪ್ರಾಕೃತ ವೆನಿಸೀ 12 ಮೂರ್ತಿ ಸುಂದರತೊಂಡನಾದ ಮೇಲೆ ತನ್ನ | ಹೃದಯ ಮಂದಿರ ||ಪಿಂಡ ಅಂಡದೊಳಗೆ ಕಂಡು | ಹಿಗ್ಗಿದ ವಿವರ |ಕಂಡವನೆ ಪೇಳ ಬಲ್ಲ | ಅದರ ವಿಸ್ತಾರ 13 ಪೊಂದಿ ಅಪರೋಕ್ಷವನ್ನು | ಸುಜನರುದ್ಧಾರಛಂದದಿಂದ ಮಾಡಿದಂಥ | ದಾಸವರ್ಯರ ||ಅಂದ ಚರಿತೆ ಕೇಳಿ ತೋಷ | ಪೊಂದಿದವರನಂದ ಕಂದ ಪಾಲಿಸುವ | ಬಿಡದೆ ಅವರಾ 14 ಗೋವ ಕಾವ ಗೊಲ್ಲರೊಡೆಯ | ಗೋಪಿಯ ಬಾಲತಾವಕ ಭಕ್ತರ ಪೊರೆವ | ಪಾಂಡವ ಪಾಲಆವ ದಾಸರ ಪೊರೆದಂತೆ ಮೈದುನ ಪಾಲದೇವ ದೇವ ಪೊರೆವ ಗುರು | ಗೋವಿಂದ ವಿಠಲ 15
--------------
ಗುರುಗೋವಿಂದವಿಠಲರು
ಪಾದ ಸಲಹವೆ ಬಿಡಲಾರೆ ಕಲಿತ ಕಲ್ಮಶವನ್ನು ಸುಲಭಾದಿ ಓಡಿಸು ಪ ಅಂದು ಆ ಕರಿರಾಜ ಸರಸಿಲಿವಂದಿಸಿದಾ ಪಾದ ಪಾದ 1 ನಾರಿಯು ನಿನ್ನ ನೆನದಾ ಮಾತ್ರದಿ ಶೀರಿಯ ಮಾಳೇಗರದಾ ಪಾದ 2 ಕಮಲನಾಭ ನೀನು ದೇವರ ದೇವ ಸುಮನಸರೊಡೆಯನು ಅಮಿತ ಮಹಿಮೆ ತೋರಿ ಭ್ರಮೆಯ ಹರಿಸು 3 ಆರು ವೈರಿಗಳು ಮಿತಿಮೀರಿರುವರು ಕೇಳು ನೀರಜಾಕ್ಷಯನ್ನನಾರು ಕಾಯುವರೊ ಧೀರ ನೀನೇ ಪೇಳು 4 ಪೊರೆಯದೆ ಬಿಡದಿರು ಶಿರಿನುತಚರಣವನ್ನು ತೋರು ನರಸಖ ನಿನ್ನಯ ಕರುಣವ ಬೀರು 5
--------------
ಸಿರಿವತ್ಸಾಂಕಿತರು
ಪಾದ ಸೇವೆಯಿಂದಲಿ ಸುಖಿಸೋಳೊ ಲಕ್ಷ್ಮೀಲೋಲ ಪಾಡಿ ತೂಗುವಳೊ ಮೋಹದಲಿ ಯಶೋದ ಯೋಗಿ ಜನರು ಕೊಂಡಾಡಲ್ವಿನೋದ 1 ಜಲಧಿ ಭೂದೇವಿ ಪ್ರಜ್ವಲಿಸುವ ಆಲದೆಲೆಯು ತಾನಾಗಿ ನಿದ್ರೆಹಸಿವು ಬಿಟ್ಟು ನಿರುತದಿ ಆತನ- ಲ್ಲಿದ್ದಳಂಭ್ರಣಿ ಸ್ತೋತ್ರದಲಿ ಭೂದೇವಿ 2 ವಟದ ಎಲೆಯ ಮೇಲೆ ವಟುವಾಗಿ ಮಲಗಿ ಉಂ- ಗುಟವ ಬಾಯೊಳಗಿಟ್ಟು ಮುದದಿ ಚಪ್ಪರಿಸೆ ಕಟುತರದಲಿ ನಾಲ್ಕು ವೇದವ ತೋರುತ ಪಟುತರದಲಿ ಯೋಗನಿದ್ರೆ ಮಾಡಿದನು 3 ಹದಿನಾಲ್ಕು ಲೋಕ ತನ್ನುದರದಲ್ಲಿಡುವ ಪದುಮಾಕ್ಷ ಶ್ರೀಕೃಷ್ಣ ಪರಮಾತ್ಮ ಲಾಲಿ ಅಜಭವಸುರರೆಲ್ಲ ಭಜನೆಯ ಗೈವರು ಮುದದಿ ಶಯನವ ಮಾಡೊ ಮಧು ಮುರಾಂತಕನೆ 4 ಕಡಲಶಯನ ಹರಿ(ಯ) ತೊಟ್ಟಿಲೊಳಿಟ್ಟು ಬಿಡದೆ ನಾರಿಯರೆಲ್ಲ ಪಾಡಿ ತೂಗುವರು ಪೊಡವಿಗೊಡೆಯ ನಿನ್ನ ನಾಮ ಕೊಂಡಾಡಲು ಬಿಡದೆ ಭಕ್ತರ ಕಾಯೊ ಭೀಮೇಶಕೃಷ್ಣ 5
--------------
ಹರಪನಹಳ್ಳಿಭೀಮವ್ವ
ಪಾದ ಕ್ಕೆರಗಿ ಯಾಚಿಸುತಲೆ ಮುಗಿವೆನು ಕೈಯ್ಯಾನೆರೆ ನಂಬಿದವರನು ಎರವು ಮಾಡಲು ನಿನಗೊಳತೇನಯ್ಯಾ ಪಿಡಿ ಬೇಗನೆ ಕೈಯ್ಯ ಕರದಶಿಗಳರಸನೆ ಕಾಮಿತ ಫಲದನೆ ಕರಿರಾಜನ ಭೀಕರ ಹರ ವೆಂಕಟ ಪ ಆಪಾರ ಮಹಿಮಾ ಆಪದ್ಬಂಧೋ ಆಪನ್ನರ ಪಾಲಿಪ ವ್ಯಾಪಾ ನಿನಗಲ್ಲದೆ ಮತ್ತೊಂದು ಕಾಣೆನೊ ಜಗದೀ ಭೂಪಾನೆ ಭೂಮ್ನ ಗುಣಗಣಸಿಂಧೋ ಸ್ವಾಮಿಯೆ ಎನಗಿಂದು ಪರಿಪಾಲಿಸು ಶ್ರೀಪತಿ ಅಂಜನ ಗಿರಿರಾಜ 1 ಕಲಿಯುಗದೊಳಗೀ ಪರ್ವತಕೆಲ್ಲಿ ಸರಿಗಾಣೆನು ಯೆಂದು ನೆಲಸಿದೀ ನೀನೆ ಈ ಸ್ಥಳದಲ್ಲಿ ವೈಕುಂಠಕಿಂತ ನೆಲೆಯು ವೆಗ್ಗಳವೆಂದು ನೀ ಬಲ್ಲೀ ಅದಕಾರಣ ಇಲ್ಲೀ ತಲೆಯಾಗುವರಯ್ಯಾ ಭಳಿರೆ ಕಾಂಚನ 2 ತರುಜಾತಿ ಮೃಗಪಕ್ಷಿಗಳಾಕಾರ ಮೊದಲಾದ ರೂಪದಿ | ನೂರಾರು ಕಿನ್ನರು ತಮ್ಮ ಪರಿವಾರ ಒಡಗೂಡಿ ನಿನ್ನ ಚರಣಾರಾಧನೆ ಮಾಡಿದ ವಿಸ್ತಾರ ಈ ಬಗೆ ಶೃಂಗಾರ ಸರಿಗಾಣೆನೊ ಹೇ ತಿರುಪತಿ ವೆಂಕಟ ಗಿರಿರಾಜ3 ಹದಿನಾಲ್ಕು ಲೋಕದ ಭಾಗ್ಯಗಳಲ್ಲಿ ಅಮರತತಿಗೆ ಕೊಟ್ಟ ವಿಧವೆಲ್ಲಾ ಪ್ರತ್ಯಕ್ಷವು ಪುಸಿಯಲ್ಲ ನಾನವರ ನೋಡೆ ಅಧಮಾಧಮನು ನೀನೆ ಬಲ್ಲೆಲ್ಲಾ ಎನ್ನ ಯೋಗ್ಯತಯ ಫಣಿ 4 ಸುವರ್ಣ ಮುಖರಿತೀರ ನಿವಾಸ ನವರಾತ್ರಿಯಲ್ಲೀ ಆವ ಬ್ರಹ್ಮೋತ್ಸವ ನೋಡಲು ಶ್ರೀಶ ಸಂಪದವನಿತ್ತು ಪೊ ರವಾನು ಕಲುಷದ ಭಯ ಬರಲೀಸ ಶ್ರೀನಿವಾಸ ಭೂದೇವರ ವರದ5
--------------
ವಿಜಯದಾಸ